ಬೆಸ್ಟ್ ಮೇಷ್ಟ್ರು ಮೊಗಳ್ಳಿ ಸರ್: ಡಾ. ಅಭಿಲಾಷ ಎಚ್ ಕೆ

ಮೊಗಳ್ಳಿ ಸರ್ ಅವರ ಹುಟ್ಟಿದ ದಿನವಿಂದು.ಮೊಗಳ್ಳಿ ಗಣೇಶ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಂತೇಮೊಗೇನಹಳ್ಳಿಯಲ್ಲಿ ೧೯೬೨ ಜುಲೈ ೧ ರಂದು ಚಿಕ್ಕಣ್ಣ ಮತ್ತು ಈರಮ್ಮ ಅವರ ಮಗನಾಗಿ ಜನಿಸಿದರು. ಚಿಕ್ಕವಯಸ್ಸಿಗೆ ತಂದೆಯ ಕ್ರೌರ್ಯದಿಂದ ತಾಯಿಯನ್ನು ಕಳೆದುಕೊಂಡು, ತನ್ನ ತಾತನ ಮಮತೆಯ ನೆರಳಿನಲ್ಲಿ ಹಾಗೂ ತಮ್ಮ ಕೇರಿಯ ಎಲ್ಲಾ ತಾಯಂದಿರ ವಿಶೇಷವಾಗಿ ಅತ್ತೆಯರ ವಾತ್ಸಲ್ಯದಲ್ಲಿ ಬೆಳೆದವರು. ಎಂ ಎ ಅರ್ಥಶಾಸ್ತç(೧೯೮೮), ಎಂ ಎ ಜಾನಪದ(೧೯೯೦) ಮೈಸೂರು ವಿಶ್ವವಿದ್ಯಾಲಯದಲ್ಲಿ ಮುಗಿಸಿ, ಕನ್ನಡ ವಿಶ್ವವಿದ್ಯಾಲಯದಿಂದ ‘ಕರ್ನಾಟಕ ಗ್ರಾಮ ದೈವಗಳ ಸಂಸ್ಕೃತಿ ವಿಕಾಸ’ … Read more

ಆಲಾಪ: ಡಾ. ವಿಶ್ವನಾಥ ಎನ್ ನೇರಳಕಟ್ಟೆ

“ಇನ್ನೂ ಇಪ್ಪತ್ತು ನಿಮಿಷ ಆಗಬಹುದಂತೆ ಅವರು ಬರುವಾಗ” ಎಂದು ಮಣಿವಣ್ಣನ್ ಹೇಳಿದಾಗ ಸನಾತನಿ ಆಗಬಹುದು ಕಾಯುತ್ತೇನೆ ಎಂಬ ಂತೆ ತಲೆಯಾಡಿಸಿದಳು. ಹಾಗೆ ತಲೆಯಾಡಿಸದೆ ಬೇರೆ ದಾರಿ ಅವಳಿಗಿರಲಿಲ್ಲ. ನಿಜವಾಗಿಯೂ ಸಲ್ಲಾಪ್ನ ಈ ಸ್ಟುಡಿಯೋಗೆ ಬರುವ ಇಚ್ಛೆ ಅವಳಿಗಿರಲಿಲ್ಲ. ಆದರೆ ಸಂಪಾದಕರು “ಒಂದೆರಡು ಸಲ ಅವನ ಸಂದರ್ಶನ ಮಾಡಿದ್ದೀಯಲ್ಲ. ನೀನೇ ಹೋಗು. ನಿನ್ನ ಜೊತೆ ಈಗಾಗಲೇ ಮಾತನಾಡಿದ್ದಾನೆ. ಏನಾದರೂ ಮುಕ್ತವಾಗಿ ಮಾತನಾಡಿದರೆ ನಾಳೆಯ ದಿನ ನಮ್ಮ ಪತ್ರಿಕೆಗೆ ಅದುವೇ ಮುಖ್ಯ ಕಂಟೆ ಂಟ್ ಆಗುತ್ತದೆ” ಎಂದಿದ್ದರು. ಅವರ ಮಾತನ್ನು … Read more

ಧಾವಂತ ಬದುಕಿನಲ್ಲಿ ಜೀವಂತ ಶವವಾದ ಮಾನವ: ಪರಮೇಶ ಕೆ.ಉತ್ತನಹಳ್ಳಿ

ಧಾವಂತ ಬದುಕಿನಲ್ಲಿ ಜೀವಂತ ಶವವಾದ ಮಾನವ ಇಂದಿನ ಯುಗವನ್ನು ವೇಗದ ಯುಗವೆಂದು ಕರೆಯಲಾಗುತ್ತದೆ. ತಂತ್ರಜ್ಞಾನ, ಸ್ಪರ್ಧೆ, ಆರ್ಥಿಕ ಒತ್ತಡ ಮತ್ತು ಹೆಚ್ಚುತ್ತಿರುವ ನಿರೀಕ್ಷೆಗಳ ನಡುವೆ ಮನುಷ್ಯನು ನಿರಂತರ ಓಟದಲ್ಲಿ ತೊಡಗಿದ್ದಾನೆ. ಬೆಳಿಗ್ಗೆಯಿಂದ ರಾತ್ರಿ ತನಕ ಸಮಯದ ಹಿಂದೆ ಓಡುವ ಈ ಬದುಕಿನಲ್ಲಿ ಆತ ತನ್ನನ್ನು ತಾನೇ ಮರೆತುಬಿಡುವ ಮಟ್ಟಕ್ಕೆ ತಲುಪಿದ್ದಾನೆ. ಜೀವನವನ್ನು ಸುಖಮಯವಾಗಿಸಲು ರೂಪುಗೊಂಡ ಸಾಧನಗಳು ಮತ್ತು ಸೌಲಭ್ಯಗಳು ಹೆಚ್ಚಾದರೂ ಮನಸ್ಸಿಗೆ ನೆಮ್ಮದಿ, ಹೃದಯಕ್ಕೆ ಸಂತೋಷ ಮತ್ತು ಬದುಕಿಗೆ ಅರ್ಥ ನೀಡುವ ಮೌಲ್ಯಗಳು ಕ್ರಮೇಣ ಕ್ಷೀಣಿಸುತ್ತಿವೆ.ಈ ಸಂಗತಿಯು … Read more

ಗೂಡು ಬಿಟ್ಟು ಹಕ್ಕಿ: ದೀಪಾ ಜಿ ಎಸ್( ದೊಡ್ಡಿಕೊಪ್ಪ)

ಅರೇ,ಅದೇನೋ ಗೊತ್ತಿಲ್ಲ ಜೀವನ ಎಷ್ಟು ಬ್ಯುಸಿ ಆಗಿದೆ ಅಂದ್ರೆ ಬೆಳಗ್ಗೆ ಏಳು, ರೆಡಿ ಆಗು, ಆಫೀಸ್ಗೆ ಹೋಗು, ಸಂಜೆ ಮನೆಗೆ ಬಾ, ಅಷ್ಟೇ.. ಜೀವನ ಒಂತರ ನಾಟಕನೇ ಆಗಿ ಹೋಗಿಬಿಟ್ಟಿದೆ. ಕೆಲಸ ಮನೆ, ಕೆಲಸ ಮನೆ ಇಷ್ಟೇ ಜೀವನ ಅನ್ನೋ ತರ, ಇದೆಲ್ಲರ ಮಧ್ಯೆ ಒಂದು ಒಳ್ಳೆ ಪುಸ್ತಕ ನನ್ನ ಕೈ ಸೇರಿದ್ದು ಹೀಗೆ ಅದೊಂದಿನ ನಾನು ಆಫೀಸ್ ಅಲ್ಲಿ ಕೆಲಸಮಾಡುವಾಗ ಸೆಕ್ಯೂರಿಟಿ ಬಂದು ದೀಪಾ ಅಂದ್ರೆ ಯಾರು ಅವರಿಗೆ ಒಂದು ಕೊರಿಯರ್ ಬಂದಿದೆ ಪ್ಲೀಸ್ ಕಲೆಕ್ಟ್ … Read more

ಕರ್ಮಯೋಗಿ: ಕೊಡೀಹಳ್ಳಿ ಮುರಳೀಮೋಹನ್

ಕರ್ಮಯೋಗಿ-ತೆಲುಗು ಮೂಲ: ವಿಹಾರಿ-ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್ ವಂದಿಮಾಗಧರ ಜಯಘೋಷಗಳು ಆಕಾಶ ಮುಟ್ಟಿದ್ದವು. ಮುತ್ತಿನ ಶಾಲೆಯು (ಮುತ್ಯಾಲಶಾಲ) ಜಯಜಯ ಧ್ವನಿಗಳಿಂದ ಪ್ರತಿಧ್ವನಿಸುತ್ತಿದ್ದವು..ಆನೆಗೊಂದಿ ಸಾಮ್ರಾಜ್ಯದ ಪ್ರಭು ಜಂಬುಕೇಶ್ವರರಾಯರು ರಾಜಸಭೆಗೆ ಆಗಮಿಸಿದ್ದರು. ವಿಜಯೋತ್ಸವಗಳು ವೈಭವದಿಂದ ಮುಕ್ತಾಯಗೊಳ್ಳಲಿರುವ ಉಜ್ವಲ ಘಟ್ಟವದು. ಗಣ್ಯರಾದ ಸಂಗೀತ, ಸಾಹಿತ್ಯ, ಕಲೆ, ವಿಜ್ಞಾನ, ಕೃಷಿ ಹಾಗೂ ಶ್ರಮಿಕ ವರ್ಗದ ಶ್ರೇಷ್ಠರಿಗೆ ಸತ್ಕಾರ; ವೀರಯೋಧರಿಗೆ ಸನ್ಮಾನಗಳು ನಡೆಯಬೇಕಾಗಿದ್ದವು. ಒಂದು ಕಡೆ ಕೋಸಿಗಿ ಅರಸರು, ಮತ್ತೊಂದು ಕಡೆ ದೊರವಾಡಿ ಭೂಪತಿಗಳು. ಮಧ್ಯದಲ್ಲಿ ಪ್ರಧಾನಮಂತ್ರಿ ವೀರ ಹರಿಹರರಾಯರು ಉನ್ನತ ಆಸನಗಳಲ್ಲಿ ಆಸೀನರಾಗಿದ್ದರು. … Read more

“ಡಿಸ್ಮಿಸ್: ಎಲ್.ಚಿನ್ನಪ್ಪ, ಬೆಂಗಳೂರು

“. . . . ತಿನ್ನುವ ಅನ್ನಕ್ಕೆ ಕಲ್ಲು ಬಿದ್ದರೆ, ಬದುಕೋ ದಾರಿ ತಪ್ಪಿದರೆ, ಅದನ್ನು ನೆಚ್ಚಿಕೊಂಡಿದ್ದವನ ಗತಿ ಏನಾಗಬಹುದು?. . .” “ನನ್ನನ್ನು ಕೆಲಸದಿಂದ ಮಾತ್ರ ತೆಗಿಬೇಡಿ ಸಾರ್, ಬೇಕಿದ್ರೆ ನನ್ನ ಇಂಕ್ರಿಮೆಂಟ್ ಕಟ್ಮಾಡಿ, ದಂಡ ಹಾಕಿ, ಬೇರೆ ಏನೇ ಶಿಕ್ಷೆ ಕೊಡಿ, ಆದ್ರೆ ಕೆಲಸದಿಂದ ಮಾತ್ರ ತೆಗಿಬೇಡಿ ಸಾರ್. ನಾನು ಬಡವ, ನನ್ನನ್ನು ನಂಬ್ಕೊಂಡಿರೋರು ಇನ್ನೂ ಮರ್ಮಂದಿ ಇದ್ದಾರೆ, ನನ್ ಹೆಂಡ್ತಿ ಇಬ್ರು ಮಕ್ಳು, ಅವ್ರ ಹೊಟ್ಟೆ ಮೇಲೂ ಹೊಡಿಬೇಡಿ ಸಾರ್” ಎಂದು ಕಂಡಕ್ಟರ್ … Read more

ನಡುಗಿರಿ: ತಿರುಪತಿ ಭಂಗಿ

ನಮ್ಮಜ್ಜಿ ಹೇಳಿದ್ದು:ಗುಡಿ ಬಾಗ್ಲಾ ಹಾಕಿದ್ರು. ಒಳಗಿದ್ದ ದೇವ್ರಿಗೆ ಜೈಲಿನ್ಯಾಗ ಹಾಕಿದ್ಹಂಗಾತು. ಊದಬತ್ತಿ ಹೊಗಿ, ಕರ್ಪುರದ ಗಮಲು,ಮುಗಿಗಡರಿ, ಉಸಲ್‌ ಕಟ್ಟ ಆದಾಂಗಾಗಿ ಗುಡಿಯಾಗಿದ್ದ ಹನಮಪ್ಪ ದೇವ್ರು ಒಂದssಸವ್ನ ಒದ್ದಾಡಾಕ್ಹತ್ತಿದ್ದ. “ಲಗೂನ ಬಾಗ್ಲಾ ತಗೀರ್ಲೇ ಹಲಕಟ್ರ” ಎಂದು ಕೂಗಿದ. ದೇವ್ರಾಡಿದ ಮಾತು ಈ ಮಳ್ಳ ಮನಷ್ಯಾರ್ಗೆಲ್ಲಿ ಕೇಳಸ್ಬೇಕು? ದೇವ್ರೂ ಒಳಗೊಳಗೆ ನಗತೊಡಗಿದ. “ನನ್ನ ಪೂಜಾ ಮಾಡಾಕ ಈ ಬಡ್ಡಿ ಮಕ್ಳು ನಾ..ನೀ.. ಅಂತ ಕಿತ್ಯಾಡಾಕತ್ತಾರು. ಏನೇನ ಮಾಡ್ತಾರೋ ಮಾಡ್ಲೀ, ನಾನು ಒಂದ ಕೈ ಇವರ ಮಾಡು ಆಟ ನೋಡಿದ್ರಾತು”. ಹನಮಪ್ಪ … Read more

ಅವಳು ಮತ್ತು ಅವನು: ಡಾ. ವಿಶ್ವನಾಥ ಎನ್ ನೇರಳಕಟ್ಟೆ

“…ಮಾಡದ ತಪ್ಪಿಗೆಲ್ಲಾ ಬೈಗುಳ ತಿನ್ನುವುದಕ್ಕೆ ನಾನೇನು ನಿಮ್ಮ ಮನೆಯ ಜೀತದಾಳಲ್ಲ. ನಾನೂ ಕಲಿತಿದ್ದೇನೆ. ಲೆಕ್ಕ ಹಾಕಿದರೆ ನನ್ನ ಮೆದುಳಿನ ತೂಕ ನಿಮ್ಮದಕ್ಕಿಂತ ಹೆಚ್ಚೇ ಇದೆ. ನನಗೆ ಬುದ್ಧಿ ಹೇಳುವ ಅರ್ಹತೆ ನಿಮಗೇನಿದೆ ಎಂದು ಸ್ವಲ್ಪವಾದರೂ ಯೋಚಿಸಬೇಕಲ್ಲಾ…” ಅವಳು ಬೈಯ್ಯುತ್ತಿದ್ದಳು. ಅವನ ಮುಖದಲ್ಲಿ ಆಶ್ಚರ್ಯವಿತ್ತು. “ಏನಂದುಕೊಂಡಿದ್ದೀರಿ ನಿಮ್ಮನ್ನು ನೀವು? ಲೋಕಕ್ಕೆಲ್ಲಾ ಅನ್ನ ಹಾಕುತ್ತಿದ್ದೇನೆ ಎಂದುಕೊಂಡ ಹಾಗಿದೆ. ನಾನು ಹೇಗೆ ದುಡಿಯುತ್ತಿದ್ದೇನೋ ಹಾಗೆಯೇ ನೀವೂ ದುಡಿಯುತ್ತಿದ್ದೀರಿ. ನಾವಿಬ್ಬರೂ ಸಮಾನರು ಎನ್ನುವುದು ನೆನಪಿರಲಿ. ಹುದ್ದೆ ಬದಲಾದ ಮಾತ್ರಕ್ಕೆ ನಾನೇನೂ ನಿಮ್ಮ ಗುಲಾಮಳಾಗುವುದಿಲ್ಲ. … Read more

ನೂರು ದಾರಿ ಸಾವಿರದ ಪಯಣ: ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ

ಈ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಯನ್ನು ವಿಶ್ವಸಂಸ್ಥೆಯಿಂದ ಎರಡು ಮಹತ್ವದ ವಿಷಯಗಳೊಂದಿಗೆ ಆಚರಿಸಲಾಗುತ್ತಿದೆ: “ಮಹಿಳಾ ಹಕ್ಕುಗಳು. ಸಾಮಾಜಿಕ ನ್ಯಾಯ. ದೌರ್ಜನ್ಯದ ವಿರುದ್ಧವಾಗಿ ಕ್ರಮ. ಈ ಯೋಜನೆಗಳು ಮಹಿಳೆಯರು ಮತ್ತು ಹುಡುಗಿಯರಿಗಾಗಿ” ಎಂಬುದು ಗಮನಾರ್ಹವಾಗಿದೆ. ಜಾಗತಿಕ ಪ್ರಚಾರದ ವಿಷಯವಾಗಿ “ಗಿವ್ ಟು ಗೇನ್” ಇದು ಯು ಎನ್ ಥೀಮ್ ಆಗಿದೆ. ಇದು ಲಿಂಗತ್ವದ ಅಸಮಾನತೆಗಳನ್ನು ಪರಿಹರಿಸುವ ಮತ್ತು ಲಿಂಗ ನ್ಯಾಯದ ಕಡೆಗೆ ಪ್ರಗತಿಯನ್ನು ವೇಗಗೊಳಿಸುವ ಅಗತ್ಯವನ್ನು ಎತ್ತಿ ತೋರಿಸುತ್ತದೆ, ತನ್ಮೂಲಕ ಸಾಮಾಜಿಕ ನ್ಯಾಯಕ್ಕೆ ಸಮಾನ ಹಕ್ಕಿನಿಂದ ಧ್ವನಿ … Read more

ಪ್ರಶಾಂತ ನಿಲಯ: ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಹಬ್ಬಕ್ಕೆಂದು ಮೂರು ದಿನಗಳ ರಜೆಯಿದ್ದುದರಿಂದ ಊರಿಗೆ ಬಂದಿದ್ದ ನಾನು ಮೊದಲು ಹೋದದ್ದು ರಾಜೇಶಣ್ಣನ ಸೆಲೂನ್ಗೆ. ಕಿರೀಟ ಇಟ್ಟಂತೆ ಬೆಳೆದಿದ್ದ ತಲೆಗೂದಲು ಎರಡು ದಿನಗಳಿಂದಲೂ ತೊಂದರೆ ಕೊಡುತ್ತಿತ್ತು. ತೆಗೆಸುವುದಕ್ಕೆ ಪುರುಸೊತ್ತು ಸಿಕ್ಕಿರಲಿಲ್ಲ. ರಾಜೇಶಣ್ಣ ಮತ್ತು ನಾನು ಒಂದೇ ಶಾಲೆಯಲ್ಲಿ ಕಲಿತವರು. ಅವನು ನನಗಿಂತ ಎರಡು ತರಗತಿ ಮುಂದಿದ್ದ. ಗಣಿತದಲ್ಲಿ ಬಹಳ ಚುರುಕಿದ್ದ ಅವನಿಗೆ ಉಳಿದ ವಿಷಯಗಳು ಅಷ್ಟು ಚೆನ್ನಾಗಿ ಅರ್ಥವಾಗುತ್ತಿರಲಿಲ್ಲ. ಮನೆಯಲ್ಲಿ ಬಡತನವೂ ಇತ್ತು. ಆದ್ದರಿಂದ ಹತ್ತನೇ ತರಗತಿವರೆಗೆ ಓದಿದವನು ಆಮೇಲೆ ಗಣೇಶಣ್ಣನ ಸೆಲೂನ್ ಸೇರಿಕೊಂಡವನು ಐದೇ ವರ್ಷಗಳಲ್ಲಿ … Read more

ಸ್ತ್ರೀ ಸಂವೇದನೆಯ ಕಾದಂಬರಿ; ಹೊಕ್ಕಳು: ಡಾ. ಅಭಿಲಾಷ ಹೆಚ್ ಕೆ

ಮೊಗಳ್ಳಿ ಗಣೇಶ್ ಅವರು ಅವರ ಕಥೆಗಳ ಮೂಲಕ ‘ಪಾತ್ ಬ್ರೇಕಿಂಗ್’ ರೀತಿಯಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದವರು. ನಂತರ ಕಾವ್ಯ, ವಿಮರ್ಶೆ, ಚಿಂತನಾ ಸಾಹಿತ್ಯ, ಕಾದಂಬರಿ ಹಾಗೂ ಜಾನಪದ ಸಂಶೋಧನೆಗಳನ್ನು ಲೋಕಾರ್ಪಣೆ ಮಾಡಿದರು. ಕಾದಂಬರಿಯಲ್ಲಿ ಇರಬಹುದಾದ ಸೃಜನದ ವಿಸ್ತಾರವಾದ ಅವಕಾಶವನ್ನು ಸ್ವಚ್ಛಂದವಾಗಿ ಬಳಸಿಕೊಂಡು ಕಥೆಗಾರನ ಪಟ್ಟವನ್ನು ಮರೆಸುವಂತಹ ಕಾದಂಬರಿಕಾರರಾಗಿ ನೆಲೆಯೂರಿದವರು. ಪ್ರಸ್ತುತ ಹೊಕ್ಕಳು ಕಾದಂಬರಿ ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ಹೇಗೆ ಭಿನ್ನ ಎನ್ನುವುದನ್ನು ಹೇಳಲು ನಾನಿನ್ನು ಕಿಂಚಿತ್ತು. ಆದರೆ ‘ಹೊಕ್ಕಳು’ ಕಾದಂಬರಿಯಲ್ಲಿ ವ್ಯಕ್ತವಾಗಿರುವ ಮಹಿಳಾ … Read more

ಕ್ರಯೋನಿಕ್ಸ್-ವಿಡಿಯೋ ಕಾದಂಬರಿ

ನಮಸ್ಕಾರ, ನಾನು ರಾಜಹಂಸ. ಇತ್ತೀಚೆಗೆ ನಾನು ನನ್ನ ಮೊದಲ ಕನ್ನಡ ವಿಡಿಯೋ ಕಾದಂಬರಿಯನ್ನು ಪ್ರಕಟಿಸಿದ್ದೇನೆ. ಸಾಮಾನ್ಯವಾಗಿ ಕಾದಂಬರಿಗಳು ಪುಸ್ತಕ, ಇ-ಬುಕ್ ಅಥವಾ ಆಡಿಯೋ ಬುಕ್ ರೂಪದಲ್ಲಿ ಬರುತ್ತವೆ. ಆದರೆ, ನಾನು ಒಂದು ಹೊಸ ಪ್ರಯೋಗವಾಗಿ ದೃಶ್ಯ ಮತ್ತು ಕಥನವನ್ನು ಸಂಯೋಜಿಸಿ ವಿಡಿಯೋಗಳ ರೂಪದಲ್ಲಿ ಕಾದಂಬರಿಯನ್ನು ಪ್ರಕಟಿಸಿದ್ದೇನೆ. ಈ ಕಾದಂಬರಿಯೂ ನನ್ನ ವೆಬ್‌ಸೈಟ್‌ನಲ್ಲಿ ವಿಡಿಯೋ ಮತ್ತು ಇ-ಬುಕ್ ರೂಪದಲ್ಲಿ ಲಭ್ಯವಿದೆ. ತಾವು ತಮ್ಮ ಅಮೂಲ್ಯ ಸಮಯದಲ್ಲಿ ಸ್ವಲ್ಪ ಸಮಯ ಮೀಸಲಿಟ್ಟು, ಮೊದಲು 2 ನಿಮಿಷಗಳ ಟ್ರೈಲರ್ ಮತ್ತು ಸುಮಾರು … Read more

ಪುಸ್ತಕ ಮೇಳ: ಕೋಡೀಹಳ್ಳಿ ಮುರಳೀಮೋಹನ್

ತೆಲುಗು ಮೂಲ: ಅರಣ್ಯಕೃಷ್ಣ ಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್ ಈ ಜ್ಞಾನದ ವನದಲ್ಲಿ ಪ್ರತಿ ಮರವೂ ಗಂಭೀರವಾಗಿ ನಿಂತು ‘ಜ್ಞಾನಫಲಗಳನ್ನು ಕೊಂಡೊಯ್ಯಿರಿ’ ಎಂದು ಕರೆಯುತ್ತಿದೆ. ಪಥಿಕನು ಯಾವ ಫಲವನ್ನು ಮುಟ್ಟಿದರೂ ಒಂದು ದಿವ್ಯ ಉಪದೇಶದ ಧ್ವನಿ ಆಲಿಸುತ್ತದೆ. ಹೌದು, ಪ್ರತಿಯೊಂದು ಪುಸ್ತಕವೂ ಒಂದು ಜ್ಞಾನಫಲ! ಆ ಫಲವನ್ನು ಸವಿದಾಗಲೇ ತಾನೇ ಅರಿವಿನ ಕುಡಿಗಳು ಅರಳಿ, ಆಸೆಗಳು ಚಿಗುರಿ ಮನುಷ್ಯ ತನ್ನ ಅಸ್ತಿತ್ವದ ಮೌಲ್ಯವನ್ನರಿಯುವುದು; ನಡೆದು ಬಂದ ಜಗತ್ತಿನ ದಾರಿಗಳೆಲ್ಲ ನಯನಗಳ ಮುಂದೆ ಅನಾವರಣಗೊಳ್ಳುವುದು. ವಿಕಾಸಪೂರ್ವ ಆದಿಮಾನವನ … Read more

ಹೆಗಲೇರಿ ಕುಳಿತ ಸಾವಿನ ಭೂತ: ಎಲ್.ಚಿನ್ನಪ್ಪ, ಬೆಂಗಳೂರು.

ಸಾವನ್ನು ಹೊಡೆದಟ್ಟಿದರೂ ಮತ್ತೆ ಸಾವು ದುತ್ತನೇ ಎರಗಿ ಬಂತು ! ಕರುಳು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, ಸಾವಿನ ದವಡೆಯಿಂದ ಪಾರಾಗಿ ಬಂದರೂ, ಸಾವು ಮತ್ತೊಂದು ರೂಪದಲ್ಲಿ ಅವನಿಗೆ ಸಿದ್ದವಾಗಿತ್ತು, ತನ್ನ ನೇಣು ಕುಣಿಕೆಯನ್ನು ಅವನಿಗಾಗಿ ಚಾಚಿ ಕುಳಿತಿತ್ತು ! ‘ವಿಶಾಲಮೂರ್ತಿ’ ಹೆಸರಿಗೆ ತಕ್ಕಂತ ಮನಸ್ಸು ಮತ್ತು ಹೃದಯ ಅವನದು. ಸ್ನೇಹಮಯ ವ್ಯಕ್ತಿತ್ವ, ಎಲ್ಲರೊಡನೆ ಅನ್ಯೋನ್ಯತೆಯಿಂದ ಬೆರೆಯುತ್ತಿದ್ದ. ‘ಒಳ್ಳೆಯವರು, ದೀರ್ಘಕಾಲ ಬದುಕುವುದಿಲ್ಲವಂತೆ, ಅವರನ್ನು ದೇವರು ಬಹುಬೇಗ ಕರೆದುಕೊಂಡು ಬಿಡುತ್ತಾನಂತೆ’ ಎಂಬುದು ಜನಜನಿತ ಲೋಕೋಕ್ತಿ. ಇದಕ್ಕೆ ಪೂರಕವೋ ಎಂಬಂತೆ ಅವನಿಗೆರಗಿದ್ದ … Read more

ಸಸ್ಯಶಾಸ್ತ್ರದ ಲೋಕದಲ್ಲಿ ಒಂದು ಪ್ರವಾಸ (ಭಾಗ 3): ರೋಹಿತ್ ವಿಜಯ್ ಜಿರೋಬೆ

ಹಸಿರು ಲೋಕದ ಗುಪ್ತ ಭಾಷೆ — ಮಾತಾಡುವ ಸಸ್ಯಗಳ ಅದ್ಭುತ ಸಂವಹನ “ನಾವು ಮೌನವಾಗಿವೆ ಎಂದು ಭಾವಿಸುವ ಸಸ್ಯಗಳು, ವಾಸ್ತವದಲ್ಲಿ ತಮ್ಮದೇ ಭಾಷೆಯಲ್ಲಿ ನಿರಂತರವಾಗಿ ‘ಮಾತನಾಡುತ್ತಿವೆ’ ಎಂಬುದನ್ನು ನಾವು ಎಷ್ಟು ಬಾರಿ ಯೋಚಿಸಿದ್ದೇವೆ?” ಹಿಂದಿನ ಭಾಗದಲ್ಲಿ ನಾವು ಸಸ್ಯಗಳ ಅಂತರಂಗ ಮತ್ತು ಪ್ರಕೃತಿಯೊಳಗಿನ ಅಡಗಿದ ಜೀವಶಕ್ತಿಯ ಬಗ್ಗೆ ತಿಳಿದುಕೊಂಡೆವು. ಅದರ ಮುಂದುವರಿದ ಭಾಗವಾಗಿ, ಈಗ ನಾವು ಸಸ್ಯಗಳ ಮತ್ತೊಂದು ಅಚ್ಚರಿಯ ಗುಣವನ್ನು ಅರಿಯೋಣ — ಅದು ಸಸ್ಯಗಳ ಸಂವಹನ ಮತ್ತು ಬುದ್ಧಿವಂತಿಕೆ. ನಾವು ಸಾಮಾನ್ಯವಾಗಿ ಸಸ್ಯಗಳು ಮೌನವಾಗಿವೆ … Read more

ಆತ್ಮಹತ್ಯೆ ಮಾಡಿಕೊಂಡವನ ಕೊನೆಯ ದಿನಗಳು: ಶ್ರೀಧರ ಬನವಾಸಿ

ಖ್ಯಾತ ಆಂಗ್ಲ ಕವಿ ಚಾರ್ಲ್ಸ್ ಬುಕ್ಕೋವ್ಸಿಕಿ ಅವರ ಅನುವಾದಿತ ಕವಿತೆ ನಾನೀಗ ನನ್ನನ್ನೇ ಕಾಣುತ್ತಿದ್ದೇನೆಆತ್ಮಹತ್ಯೆಯ ಎಲ್ಲ ದಿನಗಳೂ ರಾತ್ರಿಗಳೂ ಕಳೆದು, ಬರಡಾದ ವಿಶ್ರಾಂತಿ ಕೋಣೆಗಳೊಂದರಿಂದ ನನ್ನನ್ನು ಹೊರಗೆ ತಳ್ಳುತ್ತಾ (ನಾನು ಜನಪ್ರಿಯ, ಅದೃಷ್ಟವಂತನಾದರೆ, ಖಂಡಿತವಾಗಿ ಇದು ಸಾಧ್ಯವಾಗುವುದು)ಒಬ್ಬ ಹೀನ ಹಾಗೂ ಬೇಸರ ಮುಖದ ನರ್ಸ್ನಿಂದ ಕರೆದೊಯ್ಯುತ್ತಿರುವಂತೆ ಅಲ್ಲಿದ್ದ ಗಾಲಿ ಖುರ್ಚಿಯಲ್ಲಿ ನಾನು ನೆಟ್ಟಗೆ ಕೂತಿದ್ದೇನೆ. ಬಹುತೇಕ ಕತ್ತಲು, ಕಣ್ಣುಗಳು ತಲೆಬುರುಡೆಯ ಒಳಗಿನಕತ್ತಲ ಭಾಗದತ್ತ ಹಿಮ್ಮುಖವಾಗಿ ಚಲಿಸುತ್ತಾಸಾವಿನ ದಯೆಗಾಗಿಎದುರು ನೋಡುತ್ತಾ. “ಎಂಥಾ ಸುಂದರ ದಿನ ಅಲ್ಲವೇ, ಮಿಸ್ಟರ್ ಬುಕ್ಕೋವ್ಸಿಕಿ?” … Read more

ಆತ್ಮಗಳ ದನಿ: ತಿರುಪತಿ ಭಂಗಿ

ನದಿ ತುಂಬಿ ಹರಿಯುತ್ತಿತ್ತು.. .. ಸಕ್ಕಿ ನೀರಲ್ಲಿ ಕಾಲಿಟ್ಟಳು. ಮೈನಡಗುತ್ತಿತು. ಎಂಥ ಚಳಿ.ಇದರಲ್ಲಿ ಮುಳುಗಿ ಸಾಯುವುದು ಹೇಗೆ? ಸಾಯಲು ಬಂದವಳಿಗೆ ಚಳಿಯೋ-ಮಳಿಯೋ, ಬಿಸಿಲೋ-ಬೆಂಕಿಯೋ ಅಷ್ಟೊಂದು ತರ್ಕ ಸಮ್ಮತವಾದುದಲ್ಲ. “ಹೂಂ.. ಸಾಯಿss ಸಾಯಿss ನಾನು ಬೇಗನೇ ನೀನು ಸಾಯುವುದನ್ನು ನೋಡಬೇಕು, ಈ ರೀತಿ ದಡದಲ್ಲಿಯೇ ನಿಂತು ಏನು ವಿಚಾರಿಸುತ್ತಿರುವೆ? ಸಾಯಲು ಬಂದವರು ವಿಚಾರಿಸಿದರೆ ಏನೂ ಫಲವಿಲ್ಲ”. ಸಕ್ಕಿಯ ಮನಸ್ಸು ಅವಳನ್ನೇ ಹಂಗಿಸತೊಡಗಿತು. ಸಕ್ಕಿಗೆ ಮನಸು ಹಂಗಿಸಿದ್ದಕ್ಕೆ ಅವಮಾನವೆನಿಸಿ ಮುಂದೊಂದು ಹೆಜ್ಜೆ ಇಟ್ಟಳು. ತುಂಬಿ ಹರಿಯುವ ಗಂಗಾದೇವಿ “ಮಗಳೇ ದುಡಕಬೇಡಮ್ಮಾ … Read more

ಕಿರಿಕಿರಿ ಕರೆಗಳು: ಚಂದಕಚರ್ಲ ರಮೇಶಬಾಬು

ಈ ಕರೆಗಳ ಸಂಭಾಷಣೆಗಳು ಆಂಗ್ಲದಲ್ಲಿರುತ್ತವೆ. ಓದುಗರ ಸೌಕರ್ಯಕ್ಕಾಗಿ ಇವುಗಳನ್ನು ಕನ್ನಡದಲ್ಲಿ ಮಾತಾಡಿದಂತೆ ಅನುವಾದ ಮಾಡಿ ಇಲ್ಲಿ ಕೊಡುತ್ತಿದ್ದೇನೆ.“ ನಮಸ್ಕಾರ. ನಾನು ರಮೇಶಬಾಬು ಅವರ ಜೊತೆ ಮಾತಾಡುತ್ತಿದ್ದೀನಾ?”“ಹೌದು.”“ಶುಭ ಮಧ್ಯಾಹ್ನ.(ಈ ಕರೆಗಳು ಬಹುತೇಕ ನನ್ನ ಮಧ್ಯಾಹ್ನದ ನಿದ್ರೆ ಹಾಳುಮಾಡಲು ಆ ಸಮಯದಲ್ಲೇ ನನ್ನ ಕದ ತಟ್ಟುತ್ತವೆ.)”“ಮುಂದೆ ಹೇಳಿ.”“ನೀವು…ಫಲಾನಾ ಕಂಪೆನಿಯ ಪಾಲಸಿ ತೊಗೊಂಡಿದ್ದೀರಿ. ಅದು ತೊಗೊಂಡು ಮೂರು ವರ್ಷ ಕಳೆದಿವೆ. ಅದರ ಪ್ರೀಮಿಯಂ ಕಂತು ಮುಂದಿನ ತಿಂಗಳ ೧೦ನೆಯ ತಾರೀಕಿಗೆ ವಾಯಿದೆ ಇದೆ. ನೀವು ಅದನ್ನು ಯಾವಾಗ ತುಂಬ ಬಹುದು?”“ವಾಯಿದೆ ಒಳಗೆ … Read more

ಪಂಜು ಕಥಾ ಸ್ಪರ್ಧೆ-2025 ಫಲಿತಾಂಶ

ಪಂಜು ಅಂತರ್ಜಾಲ ಪತ್ರಿಕೆ ಏರ್ಪಡಿಸಿದ್ದ 2025ನೇ ಸಾಲಿನ ಕಥಾ ಸ್ಪರ್ಧೆಯಲ್ಲಿ ಒಟ್ಟು 152 ಕತೆಗಾರರು ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐವರು ಕನ್ನಡಿಗರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಪಂಜು ಕಥಾ ಸ್ಪರ್ಧೆಯಲ್ಲಿ ವಿಜೇತರಾದವರು: ೧. ಪ್ರಥಮ ಬಹುಮಾನ: ಮೂಕಸಾಕ್ಷಿ (ಗಿರೀಶ್ ತಾಳಿಕಟ್ಟೆ) ೨. ದ್ವಿತೀಯ ಬಹುಮಾನ: ವ್ಯಾನ್ ಹುಸೇನ್ (ವೀರೇಂದ್ರ ರಾವಿಹಾಳ್‌) ೩. ತೃತೀಯ ಬಹುಮಾನ: ಜನುಮಕ್ಕೆ ಜೋಡಿಯಾದವರು (ಗೌರಿ ಚಂದ್ರಕೇಸರಿ) ಸಮಾಧಾನಕರ ಬಹುಮಾನ ವಿಜೇತರು: ೧. ಪಂಚಾಯತಿ ಕಟ್ಟೆ: ಎಂ.ಡಿ.ಚಿತ್ತರಗಿ ೨. ಗರ್ಭ-ಗುಡಿ: ಸಂಜಯ್.ಹೆಚ್.ಪಾಟೀಲ್ ೩. … Read more

“ರಾತ್ರಿ ಸುರಿದ ಮಲ್ಲಿಗೆಯಲ್ಲಿ ನಾನು ಕಂಡಿದ್ದು”: ಪ್ರಶಾಂತ್ ಬೆಳತೂರು

ಮೊನ್ನೆ ಮಂಡ್ಯದಲ್ಲಿ ನಡೆದ ಅಕ್ಷರ ಹೊಸ ಕಾವ್ಯ ಕಾರ್ಯಕ್ರಮದಲ್ಲಿ ಸಿಕ್ಕ ಕವಯಿತ್ರಿ ನಂದಾದೀಪ ಅವರು ಅಕ್ಕರೆಯಿಂದ ಅವರ ‘ ರಾತ್ರಿ ಸುರಿದ ಮಲ್ಲಿಗೆ ‘ ಎಂಬ ಚುಟುಕು ಸಂಕಲನವನ್ನು ನನ್ನ ಕೈಗಿತ್ತರು. ಕೆಲಸದ ಒತ್ತಡಗಳ ನಡುವೆ ಕಳೆದೆರಡು ದಿನಗಳಲ್ಲಿ ಅದನ್ನು ಓದಲಾಗಿರಲಿಲ್ಲ. ಆದರಿಂದು ಬಿಡುವು ಸಿಕ್ಕಿ ಒಂದೇ ಗುಕ್ಕಿಗೆ ಅದರ ಮುನ್ನುಡಿ, ಬೆನ್ನುಡಿಗಳೆಲ್ಲವನ್ನೂ ಓದಿ ತಿರುವು ಹಾಕಿ ಅವರ ಚುಟುಕುಗಳನ್ನು ಗಮನಿಸುತ್ತಾ ಹೋದೆ. ಇಂತಹ ಚುಟುಕುಗಳ ಪ್ರಯೋಗಗಳು ಕನ್ನಡ ಸಾಹಿತ್ಯದಲ್ಲಿ ಹೊಸತೇನಲ್ಲವಾದರೂ ಬರೆಯುವವರ ಭಿನ್ನತೆ, ದೃಷ್ಟಿಕೋನಗಳು, ಅವು … Read more

ವರಂಗ ಜೈನ ಕ್ಷೇತ್ರ: ಪ್ರವೀಣ ಶೆಟ್ಟಿ, ಕುಪ್ಕೊಡು

ವರಂಗ ಹೆಸರೇ ಒಂದು ಅದ್ಬುತ. ವರಂಗ ಇರುವುದು ಉಡುಪಿ ಜಿಲ್ಲೆಯ ಹೆಬ್ರಿಯಿಂದ ಕಾರ್ಕಳದ ಕಡೆಗೆ 5 ಕಿ.ಮೀ. ದೂರದಲ್ಲಿ. ಅದೊಂದು ಜೈನ ಕ್ಷೇತ್ರ, ವಿಶಾಲವಾದ ಕೆರೆಯ ಮಧ್ಯದಲ್ಲಿ ನೆಲೆನಿಂತ ಜೈನ ಬಸದಿಯನ್ನು ದೊಣಿಯ ಮೂಲಕ ನಿಧಾನವಾಗಿ ಸಾಗುವುದೇ ಒಂದು ರೋಮಾಂಚಕಾರಿ ಅನುಭವ. ನಾನು ಮದುವೆಯಾದ ಸಮಯದಲ್ಲಿ ಮೊದಲ ಬಾರಿ ಪತ್ನಿ ಶ್ರುತಿ ಜೊತೆ ಭೇಟಿ ನೀಡಿದ್ದೆ, ಆದರೆ ಅದು ನವರಾತ್ರಿಯ ಸಮಯವಾದ್ದರಿಂದ ಮಳೆ ತುಂಬಾ ಬರ್ತಾ ಇತ್ತು ಆದ್ದರಿಂದ ದೋಣಿಯನ್ನು ಬಿಡುತ್ತಿರಲಿಲ್ಲ. ಶ್ರುತಿಗೆ ತುಂಬಾ ಬೇಸರವಾಗಿತ್ತು. ಅವಳು … Read more

ಕರ್ಫ್ಯೂ ದಿನಗಳಲ್ಲಿನ ಒಂದು ಪಯಣದ ಹಾದಿ…: ಪಿ. ಎಸ್. ಅಮರದೀಪ್…

ತುಂಬಿದ ಹಾಸ್ಟಲ್ ನಲ್ಲಿದ್ದಾಗಿನ ಹುಡುಗರ ಕೇಕೆ, ನಗು, ತಣ್ಣನೇ ನೀರು ಮೈಮೇಲೆ ಸುರುವಿಕೊಳ್ಳಲೂ ಹಿಂದು ಮುಂದು ನೋಡುತ್ತಾ ದಬಾದಬಾಂತ ಚೊಂಬಿನಿಂದ ತಲೆ ಮೇಲೆ ಹಾಕಿಕೊಳ್ಳುವಾಗಿನ ಅಪಶೃತಿ ಹಾಡುಗಳು, ಅಷ್ಟರಮಟ್ಟಿಗೆ ತಮ್ಮಲ್ಲೇ ತಾವು ದೊಡ್ಡ ಸಿಂಗರ್ ಎಂಬ ಬಿಲ್ಡಪ್ಪು. ರೂಮಿಗೆ ಬಂದ ತಕ್ಷಣವೇ ಕಿಟಕಿಯಲ್ಲಿದ್ದ ಅಥವಾ ಪುಸ್ತಕ ಇಟ್ಟುಕೊಳ್ಳಲು ಇರುವ ಕಪಾಟಿನೊಳಗಿನ ದೇವರ ಚಿಕ್ಕ ಫೋಟೋಗೆ ಕೈಮುಗಿಯುವುದು. ತಲೆಒರೆಸಿಕೊಳ್ಳುವ ಗ್ಯಾಪ್ ನಲ್ಲೇ ಮೇಲ್ಮಹಡಿ ರೂಮಿನಿಂದ ಇಣುಕಿದರೆ ಪಕ್ಕದಲ್ಲೇ ಇದ್ದ ತರಳಬಾಳು ಸಂಸ್ಥೆಗೆ ಹೊರಡುವ ಬಿ.ಎಡ್. ಓದುವ ಹುಡುಗಿಯರ ದಂಡಿಗೆ … Read more

ಮಿಂಚು: ಶೇಖರಗೌಡ ವೀ ಸರನಾಡಗೌಡರ್

“ಮಿಂಚೂ, ಅವರು ನಿನಗೆ ತಕ್ಕ ಜೋಡಿ. ನಿಮ್ಮಿಬ್ಬರ ಜೋಡಿ ಶಿವ-ಪಾರ್ವತಿಯರಂಗೆ ಆಗುತ್ತೆ.”ತಾಯಿ, ಮಗಳಿಬ್ಬರೂ ಖುಷಿಖುಷಿಯಿಂದ ಮಾತು ಮುಗಿಸಿದ್ದರು.****ಮಿಂಚುವಿನ ಮದುವೆ ಅವಳ ಸೋದರತ್ತೆಯ ಮಗ ಪ್ರಶಾಂತನ ಜೊತೆ ನಿಶ್ಚಯವಾಗುವ ಸುದ್ದಿ ಸದ್ಭವನ ಕಿವಿಗೆ ಬಿದ್ದಾಗಿನಿಂದ ಅವನ ಮನಸ್ಸು ಗೊಂದಲದ ಗೂಡಾಯಿತು. ಎದೆಯಲ್ಲಿ ತಳಮಳ, ಅಲ್ಲೋಲಕಲ್ಲೋಲ ಶುರುವಾಯಿತು. ನಿಂತ ಭೂಮಿ ಕಂಪಿಸಿದ ಅನುಭವ. `ಹಾಗಾದರೆ ನಾನು ಮಿಂಚುವಿನ ಬಗ್ಗೆ ಕನಸು ಕಟ್ಟುವುದನ್ನು ಬಿಡಬೇಕು. ನಾನು ಭಗ್ಮಪ್ರೇಮಿಯಾವೆನೇ…? ನನ್ನ ಮೊದಲ ಪ್ರೀತಿ ಹಳ್ಳ ಹಿಡಿಯುವುದೇ…? ಆ ನೋವನ್ನು ನಾನು ಜೀರ್ಣಿಸಿಕೊಳ್ಳಬಲ್ಲೆನೇ…? ಅಂಥಹ … Read more

ಅವನು ಅವಳು ಮತ್ತು ಆತ: ಡಾ. ವಿಶ್ವನಾಥ ಎನ್ ನೇರಳಕಟ್ಟೆ

“ಯಾಕೆ ಮದುವೆ ಆಗಿದ್ದೇನೋ ಎನಿಸುತ್ತಿದೆ. ಇದಕ್ಕಿಂತ ಒಂಟಿಯಾಗಿರುವುದೇ ಒಳ್ಳೆಯದಿತ್ತು” ಶೂ ಕಳಚಿಡುತ್ತಾ ಅವನು ಹೇಳಿದ ಈ ಮಾತು ಮೊದಲೇ ಕೋಪದಿಂದಿದ್ದ ಅವಳನ್ನು ಕೆರಳಿಸಿತು.“ನನಗೂ ಈ ಸಂಬಂಧ ಬೇಕಿರಲಿಲ್ಲ. ನೀವು ಇಂಥವರು ಅಂತ ಮೊದಲೇ ಗೊತ್ತಿದ್ದರೆ ನಾನು ಮದುವೆಗೆ ಒಪ್ಪುತ್ತಿರಲಿಲ್ಲ” ಎಂದು ಅವಳು ಹೇಳಿದ ತಕ್ಷಣವೇ ಅವನು ಕಳಚಿದ್ದ ಶೂವನ್ನು ಬಲವಾಗಿ ನೆಲದ ಮೇಲೆ ಬಿಸಾಡಿದ. ಅವನ ವರ್ತನೆಯನ್ನು ಲೆಕ್ಕಕ್ಕೇ ತೆಗೆದುಕೊಳ್ಳದವಳಂತೆ ಅವಳು “ಬೇಕಿರುವುದನ್ನೆಲ್ಲಾ ತೆಗೆದುಕೊಳ್ಳುವಷ್ಟು ಪುರುಸೊತ್ತು ಇಲ್ಲವೆಂದ ಮೇಲೆ ಶಾಪಿಂಗ್‌ಗೆ ಬಂದದ್ದಾದರೂ ಯಾಕೆ? ನಾನೊಬ್ಬಳೇ ಹೋಗುತ್ತಿದ್ದೆ. ಆಫೀಸಿನ … Read more

ನಾ ಓದಿದ ಡಂಕಲ್ ಪೇಟೆ…: ಕವಿತಾ ವಿರೂಪಾಕ್ಷ

‘ಡಂಕಲ್ ಪೇಟೆ’.. ನಾನು ಇತ್ತೀಚೆಗೆ ಓದಿದ ಲೇಖಕ ವೀರೇಂದ್ರ ರಾವಿಹಾಳ್ ಸರ್ ಅವರ ಆರು ಕಥೆಗಳ ಅದ್ಭುತ ಕಥಾ ಸಂಕಲನ. ಇದನ್ನು ಓದಲೇಬೇಕು ಎಂದು ಕೈಗೆತ್ತಿಕೊಂಡುದುದರ ಉದ್ದೇಶ ನಾನು ಇದೇ ಭಾಗದ ನಿವಾಸಿಯೇ ಆಗಿರುವುದರಿಂದ, ರಾಯಲಸೀಮೆಗೆ ಅಂಟಿಕೊಂಡಂತಹ ಬಯಲು ಸೀಮೆಯ ಲೇಖಕರ ಬರಹ ,ಇತರ ಲೇಖಕರಿಗಿಂತ ಹೇಗೆ ಭಿನ್ನ ?ಹಾಗೂ ಇಲ್ಲಿನ ವಿಷಯ ವಸ್ತುವಿನ ಆಯ್ಕೆ ಹೇಗಿರುತ್ತದೆ? ಹಾಗೆ ಇಲ್ಲಿ ಪ್ರತಿ ಕಥೆಯನ್ನು ಪ್ರಾದೇಶಿಕ ಹಿನ್ನೆಲೆಯಲ್ಲಿ ಹೇಗೆ ಎಣಿದಿರುತ್ತಾರೆ ಎನ್ನುವ ಕುತೂಹಲದಿಂದ. ನಿಜಕ್ಕೂ ಪುಸ್ತಕವನ್ನು ಓದುತ್ತಾ ಹೋದಂತೆ … Read more

ಕರೆದರೆ ಬರಲಾರೆಯೇ ಗೆಳತಿ: ವಾಣಿ ಕಂಟ್ಲಿ

ತನ್ನದಲ್ಲದ ಮನೆಯಲ್ಲಿ ಹುಟ್ಟಿಮನೆಯ ಲಕ್ಷ್ಮಿ ಎನಿಸಿಕೊಂಡರು..ಆಸ್ತಿಯ ಭಾಗವಿಲ್ಲದ ಹೊರೆಯಾಗಿ,ಪ್ರೀತಿ ಚೆಲ್ಲಿ, ಬೆವರು ಸುರಿಸಿ,ಎಲ್ಲರ ಮಾನ ಮರ್ಯಾದೆ ಎತ್ತಿ ಹಿಡಿದುಇನ್ನೊಬ್ಬರ ಮನೆ ತುಂಬುವ ಹೆಣ್ಣು.. ಇನ್ಯಾವುದೋ ನೆಲೆಯಲ್ಲಿ ತನ್ನ ಒಲೆ ಉರಿಸಿ,ತಾನೇ ಬೆಳೆದ ಆಹಾರ ಆಯ್ದು ತಂದುಮತ್ತೆ ಮತ್ತೆ ತನ್ನ ಬುಡವನ್ನು ಕಿತ್ತಿ ಹಚ್ಚಿಮತ್ತೆ ಚಿಗುರುವ ಹೂವು ಹಣ್ಣುಕಾಯಿಯಾಗಿ ಆಸರೆಯಾಗುವ ಹೆಣ್ಣು..ಮಳೆ ಹನಿಯ ಕಲೆಹಾಕಿ, ಬೆಟ್ಟದ ತುದಿಯಿಂದ ಜಾರಿಎಲ್ಲರೊಂದಿಗೆ ಒಂದಾಗಿ ಇಳಿಯುವ ನದಿಯಂತೆ,ಗಂಡನ ಮನೆಯಲ್ಲಿ, ಸಮಾಜದಲ್ಲಿ ,ವೃತ್ತಿಯಲ್ಲಿ ನೆಲೆಯೂರಿ ಹರಿಯುವನದಿಯಿಂದ ಉಪ್ಪಿನ ಸಾಗರ ಸೇರುವ ಹೆಣ್ಣು.. ಹೆಣ್ಣೆಂದರೆ ಸೌಂದರ್ಯ, … Read more

ನಾಗೇಂದ್ರ ಪಿ ಅವರ ಎರಡು ಕವಿತೆಗಳು

ಪ್ರೇಮಿಗಳ ದಿನದ ಕವಿತೆ 1 ಇಂದು ಪ್ರೇಮಿಗಳ ದಿನದ ನೆಪದಲ್ಲಿಒಂದು ಮಾತು ಹೇಳ್ತೀನಿ ಸರಳವಾಗಿನಿನ್ನ ಜೊತೆ ಕಳೆದ ಕ್ಷಣಗಳೆಲ್ಲನಿನ್ನ ಹೃದಯದಲ್ಲಿ ಉಳಿದಿವೆ ಮೌನವಾಗಿ ನಿನ್ನ ಹೆಸರು ಕೇಳಿದರೆಹೃದಯ ತಡುಕುತ್ತದೆ ನಿಧಾನವಾಗಿನೀ ಹತ್ತಿರ ಇದ್ದರೆ ಬದುಕೆಅರಳುತ್ತದೆ ಸುಂದರವಾಗಿ ನಿನ್ನ ನಗು ತುಂಬಿದ ಆ ಕ್ಷಣಗಳುಇನ್ನೂ ನೆನಪಾಗುತ್ತಿವೆ ಸಿಹಿಯಾಗಿನಿನ್ನ ಮಾತು ತಾಕಿದ ಪ್ರತಿಸಾರಿಮನಸ್ಸು ಬದಲಾಗುತ್ತದೆ ಪ್ರೀತಿಯಾಗಿ ಸಣ್ಣ ಸಣ್ಣ ಜಗಳಗಳೂ ಕೂಡಇಂದಿಗೆ ಕಾಣುತ್ತದೆ ಮಧುರವಾಗಿಯಾಕಂದರೆ ನೀ ಇದ್ದರೆ ಸಾಕುಬದುಕು ಕಾಣುತ್ತದೆ ಸುಂದರವಾಗಿ ಈ ದಿನದ ನೆಪದಲ್ಲಿ ಮತ್ತೊಮ್ಮೆ ಹೇಳ್ತೀನಿನೀ ಇರುವುದೇ … Read more

ಈಸಬೇಕು ಇದ್ದು ಜಯಿಸಬೇಕು: ಪೂಜಾ ತೀರ್ಥಹಳ್ಳಿ

ಪ್ರಿಯ ಓದುಗರೇ, ನಾವೆಲ್ಲರು ಮನುಷ್ಯರು ಮನುಷ್ಯರಷ್ಟೇ.. ಹೀಗಾಗಿ ನಮ್ಮ ಬದುಕಿನಲ್ಲಿ ಏರಿಳಿತಗಳು ಸಹಜ. ಸೋಲು ಗೆಲುವುಗಳ ಲೆಕ್ಕಾಚಾರದಲ್ಲಿ ಹಲವು ಬಾರಿ ಎಡವುತ್ತೇವೆ. ಕೇವಲ ಗೆಲುವುಗಳನ್ನು ಸಂಭ್ರಮಿಸುವ ನಾವು ಸೋಲನ್ನು ಅಷ್ಟೇ ಸಲೀಸಾಗಿ ಸ್ವೀಕರಿಸಲಾರೆವು. ಪರರ ಗೆಲುವನ್ನು ಸೈರಿಸಿಕೊಳ್ಳದಷ್ಟು ಸಣ್ಣತನ ನಮ್ಮನ್ನಾಳುತ್ತಿದೆ. ಪರೀಕ್ಷೆಯಲ್ಲಿ ಫೇಲಾದೆ, ಸ್ಪರ್ಧೆಯಲ್ಲಿ ಸೋತೆ. ಪ್ರೀತಿಯಲ್ಲಿ ಮೋಸಹೋದೆ, ಅಮ್ಮ ಬೈದರು,ಅಪ್ಪ ಹೊಡೆದರು ಅಂತೆಲ್ಲಾ ತೀರ ಬಾಲಿಷ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಅವಿವೇಕತನ ಹೆಚ್ಚುತ್ತಿದೆ. ಪರೀಕ್ಷೆಗಳಲ್ಲಿ ಪಾಸಾಗುವುದು ಅನಿವಾರ್ಯ ನಿಜ ಹಾಗಂತ ಅನುತ್ತೀರ್ಣರಾದರೆ ಅಲ್ಲಿಗೆ ಬದುಕೆ ಮುಗಿಯಿತೆಂದಲ್ಲ. … Read more

ಪುಟಾಣಿಗಳೊಂದಿಗಿನ ಚೈತನ್ಯ ಸಮೃದ್ಧಿಯ ಪ್ರವಾಸ: ಚಂದ್ರು ಪಿ ಹಾಸನ್

ಅಂದು ಶುಕ್ರವಾರ ಸಂಜೆ, ಶಾಲೆ ಮುಗಿಸಿ ಮನೆಗೆ ಬರುವಾಗ ಎಲ್ಲಾ ಮಕ್ಕಳು ಖುಷಿಯಿಂದ ಕುಣಿಯುತ್ತಿದ್ದರು. ಕಾರಣ ಕೇಳಿದರೆ ನಾಳೆ ಶನಿವಾರ ನಮಗೆಲ್ಲಾ ಆಫ್ ಡೇ ಕ್ಲಾಸ್ ಆಮೇಲೆ ಭಾನುವಾರ ಫುಲ್ ಡೇ ಮಜಾ ಅಂತ ಖುಷಿಯಿಂದ ಹೇಳುತ್ತಿದ್ದರು. ನಾನು ಒಂದು ಕ್ಷಣ ಯೋಚಿಸಿ ಅದರಲ್ಲೇನಿದೆ ವಿಶೇಷತೆ? ಪ್ರತಿವಾರ ಶನಿವಾರ ಭಾನುವಾರ ಬರ್ತಾ ಇರುತ್ತೆ ಅಲ್ವಾ . ಆದರೆ ಮಕ್ಕಳನ್ನು ಪ್ರಶ್ನಿಸಿದರೆ ಅವರ ಉತ್ತರ ಬೇರೆನೇ ಇತ್ತು. ಆಗ ಖುಷಿಯಿಂದ ನಾಳೆ ನಮ್ ಮಾವ ಬರ್ತಾರೆ , ಇನ್ನೊಬ್ಬ … Read more

ಕರಿಸಿದ್ಧ: ತಿರುಪತಿ ಭಂಗಿ

“ಹಣಿಮ್ಯಾಲ ಹಚ್ಚಿರಿ ಭಂಡಾರಅಕೈತಿ ನಿಮ್ಮ ಜೀವನ ಸಿಂಗಾರಗುಡಿಮುಂದ ಕೂಡಿದ ಜನಸಾಗರನೋಡಿ ಬರಗಾಗ್ಯಾನ ನಮ್ಮ ದೇವರ” ಗುಡಿಮ್ಯಾಲಿನ ಮೈಕ್ ಕೊಣ್ಣೂರ ಅಜ್ಜನ ಲೀಲಾ ಹೊಗಳಿ ಹೊಗಳಿ ಹಾಡಾಕತ್ತಿತ್ತು. ಭಂಡಾರದೊಡೆಯನ ಜಾತ್ರೆಗೆ ಟ್ರ್ಯಾಕ್ಟರ್, ಬೈಕ್, ಕಾರ್, ಬಸ್ಸು ಹತ್ತಿ, ಎತ್ತಿನ ಬಂಡಿ ಹೂಡಿಕೊಂಡು, ನಾಡಿನ ಜನರೆಲ್ಲರೂ ಬಾನ, ನೈವದ್ಯ, ಮಾಡಿಕೊಂಡು, ಕಾಯಿಕರ್ಪೂರ ತಗೆದುಕೊಂಡು, ಅಜ್ಜನ ದರುಶನಕ್ಕೆ ಸಜ್ಜಾಗಿ ಬಂದಿದ್ದರು. ಅಜ್ಜನ ಗುಡಿ ಮುಂದೆಲ್ಲಾ ಜನಜಾತ್ರಿಯೇ ಸೇರಿ ಗಿಜಿಗಿಜಿ ಗಿಜಗೂಡುತಿತ್ತು. ಗುಡಿಯ ಮುಂಬಾಗದಲ್ಲಿ ತೆಂಗನಿ ಕಾಯಿ ಮಾರುವವರು, ಕುಂಕುಮ ಭಂಡಾರ ಮಾರುವವರು, … Read more