ಚುಂಬಕ ಚಂದ್ರಮನೊಂದಿಗೆ ಚಲಿಸುತ್ತಾ….: ಶೋಭಾ ಶಂಕರಾನಂದ

ಪ್ರತಿನಿತ್ಯ ನಾವು ನೋಡಬಹುದಾದ ಪ್ರತ್ಯಕ್ಷ ದೈವಗಳಾದ ಸೂರ್ಯ ಮತ್ತು ಚಂದ್ರ ನಮ್ಮ ಬದುಕಿನಲ್ಲಿ ಅಗಾಧ ಪ್ರಭಾವವನ್ನು ಬೀರುತ್ತವೆ. ಅದರಲ್ಲೂ ಚಂದ್ರನಿಗೆ ವೇದಗಳಲ್ಲಿ ಅಧಿಕ ಪ್ರಾಶಸ್ತ್ಯವನ್ನು ಕೊಡಲಾಗಿದೆ. ಆತನನ್ನು ವೇದಗಳಲ್ಲಿ ‘ಸೋಮದೇವ’ ಎಂದು ಕರೆದಿದ್ದಾರೆ. ಪವಮಾನ ಸೂಕ್ತದಲ್ಲಿ ಅದರ ಹೆಚ್ಚಿನ ಮಾಹಿತಿ ನೋಡಬಹುದು. “ಚಂದ್ರಮಾ ಮನಸೋ ಜಾತಃ” ಎಂದು ಒಂದು ಉಲ್ಲೇಖವಿದೆ. ಚಂದ್ರ ನಮ್ಮ ಮನಸ್ಸಿಗೆ ಅಧಿಪತಿ ಎಂದು ಇದರ ಅರ್ಥ. ನಮ್ಮ ಮನಸ್ಸು ನೆಮ್ಮದಿಯಿಂದ ಇಲ್ಲವೆಂದಾದರೆ, ಚಂದ್ರನ ಧ್ಯಾನ ಮಾಡಬೇಕು. ಏಕೆಂದರೆ ಭೂಮಿಗೂ ಚಂದ್ರನಿಗೂ ನಡುವೆ ಒಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಾರ್ಟ್-ಪಲ್ಯಾ: ಸಿದ್ಧರಾಮ ಹಿಪ್ಪರಗಿ (ಸಿಹಿ)

ಅದ್ಯಾವುದೋ ರಂಗಾಸಕ್ತರ ವೇದಿಕೆಯವರು ರಂಗಭೂಮಿಯ ಕುರಿತು ಉಪನ್ಯಾಸ ನೀಡಲು ಆಹ್ವಾನಿಸಿದ್ದರು. ಹಿರಿಯನೆಂಬ ಕಾಲ್ಪನಿಕ ಗೌರವ ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ನನ್ನ ಸಂಗ್ರಹದ ಪುಸ್ತಕ-ಮಸ್ತಕಗಳ ರಾಶಿಯೊಳಗಿಂದ ರಂಗಭೂಮಿಯ ನೆನಪುಗಳನ್ನು ಹೆಕ್ಕಿಕೊಂಡು ಮಾತಾಡಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ನನ್ನ ಹೆಸರಿಡಿದು ಯಾರೋ ಕೂಗಿದರು. ಇತ್ತೀಚಿನ ದಿನಗಳಲ್ಲಿ ನನ್ನನ್ನು ಯಾರೂ ಹಾಗೇ ಕೂಗಿರಲಿಲ್ಲ. ನಮ್ಮ ಅವ್ವನ ಸಮಕಾಲೀನರು ಹಾಗೆ ಕರೆಯುತ್ತಿದ್ದರು. ತಿರುಗಿ ನೋಡಿದೆ. ಥೇಟ್‌ ಅವ್ವನ ಜಮಾನಾದ ಸೀರೆ-ಕುಪ್ಪಸ ತೊಟ್ಟರೂ ಆಧುನಿಕರಂತೆ ಕಾಣುತ್ತಿದ್ದ ಮಹಿಳೆಯೊಬ್ಬಳು “ಚಲೋತ್ನಾಗ ಮಾತಾಡಿದಿರಿ ಸರ್. ಕಂಪನಿ ನಾಟಕದ ಮಾಲೀಕಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಭಾವರಿ (ಭಾಗ 2): ವರದೇಂದ್ರ ಕೆ ಮಸ್ಕಿ

ಇದೇ ಸಂದರ್ಭದಲ್ಲಿ ಒಮ್ಮೆ ಹೇಮಂತ್ ತನ್ನ ಮನೆಗೆ ವಿಭಾಳನ್ನು ಕರೆದೊಯ್ದ. ಹೇಮಂತನ ತಂದೆ ತಾಯಿ ಎಲ್ಲರೂ ಅತ್ಯಂತ ಪ್ರೀತಿಯಿಂದ ವಿಭಾಳೊಂದಿಗೆ ಕಾಲ ಕಳೆದರು. ಆ ಬಂಗಲೆಯೋ ರಾಜನ ಅರಮನೆಯಂತಿತ್ತು. ಮನೆ ತುಂಬ ಆಳುಗಳು. ಖ್ಯಾತ ವೈದ್ಯ ದಂಪತಿಗಳ ಏಕೈಕ ಸುಪುತ್ರ ಹೇಮಂತ ಹುಟ್ಟುತ್ತಲೇ ಬಂಗಾರದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದ ಅನಿಸುವಷ್ಟು ಶ್ರೀಮಂತಿಕೆ. ಜೊತೆಗೆ ಒಬ್ಬಳೇ ತಂಗಿ ವಿಮಲಾ. ತುಂಬಾ ಚೂಟಿ, ಹಾಗೆಯೇ ಮಾತನಾಡುತ್ತ ವಿಮಲಾ, “ನೀವು ನನ್ನ ಅಣ್ಣನನ್ನು ಮದುವೆ ಆಗ್ತೀರಾ?” ಅಂತ ನೇರವಾಗಿ ಕೇಳಿಯೇ ಬಿಟ್ಟಳು, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

293K CRC: ನಾಗಸಿಂಹ ಜಿ ರಾವ್

ನನ್ನ ಮನೆಯಿಂದ ಕಚೇರಿಗೆ 32 ಕಿಮೀ ದೂರ, 41 ಸ್ಟಾಪ್‌ಗಳು, 7:30ರ ಬಸ್‌ನಲ್ಲಿ ದಿನವೂ ಶಾಲಾ ಮಕ್ಕಳ ಜೊತೆಗಿನ ಪ್ರಯಾಣ. ಆರಂಭದಲ್ಲಿ, ಜನಜಂಗುಳಿಯಿಂದಾಗಿ ಬಸ್‌ನಲ್ಲಿ ಸೀಟು ಸಿಗದೆ ನಿಂತೇ ಪ್ರಯಾಣಿಸಬೇಕಿತ್ತು. ಕಚೇರಿಗೆ ತಲುಪುವಷ್ಟರಲ್ಲಿ ಸುಸ್ತಾಗಿರುತ್ತಿತ್ತು. ಆದರೆ, ಈ ಸವಾಲನ್ನು ಒಂದು ಅವಕಾಶವಾಗಿ ನಾನು ಪರಿವರ್ತಿಸಿಕೊಂಡ ಪ್ರಕರಣವೇ 293K CRCಯ ಜನನ. ಬಸ್‌ನಲ್ಲಿ ಪ್ರತಿದಿನ ಮಕ್ಕಳ ಗಲಾಟೆ, ನಾನು ಕೆಲವು ಮಕ್ಕಳನ್ನು ಅವರ ಶಾಲೆಯ ಬಗ್ಗೆ. ಆಟದ ಬಗ್ಗೆ ಪಾಠದ ಬಗ್ಗೆ ಚರ್ಚೆಗಳಿಂದ ಅವರ ಪರಿಚಯ ಸಂಪಾದಿಸಿದೆ. ಪ್ರತಿದಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದಿಕ್ಕುಗಳು (ಭಾಗ 3): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅನುಶ್ರೀ ತಂದೆಯೊಂದಿಗೆ ಪಟ್ಟಣಕ್ಕೆ ಬಂದಳು. ರೈಲು ನಿಂತಲ್ಲೆಲ್ಲಾ ಎಲ್ಲಿ ಇಳಿದರೆ ಒಳ್ಳೇದು ಅಂತ ಯೋಚಿಸುತ್ತಿದ್ದ ಶಿವಪ್ಪ. “ಎಪ್ಪಾ ಗೊತ್ತು ಕೂನ ಇಲ್ಲದಾರ ಹತ್ರ ಏನೂ ಕೇಳ್ ಬ್ಯಾಡಪ್ಪ ಸುಮ್ಕಿರು” ಎಂದಳು ಅನುಶ್ರಿ. ತಂದೆ, “ಸೈ ಬಿಡವ್ವಾ ಹಂಗಂದ್ರ ನಮಗ ಗೊತ್ತಿರೂ ಮಂದಿ ಅದಾರೇನಬೇ ಇಲ್ಲೀ” ಎಂದಾಗ ಅನುಶ್ರೀ ಪೆದ್ದಳಂತೆ ಕುಳಿತಳು. ಪಕ್ಕದಲ್ಲಿ ಕುಳಿತಿದ್ದ ವೃದ್ಧರೊಬ್ಬರು, “ನೀವು ಎಲ್ಲಿ ಇಳಿಯಬೇಕಿದೆ” ಎಂದು ಕೇಳಿದರು. ಶಿವಪ್ಪ ಅವರಿಗೆ ಉತ್ತರಿಸದೇ ಮಗಳ ಮುಖ ನೋಡಿದನು. ಆಗ ಅನುಶ್ರೀಯೇ, “ಅಜ್ಜಾರ ಬೆಂಗಳೂರು ಇನ್ನೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ವಿಮರ್ಶೆ.. ಚರಂಡಿ ಜಿಗಿದವನನ್ನು ಸಮುದ್ರ ದಾಟಿದನೆಂದು ಬಿಂಬಿಸುವುದೇ? ಅಂಬೆಗಾಲಿಡುವವನ್ನು ನಟರಾಜನೆನ್ನುವುದೇ? ಕಾಡಿನ ತೊರೆಯ ಬದಿಯಲ್ಲಿ ಪುಕ್ಕ ತರಿದು ಕೊಂಡಕೆಂಬೂತವನ್ನು ನವಿಲೆಂದು ವರ್ಣಿಸುವುದೇ?. ಮಣ್ಣು ತಿನ್ನುವ ಮುಕ್ಕಾವನ್ನುಕಾಳಿಂಗಕ್ಕೆ ಹೋಲಿಸುವುದೇ? ತರವಲ್ಲ.! ತರವಲ್ಲ.! ಬೇವು, ಬೇಲ ಎರಡೂ ಬೆಳೆದಿವೆಈ ಕಾಡಿನಲ್ಲಿ.!ಹಾಲುಗುಂಬಳ, ಹಾಗಲಎರಡೂ ಒಂದೇ ಮರಕೆ ಹಬ್ಬಿದಬೇರೆ ಬೇರೆ ಬಳ್ಳಿ.! ಆಳುದ್ದ ಹೊಂಡಕ್ಕೂ,ಆಳ ತಿಳಿಯದ ಸಮುದ್ರಕ್ಕೂ ವಿವರಣೆ ಬೇಕೆ? ಮರುಭೂಮಿಯ ಕುರುಚಲಿಗೂಸಹ್ಯಾದ್ರಿ ಕಾಡಿಗೂ ಹೋಲಿಕೆ ಏಕೆ? ಆಗದು ನನ್ನಿಂದಾಗದು.ಬೇರೆ ಯಾರನ್ನಾದರೂ ಹುಡುಕಿಕೋ.!ಬಣ್ಣದ ಕಲ್ಲನ್ನು ವಜ್ರವೆನ್ನಲು.!ಹುಲ್ಲಿನ ಬೆಂಕಿಯನ್ನು ಕಲ್ಲಿದ್ದಲ ಕಾವೆನ್ನಲು.! ಬಾ, ಇಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಟಕ “ಪುಲಪೇಡಿ”: ನಾಗಸಿಂಹ ಜಿ ರಾವ್

ಸಿಂಹಾವಲೋಕನ ೨ ‘ಪುಲಪೇಡಿ’ ನಾಟಕವು ಕೇವಲ ಒಂದು ರಂಗ ಪ್ರದರ್ಶನವಾಗಿರದೆ, ಕೇರಳದ ಒಂದು ಕಾಲದ ಅನಿಷ್ಟ ಸಾಮಾಜಿಕ ಪದ್ಧತಿಯಾದ ‘ಪುಲಪೇಡಿ’ಯನ್ನು ತೆರೆದಿಡುವ ಸಾಮಾಜಿಕ ಕನ್ನಡಿಯಾಗಿದೆ. ಈ ನಾಟಕವು ಶೋಷಿತ ವರ್ಗದ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಖಂಡಿಸುವ ಜೊತೆಗೆ, ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿಯಾಗಿ ಎದ್ದು ಕಾಣುತ್ತದೆ. ಲಿಂಗದೇವರು ಹಳೆಮನೆಯವರ ರಚನೆಯಾದ ಈ ಕೃತಿಯನ್ನು ರಮೇಶ್‌ರವರ ನಿರ್ದೇಶನದಲ್ಲಿ ರಂಗದ ಮೇಲೆ ತರುವಾಗ, ನಾನು ಶೋಷಿತ ವರ್ಗದ ಯುವಕನ ಪಾತ್ರವನ್ನು ನಿರ್ವಹಿಸಿದ ಅನುಭವವು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿ ಉಳಿದಿದೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಾರಿನಲ್ಲಿ ‘ಬುದ್ಧ’: ಡಾ. ಸುಶ್ಮಿತಾ ವೈ.

ಮಳೆಗಾಲದ ಒಂದು ಸಂಜೆ ತೀರ್ಥಹಳ್ಳಿಯ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಬೇಕು-ಬೇಡದ ಆಲೋಚನೆಗಳ ನಡುವೆ ಈ ರಣಮಳೆಯಿಂದ ತಪ್ಪಿಸಿಕೊಂಡು ಮನೆ ಸೇರಿದರೆ ಸಾಕಪ್ಪ ಎನಿಸುತ್ತಿತ್ತು. ಗಡಿಬಿಡಿಯ ಗಾಡಿಗಳು ನಿಂತ ನೀರಿನ ಮೇಲೆ ಚಕ್ರ ಹರಿಸಿ ಎಳ್ಳಮಾವಾಸ್ಯೆಯ ತೀರ್ಥಸ್ನಾನ ಈಗಲೇ ಆಗಬಹುದೆಂಬ ಭಯದಲ್ಲಿ ಸುತ್ತ-ಮುತ್ತ ಕಣ್ಣರಳಿಸಿ ನೋಡುತ್ತಾ ಹೆಜ್ಜೆ ಹಾಕುತ್ತಿದ್ದೆ. ಎಡಕ್ಕೆ ತಿರುಗಿ ಇನ್ನೊಂದು ರಸ್ತೆಗೆ ಕಾಲಿಡುವಾಗ ರಸ್ತೆ ಪಕ್ಕದ ‘ಬಾರ್’ನ ಕ್ಯಾಶ್‌ಕೌಂಟರ್ ಟೇಬಲ್ ಮೇಲೆ ‘ರಿಸಪ್ಯನಿಸ್ಟ್’ನಂತೆ ಮಂದಸ್ಮಿತನಾಗಿ ಕುಳಿತಿದ್ದ ‘ಬುದ್ಧಮೂರ್ತಿ’ಯ ದರ್ಶನವಾಯಿತು. ಒಮ್ಮೆಲೆ ನನ್ನಲ್ಲಿ ನಗು, ಬೇಸರ, ಪ್ರಶ್ನೆ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಂಗವಿಕಲತೆ: ಸಮಾಜದಲ್ಲಿ ಮುಂದುವರಿದ ಊಹಾಪೋಹಗಳ ಓರೆಹೊರೆ: ರಶ್ಮಿ ಎಂ. ಟಿ.

ಅಂಗವಿಕಲತೆ ಎಂಬುದು ಕೇವಲ ವೈದ್ಯಕೀಯ ಅಥವಾ ಶಾರೀರಿಕ ಪರಿಸ್ಥಿತಿಯಲ್ಲ, ಅದು ಹಲವಾರು ಸಾಮಾಜಿಕ ಮೂಡನಂಬಿಕೆಗಳು, ತಪ್ಪು ತಿಳುವಳಿಕೆಗಳು ಮತ್ತು ಅನಾವಶ್ಯಕ ಊಹಾಪೋಹಗಳಿಂದ ಕೂಡಿರುವ ಒಂದು ಸಾಂಸ್ಕೃತಿಕ ಅನುಭವವೂ ಹೌದು. ಈ ಕಾಲದಲ್ಲಿ ವೈದ್ಯಕೀಯ ಕ್ಷೇತ್ರ ಎಷ್ಟೇ ಅಭಿವೃದ್ಧಿಯಾಗಿದ್ದರೂ, ಅಂಗವಿಕಲತೆಯನ್ನು ಇಂದು ಕೂಡ ಕೆಲವು ಮಂದಿ “ಪೂರ್ವ ಜನ್ಮದ ಶಾಪ”, “ತಾಯಿ-ತಂದೆ ಮಾಡಿದ ಕರ್ಮ”, ಅಥವಾ “ಗಾಳಿ ಸೋಕು” ಎಂಬ ನಂಬಿಕೆಗಳ ಮೂಲಕ ನೋಡುತ್ತಿದ್ದಾರೆ. ಇವುಗಳೆಲ್ಲ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಕುಂದಿದ ನಂಬಿಕೆಗಳು. ಒಂದು ಕಾಲದಲ್ಲಿ ಹೆಣ್ಣು ಮಗು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಳಬೇಡ ಕಂದ ಅಳಬೇಡ: ನಾಗಸಿಂಹ ಜಿ ರಾವ್

ಕೊಳ್ಳೇಗಾಲದಲ್ಲಿ ಎರಡು ದಿನಗಳ ಕಾಲ ಮಕ್ಕಳ ಹಕ್ಕುಗಳ ಬಗ್ಗೆ ತರಬೇತಿ ನೀಡಿದ ನಂತರ, ನಾನು ಮೈಸೂರಿನಿಂದ ಬೆಂಗಳೂರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಬಸ್‌ನಲ್ಲಿ ಜನಸಂದಣಿ ಇರಲಿಲ್ಲ; ಕೆಲವೇ ಪ್ರಯಾಣಿಕರು ಚದುರಿದಂತೆ ಕುಳಿತಿದ್ದರು. ನನ್ನ ಸೀಟಿನ ಮುಂದೆ ಒಬ್ಬ ಯುವತಿ, ಸುಮಾರು ೨೫-೨೬ ವರ್ಷದವಳು, ಒಂದು ವರ್ಷದ ಮಗುವಿನೊಂದಿಗೆ ಕುಳಿತಿದ್ದಳು. ಮಗುವಿನ ಮುಗ್ಧ ಮುಖ, ಆದರೆ ಸ್ವಲ್ಪ ದುರ್ಬಲವಾಗಿ ಕಾಣುವ ದೇಹ, ನನ್ನ ಗಮನ ಸೆಳೆಯಿತು. ಬಸ್ ಹೊರಟ ಕೆಲವೇ ಕ್ಷಣಗಳಲ್ಲಿ, ಮಗು ಜೋರಾಗಿ ಅಳಲು ಆರಂಭಿಸಿತು. ಆ ತಾಯಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಚನದಲ್ಲಿ ಸಸ್ಯಜೀವಶಾಸ್ತ್ರ: ರೋಹಿತ್ ವಿಜಯ್ ಜಿರೋಬೆ

ವಚನದಲ್ಲಿ ಸಸ್ಯಜೀವಶಾಸ್ತ್ರ: ಬಸವಣ್ಣನ ವಚನಗಳಲ್ಲಿ ಪ್ರಕೃತಿಯ ಜೀವಚಲನಗಳ ಅನಾವರಣ “ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು,ಸಸಿಯೊಳಗಣ ರಸದ ರುಚಿಯಂತಿದ್ದಿತ್ತು,ನೆನೆಯೊಳಗಣ ಪರಿಮಳದಂತಿದ್ದಿತ್ತು,ಕೂಡಲಸಂಗಮದೇವಾ, ಕನ್ನೆಯ ಸ್ನೇಹದಂತಿದ್ದಿತ್ತು!” ಬಸವಣ್ಣನವರು ಈ ನಾಲ್ಕು ಸಾಲುಗಳಲ್ಲಿ ಬರೆದ ವಚನವನ್ನು ಮೊದಲು ಓದಿದಾಗ ಅದು ಒಂದು ಭಕ್ತಿಪೂರ್ಣ ಕಾವ್ಯವಾಗಿ ತೋರುತ್ತದೆ. ಆದರೆ ಪ್ರತಿ ಸಾಲಿನಲ್ಲಿ ಅಡಗಿರುವ ತತ್ತ್ವಗಳು ಮತ್ತು ವೈಜ್ಞಾನಿಕ ಅರ್ಥಗಳು ನಮ್ಮನ್ನು ಆಳವಾಗಿ ಆಲೋಚನೆಗೆ ತರುವುದು. ಈ ವಚನ ಕೇವಲ ಭಕ್ತಿಯ ನಿರೂಪಣೆಯಲ್ಲ; ಇದು ಪ್ರಕೃತಿಯ ಜೀವಚಲನಗಳ ಸಂವೇದನಾತ್ಮಕ ಹಾಗೂ ವೈಜ್ಞಾನಿಕ ವಿಶ್ಲೇಷಣೆ ಕೂಡ ಹೌದು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಮಾಸ ಎಂಬ ದೇವನೂರು ಮಹಾದೇವ: ಸಂತೋಷ್ ಟಿ

ನಮ್ಮ ನಡುವಿನ ಸವ್ಯಸಾಚಿ ಲೇಖಕರಲ್ಲಿ ವಿಶಿಷ್ಟವಾದ ಪ್ರತಿಭೆಯ ಛಾಪನ್ನು ಮೂಡಿಸಿದ ಬರಹಗಾರ ದೇವನೂರು ಮಹಾದೇವ ಅವರು. ಜನಸಾಮಾನ್ಯರ ಆಶೋತ್ತರಗಳಿಗೆ ಬಂಡಾಯ ಮನೋಭಾವದ ಮೂಲಕ ಸ್ವಂದಿಸಿದ ಅವರ ಹೋರಾಟ ಮತ್ತು ಭಾಷಣಗಳು ಸಾಮಾಜಿಕವಾಗಿ ಸಾಂಸ್ಕೃತಿಕ ರಾಜಕಾರಣದಲ್ಲಿ ಪರಿಣಾಮಕಾರಿ. ಅವರು ಕೃತಿಗಳ ಮೂಲಕ ಕಟ್ಟಿಕೊಡುವ ಒಳನೋಟಗಳು ಪ್ರಾದೇಶಿಕ ಸ್ಥಳೀಯ ಗ್ರಾಮೀಣರ ಜೀವನವನ್ನು ತಲಸ್ವರ್ಶಿಯಾಗಿ ಕಂಡ ಅನುಭವ ಮತ್ತು ಭಾಷೆಯ ಸ್ವರೂಪ ವಿನೂತನ ಮಾದರಿ. ಕೃತಿಗಳು ತನ್ನ ಗಾತ್ರದಲ್ಲಿ ಕಿರಿದಾದರೂ ಅವು ಉಂಟುಮಾಡಿದ ಸಾಮಾಜಿಕ ಪಲ್ಲಟಗಳ ಪರಿಣಾಮಕಾರಿ ವಿಸ್ಮಯ ಸೋಜಿಗ ಪಡುವಂತದ್ದು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ಕಾಮ’

‘ಅಮ್ಮನ ಗುಡ್ಡ’ ಕವಿತೆ ಮತ್ತು ಅದೇ ಹೆಸರಿನ ಕವನ ಸಂಕಲನದಿಂದ ಐವತ್ತು ವರ್ಷಕ್ಕೂ ಮೇಲ್ಪಟ್ಟು ಕಾವ್ಯರಸಿಕರ ಮನಸ್ಸಿನಲ್ಲಿ ಉಳಿದಿರುವ ಕವಿ ಚ. ಸರ್ವಮಂಗಳ. ಈ ಸಂಕಲನವು ೧೯೮೮ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡರೂ, ಇಲ್ಲಿನ ಕೆಲವು ಕವನಗಳ ರಚನೆಯು ೧೯೬೮ರಲ್ಲಿಯೇ ನಡೆದಿದೆ. ಬಾಲ್ಯಕಾಲ ಮತ್ತು ಪ್ರೌಢ ಅನುಭವ ಪ್ರಪಂಚಗಳ ನಡುವಿನಲ್ಲಿ ಅರಳುವ ಪ್ರಜ್ಞೆಯನ್ನು ಹಿಡಿಯಲು ಯತ್ನಿಸುವ ಈ ಸಂಕಲನ ನನ್ನನ್ನು ಬಹಳ ಕಾಲದಿಂದ ಕಾಡಿದೆ. ಇದರಲ್ಲಿ ನನ್ನನ್ನು ಬಹುವಾಗಿ ಆವರಿಸಿರುವ ಕವಿತೆ ‘ಕಾಮ’. ಕವಿತೆಯ ಪಠ್ಯ ಹೀಗಿದೆ: ಕಾಮನಿಧಾನವಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಲೈಬ್ರರಿ

ಪಂಜು ಸಾದರ ಸ್ವೀಕಾರ ಕೃತಿ: ಜಯಂತಿಪುರದ ಕತೆಗಳುಪ್ರಕಾರ: ಕಥಾ ಸಂಕಲನಲೇಖಕರು: ಶ್ರೀಧರ ಬನವಾಸಿಪ್ರಕಾಶನ: ಪಂಚಮಿ ಮೀಡಿಯಾ ಪಬ್ಲಿಕೇಷನ್ಪುಟಗಳು: 272ಬೆಲೆ: Rs. 300/-ಪ್ರತಿಗಳಿಗಾಗಿ ಸಂಪರ್ಕಿಸಿ: 9740069123 ಕೃತಿ: ಪು ತಿ ನ ಮಲೆದೇಗುಲಪ್ರಕಾರ: ಕಾವ್ಯ ವಿಮರ್ಶೆಲೇಖಕರು: ಜ.ನಾ.ತೇಜಶ್ರೀಪ್ರಕಾಶನ: ಡಾ. ಪು ತಿ ನ ಟ್ರಸ್ಟ್ಪುಟಗಳು: 142ಬೆಲೆ: Rs. 150/-ಪ್ರತಿಗಳಿಗಾಗಿ ಸಂಪರ್ಕಿಸಿ: 9483913393 ಕೃತಿ: ನನ್ನ ಅಮೆರಿಕತೆಗಳುಪ್ರಕಾರ: ಅನುಭವ ಲೇಖನಲೇಖಕರು: ಗುರುಪ್ರಸಾದ್ ಕುರ್ತಕೋಟಿಪ್ರಕಾಶನ: ಪರಿಷ ಮಾಧ್ಯಮಪುಟಗಳು: 191ಬೆಲೆ: Rs. 200/-ಪ್ರತಿಗಳಿಗಾಗಿ ಸಂಪರ್ಕಿಸಿ: 99805 62045 ಕೃತಿ: ಕದಂಬಪ್ರಕಾರ: ಅನುವಾದಿತ ಲೇಖನಗಳುಲೇಖಕರು: … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯುವ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿರುವ ಶ್ರೀ ದಿಲೀಪ್ ಕುಮಾರ್ ಆರ್ ಅವರ ವಿಶೇಷ ಸಂದರ್ಶನ

ದಿಲೀಪ್ ಕುಮಾರ್ ಅವರೆ, ನಿಮ್ಮ “ಪಚ್ಚೆಯ ಜಗುಲಿ” ವಿಮರ್ಶಾ ಸಂಕಲನ ೨೦೨೫ ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಪಂಜುವಿನ ಓದುಗ ಹಾಗು ಬರಹಗಾರರ ಪರವಾಗಿ ಅನೇಕ ಅಭಿನಂದನೆಗಳು. ೧. ಮೊದಲಿಗೆ ತಮ್ಮ ಕಿರು ಪರಿಚಯ ತಿಳಿಸಿ ನನ್ನೂರು ಚಾಮರಾಜನಗರ, ಹುಟ್ಟಿದ್ದು 1991 ರ ಮಾರ್ಚಿ 16 ಮೈಸೂರಿನಲ್ಲಿ. ತಂದೆ ದಿವಂಗತ ಎ. ಎಸ್. ರಾಮರಾವ್, ತಾಯಿ ಕೆ. ರಂಗಮ್ಮ ಮತ್ತು ತಮ್ಮ ಆರ್. ಪವನ್. ನನ್ನ ತಂದೆ ಆಟೋ ಚಾಲಕರಾಗಿದ್ದರು, ಅಮ್ಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದಿಕ್ಕುಗಳು (ಭಾಗ 2): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅಷ್ಟೊತ್ತಿಗೆ ಹತ್ತಾರು ಜನರು ಸೇರಿ ಬಿಟ್ಟಿದ್ದರು. ಮಲಕಾಜಪ್ಪ ದೋತರ ಚುಂಗನ್ನು ಹಿಡಿದುಕೊಂಡು ಬೆವರುತ್ತಿದ್ದ ಅಂಗೈಯನ್ನು ಅಲ್ಲೇ ಒರೆಸಿಕೊಳ್ಳುತ್ತಾ, “ನೋಡ್ರಪ್ಪಾ ಸಾಲ ವಾಪಸ್ ಕೊಡ್ರಿ ಅಂದ್ರ ಈ ಹೆಣ್ಮಗಳು ಹಿಂಗ ಮಾಡೀದ್ಲು” ಎಂದನು. ಕೆಲವರು ಆತನ ಪರವಾಗಿ ಮಾತಾಡಿದರು. ತಿಮ್ಮಣ್ಣಜ್ಜ ಮತ್ತು ಉಳಿದ ಮೂರ್ನಾಲ್ಕು ಜನರು ಅನುಶ್ರೀ ಪರವಾಗಿ ಮಾತಾಡಿದರು. ಅನುಶ್ರೀ ಹೇಳಿದಳು, “ನೋಡ್ರಪಾ ನಾವು ಹೊಲ ಮರ್ಬೇಕಂತ ನಿರ್ಧಾರ ಮಾಡೀವಿ. ಚಾಲ್ತೀ ರೇಟಿಗೆ ಯಾವುದೂ ಕಿರಿಕಿರಿ ಮಾಡ್ದ ಕೊಂಡುಕೊಳ್ಳಾರಿದ್ರ ಮುಂದ ಬರ್ಬೋದು”. “ಹೌದೇನ್ಬೆ ತಂಗಿ” ಸೇರಿದ ಜನರಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಗು, ನೀ ನಗು (ಭಾಗ ೧): ಸೂರಿ ಹಾರ್ದಳ್ಳಿ

ಪ್ರಿಯ ಗೆಳತಿ,ನನ್ನ ಅರವತ್ತನೆಯ ವಯಸ್ಸಿನಲ್ಲಿ, ಅರೆ, ನಾನು ಇಷ್ಟು ಬೇಗ ಮುದುಕಿ ಎಂಬ ಕೆಟಗರಿಗೆ ಸೇರಿಬಿಟ್ಟೆನೇ?, ನಾನು ಮೊಮ್ಮಗಳೊಂದರ ಅಜ್ಜಿಯಾದೆ. ಮೊದಲು ಯಾವುದಾದರೊಂದು ಮಗು ‘ಅಜ್ಜಿ’ ಎಂದು ಸಂಬೋಧಿಸಿದರೆ ರೇಗುತ್ತಿದ್ದವಳು ಈಗ ಈ ಪುಟ್ಟಿ, ತನ್ನ ತೊದಲು ನುಡಿಯಲ್ಲಿ ಎಂದು ‘ಅಜ್ಜಿ’ ಎಂದು ಕರೆಯುತ್ತದೆಯೋ ಎಂದು ಕಾಯುವಂತಾಗಿದೆ. ತೊಡೆಯ ಮೇಲೆ ಮಲಗಿಸಿಕೊಂಡು, ಅದರ ಕಣ್ಣಲ್ಲೇ ಕಣ್ಣು ನೆಟ್ಟು, ‘ಪುಟ್ಟ, ನಾನು ನಿನ್ನ ಅಜ್ಜಿ, ಅವಳು ನಿನ್ನ ಅಮ್ಮ, ಅವರು ನಿನ್ನ ಅಜ್ಜ, ಮಗೂ, ಅಜ್ಜಿ ಅನ್ನು,’ ಎನ್ನುತ್ತಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ನಿರೀಕ್ಷೆಸುಂದರ ವದನದಲ್ಲಿ ನಿರೀಕ್ಷೆಯ ಗೆರೆಫ಼ಲಿಸುವವರೆಗೂ ಚಿಂತೆಯ ನೆರೆಸ್ವಾರ್ಥವೇ ಪರಾರ್ಥವೇ; ಜ್ಞಾನವೇ ಸತ್ಯವೇನೀತಿಯ ಬೋಧೆಯ ಶಾಂತಿ ಸುಭಿಕ್ಷಕ್ಕೆಕಾದಿರುವೆ ನೀ..ಕಾಯುವ ಶಕ್ತಿಯಿರುವವರೆಗೆ! ದ್ವೇಷ ಅಹಂಕಾರಗಳ ಅಂಧಕಾರದ ಜಗದೊಳಗಿನಸ್ವಾರ್ಥನಿವಾರಣೆಗೆ, ಪುನರ್ ಸೃಷ್ಟಿಗೆಭ್ರಷ್ಟತೆಯ ನೀಗಿ ಸಮಾನತೆಯ ಸಮಷ್ಟಿಗೆಮಿಥ್ಯೆಯ ಮೀರಿ ಸತ್ಯವೇ ನಿತ್ಯವೆಂದು ಸಾರುವಹೊಸ ಸೂರ್ಯನ ಉದಯಕ್ಕೆಕಾದಿರುವೆ ನೀ ಕಾಯುವ ಶಕ್ತಿಯಿರುವವರೆಗೆ! ಬಾಹ್ಯದಲ್ಲಿ ಆಕರ್ಷಕವಿರಬಹುದೀ ಮೊಗಆದರೆ ಮಡುಗಟ್ಟಿದೆ ಕಂಗಳಲ್ಲಿ ಹತಾಶೆಯ ದುಃಖಅದುರುತ್ತಿರುವ ಅಧರಗಳಲಿ ತುಡಿಯುತ್ತಿರುವಹೇಳಿಯೂ ಹೇಳೆನೆಂಬ ಮನದೀನೋವ ಕಿತ್ತೊಗೆಯುವ ನೈಜ ಮಹಾಶಕ್ತಿಗಾಗಿಕಾದಿದ್ದೀಯ ಯಾರಿಗೋ.. ಕಾಯುವ ಶಕ್ತಿಯಿರುವವರೆಗೆ! -ಡಾ.ಗಣೇಶ ಹೆಗಡೆ ನೀಲೇಸರ ಕರುನಾಡು ಕನ್ನಡ……….. ಕನ್ನಡ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಭಾವರಿ (ಭಾಗ 1): ವರದೇಂದ್ರ ಕೆ ಮಸ್ಕಿ

                                     ಅದೊಂದು ದಿನ ನಿಸ್ತೇಜತೆ ಮೈಯಲ್ಲಿ ಹೊಕ್ಕು, ತನ್ನೆಲ್ಲ ಸಂತೋಷವನ್ನು ಸಮಾಧಿಗೊಳಿಸಿ.. ತಲೆ ಮೇಲೆ ಕೈ ಹೊತ್ತು ಕೂಡುವಂತೆ ಮಾಡಿತ್ತು. ನಡೆದ ಇತಿಹಾಸವೆಲ್ಲ ಕಣ್ಣಿನ ಹನಿಗಳು ಬೇಡವೆಂದರೂ ನೆನಪಿಸುತ್ತಿವೆ… ಅರೆ ಘಳಿಗೆಯೂ ಸುಮ್ಮನಿರದ ಮನಸು ಇಂದೇಕೋ ಸ್ಮಶಾನ ಮೌನಕ್ಕೆ ಬಲಿಯಾಗಿದೆ. ಹೌದು… ಹೌದು….. ಅವನೇಕೆ ಹೀಗೆ ಮಾಡಿದ…!! ಸುಖಾಸುಮ್ಮನೆ ಕೋಪಗೊಳ್ಳದವನು ಇಂದೇಕೆ ಮೃಗದಂತಾದ, ಗೋವಿನಂತಹ ಮನಸ್ಸುಳ್ಳ ನನ್ನ ತೇಜು, ಏಕೆ ಈ ದಿನ ಹೆಬ್ಬುಲಿಯಂತಾಡಿದ. ಸದಾ ಹಸನ್ಮುಖಿ ಲವಲವಿಕೆಯ ಗಣಿ ನೂರು ಮಾತಿಗೆ ಒಂದು ಮಾತನಾಡುವವ ಒಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅವಳೇ ಕಾರಣ: ಮಾಂತೇಶ

ಒಂದು ದಿನ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದೆ ದಾರಿಲಿ ಒಂದು ಡೈರಿ ಸಿಕ್ಕಿತು.ಎತ್ತಿಕೊಂಡು ನೋಡಿದೆ ಅದರಲ್ಲಿ ಏನು ಬರೆದಿತ್ತು ಅದು ಹೀಗಿತ್ತು. …..ಅವಳೇ ಕಾರಣ…. ಅಯ್ಯೋ ಯಾವುದೋ ಟ್ರ್ಯಾಜಿಡಿ ಲವ್ ಸ್ಟೋರಿ ಇರಬಹುದೆಂದು ಭಾವಿಸಿ ಬ್ಯಾಗಿನಲ್ಲಿ ಹಾಕಿಕೊಂಡೆ. ದಿನಾಲೂ ನಾನು ಬ್ಯಾಗಿನಿಂದ ಏನನ್ನಾದರೂ ತೆಗೆದರು ಅದೇ ಕಾಣಿಸುತ್ತಿತ್ತುಕೆಲವು ಪದಗಳು ಶಕ್ತಿ ಹೇಗಿರುತ್ತದೆಂದರೆಬರಿಗಾಲಿನಲ್ಲಿ ನಡೆಯುತ್ತಿರುವಾಗ ಕಾಲಿಗೆ ಕಲ್ಲುಮಣ್ಣು ಒತ್ತಿ ಹೇಗೆ ಚಪ್ಪಲಿ ಬೇಕು ಅನ್ನಿಸುವುದೊ.ಹಾಗೆಯೇ ಡೈರಿ ನೋಡಿದಾಗೆಲ್ಲ ಕಣ್ಣಿಗೆ ಒತ್ತಿ ಯಾವಾಗ ಇದನ್ನು ಓದುವೆ ಎನ್ನಿಸುತ್ತಿತ್ತು.ಒಂದು ದಿನ ಅದಕ್ಕೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ