‘ಫಣಿಯಮ್ಮ’ ಕಾದಂಬರಿ ಮತ್ತು ಸಿನಿಮಾ : ಒಂದು ಕಥೆ ಎರಡು ದೃಷ್ಟಿ: ಡಾ. ಸುಶ್ಮಿತಾ ವೈ.

ಎಂ.ಕೆ. ಇಂದಿರಾ ಅವರ ‘ಫಣಿಯಮ್ಮ’ ಕಾದಂಬರಿಯನ್ನು ಆಧರಿಸಿ ರಚನೆಯಾದ ‘ಫಣಿಯಮ್ಮ’ ಸಿನಿಮಾ ೧೯೮೩ರಲ್ಲಿ ಬಿಡುಗಡೆಯಾಗಿದೆ. ಫಣಿಯಮ್ಮ ಸಿನಿಮಾದ ಯಶಸ್ಸಿಗೆ ಮುಖ್ಯವಾಗಿ ಕಾದಂಬರಿಯ ಕಥೆ ಹಾಗೂ ವಸ್ತುವೇ ಕಾರಣವಾದರೂ ಪ್ರೇಮಾ ಕಾರಂತರ ಚಿತ್ರಕತೆ ರಚನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ ಕಾದಂಬರಿಯ ಅರ್ಥ ವಿಸ್ತಾರತೆಯನ್ನು ಸಾಧಿಸಿತು. ಸಿನಿಮಾ ಅನಕ್ಷರಸ್ಥರನ್ನೂ ತಲುಪಿ ಸಂಚಲನವನ್ನುಂಟು ಮಾಡಿತು. ಇಲ್ಲಿ ನಿರ್ದೇಶಕಿಯ ಮುಖ್ಯ ಗಮನವಿರುವುದು ಫಣಿಯಮ್ಮನ ಜೀವನದ ಕಥೆಯ ಜೊತೆಗೆ ಬ್ರಾಹ್ಮಣ ಸಮುದಾಯವು ಮಹಿಳೆಯರನ್ನು, ಅದರಲ್ಲೂ ವಿಧವೆಯರನ್ನು ವ್ಯವಸ್ಥಿತವಾಗಿ ಶತಮಾನಗಳಿಂದ ಶೋಷಿಸುತ್ತ ಬಂದಿದ್ದನ್ನು ಹೇಳುವುದು … Read more

ದಿಕ್ಕುಗಳು (ಭಾಗ ೧): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅನುಶ್ರೀಯ ತಾಯಿಯ ಖಾಯಿಲೆ ಗುಣ ಆಗಲಿಲ್ಲ. ಸಕ್ಕರೆ ಕಾಯಿಲೆ ಪೀಡಿತಳಾಗಿದ್ದ ಆಕೆಯ ಕಾಲಿಗೆ ಏನೇನೋ ಔಷಧ ಕೊಡಿಸಿದರೂ ಗಾಯ ಮಾಯಲೇ ಇಲ್ಲ. ಏಳೆಂಟು ವರ್ಷಗಳಿಂದ ಕೀವು ಸೋರಿ ಸೋರಿ ಶಾಂತಮ್ಮ ಕಡ್ಡಿಯಂತಾಗಿದ್ದಳು. ಕೊನೆಗೂ ಆ ದಿನ ಆಕೆಯ ಜೀವ ಹಾಸಿಗೆಯಲ್ಲೇ ಹೋಗಿತ್ತು. ತಾಯಿಗೆ ಮಣ್ಣು ಕೊಟ್ಟು ಮನೆಗೆ ಬಂದ ಅನುಶ್ರೀಗೆ ಜೀವನ ಶೂನ್ಯವೆನ್ನಿಸಿತ್ತು. “ಜಡ್ಡಾಗ್ಲಿ ಜಾಪತ್ರಾಗ್ಲಿ ಅವ್ವ ಇರಬೇಕಾಗಿತ್ತು” ಅಂತ ಮೊಣಕಾಲ ಮೇಲೆ ಮುಖವಿರಿಸಿಕೊಂಡು ಹುಡುಗಿ ಕಂಬನಿ ಸುರಿಸುತ್ತಾ ಇತ್ತು. ಆಜೂಬಾಜೂದವರು ಹೇಳುವಷ್ಟು ಸಮಾಧಾನ ಹೇಳಿದರು. ನಿಧಾನಕ್ಕೆ … Read more

ಪಂಜು ಕಾವ್ಯಧಾರೆ

ಋಣಿಯಾಗಿರು ಹೆತ್ತವಳು ಹಣ್ಣಣ್ಣು ಬದುಕಿಯಾದಾಗಅಕ್ಕರೆಯಿಂದಿರು ಸಾಕು…ಹಾಲುಣಿಸಿ ಋಣ ತೀರಿಸುವುದು ಬೇಕಿಲ್ಲ. ಹೆತ್ತವಳು ಮುಪ್ಪಾಗಿ ಹೊಟ್ಟೆ ಹಸಿದಾಗಚೂರು ಅನ್ನವನಿಡು ಸಾಕು….ತುತ್ತುಣಿಸಿ ಋಣ ತೀರಿಸುವುದು ಬೇಕಿಲ್ಲ. ಹೆತ್ತವಳ ಕೈ ಕಾಲಿಗೆ ಶಕ್ತಿ ಇಲ್ಲದಿದ್ದಾಗಕೈಕೋಲು ಕೊಡು ಸಾಕು…..ಬೆರಳಿಡಿದು ನಡೆಸಿ ಋಣ ತೀರಿಸುವುದು ಬೇಕಿಲ್ಲ. ಹೆತ್ತವಳು ದುಃಖದ ಕಣ್ಣೀರಿಡುವಾಗಅವಳ ಕಣ್ಣೆದುರಿರು ಸಾಕು….ಚಂದ್ರನ ತೋರಿಸಿ ಋಣ ತೀರಿಸುವುದು ಬೇಕಿಲ್ಲ. ಹೆತ್ತವಳು ವೃದ್ದೆಯಾಗಿ ಹಾಸಿಗೆ ಹಿಡಿದಾಗಚಾಪೆ ಚಾದರ ನೆಲಕಾಸು ಸಾಕು….ಜೋಗುಳದೊಳು ಮಲಗಿಸಿ ಋಣ ತೀರಿಸುವುದು ಬೇಕಿಲ್ಲ. -ಮೈನು ಐ.ಬಿ.ಎಮ್ ಬಾಳುತಿರು ನಶ್ವರದ ಜೀವನದಲಿ ನನ್ನದು ನನ್ನದೆಂದುನಾಚಿಕೆ … Read more

“ಎಸ್ತರ್ ಅವರ ‘ನೆನಪು ಅನಂತ”: ಡಾ. ಎಚ್. ಎಸ್. ಸತ್ಯನಾರಾಯಣ

ಅಕ್ಷರ ಪ್ರಕಾಶನದವರು ಶ್ರೀಮತಿ ಎಸ್ತರ್ ಅವರು ತಮ್ಮ ಪತಿ ಅನಂತಮೂರ್ತಿಯವರ ಬಗ್ಗೆ ಹಂಚಿಕೊಂಡ ನೆನಪಿನ ಮಾಲೆಯನ್ನು ‘ನೆನಪು ಅನಂತ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದಾರೆ. ಎಸ್ತರ್ ಅವರ ನೆನಪುಗಳನ್ನು ಬರಹ ರೂಪಕ್ಕಿಳಿಸಿದವರು ಪತ್ರಕರ್ತರೂ ಲೇಖಕರೂ ಆದ ಶ್ರೀ ಪೃಥ್ವೀರಾಜ ಕವತ್ತಾರು ಅವರು. ನಿರೂಪಣೆಯೇ ಈ ಪುಸ್ತಕದ ಶಕ್ತಿ. ಎಸ್ತರ್ ಅವರು ಹೇಳುತ್ತಾ ಹೋದುದ್ದನ್ನು ಬರಹದ ಸೂತ್ರಕ್ಕೆ ಒಗ್ಗಿಸುವುದು ಸುಲಭದ ಕೆಲಸವಲ್ಲ. ಎಸ್ತರ್ ಅವರ ವ್ಯಕ್ತಿತ್ವದ ಅನಾವರಣಕ್ಕೆ ಸ್ವಲ್ಪವೂ ಧಕ್ಕೆಬಾರದಂತೆ ಸೊಗಸಾಗಿ ನಿರೂಪಿಸಿರುವ ಪೃಥ್ವೀರಾಜ ಕವತ್ತೂರು ಅವರನ್ನು ಮೊದಲಿಗೆ ಅಭಿನಂದಿಸಿ … Read more

ಪುರಾಣ ಪರಿಕರಗಳು ಮತ್ತು ಚರಿತ್ರೆಯ ನಿರಚನೆ: ಸಂಗನಗೌಡ ಹಿರೇಗೌಡ

[ಎಚ್.ಎಸ್.ಶಿವಪ್ರಕಾಶರ ಮಹಾಚೈತ್ರ, ಮಂಟೆಸ್ವಾಮಿ, ಮಾದಾರಿ ಮಾದಯ್ಯ ನಾಟಕಗಳನ್ನು ಅನುಲಕ್ಷಿಸಿ] ಹನ್ನೆರಡನೇ ಶತಮಾನದಲ್ಲಿ ಶರಣರು ಸನಾತನದ ಒಂದಷ್ಟು ಎಳೆಗಳಿಂದ ಬಿಡಿಸಿಕೊಂಡು ವಿನೂತನದೆಡೆಗೆ ಹೊರಳಿದ್ದು ಈಗಾಗಲೇ ಚರಿತ್ರೆಯಲ್ಲಿ ದಾಖಲಾಗಿದೆ. ಅಂಥ ವಿನೂತನಕ್ಕೆ ಬರಗುಗೊಂಡ ಹರಿಹರ, ಚಾಮರಸ, ಪಾಲ್ಕುರಿಕೆ ಸೋಮನಾತ, ಬೀಮ ಕವಿಯನ್ನೂ ಒಳಗೊಂಡು ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಸಾಹಿತ್ಯದ ಮೇಲೆ ದಟ್ಟ ಪ್ರಭಾವವಾದ್ದರಿಂದ ಕನ್ನಡ ಸೃಜನಶೀಲ ಬರೆಹಗಾರರು ಮತ್ತೆ ಮತ್ತೆ ಆ ಕಾಲಕ್ಕೆ ತಿರುಗಿ ನೋಡುವಂತಾಯಿತು. ಹಾಗಾಗಿಯೇ ಕನ್ನಡ ಸಾಹಿತ್ಯದಲ್ಲಿ ಅನೇಕ ನಾಟಕಗಳು ಹಾಗೂ ಕಾದಂಬರಿಗಳು, ಕವಿತೆಗಳು … Read more

‘ಸಾಹಿತ್ಯದ ‘ರೂಪದರ್ಶಿ’: ಡಾ. ಭರತ್ ಭೂಷಣ್. ಎಮ್

ಕನ್ನಡದ ಪ್ರಖ್ಯಾತ ಪುಸ್ತಕಗಳಲ್ಲೊಂದಾದ ಕೆ.ವಿ.ಐಯ್ಯರ್ ವರ ಅವರ “ರೂಪದರ್ಶಿ” ನಾನು ಅಕಸ್ಮಾತಾಗಿ ಓದಿದ ಪುಸ್ತಕ. ಅದು ನನ್ನನ್ನು ಎಷ್ಟು ಪ್ರಭಾವಿಸಿತ್ತೆಂದರೆ, ಅಲ್ಲಿಂದ ಇಲ್ಲಿಯವರೆಗಿನ ಸುಮಾರು 350 ಕ್ಕೂ ಹೆಚ್ಚು ಕನ್ನಡ ಪುಸ್ತಕಗಳ ಓದಿಗೆ ಮುನ್ನುಡಿ ಇಟ್ಟು, ಚಾರಣ, ನಾಟಕ ಹಾಗೂ ಪುಸ್ತಕಗಳ ಒಡನಾಟದಿಂದ ನನ್ನ ಜೀವನದ ಏಳು-ಬೀಳುಗಳಿಗೆ ಸಮಾಧಾನ ನೀಡಿ ಈಗಲೂ ಸಾಹಿತ್ಯದ ಚಟುವಟಿಗಳಿಗೆ ಭಾಗಿಯಾಗಲು ಪ್ರೇರೇಪಿಸುತ್ತಿರುವ ಪುಸ್ತಕ. ಕನ್ನಡ ಏಕೆ ಜಗತ್ತಿನ ಶ್ರೇಷ್ಠ ಭಾಷೆಗಳಲ್ಲಿ ಒಂದು? ಎನ್ನುವುದನ್ನು ಅರಿಯಲು ಈ ರೀತಿಯ ಬರವಣಿಗೆಯನ್ನು ಎಲ್ಲರೂ ಓದಲೇ … Read more

“ಒಳಿತು ಕೆಡುಕಿನ ದಾರಿಯಲ್ಲಿ ಹೆಣ್ಣಿನ ಗೌಪ್ಯತೆ, ಸೂಕ್ಷ್ಮ ಚಿತ್ರಿಕೆಗಳ ಕಲಾತ್ಮಕ ಕೆತ್ತನೆ”: ಎಂ.ಜವರಾಜ್

ಯುವ ಕಥೆಗಾರ್ತಿ ಎಡಿಯೂರು ಪಲ್ಲವಿ ಅವರ “ಕುಂಡದ ಬೇರು” ಕಥಾ ಸಂಕಲನದ ಕಥೆಗಳ ಕಡೆ ಕಣ್ಣಾಡಿಸಿದಾಗ ಇದು ಇವರ ಮೊದಲ ಕಥಾ ಸಂಕಲನವೇ..? ಅನಿಸಿದ್ದು ಸುಳ್ಳಲ್ಲ! ಚ.ಸರ್ವಮಂಗಳ ಅವರು “ಅಮ್ಮನ ಗುಡ್ಡ” ಸಂಕಲನದಲ್ಲಿ ಬ್ರೆಕ್ಟ್ ನ The mask of the demon ನ ಪುಟ್ಟ ಅನುವಾದವೊಂದಿದೆ. ಅದು,“ನನ್ನ ಒಳಮನೆಯ ಗೋಡೆ ಮೇಲೊಂದು ಜಪಾನಿ ಕೆತ್ತನೆ:ಒಬ್ಬ ದುಷ್ಟ ರಾಕ್ಷಸನ ಮುಖವಾಡ.ಹೊಂಬಣ್ಣದ ಅರಗಿನಿಂದ ಮೆರಗಿಸಿರುವ ಮುಖ.ಹಣೆ ಮೇಲೆ ಉಬ್ಬಿರುವ ನರ.ನೋಡ್ತಾ ನೋಡ್ತಾ ಅಯ್ಯೋ ಪಾಪ ಅನ್ನಿಸುತ್ತೆ.ದುಷ್ಟನಾಗಿರೋದಕ್ಕೆ ಎಷ್ಟು ಸುಸ್ತು … Read more

ದಾರಿ ಯಾವುದಯ್ಯ: ಅಂಬಿಕ ರಾವ್

ಪ್ರಯಾಣಕ್ಕೆ ಹೊರಟಾಗ ದಾರಿಯ ಬಗ್ಗೆ ಒಮ್ಮೊಮ್ಮೆ ಗೊಂದಲ ಉಂಟಾಗುತ್ತದೆ. ಆಗ ಸಾಮಾನ್ಯವಾಗಿ ವಾಹನ ನಿಲ್ಲಿಸಿ ಸ್ಥಳೀಯ ಜನರನ್ನು ಅಂಗಡಿಯವರನ್ನು “ ದಾರಿ ಯಾವುದು?” ಎಂದು ಕೇಳುತ್ತೇವೆ. ನಮ್ಮದೇ ನಾಡಾಗಿದ್ದಲ್ಲಿ ನಮ್ಮ ಭಾಷೆಯಲ್ಲಿ ದಾರಿಯನ್ನು ಹೇಳುತ್ತಾರೆ. ಬೇರೆ ಜಾಗಕ್ಕೆ ಹೋದಾಗ ಅವರ ಭಾಷೆಯನ್ನು ಹರುಕು ಮುರುಕಾಗಿ ಉಪಯೋಗಿಸಿ ಅದರೊಂದಿಗೆ ಸಂಗಮ ಭಾಷೆಯನ್ನು ಬಳಸಿ ಕೇಳಬೇಕು. ಅವರು ಹೇಳಿದ ಮಾತು ಅರ್ಥವಾದರೆ ಪುಣ್ಯ, ಇಲ್ಲದಿದ್ದರೆ ಬಂದ ದಿಕ್ಕಿಗೆ ವಾಪಸ್ ಹೋದರು ಹೋಗಬಹುದು!! . ದಾರಿ ತೋರಿಸುವವರನ್ನು ಹಲವಾರು ವಿಧಗಳಿವೆ; ನನ್ನ … Read more

ಅಯ್ಯ..!!: ಡಾ. ಮಂಜುನಾಥ

‘ಲೈ ಮಂಜಾ, ಬಾರ್ಲಾ ಇಲ್ಲಿ ! ‘ ಅಯ್ಯನ ಕೂಗು. ಆಗಷ್ಟೇ ಸ್ಕೂಲಿಂದ ಕುಪ್ಪಳಿಸಿಕೊಂಡು ಬಂದ ನನ್ನ ಕಿವಿ ತಲುಪಿತು. ಒಂದೇ ಉಸುರಿಗೆ ನಡ್ಲುಮನೆಯಲ್ಲಿದ್ದ ಮಂಚದ ಮ್ಯಾಕೆ ಬ್ಯಾಗು ಎಸೆದವನೇ ಅಯ್ಯನ ಹತ್ತಿರ ಓಡೋಡಿ ಹೋದೆ. ನನಗೆ ಗೊತ್ತಿತ್ತು ಅಯ್ಯನ ಹತ್ರ ಹೋದ್ರೆ ಏನಾದ್ರೂ ಸಿಗುತ್ತೆ ಎಂದು. ‘ ಏನಯ್ಯಾ? – ಹೋಗ್ಬುಟ್ಟು ಭೋಜಯ್ಯನ ಅಂಗಡೀಲಿ ಒಂದು ಕಟ್ಟು ನಾಟಿ ಬೀಡಿ ತಗಬಾ ! ಎಂದು ಕೈಗೆ ಒಂದು ರೂಪಾಯಿ ಕೊಡ್ತು. ಒಂದು ರೂಪಾಯಿ ನೋಡಿ ನಿರಾಶೆಯಾಯಿತು. … Read more

ಮೂರು ಕವನಗಳು

ಪ್ರಕೃತಿ ಸೌಂದರ್ಯ ಭೂರಮೆಯ ಅಂದ ಚಂದದ ನೋಟಸವಿಯುವ ಬನ್ನಿ ಪ್ರಕೃತಿಯ ರಸದೂಟಪ್ರಕೃತಿಗೆ ವಿಕೃತಿಯಾಗಿ ಮೆರೆಯ ಬೇಡವೋ ಮರ್ಕಟಸಂಭ್ರಮಿಸೋಣ ಬನ್ನಿ ಪ್ರಕೃತಿಯಔತಣ ಕೂಟ ಧರೆಗಿಳಿದು ಬಂದ ರಮಣಿಯಂತೆನಿನ್ನ ಅರಮನೆಯ ದೃಶ್ಯಕ್ಕೆ ನಾಶರಣಾದಂತೆನೀನು ಹಚ್ಚ ಹಸಿರಿನ ಸೀರೆ ಹುಟ್ಟಂತೆನನ್ನ ನಯನಗಳಿಗೆ ಹಿತವಾದಂತೆ ಬೆಟ್ಟ ಗುಡ್ಡಗಳಿಂದ ಇಳಿದು ಬರುವಜಲಧಾರೆಯ ರೌದ್ರ ನರ್ತನನೋಡುಗರ ಕಣ್ಣಿಗೆ ಸೌಂದರ್ಯದ ದರ್ಶನಪ್ರಾಣಿ ಪಕ್ಷಿಗಳ ವಾಸಸ್ಥಳ ಕಾನನಪ್ರಕೃತಿ ಮತ್ತು ಮಾನವನ ಮಿಲನ ಝರಿ ತೊರೆಗಳಿಂದ ಇಣುಕುವ ಜಲಧಾರೆನೋಡಲು ಹಂಬಲಿಸುತ್ತಿರುವೆನು ಮನಸಾರೆಇಡೀ ಜೀವಸಂಕುಲಕ್ಕೆ ನೀ ಆಸರೆಹಸಿರಿನ ಸೌಂದರ್ಯಕ್ಕೆ ತಲೆಬಾಗಿಸುರಿಯುವುದು ವರ್ಷಧಾರೆ … Read more

”ಹಕ್ಕು ಇದ್ರೆ ನಾವು ಬದುಕುತ್ತೇವಾ ಸಾರ್ ? ”: ನಾಗಸಿಂಹ ಜಿ ರಾವ್

ಒಂದು ವಾರದ ಹಿಂದೆ ಮನೆಗೆ ಬಂದಾಗ, ಎದುರಿನ ತೋಟದಲ್ಲಿ ಏನೋ ಕಾಣೆಯಾಗಿದೆ ಎಂದು ಅನಿಸಿತು. ಕುತೂಹಲವನ್ನು ತಡೆಯಲಾಗದೆ ತೋಟದೊಳಗೆ ನಡೆದು, ಸುತ್ತಲೂ ಕಣ್ಣಾಡಿಸಿದೆ. ಆ ಕ್ಷಣದಲ್ಲಿ ಹೃದಯವೇ ನಿಂತ ಅನುಭವ ಆಯಿತು —ನಮ್ಮ ಪ್ರೀತಿಯ ನಲ್ಲಿಕಾಯಿ ಮರದ ಒಂದು ಭಾಗವನ್ನು ಕತ್ತರಿಸಲಾಗಿತ್ತು. ತೆಂಗಿನ ಮರ ಹಾಗೂ ಹೊಂಗೆಯ ಮರದ ತೋಳಿನಡಿಯಲ್ಲಿ ಹನ್ನೆರಡು ವರ್ಷಗಳಿಂದ ಗಗನಕ್ಕೆ ಎದ್ದು ನಿಂತಿದ್ದ ಆ ಮರದ ಕೊಂಬೆಗಳು ಈಗ ಕಾಂಪೌಂಡ್‌ನಾಚೆಗಿನ ವಿದ್ಯುತ್ ತಂತಿಗೆ ತಾಗದಂತೆ “ಟ್ರಿಮ್” ಮಾಡಲ್ಪಟ್ಟಿದ್ದವು. ಆದರೆ, ಆ ಮರದ ಕತ್ತರಿಯ … Read more

ನೀರಿನ ಪೊಟ್ಟಣಗಳು: ಕೋಡಿಹಳ್ಳಿ ಮುರಳೀ ಮೋಹನ್

ತೆಲುಗು ಮೂಲ: ಗಡ್ಡಂ ದೇವೀ ಪ್ರಸಾದ್ಕನ್ನಡ ಅನುವಾದ: ಕೋಡಿಹಳ್ಳಿ ಮುರಳೀ ಮೋಹನ್ “ತಂಪಾದ ಕುಡಿಯುವ ನೀರು ಪ್ಯಾಕೆಟ್‌ಗಳು”, “ ಚಲ್ಲ ಚಲ್ಲನಿ ನೀಟಿ ಪೊಟ್ಲಾಲು””… ಬಸ್ಸಿನ ನಿಲ್ದಾಣಕ್ಕೆ ಬಂದು ನಿಂತ ದೂರದ ಊರಿನ ಬಸ್ಸಿನ ಸುತ್ತಲೂ ಎಡಗೈಯಲ್ಲಿ ಬಕೆಟ್ ಹಿಡಿದು, ಬಲಗೈಯಲ್ಲಿ ನೀರಿನ ಪ್ಯಾಕೆಟ್‌ಗಳನ್ನು ಮೇಲಕ್ಕೆತ್ತಿ ಹಿಡಿದುಕೊಂಡು ದಾಸಪ್ಪ ಕೂಗುತ್ತಿದ್ದ. ಅಷ್ಟರಲ್ಲಿ ಮತ್ತೊಂದು ಬಸ್ಸು ಬಂದರೆ, ತಕ್ಷಣ ಅದರೊಳಗೆ ಹೋಗಿ ಎರಡು ಭಾಷೆಗಳಲ್ಲಿ ಕೂಗುತ್ತಾ ಹತ್ತು ಪ್ಯಾಕೆಟ್‌ಗಳನ್ನು ಮಾರಿದ.ನೀರಿನ ಪ್ಯಾಕೆಟ್‌ಗಳನ್ನು ಬಕೆಟ್‌ನಲ್ಲಿ ಭತ್ತದ ಹೊಟ್ಟಿರುವ ಐಸ್ ದಿಮ್ಮಿಯ ಹತ್ತಿರ … Read more

ಮೈಸೂರು ಸ್ಯಾಂಡಲ್‌ ಸೋಪ್‌ ರಾಯಭಾರಿ: ಡಾ.ವೃಂದಾ. ಸಂಗಮ್‌

ಮೊನ್ನೆ ನಮ್‌ ಪದ್ದಕ್ಕಜ್ಜಿ ಮುಂಜಾನೆದ್ದು, ಧಡಾ ಭಡಾ ಧಡಾ ಭಡಾ ಮಾಡಲಿಕ್ಕೆ ಹತ್ತಿದ್ದರು. ನಮ್‌ ರಾಯರು ಹಾಸಿಗಿ ಮ್ಯಾಲ ಮಲಕೊಂಡವರು ಒಂಚೂರು ಚೂರೇ ಕಣ್ಣು ಬಿಟ್ಟು ಚಹಾ ಆಗೇದ ಎಳತೀರ್ಯಾ ಅನ್ನೂ ಶಬ್ದಕ್ಕ ಕಾಯತಿದ್ದರು. ಆದರ, ಈ ಬೆಳಕು ಕಣ್ಣು ಚುಚ್ಚಿದರೂ ಪದ್ದಕ್ಕಜ್ಜಿ ಧಡಾಭಡಾ ಮುಗೀಲಿಲ್ಲ. “ಹಂಗಾರ, ಚಹಾ ಇನ್ನೂ ತಡಾ ಅನೂ” ಅಂದರು. “ಇನ್ಯಾಕ, ತಡಾ, ನೀವು ಎದ್ದು, ಇಲ್ಲೆ, ವಾರ್ಡರೋಬ್‌ ಮ್ಯಾಲಿರೋ ಮೈಸೂರು ಪೇಟಾ ತಗದ ಕೊಟ್ಟರೆ, ಚಹಾ ಮಾಡೇಬಿಡತೀನಿ” ಅಂದರು. ರಾಯರಿಗೆ ಆಶ್ಚರ್ಯ, … Read more

“ಪುನರ್ಜನ್ಮದಂತೆ ಪುನರ್ವಸತಿ – ಸಂಗೀತಾಳ ಸಮರ್ಥ ಕಥೆ”: ರಶ್ಮಿ ಎಂ.ಟಿ.

ಸಂಗೀತಾ ಎಂಬ 16 ವರ್ಷದ ಅಂಗವಿಕಲ ಹೆಣ್ಣು ಮಗಳು, ಇವಳಿಗೆ ಪೋಲಿಯೋದಿಂದ ಒಂದು ಕಾಲಿಗೆ ತೊಂದರೆ ಆಗಿದ್ದು ಸರಾಗವಾಗಿ ನಡೆಯಲು ಬರುತ್ತಿರಲಿಲ್ಲ. ಇವಳು ಮೂಲತಃ ತಮಿಳುನಾಡಿನವಳು. 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ಓದಿದ್ದು, ಇವಳು 9ನೇ ತರಗತಿ ಓದುವಾಗ ಒಂದೇ ವರ್ಷದಲ್ಲಿ ಆರೋಗ್ಯದ ಸಮಸ್ಯೆಯಿಂದ ತಂದೆ-ತಾಯಿ ಇಬ್ಬರು ಮರಣ ಹೊಂದಿದರು. ಇವಳಿಗೆ ಮೂರು ಜನ ಅಕ್ಕಂದಿರು, ಎಲ್ಲರಿಗೂ ಮದುವೆಯಾಗಿದ್ದು, ಒಬ್ಬರು ತಮಿಳುನಾಡಿನಲ್ಲಿ, ಒಬ್ಬರು ಬೆಂಗಳೂರಿನಲ್ಲಿ ಹಾಗೂ ಒಬ್ಬ ಅಕ್ಕ ವಿದೇಶದಲ್ಲಿ ವಾಸವಾಗಿದ್ದಾರೆ. ಸಂಗೀತಾ 10ನೇ ತರಗತಿ ಪರೀಕ್ಷೆ … Read more