ಪಂಜು ಕಾವ್ಯಧಾರೆ

ಚೆಲುವೆಮಬ್ಬುಗವಿದ ಮುಸ್ಸಂಜೆಆಡು-ಹಸು-ಕುರಿ ಮರಳಿ ಬರುವಾಗಕೆಂಧೂಳು ಮೇಲೆದ್ದು ತಂಗಾಳಿಯು ಸೋಕಿದಂಗೆನೀ ನನ್ನ ಸನಿಹ ಬರಲು ಮೈ ಜುಮ್ಮೆಂದಿತುಓ ನನ್ನ ಒಲವೇ ಜಗವೆಲ್ಲಾ ನಾವೇಕೆಮ್ಮುಗಿಲು ನಕ್ಕು ಸೂರಪ್ಪ ನಾಚಿದಕದರಪ್ಪನ ಗುಡ್ಡವು ಕೆಂಪೇರಿತಾಗಕೆಂದಾವರೆಯಂತಹ ನಿನ್ನ ಕೆನ್ನೆ ಮನಸೆಳೆಯಿತುಇಳಿಜಾರಿನ ಕಲ್ಲು ಮುಳ್ಳು ನಗೆಬೀರಿಬೇಲಿ ಮೇಗಳ ಹೂ ಘಮ್ಮೆನ್ನೋ ಸುವಾಸನೆಯುನಿನ್ನ ಬೆವರಿನ ಸೌಗಂಧ ತಂದಾಗಮನದಲ್ಲೇನೋ ಆನಂದಮೊದಲ ಮಳೆ ಹನಿ ನೆಲವನ್ನು ಮುತ್ತಿಟ್ಟುಗಾಳಿ ಗಂಧವಾಗಿ ಬಯಲೆದೆ ಮೇಲೆ ನಿನ್ನ ಹೆಸರುನಾ ಬಯಸಿದೆ ನಿನ್ನ ಸಂಗನಾನಾಗ ಅಲೆದಲೆದು ಬಳಲಿದೆಮೊದಲ ಚುಂಬನಕ್ಕೆ ನರನಾಡಿ ರೋಮಾಂಚನಉಸಿರು ಉಸಿರಲ್ಲಿ ಬೆರೆಯಲು ಎಂಥಾ … Read more

ಪಂಜು ಕಾವ್ಯಧಾರೆ

ನೆನಪುಗಳೊಂದಿಗೆ ಮೌನ ಮೆರವಣಿಗೆ ನಡೆದಿದೆರಥೋತ್ಸವದಲ್ಲಿರಂಗುರಂಗಿನ ಕನಸುಗಳ ಹೊತ್ತುನೆನಪುಗಳ ಅನಾವರಣಕಹಿ ಮರೆವಿನ ಪಲಾಯನ ! ಉಳಿದು ಹೋಗಿದೆ ನೆನಪುಗಳುಎಂದೆಂದಿಗೂ ಕರಗದಂತೆ” ತಿಮ್ಮಪ್ಪನ ” ಐಶ್ವರ್ಯದಂತೆಬಳಸಿದಷ್ಟೊ ……ಕರಗಿಸಿದಷ್ಟೊ ……ಎಂದೆಂದಿಗೂ ಮುಗಿಯದಂತೆ….. ನೆನಪಿನ ಹನಿಗಳು ಜಾರುತಿದೆಬಿಸಿಬಿಸಿಯಾಗಿ ಕೆನ್ನೆಗಳ ಮೇಲೆಜಾರಿದರೂ ಉಳಿಸಿ ಹೋಗಿವೆನೆನಪಿನ ಚಿತ್ತಾರವನ್ನುನೆನಪುಗಳೇ ಹಾಗೆಮರೆಯಬೇಕೆಂದರೂ ,ಮರೆಯಲಾಗದ , ಹಳೆಯದಾದಷ್ಟೊನೆನಪುಗಳು ಮತ್ತೆ ಮತ್ತೆ ಕಾಡುತ್ತವೆ ಜೀವದೊಡನೆ ಬೆಸೆದಿರುವಆತ್ಮದಂತೆ ಹೃದಯದೊಳಗೇಬೆಚ್ಚಗೆ ಮುದುಡಿ ಮಲಗಿದೆ ನೆನಪುಗಳು …..ಆದರೂ,ನನಗೆ ಭಯರೆಕ್ಕೆ ಪುಕ್ಕ ಬಲಿತೊಡನೆಗೂಡುಬಿಟ್ಟು ಹಾರಿಹೋಗುವಪುಟ್ಟ ಹಕ್ಕಿಯಂತಾದರೆ ……?! –ಪ್ರಭಾಕರ ತಾಮ್ರಗೌರಿ ಹಾರುವ ಹಕ್ಕಿ ಒಂಟಿತನ ಬಹಳಸೊಗಸಿನ ಜೀವ-ನ! … Read more

ಪಂಜು ಕಾವ್ಯಧಾರೆ

ವಿಮರ್ಶೆ.. ಚರಂಡಿ ಜಿಗಿದವನನ್ನು ಸಮುದ್ರ ದಾಟಿದನೆಂದು ಬಿಂಬಿಸುವುದೇ? ಅಂಬೆಗಾಲಿಡುವವನ್ನು ನಟರಾಜನೆನ್ನುವುದೇ? ಕಾಡಿನ ತೊರೆಯ ಬದಿಯಲ್ಲಿ ಪುಕ್ಕ ತರಿದು ಕೊಂಡಕೆಂಬೂತವನ್ನು ನವಿಲೆಂದು ವರ್ಣಿಸುವುದೇ?. ಮಣ್ಣು ತಿನ್ನುವ ಮುಕ್ಕಾವನ್ನುಕಾಳಿಂಗಕ್ಕೆ ಹೋಲಿಸುವುದೇ? ತರವಲ್ಲ.! ತರವಲ್ಲ.! ಬೇವು, ಬೇಲ ಎರಡೂ ಬೆಳೆದಿವೆಈ ಕಾಡಿನಲ್ಲಿ.!ಹಾಲುಗುಂಬಳ, ಹಾಗಲಎರಡೂ ಒಂದೇ ಮರಕೆ ಹಬ್ಬಿದಬೇರೆ ಬೇರೆ ಬಳ್ಳಿ.! ಆಳುದ್ದ ಹೊಂಡಕ್ಕೂ,ಆಳ ತಿಳಿಯದ ಸಮುದ್ರಕ್ಕೂ ವಿವರಣೆ ಬೇಕೆ? ಮರುಭೂಮಿಯ ಕುರುಚಲಿಗೂಸಹ್ಯಾದ್ರಿ ಕಾಡಿಗೂ ಹೋಲಿಕೆ ಏಕೆ? ಆಗದು ನನ್ನಿಂದಾಗದು.ಬೇರೆ ಯಾರನ್ನಾದರೂ ಹುಡುಕಿಕೋ.!ಬಣ್ಣದ ಕಲ್ಲನ್ನು ವಜ್ರವೆನ್ನಲು.!ಹುಲ್ಲಿನ ಬೆಂಕಿಯನ್ನು ಕಲ್ಲಿದ್ದಲ ಕಾವೆನ್ನಲು.! ಬಾ, ಇಲ್ಲಿ … Read more

ಪಂಜು ಕಾವ್ಯಧಾರೆ

ನಿರೀಕ್ಷೆಸುಂದರ ವದನದಲ್ಲಿ ನಿರೀಕ್ಷೆಯ ಗೆರೆಫ಼ಲಿಸುವವರೆಗೂ ಚಿಂತೆಯ ನೆರೆಸ್ವಾರ್ಥವೇ ಪರಾರ್ಥವೇ; ಜ್ಞಾನವೇ ಸತ್ಯವೇನೀತಿಯ ಬೋಧೆಯ ಶಾಂತಿ ಸುಭಿಕ್ಷಕ್ಕೆಕಾದಿರುವೆ ನೀ..ಕಾಯುವ ಶಕ್ತಿಯಿರುವವರೆಗೆ! ದ್ವೇಷ ಅಹಂಕಾರಗಳ ಅಂಧಕಾರದ ಜಗದೊಳಗಿನಸ್ವಾರ್ಥನಿವಾರಣೆಗೆ, ಪುನರ್ ಸೃಷ್ಟಿಗೆಭ್ರಷ್ಟತೆಯ ನೀಗಿ ಸಮಾನತೆಯ ಸಮಷ್ಟಿಗೆಮಿಥ್ಯೆಯ ಮೀರಿ ಸತ್ಯವೇ ನಿತ್ಯವೆಂದು ಸಾರುವಹೊಸ ಸೂರ್ಯನ ಉದಯಕ್ಕೆಕಾದಿರುವೆ ನೀ ಕಾಯುವ ಶಕ್ತಿಯಿರುವವರೆಗೆ! ಬಾಹ್ಯದಲ್ಲಿ ಆಕರ್ಷಕವಿರಬಹುದೀ ಮೊಗಆದರೆ ಮಡುಗಟ್ಟಿದೆ ಕಂಗಳಲ್ಲಿ ಹತಾಶೆಯ ದುಃಖಅದುರುತ್ತಿರುವ ಅಧರಗಳಲಿ ತುಡಿಯುತ್ತಿರುವಹೇಳಿಯೂ ಹೇಳೆನೆಂಬ ಮನದೀನೋವ ಕಿತ್ತೊಗೆಯುವ ನೈಜ ಮಹಾಶಕ್ತಿಗಾಗಿಕಾದಿದ್ದೀಯ ಯಾರಿಗೋ.. ಕಾಯುವ ಶಕ್ತಿಯಿರುವವರೆಗೆ! -ಡಾ.ಗಣೇಶ ಹೆಗಡೆ ನೀಲೇಸರ ಕರುನಾಡು ಕನ್ನಡ……….. ಕನ್ನಡ … Read more

ಪಂಜು ಕಾವ್ಯಧಾರೆ

ಋಣಿಯಾಗಿರು ಹೆತ್ತವಳು ಹಣ್ಣಣ್ಣು ಬದುಕಿಯಾದಾಗಅಕ್ಕರೆಯಿಂದಿರು ಸಾಕು…ಹಾಲುಣಿಸಿ ಋಣ ತೀರಿಸುವುದು ಬೇಕಿಲ್ಲ. ಹೆತ್ತವಳು ಮುಪ್ಪಾಗಿ ಹೊಟ್ಟೆ ಹಸಿದಾಗಚೂರು ಅನ್ನವನಿಡು ಸಾಕು….ತುತ್ತುಣಿಸಿ ಋಣ ತೀರಿಸುವುದು ಬೇಕಿಲ್ಲ. ಹೆತ್ತವಳ ಕೈ ಕಾಲಿಗೆ ಶಕ್ತಿ ಇಲ್ಲದಿದ್ದಾಗಕೈಕೋಲು ಕೊಡು ಸಾಕು…..ಬೆರಳಿಡಿದು ನಡೆಸಿ ಋಣ ತೀರಿಸುವುದು ಬೇಕಿಲ್ಲ. ಹೆತ್ತವಳು ದುಃಖದ ಕಣ್ಣೀರಿಡುವಾಗಅವಳ ಕಣ್ಣೆದುರಿರು ಸಾಕು….ಚಂದ್ರನ ತೋರಿಸಿ ಋಣ ತೀರಿಸುವುದು ಬೇಕಿಲ್ಲ. ಹೆತ್ತವಳು ವೃದ್ದೆಯಾಗಿ ಹಾಸಿಗೆ ಹಿಡಿದಾಗಚಾಪೆ ಚಾದರ ನೆಲಕಾಸು ಸಾಕು….ಜೋಗುಳದೊಳು ಮಲಗಿಸಿ ಋಣ ತೀರಿಸುವುದು ಬೇಕಿಲ್ಲ. -ಮೈನು ಐ.ಬಿ.ಎಮ್ ಬಾಳುತಿರು ನಶ್ವರದ ಜೀವನದಲಿ ನನ್ನದು ನನ್ನದೆಂದುನಾಚಿಕೆ … Read more

ಮೂರು ಕವನಗಳು

ಪ್ರಕೃತಿ ಸೌಂದರ್ಯ ಭೂರಮೆಯ ಅಂದ ಚಂದದ ನೋಟಸವಿಯುವ ಬನ್ನಿ ಪ್ರಕೃತಿಯ ರಸದೂಟಪ್ರಕೃತಿಗೆ ವಿಕೃತಿಯಾಗಿ ಮೆರೆಯ ಬೇಡವೋ ಮರ್ಕಟಸಂಭ್ರಮಿಸೋಣ ಬನ್ನಿ ಪ್ರಕೃತಿಯಔತಣ ಕೂಟ ಧರೆಗಿಳಿದು ಬಂದ ರಮಣಿಯಂತೆನಿನ್ನ ಅರಮನೆಯ ದೃಶ್ಯಕ್ಕೆ ನಾಶರಣಾದಂತೆನೀನು ಹಚ್ಚ ಹಸಿರಿನ ಸೀರೆ ಹುಟ್ಟಂತೆನನ್ನ ನಯನಗಳಿಗೆ ಹಿತವಾದಂತೆ ಬೆಟ್ಟ ಗುಡ್ಡಗಳಿಂದ ಇಳಿದು ಬರುವಜಲಧಾರೆಯ ರೌದ್ರ ನರ್ತನನೋಡುಗರ ಕಣ್ಣಿಗೆ ಸೌಂದರ್ಯದ ದರ್ಶನಪ್ರಾಣಿ ಪಕ್ಷಿಗಳ ವಾಸಸ್ಥಳ ಕಾನನಪ್ರಕೃತಿ ಮತ್ತು ಮಾನವನ ಮಿಲನ ಝರಿ ತೊರೆಗಳಿಂದ ಇಣುಕುವ ಜಲಧಾರೆನೋಡಲು ಹಂಬಲಿಸುತ್ತಿರುವೆನು ಮನಸಾರೆಇಡೀ ಜೀವಸಂಕುಲಕ್ಕೆ ನೀ ಆಸರೆಹಸಿರಿನ ಸೌಂದರ್ಯಕ್ಕೆ ತಲೆಬಾಗಿಸುರಿಯುವುದು ವರ್ಷಧಾರೆ … Read more

ಪಂಜು ಕಾವ್ಯಧಾರೆ

ಬೆವರಿಳಿಸೋ ಬಿಸಿಲು ಅಯ್ಯೋ….ಎಂಥಹ ಬಿಸಿಲು ಕಾಣಿ ಎನ್ನುವ ಮನುಜಮರೆತೇ ಬಿಟ್ಟ ತಾನು ಮಾಡಿದ ಕರ್ಮವಬೆಳಗೆದ್ದು ಅಂಗಳ ದಾಟಿದರೆ ಸಾಕುಸುರಿವುದು ಬೆವರಿನ ಧಾರಾಕಾರ ಮಳೆ. ಮೊಳಕೆಯೊಡೆದು ಬೆಳೆದ ಮರವ ಕಡಿದುಕಟ್ಟಿ ಬಿಟ್ಟ ಕಟ್ಟಡವ ಬೆವರ ಸುರಿದುಇಂದು ಕಟ್ಟಡದ ಕೆಳಗೆ ನಿಂತು ಅಂಬರವ ನೋಡಿಎನ್ನುವ ಅಯ್ಯೋ…ಎಂಥಹ ಬಿಸಿಲು ಕಾಣಿ. ಕಾನನ ಕಡಿದು ನೆಲಸಮಗೊಳಿಸಿಕಟ್ಟಿದ ಕಟ್ಟಡದಲೊಂದು ಗಿಡವನು ನೆಟ್ಟುಮರಗಳ ಕಡಿದು ತಂಪೆರೆವ ಗಾಳಿಯ ಕೆಡಿಸಿಪೊದೆ ಮರೆಯಲಿ ನಿಂತೆನ್ನುವ *ಅಯ್ಯೋ ಎಂಥಹ ಬಿಸಿಲು ಕಾಣಿ.. –ಹರ್ಷಿತ.ಎಸ್ ನನ್ನಯ ಮುದ್ದು ಕುಸುಮಗಳು ಶಾಲೆ ಪ್ರಾರಂಭವಾಗುತ್ತಿದೆ … Read more

ಪಂಜು ಕಾವ್ಯಧಾರೆ

ಸೂಂಕತ್ತಿ ಹೂವುಗಳು ಕೆಂಪಗೆ ಮೈಯರಳಿ ನಿಂತವು ರಸ್ತೆಯ ಬದಿಗೆನನಗಿಂತ ಸುಂದರಿ ಯಾರೆಂದವು ಸುಮ್ಮಗೆ ಚೆಲುವೆಲ್ಲ ನಂದೆ ಎಂದವು ನಾಚಿ ನೀರಾದಂತೆಲಜ್ಜೆಯ ಬಿಂಕ ದಿಬ್ಬಣವೇರಿ ಕುಣಿದಂತೆ ಮಳೆಯ ಕಾಸರದ ಮುಂಗಾರಿನ ಆಗಮನಕೆಚಿತ್ತಾಕರ್ಷಕ ಹಸಿರು ಭೂರಮೆಯ ಸಿಂಗಾರಕೆ ಗುಲ್ ಮೊಹರೆಯೊತ್ತಿ ಅಗಸದ ಡಿಂಬಿಗೆ ಅರಳಿಕೊನಕೊನರಿ ಪುತ್ಕರಿಸಿ ಕೆಂಪು ಗೋಣು ಚೆಲ್ಲಿ ಕ್ರಾಂತಿಯೊ ಶಾಂತಿಯೊ ನಾನಿರುವುದೆ ಹೀಗೆ ಕೆಂಪಗೆಹಸಿರು ಮರದೊಳಗೆ ಕಾಯಿ ಹೂವಾಗಿ ಅರಳಿದೆಕೆಂಪಗೆ ಕಾಡ ಹಾದಿಯ ಹೂವಾದರೂ ನಾನು ಸೊಗಸೆ ಸೊಗಸುಸೊಗಯಿಸುವ ಹೂವೆ ಆದರೂ ಎಲ್ಲರ ಕಾಂಬ ಕಣ್ಣು ಎಲ್ಲರೆದೆಯ … Read more

ಚಂದಿರನ ಮೊಗದಲಿ: ಗೋಳೂರು ನಾರಾಯಣಸ್ವಾಮಿ

ಆ ಸೊಬಗು ಮತ್ತೆ ಬರುತಿದೆಬಾಳಲಿ ಸಂತೋಷ ತರುತಿದೆ ಯೌವನದ ಗುಂಡಿಗೆಯಲಿ ನೂರಾರು ಬಯಕೆ ಮೂಡಿಕಾಲು ಜಾರಿ ಬಿದ್ದು ಮೇಲೆದ್ದ ಖುಷಿ ಮರುಕಳಿಸುತಿದೆಹೂವು ಚಿಟ್ಟೆ ಅಕ್ಷರ ಹಾಡಿನ ಜಾಡು ಹಿಡಿದು ಹೊರಟ ಕನ್ನಡಿಗನ ಹೃದಯ ಹುಟ್ಟೂರಿಗೆ ಮರಳಿ ಬರುತಿದೆ ಮಲೆನಾಡಿನ ಭತ್ತದ ಗದ್ದೆಗಳನು ದಾಟಿ ಬಂದ ಜನಪದ ಹಾಡು ಕಪನಿ ಕಾವೇರಿಯಲಿ ಮಿಂದು ಪೂರ್ವ ಘಟ್ಟಗಳನು ತಲುಪಿವೆ ಬಹುಕಾಲ ಕಾದು ಕುಳಿತ ಪ್ರೇಮಿಯೊಬ್ಬನ ಹೃದಯ ಮುಟ್ಟಿವೆ ಆದಿ ಹಲವಾರ ದಿಂದ ಹೊರಟ ತಂಬೂರಿ ನಾದವು ಸರಗೂರಯ್ಯನ ಪರಿಶೆಯೊಂದಿಗೆ ಮಂಟೇದಯ್ಯನ … Read more

ಗಜಲ್: ಜಯಶ್ರೀ ಭ. ಭಂಡಾರಿ

ಗಝಲ್ 1 ಸಿಡಿಲ ನಡುವಣ ಕೋಲ್ಮಿಂಚು ಬದುಕಿಗೆ ಭರವಸೆ ಮೂಡಿಸಿತೇಕಡಲಾಳದ ಮುತ್ತು ರತ್ನಗಳು ಕೊರಳಿಗೆ ಹಾರ ತೊಡಿಸಿತೇ ಮೊದಲ ಮಳೆಯ ಮಣ್ಣಘಮ ಇನಿಯನ ನೆನಪುತರುವುದಲ್ಲವೇಕದಲದೆ ಮಗ್ಗಲು ಕೂತು ಹರಟಿದ ಸಂಭ್ರಮ ಕಾಡಿಸಿತೇ ಮೋಡಗಳ ಮರೆಯಿಂದ ಹಾರಿ ಬಂದ ಹನಿಗಳನು ವರ್ಣಿಸಲಸದಳವುಬೇಡುತ ‌ ಸಾಗಿದ ಒಲವ ಪಯಣ ದೂರ ದೂಡಿಸಿತೇ ಮಡಿಲ ಮಾತು ಅದೇಕೋ ಅಬ್ಬರವ ಕಳೆದುಕೊಂಡು ಸೋತಿದೆಸಡಿಲ ಬಂದ ಒಡಲಾಳದಿ ಬೆಂದು ಉಬ್ಬರವ ಊಡಿಸಿತೇ ಆಸೆಯ ಬೇರಿಗೆ ನೀರೆರೆದು ಹದವಾಗಿ ಹಬ್ಬಿಸಬೇಕಿದೆ ಜಯಾಬಿಸಿಯ ಚಹಾ ಹೀರುವಾಗ ಹೃದಯರಾಗ … Read more

ಅವಳ ಮ್ಯಾರಥಾನು ಓಟ: ರಶ್ಮಿ ಕಬ್ಬಗಾರು

೧ಇಗೋ ಬಿಸಿಲ ಮಾರ್ಚಿನಲ್ಲಿ ಅವಳಿಗೇಅಂತ ವಿಶೇಷ ರಂಗ ಸಜ್ಜಿಕೆ ಹಾರ ಶಾಲು ಹಣ್ಣು ಹೂವುಕೇಳಲೊಂದಿಷ್ಟು ಕಿವಿಗಳು ಸಾವಿರ ವರುಷಗಳಲೀ ಉಳಿದೇ ಹೋದ ಕಥನಗಳನ್ನಪೋಣಿಸಿ ತೊಡುವ ಪ್ರತಿಜ್ಞೆಗೈದಿದ್ದಾಳೆಹಗಲು ರಾತ್ರಿಯ ಲೆಕ್ಕವಿಡದೆ ಗಳಿಸಿದ್ದುಸೆಪರೀಟ್ ಇಡದೇಮನೆ ಮoದಿಯ ಬಿಸಿಯೂಟದಖಯಾಲಿಡದೆಮನೆಗೆ ಮಾರಿಊರಿಗುಪಕಾರಿ ಇತ್ಯಾದಿ ಇತ್ಯಾದಿಗಳಿಗೆಲ್ಲ ಸೊಪ್ಪು ಹಾಕದೇಸಾಧನೆಗಳ ಹಾದಿಯಲಿಮುಂದೆ ಮುಂದೆ ೨ಬೇಕಾದ್ದು ಮಾಡಿ ನೋಡಿ ಸಂಮಾನಸುಮ್ಮನಾಗೋಲ್ಲ ಅವಳುಸಂತ್ರಪ್ತಿ ಯೆನ್ನೊ ಮಾತೇ ಇಲ್ಲಸೀತಾ ದ್ರೌಪದಿ ತಾರಾ ಅಹಲ್ಯಾಹಳೇ ಕ್ಯಾಸೆಟ್ಟು ಮತ್ತೆ ಮತ್ತೆ ರೀ ಪ್ಲೇಮತ್ತೆ ಮತ್ತೆ ಹೊಸ ಸಂಮಾನ ಬಾಚಿಕೊಳ್ಳುತಾಳೆ ೩ದಿನ ದಿನವೂ ಒಣಗೋಗುತಿದಾಳೆವಿಮರ್ಶಕರ … Read more

ಕವಿತೆ: ದೇವರಾಜ್ ಹುಣಸಿಕಟ್ಟಿ

ಸಾಕ್ರೆಟಿಸ್ ನ ಋಣದ ಹುಂಜಮತ್ತೆ ಕೂಗುವುದಿಲ್ಲ… ಅವರು ಬರುವುದುಹೀಗೆ… ದೂರದಿ ವಿಷದಬಟ್ಟಲು ಹಿಡಿದು..ಕೊರಳಿಗೆ ಉರಳು ಹಗ್ಗವಹೊಸದು.. ಸದ್ದಿಲ್ಲದೇ …. ಕರುಳ ಕಹಾನಿಗೆಕಿವುಡು ಕುರುಡುಮೈ ತುಂಬಾ ಹೊದ್ದು…..ಚಿತ್ರ ವಿಚಿತ್ರ ಭಗ್ನಕನಸುಗಳಲಿ ಬೆಚ್ಚಿ ಬಿದ್ದು… ಕಂಸನಂತೆಯೇಕೈಗೆ ಚಿನ್ನದ ಸರಳು ತೊಡಿಸಿ..ಬೆಳಕನ್ನೇ ಕತ್ತಲೆಂದುಪರಿಭಾವಿಸಿ.. ಇತಿಹಾಸದುದ್ದಕ್ಕೂ ಅವರುಬರುವುದು ಹೀಗೆ…. ನಿಜದ ಅಸ್ತಿ ಪಂಜರಕೆಸುಳ್ಳಿನ ಮಾಂಸ ಮಜ್ಜೆಯ ತುಂಬಿ….ವೇಷ ಬದಲಿಸಿ ಮನುವಾದವ ನಂಬಿ….ಕಲ್ಯಾಣದ ಕೇಡ ಹೊತ್ತು…. ಅವರು ಬರುವುದು ಹೀಗೆ…. ಬಳಪ ಪೆನ್ನುಒಂದೊಂದನ್ನೇ ಕಸೆದು….ಕತ್ತಿ ಗುರಾಣಿ ಈಟಿ..ಚಾಕು ಬಾಕು ಗುಂಡುಗಳ…ವಿಧ ವಿಧದಲಿ ಮಸೆದು…. ಅವರು … Read more

ಬೀದಿ ದೀಪ: ಕೊಡೀಹಳ್ಳಿ ಮುರಳೀ ಮೋಹನ್

ಸಂಜೆಯಲಿ ಮರಳಿ ಮನೆಗೆ ಸಾಗುವ ಜನಕೆಲ್ಲಾ,ನಾನು ಬೆಳಕಾಗಿ ನಿಲ್ಲುವೆನು, ರಾತ್ರಿಯಿಡೀ.ಮರವಂತೆ ನಿಂತು ರಸ್ತೆಯ ಬದಿಯಲಿ ಏಕಾಂಗಿ,ನನ್ನ ಬೆಳಕಿನಲಿ ನಾ ಬೆಳಗುವೆ, ಶಾಂತವಾಗಿ. ಶಿವನು ವಿಷವನುಂಡು, ಅಮೃತವನು ನೀಡಿದಂತೆ,ವಿದ್ಯುತ್ತನುಂಡು ಬೆಳಕನಿತ್ತು, ಜನಕೆ ಹಿತವಂತೆ.ಮನದಲಿ ಶುದ್ಧತೆಯು, ಕತ್ತಲೊಡನೆ ಹೋರಾಟ,ಬೆಳಕಿನ ತ್ಯಾಗವಿದು, ಜನರಿಗಾಗಿ ಸದಾ ನೋಟ. ಭೂಮಿಯ ಕತ್ತಲಲಿ ಸೂರ್ಯನಿಲ್ಲದ ಕೊರತೆಯಲಿ,ರಾತ್ರಿಯೆಲ್ಲಾ ಎಚ್ಚರ, ಬೆಳಕನಿತ್ತು ಹರುಷದಲಿ.ತ್ಯಾಗಮೂರ್ತಿಯಂತೆ ನಿಂತು, ರಸ್ತೆಯಲಿ ಏಕಾಂಗಿ,ಬೆಳಕಿನ ಹಂಚುವಿಕೆ, ನನ್ನ ಜೀವನದ ಸಾಂಗತ್ಯ. ಶಾಲೆಯಲಿ ಶಿಕ್ಷೆಯಾದ ಬಾಲಕನಂತೆ ದಿನವೆಲ್ಲಾ,ಒಂದೇ ಕಾಲಿನಲಿ ನಿಂತು, ಕಾವಲು ಕಾಯುವೆನು ಎಲ್ಲಾ.ಜಗಕೆ ಒಳ್ಳೆಯವರ ಬಗ್ಗೆ … Read more

ಮೂರು ಕವಿತೆಗಳು: ನಾಗರಾಜ ಜಿ. ಎನ್.  ಬಾಡ

ವಾಸ್ತವ ಎಷ್ಟೇಅದುಮಿಟ್ಟರೂಕನಸುಗಳುಚಿಗುರುವುದು ಆಶೆಗಳುಗರಿ ಗೆದರುವುದುಹೂವಂತೆ ಅರಳಿಘಮ ಘಮಿಸುವುದು ಸಂಭ್ರಮಿಸುವಮೊದಲೇನಿರಾಶೆಯಕಾರ್ಮೋಡಸುಳಿಯುವುದು ಖುಷಿ ಖುಷಿಯಾಗಿದ್ದಮನವುನೋವಿಂದನರಳುವುದು ಮನಸ್ಸುಇನ್ನೆಲ್ಲೋಹೊರಳುವುದುವಾಸ್ತವದ ಅರಿವುಕಣ್ಣ ತೆರೆಸುವುದು ಖುಷಿಯ ಅಳಿಸುವುದುಕಣ್ಣೀರ ಧಾರೆಯಹರಿಸುವುದುಮನದ ತುಂಬನೋವುಗಳನ್ನುಉಳಿಸುವುದು ಬೀಸಿ ಬರುವತಂಗಾಳಿಯೂತಂಪ ನೀಡದುನೊಂದ ಮನಕೆ ಕೊನೆಯ ನಿಲ್ದಾಣ ದೂರದೂರಿನ ಈ ಪಯಣಕೊನೆಗೆ ಸೇರುವುದು ಸ್ಮಶಾನಇರುವುದು ನಾಲ್ಕಾರು ದಿವಸಇರಲಿ ಇರುವಷ್ಟು ದಿನ ಹರುಷಕಳೆದು ಹೋಗುವುದು ವರುಷನಡುವೆ ಯಾಕೆ ಸುಮ್ಮನೆ ವಿರಸಸಂಸಾರದಲ್ಲಿ ಇರಲಿ ಸರಸಅನುಭವಿಸು ನೀ ಪ್ರತಿ ದಿವಸನಿನ್ನದೆನ್ನುವುದು ಇಲ್ಲಿ ಏನಿಲ್ಲಅವನು ಆಡಿಸಿದಂತೆ ನಡೆಯುವುದೆಲ್ಲಬರಿ ಪಾತ್ರದಾರಿಗಳು ನಾವೆಲ್ಲಾಅವನೆದಿರು ಆಟ ನಡೆಯುವುದಿಲ್ಲಅವನು ಕುಣಿಸಿದಂತೆ ಕುಣಿಯಬೇಕಲ್ಲಯಾವ ಉನ್ಮಾದವೂ ಜೊತೆಯಾಗುವುದಿಲ್ಲಯಾವ ಸಂಪತ್ತು … Read more

ಮೂರು ಕವಿತೆಗಳು: ರಾಜಹಂಸ

ಅಭಿವ್ಯಕ್ತಿಗಳ ಧರ್ಮಸಂಕಟ -೧-ಉಸಿರಿನಿಂದ ರಚಿಸಿದ ಬೇಲಿಯಿಂದಮನದ ಅಭಿವ್ಯಕ್ತಿಗಳಿಗೆ ಬಂಧಿಸಿದ್ದೇನೆಸೂಕ್ಷ್ಮಕ್ರಿಮಿಗಳು ಹಾರುವಹೂದೋಟದಲಿ ಅರಳದ ಹಾಗೆ ಭೂಮಿಯ ಗುರುತ್ವಾಕರ್ಷಣೆಯಿಂದತಪ್ಪಿಸಿಕೊಳ್ಳುವಷ್ಟೇ ಕಷ್ಟವಿದ್ದರೂಬೇಲಿ ಜಿಗಿದು ಹೂಬನದಲಿ ಹೆಜ್ಜೆಇಡಲೇಬೇಕೆಂಬುವ ದಿವ್ಯ ಉತ್ಸಾಹಹೊಂದಿರುವ ಈ ಅಭಿವ್ಯಕ್ತಿಗಳಿಗೆಮನವೊಲಿಸುವಲ್ಲಿ ಪೂರ್ಣ ವೈಫಲ್ಯಬಂಧಮುಕ್ತಗೊಳಿಸಲೂ ಅಸಾಧ್ಯಚಂಚಲ ಮನಸ್ಸಿನ ಅಭಿವ್ಯಕ್ತಿಗಳಿಗೆಅನುಕ್ಷಣ ಕಾವಲು ಕಾಯುವ ತುಟಿಗಳು -೨-ಅಭಿವ್ಯಕ್ತಿ ಇಡುವ ಹೆಜ್ಜೆಗಳಿಗೆ ಧರ್ಮದಗೆಜ್ಜೆ ಕಟ್ಟಿ ರಾಜಕೀಯದ ಬಣ್ಣ ಬಳಿದುಅವಾಚ್ಯ ಶಬ್ದಗಳ ಪಲ್ಲಕ್ಕಿಯಲಿಹೂದೋಟದ ತುಂಬೆಲ್ಲ ಮೆರವಣಿಗೆಅದಕ್ಕಾಗಿಯೇ ಜನ್ಮಪಡೆದ ಅಭಿವ್ಯಕ್ತಿಗಳಕೊರಳು ಹಿಸುಕಿ ಉಸಿರು ನಿಲ್ಲಿಸುತ್ತಿದ್ದೇನೆಮರಳಿ ಸೇರುತಿವೆ ಪಂಚಭೂತಗಳ ಗೂಡಿಗೆ! -೩-ಬೆಳಕಿನ ಮೇಲೆ ಭಯದ ಗುರುತುಗಳುರೇಖಾಚಿತ್ರಗಳು ಬರೆಯಲುಬಣ್ಣ ತುಂಬುತಿವೆ ನೋವಿನ … Read more

ಮೂರು ಕವಿತೆಗಳು: ಎನ್. ಶೈಲಜಾ, ಹಾಸನ

ಕದಲಿಕೆ ನಿನ್ನದೊದು ಸಣ್ಣಸಾಂತ್ವನಕ್ಕಾಗಿಅದೆಷ್ಟು ಕಾದಿದ್ದೆನಿನಗದರ ಅರಿವಿತ್ತೇ ನನ್ನ ದಿಮ್ಮನೆ ಭಾವನೋಡಿ ಹೊರಟುಬಿಟ್ಟೆಯಲ್ಲ ದೂರ ಹೋಗುವಾಗ ಹಾಗೆನನ್ನ ಕಂಗಳದಿಟ್ಟಿಸಿದ್ದರೆಕಾಣುತ್ತಿತ್ತುನನ್ನ ಹಂಬಲಿಕೆತೆಳ್ಳನೆ ಕಣ್ಣೀರಪಸೆಯ ಆರ್ದ್ರತೆ ನಿನ್ನದೊಂದು ಕದಲಿಕೆಗೆನನ್ನೊಳಗಿನಭಾವಗಳ ಸಡಿಲಿಕೆ ಒಮ್ಮೆ ಕಣ್ಣಲ್ಲಿ ಕಣ್ಣುನೆಟ್ಟಿದ್ದರೆ ಸಾಕಿತ್ತುನೋಟ ಹೇಳುತ್ತಿತ್ತುನೀನು ಬೇಕೆಂದು ಕೇಳಿಸಿಕೊಳ್ಳುವತಾಳ್ಮೆ ಇಲ್ಲದ ನೀನುಹೇಳುವ ವಾಂಛೆಇಲ್ಲದ ನಾನುಆಹಾ ಅದೆಂತಹಜೋಡಿ ನಮ್ಮದು. ಎದೆಯ ಗೂಡಿನೊಳಗೆಬಚ್ಚಿಟ್ಟಿದ್ದೆ ಅನುರಾಗಆದರೆ ನಿನಗೆ ಕಂಡಿದ್ದುಬಿರು ವದನ ಮಾತ್ರ ಹುಡುಕುವಪ್ರಾಮಾಣಿಕತೆನಿನ್ನಲ್ಲಿದ್ದಿದ್ದರೆಜೋಡಿ ಹಕ್ಕಿಯಾಗಿಸುತ್ತಾಡ ಬಹುದಿತ್ತುಬಾನ ತುಂಬಾ ಆದರೀಗ ರೆಕ್ಕೆಮುರಿದಹಕ್ಕಿಯಂತೆನಿಂತಲ್ಲೇಸುತ್ತುತ್ತಾಚಡಪಡಿಸುವದುಸ್ಥಿತಿ * ವಿಕಾರದ ಮರಳು ಇದಿರು ಹಳಿಯುವುದುಬೇಡವೆ ಬೇಡತನ್ನ ತಾ ಬಣ್ಣಿಸಿಕೊಳ್ಳುವುದಂತುಇಲ್ಲವೆ ಇಲ್ಲಈ ಅಂತರಂಗದಬಹಿರಂಗದ … Read more

ಕಿರುಕವಿತೆಗಳು: ಚಾರುಶ್ರೀ ಕೆ ಎಸ್

ಪ್ರೀತಿ ಎಷ್ಟು ಪ್ರೀತಿ, ಎಷ್ಟ್ ಎಷ್ಟೋ ಪ್ರೀತಿ,ಸತ್ಯವೇ ಕಾಣುವ ಪ್ರೀತಿಯಾಗಿ,ನಂಬಿಕೆಯ ಅನಿವಾರ್ಯತೆ ಇಲ್ಲದ ಪ್ರೀತಿ,ಬಯಕೆಗಳ ಮೀರಿ ಇರುವ ಪ್ರೀತಿ,ಪರರ ಕಾಡದ, ಎನ್ನ ನೋಯಿಸದ,ಗೌರವದ ಶ್ರೇಣಿ ಇದು ಪ್ರೀತಿ,ಶಾಂತಿಯ ಧರಿಸಿದ ಪ್ರೀತಿ,ಬದುಕನ್ನ ಸ್ವೀಕರಿ‌ಸಿ ಅದುವೇ,ಬಯಲೆಂದು ಅರಿತ ಪ್ರೀತಿ,ಅರಿತು ಓಡುತಲಿರಲು,ಜಂಗಮನಲ್ಲವೆ ಶರಣಾಗತಿಯೆಅಧಮ್ಯ ಶಕ್ತಿಯ ಮೇಲಿನ ಪ್ರೀತಿ. * ತರಂಗ ರೂಪ ಬೆಲೆಯುಳ್ಳ ಚುಕ್ಕಿಗಳು,ಬಗೆ ಬಗೆಯ ಜೋಡಿಗಳ,ಸುಂದರ ಮಿಲನ ನಾ,ನನ್ನೀ ಗಣಿತ ಕಾರ್ಯಕ್ಕೆ,ಪ್ರಕ್ಷೇಪಣಗೆ ಜಾಗ ಉಂಟು,ಹೊರತೆಗೆಯುವಿಕೆಯು ಸಾಧ್ಯ,ಅಂಶಗಳ ಧರಿಸುವ ಭರದಲ್ಲಿ,ಸಾಗರದ ತೀರವ,ಮುಟ್ಟಿ ಬಂದಿದ್ದೇ, ಬಂದಿದ್ದು,ಪ್ರೀತಿಯ ಅಂಶಗಳ ತೊಟ್ಟ ನಂತರ,ಕತೃ, ಕರ್ಮ, ಕ್ರಿಯೆ,ಎಲ್ಲಾ … Read more

ಚಿಂಕ್ರ: ಶಿವಕುಮಾರ ಸರಗೂರು

ಚಿಂಕ್ರ ಎಲ್ಲೊದ್ನಡ ನನ್ನ ಕೂಸು ಅಂತಿದ್ದಅವ್ವನ ಬೋ ಪ್ರೀತಿ ಮಗ್ನ ಮೇಲಿತ್ತುಒಂದ್ಗಳ್ಗಾದ್ರು ಎಡ್ಬಿಡದ ಜೀವ ಅದುಅವಳ್ಗ ಇವ್ನ್ಬಿಟ್ರಾ ಇನ್ಯಾರಿದ್ದರು?ಒಂದ್ಪ್ರಾಣವಾಗಿ ಜೋಕಾಗಿದ್ರು. ಬೆಳಿ ಬೆಳಿತ ಚೂರಾದ್ರು ಕಲ್ತೊಳ್ಳಿ ಅಂತಸ್ಕೂಲ್ಗ ಸೇರುಸ್ಬುಟ್ರಾ ಸರೋಯ್ತದಇಂಕ್ರ ಬುದ್ದಿ ತಲ್ಯಾಗ ಒಕ್ಬುಟ್ಟಂದ್ರನನ್ಮಗ ಪರಪಂಚ ಗ್ಯಾನ ತಿಳ್ಕಂಡುಪಸಂದಾಗಿ ಬೆಳ್ದ್ಬುಡ್ತಾನ ಅನ್ಕೊಂಡ್ಳು. ಗೌರ್ಮೆಂಟೌವ್ರು ಏನೇಳ್ಕೊಟ್ಟಾರು?ಪ್ರವೀಟ್ಗಾದ್ರು ಹಾಕ್ಬಾರ್ದ ಮಂಕೆಅಂತೇಳ್ದ ನೆರ್ಮನೆ ಗೌರಿ ಮಾತುಬಾಳ ಹಿಡಿಸ್ಬುಡ್ತು ತಲೆಚಿಟ್ಟಿಡಿತುಸಾಲಸೋಲ ಮಾಡಿ ಸೇರ್ಸ್ಬುಡದ.! ಅವ್ನ್ಗೇನೊ ಅವರ್ರಿಂಗ್ಲೀಸು ಹಿಡೀಸ್ದು.ಗೀಚಿ ಪಾಚಿ ಕಲಿಯಾಕ್ ಸುರ್ಮಾಡ್ದ.ಯಾರೊಂದ್ಗು ಮಾತಾಡ್ನಾರ. ಸಂಕೋಚಕಲ್ತ್ರುವ ಹೇಳೋಕು ಮುಜ್ಗರ ತಪ್ಪಾದ್ದು ಅಂತ.ಆದ್ರೂ ಅವ್ರವ್ವನ ಮೆಚ್ಸಕ … Read more

ಪ್ರೇಮದ ಪರಿಭಾಷೆ: ದೇವರಾಜ್ ಹುಣಸಿಕಟ್ಟಿ

ಪ್ರೇಮದ ಪರಿಭಾಷೆ ಪ್ರೇಮದ ಪರಿಭಾಷೆ ಏನುಇಮ್ರೋಜ್ ಹೇಳಿಲ್ಲಿ…. ಇನ್ನೇನಿದೆ…ಕಂಬನಿಗೆ ತಂಗಾಳಿ ಸೋಕಿಮೋಡವಾಗಿ ಸುರಿವ ಮಳೆಯಂತೆ….. ಅಷ್ಟೇ ಅಂದನಂತೆ.. ಇಮ್ರೋಜ್ ಅಷ್ಟೇ ನಾ ಅಂದ್ರೇ…. ಇಲ್ಲಾ ಕೇಳಿಲ್ಲಿ.. ಭೂಮಿ ಭಾರ ವಿರಹದಉರಿಯ ಹೊತ್ತು..ಕ್ಷಣ ಕ್ಷಣವು ಯುಗದಂತೆ ಕಳೆದು ಭೂಮಿಗೆ ಬಿದ್ದ ಮೇಲೂ.. ಅವಳು ತಿರಸ್ಕರಿಸಿದರೆಕಂಬನಿ ಮಿಡಿಯದೆ..ಎದೆ ಭಾರ ಮಾಡಿಕೊಳ್ಳದೆ ನಗು ಮುಖವ ತೋರಿತುಟಿಯಲ್ಲಿ ಬಿಕ್ಕಳಿಕೆ ಕುಡಿದು…ಕಣ್ಣಲ್ಲಿ ಹುಸಿ ಹೊಳಪು..ಮುಡಿದು…ಕಣ್ಣ ಕಾಡಿಗೆಯಲ್ಲಿ ಮುಚ್ಚಿನಗುವ ಬಡಪಾಯಿ ಪ್ರೇಮಿಯಂತೆಅಷ್ಟೇ ಅಂದ ಅವ್ಹ ಇಮ್ರೋಜ್ ಮತ್ತೆ….ಹೆಚ್ಚೇನಿಲ್ಲ..ಭೂಮಿ ಆಗಸ ಚುಂಬಿಸುವುದಕಂಡು..ಮುಖದ ತುಂಬ ಹಾಲ್ ಬೆಳಕ ಚೆಲ್ಲಿ..ಶರಧಿಯ … Read more

ಪಂಜು ಕವಿತೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಶರಣಗೌಡ ಬಿ ಪಾಟೀಲ ತಿಳಗೂಳ ಅವರ ಕವಿತೆ

ಗುಜರಿ ಅಂಗಡಿಯ ಪುಸ್ತಕ! ಫುಟಪಾತ ಬದಿಯಗುಜರಿ ಅಂಗಡಿಯತುಕ್ಕು ಹಿಡಿದ ತಗಡು,ಗಾಳಿ ಸೋಕಿಟಪಟಪ, ಚಿರ್ ಚಿರ್ಸದ್ದು ಮಾಡಿದಾಗಮೂಲೆಯಲ್ಲಿ ಬಿದ್ದಪುಸ್ತಕವೊಂದುತಲೆ ಎತ್ತಿ ನೋಡಿತು! ಅಂಗಡಿ ಮಾಲಿಕಲೈಟಿಲ್ಲದ ಅಂಗಡಿ ತೆರೆದುಕಸಕಡ್ಡಿ ಗುಡಿಸಿ ನೀರುಸಿಂಪಡಿಸಿದನು ! ಗುಜರಿಗೆ ಬಂದಕಬ್ಬಿಣದ ಡಬ್ಬಿಯನ್ನೇಕುರ್ಚಿ ಮಾಡಿಕೊಂಡುಸುಗಂಧಿತ ವಾಸನೆಯಅಗರಬತ್ತಿ ಹಚ್ಚಿ ವ್ಯಾಪಾರ ಶುರುಮಾಡಿದ !ತೂಗುವ ತಕ್ಕಡಿಗಿಲ್ಲ ಬಿಡುವುಕಬ್ಬಿಣ, ಪ್ಲಾಸ್ಟಿಕ್, ರಟ್ಟುಪುಟ್ಟಗಳದೇ ಕಾರುಬಾರು ! ರಾಶಿ ರಾಶಿ ಸಾಮಾನುತೂಕ ದರಕ್ಕಾಗಿ ಚೌಕಾಶಿ!ಎಲ್ಲವೂ ಗಮನಿಸಿಪುಸ್ತಕ ನಕ್ಕು ಹೇಳಿತುಎಲ್ಲರೊಂದಿಗೆ ತೂಗಬೇಡಿನಮ್ಮ ಮೌಲ್ಯ ಅರಿತುಕೊಳ್ಳಿ. !! –ಶರಣಗೌಡ ಬಿ ಪಾಟೀಲ ತಿಳಗೂಳ ಶರಣಗೌಡ ಬಿ … Read more