. ವಿಚಾರ ಮಂಟಪ ಬಳಗದ ವತಿಯಿಂದ ವರುಣ್ರಾಜ್ ಜಿ ಮತ್ತು ಧನುಷ್ ಎಚ್ ಶೇಖರ್ ಇವರು ಸಂಪಾದಿಸಿರುವ ʼಕಾವ್ಯದೀವಿಗೆʼ ಕವನ ಸಂಕಲನವು ಲೋಕಾರ್ಪಣೆಗೆ ಸಿದ್ಧವಾಗಿದೆ. ಕೃತಿಯನ್ನು ಹಾಸನದ ʼಸ್ಪಂದನ ಸಿರಿʼ ಪ್ರಕಾಶನವು ಪ್ರಕಟಿಸುತ್ತಿದ್ದು, ಇದೇ ಭಾನುವಾರ ದಿನಾಂಕ: ೨೫.೦೬.೨೦೨೩ ರಂದು ಹಾಸನದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ೧೨ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ʼಕಾವ್ಯದೀವಿಗೆʼ ಕವನ ಸಂಕಲನವು ನಾಡಿನ ವಿವಿಧ ಪ್ರದೇಶಗಳ ಒಟ್ಟು ೬೨ ಯುವ ಬರಹಗಾರರ ಬರಹಗಳನ್ನೊಳಗೊಂಡ ಕೃತಿಯಾಗಿದ್ದು, ಯುವ ಬರಹಗಾರರ […]
ಕಸೂತಿಯಾಗದ ದಾರದುಂಡೆ! ಪುಸ್ತಕ ವಿಮರ್ಶೆ: ಪೂರ್ಣಿಮಾ ಕಮಲಶಿಲೆ
ಉಡುಪಿ ಜಿಲ್ಲೆಯ ಕೋಟದ ರೇವತಿ ಶೆಟ್ಟಿ ಯವರ ಪ್ರಥಮ ಕಥಾಸಂಕಲನದ ಹೆಸರು *ಕಸೂತಿಯಾಗದ ದಾರದುಂಡೆ*. ಹೆಸರೇ ಅದೆಷ್ಟು ಧ್ವನಿಪೂರ್ಣ! ದಾರದುಂಡೆ ಎಂದರೆ ಬೆಸೆಯುವಿಕೆಯ ದ್ಯೋತಕ. ಅದೂ ಕಣ್ಮನ ತಣಿಸುವ ಸೂಕ್ಷ್ಮ ಕಸೂತಿಯಾಗಿ ಆ ದಾರದೆಳೆಗಳು ಅರಳಿದರೆ, ಆ ಕುಸುರಿ ಅದೆಷ್ಟು ಚೆಂದ ಅಲ್ವಾ? ಪ್ರತಿ ವಸ್ತುವಿಗೂ, ವ್ಯಕ್ತಿಗೂ ತಾನೊಂದು ಉತ್ಕೃಷ್ಟ ಪ್ರತಿಮೆಯಾಗಬೇಕು, ತನ್ನಿಂದ ಏನಾದರೊಂದು ಸಾಧನೆಯಾಗಬೇಕು ಎಂಬ ಆಸೆ ಸಹಜ. ಆದರೆ ಎಲ್ಲವೂ, ಎಲ್ಲರೂ ಆ ಗುರಿ ಮುಟ್ಟಲು ಸಾಧ್ಯವಿಲ್ಲ. ಕೆಲವರು ಅಸಾಧ್ಯವನ್ನು ಸಾಧ್ಯವಾಗಿಸಿಕೊಳ್ಳಲು ಪಟ್ಟಪಾಡು, ಮಾಡುವ […]
ಟ್ರಂಕು ತಟ್ಟೆಯೊಳಗೆ ಏನೇನಿದೆ? ಡಾ. ನಟರಾಜು ಎಸ್ ಎಂ
ದಲಿತ ವಿದ್ಯಾರ್ಥಿ ನಿಲಯಗಳಿಗೆ ಒಂದು ವಿಶಿಷ್ಟವಾದ ಇತಿಹಾಸವಿದೆ. ಒಂದು ಕಾಲಕ್ಕೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟಕ್ಕೆ ಸೀಮಿತವಾಗಿದ್ದ ಸಮಾಜ ಕಲ್ಯಾಣ ಇಲಾಖೆಯ ದಲಿತರ ಹಾಸ್ಟೆಲ್ ಎಂಬ ಪರಿಕಲ್ಪನೆ ಇವತ್ತು ಅನೇಕ ಹಳ್ಳಿಗಳಿಗೂ ಪಸರಿಸಿದೆ. ಆ ಪ್ರತೀ ಹಾಸ್ಟೆಲ್ ಗಳ ಹುಟ್ಟು ಮತ್ತು ಧ್ಯೇಯ ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳ ಸಲಹುವುದು ಆಗಿತ್ತಾದರೂ ಅನೇಕರು ಸಂಘಟಿತರಾಗಲು, ಹೋರಾಟದ ಮನೋಭಾವವನ್ನು ರೂಪಿಸಿಕೊಳ್ಳಲು ಸಹ ಆ ಹಾಸ್ಟೆಲ್ ಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿವೆ ಎನ್ನಬಹುದು. ಹಾಸ್ಟೆಲ್ ಗಳ ಕಾರಣಕ್ಕೆ ವಿದ್ಯಾಭ್ಯಾಸ […]
ದೃಷ್ಟಿ ಬೊಟ್ಟು: ಜ್ಯೋತಿ ಕುಮಾರ್. ಎಂ(ಜೆ. ಕೆ.)
ಒಂದಾನೊಂದು ಕಾಲದಲ್ಲಿ, ಒಂದೂರಿನಲ್ಲಿ ಒಂದು ಉತ್ತಮಸ್ಥ ಕೂಡು ಕುಟುಂಬದಲ್ಲಿ ಒಂದು ಗಂಡು ಮಗುವಿನ ಜನನವಾಯಿತು. ಯಪ್ಪಾ!ಎಂತಹ ಸ್ಫುರದ್ರೂಪಿ ಅಂದರೆ ನೋಡಲು ಎರಡು ಕಣ್ಣು ಸಾಲದು. ಅವನು ಹುಟ್ಟಿನಿಂದಲೆ, ಕುರೂಪವನ್ನು ಹೊತ್ತು ತಂದಿದ್ದ. ಗಡಿಗೆ ಮುಖ, ಗೋಲಿಯಂತ ಮುಖದಿಂದ ಹೊರಗಿರುವ ಕಣ್ಣುಗಳು, ಆನೆ ಕಿವಿ, ಮೊಂಡು ಡೊಣ್ಣೆ ಮೂಗು, ಬಾಯಿಯಿಂದ ವಿಕಾರವಾಗಿ ಹೊರ ಚಾಚಿದ ದವಡೆ, ಕೈ ಕಾಲು ಸಣ್ಣ, ಹೊಟ್ಟೆ ಡುಮ್ಮ. ಕೆಂಡ ತೊಳದಂತಹ ಮಸಿ ಕಪ್ಪು ಬಣ್ಣ. ಹೆತ್ತವರಿಗೆ ಹೆಗ್ಗಣ ಮುದ್ದು, ಇಂತಿಪ್ಪ ರೂಪದಿ ಹುಟ್ಟಿದ […]
ಸಮಾಜಮುಖಿ ಕಥಾಪ್ರಶಸ್ತಿ ಪ್ರದಾನ ಮತ್ತು ಕಥಾಸಂಕಲನ ಬಿಡುಗಡೆ
‘ಸಮಾಜಮುಖಿ ವಾರ್ಷಿಕ ಕಥಾಸ್ಪರ್ಧೆ-2023’ ರಲ್ಲಿ ಬಹುಮಾನಿತರಾದ ಐವರು ಹಾಗೂ ಮೆಚ್ಚುಗೆ ಪಡೆದ ಹದಿನೈದು ಕಥೆಗಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 10.06.2023, ಶನಿವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಸಾಹಿತ್ಯ ಪರಿಷತ್ತು ಆವರಣದ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ “ಮುಝಫರ್ ಮತ್ತಿತರ ಇಪ್ಪತ್ತು ಕಥೆಗಳು” ಕೃತಿಯ ಜನಾರ್ಪಣೆ ಜರುಗಲಿದೆ. ಸಾಹಿತಿ, ತಂತ್ರಜ್ಞಾನಿ ವೈ.ಎನ್.ಮಧು, ಸಾಮಾಜಿಕ ಮಾಧ್ಯಮ ತಜ್ಞೆ ಚೈತ್ರಿಕಾ ನಾಯ್ಕ್ ಹರ್ಗಿ ಹಾಗೂ ಖ್ಯಾತ ನಾಟಕಕಾರರಾದ ಜಯರಾಮ್ ರಾಯಪುರ ಅವರು ಅತಿಥಿಗಳಾಗಿ […]
ತೇಜಸ್ವಿ ಹೆಸರಲ್ಲಿ ʼಡೇರ್ ಡೆವಿಲ್ ಮುಸ್ತಾಫʼ: ಎಂ ನಾಗರಾಜ ಶೆಟ್ಟಿ
ಪೂರ್ಣಚಂದ್ರ ತೇಜಸ್ವಿಯವರ ʼಡೇರ್ ಡೆವಿಲ್ ಮುಸ್ತಾಫಾ” ಕತೆಯನ್ನು ಸಿನಿಮಾ ಮಾಡುತ್ತಾರೆಂದು ತಿಳಿದಾಗ ಆಶ್ಚರ್ಯವಾಗಿತ್ತು. ʼಡೇರ್ ಡೆವಿಲ್ ಮುಸ್ತಾಫಾ” ವ್ಯವಸ್ಥೆಯನ್ನು ಕೀಟಲೆಗಣ್ಣಿಂದ ನೋಡುವ, ಸಂಘರ್ಷಕ್ಕೆ ಅನುವಿಲ್ಲದ, ಸಾಮಾನ್ಯವೆನ್ನಿಸುವ ಕತೆ. ಇದು ಸಿನಿಮಾಕ್ಕೆ ಹೊಂದುತ್ತದೆಂದು ಅನ್ನಿಸಿರಲಿಲ್ಲ. ಕೊನೆಗೆ ಆಗಿದ್ದೂ ಹಾಗೆಯೇ! ನಿರ್ದೇಶಕ ಶಶಾಂಕ್ ಸೊಗಾಲ್ ಕತೆಯ ಹೆಸರನ್ನು, ಪಾತ್ರಗಳ ಹೆಸರನ್ನು, ಕತೆಯ ಕೆಲವು ಅಂಶಗಳನ್ನು ಬಳಸಿಕೊಂಡು ತನ್ನದೇ ಚಿತ್ರ ಮಾಡಿದ್ದಾರೆ. ಅವರ ಕಲ್ಪನಾ ಶಕ್ತಿ ಮೆಚ್ಚುವಂತದ್ದೇ! ಅತ್ತ ಮುನ್ಸಿಪಾಲಿಟಿಯೂ ಅಲ್ಲದ, ಇತ್ತ ಗ್ರಾಮ ಪಂಚಾಯತಿಗೂ ಸೇರದ ಪುಟ್ಟ ಪಟ್ಟಣವೊಂದರ […]
ಚುನಾವಣೆ ಬಂತು ಚುನಾವಣೆ: ಡಾ.ವೃಂದಾ ಸಂಗಮ್
“ಮೇಡಂ, ನಿಮಗೆ ಬಂತಾ” ಅನ್ನುವ ಪ್ರಶ್ನೆ ಸಹೋದ್ಯೋಗಿಗಳಿಂದ ಬಂದರೆ, “ಛೇ ಛೇ ಇದೆಂಥಾ ಅಸಹ್ಯ,” ಎಂದು ಕೊಳ್ಳಬೇಡಿ. ಇದು ಚುನಾವಣೆ ಸಮಯದಲ್ಲಿ ಸರ್ಕಾರಿ ನೌಕರರ ಅತೀ ಸಾಮಾನ್ಯ ಪ್ರಶ್ನೆ. ನಿಮ್ಮನ್ನೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ್ದಾರೆಯೇ, ಯಾವ ಮತಕ್ಷೇತ್ರ ಎಂಬ ನಿಯೋಜನಾ ಆದೇಶ ನಿಮಗೆ ಬಂತಾ ಎಂಬ ಕುಶಲ ವಿಚಾರಣೆ ಅಷ್ಟೇ ಇದು. ಇನ್ನೇನು ಚುನಾವಣೆ, ಮುಂದಿನ ವರುಷ ಎಂದಾಗಲೇ, ಈ ಚುನಾವಣೆಯ ಬಿಸಿ ಸರ್ಕಾರಿ ನೌಕರರಿಗೆ ತಟ್ಟುತ್ತದೆ. ಮತದಾರರಿಗೆ ಚುನಾವಣೆ ಅಂದರೆ, ಒಂದು ದಿನ, ಅದೂ ಮತದಾನ […]
ದೋರುಗಾಯಿ ಹಣ್ಣಾದ ಹೊತ್ತು ಗೊತ್ತು!: ಡಾ. ಹೆಚ್ ಎನ್ ಮಂಜುರಾಜ್
‘ತುಂಬ ಸಿಹಿಯೂ ಅಲ್ಲದ, ತೀರ ಒಗರೂ ಅಲ್ಲದ ಪನ್ನೇರಳೆ ಹಣ್ಣಿನ ಗುಣ ಲಲಿತ ಪ್ರಬಂಧದ ಗುಣಕ್ಕೆ ಹತ್ತಿರ. ಲಲಿತ ಪ್ರಬಂಧಗಳಲ್ಲಿ ನಗು, ಅಳು, ಚಿಂತನೆ ಎಲ್ಲವೂ ಮೇಳೈಸಿರುತ್ತವೆ. ಅಲ್ಲದೆ ಪನ್ನೇರಳೆ ಗುಂಪು ಗುಂಪಾಗಿದ್ದು ಕೂಡಿ ಬಾಳುವ ಆಶಯವನ್ನು ಸಮರ್ಪಕವಾಗಿ ಸಂಕೇತಿಸುತ್ತದೆ. ಈ ಎಲ್ಲ ಕಾರಣಗಳಿಂದ ಪನ್ನೇರಳೆ ಎಂಬ ಹೆಸರು ಇಲ್ಲಿ ಸೂಕ್ತವಾಗಿ ಕಂಡಿದೆ’ ಎಂಬುದು ಪ್ರಬಂಧಕಾರರ ಮಾತು. ಇಲ್ಲಿಯ ಎಲ್ಲವನೂ ಓದಿದ ಮೇಲೆ ಅರ್ಥವಾಗುವಂಥದು. ಇದರಲ್ಲಿರುವ ಹನ್ನೆರಡು ಪ್ರಬಂಧಗಳಲ್ಲೂ ಇಂಥ ಸಹಬಾಳ್ವೆ ಮತ್ತು ಸಾಮರಸ್ಯಗಳ ಚಿತ್ರಣ ಹೃದ್ಯವಾಗಿ […]
ನೆಲದ ಘಮಲಿನ ʼಸಿನಿಹಬ್ಬʼ: ಎಂ ನಾಗರಾಜ ಶೆಟ್ಟಿ
ʼನೆಲದ ದನಿಗಳ ಹುಡುಕಾಟʼ ಇದು ಈ ಬಾರಿಯ ʼಸಿನಿಹಬ್ಬʼದ ವಿಷಯ. ಡಾ ಬಿ ಆರ್ಅಂಬೇಡ್ಕರ್ವಿದ್ಯಾರ್ಥಿಗಳ ಕಲ್ಯಾಣ ಸಂಘ, ಕೃಷಿ ಮಹಾವಿದ್ಯಾಲಯ, ಧಾರವಾಡ ಹಾಗೂ ಮನುಜಮತ ಸಿನಿಯಾನ ಸಹಯೋಗದಲ್ಲಿ ಧಾರವಾಡದಲ್ಲಿ ಎರಡು ದಿನಗಳ ʼಸಿನಿಹಬ್ಬʼ ಮೇ 20 ಮತ್ತು 21ರಂದು ಜರಗಿತು. ನೆಲದ ದನಿಗಳ ಹುಡುಕಾಟಕ್ಕೆ 542 ಹೆಕ್ಟೇರುಗಳ ವಿಶಾಲ ಹಸಿರು ಪ್ರದೇಶದಲ್ಲಿ ಹರಡಿಕೊಂಡಿರುವ ಕೃಷಿ ಮಹಾವಿದ್ಯಾಲಯದ ಆವರಣಕ್ಕಿಂತ ಸೂಕ್ತವಾದ ಜಾಗ ಇಲ್ಲವೇನೋ ಎನ್ನುವಂತಿತ್ತು ಸಿನಿಹಬ್ಬದ ಜಾಗ. ಮೇ 20 ರ ಮುಂಜಾನೆ ಆಹ್ಲಾದಕರ ವಾತಾವರಣದಲ್ಲಿ ʼಸಿನಿಹಬ್ಬʼ […]
ಇಂದಿನ ಯುವಕರಲ್ಲಿ ಹೆಚ್ಚಾಗುತ್ತಿರುವ ಮನೋಬಲದ ಕೊರತೆ: ವಿಜಯ್ ಕುಮಾರ್ ಕೆ.ಎಂ.
ಮನುಷ್ಯನಿಗೆ ದೈಹಿಕ ಬಲದ ಅವಶ್ಯಕತೆ ಎಷ್ಟಿದೆಯೋ ಅಷ್ಟೇ ಮಟ್ಟದ ಮನೋಬಲದ ಅತ್ಯವಶ್ಯಕತೆಯು ಬೇಕಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಈ ಮನೋಬಲದ ಅತಿಯಾದ ಕೊರತೆ ನಮ್ಮ ಯುವ ಸಮುದಾಯದಲ್ಲಿ ಹೆಚ್ಚುತ್ತಿರುವುದು ಯುವ ಪೀಳಿಗೆಯ ಭವಿಷ್ಯವನ್ನು ಚಿಂತೆಗೀಡು ಮಾಡುವಂತಿದೆ.ತಮ್ಮ ಆಯ್ಕೆಗಳಲ್ಲಾಗಲಿ, ನಿರ್ಧಾರಗಳಲ್ಲಾಗಲಿ ತೀರ್ಮಾನ ತೆಗೆದುಕೊಳ್ಳ ಬೇಕಾದ ತಮ್ಮ ಚಿತ್ತವನ್ನು ಗೊಂದಲಕ್ಕೆ ಸಿಲುಕಿಸಿ ಪೇಚಾಡುವ ಸ್ಥಿತಿಗೆ ತಲುಪಿರುವಲ್ಲಿ ಅವರ ಮನಸ್ಥಿತಿಯ ಶಕ್ತಿ ಎಷ್ಟರ ಮಟ್ಟಕ್ಕಿದೆ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕದೆ ಇರದು. ಹಾಗಾದರೆ ಮನೋಬಲ ಎಂದರೆ ಏನು?ಅದಿಲ್ಲದೆ ಆಗಬಹುದಾದ ತೊಡಕುಗಳಾದರೂ ಏನು? ಎನುವಾಗ. […]
ಅಮೆರಿಕವೆಂಬ ಮಾಯಾಲೋಕ: ಡಾ. ಹೆಚ್ ಎನ್ ಮಂಜುರಾಜ್
ಅಮೆರಿಕದ ಅರಿಜ಼ೊನಾ ರಾಜ್ಯದ ಒಂದು ನಗರದಲ್ಲಿರುವ ತಮ್ಮ ಮಗ ಮತ್ತು ಸೊಸೆಯನ್ನು ನೋಡಿ ಬರಲೆಂದು ಹೋದ ಲೇಖಕಿ ಅಲ್ಲಿಯ ಜನಜೀವನ ಮತ್ತು ಸಮಾಜೋ ಸಾಂಸ್ಕೃತಿಕ ಪಲ್ಲಟಗಳನ್ನು ತಮ್ಮದೇ ಆದ ವಿಶಿಷ್ಟ ರೀತಿಯಲಿ ಗುರುತಿಸಿ ಹಾಸ್ಯಮಯ ಶೈಲಿಯಲಿ ಲಲಿತ ಪ್ರಬಂಧಗಳನ್ನಾಗಿಸಿದ್ದಾರೆ. ಇಂಥ ಒಟ್ಟು ನಲವತ್ತೊಂದು ಬರೆಹಗಳು ವಿಧ ವಿಧವಾದ ವಸ್ತುವೈವಿಧ್ಯ ಮತ್ತು ಆಡುಮಾತಿನ ಲಯದಲ್ಲಿ ಅಭಿವ್ಯಕ್ತಗೊಂಡಿವೆ. ವಾಸ್ತವವಾಗಿ ಇದನ್ನು ಅವರು ಪ್ರವಾಸ ಕಥನ ಎಂದೇ ಕರೆಯಬಹುದಾಗಿತ್ತು. ಈ ಮಾತನ್ನು ಮುನ್ನುಡಿಕಾರರೂ ಹೇಳಿದ್ದಾರೆ. ಒಂದೆರಡು ಬರೆಹಗಳು ಅವರು ಅಮೆರಿಕಕ್ಕೆ ಹೋಗುವ […]
ಅಮ್ಮನಾಗಿ ನಾನು……: ಶಿಲ್ಪಾ ಎಂ. ಕುಕನೂರ್
ಕಳೆದ ವಾರವಷ್ಟೇ ಅಂತಾರಾಷ್ಟ್ರೀಯ ತಾಯಂದಿರ ದಿನಾಚರಣೆಯನ್ನು ಆಚರಿಸಲಾಯಿತು. ಇದು ಪಾಶ್ಚಿಮಾತ್ಯಾ ಸಂಪ್ರದಾಯ ನಾವೇಕೆ ಆಚರಿಸಬೇಕು ಎನ್ನುವ ಮನೋಭಾವ ಕೆಲವರಲ್ಲಿರಬಹುದು. ಆದರೆ ನಮ್ಮ ಭಾರತೀಯ ಪರಂಪರೆಯಲ್ಲೂ ಋಷಿಮುನಿಗಳು ಮಾತೃದೇವೋಭವ ಎಂದು ಹೇಳಿ ತಾಯಿಯನ್ನು ದೇವರಿಗೆ ಹೋಲಿಸಿದ್ದಾರೆ. ಭಾರತದಲ್ಲಿಂದು ಆಧುನಿಕತೆ ಹೆಚ್ಚಾದಂತೆಲ್ಲ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ತಂತ್ರಜ್ಞಾನ ಯುಗದಲ್ಲಿ ನಾಗರಿಕ ಸಮಾಜ ಹೆಚ್ಚು ಶಿಕ್ಷತರಾದಂತೆಲ್ಲ ಭಾವನಾರಹಿತ ಜೀವಿಗಳಾಗಿ ಬದುಕುತ್ತಿದ್ದಾರೆ, ಸಂಭಂದಗಳ ಮೌಲ್ಯಗಳು ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ಬೆಳೆಯುವ ಮಕ್ಕಳಿಗೆ, ಯುವ ಪೀಳಿಗೆಗೆ ಒಂದು ಆದರ್ಶಪ್ರಾಯ ಮಾರ್ಗದರ್ಶನದ ತಳಹದಿ ಒದಗಿಸುವ ಸಲುವಾಗಿ […]
ನಿಂದನೆಗೆ ವಂದನ ; ಜೀವನ ಪಾವನ: ಡಾ. ಹೆಚ್ ಎನ್ ಮಂಜುರಾಜ್
ಪುಸ್ತಕದ ಹೆಸರು : ವನಸುಮ(ಸಮಾಜ ಸೇವಕ ಶ್ರೀ ಕೆ ಆರ್ ಲಕ್ಕೇಗೌಡರ ಜೀವನ ಕಥನ)ಸಂಪಾದಕರು: ಡಾ. ದೀಪುಪ್ರಕಾಶಕರು: ಶ್ರೀ ಸಾಯಿ ಸಾಹಿತ್ಯ, ಬೆಂಗಳೂರುಮೊದಲ ಮುದ್ರಣ: 2023ಒಟ್ಟು ಪುಟಗಳು: 196, ಬೆಲೆ: ರೂ. 200 ಇದೊಂದು ವಿಶಿಷ್ಟ ಕಥನ. ಕೆ ಆರ್ ನಗರ ತಾಲೂಕಿನ ಕಾಟ್ನಾಳು ಗ್ರಾಮದ ಶ್ರೀ ಕೆ ಆರ್ ಲಕ್ಕೇಗೌಡರು ರೈತಾಪಿ ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಶ್ರಮ ಪಟ್ಟು ವಾರಾನ್ನ ಮಾಡಿ ವಿದ್ಯಾರ್ಜನೆಯಿಂದ ಮೇಲೆ ಬಂದು ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ […]
ಮೂರು ಕವನಗಳು: ಮಮತಾ ಚಿತ್ರದುರ್ಗ
ಅವನುಜೇನೊಳಗಿನ ಸಿಹಿ ಅವನುಹೂವಳಗಿನ ಮೃದು ಅವನುಗಾಳಿಯೊಳಗಿನ ಗಂಧ ಅವನುಮೋಡದೊಳಗಿನ ಬೆಳಕು ಅವನುತಾರೆಯೊಳಗಿನ ಹೊಳಪು ಅವನುನೀರಿನೊಳಗಿನ ಅಲೆಯ ಪುಳಕ ಅವನುಚಿತ್ರದೊಳಗಿನ ಬಣ್ಣ ಅವನುಪತ್ರದೊಳಗಿನ ಭಾವ ಅವನುಇಬ್ಬನಿಯೊಳಗಿನ ತೇವ ಅವನುಕಣ್ಣೊಳಗಿನ ನೋಟ ಅವನುಹಬ್ಬದೊಳಗಿನ ಸಡಗರ ಅವನುಬೆಟ್ಟದೊಳಗಿನ ತನ್ಮಯ ಅವನುಎಲೆಯೊಳಗಿನ ಹಸಿರು ಅವನುಚೈತ್ರದೊಳಗಿನ ಚಿಗುರು ಅವನುಭಾವನೆಗಳ ಯಾನಕ್ಕೆ ಗಮ್ಯ ಅವನುಸಂಗೀತದ ನಾದದೊಳಗಿನ ಸೌಮ್ಯ ಅವನುನನ್ನ ಧ್ವನಿಯ ಶಬ್ದ ಅವನುನನ್ನ ಕಣ್ಣಲಿ ಬೆರಗು ಅವನುನನ್ನವನು…! ಸುಗಂಧ ದ್ರವ್ಯವದು ಹೂಗಳ ಗೋರಿಒಣಗಿದ ಹೂಗಳ ಎದೆಯ ಭಾರದ ಮಾತಿನ ಸಾರ.ದೇವರ ಮುಡಿಯಲ್ಲಿದ್ದುಹೆಣದ ಅಡಿಯಲ್ಲಿದ್ದುಸೈನಿಕನ ಸಮಾಧಿ ಮೇಲಿದ್ದುಬಾವುಟದ […]
ಸಂಡಿಗ್ಯೋಪಾಖ್ಯಾನ: ಡಾ.ವೃಂದಾ ಸಂಗಮ್
ಕನ್ನಡದಾಗ ಋತು ಮಾನ ಮತ್ತ ಋತು ಸಂಹಾರ ಅಂತ ಒಂದು ಶಬ್ದ ಅದ. ಅಂದರ, ಋತುಗಳನ್ನ ಮಾನಕ ಅಂದರ ಅಳತೀ ಮಾಡೋದು ಅಥವಾ ಋತುಗಳನ್ನ ಲೆಕ್ಕ ಹಾಕೋದು ಅಂತನೋ ಇರಬೇಕು. ಇನ್ನ ಕಾಳಿದಾಸ ಅಂದಕೂಡಲೇ ನೆನಪಾಗೋದು ಋತು ಸಂಹಾರ. ಎಲ್ಲಾ ಬಿಟ್ಟು ಈ ಋತುಗಳನ್ಯಾಕೆ ಸಂಹಾರ ಮಾಡಬೇಕೋ ರಾಕ್ಷಸರ ಹಂಗ ಅನ್ನಬ್ಯಾಡರೀ. ನನಗೂ ಗೊತ್ತಿಲ್ಲ. ಆದರ, ವಸಂತ ಋತು ಬಂದಾಗಲೇ ಮಾವು ಹಣ್ಣಾಗಿ, ರಸ ತುಂಬಬೇಕು, ಮಲ್ಲಿಗೆ ಹೂವರಳಿ ಘಮ ಚಲ್ಲಬೇಕು ಎಂದು ಯಾರು ತಿಳಿಸುವರೋ ತಿಳೀಲಿಲ್ಲ […]
ಬೇಸರವಾಗದಿರಲಿ ಬೇಸಿಗೆ ರಜೆ: ವಿಜಯ್ ಕುಮಾರ್ ಕೆ. ಎಂ.
ಅದೊಂದಿತ್ತು ಕಾಲ ಬೇಸಿಗೆ ರಜೆ ಎಂದರೆ ಭಾವನೆಗಳ ಸಮಾಗಮ, ಬಂಧುಗಳ ಸಮ್ಮಿಲನ ಇಂದಿರುವ ಈ ಕಾಲ ಬೇಸಿಗೆ ಶಿಬಿರಗಳ, ತಾಪಮಾನದ ತಾಪತ್ರಯಗಳ ಸಂಕಲನ. ಹೌದು ಮಿತ್ರರೇ, 90ರ ದಶಕದ ನಂತರ ಬೇಸಿಗೆ ರಜೆ ಎಂಬುದು ಮಕ್ಕಳ ಮತ್ತು ಪೋಷಕರ ಮನಸ್ಸಿನಲ್ಲಿ ಮಹತ್ತರ ಬದಲಾವಣೆ ತಂದಿರುವುದು ನಮಗೆಲ್ಲಾ ತಿಳಿದ ವಿಚಾರವೇ ಸರಿ. ಆದರೂ ಈ ಕಾಲಘಟ್ಟಕ್ಕೆ ಹೊಂದುಕೊಳ್ಳುವುದಕ್ಕಿಂತಲು ಅಂದಿನ ಕಾಲಘಟ್ಟದ ಸಮಯ ಸಂದರ್ಭಗಳನ್ನು ಈ ಸಮಯಕ್ಕೆ ಅರ್ಥೈಸುವುದೇ ಬಹುಮುಖ್ಯ ಕಾರ್ಯವಾಗಿದೆ. ಅಂದೆಲ್ಲಾ ಬೇಸಿಗೆ ರಜೆ ಬಂತೆಂದರೆ ಕುಟುಂಬ ಕುಟುಂಬಗಳ […]
ಎರಡು ಧರ್ಮಗಳಿಗೆ ಒಂದೇ ಗುಡಿ (ಕಾಂಬೋಡಿಯಾ ಭಾಗ-3): ಎಂ ನಾಗರಾಜ ಶೆಟ್ಟಿ
ಇಲ್ಲಿಯವರೆಗೆ ನಾವು ಉಳಿದುಕೊಂಡಿದ್ದ ಹೋಟೆಲಲ್ಲಿ ಉಪಾಹಾರ ಮುಗಿಸಿ ಹೊರಗೆ ಬರುವಾಗ ರಾ ತಯಾರಾಗಿ ನಿಂತಿದ್ದ. ಸಮಯಕ್ಕೆ ಸರಿಯಾಗಿ ಅವನು ಬಂದಿದ್ದರಿಂದ ಖುಷಿಯಾಯಿತು. ಹಿಂದಿನ ದಿನದ ಹಣ ಪೂರ್ತಿ ತೆಗೆದುಕೊಂಡಿದ್ದರಿಂದ ಬರುತ್ತಾನೋ, ಇಲ್ಲವೋ ಎನ್ನುವ ಸಣ್ಣ ಅನುಮಾನವಿತ್ತು. ಕಾರು ಹತ್ತುವ ಮುನ್ನ, ಇತಿಹಾಸ್ ಪಕ್ಕದ ಶಾಪಿನಿಂದ ನೀರಿನ ಬಾಟಲುಗಳನ್ನು ಕೊಂಡ. ಅವನ ಹತ್ತಿರವಿದ್ದ ರಿಯಲ್ಗಳು ಮುಗಿದಿತ್ತು. ಅವನು ಕೊಟ್ಟ 20 ಡಾಲರ್ಗೆ ಅಂಗಡಿಯಾಕೆ ಚಿಲ್ಲರೆ ಕೊಟ್ಟಳು. ಸಿಯಾಮ್ ರೀಪ್ನಿಂದ ಸ್ವಲ್ಪ ದೂರ ಹೋದ ಕೂಡಲೇ ಅಂಗೋರ್ವಾಟ್ನ ಗೋಪುರಗಳು ಕಾಣುತ್ತವೆ. […]
ಜೀವನಾನುಭವದ ಕಂದೀಲು”ಬಾಳನೌಕೆಗೆ ಬೆಳಕಿನ ದೀಪ”: ಜ್ಯೋತಿ ಕುಮಾರ್. ಎಂ(ಜೆ. ಕೆ.)
ಹಡಗಿನಲ್ಲಿ ಪಯಣಿಸುವವರಿಗೆ ಬೇಕು ದಿಕ್ಸೂಚಿ. ದಡದ ಕಡೆ ಬರುವವರಿಗೆ ಬೇಕು ಲೈಟ್ ಹೌಸ್. ಜೀವನದಲ್ಲಿ ಸರಿ ದಾರಿಯಲ್ಲಿ ಹೋಗುವವರಿಗೆ ಬೇಕು ಹಿರಿಯರ ಅನುಭವ ಮತ್ತು ಅನುಭಾವದ ಹಿತ ನುಡಿಗಳು. ಕತ್ತಲೆಯನ್ನು ಓಡಿಸಲು ಬೇಕು ಕಂದೀಲು. ಅಂದರೆ ಕಂದೀಲು ಇರುವೆಡೆ ಕತ್ತಲು ಇರದು. ಆದರೆ ಜೀವನದಲ್ಲಿಯೇ ಕತ್ತಲು ಬಂದು ಬದುಕು ಪೂರ್ತಿ ಕತ್ತಲೆಯಲ್ಲಿ ಸವೆಸುವಂತಾದರೆ ಕೈ ಹಿಡಿದು ನಡೆಸುವವರು ಯಾರು? ದಾರಿ ತೋರಿಸುವವರು ಯಾರು? ದೀಪದ ಬುಡದಲ್ಲಿಯೇ ಕತ್ತಲು ಇದ್ದರೆ ಜ್ಯೋತಿ ತನ್ನನ್ನು ತಾನು ಸುಟ್ಟು ಕೊಂಡು ಜಗವನ್ನು […]
“ಉತ್ತಮ ಕನ್ನಡ ಸಿನಿಮಾವನ್ನು ಬೆಂಬಲಿಸಿ – ‘ಫೋಟೋ’ ವಿಶೇಷ ಪ್ರದರ್ಶನದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ!”
ನೀವು ಸಿನಿಮಾ ಪ್ರಿಯರೇ? ಒಳ್ಳೆಯ ಚಲನಚಿತ್ರಗಳನ್ನು ಆನಂದಿಸಲು, ಬೆಂಬಲಿಸಲು ಬಯಸುತ್ತೀರಾ? ಹಾಗಿದ್ದರೆ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಪಾರ ಪ್ರಶಂಸೆ ಗಳಿಸಿದ ಮತ್ತು ಮೂರನೇ ಪ್ರಶಸ್ತಿ ವಿಜೇತ ಚಲನಚಿತ್ರ “ಫೋಟೋ”ದ ವಿಶೇಷ ಪ್ರದರ್ಶನದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ! ಈ ಪ್ರದರ್ಶನದ ವಿಶೇಷತೆಯೆಂದರೆ, ಚಿತ್ರ ಪ್ರದರ್ಶನದ ನಂತರ ನಿರ್ದೇಶಕರು ಮತ್ತು ಚಿತ್ರತಂಡದೊಂದಿಗೆ ಸಂವಾದ ನಡೆಸಲು ನಿಮಗೆ ಅವಕಾಶ ಸಿಗಲಿದೆ. ನೀವು ಬರಹಗಾರರಾಗಿದ್ದರೆ, ಚಲನಚಿತ್ರ ನಿರ್ಮಾಣದ ಬಗ್ಗೆ ಆಸಕ್ತಿ ಉಳ್ಳವರಾಗಿದ್ದರೆ, ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಮತ್ತು “ಫೋಟೋ” ಚಿತ್ರತಂಡದಿಂದ ಹೊಸ […]
ಸಮಾಜಮುಖಿ ಕಥಾಪುರಸ್ಕಾರ-2023 ಫಲಿತಾಂಶ ಪ್ರಕಟ
ಬೆಂಗಳೂರಿನ ಸಮಾಜಮುಖಿ ಪ್ರಕಾಶನ ಏರ್ಪಡಿಸಿದ್ದ 2023ನೇ ಸಾಲಿನ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಒಟ್ಟು 398 ಕಥೆಗಾರರು ಭಾಗವಹಿಸಿದ್ದರು. ಆರಂಭಿಕ ಸುತ್ತಿನ ಆಯ್ಕೆಯ ನಂತರ ಎರಡನೇ ಹಂತದ 50 ಕಥೆಗಳನ್ನು ಹೊಸ ಪೀಳಿಗೆಯ ಲೇಖಕ ಡಾ.ಕೆ.ಎಚ್.ಮುಸ್ತಾಫ ಹಾಗೂ ಅಂತಿಮ ಹಂತದ ಆಯ್ಕೆಯನ್ನು ಯುವ ಲೇಖಕಿ ಚೈತ್ರಿಕಾ ನಾಯ್ಕ ಹರ್ಗಿ ಮಾಡಿದ್ದಾರೆ. ತಲಾ ರೂ.5000 ನಗದು ಮತ್ತು ಪ್ರಶಸ್ತಿಪತ್ರ ಒಳಗೊಂಡ ‘ಸಮಾಜಮುಖಿ ಕಥಾ ಪುರಸ್ಕಾರ-2023’ಕ್ಕೆ ಆಯ್ಕೆಯಾಗಿರುವ ಐದು ಕಥೆ ಮತ್ತು ಕಥೆಗಾರರು: ಬಯಕೆ (ದೀಪಾ ಹಿರೇಗುತ್ತಿ), ಮುಝಫರ್ (ಎಂ.ನಾಗರಾಜ ಶೆಟ್ಟಿ), ಹಲ್ಲೀರ […]
ಆಳುವ ಪ್ರಭುತ್ವದ ಅಮಾನವೀಯ ನಡೆಯ ಘನಘೋರ ಚಿತ್ರಣದ ಸಿನಿಮಾ – ಫೋಟೋ: ಚಂದ್ರಪ್ರಭ ಕಠಾರಿ
ಕೊರೊನಾ ಕಾಲದ ವಲಸಿಗರ ಸಂಕಷ್ಟಗಳ ಕತೆಯ ‘ಫೋಟೋ’ ಸಿನಿಮಾ ಅಷ್ಟಾಗಿ ಪ್ರಚಾರಗೊಳ್ಳದೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಯುವ ನಿರ್ದೇಶಕ ಉತ್ಸವ್ ಗೋನಾವರ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಸಿನಿಮಾವನ್ನು ಕಲೆಯಾಗಿ ಕಟ್ಟಿದ್ದಾರೆ. ಅಲ್ಲದೆ – ತನಗಿರುವ ಪ್ರತಿಭೆಯ ಜೊತೆಗೆ ಸಾಮಾಜಿಕ ಕಳಕಳಿ, ಬದ್ಧತೆಯನ್ನು ಮೆರೆದಿದ್ದಾರೆ. ಉತ್ತರಕರ್ನಾಟಕದ ರಾಯಚೂರು ಜಿಲ್ಲೆಯ ಮಸ್ಕಿಯ ಪುಟ್ಟ ಗ್ರಾಮದ ಬಾಲಕ ದುರ್ಗ್ಯ, ಶಾಲೆಯಲ್ಲಿದ್ದ ವಿಧಾನಸೌಧದ ಪಟ ಕಂಡು, ಅದರ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳಬೇಕೆಂದು ಬಯಸುತ್ತಾನೆ. ಅದೇ ಹೊತ್ತಿಗೆ ಶಾಲೆಗೆ ಹದಿನೈದು […]
ಅರ್ಧ ಬಿಸಿಲು, ಅರ್ಧ ಮಳೆ, ಪೂರ್ಣ ಖುಷಿ, ಪೂರ್ಣ ಪೈಸಾ ವಸೂಲ್: ಜ್ಯೋತಿ ಕುಮಾರ್. ಎಂ(ಜೆ. ಕೆ.).
ರೈತ ಬೇಸಾಯ ಮಾಡಬೇಕು ಅಂದ್ರೆ, ಮುಂಗಾರಾ?, ಹಿಂಗಾರಾ?ಯಾವ ಬೆಳೆ ಬೆಳೆಯುವುದು, ಯಾವ ಮಣ್ಣಿಗೆ ಯಾವ ತಳಿ ಸೂಕ್ತ. ಮಣ್ಣಿನ ಪರೀಕ್ಷೆ ಮಾಡಿಸಬೇಕಾ? ಯಾವ ಯಾವ ಬೆಳೆಗಳಿಗೆ ಮತ್ತೆ ಯಾವ ಯಾವ ಮಣ್ಣಿನ ವಿಧಕ್ಕೆ ಯಾವ ಯಾವ ಗೊಬ್ಬರ ಸೂಕ್ತ, ಕೊಟ್ಟಿಗೆನೋ? ಸರ್ಕಾರಿ ಗೊಬ್ಬರನೋ?ವಿವಿಧ ರೀತಿಯ ಕಳೆ ಹಾಗೂ ಕೀಟಗಳ ನಿರ್ವಹಣೆ ಹೇಗೆ? ಇಷ್ಟೆಲ್ಲಾ ತಿಳಿದು ಮಾಡಿದ ಬೇಸಾಯಕ್ಕೆ ಉತ್ತಮ ಫಲ ಬಂದೆ ಬರುತ್ತೇ ಅನ್ನೋ ಗ್ಯಾರಂಟಿ ಇರುವುದಿಲ್ಲ. ಅಷ್ಟಿಲ್ಲದೇ ಹೇಳುತ್ತಾರೆಯೆ, “ಬೇಸಾಯ ನೀ ಸಾಯ, ನಿನ್ನ ಮನೆಯವರೆಲ್ಲ […]
ಮುಗುಳ್ನಗು ಒಂದನ್ನು ಎದೆಯಲ್ಲಿ ಬೆಳೆಯಲಿಕ್ಕೆ ಹಂಬಲಿಸುವವರ ಕಥೆಗಳ ಗುಚ್ಛ “ಮರ ಹತ್ತದ ಮೀನು”: ಡಾ. ನಟರಾಜು ಎಸ್. ಎಂ.
ವಿನಾಯಕ ಅರಳಸುರಳಿಯವರು ಲೇಖಕರಾಗಿ ಕಳೆದ ಏಳೆಂಟು ವರ್ಷಗಳಿಂದ ಪರಿಚಿತರು. ಮೊದಲಿಗೆ ಕವಿತೆಗಳನ್ನು ಬರೆಯುತ್ತಿದ್ದವರು, ತದನಂತರ ಪ್ರಬಂಧ ಬರೆಯಲು ಶುರು ಮಾಡಿದರು. ನಂತರದ ದಿನಗಳಲ್ಲಿ ಕತೆಗಳನ್ನು ಸಹ ಬರೆಯುತ್ತಾ ಈಗ ತಮ್ಮ ಹತ್ತು ಕತೆಗಳಿರುವ “ಮರ ಹತ್ತದ ಮೀನು” ಕಥಾಸಂಕಲನವನ್ನು ಹೊರತಂದಿದ್ದಾರೆ. “ಮರ ಹತ್ತದ ಮೀನು” ಕೃತಿಯು 2023ನೇ ಸಾಲಿನ ಈ ಹೊತ್ತಿಗೆ ಪ್ರಶಸ್ತಿ ಪಡೆದ ಕೃತಿಯಾಗಿದ್ದು ಓದುಗರಿಂದ ಉತ್ತಮ ಪ್ರತಿಕ್ರಿಯೆಯನ್ನು ಸಹ ಪಡೆಯುತ್ತಿದೆ. ಈ ಪುಸ್ತಕಕ್ಕೆ ಲೇಖಕರಾದ ಮಣಿಕಾಂತ್ ಎ. ಆರ್. ಮುನ್ನುಡಿ ಬರೆದಿದ್ದು, ಈ ಹೊತ್ತಿಗೆ […]
ಮೂರು ಕವಿತೆಗಳು: ಶಕುಂತಲಾ ಬರಗಿ
ಹೆಣ್ಣು ನೂರು ಸಂಕೋಲೆಯಲ್ಲಿ ಸಿಲುಕಿವಿಲಿ ವಿಲಿ ಒದ್ದಾಡುವ ಜೀವಸಂಕೋಲೆಯ ಬಿಡುಗಡೆಗೆ ಹಪಹಪಿಸಿಗೀಳಿಡುತ್ತಿರುವ ಪಾಪಿ ಕಾಡಿನ ಪ್ರಾಣಿ. ನಾವೆಷ್ಟು ಬೈದರು ಅಂದರುಉಗುಳು ನುಂಗುವಂತೆಒಳ ಹಾಕಿಕೊಳ್ಳುವಅಂತಶಕ್ತಿಯ ಅಗಾಧ ಮರ ! ಎಳೆ ಕೈ ಬಿಗಿದಳೆದು ಕಟ್ಟಿಕುಟ್ಟಿ ಒಡೆದಾಕಿದರುಒದ್ದಾಡದೆ ಸುಮ್ಮನೆ ಇದ್ದಾಳೆಅವಳೇ ಒಂದು ಸಾತ್ವಿಕ ಶಕ್ತಿ ಅವಳು ಇವಳು ಯಾವಳುಮತ್ತೊಬ್ಬಳು ಮಗದೊಬ್ಬಳುಹೀಗೆ ಅನ್ಯಾಯಕ್ಕೇಒಳಗಾದವರ ಸಂಖ್ಯೆ ಏರುತ್ತಲೇ ಇರುತ್ತದೆ ಅವರ ಕೋಪ ತಾಪ ಶಾಪಗಳಅವಶೇಷಗಳ ಮೆತ್ತಿಕೊಂಡಿವೆಈ ಪುರುಷಧೀನ ಪುರದಲ್ಲಿಇನ್ನೂ ಮೆತ್ತಿಕೊಂಡಿವೆ ಶಾಪದ ಗುರುತುಗಳಾಗಿ ! ಕೂಗು ಅಳು ನೋವಿನ ಧ್ವನಿಪ್ರತಿಧ್ವನಿಗಳು ಅನುರಣಿಸುತ್ತಿವೆಈ ಪುರುಷಾಂದಕಾರದ […]
ಮೂವರ ಕವಿತೆಗಳು: ಜ್ಯೋತಿ ಕುಮಾರ್ ಎಂ. (ಜೆ.ಕೆ.), ಕುಸುಮ ರಾವ್, ಉಮಾ ಸೂಗೂರೇಶ ಹಿರೇಮಠ
ಉಗಾದಿ ಏಸೊಂದು ದಿವ್ಸಾತುನೀನು ಬಿಟ್ಟು ವ್ಹಾದಬ್ಯಾಸರದ ನೆನೆಕೆಗಳಿಗೆ ಎದೆ ಮ್ಯಾಲೆ ಬಂಡೆಏರಿಕೊಂಡು, ಬಡಕೊಂಡು.ಉಗಾದಿನೇ ಬಂತು ತಿರುಗಿ ಮನದ ಬಾಗ್ಲಮ್ಯಾಲಿನ ಮಾಂತೊಪ್ಲಒಣ್ಗಿ ಶ್ಯಾನೆ ಮಾಸಾತು ಬೇನ್ಗಿಡದ ತುಂಬಸಿ ನೆನಪಾ ಹೂಕಾದು ಬಿಟ್ಟಾವ ಭಾಳ ಕೋಗ್ಲಿಯ ಗಂಟ್ಲುವಿರಹ ಕಟ್ಟೈತಿಮೌನವಾಗಿ ಕುಂತೈತಿ ಶಾಬಾದಿ ಮಠ್ಕ್ಯಾಲೆಂಡರ್ ಕಾಯೋದಖಾಯಂ ಅಂದೈತಿ ಹಾಕ್ಕೊಂಡ ಅರಿವಿನಿನ್ನ ನೆನಪ ಜಳಕದಾಗತೋಯ್ದು ತಪ್ಡಿಯಾಗೈತಿ ಪಚ್ಚಿಮದ ಸಂಜಿ ಬಾನಾಗಚಂದ್ರನಂತ ನಿನ್ನ ಮಾರಿಕಂಡು ಜೀವ ಜಲ್ ಅಂದೈತಿ ಅಂದ್ರ ಬಾಹ್ರ ಆಟದಾಗನಗುವ ನಿನ್ನ ರಾಣಿ ಕಾರ್ಡ್ಸಿಕ್ಕಿ ಕೈ ಕೋಸಿರಾಡೈತಿ ಉಗಾದಿಯಾದ್ರೂಯಾಕ್ ಬಂತೋನಿನ್ನ ನೆನಪ […]
ಮೂರು ಕವಿತೆಗಳು: ಜೊನ್ನವ (ಪರಶುರಾಮ್ ಎಸ್ ನಾಗುರ್)
ಸ್ವಾತಂತ್ರ್ಯ ಭಾರತದಲ್ಲಿ ನೀರಿಗಾಗಿ ಸೂರಿಗಾಗಿಭಾವಕ್ಕಾಗಿ ಬಾಷೆಗಾಗಿದೇಶದೊಳಗೆ ಕದನಹೇಳು ಯಾರು ಕಾರಣ ಗುಡಿ ಗೋಪುರ ಮಣ್ಣಾದವುಮಸಿದಿ ಚರ್ಚ್ ಮುಕ್ಕಾದವುಪ್ರೇಮ ತುಂಬಿದೆದೆ, ಏಕೆ ಕಲ್ಲಾದವುಹಸಿ ನೆತ್ತರದ ಕಂಪು, ಸುತ್ತ ಸುಳಿದಾಡಿದವು 75ನೇ ಸ್ವಾತಂತ್ರ್ಯ ಸಂಭ್ರಮಿಸಿದೇವುಚುಟಿ ತೊಟ್ಟಿಲ ತೂಗುವರ ನಡುವೆಮೂಲಭೂತ ಹಕ್ಕಿಗಾಗಿ,ಇದ್ದೇ ಇರುವುದುದೇಶದಲ್ಲೊಂದು ಗೊಡವೆ ಅಂಗಲಾಚ ಬೇಕಾಗಿದೆಅರ್ಜಿಗಳ ಮೇಲೆ ಅರ್ಜಿ ಕೊಟ್ಟುಇದೇ ಸ್ವಾತಂತ್ರ್ಯದಒಳಗಿನ ಗುಟ್ಟು ಕೋಪವೆ ನಲ್ಲೆ? ಕೋಪವೆ ನಿನಗೆನನ್ನ ಮೇಲೆ ನಲ್ಲೆಅದಕ್ಕೆ ನಾ ತಂದೆಕಂಪು ಸೂಸುವ ದುಂಡು ಮಲ್ಲೆ ನಿನ್ನ ಚೂಟಿ ರೇಗಿಸಿ, ಮತ್ತೆ ರಮಿಸಿಎದೆಗಾನಿಸಿ ಮತ್ತೆ ಪ್ರೇಮಿಸಿಉಸಿರಲೆ ಪಿಸು […]
ಕುಬೇರನ ಸಂಪತ್ತು ತೃಣಕ್ಕೆ ಸಮಾನ!: ಹರ್ಷವರ್ಧನ್ ಜಯಕುಮಾರ್
‘ಪ್ಲಾಟಿನಂ ಆಭರಣಗಳು ಬೇಕೆ ? ಬ್ರಹ್ಮಾಂಡದಲ್ಲೇ ಅತಿ ಕಡಿಮೆ ಬೆಲೆ!ಸ್ಥಳ – 2011UW158 ಕ್ಷುದ್ರ ಗ್ರಹ! – ಒಮ್ಮೆ ಭೇಟಿ ಕೊಡಿ’ಭವಿಷ್ಯದಲ್ಲಿ – ಹೀಗೊಂದು ಜಾಹೀರಾತು ಕಂಡರೆ ಅಚ್ಚರಿಪಡಬೇಕಿಲ್ಲ! 2011UW158 ಒಂದು ಕ್ಷುದ್ರಗ್ರಹ! Asteroid. ಅರ್ಧ ಕಿ.ಮೀ ಉದ್ದ – ಒಂದು ಕಿ.ಮೀ ಅಗಲ ಅಷ್ಟೇ! 2015ರಲ್ಲಿ ಭೂಮಿಗೆ ಸನಿಹ ಅಂದರೆ ಸುಮಾರು 25 ಲಕ್ಷ ಕಿ.ಮೀ ಅಂತರದಲ್ಲಿ ಸಾಗಿತ್ತು ಸಹ! Planetary Resources ಸಂಸ್ಥೆಯ ಪ್ರಕಾರ ಈ ಸಣ್ಣ ಕ್ಷುದ್ರಗ್ರಹದಲ್ಲಿ ಸುಮಾರು 90 ಮಿಲಿಯನ್ ಟನ್ […]
ಪಂಜು ಕಾವ್ಯಧಾರೆ
ಇವಳೊಂದು ರಾಕ್ಷಸಿ ೧ ಕಟ್ಟಿ ಕಾಯುವವರಿಲ್ಲವೇ ಇವಳಮುರಿದ ಮೂರ್ತಿಗಳುಹರಿದ ಕನಸುಗಳ ತಿಂದು, ಒಡೆದ ಮನಸುಗಳನಿಂದೆ ಅಪಮಾನಭಯ ಶೋಕಗಳಕುಡಿಕುಡಿದೂ ಎಂದೆಂದೂ ಮುಗಿದಂತಿಲ್ಲಇವಳ ಹಸಿವು ದಾಹಬಡವರ ಅಂಗೈ ಬೆಂಕಿಯವಳುಇಂದ್ರ ಸಭೆಯ ನರ್ತಕಿ ಆಹಾ!ಕೋಮಲೆಯಂದೆವಳ ಮುಟ್ಟೀರಿ ಜೋಕೆತಲ್ಗೇರಿದಂತೆ ಸುರೆಮಿಂಚು ಹೊಡೆದಂತೆ ಅರೆಘಳಿಗೆಮುಂದೊಂದು ವರುಷ ಕವಿ ದೇವದಾಸಕ್ಷಣ ಚಿತ್ತ – ಕ್ಷಣ ಅಸ್ವಸ್ಥ! ೨ತುಂಬಿದ ಕಣ್ ರೆಪ್ಪೆಗಳು, ಒಣಗಿ ಬಣಗುಡುವ ಭಾವದೆದೆಅನ್ಯಾಯವಾಗಿ ಅಗಲಿದ ಕ್ರೌಂಚ ಪಕ್ಷಿಗಳುಈಗ ಹುಟ್ಟಿ ಸತ್ತ ಶಿಶುವುಟೀಪಾಯ್ ಮೇಲಿನ ಸಿಂಗಲ್ ಟೀ ಕಪ್ಪುಹೈವೇ ಮೇಲೆ ಸುಟ್ಟು ತಿಂದ ಬಣ್ಣದ ನವಿಲಿನ […]
ಪ್ರೇಮಗಂಗೆ: ಪದ್ಮಜಾ. ಜ. ಉಮರ್ಜಿ
“ಯಾವುದೇ ಫಲಾಪೇಕ್ಷೆಯಿಲ್ಲದೆ ಎಲ್ಲರಿಗೂ ಒಳ್ಳೆಯದನ್ನ ಬಯಸಿ, ಸಾಧ್ಯವಾದಷ್ಟು ಒಳ್ಳೆಯದನ್ನ ಮಾಡಿ, ಯಾಕೆಂದರೆ ಹೂವ ಮಾರುವವರ ಕೈಯಲ್ಲಿ ಯಾವಾಗಲೂ ಸುವಾಸನೆಯಿರುತ್ತದೆ.” ಈ ವಾಕ್ಯ ಓದುತ್ತಿರುವ ವೈಷ್ಣವಿಯ ಮನಸ್ಸು ಪಕ್ವತೆಯಿಂದ ತಲೆದೂಗಿತ್ತು. ತನ್ನ ಮತ್ತು ಪತಿ ವಿಭವರ ಬದುಕಿನ ಗುರಿಯೂ ಕೂಡಾ ಎಲ್ಲರಿಗೂ ಒಳ್ಳೆಯದನ್ನು ಬಯಸುವುದು. ಮತ್ತು ಒಳ್ಳೆಯದನ್ನು ಮಾಡುವುದು. ಆದರೂ ಬದುಕೆಂಬುದು ಒಂದು ವೈಚಿತ್ರದ ತಿರುವು. ಹಾಗೆ ನೋಡಿದರೆ ಬದುಕೇ ಬದಲಾವಣೆಗಳ ಸಂಕೋಲೆ. ಮನಸ್ಸು ಸವೆಸಿದ ಹಾದಿಯ ಕುರುಹುಗಳನ್ನು ಪರಿಶೀಲಿಸತೊಡಗಿತ್ತು. ತಾಯಿ ಸಂಧ್ಯಾ ಮತ್ತು ತಂದೆ ಸುಂದರರಾಯರ ಸುಮಧುರ […]
ಡಾ.ಎಸ್.ವಿ.ಪ್ರಭಾವತಿಯವರ ಕಾವ್ಯ: ಸಂತೋಷ್ ಟಿ
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಾದಂಬರಿ, ಸಂಶೋಧನೆ, ಕಾವ್ಯ , ಪ್ರಬಂಧ, ವಿಮರ್ಶೆಗಳಿಂದ ಕ್ರಿಯಾಶೀಲ ಲೇಖಕಿಯಾದ ಡಾ.ಎಸ್.ವಿ.ಪ್ರಭಾವತಿಯವರ ಕಾವ್ಯ ಚಿಂತನೆಗಳು ವಾಸ್ತವಿಕ ನೆಲೆಗಟ್ಟಿನ ಮೇಲೆ ಆಕ್ರತಿ ಪಡೆಯುವಂತಹದ್ದು. ಕಾವ್ಯ ಜಿಜ್ಞಾಸೆಯು ಎಂದಿಗೂ ನಿಂತ ನೀರಲ್ಲ, ಅದು ಸದಾ ಹರಿಯುತ್ತಲೇ ತನ್ನ ಸುತ್ತ ಹಸಿರನ್ನು ಕಾಣುತ್ತದೆ. ಹಾಗಾಗಿಯೇ ಇವರ ಕವಿತೆಗಳಿಗೆ ಸಾಂಕೇತಿಕವಾದ ಚಲನಶೀಲತೆ ಒದಗಿಬರುತ್ತದೆ. ಮಳೆ, ಮರ,ಆಕಾಶ ಮತ್ತು ಭೂಮಿಗಳನ್ನು ಬಳಸಿಬಂದ ಕವಯತ್ರಿ ಎಲ್ಲಿಯೂ ನಿಲ್ಲುವುದಿಲ್ಲ. ಪ್ರಕ್ರತಿಯೇ ಅವರಿಗೆ ಮೆಟಾಫರ್. “ನದಿ ಹರಿಯುತಿರಲಿ” ಸಮಗ್ರ ಕಾವ್ಯ ಸಂಪುಟ ಇವರದಾಗಿದೆ. ಸೇತುವೆಗಳಿರುವುದೇ […]