ಚಿಂಕ್ರ: ಶಿವಕುಮಾರ ಸರಗೂರು

ಚಿಂಕ್ರ ಎಲ್ಲೊದ್ನಡ ನನ್ನ ಕೂಸು ಅಂತಿದ್ದಅವ್ವನ ಬೋ ಪ್ರೀತಿ ಮಗ್ನ ಮೇಲಿತ್ತುಒಂದ್ಗಳ್ಗಾದ್ರು ಎಡ್ಬಿಡದ ಜೀವ ಅದುಅವಳ್ಗ ಇವ್ನ್ಬಿಟ್ರಾ ಇನ್ಯಾರಿದ್ದರು?ಒಂದ್ಪ್ರಾಣವಾಗಿ ಜೋಕಾಗಿದ್ರು. ಬೆಳಿ ಬೆಳಿತ ಚೂರಾದ್ರು ಕಲ್ತೊಳ್ಳಿ ಅಂತಸ್ಕೂಲ್ಗ ಸೇರುಸ್ಬುಟ್ರಾ ಸರೋಯ್ತದಇಂಕ್ರ ಬುದ್ದಿ ತಲ್ಯಾಗ ಒಕ್ಬುಟ್ಟಂದ್ರನನ್ಮಗ ಪರಪಂಚ ಗ್ಯಾನ ತಿಳ್ಕಂಡುಪಸಂದಾಗಿ ಬೆಳ್ದ್ಬುಡ್ತಾನ ಅನ್ಕೊಂಡ್ಳು. ಗೌರ್ಮೆಂಟೌವ್ರು ಏನೇಳ್ಕೊಟ್ಟಾರು?ಪ್ರವೀಟ್ಗಾದ್ರು ಹಾಕ್ಬಾರ್ದ ಮಂಕೆಅಂತೇಳ್ದ ನೆರ್ಮನೆ ಗೌರಿ ಮಾತುಬಾಳ ಹಿಡಿಸ್ಬುಡ್ತು ತಲೆಚಿಟ್ಟಿಡಿತುಸಾಲಸೋಲ ಮಾಡಿ ಸೇರ್ಸ್ಬುಡದ.! ಅವ್ನ್ಗೇನೊ ಅವರ್ರಿಂಗ್ಲೀಸು ಹಿಡೀಸ್ದು.ಗೀಚಿ ಪಾಚಿ ಕಲಿಯಾಕ್ ಸುರ್ಮಾಡ್ದ.ಯಾರೊಂದ್ಗು ಮಾತಾಡ್ನಾರ. ಸಂಕೋಚಕಲ್ತ್ರುವ ಹೇಳೋಕು ಮುಜ್ಗರ ತಪ್ಪಾದ್ದು ಅಂತ.ಆದ್ರೂ ಅವ್ರವ್ವನ ಮೆಚ್ಸಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೇಮದ ಪರಿಭಾಷೆ: ದೇವರಾಜ್ ಹುಣಸಿಕಟ್ಟಿ

ಪ್ರೇಮದ ಪರಿಭಾಷೆ ಪ್ರೇಮದ ಪರಿಭಾಷೆ ಏನುಇಮ್ರೋಜ್ ಹೇಳಿಲ್ಲಿ…. ಇನ್ನೇನಿದೆ…ಕಂಬನಿಗೆ ತಂಗಾಳಿ ಸೋಕಿಮೋಡವಾಗಿ ಸುರಿವ ಮಳೆಯಂತೆ….. ಅಷ್ಟೇ ಅಂದನಂತೆ.. ಇಮ್ರೋಜ್ ಅಷ್ಟೇ ನಾ ಅಂದ್ರೇ…. ಇಲ್ಲಾ ಕೇಳಿಲ್ಲಿ.. ಭೂಮಿ ಭಾರ ವಿರಹದಉರಿಯ ಹೊತ್ತು..ಕ್ಷಣ ಕ್ಷಣವು ಯುಗದಂತೆ ಕಳೆದು ಭೂಮಿಗೆ ಬಿದ್ದ ಮೇಲೂ.. ಅವಳು ತಿರಸ್ಕರಿಸಿದರೆಕಂಬನಿ ಮಿಡಿಯದೆ..ಎದೆ ಭಾರ ಮಾಡಿಕೊಳ್ಳದೆ ನಗು ಮುಖವ ತೋರಿತುಟಿಯಲ್ಲಿ ಬಿಕ್ಕಳಿಕೆ ಕುಡಿದು…ಕಣ್ಣಲ್ಲಿ ಹುಸಿ ಹೊಳಪು..ಮುಡಿದು…ಕಣ್ಣ ಕಾಡಿಗೆಯಲ್ಲಿ ಮುಚ್ಚಿನಗುವ ಬಡಪಾಯಿ ಪ್ರೇಮಿಯಂತೆಅಷ್ಟೇ ಅಂದ ಅವ್ಹ ಇಮ್ರೋಜ್ ಮತ್ತೆ….ಹೆಚ್ಚೇನಿಲ್ಲ..ಭೂಮಿ ಆಗಸ ಚುಂಬಿಸುವುದಕಂಡು..ಮುಖದ ತುಂಬ ಹಾಲ್ ಬೆಳಕ ಚೆಲ್ಲಿ..ಶರಧಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಂದ್ರಶೇಖರ ಕಂಬಾರರ “ಕರಿಮಾಯಿ “ಮತ್ತು ಇತರೆ ಕಾದಂಬರಿಗಳು: ರಾಘವೇಂದ್ರ ಅಡಿಗ ಎಚ್ಚೆನ್.

1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನಿಸಿದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಡಾ. ಚಂದ್ರಶೇಖರ ಕಂಬಾರರು ಹಲವು ಕ್ಷೇತ್ರಗಳಲ್ಲಿ ಪರಿಣತರು. ಅಸಂಖ್ಯಾತ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡವರು. ಸಾಹಿತ್ಯ, ಸಂಗೀತ, ರಂಗಭೂಮಿ,ಸಿನಿಮಾ ಎಲ್ಲವೂ ಅವರ ತೆಕ್ಕೆಗೆ ಸಿಕ್ಕಿ ಹೆಜ್ಜೆ ಗುರುತನ್ನು ಮೂಡಿಸಿಕೊಂಡವು. ಧಾರವಾಡದಲ್ಲಿ ಎಂ.ಎ ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದು ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-91) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೊಟ್ಟ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯೋಗಸ್ಥದ ಅಂತಸ್ಥ ಮತ್ತು ಪರಸ್ಥ: ಡಾ. ಹೆಚ್ ಎನ್ ಮಂಜುರಾಜ್

ರಾಗಂ ಅವರ ‘ಸಂತೆಯಿಂದ ಸಂತನೆಡೆಗೆ’ ಕೃತಿಯ ಓದು ನಮ್ಮೆಲ್ಲರ ಪ್ರೀತಿಯ ಗೆಳೆಯ ವಿಜಯ್ ಹನೂರು ಇದೀಗ ಯಳಂದೂರಿನ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ನನ್ನ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಮತ್ತು ಗೌರವಾದರಗಳನ್ನು ಹೊಂದಿರುವ ಸಾಹಿತ್ಯ ಸಹೃದಯಿ; ಜೊತೆಗೆ ಗಂಭೀರ ಸಾಹಿತ್ಯ ವಿದ್ಯಾರ್ಥಿ. ಕಳೆದೊಂದು ವಾರದ ಹಿಂದೆ ಫೋನು ಮಾಡಿ, ‘ಗುರುಗಳೇ, ಸಿದ್ಧೇಶ್ವರ ಸ್ವಾಮಿಗಳನ್ನು ಕುರಿತ ಹೊಸದೊಂದು ಪುಸ್ತಕವನ್ನು ನಿಮಗೆ ಅಂಚೆಯಲ್ಲಿ ಕಳಿಸುತ್ತಿರುವೆ. ರಾಗಂ ಅವರ ‘ಯೋಗಸ್ಥಃ’ ಅಂತ ಹೆಸರು. ನೀವು ಓದಿ, ಬರೆದು ಕೊಡಬೇಕು’ ಎಂದರು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೇಸ್ಟ್ರು ನನ್ನ ಮಗಳನ್ನು ಸಾಯಿಸಿ ಬಿಟ್ರು..!: ನಾಗಸಿಂಹ ಜಿ ರಾವ್

( ಗೌಪ್ಯತೆಯ ಉದ್ದೇಶದಿಂದ ವ್ಯಕ್ತಿಗಳು ಮತ್ತು ಸ್ಥಳದ ಹೆಸರನ್ನು ಬದಲಿಸಲಾಗಿದೆ ) ನಾನಿರೋದು ಪುಟ್ಟ ಹಳ್ಳಿ. ಬೆಂಗಳೂರಿಗೆ ಸುಮಾರು ಮೂವತ್ತು ಕಿಲೋಮೀಟರ್ ದೊರವಿದೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸ್ವಲ್ಪ ಹತ್ತಿರ. ವಿಮಾನ ನಿಲ್ದಾಣದ ಮುಖ್ಯರಸ್ಥೆ ಪಕ್ಕದಲ್ಲೀಯೇ ಇರುವ ಹಳ್ಳಿಯಾದ್ದರಿಂದ ಪಂಚಾಯತಿ, ಕಾರ್ಪೊರೇಷನ್ ಎರಡರಿಂದಲೂ ಅಂತಹ ಪ್ರಾಮುಖ್ಯತೆ ಪಡೆಯದ ಹಳ್ಳಿ. ಪ್ರಾಥಮಿಕ ಶಿಕ್ಷಣದ ನಂತರ ಮುಂದಿನ ಶಿಕ್ಷಣಕ್ಕಾಗಿ ನನ್ನ ಹಳ್ಳಿ ಮಕ್ಕಳು ಈಗಲೂ ಪಕ್ಕದ ಬಾಗಲೂರು, ಯಲಹಂಕ, ಬೆಂಗಳೂರನ್ನು ಅವಲಂಬಿಸ ಬೇಕು. ಪಠ್ಯದಲ್ಲಿ ಸಮಸ್ಯೆ ಬಂದರೆ, ಹೋಂ ವರ್ಕ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕವಿತೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಶರಣಗೌಡ ಬಿ ಪಾಟೀಲ ತಿಳಗೂಳ ಅವರ ಕವಿತೆ

ಗುಜರಿ ಅಂಗಡಿಯ ಪುಸ್ತಕ! ಫುಟಪಾತ ಬದಿಯಗುಜರಿ ಅಂಗಡಿಯತುಕ್ಕು ಹಿಡಿದ ತಗಡು,ಗಾಳಿ ಸೋಕಿಟಪಟಪ, ಚಿರ್ ಚಿರ್ಸದ್ದು ಮಾಡಿದಾಗಮೂಲೆಯಲ್ಲಿ ಬಿದ್ದಪುಸ್ತಕವೊಂದುತಲೆ ಎತ್ತಿ ನೋಡಿತು! ಅಂಗಡಿ ಮಾಲಿಕಲೈಟಿಲ್ಲದ ಅಂಗಡಿ ತೆರೆದುಕಸಕಡ್ಡಿ ಗುಡಿಸಿ ನೀರುಸಿಂಪಡಿಸಿದನು ! ಗುಜರಿಗೆ ಬಂದಕಬ್ಬಿಣದ ಡಬ್ಬಿಯನ್ನೇಕುರ್ಚಿ ಮಾಡಿಕೊಂಡುಸುಗಂಧಿತ ವಾಸನೆಯಅಗರಬತ್ತಿ ಹಚ್ಚಿ ವ್ಯಾಪಾರ ಶುರುಮಾಡಿದ !ತೂಗುವ ತಕ್ಕಡಿಗಿಲ್ಲ ಬಿಡುವುಕಬ್ಬಿಣ, ಪ್ಲಾಸ್ಟಿಕ್, ರಟ್ಟುಪುಟ್ಟಗಳದೇ ಕಾರುಬಾರು ! ರಾಶಿ ರಾಶಿ ಸಾಮಾನುತೂಕ ದರಕ್ಕಾಗಿ ಚೌಕಾಶಿ!ಎಲ್ಲವೂ ಗಮನಿಸಿಪುಸ್ತಕ ನಕ್ಕು ಹೇಳಿತುಎಲ್ಲರೊಂದಿಗೆ ತೂಗಬೇಡಿನಮ್ಮ ಮೌಲ್ಯ ಅರಿತುಕೊಳ್ಳಿ. !! –ಶರಣಗೌಡ ಬಿ ಪಾಟೀಲ ತಿಳಗೂಳ ಶರಣಗೌಡ ಬಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕವಿತೆ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದ ಲಿಂಗರಾಜು ಕೆ. ಅವರ ಕವಿತೆ

ಮಾರ ನವಮಿ ಬನ್ನಿ ಬನ್ನಿಹೀಗಿದ್ದರೂ ಎಂಬ ಕಲ್ಪನೆಗೂಸಿಗದತಾತ, ಮುತ್ತಾತ, ಅಜ್ಜಿ, ಮುತ್ತಜ್ಜಿಮಾರನವಮಿಯಂದು ಮೂಡಿಕೈಗೇ ಸಿಗುವವರಿದ್ದಾರೆ ಎಡೆಗಿಟ್ಟ ಚಕ್ಕುಲಿ, ನಿಪ್ಪಟ್ಟು,ಪುರಿ, ಸ್ವೀಟು ಮೆಲ್ಲಿಟವಲ್ಲು, ಸೀರೆ, ರವಿಕೆ ಪೀಸುಗಳಹೊದ್ದಿಲೋಟದೊಳಗಿನ ಸರಾಪು ಕುಡಿದುಹದವಾಗಿ ಬೆಂದ ಬಾಡಬಾರಿಸಲುಆ ‘ಹೆಂಡಗಂಡ’ರುಮಾರ ನವಮಿ ದಿನಮೂಡಿ ಬಂದೇ ಬರುತ್ತಾರೆಬನ್ನಿ ಬನ್ನಿ ಬೇಗ ಬನ್ನಿ… ಎಡೆಗಿಟ್ಟ ಎಣ್ಣೆ ಅರ್ಧಕುಡಿದು ಮಾಯವಾಗುವ ಮುನ್ನರಕ್ತ ಮಾಂಸಗಳ ಕಿತ್ತುಬರೀ ಮೂಳೆಗಳನೇ ಬಿಟ್ಟ್ಹೋಡುವ ಮುನ್ನ,ಊರಗುಡಿಯೊಳಗೋಗದೆಯೂಸ್ವರ್ಗವನ್ನೇ ಪಡೆದ ಕಾರಣ,ಊರಿಂದಿನ ಗುಟ್ಟೆಯಿಂದಿಡಿದುಪಟೇಲರ ತೋಟದವರೆಗಿನಹೊಲವನ್ನು ‘ಹಟ್ಟೆರಸಿಗೆ’ಎಂದು ಈಗಲೂಕರೆಯುವ ಕಾರಣಗಳನುಅವರ ಬಾಯಿಂದಲೇಕೇಳೋಣ ಬನ್ನಿ… ಬನ್ನಿ ಬನ್ನಿ ಬೇಗ ಬನ್ನಿಹೆಬ್ಬೆಟ್ಟೊತ್ತಿ, ಆಣೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕವಿತೆ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ಪ್ರಶಾಂತ್ ಬೆಳತೂರು ಅವರ ಕವಿತೆ

ಅಷ್ಟಾವಂಕನ ಸ್ವಗತ ಒಮ್ಮೊಮ್ಮೆಸಮುದ್ರವು ಮೇರೆ ಮೀರುತ್ತದೆತಪ್ಪೇನಿಲ್ಲ.. !ಒಳಗಿನ ಕುದಿ ಹೆಚ್ಚಾದಾಗಹಿಟ್ಟಿನಿಂದ ಮಾಡಿದಕೋಳಿ ಕೂಡಬೆಂತರದಂತೆ ಅರುಚುತ್ತದೆ.. !ನಾನೋಕುರೂಪಿ ಅಷ್ಟಾವಂಕಮೈಯ ಗಾಯಗಳುಕೀವು ತುಂಬಿ ಸೋರುವಾಗಬಾಧೆ ತಾಳಲಾರದೆನಡು ಹಗಲಿಗೆ ನಗ್ನಗೊಂಡವನು.. ! ದಾಟಲಾರೆನುಅರಸು ಮಹಾಶಯರಂತೆಗೊಡ್ಡು ಇತಿಹಾಸದ ಹೆಗಲೇರಿಗೊತ್ತು ಗುರಿಯಿಲ್ಲದೆನಿರ್ಜೀವ ಸರಕಿನಂತೆವಿನಾಕಾರಣ ಸಾಗಲಾರೆಪ್ರೇಮಕಾಮವಿರದಸತ್ವಹೀನ ಮುಂದಿನಒಣ ಜನ್ಮಾಂತರಗಳಿಗೆ.. ! ಆಗಾಗಿಯೇಒಳ ಹೊರಗಿನ ಹಂಗಿಲ್ಲದೆನೋವು ಕಾವುಗಳ ನುಡಿಸುತ್ತೇನೆಅವಳಿಗಾಗಿ ಹಾಡುತ್ತೇನೆಸಿಗಲಾರಳು ಅಷ್ಟು ಸುಲಭಕೆಮೈಮನಗಳ ಮರೆಸುವ ವಿಷಕನ್ಯೆಆದರೂ ಮಾವಟಿಗ ನಾನುಪಳಗಿಸುವುದರಲ್ಲಿ ನಿಸ್ಸೀಮ.. ! ಅವಳರಮನೆಯ ಅಂತಃಪುರದಲ್ಲಿಬಣ್ಣಹೀನವಾದನಟ್ಟಿರುಳಗಳ ಏಕಾಂತಕ್ಕೆಪ್ರೇಮರಾಗವಿಡಿದು ಮೀಟುತ್ತೇನೆಹೃದಯದ ಕದ ತಟ್ಟುವರಮ್ಯತೆಯ ಸಂಗೀತ ಸ್ಪರ್ಶಗಳಲ್ಲಿಸಪ್ತಸ್ವರಗಳೆದ್ದು ನರ್ತಿಸಿಅವಳ ತುಂಬು ಅಂಗಾಂಗಳನ್ನುಬಾಧಿಸುವಾಗವೇದನೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕವಿತೆ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಸವಿರಾಜ್ ಆನಂದೂರು ಅವರ ಕವಿತೆ

ಏಸುವಿನ ಬೊಂಬೆ ಕಳೆದ ವರ್ಷದ ಜಾತ್ರೆಯಲ್ಲಿ ಮಗಳಿಗೊಂದು ಕ್ರಿಸ್ತನ ಬೊಂಬೆ ಕೊಡಿಸಿದ್ದೆ ಮಕ್ಕಳ ಮುತುವರ್ಜಿ ನಿಮಗೇ ಗೊತ್ತಲ್ಲತಿಂಗಳು ಕಳೆಯಲಿಲ್ಲ, ಕ್ರಿಸ್ತನ ಶಿಲುಬೆ ಮುರಿಯಿತುಅರ್ಧ ದಿನ ಅತ್ತಳು, ಮತ್ತೆಬುದ್ಧನ ಬೊಂಬೆಯ ಬೋಧಿಮರ ಮುರಿದುಏಸುವಿನ ಬೆನ್ನಿಗೆ ಮೆತ್ತಿದಳು. ಮರುವಾರ ಕ್ರಿಸ್ತನ ಕಾಲಿಗೆ ಜಡಿದಿದ್ದ ಮೊಳೆಗಳು ಸಡಿಲವಾದವುಮಾಡ್ತೀನಿ ಇದ್ಕೆ ಅಂದವಳೇ ವಿವೇಕಾನಂದರ ಕ್ಯಾಲೆಂಡರಿನಮೊಳೆ ಕಿತ್ತು ಕ್ರಿಸ್ತನ ಕಾಲಿಗೆ ಕೂಡಿಸಿದಳು. ಇನ್ನೊಮ್ಮೆ ಬೊಂಬೆಯ ತುಂಡುಬಟ್ಟೆ ಹರಿಯಿತುಅರೆರೇ! ಗಾಂಧಿತಾತನ ಲಂಗೋಟಿ ಹರಿದುಏಸುವಿನ ಮಾನ ಮುಚ್ಚಿದಳು. ಈಗ ಷೋಕೇಸಿನ ಒಂದೊಂದು ಬೊಂಬೆಯಒಂದೊಂದು ಅಂಗ ಮುರಿದಿದ್ದಾಳೆಎಲ್ಲವೂ ಏಸುವಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕವಿತೆ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ

ಕೊಳಲ ಹಿಡಿದ ಕೃಷ್ಣ…. ಅಮ್ಮ ಮೆಕ್ಕೆಜೋಳದ ಸೆಪ್ಪೆತೊಗರಿ ಕುಳೆಎಳ್ಳು ಕಡ್ಡಿ ಆರಿಸಿ ಸಿಂಬೆ ಇಲ್ಲದ ತಲೆ ಮೇಲೆಹೊತ್ತು ತರುವಾಗೆಲ್ಲಾಅಮ್ಮ ಮತ್ತು ರೊಟ್ಟಿ ಕಣ್ಣೆದುರಿನ ಸೂರ್ಯ ರೊಟ್ಟಿ ಕೊಟ್ರೆ ಕುದಿಗೆಸಿಲವಾರದ ಪಾತ್ರೆಯಿಟ್ಟುನಾ ತಂದ ಬೀಳು ಹೊಲದಸಂಜೀವಿನಿ ಕಡ್ಡಿಗಳು ಒಲೆಗಿಕ್ಕಿ ಅಮ್ಮಊದುವಾಗ ಮರೆತ ಮಗ್ಗಿ ಬಾಯಿಗೆ ಬಂದಷ್ಟೇ ಖುಷಿ ತೆಳು ಕಬ್ಬಿಣದ ಕೊಳವೆ ಅದು,ಅಮ್ಮನ ತುಟಿ ತಾಗಿಎದೆಯ ಒಲವೆಲ್ಲಾ ಒಟ್ಟು ಹಾಕಿ ಊದುತ್ತಿದ್ದರೆಒಲೆ ತುಂಬಾ ಬೆಳಕು ; ಅಮ್ಮ ಥೇಟ್ ಕೊಳಲ ಹಿಡಿದ ಕೃಷ್ಣ ಅಮ್ಮನ ಮನಸ ಬಿಳಿಜ್ವಾಳದ ಹಿಟ್ಟಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕವಿತೆ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ನಳಿನ ಬಾಲು ಅವರ ಕವಿತೆ

ಕೆಂಪು ಕೆಂಪಾದ ಆ ದಿನ ಮರೆಯಲಾರೆನು ಇನ್ನೂಹಚ್ಚ ಹಸಿರಾಗಿದೆ ಅದರ ನೆನಪು.ಅಯ್ಯೋ ಮನೆಯೆಲ್ಲ ಮೈಲಿಗೆಯಾಯಿತು,ಶಾಲೆಯಿಂದ ಬಂದವಳಿಗೆ ಹಿರಿಯರ ವಟವಟ. ಅರ್ಥವಾಗದೆ ನೋಡಿದೆ ಅಮ್ಮನ ಮುಖವ,ಓಡಿ ಬಂದು ತಬ್ಬಿದಳು ಅರಿವು ಮೂಡಿಸುತ.ಮುಂಜಾನೆಯ ಮೂಡಣದ ದಿನಕರ ಕೆಂಪಾಗುವನಲ್ಲ ಅವನಿಗೂ ಉಂಟೆ ಮೈಲಿಗೆಯ ತಟವಟ? ಅಯ್ಯೋ ಅದನ್ನು ಯಾಕೆ ಮುಟ್ಟಿಸಿಕೊಂಡ್ಯೇ..ದೊಡ್ಡವಳವಳು ನಿಭಾಯಿಸಲಿ ಬಿಡು,ಅಜ್ಜಿಯ ಆಜ್ಞೆಯಂತಹ ಸಲಹೆ,ಅಮ್ಮನ ಕಣ್ಣಲ್ಲಿ ಕಂಡೂ ಕಾಣದಂತಹ ಹತಾಶೆ. ನನ್ನಣ್ಣ ಒಂದು ವರ್ಷ ಹಿರಿಯ,ಅವ ಚಿಕ್ಕವನಂತೆ, ಅದು ಹೇಗೆನಾನು ಮಾತ್ರ ದೊಡ್ಡವಳಾದೆ? ಯಾರನ್ನು ಪ್ರಶ್ನಿಸಲಿ?ಅಮ್ಮನ ತುಂಬಿದ ಕಂಗಳ ಕಂಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕವಿತೆ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅವರ ಕವಿತೆ

ದೀಪ ಹಚ್ಚಲು ಕತ್ತಲಾಗಲೇ ಬೇಕುವಸಂತ ಋತುವಿನ ವಿಷುವತ್ ಸಂಕ್ರಾಂತಿಇದುವೇ ಬೆಳಕಿನ ಹಬ್ಬ ಈಸ್ಟರ್ಸಂತ ಯೇಸುವಿನ ಪುನರುತ್ಥಾನದ ಸಂಭ್ರಮ. ದಾಸ್ಯತ್ವದ ಸಂಕೋಲೆಯಿಂದದೀನದಲಿತ ದುರ್ಬಲರನ್ನುಮುಕ್ತಗೊಳಿಸಲು ಓ ಮಹಾಸಂತನೆನೀನು ಏರಿದ್ದು ಅಧಿಕದ ಸಾವಿನ ಶೂಲ. ಅಂದು ಸಾವಿನ ಸೋಲಿನ ದಿನಕೆಂಡದ ಪಾತ್ರೆಯ ಜ್ವಾಲೆಯಲಿಹಚ್ಚಿಟ್ಟ ದೀಪ ನಿನ್ನ ಪ್ರೀತಿ, ದಯೆ,ಕರುಣೆಯಾಗಿ ಸದಾ ಬೆಳಗುತ್ತಿದೆ. ಕೇವಲ 30 ಬೆಳ್ಳಿ ನಾಣ್ಯಗಳ ಆಶೆಯಿಂದನಿನ್ನ ಪರಮ ಶಿಷ್ಯ ಯೂದನು ಮಾಡಿದಗುರು ದ್ರೋಹಕ್ಕೆ ಕೋಡಿಯಾಗಿಹರಿದುದು ರಕ್ತ ಕಣ್ಣೀರು. ನಿನ್ನ ಕೊನೆಯ ಔತಣಕೂಟದವಿಷದ ಬಟ್ಟಲವು ಕೂಡ ತುಂಬಿದ್ದುಪವಿತ್ರ ದೇಹದ ರಕ್ತ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕವಿತೆ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಮಧು ಕಾರಗಿ ಅವರ ಕವಿತೆ

ವ್ಯಾಖ್ಯಾನ! ಹಬೆಯೇಳುವ ಕಾಫಿಯನ್ನುಸುರಿದುಕೊಂಡು ಬಟ್ಟಲಿಗೆ ಮುತ್ತಿಡುತ್ತಾರೆದೃಷ್ಟಿಯನ್ನು ಕಣ್ಣಿಂದ ಕಣ್ಣಿಗೆ ನೆಟ್ಟುಈ ಏಕಾಂತದ ಸಂಜೆಗಳುಮತ್ತಷ್ಟು ಸುಂದರಗೊಳ್ಳುವುದೇ ಆಗ ! ಮಾತುಗಳು ಬೇಕಾಗಿಲ್ಲ ಅವರಿಗೆಬೇಕಂತಲೇ ಬಿಟ್ಟಿರುವಾಗಮತ್ತುಕಣ್ಣ ಸನ್ನೆಗಳೊಂದಿಗೆ ಶಬುಧಗಳಾಗುವಅಸಂಖ್ಯಾತ ಮಾತುಗಳನ್ನುಪ್ರೇಮಿಯಲ್ಲದೆಜಗದ ಯಾವ ಗೋಡೆಯೂಕೇಳಿಸಿಕೊಳ್ಳಲಾಗುವುದಿಲ್ಲ! ಒಂದು ಹಿತವಾದ ಸ್ಪರ್ಶಸರ್ವಕಾಲಕ್ಕೂ ಮಡಿಲಾಗುವ ಹೆಗಲುಎದೆಯ ಮೇಲೆ ಕಿವಿಯಿಟ್ಟರೆತನ್ನದೇ ಹೆಸರನ್ನು ಪಿಸುಗುಡುವಪ್ರಾಮಾಣಿಕ ಹೃದಯಜೀವನವನ್ನು ನಿಶ್ಚಿಂತೆಯಿಂದ ಜೀವಿಸಲುನನಗಿಷ್ಟು ಸಾಕೆಂದುಪ್ರೇಮಿಯೊಬ್ಬ ನಿರ್ಧರಿಸಿದ ಆ ಘಳಿಗೆಗೆದೇವಾನುದೇವತೆಗಳು ಅನುಗ್ರಹಿಸುತ್ತಾರೋ ಇಲ್ಲವೋ ಗೊತ್ತಿಲ್ಲ ! ಆದರೆ,ಅರ್ಧಕುಡಿದು ಬದಲಾಯಿಸಿಕೊಂಡಕಾಪಿ ಬಟ್ಟಲುಗಳು…ಅವಳು ಹಚ್ಚಲೆಂದೇ ಮೈಮೇಲಿನಶರಟಿನಿಂದ ಕಿತ್ತುಕೊಂಡ ಗುಂಡಿಗಳು..ಕಣ್ಣಿಗೆ ಕಸ ಬಿದ್ದ ಸುಂದರ ಸುಳ್ಳುಉಫ್ ಎಂದು ಊದುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕವಿತೆ ಸ್ಪರ್ಧೆ-2024 ಫಲಿತಾಂಶ

ಪಂಜು ಅಂತರ್ಜಾಲ ಪತ್ರಿಕೆ ಏರ್ಪಡಿಸಿದ್ದ 2024ನೇ ಸಾಲಿನ ಕವಿತೆ ಸ್ಪರ್ಧೆಯಲ್ಲಿ ಒಟ್ಟು 188 ಕವಿಗಳು ಭಾಗವಹಿಸಿದ್ದರು. ಪ್ರಸಿದ್ಧ ಕವಿಗಳಾದ ಸವಿತಾ ನಾಗಭೂಷಣ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಪಂಜು ಕವಿತೆ ಸ್ಪರ್ಧೆಯಲ್ಲಿ ವಿಜೇತರಾದವರು:೧. ಪ್ರಥಮ ಬಹುಮಾನ: ಗುಜರಿ ಅಂಗಡಿಯ ಪುಸ್ತಕ (ಶರಣಗೌಡ ಬಿ ಪಾಟೀಲ ತಿಳಗೂಳ)೨. ದ್ವಿತೀಯ ಬಹುಮಾನ: ಮಾರ ನವಮಿ (ಲಿಂಗರಾಜು ಕೆ.)೩. ತೃತೀಯ ಬಹುಮಾನ: ಅಷ್ಟಾವಂಕನ ಸ್ವಗತ (ಪ್ರಶಾಂತ್ ಬೆಳತೂರು) ಸಮಾಧಾನಕರ ಬಹುಮಾನ ವಿಜೇತರು:೧. ಏಸುವಿನ ಗೊಂಬೆ (ಸವಿರಾಜ್ ಆನಂದೂರು)೨. ಕೊಳಲ ಹಿಡಿದ ಕೃಷ್ಣ.. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕವಿತೆ ಸ್ಪರ್ಧೆ 2024 ರ ಅಂತಿಮ‌ ಸುತ್ತಿಗೆ‌ ಆಯ್ಕೆಯಾದ ೫೦ ಕವಿಗಳ ಪಟ್ಟಿ

2024 ರ‌ ಪಂಜು ಕವಿತೆ ಸ್ಪರ್ಧೆಗೆ ಒಟ್ಟು 188 ಕವಿತೆಗಳು ಬಂದಿದ್ದು, ಆ ಪೈಕಿ 50 ಕವಿತೆಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ. ಈ ಸ್ಪರ್ಧೆಯ ಅಂತಿಮ‌ ಸುತ್ತಿಗೆ‌ ಆಯ್ಕೆಯಾದ ೫೦ ಕವಿಗಳ ಹೆಸರುಗಳು ಈ ಕೆಳಗಿನಂತಿವೆ… ೧. ಚೇತನ್ ದೊಡ್ಡಯ್ಯ೨. ಡಾ. ಗುರುಸಿದ್ಧಯ್ಯಾ ಸ್ವಾಮಿ೩. ಮೋದೂರು ತೇಜ೪. ಲಿಂಗರಾಜು ಕೆ.೫. ನಿರಂಜನ ಕೇಶವ ನಾಯಕ೬. ಮಧು ಕಾರಗಿ೭. ನಾಗರಾಜ ಜಿ. ಎನ್. ಬಾಡ೮. ಶರಣಗೌಡ ಬಿ ಪಾಟೀಲ ತಿಳಗೂಳ.೯. ಅಶ್ಫಾಕ್ ಪೀರಜಾದೆ೧೦. ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ೧೧. ಮಂಜುನಾಥ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾರ್. ಪ್ಲೀಸ್ ಸಹಾಯ ಮಾಡಿ … !!!!!!!!!: ನಾಗಸಿಂಹ ಜಿ ರಾವ್

( ಈ ಘಟನೆಯನ್ನು ಘಟನೆಯ ಪ್ರಮುಖ ವ್ಯಕ್ತಿಯ ಅನುಮತಿ ಪಡೆದು ಬರೆಯಲಾಗಿದೆ.. ಗೋಪ್ಯತೆಯ ಉದ್ದೇಶದಿಂದ ಹೆಸರುಗಳನ್ನು ಬದಲಿಸಿ ಬರೆದಿದ್ದೇನೆ ) ಸಾಮಾನ್ಯವಾಗಿ ನಾನು ಹೆಸರಿಲ್ಲದೆ ಬರಿ ನಂಬರ್ ಬರುವ ಕರೆಗಳನ್ನ ಬೇಗ ತೆಗೆಯೊಲ್ಲ. ನನ್ನ ಮೊಬೈಲ್ ನಂಬರ್ ಪದೇ ಪದೇ ಪತ್ರಿಕೆಗಳಲ್ಲಿ, ಟಿವಿ ನಲ್ಲಿ ಬಂದು ಸುಮ್ಮನೆ ಕರೆ ಮಾಡುವವರ ಸಂಖ್ಯೆ ಜಾಸ್ತಿ. ಇದು ಏನು ? ಯಾಕೆ ಸಹಾಯ ಮಾಡ್ತೀರಾ ? ಅನ್ನೂ ಪ್ರಶ್ನೆಗಳೇ.. ಅದಕ್ಕೆ ನಾನು ಹೆಸರಿಲ್ಲದೆ ಬರುವ ಕರೆ ಸ್ವೀಕಾರ ಮಾಡಲ್ಲ. ಆದ್ರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆಹಾರವೇ ವಿಷವಾಗಿ, ವಿಷವೇ ಆಹಾರವಾಗಿರುವ ಈ ಕಾಲಘಟ್ಟದಲ್ಲಿ…: ಚಂಸು ಪಾಟೀಲ

ಮನುಷ್ಯ ಆಕಾಶದಲ್ಲಿ ಹಕ್ಕಿಯಂತೆ ಹಾರಬಲ್ಲ, ನೀರಿನಲ್ಲಿ ಮೀನಿನಂತೆ ಈಜಬಲ್ಲ; ಆದರೆ, ಮನುಷ್ಯ ಮನುಷ್ಯನಂತೆ ಭೂಮಿಯ ಮೇಲೆ ಬದುಕುವುದನ್ನು ಕಲಿಯಲಿಲ್ಲ. ಎಂದುಡಾ. ರಾಧಾಕೃಷ್ಣನ್ ರು ಹೇಳಿದ ಮಾತು ನನಗಿಲ್ಲಿ ನೆನಪಾಗ್ತಾ ಇದೆ. ನಮ್ಮ ಹಿರಿಯರು ಎಷ್ಟು ಗಟ್ಟಿಮುಟ್ಟಾಗಿದ್ದರು, ದೀರ್ಘಾಯುಷಿಗಳಾಗಿದ್ದರು. ಬೇಸಿಗೆಯಿಂದ ಹಿಡಿದು ಮಾಗಿಯವರೆಗೂ ನಿರಂತರ ಎಷ್ಟೊಂದು ಕೃಷಿ ಚಟುವಟಿಕೆಗಳನ್ನು ನಿಭಾಯಿಸುತ್ತಿದ್ದರು. ನೀರಾವರಿ ಇಲ್ಲದ ಕಾಲದಲ್ಲಿ ಕೇವಲ ಮಳೆಯನ್ನೇ ನೆಚ್ಚಿ ಬೆಳೆದರು.ಟ್ರ್ಯಾಕ್ಟರ್ಗಳಿಲ್ಲದಾಗ ಬರಿ ಎತ್ತುಗಳನ್ನು ಹೂಡಿಯೆ ಹೊಲ ಉಳುಮೆ ಮಾಡಿದರು. ಒಕ್ಕುವ ಯಂತ್ರಗಳೇ ಇಲ್ಲದ ಸಂದರ್ಭದಲ್ಲಿ ಖಣದಲ್ಲಿ ತಿಂಗಳುಗಟ್ಟಲೇ ತೂರಿ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವಿತೆಗಳು: ಮಂಜುನಾಥ ಚಿನಕುಂಟಿ

ವಿಷಾದ ದುಡಿಯುವುದಕ್ಕೆ ನೂರಾರು ದಾರಿಆಯ್ಕೆ ಯಾರದ್ದು ನಮ್ಮದಇಲ್ಲ ನಮ್ಮ ಓದಿನದ್ದ ಈಗಲೂಗೊಂದಲವಿದೆ ಯಾರನ್ನ ಕೇಳಲಿಕೇಳಿದರೆ ತಿಳಿದರು ಕೇಳಿದೆಎಂಬುವ ವಿಷಾದ ಕುಳಿತಲ್ಲಿ ಕುಳಿತು ಗಣಕಯಂತ್ರವನ್ನುಕುಟ್ಟುತ್ತ ನನ್ನನ್ನ ನಾನು ಮರೆತಿದ್ದೆಕೆಲಸ ಮುಖ್ಯವ ನೆಮ್ಮದಿ ಮುಖ್ಯವಮತ್ತೊಂದು ಪ್ರೆಶ್ನೆ ನಿದ್ದೆಯೆ ನನ್ನಮನಸನ್ನ ಕೇಳಿತು ಅದಕ್ಕೂಉತ್ತರಿಸುವುದಕ್ಕೂ ವಿಷಾದ ಬರಿ ದೂರುಗಳೇ ಅವರ ಮೇಲೆಇವರು ಇವರ ಮೇಲೆ ಅವರು ಯಾರದ್ದು ಸರಿದೂರು ಕೊಟ್ಟಿದ್ದಅದಕ್ಕೆ ತಕ್ಕ ಹಾಗೆಕಾರಣಗಳು ಹೇಳಿದ್ದ ಇದಕ್ಕೂ ತೆಲೆಕೆಡುವ ಗುದ್ದಾಟಗಳು ಟಾರ್ಗೆಟ್ ಎಂಬ ಕೊಂಡಿಗೆ ನೇತುಬಿದ್ದು ತೂಗಾಡುತ್ತಿದ್ದೇವೆಅದೂ ಎಲ್ಲರಿಗೂ ತಿಳಿದಿದೆಅದಕ್ಕೆ ಕಾರಣ ಹಣವೆಂಬಪೆಡಂಭೂತಆಗೆ ನೋಡಿದರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕತ್ತಲ ಲೋಕದಲ್ಲಿ ಜರುಗುವ ನಿಕೃಷ್ಠ ಕಣ್ಕಟ್ಟುಗಳನ್ನು ತೆರೆದಿಡುವ ಸೃಜನಶೀಲ ಕಥೆಗಳು: ಎಂ.ಜವರಾಜ್

ಕನ್ನಡದ ಹಿರಿಯ ಕಥೆಗಾರ್ತಿ ಬಿ.ಟಿ. ಜಾಹ್ನವಿ ಅವರಿಗೆ, ಈಚೆಗೆ ಕೌದಿ ಪ್ರಕಾಶನ ಹೊರ ತಂದಿರುವ ನಿಮ್ಮ ಸಮಗ್ರ ಕಥೆಗಳ ಸಂಕಲನ “ಒಬ್ರು ಸುದ್ಯಾಕೆ… ಒಬ್ರು ಗದ್ಲ್ಯಾಕೆ…” ಕೃತಿ ಓದಿದೆ. ಈ ಸಂಕಲನದಲ್ಲಿ ಒಟ್ಟು ಇಪ್ಪತ್ತೊಂಭತ್ತು ಕಥೆಗಳಿವೆ. ಇಲ್ಲಿನ ಅರ್ಧದಷ್ಟು ಕಥೆಗಳನ್ನು ಈಗಾಗಲೇ ಪುಸ್ತಕ ರೂಪ ಹೊರತು ಪಡಿಸಿ ಕೆಲ ಪತ್ರಿಕೆಗಳಲ್ಲಿ ಬಹು ಹಿಂದೆಯೇ ಬಿಡಿಬಿಡಿಯಾಗಿ ಓದಿದ್ದೇನೆ. ಈಗ ಎಲ್ಲ ಕಥೆಗಳನ್ನು ಒಟ್ಟಿಗೆ ಇಟ್ಟುಕೊಂಡು ಇಲ್ಲಿನ ಒಂದೊಂದೇ ಕಥೆ ಓದುತ್ತಾ ಹೋದಂತೆ ಓದಿದ ಕಥೆಗಳ ವಿವರಗಳು ಭಾಗಶಃ ನೆನಪಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಳಿಯಲ್ಲೊಂದು ಬೆಳಕು ….. !!!!!: ನಾಗಸಿಂಹ ಜಿ ರಾವ್

ಯಪ್ಪಾ.. ಬೆಂಗಳೂರಿನ ಚಳಿಯನ್ನೇ ತಡೆಯೋಕೇ ಆಗ್ತಾ ಇಲ್ಲಾ.. ಇನ್ನು ದೆಹಲಿ, ಹಿಮಾಲಯ ಅಲ್ಲಿನ ಚಳಿ ನನ್ನ ಊಹೆಗೂ ಮೀರಿದ್ದು. ಚಳಿ ಅಂದ್ರೆ ಬೀರು ಒಳಗಿದ್ದ ಶಾಲು, ಸ್ವೆಟರ್ ಎಲ್ಲಾ ಹೊರಕ್ಕೆ ಬರುತ್ತೆ, ದೇಹವನ್ನ ಬೆಚ್ಚಗೆ ಇಟ್ಟುಕೊಳ್ಳೋಕೆ ಹಲವಾರು ಕಸರತ್ತು ಮಾಡುತ್ತೇವೆ. ಬಿಸಿ ಬಿಸಿ ಕಾಫಿ, ಬಿಸಿ ಬಜ್ಜಿ ಬೋಂಡಾ ಹಲವಾರು ತೆರನಾದ ತಿಂಡಿ, ಮನೆಯ ವಾತಾವರಣವೇ ಬದಲಾಗಿ ಹೋಗುತ್ತದೆ. ಮನಶಾಸ್ತ್ರದ ಒಂದು ಅಂಶದ ಪ್ರಕಾರ ‘ಚಳಿಯಲ್ಲಿ ನಮ್ಮ ಯೋಚನೆ ಸಂಕುಚಿತವಾಗುತ್ತದೆ, ವಿಶಾಲವಾಗಿ ಯೋಚಿಸುವುದನ್ನು ನಿಲ್ಲಿಸಿಬಿಡುತ್ತೇವೆ’. ಇದು ನಿಜ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪದ್ದಕ್ಕಜ್ಜಿ ಭಜನಾ ಮಂಡಳಿಯ ವಿಮಾನ ಯಾನ: ಡಾ. ವೃಂದಾ ಸಂಗಮ್

ಇವತ್ತ ನಮ್ಮ ಪದ್ದಕ್ಕಜ್ಜಿ ಹನುಮದ್ ವ್ರತ ಅಂತ ಶ್ರೀ ತಿಪ್ಪಣ್ಣಾರ್ಯರ ಹನುಮದ್ವಿಲಾಸದ ಭಜನಿಗೆ ಹೋಗಿದ್ದರ, ಅವರಿಗೆ ಈಗ ಮೊದಲಿನಂಗ ಒಂದೇ ದಿನ ಮೂರು ತಾಸು ಹನುದ್ವಿಲಾಸ ಹಾಡಿ, ಅದರ ಅರ್ಥದ ಸೊಗಸು ಹೇಳಲಿಕ್ಕಾಗುದಿಲ್ಲ ಅಂತ, ಮೂರು ದಿನದ ಭಜನಿ ಕಾರ್ಯಕ್ರಮ ಇತ್ತು. ಮೊದಲನೇ ದಿನಾನೇ, ಹನುಮಂತ ದೇವರ ವರ್ಣನಾ ಮಾಡಿ, ಸೀತಾ ಮಾತಾ, ಲಂಕಾದಾಗ ಇದ್ದಾಳ ಅನ್ನೂ ತನಾ ಬಂದ ಕೂಡಲೇ ನಿಲ್ಲಿಸಿದ್ದರು.ಎಲ್ಲಾರಿಗೂ ಕುಂಕುಮಾ ಕೊಡೂವಾಗ, ರುಕ್ಮಣೀ ಬಾಯಾರ ಕೈಯಾಗ, ಕುಂಕುಮದ ಭರಣಿ ತಂದಿದ್ದ ಹಾಳಿ ಚೀಲ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತೇಜಸ್ವಿ ಪ್ರತಿಷ್ಠಾನ, ಕೊಟ್ಟಿಗೆಹಾರದಲ್ಲಿ “ಪುಸ್ತಕ ಪರಿಶೆ ಹಾಗು ಸಂವಾದ”

 ಪುಸ್ತಕ ಪರಿಶೆ ಹಾಗು ಸಂವಾದ ಲಿಟ್ರರಿ ನೆಕ್ಸ್ಟ್ 1.0 ನೋಂದಾಣಿ ಶುಲ್ಕ: ₹೫೦೦/- (ವಿದ್ಯಾರ್ಥಿಗಳಿಗೆ ₹೨೫೦/-) ದಿನಾಂಕ: ಡಿಸೆಂಬರ್ 7 ರ ಶನಿವಾರ 2024 ಸಮಯ : ಬೆಳಗ್ಗೆ 9:30 ರಿಂದ ಸಂಜೆ 5:30 ರ ವರೆಗೆ ಸ್ಥಳ : ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಕೊಟ್ಟಿಗೆಹಾರ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಹೆಚ್ಚಿನ ಮಾಹಿತಿಗಾಗಿ: ಪೃಥ್ವಿ ಸೂರಿ 82775 89859 ನಂದೀಶ್ ಬಂಕೇನಹಳ್ಳಿ 96630 98873 ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜ್ವಾಳಾ ಕೊಳ್ಳಾಗ..: ಎಫ್ ಎಂ ನಂದಗಾವ

“ಅಂಕಲ್ ಅಂಕಲ್, ಈ ಕೇಕ್ ಟೇಸ್ಟ್ ಮಾಡಿ ನೋಡ್ರಿ.’’ ನಮ್ಮೂರಾಗ, ಎಲ್ಲಾರೂ ನನ್ನ ಅಜ್ಜಾರ ಅಜ್ಜಾರ ಅಂತಾರ. ಇದ್ಯಾರಪಾ, ಇಲ್ಲ ನನ್ನ ಅಂಕಲ್ ಅಂತ ಕರಿಲಿಕ್ಹತ್ತಾರ? ನಾ ಇಲ್ಲ ಬಂದ ಮ್ಯಾಲ, ಹರೆಯ ಹಿಂದಕ್ಕ ಬರಾಕಹತ್ತದ ಏನೋ? ಮೊನ್ನಿ, ಮಗಾ ತನ್ನ ಕೂದಲಿಗೆ ಬಣ್ಣಾ ಹಚ್ಚೂ ಮುಂದ ನನ್ನ ತಲಿ ಕೂದಲಿಗೂ ಸ್ವಲ್ಪ ಬಣ್ಣ ಬಳಿದಿದ್ದ, ಮೊದಲ ಮುದುಕರು ತದಕರು ಬಣ್ಣಾ ಹಚ್ಚಕೋತಿದ್ದರು. ಈಗ, ಅಲ್ಲೊಂದ ಇಲ್ಲೊಂದ ಬಿಳಿ ಕೂದಲ ಬಂದ ಹರೆದವರ ಬಾಳ ಮಂದಿ ಕರಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪುರುಷರಿಗೂ ಇದೆ ಆಚರಿಸುವ ಒಂದು ಅಂತರ ರಾಷ್ಟ್ರೀಯ ಪುರುಷ ದಿನ: ಚಂದ್ರು ಪಿ ಹಾಸನ್

ಈ ಭೂಮಿಯ ಮೇಲೆ ಜೀವ ರಾಶಿಗಳು ಉದಯವಾಗಬೇಕೆಂದರೆ ಅಲ್ಲಿ ಒಂದು ಗಂಡು ಕುಲ ಮತ್ತೊಂದು ಹೆಣ್ಣು ಕುಲವೆಂಬ ಎರಡು ಸಮಾನ ಗುಂಪುಗಳನ್ನು ಕಾಣಬಹುದಾಗಿದೆ. ಅಲ್ಲಿ ಮುಂದಿನ ಪೀಳಿಗೆಯ ಸೃಷ್ಟಿ ಇವೆರಡರ ಸಮ್ಮಿಲನದಿಂದ ಎಂಬುದು ತಿಳಿದಿರುವ ವಿಷಯವಾಗಿದೆ. ಇಲ್ಲಿ ಸ್ತ್ರೀ ಕುಲವು ಮುಂದಿನ ಪೀಳಿಗೆಯನ್ನು ತನ್ನ ಮಡಿಲಲ್ಲಿ ಸಾಕಿ ಸಲಹಿ ಪ್ರಪಂಚಕ್ಕೆ ಪರಿಚಯಿಸುವ ಒಂದು ಮಹತ್ವವಾದ ನಿಯಮವನ್ನು ಪಾಲಿಸುತ್ತಾ ಈ ಭೂಮಿಯಲ್ಲಿ ಹೊಸ ಹೊಸ ಜೀವಿಗಳ ಉಗಮಕ್ಕೆ ಕಾರಣವಾಗಿದೆ ಎಂಬುದನ್ನು ನಾವು ಪುಸ್ತಕಗಳಲ್ಲಿ ಓದುತ್ತಾ, ಪ್ರಕೃತಿಯನ್ನು ಗಮನಿಸುತ್ತಾ, ತಮ್ಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗಬೇಕು ಎಂಬುದರ ವೈಚಾರಿಕ ಚಿಂತನೆ”: ರವಿತೇಜ.ಎಂ.ಎನ್

ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ ಭಾಷೆ ಒಂದು ಅಮೂಲ್ಯ ಸಾಧನ ಮತ್ತು ಸಂವಹನ ಮಾಧ್ಯಮ. ಇದು ಮಾತು,ಬರಹ ಮತ್ತು ಭಾವಾಭಿವ್ಯಕ್ತತೆ ರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ.ಭಾಷೆಗೆ ರೂಪ, ಆಕಾರ, ಭೌತಿಕ ಅಥವಾ ರಚನಾತ್ಮಕ ಗುಣಗಳೇನೂ ಇಲ್ಲ. ಇದು ಪ್ರಾದೇಶಿಕವಾಗಿ ಜನಜೀವನದ ನಿತ್ಯ ವ್ಯವಹಾರದ ಸನ್ನಿವೇಶವನ್ನು ಅರ್ಥೈಸುವ ಹೊಂದಾಣಿಕೆ ಕೆಲಸವನ್ನು ಪ್ರಾತಿನಿಧಿಕವಾಗಿ ನಿರ್ವಹಿಸುವ ಮಾಧ್ಯಮವಾಗಿರುತ್ತದೆ. ಮಾನವನಗಿರುವ ಚಿಂತಿಸುವ, ಪರಿಭಾವಿಸುವ , ಸದಾ ಚೈತನ್ಯದಾಯಕದಿಂದ ಮೌಖಿಕವಾಗಿ ಸ್ಪಂದಿಸುವ , ಪ್ರತಿಕ್ರಿಯಿಸುವ ಬೌದ್ಧಿಕ ಶಕ್ತಿಯೇ ಭಾಷೆಗೆ ಮೂಲ ಹಿನ್ನೆಲೆಯಾಗಿದೆ.ಈ ಪ್ರಕ್ರಿಯೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವಿತೆಗಳು: ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಕಲ್ಲು ಒಂದುಕಲ್ಲುಒಂಟಿಯಾಗಿ ಬಿದ್ದಿತ್ತುನೆಲದ ಮೇಲೆಮಳೆ ಬಿಸಿಲು ಚಳಿಎಲ್ಲವನ್ನೂಕಂಡಿದ್ದಅದರಅಂತರಂಗದಲ್ಲಿದ್ದಬುದ್ಧಿವಂತಿಕೆಯಅರಿವುಯಾರಿಗೂಇರಲಿಲ್ಲ ಹಿಂದೆನಡೆದದ್ದೆಲ್ಲಕ್ಕೂಸಾಕ್ಷಿಯಾಗಿತ್ತು ಆ ಕಲ್ಲುಭೂಮಿ ಹುಟ್ಟಿದ್ದನ್ನುಅದುಕಂಡಿತ್ತುಬೆತ್ತಲೆಯಾಗಿ ಹುಟ್ಟಿದಮನುಷ್ಯಜಾತಿಧರ್ಮಭಾಷೆ ದೇಶಗಳೆಂಬಕವಲು ಕವಲುಗಳಲ್ಲಿದಿಕ್ಕಾಪಾಲಾಗಿ ಚಲಿಸಿಕಾಮ ಕ್ರೋಧಮದ ಮತ್ಸರಗಳನ್ನುಎದೆಯೊಳಗೆ ತುಂಬಿಕೊಂಡಬಗೆ ಅದಕ್ಕೆ ತಿಳಿದಿತ್ತುಸಾಮ್ರಾಜ್ಯಗಳುಉದಯವಾದದ್ದನ್ನುಪತನಗೊಂಡದ್ದನ್ನುಅದು ನೋಡಿತ್ತು ಹೊಮ್ಮಿದ ನಗುಚಿಮ್ಮಿದಕಣ್ಣೀರುಎಲ್ಲದರ ಲೆಕ್ಕವೂಅದರ ಬಳಿಯಿತ್ತು ಆದರೆಕಲ್ಲಿಗೆಬಾಯಿ ಇರಲಿಲ್ಲಕಂಡದ್ದನ್ನು ಹೇಳುವುದಕ್ಕಾಗದಸಹಜತೆಯೇದುರ್ಬಲತೆಯಾಗಿಅದನ್ನು ತೆಪ್ಪಗಾಗಿಸಿತ್ತುಏನೂ ತಿಳಿಯದಪಾಮರನಂತೆಬಿದ್ದುಕೊಂಡಿತ್ತುನೆಲವನ್ನಪ್ಪಿಕೊಂಡು ಹೀಗಿರುವಾಗಲೇಬೊಬ್ಬೆ ಹೊಡೆಯುತ್ತಾಬಂದಗುಂಪೊಂದುಎತ್ತಿಅದನ್ನುಬೀಸಿದರು ಎದುರು ದಿಕ್ಕಿಗೆಹಣೆಯೊಂದರಲ್ಲಿಚಿಮ್ಮಿದರಕ್ತಇದರ ಮೈಮೇಲೂ ಹರಿಯಿತುಬಡಿಯಿರಿ! ಕೊಲ್ಲಿ!ಕೇಳಿಬರುತ್ತಿದ್ದ ಬೊಬ್ಬೆಗೆವಿರಾಮವೇಇರಲಿಲ್ಲ ಕಲ್ಲು ಸಾಕ್ಷಿಯಾಗತೊಡಗಿತು ಈಗಹೊಸತೊಂದು ವಿದ್ಯಮಾನಕ್ಕೆತಾನು ಬಯಸದ ವಿದ್ಯಮಾನಕ್ಕೆ ಮರದಿಂದ ಮೂರ್ತಗೊಂಡದೇವರಿಗೆ… ನೀನೇ ರೂಪಿಸಿದ ಮಳೆನೀನೇ ಸೃಜಿಸಿದ ಚಳಿಗಾಳಿಸೋಕದಂತೆ ನಿನ್ನರಕ್ಷಿಸುವ ಭಾರ ನಮ್ಮದುನಮ್ಮೊಳಗಿನ ಭಕ್ತಿಭಾವಹೊದಿಕೆಯಾಗಿ ಆವರಿಸಿದೆಒಂದಷ್ಟು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಮಸ್ಯೆ ಸಣ್ಣದೇ.. ಆದ್ರೂ …… !!!!!!: ನಾಗಸಿಂಹ ಜಿ ರಾವ್

ಸಮಸ್ಯೆ ಸಣ್ಣದೇ. . ಆದ್ರೂ. . . . . . !!!!!! (ಮಕ್ಕಳ ಹಿತದೃಷ್ಟಿ ಇಂದ ಹೆಸರು, ಸ್ಥಳಗಳನ್ನು ಬದಲಿಸಲಾಗಿದೆ ) ” ಕ್ರಿಕೆಟ್ ನೋಡಿದ್ದು ಸಾಕು. . ರಿಮೋಟ್ ಕೊಡು, ಅಂತ ರೇಗಿದೆ ಸಾರ್. ರಿಮೋಟನ್ನ ಬಿಸಾಕಿ ಮನೆಯಿಂದ ಆಚೆ ಹೋದೋನು ಒಂದುವರುಷ ಆದ್ರೂ ಮನೆಗೆ ಬಂದಿಲ್ಲ, ಪೊಲೀಸ್ ಕಂಪ್ಲೇಂಟ್ ಕೊಟ್ವಿ ಏನೂ ಉಪಯೋಗ ಆಗಿಲ್ಲ ಸಾರ್. . ” ಮಗನನ್ನ ಕಳೆದುಕೊಂಡ ದಂಪತಿಗಳು ನನ್ನ ಎದುರಿಗೆ ಕುಳಿತ್ತಿದ್ದರು, ಅವರಿಗೆ ಸಮಾಧಾನ ಮಾಡೋಕೆ ನನ್ನಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನವೆಂಬರ್ ಮಕ್ಕಳ ಮಾಸ !!!!!!!!!: ನಾಗಸಿಂಹ ಜಿ ರಾವ್

‘ಕನ್ನಡ ಮಾತೆಗೆ ಜೈ , ಜೈ ಭುವನೇಶ್ವರಿ ” ಈ ಘೋಷಣೆಗಳು ನವೆಂಬರ್ ತಿಂಗಳ ಪ್ರತಿದಿನ ಕೇಳುತ್ತಿರುತ್ತವೆ . ಕನ್ನಡ ಭಾಷೆ ಕುರಿತಾಗಿ ಯಾವುದಾದರೂ ಒಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ . ನಮ್ಮ ರಾಜ್ಯಗಳು ಭಾಷೆಯನ್ನು ಆಧರಿಸಿ ವಿಂಗಡಣೆಯಾದರೂ ಕರ್ನಾಟಕ ಎಂದು ಹೆಮ್ಮೆ ಪಡುವನಾಡು ಇಷ್ಟು ವರುಷದಲ್ಲಿ ಎಷ್ಟು ಪ್ರಗತಿ ಸಾಧಿಸಿದೆ ? ಮಾನವ ಹಕ್ಕುಗಳು , ಮಕ್ಕಳ ಹಕ್ಕುಗಳು , ಮಹಿಳೆಯರ ಹಕ್ಕುಗಳು ಹೇಗೆ ಜಾರಿಯಾಗಿದೆ ಹಾಗೂ ರಕ್ಷಿಸಲ್ ಪಡುತ್ತಿವೆ ಎಂಬ ವಿಚಾರಡಾ ಬಗ್ಗೆ ವರುಷಕ್ಕೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಧರಣಿಆಕಾಶ ನೋಡಿ ಮಳೆಯಾಗಲ್ಲಿಲ್ಲಎಂದು ಮುನಿಸಿಕೊಂಡರೇನುಪ್ರಯೋಜನ, ಮರ ಕಡಿದವನುನೀನಲ್ಲವೇ ಬತ್ತಿ ಹೋದ ಕೆರೆಯ ನೋಡಿಕಣ್ಣೀರು ಹಾಕಿದರೇನುಪ್ರಯೋಜನ, ಎರಡು ಹನಿಯಿಂದಬೊಗಸೆಯೂ ತುಂಬುವುದಿಲ್ಲ ಬಿರುಕು ಬಿಟ್ಟಿದೆ ಎಂದುಬೊಬ್ಬೆಹೊಡೆದರೇನುಪ್ರಯೋಜನ, ಬೆಂದ ಭೂಮಿಯುಎಷ್ಟು ನೊಂದಿರಬೇಕು ನೀರು, ಗಾಳಿಯನ್ನೆಲ್ಲಾಕಲುಷಿತ ಮಾಡಿಯಾಗಿದೆ,ಹಾಳು ಮಾಡಲು ಇನ್ನೇನುಉಳಿದಿದೆ ಮುಗಿಲು ಮುಟ್ಟುತ್ತಿದ್ದ ಬೆಟ್ಟಗಳನ್ನುಕೆಡವಿದ್ದಾಗಿದೆ, ದೊಡ್ಡ ಕಟ್ಟಡಗಳುಈಗಾಗಲೇ ಅವುಗಳನ್ನುಮುತ್ತಿಡುತ್ತಿದೆ. ಗುಬ್ಬಿಗಳ ಚಿಲಿಪಿಲಿಯರಿಂಗಣ ನಿಂತುಹೋಗಿದೆಆಧುನಿಕ ಜಂಗಮವಾಣಿಯತರಂಗಗಳಿಗೆ ಜಗವೇ ತ್ಯಾಜ್ಯ ಬಂಡಿಯಂತೆಗೋಚರಿಸುತ್ತಿದೆ,ಪ್ರಕೃತಿಯ ವಿಕೋಪಶುದ್ದಿಗೊಳಿಸಿ ಕಾಯುತ್ತಿದೆ. ತಾಯಿ ಧರಣಿಯ ಧಗೆಮಗುವಿಗೆ ನಷ್ಟಹೊರತು ತಾಯಿಗಲ್ಲಶುದ್ದಿಯಾಗಬೇಕಿದೆಮನುಷ್ಯನ ಅಂತರಂಗ. –ಅಜಿತ್ ಕೌಂಡಿನ್ಯ ನೆನಪುಗಳು ಈಗೀಗನೀರವರಾತ್ರಿಗಳುಬಿಕ್ಕುತ್ತಿವೆ,ನಿನ್ನನೆನಪುಗಳಂತೆ.ಕಣ್ಣೀರುಸಹ. ಎದೆಯಹೊಲಿದಹೊಲಿಗೆಗಳೂ,ನೀನೆಂಬನೆನಪುಗಳಗಾಯವಮಾಗಲುಬಿಡುತ್ತಿಲ್ಲ. ನಿನ್ನನೆನಪುಗಳೆಂಬಮಾರ್ಜಾಲಕಾಡಿಕೊಲ್ಲುತ್ತಿರಲು,ನಿನದೆಲ್ಲೊಖಿಲ್ಲನೆನಗುತಿರುವೆಯಲ್ಲ. ನನ್ನಕಣ್ಣ ಹಣತೆನಿನ್ನ ನೆನಪುಗಳೆಂಬತೈಲದಿಇನ್ನೆಷ್ಟು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ