ಬದಲಾದ ಯುವ ಮನಸ್ಸು-ಹೊಸ ದಿಕ್ಕಿನ ಹುಡುಕಾಟ: ಪರಮೇಶ ಕೆ.ಉತ್ತನಹಳ್ಳಿ

ಉಸಿರುಗಟ್ಟಿದ‌ ವಾತಾವರಣ, ವಿಷಕಾರಿಯಾದ ಬೆಳವಣಿಗೆ, ಒತ್ತಡದ ಒಡಲಲ್ಲಿ ಜೀಕುತ್ತಿವೆ ಮನಸ್ಸುಗಳು ನೂರು ಕಾಲ ಬದುಕಬೇಕಾದ ಹಸುಕಂದ ಅರಳು ಮುನ್ನವೇ ಬಾಡುವ ಚಿಂತಾಜನಕ ಸ್ಥಿತಿ ಎದುರಾಗಿದೆ. ಭರವಸೆಯಿಲ್ಲದ ಭವನಗಳು ಶೃಂಗಾರಗೊಳ್ಳುತ್ತಿವೆ, ವಿಷಮಶೀತ ವಿಷವರ್ತುಲ ವಿಷಯಗಳು ಮುಕ್ಕುತ್ತಿವೆ ಬೆಳಕಿನ ಬಳ್ಳಿಗಳ, ಕರುಳ ಬಳ್ಳಿಗಳೇ ಕರುಣೆಯನ್ನು ಬಸಿಯದೆ ಕಂಗಾಲಾಗುತ್ತಿದ್ದಾರೆ, ಜೀವ ಕರುಣಿಸಿದ ಜೀವಧಾತ ದೇವಧೂತರಾಗುವ ಬದಲು ಅನಾಥರಾಗುತ್ತಿದ್ದಾರೆ ಕಾಲಚಕ್ರ ನಿರಂತರವಾಗಿ ಸಾಗುತ್ತಿರುವಂತೆ ಸಮಾಜದ ರೂಪವೂ, ಮೌಲ್ಯಗಳ ಸ್ವರೂಪವೂ ಬದಲಾಗುತ್ತಿವೆ. ಆ ಬದಲಾವಣೆಯ ಕೇಂದ್ರಬಿಂದುವಾಗಿರುವುದು ಇಂದಿನ ಯುವ ಮನಸ್ಸು. ವಿಜ್ಞಾನ, ತಂತ್ರಜ್ಞಾನ, ಜಾಗತೀಕರಣ … Read more

ಯಕ್ಷ ಪಲಕುಗಳು: ದಿನೇಶ್ ಕೆ. ನಾಯ್ಕ್

ಯಕ್ಷಗಾನವು ದೈವಾರಾಧನೆಯ ಮೂಲದಿಂದ ಉಗಮಿಸಿತು ಎಂಬುದು ವಿದ್ವಾಂಸರ ಅಂಬೋಣ. ಕಾಲ ಕ್ರಮದಲ್ಲಿ ನಾಟ್ಯ, ವೇಷಭೂಷಣ, ವಾಚನ, ಹಿಮ್ಮೇಳ, ರಂಗಸ್ಥಳ ಮೈಗೂಡಿಸಿಕೊಂಡು ಸರ್ವಾಂಗ ಸುಂದರ ಕಲಾ ಪ್ರಕಾರವಾಗಿ ಹೊರ ಹೊಮ್ಮಿತು. ಯಕ್ಷಗಾನಕ್ಕೆ ಭಾಗವತರ ಆಟ, ಬೆಳಕಿನ ಸೇವೆ ಎಂಬ ಹೆಸರು ಕೂಡ ಇದೆ. ಭಗವಂತನನ್ನು ಸ್ತುತಿಸುವವ ಭಾಗವತ. ಯಕ್ಷಗಾನ ದೇವರ ಆರಾಧನೆಯ ಜೊತೆ ಜೊತೆಗೆ ಮನೋರಂಜನೆ, ಕಲೆ, ಸಾಹಿತ್ಯಗಳ ಬೆಳವಣಿಗೆಗೆ ಪೂರಕವಾಗಿದೆ. ಯಕ್ಷಗಾನದಿಂದ ಜ್ಞಾನವರ್ಧನೆ, ನೀತಿ ಬೋಧನೆ ಪ್ರಾಪ್ತವಾಗುತ್ತದೆ. ಪ್ರಬುದ್ಧ ಕಲಾವಿದರ ಯಕ್ಷ ಸಂಭಾಷಣೆ ತರ್ಕ ಶಕ್ತಿ & … Read more

ಒಂದೂಕಾಲು ಸಾವಿರ ದಾಟಿದ ಪಂಜು ಬರಹಗಾರರು

ಪಂಜು ಬರಹಗಾರರು (ಒಟ್ಟು=1254) 1 ಅಂಜಲಿ ರಾಮಣ್ಣ2 ಅಂಬಿಕ ರಾವ್3 ಅಂಬಿಕಾ ಪ್ರಸಾದ್4 ಅಕ್ಕಿಮಂಗಲ ಮಂಜುನಾಥ5 ಅಕ್ಬರ್ ಅಲಿ6 ಅಕ್ಷತಾ ಕೃಷ್ಣಮೂರ್ತಿ7 ಅಕ್ಷಯ ಕಾಂತಬೈಲು8 ಅಕ್ಷಯಕುಮಾರ ಜೋಶಿ9 ಅಖಿಲೇಶ್ ಚಿಪ್ಪಳಿ10 ಅಜ್ಜಿಮನೆ ಗಣೇಶ್11 ಅಜಯ್12 ಅಜಯ್ ಅಂಗಡಿ13 ಅಜಯ್ ಕುಮಾರ್ ಎಂ ಗುಂಬಳ್ಳಿ14 ಅಜಿತ್ ಕೌಂಡಿನ್ಯ15 ಅಜಿತ್ ಭಟ್16 ಅಣ್ಣಪ್ಪ ಆಚಾರ್ಯ17 ಅಣ್ಣಯ್ಯ ಸ್ವಾಮಿ18 ಅದಿತಿ ಎಂ. ಎನ್.19 ಅನಂತ ಕುಣಿಗಲ್20 ಅನಂತ ರಮೇಶ್21 ಅನಂತ್ ಕಳಸಾಪುರ22 ಅನ್ನಪೂರ್ಣಾ ಬೆಜಪ್ಪೆ23 ಅನಿತ.ಎನ್24 ಅನಿತಾ25 ಅನಿತಾ ಕೆ. ಗೌಡ26 … Read more

ಹೆಣ್ಣು ಗಂಡೆಂಬ ಅಸಮಾನತೆಯ ಹಳತಾದ ಚರ್ಚೆಗೆ ಇನ್ನೊಂದು ಆಯಾಮ: ವಾಣಿ ಚೈತನ್ಯ

ಪ್ರಜ್ಞಾವಂತ ನಗರೀಕೃತ ಭಾರತದಲ್ಲಿ, ಮಗಳಿಗೆ ಓದಿಸಬೇಕು ಎನ್ನುವ ಹಂಬಲ ಹೆಚ್ಚಾಗಿ, ಕಾಲೇಜು ಮೆಟ್ಟಿಲೇರಿರುವ ಹೊಸ gen G ಪೀಳಿಗೆಯಲ್ಲಿ, ಲಿಂಗ ಅಸಮಾನತೆ ಎನ್ನುವ ಚರ್ಚೆಯು ಔಟ್ ಡೇಟೆಡ್ ಚರ್ಚೆ ಎನ್ನಿಸುತ್ತಿದೆ.ನಾನು 15 ವರ್ಷದ ಹಿಂದೆ ಬಿಜಾಪುರದಲ್ಲಿ ಕೌಟುಂಬಿಕ ದೌರ್ಜನ್ಯದ ವಿಷಯವಾಗಿ ಕೆಲಸಮಾಡುವಾಗ, ದೇವದಾಸಿ ಮಹಿಳೆಯರ ಇರುವಿಕೆ, ಕಷ್ಟ ಸುಖ ತಿಳಿದು, ಒಂದು ಪತ್ರಿಕೆಗೆ ಕಥೆಯ ರೂಪದಲ್ಲಿ ಲೇಖನ ಬರೆದಿದ್ದೆ. ಅದನ್ನು ಬೆಂಗಳೂರಲ್ಲಿ ಕುಳಿತ ಸಂಪಾದಕರು, ಔಟ್ ಡೇಟೆಡ್ ಎಂದು ಆಗಿನ ಕಾಲಕ್ಕೆ ಸೂಕ್ತವಲ್ಲ ಎಂದು ತಿರಸ್ಕರಿಸಲಾಗಿತ್ತು. ನಾನು … Read more

ಮನುಷ್ಯನ ಭಾವಂತಃಕರಣದ ಸಹಜ ತೊಳಲಾಟಗಳ ಒಂದು ಸದಭಿರುಚಿಯ ಚಿತ್ರ – ಡಿ. ಎನ್. ಎ: ಪ್ರಶಾಂತ ಬೆಳತೂರು

ಇತ್ತೀಚಿನ ಮುಕ್ಕಾಲು ಪಾಲು ತಳಬುಡವಿಲ್ಲದ ಕನ್ನಡ ಸಿನಿಮಾಗಳನ್ನು ಕಂಡು ಬೇಸತ್ತು ತಮಿಳು ಮತ್ತು ಮಲಯಾಳಂ ಚಿತ್ರಗಳನ್ನು ಆಗಾಗ್ಗೆ ಬಿಡುವಿನ ವೇಳೆಯಲ್ಲಿ ನೋಡುತ್ತಿದ್ದ ನಾನು ಆರಂಭದಲ್ಲಿ ಈ ಡಿ. ಎನ್. ಎ. ಚಿತ್ರಗಳ ಪೋಸ್ಟರ್ ಅನ್ನು ಹಾಗೂ ಇದರ ಯುಟ್ಯೂಬ್ ವಿಡಿಯೋ ಲಿಂಕ್ ಅನ್ನು ನೋಡಿಯು ನೋಡದಂತೆ ನಿರ್ಲಕ್ಷ್ಯ ವಹಿಸಿದ್ದೆ. ತೀರಾ ಇತ್ತೀಚೆಗೆ ತಮಿಳಿನಲ್ಲೂ ಹಾಗೂ ಮಲಯಾಳಂನಲ್ಲೂ ಇದೇ ಡಿಎನ್ಎ ಹೆಸರಿನ ಚಿತ್ರಗಳು ಬಂದಿದ್ದರಿಂದ ಪ್ರಾಯಶಃ ಇದರ ಕಥಾಹಂದರವೂ ಇದೇ ಇರಬೇಕೆಂಬ ನನ್ನ ಪೂರ್ವಾಗ್ರಹ ಪೀಡಿತ ತಿಳವಳಿಕೆಯಿಂದಾಗಿ ಈ … Read more

ಬದಲಾಗುತ್ತಿರುವ ಕುಟುಂಬ ವ್ಯವಸ್ಥೆ: ಕಲ್ಪನಾ ಪ್ರಭಾಕರ ಹೆಗಡೆ

ಮಾನವರಲ್ಲಿ ಕುಟುಂಬ ಎಂದರೆ ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹಬಾಳ್ವೆಯಿಂದ ಒಟ್ಟಾಗಿರುವ ಒಂದು ಗುಂಪು. ಇದು ಸಮಾಜದ ಬಹುಮುಖ್ಯ ಅಂಗ. ನಾವು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆ. ಭಾಷೆ ಸಂಸ್ಕೃತಿ ಸಂಪ್ರದಾಯ ಶಾಸ್ತ್ರಗಳು ಪಾರಂಪರಿಕವಾಗಿ ಬೆಳೆದು ಬರುವುದಕ್ಕೂ ಈ ಕುಟುಂಬವೇ ಕಾರಣ. ಹುಟ್ಟಿದಾಗಿನಿಂದ ಕುಟುಂಬದೊಳಗೆ ಬೆಳೆದು ಪ್ರೀತಿ, ಕಾಳಜಿ ,ದಯೆ ಇತ್ಯಾದಿ ಜೀವನ ಮೌಲ್ಯಗಳನ್ನು ಕಲಿಯುವುದು ಇಲ್ಲಿಯೇ. ಇದು ನಮ್ಮ ಮೊದಲ ಪಾಠ ಶಾಲೆ ಎನ್ನಬಹುದು. ಹಿಂದೆಲ್ಲ ಹೆಚ್ಚಾಗಿ ಅವಿಭಕ್ತ ಕುಟುಂಬಗಳಿರುತ್ತಿದ್ದವು. ಅಂದರೆ ಒಂದೇ ಕಡೆ … Read more

ಎಕ್ಸ್ಪ್ರೆಸ್ ಟ್ರೈನ್: ಮೋಹನ ಬಣಕಾರ

“ಮೈಸೂರು ಎಕ್ಸ್ಪ್ರೆಸ್”, ಇದು ಬೆಳಗಾವಿಯಿಂದ ಬೆಳಗ್ಗೆ ಸುಮಾರು 6:15 ಕ್ಕೆ ಹೊರಟರೆ, ಮೈಸೂರನ್ನು ತಲುಪೋದು ತಡಸಂಜೆ 8:00 ಗಂಟೆಗೆ. ಸುಮಾರು 615 ಕಿಲೋ ಮೀಟರ್ ರೈಲು ಮಾರ್ಗವನ್ನು ಕ್ರಮಿಸಲು 14 ಗಂಟೆಗಳ ಸುದೀರ್ಘ ಪ್ರಯಾಣ. ಅಂದರೆ ಪ್ರಯಾಣದ ಗತಿ, ಗಂಟೆಗೆ 43 ರಿಂದ 44 ಕಿಲೋಮೀಟರ್ಗಳು. ಇದು ನಮ್ಮ ಎಕ್ಸ್ಪ್ರೆಸ್ ಟ್ರೈನ್ ಗಳ ಹಣೆಬರಹ. ಇದೆಲ್ಲಾ ರೈಲು ನಿಗದಿತ ವೇಳಾಪಟ್ಟಿಯಂತೆ ಚಲಿಸಿದರೆ ಮಾತ್ರ ಅನ್ವಯ. ವಾಸ್ತವದಲ್ಲಿ, ಬಹುತೇಕ ರೈಲು ಪ್ರಯಾಣದ ಸ್ಥಿತಿ ಹೇಗೆಂದರೆ, ರೈಲು ಬಂದಾಗ (ಬಂದಾಗ … Read more

ಕಥೆಗಾರರ ದೇಶಕಾಲವ ತೊರೆದು ಓದುಗನ ಎಲ್ಲೆ ಪ್ರವೇಶಿಸುವ ಕತೆಗಳು: ಸ್ವಾಲಿ ತೋಡಾರ್‌

ಒಂದು ಕೃತಿಗೆ ಮುಖ್ಯವಾಗಿ ಎರಡು ಗುಣಗಳಿರಬೇಕು. ಓದುಗನನ್ನು ಸೆಳೆದುಕೊಳ್ಳುವ ಆಕರ್ಷಣೆ ಮತ್ತು ಓದುಗನೊಳಗಿನ ತರ್ಕಶೀಲತೆಯನ್ನು ವಿಶಾಲಗೊಳಿಸುವ ಹೂರಣ. ಲಂಕೇಶರು ಇದನ್ನೇ ರಂಜನೆ ಮತ್ತು ಪ್ರಚೋದನೆ ಎಂದು ಕರೆದಿದ್ದಾರೆ. ಬೋಧನೆ ಎನ್ನುವುದು ಕೃತಿಕಾರನ ಪ್ರಜ್ಞೆ, ಪ್ರಬುದ್ಧತೆಯನ್ನು ಆಧರಿಸಿದ ನಂತರದ ಎತ್ತರ. ಅದು ಸಾಹಿತ್ಯ ಕೃತಿಯಾಗಿರಲಿ, ವೈಚಾರಿಕ ಹೊತ್ತಿಗೆಯಾಗಿರಲಿ ರಂಜನೆ, ಪ್ರಚೋದನೆಗಳು ತುಂಬಾ ಮುಖ್ಯ. ಇತ್ತೀಚೆಗೆ ಪ್ರಕಟವಾಗುತ್ತಿರುವ ಕೃತಿಗಳಲ್ಲಿ ‘ಎಲ್ಲೆ ತೊರೆದ  ಕಥೆಗಳು’ ಸಂಕಲನ ಅಂತಹ ಒಂದು ಕೃತಿ ಎನ್ನಬಹುದು. ಗಿರೀಶ್ ತಾಳಿಕಟ್ಟೆ ಅವರು ಕನ್ನಡಕ್ಕೆ ಅನುವಾದಿಸಿದ ಭಾರತದ ಶ್ರೇಷ್ಠ … Read more

ಶಕುಂತಲೆ ಕವಿತೆ ಝಲಕ್: ಸಂತೋಷ್ ಟಿ

ಶಕುಂತಲೆ ಕವಿತೆ ಝಲಕ್ ೧ ಶಕುಂತಲೆ ಮರೆತ ಅಭಿಜ್ಞಾನ ಉಂಗುರನೀರೊಳಗಿನ ಮೀನೊಂದರ ಎದೆಯಲಿ ಆಹಾರಪ್ರೀತಿಯ ಕುರುಹು ಮರೆತ ದುಃಖ ಬಲುಭಾರದುಷ್ಯಂತ ರಾಜಪ್ರೇಮಿ ಮರೆತ ಗಾಂಧರ್ವ ಪ್ರೀತಿಮಾಲಿನಿ ತೀರದ ಕಣ್ವರ ಸಾಕುಪುತ್ರಿ ಶಕುಂತಲೆಹದಿಹರೆಯದ ಪ್ರೇಮದ ಹಾಡುಪಾಡುಆಶ್ರಮದ ಹೆಣ್ಣು ಸುಂದರಿ ತರುಣಿಶಕುಂತಲೆಯ ಬದುಕು ಬವಣೆಯ ಬಾಳು ತಪೋವನದ ಸಾತ್ವಿಕರ ಮಗಳು ಕಾಡಿನಲಿಹೂವು ತರಲು ಹೋದ ವೇಳೆ ಮದನೋತ್ಸವಮನ್ಮಥನ ಹೂ ಬಾಣ ಸುಳಿಗಾಳಿಯಾಗಿ ನಾಟಿರಲುಹಸ್ತಿನಾವತಿಯ ರಾಜ ದುಷ್ಯಂತ ಮದನನ ಕಣಿಯಾಗಿರಲುಸಂಭ್ರಮಿತಗೊಂಡವು ಲತೆ ಬಳ್ಳಿ ಕಾಡು ಮೇಡುಸುವಾಸಿತಗೊಂಡವು ಕಾಡು ಮೃಗ ಕಗ ಜಿಂಕೆಗಳ … Read more

ಮನೆ ಮಾರಾಟಕ್ಕಿದೆ: ಸೂರಿ ಹಾರ್ದಳ್ಳಿ

ನಾನು ದಿನಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಿ ತುಂಬಾ ಕಾಲವಾಯಿತು. ಏನಿವೆ ಅದರಲ್ಲಿ? ಕೊಲೆ, ಸುಲಿಗೆ, ದರೋಡೆ, ಭ್ರಷ್ಟಾಚಾರ, ಮಾನಭಂಗ, ಅಪಘಾತ, ಇವಿಷ್ಟೇ. ಅದೂ ಅಲ್ಲದೇ ಕೆಲ, ಅಷ್ಟೇ ಏಕೆ, ಬಹು ದರಿದ್ರದ ರಾಜಕಾರಣಿಗಳ ಚಿತ್ರಗಳೂ ಮುಖಪುಟದಲ್ಲಿಯೇ ಪ್ರಕಟವಾಗುತ್ತವೆ, ಅವನ್ನು ಶುಭ ಮುಂಜಾನೆ ನೋಡಬೇಕೇ? ಇದನ್ನು ಬೆಳ್ಳಂಬೆಳಗ್ಗೆ ಓದಿ ಯಾಕೆ ತಲೆಯನ್ನು ರಾಡಿ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯ ನನ್ನದು.ಆದರೆ ನನ್ನ ಹೆಂಡತಿಗೆ ಒಂದು ತಲಬು ಇದೆ, ಹಾಗೆ ಹೇಳಿದರೆ ಅವಳು ಬೇಜಾರು ಮಾಡಿಕೊಳ್ಳುವುದಿಲ್ಲ ಬಿಡಿ, ಒಂದು ಕೈಲಿ ಕಾಫಿ ಲೋಟ … Read more

ಗಾಂಜ ಮತ್ತು ಹೊಲ: ಅಕ್ಬರ್ ಅಲಿ

1ಪಂಪಣ್ಣ ಹಾಗೂ ಸಿದ್ದಪ್ಪ ತಮ್ಮ ಹೊಲಗಳನ್ನ ಮಲ್ಲಾರೆಡ್ಡಿ ಎಂಬಾತಗ ಪಾಲಿಗೆ ಕೊಟ್ಟರು. ಈ ಸಂಗತಿ ಸಂಗವ್ವಗ ಸಮಾಧಾನ ತಂದಿರ್ಲಿಲ್ಲ. ಎಷ್ಟನ ಬೆಳಿಲಿ ಮನೆವ್ರೆ ಮಾಡ್ಕೆಂದು ತಿನ್ಬೇಕು. ಭೂಮಿತಾಯಿ ಒಂದೊರ್ಷ ಕೊಡ್ಲಿಲ್ಲಂದ್ರ ಇನ್ನೊಂದೊರ್ಷ ಕೊಡ್ತಾಳ. ರೈತ್ರು ನಂಬಿಕೀನ ಕಳ್ಕಾಬಾರ್ದು ಅಂತ ಸಂಗವ್ವನ ಗಂಡ ಸತ್ಯಪ್ಪ ಹೇಳ್ತಿದ್ದ. ಎಂತಾ ತಂದಿಗೆ ಎಂತಾ ಮಕ್ಳು ಹುಟ್ಟಿದ್ರಲಾ? ಅಂತ ಸಂಗವ್ವ ಭಾಳ ಚಿಂತಿ ಮಾಡಂಗಾತಿ. ರಡ್ಡೇರು ಮೊದ್ಲ ಹೊಲ್ದಾಗ ಕಾಲಿಡ್ತಾರಾ ಆಮ್ಯಾಗ ಮಾಲಕ್ರಿಗೆ ಸಾಲ ಕೊಟ್ಗಂತ ಹೋತಾರ. ಆ ಸಾಲಾನ ಟೈಮಿಗೆ ತೀರ್ಸಲಿಲ್ಲಂದ್ರ … Read more

ದಿಕ್ಕುಗಳು (ಭಾಗ 11): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅಜ್ಜಿಯ ಜೊತೆಗೆ ಜ್ಯೋತಿ ತನ್ನ ಮನೆ ತಲುಪಿ, ತನ್ನ ಕಂಪ್ಯೂಟರ್ ಮುಂದೆ ಹೋಗಿ ಕುಳಿತುಕೊಂಡಳು. ಅಜ್ಜಿಗೆ ಅನುಶ್ರೀಯ ಆತ್ಮಹತ್ಯೆಯ ಪ್ರಯತ್ನ ತುಂಬಾ ಆಘಾತ ನೀಡಿತ್ತು. ಆಕೆ ಜ್ಯೋತಿಗಾಗಿರುವ ಮಾನಸಿಕ ಪೆಟ್ಟನ್ನು ಅದರ ಆಳವನ್ನು ಪತ್ತೆ ಹಚ್ಚಿದ್ದಾಳೆ. ಮಾತನ್ನೆ ಕಳೆದುಕೊಂಡಂತಾಗಿರುವ ಮೊಮ್ಮಗಳನ್ನು ಕಂಡು ಅವರ ಹೃದಯ ವಿಲವಿಲನೆ ಒದ್ದಾಡುತ್ತಿದೆ. ಸದಾ ಏನಾದರೂ ಹರಟೆ ಹೊಡೆಯುತ್ತಾ, ಆ ಹರಟೆಯಲ್ಲಿಯೇ ಒಂದಿಷ್ಟು ನೆಮ್ಮದಿ ಕೊಡುತ್ತಾ, ಪಡೆಯುತ್ತಾ ಬೆಳೆದಿರುವ ಹುಡುಗಿ ಮಾತನ್ನೂ, ಕಣ್ಣಿನ ಹೊಳಪನ್ನೂ, ಊಟದ ಮೇಲಿನ ಆಸಕ್ತಿಯನ್ನೂ ಕಳೆದುಕೊಂಡು ಹೀಗೆ ಸೊರಗಿ … Read more

ಪ್ರಾಮಾಣಿಕ ಪ್ರಯತ್ನ ಗೆಲುವಿನ ಮೊದಲ ಮತ್ತು ಕೊನೆಯ ಮೆಟ್ಟಿಲು: ಜಿ. ಎಸ್. ಶರಣು

ನಾವು ಯಶಸ್ಸಿನ ಕಥೆಗಳನ್ನು ಓದುವಾಗ ಅಥವಾ ಕೇಳುವಾಗ, ನಮಗೆ ಕೇವಲ ಅಂತಿಮ ಫಲಿತಾಂಶ ಮಾತ್ರ ಕಾಣಿಸುತ್ತದೆ. ಆ ವ್ಯಕ್ತಿ ಪಡೆದ ಪದಕ, ಗಳಿಸಿದ ಹಣ ಅಥವಾ ಏರಿದ ಎತ್ತರ ನಮ್ಮ ಕಣ್ಣಿಗೆ ಕಾಣುತ್ತದೆ. ಆಗ ಸಹಜವಾಗಿಯೇ ನಾವು, “ಅವರು ತುಂಬಾ ಅದೃಷ್ಟವಂತರು” ಎಂದು ಅಂದುಕೊಳ್ಳುತ್ತೇವೆ. ಆದರೆ ಆ ಅದೃಷ್ಟದ ಹಿಂದೆ ಹಗಲಿರುಳು ಸುರಿಸಿದ ಬೆವರಿನ ಹನಿಗಳು ಮತ್ತು ಯಾರಿಗೂ ಕಾಣದಂತೆ ಮಾಡಿದ ಪ್ರಾಮಾಣಿಕ ಪ್ರಯತ್ನ ನಮಗೆ ಕಾಣಿಸುವುದಿಲ್ಲ. ವಾಸ್ತವದಲ್ಲಿ, ಜಗತ್ತಿನಲ್ಲಿ ಅದೃಷ್ಟ ಎನ್ನುವುದು ಲಾಟರಿ ಟಿಕೆಟ್ ಅಲ್ಲ, … Read more

ಪಂಜು ಕಾವ್ಯಧಾರೆ

ಮಳೆ ಹನಿ ಆಸೆ ನೀನು ತುಂಬಾ ವಿಶಾಲಪ್ರಶಾಂತ, ವಿಸ್ಮಯನಿನ್ನ ಸುಂದರ ಸೆಳೆಯುವ ನೋಟಕ್ಕೆಸೂರ್ಯ ಚಂದ್ರರ ಹಗಲು ಇರುಳು ಆಟಕ್ಕೆನಿನ್ನ ಮೊಗದ ಬಣ್ಣ ಬಣ್ಣಚಿತ್ತಾರ ಕಂಡುಹರ್ಷದಿ ಪುಳಕಿತಗೊಂಡೆ. ನಾ ಬೆಳ್ಳಿ ಮೋಡವಾಗಿಸನಿಹ ಬಂದಾಗಕಣ್ಣಿನ ನೋಟಕೆ ನಿಲುಕದಅಗಾಧ ಭಾವಬಣ್ಣ ರಹಿತ ಕಲ್ಪನಾತೀತರೂಪ ನಿನ್ನದು. ನಾ ನಿನ್ನಲ್ಲೊಂದುಕಾಮನ ಬಿಲ್ಲಿನ ಚಿತ್ತಾರ ಮೂಡಿಸಿಉಲ್ಲಾಸ ಹೊಂದುವ ಮುನ್ನವೇಮಾಯದ ಮಳೆಗೆ ಸಿಲುಕಿಬಿಸಿಲುಗಾಡಿನ ಸರೋವರದಲಿ ಹನಿಯಾಗಿಉಬ್ಬರವಿಳಿತದ ಅಲೆಯಾಗಿರುವೆ. ಮತ್ತೊಮ್ಮೆಮುಂಗಾರು ಕಾಲದಲಿಆವಿಯಾಗಿ ನೀಲಿ ಮುಗಿಲಿನಹೊನ್ನಿನ ಬಣ್ಣವ ನೋಡುವಸ್ನೇಹ ಚಿತ್ತಾರ ಕಂಡುತನ್ಮಯವಾಗುವಾಸೆ. -ತೇಜಸ್ವಿನಿ ನಾನೆಂಬ ಮರ ಬಾನೆತ್ತರಕೆ ಬೆಳೆದು ನಿಂತಿದೆಬೋಳಾದ … Read more

ವೃದ್ಧಾರಾಧನೆ: ಕೆ ಎನ್ ಮಹಾಬಲ

ಆ ದಿನ ಬೆಳಿಗ್ಗೆ ಎಂದಿನಂತೆ ಬೆಳಗಿನ ವಾಯುಸಂಚಾರಕ್ಕೆ, ತರಕಾರಿ, ಹಾಲು ತರಲು ಹೊರಟಿದ್ದೆ. ರಸ್ತೆಯ ಎದುರುಗಡೆ ಟೀ ಅಂಗಡಿಯ ರಾಜೇಶ್‌”ಸಾರ್‌, ಇಲ್ಲಿ ಬನ್ನಿ” ಎಂದು ಜೋರಾಗಿ ಕೂಗಿದ. ರಸ್ತೆ ದಾಟಿ ಅವನನ್ನು ಸಮೀಪಿಸಿ “ಏನು ರಾಜೇಶ್?”‌ಎಂದು ಕೇಳಿದೆ.“ಸಾರ್‌, ಆ ಮುದುಕ ಹೊನ್ನಪ್ಪ, ಅದೇ ನೀವು ದಿನಾ ಕಾಸು ಕೊಡ್ತಾ ಇದ್ರಲ್ಲಾ ಅವನು ಹೋದ ತಿಂಗಳು ಯುಗಾದಿ ಹಿಂದಿನ ದಿನ ತೀರ್ಕೊಂಡ್ನಂತೆ, ಲಾಕ್‌ಡೌನ್‌ಆಗಿತ್ತಲ್ಲವಾ ಬಹಳ ಕಷ್ಟ ಆಯ್ತಂತೆ ಹೆಣ ಸಾಗಿಸೋದು. ಕಡೆಗೆ ಯಾವುದೋ ಟೆಂಪೋ ಗೊತ್ತು ಮಾಡಿ ಹುಟ್ಟಿದ … Read more

ಪ್ರೀತಿ: ಎಲ್.ಚಿನ್ನಪ್ಪ, ಬೆಂಗಳೂರು

ಮೇನೇಜರ್ ಸಾಹೇಬ್ರೇ, ಪಾಪ ! ನಮ್ಮ ಜಯಂತಿ ಬರೀ ಕೈ ಕಾಲು ವೀಕ್ ಎಂದು ಆಸ್ಪತ್ರೆಗೆ ಸೇರಿ ಹತ್ತು ದಿನಗಳಾದವು, ಇನ್ನೂ ಡಿಸ್ಚಾರ್ಜ್ ಆಗಿಲ್ಲ. ನಾನೀಗ ಅವಳನ್ನು ನೋಡಲು ಹೋಗುತ್ತಿದ್ದೇನೆ, ನೀವೂ ಒಮ್ಮೆ ಹೋಗಿ ನೋಡಿದ್ರೆ ಅವಳ ಮನಸ್ಸಿಗೆ ಸ್ವಲ್ಪ ಸಮಧಾನವಾಗಬಹುದು ಸಾರ್” ಎಂದಳು ಸ್ಟೆನೋ ಸುಮತಿ. “ನೀನ್ಹೋಗಿ ನೋಡ್ಕೊಂಡು ಬಾಮ್ಮ ಸುಮತಿ. . . ಇಲ್ಲಿ ನನ್ನ ಕೆಲಸ ಯಾವಾಗ ಮುಗಿಯುತ್ತೋ. . . . . .?” ಅದಿರಲಿ ಸಾರ್, ಹೇಗಾದರು ಒಮ್ಮೆ ನೀವು … Read more

ಅಪ್ಪಣ್ಣ ಭಟ್ಟರ ಶ್ರುತಿಪೆಟ್ಟಿಗೆ: ಡಾ. ವಿಶ್ವನಾಥ ಎನ್ ನೇರಳಕಟ್ಟೆ

“. . . ವಿಚ. ಕ್ಷಣಗು. ಣಶೀ. ಲದಯಾ. ಲವಾ. ಲಮಾಂ. ಪಾ. ಲಯ. . . ” ತಾರಸ್ಥಾಯಿಯೇ ಉತ್ತುಂಗವೆನಿಸಿದ್ದ ಸಾಲನ್ನು ಹಾಡುವಾಗ ಅಪ್ಪಣ್ಣ ಭಟ್ಟರ ಶ್ರುತಿ ಎಲ್ಲೋ ಕಳೆದುಹೋಯಿತು. ಶುದ್ಧ ಮಧ್ಯಮ ಧ್ವನಿ ಹೊಮ್ಮುವ ಬದಲು ಪ್ರತಿ ಮಧ್ಯಮ ಧ್ವನಿಯನ್ನು ಅವರ ಗಂಟಲು ಹೊರಡಿಸಿದ್ದರಿಂದಾಗಿ ಅಪಶ್ರುತಿ ಕೇಳಿಬಂತು. ಅದು ಅವರಿಗೆ ತಿಳಿಯದ ಸಂಗತಿಯೇನಲ್ಲ. ತಕ್ಷಣಕ್ಕೆ ತಾನೆಲ್ಲೋ ತಪ್ಪು ಮಾಡಿದ್ದೇನೆ ಎಂಬ ಭಾವ ಅವರನ್ನು ಆವರಿಸಿತು. ಆದರೆ ಅದನ್ನು ಒಪ್ಪಿಕೊಳ್ಳಲು ಮನಸ್ಸು ಬಾರದೆ ಶ್ರುತಿಪೆಟ್ಟಿಗೆಯ ಕಡೆಗೆ … Read more

ಜಯಂತಿಪುರವೆಂಬ ಸಾವಿರದ ಕಥಾಕಡಲು…!: ಜಗದೀಶ ಬ. ಹಾದಿಮನಿ

ಶ್ರೀಧರ ಬನವಾಸಿಯವರು ‘ಅಮ್ಮನ ಆಟೋಗ್ರಾಫ್’, ‘ಬ್ರಿಟಿಷ್ ಬಂಗ್ಲೆ’, ‘ದೇವರ ಜೋಳಿಗೆ’ ಕಥಾ ಸಂಕಲನಗಳು; ‘ತಿಗರಿಯ ಹೂಗಳು’, ‘ಬಿತ್ತಿದ ಬೆಂಕಿ’, ‘ಪೂರ್ಣಚಂದ್ರನಿಗೆ ಮುಖವಾಡವಿಲ್ಲ’ ಕವನ ಸಂಕಲನಗಳು, ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದ ‘ಬೇರು’ ಕಾದಂಬರಿ ಹಾಗೂ ‘ಪಂಚಮಿ ಪ್ರಕಾಶನ’ದಿಂದ ಈಗಾಗಲೇ ಕನ್ನಡನಾಡಿಗೆ ಚಿರಪರಿಚಿತರು. ಈಗಿವರ ಮತ್ತೊಂದು ವಿಶಿಷ್ಟಕೃತಿಯೇ ‘ಜಯಂತಿಪುರದ ಕತೆಗಳು’ ಎಂಬ ಕಥಾ ಸಂಕಲನ. ಇದರಲ್ಲಿ ಒಟ್ಟು ಹತ್ತು ಕತೆಗಳು, ಎರಡು ನೀಳ್ಗತೆಗಳಿವೆ. ಯಾವವೂ ಅವಸರದ ರಚನೆಗಳಾಗಿಲ್ಲ; ಎಲ್ಲವೂ ಧ್ಯಾನಿಸಿಕೊಂಡು ನಿಧಾನ ಮೈದಾಳಿದಂತಹವುಗಳು. ಜಯಂತಿಪುರವನ್ನೇ ಕೇಂದ್ರಸ್ಥಾನ … Read more

ತ್ಯಾಗ, ನಿಸ್ವಾರ್ಥ ಹಾಗೂ ಮಾನವೀಯತೆಯ ಬೆಳಕು ಪಸರಿಸುವ ಅಪರೂಪದ ಜೀವನಗಾಥೆ ‘ಹೆಗಲು’: ಬೆಂಶ್ರೀ ರವೀಂದ್ರ, ಬೆಂಗಳೂರು

ಬದುಕು ಹಲವು ಸಾಧನೆಗಳಿಗೆ ಅವಕಾಶ ಮಾಡುವ ರಂಗಮಂಚ. ಯಾವ ಸಾಧನೆಯನ್ನೂ ಒಬ್ಬ ವ್ಯಕ್ತಿ ಮಾಡಲಾರ. ಆತನಿಗೆ ಹತ್ತಾರು ಜನರ ಸಹಕಾರ ಇದ್ದೇ ಇರುತ್ತದೆ. ಅದು ಅವನ ಅರಿವಿಗೆ ಬರಬಹುದು ಅಥವಾ ಬಾರದಿರಬಹುದು. ಈ ಸಾಧನೆಗಳು ವ್ಯಷ್ಟಿಯಾಗದೆ ಸಮಷ್ಟಿಯಾದಾಗ ಮಾತ್ರ ಸಾರ್ಥಕವಾಗುತ್ತದೆ. ಸಾಧಿಸಿ ಮುಂದೆ ನಡೆದವನು ತನ್ನನ್ನು ಆ ಎತ್ತರಕ್ಕೆ ಕರೆದೊಯ್ಯದವರನ್ನು ಪ್ರಜ್ಞಾಪೂರ್ವಕವಾಗಿ ಕೃತಜ್ಞತೆಯಿಂದ ನೆನಪಿಸಿಕೊಂಡಾಗ ಆ ಸಾಧನೆಗೂ, ವ್ಯಕ್ತಿಗೂ ಗೌರವ ಬರುತ್ತದೆ. ಅಂತಹ ಸಾರ್ಥಕತೆ “ಹೆಗಲು” ಪುಸ್ತಕದಲ್ಲಿ ಕಾಣುತ್ತದೆ. “ಹೆಗಲು”, ಒಂದು ಅಪರೂಪದ ಜೀವನಗಾಥೆ. ಈ ಕಥನದಲ್ಲಿ … Read more

ಮಂಗಟ್ಟೆ ಪಕ್ಷಿಯ ವಿಸ್ಮಯ ಲೋಕ: ಶ್ರೀಧರ ಬನವಾಸಿ

ಅರಣ್ಯ ಸಂರಕ್ಷಣೆ ಮತ್ತು ಜೀವ ಸಂಕುಲಗಳ ಅಳಿವು ಉಳಿವಿನ ಹೋರಾಟವು ಸದಾ ಪರಿಸರ ಪ್ರಿಯರನ್ನು ಕಾಡುವ ಪ್ರಶ್ನೆ. ಮಾನವ ಅನಾದಿಕಾಲದಿಂದಲೂ ಕಾಡು, ಅಲ್ಲಿನ ಜೀವರಾಶಿಗಳ ನಡುವೆ ಸಹಬಾಳ್ವೆಯಿಂದಲೇ ಬದುಕುತ್ತಾ ಬಂದವನು. ಕಾಲಘಟ್ಟದ ಕಡುವೈರುಧ್ಯವೋ ಏನೋ…ಮಾನವ ತನ್ನ ಹಿಂದಿನ ಹಾದಿ ತಪ್ಪಿ ಹಿಂಸೆ, ಸ್ವಾರ್ಥದ ಚಿಂತನೆಯ ದಿಕ್ಕಿನತ್ತ ಸಾಗಿದಾಗ ಅಲ್ಲಿಂದ ಕಾಡಿನ ಜೊತೆ ಅವನ ಹೋರಾಟ ಶುರುವಿಟ್ಟುಕೊಂಡ. ಇದೊಂದು ಅನೈಸರ್ಗಿಕ ಸುದೀರ್ಘ ಪಯಣ. ಈ ದುರುಳ ಹಾದಿಯಲ್ಲಿ ನಾವು ಕಳೆದುಕೊಂಡ ಸಂಪತ್ತೇಷ್ಟೋ! ಒಂದು ರೀತಿಯಲ್ಲಿ ಮಾನವನ ಅಜ್ಞಾನದ ಹಾದಿಯು … Read more

ಅಜ್ಜಿ ಕತೆ: ಆದರ್ಶ ಜೆ.

ಈ ದಿನ ಮಳೆ ಬಿಡುವಂತೆ ಇರಲಿಲ್ಲ ಮಾಡಲು ಕೆಲಸಗಳು ಬೇಕಾದಿಷ್ಟಿದ್ದರು ಮಾಡುವಂತೆಯೂ ಇರಲಿಲ್ಲ, ಈ ಹಾಳಾದ ಮಳೆ ಈಗ್ಲೇ ಮಳೆಗಾಲದ ನಮೂನೆ ಮಾಡ್ತಿದೆ. ಮಳೆಗಾಲ ಶುರುವಾಯ್ತೆನೊ?ಎಂದು ಕಾಲು ತೊಳೆಯುತ್ತಾ, ಹಿಮ್ಮಡಿಗೆ ಹತ್ತಿದ ಸಗಣಿ ಸರಿಯಾಗಿ ತೊಳೆದಿದಿಯೋ ಇಲ್ಲವೋ ಎಂದು ಖಾತರಿಪಡಿಸಿ. ಸೀದಾ ಅಡುಗೆ ಮನೆಗೆ ತೆರಳಿ ತಿಂಡಿ ತಿಂದು ಜಗುಲಿಯ ಕುರ್ಚಿಯೇರಿ, ಬೀಳುವ ಮಳೆಯನ್ನೇ ದಿಟ್ಟಿಸುತ್ತ ಕವಳ ಮೆಲ್ಲಲು ಶುರು ಮಾಡಿದ. ಒಮ್ಮೆಲೇ ಏನೋ ನೆನಪಾದವನಂತೆ ದಿಗ್ಗನೆ ಎದ್ದು ಚಡಿ ಕಟ್ಟೆ ತುದಿಗೆ ನೆಡೆದು, ಕವಳದ ಕೆಂಪು … Read more

ಪಂಜು ಕಥಾ ಸ್ಪರ್ಧೆ

ಪಂಜು ಅಂತರ್ಜಾಲ ಪತ್ರಿಕೆ ವತಿಯಿಂದ ಕಥಾ ಸ್ಪರ್ಧೆಗೆ ನಿಮ್ಮ ಕಥೆಯನ್ನು ಆಹ್ವಾನಿಸಲಾಗಿದೆ. ಸೂಚನೆಗಳು:-ಕಥೆ ಸ್ವಂತ ರಚನೆಯಾಗಿರಬೇಕು.-ಕಥೆ ಯೂನಿಕೋಡ್ ನಲ್ಲಿ ಇದ್ದರೆ ಒಳ್ಳೆಯದು.-ಸ್ಪರ್ಧೆಗೆ ಅಪ್ರಕಟಿತ ಕಥೆಯನ್ನು ಮಾತ್ರ ಕಳುಹಿಸಬೇಕು. ಕಥೆಯು, ಎಫ್ ಬಿ, ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಕಥೆಯನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.-ಬೇರೆಯವರ ಕದ್ದ ಕಥೆಯನ್ನು ಕಳುಹಿಸಿದರೆ ಅಂತಹ ಲೇಖಕರನ್ನು ಪಂಜುವಿನ ಬ್ಲಾಕ್ ಲಿಸ್ಟ್ ಗೆ ಹಾಕಲಾಗುವುದು. ಕಥೆಯನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಕಥಾಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. ಮಿಂಚಂಚೆಯಲ್ಲಿ … Read more

ಮೂರು ಕವಿತೆಗಳು: ಚಂದಕಚರ್ಲ ರಮೇಶ ಬಾಬು

ಸಾಲುಮರದ ತಿಮ್ಮಕ್ಕ ವೃಕ್ಷ ಶಾಸ್ತ್ರ ಕಲಿತವರೆಲ್ಲತರಗತಿಗಳಲ್ಲಿ ಹೇಳಿ ದಣಿದರುನೀನು‌ ಮಾತ್ರಹಸಿರು ಧರಣಿಗೆ ಕಸುವುಪ್ರಾಣವಾಯು ನೀಡುವಪಾದಪಗಳೇ ಧರೆಗೆ ಪ್ರಾಣಪರಿಸರ ಹಸಿರು ಹಸಿರೆನಿಸಿದರೇನೇಜನರಿಗೆ ಉಸಿರುಎಂದು ಅರಿತುಯಾವ ಶಾಲೆಗೂ ಹೋಗದೆಯಾವ ಶಾಸ್ತ್ರದ ನೆರವು ಬೇಡದೆಭೂಮಿಗೆ ಹಸಿರ ಹೊದಿಕೆಹೊದಿಸುವ ಕಾಯಕ ಮಾಡಿದೆಯಲ್ಲಪ್ರಶಸ್ತಿ ಬಂದೀತೆಂದು ಕಾಯಲಿಲ್ಲಪತ್ರಿಕೆಗಳಲ್ಲಿ ಫೋಟೋ ಹಾಕಿಸಲಿಲ್ಲಮರ ನೆಡುವ ದುಡಿಮೆಮಾಡುತ್ತ ಜನರ ಸೇವೆ ಗೈದೆಪ್ರಶಸ್ತಿ ಕೊಟ್ಟ ಸರಕಾರತನ್ನನ್ನ ತಾನೇ ಗೌರವಿಸಿಕೊಂಡಿತುಇನ್ನ ನನ್ನ ಸರದಿ ಮುಗಿಯಿತುದೇವಲೋಕದ ಹಸಿರು ನಿಶಾನೆ ಬಂತುನೀವು ಮುಂದುವರೆಸಿ ಎನ್ನುತ್ತಶತಾಯುಷಿಯೆನಿಸಿಶತಮಾನಗಳಷ್ಟು ಕೀರ್ತಿ ಗಳಿಸಿಮರಗಳನ್ನ ಅಮರವಾಗಿಸಿಮರೆಯಾದೆ ತಿಮ್ಮಕ್ಕ! ಮಳೆಯ ಅವಾಂತರ ನಿರ್ಮಲ ಆಕಾಶ … Read more

ದಿಕ್ಕುಗಳು (ಭಾಗ 10): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅದೇ ರೀತಿ ಸುಸಜ್ಜಿತವಾದ ಆಧುನಿಕ ಸ್ನಾನದ ಕೋಣೆ, ಪಾಯಖಾನೆಯನ್ನು ನೋಡಿದಾಗ ಅನುಶ್ರೀ ಗೊಂದಲಕ್ಕೀಡಾದಳು. ಚೈತನ್ ಆಕೆಯ ಕೈ ಹಿಡಿದುಕೊಂಡೇ ನಡೆದು ಬಚ್ಚಲು ಮನೆಯಲ್ಲಿಯ ಬಿಸಿ ನೀರು, ತಣ್ಣೀರಿನ ನಲ್ಲಿಗಳನ್ನು ತೋರಿಸಿ, ಪಾಯಖಾನೆ ಬಳಸುವ ಪದ್ಧತಿಯನ್ನೂ ಸೂಚ್ಯವಾಗಿ ತಿಳಿಸಿ ಸಂಕೋಚಪಟ್ಟುಕೊಳ್ಳುವ ಅಗತ್ಯವಿಲ್ಲವೆಂದು ಬೆನ್ನು ತಟ್ಟಿ ಹೇಳಿದನು. “ಸ್ನಾನ ಮಾಡಿ ಬಿಡು. ಫ್ರೆಶ್ ಆಗುತ್ತೆ ಮನಸ್ಸು ಕೂಡ” ಎಂದಾಗ ಆಕೆ, “ಬ ಬ ಬಟ್ಟೆ..” ಎಂದು ತೊದಲಿದಳು. “ನಾ ನಾ ನಾಳೆ ತರ್ತೀನಿ. ಈಗ ನನ್ನ ಬಟ್ಟೆ ಹಾಕಿಕೊ” ಎಂದು … Read more

ಭೀಮಹೆಜ್ಜೆ: ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಕುರುಕ್ಷೇತ್ರ ಯುದ್ಧದ ಹತ್ತೊಂಭತ್ತನೆಯ ದಿನ ರಣರಂಗದಲ್ಲಿ ಶಬರಿ ಬಂದು ಅಳುತ್ತಾ ಕುಳಿತಂತೆ ಕಾಣಿಸುತ್ತಿದ್ದಳು,ಭರತಪುರದ ತನ್ನ ಜಮೀನಿನಲ್ಲಿ ಕೆಂಪು ನೆಲದ ಮೇಲೆ ಕುಳಿತು ಅಳುತ್ತಿರುವ ಪಳನಿಯಮ್ಮ. ಸುತ್ತಮುತ್ತ ನಡು ಮುರಿಸಿಕೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬಾಳೆಯ ಗಿಡಗಳು, ಅವುಗಳ ಮಧ್ಯೆ ಎಪ್ಪತ್ತೆರಡರ ಹಿರಿಜೀವ ಪಳನಿಯಮ್ಮ. ಕದಳಿ ವನದಲ್ಲಿ ಕದಡಿ ಕುಳಿತಂತಹ ನಿಲುವು ಅವಳದ್ದಾಗಿತ್ತು. ಬಿಕ್ಕಳಿಸುತ್ತಿದ್ದಳು. ನೆಲದ ಮೇಲೆ ಎರಡೆರಡು ಸಲ ಕೈಬಡಿದಳು. ತನ್ನ ಹೊಟ್ಟೆ ಸೇರಿ ತಂಪುಮಾಡಲಿ ಎಂದು ತಾನು ನಿರುಕಿಸುತ್ತಿದ್ದ ಹಣ್ಣುಹಣ್ಣಾದ ಗೊನೆ ಇದೆಯೇ ಎಂದು ತಾನು ಕುಳಿತಲ್ಲಿಂದಲೇ … Read more

ಜಂಬೂ ಸವಾರಿ: ಡಾ.ವೃಂದಾ ಸಂಗಮ್

ಇದೇನು ಕತಿಯಲ್ಲ. ನಮ್ಮೂರಾಗ ನಡೆದದ್ದು. ಆದರೂ ನೀವು ನಂಬೂದಿಲ್ಲ ನನಗ ಗೊತ್ತದ. ಅಂಥಾದ್ದೇನದ ಅಂದರ. ನಮ್ಮೂರಾಗ ಒಂದು ಇನ್ಸಪೆಕ್ಷನ್‌ ಬಂಗಲೋ ಅದ. ಅದೇನು ದೊಡ್ಡದು ಅಂತೀರಾ ಅಥವಾ ಈಗ ಹೋಗಿ ನೋಡಿದರ ಅದೊಂದು ಹಳೆಯ ಪಳೆಯುಳಿಕೆಯ ಕೋಟೆ ಕೊತ್ತಳದಂಗ ಕಾಣತದ. ಆದರೆ, ಒಂದಾನೊಂದು ಕಾಲದಾಗ, ಇದು ನಮ್ಮೂರಿನವರಿಗೆ ಒಂದು ಪಿಕ್‌ ನಿಕ್‌ ಸ್ಪಾಟ್‌ ಆಗಿತ್ತು. ಅದು ಹೆಂಗೆ ಅಂದರೆ, ಊರಿಗೆ ಯಾರಾದರೂ ಬಂಧುಗಳು ಬಂದರೆ, ಅವರಿಗೆ ಊರಲ್ಲಿ ತೋರಿಸ ಬೇಕಾದ ವಿಶೇಷ ಸ್ಥಳದಲ್ಲಿ ಇದೂ ಒಂದಾಗಿತ್ತು. ಹಂಗಂದರ, … Read more

ಸಸ್ಯಶಾಸ್ತ್ರದ ಲೋಕದಲ್ಲಿ ಒಂದು ಪ್ರವಾಸ (ಭಾಗ 2): ರೋಹಿತ್ ವಿಜಯ್ ಜಿರೋಬೆ.

ಪ್ರಕೃತಿಯೊಳಗೆಯೇ ಮಾನವ ಜೀವನ ವಾಸ್ತವವಾಗಿ ನೆಲೆಗೊಂಡಿದೆ. ಅಲ್ಲಿ ಜೀವ, ಸೌಂದರ್ಯ ಮತ್ತು ಪ್ರೇರಣೆ ಒಳಗೊಂಡಿದೆ. ಪ್ರಕೃತಿಯ ಅಂಶಗಳಲ್ಲಿ ಸಸ್ಯಗಳು ಅತ್ಯಂತ ಪ್ರಮುಖವಾದವು. ಪ್ರಕೃತಿಯು ಸಸ್ಯಗಳಿಲ್ಲದೆ ಅಪೂರ್ಣವಾಗಿದೆ. ಸಸ್ಯಗಳು ಆಹಾರ, ಆಶ್ರಯ, ಔಷಧ, ಆಮ್ಲಜನಕ ಮತ್ತು ಪರಿಸರ ಸಮತೋಲನಕ್ಕೆ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ ಸಸ್ಯಶಾಸ್ತ್ರದ ಲೋಕವು ಕೇವಲ ವಿಜ್ಞಾನ ಶಾಖೆಯಲ್ಲ — ಅದು ಮಾನವನ ಜೀವನದ ಅಸ್ತಿತ್ವವನ್ನು ಕಾಯ್ದುಕೊಳ್ಳುವ ಮೂಲ ತತ್ವವಾಗಿದೆ. ಸಸ್ಯಶಾಸ್ತ್ರದ ಮೊದಲ ಭಾಗದಲ್ಲಿ ನಾವು ಸಸ್ಯಗಳ ವೈವಿಧ್ಯತೆ, ಅವುಗಳ ಜೀವಚಕ್ರ ಮತ್ತು ಮಾನವ ಜೀವನದ ಸಂಬಂಧವನ್ನು … Read more

ಬ್ಲಾಕೀ ನಾಯಿ ಕಥೆ: ಕೋಡೀಹಳ್ಳಿ ಮುರಳೀ ಮೋಹನ್

ತೆಲುಗು ಮೂಲ :ಕಂದಾಳ ಶೇಷಾಚಾರ್ಯಲು ಸ್ವೇಚ್ಚಾನುವಾದ: ಕೋಡೀಹಳ್ಳಿ ಮುರಳೀ ಮೋಹನ್ ೧ ಅದು ಒಂದು ಸಣ್ಣ ಹಳ್ಳಿಯಾಗಿತ್ತು. ಅಲ್ಲಿ ಕರಣಂ (ಹಳ್ಳಿಯ ಲೆಕ್ಕಿಗ) ಅವರ ಮನೆಯಲ್ಲಿ ಒಂದು ನಾಯಿ ಮರಿಯನ್ನು ಸಾಕುತ್ತಿದ್ದರು. ಅದು ನೋಡಲು ಬೀದಿ ನಾಯಿಗಳಂತೆ ಇದ್ದರೂ, ಜೊತೆಯಲ್ಲಿ ಹುಟ್ಟಿದವರು ಯಾರೂ ಇಲ್ಲದ ಕಾರಣ, ತಾಯಿ ಹಾಲನ್ನು ಪುಷ್ಟಿಯಾಗಿ ಕುಡಿದು ಗಟ್ಟಿಮುಟ್ಟಾಗಿ ಬೆಳೆಯುತ್ತಿತ್ತು. ಅದಕ್ಕೆ ‘ರಾಮು’ ಎಂದು ಹೆಸರಿಟ್ಟರು. ಕರಣಂ ಅವರು ‘ರಾಮ್’ ಎಂದು ಕರೆಯುತ್ತಿದ್ದಂತೆ ಅದು ಅವರ ಹಿಂದೆ ಹೊಲಗಳಿಗೆ ಹೋಗಿ ಮೇಲ್ವಿಚಾರಣೆ ನಡೆಸುತ್ತಿತ್ತು. … Read more