ಪಥವೋ! ಪಂಥವೋ !?: ಡಾ. ಹೆಚ್ ಎನ್ ಮಂಜುರಾಜ್

‘ಸುಮ್ಮನೆ ಗಮನಿಸಿ; ಅದರೊಂದಿಗೆ ಗುರುತಿಸಿಕೊಳ್ಳಲು ಹೊರಡಬೇಡಿ’ ಎಂದರು ಓಶೋ ರಜನೀಶರು. ಇದನ್ನೇ ಭಗವದ್ಗೀತೆಯು ಬೇರೊಂದು ರೀತಿಯಲ್ಲಿ ‘ನಿಷ್ಕಾಮ ಕರ್ಮ’ ಎಂದಿದೆ. ಇದರ ಎದುರು ರೂಪವೇ ಸಕಾಮ ಕರ್ಮ. ಇದು ಲೋಕಾರೂಢಿ. ಏನಾದರೊಂದು ನಿರೀಕ್ಷೆ, ಪರೀಕ್ಷೆಗಳನ್ನಿಟ್ಟುಕೊಂಡು ಮಾಡುವಂಥ ಕೆಲಸ. ‘ನನ್ನನ್ನು ಗುರುತಿಸಲಿ, ಮೆಚ್ಚಲಿ, ಹತ್ತು ಜನರ ಮುಂದೆ ಕೀರ್ತಿಸಲಿ’ ಎಂಬ ಲೌಕಿಕ ಮೋಹಕ! ನಿಷ್ಕಾಮವು ಹಾಗಲ್ಲ. ತನ್ನ ಪಾಡಿಗೆ ತಾನು ಕೆಲಸಗಳನ್ನು ಮಾಡಿಕೊಂಡು ಹೋಗುವಂಥದು. ಯಾರು ಮೆಚ್ಚಲಿ, ಬಿಡಲಿ. ಇದು ನೈಸರ್ಗಿಕ. ಚೈತ್ರೋದಯವಾಯಿತೆಂದು ಮರಗಿಡಗಳು ತಮ್ಮದೇ ಆದ ರೀತಿಯಲ್ಲಿ … Read more

ಗಡಿ: ಶ್ರೀಪ್ರಸಾದ್

ಅಣ್ಣೇ ಗೌಡ ಮತ್ತು ಮರೀಗೌಡರದ್ದು ಊರಿನ ಗೌರವಸ್ತ ಕುಟುಂಬ. ಇವರ ಅಪ್ಪ ಲಿಂಗೇ ಗೌಡರು ಊರಿನವರಿಗೆಲ್ಲ ಒಂದಿಲ್ಲೊಂದು ಕೆಲಸದಲ್ಲಿ ನೆರವಾಗಿದ್ದರಿಂದ ಇವರ ಕುಟುಂಬದ ಬಗ್ಗೆ ಊರ ಜನಕ್ಕೆ ಅದೇನೋ ಆತ್ಮೀಯತೆ ಮತ್ತು ಗೌರವ ಇತ್ತು. ಅಗರ್ಭ ಅನ್ನೋವಷ್ಟು ಅಲ್ಲದಿದ್ದರೂ ಒಂದೆರಡು ತಲೆಮಾರು ಕೂತು ತಿನ್ನೋವಷ್ಟು ಆಸ್ತಿ ಅಂತೂ ಇತ್ತು. ಲಿಂಗೇ ಗೌಡರು ಹೋಗಿ 3 ವರ್ಷ ಆಯ್ತು… ಅಲ್ಲಿಂದಲೇ ಶುರುವಾಗಿದ್ದು ಮಕ್ಕಳಿಬ್ಬರ ನಡುವೆ ಆಸ್ತಿಯ ಕುರಿತು ಶೀತಲ ಸಮರ… ಮುಂದೆ ತಗಾದೆ ಬೇಡ ಅಂದುಕೊಂಡು ದೊಡ್ಡ ಗೌಡರು … Read more

”ಒಂಟಿ ಶೂನ ಸಾಹಸ”: ನಾಗಸಿಂಹ ಜಿ ರಾವ್

ಜೀವನದಲ್ಲಿ ಕೆಲವು ಅವಕಾಶಗಳು ಎಲ್ಲಿಂದ ಬರುತ್ತವೆ ಹೇಗೆ ಬರುತ್ತವೆ ಎಂಬುದನ್ನು ಊಹಿಸಲು ಅಸಾಧ್ಯ. ಅವಕಾಶಗಳೊಂದಿಗೆ ಸವಾಲುಗಳು ಇರುತ್ತವೆ ಇದು ನನ್ನ ಅನುಭವ ನಾನು ಒಂದು ದಿನ ಮಧ್ಯಾಹ್ನ ಕಚೇರಿಯಲ್ಲಿ ಕುಳಿತಿದ್ದಾಗ ಒಂದು ದೊಡ್ಡ ಅವಕಾಶ ನನ್ನ ಬಾಗಿಲು ತಟ್ಟಿತು. ರಾಜ್ಯದ ಪ್ರಸಿದ್ಧ ಅಂಗವಿಕಲರ ಸಂಸ್ಥೆ APD ಇಂದ ಕರೆ ಬಂದಿತ್ತು ”ನಾಗಸಿಂಹ ಸಾರ್ ನಮ್ಮ ಸಂಸ್ಥೆಯ ಶಾಲೆಯ ಮಕ್ಕಳು ‘ಯೂಥ್ ಎಕ್ಸ್ಚೇಂಜ್’ ಕಾರ್ಯಕ್ರಮದ ಅಡಿಯಲ್ಲಿ ಸ್ಕಾಟ್ಲೆಂಡ್‌ಗೆ ಹೋಗುತ್ತಿದ್ದಾರೆ ಅಲ್ಲಿ ನಮ್ಮ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶನ ಮಾಡಬೇಕು … Read more

ಚಂದಿರನ ಮೊಗದಲಿ: ಗೋಳೂರು ನಾರಾಯಣಸ್ವಾಮಿ

ಆ ಸೊಬಗು ಮತ್ತೆ ಬರುತಿದೆಬಾಳಲಿ ಸಂತೋಷ ತರುತಿದೆ ಯೌವನದ ಗುಂಡಿಗೆಯಲಿ ನೂರಾರು ಬಯಕೆ ಮೂಡಿಕಾಲು ಜಾರಿ ಬಿದ್ದು ಮೇಲೆದ್ದ ಖುಷಿ ಮರುಕಳಿಸುತಿದೆಹೂವು ಚಿಟ್ಟೆ ಅಕ್ಷರ ಹಾಡಿನ ಜಾಡು ಹಿಡಿದು ಹೊರಟ ಕನ್ನಡಿಗನ ಹೃದಯ ಹುಟ್ಟೂರಿಗೆ ಮರಳಿ ಬರುತಿದೆ ಮಲೆನಾಡಿನ ಭತ್ತದ ಗದ್ದೆಗಳನು ದಾಟಿ ಬಂದ ಜನಪದ ಹಾಡು ಕಪನಿ ಕಾವೇರಿಯಲಿ ಮಿಂದು ಪೂರ್ವ ಘಟ್ಟಗಳನು ತಲುಪಿವೆ ಬಹುಕಾಲ ಕಾದು ಕುಳಿತ ಪ್ರೇಮಿಯೊಬ್ಬನ ಹೃದಯ ಮುಟ್ಟಿವೆ ಆದಿ ಹಲವಾರ ದಿಂದ ಹೊರಟ ತಂಬೂರಿ ನಾದವು ಸರಗೂರಯ್ಯನ ಪರಿಶೆಯೊಂದಿಗೆ ಮಂಟೇದಯ್ಯನ … Read more

ಗಜಲ್: ಜಯಶ್ರೀ ಭ. ಭಂಡಾರಿ

ಗಝಲ್ 1 ಸಿಡಿಲ ನಡುವಣ ಕೋಲ್ಮಿಂಚು ಬದುಕಿಗೆ ಭರವಸೆ ಮೂಡಿಸಿತೇಕಡಲಾಳದ ಮುತ್ತು ರತ್ನಗಳು ಕೊರಳಿಗೆ ಹಾರ ತೊಡಿಸಿತೇ ಮೊದಲ ಮಳೆಯ ಮಣ್ಣಘಮ ಇನಿಯನ ನೆನಪುತರುವುದಲ್ಲವೇಕದಲದೆ ಮಗ್ಗಲು ಕೂತು ಹರಟಿದ ಸಂಭ್ರಮ ಕಾಡಿಸಿತೇ ಮೋಡಗಳ ಮರೆಯಿಂದ ಹಾರಿ ಬಂದ ಹನಿಗಳನು ವರ್ಣಿಸಲಸದಳವುಬೇಡುತ ‌ ಸಾಗಿದ ಒಲವ ಪಯಣ ದೂರ ದೂಡಿಸಿತೇ ಮಡಿಲ ಮಾತು ಅದೇಕೋ ಅಬ್ಬರವ ಕಳೆದುಕೊಂಡು ಸೋತಿದೆಸಡಿಲ ಬಂದ ಒಡಲಾಳದಿ ಬೆಂದು ಉಬ್ಬರವ ಊಡಿಸಿತೇ ಆಸೆಯ ಬೇರಿಗೆ ನೀರೆರೆದು ಹದವಾಗಿ ಹಬ್ಬಿಸಬೇಕಿದೆ ಜಯಾಬಿಸಿಯ ಚಹಾ ಹೀರುವಾಗ ಹೃದಯರಾಗ … Read more

ಅವಳ ಮ್ಯಾರಥಾನು ಓಟ: ರಶ್ಮಿ ಕಬ್ಬಗಾರು

೧ಇಗೋ ಬಿಸಿಲ ಮಾರ್ಚಿನಲ್ಲಿ ಅವಳಿಗೇಅಂತ ವಿಶೇಷ ರಂಗ ಸಜ್ಜಿಕೆ ಹಾರ ಶಾಲು ಹಣ್ಣು ಹೂವುಕೇಳಲೊಂದಿಷ್ಟು ಕಿವಿಗಳು ಸಾವಿರ ವರುಷಗಳಲೀ ಉಳಿದೇ ಹೋದ ಕಥನಗಳನ್ನಪೋಣಿಸಿ ತೊಡುವ ಪ್ರತಿಜ್ಞೆಗೈದಿದ್ದಾಳೆಹಗಲು ರಾತ್ರಿಯ ಲೆಕ್ಕವಿಡದೆ ಗಳಿಸಿದ್ದುಸೆಪರೀಟ್ ಇಡದೇಮನೆ ಮoದಿಯ ಬಿಸಿಯೂಟದಖಯಾಲಿಡದೆಮನೆಗೆ ಮಾರಿಊರಿಗುಪಕಾರಿ ಇತ್ಯಾದಿ ಇತ್ಯಾದಿಗಳಿಗೆಲ್ಲ ಸೊಪ್ಪು ಹಾಕದೇಸಾಧನೆಗಳ ಹಾದಿಯಲಿಮುಂದೆ ಮುಂದೆ ೨ಬೇಕಾದ್ದು ಮಾಡಿ ನೋಡಿ ಸಂಮಾನಸುಮ್ಮನಾಗೋಲ್ಲ ಅವಳುಸಂತ್ರಪ್ತಿ ಯೆನ್ನೊ ಮಾತೇ ಇಲ್ಲಸೀತಾ ದ್ರೌಪದಿ ತಾರಾ ಅಹಲ್ಯಾಹಳೇ ಕ್ಯಾಸೆಟ್ಟು ಮತ್ತೆ ಮತ್ತೆ ರೀ ಪ್ಲೇಮತ್ತೆ ಮತ್ತೆ ಹೊಸ ಸಂಮಾನ ಬಾಚಿಕೊಳ್ಳುತಾಳೆ ೩ದಿನ ದಿನವೂ ಒಣಗೋಗುತಿದಾಳೆವಿಮರ್ಶಕರ … Read more

ಕವಿತೆ: ದೇವರಾಜ್ ಹುಣಸಿಕಟ್ಟಿ

ಸಾಕ್ರೆಟಿಸ್ ನ ಋಣದ ಹುಂಜಮತ್ತೆ ಕೂಗುವುದಿಲ್ಲ… ಅವರು ಬರುವುದುಹೀಗೆ… ದೂರದಿ ವಿಷದಬಟ್ಟಲು ಹಿಡಿದು..ಕೊರಳಿಗೆ ಉರಳು ಹಗ್ಗವಹೊಸದು.. ಸದ್ದಿಲ್ಲದೇ …. ಕರುಳ ಕಹಾನಿಗೆಕಿವುಡು ಕುರುಡುಮೈ ತುಂಬಾ ಹೊದ್ದು…..ಚಿತ್ರ ವಿಚಿತ್ರ ಭಗ್ನಕನಸುಗಳಲಿ ಬೆಚ್ಚಿ ಬಿದ್ದು… ಕಂಸನಂತೆಯೇಕೈಗೆ ಚಿನ್ನದ ಸರಳು ತೊಡಿಸಿ..ಬೆಳಕನ್ನೇ ಕತ್ತಲೆಂದುಪರಿಭಾವಿಸಿ.. ಇತಿಹಾಸದುದ್ದಕ್ಕೂ ಅವರುಬರುವುದು ಹೀಗೆ…. ನಿಜದ ಅಸ್ತಿ ಪಂಜರಕೆಸುಳ್ಳಿನ ಮಾಂಸ ಮಜ್ಜೆಯ ತುಂಬಿ….ವೇಷ ಬದಲಿಸಿ ಮನುವಾದವ ನಂಬಿ….ಕಲ್ಯಾಣದ ಕೇಡ ಹೊತ್ತು…. ಅವರು ಬರುವುದು ಹೀಗೆ…. ಬಳಪ ಪೆನ್ನುಒಂದೊಂದನ್ನೇ ಕಸೆದು….ಕತ್ತಿ ಗುರಾಣಿ ಈಟಿ..ಚಾಕು ಬಾಕು ಗುಂಡುಗಳ…ವಿಧ ವಿಧದಲಿ ಮಸೆದು…. ಅವರು … Read more

ಬೀದಿ ದೀಪ: ಕೊಡೀಹಳ್ಳಿ ಮುರಳೀ ಮೋಹನ್

ಸಂಜೆಯಲಿ ಮರಳಿ ಮನೆಗೆ ಸಾಗುವ ಜನಕೆಲ್ಲಾ,ನಾನು ಬೆಳಕಾಗಿ ನಿಲ್ಲುವೆನು, ರಾತ್ರಿಯಿಡೀ.ಮರವಂತೆ ನಿಂತು ರಸ್ತೆಯ ಬದಿಯಲಿ ಏಕಾಂಗಿ,ನನ್ನ ಬೆಳಕಿನಲಿ ನಾ ಬೆಳಗುವೆ, ಶಾಂತವಾಗಿ. ಶಿವನು ವಿಷವನುಂಡು, ಅಮೃತವನು ನೀಡಿದಂತೆ,ವಿದ್ಯುತ್ತನುಂಡು ಬೆಳಕನಿತ್ತು, ಜನಕೆ ಹಿತವಂತೆ.ಮನದಲಿ ಶುದ್ಧತೆಯು, ಕತ್ತಲೊಡನೆ ಹೋರಾಟ,ಬೆಳಕಿನ ತ್ಯಾಗವಿದು, ಜನರಿಗಾಗಿ ಸದಾ ನೋಟ. ಭೂಮಿಯ ಕತ್ತಲಲಿ ಸೂರ್ಯನಿಲ್ಲದ ಕೊರತೆಯಲಿ,ರಾತ್ರಿಯೆಲ್ಲಾ ಎಚ್ಚರ, ಬೆಳಕನಿತ್ತು ಹರುಷದಲಿ.ತ್ಯಾಗಮೂರ್ತಿಯಂತೆ ನಿಂತು, ರಸ್ತೆಯಲಿ ಏಕಾಂಗಿ,ಬೆಳಕಿನ ಹಂಚುವಿಕೆ, ನನ್ನ ಜೀವನದ ಸಾಂಗತ್ಯ. ಶಾಲೆಯಲಿ ಶಿಕ್ಷೆಯಾದ ಬಾಲಕನಂತೆ ದಿನವೆಲ್ಲಾ,ಒಂದೇ ಕಾಲಿನಲಿ ನಿಂತು, ಕಾವಲು ಕಾಯುವೆನು ಎಲ್ಲಾ.ಜಗಕೆ ಒಳ್ಳೆಯವರ ಬಗ್ಗೆ … Read more

ಅಪ್ಪು ಅಣ್ಣನ ಮೇಲೆ ಕೇಸ್ ಮಾಡ್ತೀಯೇನೋಲೆ …. !!!!: ನಾಗಸಿಂಹ ಜಿ ರಾವ್

(ಪುನೀತ್ ರಾಜ್‌ಕುಮಾರ್ ರವರ ಹುಟ್ಟುಹಬ್ಬ ಮಾರ್ಚ್ ೧೭, ಈ ಸಂದರ್ಭದಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಸ್ಮರಿಸಿ ಈ ನೆನೆಪು ….) ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ೨೦೦೯ ನಮ್ಮ ರಾಜ್ಯದಲ್ಲಿ ಜಾರಿಯಾಗಿದ್ದು ಹಲವಾರು ಪ್ರತಿಭಟನೆ ಹಾಗೂ ಗೊಂದಲದ ನಡುವೆ ಈ ಕಾಯ್ದೆಗೆ ಸೂಕ್ತ ಪ್ರಚಾರವೇ ಇರಲಿಲ್ಲ. ಆದರೆ ಈ ಕಾಯ್ದೆಯ ವಿಭಾಗ ೧೨.೧.ಅ ಅಪಾರ ಪ್ರಚಾರ ಪಡೆದಿತ್ತು ಹಾಗೂ ಬಹಳ ಜನಪ್ರಿಯ ಸಹ ಆಗಿತ್ತು. ವಿಭಾಗ ೧೨.೧.ಅ ಯ ಪ್ರಕಾರ … Read more

ವಿಶ್ವ ಜಲ ದಿನಾಚರಣೆ 2025 @ ಮೈಸೂರು

ಮೈಸೂರು ಸ್ಟೋರಿಟೆಲ್ಲರ್ಸ್ ನೆಟ್‌ವರ್ಕ್, ಕಲರ್ ಆಶ್ರಮ, ಮೈಸೂರು ವಿಶ್ಚವಿದ್ಯಾನಿಲಯ ಮತ್ತು ಮೈಸೂರು ಇಕೋ ಪ್ರಿಂಟ್ಸ್ ಸಹಯೋಗದೊಂದಿಗೆ ಮಾರ್ಚ್ 22, 2025 ರ ಶನಿವಾರ ವಾಟರ್ ಫೋರಮ್ ಮೈಸೂರು  ಆಯೋಜಿಸಿರುವ 💧ವಿಶೇಷ ವಿಶ್ವ ಜಲ ದಿನಾಚರಣೆಯಲ್ಲಿ ಭಾಗವಹಿಸಿ. 📍ಬೆಳಿಗ್ಗೆ ಕಾರ್ಯಕ್ರಮ | ಕುಕ್ಕರಹಳ್ಳಿ ಕೆರೆ (ಮುಖ್ಯ ದ್ವಾರ, ರೈಲ್ವೆ ಗೇಟ್ ಬಳಿ)ಬೆಳಿಗ್ಗೆ 6:45 – 10:00 : • ಪಕ್ಷಿ ವೀಕ್ಷಣೆ ನಡಿಗೆ • ಮರಗಳ ವೀಕ್ಷಣೆ ನಡಿಗೆ • ಪ್ರಕೃತಿ ನಡಿಗೆ • ಚಿತ್ರಕಲೆ • ಕೆರೆ … Read more

ಚಾರ್ಲಟ್‌ಟೌನ್ – ಒಂದು ಬಣ್ಣದ ಕನಸು: ಡಾ. ಅಮೂಲ್ಯ ಭಾರದ್ವಾಜ್

ಚಾರ್ಲಟ್‌ಟೌನ್, ಕೆನಡಾ – ಇಲ್ಲಿನ ಬದುಕು ಅಕ್ಷರಶಃ ಬಣ್ಣಗಳ ನಡುವೆ ಜೀವಿಸಿದಂತಿದೆ ಎಂದರೆ ತಪ್ಪಾಗದು. ಊರೆಲ್ಲಾ ಹಾಲು ಚೆಲ್ಲಿದಂತೆ ಕಾಣುವ ಚಳಿಗಾಲವು, ಬೆಂಕಿಯ ರಶ್ಮಿಯೊಂದಿಗೆ ಬೆರೆತು ನಗುವ ಬೇಸಿಗೆ, ಕೋಗಿಲೆಯ ರಾಗದಲ್ಲಿ ಮೂಡುವ ಗೀಜುಗಾಲು, ಹೊಸ ಜೀವನಕ್ಕೆ ಶಕ್ತಿಯ ಉಡುಗೊರೆಯಾದ ವಸಂತ—ಪ್ರಕೃತಿಯೆಂಬ ಭಾಷೆಯಲ್ಲಿ ಇಲ್ಲಿ ಎಲ್ಲವೂ ಒಂದು ಅಪೂರ್ವ ಕವಿತೆಯಾಗಿ ಮೂಡಿಬರುತ್ತವೆ. ಮೈಸೂರಿನಲ್ಲಿ ವರ್ಷ ಪೂರ್ತಿ ಹಸಿರಿನ ಸಿರಿಯನ್ನೇ ಕಂಡ ನಾವು ಇಲ್ಲಿಗೆ ಬಂದಾಗ, ಕಾಲದೊಂದಿಗೆ ಬದಲಾಗುವ ಪ್ರಕೃತಿಯ ಬಣ್ಣ ಮತ್ತು ಆಕಾಶವೇ ದಿನಕ್ಕೊಂದು ಹೊಸ ಬಣ್ಣದಲ್ಲಿ … Read more

ಲವ್ ಕ್ರುಷಾದ್: ಎಫ್ ಎಂ ನಂದಗಾವ

ರಾಜ್ಯದ ಸಚಿವ ಸಂಪುಟದ ನಡುವಯಸ್ಸಿನ ಹಿರಿಯ ಸದಸ್ಯ, ಗೃಹ ಖಾತೆಯ ಜವಾಬ್ದಾರಿ ಹೊತ್ತ ಸಚಿವ ಕೆ.ಟಿ.ಕಿರಣ ಅವರು, ಅಂದು ಸಂಗಮನೂರು ನಗರ ಪೊಲೀಸ್ ಠಾಣೆಗೆ ಭೇಟಿಕೊಡುವವರಿದ್ದರು. ಸಮಯ ನಿಗದಿ ಆಗಿರಲಿಲ್ಲ. ಊರಲ್ಲಿನ ಅವರ ಪಕ್ಷದ ನಾಯಕ ಹಿರಿಯಣ್ಣ ನಾಯ್ಕ ಎಂಬುವವರ ಮಗಳು ಮಂಗಳಾಳ ಮದುವೆಗೆ ಅವರು ಬಂದಿದ್ದರು. ಅವರ ಈ ಖಾಸಗಿ ಭೇಟಿಯನ್ನು ಅಧಿಕೃತಗೊಳಿಸುವ ಉದ್ದೇಶದಿಂದ ಸಂಗಮನೂರು ನಗರ ಪೊಲೀಸ್ ಠಾಣೆಯ ಭೇಟಿಯ ಕಾರ‍್ಯಕ್ರಮವನ್ನು ಆಯೋಜಿಸಲಾಗಿತ್ತು. ಬಾಲ್ಯದಿಂದಲೇ ಸಂಘಟನೆಯ ಶಾಖೆಯಲ್ಲಿ ಪ್ರಾಥಮಿಕ ಸದಸ್ಯತ್ವ ಹೊಂದಿ, ಅದರಲ್ಲಿಯೇ ಬೆಳೆಯುತ್ತಾ … Read more

ಜೀವನ ಮಕರಂದ: ಕೋಡಿಹಳ್ಳಿ ಮುರಳೀಮೋಹನ್

ತೆಲುಗು ಮೂಲ: ವಿಜಯ ಶ್ರೀಮುಖಿಕನ್ನಡ ಅನುವಾದ: ಕೋಡಿಹಳ್ಳಿ ಮುರಳೀಮೋಹನ್ “ಅಮ್ಮಾ, ಕೈವಲ್ಯಾ! ಅಭಿನವ್ ಕಾಲ್ ಮಾಡಿದ್ರು.. ನಿನ್ನ ಜೊತೆ ಮಾತಾಡೋಣ ಅಂತ ಎರಡು ಮೂರು ಸಾರಿ ಮಾಡಿದ್ರೂ ನೀನು ಲಿಫ್ಟ್ ಮಾಡ್ಲಿಲ್ಲ ಅಂತೆ?” ಕರೆದು ಕೇಳಿದ್ರು ರಾಮಚಂದ್ರ.“ಹೌದಾ ಅಪ್ಪಾ? ನನ್ನ ಮೊಬೈಲ್ ಬೆಡ್‌ರೂಮ್‌ನಲ್ಲಿದೆ. ನಾನು ಅಮ್ಮ, ಅಕ್ಕ ಅವರ ಜೊತೆ ಮಾತಾಡ್ತಾ ಅಡುಗೆಮನೆಯಲ್ಲಿದ್ದೆ. ಹೋಗಿ ನೋಡ್ತೀನಿ” ತಂದೆಯೊಂದಿಗೆ ಹೇಳುತ್ತಲೇ ಬೆಡ್‌ರೂಮ್‌ಗೆ ಹೋದಳು ಕೈವಲ್ಯ. “ನನ್ನಗೆ ಕಾಲ್ ಮಾಡಿದ್ರಂತೆ? ನಾನು ನೋಡಲೇ ಇಲ್ಲ, ಮೊಬೈಲ್ ಇನ್ನೊಂದು ರೂಮ್‌ನಲ್ಲಿದೆ” ಕಾಲ್ … Read more

ಗಾಂಜಾ ವ್ಯಸನಿಗಳು. . !!!!: ನಾಗಸಿಂಹ ಜಿ ರಾವ್

”ಮಕ್ಕಳಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೩೩ ಮಕ್ಕಳನ್ನು ಮಾದಕಪದಾರ್ಥಗಳಿಂದ ರಕ್ಷಿಸಬೇಕು ಎಂದು ಹೇಳಿದೆ. ಮಾದಕ ಪದಾರ್ತಗಳಿಗೆ ಮಕ್ಕಳು ಬಲಿಯಾಗದಿರುವಂತೆ ಮಾಡುವುದು ಮಕ್ಕಳಹಕ್ಕು. ನೀವು ಯೋಚಿಸಬೇಡಿ ಸಾರ್ ನಾವು ನಿಮ್ಮ ಶಾಲೆಗೆ ಬಂದು ಮಾದಕ ಪದಾರ್ಥಗಳಿಗಿಂದ ಆಗುವ ಅನಾಹುತಗಳ ಬಗ್ಗೆ ನಿಮ್ಮ ಶಾಲೆಯ ಮಕ್ಕಳಿಗೆ ಅರಿವು ಮೂಡಿಸುತ್ತೇವೆ” ಎಂದು ಮಾರೇನಹಳ್ಳಿ ಸರ್ಕಾರೀ ಹಿರಿಯ ಪ್ರೌಢಶಾಲೆಯ ಮುಖ್ಯೋಪಾದ್ಯಾಯರಿಗೆ ಭರವಸೆ ನೀಡಿದೆ, ತಮ್ಮ ಶಾಲೆಯ ಮಕ್ಕಳು ಬೀಡಿ, ಸಿಗರೇಟುಗಳಿಗೆ ಬಲಿಯಾಗುತ್ತಿದ್ದಾರೆ, ಅವರಿಗೆ ಅರಿವು ಮೂಡಿಸಿ ಎಂದು ನಮ್ಮನ್ನು ಆಹ್ವಾನಿಸಲು ದೂರದ ಮಾರೇನಹಳ್ಳಿಯಿಂದ ನಮ್ಮ … Read more

ಯಾವುದಕ್ಕಾದರೂ, ಉಚಿತವಾದರೆ ಬೆಲೆ ತೆರೆವುದು ಜಾಸ್ತಿ: ಡಾ. ಅಮೂಲ್ಯ ಭಾರದ್ವಾಜ್

ಗಲ್ಲಿ ಗಲ್ಲಿಗೂ ಡಾಕ್ಟ್ರುಗಳನ್ನು ಕಾಣುತ್ತಿದ್ದ ನಾವು ಕೆನಡಾಗೆ ಬಂದ ನಂತರ ಮೊದಲ ಬಾರಿಗೆ “ಎಲ್ಲಿಗೆ ಬಂದುಬಿಟ್ಟೆವೋ?” ಅನ್ನಿಸಿದ್ದು ಸತ್ಯ. ಅನಾರೋಗ್ಯವಾದರೆ ನಾಟಿ ಔಷಧ, ಮನೆಮದ್ದು ಅಥವಾ ಸ್ಪೆಷಲಿಸ್ಟ್‌ ಡಾಕ್ಟ್ರನ್ನೇ ಕಂಡು ಏನೋ ಒಂದು ಉಪಶಮನ ಮಾಡಿಕೊಳ್ಳುತ್ತಿದ್ದ ನಮಗೆ (ಬರಿಯ) ಅಸಿಡಿಟಿಯ ಅತಿರೇಕವನ್ನು ಅನುಭವಿಸಿ ಸುಸ್ತು ಹೊಡೆದೆವು. ನನ್ನ ಗಂಡನಿಗೆ ಅಸಿಡಿಟಿ ಸಮಸ್ಯೆ ಬಹಳ ಕಾಲದಿಂದಲೂ ಇದೆ. ವಿಜೇತ್‌ರ ಈ ಸಮಸ್ಯೆ ನಮಗೆ ಇಲ್ಲಿಗೆ ಬರುವವರೆಗೂ ಭಾರವೆನಿಸಿರಲಿಲ್ಲ. ಅಲ್ಲಲ್ಲೆ ಉಪಶಮನ ಕಾಣುತ್ತಿದ್ದ ನಾವು, ಈ ಚಿಕ್ಕ ಸಮಸ್ಯೆಗೆ ಉಪಶಮನ … Read more

ಮೂರು ಕವಿತೆಗಳು: ನಾಗರಾಜ ಜಿ. ಎನ್.  ಬಾಡ

ವಾಸ್ತವ ಎಷ್ಟೇಅದುಮಿಟ್ಟರೂಕನಸುಗಳುಚಿಗುರುವುದು ಆಶೆಗಳುಗರಿ ಗೆದರುವುದುಹೂವಂತೆ ಅರಳಿಘಮ ಘಮಿಸುವುದು ಸಂಭ್ರಮಿಸುವಮೊದಲೇನಿರಾಶೆಯಕಾರ್ಮೋಡಸುಳಿಯುವುದು ಖುಷಿ ಖುಷಿಯಾಗಿದ್ದಮನವುನೋವಿಂದನರಳುವುದು ಮನಸ್ಸುಇನ್ನೆಲ್ಲೋಹೊರಳುವುದುವಾಸ್ತವದ ಅರಿವುಕಣ್ಣ ತೆರೆಸುವುದು ಖುಷಿಯ ಅಳಿಸುವುದುಕಣ್ಣೀರ ಧಾರೆಯಹರಿಸುವುದುಮನದ ತುಂಬನೋವುಗಳನ್ನುಉಳಿಸುವುದು ಬೀಸಿ ಬರುವತಂಗಾಳಿಯೂತಂಪ ನೀಡದುನೊಂದ ಮನಕೆ ಕೊನೆಯ ನಿಲ್ದಾಣ ದೂರದೂರಿನ ಈ ಪಯಣಕೊನೆಗೆ ಸೇರುವುದು ಸ್ಮಶಾನಇರುವುದು ನಾಲ್ಕಾರು ದಿವಸಇರಲಿ ಇರುವಷ್ಟು ದಿನ ಹರುಷಕಳೆದು ಹೋಗುವುದು ವರುಷನಡುವೆ ಯಾಕೆ ಸುಮ್ಮನೆ ವಿರಸಸಂಸಾರದಲ್ಲಿ ಇರಲಿ ಸರಸಅನುಭವಿಸು ನೀ ಪ್ರತಿ ದಿವಸನಿನ್ನದೆನ್ನುವುದು ಇಲ್ಲಿ ಏನಿಲ್ಲಅವನು ಆಡಿಸಿದಂತೆ ನಡೆಯುವುದೆಲ್ಲಬರಿ ಪಾತ್ರದಾರಿಗಳು ನಾವೆಲ್ಲಾಅವನೆದಿರು ಆಟ ನಡೆಯುವುದಿಲ್ಲಅವನು ಕುಣಿಸಿದಂತೆ ಕುಣಿಯಬೇಕಲ್ಲಯಾವ ಉನ್ಮಾದವೂ ಜೊತೆಯಾಗುವುದಿಲ್ಲಯಾವ ಸಂಪತ್ತು … Read more

ಮೂರು ಕವಿತೆಗಳು: ರಾಜಹಂಸ

ಅಭಿವ್ಯಕ್ತಿಗಳ ಧರ್ಮಸಂಕಟ -೧-ಉಸಿರಿನಿಂದ ರಚಿಸಿದ ಬೇಲಿಯಿಂದಮನದ ಅಭಿವ್ಯಕ್ತಿಗಳಿಗೆ ಬಂಧಿಸಿದ್ದೇನೆಸೂಕ್ಷ್ಮಕ್ರಿಮಿಗಳು ಹಾರುವಹೂದೋಟದಲಿ ಅರಳದ ಹಾಗೆ ಭೂಮಿಯ ಗುರುತ್ವಾಕರ್ಷಣೆಯಿಂದತಪ್ಪಿಸಿಕೊಳ್ಳುವಷ್ಟೇ ಕಷ್ಟವಿದ್ದರೂಬೇಲಿ ಜಿಗಿದು ಹೂಬನದಲಿ ಹೆಜ್ಜೆಇಡಲೇಬೇಕೆಂಬುವ ದಿವ್ಯ ಉತ್ಸಾಹಹೊಂದಿರುವ ಈ ಅಭಿವ್ಯಕ್ತಿಗಳಿಗೆಮನವೊಲಿಸುವಲ್ಲಿ ಪೂರ್ಣ ವೈಫಲ್ಯಬಂಧಮುಕ್ತಗೊಳಿಸಲೂ ಅಸಾಧ್ಯಚಂಚಲ ಮನಸ್ಸಿನ ಅಭಿವ್ಯಕ್ತಿಗಳಿಗೆಅನುಕ್ಷಣ ಕಾವಲು ಕಾಯುವ ತುಟಿಗಳು -೨-ಅಭಿವ್ಯಕ್ತಿ ಇಡುವ ಹೆಜ್ಜೆಗಳಿಗೆ ಧರ್ಮದಗೆಜ್ಜೆ ಕಟ್ಟಿ ರಾಜಕೀಯದ ಬಣ್ಣ ಬಳಿದುಅವಾಚ್ಯ ಶಬ್ದಗಳ ಪಲ್ಲಕ್ಕಿಯಲಿಹೂದೋಟದ ತುಂಬೆಲ್ಲ ಮೆರವಣಿಗೆಅದಕ್ಕಾಗಿಯೇ ಜನ್ಮಪಡೆದ ಅಭಿವ್ಯಕ್ತಿಗಳಕೊರಳು ಹಿಸುಕಿ ಉಸಿರು ನಿಲ್ಲಿಸುತ್ತಿದ್ದೇನೆಮರಳಿ ಸೇರುತಿವೆ ಪಂಚಭೂತಗಳ ಗೂಡಿಗೆ! -೩-ಬೆಳಕಿನ ಮೇಲೆ ಭಯದ ಗುರುತುಗಳುರೇಖಾಚಿತ್ರಗಳು ಬರೆಯಲುಬಣ್ಣ ತುಂಬುತಿವೆ ನೋವಿನ … Read more

ಹೊಸ ಕಿರು ಚಿತ್ರ “ಆಡು ಆನೆಯ ನುಂಗಿ”

ಆಡು ಆನೆಯ ನುಂಗಿ ಕಿರುಚಿತ್ರವನ್ನು ನೋಡಿ. ತಳಸಮಾಜಗಳು ವ್ಯವಸ್ಥೆಯು ಹೇರಿರುವ ಬಡತನವ ಮೈತುಂಬಾ ಹೊದ್ದು ಬದುಕುತ್ತಿರುವವರು. ಆದರೆ ಬಿಟ್ಟಿಯಾಗಿ ಬರುವ ಹಣ(ದಾನ) ಕ್ಕೆ ಆಸೆ ಪಡುವ ಮತ್ತು ಅದರ ಹಂಗಿನಲ್ಲಿ ತಮ್ಮ ಸ್ವಾಭಿಮಾನವ ಅಡವಿಟ್ಟು ಬದುಕುವವರಲ್ಲ. ರಟ್ಟೆಲಿ ಶಕ್ತಿ ಇರೋ ತನಕ ದುಡಿದು ಉಣ್ಣೋರು ಅವರು. ಹಸಿದು ಮಲಗಿದರೂ ಆತ್ಮಗೌರವ ಮಾರಿಕೊಳ್ಳರು. ಅದಕ್ಕೆ ಹೇಳೋದು ಬಡವನಿಗೆ ಸ್ವಾಭಿಮಾನ ಜಾಸ್ತಿ‌ ಅಂತ. ಅಂತಹ ಸ್ವಾಭಿಮಾನವ ಬಿಟ್ಟು ಅಂಗಲಾಚುವ ಪರಿಸ್ಥಿತಿಯನ್ನ ಹೇಗಾದರೂ ತಂದು ಮತ್ತೆ ತಾವೇ ಸಹಾಯ‌ ಮಾಡುವ ಔದಾರ್ಯವ … Read more

ತನಿಖಾ ಸಮಿತಿಯ ಸದಸ್ಯ. . . . !!!!!: ನಾಗಸಿಂಹ ಜಿ ರಾವ್

”ನಾಗಸಿಂಹ ಏನ್ರಿ ?” ”ಹೌದು ನೀವು ಯಾರು ಸರ್ ?” ”ಪೊಲೀಸ್ ಕಮಿಷನರ್ ಆಫೀಸ್ ಇಂದ ಫೋನ್ ಮಾಡಿದೀನಿ, ನಿಮ್ಮ ಮೇಲೆ ಸರ್ಕಾರೇತರ ಶಾಲೆಯ ಸಂಘದ ಅಧ್ಯಕ್ಷರು ದೂರು ಕೊಟ್ಟಿದ್ದಾರೆ, ನೀವು ಅವರ ಶಾಲೆಗೆ ನುಗ್ಗಿ ಗಲಾಟೆ ಮಾಡಿ, ಮಕ್ಕಳಿಗೆ, ಶಿಕ್ಷಕರಿಗೆ ಬೆದರಿಕೆ ಹಾಕಿದೀರಾ, ಅತಿಕ್ರಮಣ ಪ್ರವೇಶ ಮಾಡಿದ್ದೀರಾ ಅಂತ ದೂರು ಕೊಟ್ಟಿದ್ದಾರೆ, ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ನೀವು ಕಮಿಷನ್ ಆಫೀಸ್ ಗೆ ಬಂದು ಹೇಳಿಕೆ ಕೊಡಿ ” ಫೋನ್ ಕಟ್ ಆಯಿತು. ನನಗೆ ಸಹಜವಾಗಿಯೇ … Read more

ಗುಸು ಗುಸು ಮಾಡುವವರು ಹೆಂಗಸರಷ್ಟೆಯೇ? ಒಬ್ಬ ಐಲ್ಯಾಂಡರ್‌ನ ಕೇಳಲೇಬೇಕು: ಡಾ.ಅಮೂಲ್ಯ ಭಾರದ್ವಾಜ್

ನಾನು ಹಲವು ಬಾರಿ ಯೋಚಿಸುತ್ತಿರುತ್ತೇನೆ. ಭಾರತೀಯ ಹೆಂಗಸರ ಬಗ್ಗೆ ಯಾವಾಗಲೂ ಗುಸು ಗುಸು ಮಾಡುತ್ತಾರೆ ಎಂಬ ಆಪಾದನೆ ಎಷ್ಟು ಸರಿ ಎಂದು. ಕೆನಡಾಗೆ ಹೋದಾಗಿನಿಂದ ಇದು ನನ್ನ ಮೂರನೇ ಕೆಲಸ. ಹಾಲು ಕೃಷಿಕರ ಹಿತಾಸಕ್ತಿಯನ್ನು ಕಾಯುವ ಇಲ್ಲಿನ ರಾಜ್ಯದ ನಂದಿನಿಯಂತಹ ಸಂಸ್ಥೆಯಲ್ಲಿರುವ ಈ ನನ್ನ ಕೆಲಸ ನನಗೆ ಅತಿ ಪ್ರಿಯವಾದದ್ದು. ಹಾಲು ಉತ್ಪಾದಕರಿಗೆ ಇಲ್ಲಿ ಎರಡು ರೀತಿಯ ವ್ಯವಸ್ಥೆಗಳಿವೆ – ಕ್ರೆಡಿಟ್ ಮತ್ತು ಕೋಟಾ ವ್ಯವಸ್ಥೆ. ಈ ಎರಡೂ ವ್ಯವಸ್ಥೆಗಳು ಹಾಲು ಮಾರಾಟದ ಕೋಟಾವನ್ನು ನಿರ್ವಹಿಸಲು ಸಹಾಯ … Read more

ಮೂರು ಕವಿತೆಗಳು: ಎನ್. ಶೈಲಜಾ, ಹಾಸನ

ಕದಲಿಕೆ ನಿನ್ನದೊದು ಸಣ್ಣಸಾಂತ್ವನಕ್ಕಾಗಿಅದೆಷ್ಟು ಕಾದಿದ್ದೆನಿನಗದರ ಅರಿವಿತ್ತೇ ನನ್ನ ದಿಮ್ಮನೆ ಭಾವನೋಡಿ ಹೊರಟುಬಿಟ್ಟೆಯಲ್ಲ ದೂರ ಹೋಗುವಾಗ ಹಾಗೆನನ್ನ ಕಂಗಳದಿಟ್ಟಿಸಿದ್ದರೆಕಾಣುತ್ತಿತ್ತುನನ್ನ ಹಂಬಲಿಕೆತೆಳ್ಳನೆ ಕಣ್ಣೀರಪಸೆಯ ಆರ್ದ್ರತೆ ನಿನ್ನದೊಂದು ಕದಲಿಕೆಗೆನನ್ನೊಳಗಿನಭಾವಗಳ ಸಡಿಲಿಕೆ ಒಮ್ಮೆ ಕಣ್ಣಲ್ಲಿ ಕಣ್ಣುನೆಟ್ಟಿದ್ದರೆ ಸಾಕಿತ್ತುನೋಟ ಹೇಳುತ್ತಿತ್ತುನೀನು ಬೇಕೆಂದು ಕೇಳಿಸಿಕೊಳ್ಳುವತಾಳ್ಮೆ ಇಲ್ಲದ ನೀನುಹೇಳುವ ವಾಂಛೆಇಲ್ಲದ ನಾನುಆಹಾ ಅದೆಂತಹಜೋಡಿ ನಮ್ಮದು. ಎದೆಯ ಗೂಡಿನೊಳಗೆಬಚ್ಚಿಟ್ಟಿದ್ದೆ ಅನುರಾಗಆದರೆ ನಿನಗೆ ಕಂಡಿದ್ದುಬಿರು ವದನ ಮಾತ್ರ ಹುಡುಕುವಪ್ರಾಮಾಣಿಕತೆನಿನ್ನಲ್ಲಿದ್ದಿದ್ದರೆಜೋಡಿ ಹಕ್ಕಿಯಾಗಿಸುತ್ತಾಡ ಬಹುದಿತ್ತುಬಾನ ತುಂಬಾ ಆದರೀಗ ರೆಕ್ಕೆಮುರಿದಹಕ್ಕಿಯಂತೆನಿಂತಲ್ಲೇಸುತ್ತುತ್ತಾಚಡಪಡಿಸುವದುಸ್ಥಿತಿ * ವಿಕಾರದ ಮರಳು ಇದಿರು ಹಳಿಯುವುದುಬೇಡವೆ ಬೇಡತನ್ನ ತಾ ಬಣ್ಣಿಸಿಕೊಳ್ಳುವುದಂತುಇಲ್ಲವೆ ಇಲ್ಲಈ ಅಂತರಂಗದಬಹಿರಂಗದ … Read more

ಕಿರುಕವಿತೆಗಳು: ಚಾರುಶ್ರೀ ಕೆ ಎಸ್

ಪ್ರೀತಿ ಎಷ್ಟು ಪ್ರೀತಿ, ಎಷ್ಟ್ ಎಷ್ಟೋ ಪ್ರೀತಿ,ಸತ್ಯವೇ ಕಾಣುವ ಪ್ರೀತಿಯಾಗಿ,ನಂಬಿಕೆಯ ಅನಿವಾರ್ಯತೆ ಇಲ್ಲದ ಪ್ರೀತಿ,ಬಯಕೆಗಳ ಮೀರಿ ಇರುವ ಪ್ರೀತಿ,ಪರರ ಕಾಡದ, ಎನ್ನ ನೋಯಿಸದ,ಗೌರವದ ಶ್ರೇಣಿ ಇದು ಪ್ರೀತಿ,ಶಾಂತಿಯ ಧರಿಸಿದ ಪ್ರೀತಿ,ಬದುಕನ್ನ ಸ್ವೀಕರಿ‌ಸಿ ಅದುವೇ,ಬಯಲೆಂದು ಅರಿತ ಪ್ರೀತಿ,ಅರಿತು ಓಡುತಲಿರಲು,ಜಂಗಮನಲ್ಲವೆ ಶರಣಾಗತಿಯೆಅಧಮ್ಯ ಶಕ್ತಿಯ ಮೇಲಿನ ಪ್ರೀತಿ. * ತರಂಗ ರೂಪ ಬೆಲೆಯುಳ್ಳ ಚುಕ್ಕಿಗಳು,ಬಗೆ ಬಗೆಯ ಜೋಡಿಗಳ,ಸುಂದರ ಮಿಲನ ನಾ,ನನ್ನೀ ಗಣಿತ ಕಾರ್ಯಕ್ಕೆ,ಪ್ರಕ್ಷೇಪಣಗೆ ಜಾಗ ಉಂಟು,ಹೊರತೆಗೆಯುವಿಕೆಯು ಸಾಧ್ಯ,ಅಂಶಗಳ ಧರಿಸುವ ಭರದಲ್ಲಿ,ಸಾಗರದ ತೀರವ,ಮುಟ್ಟಿ ಬಂದಿದ್ದೇ, ಬಂದಿದ್ದು,ಪ್ರೀತಿಯ ಅಂಶಗಳ ತೊಟ್ಟ ನಂತರ,ಕತೃ, ಕರ್ಮ, ಕ್ರಿಯೆ,ಎಲ್ಲಾ … Read more

ಗುಂಡೂಮಾಮನ ಜಾದು ಮತ್ತು ಇಕ್ಕಳ: ಡಾ. ಹೆಚ್ ಎನ್ ಮಂಜುರಾಜ್

ಪ್ರೌಢಶಾಲೆಯಲ್ಲಿ ಓದುವಾಗ ಕೆ ಎಸ್ ನರಸಿಂಹಸ್ವಾಮಿಯವರ ‘ಇಕ್ಕಳ’ ಎಂಬೊಂದು ಪದ್ಯವಿತ್ತು. ಮೇಡಂ ಪಾಠ ಮಾಡುವಾಗ ಅದೇನು ಹೇಳಿದರೋ ಆಗ ತಲೆಗೆ ಹೋಗಿರಲಿಲ್ಲ. ಆದರೆ ನಮ್ಮ ಮನೆಯ ಅಡುಗೆಮನೆಯಲ್ಲೊಂದು ಇಕ್ಕಳ ಇತ್ತು. ಆ ಪದ್ಯಪಾಠ ಓದುವಾಗೆಲ್ಲ ನನಗೆ ಅದೊಂದೇ ನೆನಪಾಗುತ್ತಿತ್ತು. ಮನೆಮಂದಿಗೆಲ್ಲಾ ಆ ಇಕ್ಕಳದ ಮೇಲೆ ಬಲು ಅಕ್ಕರೆ. ಏಕೆಂದರೆ ಕೆಳಮಧ್ಯಮವರ್ಗದವರಾದ ನಮ್ಮ ಮನೆಗೆ ಬಂದಿದ್ದ ಮೊತ್ತ ಮೊದಲ ವಿದೇಶಿ ವಸ್ತುವದು. ನಮ್ಮ ತಂದೆಯ ಸೋದರಮಾವ ಚಿಕ್ಕಂದಿನಲ್ಲೇ ಮುಂಬಯಿಗೆ ಓಡಿ ಹೋಗಿ ಅಲ್ಲೆಲ್ಲೋ ಇದ್ದು, ಏನೇನೋ ವಿದ್ಯೆಗಳನ್ನು ಕಲಿತು, … Read more

ನಿಮ್ಮ ಮಕ್ಕಳು.. ನೀವೇ ಹೊಣೆ !!!: ನಾಗಸಿಂಹ ಜಿ ರಾವ್

‘ ಸಾರ್ ನಮ್ಮ ಮಕ್ಕಳನ್ನ ಶಾಲೆಯಿಂದ ಹೊರಗಡೆ ಹಾಕಿದ್ದಾರೆ, ಸಹಾಯ ಮಾಡಿ ಸಾರ್ ”ಹೀಗೆ ಪೋಷಕರ ಕರೆ ಬಂತು, ಸುಮಾರು ಎಂಟು ಜನ ಏಳನೇ ತರಗತಿಯ ಮಕ್ಕಳನ್ನು ಸರಿಯಾಗಿ ಓದು ಬಾರದವರು ಎಂದು ವಸಂತನಗರದ ಸರಸ್ವತಿ ಶಾಲೆಯಿಂದ ಹೊರಗಡೆ ಕಳಿಸುವ ತೀರ್ಮಾನವನ್ನ ಶಾಲೆಯ ಆಡಳಿತ ಮಂಡಳಿ ಮಾಡಿದ್ದರು. ಪೋಷಕರನ್ನು ಕರೆದು ಟಿಸಿ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದರು. ಕೆಲವು ಪೋಷಕರಿಗೆ ಟಿಸಿ ಕೊಟ್ಟುಬಿಟ್ಟಿದ್ದರು. ಈ ಮಕ್ಕಳಿಗೆ ಓದಲು ಬರುವುದಿಲ್ಲ ಎಂದು ಸರಸ್ವತಿ ಶಾಲೆಯಿಂದ ಹೊರಗಡೆ ಹಾಕಿದ್ದಾರೆ ನಾವೂ … Read more

ಅಮ್ರಾವತಿಯ ಗಂಡ: ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ

“ಮುಂಗಾಲಿನ ಮ್ಯಾಲೆ ನಡೆಯೋ ಹೆಂಗ್ಸು ಮೂರೊಲೇ ಗುಂಡು ಒಂದ್ಕಡೆ ಇಕ್ಕಲ್ಲ, ಯಿಟ್ನೊತ್ಗೇ ಒಲೆ ಕಿತ್ತಾಕಿ ಮುಂಗೈನ ತಿಕುಕ್ಕೆ ಸೀಟ್ಕಂಡು ಮುಂದ್ಲೂರಿಗೆ ವೋತಾಳೆ, ನೀನು ಅಂಗೇ ಕಣೇಳೇ ಬಿತ್ರೀ ಆಹ ಹ ಹಾ… ಹೆಂಗ್ ವನಿತಾಳ್ನೋಡು ಇವುಳ್ ವೈಯ್ಯಾರುಕ್ಕೆ ನನ್… ” ಮಲ್ಲಕ್ಕ ಕುಂತಲ್ಲೇ ಕೊಸರಾಡತೊಡಗಿದಳು, ಅವಳ ಆವೇಶ, ಆಕ್ರೋಶ ಎಷ್ಟಿತ್ತೆಂದರೆ ಅವಳು ಕುಂತಿರೋ ಜಾಗಕ್ಕೆ ಗಾರೆ ಬಳಿಯದೇ ಬರೀ ಮಣ್ಣಿನ ನೆಲವಾಗಿದ್ದಿದ್ರೇ ಅವಳ ಕೊಸರಾಟಕ್ಕೆ ಅವಳ ಕುಂಡಿಯಷ್ಟಗಲವೂ ನೆಲ ತೂತು ಬಿದ್ದು ನೆಲದೊಳಗೆ ವೊಲ್ಟೋಗಿರೋಳು, ಇವಳ ಕೊಸರಾಟ … Read more

ಜಾತಿ ಜಾನಪದ ಬೇರೆ ಬೇರೆ ಅಲ್ಲ ಎನ್ನುವ “ದಲಿತ ಜಾನಪದ”: ಡಾ. ನಟರಾಜು ಎಸ್ ಎಂ

ಮೊಗಳ್ಳಿ ಗಣೇಶ್ ಅವರದು ಕನ್ನಡ ಕಥಾಲೋಕದಲ್ಲಿ ಬಹು ದೊಡ್ಡ ಹೆಸರು. ೧೯೯೨ ರಲ್ಲಿ ತಮ್ಮ ಮೂವತ್ತನೇ ವಯಸ್ಸಿಗೆ ಮೊದಲ ಕಥಾಸಂಕಲನ ಪ್ರಕಟಿಸಿದ್ದ ಮೊಗಳ್ಳಿಯವರು ೨೦೨೪ ರ ತಮ್ಮ ಅವರತ್ತೆರಡನೇ ವಯಸ್ಸಿನವರೆಗೂ ಅಂದರೆ ಕಳೆದ ಮೂವತ್ತೆರಡು ವರ್ಷದಲ್ಲಿ ನವತ್ತೇಳಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಬರಹಗಳು ಕಥೆಗಳಾಗಿ, ಕಾದಂಬರಿಗಳಾಗಿ, ಸಂಸ್ಕೃತಿ ಚಿಂತನೆಗಳಾಗಿ, ಕಾವ್ಯಗಳಾಗಿ, ಬೀದಿ ನಾಟಕಗಳಾಗಿ, ಸಂಪಾದಿತ ಕೃತಿಗಳಾಗಿ ಕನ್ನಡ ಸಾರಸ್ವತ ಲೋಕಕೆ ಸೇರ್ಪಡೆಯಾಗಿವೆ. ಅವರ ಸಾಹಿತ್ಯ ಸೇವೆಗೆ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ೨೦೧೭ ರ … Read more

ಮೇಷ್ಟ್ರು ರವಿ, ರಾಜಿ ಮತ್ತು ಮಗ ರವಿರಾಜ: ಲಿಂಗರಾಜು ಕೆ ಮಧುಗಿರಿ

ಅಗ್ರಹಾರಕ್ಕೆ ವರ್ಗವಾಗಿ ಬಂದ ರವಿಯನ್ನು, “ಆ ಶಾಲೆಯನ್ಯಾಕೆ ತೆಗೆದುಕೊಂಡೆ ಗುರು? ನೆಕ್ಸ್ಟ್ ಅಕಾಡೆಮಿಕ್ ಇಯರ್‌ಗೆ ನೀನು ಹೆಚ್ಚುವರಿ ಆಗೋದು ಪಕ್ಕಾ. ಆ ಹೆಸ್ರಿಗೂ ಆ ಊರ್ಗೂ ಸಂಬಂಧಾನೇ ಇಲ್ಲ. ಊರಿನ ತುಂಬೆಲ್ಲಾ ಇರೋದು ಮಾದಿಗ್ರು, ಹೊಲೇರು, ಕುರುಬ್ರು, ಮಡಿವಾಳ್ರೇ. ಗೊತ್ತಲ್ಲಾ ಅವ್ರೆಂಗೆ ಅಂತಾ?”, ಹೀಗೆ ತುಟಿಗೆ ಇಷ್ಟಿಷ್ಟೇ ವೋಡ್ಕಾನಾ ಮುತ್ತಿಡ್ತಾ, ರವಿಯ ಕಸಿನ್, ಕುಮಾರ ಮುಂದಾಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸಿದ. ರವಿ, ಅಗ್ರಹಾರದ ಹೆಸರಿನಿಂದ ಹಾಗೂ ಕೌನ್ಸೆಲಿಂಗ್ ನಲ್ಲಿ ಉಳಿದ ಒಂದೇ ಒಂದು ಶಾಲೆ ಇದಾಗಿದ್ದುದರಿಂದ ಅನಿವಾರ್ಯವಾಗಿ … Read more

ಕಿರು ಕತೆಗಳು: ಸುಜಾತಾ ಎಸ್ ಹೆಗಡೆ ದಂಟಕಲ್

ಅಂತರ್ಗತ “ಲೇ ಭಾವನಾ ಎಲ್ಲೆ ಇದ್ದೀಯಾ ? ನನಗೆ ಕೆಲಸಕ್ಕೆ ಹೊರಡೋಕೆ ಸಮಯ ಆಯ್ತು. ಚಿನ್ನುಗೆ ಬೇರೆ ಸಮವಸ್ತ್ರ ಹಾಕಿಲ್ಲಾ. ಅವನನ್ನ ಶಾಲೆಗೆ ಬಿಟ್ಟು ನಾನು ತಲುಪೋದು ಯಾವಾಗಾ ?. ಹರ್ಷ ಏರು ಧ್ವನಿಯಲ್ಲಿ ಕೂಗಿದಾಗಲೇ ವಾಸ್ತವಕ್ಕೆ ಬಂದಳು. ಅವಸರವಸರವಾಗಿ ಉಕ್ಕುತ್ತಿದ್ದ ಹಾಲಿನ ಪಾತ್ರೆಯ ಉರಿಯನ್ನು ನಂದಿಸಿದಳು. ಅಡಿಗೆ ಮನೆಯ ಬಾಗಿಲಿಗೆ ಬಂದ ಪತಿಯನ್ನು ಕಂಡು ಮುಖ ಬಾಡಿಸಿಕೊಂಡಳು. ಕಣ್ಣಾಲಿಗಳು ತುಂಬಿಕೊಂಡವು. ಭಾವುಕಳಾದ ಹೆಂಡತಿಯನ್ನು ಕಂಡು ಸ್ವಲ್ಪ ಮೆತ್ತಗಾದ. “ಇದೇನೆ ಭಾವನಾ ? ಇಷ್ಟಕ್ಕೆಲ್ಲ ಯಾರಾದ್ರು ಕಣ್ಣೀರು … Read more

ಶಿಕ್ಷಣ, ಉದ್ಯೋಗ ಮತ್ತು ನೈತಿಕತೆ: ಪರಮೇಶ್ವರಿ ಭಟ್

ಎಲ್ಲರೂ ತಿಳಿದಂತೆ ಶಿಕ್ಷಣ‌ ಮತ್ತು ಉದ್ಯೋಗ ಒಂದಕ್ಕೊಂದು ಸಂಬಂಧಪಟ್ಟ ವಿಷಯಗಳು. ಉತ್ತಮ ಶಿಕ್ಷಣ ಉತ್ತಮ ಉದ್ಯೋಗಕ್ಕೆ, ಉತ್ತಮ ಉದ್ಯೋಗವು ಉತ್ತಮ ಜೀವನ ಮಟ್ಟಕ್ಕೆ ಕಾರಣವಾಗುತ್ತದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಜೀವನ ಒದಗಿಸಿಕೊಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುತ್ತಾರೆ. ಆದರೆ ಹಾಗೆ ಮಾಡುವಾಗ ಜೀವನಕ್ಕೆ ಅತೀ ಅಗತ್ಯವಾದ ನೈತಿಕತೆಯ ಬಗ್ಗೆ ಗಮನ ಹರಿಸುವುದಿಲ್ಲ. ಹಾಗೆಂದು ಅವರು ವಾಮ‌ಮಾರ್ಗ ಅನುಸರಿಸುತ್ತಾರೆ ಅಂತ ಅರ್ಥವಲ್ಲ. ಅವರ ಗಮನ ಮಕ್ಕಳು ಗಳಿಸುವ ಅಂಕಗಳಿಗೆ. . ಯಾಕೆಂದರೆ ಅಂಕಗಳೇ ಬುದ್ಧಿವಂತಿಕೆಯ ಅಳತೆಗೋಲು ಅಂತ‌ … Read more