ಅಮರ್ ದೀಪ್ ಅಂಕಣ

ಬೀಳ್ಕೊಡುಗೆ ಎಂಬ ಕೊನೆ ಘಳಿಗೆಯಲ್ಲಿ…..: ಪಿ.ಎಸ್.ಅಮರದೀಪ್

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರತರೇನೂ ಅರಿತೆವೇನು ನಾವು ನಮ್ಮ  ಅಂತರಾಳವಾ? ಅನ್ನುವ ಹಾಡನ್ನು ಅದೆಷ್ಟು ಬಾರಿ ಕೇಳಿದ್ದೇನೋ ಕೇಳುತ್ತೇನೋ ಗೊತ್ತಿಲ್ಲ.   ಆದರೆ ಇಡೀ ಹಾಡಿನ ಸಾಲುಗಳು ಮಾತ್ರ ನನ್ನನ್ನು ತುಂಬಾ ಕಾಡಿವೆ, ಕಾಡುತ್ತವೆ.  ಸುಮಾರು ಒಂಭತ್ತು ತಿಂಗಳ ಕಾಲ  ನಾನಿದ್ದ ಪರಿಸ್ಥಿತಿ ಆರ್ಥಿಕವಾಗೇನೂ ಕಷ್ಟಕರವಾಗಿದ್ದಿಲ್ಲ.  ಆದರೆ, ನನ್ನತನವನ್ನು ನಾನು ಎಷ್ಟೇ ಪ್ರಯತ್ನಪಟ್ಟರೂ ಕಾಪಿಟ್ಟುಕೊಳ್ಳುವಲ್ಲಿ ಸೋಲುತ್ತಲೇ ತಾತ್ಕಾಲಿಕವಾಗಿ ಗೆದ್ದ ದಿನದ ಸಂಜೆಗೆ ನನ್ನಲ್ಲಿದ್ದ ಒಟ್ಟು ಅಭಿಪ್ರಾಯ ಕಕ್ಕಿಬಿಟ್ಟೆ.   ನನ್ನದಲ್ಲದ ತಪ್ಪಿಗೆ ಬೇರೆಯವರ ಮಸಲತ್ತಿಗೆ ನನ್ನ ಸ್ಥಾನಪಲ್ಲಟವಾಗಿದ್ದ ದಿನ […]

ಪ್ರವಾಸ-ಕಥನ

ಭೂಲೋಕದಲ್ಲಿ ಅಪ್ಸರೆಯರು (ಕಾಂಬೋಡಿಯಾ ಭಾಗ-2): ಎಂ ನಾಗರಾಜ ಶೆಟ್ಟಿ

ಹಿಂದಿನ ಸಂಚಿಕೆಯಲ್ಲಿ… ಟೋನ್ಲೆ ಸಾಪ್‌ನಿಂದ ಹೊರಡುವಾಗ ಸಂಜೆ ಗಂಟೆ ಏಳಾಗಿರಲಿಲ್ಲ. ಸುಮ್ಮನೆ ಸುತ್ತಾಡಿ ಕಾಲ ಕಳೆಯುವ ಬದಲು ಸಾಂಸ್ಕೃತಿಕ ಕಾರ್ಯಕ್ರಮವೇನಾದರೂ ಇದೆಯೇ ಎಂದು ʼರಾʼ ನೊಡನೆ ವಿಚಾರಿಸಿದೆವು. ಸಾಮಾನ್ಯವಾಗಿ ಪ್ರತಿಯೊಂದು ಊರಿನಲ್ಲೂ ಅಲ್ಲಿಯದೇ ಹಾಡು,ನೃತ್ಯ ಪರಂಪರೆ ಇರುತ್ತದೆ. ಕೆಲವೊಮ್ಮೆ ನಮ್ಮ ಸಮಯಕ್ಕೆ ಅವು ದೊರಕುವುದಿಲ್ಲ. ತಿರುವನಂತಪುರದಲ್ಲಿ ಕಥಕ್ಕಳಿಯನ್ನು ನೋಡಬೇಕೆಂಬಾಸೆ ಇದ್ದರೂ ಅಲ್ಲಿಗೆ ಹೋದಾಗ ಪ್ರದರ್ಶನವಿರಲಿಲ್ಲ.ಕಾಂಬೋಡಿಯಾದಲ್ಲಿ ʼಅಪ್ಸರಾ ನೃತ್ಯʼ ಬಹಳ ಚೆನ್ನಾಗಿರುತ್ತದೆ ಎನ್ನುವುದನ್ನು ಕೇಳಿದ್ದೆ. ರಾ, ಸಿಯಾಮ್‌ರೀಪಲ್ಲಿ ಪ್ರತಿದಿನ ಒಂದಲ್ಲೊಂದು ಕಡೆ ಅಪ್ಸರಾ ನೃತ್ಯ ಪ್ರದರ್ಶನಗಳು ಇರುತ್ತಿತ್ತು, ಕೋವಿಡ್ […]

ಕಾವ್ಯಧಾರೆ

ಮೂರು ಕವಿತೆಗಳು: ಡಾ. ಸದಾಶಿವ ದೊಡಮನಿ, ಇಲಕಲ್ಲ

ʼಮಾಂಸದಂಗಡಿಯ ನವಿಲು’ ನೆನಪಿನಲ್ಲಿ ನೀವು ಹೊರಟು ನಿಂತಿದ್ದು; ನಡು ಮಧ್ಯಾಹ್ನ, ಕಡು ಬಿಸಿಲಲ್ಲಿಹೊಲಗೇರಿಯ ಕಪ್ಪುಕಾವ್ಯ ಕಣಗಿಲೆಯರಳಿಶತಮಾನದ ನೋವಿಗೆ ಮುದ್ದು ಅರಿಯುವ ಗಳಿಗೆಯಲ್ಲಿ ಮುದಿ ಬೆಕ್ಕುಗಳು ಹುಲಿಯ ಗತ್ತಿನಲಿಹಗಲು ಗಸ್ತು ತಿರುಗುವಾಗ ನೀವು ಹುಲಿಯ ಗುಟುರು ಹಾಕಿದಿರಿ ಗುಟುರಷ್ಟೇ ಕೇಳಿಸಿತು;ಕೇಳುತ್ತಿದೆಹಿಮದ ಹೆಜ್ಜೆಯೂ ತೋರುತ್ತಿಲ್ಲಚಿತ್ರದ ಬೆನ್ನು ಕಾಣುತ್ತಿಲ್ಲಮಾಂಸದಂಗಡಿಯ ನವಿಲು ಹುಡುಕುತ್ತಿದ್ದೇನೆನೀವು ಎಲ್ಲಿ? ಮಂಗಮಾಯ! ಕೆಂಪು ದೀಪದ ಕೆಳಗೆನನ್ನಕ್ಕ,ತಂಗಿಯರು ಎದೆ ಸುಟ್ಟುಕೊಂಡುನಲುಗುವಾಗ ನೀವು ತಾಯಿಯಾಗಿ ಹೆಗಲ ಕೊಟ್ಟು, ನೋವು ಆಲಿಸಿದಿರಿಹಗಲು ದೀವಟಿಗೆಯಾಗಿ ಉರಿದು,ಉಳ್ಳವರ ಎದೆಗೊದ್ದು ಅಸಲು ಸಹಿತ ಲೆಕ್ಕ ಚುಕ್ತಾ ಕೇಳಿದಿರಿನೀವು […]

ಪ್ರಕಟಣೆ

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2023 ಮತ್ತು ಕಾದಂಬರಿ ಪುರಸ್ಕಾರ 2023ʼ

ಭಾರತದ ಸ್ವಾತಂತ್ರ್ಯೋತ್ಸವ ಮತ್ತು ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಬುಕ್ ಬ್ರಹ್ಮ “ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ”ಯ ಜೊತೆಗೆ 2022ನೇ ಸಾಲಿನಲ್ಲಿ ಪ್ರಕಟವಾದ ಕಾದಂಬರಿಗೆ ಪುರಸ್ಕಾರ ನೀಡಲು ನಿರ್ಧರಿಸಿದೆ. 2022ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಅತ್ಯುತ್ತಮ ಕಾದಂಬರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು. ಈ ಒಂದು ಲಕ್ಷದಲ್ಲಿ 75 ಸಾವಿರ ರೂಪಾಯಿ ಲೇಖಕರಿಗೆ ಹಾಗೂ 25 ಸಾವಿರ ಪ್ರಕಾಶಕರಿಗೆ ವಿತರಿಸಲಾಗುತ್ತದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ 5 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು. ಈ ಪೈಕಿ […]

ಮೊದಲು ಓದುಗನಾಗು

ಚನ್ನಕೇಶವ ಜಿ ಲಾಳನಕಟ್ಟೆ ಕವಿತೆಗಳು

ಅಂದದ ನಾರಿಗೆ ಚೆಂದದ ಸೀರೆಯುಸುಂದರವಾಗಿ ಕಾಣುತಿದೆ ಬಿಂದಿಯು ಹಣೆಯಲಿ ತಂದಿದೆ ಚೆಲುವನುಬಂಧಿತನಾದೆ ಪ್ರೀತಿಯಲಿ ಕೆಂದನೆ ತುಟಿಯಲಿ ಕುಂದದ ಸೊಬಗಿದೆಅಂದುಗೆ ಸದ್ದು ಮಾಡುತಿವೆ ಚೆಂದಿರ ವದನೆಯ ಚೆಂದದ ಚೆಲುವೆಗೆಮುಂದಣ ಕೈಯ ಹಿಡಿಯುವೆನು ತಂದಳು ಹರುಷವ ಕುಂದದ ಚೆಲುವಲಿಬಂಧುವೆ ಆಗಿ ನಿಂತಿಹಳು ಬಂದಳು ಹೃದಯಕೆ ಬಂಧಿಸಿ ನನ್ನನುನಂದಿನಿ ಧೇನು ಸೊಬಗಿವಳು ವಂದಿಸಿ ಹೊಸಿಲಿಗೆ ಗಂಧವ ಹಚ್ಚುತತಂದಳು ಸಿರಿಯ ನನ್ನವಳು ಹಾಲಿನ ರೂಪದಿನೀಲಿಯ ಬಾನಲಿಬಾಲಕ ಚಂದಿರ ನಗುತಿಹನುತೇಲುತಲಿರುವನು‌ಗಾಳಿಯು ಬೀಸಲುಸೀಳುತ ಮೋಡವ ಮೂಡುವನು ಇಳೆಯನು ಸುತ್ತುತಹೊಳೆಯುತಲಿರುವನುಬೆಳಕನು ನೀಡುತಲಿರುಳೆಲ್ಲಸೆಳೆಯುತ ಮಕ್ಕಳತಿಳಿ ಬೆಳಕಿಳಿಸುತಹೊಳೆಯೊಳು ಬಿಂಬವನಿಳಿಸುತ್ತ ಧರೆಗಿವ […]

ಮೊದಲು ಓದುಗನಾಗು

ತವಕ ತಲ್ಲಣಗಳ ತಾಜಾಭಿವ್ಯಕ್ತಿ ; ಮೊಗೆದ ಬಾನಿಯ ತುಂಬ ತಿಳಿನೀರ ಬಿಂಬ: ಡಾ. ಹೆಚ್ ಎನ್ ಮಂಜುರಾಜ್

ಛದ್ಮವೇಷ- ಕವನ ಸಂಕಲನಕವಯಿತ್ರಿ- ಎಂ ಕುಸುಮ, ಹಾಸನಪ್ರಕಾಶಕರು: ರಚನ ಪ್ರಕಾಶನ, ಮೈಸೂರುಮೊದಲ ಮುದ್ರಣ: 2012ಬೆಲೆ: 80 ರೂಗಳು, ಒಟ್ಟು ಪುಟ: 128 ಈ ಕವನ ಸಂಕಲನವನ್ನು ಕವಯಿತ್ರಿಯಾದ ಶ್ರೀಮತಿ ಎಂ ಕುಸುಮ ಅವರು ಹೃದಯ ಶ್ರೀಮಂತಿಕೆಯುಳ್ಳ ಎಲ್ಲ ಮನುಜರಿಗೆ ಅರ್ಪಿಸಿದ್ದಾರೆ. ಶುದ್ಧ ಮಾನವತಾವಾದದಲ್ಲಿ ನಂಬುಗೆಯಿಟ್ಟ ಇವರ ಧ್ಯೇಯ ಮತ್ತು ಧೋರಣೆಗಳು ಇದರಿಂದಲೇ ಮನವರಿಕೆಯಾಗುತ್ತವೆ. ಇದು ಇವರ ಎರಡನೆಯ ಕವನ ಸಂಕಲನ. ಮೂಲತಃ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕನ್ನಡದಲ್ಲಿ ತಮ್ಮ ಸೃಜನಾತ್ಮಕವನ್ನು […]

ಮೊದಲು ಓದುಗನಾಗು

ಮನುಷ್ಯರು ಪ್ರಕೃತಿಯನ್ನು ಮೀರಬಲ್ಲರೆ?: ಡಾ. ಶಿವಕುಮಾರ್ ಆರ್.

ಶಿವಕುಮಾರ್ ದಂಡಿನ ಅವರು ಸಾಮಾಜಿಕ ಕಳಕಳಿಯುಳ್ಳ ಅಭೂತಪೂರ್ವ ಯುವ ಸಾಹಿತ್ಯ ಪ್ರತಿಭೆ. ಇವರು ಬರೆದದ್ದು ನಲವತ್ತೆಂದು ಕವಿತೆಗಳ “ಮೋಹದ ಪಥವೋ ಇಹಲೋಕದ ರಿಣವೋ” ಎಂಬ ಒಂದು ಕವನ ಸಂಕಲನ. ಅವರ ಎಲ್ಲ ಕವಿತೆಗಳಲ್ಲಿ ಸಾಮಾಜಿಕ ಕಳಕಳಿ ಕಂಡು ಬಂದರೂ ಕೆಲವು ಕವಿತೆಗಳು ಪ್ರಕೃತಿ ಪರವಾಗಿ ಹೆಚ್ಚಾಗಿ ಚಿಂತಿಸಿವೆ. ಅವರ ಪ್ರಕೃತಿಯ ಮುನಿಸು, ಹನಿ, ಪ್ರಕೃತಿಯ ಒಡಲೂ ಸಮಾನತೆಯ ಪಾಠವೂ ಎಂಬ ಕವಿತೆಗಳು ನಿಸರ್ಗತತ್ತ್ವವನ್ನು ಹೇಳುತ್ತವೆ. ಮನುಷ್ಯರು ಮೂಲತಃ ಅರಣ್ಯವಾಸಿಗಳು ಎಂಬುದು ನಮಗೆಲ್ಲ ತಿಳಿದಿರುವ ವಿಚಾರ. ಅವರಿಗೆ ಆರಂಭದಲ್ಲಿ […]

ಪಂಜು-ವಿಶೇಷ

ಡಾ. ಶಾಂತಲಕ್ಷ್ಮಿಯವರ ಕಾವ್ಯ ಚಿಂತನೆ: ಸಂತೋಷ್ ಟಿ

ಅಭಿಜಾತ ಕನ್ನಡ ಲಲಿತಾಕಲಾ ಲೋಕದ ಕಾವ್ಯನ್ವೇಷಣೆಯಲ್ಲಿ ಹೊಸಚಿಂತನೆಗಳ ಬೆರಗು ಮೂಡಿಸಿದ ಕವಯತ್ರಿ ಡಾ. ಶಾಂತಲಕ್ಷ್ಮಿ. ಭಾವನೂಭೂತಿಯ ಅಭೀಪ್ಸೆಯ ಉತ್ಸುಕತೆಯಿಂದ ಸ್ರಜನಶೀಲ ಅಭಿವ್ಯಕ್ತಿ ಮಾಧ್ಯಮ ಕಾವ್ಯದಲ್ಲಿ ತಮ್ಮ ಧ್ವನಿಯನ್ನು ಅನುಸಂಧಾನ ಮಾಡುತ್ತಿರುವ ಮಹಿಳಾ ಸಾಧಕರಲ್ಲಿ ಈ ಕವಯತ್ರಿಯ ಕಾವ್ಯ ನವಿರಾದ ಭಾವಗಳಿಂದ ಜೀವತುಂಬಿ ಹರಿಯುವಂತದ್ದು. ವಾಸ್ತವದ ಬದುಕಿನ ನುಂಟು ಉಂಟು ಮಾಡಿದ ಸಹನೀಯತೆˌ ಕರುಳು ಮಿಡಿಯುವ ಭಾವಧಾರೆˌಪ್ರಕ್ರತಿಯ ಜೀವ ವೈವಿಧ್ಯ ದ್ರವ್ಯˌಬದುಕಿನ ಮೌಲ್ಯಗಳುˌ ಜಾಗತಿಕವಾಗಿ ಬದಲಾದ ಸನ್ನಿವೇಶಗಳುˌ ಕೃತಕತೆಯ ಮೋಡಿ ನಿಯೋನ್ ಸನ್ನೆಗಳು, ಸ್ವಾರ್ಥ ಪರಿಸ್ಥಿತಿಯ ಬಿಕ್ಕಟುಗಳ ಲಾಲಸೆಗಳು […]

ಕಥಾಲೋಕ

ಮಿನಿ ಕತೆಗಳು: ಅರವಿಂದ. ಜಿ. ಜೋಷಿ.

“ಹರಿದ ಜೇಬು” ಸಂಜೆ, ಶಾಲೆಯಿಂದ ಮನೆಗೆ ಬಂದ ಹತ್ತರ ಪೋರ, ಗೋಪಿ ತನ್ನ ಏಳೆಂಟು ಗೆಳೆಯರೊಂದಿಗೆ ಸೇರಿ, ಮನೆಯ ಎದುರಿನ ರಸ್ತೆಮೇಲೆ ಲಗೋರಿ ಆಡುತ್ತಿದ್ದ. ಆಗ, ಆತನ ಪಕ್ಕದ ಮನೆ ಯಲ್ಲಿ ವಾಸವಾಗಿದ್ದ  ನಡುವಯಸ್ಸಿನ ಭಾಗ್ಯ (ಆಂಟಿ) ಮನೆಯಿದಾಚೆಗೆ ಬಂದು, ಜಗುಲಿ ಮೇಲೆ ನಿಂತು, “ಗೋಪೀ. . ಗೋಪೀ. . “ಎಂದು ಕೂಗಿ ಕರೆದು ಆತನ ಕೈಗೆ ಇನ್ನೂರು ರೂಪಾಯಿ ನೋಟು ಕೊಡುತ್ತ, “ಲೋ. . ಗೋಪೀ. ಇಲ್ಲೇ ಹಿಂದ್ಗಡೆ ಶೇಟ್ರ ಅಂಗ್ಡಿಗೆ ಹೋಗಿ ಒಂದ್ ಪ್ಯಾಕೆಟ್ […]

ಪ್ರವಾಸ-ಕಥನ

ತೇಲುವ ಗ್ರಾಮಗಳ ಮುಳುಗುವ ಬದುಕು: ಎಂ ನಾಗರಾಜ ಶೆಟ್ಟಿ

ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ ಸ್ವಲ್ಪವೇ ಚಿಕ್ಕದಾದ ದಕ್ಷಿಣ ಏಷ್ಯಾದ ಪುಟ್ಟ ರಾಷ್ಟ್ರ ಕಾಂಬೋಡಿಯಾ. ಕಾಂಬೋಡಿಯಾದ ಜನಸಂಖ್ಯೆ ಒಂದು ಕೋಟಿ ಎಂಬತ್ತು ಲಕ್ಷ. ಅದರಲ್ಲಿ ಸುಮಾರು ಒಂದು ಲಕ್ಷ ಜನರು ತೇಲುವ ಗ್ರಾಮಗಳಲ್ಲಿ ವಾಸಿಸುತ್ತಾರೆ. ಕಾಂಬೋಡಿಯಾದಲ್ಲಿ ಏಳುನೂರು ತೇಲುವ ಗ್ರಾಮಗಳಿವೆಯೆಂದು ಹೇಳಲಾಗುತ್ತಿದೆ. ಕಾಂಬೋಡಿಯಾಕ್ಕೆ ಬರುವ ಪ್ರಯಾಣಿಕರಿಗೆ ವಿಶ್ವದ ಅತಿ ಹೆಚ್ಚು ವಿಸ್ತೀರ್ಣದ ಅಂಗೋರವಾಟ್ ದೇವಾಲಯ ಹೇಗೋ, ಹಾಗೆಯೇ ತೇಲುವ ಗ್ರಾಮಗಳು ಕೂಡಾ ಆಕರ್ಷಣೆಯ ಕೇಂದ್ರಗಳು. ಲಕ್ಷಾಂತರ ಜನರನ್ನು ಬಲಿ ಪಡೆದ ಪೋಲ್‌ಪಾಟ್‌ರಂತಹ ಸರ್ವಾಧಿಕಾರಿಯನ್ನು ಕಂಡ ಕಾಂಬೋಡಿಯವನ್ನು ನೋಡಬೇಕೆಂದು ಬಹಳ ವರ್ಷಗಳಿಂದ […]

ಮೊದಲು ಓದುಗನಾಗು

ಡಾ.ಜಿ.ಎನ್.ಉಪಾಧ್ಯರ ಸಮೀಕ್ಷೆಯಲ್ಲರಳಿದ ಡಾ.ಜನಾರ್ದನ ಭಟ್ ಅವರ “ವಾಙ್ಞಯ ವಿವೇಕ”: ಅನುಸೂಯ ಯತೀಶ್

ಡಾ. ಜನಾರ್ದನ ಭಟ್ ನಮ್ಮೊಳಗಿನ ಸಂವೇದನಾಶೀಲ ಲೇಖಕರು. ಇವರು ಯಾವುದೇ ಸಾಹಿತ್ಯ ಪ್ರಕಾರಗಳಿಗೆ ಅಂಟಿಕೊಳ್ಳದೆ ಸೃಜನ ಮತ್ತು ಸೃಜನೇತರ ಎರಡು ಪ್ರಕಾರಗಳಲ್ಲೂ ತಮ್ಮನ್ನು ಅವಿರತ ತೊಡಗಿಸಿಕೊಂಡು ಧಣಿವರಿಯದೆ ಸಾಹಿತ್ಯಾರಾಧನೆಯಲ್ಲಿ ತೊಡಗಿರುವ ಬಹುಶ್ರುತ ವಿದ್ವಾಂಸರು. ಬಹುಭಾಷಾ ಪ್ರವೀಣರಾದ ಇವರು ಕಥೆ, ಕಾದಂಬರಿ, ವೈಚಾರಿಕ ಕೃತಿಗಳು, ಅಂಕಣಗಳು, ವಿಮರ್ಶೆ, ಮಕ್ಕಳ ಸಾಹಿತ್ಯ, ಇಂಗ್ಲೀಷ್ ಸಾಹಿತ್ಯ ರಚನೆಯ ಜೊತೆಗೆ ಹಲವಾರು ಕೃತಿಗಳ ಸಂಪಾದನೆ ಕೂಡ ಮಾಡಿ ಆಡು ಮುಟ್ಟದ ಸೊಪ್ಪಿಲ್ಲ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಕನ್ನಡ ಸಾಹಿತ್ಯದ […]

ಕಲೆ-ಸಂಸ್ಕೃತಿ ಪಂಜು-ವಿಶೇಷ

ಸಂವಿಧಾನದ ಮಹತ್ವವನ್ನು ಸಾರುವ ಮನೋಜ್ಞ ಸಿನಿಮಾ – 19.20.21: ಚಂದ್ರಪ್ರಭ ಕಠಾರಿ

ಹರಿವು, ನಾತಿಚರಾಮಿ, ಆಕ್ಟ್ 1978 ಸಿನಿಮಾಗಳಿಂದ ಸಂವೇದನಾಶೀಲ ನಿರ್ದೇಶಕರೆಂದು ಗುರುತಿಸಲ್ಪಟ್ಟಿರುವ  ಮಂಸೋರೆಯವರ ಹೊಸ ಸಿನಿಮಾ-19.20.21. ಟೈಟಲ್ ಸೇರಿದಂತೆ ಹಲವು ಕುತೂಹಲಗಳೊಂದಿಗೆ ಅವರು ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಹಾಗೆ ತರುವಾಗ ಹಲವು ಸವಾಲುಗಳನ್ನು ತಮ್ಮ ಸಿನಿಮಾ ತಯಾರಿಕೆಯ ಅನುಭವದಿಂದ, ಪ್ರತಿಭಾವಂತಿಕೆಯಿಂದ ನಿಭಾಯಿಸಿದ್ದಾರೆ.   ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಲ್ಲಿರುವ ಕುತ್ಲೂರು ಗ್ರಾಮದಲ್ಲಿ ಶತಮಾನಗಳಿಂದ ಬದುಕಿರುವ ಆದಿವಾಸಿ ಬುಡಕಟ್ಟು ಜನಾಂಗವಾದ ಮಲೆಕುಡಿಯರನ್ನು, ಸರ್ಕಾರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಯನ್ನು ಜಾರಿ ಮಾಡಿ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ, ಆಳುವ ಪ್ರಭುತ್ವದಿಂದ ನಡೆದ ದೌರ್ಜನ್ಯಗಳ […]

ಕಥಾಲೋಕ

ನೀಚನ ಸಾವು: ಮಂಜು ಡಿ ಈಡಿಗೆರ್

ಓದೋಕ್ಕೆ ಅಂತ ರೂಮ್ ಮಾಡ್ಕೊಂಡು ಕೊಪ್ಪಳ ದಲ್ಲೇ ಇದ್ದೆ. ದಿನ ಬೆಳಗ್ಗೆ ರನ್ನಿಂಗು ವರಮಪ್ಪು ವರ್ಕೌಟು ಮಾಡೋದು ನನ್ನ ದಿನ ನಿತ್ಯದ ಅಭ್ಯಾಸ ಆಗಿತ್ತು. ಹಾಗಾಗಿ ದಿನ ಬೆಳಗ್ಗೆ ಸ್ಟೇಡಿಯಂಗೆ ಪ್ರಾಕ್ಟೀಸ್ ಗೆ ಹೋಗ್ತಾ ಇದ್ದೆ. ಸಂಡೇ ಪ್ರಾಕ್ಟೀಸ್ ಮುಗಿಸಿಕೊಂಡು ರೂಮ್ಗೆ ಬಂದೆ. ನನ್ನ ರೂಮಿನ ಪಕ್ಕ ಮನೆ ಖಾಲಿ ಆಗಿತ್ತು, ಅದಕ್ಕೆ ಯಾರೋ ಹೊಸಬರು ಬಂದಾಗೆ ಇತ್ತು. ನನ್ನ ರೂಮು ಮತ್ತೆ ಅವರ ಮನೆ ಎರಡು ಪಕ್ಕದಲೆ ಇರುವುದರಿಂದ ಯಾರು ಎಂದು ಗಮನಿಸಬೇಕಾಯಿತು. ಮನೆ ಇಂದ […]

ಕಥಾಲೋಕ

ನಾ ಕಂಡಂತೆ: ಶೀತಲ್

ನಾನು ಈ ಮನೆಗೆ ಬಂದು ಈಗ ನಾಲ್ಕು ವರ್ಷವಾಯಿತು. ಮನೆಯೆಂದರೆ ಅಬ್ಬಾ! ಇವರ ಮನೆಯಂತೆ ಯಾವ ಮನೆಯೂ ಇಲ್ಲ ಆ ಲೇಔಟ್ ನಲ್ಲಿ ಎಂದು ಆಗಾಗ ಕೆಲಸದಾಕೆ ಸುಗುಣ ಮನೆಯೊಡತಿ ವೈದೇಹಿ ಯವರ ಬಳಿ ಹೇಳುವುದನ್ನು ಕೇಳಿದ್ದೇನೆ. ಇವರ ಮನೆಯಲ್ಲದೆ ನಾನು ಯಾವ ಮನೆಗೂ ಹೋಗುವ ಹಾಗಿಲ್ಲವಲ್ಲ ಹಾಗಾಗಿ ನನ್ನ ಸ್ವಂತ ಅಭಿಪ್ರಾಯವಲ್ಲ ಇದು. ಇವರ ಮನೆಯಿಂದ ಎದುರು ಕಾಣುವ ಎರಡು ಮನೆಗಳು, ಹಾಗೆ ಬಲಗಡೆಗೆ, ಇವರ ಮನೆಯ ಹೂದೋಟ ದಾಟಿದರೆ ಕಾಣುವ ಮನೆ ಕೂಡ ಇವರ […]

ಲೇಖನ

ಬೈಸಿಕಲ್ ಥೀವ್ಸ್ ವಿಮರ್ಶೆ: ಕಿರಣ್ ಕುಮಾರ್ ಡಿ

‘ಬೈಸಿಕಲ್ ಥೀವ್ಸ್’ ೧೯೪೮ರಲ್ಲಿ ಇಟಾಲಿಯನ್ ಭಾಷೆಯಲ್ಲಿ ತೆರೆಕಂಡ ಚಲನಚಿತ್ರ. ಇಟಾಲಿಯಲ್ಲಿ “ಲಾದ್ರಿ ದಿ ಬೈಸಿಕ್ಲೆಟ್” ಹೆಸರಿನಲ್ಲಿ ತೆರೆಕಂಡಿತು. ಚಲನಚಿತ್ರದ ಕಥೆಯನ್ನು ಸಿಸೇರ್ ಜವಟ್ಟಿನಿಯವರು ೧೯೪೬ರಲ್ಲಿ ಪ್ರಕಟಗೊಂಡ “ಲಾದ್ರಿ ದಿ ಬೈಸಿಕ್ಲೆಟ್” ಕಾದಂಬರಿಯಿಂದ ಅಳವಡಿಸಿಕೊಂಡು ಬರೆದಿದ್ದಾರೆ. ಈ ಚಲನಚಿತ್ರವನ್ನು ವಿಟ್ಟೋರಿಯಾ ಡಿ ಸಿಕಾ ಅವರು ನಿರ್ದೇಶಿಸಿದ್ದಾರೆ. ಈ ಚಲನಚಿತ್ರ ೨ನೇ ವಿಶ್ವಯುದ್ಧದ ನಂತರ ತೆರೆಕಂಡಿದ್ದು. ೨ನೇ ವಿಶ್ವಯುದ್ಧ ಮುಗಿದ ಮೇಲೆ ಇಟಾಲಿಯಲ್ಲಿ ಎದುರಾದ ಉದ್ಯೋಗದ ಸಮಸ್ಯೆಯನ್ನು ಮತ್ತು ಬಡತನವನ್ನು ಹಲವಾರು ಪಾತ್ರದ ಮೂಲಕ ಹೇಳುತ್ತದೆ ಈ ಚಲನಚಿತ್ರ. ಚಲನಚಿತ್ರದ […]

ಲೇಖನ

“ನೇರ ವ್ಯಕ್ತಿತ್ವ ಶಕ್ತಿಯೇ…?? “: ರೇಖಾ ಶಂಕರ್.

ಆತ್ಮೀಯ ಓದುಗರೇ, ನಾನಿವತ್ತು ಹೇಳ್ತಿರೊ ವಿಷ್ಯ ಅಂದ್ರೆ ನೇರ ವ್ಯಕ್ತಿತ್ವದ ಬಗ್ಗೆ, ಅದೇ ಇದ್ದಿದ್ದು ಇದ್ದಂಗೆ ಹೇಳುದ್ರೆ ಎದ್ ಬಂದ್ ಎದೆಗೆ ಒದ್ರಂತೆ ಅಂತ ಗಾದೆ ಹೇಳ್ತಾರಲ್ಲ. ಅದೇ ವಿಷಯ…., ಅದಕ್ಕೆ ನೇರ ನುಡಿಯ ವ್ಯಕ್ತಿತ್ವ ಅಂತ್ಲೂ ಹೇಳ್ಬೌದು. ನೋಡೋಕೆ ಮನುಷ್ಯ ಒಂದೆ ಥರ ಕಾಣ್ತಿದ್ರೂ ಅವನಲ್ಲಿ ಇರೊ ಗುಣ ಸ್ವಭಾವಗಳು ವಿಭಿನ್ನವಾಗಿರತ್ತೆ, ಅವ ನಡೆಯೊ ಹಾದಿ ಆಡುವ ಮಾತು ತನ್ನ ನೋಡುವ ನೋಟ ಒಟ್ಟಾರೆ ತನ್ನ ಬದುಕುವ ಶೈಲಿಯನ್ನೆ ವಿಭಿನ್ನವಾಗಿಟ್ಕೊಂಡಿರ್ತಾನೆ. ” ಲೋಕೊ ಭಿನ್ನ ರುಚಿಃ […]

ಲೇಖನ

ನಾಸಿಕ ಪುರಾಣ: ಡಾ.ವೃಂದಾ ಸಂಗಮ್,

ನಾಸಿಕದಾಗ ಅಂತ ನಮ್ಮ ಶೀನೂ ಮಾಮಾ ಮಾತು ಶುರು ಮಾಡಿದರೂಂದರ, ನಾವೆಲ್ಲಾ, ಮೂಗಿನ ಮೇಲೊಂದು ಬೆರಳಿಟ್ಟುಕೊಂಡು ಕೂತಿರಬೇಕು. ಯಾಕಂದರ ನಮ್ಮ ಶೀನೂ ಮಾಮಾ ಅಂದರ ಅಸಾಧಾರಣ ವ್ಯಕ್ತಿ. ಹಂಗಂತ, ಭಾಳ, ಭಾಳ ಸಾಧನಾ ಮಾಡ್ಯಾರ ಅಂತಲ್ಲ. ಸೀದಾ ಹಾದಿಯವರಲ್ಲ. ಸೊಟ್ಟ ಮೂಗಿನವರು. ಅಂದರ, ಹೀಂಗ, ಮಾತು ಶುರು ಮಾಡಿದಾಗ, ನಾವು ಯಾವ ರೀತಿ ವಿಚಾರ ಮಾಡಿದರೂ, ಇವರು ಈ ವಿಷಯದ ಹರಟಿ ಪ್ರಾರಂಭಿಸಬಹುದು ಅಂತ ಒಂದು ಅಂದಾಜು ಇಟ್ಟಕೊಂಡಿದ್ದರ, ಅದನ್ನೆಲ್ಲಾ, ಮುರದು, ಹೊಸಾ ದಾರಿಯೊಳಗೇನೇ ಹರಟೀ ಪ್ರಾರಂಭ […]

ಕಾವ್ಯಧಾರೆ

ಶಿವಧ್ಯಾನ: ಡಾ. ರಶ್ಮಿ ಕಬ್ಬಗಾರ

ಅಲ್ಲಿಗೆ ಹೋದ ಮೇಲೆ ಗೊತ್ತಾದದ್ದುನಮ್ಮೂರ ಶಿವ ಎಷ್ಟು ಸಿಂಪಲ್ಲು ಅಂತ !ಶಿವರಾತ್ರಿಯೋ- ಮಡಿಹುಡಿ ನೈವೇದ್ಯದತಲೆಬಿಸಿ ಎಳ್ಳಷ್ಟೂ ಇರದಶುದ್ಧ ಪ್ರೀತಿಯ ಸಮಾವೇಶವೇ ಸರಿಯೆನ್ನಿ ಆ ದಿನ ಯಾವ ಹೊಳೆಯೂ ಆದೀತು ಪಕ್ಕದಲ್ಲೊಂದು ಶಿಲೆಯಿದ್ದರಲ್ಲಿ ಶಿವರಾತ್ರಿ ನೀರೆಲ್ಲವೂ ಗಂಗೆ’ ಕಲ್ಲ ತಲೆಮೇಲೊಂದಿಷ್ಟು ಅಭಿಷೇಕಗೈದುನಿರುಮ್ಮಳವಾಗಿ ಬನ್ನಿ ಮನೆಗೆ’- ಹಿರಿಯರ ನುಡಿ ನಮ್ಮಜನ ಊರು-ಕೇರಿಯ ಗೆಳೆಯರನ್ನಸಹಜೀವಗಳನ್ನ ಕೂಡಿಸಿ,ಗೂಡ್ಸು, ಲಾರಿ ತುಂಬಿಕೊಂಡುಗಲ್ಲದ ಗೌಜುಗಳೊಂದಿಗೆಶಿವರಾತ್ರಿ ಪಿಕ್ ನಿಕ್ ಹೋಗಿದ್ದುಂಟು. ಪ್ರತಿವರ್ಷವೂ- ಮುಂದಿನ್ವರ್ಷ ನಿನ್ನ ಮುದ್ದಾಂ ಕರಕೊಂಡ್ಹೋಗ್ತೆವೇ ಅಂತ್ಹೇಳಿ ಕೈಕೊಟ್ಟು ಓಡಿದ ಅಕ್ಕ, ಅಣ್ಣ, ಚಿಕ್ಕಮ್ಮನ ನೆನೆದು,ಚಳ್ಳೇಪಿಳ್ಳೆಗಳಾದ […]

ಕಾವ್ಯಧಾರೆ

ಪಂಜು ಕಾವ್ಯಧಾರೆ

ಮಾನದಂಡ ! ಮಿಥಿಲಾಪುರದೊಳಗೆ ಪಂದ್ಯ;ಸೀತೆಗೆ ಸ್ವಯಂವರ….ಹರಧನುವ ಮುರಿಯುವುದೇಮಾನದಂಡ !ರಾಮ ಮುರಿದ; ಸೀತೆ ಒಲಿದಳುನಂತರದ ವಿಚಾರವೀಗ ಬೇಡ ! ಪಾಂಚಾಲನಂದನೆ ದ್ರೌಪದಿ;ಸ್ವಯಂವರದಿ ಗೆದ್ದವನ ಮಡದಿ !ಮತ್ಸ್ಯಯಂತ್ರವ ಭೇದಿಸುವುದೇಮಾನದಂಡ !ಪಾರ್ಥ ಬಾಣ ಹೂಡಿದ; ದ್ರೌಪದಿ ಒಲಿದಳುನಂತರದ ವಿಚಾರವೀಗ ಬೇಡ ! ಅಷ್ಟೋ ಇಷ್ಟೋ ಓದಿದ ಹೆಣ್ಣು,ಸ್ವಯಂವರ ಅನ್ನಬಹುದೆ ಇದನು ?‘ಸರ್ಕಾರಿ ನೌಕರಿ’ಯೇಮಾನದಂಡ !ಸಂ(ಗಿಂ)ಬಳ ತಂದವನ ಹುಸಿನಗೆಗೆ ಒಲಿದಾಳುನಂತರದ ಬದುಕು ? ಈಗ ಬೇಡ ! ಜನಕರಾಜನ ಮಗಳಿಗೆವನವಾಸ ವರವಾಯ್ತು;ದ್ರುಪದ ರಾಜನ ಮಗಳು ಬದುಕುಐವರ ಪಾಲಾಯ್ತು ! ಅತಿ ಆಸೆ ಪಟ್ಟಷ್ಟೂ […]

ಕಾವ್ಯಧಾರೆ

ನಾಲ್ವರ ಗಝಲ್‌ಗಳು: ಶಿವರಾಜ್. ಡಿ., ಜಯಶ್ರೀ ಭ ಭಂಡಾರಿ., ಜೊನ್ನವ, ರೇಣುಕಾ ಕೋಡಗುಂಟಿ

ಗಝಲ್. ನಾನು-ನೀನು ಅವನು-ಇವನು ಬೇರೆ-ಬೇರೆಯಿಲ್ಲ ನಾವು ಒಂದೇರಾಮ-ರಹೀಮ ಕೃಷ್ಣ-ಕರೀಮ ಭೇದ-ಭಾವವಿಲ್ಲ ನಾವು ಒಂದೇ ಸ್ವರ್ಗ ನರಕ ಪಾಪ ಪುಣ್ಯವೆಲ್ಲ ಮನುಜನ ಕರ್ಮದ ಫಲಗಳುಜಗತ್ತಿನ ಧರ್ಮ ಗ್ರಂಥಗಳ ಸಾರಗಳಲಿ ಭೇದವಿಲ್ಲ ನಾವು ಒಂದೇ ಆಲಯ ಬಯಲಾಗಿ ಬಯಲಲಿ ಬೆಳಕಾಗಿ ಬಾಳಬೇಕು ಮನುಜಮನುಷ್ಯ ಮನುಷ್ಯತ್ವದಲಿ ಮೇಲು-ಕೀಳುಗಳಿಲ್ಲ ನಾವು ಒಂದೇ ಅಜ್ಞಾನದ ತಮವಳಿದು ವಿಜ್ಞಾನದಿ ಮೌಡ್ಯವಳಿಯಲಿಜ್ಞಾನಜ್ಯೋತಿ ಬೆಳಗಲು ತರ-ತಮಗಳಿಲ್ಲ ನಾವು ಒಂದೇ ಜಾತಿ,ಧರ್ಮಗಳ ಗೋಡೆ ಕಟ್ಟಿ ವಿಶ್ವಗುರು ಆಗಲು ಹೊರಟಿದ್ದಾರೆ ಶಿವುಪರಿಶುದ್ಧ ಪ್ರೀತಿಗೆ ಕಾರುಣ್ಯದ ಮನಸಿಗೆ ಜಾತಿ-ಧರ್ಮಗಳಿಲ್ಲ ನಾವು ಒಂದೇ -ಶಿವರಾಜ್. […]

ಕಾವ್ಯಧಾರೆ

ಬರೆ: ಲಿಂಗರಾಜ ಸೊಟ್ಟಪ್ಪನವರ

ಆಡಿದ ಮಾತುಗಳೆಲ್ಲ ಮರೆತು ಹೋದವುಉಳಿದ ಮಾತುಗಳನುನೀನೆ ಆಡಬೇಕು ಈ ಬರೆ ಮೇಲೆ ಕೈ ಆಡಿಸುನಿನಗೆ ಏನಾದರೂ ದಕ್ಕಬಹುದುಪದ ನಾದ ನೋವುರಕ್ತ ಕೀವುಬಿರಿತ ಚರ್ಮ ಒಡೆದ ಮಾಂಸ ಖಂಡತೆರೆದ ಎದೆ ಗೂಡುಈ ಎಲ್ಲವನು ಪದ ಮಾಡಿ ಹಾಡಿಕೋ ಹಂಚುಬೇಕಿದ್ದರೆ ಮಾರಿಕೋ ತಾಕಬಹುದು ಎಲುಬಿನ ಹಂದರನೆತ್ತರ ವಾಸನೆಸಿಗದೇ ಹೋಗಬಹುದು ಹೆಣಗಳ ಲೆಕ್ಕಗುಳಿಬಿದ್ದ ಕಣ್ಣುಗಳಲಿ ಒಮ್ಮೆ ಇಳಿದು ಹೋಗುನೀನು ಗತಕೆ ಸರಿದು ಹೋಗುಚರಿತೆಯ ಚರ್ಮ ಸುಲಿದ ಕಥನಗಳಲ್ಲಿ ನಾನುಸಿಕ್ಕೆ ಸಿಗುತ್ತೇನೆಒಂದು ವಿನಂತಿ ಇಷ್ಟೇಇಷ್ಟು ಕಾಲವಾದ ನಂತರವಾದರೂ ಸರಿನೀನು ಯಾರು? ಎಂದು ಮಾತ್ರ […]

ಕಾವ್ಯಧಾರೆ

ಪ್ರೀತಿ ಹುಟ್ಟೀತು ಹೇಗೆ?: ಎಂ ನಾಗರಾಜ ಶೆಟ್ಟಿ

ಹುಟ್ಟು, ಬಣ್ಣ, ಬಟ್ಟೆಗಳ ಗುರುತಿನಲ್ಲಿತಿನ್ನುವ ಅನ್ನ, ಇರುವ ಜಾಗ, ಮಾಡುವ ಕೆಲಸಅವರಿವರಲ್ಲಿ ಹಂಚಿ,ಮುಟ್ಟದೆಯೇ ದೂರ ನಿಲ್ಲುವಲ್ಲಿಪ್ರೀತಿ ಹುಟ್ಟೀತು ಹೇಗೆ? ಮನೆಗೊಬ್ಬ ದೇವನ ಮಾಡಿಇಲ್ಲಿಗಿಂತ ಅಲ್ಲಿಯೇ ಸರಿಯೆಂದು ಹಾಡಿಇಂದಿನದಕ್ಕೆ ಅಂದಿನ ಕಾರಣ ಗಂಟು ಹಾಕಿತೊತ್ತುಗಳಾಗಿಸಿದವರ ನಡುವೆಪ್ರೀತಿ ಹುಟ್ಟೀತು ಹೇಗೆ? ಮನಸ್ಸುಗಳ‌‌ ಸುಟ್ಟು ಬೂದಿ ಮಾಡಿಶಾಖದ ಸುತ್ತ ಕುಣಿವವರಕರಕಲು ಎದೆಗಳಲ್ಲಿಪ್ರೀತಿ ಹುಟ್ಟೀತು ಹೇಗೆ? ಅವನು ನಾನೆಂದು, ನಾನು ಅವನೆಂದುಅವನೂ ಅವಳೂ ಒಂದೇ ಎಂದುನಮ್ಮನ್ನು ನಾವೇ ಅರಿಯದೆಪ್ರೀತಿ ಹುಟ್ಟೀತು ಹೇಗೆ? -ಎಂ ನಾಗರಾಜ ಶೆಟ್ಟಿ

ಕಾವ್ಯಧಾರೆ

ಪೋಲಿ ಹುಡುಗ: ವಿದ್ಯಾ ಗಾಯತ್ರಿ ಜೋಶಿ

ಭಾರತಿ ಮತ್ತು ಆರತಿಇಬ್ಬರದೂ ಬಾರಿ ಪ್ರೀತಿ ದೇಹ ಎರಡು ಅತ್ಮ ಒಂದೇಅಂತ ಎಲ್ಲರೂ ಅನ್ನುವುದೇ ದಿನವೂ ಒಬ್ಬ ಹುಡುಗಮುಗುಳ್ನಗುತ್ತಿದ್ದ ಕಾಲೇಜಲಿ ಪಾಠ ಕೇಳುವಾಗ ಆರತಿಗೆ ಹಿಡಿಸಿದ ಪೋರಕಾರಣ ಆತ ಭಾರೀ ಸುಂದರ ಭಾರತಿಗೆ ಹೇಳಿದಳು ಗುಟ್ಟುಭಾರತಿ ನೋಡಿದಳು ದುರುಗುಟ್ಟಿ ಅಂದಳು “ಆತ ನೋಡೋದು ನಿನ್ನನ್ನುಪ್ರೀತಿ ಮಾಡೋದು ನನ್ನನ್ನು!” ಹುಡುಗ ಬಂದನು ಇವರ ಹತ್ತಿರಹೆಚ್ಚಾಯ್ತು ಹುಡುಗಿಯರ ಕಾತರ ಕೇಳಿದರು “ಪ್ರೀತಿಸುವೆ ಯಾರನ್ನ?ನನ್ನನ್ನ ಇಲ್ಲಾ ಇವಳನ್ನ?” ಸುಂದರ ಅಂದ”ನಕ್ಕಿದ್ದು ನೋಡಿ ನಿಮ್ಮಿಬ್ಬರನ್ನನಾ ಪ್ರೀತಿಸುವದು ನಿಮ್ಮಿಬ್ಬರಲ್ಲಿ ಒಬ್ಬಳ ಅಕ್ಕನ್ನ!” -ವಿದ್ಯಾ ಗಾಯತ್ರಿ […]

ಕಾವ್ಯಧಾರೆ

ದೇವದೂತ ನನ್ನಪ್ಪ: ಶಕುಂತಲಾ ಪ್ರ. ಬರಗಿ

ಈ ಜಗವ ತೋರಲೆಂದೇ ಬಂದ ದೇವದೂತಈ ಜಗವ ತೋರಿ ತಾನೊಬ್ಬನೆ ದೂರ ನಿಂತನನ್ನಪ್ಪ ಈ ಜಗವ ತೋರಿಸಲು ಕರೆತಂದವಎನ್ನ ಕರೆದು ಜಗವ ತೋರಿ ಸುಮ್ಮನೆ ನಿಂತುಬಿಟ್ಟವ. ಈ ಜಗದ ಪೈಪೋಟಿ, ಅಂಕು ಡೊಂಕುನಾವು -ಅವರು -ಇವರು ಎಂಬುದನ್ನೇ ತಿಳಿಸದೆ ಸುಮ್ಮನೆ ನಿಂತುಬಿಟ್ಟವಅವನು ಈ ಭೂಮಿಗೆ ಕರೆತಂದ ಅಷ್ಟೇ,ಈ ಜಗವ ಏನೆಂದು ತಿಳಿಸಲಿಲ್ಲ ಎನಗೆ ಈ ಭೂಮಿಯ ಆಕಾಶದಲ್ಲಿ ಹಾರಾಡುವ ರೆಕ್ಕೆಯಾಗಿರೆಕ್ಕೆ ಕೊಟ್ಟು ಹಾರಲು ಹಚ್ಚಿ ದೂರ ನಿಂತವಅಪ್ಪನ ರೆಕ್ಕೆಗಿರುವ ಶಕ್ತಿಯೇ ನನ್ನೊಳಗೆ ಇದೆಅಪ್ಪನ ರೆಕ್ಕೆಗಿರುವ ಬಲವೇ ನನ್ನೊಳಗೆ […]

ಕಾವ್ಯಧಾರೆ

ಪಿಸು ಮಾತು: ಶ್ರೀವಲ್ಲಭ ಕುಲಕರ್ಣಿ

ಎಲ್ಲೆಲ್ಲೂ ನೀರವ ಮೌನತಾಳಲಾರೆ ನಾ ವೇದನೆಬಳಿ ಒಮ್ಮೆ ನೀ ಬಂದುತೀರಿಸುವೆಯ ಮನದ ಕಾಮನೆ ಕಣ್ಣು ರೆಪ್ಪೆ ಆಲಂಗಿಸಿಕಳೆದಿವೆ ದಿನ ಸಾವಿರನೆಮ್ಮದಿಯ ತಾಣ ಹುಡುಕುತದಾಟಿರುವೆ ಸಪ್ತ ಸಾಗರ ಮನವೆಂದೋ ಕೊಟ್ಟಾಗಿದೆಈ ತನುವೂ ಎಂದಿಗೂ ನಿನಗೇನೀರವ ಈ ಮೌನದಲಿಸಖಿ ಗೀತದ ಜೊತೆಗೆ ಕದ್ದು ನೋಡದಿರು ಹೀಗೆಕಣ್ಣಂಚಿನಲಿ ಕೊಲ್ಲದಿರು ಹಾಗೆಬಂದು ಬಿಡು ಸುಮ್ಮನೇಪ್ರೇಮ ಲೋಕವೇ ನಮ್ಮನೆ ರಂಗೇರಲಿ ಮಾತಿನಾ ರಂಗೋಲಿಮುದ್ದಾದ ನಮ್ಮೀ ಸಾಂಗತ್ಯದಲಿಮೌನಕೂ ಪದವುಂಟುಅದಕಿದೆ ಪಿಸು ಮಾತಿನಾ ನಂಟು! -ಶ್ರೀವಲ್ಲಭ ಕುಲಕರ್ಣಿ

ನಟ್ಟು ಕಾಲಂ ಮೊದಲು ಓದುಗನಾಗು

“ದೇವರ ಹೊಲ”ದಲ್ಲಿ ಭರ್ಜರಿ ಫಸಲು: ಡಾ. ನಟರಾಜು ಎಸ್‌ ಎಂ

ಮಂಜಯ್ಯ ದೇವರಮನಿ ಅವರ “ದೇವರ ಹೊಲ” ಪುಸ್ತಕ ನನ್ನ ಕೈ ಸೇರಿ ಒಂದು ತಿಂಗಳ ಮೇಲೆ ಒಂದು ವಾರವಾಗಿತ್ತು. ಸುಮಾರು ದಿನಗಳ‌ ಹಿಂದೆ ನೂರಾ ಐವತ್ತಕ್ಕೂ ಹೆಚ್ಚು ಜನರಿಗೆ ಕೃತಜ್ಙತೆ ಅರ್ಪಿಸಿರುವ ಮಂಜಯ್ಯ ಅವರ‌ ಮೊದಲ ಮಾತುಗಳನ್ನು ಅವರ ಈ ಪುಸ್ತಕದಲ್ಲಿ ಓದಿದ್ದೇನಾದರೂ ಇಡೀ ಪುಸ್ತಕವನ್ನು ಓದಲು ಯಾಕೋ ಸಾಧ್ಯವಾಗಿರಲಿಲ್ಲ. ನಿನ್ನೆ ಭಾನುವಾರ ಬಿಡುವು‌ ಮಾಡಿಕೊಂಡು ಇಡೀ ದಿನ ಒಂದೊಂದೇ ಕತೆಗಳನ್ನು ಓದುತ್ತಾ ಓದುತ್ತಾ ಮಂಜಯ್ಯ ಅವರ ಕಥನ ಕಲೆಗೆ ಬೆರಗಾಗಿ ಹೋದೆ. “ದೇವರ ಹೊಲ” ಪುಸ್ತಕವು […]

ಪಂಜು-ವಿಶೇಷ

ತೇರ ಹಳ್ಳಿಯ ಸಿನಿಮಾ ತೇರು: ಎಂ ನಾಗರಾಜ ಶೆಟ್ಟಿ

ʼಸಿನ್ಮಾ ಚೆನ್ನಾಗಿತ್ತು, ದರ್ಶನ್ ಸಿನ್ಮಾನೂ ತೋರ್ಸ್‌ಬೇಕಿತ್ತು” ಆರು ವರ್ಷದ ಪೋರ ಹೇಳಿದ ಮಾತು. ಈ ಮಾತಲ್ಲಿ ಸತ್ಯವಿದೆ. ಆರೇನು, ಅರವತ್ತರ ವಯಸ್ಸಿನವರೂ ಒಂದೇ ಬಗೆಯ, ರಂಜನೆಯ ಸಿನಿಮಾಗಳನ್ನು ನೋಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದಕ್ಕಿಂತ ಭಿನ್ನವಾದ, ಸಾಮಾಜಿಕ ಅರಿವು ಮೂಡಿಸುವ, ಬುದ್ದಿಯನ್ನು ಕೆಣಕುವ, ಕಟು ವಾಸ್ತವವನ್ನು ತಿಳಿಸುವ ಚಿತ್ರಗಳ ಬಗ್ಗೆ ಅರಿವು ಮೂಡಿಸಬೇಕು. ನಮ್ಮ ಪಠ್ಯಕ್ರಮದಲ್ಲಿ ಅದಕ್ಕೆ ಅವಕಾಶವಿಲ್ಲ. ಸಿನಿಮಾ ಹಬ್ಬಗಳು, ಸಿನಿಮೋತ್ಸವಗಳು ಸ್ವಲ್ಪ ಮಟ್ಟಿಗೆ ಈ ಕೊರತೆಯನ್ನು ನೀಗಿಸುತ್ತವೆ. ಅವು ಸಿನಿಮಾ ನೋಡುವ, ಅರ್ಥ ಮಾಡಿಕೊಳ್ಳುವ, ವಿಶ್ಲೇಷಿಸುವ […]

ಮೊದಲು ಓದುಗನಾಗು

ಭಾರತದ ಸ್ವಾತಂತ್ಯ್ರ ಹುತಾತ್ಮ ಕವಿ ಅಶ್ಫಾಖ್‌ ಉಲ್ಲಾಖಾನ್‌ ಪುಸ್ತಕದ ಆಯ್ದ ಭಾಗ: ಜೆ ಕಲೀಂ ಬಾಷ

ಹಿಂದಿ ಮೂಲ: ಎಂ ಐ ರಾಜಸ್ವಿ ಕನ್ನಡಕ್ಕೆ: ಜೆ ಕಲೀಂ ಬಾಷ ಕಾಕೋರಿ ಕಾಂಡ ಸಣ್ನ ಸಣ್ಣ ಪ್ರಯತ್ನಗಳಿಂದಾದ ಅಸಫಲತೆಗಳಿಂದ ರಾಂ ಪ್ರಸಾದ್ ಬಿಸ್ಮಿಲ್ ಹಾಗೂ ಅವರ ಮಿತ್ರರ ಮನಸ್ಸು, ಈ ತರಹದ ವಿಧಿ ವಿಧಾನಗಳಿಂದ ಬೇಸರಗೊಂಡಿತ್ತು. ಆದರೂ ಸಹ ಅವರ ಮನದಲ್ಲಿನ್ನೂ ದೇಶ ಭಕ್ತಿಯ ಸಾಗರದ ಅಲೆಗಳು ಹೊಯ್ದಾಡುತ್ತಿದ್ದವು. ದಬ್ಬಾಳಿಕೆಯ ಬ್ರಿಟಿಷ್ ಸರ್ಕಾರದ ಸವಾಲನ್ನು ಎದುರಿಸುವಲ್ಲಿ ದೇಶಭಕ್ತರ ಕೊರತೆ ಇಲ್ಲ ಎಂಬುದನ್ನು ಸಾಬೀತು ಪಡಿಸಲು ಕ್ರಾಂತಿಕಾರಿಗಳು ಸಿದ್ಧರಿದ್ದರು. ಆದ್ದರಿಂದ ಕ್ರಾಂತಿಕಾರಿಗಳು ತಮ್ಮ ದಳವನ್ನು ಸಂಘಟಿಸುವಲ್ಲಿ ನಿರತರಾದರು. […]

ಲೇಖನ

ಸಂಕ್ರಮಣ: ಡಾ. ವೃಂದಾ ಸಂಗಮ್

ಎಲ್ಲಾ ಕತೀಗಳೂ ಸಹ ಒಂದೂರಾಗ, ಅಂತ ಶುರುವಾಗೋ ಹಂಗ, ಹರಟೆಗಳು ಮಾತ್ರ ನಮ್ಮೂರಾಗ ಅಂತ ಶುರುವಾಗತಿರಬೇಕು. ನಮ್ಮೂರಾಗ ಅಷ್ಟ ಅಲ್ಲ, ನಾವು ಸಣ್ಣವರಿದ್ದಾಗ, ಅಂತನೂ ಇರತಾವ. ಯಾಕಂದರ, ಸಣ್ಣವರಿದ್ದಾಗ ಇದ್ದ ಕುತೂಹಲ, ಗಳಿಸಿದ ವಿಶೇಷ ಅನುಭದಷ್ಟು ಮುಂದಿನ ಜೀವನದಾಗ ಇರೋದಿಲ್ಲ. ಹಬ್ಬ ಹರಿದಿನಗಳ ನೆನಪಂತೂ ಬಾಲ್ಯದ ಅನುಭವಕ್ಕಿಂತಾ ಮುಂದ ಯಾವುದೂ ನೆನಪಿರೋದಿಲ್ಲ. ಮತ್ತ, ಅದನ್ನ ಹಂಚಿಕೊಳ್ಳೋದರಾಗೂ ಇರತದ. ಹಂಗನ ಇದು ಸಂಕ್ರಮಣ ಹಬ್ಬ. ಸಂಕ್ರಮಣ ಅಂದರ, ಇರೋ ಹನ್ನೆರಡು ರಾಶಿಗಳೊಳಗ, ಪ್ರತಿಯೊಂದು ರಾಶಿಯೊಳಗ ಸೂರ್ಯ ಚಲಸತಾನ, ಅಂದರ […]

ಪಂಜು-ವಿಶೇಷ

ರಾಷ್ಟ್ರಕವಿ ಡಾ.ಜಿ.ಎಸ್ ಶಿವರುದ್ರಪ್ಪನವರ ಕಾವ್ಯ ಒಂದು ಅಧ್ಯಯನ: ಸಂತೋಷ್ ಟಿ

ಕನ್ನಡ ಸಾರಸ್ವತ ಲೋಕದ ಕೇಂದ್ರಬಿಂದುವಾಗಿ ಸಾಹಿತ್ಯದ ವಿವಿಧ ಜ್ಞಾನಶಿಸ್ತುಗಳನ್ನು ಬೆಳಗಿಸಿದ ಹಣತೆ ಜಿ.ಎಸ್.ಶಿವರುದ್ರಪ್ಪನವರು. 1926 ಫೆಬ್ರವರಿ 7ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರಿನಲ್ಲಿ ಜನಿಸಿದರು. ತಂದೆ ಶಾಂತವೀರಪ್ಪˌತಾಯಿ ವೀರಮ್ಮ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 1949ರಲ್ಲಿ ಬಿ.ಎ ಅನರ್ಸ್ ಪದವಿˌ1953ರಲ್ಲಿ ಎಂ.ಎ ಪದವಿ ಪಡೆದರು. ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಸುವರ್ಣ ಪದಕಗಳನ್ನು ಪಡೆದಿರುವರು.1960ರಲ್ಲಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ಸೌಂದರ್ಯ ಸಮೀಕ್ಷೆ ಎಂಬ ಸಂಶೋಧನಾ ಪ್ರೌಢಪ್ರಬಂಧ ಮಂಡಿಸಿ ಪಿಎಚ್ ಡಿ ಡಾಕ್ಟರೇಟ್ ಪದವಿ ಪಡೆದರು. ವ್ರತ್ತಿಜೀವನವನ್ನು 1949ರಲ್ಲಿ ಆರಂಭಿಸಿದ ಇವರು […]