“ಕತ್ತಲ ಹೂವು” ನೀಳ್ಗತೆ (ಭಾಗ ೧೫): ಎಂ.ಜವರಾಜ್
ಮಲೆ ಮಾದೇಶ್ವರನ ಬೆಟ್ಟದಿಂದ ಬಂದ ಶಂಭುಲಿಂಗೇಶ್ವರ ಮಲ್ಲಿಕಾರ್ಜುನ ಬಸ್ಸುಗಳು ನರಸೀಪುರದ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿದ್ದ ಹುಣಸೇಮರ ತೋಪಿನ ಸೈಡಿನಲ್ಲಿ ನಿಂತಾಗ ರಾತ್ರಿ ಎಂಟಾಗಿತ್ತು.ಬಸ್ಸೊಳಗೆ ಕುಂತು ನಿಂತವರನ್ನು ನಿದ್ರಾದೇವಿ ಆತುಕೊಂಡು ಡ್ರೈವರ್ ಕ್ಲೀನರನ ಕೂಗಿಗೆ ಲಗುಬಗೆಯಿಂದ ಎದ್ದರೆ ಇನ್ನು ಕೆಲವರು ಆಕಳಿಸುತ್ತಲೇ ಕಣ್ಣು ಮುಚ್ಚಿ ಹಾಗೇ ಒರಗುತ್ತಿದ್ದರು. ಕ್ಲೀನರು ಇಳಿರಿ ಇಳಿರಿ ಟೇಮಾಗುತ್ತ ಅಂತ ಎಲ್ಲರನ್ನು ಏಳಿಸಿ ಇಳಿಸಿ ರೈಟ್ ರೈಟ್ ಅಂತ ಬಾಯಲ್ಲೇ ನಾಲಿಗೆ ಮಡಚಿ ಒಂದು ಜೋರು ವಿಶೆಲ್ ಹಾಕಿದೇಟಿಗೆ ಜಗನ್ ಜಾತ್ರೆಯಂತಿದ್ದ ಜನಗಳ … Read more