ಕಣ್ಣು ಮಿಟುಕಿಸದೆ ನೋಡುವ ಚಿತ್ರ: ಬ್ಲಿಂಕ್: ಎಂ. ನಾಗರಾಜ ಶೆಟ್ಟಿ

ಕೆಲವು ಸಿನಿಮಾಗಳನ್ನು ವಿವರಿಸುವಂತಿಲ್ಲ, ಅರ್ಥ ಹೇಳುವಂತಿಲ್ಲ; ಅನುಭವವಾಗಿ ಗ್ರಹಿಸಬೇಕು. ವ್ಯಕ್ತಿಯಿಂದ ವ್ಯಕ್ತಿಗೆ ದಕ್ಕುವ ಅನುಭವ ಭಿನ್ನವಾಗಿರಬಹುದು. ಹಾಗಿದ್ದರೆ ಒಳ್ಳೆಯದೇ. ಮತ್ತೆ ಮತ್ತೆ ನೋಡುವ, ನೋಡಲು ಪ್ರೇರೇಪಿಸುವ ಗುಣವಿದ್ದರಂತೂ ಸಾರ್ಥಕ. ಈ ಮಾತುಗಳನ್ನು ‘ಬ್ಲಿಂಕ್’ ಸಿನಿಮಾದ ಹಿನ್ನೆಲೆಯಲ್ಲಿ ಹೇಳುತ್ತಿದ್ದೇನೆ. ‘ಟೈಮ್ ಟ್ರಾವಲ್ ‘ ಜಾನರ್ ನಲ್ಲಿ‌ ಸಿನಿಮಾ ಮಾಡುವುದು ಸವಾಲೇ ಸರಿ. ಈ ಜಾನರ್ ನಲ್ಲಿ ಕೆಲವು ಸಿನಿಮಾಗಳು ಯಶಸ್ವಿಯಾಗಿದ್ದಿದೆ. ಆದರೆ ಕಾಲಯಂತ್ರದಲ್ಲಿ ಹಿಂದಕ್ಕೂ, ಮುಂದಕ್ಕೂ ಚಲಿಸುತ್ತಾ ನೋಡುಗನ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವುದು, ಮುಂದೇನು ಎನ್ನುವ ಕಾತರವನ್ನು ಹೆಚ್ಚಿಸುತ್ತಾ ಹೋಗುವುದು … Read more

ಚಿತ್ರೋತ್ಸವದ ಕೊನೆಯ ದಿನದ ಚಿತ್ರಗಳು ಮತ್ತು ಸಮಾರೋಪ

ಕೊನೆಯ ದಿನದ ಚಿತ್ರಗಳು ಎಂಡ್ ಲೆಸ್ ಬಾರ್ಡರ್ಸ್ ಈ ಚಿತ್ರದಲ್ಲಿ ಗಾಯಕನೊಬ್ಬ ಸುಶ್ರಾವ್ಯವಾದ ಹಾಡನ್ನು ಹಾಡುತ್ತಾರೆ. ‘ವಿವೇಕ ಇದ್ದವರೆಲ್ಲ ಒಳ್ಳೆಯವರಲ್ಲ. ಮತ್ತೊಬ್ಬರ ಸುಖ ದುಃಖಗಳನ್ನು ಹಚ್ಚಿಕೊಳ್ಳಬಾರದು. ಹಚ್ಚಿಕೊಂಡರೆ ಕೊನೆ ತನಕ ಇರಬೇಕು’ ಇದು ಹಾಡಿನ‌ ಅರ್ಥ. ಚಿತ್ರದ ಪ್ರಮುಖ ವ್ಯಕ್ತಿ ಅಹ್ಮದ್ ಪರಿಸ್ಥಿಯೂ ಹೀಗೆ ಇದೆ. ದೇಶಭ್ರಷ್ಟನಾಗಿರುವ ಅಹ್ಮದ್ ಅಫ್ಘಾನಿಸ್ತಾನದ ಸರಹದ್ದಿನ ಪುಟ್ಟ ಗ್ರಾಮದಲ್ಲಿರುತ್ತಾನೆ. ತಾಲಿಬಾನ್ ಆಕ್ರಮಣವನ್ನು ಒಪ್ಪದ ಅಲ್ಲಿಯ ಬಲೂಚಿಗಳು ಹಜಾರಾ ನಿರಾಶ್ರಿತರು ಇರಾನ್ ಗೆ ಪಲಾಯನ ಮಾಡಲು ಸಹಕರಿಸುತ್ತಾರೆ. ಇವರ ಜೊತೆ ಉತ್ತಮ‌ ಸಂಬಂಧ … Read more

ಡೆನ್ನಾನ ಡೆನ್ನಾನ ಗುಂಗಿನಲ್ಲಿ‌ ಇನ್ನೆರಡು ದಿನ: ಎಂ. ನಾಗರಾಜ ಶೆಟ್ಟಿ

ಮಂಗಳವಾರದ ಚಿತ್ರಗಳು ದಿ ರೈ ಹಾರ್ನ್ ಬಸುರು ಮಾಡಿ ಮುಖ ತಿರುಗಿಸುವ ಗಂಡಸರು ಹೆಣ್ಣಿನ ಕಷ್ಟಗಳನ್ನು, ಅವಳ ಬವಣೆಯನ್ನು ಅನುಭವಿಸಲಾರರು. ಸ್ತ್ರೀವಾದಿ ಚಿತ್ರದಂತೆ ತೋರುವ ‘ ದಿ ರೈ ಗ ಹಾರ್ನ್’ ಚಿತ್ರದ ನಿರ್ದೇಶಕಿ ಜೈಒನೆ ಕಾಂಬೋರ್ಡ ಸ್ಪೈನ್ ನ ಗ್ರಾಮೀಣ ಮಹಿಳೆಯೊಬ್ಬಳ ದಾರುಣ ಬದುಕನ್ನು ಮಹಿಳಾ ಕಣ್ಣೋಟದಲ್ಲಿ ಕಟ್ಟಿಕೊಡುತ್ತಾಳೆ. ಮದುವೆಯಾಗದ ಮಾರಿಯಾ ಹೆರಿಗೆ ಮಾಡುವುದರಲ್ಲಿ ನಿಷ್ಣಾತೆ ಹೇಗೋ ಅಂತೆಯೇ ಗರ್ಭಪಾತವನ್ನೂ ಮಾಡಬಲ್ಲಳು. ಹದಿಹರೆಯದ ಹೆಣ್ಣೊಬ್ಬಳಿಗೆ ನೆರವಾಗಲು ಗರ್ಭಪಾತ ಮಾಡುವುದು ಅವಳನ್ನು ಸ‌ಂಕಷ್ಟಕ್ಕೆ ದೂಡುತ್ತದೆ. ಆಕೆ ತನ್ನ … Read more

ಚಲನಚಿತ್ರೋತ್ಸವದಲ್ಲಿ ಭಾನುವಾರ ಮತ್ತು ಸೋಮವಾರ

ಚಲನಚಿತ್ರೋತ್ಸವದಲ್ಲಿ ಭಾನುವಾರ ಶಿವಮ್ಮ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಬಿಟ್ಟು ಸಿನಿಮಾಕ್ಕೆ ಹೊರಳಿದ ಜೈಶಂಕರ್ ‘ ಲಚ್ಚವ್ವ’ ಕಿರು ಚಿತ್ರದ ಮೂಲಕ ಹೆಸರು ಗಳಿಸಿದರು‌. ಪೂರ್ಣ ಪ್ರಮಾಣ ಚಿತ್ರವನ್ನು ನಿರ್ದೇಶಿಸುವ ಅವರ ಕನಸನ್ನು ‘ ಶಿವಮ್ಮ’ ಸಾಕಾರಗೊಳಿಸಿದ್ದಾರೆ. ಒಕ್ಕಲುತನವಲ್ಲದೆ ಬೇರೆ ಆದಾಯವಿಲ್ಲದ ಗ್ರಾಮೀಣ ಬದುಕನ್ನು ‘ಶಿವಮ್ಮ’ ನೆಂಬ ಗಟ್ಟಿಗಿತ್ತಿಯ ಮೂಲಕ ಚಿತ್ರ ಕಟ್ಟಿ ಕೊಡುತ್ತದೆ. ಶಿವಮ್ಮ ಬಡವಿಯಾದರೂ ಏನಾದರೂ ಮಾಡಬೇಕು ಎನ್ನುವ ಛಲ ಉಳ್ಳವಳು. ಲಕ್ವದಿಂದ ಮೂಲೆಗುಂಪಾದ ಗಂಡ, ಮದುವೆಗೆ ನಿಂತ ಮಗಳು, ಕಾಲೇಜು ಓದುವ ಹುಡುಗ ಇವರೆಲ್ಲರ … Read more

15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದಿನ ಒಂದು ಮತ್ತು ಮೂರು

ಬಿಫೇಸ್ಸಲ್ಲಿ ಒಂದನೇ‌ ದಿನ ಅಬ್ಬಬ್ಬಾ….ಒರಾಯನ್ ಮಾಲ್ನಲ್ಲಿ ಮೊದಲ ದಿನದಂದೇ ಇಷ್ಟೊಂದು ಜನ ಜಂಗುಲಿ ಎಂದೂ ನೋಡಿರಲಿಲ್ಲ. ಅದನ್ನು ನಿರ್ವಹಿಸಿದ ರೀತಿಯೂ ಬಲು ಚೆನ್ನ. ಎಂಟ್ರಿ ಪಾಸ್, ಕೆಟಲಾಗ್, ಶೆಡ್ಯೂಲ್ ವಿತರಣೆಯಲ್ಲಿ ಗೊಂದಲಗಳಿರಲಿಲ್ಲ. ಸ್ವಯಂಸೇವಕರು ಬೂಟಾಟಿಕೆ ತೋರದೆ, ಅಗತ್ಯವಿರುವಷ್ಟು ಮಂದಿ ಮಾತ್ರ ಇದ್ದು, ನೂಕು ನುಗ್ಗಲಿಗೆ ಅವಕಾಶವಿರದಂತೆ ಜನರನ್ನು ನಿಯಂತ್ರಿಸುತ್ತಿದ್ದರು. ಈ ಸಲದ ಥೀಮ್ ಸಾಂಗ್ ಕೂಡಾ ಕ್ರಿಯಾಶೀಲತೆಗೆ ನಿದರ್ಶನದಂತಿದೆ. ಪರಿಚಿತರೇ ಹಾಡಿರುವ ಡೆನ್ನಾನ, ಡೆನ್ನಾನ ಹಾಡು, ಅದರ ಚಿತ್ರೀಕರಣ….ಚಂದವೋ ಚಂದ! ಸಿನಿಮಾ ದರ್ಶನ…. ಓಮೆನ್ ಕಾಂಗೋ ದೇಶದ … Read more

ತುಂಗಾತೀರದ ಸಿನಿಹಬ್ಬ: ಎಂ ನಾಗರಾಜಶೆಟ್ಟಿ

” ಟ್ರೈನ್‌ ಹತ್ತು ಮೂವತ್ತಕ್ಕೇರಿ”” ಹೌದಾ, ಎಲ್ಲಿದೀರಾ ನೀವು?“ಇಲ್ಲೇ ರೈಲ್ವೇ ಸ್ಟೇಷನ್ನಲ್ಲಿ. ಡಿಸ್‌ಪ್ಲೇ ಬೋರ್ಡ್‌ ಎದುರಲ್ಲಿ”” ಅಯ್ಯೋ, ನಾನಿನ್ನೂ ಹೊರಟೇ ಇಲ್ವಲ್ಲ!”” ಈಗಿನ್ನೂ ಹತ್ತು ಗಂಟೆ. ಬೇಗ ಹೊರಡಿ” ಪೋನಿಡುವುದರಲ್ಲಿ ಡಿಸ್‌ಪ್ಲೇ ಬದಲಾಯಿತು. ಮೈಸೂರಿಂದ 10. 30 ಕ್ಕೆ ಆಗಮಿಸುವ ಶಿವಮೊಗ್ಗ ಟ್ರೈನ್‌ 11. 15ಕ್ಕೆ ಹೊರಡುವುದೆಂದು ಪ್ರಕಟಣೆ ಬಂತು. ಮತ್ತೆ ಚಂದ್ರಪ್ರಭ ಕಠಾರಿಗೆ ಪೋನ್‌ ಮಾಡಿದೆ; ಹೊಟ್ಟೆಗೆ ಹಾಕಿಕೊಳ್ಳಿ, ತಪ್ಪಾಯಿತು ಎಂದೆ. ನಾವು ಹೊರಟಿದ್ದು ಜನವರಿ 27, 28ರಂದು ಶಿವಮೊಗ್ಗದಲ್ಲಿ ಮನುಜಮತ ಸಿನಿಯಾನ, ಶಿವಮೊಗ್ಗ ಪ್ರೆಸ್‌ … Read more

ಅನ್ನಪೂರಣಿ – ರುಚಿ ಕಮ್ಮಿ, ಸ್ಮೆಲ್‌ ಜಾಸ್ತಿ: ಎಂ ನಾಗರಾಜ ಶೆಟ್ಟಿ

ʼಅನ್ನಪೂರಣಿ- ದಿ ಗೊಡೆಸ್‌ ಆಫ್‌ ಫುಡ್‌ʼ ಹೆಸರಿನ ತಮಿಳು ಚಿತ್ರ ಸುದ್ದಿ ಮಾಡುತ್ತಿದೆ. ಆಹಾರ ಸಂಸ್ಕೃತಿ, ಮಹಿಳೆಯರ ವೃತ್ತಿ ಸ್ವಾತಂತ್ರ್ಯ ಮತ್ತು- ವಿನಾಕಾರಣ- ಲವ್‌ ಜಿಹಾದ್‌ ಇವು ಚರ್ಚಿತವಾಗುತ್ತಿರುವ ವಿಷಯಗಳು. ಚಿತ್ರ ಆಹಾರದ ಮಡಿವಂತಿಕೆಯನ್ನು ತೋರಿಸುತ್ತದೆ; ವೃತ್ತಿಯ ಆಯ್ಕೆಯ ಬಗೆಗಿನ ಮಹಿಳೆಯರ ಮಿತ ಅವಕಾಶವನ್ನೂ ಪ್ರಸ್ತಾಪಿಸುತ್ತದೆ. ಆದರೆ ಲವ್‌ ಜಿಹಾದ್‌ ಎನ್ನುವುದು ಆರೋಪಿತವಾದದ್ದು ಮಾತ್ರವಲ್ಲ, ಚಿತ್ರದ ಆಶಯಕ್ಕೆ ವಿರುದ್ಧವಾಗಿದೆ. ಆದರೆ ಈ ಚರ್ಚೆಗಳಿಂದಾಗಿ ʼಅನ್ನಪೂರಣಿʼ ಬಿಡುಗಡೆಯ ಬಳಿಕ ಥಿಯೇಟರ್‌ನಲ್ಲಿ ಗಳಿಸಲಾಗದ್ದನ್ನು ಓಟಿಟಿಯ ಮುಖಾಂತರ ಗಳಿಸಿತು. ʼದಿ ಗ್ರೇಟ್‌ … Read more

ಮಹಿಳೆಯ ಘನತೆಯನ್ನು ಎತ್ತಿ ಹಿಡಿಯುವ ದಿಟ್ಟ ಸಿನಿಮಾ – ಕಾತಲ್‌ ದ ಕೋರ್: ಚಂದ್ರಪ್ರಭ ಕಠಾರಿ

ಪ್ರತಿಭಾವಂತ ಮಲಯಾಳಮ್ ನಿರ್ದೇಶಕ  ಜೊ ಬೇಬಿ –  2021ರಲ್ಲಿ ತೆರೆಗೆ ತಂದ ʼದ ಗ್ರೇಟ್‌ ಇಂಡಿಯನ್‌ ಕಿಚನ್‌ʼ ಸಿನಿಮಾಕ್ಕೂ ಮುಂಚೆ ರೆಂಡು ಪೆಣ್‌ ಕುಟ್ಟಿಕಲ್‌, ಕುಂಜು ದೇವಮ್‌, ಕಿಲೊಮೀಟರ್‌ ಕಿಲೋಮೀಟರ್ ಮತ್ತು ನಂತರ ಕೂಡ ಹಲವು ಸಿನಿಮಾಗಳನ್ನು ಫ್ರೀಡಮ್‌ ಫೈಟ್‌, ಶ್ರೀಧನ್ಯ ಕ್ಯಾಟೇರಿಂಗ್‌ ಸರ್ವೀಸ್ ನಿರ್ದೇಶಿಸಿದ್ದರೂ ʼದ ಗ್ರೆಟ್‌ ಇಂಡಿಯನ್‌ ಕಿಚನ್‌ʼ ಅವರಿಗೆ ಬಹು ಖ್ಯಾತಿಯನ್ನು ತಂದು ಕೊಟ್ಟ ಸ್ತ್ರೀಸಂವೇದನೆಯ ಸಿನಿಮಾ.  ಗೃಹಿಣಿಯನ್ನು ಅಡುಗೆಮನೆಗೆ ಸೀಮಿತಗೊಳಿಸಿ, ಅವಳ ಸ್ವಾತಂತ್ರ್ಯ, ಅಸ್ತಿತ್ವವನ್ನು ಕಸಿದುಕೊಂಡ ಪುರುಷ ಯಜಮಾನಿಕೆಯನ್ನು ಪ್ರಶ್ನಿಸುವ ವಿಶಿಷ್ಟ … Read more

ಮುತ್ತಾಗದ ‘ಸ್ವಾತಿ ಮುತ್ತಿನ ಮಳೆ ಹನಿ…’: ಎಂ ನಾಗರಾಜ ಶೆಟ್ಟಿ

                  ʼ ಒಂದು ಮೊಟ್ಟೆಯ ಕತೆ ʼ ಯಿಂದ ʼಸ್ವಾತಿ ಮುತ್ತಿನ ಮಳೆ ಹನಿಯೆʼ ತನಕ ರಾಜ್‌ ಬಿ ಶೆಟ್ಟಿ ಹಲವು ಅವತಾರಗಳನ್ನು ಎತ್ತಿದ್ದಾರೆ. ಅವರ ಸೃಜನಶೀಲತೆ ಹಲವು ಪ್ರಯೋಗಳನ್ನು ಆಗು ಮಾಡಿದೆ; ಯಶಸ್ಸೂ ದಕ್ಕಿದೆ. ಅವರ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿರುವ ʼಸ್ವಾತಿ ಮುತ್ತಿನ ಮಳೆ ಹನಿಯೆʼ ಸಿನಿಮಾ ಅವರ ಸಿನಿ ಪಯಣದ ಇನ್ನೊಂದು ʼತಿರುವೆʼನ್ನಬಹುದು. ಇದರಲ್ಲಿ ರಾಜ್‌ ಬಿ ಶೆಟ್ಟಿ ಪ್ರೇಕ್ಷಕರ ಅಭಿರುಚಿಗೆ ಹೊಂದುವ ಸಿನಿಮಾದ ಮಾಡುವ ಬದಲಾಗಿ ತಮಗೆ ಪ್ರಿಯವಾದುದನ್ನು ತೆರೆಯ ಮೇಲೆ ತರುವ … Read more

ಪ್ರೀತಿಯ ಪರಾಕಾಷ್ಠೆ- ಕಾತಲ್‌, ದಿ ಕೋರ್ : ಎಂ ನಾಗರಾಜ ಶೆಟ್ಟಿ

ಪ್ರತಿಯೊಬ್ಬ ಮನುಷ್ಯನಿಗೂ ಅವನಿಚ್ಛೆಯಂತೆ ಬದುಕುವ ಹಕ್ಕಿದೆ. ಆದರೆ ಆ ಹಕ್ಕನ್ನು ನಿರಾಕರಿಸಲಾಗುತ್ತದೆ. ಲಿಂಗ ತಾರತಮ್ಯ, ಶ್ರೇಣೀಕರಣಗಳ ಜೊತೆಯಲ್ಲಿ ದೈಹಿಕ ಬೇಡಿಕೆಗಳನ್ನೂ ಸಮಾಜ ಕಟ್ಟುಪಾಡಿಗೊಳಪಡಿಸಿದೆ. ಅನಾದಿ ಕಾಲದಿಂದಲೂ ಸಿದ್ಧ ಮಾದರಿಗಿಂತ ಭಿನ್ನವಾದ ಗಂಡು- ಹೆಣ್ಣಿನ ಲೈಂಗಿಕ ತುಡಿತಗಳಿವೆ. ಇವು ಪ್ರಕೃತಿ ದತ್ತವಾಗಿಯೇ ಇದ್ದರೂ ಸಾಮಾಜಿಕ ನಿಷೇಧದಿಂದಾಗಿ ಅವಹೇಳನೆ, ಬರ್ತ್ಸನೆ ಹಾಗೂ ದುರಂತಗಳಿಗೆ ಕಾರಣವಾಗಿವೆ. ಇತ್ತೀಚೆಗೆ- ಕೋರ್ಟ್‌ ತೀರ್ಪೂ ಕಾರಣವಾಗಿ- ಜನರಲ್ಲಿ ಕೆಲ ಮಟ್ಟಿಗೆ ಅರಿವು ಉಂಟಾಗಿ ಲೈಂಗಿಕ ಅಲ್ಪಸಂಖ್ಯಾತರ ಕುರಿತ ಸಿನಿಮಾ, ನಾಟಕ, ಮುಕ್ತ ಸಂವಾದಗಳಿಗೆ ಅವಕಾಶ ದೊರೆತಿದೆ. … Read more

ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತಾಡುವ ಸಿನಿಮಾ – ಜವಾನ್: ಚಂದ್ರಪ್ರಭ ಕಠಾರಿ

. ಕಳೆದ ವರ್ಷಗಳಲ್ಲಿ ತೆರೆಕಂಡ ಬಾಹುಬಲಿ, ಕೆಜಿಎಫ್‌, ಪುಷ್ಪದಂಥ ಸೂಪರ್‌ ಹುಮನ್ ಅಂದರೆ ಎಂಥದ್ದೇ ಕಷ್ಟಗಳು ಎದುರಾದರೂ ತನ್ನ ದೈಹಿಕ ಶಕ್ತಿ, ಬುದ್ದಿಮತ್ತೆಯಿಂದ ನಿವಾರಿಸುವ ಅತೀವ ಆತ್ಮವಿಶ್ವಾಸದ ಮ್ಯಾಚೊ(macho) ಸಿನಿಮಾಗಳು ಪ್ಯಾನ್‌ ಇಂಡಿಯಾ ಪ್ರದರ್ಶನಗೊಂಡು ನೂರಾರು ಕೋಟಿಗಳ ಲಾಭವನ್ನು ಗಳಿಸಿದವು. ಮಿಸ್ಸಾಯ(messiah) ಅಥವಾ ಸರ್ವರ ಸಕಲ ಸಂಕಷ್ಟಗಳಿಗೆ ಏಕೈಕ ನಿವಾರಕನಾಗಿ ರೂಪಿತವಾಗಿರುವ ಇಂತಹ ಸಿನಿಮಾಗಳಲ್ಲಿ ಹಿಂಸೆ, ರಕ್ತಪಾತ ಕಣ್ಣಿಗೆ ರಾಚುವಷ್ಟು ಅತಿಯಾಗಿ ಕಂಡು ಬಂದಿದ್ದರೂ ಪ್ರೇಕ್ಷಕರು ಅದನ್ನೇ ಮನೋರಂಜನೆಯಾಗಿ ಸಂಭ್ರಮಸಿದ್ದು ಸಮಾಜ ಮನೋವಿಜ್ಞಾನ ಅಧ್ಯಯನಕ್ಕೆ ಒಳಪಡುವಂಥ ವಿಷಯ. … Read more

ಖಾಸಗಿ ನೈಸರ್ಗಿಕ ಕ್ರಿಯೆ ಹಸ್ತಮೈಥುನ ವಸ್ತುವುಳ್ಳ ಸಿನಿಮಾ – ಓ ಮೈ ಗಾಡ್‌ 2: ಚಂದ್ರಪ್ರಭ ಕಠಾರಿ

2012 ತೆರೆಕಂಡ ಉಮೇಶ್‌ ಶುಕ್ಲಾ ನಿರ್ದೇಶನದ ಸಿನಿಮಾ ʼಓಹ್‌ ಮೈ ಗಾಡ್‌ʼ ಸಿನಿಮಾ ತನ್ನ ಕಥಾವಸ್ತುವಿನಿಂದ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಚಿತ್ರದಲ್ಲಿ ಪರೇಶ್‌ ರಾವಲ್‌ ಮತ್ತು ಅಕ್ಷಯ್‌ ಕುಮಾರ್‌ ಪ್ರಧಾನ ಭೂಮಿಕೆಯಲ್ಲಿದ್ದರು. ಅದರಲ್ಲೂ ಅಖಂಡ ನಾಸ್ತಿಕ, ಅಲ್ಲದೆ ವ್ಯವಹಾರ ಚತುರನಾಗಿ ಪರೇಶ್‌ ರಾವಲ್‌ ತಮ್ಮ ಅತ್ಯುತ್ತಮ ನಟನೆಯಿಂದ ಸಿನಿಮಾದ ಗೆಲುವಿಗೆ ಕಾರಣವಾಗಿದ್ದರು. ಪ್ರಾಕ್ತನ ವಸ್ತುಗಳ ವ್ಯಾಪಾರ ಮಾಡುವ ಕಾಂಜಿ ಲಾಲ್ಜಿ ಮೆಹ್ತಾನ ಅಂಗಡಿ ಭೂಕಂಪಕ್ಕೆ ತುತ್ತಾದಾಗ, ವಿಮಾ ಕಂಪನಿಯವರು ಭೂಕಂಪ, ಪ್ರವಾಹ ಇತ್ಯಾದಿಗಳು act of … Read more

ದೃಶ್ಯಕಾವ್ಯವಾಗಿ ಗಮನ ಸೆಳೆಯುವ ಸಿನಿಮಾ-ಕೋಳಿ ಎಸ್ರು: ಚಂದ್ರಪ್ರಭ ಕಠಾರಿ

ತಮ್ಮ ಚೊಚ್ಚಲ ನಿರ್ದೇಶನದ ʼಅಮ್ಮಚ್ಚಿಯೆಂಬ ನೆನಪುʼ ಸಿನಿಮಾದ ಸುಮಾರು ನಾಲ್ಕು ವರುಷಗಳ ನಂತರ ಚಂಪಾ ಪಿ ಶೆಟ್ಟಿಯವರು ʼಕೋಳಿ ಎಸ್ರುʼ ಸಿನಿಮಾವನ್ನು, ಏಪ್ರಾನ್‌ ಪ್ರೊಡಕ್ಷನ್‌ ನಿರ್ಮಾಣದಲ್ಲಿ ತೆರೆಗೆ ತಂದಿದ್ದಾರೆ. ಸಾರ್ವಜನಿಕರಿಗೆ ಚಿತ್ರಮಂದಿರದಲ್ಲಿ ಇನ್ನೂ ಬಿಡುಗಡೆಯಾಗುವ ಮುಂಚೆಯೇ ಕೋಳಿ ಎಸ್ರು, ದೇಶ ವಿದೇಶಗಳಲ್ಲಿ ಜರುಗುತ್ತಿರುವ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತ, ಹಲವು ಪ್ರಶಸ್ತಿಗಳನ್ನು ಪಡೆದು ಸಿನಿಪ್ರಿಯರಲ್ಲಿ ಕುತೂಹಲ ಉಂಟು ಮಾಡುತ್ತಿದೆ. ಚಂಪಾ ಪಿ ಶೆಟ್ಟಿಯವರ ಮೊದಲ ಚಿತ್ರವು ವೈದೇಹಿಯವರು ಬರೆದ ಕತೆಯನ್ನಾಧರಿಸಿದ್ದರೆ, ಕೋಳಿ ಎಸ್ರು ಕಾ.ತ. ಚಿಕ್ಕಣ್ಣ ಅವರ ʼಹುಚ್ಚೇರಿಯ ಎಸರಿನ … Read more