“ಝೂನೋಟಿಕ್ (ಪ್ರಾಣಿಜನ್ಯ) ರೋಗಗಳು”: ಡಾ. ವೀಣಾಕುಮಾರಿ ಎ. ಎನ್.‌,

ಝೂನೋಟಿಕ್ (ಪ್ರಾಣಿಜನ್ಯ) ರೋಗಗಳು ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಪರಸ್ಪರ ಹರಡುವ ರೋಗಗಳಾಗಿವೆ. ʼಝುನೋಸಿಸ್ʼ ಎಂಬ ಪದವು ರುಡಾಲ್ಫ್ ವಿರ್ಚೊ (Rudolph Virchow) ಎಂಬಾತನಿಂದ 1880ರಲ್ಲಿ ಪರಿಚಯಿಸಲ್ಪಟ್ಟಿದೆ. ʼಝೂನೋಸಿಸ್ʼ ಎಂಬ ಪದವು ಮೂಲತಃ ಗ್ರೀಕ್ ಭಾಷೆಯ ಪದವಾಗಿದ್ದು, ʼಝೂನೋʼ ಎಂದರೆ ʼಪ್ರಾಣಿʼ ಹಾಗೂ ʼನೊಸೆಸ್ʼ ಎಂದರೆ ʼಅನಾರೋಗ್ಯʼ ಎಂದರ್ಥ. ಇವುಗಳು ವೈರಸ್ ಗಳು (ರೇಬೀಸ್‌, ಆರ್ಬೋವೈರಸ್‌ ಸೋಂಕುಗಳು, ಕ್ಯಾಸನೂರ್‌ ಫಾರಸ್ಟ್‌ ಡಿಸೀಸ್/ಮಂಗನ ಕಾಯಿಲೆ, ಹಳದಿ ಜ್ವರ, ಇನ್ ಫ್ಲುಯೆಂಜಾ), ಬ್ಯಾಕ್ಟೀರಿಯಾಗಳು (ಉದಾಹರಣೆ: ಆಂಥ್ರಾಕ್ಸ್‌, ಬ್ರುಸೆಲ್ಲೋಸಿಸ್‌, ಪ್ಮೇಗ್‌, ಲೆಪ್ಟೋಸ್ಪೈರೋಸಿಸ್‌, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಣ್ಣ-ತಂಗಿ: ಸಿದ್ಧರಾಮ ಹಿಪ್ಪರಗಿ (ಸಿಹಿ), ಧಾರವಾಡ.

ರಂಗಭೂಮಿಯ ವೈಭವದ ದಿನಗಳ ಅಂದಿನ ಕಾಲದ ದೀಮಂತರ ಕುರಿತಾದ ಭಾಷಣ ಕೇಳಿ ಹೊರ ಬಂದ ಸುಮಾ ಮತ್ತು ಸೂರಜ ತೀವ್ರ ಭಾವುಕರಾಗಿದ್ದರು. ತನ್ನಜ್ಜಿಯ ಕಂಪನಿಯ ಕುರಿತು ಸವಿಸ್ತಾರವಾಗಿ ವಿವರಿಸಿದ್ದ ಅಧ್ಯಯನಶೀಲ ಅನಾಮಿಕ ಭಾಷಣಕಾರರ ಮಾತುಗಳಿಂದ ಉಬ್ಬಿಹೋಗಿದ್ದ ಸುಮಾಳಿಗೆ ಏನೋ ಹೇಳಿಕೊಳ್ಳಬೇಕೆಂಬ ಉಮೇದು. “ಆ ಉಮೇದಿಗೆ ಉತ್ತರವಾಗಿ ಸ್ಪಂಧಿಸುವವನೆಂದರೆ ಕ್ಲಾಸ್‌ಮೇಟ್‌ ಸೂರಜ್‌ ಮಾತ್ರ!” ಎಂದು ಮನದಲ್ಲಿಯೇ ಯೋಚಿಸುತ್ತಾ ಸೂರಜನೆಡೆಗೆ ನೋಡಿದಳು. “ಲೇಟಾದರೆ ಪಿಜಿಯಲ್ಲಿ ಊಟ ಸಿಗೋಲ್ಲಾ, ನಾನು ಬರಲಾ ಸುಮಾ?” ಎಂದು ತನ್ನ ಇಲೆಕ್ಟ್ರಿಕ್‌ ಸ್ಕೂಟಿ ಸ್ಟಾರ್ಟ ಮಾಡಲು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಾ ಬಾ ಓ ಬೆಳಕೇ…..: ಚಂದಕಚರ್ಲ ರಮೇಶ ಬಾಬು

ಚರಿತ್ರೆ ಪುನರಾವೃತಗೊಳ್ಳುತ್ತದೆಂದು ಓದಿ ತಿಳಿದಿದ್ದರೂ, ಹೇಳಿದವರಿಂದ ಕೇಳಿದ್ದರೂ ಅದು ಇಷ್ಟುಬೇಗ ತನ್ನ ಆವರಿಸುತ್ತದೆ ಎಂದು ಮತ್ತು ಅದರ ಮಿಕ ತಾನಾಗಬೇಕಾಗುತ್ತದೆ ಎನ್ನುವ ಸತ್ಯ ಜಯತೀರ್ಥನಿಗೆ ಕಹಿಯೂಟವಾಗಿತ್ತು.ಮೊನ್ನೆ ವರೆಗೂ ತನ್ನ ಸಂಪತ್ತೇನು, ಮೆರೆದಾಟವೇನು, ಕಂಡ ಕನಸುಗಳೇನು ? ಒಂದೇ ಎರಡೇ? ಜೀವನವಿಡೀ ಕಾಮನಬಿಲ್ಲಿನ ಕನಸಿನಲ್ಲೇ ಕಳೆದುಹೋಗುತ್ತದೆ ಎಂದೆಣಿಸಿ, ಸೊಕ್ಕಿನಲ್ಲಿ ಮುಕ್ಕುತ್ತಿದ್ದ ಅವನಿಗೆ ಆರ್ಥಿಕ ಮುಗ್ಗಟ್ಟು ಲಕ್ವದ ತರ ಬಂದೆರಗಿತ್ತು. ಇಂಥ ಮುಗ್ಗಟ್ಟು ಶುರುವಾಗಿ ಒಂದು ವರ್ಷವಾಗಿದ್ದರೂ ಅವನು ಮತ್ತು ಅವನ ಹೆಂಡತಿ ಅದಕ್ಕೆ ಹೊರತಾಗೇ ಉಳಿದಿದ್ದರು. ಶುರುವಾದ ವರ್ಷಗಳಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅನಿರೀಕ್ಷಿತ ಬದಲಾವಣೆಗಳ ಬೆನ್ನು ಏರಿ..: ವಿಜಯ್ ಕುಮಾರ್ ಕೆ. ಎಂ.

ಬದಲಾವಣೆಗಳು ಅನಿರೀಕ್ಷಿತ, ಇನ್ನಷ್ಟು ಬದಲಾವಣೆಗಳು ನಿರೀಕ್ಷಿತ. ಅನಿರೀಕ್ಷಿತವಾಗಿ ಉಂಟಾಗುವ ಬದಲಾವಣೆಗಳಲ್ಲಿ ಹೆಚ್ಚು ದೀರ್ಘಾವಧಿ ಆಯಸ್ಸು ಬಯಸಲು ಕಷ್ಟವಾಗಬಹುದು ಆದರೆ ನಿರೀಕ್ಷಿತ ಬದಲಾವಣೆಗೆ ಒಂದಷ್ಟು ಆಯಸ್ಸು ಹೆಚ್ಚು ಇರುತ್ತದೆ. ರಾತ್ರೋರಾತ್ರಿ ಸಿಕ್ಕ ಲಾಟರಿಯ ಜಯ, ತಾನು ಕಂಡು ಕೇಳರಿಯದಷ್ಟು ಸಿಕ್ಕ ಹಣ ಮತ್ತು ಒಡವೆ, ನಿರೀಕ್ಷೆಯಿಲ್ಲದೆ ದೊರೆತ ಗೆಲುವು, ಬಯಸದೆ ಸಿಕ್ಕ ಮೆಚ್ಚುಗೆ ಇದೆಲ್ಲವೂ ಮನಸ್ಸಿನಲ್ಲಿ ಇನ್ನಿಲ್ಲದ ಸಂತೋಷ ನೀಡಿತಾದರೂ ಅದರ ಹಿಂದೆ ಬರುವ ಒಂದಷ್ಟು ಜವಾಬ್ದಾರಿ, ಪ್ರಾಮಾಣಿಕತೆ, ನಿರಂತರ ಪರಿಶ್ರಮ ಇದೆಲ್ಲವೂ ಬಹು ಮುಖ್ಯವಾಗುವುದರಲ್ಲಿ ಸಂಶಯವಿಲ್ಲ. ಪ್ರೌಢಾವಸ್ಥೆಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಂಕ ಪ್ರಯಾಣ: ನಾಗಸಿಂಹ ಜಿ ರಾವ್

ಸಿಂಹಾವಲೋಕನ 3 “ಪುಲಪೇಡಿ” ಎಂಬ ಸಮುದಾಯ ತಂಡದ ನಾಟಕದಲ್ಲಿ ಭಾಗವಹಿಸಿದ ನಂತರ, ನನ್ನ ಶಾರದಾವಿಲಾಸ ಕಾಲೇಜಿನ ಸಹಪಾಠಿಗಳು ಮತ್ತು ಅಧ್ಯಾಪಕರೆಲ್ಲರೂ ನನ್ನನ್ನು ಗುರುತಿಸತೊಡಗಿದರು. “ಮುಂದಿನ ನಾಟಕ ಯಾವಾಗ?” ಎಂಬ ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು. ಆದರೆ, ಆ ಪ್ರಶ್ನೆಗೆ ಉತ್ತರವೇ ನನಗೆ ತಿಳಿದಿರಲಿಲ್ಲ. ಒಂದು ದಿನ ಕಾಲೇಜ್ ಮುಗಿಸಿಕೊಂಡು ಮನೆಗೆ ಹೋಗುವಾಗ, ಚಾಮುಂಡಿಪುರಂ ವೃತ್ತದಲ್ಲಿ ಪಾಪು ಎದುರಾದರು. “ಏನ್ರಿ, ಹೇಗಿದ್ದೀರಾ? ನಾಟಕ ಮಾಡ್ತೀರಾ?” ಎಂದು ಕೇಳಿದರು. “ಹೂ, ಮಾಡ್ತೀನಿ, ” ಎಂದೆ. “‘ಬೆಲೆ ಇಳಿದಿದೆ’ ಎಂಬ ಬೀದಿನಾಟಕದ ರಿಹರ್ಸಲ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೆರೆಮನೆರಹಿತ ಕೈದಿ: ಎಲ್.ಚಿನ್ನಪ್ಪ, ಬೆಂಗಳೂರು.

“ನನ್ನ ಮಗ ಎಷ್ಟೇ ಕೆಟ್ಟವನಾಗಿದ್ದರೂ ನಮ್ಮೊಡಲಿನ ರಕ್ತವನ್ನು ಹಂಚಿಕೊಂಡು ಧರೆಗೆ ಬಂದವನಲ್ಲವೆ? ನಮ್ಮ ಕರುಳ ಕುಡಿಯೇ ಅಲ್ಲವೆ? ತನ್ನ ತಾಯಿಯ ತದ್ರೂಪವನ್ನೇ ಹೊತ್ತು ಬಂದಿರುವ ಅವನ ಮುಖದಲ್ಲಿ ನನ್ನ ಪತ್ನಿಯ ಪ್ರತಿಬಿಂಬ ಕಾಣುತ್ತಿದ್ದೇನೆ” ಎಂದಿನಂತೆ ಕಛೇರಿ ಕೆಲಸ ಮುಗಿಸಿಕೊಂಡು ಅಂದು ಸಂಜೆ ಮನೆಗೆ ಮರಳಿದೆ. ಬೀಗ ಹಾಕಿದ್ದ ನನ್ನ ಮನೆಯ ಬಾಗಿಲ ಬಳಿ ಆ ವೃದ್ಧರು ಕಾದು ಕುಳಿತ್ತಿದ್ದರು. ನಾನೊಬ್ಬ ಸರಕಾರಿ ನೌಕರ, ಇಲ್ಲಿಗೆ ಬಡ್ತಿಯ ಮೇಲೆ ವರ್ಗವಾಗಿ ಬಂದು ಆರು ತಿಂಗಳಾಗಿವೆ. ನನ್ನ ಸ್ವಂತ ಸ್ಥಳವು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

”ಕತ್ತಲ ಜಾಲ”(ಸೈಬರ್‌ ರಕ್ಷಣೆ ಕುರಿತಾದ ನಾಟಕ): ನಾಗಸಿಂಹ ಜಿ ರಾವ್

”ಕತ್ತಲ ಜಾಲ”(ಸೈಬರ್‌ ರಕ್ಷಣೆ ಕುರಿತಾದ ನಾಟಕ)ರಚನೆ: ನಾಗಸಿಂಹ ಜಿ ರಾವ್ಪಾತ್ರಗಳು: ಫೇಸ್ ಬುಕ್ಇನ್ಸಾಟಾಗ್ರಾಂವಾಟ್ಸ್ಆಪ್ಬಾಲಕಿ / ಬಾಲಕ (ಈ ನಾಟಕವನ್ನು ಬೀದಿನಾಟಕ, ರಂಗನಾಟಕ ಹಾಗೂ ಆತ್ಮೀಯ ರಂಗಭೂಮಿಯಲ್ಲೂ ಪ್ರದರ್ಶಿಸಬಹುದು) (ದೃಶ್ಯ ೧)ಹಾಡು:ಕತ್ತಲ ಜಾಲ ಇದುಕತ್ತಲ ಜಾಲಅಪಾಯತರುವಆಂತರ್ಜಾಲವಿಷದ ಹಾವಿನ ಮೋಹಕ ಬಾಲಗೋಮುಖ ವ್ಯಾಘ್ರನ ಬಣ್ಣದಜಾಲ ಕಾಮುಕ ಹರಡಿದ ಸುಂದರ ಬಲೆಲೈಕು ಕಾಮೆಂಟಿಗೆಆದರೆ ಮರುಳುಮುಗಿದೇ ಹೋಯಿತು ಬಾಲ್ಯದ ಕೊಲೆದೂರವಿರುಅದು ವಿಷದ ಹುಳು ಉತ್ತಮರೀತಿಯಲಿ ಬಳಸೋ ಜಾಣನೆನಪಿಡುಅದು ಸಾಮಾಜಿಕಜಾಲತಾಣಮರುಳಾಗದಿರು ಬಣ್ಣದ ಮಾತಿಗೆಅತಿ ಬಳಕೆ ಒಳ್ಳೆಯದಲ್ಲ ಬದುಕಿಗೆ ಕತ್ತಲ ಜಾಲ ಇದುಕತ್ತಲ ಜಾಲಅಪಾಯತರುವಆಂತರ್ಜಾಲವಿಷದ ಹಾವಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದಿಕ್ಕುಗಳು (ಭಾಗ 4): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಆ ಹಿರಿಯ ಮನುಷ್ಯ ವೆಂಕಟರಮಣರಾವ್ ತೋರಿಸಿದ ಮನೆ, ಶಿವಪ್ಪ ಮತ್ತು ಆತನ ಮಗಳಿಗೆ ಇಷ್ಟವಾಯಿತು. ಒಂದು ಕೋಲಿ, ನಡುಮನೆ, ಅಡುಗೆಮನೆ ಅಚ್ಚುಕಟ್ಟಾಗಿದ್ದವು. ಸುತ್ತಲೂ ಪೌಳಿ ಇತ್ತು. ಆ ಆವಾರದಲ್ಲಿ ಬಚ್ಚಲುಮನೆ ಮತ್ತು ಪಾಯಖಾನೆ ಇದ್ದವು. ನೀರಿಗೂ ಕೊರತೆ ಇರಲಿಲ್ಲ. ಆವಾರದಲ್ಲಿಯೇ ನೀರಿನ ನಳವನ್ನು ಹೊಂದಿಸಲಾಗಿತ್ತು. ಅನುಶ್ರೀ ಅಂತೂ, “ಇಲ್ಲೇ ಇದ್ದು ಬಿಡೂದು ಚೊಲೊ ನೋಡಪ್ಪಾ” ಎಂದಳು. ಅಮಾಯಕ ಜನ ಮತ್ತು ಇನ್ನೂ ಕೆಲಸ ಹುಡುಕಿಕೊಂಡಿಲ್ಲವೆಂಬುದನ್ನು ತಿಳಿದ ಮುನಿಶಿವರಾಜುವಿಗೆ ಶಿವಪ್ಪನ ಮೇಲೆ ಕನಿಕರ ಹುಟ್ಟಿತ್ತು. ಮುಂಗಡ ಹಣವನ್ನೇನೂ ಕೇಳದೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೃಷ್ಣ ದೇವಾಂಗಮಠ ಫೋಟೋಗ್ರಾಫಿ

Asian Openbill / ಬಾಯ್ಕಳಕ ಕೊಕ್ಕರೆ Black naped Monarch / ಕಪ್ಪು ಹಿಂಗತ್ತಿನ ರಾಜಹಕ್ಕಿ Brahminy Kite / ಬಿಳಿ ಗರುಡ Jungle owlet / ಕಾಡು ಹಾಲಕ್ಕಿ Orange headed Thrush / ಕಂದುತಲೆ ನೆಲಸಿಳ್ಳಾರ ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಲೋಕದ ಡೊಂಕ ತಿದ್ದುವ ಬದಲು….!!: ಶೋಭಾ ಶಂಕರಾನಂದ

ಜಗತ್ತಿನಲ್ಲಿ ಇತರರನ್ನು ತಿದ್ದುವ ಅಧಿಕಾರ ಮತ್ತು ಶ್ರಮ ಬೇಡ. ಒಬ್ಬ ವ್ಯಕ್ತಿ ಒಳ್ಳೆಯವರು/ ಕೆಟ್ಟವರು ಎಂದು ನಿರ್ಧಾರ ಮಾಡುವ ಕಷ್ಟವೂ ನಮಗೆ ಬೇಡ. ಒಬ್ಬರಿಗೆ ಒಳ್ಳೆಯವರಾಗಿ ಕಂಡವರು ಇನ್ನೊಬ್ಬರಿಗೆ ಕೆಟ್ಟವರಾಗಿ ಕಾಣುಬಹುದು ಅಥವಾ ಇನ್ನೊಬ್ಬರಿಗೆ ಕೆಟ್ಟವರಾಗಿ ಕಂಡವರು ಮತ್ತೊಬ್ಬರಿಗೆ ಒಳ್ಳೆಯವರಾಗಿ ಕಾಣಬಹುದು. ಅದು ಆಯಾ ಸಂದರ್ಭಕ್ಕೆ ಅನ್ವಯಿಸಿರುತ್ತದೆ. ವಸ್ತುಗಳಿಗೆ ಕೊಟ್ಟಷ್ಟು ಬೆಲೆಯನ್ನು ನಾವು ಇಂದು ವ್ಯಕ್ತಿಗಳಿಗೆ ನೀಡುತ್ತಿಲ್ಲ. ಕಾರು ಬಂಗಲೆ ಐಷಾರಾಮಿ ಜೀವನಕ್ಕಾಗಿ ಕಾತರಿಸುತ್ತೇವೆಯೇ ಹೊರತು, ವ್ಯಕ್ತಿಗಳಿಗೆ ಅಲ್ಲ ಎನ್ನುವುದು ಹಲವಾರು ಸಂದರ್ಭದಲ್ಲಿ ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದಪ್ಪಗಿದ್ದರೆ ಏನು ಜೀವ?: ಕೊಡೀಹಳ್ಳಿ ಮುರಳೀಮೋಹನ್

ಭೂಮಾತಾ ನಗರದ ರಸ್ತೆ ಸಂಖ್ಯೆ 10ರಲ್ಲಿರುವ ‘ಸೌಧ ಎಲ್-ಕ್ಯಾಸಲ್’ ಅಪಾರ್ಟ್‌ಮೆಂಟ್‌ನ ಬಿ ಬ್ಲಾಕ್, ಜಿ-1ರಲ್ಲಿ ವಾಸಿಸುವ ಜೀವನ್ ಮತ್ತು ಡಿ ಬ್ಲಾಕ್, ಎಫ್-2ರಲ್ಲಿರುವ ಸುಧೀರ್ ಬಾಲ್ಯದ ಗೆಳೆಯರು. ಚಿಕ್ಕಂದಿನಲ್ಲಿ ಅವರ ಸ್ವಂತ ಊರಿನಲ್ಲಿ ಇಬ್ಬರ ಮನೆಗಳೂ ಪಕ್ಕ ಪಕ್ಕವೇ ಇದ್ದವು. ಜೀವನ್ ಅವರ ತಾತ ಇಬ್ಬರಿಗೂ ಪದ್ಯಗಳು, ಶತಕಗಳನ್ನು ಕಲಿಸುತ್ತಿದ್ದರು. ಕಥೆಗಳನ್ನು ಹೇಳುತ್ತಿದ್ದರು. ಅವರು ಜೀವನನ್ನು ‘ಜೀವ’ ಎಂದೂ, ಸುಧೀರನನ್ನು ‘ಧೀರ’ ಎಂದೂ ಕರೆಯುತ್ತಿದ್ದರು. ಶಾಲೆಯಲ್ಲಿ, ಕಾಲೇಜಿನಲ್ಲಿ ಒಟ್ಟಿಗೆ ಓದಿದರು. ನಂತರ ಇಬ್ಬರಿಗೂ ಒಂದೇ ಊರಿನಲ್ಲಿ ಉದ್ಯೋಗಗಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಯುದ್ದಕ್ಕೂ ಸಿದ್ದ ಶಾಂತಿಗೂ ಬದ್ದ”: ಚಲುವೇಗೌಡ ಡಿ ಎಸ್

ನಾವು ಭಾರತೀಯರು, ಭಾರತಾಂಬೆಯ ಮಡಿಲಲಿ ಜೀವಿಸುತ್ತಿರುವ ಮಕ್ಕಳು, ಶಾಂತಿ, ಸೌಹಾರ್ದತೆ, ತ್ಯಾಗ, ಕರುಣೆ, ಮಮತೆ, ಏಕತೆ, ಧರ್ಮ ಸಹಿಷ್ಣುತೆ ಹಾಗೂ ಪರಸ್ಪರ ಸಹಕಾರ ಮನೋಭಾವನೆ ಪ್ರಜೆಗಳುಳ್ಳ ಬೃಹತ್ ರಾಷ್ಟ್ರ ನಮ್ಮದು. ಸರ್ವ ಧರ್ಮಗಳನ್ನು ಸಮಾನವಾಗಿ ಕಾಣುವ, ಅರಸಿ ಬಂದವರಿಗೆ ಆಶ್ರಯ ನೀಡುವ, ಮಾನವೀಯ ಗುಣಗಳನ್ನು ಹೊಂದಿರುವ ಶಾಂತಿಪ್ರಿಯವಾದ ರಾಷ್ಟ್ರ ನಮ್ಮದು. ನಾವು ನಮ್ಮ ಪಾಡಿಗೆ ಯಾವ ರಾಷ್ಟ್ರದ ತಂಟೆಗೂ ಹೋಗದೆ ಶಾಂತಿಯಿಂದ ಬದುಕು ಸಾಗಿಸುತ್ತಿದ್ದೆವು ಆದರೂ ನಮ್ಮ ಭಾರತಾಂಬೆಯ ನೆಲಕ್ಕೆ ಕಾಲಿಟ್ಟ ಉಗ್ರರಕ್ಕಸರು ಭಾರತಮಾತೆಯ ಪುತ್ರರ ಕೊಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎಕ್ಸ್ಪೀರಿಯೆನ್ಸ್ ಅಂದ್ರೆ ಸುಮ್ನೆ ಅಲ್ಲ: ಮಧುಕರ್ ಬಳ್ಕೂರು

“ಬಿಡು, ಇದೆಲ್ಲ ಕಾಮನ್, ಒಂದ್ ಎಕ್ಸ್ಪೀರಿಯೆನ್ಸ್ ಅಷ್ಟೇ. ಇದರಲ್ಲೇನು ಹೋದಂಗಾಯಿತು..?” “ಸುಮ್ಮನೆ ಎಕ್ಸ್ಪೀರಿಯೆನ್ಸ್ ಗೆ ಇರಲಿ ಅಂತ ಮಾಡ್ತಿದೀನಿ ಮತ್ತಿನ್ನೇನಿಲ್ಲ. ಇದರಲ್ಲೇನು ಹೋಗೋದಿದೆ..?” ಒಂದ್ ನಿಮಿಷ… ಎಕ್ಸ್ಪೀರಿಯೆನ್ಸ್ ಅನ್ನೋದೆ ಒಂದ್ ದೊಡ್ಡ ವಿಚಾರ. ಇದನ್ನೇನು ಬಿಡು ಕಾಮನ್ ಅಂತ ಹೇಳೋದು..? ಎಕ್ಸ್ಪೀರಿಯೆನ್ಸ್ ಅನ್ನೋದೆ ಪ್ರಾಕ್ಟಿಕಲ್ ಜ್ಞಾನ. ಇನ್ನು ಅದರಲ್ಲೇನು ಹೋದಂಗಾಯಿತು ಅನ್ನೋದು..? ಏನೇ ಮಾಡಿದ್ರು ಎಕ್ಸ್ಪೀರಿಯೆನ್ಸ್ ಸಿಗ್ತದೆ ಅಂದ ಮೇಲೆ ಎಕ್ಸ್ಪೀರಿಯೆನ್ಸ್ ಗೆ ಅಂತಾನೇ ಮಾಡ್ತಿದೀನಿ ಅನ್ನೋದರಲ್ಲಿ ಅರ್ಥ ಇದೆಯಾ..? ಇಲ್ಲಾ ಅಲ್ವಾ.. ಹಾಗಿದ್ರೆ ಯಾಕೆ ಇಂತಹ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಚೆಲುವೆಮಬ್ಬುಗವಿದ ಮುಸ್ಸಂಜೆಆಡು-ಹಸು-ಕುರಿ ಮರಳಿ ಬರುವಾಗಕೆಂಧೂಳು ಮೇಲೆದ್ದು ತಂಗಾಳಿಯು ಸೋಕಿದಂಗೆನೀ ನನ್ನ ಸನಿಹ ಬರಲು ಮೈ ಜುಮ್ಮೆಂದಿತುಓ ನನ್ನ ಒಲವೇ ಜಗವೆಲ್ಲಾ ನಾವೇಕೆಮ್ಮುಗಿಲು ನಕ್ಕು ಸೂರಪ್ಪ ನಾಚಿದಕದರಪ್ಪನ ಗುಡ್ಡವು ಕೆಂಪೇರಿತಾಗಕೆಂದಾವರೆಯಂತಹ ನಿನ್ನ ಕೆನ್ನೆ ಮನಸೆಳೆಯಿತುಇಳಿಜಾರಿನ ಕಲ್ಲು ಮುಳ್ಳು ನಗೆಬೀರಿಬೇಲಿ ಮೇಗಳ ಹೂ ಘಮ್ಮೆನ್ನೋ ಸುವಾಸನೆಯುನಿನ್ನ ಬೆವರಿನ ಸೌಗಂಧ ತಂದಾಗಮನದಲ್ಲೇನೋ ಆನಂದಮೊದಲ ಮಳೆ ಹನಿ ನೆಲವನ್ನು ಮುತ್ತಿಟ್ಟುಗಾಳಿ ಗಂಧವಾಗಿ ಬಯಲೆದೆ ಮೇಲೆ ನಿನ್ನ ಹೆಸರುನಾ ಬಯಸಿದೆ ನಿನ್ನ ಸಂಗನಾನಾಗ ಅಲೆದಲೆದು ಬಳಲಿದೆಮೊದಲ ಚುಂಬನಕ್ಕೆ ನರನಾಡಿ ರೋಮಾಂಚನಉಸಿರು ಉಸಿರಲ್ಲಿ ಬೆರೆಯಲು ಎಂಥಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಗು, ನೀ ನಗು (ಭಾಗ 3): ಸೂರಿ ಹಾರ್ದಳ್ಳಿ

ಹಾಗೊಂದು ಕಾಲವಿತ್ತು, ನಾನು ದಿನಕ್ಕೆ ಎಂಟು ಗಂಟೆಗಳ ಕಾಲ ಗಾಢವಾಗಿ ನಿದ್ರಿಸುತ್ತಿದ್ದೆ. ನಿದ್ರೆಯ ಸುಖಕ್ಕೆ ನಿದ್ರೆಯೇ ಸಾಟಿ. ಈಗ ಮಗುವಿನ ಎಚ್ಚರದ ಸಮಯಕ್ಕೆ ಹೊಂದಿಕೊಳ್ಳಬೇಕಿದೆ. ಮಗು ಎಷ್ಟು ಗಂಟೆಗೆ ಮಲಗಿತು, ಎಷ್ಟಕ್ಕೆ ಎದ್ದಿತು, ನಿನ್ನೆ ಎಷ್ಟು ಹೊತ್ತು ನಿದ್ರೆ ಮಾಡಿತು, ಹಾಲು ಕುಡಿದು ಎಷ್ಟು ಹೊತ್ತಾಯಿತು, ಶೌಚ-ಮೂತ್ರ ಮಾಡಿಕೊಂಡಿತೋ ಇಲ್ಲವೋ, ಎಂದೆಲ್ಲಾ ರೆಕಾರ್ಡ್ ಇಟ್ಟಿರಕೊಂಡಿರಬೇಕು ಈಗ. ಅದು ಎಚ್ಚರವಾಗಿ ಕೊಸ, ಕೊಸ ಎಂದು ಸದ್ದು ಮಾಡಿದರೆ ತಕ್ಷಣವೇ ಎದ್ದು ಅದರ ಉಪಚಾರ ಮಾಡಬೇಕು. ನಾವು ಸ್ನಾನ ಮಾಡುತ್ತಿರಲಿ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಭಾವರಿ (ಭಾಗ 3): ವರದೇಂದ್ರ ಕೆ ಮಸ್ಕಿ

ಹೇಮಂತ್ನ ಮನದರಸಿ ಆಗಿ ಮಹಾರಾಣಿಯಂತೆ ಇರಬೇಕೆಂದಿದ್ದ ವಿಭಾ ಮನಸಲ್ಲಿ ತನ್ನ ತಾಯಿ, ತಂದೆ ಮಾಡಿದ ಕುತಂತ್ರದ ಬಗೆಗೆ ಹೇಸಿಗೆ ಅನಿಸತೊಡಗಿತು. ನಿಷ್ಕಲ್ಮಶ ಹೃದಯಿ, ತನ್ನ ಪ್ರೇಯಸಿಗಾಗಿ ತನ್ನ ತನು, ಮನ, ಧನ ಸರ್ವಸ್ವವನ್ನೂ ಅರ್ಪಿಸಿಕೊಂಡ ತೇಜುವಿನ ನೆನಪು ಬಂದು ಮೈ ಬೆವರುತ್ತಿದೆ, ಈಗ ಏನು ಮಾಡಲಿ, ಏನು ಮಾಡಲಿ. ವಿಲಿ ವಿಲಿಯಾಗಿ ವಿಭಾಳ ಮನಸು ಒದ್ದಾಡುತ್ತಿದೆ. ತನಗರಿವಿಲ್ಲದೇ ತನ್ನ ನಿಶ್ಚಿತಾರ್ಥದ ಉಂಗುರವನ್ನು ತಿರುವುತ್ತಿದ್ದಾಳೆ. ತಕ್ಷಣ ಉಂಗುರದ ಸ್ಪರ್ಶ ಗಮನಕ್ಕೆ ಬಂದು ನೋಡುತ್ತಾಳೆ. ಊಗಿ ಎಂದು ಅಚ್ಚು ಹಾಕಿಸಿದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಮಕಾಲೀನ ಘಟನೆಯ ಪ್ರತಿರೂಪ: ‘ಹೆಬ್ಬುಲಿ ಕಟ್‌ʼ: ಎಂ ನಾಗರಾಜ ಶೆಟ್ಟಿ

ʼನಾವೆಲ್ಲ ಒಂದು ʼ ಎಂದು ಹೇಳಿಕೊಳ್ಳುವ ಘೋಷಣೆಗಳು ಎಷ್ಟು ಪೊಳ್ಳು ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಪಡಿಸುವ ಘಟನೆಗಳು ಆಗಾಗ್ಗೆ, ಅಲ್ಲಲ್ಲಿ ನಡೆಯುತ್ತಿವೆ. ಇಂತಹ ಘಟನೆಗಳು ನಡೆದಾಗ ಮನಸ್ಸು ಕುಸಿಯುತ್ತದೆ; ಪ್ರತಿಭಟನೆಯ ಸೊಲ್ಲೂ ಕೇಳುತ್ತದೆ. ಸೃಜನಶೀಲ ಮನಸ್ಸುಗಳು ಇವನ್ನು ಕ್ರಿಯಾತ್ಮಕವಾಗಿ ಬಳಸಿಕೊಳ್ಳುವ ಸಾಧ್ಯತೆಗಳೂ ಇರುತ್ತವೆ. ಇವು ಸಾಹಿತ್ಯದಲ್ಲಿ, ಸಿನಿಮಾದಲ್ಲಿ ಕೆಲವೊಮ್ಮೆ ಪರಿಣಾಮಕಾರಿಯಾಗಿ ರೂಪುಗೊಂಡರೆ ವರದಿ ಅಥವಾ ಸಾಕ್ಷ್ಯ ಚಿತ್ರವಾಗಿ ತೆಳುವಾಗುವ ಸಂದರ್ಭಗಳೂ ಇಲ್ಲದಿಲ್ಲ. ಭೀಮರಾವ್‌ ಪಿ ತಮ್ಮ ಮೊದಲ ಪ್ರಯತ್ನದಲ್ಲಿ ಇಂತಹದೊಂದು ಪ್ರಯತ್ನವನ್ನು ಮಾಡಿದ್ದಾರೆ. ಅಲ್ಲಲ್ಲಿ ದಲಿತರಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಗು, ನೀ ನಗು (ಭಾಗ ೨): ಸೂರಿ ಹಾರ್ದಳ್ಳಿ

ಅಲ್ಲಿಯೇ ಇದ್ದ ಮಗಳು, ‘ವಾಟ್? ನೋ, ನೆವರ್. ಇನ್ನೊಂದಾ? ಇದೊಂದಕ್ಕೇ ಸಾಕು ಸಾಕಾಗಿದೆ,’ ಎಂದು ಉತ್ತರಿಸಿದಳು. ಆ ಮಹಿಳೆ ರೇಗಿದಳು, ‘ಏನೇ? ಒಂದೇನಾ? ಹೀಗಾದರೆ ನಮ್ಮ ಧರ್ಮದ ಜನ ಹೆಚ್ಚೋದು ಹೇಗೆ? ಆ ಕಮ್ಯುನಿಟಿಯವರು ನೋಡು, ನಾಲ್ಕು ನಾಲ್ಕು ಮದುವೆಯಾಗಿ, ಹತ್ತೋ, ಹದಿನೈದೋ ಮಕ್ಕಳನ್ನು ಹಡೆದು, ಸರಕಾರದವರು ಕೊಡುವ ಎಲ್ಲಾ ಸೌಲಭ್ಯಗಳನ್ನು ತಪ್ಪದೇ ಪಡೆದುಕೊಂಡು, ತಮ್ಮ ಧರ್ಮದ ಜನರ ಸಂಖ್ಯೆಯನ್ನು ಹೇಗೆ ಬೆಳೆಸುತ್ತಿದ್ದಾರೆ ಅಂತ? ನೀವು ಒಂದೇ ಸಾಕು ಎನ್ನುತ್ತೀರಿ,’ ಎಂದು ಆಪಾದಿಸಿದರು. ಪಕ್ಕದಲ್ಲಿಯೇ ಕುಳಿತಿದ್ದ ಅವರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವೀರೇಶ ಬ. ಕುರಿ ಸೋಂಪೂರ ಅವರ “ದುಡ್ಡಿನ ಮರ”: ಎನ್. ಶೈಲಜಾ ಹಾಸನ

ಕವಿ ವೀರೇಶ ಬ. ಕುರಿ ಸೋಂಪೂರ ಅವರು ಈಗಾಗಲೆ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸ್ವತಹ ಶಿಕ್ಷಕರಾಗಿರುವ ವೀರೇಶ್ ಅವರು ಸದಾ ಮಕ್ಕಳೊಂದಿಗೆ ಇದ್ದು, ಮಕ್ಕಳಿಗೆ ಬೇಕಾಗಿರುವಂತಹ, ಆಸಕ್ತಿದಾಯಕವಾಗಿರುವಂತಹ ಸಾಹಿತ್ಯವನ್ನು ನೀಡುತ್ತಾ, ಇದೀಗ ದುಡ್ಡಿನ ಮರ ಎಂಬ ಮಕ್ಕಳ ಕವನ ಸಂಕಲವನ್ನು ಹೊರತಂದಿದ್ದಾರೆ. ಇಲ್ಲಿನ ಹಲವಾರು ಕವಿತೆಗಳು ಹಲವಾರು ವಿಚಾರಗಳಿಂದ ಕೂಡಿದ್ದು, ಮಕ್ಕಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಮಕ್ಕಳ ಮನಸ್ಸು ಹೇಗೆ ಓಡುತ್ತದೆ, ಆ ಮಕ್ಕಳ ಮನಸ್ಸಿಗೆ ಏನು ಬೇಕು ಎಂಬುದನ್ನು ಬಹಳ ಚೆನ್ನಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ನೆನಪುಗಳೊಂದಿಗೆ ಮೌನ ಮೆರವಣಿಗೆ ನಡೆದಿದೆರಥೋತ್ಸವದಲ್ಲಿರಂಗುರಂಗಿನ ಕನಸುಗಳ ಹೊತ್ತುನೆನಪುಗಳ ಅನಾವರಣಕಹಿ ಮರೆವಿನ ಪಲಾಯನ ! ಉಳಿದು ಹೋಗಿದೆ ನೆನಪುಗಳುಎಂದೆಂದಿಗೂ ಕರಗದಂತೆ” ತಿಮ್ಮಪ್ಪನ ” ಐಶ್ವರ್ಯದಂತೆಬಳಸಿದಷ್ಟೊ ……ಕರಗಿಸಿದಷ್ಟೊ ……ಎಂದೆಂದಿಗೂ ಮುಗಿಯದಂತೆ….. ನೆನಪಿನ ಹನಿಗಳು ಜಾರುತಿದೆಬಿಸಿಬಿಸಿಯಾಗಿ ಕೆನ್ನೆಗಳ ಮೇಲೆಜಾರಿದರೂ ಉಳಿಸಿ ಹೋಗಿವೆನೆನಪಿನ ಚಿತ್ತಾರವನ್ನುನೆನಪುಗಳೇ ಹಾಗೆಮರೆಯಬೇಕೆಂದರೂ ,ಮರೆಯಲಾಗದ , ಹಳೆಯದಾದಷ್ಟೊನೆನಪುಗಳು ಮತ್ತೆ ಮತ್ತೆ ಕಾಡುತ್ತವೆ ಜೀವದೊಡನೆ ಬೆಸೆದಿರುವಆತ್ಮದಂತೆ ಹೃದಯದೊಳಗೇಬೆಚ್ಚಗೆ ಮುದುಡಿ ಮಲಗಿದೆ ನೆನಪುಗಳು …..ಆದರೂ,ನನಗೆ ಭಯರೆಕ್ಕೆ ಪುಕ್ಕ ಬಲಿತೊಡನೆಗೂಡುಬಿಟ್ಟು ಹಾರಿಹೋಗುವಪುಟ್ಟ ಹಕ್ಕಿಯಂತಾದರೆ ……?! –ಪ್ರಭಾಕರ ತಾಮ್ರಗೌರಿ ಹಾರುವ ಹಕ್ಕಿ ಒಂಟಿತನ ಬಹಳಸೊಗಸಿನ ಜೀವ-ನ! … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ