ರೈತ ಬೇಸಾಯ ಮಾಡಬೇಕು ಅಂದ್ರೆ, ಮುಂಗಾರಾ?, ಹಿಂಗಾರಾ?ಯಾವ ಬೆಳೆ ಬೆಳೆಯುವುದು, ಯಾವ ಮಣ್ಣಿಗೆ ಯಾವ ತಳಿ ಸೂಕ್ತ. ಮಣ್ಣಿನ ಪರೀಕ್ಷೆ ಮಾಡಿಸಬೇಕಾ? ಯಾವ ಯಾವ ಬೆಳೆಗಳಿಗೆ ಮತ್ತೆ ಯಾವ ಯಾವ ಮಣ್ಣಿನ ವಿಧಕ್ಕೆ ಯಾವ ಯಾವ ಗೊಬ್ಬರ ಸೂಕ್ತ, ಕೊಟ್ಟಿಗೆನೋ? ಸರ್ಕಾರಿ ಗೊಬ್ಬರನೋ?ವಿವಿಧ ರೀತಿಯ ಕಳೆ ಹಾಗೂ ಕೀಟಗಳ ನಿರ್ವಹಣೆ ಹೇಗೆ? ಇಷ್ಟೆಲ್ಲಾ ತಿಳಿದು ಮಾಡಿದ ಬೇಸಾಯಕ್ಕೆ ಉತ್ತಮ ಫಲ ಬಂದೆ ಬರುತ್ತೇ ಅನ್ನೋ ಗ್ಯಾರಂಟಿ ಇರುವುದಿಲ್ಲ. ಅಷ್ಟಿಲ್ಲದೇ ಹೇಳುತ್ತಾರೆಯೆ, “ಬೇಸಾಯ ನೀ ಸಾಯ, ನಿನ್ನ ಮನೆಯವರೆಲ್ಲ […]
ಮುಗುಳ್ನಗು ಒಂದನ್ನು ಎದೆಯಲ್ಲಿ ಬೆಳೆಯಲಿಕ್ಕೆ ಹಂಬಲಿಸುವವರ ಕಥೆಗಳ ಗುಚ್ಛ “ಮರ ಹತ್ತದ ಮೀನು”: ಡಾ. ನಟರಾಜು ಎಸ್. ಎಂ.
ವಿನಾಯಕ ಅರಳಸುರಳಿಯವರು ಲೇಖಕರಾಗಿ ಕಳೆದ ಏಳೆಂಟು ವರ್ಷಗಳಿಂದ ಪರಿಚಿತರು. ಮೊದಲಿಗೆ ಕವಿತೆಗಳನ್ನು ಬರೆಯುತ್ತಿದ್ದವರು, ತದನಂತರ ಪ್ರಬಂಧ ಬರೆಯಲು ಶುರು ಮಾಡಿದರು. ನಂತರದ ದಿನಗಳಲ್ಲಿ ಕತೆಗಳನ್ನು ಸಹ ಬರೆಯುತ್ತಾ ಈಗ ತಮ್ಮ ಹತ್ತು ಕತೆಗಳಿರುವ “ಮರ ಹತ್ತದ ಮೀನು” ಕಥಾಸಂಕಲನವನ್ನು ಹೊರತಂದಿದ್ದಾರೆ. “ಮರ ಹತ್ತದ ಮೀನು” ಕೃತಿಯು 2023ನೇ ಸಾಲಿನ ಈ ಹೊತ್ತಿಗೆ ಪ್ರಶಸ್ತಿ ಪಡೆದ ಕೃತಿಯಾಗಿದ್ದು ಓದುಗರಿಂದ ಉತ್ತಮ ಪ್ರತಿಕ್ರಿಯೆಯನ್ನು ಸಹ ಪಡೆಯುತ್ತಿದೆ. ಈ ಪುಸ್ತಕಕ್ಕೆ ಲೇಖಕರಾದ ಮಣಿಕಾಂತ್ ಎ. ಆರ್. ಮುನ್ನುಡಿ ಬರೆದಿದ್ದು, ಈ ಹೊತ್ತಿಗೆ […]
ಮೂರು ಕವಿತೆಗಳು: ಶಕುಂತಲಾ ಬರಗಿ
ಹೆಣ್ಣು ನೂರು ಸಂಕೋಲೆಯಲ್ಲಿ ಸಿಲುಕಿವಿಲಿ ವಿಲಿ ಒದ್ದಾಡುವ ಜೀವಸಂಕೋಲೆಯ ಬಿಡುಗಡೆಗೆ ಹಪಹಪಿಸಿಗೀಳಿಡುತ್ತಿರುವ ಪಾಪಿ ಕಾಡಿನ ಪ್ರಾಣಿ. ನಾವೆಷ್ಟು ಬೈದರು ಅಂದರುಉಗುಳು ನುಂಗುವಂತೆಒಳ ಹಾಕಿಕೊಳ್ಳುವಅಂತಶಕ್ತಿಯ ಅಗಾಧ ಮರ ! ಎಳೆ ಕೈ ಬಿಗಿದಳೆದು ಕಟ್ಟಿಕುಟ್ಟಿ ಒಡೆದಾಕಿದರುಒದ್ದಾಡದೆ ಸುಮ್ಮನೆ ಇದ್ದಾಳೆಅವಳೇ ಒಂದು ಸಾತ್ವಿಕ ಶಕ್ತಿ ಅವಳು ಇವಳು ಯಾವಳುಮತ್ತೊಬ್ಬಳು ಮಗದೊಬ್ಬಳುಹೀಗೆ ಅನ್ಯಾಯಕ್ಕೇಒಳಗಾದವರ ಸಂಖ್ಯೆ ಏರುತ್ತಲೇ ಇರುತ್ತದೆ ಅವರ ಕೋಪ ತಾಪ ಶಾಪಗಳಅವಶೇಷಗಳ ಮೆತ್ತಿಕೊಂಡಿವೆಈ ಪುರುಷಧೀನ ಪುರದಲ್ಲಿಇನ್ನೂ ಮೆತ್ತಿಕೊಂಡಿವೆ ಶಾಪದ ಗುರುತುಗಳಾಗಿ ! ಕೂಗು ಅಳು ನೋವಿನ ಧ್ವನಿಪ್ರತಿಧ್ವನಿಗಳು ಅನುರಣಿಸುತ್ತಿವೆಈ ಪುರುಷಾಂದಕಾರದ […]
ಮೂವರ ಕವಿತೆಗಳು: ಜ್ಯೋತಿ ಕುಮಾರ್ ಎಂ. (ಜೆ.ಕೆ.), ಕುಸುಮ ರಾವ್, ಉಮಾ ಸೂಗೂರೇಶ ಹಿರೇಮಠ
ಉಗಾದಿ ಏಸೊಂದು ದಿವ್ಸಾತುನೀನು ಬಿಟ್ಟು ವ್ಹಾದಬ್ಯಾಸರದ ನೆನೆಕೆಗಳಿಗೆ ಎದೆ ಮ್ಯಾಲೆ ಬಂಡೆಏರಿಕೊಂಡು, ಬಡಕೊಂಡು.ಉಗಾದಿನೇ ಬಂತು ತಿರುಗಿ ಮನದ ಬಾಗ್ಲಮ್ಯಾಲಿನ ಮಾಂತೊಪ್ಲಒಣ್ಗಿ ಶ್ಯಾನೆ ಮಾಸಾತು ಬೇನ್ಗಿಡದ ತುಂಬಸಿ ನೆನಪಾ ಹೂಕಾದು ಬಿಟ್ಟಾವ ಭಾಳ ಕೋಗ್ಲಿಯ ಗಂಟ್ಲುವಿರಹ ಕಟ್ಟೈತಿಮೌನವಾಗಿ ಕುಂತೈತಿ ಶಾಬಾದಿ ಮಠ್ಕ್ಯಾಲೆಂಡರ್ ಕಾಯೋದಖಾಯಂ ಅಂದೈತಿ ಹಾಕ್ಕೊಂಡ ಅರಿವಿನಿನ್ನ ನೆನಪ ಜಳಕದಾಗತೋಯ್ದು ತಪ್ಡಿಯಾಗೈತಿ ಪಚ್ಚಿಮದ ಸಂಜಿ ಬಾನಾಗಚಂದ್ರನಂತ ನಿನ್ನ ಮಾರಿಕಂಡು ಜೀವ ಜಲ್ ಅಂದೈತಿ ಅಂದ್ರ ಬಾಹ್ರ ಆಟದಾಗನಗುವ ನಿನ್ನ ರಾಣಿ ಕಾರ್ಡ್ಸಿಕ್ಕಿ ಕೈ ಕೋಸಿರಾಡೈತಿ ಉಗಾದಿಯಾದ್ರೂಯಾಕ್ ಬಂತೋನಿನ್ನ ನೆನಪ […]
ಮೂರು ಕವಿತೆಗಳು: ಜೊನ್ನವ (ಪರಶುರಾಮ್ ಎಸ್ ನಾಗುರ್)
ಸ್ವಾತಂತ್ರ್ಯ ಭಾರತದಲ್ಲಿ ನೀರಿಗಾಗಿ ಸೂರಿಗಾಗಿಭಾವಕ್ಕಾಗಿ ಬಾಷೆಗಾಗಿದೇಶದೊಳಗೆ ಕದನಹೇಳು ಯಾರು ಕಾರಣ ಗುಡಿ ಗೋಪುರ ಮಣ್ಣಾದವುಮಸಿದಿ ಚರ್ಚ್ ಮುಕ್ಕಾದವುಪ್ರೇಮ ತುಂಬಿದೆದೆ, ಏಕೆ ಕಲ್ಲಾದವುಹಸಿ ನೆತ್ತರದ ಕಂಪು, ಸುತ್ತ ಸುಳಿದಾಡಿದವು 75ನೇ ಸ್ವಾತಂತ್ರ್ಯ ಸಂಭ್ರಮಿಸಿದೇವುಚುಟಿ ತೊಟ್ಟಿಲ ತೂಗುವರ ನಡುವೆಮೂಲಭೂತ ಹಕ್ಕಿಗಾಗಿ,ಇದ್ದೇ ಇರುವುದುದೇಶದಲ್ಲೊಂದು ಗೊಡವೆ ಅಂಗಲಾಚ ಬೇಕಾಗಿದೆಅರ್ಜಿಗಳ ಮೇಲೆ ಅರ್ಜಿ ಕೊಟ್ಟುಇದೇ ಸ್ವಾತಂತ್ರ್ಯದಒಳಗಿನ ಗುಟ್ಟು ಕೋಪವೆ ನಲ್ಲೆ? ಕೋಪವೆ ನಿನಗೆನನ್ನ ಮೇಲೆ ನಲ್ಲೆಅದಕ್ಕೆ ನಾ ತಂದೆಕಂಪು ಸೂಸುವ ದುಂಡು ಮಲ್ಲೆ ನಿನ್ನ ಚೂಟಿ ರೇಗಿಸಿ, ಮತ್ತೆ ರಮಿಸಿಎದೆಗಾನಿಸಿ ಮತ್ತೆ ಪ್ರೇಮಿಸಿಉಸಿರಲೆ ಪಿಸು […]
ಕುಬೇರನ ಸಂಪತ್ತು ತೃಣಕ್ಕೆ ಸಮಾನ!: ಹರ್ಷವರ್ಧನ್ ಜಯಕುಮಾರ್
‘ಪ್ಲಾಟಿನಂ ಆಭರಣಗಳು ಬೇಕೆ ? ಬ್ರಹ್ಮಾಂಡದಲ್ಲೇ ಅತಿ ಕಡಿಮೆ ಬೆಲೆ!ಸ್ಥಳ – 2011UW158 ಕ್ಷುದ್ರ ಗ್ರಹ! – ಒಮ್ಮೆ ಭೇಟಿ ಕೊಡಿ’ಭವಿಷ್ಯದಲ್ಲಿ – ಹೀಗೊಂದು ಜಾಹೀರಾತು ಕಂಡರೆ ಅಚ್ಚರಿಪಡಬೇಕಿಲ್ಲ! 2011UW158 ಒಂದು ಕ್ಷುದ್ರಗ್ರಹ! Asteroid. ಅರ್ಧ ಕಿ.ಮೀ ಉದ್ದ – ಒಂದು ಕಿ.ಮೀ ಅಗಲ ಅಷ್ಟೇ! 2015ರಲ್ಲಿ ಭೂಮಿಗೆ ಸನಿಹ ಅಂದರೆ ಸುಮಾರು 25 ಲಕ್ಷ ಕಿ.ಮೀ ಅಂತರದಲ್ಲಿ ಸಾಗಿತ್ತು ಸಹ! Planetary Resources ಸಂಸ್ಥೆಯ ಪ್ರಕಾರ ಈ ಸಣ್ಣ ಕ್ಷುದ್ರಗ್ರಹದಲ್ಲಿ ಸುಮಾರು 90 ಮಿಲಿಯನ್ ಟನ್ […]
ಪಂಜು ಕಾವ್ಯಧಾರೆ
ಇವಳೊಂದು ರಾಕ್ಷಸಿ ೧ ಕಟ್ಟಿ ಕಾಯುವವರಿಲ್ಲವೇ ಇವಳಮುರಿದ ಮೂರ್ತಿಗಳುಹರಿದ ಕನಸುಗಳ ತಿಂದು, ಒಡೆದ ಮನಸುಗಳನಿಂದೆ ಅಪಮಾನಭಯ ಶೋಕಗಳಕುಡಿಕುಡಿದೂ ಎಂದೆಂದೂ ಮುಗಿದಂತಿಲ್ಲಇವಳ ಹಸಿವು ದಾಹಬಡವರ ಅಂಗೈ ಬೆಂಕಿಯವಳುಇಂದ್ರ ಸಭೆಯ ನರ್ತಕಿ ಆಹಾ!ಕೋಮಲೆಯಂದೆವಳ ಮುಟ್ಟೀರಿ ಜೋಕೆತಲ್ಗೇರಿದಂತೆ ಸುರೆಮಿಂಚು ಹೊಡೆದಂತೆ ಅರೆಘಳಿಗೆಮುಂದೊಂದು ವರುಷ ಕವಿ ದೇವದಾಸಕ್ಷಣ ಚಿತ್ತ – ಕ್ಷಣ ಅಸ್ವಸ್ಥ! ೨ತುಂಬಿದ ಕಣ್ ರೆಪ್ಪೆಗಳು, ಒಣಗಿ ಬಣಗುಡುವ ಭಾವದೆದೆಅನ್ಯಾಯವಾಗಿ ಅಗಲಿದ ಕ್ರೌಂಚ ಪಕ್ಷಿಗಳುಈಗ ಹುಟ್ಟಿ ಸತ್ತ ಶಿಶುವುಟೀಪಾಯ್ ಮೇಲಿನ ಸಿಂಗಲ್ ಟೀ ಕಪ್ಪುಹೈವೇ ಮೇಲೆ ಸುಟ್ಟು ತಿಂದ ಬಣ್ಣದ ನವಿಲಿನ […]
ಪ್ರೇಮಗಂಗೆ: ಪದ್ಮಜಾ. ಜ. ಉಮರ್ಜಿ
“ಯಾವುದೇ ಫಲಾಪೇಕ್ಷೆಯಿಲ್ಲದೆ ಎಲ್ಲರಿಗೂ ಒಳ್ಳೆಯದನ್ನ ಬಯಸಿ, ಸಾಧ್ಯವಾದಷ್ಟು ಒಳ್ಳೆಯದನ್ನ ಮಾಡಿ, ಯಾಕೆಂದರೆ ಹೂವ ಮಾರುವವರ ಕೈಯಲ್ಲಿ ಯಾವಾಗಲೂ ಸುವಾಸನೆಯಿರುತ್ತದೆ.” ಈ ವಾಕ್ಯ ಓದುತ್ತಿರುವ ವೈಷ್ಣವಿಯ ಮನಸ್ಸು ಪಕ್ವತೆಯಿಂದ ತಲೆದೂಗಿತ್ತು. ತನ್ನ ಮತ್ತು ಪತಿ ವಿಭವರ ಬದುಕಿನ ಗುರಿಯೂ ಕೂಡಾ ಎಲ್ಲರಿಗೂ ಒಳ್ಳೆಯದನ್ನು ಬಯಸುವುದು. ಮತ್ತು ಒಳ್ಳೆಯದನ್ನು ಮಾಡುವುದು. ಆದರೂ ಬದುಕೆಂಬುದು ಒಂದು ವೈಚಿತ್ರದ ತಿರುವು. ಹಾಗೆ ನೋಡಿದರೆ ಬದುಕೇ ಬದಲಾವಣೆಗಳ ಸಂಕೋಲೆ. ಮನಸ್ಸು ಸವೆಸಿದ ಹಾದಿಯ ಕುರುಹುಗಳನ್ನು ಪರಿಶೀಲಿಸತೊಡಗಿತ್ತು. ತಾಯಿ ಸಂಧ್ಯಾ ಮತ್ತು ತಂದೆ ಸುಂದರರಾಯರ ಸುಮಧುರ […]
ಡಾ.ಎಸ್.ವಿ.ಪ್ರಭಾವತಿಯವರ ಕಾವ್ಯ: ಸಂತೋಷ್ ಟಿ
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಾದಂಬರಿ, ಸಂಶೋಧನೆ, ಕಾವ್ಯ , ಪ್ರಬಂಧ, ವಿಮರ್ಶೆಗಳಿಂದ ಕ್ರಿಯಾಶೀಲ ಲೇಖಕಿಯಾದ ಡಾ.ಎಸ್.ವಿ.ಪ್ರಭಾವತಿಯವರ ಕಾವ್ಯ ಚಿಂತನೆಗಳು ವಾಸ್ತವಿಕ ನೆಲೆಗಟ್ಟಿನ ಮೇಲೆ ಆಕ್ರತಿ ಪಡೆಯುವಂತಹದ್ದು. ಕಾವ್ಯ ಜಿಜ್ಞಾಸೆಯು ಎಂದಿಗೂ ನಿಂತ ನೀರಲ್ಲ, ಅದು ಸದಾ ಹರಿಯುತ್ತಲೇ ತನ್ನ ಸುತ್ತ ಹಸಿರನ್ನು ಕಾಣುತ್ತದೆ. ಹಾಗಾಗಿಯೇ ಇವರ ಕವಿತೆಗಳಿಗೆ ಸಾಂಕೇತಿಕವಾದ ಚಲನಶೀಲತೆ ಒದಗಿಬರುತ್ತದೆ. ಮಳೆ, ಮರ,ಆಕಾಶ ಮತ್ತು ಭೂಮಿಗಳನ್ನು ಬಳಸಿಬಂದ ಕವಯತ್ರಿ ಎಲ್ಲಿಯೂ ನಿಲ್ಲುವುದಿಲ್ಲ. ಪ್ರಕ್ರತಿಯೇ ಅವರಿಗೆ ಮೆಟಾಫರ್. “ನದಿ ಹರಿಯುತಿರಲಿ” ಸಮಗ್ರ ಕಾವ್ಯ ಸಂಪುಟ ಇವರದಾಗಿದೆ. ಸೇತುವೆಗಳಿರುವುದೇ […]
ತೋತಾಪುರಿ ಮೂವಿಯ ನಂಜಮ್ಮನ ಕಥೆ ವ್ಯಥೆ: ಕಿರಣ್ ಕುಮಾರ್ ಡಿ
ತೋತಾಪುರಿ ೨೦೨೨ ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಈ ಚಲನಚಿತ್ರವನ್ನು ವಿಜಯ ಪ್ರಸಾದ್ ಅವರು ನಿರ್ದೇಶಿಸಿದ್ದರೆ, ಕೆ ಎ ಸುರೇಶ್ ರವರು ನಿರ್ಮಾಪಕರಾಗಿರುತ್ತಾರೆ. ಈ ಚಲನಚಿತ್ರದಲ್ಲಿ ಜಗ್ಗೇಶ್, ಡಾಲಿ ಧನಂಜಯ, ಸುಮನ್ ರಂಗನಾಥನ್, ಅದಿತಿ ಪ್ರಭುದೇವ ಮತ್ತು ಮುಂತಾದವರು ನಟನೆ ಮಾಡಿರುತ್ತಾರೆ. ಈ ಚಲನಚಿತ್ರದಲ್ಲಿ ಸ್ವತಃ ವಿಜಯ ಪ್ರಸಾದ್ ರವರು ತಮ್ಮ ಬಾಲ್ಯದಿಂದ ಅರಿವು ಬರುವವರೆಗೂ ನೋಡಿದ ಜಾತಿ ಸಂಘರ್ಷಗಳನ್ನು ಮತ್ತು ಅರಿವು ಬಂದ ಮೇಲೆ ಆದ, ಅದೇ ಜಾತಿ ಸಂಘರ್ಷಗಳ ಅನುಭವವನ್ನ ದೃಶ್ಯರೂಪಕ್ಕೆ ಅಳವಡಿಸಿ ಕೊಟ್ಟಿದ್ದಾರೆ. […]
ಶಂಕರ್ ಸಿಹಿಮೊಗ್ಗೆ ಅವರ “ದೇವರ ಕಾಡು” ಕಥೆಯ ವಿಶ್ಲೇಷಣೆ: ಅನುಸೂಯ ಯತೀಶ್
ಶಂಕರ್ ಸಿಹಿಮೊಗ್ಗೆ ಅವರ ಕವಿತೆ, ಲೇಖನ, ಕಥೆ ಸೇರಿದಂತೆ ಯಾವುದೇ ಪ್ರಕಾರಗಳನ್ನು ಓದಿದರೂ ನಮಗೆ ವೈಚಾರಿಕತೆಯ ವಿಚಾರಗಳು, ಚಿಂತನಾಶೀಲ ಅಭಿವ್ಯಕ್ತಿ ಹಾಗೂ ವೈಜ್ಞಾನಿಕ ತಳಹದಿ ಬಹುವಾಗಿ ಗೋಚರಿಸುತ್ತವೆ. ಬಹುಶಃ ಇವರು ವಿಜ್ಞಾನ ವಿದ್ಯಾರ್ಥಿಯಾಗಿದ್ದರ ಫಲಶೃತಿಯಿರಬಹುದು. ಅಂತಹುದೇ ಒಂದು ನೆಲೆಗಟ್ಟಿನಲ್ಲಿ ಸೃಷ್ಟಿಯಾದ ಕಥೆ ಶಂಕರ್ ಸಿಹಿಮೊಗ್ಗೆ ಅವರ ಈ ‘ದೇವರ ಕಾಡು’. ಇದು ಮಾನವನ ದುರಾಸೆಯ ಫಲಿತವಾಗಿ ಪರಿಸರ ವಿನಾಶದ ಅಂಚಿಗೆ ತಲುಪುತ್ತಿರುವ ಆಘಾತಕಾರಿ ಸಂಗತಿಯನ್ನು ತಮ್ಮ ಪರಿಸರ ಪ್ರೀತಿ ಮತ್ತು ವೈಚಾರಿಕ ಪ್ರಜ್ಞೆಯಡಿಯಲ್ಲಿ ಕಥಾನಕವಾಗಿಸಿದ್ದಾರೆ. ಅಪ್ಪಟ ಗ್ರಾಮೀಣ […]
ಮಾಯೆ: ಸಾವಿತ್ರಿ ಹಟ್ಟಿ
ಛೇ ಏನಿದು ಮದುವೆಯಾಗಿ ಮಕ್ಕಳು ಮರಿಯಾಗಿ ಬದುಕು ಅರ್ಧ ಮುಗಿದು ಹೋಯ್ತಲ್ಲ ! ಮತ್ಯಾಕೆ ಹಳೆಯ ನೆನಪುಗಳು ಎಂದುಕೊಂಡು ಮಗುವಿನ ಕೈಯನ್ನು ತೆಗೆದು ಹಗೂರಕ್ಕೆ ಕೆಳಗಿರಿಸಿದಳು. ಹಾಲುಂಡ ಮಗುವಿನ ಕಟವಾಯಿಯಲ್ಲಿ ಇಳಿದಿದ್ದ ಹಾಲನ್ನು ಸೆರಗಿನಿಂದ ಒರೆಸಿದಳು. ಮಗುವಿಗೆ ಹೊದಿಕೆ ಹೊದಿಸಿ ಅದರ ಗುಂಗುರುಗೂದಲಿನ ತಲೆಯನ್ನು ಮೃದುವಾಗಿ ನೇವರಿಸಿದಳು. ಮಗು ಜಗತ್ತಿನ ಯಾವುದೇ ಗೊಡವೆಯಿಲ್ಲದೇ ನಿದ್ರಿಸತೊಡಗಿತ್ತು. ಅಷ್ಟು ದೂರದಲ್ಲಿ ಸಿಂಗಲ್ ಕಾಟ್ ಮೇಲೆ ಗಂಡ ಎಂಬ ಪ್ರಾಣಿ ಗೊರಕೆ ಹೊಡೆಯುತ್ತ ಮಲಗಿತ್ತು. ಸಿಟ್ಟು, ಅಸಹ್ಯ, ಅನುಕಂಪ ಯಾವ ಭಾವನೆಯೂ […]
ಬೀಳ್ಕೊಡುಗೆ ಎಂಬ ಕೊನೆ ಘಳಿಗೆಯಲ್ಲಿ…..: ಪಿ.ಎಸ್.ಅಮರದೀಪ್
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರತರೇನೂ ಅರಿತೆವೇನು ನಾವು ನಮ್ಮ ಅಂತರಾಳವಾ? ಅನ್ನುವ ಹಾಡನ್ನು ಅದೆಷ್ಟು ಬಾರಿ ಕೇಳಿದ್ದೇನೋ ಕೇಳುತ್ತೇನೋ ಗೊತ್ತಿಲ್ಲ. ಆದರೆ ಇಡೀ ಹಾಡಿನ ಸಾಲುಗಳು ಮಾತ್ರ ನನ್ನನ್ನು ತುಂಬಾ ಕಾಡಿವೆ, ಕಾಡುತ್ತವೆ. ಸುಮಾರು ಒಂಭತ್ತು ತಿಂಗಳ ಕಾಲ ನಾನಿದ್ದ ಪರಿಸ್ಥಿತಿ ಆರ್ಥಿಕವಾಗೇನೂ ಕಷ್ಟಕರವಾಗಿದ್ದಿಲ್ಲ. ಆದರೆ, ನನ್ನತನವನ್ನು ನಾನು ಎಷ್ಟೇ ಪ್ರಯತ್ನಪಟ್ಟರೂ ಕಾಪಿಟ್ಟುಕೊಳ್ಳುವಲ್ಲಿ ಸೋಲುತ್ತಲೇ ತಾತ್ಕಾಲಿಕವಾಗಿ ಗೆದ್ದ ದಿನದ ಸಂಜೆಗೆ ನನ್ನಲ್ಲಿದ್ದ ಒಟ್ಟು ಅಭಿಪ್ರಾಯ ಕಕ್ಕಿಬಿಟ್ಟೆ. ನನ್ನದಲ್ಲದ ತಪ್ಪಿಗೆ ಬೇರೆಯವರ ಮಸಲತ್ತಿಗೆ ನನ್ನ ಸ್ಥಾನಪಲ್ಲಟವಾಗಿದ್ದ ದಿನ […]
ಭೂಲೋಕದಲ್ಲಿ ಅಪ್ಸರೆಯರು (ಕಾಂಬೋಡಿಯಾ ಭಾಗ-2): ಎಂ ನಾಗರಾಜ ಶೆಟ್ಟಿ
ಹಿಂದಿನ ಸಂಚಿಕೆಯಲ್ಲಿ… ಟೋನ್ಲೆ ಸಾಪ್ನಿಂದ ಹೊರಡುವಾಗ ಸಂಜೆ ಗಂಟೆ ಏಳಾಗಿರಲಿಲ್ಲ. ಸುಮ್ಮನೆ ಸುತ್ತಾಡಿ ಕಾಲ ಕಳೆಯುವ ಬದಲು ಸಾಂಸ್ಕೃತಿಕ ಕಾರ್ಯಕ್ರಮವೇನಾದರೂ ಇದೆಯೇ ಎಂದು ʼರಾʼ ನೊಡನೆ ವಿಚಾರಿಸಿದೆವು. ಸಾಮಾನ್ಯವಾಗಿ ಪ್ರತಿಯೊಂದು ಊರಿನಲ್ಲೂ ಅಲ್ಲಿಯದೇ ಹಾಡು,ನೃತ್ಯ ಪರಂಪರೆ ಇರುತ್ತದೆ. ಕೆಲವೊಮ್ಮೆ ನಮ್ಮ ಸಮಯಕ್ಕೆ ಅವು ದೊರಕುವುದಿಲ್ಲ. ತಿರುವನಂತಪುರದಲ್ಲಿ ಕಥಕ್ಕಳಿಯನ್ನು ನೋಡಬೇಕೆಂಬಾಸೆ ಇದ್ದರೂ ಅಲ್ಲಿಗೆ ಹೋದಾಗ ಪ್ರದರ್ಶನವಿರಲಿಲ್ಲ.ಕಾಂಬೋಡಿಯಾದಲ್ಲಿ ʼಅಪ್ಸರಾ ನೃತ್ಯʼ ಬಹಳ ಚೆನ್ನಾಗಿರುತ್ತದೆ ಎನ್ನುವುದನ್ನು ಕೇಳಿದ್ದೆ. ರಾ, ಸಿಯಾಮ್ರೀಪಲ್ಲಿ ಪ್ರತಿದಿನ ಒಂದಲ್ಲೊಂದು ಕಡೆ ಅಪ್ಸರಾ ನೃತ್ಯ ಪ್ರದರ್ಶನಗಳು ಇರುತ್ತಿತ್ತು, ಕೋವಿಡ್ […]
ಮೂರು ಕವಿತೆಗಳು: ಡಾ. ಸದಾಶಿವ ದೊಡಮನಿ, ಇಲಕಲ್ಲ
ʼಮಾಂಸದಂಗಡಿಯ ನವಿಲು’ ನೆನಪಿನಲ್ಲಿ ನೀವು ಹೊರಟು ನಿಂತಿದ್ದು; ನಡು ಮಧ್ಯಾಹ್ನ, ಕಡು ಬಿಸಿಲಲ್ಲಿಹೊಲಗೇರಿಯ ಕಪ್ಪುಕಾವ್ಯ ಕಣಗಿಲೆಯರಳಿಶತಮಾನದ ನೋವಿಗೆ ಮುದ್ದು ಅರಿಯುವ ಗಳಿಗೆಯಲ್ಲಿ ಮುದಿ ಬೆಕ್ಕುಗಳು ಹುಲಿಯ ಗತ್ತಿನಲಿಹಗಲು ಗಸ್ತು ತಿರುಗುವಾಗ ನೀವು ಹುಲಿಯ ಗುಟುರು ಹಾಕಿದಿರಿ ಗುಟುರಷ್ಟೇ ಕೇಳಿಸಿತು;ಕೇಳುತ್ತಿದೆಹಿಮದ ಹೆಜ್ಜೆಯೂ ತೋರುತ್ತಿಲ್ಲಚಿತ್ರದ ಬೆನ್ನು ಕಾಣುತ್ತಿಲ್ಲಮಾಂಸದಂಗಡಿಯ ನವಿಲು ಹುಡುಕುತ್ತಿದ್ದೇನೆನೀವು ಎಲ್ಲಿ? ಮಂಗಮಾಯ! ಕೆಂಪು ದೀಪದ ಕೆಳಗೆನನ್ನಕ್ಕ,ತಂಗಿಯರು ಎದೆ ಸುಟ್ಟುಕೊಂಡುನಲುಗುವಾಗ ನೀವು ತಾಯಿಯಾಗಿ ಹೆಗಲ ಕೊಟ್ಟು, ನೋವು ಆಲಿಸಿದಿರಿಹಗಲು ದೀವಟಿಗೆಯಾಗಿ ಉರಿದು,ಉಳ್ಳವರ ಎದೆಗೊದ್ದು ಅಸಲು ಸಹಿತ ಲೆಕ್ಕ ಚುಕ್ತಾ ಕೇಳಿದಿರಿನೀವು […]
ʻಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2023 ಮತ್ತು ಕಾದಂಬರಿ ಪುರಸ್ಕಾರ 2023ʼ
ಭಾರತದ ಸ್ವಾತಂತ್ರ್ಯೋತ್ಸವ ಮತ್ತು ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಬುಕ್ ಬ್ರಹ್ಮ “ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ”ಯ ಜೊತೆಗೆ 2022ನೇ ಸಾಲಿನಲ್ಲಿ ಪ್ರಕಟವಾದ ಕಾದಂಬರಿಗೆ ಪುರಸ್ಕಾರ ನೀಡಲು ನಿರ್ಧರಿಸಿದೆ. 2022ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಅತ್ಯುತ್ತಮ ಕಾದಂಬರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು. ಈ ಒಂದು ಲಕ್ಷದಲ್ಲಿ 75 ಸಾವಿರ ರೂಪಾಯಿ ಲೇಖಕರಿಗೆ ಹಾಗೂ 25 ಸಾವಿರ ಪ್ರಕಾಶಕರಿಗೆ ವಿತರಿಸಲಾಗುತ್ತದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ 5 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು. ಈ ಪೈಕಿ […]
ಚನ್ನಕೇಶವ ಜಿ ಲಾಳನಕಟ್ಟೆ ಕವಿತೆಗಳು
ಅಂದದ ನಾರಿಗೆ ಚೆಂದದ ಸೀರೆಯುಸುಂದರವಾಗಿ ಕಾಣುತಿದೆ ಬಿಂದಿಯು ಹಣೆಯಲಿ ತಂದಿದೆ ಚೆಲುವನುಬಂಧಿತನಾದೆ ಪ್ರೀತಿಯಲಿ ಕೆಂದನೆ ತುಟಿಯಲಿ ಕುಂದದ ಸೊಬಗಿದೆಅಂದುಗೆ ಸದ್ದು ಮಾಡುತಿವೆ ಚೆಂದಿರ ವದನೆಯ ಚೆಂದದ ಚೆಲುವೆಗೆಮುಂದಣ ಕೈಯ ಹಿಡಿಯುವೆನು ತಂದಳು ಹರುಷವ ಕುಂದದ ಚೆಲುವಲಿಬಂಧುವೆ ಆಗಿ ನಿಂತಿಹಳು ಬಂದಳು ಹೃದಯಕೆ ಬಂಧಿಸಿ ನನ್ನನುನಂದಿನಿ ಧೇನು ಸೊಬಗಿವಳು ವಂದಿಸಿ ಹೊಸಿಲಿಗೆ ಗಂಧವ ಹಚ್ಚುತತಂದಳು ಸಿರಿಯ ನನ್ನವಳು ಹಾಲಿನ ರೂಪದಿನೀಲಿಯ ಬಾನಲಿಬಾಲಕ ಚಂದಿರ ನಗುತಿಹನುತೇಲುತಲಿರುವನುಗಾಳಿಯು ಬೀಸಲುಸೀಳುತ ಮೋಡವ ಮೂಡುವನು ಇಳೆಯನು ಸುತ್ತುತಹೊಳೆಯುತಲಿರುವನುಬೆಳಕನು ನೀಡುತಲಿರುಳೆಲ್ಲಸೆಳೆಯುತ ಮಕ್ಕಳತಿಳಿ ಬೆಳಕಿಳಿಸುತಹೊಳೆಯೊಳು ಬಿಂಬವನಿಳಿಸುತ್ತ ಧರೆಗಿವ […]
ತವಕ ತಲ್ಲಣಗಳ ತಾಜಾಭಿವ್ಯಕ್ತಿ ; ಮೊಗೆದ ಬಾನಿಯ ತುಂಬ ತಿಳಿನೀರ ಬಿಂಬ: ಡಾ. ಹೆಚ್ ಎನ್ ಮಂಜುರಾಜ್
ಛದ್ಮವೇಷ- ಕವನ ಸಂಕಲನಕವಯಿತ್ರಿ- ಎಂ ಕುಸುಮ, ಹಾಸನಪ್ರಕಾಶಕರು: ರಚನ ಪ್ರಕಾಶನ, ಮೈಸೂರುಮೊದಲ ಮುದ್ರಣ: 2012ಬೆಲೆ: 80 ರೂಗಳು, ಒಟ್ಟು ಪುಟ: 128 ಈ ಕವನ ಸಂಕಲನವನ್ನು ಕವಯಿತ್ರಿಯಾದ ಶ್ರೀಮತಿ ಎಂ ಕುಸುಮ ಅವರು ಹೃದಯ ಶ್ರೀಮಂತಿಕೆಯುಳ್ಳ ಎಲ್ಲ ಮನುಜರಿಗೆ ಅರ್ಪಿಸಿದ್ದಾರೆ. ಶುದ್ಧ ಮಾನವತಾವಾದದಲ್ಲಿ ನಂಬುಗೆಯಿಟ್ಟ ಇವರ ಧ್ಯೇಯ ಮತ್ತು ಧೋರಣೆಗಳು ಇದರಿಂದಲೇ ಮನವರಿಕೆಯಾಗುತ್ತವೆ. ಇದು ಇವರ ಎರಡನೆಯ ಕವನ ಸಂಕಲನ. ಮೂಲತಃ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕನ್ನಡದಲ್ಲಿ ತಮ್ಮ ಸೃಜನಾತ್ಮಕವನ್ನು […]
ಮನುಷ್ಯರು ಪ್ರಕೃತಿಯನ್ನು ಮೀರಬಲ್ಲರೆ?: ಡಾ. ಶಿವಕುಮಾರ್ ಆರ್.
ಶಿವಕುಮಾರ್ ದಂಡಿನ ಅವರು ಸಾಮಾಜಿಕ ಕಳಕಳಿಯುಳ್ಳ ಅಭೂತಪೂರ್ವ ಯುವ ಸಾಹಿತ್ಯ ಪ್ರತಿಭೆ. ಇವರು ಬರೆದದ್ದು ನಲವತ್ತೆಂದು ಕವಿತೆಗಳ “ಮೋಹದ ಪಥವೋ ಇಹಲೋಕದ ರಿಣವೋ” ಎಂಬ ಒಂದು ಕವನ ಸಂಕಲನ. ಅವರ ಎಲ್ಲ ಕವಿತೆಗಳಲ್ಲಿ ಸಾಮಾಜಿಕ ಕಳಕಳಿ ಕಂಡು ಬಂದರೂ ಕೆಲವು ಕವಿತೆಗಳು ಪ್ರಕೃತಿ ಪರವಾಗಿ ಹೆಚ್ಚಾಗಿ ಚಿಂತಿಸಿವೆ. ಅವರ ಪ್ರಕೃತಿಯ ಮುನಿಸು, ಹನಿ, ಪ್ರಕೃತಿಯ ಒಡಲೂ ಸಮಾನತೆಯ ಪಾಠವೂ ಎಂಬ ಕವಿತೆಗಳು ನಿಸರ್ಗತತ್ತ್ವವನ್ನು ಹೇಳುತ್ತವೆ. ಮನುಷ್ಯರು ಮೂಲತಃ ಅರಣ್ಯವಾಸಿಗಳು ಎಂಬುದು ನಮಗೆಲ್ಲ ತಿಳಿದಿರುವ ವಿಚಾರ. ಅವರಿಗೆ ಆರಂಭದಲ್ಲಿ […]
ಡಾ. ಶಾಂತಲಕ್ಷ್ಮಿಯವರ ಕಾವ್ಯ ಚಿಂತನೆ: ಸಂತೋಷ್ ಟಿ
ಅಭಿಜಾತ ಕನ್ನಡ ಲಲಿತಾಕಲಾ ಲೋಕದ ಕಾವ್ಯನ್ವೇಷಣೆಯಲ್ಲಿ ಹೊಸಚಿಂತನೆಗಳ ಬೆರಗು ಮೂಡಿಸಿದ ಕವಯತ್ರಿ ಡಾ. ಶಾಂತಲಕ್ಷ್ಮಿ. ಭಾವನೂಭೂತಿಯ ಅಭೀಪ್ಸೆಯ ಉತ್ಸುಕತೆಯಿಂದ ಸ್ರಜನಶೀಲ ಅಭಿವ್ಯಕ್ತಿ ಮಾಧ್ಯಮ ಕಾವ್ಯದಲ್ಲಿ ತಮ್ಮ ಧ್ವನಿಯನ್ನು ಅನುಸಂಧಾನ ಮಾಡುತ್ತಿರುವ ಮಹಿಳಾ ಸಾಧಕರಲ್ಲಿ ಈ ಕವಯತ್ರಿಯ ಕಾವ್ಯ ನವಿರಾದ ಭಾವಗಳಿಂದ ಜೀವತುಂಬಿ ಹರಿಯುವಂತದ್ದು. ವಾಸ್ತವದ ಬದುಕಿನ ನುಂಟು ಉಂಟು ಮಾಡಿದ ಸಹನೀಯತೆˌ ಕರುಳು ಮಿಡಿಯುವ ಭಾವಧಾರೆˌಪ್ರಕ್ರತಿಯ ಜೀವ ವೈವಿಧ್ಯ ದ್ರವ್ಯˌಬದುಕಿನ ಮೌಲ್ಯಗಳುˌ ಜಾಗತಿಕವಾಗಿ ಬದಲಾದ ಸನ್ನಿವೇಶಗಳುˌ ಕೃತಕತೆಯ ಮೋಡಿ ನಿಯೋನ್ ಸನ್ನೆಗಳು, ಸ್ವಾರ್ಥ ಪರಿಸ್ಥಿತಿಯ ಬಿಕ್ಕಟುಗಳ ಲಾಲಸೆಗಳು […]
ಮಿನಿ ಕತೆಗಳು: ಅರವಿಂದ. ಜಿ. ಜೋಷಿ.
“ಹರಿದ ಜೇಬು” ಸಂಜೆ, ಶಾಲೆಯಿಂದ ಮನೆಗೆ ಬಂದ ಹತ್ತರ ಪೋರ, ಗೋಪಿ ತನ್ನ ಏಳೆಂಟು ಗೆಳೆಯರೊಂದಿಗೆ ಸೇರಿ, ಮನೆಯ ಎದುರಿನ ರಸ್ತೆಮೇಲೆ ಲಗೋರಿ ಆಡುತ್ತಿದ್ದ. ಆಗ, ಆತನ ಪಕ್ಕದ ಮನೆ ಯಲ್ಲಿ ವಾಸವಾಗಿದ್ದ ನಡುವಯಸ್ಸಿನ ಭಾಗ್ಯ (ಆಂಟಿ) ಮನೆಯಿದಾಚೆಗೆ ಬಂದು, ಜಗುಲಿ ಮೇಲೆ ನಿಂತು, “ಗೋಪೀ. . ಗೋಪೀ. . “ಎಂದು ಕೂಗಿ ಕರೆದು ಆತನ ಕೈಗೆ ಇನ್ನೂರು ರೂಪಾಯಿ ನೋಟು ಕೊಡುತ್ತ, “ಲೋ. . ಗೋಪೀ. ಇಲ್ಲೇ ಹಿಂದ್ಗಡೆ ಶೇಟ್ರ ಅಂಗ್ಡಿಗೆ ಹೋಗಿ ಒಂದ್ ಪ್ಯಾಕೆಟ್ […]
ತೇಲುವ ಗ್ರಾಮಗಳ ಮುಳುಗುವ ಬದುಕು: ಎಂ ನಾಗರಾಜ ಶೆಟ್ಟಿ
ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ ಸ್ವಲ್ಪವೇ ಚಿಕ್ಕದಾದ ದಕ್ಷಿಣ ಏಷ್ಯಾದ ಪುಟ್ಟ ರಾಷ್ಟ್ರ ಕಾಂಬೋಡಿಯಾ. ಕಾಂಬೋಡಿಯಾದ ಜನಸಂಖ್ಯೆ ಒಂದು ಕೋಟಿ ಎಂಬತ್ತು ಲಕ್ಷ. ಅದರಲ್ಲಿ ಸುಮಾರು ಒಂದು ಲಕ್ಷ ಜನರು ತೇಲುವ ಗ್ರಾಮಗಳಲ್ಲಿ ವಾಸಿಸುತ್ತಾರೆ. ಕಾಂಬೋಡಿಯಾದಲ್ಲಿ ಏಳುನೂರು ತೇಲುವ ಗ್ರಾಮಗಳಿವೆಯೆಂದು ಹೇಳಲಾಗುತ್ತಿದೆ. ಕಾಂಬೋಡಿಯಾಕ್ಕೆ ಬರುವ ಪ್ರಯಾಣಿಕರಿಗೆ ವಿಶ್ವದ ಅತಿ ಹೆಚ್ಚು ವಿಸ್ತೀರ್ಣದ ಅಂಗೋರವಾಟ್ ದೇವಾಲಯ ಹೇಗೋ, ಹಾಗೆಯೇ ತೇಲುವ ಗ್ರಾಮಗಳು ಕೂಡಾ ಆಕರ್ಷಣೆಯ ಕೇಂದ್ರಗಳು. ಲಕ್ಷಾಂತರ ಜನರನ್ನು ಬಲಿ ಪಡೆದ ಪೋಲ್ಪಾಟ್ರಂತಹ ಸರ್ವಾಧಿಕಾರಿಯನ್ನು ಕಂಡ ಕಾಂಬೋಡಿಯವನ್ನು ನೋಡಬೇಕೆಂದು ಬಹಳ ವರ್ಷಗಳಿಂದ […]
ಡಾ.ಜಿ.ಎನ್.ಉಪಾಧ್ಯರ ಸಮೀಕ್ಷೆಯಲ್ಲರಳಿದ ಡಾ.ಜನಾರ್ದನ ಭಟ್ ಅವರ “ವಾಙ್ಞಯ ವಿವೇಕ”: ಅನುಸೂಯ ಯತೀಶ್
ಡಾ. ಜನಾರ್ದನ ಭಟ್ ನಮ್ಮೊಳಗಿನ ಸಂವೇದನಾಶೀಲ ಲೇಖಕರು. ಇವರು ಯಾವುದೇ ಸಾಹಿತ್ಯ ಪ್ರಕಾರಗಳಿಗೆ ಅಂಟಿಕೊಳ್ಳದೆ ಸೃಜನ ಮತ್ತು ಸೃಜನೇತರ ಎರಡು ಪ್ರಕಾರಗಳಲ್ಲೂ ತಮ್ಮನ್ನು ಅವಿರತ ತೊಡಗಿಸಿಕೊಂಡು ಧಣಿವರಿಯದೆ ಸಾಹಿತ್ಯಾರಾಧನೆಯಲ್ಲಿ ತೊಡಗಿರುವ ಬಹುಶ್ರುತ ವಿದ್ವಾಂಸರು. ಬಹುಭಾಷಾ ಪ್ರವೀಣರಾದ ಇವರು ಕಥೆ, ಕಾದಂಬರಿ, ವೈಚಾರಿಕ ಕೃತಿಗಳು, ಅಂಕಣಗಳು, ವಿಮರ್ಶೆ, ಮಕ್ಕಳ ಸಾಹಿತ್ಯ, ಇಂಗ್ಲೀಷ್ ಸಾಹಿತ್ಯ ರಚನೆಯ ಜೊತೆಗೆ ಹಲವಾರು ಕೃತಿಗಳ ಸಂಪಾದನೆ ಕೂಡ ಮಾಡಿ ಆಡು ಮುಟ್ಟದ ಸೊಪ್ಪಿಲ್ಲ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಕನ್ನಡ ಸಾಹಿತ್ಯದ […]
ಸಂವಿಧಾನದ ಮಹತ್ವವನ್ನು ಸಾರುವ ಮನೋಜ್ಞ ಸಿನಿಮಾ – 19.20.21: ಚಂದ್ರಪ್ರಭ ಕಠಾರಿ
ಹರಿವು, ನಾತಿಚರಾಮಿ, ಆಕ್ಟ್ 1978 ಸಿನಿಮಾಗಳಿಂದ ಸಂವೇದನಾಶೀಲ ನಿರ್ದೇಶಕರೆಂದು ಗುರುತಿಸಲ್ಪಟ್ಟಿರುವ ಮಂಸೋರೆಯವರ ಹೊಸ ಸಿನಿಮಾ-19.20.21. ಟೈಟಲ್ ಸೇರಿದಂತೆ ಹಲವು ಕುತೂಹಲಗಳೊಂದಿಗೆ ಅವರು ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಹಾಗೆ ತರುವಾಗ ಹಲವು ಸವಾಲುಗಳನ್ನು ತಮ್ಮ ಸಿನಿಮಾ ತಯಾರಿಕೆಯ ಅನುಭವದಿಂದ, ಪ್ರತಿಭಾವಂತಿಕೆಯಿಂದ ನಿಭಾಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಲ್ಲಿರುವ ಕುತ್ಲೂರು ಗ್ರಾಮದಲ್ಲಿ ಶತಮಾನಗಳಿಂದ ಬದುಕಿರುವ ಆದಿವಾಸಿ ಬುಡಕಟ್ಟು ಜನಾಂಗವಾದ ಮಲೆಕುಡಿಯರನ್ನು, ಸರ್ಕಾರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಯನ್ನು ಜಾರಿ ಮಾಡಿ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ, ಆಳುವ ಪ್ರಭುತ್ವದಿಂದ ನಡೆದ ದೌರ್ಜನ್ಯಗಳ […]
ನೀಚನ ಸಾವು: ಮಂಜು ಡಿ ಈಡಿಗೆರ್
ಓದೋಕ್ಕೆ ಅಂತ ರೂಮ್ ಮಾಡ್ಕೊಂಡು ಕೊಪ್ಪಳ ದಲ್ಲೇ ಇದ್ದೆ. ದಿನ ಬೆಳಗ್ಗೆ ರನ್ನಿಂಗು ವರಮಪ್ಪು ವರ್ಕೌಟು ಮಾಡೋದು ನನ್ನ ದಿನ ನಿತ್ಯದ ಅಭ್ಯಾಸ ಆಗಿತ್ತು. ಹಾಗಾಗಿ ದಿನ ಬೆಳಗ್ಗೆ ಸ್ಟೇಡಿಯಂಗೆ ಪ್ರಾಕ್ಟೀಸ್ ಗೆ ಹೋಗ್ತಾ ಇದ್ದೆ. ಸಂಡೇ ಪ್ರಾಕ್ಟೀಸ್ ಮುಗಿಸಿಕೊಂಡು ರೂಮ್ಗೆ ಬಂದೆ. ನನ್ನ ರೂಮಿನ ಪಕ್ಕ ಮನೆ ಖಾಲಿ ಆಗಿತ್ತು, ಅದಕ್ಕೆ ಯಾರೋ ಹೊಸಬರು ಬಂದಾಗೆ ಇತ್ತು. ನನ್ನ ರೂಮು ಮತ್ತೆ ಅವರ ಮನೆ ಎರಡು ಪಕ್ಕದಲೆ ಇರುವುದರಿಂದ ಯಾರು ಎಂದು ಗಮನಿಸಬೇಕಾಯಿತು. ಮನೆ ಇಂದ […]
ನಾ ಕಂಡಂತೆ: ಶೀತಲ್
ನಾನು ಈ ಮನೆಗೆ ಬಂದು ಈಗ ನಾಲ್ಕು ವರ್ಷವಾಯಿತು. ಮನೆಯೆಂದರೆ ಅಬ್ಬಾ! ಇವರ ಮನೆಯಂತೆ ಯಾವ ಮನೆಯೂ ಇಲ್ಲ ಆ ಲೇಔಟ್ ನಲ್ಲಿ ಎಂದು ಆಗಾಗ ಕೆಲಸದಾಕೆ ಸುಗುಣ ಮನೆಯೊಡತಿ ವೈದೇಹಿ ಯವರ ಬಳಿ ಹೇಳುವುದನ್ನು ಕೇಳಿದ್ದೇನೆ. ಇವರ ಮನೆಯಲ್ಲದೆ ನಾನು ಯಾವ ಮನೆಗೂ ಹೋಗುವ ಹಾಗಿಲ್ಲವಲ್ಲ ಹಾಗಾಗಿ ನನ್ನ ಸ್ವಂತ ಅಭಿಪ್ರಾಯವಲ್ಲ ಇದು. ಇವರ ಮನೆಯಿಂದ ಎದುರು ಕಾಣುವ ಎರಡು ಮನೆಗಳು, ಹಾಗೆ ಬಲಗಡೆಗೆ, ಇವರ ಮನೆಯ ಹೂದೋಟ ದಾಟಿದರೆ ಕಾಣುವ ಮನೆ ಕೂಡ ಇವರ […]
ಬೈಸಿಕಲ್ ಥೀವ್ಸ್ ವಿಮರ್ಶೆ: ಕಿರಣ್ ಕುಮಾರ್ ಡಿ
‘ಬೈಸಿಕಲ್ ಥೀವ್ಸ್’ ೧೯೪೮ರಲ್ಲಿ ಇಟಾಲಿಯನ್ ಭಾಷೆಯಲ್ಲಿ ತೆರೆಕಂಡ ಚಲನಚಿತ್ರ. ಇಟಾಲಿಯಲ್ಲಿ “ಲಾದ್ರಿ ದಿ ಬೈಸಿಕ್ಲೆಟ್” ಹೆಸರಿನಲ್ಲಿ ತೆರೆಕಂಡಿತು. ಚಲನಚಿತ್ರದ ಕಥೆಯನ್ನು ಸಿಸೇರ್ ಜವಟ್ಟಿನಿಯವರು ೧೯೪೬ರಲ್ಲಿ ಪ್ರಕಟಗೊಂಡ “ಲಾದ್ರಿ ದಿ ಬೈಸಿಕ್ಲೆಟ್” ಕಾದಂಬರಿಯಿಂದ ಅಳವಡಿಸಿಕೊಂಡು ಬರೆದಿದ್ದಾರೆ. ಈ ಚಲನಚಿತ್ರವನ್ನು ವಿಟ್ಟೋರಿಯಾ ಡಿ ಸಿಕಾ ಅವರು ನಿರ್ದೇಶಿಸಿದ್ದಾರೆ. ಈ ಚಲನಚಿತ್ರ ೨ನೇ ವಿಶ್ವಯುದ್ಧದ ನಂತರ ತೆರೆಕಂಡಿದ್ದು. ೨ನೇ ವಿಶ್ವಯುದ್ಧ ಮುಗಿದ ಮೇಲೆ ಇಟಾಲಿಯಲ್ಲಿ ಎದುರಾದ ಉದ್ಯೋಗದ ಸಮಸ್ಯೆಯನ್ನು ಮತ್ತು ಬಡತನವನ್ನು ಹಲವಾರು ಪಾತ್ರದ ಮೂಲಕ ಹೇಳುತ್ತದೆ ಈ ಚಲನಚಿತ್ರ. ಚಲನಚಿತ್ರದ […]
“ನೇರ ವ್ಯಕ್ತಿತ್ವ ಶಕ್ತಿಯೇ…?? “: ರೇಖಾ ಶಂಕರ್.
ಆತ್ಮೀಯ ಓದುಗರೇ, ನಾನಿವತ್ತು ಹೇಳ್ತಿರೊ ವಿಷ್ಯ ಅಂದ್ರೆ ನೇರ ವ್ಯಕ್ತಿತ್ವದ ಬಗ್ಗೆ, ಅದೇ ಇದ್ದಿದ್ದು ಇದ್ದಂಗೆ ಹೇಳುದ್ರೆ ಎದ್ ಬಂದ್ ಎದೆಗೆ ಒದ್ರಂತೆ ಅಂತ ಗಾದೆ ಹೇಳ್ತಾರಲ್ಲ. ಅದೇ ವಿಷಯ…., ಅದಕ್ಕೆ ನೇರ ನುಡಿಯ ವ್ಯಕ್ತಿತ್ವ ಅಂತ್ಲೂ ಹೇಳ್ಬೌದು. ನೋಡೋಕೆ ಮನುಷ್ಯ ಒಂದೆ ಥರ ಕಾಣ್ತಿದ್ರೂ ಅವನಲ್ಲಿ ಇರೊ ಗುಣ ಸ್ವಭಾವಗಳು ವಿಭಿನ್ನವಾಗಿರತ್ತೆ, ಅವ ನಡೆಯೊ ಹಾದಿ ಆಡುವ ಮಾತು ತನ್ನ ನೋಡುವ ನೋಟ ಒಟ್ಟಾರೆ ತನ್ನ ಬದುಕುವ ಶೈಲಿಯನ್ನೆ ವಿಭಿನ್ನವಾಗಿಟ್ಕೊಂಡಿರ್ತಾನೆ. ” ಲೋಕೊ ಭಿನ್ನ ರುಚಿಃ […]
ನಾಸಿಕ ಪುರಾಣ: ಡಾ.ವೃಂದಾ ಸಂಗಮ್,
ನಾಸಿಕದಾಗ ಅಂತ ನಮ್ಮ ಶೀನೂ ಮಾಮಾ ಮಾತು ಶುರು ಮಾಡಿದರೂಂದರ, ನಾವೆಲ್ಲಾ, ಮೂಗಿನ ಮೇಲೊಂದು ಬೆರಳಿಟ್ಟುಕೊಂಡು ಕೂತಿರಬೇಕು. ಯಾಕಂದರ ನಮ್ಮ ಶೀನೂ ಮಾಮಾ ಅಂದರ ಅಸಾಧಾರಣ ವ್ಯಕ್ತಿ. ಹಂಗಂತ, ಭಾಳ, ಭಾಳ ಸಾಧನಾ ಮಾಡ್ಯಾರ ಅಂತಲ್ಲ. ಸೀದಾ ಹಾದಿಯವರಲ್ಲ. ಸೊಟ್ಟ ಮೂಗಿನವರು. ಅಂದರ, ಹೀಂಗ, ಮಾತು ಶುರು ಮಾಡಿದಾಗ, ನಾವು ಯಾವ ರೀತಿ ವಿಚಾರ ಮಾಡಿದರೂ, ಇವರು ಈ ವಿಷಯದ ಹರಟಿ ಪ್ರಾರಂಭಿಸಬಹುದು ಅಂತ ಒಂದು ಅಂದಾಜು ಇಟ್ಟಕೊಂಡಿದ್ದರ, ಅದನ್ನೆಲ್ಲಾ, ಮುರದು, ಹೊಸಾ ದಾರಿಯೊಳಗೇನೇ ಹರಟೀ ಪ್ರಾರಂಭ […]
ಶಿವಧ್ಯಾನ: ಡಾ. ರಶ್ಮಿ ಕಬ್ಬಗಾರ
ಅಲ್ಲಿಗೆ ಹೋದ ಮೇಲೆ ಗೊತ್ತಾದದ್ದುನಮ್ಮೂರ ಶಿವ ಎಷ್ಟು ಸಿಂಪಲ್ಲು ಅಂತ !ಶಿವರಾತ್ರಿಯೋ- ಮಡಿಹುಡಿ ನೈವೇದ್ಯದತಲೆಬಿಸಿ ಎಳ್ಳಷ್ಟೂ ಇರದಶುದ್ಧ ಪ್ರೀತಿಯ ಸಮಾವೇಶವೇ ಸರಿಯೆನ್ನಿ ಆ ದಿನ ಯಾವ ಹೊಳೆಯೂ ಆದೀತು ಪಕ್ಕದಲ್ಲೊಂದು ಶಿಲೆಯಿದ್ದರಲ್ಲಿ ಶಿವರಾತ್ರಿ ನೀರೆಲ್ಲವೂ ಗಂಗೆ’ ಕಲ್ಲ ತಲೆಮೇಲೊಂದಿಷ್ಟು ಅಭಿಷೇಕಗೈದುನಿರುಮ್ಮಳವಾಗಿ ಬನ್ನಿ ಮನೆಗೆ’- ಹಿರಿಯರ ನುಡಿ ನಮ್ಮಜನ ಊರು-ಕೇರಿಯ ಗೆಳೆಯರನ್ನಸಹಜೀವಗಳನ್ನ ಕೂಡಿಸಿ,ಗೂಡ್ಸು, ಲಾರಿ ತುಂಬಿಕೊಂಡುಗಲ್ಲದ ಗೌಜುಗಳೊಂದಿಗೆಶಿವರಾತ್ರಿ ಪಿಕ್ ನಿಕ್ ಹೋಗಿದ್ದುಂಟು. ಪ್ರತಿವರ್ಷವೂ- ಮುಂದಿನ್ವರ್ಷ ನಿನ್ನ ಮುದ್ದಾಂ ಕರಕೊಂಡ್ಹೋಗ್ತೆವೇ ಅಂತ್ಹೇಳಿ ಕೈಕೊಟ್ಟು ಓಡಿದ ಅಕ್ಕ, ಅಣ್ಣ, ಚಿಕ್ಕಮ್ಮನ ನೆನೆದು,ಚಳ್ಳೇಪಿಳ್ಳೆಗಳಾದ […]