ಕಾವ್ಯಧಾರೆ

ಪಂಜು ಕಾವ್ಯಧಾರೆ

“ಬೇಕಿದ್ದರೊಮ್ಮೆ ಅತ್ತುಬಿಡು” ಬೇಕಿದ್ದರೊಮ್ಮೆ ಜೋರಾಗಿ ಅತ್ತುಬಿಡುಒಳಗೊಳಗೇ ಮಮ್ಮಲ ಮರುಗುವುದೇಕೆ?ಸಿಗಲಾರದಕ್ಕೆ ಕೈ ಚಾಚುವ ಹುಂಬತನವೇಕೆ?ಹಸಿದ ಭುವಿಗೆ ಕೊಳದೊಳಗೆ ಬಿದ್ದಚಂದ್ರ ಹೊಟ್ಟೆ ತುಂಬಿಸಲಾರ!ಬಿಸಿಯುಸಿರಿಗೆ ಕುದಿಯುವ ರಕ್ತ ಆರಿಮೌನದಲಿ ಹೆಪ್ಪುಗಟ್ಟುವುದು ಬೇಡ.. ಜುಳು ಜುಳು ಸದ್ದು ಮಾಡುತಹರಿಯುವ ನದಿ ಅತ್ತದು ಯಾರಾದರೂಗಮನಿಸಿಹರೇ?ಕಾಲ್ಗಳ ಇಳಿಬಿಟ್ಟು ತೋಯ್ದುಕೊಂಡರೆ ವಿನಃಆತುಕೊಂಡವರಿಲ್ಲ..ಅಳಿದ ಮೇಲೂ ಉಳಿದು ಹೋಗುವಗಾಯದ ಕಲೆಗಳಿಗೆ ನಿತ್ಯ ನರಳಾಡದೆಅತ್ತು ಮುಕ್ತಿ ಕೊಟ್ಟು ಬಿಡು.. ಇಳೆಯ ಕೊಳೆಯನ್ನು ತೊಡೆದು ಹಾಕಲುಸುರಿವ ಭಾರೀ ಮಳೆಯಂತೆ..ಕಿಟಕಿಯಾಚೆ ಕಾಣುವ ರಸ್ತೆಗೆ ನೆಟ್ಟಕಣ್ಣ ಪದರಿನಿಂದ ನೋವುಗಳೆಲ್ಲಹರಿದು ಹೋಗುವಂತೆ ಒಮ್ಮೆಜೋರಾಗಿ ಅತ್ತುಬಿಡು..ಹಠಮಾರಿ ನೆನಪುಗಳು ಎದೆಯೊಳಗೆಗೂಡು […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಅಮೃತಮತಿಪತಿಯ ಕಣ್ತಪ್ಪಿಸಿ ಅಷ್ಠಾವ೦ಕನ ಜೊತೆಗಜಶಾಲೆಯಲ್ಲಿ ದೈಹಿಕ ಸ೦ಬ೦ಧವನ್ನುಬೆಳೆಸಿದ ರಾಣಿ ಅಮೃತಮತಿಗೆತಾನೊಬ್ಬಳು ಉಜ್ಜಯನಿಯ ರಾಣಿರಾಜಾ ಯಶೋಧರನ ಮಡದಿ ಅನ್ನುವುದುಮರೆತು ಹೋಗಿತ್ತೋ ಏನೋ…… ಮನಪ್ರಿಯೆ ಮಡದಿ ಅಮೃತಮತಿಒಬ್ಬ ಸದ್ಗುಣಗಳಿರುವ ವ್ಯಕ್ತಿ ಸಾತ್ವಿಕಗುಣಗಳನ್ನು ತು೦ಬಿಕೊ೦ಡ ಪತಿಯಿಂದದೈಹಿಕ ಸುಖ ಸಿಗದಾದಾಗ ಆಕೆಮಾನಸಿಕವಾಗಿ ಬೇಸರಗೊ೦ಡಿದ್ದು,ಬೇಸರದಲ್ಲಿ ಆಕೆ ತೆಗೆದುಕೊಂಡ ನಿರ್ಧಾರಸರಿ ಅಥವಾ ತಪ್ಪಾಗಿರಬಹುದೋ ಏನೋ… ಹೀಗೆಯೇ ನಿರ೦ತರವಾಗಿ……. ಕತ್ತಲೆಯ ರಾತ್ರಿಯಲ್ಲಿ ಅದೊ೦ದು ದಿನಹಿ೦ಬಾಲಿಸಿಹೋದ ಪತಿಅಷ್ಠಾವ೦ಕನ ಬೆತ್ತಲೆಯ ದೇಹದ ಜೊತೆಬೆತ್ತಲೆಯಾಗಿ ಮಡದಿ ಅಮೃತಮತಿಕಾಮಿಸುವದನ್ನು ಗುಟ್ಟಾಗಿ ನೋಡಿಅಸ೦ಹ್ಯಪಟ್ಟು ರೊಚ್ಚಿಗೆದ್ದ ರಾಜಾಯಶೋಧರ ಮಾಡಿದ್ದಾದರೂ ಏನು…..?ಕೋಪದಿಂದ ಹೊರತೆಗೆದ ಖಡ್ಗಮರಳಿ ಹಿಂದೆ ಸರಿದು […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಅವಳ ನೋವ ನೆನೆಯುತ.ಅವಳ ಮೋಹದ ಬಳ್ಳಿ ಎಲ್ಲೆಲ್ಲೋ ಚಿಗುರಿಅರಳಿ… ಒಣಗಿ.ಒಡಲ ದಾವಾನಲ ಕಮ್ಮನೆ ಕುಡಿದು.. ಹರಿದು.ಎಂತಾ ಮರವೇ ಅದು!ಎದೆಯಿಂದ ಎದೆಗೆ ಗುಂಯ್ ಗುಡುತಥೇಟು ಭ್ರಮರ ಬೃಂಗ.ಸುಳಿ ಗಾಳಿಗೆ ಹಾರಿ.. ತೂರಿ ಹಬ್ಬಿದಪರಿಮಳದಲ್ಲಿ…ಕಾಲಿಟ್ಟಲ್ಲಿ ಕೊಲೆ.. ನಕ್ಕರಂತೂ ಸುಲಿಗೆಕತ್ತಿ ಕಟಾರಿಗಳ ಮೇಳ!ವಾರನ್ನ .. ಬಿಕ್ಷಾನ್ನ ಹಗಲೆನ್ನದೆ ಇರುಳೆನ್ನದೆಗಿರ ಗಿರ ತಿರುಗಿ ಅಲೆದು!ನೀಲಿ ಕಡಲಿಗೆ ಮುಖ ಮಾಡಿ ದಾಹದಣಿವ ನೀಗಿದವಳು.ನೆನೆಯುತ್ತೇನೆ ಆ ಮುಖವನ್ನುಸ್ಪಷ್ಟ ವಾಗಿ ಮೂಡುವುದಿಲ್ಲ!ಭೂರ್ಗರೆವ ಮಳೆಯ ಸಿಡಿಲಬ್ಬರದಲ್ಲಿಫಳರನೆ ಮಿಂಚು.. ಹೃದಯ ಚೆಲ್ಲಾಡಿಕರುಳ ಕರೆಗೆ ಮರುಗಿ ತಿರುಗಿ ಬಂದಂತಮಮತೆ.ಎಂತ ಚೆಂದದ ಬೊಂಬೆ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಯುದ್ದಕಾಗುವಷ್ಟು… ಧರ್ಮದ ಜಾಗರಣೆಯಲ್ಲಿ ಯುದ್ದಕಾಗುವಷ್ಟು ಮದ್ದಿದೆಆ ಫಕೀರನ ಜೋಳಿಗೆಯಲ್ಲಿಜಗಕೆ ಹಂಚುವಷ್ಟು ಪ್ರೀತಿಯ ಧಾರಾಳತನ ಶಾಂತತೆಸಂನ್ಯಾಸಿ ಜೋಳಿಗೆಯಲ್ಲಿದೆ ಪಡೆಯುವ ಮನಸುಗಳ ಬರವಿದೆ…! ಇಂದೂ ನಾಳೆಗೂ ನಾಡಿದ್ದೂ ಹೇಳಹೆಸರಿಲ್ಲದೆ ಅಳಿದು ಹೋಗುವದುಷ್ಟ ಬುದ್ದಿಯ ಗೀರುಗಳೆಷ್ಟು ಕುರುವುಗಳಷ್ಟುಆಕ್ರಂದನ ಮೊರೆತಗಳಷ್ಟುಯುದ್ದಕ್ಕೆ ಶಾಂತಿಯ ಹಂಗಿಲ್ಲಪ್ರೀತಿಗೆ ಮಮತೆಗೆ ಗಡಿಯ ಹಂಗಿಲ್ಲ…! ಆಯುಧ ತಾನೇ ಉತ್ಖನನ ಮಾಡಿದ್ದಾರೂ ಕೊಲ್ಲದೆ ಇರಲು ಸಾಧ್ಯವೇನಿರಂತರವಾಗಿ ಅದರ ಬೆನ್ನು ನೇವರಿಸುತ್ತಾ ಮುದ್ದು ಮಾಡುತ್ತಾನೆಯುದ್ಧದ ವ್ಯಸನಿಅದೇ ಆಯುಧ ನಳಿಕೆಯ ತುದಿಯಲ್ಲಿ ಪಾರಿವಾಳ ಗೂಡುಕಟ್ಟಲಿ ಎಂದು ಕಾಯುತ್ತಾನೆ ಶಾಂತತೆ ವ್ಯಸನಿಇಲ್ಲಿ ಇಬ್ಬರದು ಕನಸುಬಹುಷಃ ಜಗತ್ತು […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಮಳೆಯಾಗಿ ನೀ ಸುರಿದಂತೆಲ್ಲ ಏನು ಕೋಪವೋ ನಾನರಿಯೇಒಂದೇ ಸಮನೆ ಜಿಟಿಜಿಟಿಯೆಂದು ಹನಿಸುವ ನಿನ್ನ ಮೌನದ ಭಾಷೆಯುಮುನಿದಂತೆ ಭಾಸವಾಗಿ ಕನವರಿಸಿದೆ ಮುತ್ತಿಡಲು ಹರಸಾಹಸ ಪಟ್ಟಂತೆಹಗಲಿಗೊಂದು ಪರದೆ ಹರವಿದಂತೆ ಮುಸುಕಿನಲಿ ಗುದ್ದಾಟ ನಡೆಸುವಾಗೆಲ್ಲತುಂತುರು ಹನಿಯ ಮಂಪರು ಸಂಪಾಗಿ ಕೈಗೆ ಸಿಗದೆ ಕೊಸರಿ ಓಡುವೆಯೇಕೆ ಹೆದರಿನನ್ನ ಮುನಿಸಿಗೆ ಕಾರಣವೆಂಬಂತೆ ಬಿಂಬಿಸಿ ಹೊತ್ತಿಗೆ ಬಾರದವನ ಮುದ್ದಿಸಲೊಲ್ಲೆನುಪ್ರತಿಹನಿಯಲ್ಲೂ ಜಿನುಗುವ ಕಾರಂಜಿಗಳು ಮಳೆಗಾಳಿಗೆ ಸಿಲುಕಿ ನಲುಗಿದಷ್ಟು ಹಿತಜೀವಜಗತ್ತು ಚಿಗುರೊಡೆಯುವುದೀಗ ತೂತಿನ ಕೊಡೆಯೊಳಗೆ ಆಗಸದ ಚಿತ್ತಾರಕಾರ್ಮೋಡಗಳ ಹೊಯ್ದಾಟದಲಿ ಕಂಪನ ಗುಡುಗು ಮಿಂಚಿನಾರ್ಭಟದಲಿ ಸುಳಿವತಣ್ಣನೆಯ ಸುಳಿಗಾಳಿಯ ಪ್ರೇಮಾರಂಭ ಕೆಸರುಗದ್ದೆಯಲಿ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಮತ್ತೆ ಮಳೆಯಾಗಿದೆ ನಿನ್ನ ಕಣ್ಣ ಬಿಂಬಲಿನಾನು ಪ್ರತಿಬಿಂಬವಾದಾಗಮೋಡ ಕವಿದು ಪ್ರೀತಿಯ ಮಳೆಯಾಗಿದೆ ನಿನ್ನ ಮುಂಗುರಳ ಚಾಚಿನನ್ನ ಕೈ ಹಿಡಿದು ಕರೆದಾಗಮತ್ತೆ ಮಳೆಯಾಗಿದೆ ನಿನ್ನ ಸನಿಹ ನಾ ಬಂದು ನಿಂತಿರುವೆಬಿಸಿಯುಸಿರು ತಾಕಿಸಿದಾಗಹೃದಯ ಬಡಿತ ಜೋರಾಗಿಮತ್ತೆ ಮಳೆಯಾಗಿದೆ ತುಟಿಗೆ ತುಟಿಯು ಸೇರಿಸಿಪ್ರೀತಿಯ ಚುಂಬನ ನೀಡಿದಾಗಪ್ರೇಮಲೋಕದಲಿ ತೇಲಾಡುವಾಗಮತ್ತೆ ಮಳೆಯಾಗಿದೆ ಮುಖ ಕೆಂಪಾಗಿಸಿ ನಾಚಿದಾಗಅಕ್ಕರೆಯಿಂದ ಅಪ್ಪಿಕೊಂಡುಕಳ್ಳ ನೋಟದಿ ನೋಡುವಾಗಮತ್ತೆ ಮಳೆಯಾಗಿದೆ –ಉಮಾಸೂಗೂರೇಶ ಹಿರೇಮಠ…. ಹಳ್ಳಿ ಮತ್ತು ಅಪಾರ್ಟ್‍ಮೆಂಟು ಪ್ರತಿ ಮುಂಜಾನೆ ಕಾಫಿ ಹೀರುತ್ತಾಕಿಟಕಿಯಾಚೆಯ ನೂರಾರು ಮನೆಗಳುಳ್ಳಒಂದು ಅಪಾರ್ಟ್‍ಮೆಂಟನ್ನು ನೋಡುತ್ತಲೇ ಇರುತ್ತೇನೆಅಪಾರ್ಟ್‍ಮೆಂಟ್ ಏಕೆ ಒಂದು […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಸತ್ಯ-ಸುಳ್ಳಿನ ನಡುವೆ ಮನದ ಮಂಟಪ ಮನದಾಳದಲ್ಲಿ ಒಮ್ಮೊಮ್ಮೆ ಮತ್ತೇರಿಮಿಡಿದಭಾವನಾತ್ಮಕ ನುಡಿಗಳಿಗೆ ಕೊನೆಯಿಲ್ಲಅಲ್ಲಿ ಜನಿಸುವ ಭಾವಗಳೆಷ್ಟರ ಮಟ್ಟಿಗೆ ಸತ್ಯವೋ?ಸಂದರ್ಭಕ್ಕೆತಕ್ಕಂತೆ ಬಿಂಬಿಸುವ ಆಸೆಗಳೆಷ್ಟು ಮಿಥ್ಯವೋ? ಪ್ರತಿಬಾರಿ ಅದರ ಮೂಲ ಹುಡುಕುತ್ತಾ ಹೋದರೆಸತ್ಯ ಪ್ರಪಂಚದ ಅನಾವರಣ ಆದರೂ ಆಗಬಹುದುಇಲ್ಲವೇ ಸುಳ್ಳಿನ ಪ್ರಪಂಚದ ಕಗ್ಗತ್ತಲು ಆವರಿಸಿನಕಾರಾತ್ಮಕತೆಯನ್ನು ಸೃಷ್ಟಿಸಿ ನರ್ತಿಸಬಹುದು ಒಮ್ಮೊಮ್ಮೆ ಸತ್ಯ ಜೀವನದ ಸಂಬಂಧಗಳೆಲ್ಲಾಸತ್ಯವೆಂದು ಸಮರ್ಥಿಸುವ ಪ್ರಯತ್ನದಲ್ಲಿ ಬಿದ್ದರೆಮತ್ತೊಮ್ಮೆ ಭಾವಗಳಲೆಯಲ್ಲಿ ಸುಳ್ಳುಕೋಟೆ ನಿರ್ಮಿಸಿಅದರಲ್ಲಿ ಸಿಲುಕಿ ಒದ್ದಾಡುವಂತಾಗುವುದು ಕಲ್ಪನಾಲೋಕ ಪ್ರತಿಬಿಂಬಿಸುವ ಸತ್ಯ-ಸುಳ್ಳಿನನಡುವೆ ಸಿಲುಕಿ ಒಮ್ಮೆ ಆಸೆಯ ಆಶಾಗೋಪುರದತುತ್ತತುದಿಯಲ್ಲಿ ಕುಣಿದಂತೆ ಭಾಸವಾದರೆಮತ್ತೊಮ್ಮೆ ಕೆಳಗೆಬೀಳಿಸಿ ಮಣ್ಣುಪಾಲಾದಂತಾಗುವುದು ಕೊನೆಗೆ […]

ಕಾವ್ಯಧಾರೆ

ಗಜಲ್: ಜಯಶ್ರೀ.ಭ.ಭಂಡಾರಿ

ಗಜಲ್ 1 ಸುಂದರ ವದನ ಇಂದೇಕೆ ಬಾಡಿದೆ ಹೇಳು ಗೆಳತಿಕಣ್ಣುಗಳಲ್ಲಿ ಎಂದಿನ ಕಾವ್ಯ ಕಳೆ ಇಲ್ಲ ಗೆಳತಿ ನೀಳ ನಾಸಿಕ ಅದೇಕೆ ಕೆಂಪಾಗಿದೆ ಹೇಳಲಾರೆಯಾಅಳು ನುಂಗಿ ನಗುವ ಪ್ರಮೇಯ ಯಾಕೆ ಗೆಳತಿ ಹಣೆಯ ಕಾಸಿನಗಲ ಕುಂಕುಮದಲಿ ಸಂಭ್ರಮ ನಗುತ್ತಿಲ್ಲಬಾಗಿದ ಹುಬ್ಬುಗಳಲಿ ಕಾಮನ ಬಿಲ್ಲಿನಂದ ತೋರುತ್ತಿಲ್ಲ ಗೆಳತಿ ತೊಂಡೆಯ ತುಟಿಗಳಲ್ಲಿ ಜೇನು ವಸರುವದು ಕಾಣುತ್ತಿಲ್ಲಕೆನ್ನೆಯಲ್ಲಿ ಗುಲಾಬಿ ರಂಗು ಸೊರಗಿದೆ ಏಕೆ ಹೇಳು ಗೆಳತಿ ಭರವಸೆಯಲ್ಲಿ ಬೆಳಕು ಚೆಲ್ಲುವ ನೀನೇ ಹೀಗಾದರೆ ಹೇಗೆಜುಮಕಿಯ ನಾದದಲ್ಲಿಯೂ ಅದೇಕೊ ಇಂಪಿಲ್ಲ ಗೆಳತಿ ಕಪ್ಪಾದ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಚುಟುಕುಗಳು1ಬಿಸಿಲಿನಲ್ಲಿ ಅಲೆದು ಅವನಹಸಿವು ಹೆಚ್ಚಿ ಸುಸ್ತು ಆಗಿಹಸಿರು ಮರದ ನೆರಳಿಗಾಗಿ ತುಂಬ ಅಲೆದನುಮಳೆಯ ಕಾಲದಲ್ಲಿ ಹತ್ತುಗೆಳೆಯರೊಡನೆ ಸೇರಿಕೊಂಡುನಾಳೆಗಾಗಿ ಹಲವು ಸಸಿಯ ನೆಟ್ಟು ಬಂದನು2ಹುಡುಗನೋರ್ವ ಬಿಸಿಲಿನಲ್ಲಿನಡೆದು ಬರಲು ಸುಸ್ತು ಆಗಿಗಿಡದ ನೆರಳಿನಲ್ಲಿ ಕೊಂಚ ಒರಗಿಕೊಂಡನುಮರಳಿ ಮನೆಗೆ ತೆರಳಿ ತಾನು,ಹುರುಪಿನಿಂದ ಗೆಳೆಯರೊಡನೆಅರಳಿ, ಹೊಂಗೆ ಸಸಿಯ ದಾರಿ ಬದಿಗೆ ನೆಟ್ಟನು3ಬಿಸಿಲ ಕಾಲದಲ್ಲಿ ಬುವಿಯಹಸಿರು ಮಾಯವಾಗುತಿರಲುಹೆಸರು ಉಳಿಸುವಂತ ಕೆಲಸಕೆಂದು ಪುಟ್ಟನುಕಟ್ಟೆ ಮೇಲೆ ಹಕ್ಕಿಗಳಿಗೆಬಟ್ಟಲಲ್ಲಿ ನೀರು ಕಾಳುಇಟ್ಟು ತಿನ್ನಲೆಂದು ಒಲುಮೆಯಿಂದ ಕರೆದನು4ಬರವು ಬಿದ್ದು ಬುವಿಯು ಸುಡಲುಮರಗಳೆಲ್ಲ ಒಣಗುತಿರಲುನರಳುತಿಹವು ಜೀವರಾಶಿ ವರುಣನಿಲ್ಲದೆಇಳೆಯ ಮೇಲೆ ಗಿಡವ ನೆಡದೆಮಳೆಯ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಚಿತೆಯಾಗದ ಮಾತುಗಳು ಬನ್ನಿ ಮಲಗೋಣ ಯಾರೂ ಇಲ್ಲ ನಮಗೀಗಮಣ್ಣಿನ ಮಾತು ಮನಸಲಿ ಕೂತಿದೆಮಸಣದಲಿ.. ನಾವು ಮಾಡಿದ ಕೆಲಸಗಳಮಾತು-ಕತೆ ಶುರುವಾಗಿದೆಬೆಂಕಿ ಇಡುವ ಮುನ್ನ ನನ್ನ ಸೋಂಕಿನಇತಿಹಾಸವನ್ನೆಲ್ಲ ಎಲ್ಲರೂಊರು ಹೊಡೆಯುತ್ತಿದ್ದಾರೆ. ವಾಸನೆ ಹೆಚ್ಚಾಗಿ ಮೂಗು ಮುಚ್ಚುತ್ತಿದ್ದಾರೆಮುಟ್ಟಲು ಸಮಾಜವನ್ನೆಧಿಕ್ಕರಿಸುತ್ತಿದ್ದಾರೆಅತ್ತು ಕರೆಯಲು ಸಮಯವಿಲ್ಲಚಿತಾಗಾರದ ಬಾಗಿಲಲ್ಲಿಯತಾಸ್ಥಿತಿಯಲ್ಲಿ ಕ್ಯೂ ಹೆಚ್ಚೆ ಆಗಿದೆಸತ್ತವರು ನಾವೆಅವರ ಹೆಸರಲ್ಲಿ ಅವರ ಉಸಿರಲ್ಲಿ. ಅಂಬೆಗಾಲಿಟ್ಟು ನಡೆಯಲುಪ್ರೋತ್ಸಾಹಿಸಿದ ನೆಲದವ್ವನವ ನವ ಜಾತಿಯ ಸೋಂಕನ್ನು ಮಡಿಲುತುಂಬಿಸಿಕೊಳ್ಳುತ್ತಿದ್ದಾಳೆಕರುಳ ಬೇನೆಯು ಇಲ್ಲತೀವ್ರವಾದ ಎದೆಹಾಲಿನ ಕೊರತೆಯು ಇಲ್ಲಬರಿ ಬರಡಾಗಿರುವಗರ್ಭದಲಿ ಸೃಷ್ಠಿಯ ಋತುಸ್ರಾವಸಂಕಟಗಳ ವ್ಯರ್ಥ ಹರಿವು. ನಿನ್ನ ನನ್ನ ಭೇಟಿಗೆ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಬಡಿತದ ಭಾವ ಅಲೆಗಳು ಎನ್ನೆದೆಯಾಳದಲ್ಲಿ ಜನ್ಮಿಸಿದನೂರಾರು ಬಡಿತದ ಭಾವಗಳುಧರೆಯ ಮಡಿಲಲ್ಲಿ ಚಿಗುರಿದಂತೆಹೊಸ ಹೊಸ ತುಡಿತದ ಕನಸುಗಳುಒಮ್ಮೊಮ್ಮೆ ಕುಸುಮವಾಗಿ ಅರಳಿಮತ್ತೊಮ್ಮೆ ಕಮರಿದ ಕ್ಷಣಗಳು ಒಮ್ಮೊಮ್ಮೆ ಯಾರನ್ನು ಹಂಬಲಿಸಿಅವರಿಗಾಗಿ ನವಜೀವನ ಬಯಸಿಒಲವಿನ ಚೆಲುವಿನ ಕನಸುಗಳು ಮೂಡಿಸಿಮೌನ ನಲಿಯುತ್ತಾ ಹೂವಂತೆ ಅರಳಿದರೆಮತ್ತೊಮ್ಮೆ ಮುಳ್ಳುಗಳಿಂದ ಹೃದಯಪರಚಿಸುಮ್ಮನೆ ಕುಳಿತಂತಾಗುವುದು ಅದು ಕುಂತಲ್ಲಿ ಚಿಂತಿಸುವುದುನನ್ನ ಭವ್ಯಭವಿಷ್ಯದ ಬಗ್ಗೆಒಮ್ಮೊಮ್ಮೆ ಪರದಾಡುವುದುಪಾರಿವಾಹಕ ಸೆಳೆತದ ಬಗ್ಗೆಮತ್ತೊಮ್ಮೆ ಉಗ್ರವಾಗದೆ ಅರಿವುದುಗೋಮುಖ ವ್ಯಾಘ್ರ ದ ಮಾನವರ ಬಗ್ಗೆ ಒಮ್ಮೊಮ್ಮೆ ನನ್ನದೆಯ ಅರಗಿಳಿಯುಸುಮಧುರ ಅಕ್ಷರಗಳನ್ನು ಪೋಣಿಸಿಮಾತಿನ ಮುತ್ತಿನ ಹೊಳೆ ಸುರಿಸಿದರೆಮತ್ತೊಮ್ಮೆ ಮಾಗಿಯ ಕೋಗಿಲೆಯಂತೆಮೂಕಭಾವವನ್ನು ಆವರಿಸಿಕೊಂಡುಅಕ್ಷರಗಳೋತ್ಪತ್ತಿಯನ್ನು […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ನಿನ್ನ ಅಮೃತಬಳ್ಳಿ ಪ್ರೀತಿ ತಟ್ಟಿ ಮಾತಾಡಿಸುವ ಮಾತುಗಳುನನ್ನೊಳಗನ್ನುಮೌನವಾಗಿಸಿಬಿಟ್ವಿವೆತಟ್ಟಿದ್ದು ಎಬ್ಬಿಸಕ್ಕೋ, ಬಗ್ಗಿಸಕ್ಕೋಅದು ನನಗೆ ತಿಳಿಯಬಾರದೂ ಕೂಡನಾನಂತೂ ಮೌನಿಯಾಗಿಯೇ ಇರುವೆ. ಬದುಕಿನ ಬರಗಾಲಕ್ಕೆಒಣಗಿದ ಮನದಲ್ಲಿಮೊಣದೊಲೆಯಷ್ಟು ಬೆಂಕಿಯತ್ತಿದ್ದು ನಿಜ;ಎದುರಿದ್ದಿದ್ದು ಮಂಜುಗಡ್ಡೆಯಾದ ನೀನು ಮಾತ್ರವೇ.ಆ ಅಗ್ನಿಜ್ವಾಲೆಯಲ್ಲಿ ಅನ್ನವನ್ನುಬೇಯಿಸಿಕೊಂಡವರೆಷ್ಟೋ ಕಾಣೆ,ತಣಿಸಿದ್ದು ವರುಣದೇವನತೀರ್ಥವಾದ ನಿನ್ನಕಣ್ಣೀರು. ಮತ್ತೆ ಈ ಮನದನೆಲದೊಳಗೆಪ್ರೀತಿಯ ಬೀಜಗಳನ್ನು ಉತ್ತಿದ್ದೇನೆಅವುಗಳ ಫಸಲಿಗಾಗಿನಿನ್ನ ಪ್ರೇಮದ ಮೀಮಾಂಸೆಯವ್ಯವಸಾಯವನ್ನು ಭರಿಸಿಕೊಳ್ಳಲುಈ ಮನದಮಣ್ಣು ಹಾತೊರೆಯುತ್ತಿದೆ,ಭಾರೀ ಭಾರಿ ಫಸಲಂತೂನನಗೇ ಬೇಡವೆ ಬೇಡಅತೀಯಾಗಿದ್ದು ಮತ್ತೆಅದೇ ದಿಕ್ಕುತಪ್ಪಿದ ಲೋಕದಸಿಂಹಾಸನಕ್ಕೆ ನನ್ನಅಧಿಪತಿಯಾಗಿಸಬಹುದು. -ಸತೀಶ ಜೆ ಜಾಜೂರು(ಸಜಲ) ನನ್ನವನು.. ಇದ್ದರೂ ಇರಬಹುದೇನೋ ಅವಳಂತೆ ಇವನುಪ್ರೀತಿ ,ಪ್ರೇಮಕೆ ಒಂಚೂರು […]

ಕಾವ್ಯಧಾರೆ

ಗಜಲ್

ಗಜಲ್ ಪ್ರೇಮ ಮದಿರೆಯ ನಶೆಗೆ ಸಿಹಿಮುತ್ತುಗಳೇ ಸಾಕ್ಷಿ ಸಾಕಿಮುತ್ತಿನ ಮತ್ತಿಗೆ ಜೋಲಾಡುತ್ತಿರುವ ಅಕ್ಷಿಗಳೇ ಸಾಕ್ಷಿ ಸಾಕಿ ಪ್ರೀತಿ ಪ್ರೇಮಕೂ ಕಾಮದ ರೂಪ ಉಂಟೂ ಲೋಕದಲಿನಮ್ಮಿಬ್ಬರ ಪರಿಶುದ್ಧ ಪ್ರೇಮಕೆ ಈ ರಾತ್ರಿಗಳೇ ಸಾಕ್ಷಿ ಸಾಕಿ ಸೌಂದರ್ಯವ ಆಸ್ವಾದಿಸದೇ ಅನುಭೋಗಿಸುವುದು ಸಲ್ಲದುಹೃದಯಾಂತರಾಳದಲಿ ಮಿಳಿತಗೊಂಡ ಆತ್ಮಗಳೇ ಸಾಕ್ಷಿ ಸಾಕಿ ನಿನ್ನೊಲವ ಸವಿರುಚಿಯ ಉಣಬಡಿಸು ನನ್ನೆದೆಗೆನೀನಿರದ ಅನುಕ್ಷಣಗಳಿಗೆ ವಿರಹಗಳೇ ಸಾಕ್ಷಿ ಸಾಕಿ ಪ್ರೀತಿ ಎಂದರೆ ಬರೀ ದೇಹಾಕರ್ಷಣೆ ಅಲ್ಲ ‘ ಬಾಬಾ ‘ಮನಸ್ಸು ಮನಸ್ಸುಗಳ ಸಮ್ಮೀಲನಗಳೇ ಸಾಕ್ಷಿ ಸಾಕಿ -ಶಿವರಾಜ್.ಡಿ (ಚಳ್ಳಕೆರೆ) ರಾಮನ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ವಜನು ಗೊತ್ತಿಲ್ಲದೇ ಅಡಗಿದೆಎಲ್ಲರ ಚಿತ್ತದಲೂತರತಮದ ತಕ್ಕಡಿಯೊಂದು ಬೇಕೋ ಬೇಡವೋಅಳೆಯುತ್ತದೆ ಸುತ್ತಲಿನ ಎಲ್ಲವ(ರ)ನ್ನು ಒಬ್ಬೊಬ್ಬರ ತಕ್ಕಡಿಯದೂಅಳತೆಗಲ್ಲು ಬೇರೆಇಂದಿನ ಲಕ್ಷುರಿ ನಾಳಿನಅವಶ್ಯಕತೆಯಾಗುವುದು ಖರೇ ಇವನ ನೂರರ ಕಲ್ಲುಆಗಬಹುದವನ ಸಾವಿರದ ಕಲ್ಲುಇವಳ ಸುಖದ ವ್ಯಾಖ್ಯಾನಸರಿಯೆನಿಸದಿರಬಹುದು ಅವಳಿಗೆ ಮಗುವಿಗೆ ಯಾವ ಸ್ಕೂಲಲ್ಲಿ ಸೀಟುಯಾವ ಲೇ ಔಟ್‌‌ನಲ್ಲಿ ಸೈಟುಹೊಸ ಮನೆ, ಕಾರಿನ ರೇಟು-ಗಳ ಮೇಲೆ ನಿರ್ಧಾರವಾಗುವುದು ವೇಯ್ಟು ಅವರಿವರ ತಕ್ಕಡಿಯಲಿಮೇಲಾಗಿ ತೂಗಲು ಜನರ ಪೈಪೋಟಿಜಾಗ್ರತೆ! ತಪ್ಪದಿರಲಿ ಹತೋಟಿ ತಕ್ಕಡಿಯಲಿ-ಇಂದೊಬ್ಬ ಮೇಲಾಗಿನಾಳೆ ಮತ್ತೊಬ್ಬ ಹೆಚ್ಚು ತೂಗಿ,ಒಮ್ಮೆ ಮೇಲಾದವನುಇನ್ನೊಮ್ಮೆ ಕೆಳಗೆ ಬಾಗಿತನ್ನ ತಾನೇ ತೂಗಿಕೊಳ್ಳಲು ಹೋಗಿಕೊನೆಗೆ ತೂಗಿ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಮೂಕರೋಧನೆ ವರುಷದಿಂದ ವರುಷಕ್ಕೆಹೆಚ್ಚಿದೆ ನೇಸರನ ತಾಪಉರಿಬಿಸಿಲಿಗೆ ನಲುಗಿತಾಳ್ಮೆಯ ತಾಯಿಗೆ ಬಂದಿದೆ ಕೋಪ || ಬರದ ನೆಲದಲ್ಲಿ ಜಲವಿಲ್ಲಉಳುವ ಯೋಗಿಗೆ ಒಲವಿಲ್ಲನಿಸರ್ಗದೊಳಂತೂ ಚೆಲುವಿಲ್ಲಸೃಷ್ಟಿ ಸಂಕುಲಕ್ಕೆ ಉಳಿವಿಲ್ಲ || ಅಳಿಯುತಿದೆ ಪಾವನದ ಎಲರುಬಣಬಣಗುಟ್ಟುತಿದೆ ಹಸಿರಿನ ಉಸಿರುಒಡಲ ಕ್ಷಾಮಕೆ ವೈದ್ಯನಾರುಖಗ ಮೃಗಗಳಿಗೆ ಎಲ್ಲಿದೆ ಸೂರು? || ಗೋಳಿನ ಬಾಳೊಳಗೂ ನೀನಾದೆ ಮಾನ್ಯತೆಸಜೆಯಾದರೂ ಧರೆಯೂಡಿದೆ ನಿನಗೆ ಧನ್ಯತೆಪ್ರತಿಯೊಂದಕ್ಕೂ ನಿನ್ನದೇ ಮಾರ್ನುಡಿಬೆಲೆಯಿಲ್ಲದ ಹೊತ್ತಿಗೆಗೆ ಬೇಕಿಲ್ಲ ಮುನ್ನುಡಿ || -ಕ.ಲ.ರಘು. ಮೆಟ್ಟಿನ ಹುಡುಗ ಹತ್ತಲ್ಲದ ಹೊತ್ತಿನಲ್ಲೂಹೊಲಿಯುತ್ತಿದ್ದಾನೆ… ತಿಕ್ಕುತ್ತಿದ್ದಾನೆ …ಕಂಡವರ ಕೆರ ಹಿಡಿದ ಶೂಗಳನ್ನು.ಉರಿಬಿಸಿಲಿಗೆ ಮೈಯ್ಯೊಡ್ಡಿ,ಹರಕು ಮುರುಕಿನ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಕೊರಳ ಕರೆ ಯಾವ ದಾರಿಯಲಿ ಹೇಗೆ ಸಾಗಿದರುಬಂದು ಸೇರುವೆ ಇಲ್ಲಿಗೆದುಂಬಿ ಕಳವಳ ಹೂವು ಬಲ್ಲದುಕರೆಯದಿರುವುದೆ ಮೆಲ್ಲಗೆ? ರಾತ್ರಿ ರಮಣಿಯ ಚಂದ್ರ ಬಿಡುವನೆಎಳೆದು ತರುವನು ಗಲ್ಲಿಗೆಚಂದ್ರಿಕೆಯ ಆ ಇರುಳ ಹೆರಳಿಗೆಮುಡಿಸದಿರುವನೆ ಮಲ್ಲಿಗೆ? ಕಡಲ ಚುಂಬನ ಮಧುರ ಬಂಧನಬಿಡದೆ ಇರಿವುದು ಎನ್ನೆದೆರಾಗರಂಜಿನಿ ಗುಪ್ತಗಾಮಿನಿಬಿಡುವುದೇನೆ ನಿನ್ನೆದೆ? ಒಲವಗಾಳಿಯು ಸೆರಗು ಹಾಸಿದೆಭಾವ ಬೆಸೆದಿದೆ ಹರುಷದೆಬಾರದಿರುವ ಮಳೆಯ ತಂದುಸುರಿಸೆಯೇನೆ ಸರಸದೆ? ನಮ್ಮ ನಡುವಿನ ಹಮ್ಮುಬಿಮ್ಮುತೂರಿ ಹೋಗಲಿ ಬಾರದೆಬಮ್ಮ ಹಾಕಿದ ನಮ್ಮ ಗಂಟನುನಮಗೆ ಅದನು ತೋರದೆ ತಾಕುಗಣ್ಣಿನ ದುರುಳ ನೋಟವುಇಂಗಿಹೋಗಲಿ ಉಳಿಯದೆಉಸಿರಿಗುಸಿರನು ಬೆರೆಸಿ ಬದುಕುವನಾಕ ನರಕವನಳೆಯದೆ […]

ಕಾವ್ಯಧಾರೆ

ಧಾರವಾಡ ಎನ್ನುವ ಶಹರದೊಳಗೆ ಹಳೆ ಹುಡುಗಿಯ ನೆನೆಪಿನ ಜಾತ್ರೆ: ವೃಶ್ಚಿಕ ಮುನಿ

ಧಾರವಾಡ ಸವಿ ನೆನಪುಗಳುಕಾಡಕತ್ತವಾಧಾರವಾಡ ಮಳೆಯಂಗಆದರೇನು ಮಾಡುವುದೂಮಳೆಗಾಲಕ್ಕೆ ಇನ್ನೂ ಎರಡು ತಿಂಗಳ ಬಾಕಿ ಅದಅಲ್ಲಿವರೆಗೂಹಾಳಾದ ಈ ಬಿಸಿಲಿನ ಕಾಟಕ್ಕೆನಡುನಡುವೆ ನೆನಪುಗಳಬೆವರಿನ ಜಳಕ…! ಹೀಗಿತ್ತು ಧಾರವಾಡದ ಬದುಕುಬೇಕಾಗಿದ್ದು ಎಲ್ಲ ಇತ್ತುಹಸಿವು ಇತ್ತು, ಓದಿನ ಖುಷಿ ಇತ್ತುಹಣದ ಕೊರತೆ ಇತ್ತುಬದುಕಿನ ಚಿಂತಿ ಇತ್ತುಆದರೂ ಏನಾದರೂ ಮಾಡಬೇಕು ಎನ್ನುವ ಛಲ ಇತ್ತುಒಳ್ಳೆಯ ಗೆಳೆಯರು ಬಳಗ ಇತ್ತುಚಿಂತನೆ ಇತ್ತು ಚಿಂತಿಸುವಜೀವಗಳಿದ್ದವುರಾತ್ರಿ ಕನಸುಗಳಿಗೆ ಜೊತೆಯಾಗುವ ನನಸಿನ ಸರಮಾಲೆ ಇತ್ತು…! ಧಾರವಾಡ ಬಿಟ್ಟ ಬಂದ ನಂತರವೂ ಬಿಡದೆ ಕಾಡುವ ಮೋಹವಿತ್ತುಧಾರವಾಡ ಹಳೆ ಗೆಳತಿಯಂಗ ಕಾಡಾತ್ತೀತುಆಕಿ ನಗು, ಹುಡುಗಾಟ, […]

ಕಾವ್ಯಧಾರೆ

ಕಾವ್ಯದ ಆದಿ ಮತ್ತು ಅಂತ್ಯದಂತೆ…: ಅಶ್ಫಾಕ್ ಪೀರಜಾದೆ.

ಕಾವ್ಯದ ಹುಟ್ಟು ಒಂದುವಿಚಿತ್ರವಾದ ಸೃಷ್ಟಿ ಕ್ರಿಯೆಹುಟ್ಟು ಮತ್ತು ಸಾವಿನಂತೆಯಾವುದೇ ಸಮಯದಲ್ಲಿಹುಟ್ಟಬಹುದು ಹಾಗೇಸಾಯಲೂ ಬಹುದುಆದರೆ ಅದರಾತ್ಮಅಮರವಾಗಬಹುದುಅಥವಾಹೇಳು ಹೆಸರಿಲ್ಲದಂತೆಅಳಿದೂ ಹೋಗಬಹುದು ಅದೊಂದು ರಾತ್ರಿದಟ್ಟ ಕತ್ತಲೆಯಲ್ಲಿವೈಬ್ರೇಟ ಆಗಿಬೆಳಗಿದ ಮೊಬೈಲ್‌ಪರದೆಯ ಮೇಲೆಎಲ್ಲಿಂದಲೋ ಹಾರಿಬಂದು ಬಂದು ಕುಳಿತಕೀಟಕ್ಕೇನು ಗೊತ್ತುಅರಿಸಿ ಬಂದ ಬೆಳಕಿನಲ್ಲೆಜವರಾಯ ಇರುವ ಸತ್ಯ ಸಾಯಬೇಡ ಹೋಗುಹೋಗೆಂದರು ಕೇಳದುಎಷ್ಟು ಊದಿದರೂಹಾರಿ ಹೋಗದುಮತ್ತೆ ಮತ್ತೆ ಅದೇಬೆಳಕಿನ ತೆರೆಗೆ ಡಿಕ್ಕಿಹೊಡೆಯುವುದುಮೋಜಿನಾಟ ಅವಿರತ ಪ್ರೇಮಿ ತನ್ನಪ್ರೇಯಸಿಯನುಮತ್ತೆ ಮತ್ತೆತಬ್ಕೊಳ್ಳುವಂತೆಮತ್ತೆ ಮತ್ತೆಮುತ್ತಿಕ್ಕುವುದು……………….. ಈ ಚೆಲ್ಲಾಟದಿಂದಮೊಬೈಲಿಗೇನುಬೇಜಾರಿಲ್ಲಆದರೆ ಮೊಬೈಲನೋಡುವಕಂಗಳಿಗೆ ಸ್ವಲ್ಪ ಕಿರಿಕಿರಿಮನದ ಅಣತಿಯಂತೆಮೈ- ಕಡವಿ ನಿಂತಘಟೋದ್ಗಜ ಹೆಬ್ಬರಳುಬೆಳಕಿಗೆ ಮುತ್ತಿಡುತ್ತಿದ್ದಕೀಟವನ್ನು ಸ್ಕ್ರೀನಿಗೆಒತ್ತಿ ಒರೆಸಿ ಹಾಕಿದೆ ಬೆಳಕನು […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಗೋಡೆಗಳು… ಅವ ತೋರಿಸೆಂದುದಕೆಇವಳು ತೋರಿಬಿಟ್ಟಳು..ಸುತ್ತಲ ಗೋಡೆಗಳೆಲ್ಲ ಕೇಳುತ್ತ ನೋಡಿಬಿಟ್ಟವುಕೆಲ ಗೋಡೆಗಳು ಮಾತಾಡಿಬಿಟ್ಟವುಅಡಗಿಸಿಡಬಹುದಾದ ಸಂಗತಿಗಳೆಲ್ಲತೆರದಿಡುವಂತಾಗಿ ಗೋಡೆಯ ಬಾಯಿಗಳುಬಡಬಡಿಸುವಂತಾದವು ಗೋಡೆಗಳ ಮಧ್ಯೆ ಗೌಪ್ಯವಾಗಿಡಬಹುದೆಂಬುದುಈಗೀಗ ಸುಲಭ ಸಾಧ್ಯವಲ್ಲಈಗಿನ ಗೋಡೆಗಳು ಆಗಿನ ಗೋಡೆಗಳಂತಲ್ಲ..ಕಣ್ಣುಗಳ ಜತೆಗೆ ಕಿವಿಗಳು ಇಷ್ಟಗಲವಾಗಿತೆರೆದು ನಿಮಿರುತ್ತವೆ..ಕೆಲವಂತೂ ಮಾತನ್ನೇ ಸ್ಖಲಿಸಿಬಿಡುತ್ತವೆ ಗೋಡೆಗಳ ನಡುವೆ ಖಾಸಗಿತನವೆಂಬ ಕಾಲಈಗೀಗ ಸಾಮಾನ್ಯವಾಗುಳಿದಿಲ್ಲಗೋಡೆಗಳ ಮಧ್ಯೆ ವಿರಕ್ತರ ಬಟ್ಟೆಗಳ ಕಲೆಯೂ ಸಹಸಾಕಷ್ಟು ಕತೆಗಳನ್ನು ಹಡೆಯುತ್ತಿದೆ. ಗೋಡೆಗಳಿಂದೀಚೆಗೆ ಬಂದ ಕತೆಗಳಲ್ಲಿನ ಪಾತ್ರಗಳುಒಂದನ್ನೊಂದು ಒಪ್ಪಿಕೊಳ್ಳುವುದಿಲ್ಲ..ಕಲ್ಪನೆಯ ಜಾಡಿನೊಳಗೆ ಸುಳಿದಾಡಿದ ಕಾಕತಾಳೀಯ ಎಂಬ ಷರಾದೊಂದಿಗೆಮರೆಯಾಗಿಬಿಡುತ್ತವೆ.. ದೇಹಗಳ ತೀಟೆಗೆ ಗೋಡೆಗಳೂ ಬೇಸತ್ತಿವೆ..ಮನಸು ತನ್ನ ತಪ್ಪನ್ನು ಕಾಲದ […]

ಕಾವ್ಯಧಾರೆ

ಪಂಜು ಗಜಲ್

‌ ಗಜಲ್. ಇಲಕಲ್ಲ ಸೀರೆಯುಟ್ಟ ರಮಣಿ ನಾನು ನೋಡೋದ್ಯಾಕೆಹಸಿರು ಬಣ್ಣ ನಿನ್ನಿಷ್ಟದ್ದಂತ ನೀನೆ ಕೊಟ್ಟಿದ್ದು ನೋಡೋದ್ಯಾಕೆ. ಮಲ್ಲಿಗೆ ತುರುಬ ಕಂಡು ಕಣ್ಣಂಚಿನಲ್ಲಿ ಸಳೆಯುವವನೇಮಲ್ಲಿಗೆ ನಲ್ಲೆಗೆ ತಂದವನು ನೀನೇ ರಾಯ ನೋಡೋದ್ಯಾಕೆ ಘಲ್ ಘಲ್ ಗೆಜ್ಜೆಯ ಸದ್ದಿಗೆ ಹೆಜ್ಜೆ ಹಾಕುತ ನಡೆದರೆಗೆಜ್ಜೆಯ ಸರದಾರ ನೀನೇ ನಿಂತು ನಿಂತು ನೋಡೋದ್ಯಾಕೆ ಬಳೆಗಳ ಖನ ಖನ ನಾದಕೆ ಬೆರಗಾಗಿ ಮರಳಿ ನೋಡೋನೆಜಾತ್ರೆಯಲಿ ಖುದ್ದಾಗಿ ಬಳೆಗಳ ಕೊಡಿಸಿದ ಧೀರನೇ ನೋಡೋದ್ಯಾಕೆ ಜಿರಕಿ ಜೋಡು ಮೆಟ್ಟಿ ಕಟ್ಟು ಮಸ್ತಾಗಿ ಹೊರಟವನೇಮನೆಯಂಗಳದಿ ಹಣಿಕಿ ಹಾಕುತ ಒಲವಿನಲಿ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಮಾಯವಾಗಿದೆ ಖಾಸಗಿತನ ಮಾಯವಾಗಿದೆ ನಮ್ಮ ಖಾಸಗಿತನಮಾಯವಾಗಿದೆಅಬ್ಬರದ “ಸೆಲ್ಪಿ”ಗಳ ನಡುವೆಸೂತು ಸೊರಗಿದೆ ಎಲ್ಲವನ್ನು ಕ್ಷಣಾರ್ಧದಲ್ಲಿ ಕ್ಲಿಕ್ಕಿಸಿಸಾಮಾಜಿಕ ಜಾಲಕ್ಕೆ ಹರಿಬಿಡುವ,ಅಳಿಯದ ಗೋಡೆಗೆ ಅಂಟಿಸುವಧಾವಂತದಲಿ ಮಾಯವಾಗಿ ನಮ್ಮ ಖಾಸಗಿತನ‌ ಎನಿದ್ದರು ಆಗದು ಬಣ್ಣದ ಪಟಎಷ್ಷೂ ತೆಗೆದರು ಸಾಲದುಕಾಯಕವೇ ಕೈಲಾಸ ಮರೆತುಹೊಯಿತುಎಲ್ಲೆಂದರಲ್ಲಿ ಸೇಲ್ಪಿ ಕಾಯಕವಾಯಿತುಕಾರು ,ಬಸ್ಸುಗಳಲ್ಲದೆ, ತಿಂದ್ದು ,ಹೇತದ್ದು ಎಲ್ಲ ಪಟಗಳನ್ನು“ಅಪ್ಲೋಡ್ ” ಮಾಡುವದೇ ಕೆಲಸವಾಯಿತು ..!ಖಾಸಗಿತನ‌ ಮಾಯಾವಾಯಿತು . ಮರೆಯದ ಗೋಡೆಗೆ ಅಂಟಿಸಿ ,ಮನೆಯಲ್ಲೂ ,ಮನದಲ್ಲೂ ಗೋಡೆಗಳುಎದ್ದುನಿಲ್ಲವಂತಾಯಿತು .ಗೋಡೆ ಮರೆಯುವದಿಲ್ಲಮನಗಳು ಒಂದಾಗುವದಿಲ್ಲ ..! ಸಾಮಾಜಿಕ ತಾಣ ಖಾಸಗಿತನದಸರಕಾಯಿತು ಸಮಾಜ ,ಬದುಕಿನನಡುವಿನ ಸೂಕ್ಷ್ಮ […]

ಕಾವ್ಯಧಾರೆ

ನಾಲ್ವರ ಗಜ಼ಲ್ ಗಳು

ಗಜ಼ಲ್ ಕಪ್ಪೆಂದು ಜರಿದು ದೂರ ಉಳಿಸಿದವರು ಕೆಲವರುಅಸಹ್ಯದಿಂದ ಮುಖ ಸಿಂಡರಿಸಿದವರು ಕೆಲವರು ನನ್ನ ಬಣ್ಣ ನಿಮ್ಮ ಮುಖಕ್ಕೇನಾದರೂ ಮೆತ್ತಿಕೊಂಡೀತೇ?ಕೇಳಬೇಕೆನಿಸಿತ್ತು ಕ್ಷಣ ಮಾತ್ರವೂ ನಿಲ್ಲದೇ ಹೋದವರು ಕೆಲವರು ಬಣ್ಣದಲ್ಲೇನಿದೆ ಬಾ ಗೆಳೆಯ ಕೂಡಿ ಆಡೋಣವೆಂದ ಮಾತುಗಳು ಸಾಕಷ್ಟಿವೆಅವುಗಳನ್ನೆಲ್ಲಾ ಗಣನೆಗೆ ತೆಗೆದುಕೊಳ್ಳದವರು ಕೆಲವರು ದೂಷಿಸಿದವರ ಕೇಳಿದೆ ನಿಮ್ಮ ನೆರಳಿನ ಬಣ್ಣ ಯಾವುದು?ಉತ್ತರಿಸಲಾಗದೆ ಗರಬಡಿದಂತೆ ನಿಂತವರು ಕೆಲವರು ದೇಸು ಇದೇ ಬಣ್ಣ ಬೇಕೆಂದು ಬೇಡಿಕೊಂಡನೆ? ಇಲ್ಲವಲ್ಲಾ!!!ಕೇಳಿದ್ದಕ್ಕೇ…ನಕ್ಕು ಅಪಹಾಸ್ಯ ಮಾಡಿ ಹೊರಟವರು ಕೆಲವರು ದೇಸು ಆಲೂರು… ಗಜಲ್ ಸರಿದು ಹೋಯ್ತು ಮತ್ತೊಂದು ಪ್ರೇಮಿಗಳ […]

ಕಾವ್ಯಧಾರೆ

ಹನಿಗವನಗಳು: ಆರ್.ಸುನೀಲ್.ತರೀಕೆರೆ, ವಾದಿರಾಜ ಕುಲಕರ್ಣಿ, ಪುಣೆ, ಪುಷ್ಪ ಪ್ರಸಾದ್, ಉಡುಪಿ

“ಮಹೋತ್ಸವ”ಗಿಡ ನೆಟ್ಟರೆವನ ಮಹೋತ್ಸವಇಂಟರ್ ನೆಟ್ಟಿರೆಮನ ಮಹೋತ್ಸವ..! “ಆಮಂತ್ರಣ’ಅನ್ನುವುದಿಲ್ಲ ನಾಊರು ಕೊಳ್ಳೆ ಹೊಡೆದ ಮೇಲೆಮುಚ್ಚಿದಂತೆ ಊರ ಬಾಗಿಲು,ಬಾ ಗೆಳತಿ ಸೂರೆ ಮಾಡುಎನ್ನ ಹೃದಯ ಸದಾತೆರೆದ ಬಾಗಿಲು..! “ರಂಗು”ಎಷ್ಟೊಂದು ರಂಗುಮನುಜನ ಕಾಯಕೆನೆರಳು ಕಪ್ಪು “ಊಟ”ನೀರವ ರಾತ್ರಿಯಲ್ಲಿನೂರು ಭಾವನೆಗಳವಿನಿಮಯದ ನೋಟ..;ಆಹಾ ಅದೆಷ್ಟು ಚೆನ್ನ ಪ್ರಿಯೆಕಣ್ಣುಗಳಾ ಈಬೆಳದಿಂಗಳ ಊಟ..! “ಲೋಕ”ಎಷ್ಟು ವಿಚಿತ್ರಭಾವನೆಗಳ ಲೋಕನಕ್ಕು ಅಳುವಅತ್ತು ನಗುವ ಶೋಕಬಾಳು ನೀರವ ಶ್ಲೋಕ..! “ಕ್ಷಣಿಕ”ಕತ್ತಲೆ ಕೂಪಕ್ಷಣಿಕ ಮರೆ ಅದುಕಿರಣ ತೂರಿಹೊರಬಂದೊಡೆ ಪ್ರಭೆಕಾಲ ಎಂದೂ ನಿಲ್ಲದು –ಆರ್.ಸುನೀಲ್.ತರೀಕೆರೆ. ಫೇಸ್ಬುಕ್ಕು.. ವಾಟ್ಸಪ್ಪು…. –ಕೊರಗು–ಮೊದಲು ಸಿಗುತ್ತಿತ್ತುನಲ್ಲೆಯ ಸಿಹಿ ಅಪ್ಪುಗೆ |ಈಗ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಮೊದಲ ಮುಟ್ಟು ಅಂಗಳದಲ್ಲಿ ಮೂಡಿದಕೆಂಪು ರಂಗೋಲಿಭಯ ಹುಟ್ಟಿಸುತ್ತದೆಶಾಲಾ ಶೌಚಾಲಯದಗೋಡೆ ಮೇಲೆಲ್ಲಾಗಾಭರಿಯ ಗೀಟುಗಳು ಎದೆಯ ಹೊಸ್ತಿಲಲ್ಲಿಅಡ್ಡಲಾಗಿ ಬಿದ್ದಭಯದ ಪೆಡಂಭೂತತಲೆಯ ಹಗ್ಗದ ಮೇಲೆಹಿಂಜರಿಕೆಯ ದೊಂಬರಾಟ ಕಿಬ್ಬೊಟ್ಟೆಯಲ್ಲೊಂದು ನೋವುಗಂಟು ಕಟ್ಟಿಕೊಂಡರೆಮನದೊಳಗೆ ಮುಜುಗರದಬ್ರಹ್ಮಗಂಟುಗಿಡಕ್ಕೆ ಕಚ್ಚಿದ್ದ ಮೊಗ್ಗುಭಯದಲ್ಲೇ ಅರಳುತ್ತದೆ ಕೇರಿ ಕೇರಿಯಲು ಸದ್ದುಮಾಡಿದ್ದ ಗೆಜ್ಜೆಯದುಲಜ್ಜೆ ಹಿಡಿದುಕೋಣೆ ಸೇರುತ್ತದೆರೆಂಬೆ ಕೊಂಬೆ ಹತ್ತಿದ್ದಕಾಲ್ಗಳಿಗೆ ಸರಪಳಿಯಸತ್ಕಾರ ಪ್ರಕೃತಿಯ ಕೊಡುಗೆಗೆನೂರೆಂಟು ಗೊಡವೆದೇವತೆಯನ್ನೂ ಬಿಡಲಿಲ್ಲಮಡಿವಂತಿಕೆ ಸರಿಯೇ ಮಡಿಲ ಕೂಸ ಸೆರಗಲ್ಲಿಬಚ್ಚಿಡುವ ಆಟಗಂಡು ನೆರಳು ಸೋಕದಂತೆಬಿಗಿ ಬಂದೂಬಸ್ತ್ಅವಳನ್ನು ಅವಳೊಳಗೇಬಚ್ಚಿಡುವ ಕಣ್ಣಾಮುಚ್ಚಾಲೆ ಆಟ ಏರಿದವರ್ಯಾರೋಈ ಕಟ್ಟುಪಾಡುಸ್ವಾಭಾವಿಕ ಕ್ರಿಯೆಗೆಸಂಕೋಚದ ಸೊಂಟದ ಪಟ್ಟಿಕಟ್ಟಿ ನಡುರಸ್ತೆಗೆ ಬಿಡುವರೀತಿ ನೋಡು […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಗಝಲ್ ಜಾತಿಸೀಮೆಯ ದಾಟಿ ಹೊಸನಾಡಕಟ್ಟುವೆನು ಜಗದೊಳಗೆ||ಮೌಢ್ಯತೆಯ ಕಡಿದೊಗೆದು ಸತ್ಯವನುತೋರುವೆನು ಜಗದೊಳಗೆ|| ಕಾರ್ಗತ್ತಲ ದಾರಿಯಲಿ ಮುಳ್ಳುಗಂಟಿಎತ್ತರಕೆ ಬೆಳದಿದೆ ನೋಡು|ಬಿರುಕು ಬಿಟ್ಟ ಮನಗಳಲ್ಲಿ ಪ್ರೀತಿಯನುಬಿತ್ತುವೆನು ಜಗದೊಳಗೆ|| ದ್ವೇಷ ಅಸೂಯೆಗಳ ಕಿಡಿಕಾರಿ ಬೆಂಕಿಉಗುಳುತ್ತಿದ್ದಾರೆ ಸುತ್ತಲೂ|ಘಾಸಿಗೊಂಡ ಮೃದುಮನಕೆ ಔಷಧಹಚ್ಚುವೆನು ಜಗದೊಳಗೆ|| ಅನ್ಯಾಯ ಅಕ್ರೋಶಗಳ ಮೆಟ್ಟಿ ನಿಂತುರಣಭೇರಿ ಬಾರಿಸುವೆ|ಜಯದ ಹಾದಿಯನು ವೀಕ್ಷಿಸುತಲಿಸಾಗುವೆನು ಜಗದೊಳಗೆ|| ಅಭಿನವನ ಒಡಲ ಕಿಚ್ಚದು ನಿಗಿನಿಗಿಕೆಂಡವಾಗಿ ಸುಡುತ್ತಿದೆ ||ಕೆಸರು ತುಂಬಿದ ಹೃದಯವನು ಪರಿಶುದ್ದಮಾಡುವೆನು ಜಗದೊಳಗೆ|| ಶಂಕರಾನಂದ ಹೆಬ್ಬಾಳ ಗಜಲ್ ಅನುರಾಗದ ಮೇಘವು ಅವತರಿಸಿದೆ ಮನದಲ್ಲಿಮುತ್ತಿನ ಹನಿಗಳು ಹೆಪ್ಪುಗಟ್ಟಿವೆ ನನ್ನ ಅಧರದಲ್ಲಿ ಗಾಳಿಯಾಗಿ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಪಳೆಯುಳಿಕೆಗಳು ಅದೆಷ್ಟು ಕಾಲ ಕಣಿವೆಗಳಲಿನಿಶ್ಯಬ್ದವಾಗಿ ಬಿದ್ದಿವೆ ಅಸ್ಥಿಗಳು ಗತಕಾಲದ ರೋಚಕತೆಗೆ ಸಾಕ್ಷಿಯಾಗಿತಮ್ಮ ಇರುವಿಕೆಯ ಸ್ಪಷ್ಟ ಪಡಿಸಲು ಬದ್ದವಾಗಿಕಾದು ಕೂತಿವೆ ಪಳೆಯುಳಿಕೆಗಳಾಗಿ ಚರ್ಮ ಮಾಂಸ ಮಜ್ಜೆಗಳಿಲ್ಲಜೀವ ಆತ್ಮದ ಜೊತೆ ತಮಗಿಲ್ಲಆದರೂ ಇತಿಹಾಸವಾಗುವ ಆಸೆ ತೀರಿಲ್ಲ ಎಂದೋ ಯಾರೋ ಬರಬಹುದೆಂದುಹೊರಗೆಳೆದು ಪರಿಶೀಲಿಸಿ ದಾಖಲಿಸಬಹುದೆಂದುನಮ್ಮ ಕಥೆಗೂ ಜೀವ ತರಬಹುದೆಂದು ಆಸ್ತಿಗಳ ಆಸೆಗಷ್ಟೆ ಅಲ್ಲದೇಅಸ್ಥಿಗೂ ಬೆಲೆ‌ ಇರಬಹುದೆಂದುಸರಿದು ಹೋದ ತಮ್ಮನ್ನುಸಮಾಜದೆದುರು ತರಬಹುದೆಂದು ಆ ಕಲ್ಲು, ಬಂಡೆ, ಕೋಟೆ, ಅರಮನೆಯಂತೆಜೊತೆಗೆ ಸಿಕ್ಕ ನಿಧಿಗಳಂತೆ, ಬಳಸಿ ಎಸೆದ ಆಭರಣದಂತೆಹಿಂದೆ ಕೇಳಿದ ಪುರಾಣಗಳಂತೆ ತಮಗೂ ಬೆಲೆಯು ಸಿಗಬಹುದೆಂದುತಮ್ಮ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಹನಿಗಳು.. ನಗಲು ಹೇಳಿದಬುದ್ಧಆದರೆಮಾನವ ನಗದು ಗಾಗಿನಗುವುದನ್ನೇಮರೆತಬುದ್ಧಮೌನನಾದ… ನಾನು ಅಹಂಕಾರದಲ್ಲಿಶಾಂತಿ ನೆಮ್ಮದಿಗಾಗಿಊರೂರುಅಲೆದೆಶಾಂತಿ ತನ್ನೊಳಗೆ ಇದೆಎಂದು ತಿಳಿದಾಗಅವನ್ನಲ್ಲಿನ‘ನಾನು’ ಚಿರನಿದ್ರೆಗೆಜಾರಿತ್ತು… ನಾಕಷ್ಟವೆಂದುಬುದ್ಧನೆಡೆಗೆ ಹೋದೆಬುದ್ಧನ ನಗುಕಂಡನನ್ನ ಕಷ್ಟಗಳುನನ್ನಲ್ಲಿಯೇಲೀನವಾದವು… ಬುದ್ಧನೆಂಬ ಬೆಳಕುಇಲ್ಲಿ ಹಚ್ಚಿಟ್ಟ ದೀಪದ ಪ್ರಭೆಬೆಳಕ ನಡುವೆದುಃಖಕಷ್ಟಅಹಿಂಸೆಅಶಾಂತಿಅಸುನಿಗಿದ್ದವು… ಜಗತ್ತಿನ್ನು ನಿದ್ದೆಯಿಂದ ಎಬ್ಬಿಸಲುನಡುರಾತ್ರಿ ನಿದ್ದೆತೊರೆದ ಬುದ್ದುಜಗತ್ತಿನ ನಿದ್ದೆಯಿಂದ ಏಳುವಯಾವ ಪ್ರಯತ್ನಮಾಡಲಿಲ್ಲ.. ನಗುವಿನ ಶಾಂತಿಯಮಹತ್ವ ಹೇಳಿದಬುದ್ದನಗರದ ಗದ್ದಲದನಡುವೆಬುದ್ದ ನಗುವಿತ್ತುಯಾರ ಮನಸ್ಸಿನಲ್ಲಿನಗುವಿನ ಕುರುಹು ಇರಲಿಲ್ಲ.. ಬುದ್ದನಪ್ರತಿಮೆಗೆಗೆದ್ದಲು ಕಟ್ಟಿರಬಹುದುಪ್ರತಿ ಎದೆಯಲ್ಲಿ ನೆಲೆಸಿರುವಬುದ್ಧನವಿಚಾರಗಳಿಗಲ್ಲ.. -ವೃಶ್ಚಿಕ ಮುನಿ.. ಶಾಲ್ಮಲೆಯ ಸ್ವಗತ ಧಾರವಾಡದ ಸೋಮೇಶ್ವರ ತಾಣದಿಹುಟ್ಟುವೆ ನಾನು ಚಿಕ್ಕ ಚಿಲುಮೆಯ ರೂಪದಿಶಾಲ್ಮಲಾ ಎಂದೆನುವ ಸುರನದಿಯು […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ನನ್ನಲ್ಲಿಷ್ಟು ಕನಸುಗಳಿವೆಮಾರಾಟಕ್ಕಲ್ಲ,ಎಲ್ಲರೆದೆಯ ಬರಡು ಭೂಮಿಯಲ್ಲಿಹೂಳುತ್ತೇನೆ,ಹೊಸ ನಾಳೆಗಳನ್ನೇ ಚಿಗುರಿಸುತ್ತೇನೆ ! ನನ್ನೀ ಕನಸುಗಳು-ಬುದ್ದನ ನಗೆಯ ನೆರಳಲ್ಲಿಬೆಳೆದು ಬಂದಂತಹವು,ಊರಾಚೆಯ ಒಲೆಯ – ಊರೊಳಗೆನೆಮ್ಮದಿಯ ನಗೆ ಬೀರುವಕನಸು ಕಾಣುತ್ತದೆ, ನನ್ನೀ ಕನಸು ! ಮೈಲು ದೂರದಲ್ಲಿಯ ಬೆಟ್ಟದ ಮ್ಯಾಲಿನದೇವದಾಸಿಯೂ ಅಂಗಲಾಚುತ್ತಾಳೆ-ನನ್ನೀ ಕನಸುಗಳಿಗಾಗಿ !ಮುಟ್ಟಾದ ಪುಟ್ಟ ತಂಗಿಯತುಂಬಿ ನಿಂತ ಕಣ್ಣಾಲೆಯೂ ಕೈಚಾಚಿದೆ-ನನ್ನ ಕನಸುಗಳತ್ತ ! ಸುಸ್ತಾಗಿದ್ದ ‘ಗಸ್ತಿ’ಯೂ ಗಸ್ತು ತಿರುಗಲು-ಅಣಿಯಾಗುತಿದ್ದಾನೆ , ಮತ್ತೇನಂಬಿಕೆಯಿದೆ ನನ್ನೀ ಕನಸುಗಳಲ್ಲಿ,ಅಪ್ಪ ಮುಟ್ಟಿದ ನೀರು ಮೈಲಿಗೆಯೆಂದದೊರೆಗಳಿಂದುಕನಸುಗಳ ಕಂಡು – ದಡಬಡಿಸುತ್ತಿದ್ದಾರೆ ! ಇಂದು ಬದುಕಿದ್ದರೆ -ನನ್ನಅಂಬೇಡ್ಕರ್ ?ನನ್ನೀ ಕನಸುಗಳ […]

ಕಾವ್ಯಧಾರೆ

ಪಂಜು ಕಾವ್ಯಧಾರೆ ೧

ಕಾಲ ಬದಲಿಸಿದ ಬದುಕು ತಂಗಳು ತಡಿಯ ತಿಂದುಅರೆಬೆಂದದ್ದು ಬುತ್ತಿಹೊತ್ತುಕೊಂಡು ಓಡುತ್ತಿತ್ತು ಜೀವಸಮಯದ ಜೊತೆಗೆಪೈಸೆ, ಪೈಸೆಯೂ ಕೂಡಿಟ್ಟುಜೋಪಾನ ಮಾಡಿತ್ತು ಭಾವ,ವಾಸ್ತವದಲ್ಲಿ ನಿಲುಕದ ಬಣ್ಣದ ಕನಸುಗಳ ಭವಿಷ್ಯದ ಜೊತೆಗೆ! ಕಣ್ಣಿಗೆ ಕಾಣದ ಜೀವಿಯತಲ್ಲಣಕೆ ಬದುಕು ಬೀದಿಗೆ ಬಿತ್ತುವರ್ತಮಾನವೇ ಬುಡಮೇಲಾಯಿತುಕೈಗಳಿಗೆ ಕೆಲಸವಿಲ್ಲ ,ಕಾಲುಗಳಿಗೆ ಹೋಗಲುದಾರಿಯೇ ಇಲ್ಲ !ಹಗಲಿನಲ್ಲೂ ಮನೆಯಲ್ಲೇ ಕೊಳೆತವುದೇಹಗಳು,ಆಂತಕದಿಂದ ದಿನ ದೂಡಿದವುಮನಸುಗಳು ಕೆಲವರು ಊರು ಬಿಟ್ಟರುಹಲವರು ಜಗತ್ತೇ…… ಬಿಟ್ಟರುವಲಸೆ ಯುಗ ಪ್ರವಾಹದಂತೆಹರಿಯಿತು ಗಡಿಗಡಿಗಳ ದಾಟಿಸ್ತಬ್ದವಾದವು ಮಹಾನಗರಗಳುಅಮ್ಮನಾಗಿ, ಮಗಳಾಗಿ, ಅರ್ಧಾಂಗಿಯಾಗಿಹೆಣ್ತನ ನಡೆಯಿತು ದಾರಿಗೆ ಊರುಗೋಲಾಗಿವಲಸೆ ಭಾರತದ ಭಾಗವಾಗಿ. ಮಾತು ಮೌನ ವಾಯಿತುಮುಖಕ್ಕೆ […]

ಕಾವ್ಯಧಾರೆ

ಪಂಜು ಕಾವ್ಯಧಾರೆ ೨

‘ಮಂಗಳಮುಖಿ’ ನಮ್ಮೊಳಗೇ ನಾವೇ ಪರಿಚಿತರುಕೇಳಿ ಜಗದ ಮುಮ್ಮುಖಲಿಂಗಮೌನಿಗಳೇ…ರಕ್ಕಸರಸೋಮನದ ದಿಬ್ಬಣಗಳಗೂಡಿಹೊರಳಾಡುವ ನಿಮ್ಮ ಅಪರಿಚಯನಮ್ಮೊಡನೆ ವಿಧಿಯಿರಬಹುದೇ..?ನಮ್ಮೊಳಗೆ ನಾವೇಸಂಚಯ ಕೇಳಿರಿ ಒಮ್ಮುಖ ದನಿಗಳೆ..ನಿಮ್ಮ ಅಸಹಿಷ್ಣುತೆಗೆಸ್ವಕಲ್ಪಿತ ಚಕ್ರದೊಳಗೇಲುಪ್ತಮೋಹದುನ್ನತಿಯೆಡೆಗೆನಡೆದು ನೆಡೆದು ನಿಮ್ಮ ವಿರಚಿತವಸಾಹತು ಬಿಂಧುವೊಂದಕೆಕಟ್ಟಿಹಾಕುವ ದಟ್ಟ ದನಿಯೂನಿಮ್ಮದೇ ಅಲ್ಲವೇ:ತೃಪ್ತ ತೆರಪು ನಮಗಿಲ್ಲವೇನಿಮ್ಮ ಸ್ಥಾಪಿತ ಗಡಿಯೊಳಗೆ?ಅತೃಪ್ತ ತನವ ಎಲ್ಲಿಗೆ ದೂಕಲಿ ನಾವು?…ನಿಮ್ಮವಿಕೃತಿ ಹೂರಣದಲಿಹುದುಗಿ ಹುದುಗಿ ಆನಂದಾಕೃತಿಒಡಮೂಡುವುದೇ ನಮ್ಮಲಿ?…ನಮ್ಮುಖವ ಕಂಡು ಒಬ್ಬೊಬ್ಬರಲ್ಲೂಮುಖಗಂಟು ಎಂಟಾಗಿದೆನೋಡಿಕೊಳ್ಳಿ ನಮ್ಮ ಭಿನ್ನಕಣ್ಣಕನ್ನಡಿಯಲ್ಲಿ ;ನಲಿವೆಲ್ಲ ಅಂಗಾತವಾಗಿ ಮಸಣದಿಬ್ಬಣಹೊರಟಾಗಿದೆ ದಿನ ದಿನವೂ,ಗರ್ಭದುಃಖವು ಕೋಡಿಯೊಡೆದುನಿಮ್ಮ ಅಸಹ್ಯದ ಭಾವಬುವಿಯೊಳಗೆನಿಂತು ನಲಿವಿನ ಬುಗ್ಗೆಯಾಗಿದೆ;ಮನದಬೊಗಸೆಯಲಿ ಹಿಡಿದು ಕುಡಿಯಿರಿಅಪಾರದರ್ಶಕ ಲಿಂಗಿಗಳೇ.–ಚಿಕ್ಕಜಾಜೂರು ಸತೀಶ ಸತ್ಯ…ಅಷ್ಟೇ..!! […]