ಸ್ತ್ರೀ ಸಂವೇದನೆಯ ಕಾದಂಬರಿ; ಹೊಕ್ಕಳು: ಡಾ. ಅಭಿಲಾಷ ಹೆಚ್ ಕೆ
ಮೊಗಳ್ಳಿ ಗಣೇಶ್ ಅವರು ಅವರ ಕಥೆಗಳ ಮೂಲಕ ‘ಪಾತ್ ಬ್ರೇಕಿಂಗ್’ ರೀತಿಯಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದವರು. ನಂತರ ಕಾವ್ಯ, ವಿಮರ್ಶೆ, ಚಿಂತನಾ ಸಾಹಿತ್ಯ, ಕಾದಂಬರಿ ಹಾಗೂ ಜಾನಪದ ಸಂಶೋಧನೆಗಳನ್ನು ಲೋಕಾರ್ಪಣೆ ಮಾಡಿದರು. ಕಾದಂಬರಿಯಲ್ಲಿ ಇರಬಹುದಾದ ಸೃಜನದ ವಿಸ್ತಾರವಾದ ಅವಕಾಶವನ್ನು ಸ್ವಚ್ಛಂದವಾಗಿ ಬಳಸಿಕೊಂಡು ಕಥೆಗಾರನ ಪಟ್ಟವನ್ನು ಮರೆಸುವಂತಹ ಕಾದಂಬರಿಕಾರರಾಗಿ ನೆಲೆಯೂರಿದವರು. ಪ್ರಸ್ತುತ ಹೊಕ್ಕಳು ಕಾದಂಬರಿ ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ಹೇಗೆ ಭಿನ್ನ ಎನ್ನುವುದನ್ನು ಹೇಳಲು ನಾನಿನ್ನು ಕಿಂಚಿತ್ತು. ಆದರೆ ‘ಹೊಕ್ಕಳು’ ಕಾದಂಬರಿಯಲ್ಲಿ ವ್ಯಕ್ತವಾಗಿರುವ ಮಹಿಳಾ … Read more