ಕಾವ್ಯಧಾರೆ

ಪಿಸು ಮಾತು: ಶ್ರೀವಲ್ಲಭ ಕುಲಕರ್ಣಿ

ಎಲ್ಲೆಲ್ಲೂ ನೀರವ ಮೌನ
ತಾಳಲಾರೆ ನಾ ವೇದನೆ
ಬಳಿ ಒಮ್ಮೆ ನೀ ಬಂದು
ತೀರಿಸುವೆಯ ಮನದ ಕಾಮನೆ

ಕಣ್ಣು ರೆಪ್ಪೆ ಆಲಂಗಿಸಿ
ಕಳೆದಿವೆ ದಿನ ಸಾವಿರ
ನೆಮ್ಮದಿಯ ತಾಣ ಹುಡುಕುತ
ದಾಟಿರುವೆ ಸಪ್ತ ಸಾಗರ

ಮನವೆಂದೋ ಕೊಟ್ಟಾಗಿದೆ
ಈ ತನುವೂ ಎಂದಿಗೂ ನಿನಗೇ
ನೀರವ ಈ ಮೌನದಲಿ
ಸಖಿ ಗೀತದ ಜೊತೆಗೆ

ಕದ್ದು ನೋಡದಿರು ಹೀಗೆ
ಕಣ್ಣಂಚಿನಲಿ ಕೊಲ್ಲದಿರು ಹಾಗೆ
ಬಂದು ಬಿಡು ಸುಮ್ಮನೇ
ಪ್ರೇಮ ಲೋಕವೇ ನಮ್ಮನೆ

ರಂಗೇರಲಿ ಮಾತಿನಾ ರಂಗೋಲಿ
ಮುದ್ದಾದ ನಮ್ಮೀ ಸಾಂಗತ್ಯದಲಿ
ಮೌನಕೂ ಪದವುಂಟು
ಅದಕಿದೆ ಪಿಸು ಮಾತಿನಾ ನಂಟು!

-ಶ್ರೀವಲ್ಲಭ ಕುಲಕರ್ಣಿ



ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *