“ಮೌನ ತಪ್ಪಿದ ಹಾದಿ”.. ಮೆಲ್ಲುಲಿದು ಪಾದಸರಮೌನವಾಯಿತು ಮತ್ತೆಅವಳ ಪಾದದಿ ಮಲಗಿ ಸದ್ದಿಲ್ಲದೇ…ಅವಳಿರುವ ಸೂಚನೆಗೆನಲಿವ ಗೆಜ್ಜೆಯೆ ದನಿಯುನಿಂತಲ್ಲೆ ಮೈ ಮರೆತು ಕಲ್ಲಾದಳೇಕೆ?!ಯಾರದೋ ಕಾಯುವಿಕೆಬಿಟ್ಟ ಕಿವಿ ಬಿರು ನೋಟಆಗಾಗ ಅವಳಿದಿರುಯಾರ ಕಡೆಗೇ…?ಸಹಜ ಸುಂದರಿಯವಳುನೀಳಕೇಶದ ರಾಶಿ…ಇನಿತಿಲ್ಲ ನವಯುವಗದಥಳಕು ಬಳುಕೂ…ಕಲ್ಲ ಚಪ್ಪಡಿಯಲ್ಲಿ ಬಿಮ್ಮನೇ ಪವಡಿಸುತಕಣ್ಣೆಡೆಯ ಕೇಶವನು ಕಿವಿಗಿಟ್ಟಳು..ಕಣ್ಣಂಚು ನೀರಹನಿಕೈ ಬಿಗಿದ ಫೋನೊಂದುಆಗಾಗ ಅದರೆಡೆಗು ಹರಿದ ದೃಷ್ಟಿ….ಬಂತೊಂದು ಸಂದೇಶಮರೆತು ಬಿಡು ನನ್ನಿದಿರಕಾಯದಿರು ನನ್ನೊಲವಮೂಗಿಯನು ಕೈಹಿಡಿದು ನಾ ಬಾಳಲಾರೆ…ಬಿಗಿದ ಗಂಟಲು ಬೇನೆಅಳುವಿಗೂ ದನಿಯಿಲ್ಲಬಿಕ್ಕಿದಳು ಮೌನದಲಿ ಹಾಯೆನಿಸುವಷ್ಟು..ಪಾದಸರ ಕಂಪಿಸಿತುಮತ್ತೆ ಚೇತನವಾಯ್ತುಹದಗೆಟ್ಟ ಭಾವದಲಿ ಪುಟಿದೆದ್ದಳೂ…ಕಡಲಾಚೆ ಮರೆಯಾದಸಂಜೆಗೆಂಪಿನ ಸೂರ್ಯಬಸಿದ ರಕ್ತದ […]
ಕಾವ್ಯಧಾರೆ
ಪಂಜು ಕಾವ್ಯಧಾರೆ
ಮಿಡ್ ನೈಟ್ @ಪ್ರೀಡಂ ಹೀಗೆ ಏಕಾಂತದಲ್ಲಿಇರಲು ಯಾವಾಗಲೂನನಗೆ ಇಷ್ಟಇದು, ಅವನು ಬಿಟ್ಟು ಹೋದಹಲವುಗಳಲ್ಲಿ ಇದು ಕೂಡ. ಪ್ರತಿ ರಾತ್ರಿ ಎರಡು ಪೆಗ್ ವೈನ್ಮತ್ತವನ ಖಾಲಿ ನೆನಪುಇಷ್ಟೇ, ಚಂದ್ರನ ಆಸರೆಯಲ್ಲಿಮಧು ಹೀರುತ್ತಾ,ತೇಲುತ್ತಾ ಹಾಗೆ ಒರಗಿಕೊಳ್ಳುವೆ. ಒಮ್ಮೊಮ್ಮೆ ಅವನೊಂದಿಗೆ ಕಳೆದತುಂಟ ಪೋಲಿ ನೆನಪುಗಳುಬೇಡವೆಂದರುನನ್ನ ಅಂಗಾಲಿಗೆ ಮುತ್ತಿಡುತ್ತಾಬಲವಂತವಾಗಿ ಕಾಡಿಸುತ್ತವೆ. ಹೂ ಮುಗುಳಿಗೆತಾಕಿಸಿದ ಅವನ ಕಿರುನಾಲಿಗೆ ರುಚಿ,ಮತ್ತೆ ಮತ್ತೆಕವಾಟಗಳೆರಡು ಬಯಸುತ್ತವೆ. ಸಿಕ್ಕು ಬಿದ್ದಕೂದಲಲ್ಲಿ ಅವನಾಡಿಸಿದಕಿರು ಬೆರಳಾಟಮತ್ತೆ ಬೇಕನಿಸುತ್ತದೆ. ಹೀಗೀಗ ಬರೀ ಖಾಲಿ,ಎರಡು ಪೆಗ್ ವೈನ್ ಜೊತೆಅವನ ನೆನಪಿನೊಂದಿಗೆಹಾಗೊಮ್ಮೆ ಹಿಗೊಮ್ಮೆಬೆರಳುಗಳು ಇಣುಕಿ ಬಂದಾಗಲೇಚಿಂತೆ ಕಳೆದು […]
ಎರಡು ಸಾವಿರ ವರ್ಷಗಳ ಹಿಂದಿನ ಸಂಗಂ ಸಾಹಿತ್ಯ ಪುರನಾನೂರು
ತಮಿಳು ಮೂಲ: ಪ್ರೊ. ಸಾಲಮನ್ ಪಾಪಯ್ಯಅನುವಾದ: ಡಾ. ಮಲರ್ ವಿಳಿ ಕೆಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಹಾಡು- ೧( ಧರ್ಮತಪ್ಪದ ರಾಜನ ಆಳ್ವಿಕೆ) ರಾಜನೇಬಾನ ಮಿತಿಯವನೇ! ದೇವನೇ!ನಿನ್ನ ಹೊಗಳದವರನ್ನು,ಅವರ ತಪ್ಪುಗಳನ್ನು,ನೀ ಸಹಿಸಿಕೊಳ್ಳುವೆ.ಅವರ ತಪ್ಪು,ಸಹಿಸಿಕೊಳ್ಳತಕ್ಕದ್ದಲ್ಲಎಂದು ಕಂಡರೆ,ಅವರನ್ನು ಅಳಿಸುವುದು ಹೇಗೆಂದುಯೋಚಿಸುವ ಜ್ಞಾನದಿ ನೀ ಆಗಸದಂತೆ ವಿಶಾಲವಾದವನು. ಹಗೆಗಳ ಅಳಿಸುವ ಸಾಮರ್ಥ್ಯದಲ್ಲಿನೀ ಆಗಸವ ತಾಕಿ ಬೀಸುವಗಾಳಿಯಂತಹವನು.ಅವರನ್ನು ಅಳಿಸುವುದರಲ್ಲಿಗಾಳಿಯೊಡನೆ ಬರುವ ಬೆಂಕಿಯಂತಹವನು. ಎಲ್ಲರಿಗೂ ಒಳಿತನ್ನುಂಟು ಮಾಡುವುದರಲ್ಲಿ ನೀನುನೀರಿನಂತಹವನು.ಬೆಳಗಿನ ಹೊತ್ತು ಪೂರ್ವದಲಿನಿನ್ನ ಕಡಲಲಿ (ಉದಯಿಸುವ)ಕಾಣುವ ಸೂರ್ಯಸಂಜೆಯಲಿ ಬೆಳ್ಳನೆಯ ಅಲೆಗಳಿರುವನಿನ್ನ ಪಶ್ಚಿಮ ಕಡಲಲಿ ಮುಳುಗುವುದು.ಇವುಗಳ ನಡುವೆ ಸದಾಹೊಸ ಹೊಸ […]
ಎರಡು ಕವಿತೆಗಳು: ಡಾ. ಡಿ. ಎಸ್. ಪ್ರಭಾಕರಯ್ಯ
ಯಾರು ಹಿತವರು ನಿನಗೆ ಓ ಮನಸೇಯಾರು ಹಿತವರು ನಿನಗೆಒಮ್ಮೆ ಅತ್ತ ಬಾಗುವೆಒಮ್ಮೆ ಇತ್ತ ಬಾಗುವೆಒಮ್ಮೆ ಅತ್ತಿಂದಿತ್ತ ಇತ್ತಿಂದತ್ತ ಒದ್ದಾಡುವೆ. ಓ ಮನವೇಯಾರು ಹಿತವರು ನಿನಗೆಗೆದ್ದರೂ ಸಹಿಸಲಾರೆಸೋತರೂ ಸಹಿಸಲಾರೆ,ಗೆದ್ದು ಸೋತಿಲ್ವ, ಸೋತು ಗೆದ್ದಿಲ್ವಸೋಲು ಗೆಲುವುಗಳಿಲ್ಲದ ಜೀವನವುಂಟೇ ಓ ಮನವೇಯಾರು ಹಿತವರು ನಿನಗೆಕನಿಕರ ಎಲ್ಲೂ ಕರಕರ ಎನ್ನುತಿಲ್ಲಹಾನಿಕರವೇ ನಿನ್ನಮೂಲಮಂತ್ರವಾಯಿತಲ್ಲ.ಬದುಕಲಾರೆ, ಬದುಕಿಸಲಾರೆ. ಓ ಮನವೇಯಾರು ಹಿತವರು ನಿನಗೆವರಿ ಆಗಿದ್ದಕ್ಕಿಂತ ಉರಿ ಆಗಿದ್ದೇ ಹೆಚ್ಚು, ಮಾತುಗಳಲ್ಲಿ ನಿಸ್ವಾರ್ಥತೆಕೆಲಸ ಕಾರ್ಯಗಳಲ್ಲಿ ಸ್ವಾರ್ಥತೆ. ಓ ಮನವೇಯಾರು ಹಿತವರು ನಿನಗೆ.ಒಳಗೆ ಬಳುಕು ಹೊರಗೆ ತಳುಕುಏನು ನಿನ್ನ ನೀತಿ […]
ಎರಡು ಕವಿತೆಗಳು: ಜ್ಯೋತಿಕುಮಾರ್ ಎಂ.
ಅವರವರ ಭಾವ ಶವ ಹುಗಿದು ಬಂದವರುದೋಷ ಕಳೆಯಲೆಂದುಗುಂಡಿ ತೆಗೆದವನವಸ್ತ್ರ ತುಂಬಿಸಿದರು.ಕೂಲಿಯವರು ಹೊಟ್ಟೆತುಂಬ ಕಳ್ಳು ಕುಡಿದುದೋಷವನುಜೀರ್ಣಿಸಿಕೊಂಡರು. ತಾವು ಮಾಡಿದಪಾಪ ಕರ್ಮಗಳುಕಳೆಯಲೆಂದು,ಭಿಕ್ಷಾ ತಟ್ಟೆಗೆಚಿಲ್ಲರೆ ಎಸೆದರು.ಪಾಪದ ಅಕ್ಕಿಯಅನ್ನ ಬೇಯಿಸಿ ತಿಂದುಅವರು ಅರಗಿಸಿಕೊಂಡರು. ಕೈಗಂಟಿದ ರಕ್ತದಕಲೆ ತೊಳೆಯಲೆಂದುಒಂದಿಷ್ಟು ಕಂತೆದಾನ ಕೊಟ್ಟರು.ರಕ್ತ ಕಲೆಯ ಊಟವಅನಾಥ ಮಕ್ಕಳು ಉಂಡುರಕ್ತಗತವಾಗಿಸಿಕೊಂಡರು. ಪಾಪದ ಪಿಂಡವೆಂದುಹಡೆದು ತೊಟ್ಟಿಗೆಎಸೆದು ಹೋದರು.ನಡುರಾತ್ರಿಯಲಿಸಿಕ್ಕ ಕೂಸುಬಂಜರು ಜೀವನದಅದೃಷ್ಟವೆಂದುನಡು ವಯಸ್ಸಿನದಂಪತಿಗಳುಕಣ್ಣಿಗೊತ್ತಿಕೊಂಡರು. ಯಾವುದು ದೋಷ?ಯಾವುದೀ ಕರ್ಮ?ಯಾರ ರಕ್ತದ ಕಲೆ?ಯಾರು ಪಾಪದ ಪಿಂಡ?ಜೀವನ, ಭಾವನ, ಪಾವನ.ಅವರವರ ಭಾವಕ್ಕೆಅವರವರದೆ ಭಕ್ತಿ,ಅವರಿವರಿಗೆ ಅದೆ ಶಕ್ತಿ. ಕಾರಣ ಮನಸ್ಸುಗಳಬೆಸೆದುಕೊಂಡಾಗ,ಬಿಸುಪು ಕೈಗಳಸ್ಪರ್ಶ ರೋಮಾಂಚನದಿಂ,ಸುಮ್ ಸುಮ್ಮನೆಆಲಂಗಿಸಿಕೊಂಡಾಗ,ಬಳಿ ಸಾರಿಮುದ್ದಾಡಿಕೊಂಡಾಗ,ಕತ್ತಲೆ […]
ನಾಲ್ಕು ಕವಿತೆಗಳು: ಲಿಂಗರಾಜ ಸೊಟ್ಟಪ್ಪನವರ
ಈ ಹಂಗಾಮಕೆ ಹೀಗೆಗಾಳಿಯ ಸುಮ್ಮನೆ ಒಂದು ಬೀಸುಏನು ಕಾರಣವಿರುತ್ತೆ ಹೇಳು ಒಳಗೆಳೆದುಕೊಂಡ ಈ ಕ್ಷಣದ ಉಸಿರಿಗೆಯಾರ ಹೆಸರಿತ್ತು ಕೇಳುಎಷ್ಟೇ ನಿಟ್ಟುಸಿರುಗಳ ತರುವಾಯವೂ ನಿನ್ನ ಪುಪ್ಪಸಗಳಲಿಉಳಿದೆ ಉಳಿಯುತ್ತೇನೆ ನಾನು ಬರಿ ಹೆಸರಿಗೆ ಇಷ್ಟು ಉಬ್ಬಿ ಹೋಗುವಿಯಲ್ಲಾಇನ್ನು ಕುಪ್ಪಸವ ನಾನೇ ಹೊಲಿದು ತರುವೆಎಷ್ಟಾದರೂ ಉಬ್ಬುದಿಬ್ಬವೇರುತ್ತ ಸಾಗಲಿ ತೇರುಮಬ್ಬು ಹರಿದ ತರುವಾಯ ಕಣ್ಣುಜ್ಜಿಕೊಳ್ಳುವ ಚುಮು ಚುಮು ಮುಂಜಾವುಕಣ್ಣೆದುರೆ ಕರಗುವ ಕಾನು ಬಾನುಬೆಳ್ಳಿ ನಕ್ಷತ್ರಗಳು ಆನು ತಾನುಹರಿವ ತೊರೆಯ ಮೆರೆವ ನೊರೆಯಲಿಯಾವ ದುಃಖ ಎಂಥ ಸುಖ ಬರುವ ಹಬ್ಬಕೆಬೇನಾಮಿ ಸುಖಗಳನು ನಿನ್ನ ಹೆಸರಿಗೆ […]
ಪಂಜು ಕಾವ್ಯಧಾರೆ
ನಿನಗೆಂದೇ ಮುಡಿಪಿಟ್ಟ ಕನಸುಗಳಿವು… ನಿನಗೆಂದೇ ಮುಡಿಪಿಟ್ಟ ಕನಸುಗಳಿವುಮೌನದ ಜಾಡಿಯೊಳಗಿಟ್ಟು ಕಾಯುತಿರುವೆಒಲವಿನ ಅಗ್ನಿಸ್ಪರ್ಶದಿಂದವುಗಳನುನನಸು ಮಾಡುತ ಬದುಕಿ ಬಾಳಬೇಕು ಹರೆಯ ತಂದೆಸೆದ ಚೆಲುವಿನ ಸುರಹೊನ್ನೆತೆರೆಯುತ ತನ್ನೆಲ್ಲ ಕಂಪ ಸೂಸುತಲಿಧರೆಯ ಸಿರಿಯಂತೆ ಬದುಕ ತುಂಬುತಲಿಮರೆಯಲಾಗದಂತಹ ಚಣಗಳಾಗಬೇಕು ಕಬ್ಬಿನೊಳಗಾ ಸಿಹಿ ರಸದೊಳಿರುವಂತೆತಬ್ಬಿದಂತೆ ಲತೆತರುವನೆಳಸಿ ಅದುವೇಹಬ್ಬಲಿಬ್ಬರೊಳಗವಿತು ಕುಳಿತಂತೆ ಪ್ರೀತಿಇಬ್ಬರೊಳಗೂ ಹದವಾಗಿ ಪ್ರೇಮ ಅರಳಬೇಕು ಎಲ್ಲರೊಳಗೊಂದಾಗಿರುತೆಲ್ಲವನು ಸ್ವೀಕರಿಸಿಇಲ್ಲಸಲ್ಲದ ನೆವವ ಪ್ರೀತಿಗೆಂದೆಳಸಿ ನಿನ್ನನಲ್ಲನಾಗುತಲಿರಲು ಹೃದಯದೊಳಗೊಲುಮೆನಿಲ್ಲದೆಯೆ ನಿತ್ಯದಿ ಜಿನುಗಬೇಕು -ಸಚಿನ್ಕುಮಾರ ಬ.ಹಿರೇಮಠ ನಾನಾಗಲಾರೆ ನಿನ್ನಂತೆ ನಾನಾಗಬೇಕೇಖಂಡಿತ ಇಲ್ಲನಿನ್ನ ಸುಳ್ಳು ನನಗೆ ಬೇಕಿಲ್ಲಸುಳ್ಳಿನ ಅರಮನೆ ನನಗಲ್ಲಕನಸುಗಳ ಹಾರ ಬೇಡವೇ ಬೇಡಹುಸಿನಗೆಯ […]
ಗಝಲ್: ಸುಜಾತಾ ರವೀಶ್, ಜೊನ್ನವ (ಪರಶುರಾಮ ಎಸ್ ನಾಗೂರ್)
ಗಝಲ್ ಸುಡುವ ಸಂಕಟ ಎದೆಯ ಹಿಂಡಲು ಮನಸು ಮುರಿಯದೇ ಸಖಾಕಾಡುವ ನೆನಪು ಹೃದಯ ದಹಿಸಲು ಕಂಬನಿ ಸುರಿಯದೇ ಸಖಾ ಮಿಡಿವ ಕರುಳಿದು ಕಾಲನ ತಿವಿತಕೆ ಗುರಿಯಾದ ಕಥೆ ಹೇಳಲೇತುಡಿವ ಜೀವವ ಸತತ ನೋಯಿಸಿರೆ ವೇದನೆ ಇರಿಯದೇ ಸಖಾ ನುಡಿವ ಮಾತದು ಚುಚ್ಚುವ ಶರವಾಗಿ ವಿಷವ ಲೇಪಿಸಿದೆ ನೋಡುಹಾಡುವ ಕೋಗಿಲೆ ಗೋಣನು ಕೊಯ್ದಿರೆ ಒಡಲು ಉರಿಯದೇ ಸಖಾ ಬಾಡುವ ಹೂವಿದು ಸೌರಭ ಸೂಸಿದೆ ಸಾರ್ಥಕ್ಯ ಲಭಿಸಿದೆ ಜಗದೆನೋಡುವ ಕಣ್ಣಲ್ಲಿ ಮಾತ್ಸರ್ಯ ಇಣುಕಿರೆ ಬೆಸುಗೆ ಹರಿಯದೇ ಸಖಾ ನೀಡುವ ಕೈಗಳು […]
ಮೂರು ಕವಿತೆಗಳು: ಶಕುಂತಲಾ ಬರಗಿ
ಹಠ ತೊಟ್ಟಿದ್ದೇನೆ ಮನುಷ್ಯಳಾಗಿ ಇರುವ ಆಸೆಗಾಗಿಮಾತು ಮಾತಿಗೂ ಚಲ್ಲು ಚಲ್ಲು ಆಡುವವರ ಮಧ್ಯೆಡೌಲು ಡೌಲು ನಡತೆ ಇರುವವರ ಮಧ್ಯೆಈ ಹೈಲು ಫೈಲು ಮಂದಿ ನಡುವೆನನ್ನತನದ ಹೋರಾಟಕ್ಕೆ ಬದ್ಧಳಾಗಿದ್ದೇನೆ. ಅಂಕುಡೊಂಕು ನೂರು ಒನಪಿಗೆಚುಚ್ಚುವ ಕೊಂಕುಮಾತುಗಳ ನಡುವೆಮಂಕು ಕವಿದ ನೂರು ಪ್ರಶ್ನೆಗೆನಾನು ಮೌನ ತವಸಿಯಾಗಿದ್ದೇನೆ ಸವಾಲು, ಜವಾಬುಗಳ ಝೇಂಕಾರದಲ್ಲಿಸ್ಪರ್ಧೆ, ಪೈಪೋಟಿಗಳ ಆಳದಲ್ಲಿಕೊಂಕು-ಡೊಂಕುಗಳ ವ್ಯವಸ್ಥೆಯಲ್ಲಿಶಾಂತವಾಗಿ ಸೋಲಿಸುತ್ತೇನೆ ಅವರಿವರನ್ನು ಒಪ್ಪದ ತಪ್ಪಿದ ವ್ಯವಸ್ಥೆಯ ಭಂಜನದಲ್ಲಿಒತ್ತಿದ ಬಿತ್ತಿದ ಉಳು ಗೊಬ್ಬರದಲ್ಲಿಅಸತ್ಯದ, ಅಧರ್ಮದ ಲೋಕದಲ್ಲಿಮನುಷ್ಯಳಾಗೇ ಇರುವ ಹಠ ತೊಟ್ಟಿದ್ದೇನೆ. ದೀಪಾವಳಿ ಮಾಡಬೇಕೆಂದಿದ್ದೇನೆ ದೀಪಾವಳಿ ಮಾಡಬೇಕೆಂದಿದ್ದೇನೆಎನ್ನ ಮನವನೊಮ್ಮೆ […]
ಮೂರು ಕವನಗಳು: ಮಮತಾ ಚಿತ್ರದುರ್ಗ
ಅವನುಜೇನೊಳಗಿನ ಸಿಹಿ ಅವನುಹೂವಳಗಿನ ಮೃದು ಅವನುಗಾಳಿಯೊಳಗಿನ ಗಂಧ ಅವನುಮೋಡದೊಳಗಿನ ಬೆಳಕು ಅವನುತಾರೆಯೊಳಗಿನ ಹೊಳಪು ಅವನುನೀರಿನೊಳಗಿನ ಅಲೆಯ ಪುಳಕ ಅವನುಚಿತ್ರದೊಳಗಿನ ಬಣ್ಣ ಅವನುಪತ್ರದೊಳಗಿನ ಭಾವ ಅವನುಇಬ್ಬನಿಯೊಳಗಿನ ತೇವ ಅವನುಕಣ್ಣೊಳಗಿನ ನೋಟ ಅವನುಹಬ್ಬದೊಳಗಿನ ಸಡಗರ ಅವನುಬೆಟ್ಟದೊಳಗಿನ ತನ್ಮಯ ಅವನುಎಲೆಯೊಳಗಿನ ಹಸಿರು ಅವನುಚೈತ್ರದೊಳಗಿನ ಚಿಗುರು ಅವನುಭಾವನೆಗಳ ಯಾನಕ್ಕೆ ಗಮ್ಯ ಅವನುಸಂಗೀತದ ನಾದದೊಳಗಿನ ಸೌಮ್ಯ ಅವನುನನ್ನ ಧ್ವನಿಯ ಶಬ್ದ ಅವನುನನ್ನ ಕಣ್ಣಲಿ ಬೆರಗು ಅವನುನನ್ನವನು…! ಸುಗಂಧ ದ್ರವ್ಯವದು ಹೂಗಳ ಗೋರಿಒಣಗಿದ ಹೂಗಳ ಎದೆಯ ಭಾರದ ಮಾತಿನ ಸಾರ.ದೇವರ ಮುಡಿಯಲ್ಲಿದ್ದುಹೆಣದ ಅಡಿಯಲ್ಲಿದ್ದುಸೈನಿಕನ ಸಮಾಧಿ ಮೇಲಿದ್ದುಬಾವುಟದ […]
ಮೂರು ಕವಿತೆಗಳು: ಶಕುಂತಲಾ ಬರಗಿ
ಹೆಣ್ಣು ನೂರು ಸಂಕೋಲೆಯಲ್ಲಿ ಸಿಲುಕಿವಿಲಿ ವಿಲಿ ಒದ್ದಾಡುವ ಜೀವಸಂಕೋಲೆಯ ಬಿಡುಗಡೆಗೆ ಹಪಹಪಿಸಿಗೀಳಿಡುತ್ತಿರುವ ಪಾಪಿ ಕಾಡಿನ ಪ್ರಾಣಿ. ನಾವೆಷ್ಟು ಬೈದರು ಅಂದರುಉಗುಳು ನುಂಗುವಂತೆಒಳ ಹಾಕಿಕೊಳ್ಳುವಅಂತಶಕ್ತಿಯ ಅಗಾಧ ಮರ ! ಎಳೆ ಕೈ ಬಿಗಿದಳೆದು ಕಟ್ಟಿಕುಟ್ಟಿ ಒಡೆದಾಕಿದರುಒದ್ದಾಡದೆ ಸುಮ್ಮನೆ ಇದ್ದಾಳೆಅವಳೇ ಒಂದು ಸಾತ್ವಿಕ ಶಕ್ತಿ ಅವಳು ಇವಳು ಯಾವಳುಮತ್ತೊಬ್ಬಳು ಮಗದೊಬ್ಬಳುಹೀಗೆ ಅನ್ಯಾಯಕ್ಕೇಒಳಗಾದವರ ಸಂಖ್ಯೆ ಏರುತ್ತಲೇ ಇರುತ್ತದೆ ಅವರ ಕೋಪ ತಾಪ ಶಾಪಗಳಅವಶೇಷಗಳ ಮೆತ್ತಿಕೊಂಡಿವೆಈ ಪುರುಷಧೀನ ಪುರದಲ್ಲಿಇನ್ನೂ ಮೆತ್ತಿಕೊಂಡಿವೆ ಶಾಪದ ಗುರುತುಗಳಾಗಿ ! ಕೂಗು ಅಳು ನೋವಿನ ಧ್ವನಿಪ್ರತಿಧ್ವನಿಗಳು ಅನುರಣಿಸುತ್ತಿವೆಈ ಪುರುಷಾಂದಕಾರದ […]
ಮೂವರ ಕವಿತೆಗಳು: ಜ್ಯೋತಿ ಕುಮಾರ್ ಎಂ. (ಜೆ.ಕೆ.), ಕುಸುಮ ರಾವ್, ಉಮಾ ಸೂಗೂರೇಶ ಹಿರೇಮಠ
ಉಗಾದಿ ಏಸೊಂದು ದಿವ್ಸಾತುನೀನು ಬಿಟ್ಟು ವ್ಹಾದಬ್ಯಾಸರದ ನೆನೆಕೆಗಳಿಗೆ ಎದೆ ಮ್ಯಾಲೆ ಬಂಡೆಏರಿಕೊಂಡು, ಬಡಕೊಂಡು.ಉಗಾದಿನೇ ಬಂತು ತಿರುಗಿ ಮನದ ಬಾಗ್ಲಮ್ಯಾಲಿನ ಮಾಂತೊಪ್ಲಒಣ್ಗಿ ಶ್ಯಾನೆ ಮಾಸಾತು ಬೇನ್ಗಿಡದ ತುಂಬಸಿ ನೆನಪಾ ಹೂಕಾದು ಬಿಟ್ಟಾವ ಭಾಳ ಕೋಗ್ಲಿಯ ಗಂಟ್ಲುವಿರಹ ಕಟ್ಟೈತಿಮೌನವಾಗಿ ಕುಂತೈತಿ ಶಾಬಾದಿ ಮಠ್ಕ್ಯಾಲೆಂಡರ್ ಕಾಯೋದಖಾಯಂ ಅಂದೈತಿ ಹಾಕ್ಕೊಂಡ ಅರಿವಿನಿನ್ನ ನೆನಪ ಜಳಕದಾಗತೋಯ್ದು ತಪ್ಡಿಯಾಗೈತಿ ಪಚ್ಚಿಮದ ಸಂಜಿ ಬಾನಾಗಚಂದ್ರನಂತ ನಿನ್ನ ಮಾರಿಕಂಡು ಜೀವ ಜಲ್ ಅಂದೈತಿ ಅಂದ್ರ ಬಾಹ್ರ ಆಟದಾಗನಗುವ ನಿನ್ನ ರಾಣಿ ಕಾರ್ಡ್ಸಿಕ್ಕಿ ಕೈ ಕೋಸಿರಾಡೈತಿ ಉಗಾದಿಯಾದ್ರೂಯಾಕ್ ಬಂತೋನಿನ್ನ ನೆನಪ […]
ಮೂರು ಕವಿತೆಗಳು: ಜೊನ್ನವ (ಪರಶುರಾಮ್ ಎಸ್ ನಾಗುರ್)
ಸ್ವಾತಂತ್ರ್ಯ ಭಾರತದಲ್ಲಿ ನೀರಿಗಾಗಿ ಸೂರಿಗಾಗಿಭಾವಕ್ಕಾಗಿ ಬಾಷೆಗಾಗಿದೇಶದೊಳಗೆ ಕದನಹೇಳು ಯಾರು ಕಾರಣ ಗುಡಿ ಗೋಪುರ ಮಣ್ಣಾದವುಮಸಿದಿ ಚರ್ಚ್ ಮುಕ್ಕಾದವುಪ್ರೇಮ ತುಂಬಿದೆದೆ, ಏಕೆ ಕಲ್ಲಾದವುಹಸಿ ನೆತ್ತರದ ಕಂಪು, ಸುತ್ತ ಸುಳಿದಾಡಿದವು 75ನೇ ಸ್ವಾತಂತ್ರ್ಯ ಸಂಭ್ರಮಿಸಿದೇವುಚುಟಿ ತೊಟ್ಟಿಲ ತೂಗುವರ ನಡುವೆಮೂಲಭೂತ ಹಕ್ಕಿಗಾಗಿ,ಇದ್ದೇ ಇರುವುದುದೇಶದಲ್ಲೊಂದು ಗೊಡವೆ ಅಂಗಲಾಚ ಬೇಕಾಗಿದೆಅರ್ಜಿಗಳ ಮೇಲೆ ಅರ್ಜಿ ಕೊಟ್ಟುಇದೇ ಸ್ವಾತಂತ್ರ್ಯದಒಳಗಿನ ಗುಟ್ಟು ಕೋಪವೆ ನಲ್ಲೆ? ಕೋಪವೆ ನಿನಗೆನನ್ನ ಮೇಲೆ ನಲ್ಲೆಅದಕ್ಕೆ ನಾ ತಂದೆಕಂಪು ಸೂಸುವ ದುಂಡು ಮಲ್ಲೆ ನಿನ್ನ ಚೂಟಿ ರೇಗಿಸಿ, ಮತ್ತೆ ರಮಿಸಿಎದೆಗಾನಿಸಿ ಮತ್ತೆ ಪ್ರೇಮಿಸಿಉಸಿರಲೆ ಪಿಸು […]
ಪಂಜು ಕಾವ್ಯಧಾರೆ
ಇವಳೊಂದು ರಾಕ್ಷಸಿ ೧ ಕಟ್ಟಿ ಕಾಯುವವರಿಲ್ಲವೇ ಇವಳಮುರಿದ ಮೂರ್ತಿಗಳುಹರಿದ ಕನಸುಗಳ ತಿಂದು, ಒಡೆದ ಮನಸುಗಳನಿಂದೆ ಅಪಮಾನಭಯ ಶೋಕಗಳಕುಡಿಕುಡಿದೂ ಎಂದೆಂದೂ ಮುಗಿದಂತಿಲ್ಲಇವಳ ಹಸಿವು ದಾಹಬಡವರ ಅಂಗೈ ಬೆಂಕಿಯವಳುಇಂದ್ರ ಸಭೆಯ ನರ್ತಕಿ ಆಹಾ!ಕೋಮಲೆಯಂದೆವಳ ಮುಟ್ಟೀರಿ ಜೋಕೆತಲ್ಗೇರಿದಂತೆ ಸುರೆಮಿಂಚು ಹೊಡೆದಂತೆ ಅರೆಘಳಿಗೆಮುಂದೊಂದು ವರುಷ ಕವಿ ದೇವದಾಸಕ್ಷಣ ಚಿತ್ತ – ಕ್ಷಣ ಅಸ್ವಸ್ಥ! ೨ತುಂಬಿದ ಕಣ್ ರೆಪ್ಪೆಗಳು, ಒಣಗಿ ಬಣಗುಡುವ ಭಾವದೆದೆಅನ್ಯಾಯವಾಗಿ ಅಗಲಿದ ಕ್ರೌಂಚ ಪಕ್ಷಿಗಳುಈಗ ಹುಟ್ಟಿ ಸತ್ತ ಶಿಶುವುಟೀಪಾಯ್ ಮೇಲಿನ ಸಿಂಗಲ್ ಟೀ ಕಪ್ಪುಹೈವೇ ಮೇಲೆ ಸುಟ್ಟು ತಿಂದ ಬಣ್ಣದ ನವಿಲಿನ […]
ಮೂರು ಕವಿತೆಗಳು: ಡಾ. ಸದಾಶಿವ ದೊಡಮನಿ, ಇಲಕಲ್ಲ
ʼಮಾಂಸದಂಗಡಿಯ ನವಿಲು’ ನೆನಪಿನಲ್ಲಿ ನೀವು ಹೊರಟು ನಿಂತಿದ್ದು; ನಡು ಮಧ್ಯಾಹ್ನ, ಕಡು ಬಿಸಿಲಲ್ಲಿಹೊಲಗೇರಿಯ ಕಪ್ಪುಕಾವ್ಯ ಕಣಗಿಲೆಯರಳಿಶತಮಾನದ ನೋವಿಗೆ ಮುದ್ದು ಅರಿಯುವ ಗಳಿಗೆಯಲ್ಲಿ ಮುದಿ ಬೆಕ್ಕುಗಳು ಹುಲಿಯ ಗತ್ತಿನಲಿಹಗಲು ಗಸ್ತು ತಿರುಗುವಾಗ ನೀವು ಹುಲಿಯ ಗುಟುರು ಹಾಕಿದಿರಿ ಗುಟುರಷ್ಟೇ ಕೇಳಿಸಿತು;ಕೇಳುತ್ತಿದೆಹಿಮದ ಹೆಜ್ಜೆಯೂ ತೋರುತ್ತಿಲ್ಲಚಿತ್ರದ ಬೆನ್ನು ಕಾಣುತ್ತಿಲ್ಲಮಾಂಸದಂಗಡಿಯ ನವಿಲು ಹುಡುಕುತ್ತಿದ್ದೇನೆನೀವು ಎಲ್ಲಿ? ಮಂಗಮಾಯ! ಕೆಂಪು ದೀಪದ ಕೆಳಗೆನನ್ನಕ್ಕ,ತಂಗಿಯರು ಎದೆ ಸುಟ್ಟುಕೊಂಡುನಲುಗುವಾಗ ನೀವು ತಾಯಿಯಾಗಿ ಹೆಗಲ ಕೊಟ್ಟು, ನೋವು ಆಲಿಸಿದಿರಿಹಗಲು ದೀವಟಿಗೆಯಾಗಿ ಉರಿದು,ಉಳ್ಳವರ ಎದೆಗೊದ್ದು ಅಸಲು ಸಹಿತ ಲೆಕ್ಕ ಚುಕ್ತಾ ಕೇಳಿದಿರಿನೀವು […]
ಶಿವಧ್ಯಾನ: ಡಾ. ರಶ್ಮಿ ಕಬ್ಬಗಾರ
ಅಲ್ಲಿಗೆ ಹೋದ ಮೇಲೆ ಗೊತ್ತಾದದ್ದುನಮ್ಮೂರ ಶಿವ ಎಷ್ಟು ಸಿಂಪಲ್ಲು ಅಂತ !ಶಿವರಾತ್ರಿಯೋ- ಮಡಿಹುಡಿ ನೈವೇದ್ಯದತಲೆಬಿಸಿ ಎಳ್ಳಷ್ಟೂ ಇರದಶುದ್ಧ ಪ್ರೀತಿಯ ಸಮಾವೇಶವೇ ಸರಿಯೆನ್ನಿ ಆ ದಿನ ಯಾವ ಹೊಳೆಯೂ ಆದೀತು ಪಕ್ಕದಲ್ಲೊಂದು ಶಿಲೆಯಿದ್ದರಲ್ಲಿ ಶಿವರಾತ್ರಿ ನೀರೆಲ್ಲವೂ ಗಂಗೆ’ ಕಲ್ಲ ತಲೆಮೇಲೊಂದಿಷ್ಟು ಅಭಿಷೇಕಗೈದುನಿರುಮ್ಮಳವಾಗಿ ಬನ್ನಿ ಮನೆಗೆ’- ಹಿರಿಯರ ನುಡಿ ನಮ್ಮಜನ ಊರು-ಕೇರಿಯ ಗೆಳೆಯರನ್ನಸಹಜೀವಗಳನ್ನ ಕೂಡಿಸಿ,ಗೂಡ್ಸು, ಲಾರಿ ತುಂಬಿಕೊಂಡುಗಲ್ಲದ ಗೌಜುಗಳೊಂದಿಗೆಶಿವರಾತ್ರಿ ಪಿಕ್ ನಿಕ್ ಹೋಗಿದ್ದುಂಟು. ಪ್ರತಿವರ್ಷವೂ- ಮುಂದಿನ್ವರ್ಷ ನಿನ್ನ ಮುದ್ದಾಂ ಕರಕೊಂಡ್ಹೋಗ್ತೆವೇ ಅಂತ್ಹೇಳಿ ಕೈಕೊಟ್ಟು ಓಡಿದ ಅಕ್ಕ, ಅಣ್ಣ, ಚಿಕ್ಕಮ್ಮನ ನೆನೆದು,ಚಳ್ಳೇಪಿಳ್ಳೆಗಳಾದ […]
ಪಂಜು ಕಾವ್ಯಧಾರೆ
ಮಾನದಂಡ ! ಮಿಥಿಲಾಪುರದೊಳಗೆ ಪಂದ್ಯ;ಸೀತೆಗೆ ಸ್ವಯಂವರ….ಹರಧನುವ ಮುರಿಯುವುದೇಮಾನದಂಡ !ರಾಮ ಮುರಿದ; ಸೀತೆ ಒಲಿದಳುನಂತರದ ವಿಚಾರವೀಗ ಬೇಡ ! ಪಾಂಚಾಲನಂದನೆ ದ್ರೌಪದಿ;ಸ್ವಯಂವರದಿ ಗೆದ್ದವನ ಮಡದಿ !ಮತ್ಸ್ಯಯಂತ್ರವ ಭೇದಿಸುವುದೇಮಾನದಂಡ !ಪಾರ್ಥ ಬಾಣ ಹೂಡಿದ; ದ್ರೌಪದಿ ಒಲಿದಳುನಂತರದ ವಿಚಾರವೀಗ ಬೇಡ ! ಅಷ್ಟೋ ಇಷ್ಟೋ ಓದಿದ ಹೆಣ್ಣು,ಸ್ವಯಂವರ ಅನ್ನಬಹುದೆ ಇದನು ?‘ಸರ್ಕಾರಿ ನೌಕರಿ’ಯೇಮಾನದಂಡ !ಸಂ(ಗಿಂ)ಬಳ ತಂದವನ ಹುಸಿನಗೆಗೆ ಒಲಿದಾಳುನಂತರದ ಬದುಕು ? ಈಗ ಬೇಡ ! ಜನಕರಾಜನ ಮಗಳಿಗೆವನವಾಸ ವರವಾಯ್ತು;ದ್ರುಪದ ರಾಜನ ಮಗಳು ಬದುಕುಐವರ ಪಾಲಾಯ್ತು ! ಅತಿ ಆಸೆ ಪಟ್ಟಷ್ಟೂ […]
ನಾಲ್ವರ ಗಝಲ್ಗಳು: ಶಿವರಾಜ್. ಡಿ., ಜಯಶ್ರೀ ಭ ಭಂಡಾರಿ., ಜೊನ್ನವ, ರೇಣುಕಾ ಕೋಡಗುಂಟಿ
ಗಝಲ್. ನಾನು-ನೀನು ಅವನು-ಇವನು ಬೇರೆ-ಬೇರೆಯಿಲ್ಲ ನಾವು ಒಂದೇರಾಮ-ರಹೀಮ ಕೃಷ್ಣ-ಕರೀಮ ಭೇದ-ಭಾವವಿಲ್ಲ ನಾವು ಒಂದೇ ಸ್ವರ್ಗ ನರಕ ಪಾಪ ಪುಣ್ಯವೆಲ್ಲ ಮನುಜನ ಕರ್ಮದ ಫಲಗಳುಜಗತ್ತಿನ ಧರ್ಮ ಗ್ರಂಥಗಳ ಸಾರಗಳಲಿ ಭೇದವಿಲ್ಲ ನಾವು ಒಂದೇ ಆಲಯ ಬಯಲಾಗಿ ಬಯಲಲಿ ಬೆಳಕಾಗಿ ಬಾಳಬೇಕು ಮನುಜಮನುಷ್ಯ ಮನುಷ್ಯತ್ವದಲಿ ಮೇಲು-ಕೀಳುಗಳಿಲ್ಲ ನಾವು ಒಂದೇ ಅಜ್ಞಾನದ ತಮವಳಿದು ವಿಜ್ಞಾನದಿ ಮೌಡ್ಯವಳಿಯಲಿಜ್ಞಾನಜ್ಯೋತಿ ಬೆಳಗಲು ತರ-ತಮಗಳಿಲ್ಲ ನಾವು ಒಂದೇ ಜಾತಿ,ಧರ್ಮಗಳ ಗೋಡೆ ಕಟ್ಟಿ ವಿಶ್ವಗುರು ಆಗಲು ಹೊರಟಿದ್ದಾರೆ ಶಿವುಪರಿಶುದ್ಧ ಪ್ರೀತಿಗೆ ಕಾರುಣ್ಯದ ಮನಸಿಗೆ ಜಾತಿ-ಧರ್ಮಗಳಿಲ್ಲ ನಾವು ಒಂದೇ -ಶಿವರಾಜ್. […]
ಬರೆ: ಲಿಂಗರಾಜ ಸೊಟ್ಟಪ್ಪನವರ
ಆಡಿದ ಮಾತುಗಳೆಲ್ಲ ಮರೆತು ಹೋದವುಉಳಿದ ಮಾತುಗಳನುನೀನೆ ಆಡಬೇಕು ಈ ಬರೆ ಮೇಲೆ ಕೈ ಆಡಿಸುನಿನಗೆ ಏನಾದರೂ ದಕ್ಕಬಹುದುಪದ ನಾದ ನೋವುರಕ್ತ ಕೀವುಬಿರಿತ ಚರ್ಮ ಒಡೆದ ಮಾಂಸ ಖಂಡತೆರೆದ ಎದೆ ಗೂಡುಈ ಎಲ್ಲವನು ಪದ ಮಾಡಿ ಹಾಡಿಕೋ ಹಂಚುಬೇಕಿದ್ದರೆ ಮಾರಿಕೋ ತಾಕಬಹುದು ಎಲುಬಿನ ಹಂದರನೆತ್ತರ ವಾಸನೆಸಿಗದೇ ಹೋಗಬಹುದು ಹೆಣಗಳ ಲೆಕ್ಕಗುಳಿಬಿದ್ದ ಕಣ್ಣುಗಳಲಿ ಒಮ್ಮೆ ಇಳಿದು ಹೋಗುನೀನು ಗತಕೆ ಸರಿದು ಹೋಗುಚರಿತೆಯ ಚರ್ಮ ಸುಲಿದ ಕಥನಗಳಲ್ಲಿ ನಾನುಸಿಕ್ಕೆ ಸಿಗುತ್ತೇನೆಒಂದು ವಿನಂತಿ ಇಷ್ಟೇಇಷ್ಟು ಕಾಲವಾದ ನಂತರವಾದರೂ ಸರಿನೀನು ಯಾರು? ಎಂದು ಮಾತ್ರ […]
ಪ್ರೀತಿ ಹುಟ್ಟೀತು ಹೇಗೆ?: ಎಂ ನಾಗರಾಜ ಶೆಟ್ಟಿ
ಹುಟ್ಟು, ಬಣ್ಣ, ಬಟ್ಟೆಗಳ ಗುರುತಿನಲ್ಲಿತಿನ್ನುವ ಅನ್ನ, ಇರುವ ಜಾಗ, ಮಾಡುವ ಕೆಲಸಅವರಿವರಲ್ಲಿ ಹಂಚಿ,ಮುಟ್ಟದೆಯೇ ದೂರ ನಿಲ್ಲುವಲ್ಲಿಪ್ರೀತಿ ಹುಟ್ಟೀತು ಹೇಗೆ? ಮನೆಗೊಬ್ಬ ದೇವನ ಮಾಡಿಇಲ್ಲಿಗಿಂತ ಅಲ್ಲಿಯೇ ಸರಿಯೆಂದು ಹಾಡಿಇಂದಿನದಕ್ಕೆ ಅಂದಿನ ಕಾರಣ ಗಂಟು ಹಾಕಿತೊತ್ತುಗಳಾಗಿಸಿದವರ ನಡುವೆಪ್ರೀತಿ ಹುಟ್ಟೀತು ಹೇಗೆ? ಮನಸ್ಸುಗಳ ಸುಟ್ಟು ಬೂದಿ ಮಾಡಿಶಾಖದ ಸುತ್ತ ಕುಣಿವವರಕರಕಲು ಎದೆಗಳಲ್ಲಿಪ್ರೀತಿ ಹುಟ್ಟೀತು ಹೇಗೆ? ಅವನು ನಾನೆಂದು, ನಾನು ಅವನೆಂದುಅವನೂ ಅವಳೂ ಒಂದೇ ಎಂದುನಮ್ಮನ್ನು ನಾವೇ ಅರಿಯದೆಪ್ರೀತಿ ಹುಟ್ಟೀತು ಹೇಗೆ? -ಎಂ ನಾಗರಾಜ ಶೆಟ್ಟಿ
ಪೋಲಿ ಹುಡುಗ: ವಿದ್ಯಾ ಗಾಯತ್ರಿ ಜೋಶಿ
ಭಾರತಿ ಮತ್ತು ಆರತಿಇಬ್ಬರದೂ ಬಾರಿ ಪ್ರೀತಿ ದೇಹ ಎರಡು ಅತ್ಮ ಒಂದೇಅಂತ ಎಲ್ಲರೂ ಅನ್ನುವುದೇ ದಿನವೂ ಒಬ್ಬ ಹುಡುಗಮುಗುಳ್ನಗುತ್ತಿದ್ದ ಕಾಲೇಜಲಿ ಪಾಠ ಕೇಳುವಾಗ ಆರತಿಗೆ ಹಿಡಿಸಿದ ಪೋರಕಾರಣ ಆತ ಭಾರೀ ಸುಂದರ ಭಾರತಿಗೆ ಹೇಳಿದಳು ಗುಟ್ಟುಭಾರತಿ ನೋಡಿದಳು ದುರುಗುಟ್ಟಿ ಅಂದಳು “ಆತ ನೋಡೋದು ನಿನ್ನನ್ನುಪ್ರೀತಿ ಮಾಡೋದು ನನ್ನನ್ನು!” ಹುಡುಗ ಬಂದನು ಇವರ ಹತ್ತಿರಹೆಚ್ಚಾಯ್ತು ಹುಡುಗಿಯರ ಕಾತರ ಕೇಳಿದರು “ಪ್ರೀತಿಸುವೆ ಯಾರನ್ನ?ನನ್ನನ್ನ ಇಲ್ಲಾ ಇವಳನ್ನ?” ಸುಂದರ ಅಂದ”ನಕ್ಕಿದ್ದು ನೋಡಿ ನಿಮ್ಮಿಬ್ಬರನ್ನನಾ ಪ್ರೀತಿಸುವದು ನಿಮ್ಮಿಬ್ಬರಲ್ಲಿ ಒಬ್ಬಳ ಅಕ್ಕನ್ನ!” -ವಿದ್ಯಾ ಗಾಯತ್ರಿ […]
ದೇವದೂತ ನನ್ನಪ್ಪ: ಶಕುಂತಲಾ ಪ್ರ. ಬರಗಿ
ಈ ಜಗವ ತೋರಲೆಂದೇ ಬಂದ ದೇವದೂತಈ ಜಗವ ತೋರಿ ತಾನೊಬ್ಬನೆ ದೂರ ನಿಂತನನ್ನಪ್ಪ ಈ ಜಗವ ತೋರಿಸಲು ಕರೆತಂದವಎನ್ನ ಕರೆದು ಜಗವ ತೋರಿ ಸುಮ್ಮನೆ ನಿಂತುಬಿಟ್ಟವ. ಈ ಜಗದ ಪೈಪೋಟಿ, ಅಂಕು ಡೊಂಕುನಾವು -ಅವರು -ಇವರು ಎಂಬುದನ್ನೇ ತಿಳಿಸದೆ ಸುಮ್ಮನೆ ನಿಂತುಬಿಟ್ಟವಅವನು ಈ ಭೂಮಿಗೆ ಕರೆತಂದ ಅಷ್ಟೇ,ಈ ಜಗವ ಏನೆಂದು ತಿಳಿಸಲಿಲ್ಲ ಎನಗೆ ಈ ಭೂಮಿಯ ಆಕಾಶದಲ್ಲಿ ಹಾರಾಡುವ ರೆಕ್ಕೆಯಾಗಿರೆಕ್ಕೆ ಕೊಟ್ಟು ಹಾರಲು ಹಚ್ಚಿ ದೂರ ನಿಂತವಅಪ್ಪನ ರೆಕ್ಕೆಗಿರುವ ಶಕ್ತಿಯೇ ನನ್ನೊಳಗೆ ಇದೆಅಪ್ಪನ ರೆಕ್ಕೆಗಿರುವ ಬಲವೇ ನನ್ನೊಳಗೆ […]
ಪಿಸು ಮಾತು: ಶ್ರೀವಲ್ಲಭ ಕುಲಕರ್ಣಿ
ಎಲ್ಲೆಲ್ಲೂ ನೀರವ ಮೌನತಾಳಲಾರೆ ನಾ ವೇದನೆಬಳಿ ಒಮ್ಮೆ ನೀ ಬಂದುತೀರಿಸುವೆಯ ಮನದ ಕಾಮನೆ ಕಣ್ಣು ರೆಪ್ಪೆ ಆಲಂಗಿಸಿಕಳೆದಿವೆ ದಿನ ಸಾವಿರನೆಮ್ಮದಿಯ ತಾಣ ಹುಡುಕುತದಾಟಿರುವೆ ಸಪ್ತ ಸಾಗರ ಮನವೆಂದೋ ಕೊಟ್ಟಾಗಿದೆಈ ತನುವೂ ಎಂದಿಗೂ ನಿನಗೇನೀರವ ಈ ಮೌನದಲಿಸಖಿ ಗೀತದ ಜೊತೆಗೆ ಕದ್ದು ನೋಡದಿರು ಹೀಗೆಕಣ್ಣಂಚಿನಲಿ ಕೊಲ್ಲದಿರು ಹಾಗೆಬಂದು ಬಿಡು ಸುಮ್ಮನೇಪ್ರೇಮ ಲೋಕವೇ ನಮ್ಮನೆ ರಂಗೇರಲಿ ಮಾತಿನಾ ರಂಗೋಲಿಮುದ್ದಾದ ನಮ್ಮೀ ಸಾಂಗತ್ಯದಲಿಮೌನಕೂ ಪದವುಂಟುಅದಕಿದೆ ಪಿಸು ಮಾತಿನಾ ನಂಟು! -ಶ್ರೀವಲ್ಲಭ ಕುಲಕರ್ಣಿ
ಪಂಜು ಕಾವ್ಯಧಾರೆ
ನಿನ್ನ ಸಂಧಿಸಿದ ಕುರಿತು ಒಂದಿನಿತೂ ಕಾಣಿಸದಕತ್ತಲೆಯ ಪ್ರಖರತೆಯಲ್ಲಿನಿನ್ನ ಸಂಧಿಸಿದ ಕುರಿತು… ಈರ್ವರ ಭೋರ್ಗರೆವ ಮೌನಗಳುಡಿಕ್ಕಿ ಹೊಡೆದು..ಗುಡುಗೂ.. ಸಿಡಿಲೂ..!ಅಂತಿಪ್ಪ ಕಾಲದ ನೆತ್ತಿಯನ್ನುತುಸುವೇ ನೇವರಿಸುತ್ತಾತೇವದ ಅರಿವಾಗಿ ನಿಂತೆ..ತೇಲು ಮೋಡವ ಹೊತ್ತನಿನ್ನ ಕಣ್ಣು ಹನಿಸಿದ್ದು ಇರಬಹುದೇಅನಿಸಿ ಒಂದಷ್ಟು ನಿಟ್ಟುರಿಸು.. ನಿನ್ನ ಮುಂಗುರುಳ ಗಾಳಿಗೆ ತಾಕಿಸದ್ದಿಲ್ಲದ ಮಾತುಗಳ ಪಟ ಪಟ ಸದ್ದು..ಬಯಲು ಆಗಸದ ತಾರೆಗಳು ನಮ್ಮ ಕಂಡಾವುಎಂಬ ನಾಚಿಕೆ ತುಸು ಹೆಚ್ಚು ನನಗೇ.. ಗಳಿಗೆಗಳು ಉರುಳಿದವು..ಸೂರ್ಯನ ಟಾರ್ಚು ಮೊಗದ ಮೇಲೆ ನೇರಾ..ಎಲ್ಲಿದ್ದೇನೆ ನಾನು ಅಂದುಕೊಳ್ಳುವಷ್ಟರಲ್ಲೇನೀನೆಲ್ಲಿ ಮಂಗ ಮಾಯ …? ಹಾ.. ಅಲ್ನೋಡು ಸುಟ್ಟು […]
ಪಂಜು ಕಾವ್ಯಧಾರೆ
ಒಮ್ಮೆ ಬಾರೋ.. ಒಮ್ಮೆ ಬಾರೋ ದೇವರೇನಮ್ಮ ನೋವಿನ ಹಾಡಿಗೆನೀರು ತುಂಬಿದ ಕಣ್ಣ ಹಣತೆಯಬೆಳಗಲಾಗದ ಪಾಡಿಗೆ. ದೇವ ನಿನ್ನನು ಪೂಜಿಸಿನೋವ ಪಡೆದೆವು ಪ್ರೀತಿಸಿಮಳೆಯ ಭ್ರಮೆಯನು ಮನದಿ ತಂದೆಯಸಿಡಿಲ ಎದೆಯಲಿ ಹೊತ್ತಿಸಿ? ನೆನ್ನೆಯೆಲ್ಲೋ ಕಳೆದಿದೆನಾಳೆ ಕಾಣದೆ ಅಡಗಿದೆನೆನ್ನೆ-ನಾಳೆಯ ಕಣ್ಣಾಮುಚ್ಚೆಯ–ಲಿಂದು ಸುಮ್ಮನೆ ಜಾರಿದೆ. ಏಕೆ ಹೀಗಿದೆ ಜೀವನ?ಯಾವ ವಿಷದ ಪ್ರಾಶನ?ಬೆಳಕ ಹುಡುಕುತ ಎದೆಯ ಕಡೆಯಲುಬೆಂಕಿ ದೊರೆಯುವ ಮಂಥನ. ಮೃದುಲ ಹೃದಯವೇ ಶಾಪವೇ?ಒಳಿತು ಬಗೆದುದೇ ಪಾಪವೇ?ಬಾಳ ಹೂವಿದು ಅರಳೊ ಜಾಗವುಸಾವು ಕುದಿಯುವ ಕೂಪವೇ? -ವಿನಾಯಕ ಅರಳಸುರಳಿ, ಪಾದಕ್ಕೊಂದು ಕಣ್ಣು ದೇವ ದೇವಳ ತೇರು […]
ಪಂಜು ಕಾವ್ಯಧಾರೆ
“ಹೊಲಿಗೆಯ ದರ್ಜಿಯವಳು ಬೇಕು” ಅಲ್ಲಲ್ಲಿ ಹರಿದ ಹೆಗಲುಗಳಿಗೆ ತೇಪೆ ಹಾಕಿಜೋಳಿಗೆಯ ಕಟ್ಟಿ ತಂಬೂರಿ ಕೊಟ್ಟುಕನಸು ಮನಸಿನ ಆಳ ಅರಿತುಮನಸುಗಳ ಬೆಸೆಯುವವಳುಬೇಕು ಯುವ ಕನಸುಗಳ ವ್ಯಾಖ್ಯಾನಿಸುವವಳು ವಿಶ್ವದ ಪೊರೆಬಿದ್ದ ಕಣ್ಣಿಗೆಪೊರೆಯ ತೆಗೆದು ಸತ್ಯಪ್ರೇಮವ ಸೃಷ್ಟಿಸುವವಳುಉಸಿರಿಗೆ ಹಸಿರಾಗಿ ಹೃದಯಗಳಿಗೆಪ್ರೇಮದ ರಕ್ತವ ಬಸಿಯುವವಳುಕೋಮು ಪಾಶಾಂಡದ ಬೇರಚಿವುಟಿ ಬೆಂಕಿಗಾಹುತಿ ಕೊಡುವವಳುಬೇಕು ವಿಶ್ವದ ಓಜೋನ್ ತೇಪೆಯ ಹೊಲಿಯುವವಳು ತಲ್ಲಣಗೊಂಡ ಯುವ ಮನಸುಗಳವಿದಾಯ ಕೇಳಿಸಿಕೊಂಡ ಕನಸುಗಳವಿಚಾರ ಕ್ರಾಂತಿಯ ನಡೆಸಿ ಮನವ ಬಲಪಡಿಸುವವಳುಸೂರೆಗೊಂಡ ಕನಸುಗಳ ಬಿಡಿಸಿಆ ಮನಗಳಿಗೆ ಪ್ರೇಮದ ಕೌದಿಯ ಹೊಲಿಯುವವಳುಬೇಕು ಸ್ನೇಹದೊಲಿಗೆಯ ಹಾಕುವವಳು ಸರ್ವಾಧಿಕಾರಿಯ ಆದೇಶದಂತೆಸುಟ್ಟ […]
ಗಜಲ್: ಜಯಶ್ರೀ.ಭ.ಭಂಡಾರಿ., ರೇಣುಕಾ ಕೋಡಗುಂಟಿ, ಸರೋಜ ಪ್ರಶಾಂತಸ್ವಾಮಿ, ದೇವರಾಜ್ ಹುಣಸಿಕಟ್ಟಿ.
ಗಝಲ್ 1 ಸರೋವರದ ತುಂಬಾ ತೇಲಾಡುವ ಹಂಸೆಗಳುಸರೋವರದ ಸೊಬಗನು ಹೆಚ್ಚಿಸಿದ ಕಮಲಗಳು ಅದೇಕೋ ಸುಂದರ ಹಂಸೆ ತಪಗೈಯುತಿದೆಸಿಗದೆ ಆಹಾರ ಮನನೊಂದಂತಿದೆ ಕಂಗಳಗಳು. ಹೆಜ್ಜೆ ಕಿತ್ತಿಡಲಾರದೆ ಸುಮ್ಮನೆ ಆಕಾಶ ನೋಡುತಿದೆ.ಲಜ್ಜೆಯ ತೆರದಿ ನಾಚಿದಂತೆ ಬೆಳ್ಳನೆ ರೆಶ್ಮೆಯ ಪಂಕಗಳು ಪಾದಗಳ ಒತ್ತಿ ಹಿಡಿದು ಜಪವ ಮಾಡುತಿದೆ ಎನಿಸುವುದುಪದಗಳ ಜೋಡಿಸಿ ವೈರಾಗ್ಯ ರಾಗದಿ ಹಾಡುವ ಕಂಗಳು ನೀಲ ಅಂಬರದಿ ಗುಟ್ಟಾಗಿ ಏನೋ ಹುಡುಕುತಿದೆಅಲೆಗಳು ಹೇಳುತಿವೆ ರಾತ್ರಿ ಬರುವುದು ಬೆಳದಿಂಗಳು ಕೆಂಪು ಎತ್ತರದ ಮೂಗು ತಂಪಾಗಿ ಉಬ್ಬಿ ಸೊಕ್ಕಿದಂತಿದೆ.ಮಂಪರು ಬಂದಂತೆ ಮಂಕಾಗಿ ಹಾರುದ […]
ಪಂಜು ಕಾವ್ಯಧಾರೆ
ಕನ್ನಡಿಯೊಳಗಿನ ಬಿಂಬ ಇಷ್ಟು ದಿನ ಸುಂದರವಾಗಿಯೇಕಾಣುತ್ತಿದ್ದ ಚಹರೆಇದ್ದಕ್ಕಿದ್ದಂತೆ ಇಂದೇಕೋವಿಕಾರವಾಗಿ ಕಾಣುತಿದೆ,ಒರೆಸೊರೆಸಿ ಕನ್ನಡಿಯ ದಿಟ್ಟಿಸಿದರೆಅದೇನೋ ಹೇಳಿ ಅಣಕಿಸುತಿರುವಂತೆಭಾಸವಾಗುತಿದೆ.. ಒಮ್ಮಿಂದೊಮ್ಮೆಲೇಭುಗಿಲೆದ್ದಿದ್ದೇಕೆ ಆತ್ಮಸಾಕ್ಷಿಯ ಬಿಂಬ?ಸರಿದುಹೋಗುತಿರುವ ಕಾಲದ ನಡುವೆನಿಂತ ನೆಲವ ಕುಗ್ಗಿಸಿಅಸ್ತಿತ್ವವ ಅಲುಗಾಡಿಸುತಿರುವ ಪ್ರಶ್ನೆಗಳೇಮನಸು ಮಸ್ತಿಷ್ಕದ ತುಂಬ.. ಅಸುನೀಗಿಹೋಗಿರುವ ಕನಸುಗಳಮತ್ತೆ ಬಡಿದೆಬ್ಬಿಸುತ ಅಂತರಂಗವೇ ನಾಚುವಂತೆಪ್ರಶ್ನಿಸುತಿಹುದು ನೀನ್ಯಾರು?ನೀನ್ಯಾರೆಂದು,ಇಟ್ಟ ಹೆಸರು ಹೇಳಿದರೂ ಬಿಡಲೊಲ್ಲದಲ್ಲಗುರುತು ಹೇಳಿ ಬಿಡಿಸಿಕೊಳ್ಳಲುಗುರಿಯೇ ಇಲ್ಲವಲ್ಲತಲೆ ಬೆಳೆಸದ ದೇಹಸವೆದಿದ್ದಷ್ಟೇ ಸಾಧನೆಯೇ ಇಲ್ಲ.. ಹುಡುಕಾಟದ ತೊಳಲಾಟಗಳ ನಡುವೆಯೇಕಂಡ ವಿಕಾರ ಮುಖವೇಉತ್ತರದಂತಿದೆ,ವಿರಮಿಸಿದ್ದು ಸಾಕಿನ್ನುನೆಟ್ಟಾನೇರ ಹೊರಟುಬಿಡು ಪಟ್ಟುಬಿಡದೇಸಾರ್ಥಕ ಬದುಕಿನೆಡೆಗಿನ್ನು ಎಂದುಪ್ರೇರೇಪಿಸುತಿರುವ ಹಾಗಿದೆ.. ಲಘುಬಗೆಯಲಿ ನಡೆಯಬೇಕಿದೆ ಗಮ್ಯದತ್ತಹದುಳಗೊಂಡ ಬದುಕಿನಾಚೆಯಿಂದುಅಸ್ಮಿತೆಗೊಂದು ತಳಹದಿ […]
ಪಂಜು ಕಾವ್ಯಧಾರೆ: ಆದಿತ್ಯಾ ಮೈಸೂರು, ವಿನಯಚಂದ್ರ, ಪ್ರಶಾಂತ್ ಬೆಳತೂರು
ನಮ್ಮ ಮಹಾ ನಗರದ ಬದುಕು ಇಂದುಒತ್ತಡದ ಜೀವನಯಾಂತ್ರಿಕತೆಯ ಬದುಕುಅಪ್ಪ ಅಮ್ಮನ ಇನಿದನಿಸಂಬಂಧ ಪ್ರೀತಿಯ ಛಾಯೆಒಂದ್ಹೊತ್ತಿನ ನೆಮ್ಮದಿಎಲ್ಲವು ಕಾಣದಾಗಿವೆ ಜನಜಂಗುಳಿಯ ಮುಂದೆಬಿಡುವಿಲ್ಲದ ಕೆಲಸಸಮಯ ಅರಿವಿದ್ದರುಬಿಡದ ಧಣಿ , ತಲೆ ಬಿಸಿಅವ ಇನ್ನೆಲ್ಲಿ ಕಾಣಲು ಸಾಧ್ಯ ಯಾರಾದೋ ಕೀಲಿಕೈಗೆಗಿರಗಿರಗುಟ್ಟುತ್ತಯಂತ್ರವಾಗಿ, ಚಕ್ರದಂತೆತಿರುಗಬೇಕಿದೆ ಎದ್ದಕೂಡಲೆ ಅವಸರದಲೆಇಸ್ತ್ರೀ ಕಾಣದ ಬಟ್ಟೆಪಾಲಿಶ್ ಇಲ್ಲದ ಬೂಟು ತೊಟ್ಟುಸ್ಕೂಟರೋ, ಬಸ್ಸೋ, ಟ್ಯಾಕ್ಸಿಯೋ ಹಿಡಿದು ನಡೆಅಲ್ಲಿ ಬಟ್ಟೆಗುಂಡಿ ಹಾಕಿದಿಯೊ ತಿಳಿಯದುಆದರೆ ಬಯೋಮೆಟ್ರಿಕ್ ಗುಂಡಿ ಹಾಕಬೇಕಿದೆಇಲ್ಲವಾದರೆ ಮೇಲವರ ಕಾಟಹೊಟ್ಟೆಗೆ ಅನ್ನ, ನೀರುಹೊತ್ತಿಗೆ ನಿದ್ರೆ, ಸೇರದು, ಬಾರದುಓಡು ಓಡು ಹಗಲು ಇರುಳೆನ್ನದೆನಿನ್ನಲ್ಲಿ ಶಕ್ತಿಯಿರೋತನಕ […]
ಬಂಡಾಯ ಕಾವ್ಯ: ಗೋಲ್ಡನ್ ಅಶು, ಜಬೀವುಲ್ಲಾ ಎಂ. ಅಸದ್, ಪ್ರಶಾಂತ್ ಬೆಳತೂರು
ಗಾಂಧಿ ಮತ್ತು ಅವನ ಖಾಯಿಲೆ ಬಿದ್ದ ಸ್ವಾತಂತ್ರ್ಯ ಭವಿಷ್ಯವಿರದ ಸಾಲಿಯ ಗೋಡೆಗಳುಬದುಕು ಕಟ್ಟುವ ಕನಸು ಕಾಣುತ್ತವೆಹೆಗಲಿಗೆ ಐಡಿ ಕಾರ್ಡಿಲ್ಲದ – ಕೆಂಪು ಶಾಲಿನ ಪೋರಶಾಲೆಗೊರಟ ಒಂಟಿ ಸಾಬರ ಮನೆಯ ಹುಡುಗಿಗೆರಾಮ ನಾಮ ಹೇಳುತ್ತಿದ್ದಆ ಗಟ್ಟಿಗಿತ್ತಿಯೂ ಸುಮ್ಮನಿರಲಿಲ್ಲಬೀದಿ ಮಧ್ಯೆಯೇ ಆಜಾನ್ ಕೂಗಿದಳು ಆಗ –ಕಪ್ಪು ಕೋಮುವಿನ ಹಲಗೆಯ ಮೇಲೆಕಲಿಸುವವ ಸಂವಿಧಾನದ ಕೊಲೆಮಾಡುತ್ತಿದ್ದ ! ಸತ್ಯಕ್ಕೆ ಗಲ್ಲಾದ ಈ ಹೊತ್ತುಹಸಿಮೈಯ್ಯ ಅತ್ಯಾಚಾರಿ ಬಾಲೆಯೊಬ್ಬಳ ಮನೆಯಮುಂದೆ –ಸ್ವತಂತ್ರ್ಯದ ಸಂಭ್ರಮ ಮನೆ ಮಾಡಿತ್ತು ! ಹೌದುನವ ಭಾರತಕ್ಕೆ ಎಪ್ಪತ್ತೈದರಸಂಭ್ರಮ , ಅತ್ಯಾಚಾರಿಗೆ – […]