editor
ಜಂಬೂ ಸವಾರಿ: ಡಾ.ವೃಂದಾ ಸಂಗಮ್
ಇದೇನು ಕತಿಯಲ್ಲ. ನಮ್ಮೂರಾಗ ನಡೆದದ್ದು. ಆದರೂ ನೀವು ನಂಬೂದಿಲ್ಲ ನನಗ ಗೊತ್ತದ. ಅಂಥಾದ್ದೇನದ ಅಂದರ. ನಮ್ಮೂರಾಗ ಒಂದು ಇನ್ಸಪೆಕ್ಷನ್ ಬಂಗಲೋ ಅದ. ಅದೇನು ದೊಡ್ಡದು ಅಂತೀರಾ ಅಥವಾ ಈಗ ಹೋಗಿ ನೋಡಿದರ ಅದೊಂದು ಹಳೆಯ ಪಳೆಯುಳಿಕೆಯ ಕೋಟೆ ಕೊತ್ತಳದಂಗ ಕಾಣತದ. ಆದರೆ, ಒಂದಾನೊಂದು ಕಾಲದಾಗ, ಇದು ನಮ್ಮೂರಿನವರಿಗೆ ಒಂದು ಪಿಕ್ ನಿಕ್ ಸ್ಪಾಟ್ ಆಗಿತ್ತು. ಅದು ಹೆಂಗೆ ಅಂದರೆ, ಊರಿಗೆ ಯಾರಾದರೂ ಬಂಧುಗಳು ಬಂದರೆ, ಅವರಿಗೆ ಊರಲ್ಲಿ ತೋರಿಸ ಬೇಕಾದ ವಿಶೇಷ ಸ್ಥಳದಲ್ಲಿ ಇದೂ ಒಂದಾಗಿತ್ತು. ಹಂಗಂದರ, … Read more
ಸಸ್ಯಶಾಸ್ತ್ರದ ಲೋಕದಲ್ಲಿ ಒಂದು ಪ್ರವಾಸ (ಭಾಗ 2): ರೋಹಿತ್ ವಿಜಯ್ ಜಿರೋಬೆ.
ಪ್ರಕೃತಿಯೊಳಗೆಯೇ ಮಾನವ ಜೀವನ ವಾಸ್ತವವಾಗಿ ನೆಲೆಗೊಂಡಿದೆ. ಅಲ್ಲಿ ಜೀವ, ಸೌಂದರ್ಯ ಮತ್ತು ಪ್ರೇರಣೆ ಒಳಗೊಂಡಿದೆ. ಪ್ರಕೃತಿಯ ಅಂಶಗಳಲ್ಲಿ ಸಸ್ಯಗಳು ಅತ್ಯಂತ ಪ್ರಮುಖವಾದವು. ಪ್ರಕೃತಿಯು ಸಸ್ಯಗಳಿಲ್ಲದೆ ಅಪೂರ್ಣವಾಗಿದೆ. ಸಸ್ಯಗಳು ಆಹಾರ, ಆಶ್ರಯ, ಔಷಧ, ಆಮ್ಲಜನಕ ಮತ್ತು ಪರಿಸರ ಸಮತೋಲನಕ್ಕೆ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ ಸಸ್ಯಶಾಸ್ತ್ರದ ಲೋಕವು ಕೇವಲ ವಿಜ್ಞಾನ ಶಾಖೆಯಲ್ಲ — ಅದು ಮಾನವನ ಜೀವನದ ಅಸ್ತಿತ್ವವನ್ನು ಕಾಯ್ದುಕೊಳ್ಳುವ ಮೂಲ ತತ್ವವಾಗಿದೆ. ಸಸ್ಯಶಾಸ್ತ್ರದ ಮೊದಲ ಭಾಗದಲ್ಲಿ ನಾವು ಸಸ್ಯಗಳ ವೈವಿಧ್ಯತೆ, ಅವುಗಳ ಜೀವಚಕ್ರ ಮತ್ತು ಮಾನವ ಜೀವನದ ಸಂಬಂಧವನ್ನು … Read more
ಬ್ಲಾಕೀ ನಾಯಿ ಕಥೆ: ಕೋಡೀಹಳ್ಳಿ ಮುರಳೀ ಮೋಹನ್
ತೆಲುಗು ಮೂಲ :ಕಂದಾಳ ಶೇಷಾಚಾರ್ಯಲು ಸ್ವೇಚ್ಚಾನುವಾದ: ಕೋಡೀಹಳ್ಳಿ ಮುರಳೀ ಮೋಹನ್ ೧ ಅದು ಒಂದು ಸಣ್ಣ ಹಳ್ಳಿಯಾಗಿತ್ತು. ಅಲ್ಲಿ ಕರಣಂ (ಹಳ್ಳಿಯ ಲೆಕ್ಕಿಗ) ಅವರ ಮನೆಯಲ್ಲಿ ಒಂದು ನಾಯಿ ಮರಿಯನ್ನು ಸಾಕುತ್ತಿದ್ದರು. ಅದು ನೋಡಲು ಬೀದಿ ನಾಯಿಗಳಂತೆ ಇದ್ದರೂ, ಜೊತೆಯಲ್ಲಿ ಹುಟ್ಟಿದವರು ಯಾರೂ ಇಲ್ಲದ ಕಾರಣ, ತಾಯಿ ಹಾಲನ್ನು ಪುಷ್ಟಿಯಾಗಿ ಕುಡಿದು ಗಟ್ಟಿಮುಟ್ಟಾಗಿ ಬೆಳೆಯುತ್ತಿತ್ತು. ಅದಕ್ಕೆ ‘ರಾಮು’ ಎಂದು ಹೆಸರಿಟ್ಟರು. ಕರಣಂ ಅವರು ‘ರಾಮ್’ ಎಂದು ಕರೆಯುತ್ತಿದ್ದಂತೆ ಅದು ಅವರ ಹಿಂದೆ ಹೊಲಗಳಿಗೆ ಹೋಗಿ ಮೇಲ್ವಿಚಾರಣೆ ನಡೆಸುತ್ತಿತ್ತು. … Read more
ಧರ್ಮೊದಕ: ಚಂದಕಚರ್ಲ ರಮೇಶ ಬಾಬು
ಬೆಂಗಳೂರಿನಿಂದ ಹೊರಟು, ಹಂಪಿ ಎಕ್ಸ್ ಪ್ರೆಸ್ಸಿನಲ್ಲಿ ಹೊಸಪೇಟೆಗೆ ತಲುಪಿದ್ದೆ. ಅಲ್ಲಿಂದ ಹಂಪಿಗೆ ಹೊರಡುವುದಿತ್ತು. ರೈಲಿನ ಹೆಸರು ಹಂಪಿ ಎಕ್ಸ್ ಪ್ರೆಸ್ ಅಂತ ಇದ್ದರೂ ಅದು ಹಂಪಿಗೆ ಹೋಗುವುದಿಲ್ಲ. ಹಂಪಿಗೆ ನಿಲ್ದಾಣವೇ ಇಲ್ಲ. ಹೆಸರು ಮಾತ್ರ ಉಳಿದುಕೊಂಡಿದೆ. ಹೊಸಪೇಟೆಯಿಂದ ಹಂಪಿಗೆ ಅರ್ಧಗಂಟೆಗೊಂದು ಬಸ್ಸಿದೆ. ಹಾಗಾಗಿ ಬಸ್ ಸ್ಟಾಂಡಿನ ಎದುರಿನಲ್ಲಿರುವ ಉಡುಪಿ ಹೋಟೆಲಿಗೆ ಹೋಗಿ ಬೆಳಗಿನ ಪೆಟ್ರೋಲ್ ಹಾಕೋಣವೆಂದು ಹೊರಟೆ. ರೈಲಿನಲ್ಲಿ ಕಾಲು ನೀಡಿ ನಿದ್ರೆ ಮಾಡಿದ್ದರೂ, ಇನ್ನೂ ಪ್ರಯಾಣದ ದಣಿವು ಮಾತಾಡುತ್ತಿತ್ತು. ಹೋಟೆಲಿಗೆ ಹೋಗಿ ಸರ್ವರನಿಗೆ ಕಾಫಿ ಕೊಡಲು … Read more
ಡಾ.ದೊಡ್ಡರಂಗೇಗೌಡರ ಕಾವ್ಯ: ಸಂತೋಷ್ ಟಿ.
ಮಾನವೀಯತೆಯ ಮಹೋನ್ನತ ಭಾವಗಳ ಆಧುನಿಕ ಕಾವ್ಯ ಪುನರುತ್ಥಾನ ಪರ್ವದ ಮಹಾಮೇರು ಕವಿ ಪದ್ಮಶ್ರೀ ಡಾ ದೊಡ್ಡರಂಗೇಗೌಡರು ಎಂದು ಬಹು ಹೆಮ್ಮೆಯಿಂದ ಹೇಳಬಹುದು. ಕನ್ನಡ ಕಾವ್ಯ ನದಿಯು ಹರಿದು ಹರಿದು ಸವಕಲಾಗಿ ಹಳೆಯದಾದರೂ ಉಕ್ಕಿ ಹರಿಯುವ ನೂತನ ತವನಿಧಿಯಂತೆ ತನ್ನ ನಿರಂತರ ಚಲನಶೀಲತೆ ಮತ್ತು ಮತ್ತು ಅದು ತೆಗೆದುಕೊಂಡು ತಿರುವು ಪಾತ್ರ ಆಕಾರ ಗುಣ ಸಂಪನ್ಮೂಲಗಳಲ್ಲಿ ಭಾಷೆಯ ಸ್ವರೂಪ ಬದಲಾಗಿದೆ. ಛಂದಸ್ಸಿನಲ್ಲಿ ಸುಧಾರಣೆಯಾಗಿದೆ. ಜನಪದ ಸಾಹಿತ್ಯದ ಮೂಲ ಧಾತುಗಳಿಂದ ಕೂಡಿ ಇಲ್ಲಿಯವರಗಿನ ಅದರ ಸ್ಫೂರ್ತಿಯ ಚಿಲುಮೆ ಎಂದಿಗೂ ಬತ್ತಿಲ್ಲ. … Read more
ಅಪ್ಪನೆಂಬ ಬದುಕು ಕಲಿಸಿದ ಗುರು: ನಾಗರಾಜನಾಯಕ ಡಿ. ಡೊಳ್ಳಿನ
“ಅಪ್ಪಾಜಿ” ಅಂದರೆ ಧೈರ್ಯ“ಅಪ್ಪಾಜಿ” ಅಂದರೆ ಹುರುಪು“ಅಪ್ಪಾಜಿ” ಅಂದರೆ ಹಸನ್ಮುಖಿ“ಅಪ್ಪಾಜಿ” ಅಂದರೆ ಕರುಣೆ“ಅಪ್ಪಾಜಿ” ಅಂದರೆ ಕನಸು“ಅಪ್ಪಾಜಿ”ಅಂದರೆ ಬೆನ್ನೆಲುಬು“ಅಪ್ಪಾಜಿ” ಅಂದರೆ ಆತ್ಮವಿಶ್ವಾಸ.“ಅಪ್ಪಾಜಿ “, ಅಂದರೆ ಪ್ರಯತ್ನ. ಮೊಬೈಲ್ ನ ವಾಟ್ಸಾಪ್ ನಲ್ಲಿ ಈ ಸಂದೇಶ ಬಂದೊಡನೆ ನನಗೂ ಅಪ್ಪನ ನೆನಪಾಯಿತು. ಅಪ್ಪಾಜಿ ಅಂದರೆ ಎಲ್ಲರಿಗೂ ಅವರವರ ಹೀರೊ. ನಮ್ಮ ತೊದಲು ನುಡಿಗಳನ್ನು ತಿದ್ದುತ್ತ, ಮುದ್ದಿಸುತ್ತಾ, ಬದುಕಿನ ಪಾಠಗಳನ್ನು ಸದ್ದಿಲ್ಲದೇ ಕಲಿಸುವ ಗುರು. ಅಪ್ಪಾಜಿಯೆಂಬ ಗುರು ಯಾವ ವಿಶ್ವವಿದ್ಯಾಲಯದ ಪ್ರೊಫೆಸರ್ ಗಿಂತ ಕಡಿಮೆಯಲ್ಲ. ಅಪ್ಪಾಜಿಯ ಸೈಕಲ್ಲಿನ ಮುಂದಿನ ಭಾಗದಲ್ಲಿನ ಪುಟಾಣಿ ಸೀಟಿನಲ್ಲಿ … Read more
ಸೇವಾ ಮನೋಭಾವ: ಎಲ್. ಚಿನ್ನಪ್ಪ, ಬೆಂಗಳೂರು
ದಯಾನಿಧಿಯವರು ಆಸ್ಪತ್ರೆಗೆ ದಾಖಲಾಗಿ ಹದಿನೈದು ದಿನಗಳಾಗಿವೆ, ಆಸ್ಪತ್ರೆಯಲ್ಲಿ ಅವರಿಗೆ ಸತತ ಚಿಕಿತ್ಸೆಗಳು ಜರುಗುತ್ತಿವೆ. ಅವರಿಗೆ ಅಂತಹ ಗಂಭೀರ ಸ್ವರೂಪದ ಖಾಯಿಲೆಯೇನೂ ಇಲ್ಲ. ವಯೋಸಹಜ ಕಾರಣಕ್ಕೆ ಕಾಣಿಸಿಕೊಂಡ ಒಂದು ಸಾಧಾರಣ ತೊಂದರೆಗೆ ಅವರು ಅತ್ಯಂತ ಮಹತ್ವಕೊಟ್ಟು ತಮ್ಮ ಹಣ ಖರ್ಚುಮಾಡಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಹಾಸಿಗೆಯಲ್ಲಿ ಮಲಗಿದ್ದಂತೆಯೇ ದಯಾನಿಧಿಯವರು ತಾವೇ ಮಗ್ಗುಲು ಬದಲಾಯಿಸಿಕೊಂಡರು. ದೇಹ ಮೂತ್ರ ವಿಸರ್ಜನೆಗೆ ಕರೆ ಕೊಟ್ಟಿತು. ಅವರು ಎದ್ದು ಹತ್ತಿರವೇ ಇದ್ದ ಶೌಚಾಲಯಕ್ಕೆ ಹೋಗಿ ಬರಬಹುದಿತ್ತು, ಆದರೆ ಅವರು ಹಾಸಿಗೆ ಬಿಟ್ಟು ಮೇಲೇಳಲಿಲ್ಲ. … Read more
“ಅರ್ಥ ಹೀನ”: ಅರವಿಂದ. ಜಿ. ಜೋಷಿ.
“ಅಮ್ಮಾ…. ನೀನೂ ನಮ್ಮ ಜೊತೆಗೆ ಬೆಂಗಳೂರಿಗೆ ಬಾ,.. ಇಷ್ಟು ದಿನ ಅಪ್ಪಾ ಇದ್ರು ಆಗ ಮಾತು ಬೇರೆ ಇತ್ತು, ಈಗ ಈ ಊರಲ್ಲಿ ನೀನೊಬ್ಬಳೇ ಇರೋದು ಬೇಡಾ”ಎಂದು ಪ್ರಕಾಶ್ ತನ್ನ ತಾಯಿಗೆ ಹೇಳಿದಾಗ ಆತನ ತಾಯಿ ರಾಧಾಬಾಯಿ ಕೊಂಚ ಯೋಚನೆಗೊಳಗಾದರು. ಕಳೆದ ಹದಿನೈದು ದಿನ ಗಳ ಹಿಂದಷ್ಟೇ, ಅವರ ಪತಿ ರಾಜಪ್ಪನವರು ಹೃದಯಾಘಾತದಿಂದ ಮರಣಹೊಂದಿದ್ದರು. ಅಂದಿನಿಂದ ತಮ್ಮನ್ನು ತಾವು ಸಮಾಧಾನಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದರು. ರಾಧಾಬಾಯಿಯ ಮಗ ಪ್ರಕಾಶ್ ಹಾಗೂ ಸೊಸೆ ಪ್ರಿಯಾ ಇಬ್ಬರೂ ಇಂಜಿನೀಯರ್ ಆಗಿದ್ದು ಇಬ್ಬರೂ … Read more
ದಿಕ್ಕುಗಳು (ಭಾಗ 9): ಹಟ್ಟಿ ಸಾವಿತ್ರಿ ಪ್ರಭಾಕರಗೌಡ
ಹೀಗೆ ಪ್ರಾರಂಭವಾದ ಜ್ಯೋತಿ, ಲಲಿತ. ಚೈತನ್, ಶಂಕರರ ಸ್ನೇಹ ಏಳೆಂಟು ವರ್ಷಗಳಲ್ಲಿ ಹೆಮ್ಮರವಾಗಿತ್ತು. ಈಗ ಚೈತನ್ನ ಸ್ನೇಹ ವೃಂದದ ಸದಸ್ಯರೆಲ್ಲ ಒಳ್ಲೊಳ್ಳೆ ಕೆಲಸಕ್ಕೆ ಸೇರಿ ಒಳ್ಳೆ ಸಂಪಾದನೆಯಲ್ಲಿ ತೊಡಗಿಸಿಕೊಂಡಿದ್ದರು. ಜ್ಯೋತಿಯಂತೆಯೇ ತನ್ನೊಂದಿಗೂ ಆತ್ಮೀಯತೆಯಿಂದ ಚೈತನ್ ವರ್ತಿಸುತ್ತಿದ್ದನು. ಮೊದ ಮೊದಲು ಚೈತನ್ ಮತ್ತು ಜ್ಯೋತಿಯ ಸ್ನೇಹವನ್ನು ಸಂಶಯದಿಂದ ನೋಡುತ್ತಿದ್ದ ಲಲಿತೆಗೆ ಕ್ರಮೇಣ ಸ್ನೇಹದ ಅಗಾಧತೆ, ಅದರ ಮಹತ್ವದ ಬಗ್ಗೆ ಅರ್ಥವಾಗಿತ್ತು. ಜ್ಯೋತಿ ಮತ್ತು ಚೈತನ್ ನಡುವಿನ ಸ್ನೇಹ, ಪ್ರೀತಿ, ಬಾಂಧವ್ಯ ಒಡಹುಟ್ಟಿದವರ ನಡುವಿನ ಬಾಂಧವ್ಯದಂಥದ್ದು ಎಂದು ತಿಳಿದಾಗ ಲಲಿತ … Read more
ಪ್ರೇಮಿಗಳಿಗೆ ಸಾವೆಂಬುದು ಹೀಗೆ ಬರಬೇಕು: ಜ್ಞಾನೇಶ, ಸೀಗೆಕೋಟೆ.
ಅವಳ ಮೇಲಿನ ಪ್ರೀತಿಗಿಂತ ಭಯವೇ ಹೆಚ್ಚುಮನಸ್ಸೇಕೋ ಭಾರವಾಗಿತ್ತು. ನನ್ನಲ್ಲಿ ಹುಟ್ಟಿಕೊಳ್ಳುತ್ತಿದ್ದ ನೂರಾರು ಪ್ರಶ್ನೆಗಳಿಗೆ ನಾನೆ ಉತ್ತರವನ್ನು ಹುಡುಕಿಕೊಳ್ಳುತ್ತಾ, ನನ್ನ ಗೊಂದಲಗಳಿಗೆ ನಾನೆ ಪರಿಹಾಗಳನ್ನು ಯೋಚಿಸುತ್ತಾ ಕಾಡಿನ ದಾರಿಯತ್ತ ಸಾಗಿ ಬಹಳ ದೂರ ಕ್ರಮಿಸಿದೆ. ನಾನು ಎಂದೂ ತಿರುಗಾಡದ ಒಂದು ದಾರಿ ನನ್ನನ್ನು ಕರೆಯುತಿತ್ತು.ನನ್ನ ಮನಸ್ಸು ಹೃದಯ ಮಂಕಾಗಿದ್ದವು ಬದುಕು ನೀರಸವೆನಿಸಿತ್ತು. ಎತ್ತೆತ್ತೆಲೋ ಸಾಗುತಿದ್ದವನು ಹಾಗೆ ಬಂಡೆಯ ಮೇಲೆ ಕುಳಿತು ಮರಗಳನ್ನೂ ಹಕ್ಕಿಗಳನ್ನೂ ನೋಡುತ್ತ ನೀರವ ಮೌನಕ್ಕೆ ಒರಗಿದ್ದೆ. ನನ್ನ ಮುಂದೆ ಎರಡು ನೀಲಕಂಠ ಅಥವ ಬಣ್ಣದ ಹಕ್ಕಿ … Read more
ಅಂಗವಿಕಲ ಮಕ್ಕಳ ಶಿಕ್ಷಣ: ಹಕ್ಕು, ಹಾದಿ ಮತ್ತು ಹೊಣೆಗಾರಿಕೆ: ರಶ್ಮಿ ಎಂ.ಟಿ.
ಭಾರತದ ಸಂವಿಧಾನವು ಪ್ರತಿ ಮಕ್ಕಳಿಗೂ – ಜಾತಿ, ಧರ್ಮ, ಲಿಂಗ ಅಥವಾ ವರ್ಗದ ವ್ಯತ್ಯಾಸವಿಲ್ಲದೆ – ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲ ಹಕ್ಕು ಎಂದು ಘೋಷಿಸುತ್ತದೆ. ಈ ಹಕ್ಕು ಶಾರೀರಿಕ, ಬೌದ್ಧಿಕ, ಮತ್ತು ಭಾವನಾತ್ಮಕ ಅಡಚಣೆಗಳನ್ನು ಅನುಭವಿಸುತ್ತಿರುವ ಅಂಗವಿಕಲ ಮಕ್ಕಳಿಗೂ ಹೋಲಿಕೆಯ ರೀತಿಯಲ್ಲಿ ಅನ್ವಯಿಸಬೇಕಾಗಿದೆ. ಆದರೆ ನೆಲೆನಿಂತಿರುವ ನೈಜತೆ ಬೇರೆಯೇ ಹೇಳುತ್ತದೆ.ಸಮಾನತೆ ನೀಡುವ ಸಂವಿಧಾನ – ವ್ಯತ್ಯಾಸ ತೋರುವ ನೈಜತೆಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ – 2009 (RTE Act), ಅಂಗವಿಕಲರ ಹಕ್ಕುಗಳು ಕಾಯಿದೆ … Read more
VIVIDLIPI ಯಿಂದ ವೈಶಿಷ್ಟ್ಯಪೂರ್ಣ ಸ್ಪರ್ಧೆಗಳೊಂದಿಗೆ 10 ವರ್ಷಗಳ ದಶಮಾನೋತ್ಸವ ಸಂಭ್ರಮ
ಕನ್ನಡ ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ VIVIDLIPI ಸಂಸ್ಥೆಯು ತನ್ನ 10ನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕದಾದ್ಯಂತದ ಲೇಖಕರು, ಕಥೆಗಾರರು ಮತ್ತು ಕಲಾವಿದರಿಗಾಗಿ ಮೂರು ವಿಶಿಷ್ಟ ಸೃಜನಶೀಲ ಸ್ಪರ್ಧೆಗಳನ್ನು ಆಯೋಜಿಸಿದೆ. ಕಳೆದ ಒಂದು ದಶಕದಲ್ಲಿ, VIVIDLIPI ಯು ಕನ್ನಡ ಪುಸ್ತಕಗಳು, ಇ-ಪುಸ್ತಕಗಳು, ಆಡಿಯೊ ಬುಕ್ಗಳು, ಪಾಡ್ಕಾಸ್ಟ್ಗಳು, ಬ್ಲಾಗ್ಗಳು ಮತ್ತು ಯೂಟ್ಯೂಬ್ ಮೂಲಕ ಪ್ರಪಂಚದಾದ್ಯಂತ ಲಕ್ಷಾಂತರ ಸಾಹಿತ್ಯಾಸಕ್ತರನ್ನು ತಲುಪಿದೆ. ಈ ದಶಮಾನೋತ್ಸವ ಸಂಭ್ರಮಾಚರಣೆಯಲ್ಲಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸ್ಪರ್ಧೆಗಳನ್ನು … Read more
ಪಿ. ಎಸ್. ಅಮರದೀಪ್ ಅವರ “ಮರಳಿ ಮನ ಸಾಗಿದೆ…” ಪುಸ್ತಕ ಬಿಡುಗಡೆ ಸಮಾರಂಭ
ಶ್ರೀ ಅನ್ನದಾನೇಶ್ವರ ಶಿಕ್ಷಣ ಸೇವಾ ಟ್ರಸ್ಟ್ (ರಿ), ಬೆಣಕಲ್, ಕುಕನೂರು ತಾಲೂಕ, ಕೊಪ್ಪಳ ಜಿಲ್ಲಾ ಪ್ರಕಾಶನದ ಪಿ. ಎಸ್. ಅಮರದೀಪ್ ಅವರ ಪ್ರಥಮ ಕೃತಿ ಮರಳಿ ಮನ ಸಾಗಿದೆ… ಪುಸ್ತಕ ಬಿಡುಗಡೆ ಸಮಾರಂಭ ದಿನಾಂಕ: 28ನೇ ಸೆಪ್ಟೆಂಬರ್ 2025 ಭಾನುವಾರ,ಬೆಳಗ್ಗೆ 10.30ಕ್ಕೆಸ್ಥಳ : ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನ, ಕೊಪ್ಪಳ ಉದ್ಘಾಟಕರು : ಶ್ರೀ ಡಾ. ನಟರಾಜು ಎಸ್. ಎಂ.ಸಂಪಾದಕರು, ಪಂಜು ಅಂತರ್ಜಾಲ ಪತ್ರಿಕೆ ಪುಸ್ತಕ ಬಿಡುಗಡೆ : ಶ್ರೀ ಡಾ. ಕೊಟ್ರಸ್ವಾಮಿ ಎಮ್. IRS … Read more
ಪೂರ್ವಜರ ನೆನೆಯಲು ಮೀಸಲಾದ ಪಿತೃಪಕ್ಷ, ಮಹಾಲಯ ಅಮಾವಾಸ್ಯೆ: ಚಂದ್ರು ಪಿ ಹಾಸನ್
ಆಧುನಿಕ ಮಾನವನಿಗೆ ಎಲ್ಲಾ ಇದ್ದರೂ ಸಂತೋಷಕ್ಕಾಗಿ ಕಾರಣ ಹುಡುಕುತ್ತಿರುತ್ತಾನೆ. ಐಷಾರಾಮಿ ಜೀವನ, ಮೋಜು-ಮಸ್ತಿ, ತಿರುಗಾಟ ಇವುಗಳೇ ಸಂತೋಷದ ಮೂಲವೆಂಬ ಭ್ರಮೆಯಲ್ಲಿರುತ್ತಾನೆ. ಆದರೆ ನಾವು ನಮ್ಮ ಬಾಲ್ಯದಲ್ಲಿ ಜಾತ್ರೆ ಬಂದರೆ ಸಾಕು ಐದು ರೂಪಾಯಿ ಕೈಯಲ್ಲಿ ಹಿಡಿದು ಇಡೀ ಜಾತ್ರೆಯನ್ನು ಸುತ್ತಿ ಸುತ್ತಿ ತಿಂಡಿ ತಿನಿಸುಗಳ ತಿನ್ನುತ್ತಾ ಖುಷಿ ಪಡುತ್ತಿದ್ದೆವು. ಹಬ್ಬಗಳು ಬಂದರೆ ಸಾಕು ಹೊಸ ಹೊಸ ರುಚಿ ತಿಂಡಿಗಳ ನೆನೆಯುತ್ತಾ, ಜೊಲ್ಲು ಸುರಿಸುತ್ತಾ ಸವಿಯುತ್ತಿದ್ದ ಕಾಲವದು. ಒಂದೊಂದು ಹಬ್ಬದಲ್ಲಿ ಒಂದೊಂದು ವಿಶೇಷ ತಿನಿಸುಗಳು. ಯುಗಾದಿ ಬಂದರೆ ಹೋಳಿಗೆ … Read more
”ಕನಸಿನವರು”: ನಾಗಸಿಂಹ ಜಿ ರಾವ್
ಸಿಂಹಾವಲೋಕನ – 5 ವೇಣುಜೀಯವರ ”ಹೆಣಗಳು ” ಬೀದಿನಾಟಕದ ಅಭ್ಯಾಸ ನಡೆದಿತ್ತು, ನೀರಿನ ಸಮಸ್ಯೆಯಿಂದ ಹಿಡಿದು ಮಾನವನ ಸಂಕುಚಿತ ಮನೋಸ್ಥಿತಿಯ ಬಗ್ಗೆ ಕನ್ನಡಿ ಹಿಡಿದ ನಾಟಕ ಅದು. ಗಣಪತಿ ಹಬ್ಬದ ನಂತರ ಆ ನಾಟಕದ ಪ್ರದರ್ಶನ ಇತ್ತು. ಮೈಸೂರಿನಲ್ಲಿ ಗಣಪತಿ ಪೆಂಡಾಲುಗಳಲ್ಲಿ ‘ಸುಂದರ ಸಾಮಾಜಿಕ’ ನಾಟಕಗಳು ಪ್ರದರ್ಶನ ವಾಗುತ್ತಿದ್ದವು. ಹಾಸ್ಯ,, ಜನರನ್ನು ಹೇಗಾದರೂ ನಗಿಸುವ ಉದ್ದೇಶದ ನಾಟಕಗಳು, ನಾಟಕಗಳಿಗಿಂತ ವಾದ್ಯಗೋಷ್ಠಿಗಳು ಹೆಚ್ಚು ಪ್ರಸಿದ್ದಿ ಪಡೆದಿದ್ದವು. ಒಂದು ದಿನ ನಾವು ನಾಟಕ ಅಭ್ಯಾಸ ಮಾಡುವಾಗ ಪಾಪು ”ನಾಳೆ ಸಂಜೆ … Read more
ದಿಕ್ಕುಗಳು (ಭಾಗ 8): ಹಟ್ಟಿ ಸಾವಿತ್ರಿ ಪ್ರಭಾಕರಗೌಡ
ಮಾರನೆ ದಿನ ಶಾಮಣ್ಣ ದಿನ ಪತ್ರಿಕೆಯಲ್ಲಿರುವ ಜಾಹೀರಾತು ನೋಡಿ ಯೋಚನಾಮಗ್ನಾಗಿದ್ದ. ತಾನು ಹತ್ತನೇ ತರಗತಿಯಲ್ಲಿ ಸಾಧಾರಣ ಅಂಕದೊಂದಿಗೆ ಪಾಸಾಗಿ ಮನೆಯ ಹಿರಿಯ ಮೊಮ್ಮಗನಾಗಿದ್ದುದರಿಂದ ತಂದೆಯೊಂದಿಗೆ ಕೆಲಸಕ್ಕೆ ನಿಂತಿದ್ದ. ಆತ ಜಾಸ್ತಿ ಓದಿರದಿದ್ದರೂ, ಓದುವ ಹುಡುಗರಿಗೆ ಸಹಾಯ ಮಾಡುವ ಸ್ವಭಾವದವನು. ಆತನ ಅಂತಹ ಸಹಾಯ ಮಾಡುವ ಗುಣಕ್ಕೆ ಮನೆಯಲ್ಲಿ ಎಲ್ಲರಿಗೂ ಹೆಮ್ಮೆ ಎನ್ನಿಸಿತ್ತು. ಶಾಮಣ್ಣ ಆ ಪತ್ರಿಕೆಯನ್ನು ಹಿಡಿದುಕೊಂಡು ನಡುವಮನೆಯಲ್ಲಿ ಟಿ.ವಿ ನೋಡುತ್ತಾ ಕುಳಿತ್ತಿದ್ದ ಲಲಿತೆಯನ್ನು ಕರೆದನು, “ಲಲ್ಲೀ, ಲೇ ಲಲ್ಲೀ ಬಾ ಇಲ್ಲೆ ಸ್ವಲ್ಪ” ಎಂದು ಶಾಮಣ್ಣ … Read more
ಸಮಾಜಮುಖಿ ಚಿಂತನೆಯ ಹುಡುಕಾಟದಲ್ಲಿ ಮೊದಲ ಜೋಡು ಕಥಾ ಸಂಕಲನ: ಶಿವಕುಮಾರ ಸರಗೂರು
ಇತ್ತೀಚಿಗೆ ಸಣ್ಣ ಕತೆಗಳು ಕನ್ನಡ ಸಾಹಿತ್ಯದಲ್ಲಿ ವೈಶಾಲ್ಯತೆಯಿಂದ ಬೆಳೆಯುತ್ತಿರುವ ಪ್ರಕಾರವಾಗಿದೆ. ಸುತ್ತಲಿನ ಅನುಭವಗಳಿಗೆ ಸ್ಪಂದಿಸುವ ಮೂಲಕ ಸರಳವಾಗಿ ಲೇಖಕನಿಗೆ ದಕ್ಕುವ ವಸ್ತು ಸಣ್ಣ ಕತೆಯ ವೈಶಿಷ್ಟವಾಗಿದೆ. ಸೂಕ್ಷ್ಮ ಸಂವೇದನೆಯುಳ್ಳ ಕಥೆಗಾರ ಆಯ್ದುಕೊಳ್ಳುವ ಏಕೈಕ ಪ್ರಕಾರವೂ ಇದೆ ಆಗಿದೆ. ಕತೆಗಾರ ಮುಧುಕರ ಮಳವಳ್ಳಿ ಅವರ ಮೊದಲ ಜೋಡು ಕಥಾಸಂಕಲನವು ದಲಿತರ ಬದುಕಿನ ಅನಂತ ಸಾಧ್ಯತೆಗಳನ್ನು ಚಿಂತನೆಗೆ ಹಚ್ಚುವಂತೆ ಮಾಡುತ್ತವೆ. ಸಾಮಾಜಿಕ ಕಟ್ಟುಪಾಡುಗಳು ಎಂದು ತಿಳಿದ ಅದೆಷ್ಟೋ ಅಂಶಗಳನ್ನು ಬಹುತ್ವದ ನೆಲೆಯಲ್ಲಿ ಮರುಶೋಧಿಸಬೇಕು ಎಂಬ ಸಂದೇಶವನ್ನು ಕತೆಗಾರರು ನೀಡ ಬಯಸುತ್ತಾರೆ. … Read more
ವೃದ್ಧೋಪನಿಷತ್ (16-20): ಡಾ ರಾಜೇಶ್ವರಿ ದಿವಾಕರ್ಲ
16,ಅವಳೂ ಸಹವಯಸು ಮೇಲೆ ಬಿದ್ದರೂಎಲ್ಲ ಕೆಲಸಕ್ಕೂ ಈಗಲೂ ಆಕೆಯೇಸೂರ್ಯನು ಉದಯಿಸುವುದು ತಡವಾಗಿದ್ದರೆಮೋಡಗಳ ಹೊದಿಕೆ ತೆಗೆದು ಹಾಕುತ್ತಾಳೆ ನಡಿಗೆ ಸ್ವಲ್ಪ ಮಂದವಾಗಿದೆ.ಆದರೂ ಮನೆಕೆಲಸಕೊನೆಗಾಣಿಸುತ್ತಾಳೆ,ನನ್ನ ಮೇಲೆ ಆಕೆಗಿರುವ ಪ್ರೀತಿಯನ್ನುರೆಕ್ಕೆಗಳ ಕಷ್ಟಕ್ಕೆ ಒಪ್ಪಿಸುವಕತ್ತೆ ಕೆಲಸ ಗಾರ್ತಿ ಆಕೆ, ನಾನು ಇತ್ತೀಚಿಗೆಸ್ವಲ್ಪ ನಾಚುವುದನ್ನು ಕಲೆತೆಆಕೆಗೆ ಸಹಾಯ ಮಾಡಬೇಕೆಂದುನಿರ್ಧಾರಿಸಿದ್ದೇನೆಸಹಾಯವೆಂದರೆ ಬೇರೇನೂ ಅಲ್ಲನನ್ನ ಕೆಲಸಗಳನ್ನು ನಾನೇ ಮಾಡುಕೊಳ್ಳುತ್ತಿದ್ದೇನೆ ನನಗೆ ಸಮಸ್ಯೆಗಳಾಗಿ ಕಾಣುವೆವುಅವಳಿಗೆಪೊರಕೆ ಕಡ್ಡಿ ಸಮಾನ ಬೇಗನೆಎರಡನೆಯ ಪೀಳಿಗೆ ಬಂದೇಬಿಟ್ಟೆದೆ.ಮಮತೆ ಯ ಮಹಾ ಸಮುದ್ರದಲ್ಲಿಅವಲೀಲೆಯಾಗಿ ದೂಕಿಬಿಟ್ಟಳು ಆಕೆ.ಇಂತಹ ಈಜುಗೆ ನಾನು ಕಲಿಸಿದ್ದಲ್ಲ.ಈಜು ಬರುವುದೆಂದು ನನಗೆ ಗೊತ್ತಿಲ್ಲ. ಆಗಾಗ … Read more