ಪಂಜು ಕಾವ್ಯಧಾರೆ

ಧರಣಿಆಕಾಶ ನೋಡಿ ಮಳೆಯಾಗಲ್ಲಿಲ್ಲಎಂದು ಮುನಿಸಿಕೊಂಡರೇನುಪ್ರಯೋಜನ, ಮರ ಕಡಿದವನುನೀನಲ್ಲವೇ ಬತ್ತಿ ಹೋದ ಕೆರೆಯ ನೋಡಿಕಣ್ಣೀರು ಹಾಕಿದರೇನುಪ್ರಯೋಜನ, ಎರಡು ಹನಿಯಿಂದಬೊಗಸೆಯೂ ತುಂಬುವುದಿಲ್ಲ ಬಿರುಕು ಬಿಟ್ಟಿದೆ ಎಂದುಬೊಬ್ಬೆಹೊಡೆದರೇನುಪ್ರಯೋಜನ, ಬೆಂದ ಭೂಮಿಯುಎಷ್ಟು ನೊಂದಿರಬೇಕು ನೀರು, ಗಾಳಿಯನ್ನೆಲ್ಲಾಕಲುಷಿತ ಮಾಡಿಯಾಗಿದೆ,ಹಾಳು ಮಾಡಲು ಇನ್ನೇನುಉಳಿದಿದೆ ಮುಗಿಲು ಮುಟ್ಟುತ್ತಿದ್ದ ಬೆಟ್ಟಗಳನ್ನುಕೆಡವಿದ್ದಾಗಿದೆ, ದೊಡ್ಡ ಕಟ್ಟಡಗಳುಈಗಾಗಲೇ ಅವುಗಳನ್ನುಮುತ್ತಿಡುತ್ತಿದೆ. ಗುಬ್ಬಿಗಳ ಚಿಲಿಪಿಲಿಯರಿಂಗಣ ನಿಂತುಹೋಗಿದೆಆಧುನಿಕ ಜಂಗಮವಾಣಿಯತರಂಗಗಳಿಗೆ ಜಗವೇ ತ್ಯಾಜ್ಯ ಬಂಡಿಯಂತೆಗೋಚರಿಸುತ್ತಿದೆ,ಪ್ರಕೃತಿಯ ವಿಕೋಪಶುದ್ದಿಗೊಳಿಸಿ ಕಾಯುತ್ತಿದೆ. ತಾಯಿ ಧರಣಿಯ ಧಗೆಮಗುವಿಗೆ ನಷ್ಟಹೊರತು ತಾಯಿಗಲ್ಲಶುದ್ದಿಯಾಗಬೇಕಿದೆಮನುಷ್ಯನ ಅಂತರಂಗ. –ಅಜಿತ್ ಕೌಂಡಿನ್ಯ ನೆನಪುಗಳು ಈಗೀಗನೀರವರಾತ್ರಿಗಳುಬಿಕ್ಕುತ್ತಿವೆ,ನಿನ್ನನೆನಪುಗಳಂತೆ.ಕಣ್ಣೀರುಸಹ. ಎದೆಯಹೊಲಿದಹೊಲಿಗೆಗಳೂ,ನೀನೆಂಬನೆನಪುಗಳಗಾಯವಮಾಗಲುಬಿಡುತ್ತಿಲ್ಲ. ನಿನ್ನನೆನಪುಗಳೆಂಬಮಾರ್ಜಾಲಕಾಡಿಕೊಲ್ಲುತ್ತಿರಲು,ನಿನದೆಲ್ಲೊಖಿಲ್ಲನೆನಗುತಿರುವೆಯಲ್ಲ. ನನ್ನಕಣ್ಣ ಹಣತೆನಿನ್ನ ನೆನಪುಗಳೆಂಬತೈಲದಿಇನ್ನೆಷ್ಟು … Read more

ಒಂದು ಪ್ರೇಮ ಕತೆ: ಜೆ.ವಿ.ಕಾರ್ಲೊ

ಮೂಲ ಕತೆ: The Lady with the dog ಲೇಖಕರು: ಆಂಟೊನ್ ಚೆಕೊವ್ ಅನುವಾದ: ಜೆ.ವಿ.ಕಾರ್ಲೊ ಅಪರಿಚಿತ ಹೆಣ್ಣುಮಗಳೊಬ್ಬಳು ಒಂದು ಪುಟ್ಟ ನಾಯಿಯೊಂದಿಗೆ ಕಡಲತೀರದ ಮೇಲೆ ಅಡ್ಡಾಡುತ್ತಿರುವ ಬಗ್ಗೆ ಜನರು ಮಾತನಾಡತೊಡಗಿದರು. ಕಳೆದ ಹದಿನೈದು ದಿನಗಳಿಂದ ಯಾಲ್ಟಾದಲ್ಲಿ ತಂಗಿದ್ದ ಡಿಮಿಟ್ರಿ ಡಿಮಿಟ್ರಿಚ್ ಗುರೊವ್‌ನಿಗೆ ಹೊಸದಾಗಿ ಕಡಲ ತೀರಕ್ಕೆ ಬಂದಿರುವ ಈ ಹೆಣ್ಣುಮಗಳ ಬಗ್ಗೆ ಆಸಕ್ತಿ ಕೆರಳಿತು. ಕಡಲ ತೀರಕ್ಕೆ ಎದುರಾಗಿ ವೆರ್ನಿ ಹೋಟಲಿನ ಎತ್ತರದ ಮಂಟಪದ ಮೇಳೆ ಕುಳಿತಿದ್ದ ಅವನಿಗೆ ತಲೆಗೆ ಟೋಪಿ ಧರಿಸಿದ್ದ, ಮಧ್ಯಮ ಎತ್ತರದ … Read more

ನಮ್ಮ ಕನ್ನಡದ ನೋವು ನಲಿವು !: ಕೆ ಟಿ ಸೋಮಶೇಖರ್ ಹೊಳಲ್ಕೆರೆ

ಮಾತುಗಳ ಮೂಲಕ ಭಾವನೆಗಳನ್ನು ಹೊರ ಹಾಕುವ ಸಾಮರ್ಥ್ಯ ಮಾನವನಿಗೆ ಮಾತ್ರ ಇದೆ. ಇದು ಪ್ರಕೃತಿ ಮಾನವನಿಗೆ ಕೊಟ್ಟಿರುವ ವರ! ಭಾಷೆಯ ಸೃಷ್ಟಿ ಮಾನವನ ಸೃಜನೆಗಳಲ್ಲಿ ಅಧ್ಬುತವಾದುದು. ಕೊಡಲು ಕೊಳ್ಳಲು, ಸಂವಹನ ಮಾಡಲು, ಭಾವನೆಗಳನ್ನು ಅಭಿವ್ಯಕ್ತಿಸಲು, ವ್ಯವಹರಿಸಲು ಭಾಷೆ ಅತಿ ಅವಶ್ಯಕ. ಹುಟ್ಟಿದ ಮನೆಯಲ್ಲಿ ನಡೆಯಂತೆ ನುಡಿಯನ್ನೂ ಕಲಿತಿರುತ್ತೇವೆ ಅದೇ ಆಗುವುದು ಮಾತೃಭಾಷೆ. ಎಲ್ಲರ ಮಾತೃಭಾಷೆಯಲ್ಲಿ ಎಲ್ಲಿ ಜ್ಞಾನ ಇರುವುದಿಲ್ಲ. ಹಾಗೆ ಅಲ್ಲಿ ಇಲ್ಲದ ಜ್ಞಾನವನ್ನು ಅನ್ಯ ಭಾಷೆಯಲ್ಲಿ ಕಲಿಯಬೇಕಾಗುತ್ತದೆ. ವಿಜ್ಞಾನ, ತಂತ್ರಜ್ಞಾನ, ಜೀವವಿಜ್ಞಾನ, ವೈದ್ಯವಿಜ್ಞಾನ ಮುಂತಾದವು ನಮ್ಮ … Read more

ಕನ್ನಡವೆಂದರೆ ಬರಿನುಡಿಯಲ್ಲ: ಸಂತೋಷ್‌ ಟಿ.

ಕನ್ನಡವೆಂದರೆ ಬರಿನುಡಿಯಲ್ಲ ಹಿರಿದಿದೆ ಅದರರ್ಥ ಎಂದು ನಲ್ಮೆಯ ಕವಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಆದ ಪ್ರೊ. ಕೆ.ಎಸ್. ನಿಸಾರ್ ಅಹಮ್ಮದ್ ಅವರ ನವೋಲ್ಲಾಸ ಕೃತಿಯ ಒಂದು ಕವಿತೆಯ ಉವಾಚ. ಕನ್ನಡವೆಂದರೆ ಬರಿ ನುಡಿಯಲ್ಲ ಅದರ ಅರ್ಥ ಬಹಳ ಹಿರಿದು ಎಂಬ ಕವಿಯ ಪರಿಕಲ್ಪನೆ ಮಹೋನ್ನತವಾದ ಧ್ಯೇಯ ಮತ್ತು ಅಧ್ಯಯನದಿಂದ ಕೂಡಿದೆ. ಕನ್ನಡ ಅಥವಾ ಕರ್ನಾಟಕವೆಂದರೆ ಭಾರತದಲ್ಲಿ ಮಹತ್ವದ ಸ್ಥಾನವಾಗಿದೆ. ಭೌಗೋಳಿಕ, ಭಾಷಿಕ, ಸಾಹಿತ್ಯಿಕ, ಸಾಂಸ್ಕೃತಿಕ ರಾಜಕೀಯ ಎಲ್ಲಾ ರೀತಿಯಿಂದಲೂ ಅದು ಉನ್ನತವಾದ ಚರಿತ್ರೆಯನ್ನು ತನ್ನ ಇತಿಹಾಸದ ಪುಟಗಳ … Read more

ಬದಲಾದ ಕಾಲಘಟ್ಟದಲ್ಲಿ ಪತ್ರಿಕಾ ಮಾಧ್ಯಮ: ವಿಜಯ್ ಕುಮಾರ್ ಕೆ.ಎಂ.

ಭಾರತ ದೇಶಕ್ಕೆ ಸ್ವಾತಂತ್ರ್ಯ ಬರುವ ಪೂರ್ವದಿಂದಲೂ ಮಾಧ್ಯಮ ಎಂದರೆ ಪತ್ರಿಕೆ, ಪತ್ರಿಕೆಯಿಂದಲೇ ಹತ್ತಾರು ಕ್ರಾಂತಿಕಾರಿ ಬದಲಾವಣೆಗಳು, ಪತ್ರಿಕೆಯಿಂದಲೇ ಜ್ಞಾನ, ಪತ್ರಿಕೆಯೇ ಮಾಧ್ಯಮ ಎಂಬ ಸ್ಥಿತಿ ನಿರ್ಮಾಣವಾಗಿ ಶತಮಾನಗಳೇ ಉರುಳಿದರೂ ಅಳಿಯದೇ ಉಳಿದಿರುವ ಒಂದು ಶಕ್ತಿಯುತ ಮಾಧ್ಯಮ ಎಂದರೆ ಅದು ಪತ್ರಿಕೆ(ಮುದ್ರಣ) ಮಾಧ್ಯಮ. ಕ್ರಿ.ಪೂ 1956 ರಲ್ಲಿ ರೋಮನ್ನರು ಪ್ರಾರಂಭಿಸಿದ ಪತ್ರಿಕೆ ಹಂಚಿಕೆಯ ವಿಧಾನ ಮುಂದೊಂದು ದಿನ ದಿನಪತ್ರಿಕೆಯಾಗಿ ಬದಲಾಗಿ 1605 ರಲ್ಲಿ ಜಾನ್ ಕಾರ್ಲೋಸ್ ನ ಮೂಲಕ ಜಗತ್ತನ್ನು ಪ್ರವೇಶಿಸಿತು. ತದನಂತರ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ … Read more

ಬಿಟ್ಟು ಹೋಗೋಣಾ ಅಂದ್ರು ಬಿಡಲ್ಲ …..: ನಾಗಸಿಂಹ ಜಿ ರಾವ್

ಬೆಳಗಿನ ಜಾವ ೪ ಗಂಟೆ ಇರಬಹುದು ಮೊಬೈಲ್ ಸದ್ದಾಯಿತು .. ಎದ್ದು ನೋಡಿದ್ರೆ ಸುಬ್ಬು ಫೋನ್ ಮಾಡಿದ್ದ, ಚೈಲ್ಡ್ ಹೆಲ್ಪ್ ಲೈನ್ ೧೦೯೮ನಲ್ಲಿ ಕೆಲಸ ಮಾಡ್ತಿದ್ದ.“ಹೇಳಣ್ಣ ಸುಬ್ಬು” ಅಂದೆನಗರದ ಪ್ರತಿಷ್ಟಿತ ಏರಿಯಾದ ಒಂದು ಶ್ರೀಮಂತರ ಮನೆಯಲ್ಲಿ ಸಂಜೆ ಎಂಟು ವರುಷದ ಬಾಲಕಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಪೊಲೀಸ್ ದೂರು ಕೊಟ್ಟಾಗಿದೆ, ಆದರೆ ಪ್ರಕರಣ ಏನೋ ಗೊಂದಲಮಯವಾಗಿದೆ ಅದಕ್ಕೆ ಬೆಳಗ್ಗೆ ೮ ಗಂಟೆಯೊಳಗೆ ಬನ್ನಿ ಅಂತ ಸುದ್ದಿ ಹೇಳಿದ ಸುಬ್ಬು. ಸುದ್ದಿ ಕೇಳಿ ಬಹಳ ಬೇಸರವಾಯಿತು, ಎಂಟು … Read more

ಕಲಿತ ಅಕ್ಷರ ಕಣ್ತೆರಿಸಿದಾಗ !: ಶರಣಗೌಡ ಬಿ.ಪಾಟೀಲ ತಿಳಗೂಳ ಕಲ್ಬುರ್ಗಿ

ಕತ್ತಲು ಸರಿದು ಬೆಳಕು ಹರಿಯುತ್ತಿದ್ದಂತೆ ಪರ್ವತಪೂರ ಜನ ಎದ್ದು ತಮ್ಮ ತಮ್ಮ ಕೆಲಸ ಕಾರ್ಯದಲ್ಲಿ ನಿರತರಾಗಿದ್ದರು. ಎಲ್ಲರಂತೆ ಅಗಸಿ ಮನಿ ಶಿವನಾಗನೂ ಎದ್ದು ಪಕ್ಕದಲ್ಲಿ ಮಲಗಿದ್ದ ತನ್ನ ಹೆಂಡತಿ ಶಿವಗಂಗವ್ವಳಿಗೂ ಎಬ್ಬಿಸುತ್ತಾ ಇನ್ನೂ ಎಷ್ಟೋತನಕ ಮಲಗತಿ ಕೆಲಸಾ ಮಾಡೇಳು ದಿನಾ ನಾನು ಎಬ್ಬಿಸೋ ತನಕ ಏಳೋದೇ ಇಲ್ಲ ನನಗಿಂತ ನೀನೇ ಜಲ್ದಿ ಏಳಬೇಕಿಲ್ಲ ಎಂದಾಗ ಅವಳು ಎಚ್ಚರಗೊಂಡು ಕಣ್ಣು ತಿಕ್ಕಿಕೊಳ್ಳುತ್ತಾ ಹಾಸಿಗೆ ಮೇಲೆ ಸ್ವಲ್ಪ ಹೊತ್ತು ಕುಳಿತು ನಂತರ ಕೌದಿ ಮಡಚಿ ಅವು ಒಂದರ ಮೇಲೆಂದು ವಯ್ನಾಗಿಟ್ಟು … Read more

ನಡೆಯಿರಿ.. ನಡೆಯಿರಿ ಬರಿಗಾಲಲ್ಲಿ ನಡೆಯಿರಿ: ಸಂತೋಷ್ ರಾವ್ ಪೆರ್ಮುಡ

ನಿಸರ್ಗದ ಜೊತೆಗೆ ಅವಿನಾಭಾವ ಸಂಬಂಧ ಇಟ್ಟುಕೊಂಡರೆ ಸದಾ ಒಳ್ಳೆಯದು ಎನ್ನುವ ಮಾತಿದೆ. ಮನುಷ್ಯನ ಜೀವನದ ಎಲ್ಲಾ ಹಂತಗಳೂ ನೈಸರ್ಗಿಕವಾಗಿ ಜರುಗಿದರೆ ಅದಕ್ಕೆ ಹೆಚ್ಚಿನ ಮೌಲ್ಯವಿದೆ. ದೈಹಿಕವಾಗಿ ಆರೋಗ್ಯವಾಗಿ ಮತ್ತು ಶಾಂತಿಯುತವಾಗಿ ಇರಲು ವ್ಯಾಯಾಮ ಅತ್ಯಗತ್ಯ. ಓಡಾಡುವುದು (Walking) ದೇಹಕ್ಕೆ ಲಭ್ಯವಿರುವ ಉತ್ತಮ ವ್ಯಾಯಾಮಗಳ ಪೈಕಿ ಒಂದಾಗಿದೆ. ನಡೆದಾಟ ದೇಹವನ್ನು ಆರೋಗ್ಯವಾಗಿ ಇರಿಸುತ್ತದೆ. ಆದರೆ ಈ ನಡಿಗೆ ಸಾಧ್ಯವಾದಷ್ಟು ಸಕ್ರಿಯವಾಗಿ ಇರಬೇಕು. ವೇಗವಾಗಿ ನಡೆಯುವುದರಿಂದ ಉಸಿರಾಟದ ವೇಗ ಹೆಚ್ಚಿ, ಶ್ವಾಸಕೋಶ ಮತ್ತು ಹೃದಯದ ಕಾರ್ಯವನ್ನು ಸುಧಾರಿಸುತ್ತದೆ. ಆದರೆ ಹೆಚ್ಚಿನವರು … Read more

ಜೀರಂಗಿ ಜಗತ್ತು: ವೀರಯ್ಯ ಕೋಗಳಿಮಠ್

“ಕಾಲುತೊಳಿ ಮುಖತೊಳಿ, ಜೀಯೆನ್ನಲೇ”, ಅಂತ ಪದೇಪದೇ ರಾಗವಾಗಿ ಹಾಡುತ್ತಾ ಅದರ ಕಾಲು ಚಿವುಟಿ ನೆಲದಿಂದ ಮೇಲಕ್ಕೆ ಹಾರುವವರೆಗೆ ಬಿಡದೆ ಚಿತ್ರಹಿಂಸೆ ನೀಡಿ ಆಟ ಆಡಿಸುತ್ತಿದ್ದುದು ನಮ್ಮ ಬಾಲ್ಯದಲ್ಲಿ ನೆಚ್ಚಿನ ಜೀರಂಗಿ (Jewel Beetle/ Sternocera ruficornis) ಮತ್ತು ಹೆದ್ದುಮ್ಮಿಗಳಿಗೆ. ಹಲವು ಕಡೆ ಅವುಗಳಿಗೆ ಜಿಲಗಂಬಿ, ಜೀರ್ಜಿಂಬೆ, ಕಂಚುಗಾರ ಅಂತಾನೂ ಕರೀತಾರೆ. ಕೈಗೆ ಸಿಕ್ಕ ಜೀರಂಗಿಗಳನ್ನ ನಡೆಸಿಕೊಳ್ಳುವ ಪರಿಯನ್ನ ಹೇಳುವಂತಿಲ್ಲ. ಮನೇಲಿರೋ ಬೆಂಕಿಪೊಟ್ಣದ ಕಡ್ಡಿಗಳನ್ನೆಲ್ಲ ಚೆಲ್ಲಿ ಅದನ್ನೇ ಜೀರಂಗಿ ಗೂಡನ್ನಾಗಿ ಮಾಡಿ ಜೀಕುಜಾಲಿ ಅಥವಾ ತುಗಲಿ ಮರದ ತೊಪ್ಪಲು … Read more

ಕನ್ನಡಾಭಿಮಾನಿಗಳ ನಾಡಗೀತೆಗಳು: ಎಸ್. ರೋಹಿಣಿ ಶರ್ಮಾ

ಸರಿ ಸುಮಾರು ಎರಡೂವರೆ ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಈ ಕನ್ನಡ ನಾಡು ಸಾಹಿತ್ಯ-ಸಂಸ್ಕೃತಿ-ಸಂಗೀತ- ವೇಷಭೂಷಣ-ಭೌಗೋಳಿಕ ಹಿನ್ನೆಲೆ ಮುಂತಾದ ವಿಶೇಷಗಳಿಂದ ಕೂಡಿವೆ. ಶಾತವಾಹನ, ಗಂಗ, ಕದಂಬ, ಚಾಲುಕ್ಯ, ಹೊಯ್ಸಳ ಮೊದಲಾದ ರಾಜವಂಶದವರು ಸಮರ್ಥವಾಗಿ ಆಳಿದ್ದಲ್ಲದೆ ತಮ್ಮ ಕೀರ್ತಿಪತಾಕೆಯನ್ನು ಸುವರ್ಣಾಕ್ಷರಗಳಿಂದ ದಾಖಲಿಸಿದ್ದಾರೆ. ಪಂಪ, ರನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸ ಮೊದಲಾದವರು ಕನ್ನಡ ನಾಡಿನಲ್ಲಿ ಅಕ್ಷರಕ್ರಾಂತಿಯನ್ನು ಹರಡಿದವರು. ಬೇಲೂರು, ಹಳೇಬೀಡು, ಪಟ್ಟದಕಲ್ಲು, ಹಂಪಿ, ಬಾದಾಮಿ, ಐಹೊಳೆ ಮುಂತಾದ ಶಿಲ್ಪಕಲೆಗಳು ಇಂದಿಗೂ ತಮ್ಮ ಗತವೈಭವಕ್ಕೆ ಸಾಕ್ಷಿಗಳಾಗಿವೆ. ಇವೆಲ್ಲಕ್ಕಿಂತಲೂ ನಮ್ಮ ಪ್ರಾಚೀನ … Read more

ಮೂರು ಕವನಗಳು: ಇಂದು ಶ್ರೀನಿವಾಸ್

ಸಣ್ಣ ಭರವಸೆಗಳು ಸಾಕಲ್ಲವೇ ಬದುಕಿಗೆ… ..1..ಕೆಟ್ಟ ಆಲೋಚನೆಗಳೆಲ್ಲ ಜರ್ರನೆವಿಷದಂತೆದೇಹವೇರಿ ಕುಸಿದು ಬೀಳುವ ಮುನ್ನ..ಸಣ್ಣ ದೊಂದು ಪ್ರೀತಿಯ ಮಾತಿನ ಚಿಕಿತ್ಸೆ ದೊರೆತರೆ ಸಾಕಲ್ಲವೇ.?ಮರುಹುಟ್ಟಿಗೆ !!2..ಚಂಡಮಾರುತ ಬಿರುಗಾಳಿಯೆದ್ದುಹಡುಗು ಮುಳುಗಿಯೇ ಬಿಟ್ಟಿತು ಎನ್ನುವಾಗ.ಸಣ್ಣದೊಂದು ತುಂಡಿನ ಆಸರೆ ಸಾಕಲ್ಲವೇ.?ಮರುಜನ್ಮಕ್ಕೆ..!!3..ಜರಿವ ಮಾತುಗಳ ಇರಿವ ಕಣ್ಣೋಟಗಳ ಧಾಳಿಗೆ ಸೋತ ಅಬಲೆಯೊಂದು ಕರುಳುಬಳ್ಳಿಗಳ ಸಮೇತ ಕೆರೆಯಬದಿಗೆ ಬಂದು ನಿಂತಾಗ.!ಸಣ್ಣ ಭರವಸೆಯ ಮನಸೊಂದುಸಿಕ್ಕರೆ ಸಾಕಲ್ಲವೇ..?ಮರುಬದುಕಿಗೆ.!!4..ಸಣ್ಣ ಸಣ್ಣ ಭರವಸೆಗಳೇ ಸಾಕುಬಿಡಿ ಬದುಕ ನಗಿಸಲು.ಬದುಕಿನಖಾಡದಲ್ಲಿ ಸೋತ ಜಗಜಟ್ಟಿಗೂಸಣ್ಣ ಗೆಲುವೊಂದು ಸಾಕುಮತ್ತೆ ಮೀಸೆ ತಿರುವಲು.!!5..ಹೀಗೆ ಸಣ್ಣ ಪ್ರೀತಿ, ಆಸರೆ ಭರವಸೆಗಳೆ ತರುತ್ತವೆಜೀವನದಲ್ಲಿ ಹೊಸ … Read more

ಕನ್ನಡ ನಾಡು ನುಡಿ ಸಂಸ್ಕೃತಿಯ ಬೆಳವಣಿಗೆಗೆ ಕನ್ನಡಿಗರಾಗಿ ಕೈಗೊಳ್ಳಬೇಕಾದ ಹತ್ತು ಮಹತ್ವದ ನಿರ್ಧಾರಗಳು: ಶಿವಮೂರ್ತಿ ಹೆಚ್.

ಹೀಗೆ ಪ್ರತಿಯೊಬ್ಬರು ಕನ್ನಡ ನಾಡು ನುಡಿಗಾಗಿ ದೃಢಸಂಕಲ್ಪ ಮಾಡಿದರೆ ಕನ್ನಡ ಭಾಷೆಯ ಪರಿಮಳವು ಜಗತ್ತಿನಾದ್ಯಂತ ಪಸರಿಸಲು ಸಾಧ್ಯ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.ಕನ್ನಡವೇ ಸತ್ಯ, ಕನ್ನಡವೇ ನಿತ್ಯ.ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಸಾರ್ವಭೌಮರು. –ಶಿವಮೂರ್ತಿ ಹೆಚ್.

ದಸರಾ ರಜೆಯ ಮಜದ ಸಮೃಧ್ಧಿ ಪ್ರವಾಸ: ಚಂದ್ರು ಪಿ ಹಾಸನ್

ಮಕ್ಕಳಿಗೆ ರಜೆ ಅಂದ್ರೆ ತುಂಬಾ ಖುಷಿ. ಯಾವ ಮಕ್ಕಳನ್ನು ಕೇಳಿದರೂ ರಜೆ ಬಂದ್ರೆ ಮಜಾ ಮಾಡಬಹುದು, ಎಂಜಾಯ್ ಮಾಡಬಹುದು ಅನ್ನುವ ಉತ್ತರ ಆಗಾಗ ನನ್ನ ಕಿವಿಗೆ ಬೀಳುತ್ತಿತ್ತು.‌‌ ಆದರೆ ಅವರ ದೃಷ್ಠಿಯಲ್ಲಿ ಮಜಾ ಅನ್ನೋದು ಅಂದ್ರೆ ಏನು ಎಂಬ ಪ್ರಶ್ನೆ ನನಗೆ ಆಗಾಗ ಕಾಡುತ್ತಿತ್ತು. ತಿಳಿದುಕೊಳ್ಳಬೇಕೆಂಬ ಕುತೂಹಲದಲ್ಲಿದ್ದಾಗ ದಾರಿಯಲ್ಲಿ ಒಂದೆರಡು ಮಕ್ಕಳು ಹೋಗುತ್ತಿರುವುದನ್ನು ಕಂಡೆ. ಹಾಗೆ ಅವರನ್ನು ಮಾತನಾಡಿಸುತ್ತಾ ಮತ್ತು ಅವರ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸುತ್ತಾ ತಮ್ಮ ರಜಾ ಅವಧಿಯ ಬಗ್ಗೆ ವಿಚಾರಿಸಿದೆ. ಆಗ ಅವರು ಹೇಳ್ತಾರೆ, … Read more

ಯೇಸುಸ್ವಾಮಿ ಬೆಳ್ಳಗಿದ್ರಾ?: ಎಫ್.ಎಂ.ನಂದಗಾವ

ಅಪ್ಪಾ ಅಪ್ಪಾ, ಯೇಸುಸ್ವಾಮಿ ಮತ್ತ ಅವರ ಅಪ್ಪಾ ಜೋಸೆಫ್ ಮತ್ತು ತಾಯಿ ಮರಿಯಾಮಾತೆ ಬೆಳ್ಳಗಿದ್ರಾ?’’ ಮೂರನೇ ಕ್ಲಾಸಿನಲ್ಲಿ ಓದುತ್ತಿದ್ದ ಮಗ, ಮನೆಗೆ ಬಂದ ಕೂಡಲೇ ಅಪ್ಪನ ಮುಂದೆ ಈ ಪ್ರಶ್ನೆ ಇಟ್ಟಿದ್ದ. ಅಪ್ಪ ಮಾಸ್ಟರ್ ಇನ್ನಾಸಪ್ಪ, ಮುಸಿಪಾಲಟಿಯ ಒಂಬತ್ತನೇ ವಾರ್ಡಿನ ಶಾಲೆಯ ಒಂಬತ್ತನೇ ತರಗತಿಯ ಕೊನೆಯ ಪಿರಿಯಡ್ ನಲ್ಲಿ ಅಬ್ರಹಾಂ ಲಿಂಕನ್ನರ ಬಗ್ಗೆ ಪಾಠ ಮಾಡಿ ಬಂದಿದ್ದ. ಸುಮಾರು ಮೂರು ಶತಮಾನಗಳ ಹಿಂದೆ ಬ್ರಿಟಿಷರ ಆಡಳಿತದಿಂದ ಮುಕ್ತಗೊಂಡ, ಉತ್ತರ ಅಮೆರಿಕದ ವಿವಿಧ ರಾಜ್ಯ (ಸಂಸ್ಥಾನ)ಗಳ ದೇಶ `ಅಮೆರಿಕ … Read more

ಅಮಾಯಕ ರಾಮು: ಅಜಯ್ ಕುಮಾರ್ ಎಂ ಗುಂಬಳ್ಳಿ

ರಾಮು ಚೇಷ್ಟೆ ಹುಡುಗನಲ್ಲ. ಹೆದರಿಕೆ ಜಾಸ್ತಿ ಇದ್ದವನು. ತರಗತಿಯಲ್ಲಿ ಯಾರು? ಗಲಾಟೆ ಮಾಡಿದರು ಸುಮ್ಮನಿದ್ದುಬಿಡುವ ಸ್ವಭಾವ. ಅವನೊಟ್ಟಿಗೆ ಯಾವಾಗಲೂ ಕೂರುತ್ತಿದ್ದ ಡೋಲು ಕೆಂಪಣ್ಣನ ಮಗ ಡೂಕ ಪೆದ್ದುತನದ ಹೈದ. ತಾನೇ ಏನಾದರೂ ಮಾಡಿ ಸುಮ್ಮನೆ ಹಲ್ಲು ಕಿರಿಯುತ್ತ ಅವರಿವರ ಹತ್ತಿರ ಬೈಸಿಕೊಳ್ಳುತ್ತಿದ್ದ. ಮೇಷ್ಟರುಗಳಿಂದ ‘ಇವನು ಸ್ಕೂಲಿಗೆ ಬರೋದೆ ದಂಡ’ ಎನಿಸಿಕೊಂಡರೂ ಬರುತ್ತಿದ್ದ. ನೇರವಾಗಿ ‘ನಿಮ್ಮ ಮಗನನ್ನು ಇಸ್ಕೂಲಿಗೆ ಕಳಿಸಬೇಡಿ’ ಎಂದು ಹೇಳುವ ಹಾಗಿರಲಿಲ್ಲ. ಒಂದನೇ ತರಗತಿಯನ್ನು ಎರಡು ಸಲ ಓದಿ ಈಗ ತನಗಿಂತ ಎರಡು ವರ್ಷ ಕಿರಿಯ … Read more

“ಕನ್ನಡ ರಾಜ್ಯೋತ್ಸವ” ಕನ್ನಡಿಗರ ಹೃದಯೋತ್ಸವ: ಕಾಡಜ್ಜಿ ಮಂಜುನಾಥ

ಭಾರತದ ಸ್ವಾತಂತ್ರ್ಯದ ನಂತರ ಸಂವಿಧಾನ ರಚನೆಯಾಗಿ ಭಾಷೆಗಳ ಆಧಾರದ ಮೇಲೆ ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡ ನೆಲ, ಜಲ, ಜನರನ್ನು ಒಟ್ಟುಗೂಡಿಸಿ ರಚಿಸಿದ ಸುವರ್ಣ ಘಳಿಗೆ ಪ್ರತಿವರ್ಷ ನವೆಂಬರ್ ೧ ರಂದು ಕರ್ನಾಟಕ ಅಥವಾ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ೧೯೫೬ ರ ನವೆಂಬರ್ ೧ ರಂದು ಮೈಸೂರು ರಾಜ್ಯ ಉದಯವಾದ ಮರೆಯಲಾಗದ ದಿನವಾಗಿದೆ. ಕನ್ನಡಿಗರ ಅಸ್ಮಿತೆಗಾಗಿ ಅನೇಕ ಮಹನೀಯರು ಹೋರಾಟ ಮಾಡುವ ಮೂಲಕ ಕನ್ನಡ ನುಡಿಗೆ ಶಕ್ತಿ ತುಂಬುವ ಕೆಲಸ ಮಾಡುವ ಮೂಲಕ ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದ … Read more

ಭಾವಾಂತರಂಗದ ಓಲೆ…: ಮಾಂತೇಶ ಗೂಳಪ್ಪ ಅಕ್ಕೂರ

ನನ್ನ ಪ್ರಿಯತಮೆ ಚಿ. ಸೌ. ಕಣ್ಮಣಿ ನನ್ನ ಹಿಂದೆ ಮುಂದೆ ಹೆಜ್ಜೆ ಹಾಕಿ ಹೋದವರು ಹಲವರು, ಆದರೆ ನನ್ನ ಎದೆಯಲ್ಲಿ ಛಾಪು ಮೂಡಿಸಿದ್ದು ಮಾತ್ರ ನಿನ್ನ ಹೆಜ್ಜೆಯ ಗುರುತುಗಳೇ. ಆ ಗುರುತಿನ ಪಡಿತರ ಚೀಟಿಯನ್ನು ಹಿಡಿದು, ಪ್ರೀತಿ ನ್ಯಾಯ ಬೆಲೆ ಅಂಗಡಿಯ ಮುಂದೆ ಕ್ಯೂ ನಿಂತಿರುವೆ. ನಿನ್ನ ಒಲವು ರಿಯಾಯಿತಿ ದರದಲ್ಲಿ ಸಿಗುವ ಭರವಸೆಯೊಂದಿಗೆ.ನಿನ್ನ ಒಲವನು ತೂಗಿ ಕೊಡು ಗೆಳತಿ! ನನಗೇನು ಬೇಸರವಿಲ್ಲ ನೀ ಕೊಟ್ಟ ಅಷ್ಟೂ, ಇಷ್ಟು ಒಲವ ಕೆಲುವು ದಿನಗಳಿಗೆ ಮಾತ್ರ ಉಳಿಸಿಕೊಳ್ಳದೆ ; … Read more

ತವಾ ಪುಲಾವಿನ ತವಕ: ತೇಜಸ್‌ ಎಚ್‌ ಬಾಡಾಲ

ಮನುಷ್ಯನನ್ನು ಗೆಲ್ಲುವ ಪರಿ ಹಲವು. ಅದರಲ್ಲಿ ಪ್ರಮುಖವೂ ಸುಲಭವೂ ಆದ ಪರಿಯು ಅವನ ಉದರ. ಎಲ್ಲಾರು ಮಾಡುವುದು ಹೊಟ್ಟೆಗಾಗಿ ಎಂದು ದಾಸರು ಹೇಳಿರುವುದು ಸುಮ್ಮನೇಯೆ? ಹೊಟ್ಟೆಯ ಮೇಲೆ ಹೊಡೆಯುವುದು, ತಟ್ಟೆಗೆ ಮಣ್ಣು ಹಾಕುವುದು, ಉಪ್ಪು ತಿಂದ ಮನೆಗೆ ಎರಡು ಬಗೆಯುವುದು, ಎಷ್ಟೆಲ್ಲಾ ಗಾದೆಗಳೂ, ಗುಣಗಳೂ ಕೇವಲ ಊಟ, ನಾಲಗೆ ಇವುಗಳ ಸುತ್ತವೇ ತಿರುಗುತ್ತಿದೆ! ಹಾಗಾಗಿಯೇ ಮನುಷ್ಯನು ಹುಟ್ಟಿದ್ದು ಮೋಕ್ಷ ಸಾಧನೆಗಾಗಿ ಆದರೆ, ಅವನು ಬದುಕುತ್ತಿರುವುದು ಮಾತ್ರ ಊಟದ ಕೃಪೆಯಿಂದಾಗಿ. ಅಮ್ಮನ ಅಡುಗೆಯನ್ನು ತಿಂದು ಅದನ್ನು ಹೊಗಳುವುದೂ, ವಿಮರ್ಶಿಸುವುದೂ … Read more

ಗುಟಖಾ ಅವಾಂತರ: ನಾಗರಾಜನಾಯಕ ಡಿ ಡೊಳ್ಳಿನ

ಗುಟಖಾ . . ಗುಟಖಾ . . ಗುಟಖಾ . . ಎಲ್ಲೆಲ್ಲೂ ನೀನೆ ಎಲ್ಲೆಲ್ಲೂ ನೀನೆ ಅನ್ನುವಂಗ ಈ ಗುಟಖಾದ ಅವಾಂತರದಿಂದ ಸಾಕಾಗಿಹೋಗೇತಿ ನೋಡರಿ. ಗುಟಖಾ ಬಗ್ಗೆ ಹೆಂಗ ಪ್ರಾರಂಭಿಸಬೇಕು ಅನ್ನೋ ಮಾತೇ ಇಲ್ಲ, ಯಾಕಂದ್ರ ಗುಟಖಾ ಬೆಳಿಗ್ಗೆ ಎದ್ದು ಅಂಗಳ ಕಸ ಹೊಡೆಯುವಾಗ, ವಿಧ ವಿಧದ ವರ್ಣದ ಗುಟಖಾ ಚೀಟಗಳು ಮನೆ ಮುಂದಿನ ರಸ್ತೆಯಲ್ಲಿ ಬಿದ್ದಿರುತ್ತವೆ. ಕೆಲ ಪ್ಯಾಕೆಟುಗಳು ಕಡ್ಡಿಬಾರಿಗೆಲೆ ಎಷ್ಟು ಅಂದ್ರು ಹೋಗಲಾರದೆ ಕಿರಿಕಿರಿಮಾಡಿದಾಗ, ಕೊನೆಗೆ ಕೈಯಿಂದ ಗುಡಿಸಿ ರಸ್ತೆಯ ಒಂದು ಬದಿಯ … Read more

ಇದು ಕತೆಗಳ ಕಾಲವಯ್ಯಾ..: ಸಂಜಯ್ ಚಿತ್ರದುರ್ಗ

” ಬರೀ ಬರವಣಿಗೆಯಿಂದ ಬದುಕು ಕಟ್ಟಿಕೊಳ್ಳೊಕೆ ಸಾಧ್ಯವಿಲ್ಲ ” ಎಂದಿದ್ದ ಸಾಹಿತಿ ಏನಾದರೂ ಇವತ್ತು ಬದ್ಕಿದ್ರೆ ಮೂಗಿನ ಮೇಲೆ ಬೆರಳಿಟ್ಟುಕೊಂಡು ” ಹೌದೇನ್ರಿ. ಒಂದು ಕತೆಗೆ ಐವತ್ತು ಸಾವ್ರ ಬಹುಮಾನ ಕೊಡ್ತಾರಾ.. ಏನು ಲಕ್ಷ ರೂಪಾಯಿಯ ಸ್ಪರ್ಧೆ..! ಅದೂ ಬರೀ ಕಥಾ ಸ್ಪರ್ಧೆನಾ.. ಕಾಲ ಬದಲಾಗಿ ಬಿಡ್ತುಬಿಡಿ.. ನಮ್ ಕಾಲದಲ್ಲಿ ವರ್ಷಾನುಗಟ್ಟಲೆ ಅಧ್ಯಯನ ಮಾಡಿ, ಹಗಲು ರಾತ್ರಿ ಕೂತ್ಕೊಂಡು ಒಂದು ರಾಶಿ ಹಾಳೆ ತುಂಬಾ ಗೀಚಿ ಕೊನೆಗೆ ಅದ್ನ ಹಿಡ್ಕೊಂಡು ನೂರಾರು ಪ್ರಕಾಶನ ಅಲೆದು ಕೊನೆಗೂ ಯಾರೊ … Read more

ಪಂಜು ಕಾವ್ಯಧಾರೆ

ನುಡಿ ಸಿರಿ ಕನ್ನಡವೇ ಶಕ್ತಿ ಕನ್ನಡವೇ ಯುಕ್ತಿಕನ್ನಡವೇ ದೇವರಿಲ್ಲಿ ಕನ್ನಡವೇ ಭಕ್ತಿ..! ಚಂದದಾ ಚಂದನವುಕನ್ನಡಿಗರ ಮನಸು‘ಛಂದ’ದಾ ಹಂದರವುಕನ್ನಡದಲೆ ರಮಿಸು..! ಸಕ್ಕರೆಗು ಸಿಹಿ ನೀಡೋನುಡಿಯಂತೆ ನಾಡುಅಕ್ಕರೆಗು ಮುದ ನೀಡೋಅಚ್ಚರಿಯ ನೀನಾಡು..! ಸ್ವರ್ಗದಾ ಸಾಂಗತ್ಯ ,ಖುಷಿಯಿಂದ ಕುಣಿದಾಡುಬೇರೇನಿಲ್ಲ ಕನ್ನಡವನೆತೆರಿಗೆಯಾಗಿ ನೀಡು..! ತುಟಿತೆರೆದರೆ ಉಲಿದಂತೆಬಂಗಾರದ ವೀಣೆಗರಿಬಿಚ್ಚಿದ ನವಿಲಂತೆಅಕ್ಷರದ ಜೋಡಣೆ..! ಇಲ್ಲಿ ಜನಿಸಿದ್ದೆ ಪುಣ್ಯವುನನ್ನವ್ವ ನಿನ್ನಾಣೆನೆಮ್ಮದಿಗೆ, ನಿನ್ನಂತ ಉಪಮೆಯಬೇರೆಲ್ಲೂ ನಾ ಕಾಣೆ..! –ಮನು ಪುರ. ಬಾಲ್ಯ.. ಆ ದಿನಗಳೆಷ್ಟು ಚಂದನಾನಾಗಿನ್ನೂ ಮುಗ್ಧ ಕಂದನಿತ್ಯ ತುಂಬಿ ತುಳುಕುವ ಆನಂದಮರೆಯಾದ ನೆನಪು ಗಾಯದಗುರುತಿನಿಂದ.. ಜೇನಿನಂತಹ ಮಧುರ … Read more

ಅಮ್ಮಾ ನಾನು ಶಾಲೆಗೆ ಹೋಗಲ್ಲ!: ಪರಮೇಶ್ವರಿ ಭಟ್

ನಾಲ್ಕು ವರ್ಷದ ವಿಭಾ ಶಾಲೆಯಿಂದ ಬರುವಾಗ ಸಪ್ಪಗಿದ್ದಳು. ಅವಳ ತಾಯಿ ರಮ್ಯ’ ಏನಾಯ್ತು ಪುಟ್ಟ?’ಅಂತ ಕೇಳಿದರೆ ಉತ್ತರಿಸಲಿಲ್ಲ. ಮರುದಿನ ‘ಅಮ್ಮ, ನಾನು ಶಾಲೆಗೆ ಹೋಗಲ್ಲ ‘ಅಂತ ಅಳತೊಡಗಿದಳು‌ . ಏನಾಯ್ತು ಅಂದರೆ ಸುಮ್ಮನೆ ಅಳತೊಡಗಿದಳು. ಆದರೂ ಅವಳನ್ನು ಸ್ನಾನಕ್ಕೆ ಕರಕೊಂಡು ಹೋದಾಗ ತಾಯಿಗೆ ದಿಗಿಲಾಯಿತು. ಅವಳನ್ನು ತಕ್ಷಣ ಡಾಕ್ಟರರಲ್ಲಿ ಕರಕೊಂಡು ಹೋದಳು.ಆಗ ವಿಭಾಳ‌ ಮೇಲೆ ನಡೆದ ಅತ್ಯಾಚಾರ ನಡೆದಿದೆ ಎಂದು ತಿಳಿಯಿತು. ರಮ್ಯಾಳ ರಕ್ತ ಕುದಿಯಿತು. ವಿದ್ಯಾ ದೇಗುಲದಲ್ಲಿ ನೀಚ ಕೃತ್ಯ! ಒಂದಲ್ಲಾ ಒಂದು ಶಾಲೆಯಲ್ಲಿ ಈ … Read more

ಹೀಗೊಂದು ಕನಸು: ರಾಜೇಂದ್ರ ಬಿ. ಶೆಟ್ಟಿ.

ಹೀಗೇ ಬಿದ್ದುಕೊಂಡು ಎಷ್ಟು ದಿನಗಳದವು ಎಂದು ನೆನಪಿಲ್ಲ. ಯಾರನ್ನಾದರೂ ದಿನ ಇಲ್ಲವೇ ತಾರೀಕು ಕೇಳಿದರೆ, “ನಿಮಗೆ ಯಾವ ತಾರೀಕಾದರೇನು, ಯಾವ ದಿನವಾದರೂ ಏನು?” ಅನ್ನುವ ಉಡಾಫೆಯ ಉತ್ತರಗಳು. ಎಷ್ಟೋ ಸಲ ಹಗಲು ಯಾವುದು, ರಾತ್ರಿ ಯಾವುದು ಎಂದು ಗೊತ್ತಾಗುತ್ತಿಲ್ಲ. ಕಿಟಕಿ ಬಾಗಿಲುಗಳನ್ನು ಮುಚ್ಚಿದ್ದಾರೆ – ನನ್ನ ನರಳಾಟ ಬೇರೆಯವರಿಗೆ ಕೇಳುವುದು ಬೇಡ ಎಂದು. ಯಾರೋ ನನ್ನನ್ನು ಮೇಲಕ್ಕೆ ಎಳೆಯುತ್ತಿದ್ದಾರೆ. ಸುತ್ತಲೂ ನೀಲ ಆಕಾಶ. ಯಾರೂ ಕಾಣುತ್ತಿಲ್ಲ. ಒಂದು ರೀತಿಯ ಶಾಂತ ಪರಿಸ್ಥಿತಿ. ನಾನು ಸತ್ತಿದ್ದೇನೆಯೇ? ಒಮ್ಮೆಲೇ ಕತ್ತಲು. … Read more

ಸಮಾಜಮುಖಿ ಕಥಾ ಪುರಸ್ಕಾರ-2024 ಆಹ್ವಾನ

ಸಮಾಜಮುಖಿ ಪ್ರಕಾಶನ ಕನ್ನಡದ ಕಥಾಪರಂಪರೆಗೆ ಅರ್ಥಪೂರ್ಣ ಪ್ರಚೋದನೆ ನೀಡುವ ಉದ್ದೇಶದಿಂದ ‘ಸಮಾಜಮುಖಿ ವಾರ್ಷಿಕ ಕಥಾ ಪುರಸ್ಕಾರ-2024’ ಏರ್ಪಡಿಸಿದೆ. ಸಮಾಜಮುಖಿ ಪುರಸ್ಕಾರಕ್ಕೆ ಆಯ್ಕೆಯಾಗುವ ಐದು ಕಥೆಗಾರರಿಗೆ ತಲಾ ರೂ.5000 ನಗದು ನೀಡಿ ಗೌರವಿಸಲಾಗುವುದು. ಜೊತೆಗೆ ಆಯ್ದ ಹದಿನೈದು ಕಥೆಗಳಿಗೆ ಸಮಾಜಮುಖಿ ವಾರ್ಷಿಕ ಕಥಾ ಸಂಕಲನದಲ್ಲಿ ಅವಕಾಶ ಸಿಗಲಿದೆ. ಕಥೆಗಾರರು 2000 ಪದಮಿತಿಯ, ಯಾವ ಮಾಧ್ಯಮದಲ್ಲೂ ಪ್ರಕಟವಾಗದ, ನುಡಿ/ಯುನಿಕೋಡ್ ಲಿಪಿಯಲ್ಲಿರುವ ಕಥೆಯನ್ನು ವರ್ಡ್ ಕಡತದಲ್ಲಿ 31 ಡಿಸೆಂಬರ್ 2024ರೊಳಗೆ ಕಳುಹಿಸಬೇಕಾದ ಇಮೇಲ್ ವಿಳಾಸ: samajamukhi2017@gmail.com

ಯುದ್ಧ ಮತ್ತು ಮಕ್ಕಳು: ನಾಗಸಿಂಹ ಜಿ ರಾವ್

ಯುದ್ಧ, ನೈಸರ್ಗಿಕ ವಿಕೋಪ, ಶೋಷಣೆ, ದೌರ್ಜನ್ಯಗಳಿಂದ ಮಕ್ಕಳಿಗೆ ರಕ್ಷಣೆ ಕೊಡಬೇಕೆಂದು ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ತಿಳಿಸಿದೆ. ವಿಶ್ವಸಂಸ್ಥೆಯ ಈ ಆದೇಶವನ್ನು ಒಪ್ಪಿಕೊಂಡು ಒಡಂಬಡಿಕೆಗೆ ಸಹಿ ಮಾಡಿ ಯುದ್ಧದಲ್ಲಿ ತೊಡಗಿರುವ ರಾಷ್ಟ್ರಗಳ ಮಕ್ಕಳ ಪರಿಸ್ಥಿತಿ ನಿಜಕ್ಕೂ ಶೋಚನೀಯ. ಯುದ್ಧ ಮಾನವನ ಎಲ್ಲಾ ಹಕ್ಕುಗಳನ್ನು ಉಲ್ಲಂಘನೆ ಮಾಡಿ ಮಾನವನ ಘನತೆ ಮತ್ತು ಗೌರವವನ್ನು ಮಣ್ಣುಪಾಲು ಮಾಡುತ್ತದೆ. ಯುದ್ಧದಲ್ಲಿ ಗೆದ್ದೆವು ಎಂದು ಭ್ರಮೆಗೆ ಒಳಗಾಗುವ ರಾಷ್ಟ್ರಗಳು ಹಾಗೂ ಸೋತೆವು ಎಂದು ಪರಿತಪಿಸುವ ರಾಷ್ಟ್ರಗಳು ಚೇತರಿಸಿಕೊಳ್ಳಲು ಹಲವಾರು … Read more

ಕ್ಷಮಾ ಕೊನೆಗೂ ನಕ್ಕಳು . . . . . !!!!!: ನಾಗಸಿಂಹ ಜಿ. ರಾವ್

“ಗುರುಗಳೇ. . ಮುಂದಿನ ವಾರದಿಂದ ನಮ್ಮ ಸಂಸ್ಥೆಗೆ ಕಥೆ ಹೇಳೋಕೆ ಬರಬೇಕು. . ಇಲ್ಲಾ ಅನ್ನಬೇಡಿ” ಅಂತ ಫಾದರ್ ಜಾನ್ ಹೇಳಿದಾಗ ಬಹಳ ಖುಷಿಯಾಯ್ತು .“ಮಕ್ಕಳಿಗೆ ಕಥೆ ಹೇಳೋ ಚಾನ್ಸ್ ಬಿಡೋಕೆ ಆಗುತ್ತಾ ಫಾದರ್ ಖಂಡಿತ ಬರ್ತೀನಿ, ಪ್ರತಿದಿನ ಸಂಜೆ ೪-೬ ಸಮಯ ಕೇವಲ ಎರಡು ವಾರ ಓಕೆನಾ? ಅಂದೆ, ಫಾದರ್ ಬಹಳ ಸಂತೋಷದಿಂದ ಒಪ್ಪಿಕೊಂಡರು.ಫಾದರ್ ಜಾನ್ “ಆಸರೆ” ಅನ್ನೂ ಮಕ್ಕಳ ಸಂರಕ್ಷಣಾ ಗೃಹವನ್ನ ಸುಮಾರು ವರುಷಗಳಿಂದ ನಡೆಸಿಕೊಂಡು ಬರ್ತಿದಾರೆ. ಅವರ ಸಂಸ್ಥೆಗೆ ಮಕ್ಕಳ ರಕ್ಷಣಾ ನೀತಿ … Read more

ಮಾತಿನ ಮಾತು: ಡಾ. ಮಸಿಯಣ್ಣ ಆರನಕಟ್ಟೆ.

“ನೀಲಕುರಿಂಜಿ” ಅರೇ, ಅದೆಂತಹ ಮುದ್ದಾದ ಹೆಸರು. ಒಂದು ಕ್ಷಣ ಮನಸ್ಸಿನ ಮಾದಕತೆಯಲ್ಲಿ ಕರಗುವುದಂತೂ ಖಂಡಿತ. ಈ ನೀಲಕುರಿಂಜಿ ಅನ್ನುವ ಹೆಸರನ್ನು ಕೇಳಿದ್ದು ಕಾಲೇಜಿನಲ್ಲಿ ಜನಾರ್ಧನ್ ಮೇಷ್ಟ್ರು ಜೀವಶಾಸ್ತ್ರ ಪಾಠ ಮಾಡುತ್ತಿರಬೇಕಾದ್ರೆ ಅನ್ನೋ ನೆನಪು ಬ್ಯಾಕ್ ಆಫ್ ಮೈಂಡ್ ಅಲ್ಲಿ ಇದೆ. ‘ಸ್ಟ್ರಾಬಲೆಂತಸ್ ಕುಂತಿಯಾನ ‘ ಇದು ಒಂದು ಹೂ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುತ್ತೆ; ವಿಶೇಷ ಏನಂದ್ರೆ ೧೨ ವರ್ಷಕ್ಕೆ ಒಮ್ಮೆ ಅರಳುತ್ತೆ ಜೊತೆಗೆ ಬಿದಿರಿನ ವಿಶೇಷತೆ ಬಗ್ಗೆಯೂ ಒಂದಷ್ಟು ತರಗತಿಯಲ್ಲಿ ಹೇಳಿದ್ದರು. ನನಗೇಕೆ ಈಗ ನೆನಪಾಗಿದೆ ಅಂದ್ರೆ … Read more

ಎಲ್ಲೆಲ್ಲೋ ಓಡುವ ಮನಸೇ….: ಶೀತಲ್ ವನ್ಸರಾಜ್

ಮೊನ್ನೆ ಆಫೀಸಿಗೆ ಹೋಗಲು ಕ್ಯಾಬ್ ಬುಕ್ ಮಾಡ್ತಾ ಇದ್ದೆ. ಯಾಕೋ ಯಾವ ವಾಹನವೂ ಸಿಗುತ್ತಿರಲಿಲ್ಲ. ನಮಗೆಲ್ಲಾ ಗೊತ್ತಿರುವ ವಿಚಾರವೇ, ನಮ್ಮ ರಾಜಧಾನಿಯ ಟ್ರಾಫಿಕ್ ಗೋಳು. ಇಲ್ಲಿ ಅರ್ಧ ಜೀವನ ರೋಡಿನಲ್ಲಿ ಇನ್ನರ್ಧ ವಾಹನಕ್ಕಾಗಿ ಕಾಯುವುದರಲ್ಲಿ ಮುಗಿದು ಹೋಗುತ್ತದೆ ಎಂಬುವುದು. ನಮ್ಮೂರಿನ ಎಲ್ಲಾ ಸಾಮಾನ್ಯರಿಗೂ ಸಾಮಾನ್ಯವಾಗಿ ಹೋಗಿದೆ, ರೋಡಿನಲ್ಲಿ ವ್ಯಯ ಮಾಡಿದ ಸಮಯವನ್ನು ನಿರ್ಲಕ್ಷಿಸುವುದು. ಹೋಗಲಿ ಬಿಡಿ ಈಗ ನೇರ ವಿಚಾರಕ್ಕೆ ಬರುವೆ. ಅಂದು ಕೊನೆಗೂ ನನಗೊಂದು ಕ್ಯಾಬ್ ಸಿಕ್ಕಿತು. ಮರುಭೂಮಿಯಲ್ಲಿ ಸಣ್ಣ ಒರತೆ ಸಿಕ್ಕ ಸಂತೋಷ ನನಗೆ. … Read more

ದೇವರ ಜಪವೆನ್ನುವ ಜಿಪಿಎಸ್: ರೂಪ ಮಂಜುನಾಥ, ಹೊಳೆನರಸೀಪುರ.

ಸಜ್ಜನರ ಸಹವಾಸ ಯಾವಾಗಲೂ ನಮ್ಮನ್ನ ಉಚ್ಚ ವಿಚಾರಗಳನ್ನು ಯೋಚನೆ ಮಾಡಲು ಪ್ರೇರೇಪಿಸುತ್ತವೆ. ಹಾಗೇ ಹೆಚ್ಚೆಚ್ಚು ಜ್ಞಾನ ಸಂಪಾದನೆಯ ಉಪಾಯಕ್ಕೆ ಹಚ್ಚುತ್ತವೆ ಎನ್ನುವುದು ಬಹಳ ಜನರ ಅನುಭವಕ್ಕೆ ಬಂದಿರುತ್ತದೆ. ಇದೇ ರೀತಿ, ಯಾವ ಜನ್ಮದ ಪುಣ್ಯವೋ ಎನುವಂತೆ ನನಗೂ ಹಲವಾರು ಸಜ್ಜನರು, ಸುಜ್ಞಾನಿಗಳು ಹಾಗೂ ಹಿತ ಕೋರುವವರು, ನನ್ನ ತಿಳುವಳಿಕೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದಾದ ಯುಕ್ತಿಗಳನ್ನು ತಿಳಿಸುವ ಗುರುಗಳ ಸ್ಥಾನದಲ್ಲಿರುವ ಸನ್ಮಿತ್ರರ ಪರಿಚಯ ಆಗಿದೆ. ಅದು ನನ್ನ ಸೌಭಾಗ್ಯವೇ ಸರಿ. ನಮ್ಮದೇ ಊರಿನ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಪ್ರೊಫೆಸರ್ … Read more