ಬಸ್ಸಿನಲ್ಲಿಯ ಕಳ್ಳಿ: ಶೈಲಜ ಮಂಚೇನಹಳ್ಳಿ

ಒಂದು ದಿನ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ಹೋಗಿದ್ದ ನಾನು ಹಿಂದಿರುಗಲು ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬರುವ ಒಂದು ಖಾಸಗಿ ಬಸ್ಸಿನಲ್ಲಿ ಎರಡು ಸೀಟ್ ಇರುವ ಕಡೆ ಕಿಟಕಿಯ ಪಕ್ಕ ಕುಳಿತಿದ್ದೆ. ಸ್ವಲ್ಪ ಹೊತ್ತಾದ ನಂತರ ಇನ್ನೊಬ್ಬ ಹೆಂಗಸು ನನ್ನ ಪಕ್ಕದ ಸೀಟಿನಲ್ಲಿ ಕುಳಿತರು. ಕಿಟಕಿಯ ಪಕ್ಕದಲ್ಲಿ ಕುಳಿತಿದ್ದರಿಂದ ಎಂದಿನಂತೆ ನನ್ನ ಗಮನ ಹೊರಗಿನ ದೃಶ್ಯಗಳನ್ನು ಕಿಟಕಿಯಿಂದ ಇಣುಕಿ ನೋಡುವಂತೆ ಮಾಡಿತ್ತಾದ್ದರಿಂದ ಪಕ್ಕದಲ್ಲಿದ್ದವರ ಕಡೆ ಅಷ್ಟಾಗಿ ಗಮನ ಕೊಟ್ಟಿರಲಿಲ್ಲ. ಆಕೆ ಕುಳಿತು ಬಹುಶಃ ಒಂದೈದು ನಿಮಿಷವಾಗಿರಬಹುದು ಒಂದು ಮಗುವನ್ನು ಎತ್ತುಕೊಂಡಿದ್ದ … Read more

ಮೂರು ಕವನಗಳು: ಡಾ. ತೇಜಸ್ವಿನಿ

1) ಕವಿತೆ ಎಂದರೆ ಕವಿತೆ ಎಂದರೆಮನದಾಳದ ಭಾವನೆಗಳಕವಿಯಾಗಿ ಹಾಡುವುದು. ಕವಿತೆ ಎಂದರೆಹೃದಯಾಳದ ನೆನಪುಗಳುಭಾವನೆಯಾಗಿ ಅರಳುವುದು. ಕವಿತೆ ಎಂದರೆಮನದ ಧರೆಯೊಳಗೆಅವಿತಿರುವ ಸುಪ್ತಭಾವಗಳ ಹೊರಸೂಸುವುದು. ಕವಿತೆ ಎಂದರೆರವಿ ಕಾಣದನ್ನುಕವಿಯಾಗಿ ಕಂಡುಕೋಗಿಲೆಯಂತೆ ಹಾಡುವುದು. ಕವಿತೆ ಎಂದರೆಕವಿ ತನ್ನತನವ ತಾಕವಿಯಾಗಿ ಕಾಣುವುದು. 2) ಕನ್ನಡ ಕನ್ನಡ ನಾಡಿನ ಕೋಗಿಲೆಗಳಿರಾಕನ್ನಡ ನಾಡಿನ ಕಂದಗಳಿರಾಕನ್ನಡಕ್ಕಾಗಿ ಕೈ ಎತ್ತಿಕನ್ನಡಕ್ಕಾಗಿ ಹೋರಾಡಿಕನ್ನಡ ನಾಡಿನ ಕಣ್ಮಣಿಗಳಾಗಿ. ತನು ಕನ್ನಡ, ಮನ ಕನ್ನಡನುಡಿ ಕನ್ನಡ ಭವ ಕನ್ನಡಹಳೆಗನ್ನಡ ನಡುಗನ್ನಡಎಲ್ಲವೂ ಕನ್ನಡ, ಕನ್ನಡ ಕನ್ನಡ ಹರ ಕನ್ನಡ, ಹರಿ ಕನ್ನಡಸಿರಿಕನ್ನಡ, ತಾಯಿಕನ್ನಡಅವ ಕನ್ನಡ … Read more

ಮೂರು ಕವನಗಳು: ಮೇದರದೊಡ್ಡಿ ಹನುಮಂತ

1) ಒಂಟಿ ಚಪ್ಪಲಿ ನಾ ಕೊಂಡ ಆರಿಂಚಿನ ದುಬಾರಿ ಮೊತ್ತದ ಚಪ್ಪಲಿಗಳಲ್ಲಿಒಂದು ಮಾತ್ರ ಉಳಿದಿದೆ ಮತ್ತೊಂದು ನಾಯಿ ಪಾಲಾಯಿತೋ..ಬೀದಿ ಪಾಲಾಯಿತೋ..ನೀರು ಪಾಲಾಯಿತೋ..ಅರಿವಿಲ್ಲ ಹೈಕಳು ಹರಿದಿರಬಹುದೇ..?ಬೇಕಂತಲೇ ಎಸೆದಿರಬಹುದೆ?ಕಳುವಾದ ಸಾಧ್ಯತೆಯಿಲ್ಲಒಂಟಿ ಚಪ್ಪಲಿ ಎಲ್ಲಿ ನರಳಿಹುದೋ..? ದುಃಖಿಸಲೇ.. ಒಂದು ಚಪ್ಪಲಿ ಕಳೆದು ಹೋಗಿದಕ್ಕೆಸುಖಿಸಲೇ..ಒಂದು ಚಪ್ಪಲಿ ಉಳಿದಿದ್ದಕ್ಕೆಅತ್ರಂತ್ರ ಸ್ಥಿಥಿ ಬರಿಗಾಲು ಉಳಿದ ಕಾಣೆಯಾದಬಿಡಿಬಿಡಿಯಾದ ದುಬಾರಿ ಚಪ್ಪಲಿಗಳನುಅಣಕ ಮಾಡುತ್ತಿವೆಪುಟಪಾತಿನಲಿ ನೂರಕ್ಕೋ ಇನ್ನೂರಕ್ಕೋ..ಅಗ್ಗವಾಗಿ ಸಿಕ್ಕಹಳೆಯ ಅವಾಯಿ ಚಪ್ಪಲಿಗಳು 2) ಕೀಳರಿಮೆ ಮೆಳ್ಳೆಗಣ್ಣೆಂಬ ಕೀಳರಿಮೆ ಹೊರಟು ಹೋಯಿತೆನಗೆಕುರುಡರ ಕಂಡ ಮೇಲೆ ಎಡಚನೆಂಬ ಕೀಳರಿಮೆ ಹೋಯಿತೆನಗೆಕೈಯಿಲ್ಲದವರ ಕಂಡ ಮೇಲೆ … Read more

ಮೂರು ಕವಿತೆಗಳು: ಗೀತಾ ಡಿ. ಸಿ.

೧. ಮಹಾಕಾವ್ಯ ಬೀಜ ಮೊಳಕೆಯೊಡೆದುಮಣ್ಣಿನಾಳಕ್ಕೆ ಬೇರೂರುತ್ತಲೇಕತ್ತಲ ಮಣ್ಣಗರ್ಭ ಸೀಳಿಬೆಳಕು ಮೋಡ ಗಾಳಿ ಮಳೆಬಿಸಿಲು ಬೆಳದಿಂಗಳಿಗೆಮೈಯ್ಯೊಡ್ಡುತ್ತಾ ಮೊಗ್ಗಾಗಿಹೂವು ಹೀಚು ಕಾಯಿಹಣ್ಣಾಗಿ ಮಾಗಿ ಮಣ್ಣುಸೇರುವ ಅನುದಿನದಾಟಅಷ್ಟು ಸುಲಭದ್ದೇನೂ ಅಲ್ಲ. ಇಲಿ ಹೆಗ್ಗಣಗಳಾದಿಯಾಗಿದೊಡ್ಡ ಬೇರುಗಳ ನಡುವೆದಿಟ್ಟತನದಿ ಗಟ್ಟಿ ಬೇರೂರಿಒಂದಿಷ್ಟು ಚಿಗುರ ಚಾಚಿದರಷ್ಟಕ್ಕೇಮುಗಿಯುವುದಿಲ್ಲ..ಬಿಸಿಲು ಮಳೆ ಗಾಳಿಗಳ ಹೊಡೆತಕ್ಕೆದನಕರುಗಳ ಮನುಜರಕೈಕಾಲು ಬಾಯಿಗಳಿಂದಲೂಬಚಾವಾಗಬೇಕು! ತನ್ನ ಗುರುತೂರಲುಬೀಜ ಮೊಳಕೆಯೊಡೆದುಹಣ್ಣಾಗಿ ಮಣ್ಣಸೇರಿಮತ್ತೆ ಚೆಗುರೊಡೆಯಲುನಿತ್ಯ ಕನಸು ಭರವಸೆಗಳಹೊತ್ತು ನಂಬಿಕೆಯೇ ತಾನಾಗಿಬಯಲಲ್ಲಿ ಬಯಲಾಗಿಎಚ್ಚರದಿ ಸಹಜತನದಲಿತನ್ನನೊಡ್ಡಿಕೊಳ್ಳುತ್ತಲಿರಬೇಕು.. ಮುಗಿಲೆತ್ತರಕೆ ಬೆಳೆದರಷ್ಟೆ ಸಾಕೆ?ಮೊಗ್ಗು ಹೂವಾಗಿ ಕಂಪಬೀರಬೇಕುಹೀಚು ಕಾಯಾಗಿ ಹಣ್ಣಾಗಿಬಯಸಿದವರ ಬೊಗಸೆತುಂಬಬೇಕುನಂಬಿದವರ ಹಸಿವೆ ನೀಗಬೇಕು…ತಿಂದವರ ತೃಪ್ತಿರಲಿ ಬೀಜಮತ್ತೆ … Read more

ಕಣ್ಣು ಮಿಟುಕಿಸದೆ ನೋಡುವ ಚಿತ್ರ: ಬ್ಲಿಂಕ್: ಎಂ. ನಾಗರಾಜ ಶೆಟ್ಟಿ

ಕೆಲವು ಸಿನಿಮಾಗಳನ್ನು ವಿವರಿಸುವಂತಿಲ್ಲ, ಅರ್ಥ ಹೇಳುವಂತಿಲ್ಲ; ಅನುಭವವಾಗಿ ಗ್ರಹಿಸಬೇಕು. ವ್ಯಕ್ತಿಯಿಂದ ವ್ಯಕ್ತಿಗೆ ದಕ್ಕುವ ಅನುಭವ ಭಿನ್ನವಾಗಿರಬಹುದು. ಹಾಗಿದ್ದರೆ ಒಳ್ಳೆಯದೇ. ಮತ್ತೆ ಮತ್ತೆ ನೋಡುವ, ನೋಡಲು ಪ್ರೇರೇಪಿಸುವ ಗುಣವಿದ್ದರಂತೂ ಸಾರ್ಥಕ. ಈ ಮಾತುಗಳನ್ನು ‘ಬ್ಲಿಂಕ್’ ಸಿನಿಮಾದ ಹಿನ್ನೆಲೆಯಲ್ಲಿ ಹೇಳುತ್ತಿದ್ದೇನೆ. ‘ಟೈಮ್ ಟ್ರಾವಲ್ ‘ ಜಾನರ್ ನಲ್ಲಿ‌ ಸಿನಿಮಾ ಮಾಡುವುದು ಸವಾಲೇ ಸರಿ. ಈ ಜಾನರ್ ನಲ್ಲಿ ಕೆಲವು ಸಿನಿಮಾಗಳು ಯಶಸ್ವಿಯಾಗಿದ್ದಿದೆ. ಆದರೆ ಕಾಲಯಂತ್ರದಲ್ಲಿ ಹಿಂದಕ್ಕೂ, ಮುಂದಕ್ಕೂ ಚಲಿಸುತ್ತಾ ನೋಡುಗನ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವುದು, ಮುಂದೇನು ಎನ್ನುವ ಕಾತರವನ್ನು ಹೆಚ್ಚಿಸುತ್ತಾ ಹೋಗುವುದು … Read more

ಸುಮೇರು ನಂದನ: ಬಿ. ಟಿ. ನಾಯಕ್

ಅವಧದ ಮಹಾರಾಜಾ ಮಧುಕರ ನಂದನ ಮತ್ತು ರಾಣಿ ಸೌಮ್ಯವತಿ ಇವರ ಏಕ ಮಾತ್ರ ಪುತ್ರನಾದ ರಾಜಕುಮಾರ ಸುಮೇರು ನಂದನ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾಗಿದ್ದ. ಆತನ ಗುರುಗಳಾದ ಆಚಾರ್ಯ ಮಧುರಾಕ್ಷರರ ಬಳಿ ಆತನು ಕಲಿತಿದ್ದನು. ಆದರೆ, ಅವರ ಗುರುಗಳು ತಿಳಿಸಿದ ಹಾಗೆ ಆತ ವಿದ್ಯೆಯನ್ನು ಸದ್ಬಳಕೆ ಮಾಡುತ್ತಿರಲಿಲ್ಲ. ಆತನು ಕಲಿತುಕೊಂಡ ಬಿಲ್ಲು ವಿದ್ಯೆ ಒಂದು ಹವ್ಯಾಸ ವೃತ್ತಿಯಾಯಿತು. ಆತನು ಆಗಾಗ ಒಂಟಿಯಾಗಿ ಅರಣ್ಯಕ್ಕೆ ಹೋಗಿ ಮೃಗಗಳನ್ನು ಬೇಟೆಯಾಡುತ್ತಿದ್ದ. ಎಷ್ಟೋ ಮೃಗಗಳನ್ನು ಬೇಟೆಯಾಡಿ ಅವುಗಳ ಮಾರಣ ಹೋಮ ಮಾಡಿ ಆನಂದಿಸುತ್ತಿದ್ದ. … Read more

ಖಾಲಿಯೇ ಭರ್ತಿ!: ಡಾ. ಹೆಚ್ ಎನ್ ಮಂಜುರಾಜ್

ಪ್ರಾಚೀನ ಚೀನಾದ ಮೂರು ಮುಖ್ಯ ಜೀವನಧರ್ಮಗಳಲ್ಲಿ ಮೂಲತಃ ಎರಡು ಅಲ್ಲಿಯವೇ. ಒಂದು ತಾವೋ, ಇನ್ನೊಂದು ಕನ್ಫ್ಯೂಷಿಯಸ್. ಮತ್ತೊಂದು ಬೌದ್ಧವು ಭಾರತದ ಬಿಕ್ಕುಗಳ ಮೂಲಕ ಚೀನಾವನ್ನು ಪ್ರವೇಶಿಸಿದ್ದು. ಕ್ರಿ. ಪೂ. ಆರನೆಯ ಶತಮಾನದಲ್ಲೇ ತಾವೋ ಜನಿಸಿತು. ಇದರ ನಿರ್ಮಾತೃ ಆಚಾರ್ಯ ಲಾವೋತ್ಸೆ. ಇವನು ಚೌ ಚಕ್ರವರ್ತಿಯ ಆಸ್ಥಾನದಲ್ಲಿ ನೌಕರನಾಗಿದ್ದವನು ತರುವಾಯ ವಿರಕ್ತ ಜೀವನ ನಡೆಸಿದನು. ನಮ್ಮ ಉಪನಿಷತ್ತುಗಳ ನಿರ್ಗುಣ ಬ್ರಹ್ಮತತ್ತ್ವ ಮತ್ತು ಬೌದ್ಧರ ನಿರ್ವಾಣ ತತ್ತ್ವಗಳಂತೆ ಇವನ ಮಾತುಗಳಿವೆ. ಪಥವಲ್ಲದ ಪಥವೆಂದೂ ಬಾಗಿಲಿಲ್ಲದ ಹೆಬ್ಬಾಗಿಲೆಂದೂ ಇವನ ಸಿದ್ಧಾಂತವನ್ನು ವರ್ಣಿಸಲಾಗಿದೆ. … Read more

ಓದುವ ಸುಖ ಹಾಗೂ ಅರಿವು: ಗೋಳೂರ ನಾರಾಯಣಸ್ವಾಮಿ

ಓದುವ ಸುಖ ಹಾಗೂ ಅದು ನಮ್ಮಲ್ಲಿ ಮೂಡಿಸುವ ಅರಿವಿದೆಯಲ್ಲ ಅದರ ಆನಂದವೇ ಬೇರೆ. ನಾವು ಏನನ್ನೋ ಓದುವಾಗ ಇನ್ಯಾವುದೋ ಹೊಸದೊಂದು ಕಥೆ, ಚಿಂತನೆ ಹುಟ್ಟುಕೊಳ್ಳುವುದು ಅಥವಾ ಈಗಾಗಲೇ ನಡೆದು ಹೋಗಿರುವ ಘಟನೆಗಳ ನೆನಪು ಕಾಡುವುದು ಮನಸ್ಸಿಗೆ ಒಂಥರ ಮುದ ಅನ್ನಿ. ಕವಿ ಪ್ರೇಮಚಂದನ ಮಾತುಗಳಿವು: “ಒಳ್ಳೆಯವರ ಮಧ್ಯದಲ್ಲಿ ಯಾಕೆ ಅಷ್ಟೊಂದು ದ್ವೇಷ? ಹಾಗೆಯೇ ಕೆಟ್ಟವರ ನಡುವೆ ಯಾಕೆ ಅಷ್ಟೊಂದು ಪ್ರೀತಿ. ಇದೊಂದು ವಿಸ್ಮಯ. ಒಬ್ಬ ವಿದ್ವಾಂಸ ಇನ್ನೊಬ್ಬ ವಿದ್ವಾಂಸ ಎದುರಾದಾಗ, ಒಬ್ಬ ಸಾದು ಇನ್ನೊಬ್ಬ ಸಾದು ಎದುರಾದಾಗ, … Read more

ಸೀನು ಪುರಾಣ: ಡಾ. ವೃಂದಾ ಸಂಗಮ್

ಅರೆ ವ್ಹಾ, ಕ್ಯಾ ಸೀನ್ ಹೈ ಅಂತ ನಿಮಗ ಯಾರಾದರೂ ಹೇಳಿದರೂ ಅಂದರೆ, ಅದು ಭಾಳ ಭಾಳ ಚಂದದ ಸಿನಿಮಾದ ಒಂದು ಚಂದದ ಸೀನ್ ಅಂತನೋ, ಯಾವುದೋ ಒಂದು ಪ್ರಕೃತಿ ರಮ್ಯ, ರಮಣೀಯ ದೃಶ್ಯನೋ ಅಂತ ತಿಳಿದರೆ ನೀವು ನೂರಕ್ಕೆ ನೂರು ತಪ್ಪು. ಮತ್ತ, ಅಂದರೆ, ಅಂದರೇನು, ಅನಲಿಕ್ಕೇ ಬೇಕು. ಯಾಕಂದರೆ, ಆ ಸೀನು ಹಂಗದ. ಇದೇನರೀ, ಯಾವ ಸೀನು, ಅಂತ ಕೇಳಿದರೆ, ನಾನು ಹೇಳೋದಿಷ್ಟೇ, ನಾನು ಅಚ್ಚ ಕನ್ನಡದ, ನಮ್ಮ ಸೀನೂ ಮಾಮಾನ ಸೀನಿನ ಬಗ್ಗೆ … Read more

ಆಲೋಚನಾ ಕ್ರಮದ ಕ್ಷಿತಿಜವನ್ನು ವಿಸ್ತರಿಸುವ ‘ನಾಲ್ಕು ಋತುಗಳ ಹುಡುಗಿ’: ಡಾ. ಸದಾಶಿವ ದೊಡಮನಿ

‘ನಾಲ್ಕು ಋತುಗಳಹುಡುಗಿ’ ಎಸ್. ನಾಗಶ್ರೀ ಅಜಯ್ ಅವರ ಮೊದಲ ಕವನ ಸಂಕಲನವಾಗಿದ್ದು, ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದು, ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಹೆಸರೇ ಸೂಚಿಸುವ ಹಾಗೆ ಪ್ರಸ್ತುತ ಕೃತಿಯಲ್ಲಿ ನಾಲ್ಕು ಋತುಗಳಿದ್ದು, ಒಟ್ಟು ನಲವತ್ತೆರಡು ಕವಿತೆಗಳಿವೆ. ಅನುದಿನವೂ ಕಾಡುವ, ನಮ್ಮ ಆಲೋಚನಾ ಕ್ರಮದ ಕ್ಷಿತಿಜವನ್ನು ವಿಸ್ತರಿಸುವ ಇಲ್ಲಿಯ ಕವಿತೆಗಳು ಮೊದಲ ಓದಿಗೇ ಅತ್ಯಂತ ಆಪ್ತವಾಗಿ ದಕ್ಕುತ್ತವೆ. ಹೀಗೆ ದಕ್ಕುವುದು ಯಶಸ್ವಿ ಸಂಕಲನದ ಪ್ರತೀಕವೇ ಆಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕವಿಯ ಸಾವಯವ ಸಹಜ … Read more

“ಕಾರ್ಪೋರೇಟ್ ಜಗತ್ತಿನೊಳಗೂ ನೆಲದ ಭಾಷಾ ಸೊಗಡಿನಲ್ಲಿ ಅರಳಿದ ತೂಕಬದ್ಧ ರಚನಾ ಶೈಲಿಯ ಕಥೆಗಳು”: ಎಂ. ಜವರಾಜ್

ಒಂದು ಸಾಹಿತ್ಯ ಕೃತಿ ಯಾವ ಕಾರಣಕ್ಕೆ ಓದುಗರನ್ನು ಸೆಳೆಯುತ್ತದೆ ಎಂಬುದು ಓದುಗರ ಅಭಿರುಚಿಯ ಮೇಲೆ ನಿಂತಿರುತ್ತದೆಯೇ? ಈ ‘ಅಭಿರುಚಿ’ಗೆ ನಿರ್ದಿಷ್ಟ ಕಾರಣ ಹೇಳಲಾಗದು. ಆದರೆ ಇತರ ಆಯಾಮಗಳೂ ಲೇಖಕನೊಬ್ಬನ ಕೃತಿ, ಓದುಗರನ್ನು ಭಿನ್ನ ಬಗೆಯಲ್ಲಿ ತಲುಪುತ್ತದೆ ಎಂಬುದಕ್ಕೆ ಸಾಕ್ಷ್ಯವಿದೆ. ಅತ್ಯಂತ ಮಾನವೀಯ ನೆಲೆಯಲ್ಲಿ ರಚಿತವಾದ ಅನೇಕರ ಬರಹಗಳು ಎಷ್ಟು ಜನ ಓದುಗರನ್ನು ತಲುಪಿವೆ? ಅವು ವಿಭಿನ್ನವು ಕಥನತಂತ್ರದಲ್ಲಿ ಕಲಾತ್ಮಕ ಗುಣವೂ ಆಗಿರುವ ಕೃತಿಗಳೂ ಹೌದು. ಪ್ರಕಾಶಕರು ಪ್ರಕಟಣೆ ಮಾಡುವುದಷ್ಟೆ ಮುಖ್ಯವಲ್ಲ ಒಂದು ಸಾಹಿತ್ಯ ಕೃತಿಯನ್ನು ಜನರಿಗೆ ತಲುಪಿಸುವ … Read more

ಮೂರು ಕವಿತೆಗಳು: ಚಲುವೇಗೌಡ ದೊಡ್ಡಹಳ್ಳಿ

ಉಪಕಾರಿಯಾಗು ಇರುವಂತಿದ್ದರೆ ತೆಂಗಿನ ಮರದಂತಿರುಬಿಸಲಲಿ ನೆರಳಾಗಿ ದೇವರ ಪೂಜೆಗೆ ಕಾಯಾಗಿಬಾಯಾರಿದವರಿಗೆ ಎಳನೀರಾಗಿಭುವಿಯ ಮೇಲಿನ ಕಲ್ಪವೃಕ್ಷವಾಗಿ… ಮನೆಯ ಮುಂದೆ ಚಪ್ಪರವಾಗಿಅನ್ನ ಮಾಡಲು ಕಟ್ಟಿಗೆಯಾಗಿಕಸಗುಡಿಸುವ ಪೊರಕೆಯಾಗಿನೆತ್ತಿಗೆ ಕೊಬ್ಬರಿ ಎಣ್ಣೆಯಾಗಿ… ಮನೆ ಮೇಲಣ ಚಾವಣಿಯಾಗಿಮನೆ ಭಾರ ಹೊರುವ ತೊಲೆಯಾಗಿಮಲಗುವರಿಗೆ ಸೋಗೆ ಹಾಸಾಗಿಶುಭ ಶಾಸ್ತ್ರಕೆ ಕೊಬ್ಬರಿಯಾಗಿ… ಹುಟ್ಟಿದರೆ ಹಸುವಿನಂತಾಗುಹಸಿದ ಮಕ್ಕಳಿಗೆ ಹಾಲಾಗಿಧಣಿದವರಿಗೆ ಮಜ್ಜಿಗೆಯಾಗಿಊಟಕ್ಕೆ ತುಪ್ಪವಾಗಿ ಇಳೆಯೊಳಗೆ ಕಾಮಧೇನುವಾಗಿ… ಹೊಲಕ್ಕೆ ಗೊಬ್ಬರವಾಗಿಅನ್ನದಾತರಿಗೆ ಬೆನ್ನೆಲುಬಾಗಿಪ್ರಥಮ ಪೂಜೆಗೆ ಇಡುವ ಸಗಣಿಯಾಗಿಪವಿತ್ರವಾದ ಗೋಮೂತ್ರವಾಗಿ… ಮನೆ ಮುಂದೆ ಸಾರಿಸುವ ಸಗಣಿಯಾಗಿದೇವರ ಅಭಿಷೇಕಕೆ ಹಾಲು-ಮೊಸರಾಗಿಜಗಕೆಲ್ಲ ನೀನೆ ಗೋಮಾತೆಯಾಗಿನೀನಿರುವೆ ಜಗದೊಳಗೆ ಉಪಕಾರಿಯಾಗಿ… ನೀನಾರಿಗಾದೆಯೋ … Read more

ಆಸಕ್ತಿಯು ಹವ್ಯಾಸವಾಗಿ ಬದಲಾದ ಕಥೆ…: ಅಶೋಕ ಬಾವಿಕಟ್ಟಿ

ವ್ಯಾಪಾರ, ಮನೆ ಮಕ್ಕಳು …ಇಷ್ಟೇ ಎನ್ನುವಂತಿದ್ದ ಕಾಲವದು. ಬೆಂಗಾಡಿನಂತಿದ್ದ ನಮ್ಮೂರ‌‌ ಪರಿಸರವೂ ಸಹಜವಾಗಿ ಹಸಿರು, ಜಲಪಾತ, ಬೆಟ್ಟಗುಡ್ಡ, ದಟ್ಟಕಾಡು, ನೀರಿನ ಹರಿವು ಇವುಗಳೆಡೆ ಒಂದು ಆಕರ್ಷಣೆ ಹುಟ್ಟಿಸುತ್ತಿದ್ದವು. ಶಾಲಾ ಕಾಲೇಜು ಸಮಯದಲ್ಲಿ ಪ್ರವಾಸಕ್ಕೆಂದು ಹೋದಾಗ ಇಳಿದ ಜೋಗದ ಗುಂಡಿಯೂ ಏರಿದ ಮುಳ್ಳಯ್ಯನಗಿರಿ ಬೆಟ್ಟವೇ ನಮ್ಮ ಪಾಲಿನ ಕೌತುಕಗಳು ಮತ್ತು ದಾರಿಯಲ್ಲಿ ಬರುವ ದಟ್ಟಕಾಡು, ಭೋರ್ಗರೆವ ಜಲಪಾತ, ಮಳೆಗಳೇ ಚೇತೊಹಾರಿ ಚಿತ್ರಗಳು. ವಿಪರೀತ ಆಸ್ಥೆಯಿಂದ ಗಿಡ ನೆಟ್ಟು , ನೀರುಣಿಸಿ, ಟಿಸಿಲೊಡೆದ ಚಿಗುರು ನೋಡಿ ” ನಾ ನೆಟ್ಟ … Read more

ಚಿತ್ರೋತ್ಸವದ ಕೊನೆಯ ದಿನದ ಚಿತ್ರಗಳು ಮತ್ತು ಸಮಾರೋಪ

ಕೊನೆಯ ದಿನದ ಚಿತ್ರಗಳು ಎಂಡ್ ಲೆಸ್ ಬಾರ್ಡರ್ಸ್ ಈ ಚಿತ್ರದಲ್ಲಿ ಗಾಯಕನೊಬ್ಬ ಸುಶ್ರಾವ್ಯವಾದ ಹಾಡನ್ನು ಹಾಡುತ್ತಾರೆ. ‘ವಿವೇಕ ಇದ್ದವರೆಲ್ಲ ಒಳ್ಳೆಯವರಲ್ಲ. ಮತ್ತೊಬ್ಬರ ಸುಖ ದುಃಖಗಳನ್ನು ಹಚ್ಚಿಕೊಳ್ಳಬಾರದು. ಹಚ್ಚಿಕೊಂಡರೆ ಕೊನೆ ತನಕ ಇರಬೇಕು’ ಇದು ಹಾಡಿನ‌ ಅರ್ಥ. ಚಿತ್ರದ ಪ್ರಮುಖ ವ್ಯಕ್ತಿ ಅಹ್ಮದ್ ಪರಿಸ್ಥಿಯೂ ಹೀಗೆ ಇದೆ. ದೇಶಭ್ರಷ್ಟನಾಗಿರುವ ಅಹ್ಮದ್ ಅಫ್ಘಾನಿಸ್ತಾನದ ಸರಹದ್ದಿನ ಪುಟ್ಟ ಗ್ರಾಮದಲ್ಲಿರುತ್ತಾನೆ. ತಾಲಿಬಾನ್ ಆಕ್ರಮಣವನ್ನು ಒಪ್ಪದ ಅಲ್ಲಿಯ ಬಲೂಚಿಗಳು ಹಜಾರಾ ನಿರಾಶ್ರಿತರು ಇರಾನ್ ಗೆ ಪಲಾಯನ ಮಾಡಲು ಸಹಕರಿಸುತ್ತಾರೆ. ಇವರ ಜೊತೆ ಉತ್ತಮ‌ ಸಂಬಂಧ … Read more

ಇಂದಿನ ಸಮಾಜದಲ್ಲಿ ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ….: ಹರೀಶ್ ಕುಮಾರ್ ಎಸ್

ಪ್ರಸ್ತುತ ಸಮಾಜಕ್ಕೆ ಅವರ ಹೊನ್ನುಡಿಯನ್ನು ಅರ್ಥೈಸುವ ಅವಶ್ಯಕತೆ ಮತ್ತು ಅನಿವಾರ್ಯತೆ ಬಹಳ ಇದೆ. ಸದಾ ಆತ್ಮವಿಶ್ವಾಸವಿಲ್ಲದ ಅಲೆದಾಡುವ ಮನಸಿಗೆ ಸಾಂತ್ವನ ಇದೆ. ಸಾಧಿಸಲು ಮುಂದಾಗುವವರಿಗೆ ಸ್ಫೂರ್ತಿ ಸೆಲೆಯಿದೆ. “ಜನರು ಮನಸಿಗೆ ಬಂದ ಹಾಗೆ ಅಂದುಕೊಳ್ಳಲಿ. ನಿಮ್ಮ ನಿರ್ಧಾರದಿಂದ ನೀವು ಕದಲದಿರಿ. ಆಗ ಮಾತ್ರ ಜಗತ್ತು ನಿಮ್ಮನ್ನು ಗೌರವಿಸುವುದು. ಸಮಾಜವು ಈ ಮನುಷ್ಯನನ್ನು ನಂಬು, ಆ ಮನುಷ್ಯನನ್ನು ನಂಬು ಎಂದು ಹೇಳುತ್ತದೆ. ಆದರೆ ನಿಮ್ಮಲ್ಲಿ ನಿಮಗೆ ಶ್ರದ್ಧೆಯಿರಲಿ. ಸಕಲ ಶಕ್ತಿಯೂ ನಿಮ್ಮಲ್ಲಿ ಅಡಗಿದೆ. ಇದನ್ನರಿತು ನಿಮ್ಮ ವ್ಯಕ್ತಿತ್ವದಲ್ಲಿ ಆ … Read more

ಡೆನ್ನಾನ ಡೆನ್ನಾನ ಗುಂಗಿನಲ್ಲಿ‌ ಇನ್ನೆರಡು ದಿನ: ಎಂ. ನಾಗರಾಜ ಶೆಟ್ಟಿ

ಮಂಗಳವಾರದ ಚಿತ್ರಗಳು ದಿ ರೈ ಹಾರ್ನ್ ಬಸುರು ಮಾಡಿ ಮುಖ ತಿರುಗಿಸುವ ಗಂಡಸರು ಹೆಣ್ಣಿನ ಕಷ್ಟಗಳನ್ನು, ಅವಳ ಬವಣೆಯನ್ನು ಅನುಭವಿಸಲಾರರು. ಸ್ತ್ರೀವಾದಿ ಚಿತ್ರದಂತೆ ತೋರುವ ‘ ದಿ ರೈ ಗ ಹಾರ್ನ್’ ಚಿತ್ರದ ನಿರ್ದೇಶಕಿ ಜೈಒನೆ ಕಾಂಬೋರ್ಡ ಸ್ಪೈನ್ ನ ಗ್ರಾಮೀಣ ಮಹಿಳೆಯೊಬ್ಬಳ ದಾರುಣ ಬದುಕನ್ನು ಮಹಿಳಾ ಕಣ್ಣೋಟದಲ್ಲಿ ಕಟ್ಟಿಕೊಡುತ್ತಾಳೆ. ಮದುವೆಯಾಗದ ಮಾರಿಯಾ ಹೆರಿಗೆ ಮಾಡುವುದರಲ್ಲಿ ನಿಷ್ಣಾತೆ ಹೇಗೋ ಅಂತೆಯೇ ಗರ್ಭಪಾತವನ್ನೂ ಮಾಡಬಲ್ಲಳು. ಹದಿಹರೆಯದ ಹೆಣ್ಣೊಬ್ಬಳಿಗೆ ನೆರವಾಗಲು ಗರ್ಭಪಾತ ಮಾಡುವುದು ಅವಳನ್ನು ಸ‌ಂಕಷ್ಟಕ್ಕೆ ದೂಡುತ್ತದೆ. ಆಕೆ ತನ್ನ … Read more

ಚಲನಚಿತ್ರೋತ್ಸವದಲ್ಲಿ ಭಾನುವಾರ ಮತ್ತು ಸೋಮವಾರ

ಚಲನಚಿತ್ರೋತ್ಸವದಲ್ಲಿ ಭಾನುವಾರ ಶಿವಮ್ಮ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಬಿಟ್ಟು ಸಿನಿಮಾಕ್ಕೆ ಹೊರಳಿದ ಜೈಶಂಕರ್ ‘ ಲಚ್ಚವ್ವ’ ಕಿರು ಚಿತ್ರದ ಮೂಲಕ ಹೆಸರು ಗಳಿಸಿದರು‌. ಪೂರ್ಣ ಪ್ರಮಾಣ ಚಿತ್ರವನ್ನು ನಿರ್ದೇಶಿಸುವ ಅವರ ಕನಸನ್ನು ‘ ಶಿವಮ್ಮ’ ಸಾಕಾರಗೊಳಿಸಿದ್ದಾರೆ. ಒಕ್ಕಲುತನವಲ್ಲದೆ ಬೇರೆ ಆದಾಯವಿಲ್ಲದ ಗ್ರಾಮೀಣ ಬದುಕನ್ನು ‘ಶಿವಮ್ಮ’ ನೆಂಬ ಗಟ್ಟಿಗಿತ್ತಿಯ ಮೂಲಕ ಚಿತ್ರ ಕಟ್ಟಿ ಕೊಡುತ್ತದೆ. ಶಿವಮ್ಮ ಬಡವಿಯಾದರೂ ಏನಾದರೂ ಮಾಡಬೇಕು ಎನ್ನುವ ಛಲ ಉಳ್ಳವಳು. ಲಕ್ವದಿಂದ ಮೂಲೆಗುಂಪಾದ ಗಂಡ, ಮದುವೆಗೆ ನಿಂತ ಮಗಳು, ಕಾಲೇಜು ಓದುವ ಹುಡುಗ ಇವರೆಲ್ಲರ … Read more

ನೋವೆಂಬ ಒಲವಿನಲಿ ತೇಲುವ ನಾವೆ “ಪ್ರೇಮಾಯತನ”: ಅಶ್ಫಾಕ್ ಪೀರಜಾದೆ

ಚಿತ್ರಕಲೆ, ಸಾಹಿತ್ಯ, ಪ್ರವಾಸ, ಕರಕುಶಲ ಕಲೆ, ಓದು, ಬರಹ, ಅಂಚೆ ಚೀಟಿ, ಹಳೆ ನಾಣ್ಯ ಸಂಗ್ರಹ, ಛಾಯಾಚಿತ್ರ, ವೈದ್ಯಕೀಯ ಸೇವೆ ಹೀಗೆ ಹತ್ತು ಹಲವು ಹವ್ಯಾಸಗಳಲ್ಲಿ ಟಿಸಲೋಡೆದು ಸಮೃದ್ಧವಾದ ಕಲೆ ಮತ್ತು ಸಾಹಿತ್ಯದ ಹೆಮ್ಮರವಾಗಿ ಬೆಳೆದು ಸಮಾಜಕೆ ನೆರಳಾಗಿ ನಿಂತ ಬಹುಮುಖ ಪ್ರತಿಭೆಯ ಹೆಸರೇ ಜಬೀವುಲ್ಲಾ ಎಂ. ಅಸದ್. ನರ್ಸಿಂಗ್ ಓದಿರುವ ಇವರು ಸಧ್ಯ ಬೆಂಗಳೂರಿನ ಕರುಣಾ ಟ್ರಸ್ಟ್ ನ ಮುಖಾಂತರ ಜನರಿಗೆ ವೈದ್ಯಕೀಯ ಸೇವೆ ನೀಡುತ್ತ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಕಾವ್ಯ ಮತ್ತು ಚಿತ್ರಕಲೆಯ ಕಡು … Read more

15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದಿನ ಒಂದು ಮತ್ತು ಮೂರು

ಬಿಫೇಸ್ಸಲ್ಲಿ ಒಂದನೇ‌ ದಿನ ಅಬ್ಬಬ್ಬಾ….ಒರಾಯನ್ ಮಾಲ್ನಲ್ಲಿ ಮೊದಲ ದಿನದಂದೇ ಇಷ್ಟೊಂದು ಜನ ಜಂಗುಲಿ ಎಂದೂ ನೋಡಿರಲಿಲ್ಲ. ಅದನ್ನು ನಿರ್ವಹಿಸಿದ ರೀತಿಯೂ ಬಲು ಚೆನ್ನ. ಎಂಟ್ರಿ ಪಾಸ್, ಕೆಟಲಾಗ್, ಶೆಡ್ಯೂಲ್ ವಿತರಣೆಯಲ್ಲಿ ಗೊಂದಲಗಳಿರಲಿಲ್ಲ. ಸ್ವಯಂಸೇವಕರು ಬೂಟಾಟಿಕೆ ತೋರದೆ, ಅಗತ್ಯವಿರುವಷ್ಟು ಮಂದಿ ಮಾತ್ರ ಇದ್ದು, ನೂಕು ನುಗ್ಗಲಿಗೆ ಅವಕಾಶವಿರದಂತೆ ಜನರನ್ನು ನಿಯಂತ್ರಿಸುತ್ತಿದ್ದರು. ಈ ಸಲದ ಥೀಮ್ ಸಾಂಗ್ ಕೂಡಾ ಕ್ರಿಯಾಶೀಲತೆಗೆ ನಿದರ್ಶನದಂತಿದೆ. ಪರಿಚಿತರೇ ಹಾಡಿರುವ ಡೆನ್ನಾನ, ಡೆನ್ನಾನ ಹಾಡು, ಅದರ ಚಿತ್ರೀಕರಣ….ಚಂದವೋ ಚಂದ! ಸಿನಿಮಾ ದರ್ಶನ…. ಓಮೆನ್ ಕಾಂಗೋ ದೇಶದ … Read more

“ಕತ್ತಲ ಹೂವು” ನೀಳ್ಗತೆ (ಕೊನೆಯ ಭಾಗ): ಎಂ.ಜವರಾಜ್

ಚೆನ್ನಬಸವಿ ಸತ್ತು ವರ್ಷದ ಮೇಲಾಯ್ತು. ಒಂದೆರಡು ವರ್ಷಗಳಿಂದ ಹೊಟ್ಟೆ ನೋವು ಸುಸ್ತು ಸಂಕ್ಟ ವಾಂತಿ ಬೇಧಿ ಬಾಧೆಯಿಂದ ನರಳುತ್ತ ಮಲಗಿದ ಮಗ್ಗುಲಲ್ಲೇ ಹೇಲು ಉಚ್ಚೆ ಎಲ್ಲನು ಮಾಡಿಕೊಳ್ಳುತ್ತಿದ್ದಳು. ಇದನ್ನು ನೋಡಿ ಸೊಸೆ ‘ತೂ ಛೀ..’ ಅಂತ ರೇಗ್ತಾ ಉಗಿತಾ ಮಲಗಿದ್ದವಳನ್ನು ಎತ್ತಿ ದರದರ ಎಳೆದು ಜಾಡಿಸಿ ಒದ್ದು ಮನೆಯಿಂದ ಹೊರಕ್ಕೆ ಬಿಸಾಕಿದ್ದಳು. ಮೊಕ್ಕತ್ತಲ ಬೆನ್ನಿಗೆ ಬಂದ ಸಿದ್ದೇಶ ಕುಡಿದ ಮತ್ತಿನಲ್ಲಿ ‘ಅವ್ವುನ್ಗ ಈತರ ಮಾಡಿದ್ದಯಲ್ಲ ಲೌಡಿಮುಂಡ’ ಅಂತ ಹೆಂಡತಿ ಮುಂದಲೆ ಹಿಡಿದು ಬೀದಿಲಿ ನಿಲ್ಸಿ ಒದ್ದಿದ್ದ. ಅವಳು … Read more

“ಕತ್ತಲ ಹೂವು” ನೀಳ್ಗತೆ (ಭಾಗ ೧೫): ಎಂ.ಜವರಾಜ್

ಮಲೆ ಮಾದೇಶ್ವರನ ಬೆಟ್ಟದಿಂದ ಬಂದ ಶಂಭುಲಿಂಗೇಶ್ವರ ಮಲ್ಲಿಕಾರ್ಜುನ ಬಸ್ಸುಗಳು ನರಸೀಪುರದ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿದ್ದ ಹುಣಸೇಮರ ತೋಪಿನ ಸೈಡಿನಲ್ಲಿ ನಿಂತಾಗ ರಾತ್ರಿ ಎಂಟಾಗಿತ್ತು.ಬಸ್ಸೊಳಗೆ ಕುಂತು ನಿಂತವರನ್ನು ನಿದ್ರಾದೇವಿ ಆತುಕೊಂಡು ಡ್ರೈವರ್ ಕ್ಲೀನರನ ಕೂಗಿಗೆ ಲಗುಬಗೆಯಿಂದ ಎದ್ದರೆ ಇನ್ನು ಕೆಲವರು ಆಕಳಿಸುತ್ತಲೇ ಕಣ್ಣು ಮುಚ್ಚಿ ಹಾಗೇ ಒರಗುತ್ತಿದ್ದರು. ಕ್ಲೀನರು ಇಳಿರಿ ಇಳಿರಿ ಟೇಮಾಗುತ್ತ ಅಂತ ಎಲ್ಲರನ್ನು ಏಳಿಸಿ ಇಳಿಸಿ ರೈಟ್ ರೈಟ್ ಅಂತ ಬಾಯಲ್ಲೇ ನಾಲಿಗೆ ಮಡಚಿ ಒಂದು ಜೋರು ವಿಶೆಲ್ ಹಾಕಿದೇಟಿಗೆ ಜಗನ್ ಜಾತ್ರೆಯಂತಿದ್ದ ಜನಗಳ … Read more

ಬೊಗಸೆ ಬರ್ನಾರ್ಡ್: ಎಫ್.ಎಂ.ನಂದಗಾವ್

ಮೈಸೂರಿನ ನಂದಿತ ಪ್ರಕಾಶನ ಸಂಸ್ಥೆಯು ಪ್ರಕಟಿಸುತ್ತಿರುವ, ಎಫ್.ಎಂ.ನಂದಗಾವ ಅವರ ಹೊಸ ಕಥಾ ಸಂಕಲನ ಇನ್ನಾಸಪ್ಪ ಮತ್ತು ಬಂಡೆಗಳು’ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಅದರಲ್ಲಿ ಒಟ್ಟು ಹತ್ತು ಕತೆಗಳಿದ್ದು, ಅವುಗಳಲ್ಲಿನ ಕೆಲವು ನಾಡಿನ ಹಲವಾರು ಪತ್ರಿಕೆಗಳಲ್ಲಿ ಈಗಾಗಲೆ ಪ್ರಕಟಗೊಂಡು ಓದುಗರ ಗಮನ ಸೆಳೆದಿವೆ. ಪ್ರಸ್ತುತಇನ್ನಾಸಪ್ಪ ಮತ್ತು ಬಂಡೆಗಳು’ ಕಥಾ ಸಂಕಲನದಲ್ಲಿನ ಬೊಗಸೆ ಬರ್ನಾರ್ಡ್’ ಕತೆಪಂಜು’ವಿನ ಓದುಗರಿಗಾಗಿ.. ಮೇ ತಿಂಗಳ ಸೂಟಿ. ದೊಡ್ಡಪ್ಪ ಇರುವ ಊರಿಗೆ ಬಂದಿದ್ದೆ. ಅಲ್ಲಿ ಬಿಸಿಲೋ ಕಡುಬಿಸಿಲೋ ಒಂದೂ ಗೊತ್ತಾಗುತ್ತಿರಲಿಲ್ಲ. ಫಂಕಾ ಹಾಕಿಕೊಂಡರೆ ಬಿಸಿ ಬಿಸಿ ಗಾಳಿ … Read more

ಸೋನೆ ಮುಗಿಲಿನ ಕವಿ ಡಾ.ನಲ್ಲೂರು ಪ್ರಸಾದ್ ಅವರ ಕಾವ್ಯ ಜಿಜ್ಞಾಸೆ: ಸಂತೋಷ್ ಟಿ

“ಕವಿತೆ ನನ್ನೊಳಗೆ ಕೂತು ಪದ ಹಾಡುವುದಿಲ್ಲಜೇಡನಾಗಿ ಅದು ಬಲೆ ನೇಯುವುದೂ ಇಲ್ಲಬದಲಾಗಿ ಕಾಡುತ್ತದೆ ಸುತ್ತೆಲ್ಲಾ ನೋಡುತ್ತದೆಬತ್ತಲಾದ ಬಯಲಲ್ಲಿ ಸೋಮನ ಕುಣಿತ ಮಾಡುತ್ತದೆ”(ಕಾಡುತ್ತವೆ ನೆನಪುಗಳು ಕವಿತೆ, ನವಿಲು ಜಾಗರ) ಎನ್ನುವ ಕಾವ್ಯ ಪ್ರೀತಿಯ ಆಶಯ ಹೊಂದಿರುವ ಕವಿ ಕೆ.ಆರ್. ಪ್ರಸಾದ್ ತಮ್ಮ ಸ್ವ-ಅನುಭವದಿಂದ ಗಟ್ಟಿಗೊಳ್ಳಿತ್ತಾ ಮೊದಲ ಕವಿತೆಯಲ್ಲಿಯೆ ತನ್ನ ತನವನ್ನು ಕಾವ್ಯದ ಬಗೆಗಿನ ಉತ್ಕಟ ಆಕಾಂಕ್ಷೆಯನ್ನು ತೆರೆದಿಡುತ್ತಾರೆ. ಇಲ್ಲಿ ಕಾವ್ಯವು ಸಾರ್ವಜನಿಕ ಇತ್ಯಾತ್ಮಕ ದೃಷ್ಟಿಗೆ ನಿಲುಕುವ ಬತ್ತಲಾದ ಬಯಲಲ್ಲಿ ಇರುವಂತದ್ದು ಮತ್ತು ಸೋಮನ ಕುಣಿತ ಮಾಡುವಂತದ್ದು ಎಂದರೆ ನೇರವಾಗಿ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೧೪): ಎಂ.ಜವರಾಜ್

ಒಂಭತ್ತನೇ ಅಟೆಂಪ್ಟ್ ನಲ್ಲಿ ಎಸೆಸೆಲ್ಸಿ ಪಾಸು ಮಾಡಿದ ಚಂದ್ರ ಊರಲ್ಲಿ ಬೀಗುತ್ತಿದ್ದ. ಅವನ ಕಾಲು ನಿಂತಲ್ಲಿ ನಿಲ್ಲುತ್ತಿಲ್ಲ. ‘ಲೆ ಇವ್ನೆ ಎಸ್ಸೆಲ್ಸಿ ಪಾಸ್ ಮಾಡ್ಬುಟೆಂತ್ಯಾ ಸಕ್ರ ಬಾಳೆಣ್ಣು ಕೊಡಲ್ವ’ ಅಂತ ರೇಗಿಸಿದರೆ ಉಬ್ಬಿ ‘ಊ್ಞ ಕೊಡ್ತಿನಿ ಇರಿ’ ಅಂತ ಛಂಗನೆ ನೆಗೆದು ಓಡಿಬಿಡುತ್ತಿದ್ದ. ಈಗವನು ಅವನಣ್ಣ ಸೂರಿ ಮುಂದೆ ಹೆದರಿಕೆ ಇಲ್ಲದೆ ಕುಂತ್ಕತಿದ್ದ ನಿಂತ್ಕತಿದ್ದ ಮಾತಾಡ್ತಿದ್ದ. ಸೂರಿನು ತಮ್ಮನ ಎಸೆಸೆಲ್ಸಿ ಪಾಸಾದದ್ದನ್ನು ತನ್ನ ಜೊತೆಗಾರರಿಗೆ ‘ಅವ್ನ ಎಲ್ಯಾರ ಸೇರುಸ್ಬೇಕು. ಅಂತು ಇಂತು ಪಾಸಾಯ್ತಲ್ಲ’ ಅಂತ ಹೇಳ್ತ ಇದ್ದುದು … Read more

ಗುರುಗಳ ಪಾಠ: ಬಿ.ಟಿ.ನಾಯಕ್

ಅದಪ್ಪ ಮೇಸ್ಟ್ರು ಎಂದರೆ ಮಕ್ಕಳಿಗೆ ಬಲು ಪ್ರೀತಿ. ಅವರು ಎಂದೂ ಯಾವ ಮಕ್ಕಳಿಗೂ ಶಿಕ್ಷಿಸಿರಲಿಲ್ಲ. ಅದರ ಬದಲು ಅವರು ಮಕ್ಕಳಿಗೆ ತಮ್ಮ ತುಂಬು ಪ್ರೀತಿಯನ್ನು ಕೊಡುತ್ತಿದ್ದರು. ತಿಂಗಳಿಗೊಮ್ಮೆ ಯಾವುದಾದರೂ ಒಂದು ಸಿಹಿ ತಿಂಡಿಯನ್ನು ತಮ್ಮ ಮನೆಯಲ್ಲಿ ತಯಾರಿಸಿ ತಂದು ಶಾಲೆಯಲ್ಲಿ ಮಕ್ಕಳಿಗೆ ಹಂಚುತ್ತಿದ್ದರು. ಅಲ್ಲದೇ, ತಮ್ಮ ಬೋಧನಾ ಅವಧಿಯಲ್ಲಿ ಯಾವುದೋ ವಿಶೇಷವಾದ ಘಟನೆ ಅಥವಾ ಮನ ಮುಟ್ಟುವ ಒಂದು ಕಥೆಯನ್ನು ಐದರಿಂದ ಹತ್ತು ನಿಮಿಷಗಳಲ್ಲಿ ಹೇಳಿ ಮುಗಿಸುತ್ತಿದ್ದರು. ಹಾಗಾಗಿ, ಅವರ ಸ್ವಭಾವ, ಮಕ್ಕಳ ಬಗ್ಗೆ ಚಿಂತನೆ ಮತ್ತು … Read more

ಕಲಿಕೆಯೋ ನರಳಿಕೆಯೋ !? ಜಿಜ್ಞಾಸೆ: ಡಾ. ಹೆಚ್ ಎನ್ ಮಂಜುರಾಜ್

ಕಲಿಕೆ ನಿರಂತರ ಎಂಬ ಮಾತನ್ನು ಎಲ್ಲರೂ ಬಲ್ಲೆವು. ಆದರೆ ಯಾವುದು ಕಲಿಕೆ? ಯಾವುದು ಅಲ್ಲ? ಎಂಬುದನ್ನು ತಿಳಿಯುವುದು ಕಷ್ಟವೇ. ಇದು ಒಬ್ಬರಿಂದ ಒಬ್ಬರಿಗೆ ಬೇರೆಯೇ ಆಗುವಂಥದು. ನಂಬಿಕೆ ಮತ್ತು ಮೂಢನಂಬಿಕೆಗಳ ವಿಚಾರದಂತೆ. ‘ನನ್ನದು ಮಾತ್ರ ವೈಜ್ಞಾನಿಕ ಮನೋಭಾವ, ಉಳಿದವರದು ಕೇವಲ ನಂಬಿಕೆ’ ಎಂಬ ಅಹಂಭಾವ ಬಹುತೇಕರದು. ಕೆಲವರು ಇನ್ನೂ ಮುಂಬರಿದು ‘ಅವರದು ಮೂಢನಂಬಿಕೆ’ ಎಂದು ಜರಿಯುವರು. ವಿಚಾರವಾದಿಗಳ ವರಸೆ ಇದು. ಇನ್ನೊಬ್ಬರನ್ನು ಮತ್ತು ಇನ್ನೊಂದನ್ನು ಹೀನಾಯವೆಂದು ಪರಿಗಣಿಸುವುದೇ ಮಾನವತೆಗೆ ಮಾಡುವ ದ್ರೋಹ. ತಮ್ಮಂತೆಯೇ ಇತರರೂ ಇರಬೇಕೆಂಬ ಹಕ್ಕೊತ್ತಾಯವೇ … Read more

ವೆಂಕಿ ಬಂದನೇ?: ಸುವ್ರತಾ ಅಡಿಗ ಮಣೂರು

ವೆಂಕಿ ಬರ್ತಾನೆ ಅಂತ ಹೇಳಿದ್ದ, ಇನ್ನು ಬಂದಿಲ್ಲ. ಕಳೆದ ಭಾನುವಾರ ಅವನ ಸೊಸೆಯ ಫೋನಿಗೆ ಕಾಲ್ ಮಾಡಿದ್ದೆ. ʻಪದೇ ಪದೇ ಕಾಲ್ ಮಾಡ್ಬೇಡ್ವೋ ಇವರಿಗೆ ಕಿರಿಕಿರಿ ಆಗುತ್ತೆʼ ಅಂತ ಹೇಳಿದ್ದ. ಮುಂದಿನ ಭಾನ್ವಾರ ಬರ್ತಿನಿ ಅಂತ ಹೇಳಿದ್ದ. ಇನ್ನೂ ಬಂದಿಲ್ವಲ್ಲ ಎಂದುಕೊಳ್ಳುತ್ತಾ ರಾಯರು, ಬಾಗಿಲು ತೆರೆದು ನೋಡಿದರು.“ಮಾವ … ಧೂಳ್ ಬರುತ್ತೆ ಬಾಗಿಲು ಹಾಕಿ” ಎಂದು ಅಡುಗೆ ಮನೆಯಿಂದ ಸುಮ ಕೂಗಿಕೊಂಡಳು.ಅಬ್ಬ.. ಅವಳ ಕಿವಿ ಎಷ್ಟು ಚುರುಕು. ಎಲ್ಲವೂ ಕೇಳಿಸುತ್ತೆ, ಹಿಂದೊಮ್ಮೆ ವೆಂಕಿ ಬಂದಾಗ, ನಾವು ನಿಧಾನವಾಗಿಯೆ … Read more

ನಾಲ್ಕು ಕವಿತೆಗಳು: ಜಹಾನ್ ಆರಾ ಕೋಳೂರು

ನನಗೂ ಹೇಳುವುದು ಬಹಳ ಇತ್ತು ಅಂದು ಶ್ರೀರಂಗ ಪಟ್ಟಣದ ವೇದಿಕೆಯ ಮೇಲೆಸೂಟು ಬೂಟಿನ ಠೀವಿನಲ್ಲಿ ಕುಳಿತ ನಿಸಾರ್ನನಗೆ ನನ್ನ ನೆಚ್ಚಿನ ಪದ್ಯದ ಕವಿಯಷ್ಟೆ ಜೋಗದ ಝರಿಗಳ ಮುಂದೆ ನಿಂತಾಗಲೆಲ್ಲಅದರ ಹನಿಗಳು ಮುಖಕ್ಕೆ ಚಿಮ್ಮುತ್ತಿದಾಗಲೆಲ್ಲಜೊತೆಯಲ್ಲಿ ಇಲ್ಲೇ ಕುಳಿತು ಮಾತಾಡಬೇಕೆಂಬ ಹಂಬಲವೇನೋ ಇತ್ತು. ಕಾಲಕ್ಕೆ ಕಾದೆಕಾಲ ಅವಕಾಶ ನೀಡಲೇ ಇಲ್ಲ ಶಿಲುಬೆ ಏರಿದವನು ನಿನ್ನ ಕಾಡಿದಂತೆನನಗೂ ಕಾಡಿದ ನಿನ್ನ ಪದಗಳ ಮೂಲಕ ಸಂಜೆ ಐದರ ಮಳೆ ಇರಬೇಕಿತ್ತುಲಾಲ್ ಬಾಗ್ನಲ್ಲಿ ಸ್ವಲ್ಪ ದೂರ ನಡೆದುನಾನು ನಿನ್ನಲ್ಲಿ ಹೇಳುವುದು ಬಹಳ ಇತ್ತು ಮನಸ್ಸು … Read more

ದೇವರುಗಳ ಸುತ್ತ ಪ್ರದಕ್ಷಿಣೆ ಹಾಕುವ “ಬ್ಯಾಟೆಮರ”: ಡಾ. ನಟರಾಜು‌ ಎಸ್ ಎಂ

ದಾವಣಗೆರೆಯಲ್ಲಿ ಕಳೆದ ತಿಂಗಳು ಬೆಂಗಳೂರಿನ ಅರವಿಂದ ಬುಕ್ ಹೌಸ್ ನವರು ಒಂದು ಪುಸ್ತಕ ಹಬ್ಬ ಇಟ್ಟುಕೊಂಡಿದ್ದರು. ಬಹುಶಃ ಅವರದು ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ ಒಂದಷ್ಟು ದಿನ ಆಯ್ದ ಕನ್ನಡ ಪುಸ್ತಕಗಳನ್ನು ಮಾರುವ ಮೂಲಕ ಜನರಲ್ಲಿ ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಅಭ್ಯಾಸ ಬೆಳೆಸುವ ಅಭಿಯಾನ ಅನಿಸುತ್ತೆ. ಆ ಪುಸ್ತಕ ಹಬ್ಬಕ್ಕೆ ಹೋಗಿದ್ದಾಗ ಅಲ್ಲಿ ಅನೇಕ ಹೊಸ ಲೇಖಕರ ಪುಸ್ತಕಗಳೂ ಸಹ ಕಣ್ಣಿಗೆ ಬಿದ್ದಿದ್ದವು. ನನಗೆ ಬೇಕೆನಿಸಿದ ಪುಸ್ತಕಗಳನ್ನು ಕೊಂಡುಕೊಂಡ ಪುಸ್ತಕಗಳಲ್ಲಿ “ಬ್ಯಾಟೆಮರ”ವೂ ಒಂದಾಗಿತ್ತು. ಪುಸ್ತಕ ಕೊಂಡು ಅನೇಕ … Read more