ಕನ್ನಡದ ಬರಹಗಳನ್ನು ಹಂಚಿ ಹರಡಿ
ಬೆತ್ತಲೆ ಒಂದು ಸುಂದರವಾದ ಸ್ಥಿತಿ ಎನ್ನುವ “ಅತ್ತರ್”: ಡಾ. ನಟರಾಜು ಎಸ್ ಎಂ
ತಮ್ಮ “ಬೇರು” ಕೃತಿಗಾಗಿ ಕೇಂದ್ರ ಯುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಗೆಳೆಯ ಶ್ರೀಧರ ಬನವಾಸಿಯವರು ಕಳೆದ ವಾರ ತಮ್ಮ ಪಂಚಮಿ ಪ್ರಕಾಶನದಿಂದ ಹೊರ ತಂದಿರುವ ಕೆ ನಲ್ಲತಂಬಿಯವರ ಹೊಚ್ಚ ಹೊಸ ಕೃತಿ “ಅತ್ತರ್” ಅನ್ನು ಕಳುಹಿಸಿಕೊಟ್ಟಿದ್ದರು. ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರುವ ಗೆಳೆಯ ಶ್ರೀಧರ್ ತಮ್ಮ ಪ್ರಕಾಶನ ಸಂಸ್ಥೆಯಿಂದ ನಲವತ್ತೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. “ಅತ್ತರ್” ಇವರ ಸಂಸ್ಥೆ ಪ್ರಕಟಿಸಿರುವ ಕೆ ನಲ್ಲತಂಬಿಯವರ ಮೊದಲ ಪುಸ್ತಕ. ಕೆ ನಲ್ಲತಂಬಿಯವರು ಅನುವಾದ ಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿರುವವರು. […]
ಪಂಜು ಕಾವ್ಯಧಾರೆ
ನಿನ್ನ ಸಂಧಿಸಿದ ಕುರಿತು ಒಂದಿನಿತೂ ಕಾಣಿಸದಕತ್ತಲೆಯ ಪ್ರಖರತೆಯಲ್ಲಿನಿನ್ನ ಸಂಧಿಸಿದ ಕುರಿತು… ಈರ್ವರ ಭೋರ್ಗರೆವ ಮೌನಗಳುಡಿಕ್ಕಿ ಹೊಡೆದು..ಗುಡುಗೂ.. ಸಿಡಿಲೂ..!ಅಂತಿಪ್ಪ ಕಾಲದ ನೆತ್ತಿಯನ್ನುತುಸುವೇ ನೇವರಿಸುತ್ತಾತೇವದ ಅರಿವಾಗಿ ನಿಂತೆ..ತೇಲು ಮೋಡವ ಹೊತ್ತನಿನ್ನ ಕಣ್ಣು ಹನಿಸಿದ್ದು ಇರಬಹುದೇಅನಿಸಿ ಒಂದಷ್ಟು ನಿಟ್ಟುರಿಸು.. ನಿನ್ನ ಮುಂಗುರುಳ ಗಾಳಿಗೆ ತಾಕಿಸದ್ದಿಲ್ಲದ ಮಾತುಗಳ ಪಟ ಪಟ ಸದ್ದು..ಬಯಲು ಆಗಸದ ತಾರೆಗಳು ನಮ್ಮ ಕಂಡಾವುಎಂಬ ನಾಚಿಕೆ ತುಸು ಹೆಚ್ಚು ನನಗೇ.. ಗಳಿಗೆಗಳು ಉರುಳಿದವು..ಸೂರ್ಯನ ಟಾರ್ಚು ಮೊಗದ ಮೇಲೆ ನೇರಾ..ಎಲ್ಲಿದ್ದೇನೆ ನಾನು ಅಂದುಕೊಳ್ಳುವಷ್ಟರಲ್ಲೇನೀನೆಲ್ಲಿ ಮಂಗ ಮಾಯ …? ಹಾ.. ಅಲ್ನೋಡು ಸುಟ್ಟು […]
ನಮ್ಮ ಶ್ರೀರಾಮಚಂದ್ರನಿಗೊಂದು ಹೆಣ್ಣು ಕೊಡಿ: ಪ್ರಶಾಂತ್ ಬೆಳತೂರು
ಹೆಗ್ಗಡದೇವನಕೋಟೆಯಿಂದ ೨೫ ಕಿ.ಮೀ. ದೂರದಲ್ಲಿರುವ ಬೆಟ್ಟದ ಕೆಳಗಿನ ಕೂಲ್ಯ ಗ್ರಾಮದ ನಮ್ಮ ಈ ಶ್ರೀರಾಮಚಂದ್ರ ಓದಿದ್ದು ಎಸ್. ಎಸ್. ಎಲ್. ಸಿ.ಯವರೆಗೆ ಮಾತ್ರ.ಬಾಲ್ಯದಿಂದಲೂ ಓದಿನಲ್ಲಿ ಆಸಕ್ತಿ ಇರದ ಶ್ರೀರಾಮಚಂದ್ರನಿಗೆ ದನ-ಕುರಿಗಳೆಂದರೆ, ಹೊಲದ ಕೆಲಸಗಳನ್ನು ಮಾಡುವುದೆಂದರೆ ಎಲ್ಲಿಲ್ಲದ ಅತೀವ ಪ್ರೀತಿ.ಪರಿಣಾಮವಾಗಿ ಓದುವುದರಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದ ಇವನಿಗೆ ಶಾಲೆಯೆಂದರೆ ರುಚಿಗೆ ಒಗ್ಗದ ಕಷಾಯ.ಸದಾ ಕೊನೆಯ ಬೆಂಚಿನ ಖಾಯಂ ವಿದ್ಯಾರ್ಥಿಯಾಗಿ ಮೇಷ್ಟ್ರುಗಳ ಕೆಂಗಣ್ಣಿಗೆ ಗುರಿಯಾಗಿ ಅವರು ಆಗಾಗ ಕೊಡುತ್ತಿದ್ದ ಬೆತ್ತದೇಟಿಂದ ಇವನ ಕೈಗಳು ಜಡ್ಡುಗಟ್ಟುವುದಿರಲಿ ಮೇಷ್ಟ್ರು ಕೈಗಳೇ ಸೋತು ಸುಣ್ಣವಾಗಿದ್ದವು. ಶೇ […]
“ರೋಬೊಟ್ ರಗಳೆ”: ಅರವಿಂದ. ಜಿ. ಜೋಷಿ.
ಅಂದು ಮೂವತ್ತೊಂದನೇಯ ತಾರೀಖು, ಎಂದರೆ ಆ ಮಾಹೆಯ ಕೊನೆಯ ದಿನ. ಎಂದಿನಂತೆ ಮನೆಗೆಲಸ ಪೂರೈಸಿ ಹೊರಟು ನಿಂತ ನಿಂಗಿಯನ್ನು ಕಂಡ ಪಮ್ಮೀ “ಏಯ್. . . ನಿಂಗೀ. . . ನಾಳೆಯಿಂದ ನೀ ಕೆಲಸಕ್ಕೆ ಬರೋದು ಬೇಡ”ಎಂದಾಗ ಶಾಕ್ ಹೊಡೆಸಿಕೊಂಡವಳ ತರಹ ನಿಂತ ನಿಂಗಿ-“ಯಾಕ್ರವ್ವಾ. . ಬೇರೆ ಕಡೆ ಎಲ್ಲಾದ್ರೂ ಹೋಗ್ತಿದ್ದೀರಾ?, ನನ್ನ ಕಡೆಯಿಂದ ಏನಾದ್ರೂ ತೆಪ್ಪ ಆಗೈತಾ? ನಾನು ಉಸಾರಾಗೇಅವ್ನೀ. . , ಎರಡೂ ಡೋಸ್ ವ್ಯಾಕ್ಸಿನೇಷನ್ ಕೂಡ ಹಾಕ್ಸೊಂಡಿದ್ದೀನಿ. . ಮತ್ಯಾಕ್ರವ್ವಾ. ?” ಹೀಗೆ […]
ಆಸ್ತಿವಾರ: ರಾಜಶ್ರೀ ಟಿ. ರೈ ಪೆರ್ಲ
“ಅಪ್ಪ ಯಾಕೆ ಹಾಗೆ ಹೇಳಿದರು ಎಂದು ನನಗೆ ಗೊತ್ತಾಗಲಿಲ್ಲ. ಮೋಳಿಯ ಮನೆಯವರು ನಮ್ಮಷ್ಟು ಸಿರಿವಂತರೇನು ಅಲ್ಲ ನಿಜ, ಆದರೆ ದೂರದ ಸಂಬಂಧಿಕರು ಎಂಬ ನೆಲೆಯಲ್ಲಿ ನಾನು ಆತ್ಮೀಯವಾಗಿ ಮಾತನಾಡಿದ್ದೆ. ಮದುವೆ ಮನೆಯಲ್ಲಿಯೇ ಅಪ್ಪನ ಮುಖ ಊದಿಕೊಂಡಿತ್ತು. ಊಟದ ಹೊತ್ತಿಗೆ ಸ್ವಲ್ಪ ಅವಕಾಶ ಸಿಕ್ಕಿದ್ದೇ ನನಗೆ ಮಾತ್ರ ಕೇಳುವಂತೆ ಗಡುಸಾಗಿಯೇ ಪಿಸುಗುಟ್ಟಿದ್ದರು. “ಅವರ ಹತ್ತಿರ ಅತಿಯಾದ ಆಪ್ತತೆಯೇನು ಬೇಕಾಗಿಲ್ಲ, ಅವರು ಜನ ಅಷ್ಟು ಸರಿ ಇಲ್ಲ. ನಮಗೂ ಅವರಿಗೂ ಆಗಿ ಬರಲ್ಲ” ಅಪ್ಪನ ಪಿಸುಗುಟ್ಟುವಿಕೆಯಲ್ಲಿ ಬುಸುಗುಟ್ಟುವ ಭಾವ ತುಂಬಿತ್ತು. […]
“ಸಂಪಾದಕರಿಗೊಂದು ಪತ್ರ”: ಎಂ. ಜವರಾಜ್
-೧- ಸರ್ ನಮಸ್ಕಾರ, ಏನ್ ಸರ್ ನೀವು ಆಡಾಡ್ತ ಹತ್ತು ವರ್ಷ ತುಂಬಿಸಿ ಬಿಟ್ಟಿರಲ್ಲ. ಗ್ರೇಟ್ ಸರ್. ಹತ್ತು ವರ್ಷ ಅಂದ್ರೆ ಸಾಮಾನ್ಯನ ಸರ್. ಸಾಹಿತ್ಯ ಸಂಬಂಧಿತ ಪತ್ರಿಕೆಯನ್ನು ಮಾಡಿ ಅದರಲ್ಲು ಸಾಹಿತ್ಯಾಸಕ್ತ ಆನ್ ಲೈನ್ ಓದುಗರನ್ನು ಹಿಡಿದಿಟ್ಟುಕೊಂಡು ನಿಗಧಿತವಾಗಿ ಪತ್ರಿಕೆ ರೂಪಿಸುವುದಿದೆಯಲ್ಲ ಸುಮ್ನೆನಾ ಸರ್. ಪ್ರತಿ ಸಂಚಿಕೆಗೂ ಕಥೆ, ಕವಿತೆ, ವಿಮರ್ಶೆ, ಪ್ರಬಂಧ ತರಹದ ಭಿನ್ನ ಬರಹಗಳನ್ನು ಆಯ್ದು ಸೋಸಿ ರಂಗೋಲಿ ಚಿತ್ತಾರದಾಗೆ ತುಂಬುವುದಿದೆಯಲ್ಲ ಅದು ಸರ್. ಅದಕ್ಕೆ ನಾನ್ ಹೇಳಿದ್ದು ಗ್ರೇಟ್ ಅಂತ. ಈ […]
“ಹೃದಯದ ಪ್ರಾರ್ಥನೆಗೆ ವರವೊಂದು ಸಿಗಲಾರದೆನೋ”..?: ಪೂಜಾ ಗುಜರನ್
ಏನೂ ಬರೆಯಲಿ. ಮನಸ್ಸು ನಿನ್ನ ಸಾಂಗತ್ಯದ ಹಾದಿಯಲ್ಲಿ ಕಾಯುತ್ತಿದೆ ಎಂದೋ..? ಅಥವಾ ಮನದ ನೋವನ್ನು ಒಮ್ಮೆ ನಿವಾರಿಸಿ ಜೊತೆಯಾಗು ಎಂದೋ..? ಇದೆಲ್ಲ ಮನದ ಕೋರಿಕೆ. ಆ ದೇವರಿಗೆ ಇಟ್ಟ ಹರಕೆ. ದೈವಾಂಶ ತುಂಬಿರುವ ಮಣ್ಣಲ್ಲಿ ಬದುಕುವ ನನಗೆ ನಂಬಿರುವ ನಂಬಿಕೆಗಳೆ ದಾರಿದೀಪ. ಇದೆಲ್ಲ ನಿನ್ನ ಅರಿವಿಗೆ ಬರದ ಸತ್ಯವೇನೋ.?ನನ್ನ ಪತ್ರದ ನಿರೀಕ್ಷೆ ನೀನು ಮಾಡುತ್ತಿಯೋ ಇಲ್ಲವೋ ನಾ ಅರಿಯೆನು.ಪತ್ರಗಳನ್ನೇ ಜೀವಾಳ ಅಂತ ತಿಳಿದು ಬದುಕಿದನನಗೆ ನಿನ್ನಿಂದ ಯಾವ ಉತ್ತರಗಳು ಬರಲೇ ಇಲ್ಲ. ಮುಂದೆ ಬರುವುದು ಇಲ್ಲ.ನಿನ್ನ ಆಗಾಧವಾದ […]
ಒಳತೋಟಿ: ಆನಂದ್ ಗೋಪಾಲ್
‘ಒಂದು ಶುಕ್ರವಾರ ಸರಿ; ಪ್ರತಿ ಶುಕ್ರವಾರವೂ ಕಾಲೇಜಿಗೆ ತಡ ಎಂದರೆ ಯಾವ ಪ್ರಿನ್ಸಿಪಾಲ್ ತಾನೆ ಸುಮ್ಮನಿರುತ್ತಾರೆ?’ – ಹೀಗೆ ಯೋಚಿಸುತ್ತಲೇ ಶೀಲಶ್ರೀ ಪ್ರಿನ್ಸಿಪಾಲರ ಕಚೇರಿಯೊಳಗೆ ಕಾಲಿಟ್ಟಳು. ಅದೇ ಅಲ್ಲಿಂದ ಎಲ್ಲಿಗೋ ಹೊರಟಿದ್ದ ಅವರು ಇವಳತ್ತ ನೋಡಲೂ ಸಮಯವಿಲ್ಲದವರಂತೆ ದುಡುದುಡು ನಡದೆಬಿಟ್ಟರು. ಶೀಲಶ್ರೀಗೆ ಇದು ತುಸು ಸಮಾಧಾನ ತಂದಿತು. ಆದರೂ ‘ವಾರದ ಮೀಟಿಂಗ್’ನಲ್ಲಿ ಇದನ್ನು ಅವರು ಪ್ರಸ್ತಾಪಿಸದೆ ಬಿಡುವವರಲ್ಲ ಎಂದು ಅವಳಿಗೆ ಗೊತ್ತಿತ್ತು! ಸದ್ಯ ಇವತ್ತಿಗೆ ಮುಜುಗರ ತಪ್ಪಿತು ಎಂದು ಹಾಜರಾತಿ ವಹಿಯಲ್ಲಿ ಸಹಿ ಹಾಕಿ ಕ್ಲಾಸ್ನತ್ತ ನಡೆದಳು. […]
ಸುಳ್ಳ ಸಾಕ್ಷಿಗಳ ಊರಿಗೆ: ಅಶ್ಫಾಕ್ ಪೀರಜಾದೆ
1 – Balu is imprisoned for murder. come soon sms ಓದುತ್ತಿದ್ದಂತೆಯೇ ನನಗೆ ದಿಗ್ಭ್ರಮೆಯಾಯಿತು ಮತ್ತು ಕಣ್ಣು ಸುತ್ತು ಬಂದಂತಾಗಿತ್ತು. ಬಾಲು ಒಂದು ಹೆಣ್ಣಿನ ಕೊಲೆ ಮಾಡಿ ಪೋಲೀಸರ ಅತಿಥಿಯಾಗಿದ್ದಾನೆ ಎಂದು ನನ್ನ ಇನ್ನೊಬ್ಬ ಗೆಳೆಯ ಕುಮಾರ್ ಬರೆದಿದ್ದ. ಆತ ಹೆಚ್ಚಿನ ವಿವರವೇನೂ ನೀಡಿರಲಿಲ್ಲ. ನನಗೆ ಕುಮಾರ್ ತಿಳಿಸಿದ ಸುದ್ದಿಯಿಂದ ಆಘಾತವಾಗಿದ್ದರೂ ಇದೆಲ್ಲ ಸತ್ಯವಾಗಿರಲಿಕ್ಕಿಲ್ಲ ಸತ್ಯವಾಗುವುದೂ ಬೇಡವೆಂದು ಮನದಲ್ಲಿ ಪ್ರಾರ್ಥಿಸಿದೆ. ಏಕೆಂದರೆ ಬಾಲುವಿನ ನಡವಳಿಕೆ ಸ್ವಭಾವದ ಪೂರ್ಣ ಪರಿಚಯ ನನಗಿದೆ. ಅವನ ನಿರ್ಮಲವಾದ ಪ್ರಶಾಂತವಾದ […]
ಬಸವಣ್ಣನ ವಚನಗಳಲ್ಲಿ ‘ಅವಳು’: ಮನು ಗುರುಸ್ವಾಮಿ
“ಹೆಣ್ಣಿನ ಚಂಚಲ ಮನಸ್ಥಿತಿಯ ಮೇಲೆ ಬಸವಣ್ಣನವರ ವಚನಗಳ ಪ್ರಯೋಗ”ಅವಳ ವಚನ ಬೆಲ್ಲದಂತೆ!ಹೃದಯದಲಿಪ್ಪುದೆಲ್ಲಾ ನಂಜು ಕಂಡಯ್ಯ!!ಕಂಗಳಲೊಬ್ಬನ ಕರೆವಳು ಮನದಲೊಬ್ಬನ ನೆನೆವಳು,ವಚನದಲೊಬ್ಬನ ನೆರೆವಳು!ಇಂತಿವಳ ತನು ಒಂದೆಸೆ, ಮನ ಒಂದೆಸೆ, ಮಾತೊಂದೆಸೆ!!ಈ ಮಾನಿಸಗಳ್ಳಿಯ ನನ್ನವಳೆಂದು ನಂಬುವಕುರಿನರರನೇನೆಂಬೆನಯ್ಯ ಕೂಡಲಸಂಗಮದೇವ. ಬಸವಣ್ಣನವರ ಇದೊಂದು ವಚನ ನನ್ನನ್ನು ತುಂಬಾ ಆಳವಾಗಿ ಚಿಂತನೆಗೆ ಗುರಿ ಮಾಡಿದೆ. ಮಹಾಮಾನವತಾವಾದಿಯಾದ ಬಸವಣ್ಣನವರ ವಚನವೊಂದು ದೃಢ ಮನಸ್ಸಿಲ್ಲದ ಹೆಣ್ಣೊಬ್ಬಳ ಬಗ್ಗೆ ಮಾತನಾಡುತ್ತಿರುವುದು, ‘ಹೆಣ್ಣು ಚಂಚಲೆ’ ಎಂಬ ವಿಚಾರವನ್ನು ಒತ್ತಿ ಹೇಳುತ್ತಿರುವುದು ಬಹಳ ಅಚ್ಚರಿ ತಂದಿತು. ಅನುಭವ ಇಲ್ಲದವ ಕವಿಯಾಗಲಾರ ಎಂಬ ಮಾತಿನಂತೆ […]
ಕ್ಷಮಿಸಿ ಸಂಪಾದಕರೇ. . ಕತೆ ಕಳುಹಿಸಲಾಗುತ್ತಿಲ್ಲ. . : ಸತೀಶ್ ಶೆಟ್ಟಿ ವಕ್ವಾಡಿ
“ಏನ್ರೀ ಅದು, ಅಷ್ಟು ಡೀಪಾಗಿ ಮೊಬೈಲ್ ನೋಡ್ತಾ ಇದ್ದೀರಾ, ಏನ್ ಗರ್ಲ್ ಫ್ರೆಂಡ್ ಮೆಸೇಜಾ ? ” ರಾತ್ರಿ ಊಟದ ಸಮಯದಲ್ಲಿ ಗೆಳೆಯ ಪ್ರಕಾಶ ಮೈಸೂರಿನ ಅಕ್ಕನ ಮನೆಗೆ ಹೋದವ ತಂದು ಕೊಟ್ಟ ನಾಟಿ ಕೋಳಿಯಿಂದ ಮಾಡಿದ ಚಿಕ್ಕನ್ ಸುಕ್ಕ ಮೆಲ್ಲುತ್ತಿದ್ದ ಹೆಂಡತಿ ನನ್ನ ಕಾಲೆಳೆದಿದ್ದಳು ” ಅಲ್ಲ ಕಣೆ. . ಪ್ರಪಂಚದಲ್ಲಿ ಯಾವ ಗಂಡಸಿಗಾದರೂ ಹೆಂಡತಿ ಎದುರುಗಡೆ ತನ್ನ ಗರ್ಲ್ ಫ್ರೆಂಡ್ ಮೆಸೇಜ್ ನೋಡುವ ಧೈರ್ಯ ಇರುತ್ತೆ ಹೇಳು ? ಅದು ನಮ್ಮ ನಟರಾಜ್ ಡಾಕ್ಟರ್ […]
ಜವಾಬ್ದಾರಿ: ಬಂಡು ಕೋಳಿ
ಗುರುಪ್ಪ ಚಿಂತಿ ಮನಿ ಹೊಕ್ಕು ಕುಂತಿದ್ದ. ಹಿಂದಿನ ದಿನ ಊರಿಂದ ಬಂದಾಗಿಂದ ಅವ್ನ ಮಾರಿ ಮ್ಯಾಲಿನ ಕಳೀನ ಉಡುಗಿತ್ತು. ಅವ್ವ ಅಂದಿದ್ದ ಮಾತು ಖರೇನ ಅವ್ನ ಆತ್ಮಕ್ಕ ಚೂಪಾದ ಬಾಣದಂಗ ನಟ್ಟಿತ್ತು. ಅದೆಷ್ಟ ಅಲಕ್ಷ ಮಾಡಾಕ ಪ್ರಯತ್ನಿಸಿದ್ರೂ ಆತ್ಮಸಾಕ್ಷಿ ಅವನನ್ನ ಅಣಕಿಸಿ ಮತ್ಮತ್ತ ಹಿಂಸಿಸಾಕ ಹತ್ತಿತ್ತು. ಮನಸ್ಸಿನ ಮೂಲ್ಯಾಗ ಒಂದ್ಕಡಿ ತಾನು ಹಡೆದಾವ್ರಿಗಿ ಮೋಸಾ ಮಾಡಾಕ ಹತ್ತೇನಿ ಅನ್ಸಾಕ ಹತ್ತಿತ್ತು. ಒಂದ್ರೀತಿ ಅಂವಗ ಎದ್ರಾಗೂ ಚೌವ್ವ ಇಲ್ದಂಗಾಗಿ ತನ್ನಷ್ಟಕ್ಕ ತಾನ ಅಪರಾಧಿ ಮನಸ್ಥಿತಿಯೊಳ್ಗ ಕುಸ್ದ ಕುಂತಿದ್ದ. ಕಾಲೇಜಿನ್ಯಾಗ […]
ಇಡಿ ಕಿಡಿ ಕವಿತೆಗಳು: ಅನುಸೂಯ ಯತೀಶ್
ಮಂತ್ರಮುಗ್ಧಗೊಳಿಸುವಅಕ್ಷರ ಮಾಂತ್ರಿಕನ ಕಾವ್ಯ ಚಮತ್ಕಾರಿಕೆಯಲ್ಲರಳಿದಇಡಿ ಕಿಡಿ ಕವಿತೆಗಳು. ಹನಿಗವಿತೆಗಳ ಚಕ್ರವರ್ತಿ, ಚುಟುಕುಗಳು ರಾಜ, ಶಬ್ದ ಗಾರುಡಿಗ, ಹರಟೆಯ ಕವಿ, ಕಾವ್ಯ ಲೋಕದ ವಿದೂಷಕ, ಹಾಸ್ಯ ಲೇಖಕ, ನಗು ಬಿಗುವಿನ ಕವಿ, ಸಾಮಾಜಿಕ ಪ್ರಜ್ಞೆಯ ಬರಹಗಾರ ಮುಂತಾದ ನಾಮಾಂಕಿತಗಳಿಗೆ ಭಾಜನರಾದ ನಮ್ಮ ನಾಡಿನ ಹೆಮ್ಮೆಯ ಕವಿಯನ್ನು ಕನ್ನಡದ ಹಿರಿಯ ಹಾಗೂ ಶ್ರೇಷ್ಠ ಸಾಹಿತಿಗಳಾದ ಅ.ರಾ.ಮಿತ್ರರವರು “ಇಡಿ ಕಿಡಿ ಕವನಗಳು” ಕೃತಿಯ ಮುನ್ನುಡಿಯಲ್ಲಿ ಓದುಗರಿಗೆ ಪರಿಚಯಿಸಿರುವ ಪರಿಯಿದು. “ಚೇಷ್ಟೆಯ ಬುದ್ಧಿಯ ತುಂಟತನ ಇವಗುಂಟುಶಬ್ದಗಳ ವಕ್ರ ಸಂಚಾರವೂ ಉಂಟುಮೂಲೆ ಮೂಲೆಗಳಲ್ಲಿ ಬಾಯಾಡಿಸುವ […]
ಮಂಜಿನಂತೆ ಮರೆಯಾದ ಮಂಜುಳಾ: ಎಂ. ಜಿ. ರವೀಂದ್ರ
ಚಂದನವನದ ಮಂಜುಳಾ ರವರು ಮರೆಯಾಗಿ 35 ವರ್ಷಗಳು ಗತಿಸಿದರೂ ಅವರ ಮನೋಜ್ಞ ಪಾತ್ರಗಳು ಇಂದಿಗೂ ಜೀವಂತ. ಸ್ವಾಭಿಮಾನಿ ಹೆಣ್ಣಿನ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸುತ್ತಿದ್ದರು. ಸುಮಾರು 100ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಎರಡು ಕನಸು, ಸಂಪತ್ತಿಗೆ ಸವಾಲ್, ಮೂರುವರೆ ವಜ್ರಗಳು ಮುಂತಾದ ಚಿತ್ರಗಳಲ್ಲಿ ಡಾ. ರಾಜಕುಮಾರ್ ರವರ ಜೊತೆ ನಟಿಸಿ ತಮ್ಮ ಅಭಿನಯ ಪ್ರೌಢ ಪ್ರತಿಭೆ ಪ್ರದರ್ಶಿಸಿ ಇಂದಿಗೂ ಚಿರಸ್ಥಾಯಿಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ವಿಷ್ಣುವರ್ಧನ್, ಶಂಕರನಾಗ್, ಶ್ರೀನಾಥ್ ಮುಂತಾದ ನಟರ ಜೊತೆಗೆ ಅತ್ಯುತ್ತಮ ವಾಗಿ ಆಭಿನಯಿಸಿ […]
ನೆತ್ತರ ಕಲೆ ?: ಶರಣಗೌಡ ಬಿ ಪಾಟೀಲ ತಿಳಗೂಳ
ಆ ಘಟನೆ ನನ್ನ ಕಣ್ಮುಂದೆ ನಡೆದು ಹೋಯಿತು ಅದು ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಾಗಿದೆ ಇಂತಹ ಘಟನೆ ಇದೇ ಮೊದಲ ಸಲ ನೋಡಿದೆ ಅಂತ ಆಗ ತಾನೆ ಬಸ್ಸಿಳಿದು ಬಂದ ಫಕೀರಪ್ಪನ ಬೀಗ ಬಸಪ್ಪ ಶಂಕ್ರಾಪೂರದ ಕಟ್ಟೆಯ ಮೇಲೆ ದೇಶಾವರಿ ಮಾತಾಡುವವರ ಮುಂದೆ ಹೇಳಿದಾಗ ಅವರು ಗಾಬರಿಯಿಂದ ಕಣ್ಣು, ಕಿವಿ ಅಗಲಿಸಿದರು. ಬಾ ಬಸಪ್ಪ ಅಂಥಾದು ಏನಾಯಿತು? ಅಂತ ಪ್ರಶ್ನಿಸಿ ಅತಿಥಿ ಸತ್ಕಾರ ತೋರಿ ತಮ್ಮ ಮಧ್ಯೆ ಕೂಡಿಸಿಕೊಂಡರು. ಕಲ್ಬುರ್ಗಿ ರಿಂಗ ರಸ್ತಾ ಮೊದಲಿನಂಗ ಇಲ್ಲ ಜನರ […]
ಮುಷಾಯಿರಾದಲ್ಲಿ ಕಾವ್ಯವಾಚನ: ಹೆಚ್. ಶೌಕತ್ ಆಲಿ ಮದ್ದೂರು
ಚನ್ನಪಟ್ಟಣ ಗೊತ್ತಲ್ಲ, ಗೊಂಬೆಗಳ ನಾಡು ಎಂದು ಅದಕ್ಕೆ ಸರ್ಕಾರ ನೀಡುವ ಬಿರುದು. ಹಿಂದೂ ಮುಸ್ಲಿಂ ಭಾವೈಕ್ಯದ ನಾಡು ಎಂದು ಜನಸಾಮಾನ್ಯರ ನುಡಿ. ಕನ್ನಡ ವೇದಿಕೆಗಳು ಕನ್ನಡ ಸಂಘಟನೆಗಳು ಕನ್ನಡ ಸಂಘ ಸಂಸ್ಥೆಗಳು ಹತ್ತಾರು ಇವೆ. ಜನರ ಬದುಕು ಅವರ ವ್ಯಾಪಾರ ವಹಿವಾಟು ಬದುಕು ಬವಣೆಯೊಂದಿಗೆ ಅಪರೂಪಕ್ಕಾದರೂ ಒಂದೊಂದು ಸಾಹಿತಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದುಂಟು.ಆದರೆ ಇಲ್ಲಿ ಮುಸ್ಲಿಂ ಸಮುದಾಯದ ಉರ್ದು ಭಾಷೆಯಲ್ಲಿ ಪಾಂಡಿತ್ಯ ಹೊಂದಿರುವುದು, ಒಳ್ಳೊಳ್ಳೆ ಕೆಲಸ ಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವರ ಆಶಯದಂತೆ ಉರ್ದು ಕವಿಗೋಷ್ಠಿ, ಉರ್ದು […]
ಹುತ್ತದ ಅರಮನೆಯಲ್ಲಿ ವಿಷದ ಸುಂಟರಗಾಳಿಯು: ಶ್ರೀಧರ ಬನವಾಸಿ
“ಆಂಧ್ರದ ವೀರಬ್ರಹ್ಮೇಂದ್ರಸ್ವಾಮಿ ಎಂಬ ಕಾಲಜ್ಞಾನಿಗಳು ಮುನ್ನೂರು ವರ್ಷಗಳ ಹಿಂದೆನೇ ಈಶಾನ್ಯ ದಿಕ್ಕಿಂದ ಕೊರೊಂಗೊ ಅನ್ನೋ ಮಹಾಮಾರಿ ಕಾಯಿಲೆ ಇಡೀ ಜಗತ್ತನ್ನು ಆವರಿಸಿ ಜನ್ರ ನೆಮ್ದಿನಾ ಹಾಳ್ ಮಾಡುತ್ತೆ, ಜನ್ರು ಕಾಯಿಲೆಯಿಂದ ದಿನಾ ಸಾಯೋ ಹಂಗೆ ಮಾಡುತ್ತೆ ಅಂತ ಭವಿಷ್ಯವಾಣಿ ನುಡಿದಿದ್ರಂತೆ. ನೋಡ್ರಪ್ಪ ನಮ್ ದೇಶ್ದದಲ್ಲಿ ಎಂತಂಥಾ ಮಹಾನ್ಪುರುಷ್ರು ಈ ಹಿಂದೆನೇ ಬದುಕಿ ಬಾಳಿ ಹೋಗವ್ರೆ ಇಂತವ್ರ ಹೆಸ್ರನ್ನ ಈ ಹಾಳಾದ್ ಕೊರೊನಾ ಕಾಲ್ದಲ್ಲೇ ನಾವು ಕೇಳೊಂಗಾಯ್ತು. ಈ ಕೆಟ್ಟ ಕಾಯಿಲೆನಾ ಮುನ್ನೂರು ವರ್ಷಗಳ ಹಿಂದೇನೆ ಅವ್ರು ಹೇಳಿದ್ರು […]
ಪಂಜು ಕಾವ್ಯಧಾರೆ
ಒಮ್ಮೆ ಬಾರೋ.. ಒಮ್ಮೆ ಬಾರೋ ದೇವರೇನಮ್ಮ ನೋವಿನ ಹಾಡಿಗೆನೀರು ತುಂಬಿದ ಕಣ್ಣ ಹಣತೆಯಬೆಳಗಲಾಗದ ಪಾಡಿಗೆ. ದೇವ ನಿನ್ನನು ಪೂಜಿಸಿನೋವ ಪಡೆದೆವು ಪ್ರೀತಿಸಿಮಳೆಯ ಭ್ರಮೆಯನು ಮನದಿ ತಂದೆಯಸಿಡಿಲ ಎದೆಯಲಿ ಹೊತ್ತಿಸಿ? ನೆನ್ನೆಯೆಲ್ಲೋ ಕಳೆದಿದೆನಾಳೆ ಕಾಣದೆ ಅಡಗಿದೆನೆನ್ನೆ-ನಾಳೆಯ ಕಣ್ಣಾಮುಚ್ಚೆಯ–ಲಿಂದು ಸುಮ್ಮನೆ ಜಾರಿದೆ. ಏಕೆ ಹೀಗಿದೆ ಜೀವನ?ಯಾವ ವಿಷದ ಪ್ರಾಶನ?ಬೆಳಕ ಹುಡುಕುತ ಎದೆಯ ಕಡೆಯಲುಬೆಂಕಿ ದೊರೆಯುವ ಮಂಥನ. ಮೃದುಲ ಹೃದಯವೇ ಶಾಪವೇ?ಒಳಿತು ಬಗೆದುದೇ ಪಾಪವೇ?ಬಾಳ ಹೂವಿದು ಅರಳೊ ಜಾಗವುಸಾವು ಕುದಿಯುವ ಕೂಪವೇ? -ವಿನಾಯಕ ಅರಳಸುರಳಿ, ಪಾದಕ್ಕೊಂದು ಕಣ್ಣು ದೇವ ದೇವಳ ತೇರು […]
ನನ್ನೆದೆಯ ಗುಬ್ಬಚ್ಚಿ: ಸುರೇಖಾ ಕುಚನೂರ
ನನ್ನೊಲವಿನ ಜೀವವೇ……ನಿನ್ನೆದೆಯ ಗುಬ್ಬಚ್ಚಿಯ ಕಥೆ ಕೇಳು. ಹಗಲೆನ್ನದೇ, ಇರುಳೆನ್ನದೇ ನಿನ್ನೇ ನೆನಪಿಸಿಕೊಳ್ಳುವ ಹೃದಯದ ವ್ಯಥೆ ಕೇಳು. ಹಸಿವಿನ ಹಂಗಿಲ್ಲದೇ ನಿದಿರೆಯ ಗುಂಗಿಲ್ಲದೇ ನಿನ್ನ ಹೆಸರನ್ನೇ ಜಪಿಸುವ ಮನಸ್ಸಿನ ಗತಿ ಕೇಳು. ಆ ಒಂದು ದಿನ ನಿನ್ನ ನೋಡಿದಾಕ್ಷಣ ನನ್ನನ್ನೆ ನಾ ಮರೆತ ದಿನ. ನಿನಗರಿವಿಲ್ಲದೆ ನನ್ನನ್ನು ನೀ ಸೇರಿದ ದಿನ. ನನ್ನ ಉಸಿರೊಳಗುಸಿರಾದ ದಿನ. ಜಗವೇ ನನ್ನ ಮರೆತರೂ ನಾ ಹೇಗೆ ಮರೆಯಲಿ ಆ ದಿನವನ್ನು. ಅಂದಿನಿಂದ ಇಂದಿನವರೆಗೂ ಮರಳಿ ನೀ ನನಗೆ ಸಿಗುತ್ತಿಲ್ಲ. ಆದರೆ ನಾ […]
ಶಾಲಾ ಮಕ್ಕಳ ತರಲೆ ಕತೆಗಳ ವರ್ತಮಾನದ ಗಂಭೀರ ಕತಾ ಸಂಕಲನ “ಮಕ್ಕಳೇನು ಸಣ್ಣವರಲ್ಲ”: ರವಿರಾಜ್ ಸಾಗರ್
ಬಾಲಕನಾದರೂ ಬಾಲಕನು ಬಿಡುವ ಬಾಣವೇನೂ ಬಾಲಕನಲ್ಲ ಎನ್ನುವಂತೆ ಮಕ್ಕಳು ಸಣ್ಣವರಾದರೂ ಅವರ ಮಾತುಗಳು, ಪ್ರಶ್ನೆಗಳು ,ಕುತೂಹಲಗಳು, ಅವರ ತರಲೆಗಳು, ಅವರು ಸೃಷ್ಟಿಸುವ ಅವಾಂತರಗಳು ದೊಡ್ಡವು. ಶಿಕ್ಷಕರಾಗಿ ಎರಡು ದಶಕಗಳಿಂದ ಮಕ್ಕಳ ಜೊತೆ ಒಡನಾಟ ಇಟ್ಟು ಕೊಂಡು ಸಂವೇದನಶೀಲರಾಗಿರುವ ಗುಂಡುರಾವ್ ದೇಸಾಯಿಯವರು ಮಕ್ಕಳ ಮನೋವಿಜ್ಞಾನವನ್ನು ಚೆನ್ನಾಗಿ ಬಲ್ಲರು. ಅವರ ಸಾಹಿತ್ಯ ಕೃಷಿಯ ಅನುಭವ, ಮಕ್ಕಳ ಕಾಳಜಿ ಅವರ ಮಕ್ಕಳ ಕಥೆಗಳ ಸಂಕಲನ “ಮಕ್ಕಳೇನು ಸಣ್ಣವರಲ್ಲ” ಕೃತಿಯಲ್ಲಿ ವ್ಯಕ್ತವಾಗಿದೆ. ಮಕ್ಕಳ ಕಥೆಗಳು ಎಂದರೆ ಮಕ್ಕಳ ಮನೋರಂಜನೆ, ಮಕ್ಕಳಿಗೆ ನೀತಿ ಬೋಧನೆಯೇ […]
ರಕ್ತ ಸಂಬಂಧ: ಮಾಲತಿ ಮುದಕವಿ
ಅಂದು ಬೆಳಿಗ್ಗೆಯಿಂದಲೇ ನನ್ನ ತಲೆ ಚಿಂತೆಯ ಗೂಡಾಗಿತ್ತು. ಮಗ ಹಾಗೂ ಸೊಸೆ ಇಬ್ಬರೂ ಕೆಲಸಕ್ಕೆ ಹೋಗಿದ್ದರು. ಅವರು ಬರುವುದು ಇನ್ನು ಸಂಜೆಯೇ. ಅಲ್ಲದೆ ಸೊಸೆಯ ಎದುರು ಮಗಳನ್ನು ಬೈಯಲಾದೀತೆ? ಅವಳೆದುರು ಮಗಳ ಕಿಮ್ಮತ್ತು ಕಡಿಮೆಯಾಗಲಿಕ್ಕಿಲ್ಲವೇ? ಇನ್ನು ನನ್ನ ಗಂಡ ರವಿಯೋ ಈ ಅರುವತ್ತರ ಸಮೀಪದಲ್ಲಿಯೂ ಬಿಜಿನೆಸ್ ಎಂದು ಯಾವಾಗಲೂ ಟೂರಿನ ಮೇಲೆಯೇ ಇರುತ್ತಾರೆ. ನಾನು, ಇತ್ತೀಚೆಗೆ ಶ್ರೀವತ್ಸ ಹಾಗೂ ಅವನ ಹೆಂಡತಿ ಎಂದರೆ ನನ್ನ ಸೊಸೆ ನಂದಿನಿ ಕೂಡ “ನೀವು ಇದುವರೆಗೂ ದುಡಿದದ್ದು ಸಾಕು. . ಈಗ […]
ಮುಗ್ಧ ಮಾಂಗಲ್ಯ: ಸಿದ್ರಾಮ ತಳವಾರ
ಕೇರಿಯ ಮುಂಭಾಗದಲ್ಲೇ ಶತಮಾನಗಳಷ್ಟು ಹಳೆಯದಾದ ಹುಣಸೀಮರದ ಬುಡದಲ್ಲಿ ತಲೆ ಮೇಲೆ ಕೈ ಹೊತ್ತು ಪೇಚು ಮಾರಿ ಹಾಕಿಕೊಂಡು ಕೂತ ಕರವೀರನನ್ನು ಸಮಾಧಾನ ಮಾಡಲು ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಅಷ್ಟಕ್ಕೂ ಅಲ್ಲೇನಾಗಿದೆ ಅನ್ನೋ ಕುತೂಹಲವಂತೂ ಇತ್ತು. ಹೀಗಾಗಿ ಎಲ್ಲರ ಮುಖದಲ್ಲೂ ಒಂಥರದ ಭಯ, ಸಂಶಯ, ಕುತೂಹಲ ಮನೆ ಮಾಡಿದಂತಿತ್ತು. ಆಗಷ್ಟೇ ಹೊರಗಡೆಯಿಂದ ಬಂದ ಮಂಜನಿಗೆ ಆ ಬಗ್ಗೆ ಸ್ಪಷ್ಟತೆ ಏನೂ ಇರದಿದ್ದರೂ ಅಲ್ಲಿ ಒಂದು ದುರ್ಘಟನೆ ನಡೆದಿದೆ ಅನ್ನೋ ಗುಮಾನಿ ಮಂಜನ ತಲೆಯಲ್ಲಿ ಓಡುತ್ತಿತ್ತು. “ನನ್ ಮಗಳು ಅಂಥಾದ್ದೇನ […]
ಪಂಜು ಕಾವ್ಯಧಾರೆ
“ಹೊಲಿಗೆಯ ದರ್ಜಿಯವಳು ಬೇಕು” ಅಲ್ಲಲ್ಲಿ ಹರಿದ ಹೆಗಲುಗಳಿಗೆ ತೇಪೆ ಹಾಕಿಜೋಳಿಗೆಯ ಕಟ್ಟಿ ತಂಬೂರಿ ಕೊಟ್ಟುಕನಸು ಮನಸಿನ ಆಳ ಅರಿತುಮನಸುಗಳ ಬೆಸೆಯುವವಳುಬೇಕು ಯುವ ಕನಸುಗಳ ವ್ಯಾಖ್ಯಾನಿಸುವವಳು ವಿಶ್ವದ ಪೊರೆಬಿದ್ದ ಕಣ್ಣಿಗೆಪೊರೆಯ ತೆಗೆದು ಸತ್ಯಪ್ರೇಮವ ಸೃಷ್ಟಿಸುವವಳುಉಸಿರಿಗೆ ಹಸಿರಾಗಿ ಹೃದಯಗಳಿಗೆಪ್ರೇಮದ ರಕ್ತವ ಬಸಿಯುವವಳುಕೋಮು ಪಾಶಾಂಡದ ಬೇರಚಿವುಟಿ ಬೆಂಕಿಗಾಹುತಿ ಕೊಡುವವಳುಬೇಕು ವಿಶ್ವದ ಓಜೋನ್ ತೇಪೆಯ ಹೊಲಿಯುವವಳು ತಲ್ಲಣಗೊಂಡ ಯುವ ಮನಸುಗಳವಿದಾಯ ಕೇಳಿಸಿಕೊಂಡ ಕನಸುಗಳವಿಚಾರ ಕ್ರಾಂತಿಯ ನಡೆಸಿ ಮನವ ಬಲಪಡಿಸುವವಳುಸೂರೆಗೊಂಡ ಕನಸುಗಳ ಬಿಡಿಸಿಆ ಮನಗಳಿಗೆ ಪ್ರೇಮದ ಕೌದಿಯ ಹೊಲಿಯುವವಳುಬೇಕು ಸ್ನೇಹದೊಲಿಗೆಯ ಹಾಕುವವಳು ಸರ್ವಾಧಿಕಾರಿಯ ಆದೇಶದಂತೆಸುಟ್ಟ […]
ಗಜಲ್: ಜಯಶ್ರೀ.ಭ.ಭಂಡಾರಿ., ರೇಣುಕಾ ಕೋಡಗುಂಟಿ, ಸರೋಜ ಪ್ರಶಾಂತಸ್ವಾಮಿ, ದೇವರಾಜ್ ಹುಣಸಿಕಟ್ಟಿ.
ಗಝಲ್ 1 ಸರೋವರದ ತುಂಬಾ ತೇಲಾಡುವ ಹಂಸೆಗಳುಸರೋವರದ ಸೊಬಗನು ಹೆಚ್ಚಿಸಿದ ಕಮಲಗಳು ಅದೇಕೋ ಸುಂದರ ಹಂಸೆ ತಪಗೈಯುತಿದೆಸಿಗದೆ ಆಹಾರ ಮನನೊಂದಂತಿದೆ ಕಂಗಳಗಳು. ಹೆಜ್ಜೆ ಕಿತ್ತಿಡಲಾರದೆ ಸುಮ್ಮನೆ ಆಕಾಶ ನೋಡುತಿದೆ.ಲಜ್ಜೆಯ ತೆರದಿ ನಾಚಿದಂತೆ ಬೆಳ್ಳನೆ ರೆಶ್ಮೆಯ ಪಂಕಗಳು ಪಾದಗಳ ಒತ್ತಿ ಹಿಡಿದು ಜಪವ ಮಾಡುತಿದೆ ಎನಿಸುವುದುಪದಗಳ ಜೋಡಿಸಿ ವೈರಾಗ್ಯ ರಾಗದಿ ಹಾಡುವ ಕಂಗಳು ನೀಲ ಅಂಬರದಿ ಗುಟ್ಟಾಗಿ ಏನೋ ಹುಡುಕುತಿದೆಅಲೆಗಳು ಹೇಳುತಿವೆ ರಾತ್ರಿ ಬರುವುದು ಬೆಳದಿಂಗಳು ಕೆಂಪು ಎತ್ತರದ ಮೂಗು ತಂಪಾಗಿ ಉಬ್ಬಿ ಸೊಕ್ಕಿದಂತಿದೆ.ಮಂಪರು ಬಂದಂತೆ ಮಂಕಾಗಿ ಹಾರುದ […]
ಸಂದ್ಯಾಕಾಲ (ಮಿನಿಕಥೆ): ವೆಂಕಟೇಶ ಪಿ. ಗುಡೆಪ್ಪನವರ
ವಿದೇಶದಲ್ಲಿದ್ದ ಮಗ ಶೆಟ್ಟರ ಅಂಗಡಿಗೆ ಪೋನ್ ಮಾಡಿದ್ದನು. ‘ನಾನು ಊರಿಗೆ ಬರುವದಿಲ್ಲ, ನಾನು ಮದುವೆಯಾಗಿದ್ದೇನೆ, ನೀವು ಬೇಕಾದರೆ ಇಲ್ಲಿಗೆ ಬನ್ನಿ” ಇಳಿವಯಸ್ಸಿನ ಜೀವಗಳು ಎಷ್ಟು ಪರಿಪರಿಯಾಗಿ ಬೇಡಿದರು ಮಗ ಮರಳಿ ದೇಶಕ್ಕೆ ಬರುವುದೇ ಇಲ್ಲ. ಬಂಜೆ ಎನಿಸಿಕೊಂಡ ಜೀವಕ್ಕೆ ಈ ಮಗು ಯಾಕಾಗಿ ಬಂತೋ ಏನೋ ಎಂದು ಅನಿಸಿಕೊಂಡು ಅಡಿಕೆ ತೋಟದ ನೀರಿನ ಹೊಂಡದ ಹತ್ತಿರ ಕುಳಿತ ಇಳಿ ವಯಸ್ಸಿನ ಜೀವಗಳು ಕಣ್ಣೀರು ಹಾಕಿದಾಗ ನೆನೆಪು ಹಿಂದೆ ಹೋಯಿತು. ತೋಟದಲ್ಲಿ ಅಡಿಕೆ ಇಳಿಸಿದ ನಡುವಯಸ್ಸಿನ ಜೋಡಿ ಜೀವಗಳು […]
ವೇಣು ಜಾಲಿಬೆಂಚಿ ಅವರ ಕೃತಿ “ತಿಳಿಯದೇ ಹೋದೆ”: ಮಹಾದೇವ ಎಸ್, ಪಾಟೀಲ
ಕನ್ನಡ ಸಾಹಿತ್ಯ ಪರಂಪರೆ ದಿನದಿನೆ ಹುಲುಸಾಗಿ ಬೆಳೆಯುತ್ತ ಸಾಗಿದೆ. ಅದೊಂದು ಕಾಲದಲ್ಲಿ ಸಾಹಿತ್ಯ, ಬರಹವೆಂದರೆ ಪ್ರಾಧ್ಯಾಪಕರು,ಪಂಡಿತರಿಗೆ ಮಾತ್ರ ಸಿಮೀತ ವಾಗಿತ್ತು. ಆ ದಿನದ ಸಾಹಿತ್ಯವು ತನ್ನದೇ ಆದ ಛಂದೋಬದ್ಧ ಚೌಕಟ್ಟಿನಲ್ಲಿತ್ತು. ಆಧುನಿಕ ಸಾಹಿತ್ಯದ ಕಾಲದ ಈ ದಿನಮಾನದಲ್ಲಿ ‘ಮುಕ್ತಛಂದ’ದ ಮೂಲಕ ಎಲ್ಲವೂ ಮುಕ್ತವಾಗಿ ಅನಾವರವರಣಗೊಳ್ಳುತ್ತಿದೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ವಾಟ್ಸಪ್,ಫೇಸ್ ಬುಕ್ಕ್, ಇಂಟರ್ನೆಟ್ ಗಳ ಸಂಪರ್ಕ ಹಾಗೂ ಸಂವಹನದ ಮೂಲಕ ವೇದಿಕೆಯನ್ನು ಹಂಚಿಕೊಳ್ಳುವದರೊಂದಿಗೆ ಸಾಹಿತ್ಯ ಸಮೃದ್ಧವಾಗಿ ಬೆಳೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ರಾಯಚೂರಿನ ಸೃಜನಶೀಲ ಬರಹಗಾರ ಕವಿ,ಕಥೆಗಾರರಾದ ಶ್ರೀ […]
ವಿಶ್ವ ಸಾಹಿತ್ಯ ಎಂದರೇನು?: ಕಿರಣ್ ಕುಮಾರ್ ಡಿ
ವಿಶ್ವಸಾಹಿತ್ಯ ಎಂಬ ಪದವನ್ನು ಗೋಥೆ ಅವರು ಮಂಡಿಸಿದರು, ಅವರು ಜಾಗತಿಕ ಆಧುನಿಕತೆಯ ತಯಾರಿಕೆಯಲ್ಲಿ, ಕಾವ್ಯವು ಸಾರ್ವತ್ರಿಕ ಅನುಭೋಗವೆಂದು ಭಾವಿಸಿದರು. ಗೊಥೆ ಪ್ರಕಾರ ರಾಷ್ಟ್ರೀಯ ಸಾಹಿತ್ಯ ಈಗ ಅರ್ಥಶೂನ್ಯ ಪದವಾಗಿದೆ. ಗೊಥೆಯವರನ್ನು ವ್ಯಾಪಕವಾಗಿ ಜರ್ಮನ್ ಭಾಷೆಯ ಶ್ರೇಷ್ಠ ಮತ್ತು ಅತ್ಯಂತ ಪ್ರಭಾವಶಾಲಿ ಬರಹಗಾರ ಎಂದು ಪರಿಗಣಿಸಲಾಗಿದೆ.ಗೊಥೆಯ ಪದಗುಚ್ಛವು ವಿಶ್ವ ಸಾಹಿತ್ಯ ಎಂದರೇನು?, ಪಶ್ಚಿಮ ಯೂರೋಪ್ ಮತ್ತು ಭೂಗೋಳದ ಇತರೆ ಭಾಗಗಳ ನಡುವೆ ಯಾವ ಸಂಬಂಧವಿದೆ? , ಪ್ರಾಚೀನತೆ ಮತ್ತು ಆಧುನಿಕತೆಯ ನಡುವೆ ಯಾವ ಸಂಬಂಧವಿದೆ?, ಸಾಮೂಹಿಕ ಸಂಸ್ಕೃತಿ ಮತ್ತು […]
ಭಾವನೆಗಳ ಭಾವೋದ್ವೇಗ: ರೇಖಾ ಶಂಕರ್
ಮನಸು ತಾ ತಿಳಿದದ್ದು ಅಂತರಂಗದಲ್ಲಿ ಕೂಡಿಹಾಕಿ ಕಲೆಹಾಕಿ ಒಂಚೂರು ಮುದವಾಗಿಸಿ ಇಮ್ಮಡಿಗೊಳಿಸಿಕೊಂಡು ಅರುಹುವ ಮಾತಿನ ಅನಾವರಣವೇ ” ಭಾವನೆ” . ಭಾವನೆ ಎಂದರೆ ವ್ಯಕ್ತಿಯೊಳಗೆ ಅಡಗಿದ್ದ ವಸ್ತುವಿನ ಅಥವಾ ಸನ್ನಿವೇಶಕ್ಕೆ ಸಂಬಂಧಿಸಿ ನೀಡುವ ಪ್ರತಿಕ್ರಿಯೆ. ಭಾವನೆಯು ಸಂತೋಷ, ನೋವು, ಆಕರ್ಷಣೆ ಅಥವಾ ಮೋಹಿತದಿಂದ ಗುರುತಿಸಲ್ಪಟ್ಟ ಮಾನಸಿಕ ದೈಹಿಕ ಪ್ರತಿಕ್ರಿಯೆಗಳ ಸೂಚಕ.ಇದು ಪ್ರತಿಕ್ರಿಯೆಗಳ ಅಸ್ತಿತ್ವವನ್ನು ತಿಳಿಸಬಹುದು ಆದರೆ ಅದರ ಸ್ವರೂಪ ಅಥವಾ ತೀವ್ರತೆಯ ಬಗ್ಗೆ ಏನನ್ನೂ ಸೂಚಿಸುವುದಿಲ್ಲ. ಭಾವನೆಯು ಉತ್ಸಾಹ ಅಥವಾ ನಿರುತ್ಸಾಹಗಳ ಬಲವಾದ ಸೂಚ್ಯಾರ್ಥವನ್ನು ಹೊಂದಿರುತ್ತದೆ ಹಾಗೂ […]
ಧರ್ಮದ ಆಚರಣೆ ಆಸ್ತಿಕವೂ ಅಲ್ಲ.. ನಾಸ್ತಿಕವೂ ಅಲ್ಲ.. ಎನ್ನುವ ವಿಭಿನ್ನ ಕೃತಿ “ಯಡ್ಡಿ ಮಾಮ ಬರಲಿಲ್ಲ”: ಡಾ. ನಟರಾಜು ಎಸ್ ಎಂ
ಇಡೀ ವಾರ ನಾಲ್ಕೈದು ಪುಸ್ತಕಗಳ ಮೇಲೆ ಕಣ್ಣಾಡಿಸಿದ್ದೇನಾದರೂ ಪೂರ್ತಿಯಾಗಿ ಯಾವ ಪುಸ್ತಕವನ್ನು ಓದಲಾಗಿರಲಿಲ್ಲ. ಇತ್ತೀಚೆಗೆ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರಿಗೆ ಪ್ರಾಶಸ್ತ್ಯ ಕೊಡಲಿಲ್ಲ ಎನ್ನುವ ದನಿಗಳು, ಪರ್ಯಾಯ ಸಮ್ಮೇಳನ ಎಂಬಂತೆ ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನವೊಂದನ್ನು ಹಮ್ಮಿಕೊಂಡಿದ್ದರು. ಎರಡೂ ಸಮ್ಮೇಳನಗಳ ಆಹ್ವಾನ ಪತ್ರಿಕೆಗಳ ಮೇಲೆ ಕುತೂಹಲಕ್ಕೆ ಕಣ್ಣಾಡಿಸಿದಾಗ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಬ್ಬೇ ಒಬ್ಬ ಮುಸ್ಲಿಂ ಕವಿಯ ಹೆಸರಿತ್ತು. ಆ ಕವಿಯೂ ಕೂಡ ಸಮ್ಮೇಳನದಿಂದ ಹಿಂದೆ ಸರಿದಿದ್ದು ಎಲ್ಲರಿಗೂ ತಿಳಿದ ವಿಚಾರವೇ […]