ಪಂಜುವಿಗೆ ಎಂಟು ವರ್ಷಗಳು ತುಂಬಿ ಒಂಬತ್ತನೇ ವರ್ಷಕ್ಕೆ ಕಾಲಿಟ್ಟಿತು. ಇಷ್ಟು ಸುದೀರ್ಘ ಕಾಲ ಕನ್ನಡದಲ್ಲಿ ನೆಲೆ ನಿಂತ ಅಂತರ್ಜಾಲ ಪತ್ರಿಕೆಗಳು ಬೆರಳೆಣಿಕೆಯಷ್ಟು ಮಾತ್ರ.. ಒಮ್ಮೊಮ್ಮೆ ಅಂತರ್ಜಾಲ ಪತ್ರಿಕೆಗಳನ್ನು ನಡೆಸೋದು ಒಂದು ರೀತಿಯಲ್ಲಿ ಸುಲಭ ಮತ್ತೊಂದು ರೀತಿಯಲ್ಲಿ ಬಲು ಕಠಿಣ. ಸುಲಭ ಯಾಕೆಂದರೆ ಇವತ್ತು ಒಂದಷ್ಟು ದುಡ್ಡು ಖರ್ಚು ಮಾಡಿದರೆ ಚಂದದ ವೆಬ್ ಸೈಟ್ ಗಳನ್ನು ಒಂದಷ್ಟು ಗಂಟೆಗಳಲ್ಲಿ ತಯಾರು ಮಾಡಿಬಿಡಬಹುದು. ಆದರೆ ವೆಬ್ ತಯಾರು ಮಾಡಿದ ಮೇಲೆ ಅದನ್ನು ನಡೆಸೋದು ಕಠಿಣ. ಯಾಕೆಂದರೆ ಮೊದಲಿಗೆ ವೆಬ್ ಸೈಟ್ […]
“ಮೂಚಿಮ್ಮ ಕಥಾ ಸಂಕಲನ”ದ ಬಿಡುಗಡೆ ಸಮಾರಂಭ
ಪ್ರಪಂಚದ ಯಾವುದೇ ಮೂಲೆಯಿಂದ ಕನ್ನಡ ಪುಸ್ತಕಗಳನ್ನು ತಮ್ಮ ಮೊಬೈಲಿನಲ್ಲಿ ಓದುವ, ಕೇಳುವ ಆಯ್ಕೆ ಕಲ್ಪಿಸಿರುವ ಮೈಲ್ಯಾಂಗ್ ಬುಕ್ಸ್ ತನ್ನ ಪ್ರಕಾಶನ ಸಂಸ್ಥೆಯ ಅಡಿಯಲ್ಲಿ ಹೊರ ತರುತ್ತಿರುವ ನಾಲ್ಕನೆಯ ಪುಸ್ತಕ “ಮೂಚಿಮ್ಮ ಕಥಾ ಸಂಕಲನ”ದ ಬಿಡುಗಡೆಯನ್ನು ಇದೇ ಜನವರಿ 22, ಶುಕ್ರವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ಮೈಲ್ಯಾಂಗ್ ಫೇಸ್ ಬುಕ್ ಪುಟದಲ್ಲಿ ನಡೆಯುವ ಲೈವ್ ಮೂಲಕ ಹಮ್ಮಿಕೊಂಡಿದೆ. ವೃತ್ತಿಯಿಂದ ವೈದ್ಯರಾಗಿರುವ ಡಾ.ಅಜಿತ್ ಹರೀಶಿ ಅವರು ಬರೆದಿರುವ ಮೂಚಿಮ್ಮ ಕಥಾ ಸಂಕಲನ ಇಬುಕ್, ಆಡಿಯೋಬುಕ್ ಹಾಗೂ ಪ್ರಿಂಟ್ ಮೂರೂ ಆವೃತ್ತಿಯಲ್ಲಿ ಬಿಡುಗಡೆಯಾಗುತ್ತಿದೆ. […]
ಪಂಜು ಹುಟ್ಟುಹಬ್ಬದ ಫೇಸ್ ಬುಕ್ ಚಾಲೆಂಜ್
ಜನವರಿ ೨೧ ಪಂಜು ಮ್ಯಾಗಜಿನ್ ಹುಟ್ಟಿದ ದಿನ.ಪಂಜುವಿನ ಒಂಬತ್ತನೇ ಹುಟ್ಟಹಬ್ಬದ ದಿನವನ್ನು ನಾವು ನೀವು ಎಲ್ಲರೂ ಸೇರಿ ಆಚರಿಸೋಣ.ಪಂಜುವಿನ ಕುರಿತು ನಿಮಗೆ ಅನಿಸಿದ್ದನ್ನು ಅಥವಾ ಪಂಜುವಿನಲ್ಲಿ ನೀವು ಓದಿದ/ಬರೆದ ಯಾವುದಾದರೊಂದು ಬರಹದ ಒಂದಷ್ಟು ಸಾಲುಗಳನ್ನು ಓದಿ ಪುಟ್ಟ ವಿಡಿಯೋ ಮಾಡಿಆ ವಿಡಿಯೋವನ್ನು ಫೇಸ್ ಬುಕ್ ನಲ್ಲಿ #panjumagazinebirthday #ಪಂಜುಪತ್ರಿಕೆಹುಟ್ಟುಹಬ್ಬ ಹ್ಯಾಷ್ ಟ್ಯಾಗ್ ಬಳಸಿ ಅಪ್ ಲೋಡ್ ಮಾಡಿಈ ಚಾಲೆಂಜ್ ಸ್ವೀಕರಿಸಲು #panjumagazinebirthday #ಪಂಜುಪತ್ರಿಕೆಹುಟ್ಟುಹಬ್ಬ ಹ್ಯಾಷ್ ಟ್ಯಾಗ್ ನೊಂದಿಗೆ ನಿಮ್ಮ ಗೆಳೆಯರನ್ನು ಟ್ಯಾಗ್ ಮಾಡಿ ನಾಮಿನೇಟ್ ಮಾಡಿ.ಕನ್ನಡದ ಬರಹಗಳು […]
ಪಂಜು ಕಾವ್ಯಧಾರೆ
ಗಝಲ್ ಜಾತಿಸೀಮೆಯ ದಾಟಿ ಹೊಸನಾಡಕಟ್ಟುವೆನು ಜಗದೊಳಗೆ||ಮೌಢ್ಯತೆಯ ಕಡಿದೊಗೆದು ಸತ್ಯವನುತೋರುವೆನು ಜಗದೊಳಗೆ|| ಕಾರ್ಗತ್ತಲ ದಾರಿಯಲಿ ಮುಳ್ಳುಗಂಟಿಎತ್ತರಕೆ ಬೆಳದಿದೆ ನೋಡು|ಬಿರುಕು ಬಿಟ್ಟ ಮನಗಳಲ್ಲಿ ಪ್ರೀತಿಯನುಬಿತ್ತುವೆನು ಜಗದೊಳಗೆ|| ದ್ವೇಷ ಅಸೂಯೆಗಳ ಕಿಡಿಕಾರಿ ಬೆಂಕಿಉಗುಳುತ್ತಿದ್ದಾರೆ ಸುತ್ತಲೂ|ಘಾಸಿಗೊಂಡ ಮೃದುಮನಕೆ ಔಷಧಹಚ್ಚುವೆನು ಜಗದೊಳಗೆ|| ಅನ್ಯಾಯ ಅಕ್ರೋಶಗಳ ಮೆಟ್ಟಿ ನಿಂತುರಣಭೇರಿ ಬಾರಿಸುವೆ|ಜಯದ ಹಾದಿಯನು ವೀಕ್ಷಿಸುತಲಿಸಾಗುವೆನು ಜಗದೊಳಗೆ|| ಅಭಿನವನ ಒಡಲ ಕಿಚ್ಚದು ನಿಗಿನಿಗಿಕೆಂಡವಾಗಿ ಸುಡುತ್ತಿದೆ ||ಕೆಸರು ತುಂಬಿದ ಹೃದಯವನು ಪರಿಶುದ್ದಮಾಡುವೆನು ಜಗದೊಳಗೆ|| ಶಂಕರಾನಂದ ಹೆಬ್ಬಾಳ ಗಜಲ್ ಅನುರಾಗದ ಮೇಘವು ಅವತರಿಸಿದೆ ಮನದಲ್ಲಿಮುತ್ತಿನ ಹನಿಗಳು ಹೆಪ್ಪುಗಟ್ಟಿವೆ ನನ್ನ ಅಧರದಲ್ಲಿ ಗಾಳಿಯಾಗಿ […]
“ಜ಼ೀರೋ ಬ್ಯಾಲೆನ್ಸ್- ಒಂದು ಚೌಕಟ್ಟಿನೊಳಗೆ ಹುದುಗಿರುವ ವಿಷಾದ ಹಾಗು ಜೀವಗಳ ತೀವ್ರ ಸತ್ಯದ ಶೋಧ”: ಎಂ.ಜವರಾಜ್
ಕವಿತೆ, ಕವನ, ಕಾವ್ಯ, ಪದ್ಯ, ಕಥನ ಕಾವ್ಯ, ನೀಳ್ಗಾವ್ಯ ಹೀಗೆ ಗುರುತಿಸುವ ವಿವಿಧ ರೂಪದ ಬಾಹ್ಯ ಮತ್ತು ಆಂತರಿಕ ಭಾವದ ರಚನೆ ಒಂದೇ ತರಹದ್ದೆನಿಸುವ ಕನ್ನಡದ ಸಾಂಸ್ಕೃತಿಕ ಆಸ್ಮಿತೆ ಹೆಚ್ವಿಸಿದ ಸಾಹಿತ್ಯ ಪ್ರಕಾರವಿದು. ಕಾಲಗಳುರುತ್ತ ಭಾಷೆಯ ಅಸ್ತಿತ್ವದ ಪ್ರಶ್ನೆ ಎದುರಾಯಿತು. ಜನರ ಭಾವನೆಗಳ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಯ್ತು. ಧಾರ್ಮಿಕವಾದ ಜಟಿಲ ಸಮಸ್ಯೆಗಳೂ ಸೃಷ್ಟಿಯಾದವು. ಅಸಮಾನ ಸಾಮಾಜಿಕ ವ್ಯವಸ್ಥೆ ವಿರುದ್ಧ ಸಾಹಿತ್ಯದ ಮನಸ್ಸುಗಳು ಕವಿತೆಗಳನ್ನು ಬರೆದು ರಾಗ ಕಟ್ಟಿ ಕೆಚ್ಚೆದೆಯಲ್ಲಿ ದನಿಯೇರಿಸಿ ಹಾಡಿ ಜನ ಸಮೂಹವನ್ನು ಎಚ್ಚರಿಸಿದವು. […]
ಬಾಳಿ ಬದುಕಿದವರು: ಎಸ್.ಗಣೇಶ್, ಮೈಸೂರು.
ಇತ್ತೀಚೆಗೆ ನನ್ನ ಸಂಬಂಧಿಯೊಬ್ಬರು ಮರಣ ಹೊಂದಿದರು, ಕುಟುಂಬದವರೆಲ್ಲಾ ಒಂದು ಕಡೆ ಸೇರಿ, ಮೃತರ ಆತ್ಮ ಶಾಂತಿಗಾಗಿ ಉತ್ತರಕ್ರಿಯೆಗಳನ್ನು ಹೇಗೆ ನೆರವೇರಿಸಬೇಕು? ದಾನಗಳನ್ನು ಏನು ಕೊಡಬೇಕು? ಪ್ರತ್ಯಕ್ಷ ದಾನಗಳನ್ನು ಕೊಡಬೇಕೋ? ಅದರ ವೆಚ್ಚವೆಷ್ಟು? ಎಲ್ಲಿ ಕರ್ಮಗಳನ್ನು ಮಾಡಬೇಕು? ಹೀಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಆಗುತ್ತಿತ್ತು.. ನಾನು ತದೇಕಚಿತ್ತದಿಂದ ಎಲ್ಲವನ್ನು ಗಮನಿಸುತ್ತಿದ್ದೆ, ಗುಂಪಿನಲ್ಲಿನ ಹಿರಿಯರೊಬ್ಬರು ಪ್ರತಿಯೊಂದು ಪ್ರಶ್ನೆಗಳಿಗೂ ಸಲಹೆಗಳನ್ನು ನೀಡುತ್ತಿದ್ದರು, ಅದನ್ನ ಉಳಿದವರು ಅನುಮೋದಿಸುತ್ತಿದ್ದರು.. ಒಟ್ಟಿನಲ್ಲಿ ಆ ಹಿರಿಯರ ಮಾತನ್ನು ಯಾರು ಮರು ಪ್ರಶ್ನಿಸುತ್ತಿರಲಿಲ್ಲ.. ಅವರ ಮಾತೇ ಅಂತಿಮವಾಗುತ್ತಿತ್ತು.. […]
ಪ್ರೊಫೆಷನಲ್ ಅಲ್ಲದ ಫೋಟೋಗ್ರಾಫರ್ ನ ಒಂದು ಪ್ರಸಂಗ…: ಪಿ.ಎಸ್. ಅಮರದೀಪ್.
ಸಮಾರಂಭದ ಊಟಕ್ಕೆ ಮುಂಚೆ ಬಾಳೆ ಎಲೆಯಲ್ಲಿ ಉಪ್ಪು, ಕೋಸಂಬರಿ, ಉಪ್ಪಿನಕಾಯಿ ಮುಂಚೆಯೇ ನೀಡುವ ಅಭ್ಯಾಸ ಎಷ್ಟರಮಟ್ಟಿಗೆ ಇದೆಯೋ ಹಾಗೆಯೇ ಒಂದು ಕಾರ್ಯಕ್ರಮ, ಅದರಲ್ಲೂ ಕೌಟುಂಬಿಕ ಕಾರ್ಯಕ್ರಮ ಅಂದರೆ ನಿಶ್ಚಿತಾರ್ಥ, ಹರಿಶಿಣ ಶಾಸ್ತ್ರ, ಮದುವೆ, ರೆಸೆಪ್ಷನ್ನು, ಸೀಮಂತ ಕಾರ್ಯ, ನಾಮಕರಣ ಶಾಸ್ತ್ರ, ಹೀಗೆ ಯಾವುದೇ ಇರಲಿ, ಫೋಟೋಗ್ರಾಫರ್, ವಿಡಿಯೋಗ್ರಾಫರ್ ಅವರಂತೂ ಊರ ಮುಂಚಿತವಾಗಿ ರೆಡಿಯಾಗಿರಬೇಕು.. ಈಗೀಗಂತೂ ಎಲ್ಲದಕ್ಕೂ ಪ್ರೀ ಮತ್ತು ಪೋಸ್ಟ್ ಫೋಟೋ ಶೂಟ್ ಟ್ರೆಂಡ್ ಶುರುವಾಗಿದೆ. ಮೊದಲು ಹೇಳಿದ್ನಲ್ಲ? ಆ ಎಲ್ಲಾ ಕಾರ್ಯಕ್ರಮಗಳದ್ದೂ ಪ್ರೀ ಮತ್ತು ಪೋಸ್ಟ್ […]
ನಮ್ಮ ಜಿಲ್ಲೆಯ ಗಜಲ್ ಕಾರರು… (ಭಾಗ ೧): ವೇಣು ಜಾಲಿಬೆಂಚಿ
ಗಜಲ್ ಬರೆಯುವ ವಿಷಯದಲ್ಲಿ ಬಹಳಷ್ಟು ಪಳಗಿದ ಕೈಗಳು ನಮ್ಮಲ್ಲಿ ಸಾಕಷ್ಟಿವೆ. . . . (ಇಲ್ಲಿ ಕೇವಲ ನಮ್ಮ ರಾಯಚೂರು ಜಿಲ್ಲೆಯನ್ನು ಸೀಮಿತವಾಗಿಟ್ಟುಕೊಂಡು ಹೇಳುವ ಪ್ರಯತ್ನ ಹಾಗೂ ಈ ಬರಹದ ಹಿಂದೆ ಯಾವ ಉದ್ದೇಶವೂ ಇಲ್ಲ. . . ಕೇವಲ ವಿಚಾರ ವಿನಿಮಯ ಮಾತ್ರ) ನಮ್ಮ ಭಾಗದ ಹೆಮ್ಮೆಯ ಗರಿಮೆ ದಿವಂಗತ ಶಾಂತರಸರನ್ನು ಈ ಗಜಲ್ ವಿಷಯದಲ್ಲಿ ಮೂಲ ಸಂಸ್ಥಾಪಕರಾಗಿ ನಾವು ಕಾಣುತ್ತೇವೆ. . ತರುವಾಯ ಶ್ರೀಮತಿ ಎಚ್. ಎಸ್ ಮುಕ್ತಾಯಕ್ಕ, ತರುವಾಯ ದಿವಂಗತ ಶ್ರೀ ಜಂಬಣ್ಣ […]
ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 61 & 62): ಎಂ. ಜವರಾಜ್
-೬೧-ಈ ಅಯ್ನೋರ್ ಪಾದಬೀದ್ಬೀದಿಲಿ ತಿರ್ಗಾಡ್ತಿತ್ತುಆ ಪಾದ ತಿರ್ಗಾಡ ಬಿರುಸ್ಗಬೀದ್ಬೀದಿಲಿ ಲಾರಿಗಳು ತಿರುಗ್ತಿದ್ದುಆ ತಿರುಗ್ತಿದ್ದ ಲಾರಿಗಳು ಮಣ್ಸುರ್ಸ್ದುಬರ್ಗುಟ್ಗ ಮೊರ್ಗುಟ್ಗ ಹೋಯ್ತಿದ್ದು ಚೇರ್ಮನ್ನಾಗಿ ವರ್ಸಾಗಿತ್ತುಊರೊಳ್ಗ ಮೋರಿಗಳು ದಿಕ್ಕಾಪಾಲು ಹರಿತಾಬೀದಿ ಯಾವ್ದ ಮೋರಿ ಯಾವ್ದ ಅನ್ನದೇ ತಿಳಿದೆಪುಂಡೆಲ್ಲ ಸೇರಿ ಪಂಚಾಯ್ತಿಲಿ ಗುಲ್ಲೆಬ್ಬಿತ್ತು ಆ ಆಳು ಇದ ಮೊದುಲ್ಗೆ ಹೇಳಿದ್ದಆದ್ರ ಈ ಅಯ್ನೋರುಆ ಆಳ್ ಮಾತ್ನ ಬೀದಿ ಪಾಲ್ ಮಾಡಿನಗಾಡ್ತ ಇದ್ದದ ನಾ ಕಂಡಿದ್ದಿ ಈಗ ಈ ಅಯ್ನೋರ್ ಪಾದ್ಗಳುಬೀದಿ ಬುಟ್ಟು ದೂರಸ್ಟ ನಡ್ದುಜೊತ್ಗ ಆ ಆಳೂಹಿಂದಿಂದ ನಡಿತಾ ಬತ್ತಿದ್ನಸಂದ ಆಯ್ತ ಬಂತುಆಗಆ […]
“ಧಣೇರ ಬಾವಿ”ಪುಸ್ತಕದ ಕುರಿತ ನನ್ನ ಸಣ್ಣ ವಿಮಶೆ೯: ಸುರೇಶ್ ಮಲ್ಲಿಗೆ ಮನೆ
ಈ ಕಥೆಗಳೇ ಹಾಗೆ ಅನಿಸುತ್ತೆ, ನಮ್ಮ ಮುಖದಲ್ಲಿನ ನವರಸಗಳನ್ನು ಹೊರಹಾಕಲು ಕಥೆಗಾರರು ಕಾಯುತ್ತಿರುತ್ತಾರೆ..!!? ನಮ್ಮ ತುಟಿಯ ಪಿಸು ನಗುವಿನಿಂದ ಪ್ರಾರಂಭವಾದ ಕೆಲ ಕಥೆಗಳು ಕೊನೆಗೆ ಕೊನೆಗೊಳ್ಳುವುದು ದುರಂತ ಕಣ್ಣೀರಿನ ಹನಿಗಳಿಂದ..!! ಕೆಲವು ಮೂಕವಿಸ್ಮಿತನನ್ನಾಗಿ ಮಾಡುತ್ತವೆ, ಕೆಲವು ಒಂದು ಬಗೆಯ ಮ್ಲಾನತೆಯ ಭಾವನೆಯನ್ನು ಮೂಡಿಸುತ್ತದೆ, ಕೆಲವಂತೂ ನಮ್ಮದೇ ಕಥೆಯೇ ಎನ್ನಿಸುವಂತಿರುತ್ತವೆ, ಕೆಲವು ನಮ್ಮ ಗತಕಾಲವನ್ನು ನೆನಪಿಸುವಂತಿರುತ್ತವೆ. ಹೀಗೆ ನಾನಾ ಬಗೆಯವು. ಕಥೆಗಳೇ ದಾರಿತಪ್ಪಿರುವ ಕಾಲದಲ್ಲಿ ಕಥೆಗಾರ ರಾಗುವುದು ಕಥೆಗಳಲ್ಲಿ ಮಾತ್ರ ನೋಡುವಂತಹ ಈ ಕಾಲದಲ್ಲಿ ಕಥೆಗಳು ಕಥೆಗಳಾಗಿ ಮಾತ್ರ […]
ಅಸ್ಪೃಶ್ಯತೆಯ ಅನಾವರಣ- ಮುಲ್ಕ ರಾಜ ಆನಂದರ-Untouchable: ನಾಗರೇಖಾ ಗಾಂವಕರ
ಆತ ಭಾಕಾ. ಹದಿನೆಂಟರ ದಲಿತ ಯುವಕ. ಆತನ ಬಹುದಿನದ ಆಸೆ ಹಾಕಿ ಆಡುವುದು. ಅದಕ್ಕಾಗಿ ಹಾಕಿ ಕೋಲು ಅನಿವಾರ್ಯ. ಬಡವ ಭಾಕಾನಿಗೆ ಅದು ಕಷ್ಟಸಾಧ್ಯ. ಆದರೆ ಅದನ್ನು ಕರುಣಿಸುವ ಹವಾಲ್ದಾರ ಚರತ್ಸಿಂಗ್ ಆತನಿಗೆ ದೇವರಂತೆ ಕಾಣುತ್ತಾನೆ. ಸಾವಿರಾರು ವರ್ಷಗಳ ಕೋಟಲೆಗಳು ಕ್ಷಣಮಾತ್ರದಲ್ಲಿ ಕಣ್ಮರೆಯಾಗುತ್ತದೆ. ಬುಲಂದಶಹರನ ಹೊರವಲಯದಲ್ಲಿರುವ ಬಾವಿ. ಸವರ್ಣಿಯರಿಗೆ ಮಾತ್ರ ನೀರು ಸೇದುವ ಹಕ್ಕು. ಕೆಳಜಾತಿ ದಲಿತ ಹೆಣ್ಣುಮಕ್ಕಳು ಅವರು ನೀಡುವ ನೀರಿಗಾಗಿ ದಿನಗಟ್ಟಲೆ ಕಾಯಬೇಕು.ಸೋಹಿನಿ ಆಗಷ್ಟೇ ಪ್ರಾಯಕ್ಕೆ ಬಂದ ತರುಣಿ. ಭಾಕಾನ ಮುದ್ದಿನ ತಂಗಿ. ತನ್ನ […]
ಬದಲಾವಣೆಯೊಂದಿಗೆ ಬದುಕು: ವೇದಾವತಿ. ಹೆಚ್. ಎಸ್.
ಅದೊಂದು ದಿನ ರಾಶಿ ಹಳೆಯ ಪುಸ್ತಕಗಳ ನಡುವೆ ಒಂದು ನೆನೆಪಿನ ಬುತ್ತಿಯಂತಿದ್ದ ಡೈರಿಯೊಂದು ನನ್ನ ಕೈಗೆ ಸಿಕ್ಕಿತ್ತು. ಆ ಡೈರಿಯು ೨೫ಸಂವಸ್ಸರವನ್ನು ಕಂಡು ಸಿಲ್ವರ್ದ ಜ್ಯೂಬಿಲಿಯ ಗಡಿಯನ್ನು ದಾಟಿತ್ತು. ಒಂದೊಂದೇ ಪುಟಗಳನ್ನು ತಿರುವುತ್ತಾ ಹೋದಂತೆ ಆ ಪುಟಗಳಲ್ಲಿ ನನ್ನ ಸ್ನೇಹಿತೆಯರ ಸುಂದರವಾದ ಒಂದೊಂದು ರೀತಿಯಲ್ಲಿರುವ ಹಸ್ತಾಕ್ಷರಗಳಿದ್ದವು. ಅದರಲ್ಲಿರುವ ಬರಹಗಳನ್ನು ಓದುತ್ತಾ ಒಂದೊಂದೇ ಪುಟಗಳನ್ನು ತಿರುವುತ್ತಾ ಹೋದಂತೆ ಡೈರಿಯ ಒಂದೊಂದು ಪುಟಗಳಲ್ಲೂ ವೈವಿಧ್ಯಮಯ ರೀತಿಯಲ್ಲಿ ನನ್ನ ಗುಣಗಾನವನ್ನು ಹೊಗಳಿ ಬರೆದ ಬರಹಗಳನ್ನು ನೋಡಿ ಒಮ್ಮೆ ಕಣ್ಣು ಮಂಜಾದರೆ, ಇನ್ನೊಮ್ಮೆ […]