ಸಿನಿಮಾ

ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತಾಡುವ ಸಿನಿಮಾ – ಜವಾನ್: ಚಂದ್ರಪ್ರಭ ಕಠಾರಿ

. ಕಳೆದ ವರ್ಷಗಳಲ್ಲಿ ತೆರೆಕಂಡ ಬಾಹುಬಲಿ, ಕೆಜಿಎಫ್‌, ಪುಷ್ಪದಂಥ ಸೂಪರ್‌ ಹುಮನ್ ಅಂದರೆ ಎಂಥದ್ದೇ ಕಷ್ಟಗಳು ಎದುರಾದರೂ ತನ್ನ ದೈಹಿಕ ಶಕ್ತಿ, ಬುದ್ದಿಮತ್ತೆಯಿಂದ ನಿವಾರಿಸುವ ಅತೀವ ಆತ್ಮವಿಶ್ವಾಸದ ಮ್ಯಾಚೊ(macho) ಸಿನಿಮಾಗಳು ಪ್ಯಾನ್‌ ಇಂಡಿಯಾ ಪ್ರದರ್ಶನಗೊಂಡು ನೂರಾರು ಕೋಟಿಗಳ ಲಾಭವನ್ನು ಗಳಿಸಿದವು. ಮಿಸ್ಸಾಯ(messiah) ಅಥವಾ ಸರ್ವರ ಸಕಲ ಸಂಕಷ್ಟಗಳಿಗೆ ಏಕೈಕ ನಿವಾರಕನಾಗಿ ರೂಪಿತವಾಗಿರುವ ಇಂತಹ ಸಿನಿಮಾಗಳಲ್ಲಿ ಹಿಂಸೆ, ರಕ್ತಪಾತ ಕಣ್ಣಿಗೆ ರಾಚುವಷ್ಟು ಅತಿಯಾಗಿ ಕಂಡು ಬಂದಿದ್ದರೂ ಪ್ರೇಕ್ಷಕರು ಅದನ್ನೇ ಮನೋರಂಜನೆಯಾಗಿ ಸಂಭ್ರಮಸಿದ್ದು ಸಮಾಜ ಮನೋವಿಜ್ಞಾನ ಅಧ್ಯಯನಕ್ಕೆ ಒಳಪಡುವಂಥ ವಿಷಯ. […]

ಕಾವ್ಯಧಾರೆ

ಮೂರು ಕವನಗಳು: ದಯಾನಂದ ರೈ ಕಳ್ವಾಜೆ

“ಮೌನ ತಪ್ಪಿದ ಹಾದಿ”.. ಮೆಲ್ಲುಲಿದು ಪಾದಸರಮೌನವಾಯಿತು ಮತ್ತೆಅವಳ ಪಾದದಿ ಮಲಗಿ ಸದ್ದಿಲ್ಲದೇ…ಅವಳಿರುವ ಸೂಚನೆಗೆನಲಿವ ಗೆಜ್ಜೆಯೆ ದನಿಯುನಿಂತಲ್ಲೆ ಮೈ ಮರೆತು ಕಲ್ಲಾದಳೇಕೆ?!ಯಾರದೋ ಕಾಯುವಿಕೆಬಿಟ್ಟ ಕಿವಿ ಬಿರು ನೋಟಆಗಾಗ ಅವಳಿದಿರುಯಾರ ಕಡೆಗೇ…?ಸಹಜ ಸುಂದರಿಯವಳುನೀಳಕೇಶದ ರಾಶಿ…ಇನಿತಿಲ್ಲ ನವಯುವಗದಥಳಕು ಬಳುಕೂ…ಕಲ್ಲ ಚಪ್ಪಡಿಯಲ್ಲಿ ಬಿಮ್ಮನೇ ಪವಡಿಸುತಕಣ್ಣೆಡೆಯ ಕೇಶವನು ಕಿವಿಗಿಟ್ಟಳು..ಕಣ್ಣಂಚು ನೀರಹನಿಕೈ ಬಿಗಿದ ಫೋನೊಂದುಆಗಾಗ ಅದರೆಡೆಗು ಹರಿದ ದೃಷ್ಟಿ….ಬಂತೊಂದು ಸಂದೇಶಮರೆತು ಬಿಡು ನನ್ನಿದಿರಕಾಯದಿರು ನನ್ನೊಲವಮೂಗಿಯನು ಕೈಹಿಡಿದು ನಾ ಬಾಳಲಾರೆ…ಬಿಗಿದ ಗಂಟಲು ಬೇನೆಅಳುವಿಗೂ ದನಿಯಿಲ್ಲಬಿಕ್ಕಿದಳು ಮೌನದಲಿ ಹಾಯೆನಿಸುವಷ್ಟು..ಪಾದಸರ ಕಂಪಿಸಿತುಮತ್ತೆ ಚೇತನವಾಯ್ತುಹದಗೆಟ್ಟ ಭಾವದಲಿ ಪುಟಿದೆದ್ದಳೂ…ಕಡಲಾಚೆ ಮರೆಯಾದಸಂಜೆಗೆಂಪಿನ ಸೂರ್ಯಬಸಿದ ರಕ್ತದ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಮಿಡ್ ನೈಟ್ @ಪ್ರೀಡಂ ಹೀಗೆ ಏಕಾಂತದಲ್ಲಿಇರಲು ಯಾವಾಗಲೂನನಗೆ ಇಷ್ಟಇದು, ಅವನು ಬಿಟ್ಟು ಹೋದಹಲವುಗಳಲ್ಲಿ ಇದು ಕೂಡ. ಪ್ರತಿ ರಾತ್ರಿ ಎರಡು ಪೆಗ್ ವೈನ್ಮತ್ತವನ ಖಾಲಿ ನೆನಪುಇಷ್ಟೇ, ಚಂದ್ರನ ಆಸರೆಯಲ್ಲಿಮಧು ಹೀರುತ್ತಾ,ತೇಲುತ್ತಾ ಹಾಗೆ ಒರಗಿಕೊಳ್ಳುವೆ. ಒಮ್ಮೊಮ್ಮೆ ಅವನೊಂದಿಗೆ ಕಳೆದತುಂಟ ಪೋಲಿ ನೆನಪುಗಳುಬೇಡವೆಂದರುನನ್ನ ಅಂಗಾಲಿಗೆ ಮುತ್ತಿಡುತ್ತಾಬಲವಂತವಾಗಿ ಕಾಡಿಸುತ್ತವೆ. ಹೂ ಮುಗುಳಿಗೆತಾಕಿಸಿದ ಅವನ ಕಿರುನಾಲಿಗೆ ರುಚಿ,ಮತ್ತೆ ಮತ್ತೆಕವಾಟಗಳೆರಡು ಬಯಸುತ್ತವೆ. ಸಿಕ್ಕು ಬಿದ್ದಕೂದಲಲ್ಲಿ ಅವನಾಡಿಸಿದಕಿರು ಬೆರಳಾಟಮತ್ತೆ ಬೇಕನಿಸುತ್ತದೆ. ಹೀಗೀಗ ಬರೀ ಖಾಲಿ,ಎರಡು ಪೆಗ್ ವೈನ್ ಜೊತೆಅವನ ನೆನಪಿನೊಂದಿಗೆಹಾಗೊಮ್ಮೆ ಹಿಗೊಮ್ಮೆಬೆರಳುಗಳು ಇಣುಕಿ ಬಂದಾಗಲೇಚಿಂತೆ ಕಳೆದು […]

ಪ್ರವಾಸ-ಕಥನ

ಅತೀ ಕಡಿಮೆ ದರದಲ್ಲಿ ಅಮರನಾಥನ ಯಾತ್ರೆ ಹಾಗೂ ದೇವರ ದಯೆಯನ್ನು ಕಣ್ಣಾರೆ ಕಂಡದ್ದು..: ಶ್ರೇಯ ಕೆ ಎಂ

ಪ್ರವಾಸ, ದೇಶ ಸುತ್ತು ಕೋಶ ಓದು ಎನ್ನುವ ನಾಣ್ಣುಡಿಯಂತೆ ಪುಸ್ತಕ ಓದುವುದು ಚಿಕ್ಕಂದಿನಿಂದ ಇದ್ದ ಹವ್ಯಾಸ, ಅದರ ಜೊತೆ ದೇಶ ಸುತ್ತುವುದು ಕೂಡ. ಅಂದರೆ ಚಿಕ್ಕಂದಿನಿಂದ ನಮ್ಮ ಕರ್ನಾಟಕದ ಪ್ರತೀ ಪ್ರದೇಶವನ್ನು ಸುತ್ತಿದ್ದೇನೆ. ಆದರೆ ಕನ್ಯಾಕುಮಾರಿ ಯಿಂದ ಕಾಶ್ಮೀರದ ವರೆಗೆ ಇಡೀ ಭಾರತ ಸುತ್ತುವುದು ಕೂಡ ಒಂದು ಕನಸು. ಈ ಕನಸಿಗೆ ಸಾಕಾರಗೊಂಡಿದ್ದು ಮೊನ್ನೆಯ ಅಮರನಾಥ ಯಾತ್ರೆ. ಕರ್ನಾಟಕದಿಂದ ಶುರುವಾಗಿ,ದೆಹಲಿ, ಅಂಬಾಲ, ಕಾಟ್ರಾ,ಕಾಶ್ಮೀರ, ರಾಜಸ್ತಾನ್, ಗುಜರಾತ್ ಹೀಗೆ ಭಾರತ ವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿದ ರೀತಿಯಲ್ಲಿ […]

ಹಾಸ್ಯ

“ಎಲಿಜಿಬಲ್ ಬ್ಯಾಚುಲರ್ “: ರೂಪ ಮಂಜುನಾಥ, ಹೊಳೆನರಸೀಪುರ.

ಕಸದಿಂದ ರಸ ಮಾಡುವ ಕುಶಲತೆಯಿಂದ ತನ್ನ ಬೆವರಿನ ಮಣ್ಣಿನಿಂದ ಸುಂದರ ಬಾಲನನ್ನು ತಿದ್ದಿತೀಡಿದ ಲೋಕದ ಮೊತ್ತಮೊದಲ ಕ್ರಿಯೆಟಿವ್ ಅಂಡ್ ಇನ್ನೋವೇಟಿವ್ ಹೆಣ್ಣು ಜಗನ್ಮಾತೆ ಪಾರ್ವತಿಯಾದರೆ, ಏನೋ ಅಚಾತುರ್ಯದಿಂದ, ತನ್ನಿಂದಲೇ ತರಿದು ಹೋದ ಪುತ್ರನ ಮುಂಡಕ್ಕೆ, ಆನೆಯ ರುಂಡವನ್ನು ಸೇರಿಸಿದ ಮೊತ್ತಮೊದಲ ಟ್ರಾಸ್ಪ್ಲಾಂಟ್ ಸರ್ಜನ್ ನಮ್ಮ ಡಾ॥ಶಿವಪ್ಪನವರು!ಇಂಥ ಅಸಾಧ್ಯರ ಪುತ್ರನಾದ ಮೇಲೆ ನಮ್ಮ ಕರಿವದನ, ವಿನಾಯಕ ಸಾಧಾರಣವಾದ ಹೀರೋ ಆಗಲು ಸಾಧ್ಯವೇ? ಹ್ಯೂಮರಸ್, ಕ್ಲೆವರ್, ಜೋವಿಯಲ್, ಡಿಪ್ಲೊಮೆಟಿಕ್, ಸ್ಮಾರ್ಟ್, ವೈಸ್, ಒಟ್ಟಿನಲ್ಲಿ ಟೋಟಲೀ ಎಲ್ಲ ವಿಚಾರದಲ್ಲಿಯೂ ಜೀನಿಯಸ್ ಗುಣಗಳಿಂದ […]

ಕಥಾಲೋಕ ಪಂಜು-ವಿಶೇಷ

“ಕತ್ತಲ ಹೂವು” ನೀಳ್ಗತೆ (ಭಾಗ ೧): ಎಂ.ಜವರಾಜ್

-೧- ಸಂಜೆ ಆರೋ ಆರೂವರೆಯೋ ಇರಬಹುದು. ಮೇಲೆ ಕಪ್ಪು ಮೋಡ ಆವರಿಸಿತ್ತು. ರಿವ್ವನೆ ಬೀಸುವ ಶೀತಗಾಳಿ ಮೈ ಅದುರಿಸುವಷ್ಟು. ಕಪ್ಪುಮೋಡದ ನಿಮಿತ್ತವೋ ಏನೋ ಆಗಲೇ ಮಬ್ಬು ಮಬ್ಬು ಕತ್ತಲಾವರಿಸಿದಂತಿತ್ತು. ಕೆಲಸ ಮುಗಿಸಿ ಇಲವಾಲ ಕೆಎಸ್ಸಾರ್ಟೀಸಿ ಬಸ್ಟಾಪಿನಲ್ಲಿ ಮೈಸೂರು ಕಡೆಗೆ ಹೋಗುವ ಸಿಟಿ ಬಸ್ಸಿಗಾಗಿ ಕಾಯುತ್ತಿದ್ದ ಚಂದ್ರನಿಗೆ ಮನೆ ಕಡೆ ದಿಗಿಲಾಗಿತ್ತು. ಆಗಲೇ ಒಂದೆರಡು ಸಲ ಕಾಲ್ ಬಂದಿತ್ತು. ಬೇಗನೆ ಬರುವೆ ಎಂದು ಹೇಳಿಯೂ ಆಗಿತ್ತು. ಹಾಗೆ ಹೇಳಿ ಗಂಟೆಯೇ ಉರುಳಿತ್ತು. ಸಮಯ ಕಳಿತಾ ಕಳಿತಾ ಮನೆ ಕಡೆ […]

ಕಾವ್ಯಧಾರೆ

ಎರಡು ಸಾವಿರ ವರ್ಷಗಳ ಹಿಂದಿನ ಸಂಗಂ ಸಾಹಿತ್ಯ ಪುರನಾನೂರು

ತಮಿಳು ಮೂಲ: ಪ್ರೊ. ಸಾಲಮನ್‌ ಪಾಪಯ್ಯಅನುವಾದ: ಡಾ. ಮಲರ್‌ ವಿಳಿ ಕೆಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಹಾಡು- ೧( ಧರ್ಮತಪ್ಪದ ರಾಜನ ಆಳ್ವಿಕೆ) ರಾಜನೇಬಾನ ಮಿತಿಯವನೇ! ದೇವನೇ!ನಿನ್ನ ಹೊಗಳದವರನ್ನು,ಅವರ ತಪ್ಪುಗಳನ್ನು,ನೀ ಸಹಿಸಿಕೊಳ್ಳುವೆ.ಅವರ ತಪ್ಪು,ಸಹಿಸಿಕೊಳ್ಳತಕ್ಕದ್ದಲ್ಲಎಂದು ಕಂಡರೆ,ಅವರನ್ನು ಅಳಿಸುವುದು ಹೇಗೆಂದುಯೋಚಿಸುವ ಜ್ಞಾನದಿ ನೀ ಆಗಸದಂತೆ ವಿಶಾಲವಾದವನು. ಹಗೆಗಳ ಅಳಿಸುವ ಸಾಮರ್ಥ್ಯದಲ್ಲಿನೀ ಆಗಸವ ತಾಕಿ ಬೀಸುವಗಾಳಿಯಂತಹವನು.ಅವರನ್ನು ಅಳಿಸುವುದರಲ್ಲಿಗಾಳಿಯೊಡನೆ ಬರುವ ಬೆಂಕಿಯಂತಹವನು. ಎಲ್ಲರಿಗೂ ಒಳಿತನ್ನುಂಟು ಮಾಡುವುದರಲ್ಲಿ ನೀನುನೀರಿನಂತಹವನು.ಬೆಳಗಿನ ಹೊತ್ತು ಪೂರ್ವದಲಿನಿನ್ನ ಕಡಲಲಿ (ಉದಯಿಸುವ)ಕಾಣುವ ಸೂರ್ಯಸಂಜೆಯಲಿ ಬೆಳ್ಳನೆಯ ಅಲೆಗಳಿರುವನಿನ್ನ ಪಶ್ಚಿಮ ಕಡಲಲಿ ಮುಳುಗುವುದು.ಇವುಗಳ ನಡುವೆ ಸದಾಹೊಸ ಹೊಸ […]

ಸಿನಿಮಾ

ಖಾಸಗಿ ನೈಸರ್ಗಿಕ ಕ್ರಿಯೆ ಹಸ್ತಮೈಥುನ ವಸ್ತುವುಳ್ಳ ಸಿನಿಮಾ – ಓ ಮೈ ಗಾಡ್‌ 2: ಚಂದ್ರಪ್ರಭ ಕಠಾರಿ

2012 ತೆರೆಕಂಡ ಉಮೇಶ್‌ ಶುಕ್ಲಾ ನಿರ್ದೇಶನದ ಸಿನಿಮಾ ʼಓಹ್‌ ಮೈ ಗಾಡ್‌ʼ ಸಿನಿಮಾ ತನ್ನ ಕಥಾವಸ್ತುವಿನಿಂದ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಚಿತ್ರದಲ್ಲಿ ಪರೇಶ್‌ ರಾವಲ್‌ ಮತ್ತು ಅಕ್ಷಯ್‌ ಕುಮಾರ್‌ ಪ್ರಧಾನ ಭೂಮಿಕೆಯಲ್ಲಿದ್ದರು. ಅದರಲ್ಲೂ ಅಖಂಡ ನಾಸ್ತಿಕ, ಅಲ್ಲದೆ ವ್ಯವಹಾರ ಚತುರನಾಗಿ ಪರೇಶ್‌ ರಾವಲ್‌ ತಮ್ಮ ಅತ್ಯುತ್ತಮ ನಟನೆಯಿಂದ ಸಿನಿಮಾದ ಗೆಲುವಿಗೆ ಕಾರಣವಾಗಿದ್ದರು. ಪ್ರಾಕ್ತನ ವಸ್ತುಗಳ ವ್ಯಾಪಾರ ಮಾಡುವ ಕಾಂಜಿ ಲಾಲ್ಜಿ ಮೆಹ್ತಾನ ಅಂಗಡಿ ಭೂಕಂಪಕ್ಕೆ ತುತ್ತಾದಾಗ, ವಿಮಾ ಕಂಪನಿಯವರು ಭೂಕಂಪ, ಪ್ರವಾಹ ಇತ್ಯಾದಿಗಳು act of […]

ಮೊದಲು ಓದುಗನಾಗು

“ಅಂತರಂಗದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿ ಎಡತಾಕಿ ಕಾಡುವ ಒಂದು ಹದವಾದ ಕಥಾಕೃತಿ”: ಎಂ‌. ಜವರಾಜ್

ಮುಂಬೈನ ಭಾರತೀಯ ಸಾಹಿತ್ಯ ವಿಚಾರ ಸಂಕಿರಣವೊಂದರಲ್ಲಿ ಕಥೆಗಾರ ಯಶವಂತ ಚಿತ್ತಾಲರು “ಬರಹಗಾರ ಶ್ರೇಷ್ಟತೆಯ ವ್ಯಸನಕ್ಕೆ ತುತ್ತಾಗದೆ ಸಾಹಿತ್ಯದಲ್ಲಿ ಶಿಷ್ಟ ಕ್ಲಿಷ್ಟ ಶ್ರೇಷ್ಠ ಎಂಬಂಥ ‘ಮನೋ ಒರತೆ’ ಗೆ ಒಳಗೊಳ್ಳುವ ಒಳಸುಳಿಗಳ ರಚನೆ ಬಿಟ್ಟು ಸ್ಪಷ್ಟ, ಸರಳ, ಪ್ರಯೋಗಶೀಲ, ಸೃಜನಶೀಲ ರಚನೆಯತ್ತ ಚಿತ್ತ ಹರಿಸಿದರೆ ಅಂತಹ ಬರಹದಲ್ಲಿ ವಿಶಿಷ್ಟತೆ ಕಾಣಬಹುದು. ಇದರಿಂದ ಲೇಖಕನನ್ನು ಬರಹದ ಶ್ರೇಷ್ಟತೆಯ ವ್ಯಸನಕ್ಕೆ ತುತ್ತಾಗುವುದನ್ನು ತಪ್ಪಿಸುತ್ತದೆ. ಒಮ್ಮೆ ಈ ಶ್ರೇಷ್ಟತೆಯ ವ್ಯಸನ ಆವರಿಸಿದರೆ ಅದರಿಂದ ಹೊರ ಬರಲಾರದೆ ಆತನಿಂದ ಹೊಸತೇನನ್ನೂ ನಿರೀಕ್ಷಿಸಲಾಗದು” ಅನ್ನೊ ಅಭಿಪ್ರಾಯ […]

ಕಾವ್ಯಧಾರೆ

ಎರಡು ಕವಿತೆಗಳು: ಡಾ. ಡಿ. ಎಸ್. ಪ್ರಭಾಕರಯ್ಯ

ಯಾರು ಹಿತವರು ನಿನಗೆ ಓ ಮನಸೇಯಾರು ಹಿತವರು ನಿನಗೆಒಮ್ಮೆ ಅತ್ತ ಬಾಗುವೆಒಮ್ಮೆ ಇತ್ತ ಬಾಗುವೆಒಮ್ಮೆ ಅತ್ತಿಂದಿತ್ತ ಇತ್ತಿಂದತ್ತ ಒದ್ದಾಡುವೆ. ಓ ಮನವೇಯಾರು ಹಿತವರು ನಿನಗೆಗೆದ್ದರೂ ಸಹಿಸಲಾರೆಸೋತರೂ ಸಹಿಸಲಾರೆ,ಗೆದ್ದು ಸೋತಿಲ್ವ, ಸೋತು ಗೆದ್ದಿಲ್ವಸೋಲು ಗೆಲುವುಗಳಿಲ್ಲದ ಜೀವನವುಂಟೇ ಓ ಮನವೇಯಾರು ಹಿತವರು ನಿನಗೆಕನಿಕರ ಎಲ್ಲೂ ಕರಕರ‌ ಎನ್ನುತಿಲ್ಲಹಾನಿಕರವೇ ನಿನ್ನಮೂಲಮಂತ್ರವಾಯಿತಲ್ಲ.ಬದುಕಲಾರೆ, ಬದುಕಿಸಲಾರೆ. ಓ ಮನವೇಯಾರು ಹಿತವರು ನಿನಗೆವರಿ ಆಗಿದ್ದಕ್ಕಿಂತ ಉರಿ ಆಗಿದ್ದೇ ಹೆಚ್ಚು, ಮಾತುಗಳಲ್ಲಿ ನಿಸ್ವಾರ್ಥತೆಕೆಲಸ ಕಾರ್ಯಗಳಲ್ಲಿ ಸ್ವಾರ್ಥತೆ. ಓ ಮನವೇಯಾರು ಹಿತವರು ನಿನಗೆ.ಒಳಗೆ ಬಳುಕು ಹೊರಗೆ ತಳುಕುಏನು ನಿನ್ನ ನೀತಿ […]

ಪಂಜು-ವಿಶೇಷ

ಒಂದ್ ಡೇ ವಿತ್ ಗಣಪ!: ರೂಪ ಮಂಜುನಾಥ

ಆ ದಿನ ಭಾದ್ರಪದ ಶುಕ್ಲದಾ ಚೌತಿ! ಬೆಳಗಿನಿಂದಲೇ ಮುದ್ದು ವಿನಾಯಕನನ್ನು ಸ್ವಾಗತಿಸಲು ಸಂಭ್ರಮದಿಂದ ಮಿಂದುಮಡಿಯನುಟ್ಟು, ದೇವರ ಮನೆಯ ಮಾಡಿ ಅಚುಕಟ್ಟು, ಪೂಜಾ ಸಲಕರಣೆಗಳನ್ನು ಜೋಡಿಸಿಟ್ಟು, ಹೂ ಬಿಡಿಸಿಟ್ಟು, ಫಲತಾಂಬೂಲ ನೈವೇದ್ಯಕಿಟ್ಟೂ, ಗಣಪನಿಗೆ ಒಳ್ಳೆಯ ಪೀಠವಿಟ್ಟೂ, ಅಡಿಗೆಮನೆಗೆ ಹೆಜ್ಜೆಯಿಟ್ಟು, ನಮ್ಮ ಈಶಣ್ಣನ ಮಗ ಗಣಪ್ಪನ ಜೊತೆಗೆ ನಮ್ಮಮನೆಯಲಿರುವ ಗಣಪ್ಪನಿಗೆ( ನನ್ ಮಗನೂ ಸ್ವಲ್ಪ ಠೊಣಪನೇ) ಇಷ್ಟವಾಗುವ ಅಡಿಗೆಯ ತಯಾರಿಯಲ್ಲಿದ್ದೆ. ಅಪ್ಪ ಮಕ್ಕಳು ಎದ್ದುಸ್ನಾನ ಮಾಡಿ ಪೂಜೆ ಮಾಡಲು ಸಿದ್ದವಾದರು. ನಮ್ಮ ಟ್ಯಾಬ್ ಗುರುಗಳನ್ನ “ ಸ್ವಾಮಿ ಬರ್ತೀರಾ”?ಅಂದಿದ್ದೇ ತಡ […]

ಕಾವ್ಯಧಾರೆ

ಎರಡು ಕವಿತೆಗಳು: ಜ್ಯೋತಿಕುಮಾರ್‌ ಎಂ.

ಅವರವರ ಭಾವ ಶವ ಹುಗಿದು ಬಂದವರುದೋಷ ಕಳೆಯಲೆಂದುಗುಂಡಿ ತೆಗೆದವನವಸ್ತ್ರ ತುಂಬಿಸಿದರು.ಕೂಲಿಯವರು ಹೊಟ್ಟೆತುಂಬ ಕಳ್ಳು ಕುಡಿದುದೋಷವನುಜೀರ್ಣಿಸಿಕೊಂಡರು. ತಾವು ಮಾಡಿದಪಾಪ ಕರ್ಮಗಳುಕಳೆಯಲೆಂದು,ಭಿಕ್ಷಾ ತಟ್ಟೆಗೆಚಿಲ್ಲರೆ ಎಸೆದರು.ಪಾಪದ ಅಕ್ಕಿಯಅನ್ನ ಬೇಯಿಸಿ ತಿಂದುಅವರು ಅರಗಿಸಿಕೊಂಡರು. ಕೈಗಂಟಿದ ರಕ್ತದಕಲೆ ತೊಳೆಯಲೆಂದುಒಂದಿಷ್ಟು ಕಂತೆದಾನ ಕೊಟ್ಟರು.ರಕ್ತ ಕಲೆಯ ಊಟವಅನಾಥ ಮಕ್ಕಳು ಉಂಡುರಕ್ತಗತವಾಗಿಸಿಕೊಂಡರು. ಪಾಪದ ಪಿಂಡವೆಂದುಹಡೆದು ತೊಟ್ಟಿಗೆಎಸೆದು ಹೋದರು.ನಡುರಾತ್ರಿಯಲಿಸಿಕ್ಕ ಕೂಸುಬಂಜರು ಜೀವನದಅದೃಷ್ಟವೆಂದುನಡು ವಯಸ್ಸಿನದಂಪತಿಗಳುಕಣ್ಣಿಗೊತ್ತಿಕೊಂಡರು. ಯಾವುದು ದೋಷ?ಯಾವುದೀ ಕರ್ಮ?ಯಾರ ರಕ್ತದ ಕಲೆ?ಯಾರು ಪಾಪದ ಪಿಂಡ?ಜೀವನ, ಭಾವನ, ಪಾವನ.ಅವರವರ ಭಾವಕ್ಕೆಅವರವರದೆ ಭಕ್ತಿ,ಅವರಿವರಿಗೆ ಅದೆ ಶಕ್ತಿ. ಕಾರಣ ಮನಸ್ಸುಗಳಬೆಸೆದುಕೊಂಡಾಗ,ಬಿಸುಪು ಕೈಗಳಸ್ಪರ್ಶ ರೋಮಾಂಚನದಿಂ,ಸುಮ್ ಸುಮ್ಮನೆಆಲಂಗಿಸಿಕೊಂಡಾಗ,ಬಳಿ ಸಾರಿಮುದ್ದಾಡಿಕೊಂಡಾಗ,ಕತ್ತಲೆ […]

ಕಾವ್ಯಧಾರೆ

ನಾಲ್ಕು ಕವಿತೆಗಳು: ಲಿಂಗರಾಜ ಸೊಟ್ಟಪ್ಪನವರ

ಈ ಹಂಗಾಮಕೆ ಹೀಗೆಗಾಳಿಯ ಸುಮ್ಮನೆ ಒಂದು ಬೀಸುಏನು ಕಾರಣವಿರುತ್ತೆ ಹೇಳು ಒಳಗೆಳೆದುಕೊಂಡ ಈ ಕ್ಷಣದ ಉಸಿರಿಗೆಯಾರ ಹೆಸರಿತ್ತು ಕೇಳುಎಷ್ಟೇ ನಿಟ್ಟುಸಿರುಗಳ ತರುವಾಯವೂ ನಿನ್ನ ಪುಪ್ಪಸಗಳಲಿಉಳಿದೆ ಉಳಿಯುತ್ತೇನೆ ನಾನು ಬರಿ ಹೆಸರಿಗೆ ಇಷ್ಟು ಉಬ್ಬಿ ಹೋಗುವಿಯಲ್ಲಾಇನ್ನು ಕುಪ್ಪಸವ ನಾನೇ ಹೊಲಿದು ತರುವೆಎಷ್ಟಾದರೂ ಉಬ್ಬುದಿಬ್ಬವೇರುತ್ತ ಸಾಗಲಿ ತೇರುಮಬ್ಬು ಹರಿದ ತರುವಾಯ ಕಣ್ಣುಜ್ಜಿಕೊಳ್ಳುವ ಚುಮು ಚುಮು ಮುಂಜಾವುಕಣ್ಣೆದುರೆ ಕರಗುವ ಕಾನು ಬಾನುಬೆಳ್ಳಿ ನಕ್ಷತ್ರಗಳು ಆನು ತಾನುಹರಿವ ತೊರೆಯ ಮೆರೆವ ನೊರೆಯಲಿಯಾವ ದುಃಖ ಎಂಥ ಸುಖ ಬರುವ ಹಬ್ಬಕೆಬೇನಾಮಿ ಸುಖಗಳನು ನಿನ್ನ ಹೆಸರಿಗೆ […]

ಲೇಖನ

ಅಮೇರಿಕಾದ ‘ಶ್ವೇತ ಪುಷ್ಪ’ ಎಮಿಲಿ ಡಿಕಿನ್ಸನ್: ಗೀತಾ ಕೆ ಆಚಾರ್ಯ

ಆಂಗ್ಲ ಕವಯಿತ್ರಿ ಎಮಿಲಿ ಬಗ್ಗೆ ಒಂದಿಷ್ಟು ಪರಿಚಯ. 19ನೇ ಶತಮಾನದ ಪ್ರಮುಖ ಕವಯಿತ್ರಿಗಳಲ್ಲಿ ಒಬ್ಬರು ಎಮಿಲಿ ಡಿಕಿನ್ಸನ್. ಅಮೇರಿಕಾದ ಕವಯಿತ್ರಿಯಾದ ಈಕೆಯ ಪೂರ್ಣ ಹೆಸರು ಎಮಿಲಿ ಎಲಿಜಬೆತ್ ಡಿಕಿನ್ಸನ್. 10 ಡಿಸೆಂಬರ್ 1830ರಲ್ಲಿ ಮ್ಯಾಸಚೂಸೆಟ್ಸ್‌ನ ಅಮ್ಹೆರ್ಸ್ಟ್‌ನಲ್ಲಿ ಜನನ. ತಂದೆ ಎಡ್ವರ್ಡ್ ಡಿಕಿನ್ಸನ್, ವಕೀಲರಾಗಿದ್ದವರು. ತಾಯಿ ಎಮಿಲಿ ನಾರ್ಕ್ರಾಸ್ ಡಿಕಿನ್ಸನ್. ಒಬ್ಬ ಸಹೋದರ ಮತ್ತು ಒಬ್ಬಾಕೆ ಸಹೋದರಿ ಎಮಿಲಿಗಿದ್ದರು. ಕವಯಿತ್ರಿ ಎಮಿಲಿ ‘Nun of Amherst’ಎಂದು ಕರೆಯಲ್ಪಡುತ್ತಿದ್ದರು. ಅವರು ನಿತ್ಯ ಶ್ವೇತವಸ್ತ್ರವನ್ನೇ ಧರಿಸಲು ಇಷ್ಟಪಡುತ್ತಿದ್ದರಂತೆ. ಬರಹದ ಹೊರತಾಗಿ ಎಮಿಲಿಯವರಿಗೆ […]

ಮೊದಲು ಓದುಗನಾಗು

ದೇಹಾದಾಚೆಗೆ ಪ್ರೀತಿಯ ತುಡಿತ- ʼಜೋನ್ಪುರಿ ಖಯಾಲ್ʼ: ಎಂ ನಾಗರಾಜ ಶೆಟ್ಟಿ

ಕೆಲವು ಪುಸ್ತಕಗಳು ಓದಿದ ನಂತರ ಮನಸ್ಸಿನಿಂದ ಅಳಿಸಿ ಹೋಗುವುದಿಲ್ಲ. ಅವು ನಮ್ಮ ತಿಳಿವಳಿಕೆಯ/ ಸಂವೇದನೆಯ ಭಾಗವಾಗಿಯೇ ಉಳಿದುಕೊಳ್ಳುತ್ತವೆ. ಅಂತಹ, ಓದಿದ ನಂತರವೂ ಕಾಡುವ ಗುಣವುಳ್ಳ ಪುಸ್ತಕ ʼಜೋನ್ಪುರಿ ಖಯಾಲ್” ಅಕ್ಷತಾ ಈ ಪುಸ್ತಕವನ್ನು ಕಳಿಸಿದಾಗ ನಾನೇನೂ ಅಂತಹ ಆಸಕ್ತಿ ತೋರಲಿಲ್ಲ; ಅಕೈ ಪದ್ಮಸಾಲಿ, ಎ ರೇವತಿ ಆತ್ಮಕತೆಗಳನ್ನೂ ಓದಲಾಗಿರಲಿಲ್ಲ. ಇದನ್ನೂ ನಿಧಾನವಾಗಿ ಓದಿದರಾಯಿತೆಂದು, ಒಂದೆರಡು ಪುಟಗಳನ್ನು ತಿರುವಿ ಹಾಕಿದವನಿಗೆ ಕೆಳಗಿಡಲು ಸಾಧ್ಯವಾಗಲೇ ಇಲ್ಲ. ಆ ಮಟ್ಟಿಗೆ ರೂಮಿ ಹರೀಶರ ಬದುಕಿನ ಪುಟಗಳು ಆವರಿಸಿಕೊಂಡು ಬಿಟ್ಟವು. ʼಜೋನ್ಪುರಿ ಖಯಾಲ್‌ʼ […]

ಲೇಖನ

ಸೀತಾಳೆ ಹೂ: ಬಿಲಾಲ್ ಶೇಖ್

ಮಳೆ ನಾಡಿನ ಕಾನನದ ಹೂವು ಸೀತಾಳೆ. ಇದು ಒಂದು ಆರ್ಕಿಡ್ ಪ್ರಭೇಧವಾಗಿದ್ದು, ಇದರ ವೈಜ್ಞಾನಿಕ ಹೆಸರು Rhynchostylis retusa. ಧರೆಗೆ ಮಳೆ ಸುರಿಯಲು ಪ್ರಾರಂಭವಾಗಿದ್ದ ಮಳೆಗೆ ಸ್ವಾಗತಿಸಲು ಈ ಸೀತಾಳೆ ಹೂವುಗಳು ಎಲ್ಲೆಡೆ ಅರಳಿ ಕಾಡಿನ ಸೊಬಗನ್ನು ಹೆಚ್ಚಿಸುತ್ತದೆ. ನೋಡಲು ಬಿಳಿ – ನೇರಳ ಅಥವಾ ಬಿಳಿ – ಕಂದು ಬಣ್ಣಗಳ ಮಿಶ್ರಿತವಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ, ಹೂವಿನ ಗುಂಚಲುಗಳು ಯಾರೋ ಇದನ್ನು ಕೈಯಿಂದ ಮಾಲೆಗಳನ್ನಾಗಿ ಮಾಡಿ ತೂಗಿ ಬಿಟ್ಟಂತೆ ಕಾಣುತ್ತದೆ. ಇದಕ್ಕೆ ಸಾಮಾನ್ಯವಾಗಿ ಸ್ಥಳಿಯರು ಸೀತಾದಂಡೆ […]

ಪಂಜು-ವಿಶೇಷ

ಅಬ್ಬಾ…..ಆ ದಿನಗಳು: ಸರ್ವಮಂಗಳ ಜಯರಾಂ

ಹೆಣ್ಣು ಗರ್ಭ ಧರಿಸಿ 9 ತಿಂಗಳು ತನ್ನ ಉದರದಲ್ಲಿ ಮಗುವನ್ನು ಪೋಷಿಸಿ ಸುರಕ್ಷಿತವಾಗಿ ಭುವಿಗೆ ತರುವಲ್ಲಿನ ಪ್ರಕ್ರಿಯೆ ಆ ದಿನಗಳಲ್ಲಿ ಆಕೆಯ ಅನುಭವಗಳು ಹೇಳತೀರದು, ಯಾವುದೇ ಆಹಾರ ಪದಾರ್ಥಗಳನ್ನು ಕಂಡರೂ ಅದರಲ್ಲೂ ಎಣ್ಣೆ ಪದಾರ್ಥಗಳು , ಬೋಂಡಾ, ಬಜ್ಜಿ ಕರಿಯುವಾಗ, ಸಾಂಬಾರಿಗೆ ಬೇಳೆ ಬೇಯಿಸುವಾಗ ಹೊಟ್ಟೆ ತೊಳಸಿದಂತಾಗಿ ವಾಂತಿ ಉಮ್ಮಳಿಸಿ ಬಂದು ಊಟದ ಮೇಲೆ ವಿರಕ್ತಿ ಬಂದುಬಿಡುತ್ತದೆ ತಟ್ಟೆಯಲ್ಲಿ ಊಟ ಇಟ್ಟುಕೊಂಡು ಕುಳಿತೆವೆಂದರೆ ಹಿಂದೆಯೇ ಎದ್ದು ಹೋಗಿ ವಾಂತಿ ಮಾಡಿ ಬರಬೇಕಾಗುತ್ತದೆ. ಏಕೆಂದರೆ ಊಟದ ವಾಸನೆ ಮೂಗಿಗೆ […]

ಪ್ರಕಟಣೆ

ಸಮಾಜಮುಖಿ ಯುವ ಪ್ರಬಂಧ ಸ್ಪರ್ಧೆಗೆ ಲೇಖನಗಳ ಆಹ್ವಾನ

ಕನ್ನಡದ ಹೊಸ ಪೀಳಿಗೆಯ ಆಲೋಚನೆ ಮತ್ತು ಬರವಣಿಗೆಯನ್ನು ಉದ್ದೀಪಿಸುವ ಉದ್ದೇಶದಿಂದ ಬೆಂಗಳೂರಿನ ಸಮಾಜಮುಖಿ ಪ್ರಕಾಶನ 16 ರಿಂದ 32 ವಯಸ್ಸಿನ ಯುವಕ-ಯುವತಿಯರಿಗಾಗಿ ‘ಯುವ ಪ್ರಬಂಧ ಸ್ಪರ್ಧೆ’ ಏರ್ಪಡಿಸಿದೆ. ಆಯ್ಕೆಯಾದ ಐದು ಪ್ರಬಂಧಗಳಿಗೆ ತಲಾ ರೂ.5,000 ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು. 10 ಉತ್ತಮ ಪ್ರಬಂಧಗಳು ಸಮಾಜಮುಖಿ ಪತ್ರಿಕೆಯ ನವೆಂಬರ್ 2023ರ ಸಂಚಿಕೆಯಲ್ಲಿ ಪ್ರಕಟವಾಗಲಿವೆ. ಕರ್ನಾಟಕದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಭಾಷಿಕ, ರಾಜಕೀಯ ಕ್ಷೇತ್ರದಲ್ಲಿನ ಬದಲಾವಣೆ ಗುರುತಿಸುವ ಅಥವಾ ಬದಲಾವಣೆ ಬಯಸುವ ಪ್ರಬಂಧವಾಗಿರಬೇಕು. ಪ್ರಬಂಧ 1,600 […]

ಕಥಾಲೋಕ

ಗೆಸ್ಟ್ ಫ್ಯಾಕಲ್ಟಿ: ಪ್ರಶಾಂತ್ ಬೆಳತೂರು

ಸರಗೂರು ಪಟ್ಟಣಕ್ಕೆ ಹೊಂದಿಕೊಂಡಂತಿರುವ ನಿಲುವಾಗಿಲಿನ ನಮ್ಮ ಚೆಲುವಕೃಷ್ಣನು ಬಾಲ್ಯದಿಂದಲೂ ಓದಿನಲ್ಲಿ ಮುಂದಿದ್ದವನು. . ! ಆದರೆ ರಾಯರ ಕುದುರೆ ಬರುಬರುತ್ತಾ ಕತ್ತೆಯಾಯಿತು ಎನ್ನುವ ಹಾಗೆ ಅದೇಕೋ ಎಸ್. ಎಸ್. ಎಲ್. ಸಿ. ಯಲ್ಲಿ ಅವನು ಗಾಂಧಿ ಪಾಸಾದ ಕಾರಣ ಅನಿವಾರ್ಯವೆಂಬಂತೆ ಪಿಯುಸಿಯಲ್ಲಿ ಕಲಾವಿಭಾಗಕ್ಕೆ ದಾಖಲಾಗಬೇಕಾಯಿತು. ಅಲ್ಲೂ ಕೂಡ ಆರಕ್ಕೇರದ ಮೂರಕ್ಕಿಳಿಯದ ಅವನ ಸರಾಸರಿ ಅಂಕಗಳು ಶೇ ೪೦ ಕೂಡ ದಾಟಲಿಲ್ಲ. . ! ಪದವಿ ಕೂಡ ಇದರ ಮುಂದುವರಿದ ಭಾಗದಂತೆ ಮುಕ್ತಾಯಗೊಂಡಿತ್ತು. . ! ಮುಂದೇನು ಎಂದು […]

ನಟ್ಟು ಕಾಲಂ

ಹೊಸ ತಲೆಮಾರುಗಳ ತಲ್ಲಣಗಳ ಗುಚ್ಛ “ಕಾಜೂ ಬಿಸ್ಕೆಟ್”: ಡಾ. ನಟರಾಜು ಎಸ್ ಎಂ

ಗೋಡಂಬಿಯು ನನ್ನ ಇಷ್ಟದ ಡ್ರೈ ಫ್ರೂಟ್ ಆದ ಕಾರಣಕ್ಕೂ, ಅದರ ಸ್ವೀಟ್ ನೆಸ್ ನ ಕಾರಣಕ್ಕೂ “ಕಾಜು ಬಿಸ್ಕೆಟ್” ಎಂಬ ಒಂದೊಳ್ಳೆ ಟೈಟಲ್ ಇರುವ ಪುಸ್ತಕ ಕಣ್ಣಿಗೆ ಬಿದ್ದಾಗ ಒಂತರಾ ಆಕರ್ಷಣೀಯ ಅನಿಸಿತು. ಲೇಖಕರು ಪುಸ್ತಕ ಕೊಳ್ಳಲು ಲಿಂಕ್ ಗಳನ್ನು ಎಫ್ ಬಿ ಯಲ್ಲಿ ನೀಡಿದ್ದರಾದರೂ ಚೆಕ್ ಔಟ್ ಮಾಡುವ ವೇಳೆ ಪುಸ್ತಕದ ಬೆಲೆಗಿಂತ ಹೆಚ್ಚು ಹಣ ಕೊಡಬೇಕಾದ ಕಾರಣಕ್ಕೆ ಪರಿಚಯವಿರುವ ಪುಸ್ತಕ ಮಾರಾಟಗಾರರಿಂದ ಪುಸ್ತಕ ತರಿಸಿಕೊಂಡೆ. “ಕಾಜೂ ಬಿಸ್ಕೆಟ್’ ಕಿರಣ್ ಕುಮಾರ್ ಕೆ ಆರ್ ರವರ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ನಿನಗೆಂದೇ ಮುಡಿಪಿಟ್ಟ ಕನಸುಗಳಿವು… ನಿನಗೆಂದೇ ಮುಡಿಪಿಟ್ಟ ಕನಸುಗಳಿವುಮೌನದ ಜಾಡಿಯೊಳಗಿಟ್ಟು ಕಾಯುತಿರುವೆಒಲವಿನ ಅಗ್ನಿಸ್ಪರ್ಶದಿಂದವುಗಳನುನನಸು ಮಾಡುತ ಬದುಕಿ ಬಾಳಬೇಕು ಹರೆಯ ತಂದೆಸೆದ ಚೆಲುವಿನ ಸುರಹೊನ್ನೆತೆರೆಯುತ ತನ್ನೆಲ್ಲ ಕಂಪ ಸೂಸುತಲಿಧರೆಯ ಸಿರಿಯಂತೆ ಬದುಕ ತುಂಬುತಲಿಮರೆಯಲಾಗದಂತಹ ಚಣಗಳಾಗಬೇಕು ಕಬ್ಬಿನೊಳಗಾ ಸಿಹಿ ರಸದೊಳಿರುವಂತೆತಬ್ಬಿದಂತೆ ಲತೆತರುವನೆಳಸಿ ಅದುವೇಹಬ್ಬಲಿಬ್ಬರೊಳಗವಿತು ಕುಳಿತಂತೆ ಪ್ರೀತಿಇಬ್ಬರೊಳಗೂ ಹದವಾಗಿ ಪ್ರೇಮ ಅರಳಬೇಕು ಎಲ್ಲರೊಳಗೊಂದಾಗಿರುತೆಲ್ಲವನು ಸ್ವೀಕರಿಸಿಇಲ್ಲಸಲ್ಲದ ನೆವವ ಪ್ರೀತಿಗೆಂದೆಳಸಿ ನಿನ್ನನಲ್ಲನಾಗುತಲಿರಲು ಹೃದಯದೊಳಗೊಲುಮೆನಿಲ್ಲದೆಯೆ ನಿತ್ಯದಿ ಜಿನುಗಬೇಕು -ಸಚಿನ್‌ಕುಮಾರ ಬ.ಹಿರೇಮಠ ನಾನಾಗಲಾರೆ ನಿನ್ನಂತೆ ನಾನಾಗಬೇಕೇಖಂಡಿತ ಇಲ್ಲನಿನ್ನ ಸುಳ್ಳು ನನಗೆ ಬೇಕಿಲ್ಲಸುಳ್ಳಿನ ಅರಮನೆ ನನಗಲ್ಲಕನಸುಗಳ ಹಾರ ಬೇಡವೇ ಬೇಡಹುಸಿನಗೆಯ […]

ಕಾವ್ಯಧಾರೆ

ಗಝಲ್: ಸುಜಾತಾ ರವೀಶ್, ಜೊನ್ನವ (ಪರಶುರಾಮ ಎಸ್ ನಾಗೂರ್)

ಗಝಲ್ ಸುಡುವ ಸಂಕಟ ಎದೆಯ ಹಿಂಡಲು ಮನಸು ಮುರಿಯದೇ ಸಖಾಕಾಡುವ ನೆನಪು ಹೃದಯ ದಹಿಸಲು ಕಂಬನಿ ಸುರಿಯದೇ ಸಖಾ ಮಿಡಿವ ಕರುಳಿದು ಕಾಲನ ತಿವಿತಕೆ ಗುರಿಯಾದ ಕಥೆ ಹೇಳಲೇತುಡಿವ ಜೀವವ ಸತತ ನೋಯಿಸಿರೆ ವೇದನೆ ಇರಿಯದೇ ಸಖಾ ನುಡಿವ ಮಾತದು ಚುಚ್ಚುವ ಶರವಾಗಿ ವಿಷವ ಲೇಪಿಸಿದೆ ನೋಡುಹಾಡುವ ಕೋಗಿಲೆ ಗೋಣನು ಕೊಯ್ದಿರೆ ಒಡಲು ಉರಿಯದೇ ಸಖಾ ಬಾಡುವ ಹೂವಿದು ಸೌರಭ ಸೂಸಿದೆ ಸಾರ್ಥಕ್ಯ ಲಭಿಸಿದೆ ಜಗದೆನೋಡುವ ಕಣ್ಣಲ್ಲಿ ಮಾತ್ಸರ್ಯ ಇಣುಕಿರೆ ಬೆಸುಗೆ ಹರಿಯದೇ ಸಖಾ ನೀಡುವ ಕೈಗಳು […]

ಕಥಾಲೋಕ

ನಾಲ್ಕು ಕಿರುಗತೆಗಳು- ಎಂ ನಾಗರಾಜ ಶೆಟ್ಟಿ

ಗೌರವ ಮುನೀರ್​ಮಂಗಳೂರಲ್ಲಿ ಕಾರ್ಯಕ್ರಮವೊಂದಕ್ಕೆ ಬರಲೇ ಬೇಕೆಂದು ಒತ್ತಾಯ ಮಾಡಿದ್ದರಿಂದ ನಾವು ಮೂವರು ಗೆಳೆಯರು ಕಾರಲ್ಲಿ ಹೊರಟಿದ್ದೆವು. ಕಾರು ನನ್ನದೇ. ದೀರ್ಘ ಪ್ರಯಾಣದಿಂದ ಸುಸ್ತಾಗುತ್ತದೆ, ಡ್ರೈವಿಂಗ್ ಮಾಡುತ್ತಾ ಗೆಳೆಯರೊಂದಿಗೆ ಹರಟುವುದು ಕಷ್ಟವೆಂದು ಡ್ರೈವರ್​ಗೆ ಹೇಳಿದ್ದೆ. ಆತ ಪರಿಚಿರೊಬ್ಬರ ಖಾಯಂ ಡ್ರೈವರ್​. ಕೊಹ್ಲಿ ಸ್ಟೈಲಲ್ಲಿ ದಾಡಿ ಬಿಟ್ಟಿದ್ದ ಹಸನ್ಮುಖಿ ಯುವಕ.ಅವನನ್ನು ಗಮನಿಸಿದ ಗೆಳೆಯರೊಬ್ಬರು, “ಕ್ರಿಕೆಟ್​ನೋಡುತ್ತೀಯಾ?” ವಿಚಾರಿಸಿದರು.“ಬಿಡುವಿದ್ದಾಗ ನೋಡುತ್ತೇನೆ ಸಾರ್​, ಕಾಲೇಜಲ್ಲಿ ಕ್ರಿಕೆಟ್​ಆಡುತ್ತಿದ್ದೆ”“ಕಾಲೇಜಿಗೆ ಹೋಗಿದ್ದಿಯಾ?” ಆಶ್ಚರ್ಯ ವ್ಯಕ್ತಪಡಿಸಿದ ಮತ್ತೊಬ್ಬ ಗೆಳೆಯ “ಏನು ಓದಿದ್ದೆ?” ಕೇಳಿದರು.“ಬಿಎಸ್ಸಿ ಆಗಿದೆ ಸಾರ್”​ಕೂಲಾಗಿ ಹೇಳಿದ.“ನಿಮ್ಮ ಭಾಷಣಕ್ಕೆ ಇಲ್ಲೇ […]

ಕಥಾಲೋಕ

ನಾಲ್ಕಾರು ನ್ಯಾನೋ ಕತೆಗಳು: ವೃಶ್ಚಿಕ ಮುನಿ (ಪ್ರವೀಣಕುಮಾರ ಸುಲಾಖೆ)

ಗಂಜಿ ಕತೆ ತೀರಾ ದೊಡ್ಡದಾಗಿರದೆ ನಾಲ್ಕೈದು ಸಾಲುಗಳಲ್ಲಿ ಕತೆ ಆಶಯವನ್ನು ಪರಿಣಾಮಕಾರಿಯಾಗಿ ಬಿಂಬಿತವಾಗಿದ್ದರೆ ಅದು ಮನಸಿಗೆ ಇಳಿದು ಬಹುಕಾಲ ಉಳಿಯುತ್ತದೆ ಎನ್ನುವ ತತ್ವ ನಂಬಿ ಇಂತಹ ಎರಡು ದಿನಗಳಿಂದ ಕತೆ ಬರೆಯಲು ಒದ್ದಾಡುತ್ತಿದ್ದ ಹೊಸ ಕತೆಗಾರನಿಗೆ ಹೇಗೋ ಎರಡು ಬಾರಿ ತನ್ನ  ನೆಚ್ಚಿನ ಜಾಗಕ್ಕೆ ಹೋಗಿ ಕುಳಿತು ಬರೆಯಲು ಪ್ರಯತ್ನಿಸುತ್ತಿದ್ದ, ಒಂದೇ ಒಂದು ಸಾಲು ಹೊರಬಂದಿರಲಿಲ್ಲ. ಆದರೆ ಪಕ್ಕದ ಮನೆಯ ರಂಗವ್ವ ಮನೆಗೆ ಬಂದು ಎರಡು ದಿನ ಆಯಿತು ಯಾವುದೇ ಕೆಲಸ ಇಲ್ಲ. ಊಟಕ್ಕೆ ಸರಿಯಾಗಿ ದಿನಸಿಯೂ […]

ಸಿನಿಮಾ

ದೃಶ್ಯಕಾವ್ಯವಾಗಿ ಗಮನ ಸೆಳೆಯುವ ಸಿನಿಮಾ-ಕೋಳಿ ಎಸ್ರು: ಚಂದ್ರಪ್ರಭ ಕಠಾರಿ

ತಮ್ಮ ಚೊಚ್ಚಲ ನಿರ್ದೇಶನದ ʼಅಮ್ಮಚ್ಚಿಯೆಂಬ ನೆನಪುʼ ಸಿನಿಮಾದ ಸುಮಾರು ನಾಲ್ಕು ವರುಷಗಳ ನಂತರ ಚಂಪಾ ಪಿ ಶೆಟ್ಟಿಯವರು ʼಕೋಳಿ ಎಸ್ರುʼ ಸಿನಿಮಾವನ್ನು, ಏಪ್ರಾನ್‌ ಪ್ರೊಡಕ್ಷನ್‌ ನಿರ್ಮಾಣದಲ್ಲಿ ತೆರೆಗೆ ತಂದಿದ್ದಾರೆ. ಸಾರ್ವಜನಿಕರಿಗೆ ಚಿತ್ರಮಂದಿರದಲ್ಲಿ ಇನ್ನೂ ಬಿಡುಗಡೆಯಾಗುವ ಮುಂಚೆಯೇ ಕೋಳಿ ಎಸ್ರು, ದೇಶ ವಿದೇಶಗಳಲ್ಲಿ ಜರುಗುತ್ತಿರುವ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತ, ಹಲವು ಪ್ರಶಸ್ತಿಗಳನ್ನು ಪಡೆದು ಸಿನಿಪ್ರಿಯರಲ್ಲಿ ಕುತೂಹಲ ಉಂಟು ಮಾಡುತ್ತಿದೆ. ಚಂಪಾ ಪಿ ಶೆಟ್ಟಿಯವರ ಮೊದಲ ಚಿತ್ರವು ವೈದೇಹಿಯವರು ಬರೆದ ಕತೆಯನ್ನಾಧರಿಸಿದ್ದರೆ, ಕೋಳಿ ಎಸ್ರು ಕಾ.ತ. ಚಿಕ್ಕಣ್ಣ ಅವರ ʼಹುಚ್ಚೇರಿಯ ಎಸರಿನ […]

ಕಾವ್ಯಧಾರೆ

ಮೂರು ಕವಿತೆಗಳು: ಶಕುಂತಲಾ ಬರಗಿ

ಹಠ ತೊಟ್ಟಿದ್ದೇನೆ ಮನುಷ್ಯಳಾಗಿ ಇರುವ ಆಸೆಗಾಗಿಮಾತು ಮಾತಿಗೂ ಚಲ್ಲು ಚಲ್ಲು ಆಡುವವರ ಮಧ್ಯೆಡೌಲು ಡೌಲು ನಡತೆ ಇರುವವರ ಮಧ್ಯೆಈ ಹೈಲು ಫೈಲು ಮಂದಿ ನಡುವೆನನ್ನತನದ ಹೋರಾಟಕ್ಕೆ ಬದ್ಧಳಾಗಿದ್ದೇನೆ. ಅಂಕುಡೊಂಕು ನೂರು ಒನಪಿಗೆಚುಚ್ಚುವ ಕೊಂಕುಮಾತುಗಳ ನಡುವೆಮಂಕು ಕವಿದ ನೂರು ಪ್ರಶ್ನೆಗೆನಾನು ಮೌನ ತವಸಿಯಾಗಿದ್ದೇನೆ ಸವಾಲು, ಜವಾಬುಗಳ ಝೇಂಕಾರದಲ್ಲಿಸ್ಪರ್ಧೆ, ಪೈಪೋಟಿಗಳ ಆಳದಲ್ಲಿಕೊಂಕು-ಡೊಂಕುಗಳ ವ್ಯವಸ್ಥೆಯಲ್ಲಿಶಾಂತವಾಗಿ ಸೋಲಿಸುತ್ತೇನೆ ಅವರಿವರನ್ನು ಒಪ್ಪದ ತಪ್ಪಿದ ವ್ಯವಸ್ಥೆಯ ಭಂಜನದಲ್ಲಿಒತ್ತಿದ ಬಿತ್ತಿದ ಉಳು ಗೊಬ್ಬರದಲ್ಲಿಅಸತ್ಯದ, ಅಧರ್ಮದ ಲೋಕದಲ್ಲಿಮನುಷ್ಯಳಾಗೇ ಇರುವ ಹಠ ತೊಟ್ಟಿದ್ದೇನೆ. ದೀಪಾವಳಿ ಮಾಡಬೇಕೆಂದಿದ್ದೇನೆ ದೀಪಾವಳಿ ಮಾಡಬೇಕೆಂದಿದ್ದೇನೆಎನ್ನ ಮನವನೊಮ್ಮೆ […]

ಲೇಖನ

ಮಾಮನ್ನನ್‌ ಎನ್ನುವ ಕಹಿ ಮದ್ದು: ಎಂ ನಾಗರಾಜ ಶೆಟ್ಟಿ

`ಸಿನಿಮಾ ಬಿಡುಗಡೆಯಾದ ಎರಡನೇ ವಾರದಲ್ಲಿ ಚಿತ್ರ ನೋಡುವುದು ಮತ್ತು ಅದರ ಬಗ್ಗೆ ಬರೆಯುವುದು ಕಷ್ಟದ ಕೆಲಸ. ಆಗಲೇ ಹಲವರು ಅದರ ಬಗ್ಗೆ ಬರೆದು-ಹೇಳಿ ಬಿಟ್ಟಿರುತ್ತಾರೆ. ಅವರ ಅಭಿಪ್ರಾಯಗಳು ನಮ್ಮ ತಲೆಯಲ್ಲೂ ನೆಲೆಗೊಂಡು ಬಿಟ್ಟಿರುತ್ತವೆ. ಅದರಿಂದ ಹೊರಬರಲು ಸಾಕಷ್ಟು ತಿಣುಕಬೇಕು. ಕೆಲವು ವಿಮರ್ಶೆಗಳು ಖಂಡಿಸಲೆಂದೇ ಹುಟ್ಟಿಕೊಳ್ಳುತ್ತವೆ! ಕೆಲವರಿಗೆ ಸಿನಿಮಾದ ಅಂತ್ಯವನ್ನು ಹೇಳುವ ಆತುರ. ಇದರಿಂದ ಚಿತ್ರದ ರಸಾಸ್ವಾದನೆಗೆ ಖಂಡಿತ ಧಕ್ಕೆಯಾಗುತ್ತದೆ. ʼಮಾಮನ್ನನ್‌ʼ ನೋಡಿದಾಗ ನನಗೂ ಅದೇ ಆಯಿತು. ಪುಣ್ಯವಶಾತ್‌ ನೋಡುವಂತಿಲ್ಲವೆಂದು ಯಾರೂ ಹೇಳಿರಲಿಲ್ಲ. ʼಪೆರಿಯೇರುಂ ಪೆರುಮಾಳ್‌ʼ ʼಕರ್ಣನ್‌ʼ ಚಿತ್ರದ […]

ಕಥಾಲೋಕ

ಆಗಸ್ಟ್ ಹದಿನೈದು: ಎಫ್.ಎಂ.ನಂದಗಾವ್

ಜುಲೈ ಕಳೆಯಿತು ಅಂದರೆ, ಅದರ ಹಿಂದೆಯೇ, ಆಗಸ್ಟ್ ತಿಂಗಳು ಬರುತ್ತಿದೆ. ಅದರೊಂದಿಗೆ ಆಗಸ್ಟ್ ಹದಿನೈದು ಬರುತ್ತದೆ. ಆಗಸ್ಟ್ ಹದಿನೈದು ನಮ್ಮ ದೇಶ ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಹೊಂದಿ ಸ್ವತಂತ್ರ ದೇಶವಾದ ದಿನ. ದೇಶದ ಪ್ರಜೆಗಳೆಲ್ಲರೂ ಸಂಭ್ರಮಿಸುವ ದಿನ. ಆದರೆ ನನ್ನ ಪಾಲಿಗದು ಸಿಹಿಕಹಿಗಳ ಸಂಗಮ. ಕಹಿ ಮತ್ತು ಸಿಹಿಗಳ ಹುಳಿಮಧುರ ಸವಿ ನೆನಪುಗಳ ಮಾವಿನ ಬುಟ್ಟಿಗಳನ್ನು ಹೊತ್ತು ತರುವ ದಿನ. ಅಂದು ಒಂದು ದಿನವೆಲ್ಲಾ ಪೊಲೀಸ್ ಠಾಣೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೆ. ಮಾಡದ ತಪ್ಪಿಗೆ, ಅವಮಾನವನ್ನು ಅನುಭವಿಸಬೇಕಾಯಿತು. ಆದರೆ, […]