ಪಿಸು ಮಾತು: ಶ್ರೀವಲ್ಲಭ ಕುಲಕರ್ಣಿ

ಎಲ್ಲೆಲ್ಲೂ ನೀರವ ಮೌನ
ತಾಳಲಾರೆ ನಾ ವೇದನೆ
ಬಳಿ ಒಮ್ಮೆ ನೀ ಬಂದು
ತೀರಿಸುವೆಯ ಮನದ ಕಾಮನೆ

ಕಣ್ಣು ರೆಪ್ಪೆ ಆಲಂಗಿಸಿ
ಕಳೆದಿವೆ ದಿನ ಸಾವಿರ
ನೆಮ್ಮದಿಯ ತಾಣ ಹುಡುಕುತ
ದಾಟಿರುವೆ ಸಪ್ತ ಸಾಗರ

ಮನವೆಂದೋ ಕೊಟ್ಟಾಗಿದೆ
ಈ ತನುವೂ ಎಂದಿಗೂ ನಿನಗೇ
ನೀರವ ಈ ಮೌನದಲಿ
ಸಖಿ ಗೀತದ ಜೊತೆಗೆ

ಕದ್ದು ನೋಡದಿರು ಹೀಗೆ
ಕಣ್ಣಂಚಿನಲಿ ಕೊಲ್ಲದಿರು ಹಾಗೆ
ಬಂದು ಬಿಡು ಸುಮ್ಮನೇ
ಪ್ರೇಮ ಲೋಕವೇ ನಮ್ಮನೆ

ರಂಗೇರಲಿ ಮಾತಿನಾ ರಂಗೋಲಿ
ಮುದ್ದಾದ ನಮ್ಮೀ ಸಾಂಗತ್ಯದಲಿ
ಮೌನಕೂ ಪದವುಂಟು
ಅದಕಿದೆ ಪಿಸು ಮಾತಿನಾ ನಂಟು!

-ಶ್ರೀವಲ್ಲಭ ಕುಲಕರ್ಣಿ



ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x