ಚಿಂಕ್ರ: ಶಿವಕುಮಾರ ಸರಗೂರು

ಚಿಂಕ್ರ ಎಲ್ಲೊದ್ನಡ ನನ್ನ ಕೂಸು ಅಂತಿದ್ದಅವ್ವನ ಬೋ ಪ್ರೀತಿ ಮಗ್ನ ಮೇಲಿತ್ತುಒಂದ್ಗಳ್ಗಾದ್ರು ಎಡ್ಬಿಡದ ಜೀವ ಅದುಅವಳ್ಗ ಇವ್ನ್ಬಿಟ್ರಾ ಇನ್ಯಾರಿದ್ದರು?ಒಂದ್ಪ್ರಾಣವಾಗಿ ಜೋಕಾಗಿದ್ರು. ಬೆಳಿ ಬೆಳಿತ ಚೂರಾದ್ರು ಕಲ್ತೊಳ್ಳಿ ಅಂತಸ್ಕೂಲ್ಗ ಸೇರುಸ್ಬುಟ್ರಾ ಸರೋಯ್ತದಇಂಕ್ರ ಬುದ್ದಿ ತಲ್ಯಾಗ ಒಕ್ಬುಟ್ಟಂದ್ರನನ್ಮಗ ಪರಪಂಚ ಗ್ಯಾನ ತಿಳ್ಕಂಡುಪಸಂದಾಗಿ ಬೆಳ್ದ್ಬುಡ್ತಾನ ಅನ್ಕೊಂಡ್ಳು. ಗೌರ್ಮೆಂಟೌವ್ರು ಏನೇಳ್ಕೊಟ್ಟಾರು?ಪ್ರವೀಟ್ಗಾದ್ರು ಹಾಕ್ಬಾರ್ದ ಮಂಕೆಅಂತೇಳ್ದ ನೆರ್ಮನೆ ಗೌರಿ ಮಾತುಬಾಳ ಹಿಡಿಸ್ಬುಡ್ತು ತಲೆಚಿಟ್ಟಿಡಿತುಸಾಲಸೋಲ ಮಾಡಿ ಸೇರ್ಸ್ಬುಡದ.! ಅವ್ನ್ಗೇನೊ ಅವರ್ರಿಂಗ್ಲೀಸು ಹಿಡೀಸ್ದು.ಗೀಚಿ ಪಾಚಿ ಕಲಿಯಾಕ್ ಸುರ್ಮಾಡ್ದ.ಯಾರೊಂದ್ಗು ಮಾತಾಡ್ನಾರ. ಸಂಕೋಚಕಲ್ತ್ರುವ ಹೇಳೋಕು ಮುಜ್ಗರ ತಪ್ಪಾದ್ದು ಅಂತ.ಆದ್ರೂ ಅವ್ರವ್ವನ ಮೆಚ್ಸಕ … Read more

ಪ್ರೇಮದ ಪರಿಭಾಷೆ: ದೇವರಾಜ್ ಹುಣಸಿಕಟ್ಟಿ

ಪ್ರೇಮದ ಪರಿಭಾಷೆ ಪ್ರೇಮದ ಪರಿಭಾಷೆ ಏನುಇಮ್ರೋಜ್ ಹೇಳಿಲ್ಲಿ…. ಇನ್ನೇನಿದೆ…ಕಂಬನಿಗೆ ತಂಗಾಳಿ ಸೋಕಿಮೋಡವಾಗಿ ಸುರಿವ ಮಳೆಯಂತೆ….. ಅಷ್ಟೇ ಅಂದನಂತೆ.. ಇಮ್ರೋಜ್ ಅಷ್ಟೇ ನಾ ಅಂದ್ರೇ…. ಇಲ್ಲಾ ಕೇಳಿಲ್ಲಿ.. ಭೂಮಿ ಭಾರ ವಿರಹದಉರಿಯ ಹೊತ್ತು..ಕ್ಷಣ ಕ್ಷಣವು ಯುಗದಂತೆ ಕಳೆದು ಭೂಮಿಗೆ ಬಿದ್ದ ಮೇಲೂ.. ಅವಳು ತಿರಸ್ಕರಿಸಿದರೆಕಂಬನಿ ಮಿಡಿಯದೆ..ಎದೆ ಭಾರ ಮಾಡಿಕೊಳ್ಳದೆ ನಗು ಮುಖವ ತೋರಿತುಟಿಯಲ್ಲಿ ಬಿಕ್ಕಳಿಕೆ ಕುಡಿದು…ಕಣ್ಣಲ್ಲಿ ಹುಸಿ ಹೊಳಪು..ಮುಡಿದು…ಕಣ್ಣ ಕಾಡಿಗೆಯಲ್ಲಿ ಮುಚ್ಚಿನಗುವ ಬಡಪಾಯಿ ಪ್ರೇಮಿಯಂತೆಅಷ್ಟೇ ಅಂದ ಅವ್ಹ ಇಮ್ರೋಜ್ ಮತ್ತೆ….ಹೆಚ್ಚೇನಿಲ್ಲ..ಭೂಮಿ ಆಗಸ ಚುಂಬಿಸುವುದಕಂಡು..ಮುಖದ ತುಂಬ ಹಾಲ್ ಬೆಳಕ ಚೆಲ್ಲಿ..ಶರಧಿಯ … Read more

ಪಂಜು ಕವಿತೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಶರಣಗೌಡ ಬಿ ಪಾಟೀಲ ತಿಳಗೂಳ ಅವರ ಕವಿತೆ

ಗುಜರಿ ಅಂಗಡಿಯ ಪುಸ್ತಕ! ಫುಟಪಾತ ಬದಿಯಗುಜರಿ ಅಂಗಡಿಯತುಕ್ಕು ಹಿಡಿದ ತಗಡು,ಗಾಳಿ ಸೋಕಿಟಪಟಪ, ಚಿರ್ ಚಿರ್ಸದ್ದು ಮಾಡಿದಾಗಮೂಲೆಯಲ್ಲಿ ಬಿದ್ದಪುಸ್ತಕವೊಂದುತಲೆ ಎತ್ತಿ ನೋಡಿತು! ಅಂಗಡಿ ಮಾಲಿಕಲೈಟಿಲ್ಲದ ಅಂಗಡಿ ತೆರೆದುಕಸಕಡ್ಡಿ ಗುಡಿಸಿ ನೀರುಸಿಂಪಡಿಸಿದನು ! ಗುಜರಿಗೆ ಬಂದಕಬ್ಬಿಣದ ಡಬ್ಬಿಯನ್ನೇಕುರ್ಚಿ ಮಾಡಿಕೊಂಡುಸುಗಂಧಿತ ವಾಸನೆಯಅಗರಬತ್ತಿ ಹಚ್ಚಿ ವ್ಯಾಪಾರ ಶುರುಮಾಡಿದ !ತೂಗುವ ತಕ್ಕಡಿಗಿಲ್ಲ ಬಿಡುವುಕಬ್ಬಿಣ, ಪ್ಲಾಸ್ಟಿಕ್, ರಟ್ಟುಪುಟ್ಟಗಳದೇ ಕಾರುಬಾರು ! ರಾಶಿ ರಾಶಿ ಸಾಮಾನುತೂಕ ದರಕ್ಕಾಗಿ ಚೌಕಾಶಿ!ಎಲ್ಲವೂ ಗಮನಿಸಿಪುಸ್ತಕ ನಕ್ಕು ಹೇಳಿತುಎಲ್ಲರೊಂದಿಗೆ ತೂಗಬೇಡಿನಮ್ಮ ಮೌಲ್ಯ ಅರಿತುಕೊಳ್ಳಿ. !! –ಶರಣಗೌಡ ಬಿ ಪಾಟೀಲ ತಿಳಗೂಳ ಶರಣಗೌಡ ಬಿ … Read more

ಪಂಜು ಕವಿತೆ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದ ಲಿಂಗರಾಜು ಕೆ. ಅವರ ಕವಿತೆ

ಮಾರ ನವಮಿ ಬನ್ನಿ ಬನ್ನಿಹೀಗಿದ್ದರೂ ಎಂಬ ಕಲ್ಪನೆಗೂಸಿಗದತಾತ, ಮುತ್ತಾತ, ಅಜ್ಜಿ, ಮುತ್ತಜ್ಜಿಮಾರನವಮಿಯಂದು ಮೂಡಿಕೈಗೇ ಸಿಗುವವರಿದ್ದಾರೆ ಎಡೆಗಿಟ್ಟ ಚಕ್ಕುಲಿ, ನಿಪ್ಪಟ್ಟು,ಪುರಿ, ಸ್ವೀಟು ಮೆಲ್ಲಿಟವಲ್ಲು, ಸೀರೆ, ರವಿಕೆ ಪೀಸುಗಳಹೊದ್ದಿಲೋಟದೊಳಗಿನ ಸರಾಪು ಕುಡಿದುಹದವಾಗಿ ಬೆಂದ ಬಾಡಬಾರಿಸಲುಆ ‘ಹೆಂಡಗಂಡ’ರುಮಾರ ನವಮಿ ದಿನಮೂಡಿ ಬಂದೇ ಬರುತ್ತಾರೆಬನ್ನಿ ಬನ್ನಿ ಬೇಗ ಬನ್ನಿ… ಎಡೆಗಿಟ್ಟ ಎಣ್ಣೆ ಅರ್ಧಕುಡಿದು ಮಾಯವಾಗುವ ಮುನ್ನರಕ್ತ ಮಾಂಸಗಳ ಕಿತ್ತುಬರೀ ಮೂಳೆಗಳನೇ ಬಿಟ್ಟ್ಹೋಡುವ ಮುನ್ನ,ಊರಗುಡಿಯೊಳಗೋಗದೆಯೂಸ್ವರ್ಗವನ್ನೇ ಪಡೆದ ಕಾರಣ,ಊರಿಂದಿನ ಗುಟ್ಟೆಯಿಂದಿಡಿದುಪಟೇಲರ ತೋಟದವರೆಗಿನಹೊಲವನ್ನು ‘ಹಟ್ಟೆರಸಿಗೆ’ಎಂದು ಈಗಲೂಕರೆಯುವ ಕಾರಣಗಳನುಅವರ ಬಾಯಿಂದಲೇಕೇಳೋಣ ಬನ್ನಿ… ಬನ್ನಿ ಬನ್ನಿ ಬೇಗ ಬನ್ನಿಹೆಬ್ಬೆಟ್ಟೊತ್ತಿ, ಆಣೆ … Read more

ಪಂಜು ಕವಿತೆ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ಪ್ರಶಾಂತ್ ಬೆಳತೂರು ಅವರ ಕವಿತೆ

ಅಷ್ಟಾವಂಕನ ಸ್ವಗತ ಒಮ್ಮೊಮ್ಮೆಸಮುದ್ರವು ಮೇರೆ ಮೀರುತ್ತದೆತಪ್ಪೇನಿಲ್ಲ.. !ಒಳಗಿನ ಕುದಿ ಹೆಚ್ಚಾದಾಗಹಿಟ್ಟಿನಿಂದ ಮಾಡಿದಕೋಳಿ ಕೂಡಬೆಂತರದಂತೆ ಅರುಚುತ್ತದೆ.. !ನಾನೋಕುರೂಪಿ ಅಷ್ಟಾವಂಕಮೈಯ ಗಾಯಗಳುಕೀವು ತುಂಬಿ ಸೋರುವಾಗಬಾಧೆ ತಾಳಲಾರದೆನಡು ಹಗಲಿಗೆ ನಗ್ನಗೊಂಡವನು.. ! ದಾಟಲಾರೆನುಅರಸು ಮಹಾಶಯರಂತೆಗೊಡ್ಡು ಇತಿಹಾಸದ ಹೆಗಲೇರಿಗೊತ್ತು ಗುರಿಯಿಲ್ಲದೆನಿರ್ಜೀವ ಸರಕಿನಂತೆವಿನಾಕಾರಣ ಸಾಗಲಾರೆಪ್ರೇಮಕಾಮವಿರದಸತ್ವಹೀನ ಮುಂದಿನಒಣ ಜನ್ಮಾಂತರಗಳಿಗೆ.. ! ಆಗಾಗಿಯೇಒಳ ಹೊರಗಿನ ಹಂಗಿಲ್ಲದೆನೋವು ಕಾವುಗಳ ನುಡಿಸುತ್ತೇನೆಅವಳಿಗಾಗಿ ಹಾಡುತ್ತೇನೆಸಿಗಲಾರಳು ಅಷ್ಟು ಸುಲಭಕೆಮೈಮನಗಳ ಮರೆಸುವ ವಿಷಕನ್ಯೆಆದರೂ ಮಾವಟಿಗ ನಾನುಪಳಗಿಸುವುದರಲ್ಲಿ ನಿಸ್ಸೀಮ.. ! ಅವಳರಮನೆಯ ಅಂತಃಪುರದಲ್ಲಿಬಣ್ಣಹೀನವಾದನಟ್ಟಿರುಳಗಳ ಏಕಾಂತಕ್ಕೆಪ್ರೇಮರಾಗವಿಡಿದು ಮೀಟುತ್ತೇನೆಹೃದಯದ ಕದ ತಟ್ಟುವರಮ್ಯತೆಯ ಸಂಗೀತ ಸ್ಪರ್ಶಗಳಲ್ಲಿಸಪ್ತಸ್ವರಗಳೆದ್ದು ನರ್ತಿಸಿಅವಳ ತುಂಬು ಅಂಗಾಂಗಳನ್ನುಬಾಧಿಸುವಾಗವೇದನೆಯ … Read more

ಪಂಜು ಕವಿತೆ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಸವಿರಾಜ್ ಆನಂದೂರು ಅವರ ಕವಿತೆ

ಏಸುವಿನ ಬೊಂಬೆ ಕಳೆದ ವರ್ಷದ ಜಾತ್ರೆಯಲ್ಲಿ ಮಗಳಿಗೊಂದು ಕ್ರಿಸ್ತನ ಬೊಂಬೆ ಕೊಡಿಸಿದ್ದೆ ಮಕ್ಕಳ ಮುತುವರ್ಜಿ ನಿಮಗೇ ಗೊತ್ತಲ್ಲತಿಂಗಳು ಕಳೆಯಲಿಲ್ಲ, ಕ್ರಿಸ್ತನ ಶಿಲುಬೆ ಮುರಿಯಿತುಅರ್ಧ ದಿನ ಅತ್ತಳು, ಮತ್ತೆಬುದ್ಧನ ಬೊಂಬೆಯ ಬೋಧಿಮರ ಮುರಿದುಏಸುವಿನ ಬೆನ್ನಿಗೆ ಮೆತ್ತಿದಳು. ಮರುವಾರ ಕ್ರಿಸ್ತನ ಕಾಲಿಗೆ ಜಡಿದಿದ್ದ ಮೊಳೆಗಳು ಸಡಿಲವಾದವುಮಾಡ್ತೀನಿ ಇದ್ಕೆ ಅಂದವಳೇ ವಿವೇಕಾನಂದರ ಕ್ಯಾಲೆಂಡರಿನಮೊಳೆ ಕಿತ್ತು ಕ್ರಿಸ್ತನ ಕಾಲಿಗೆ ಕೂಡಿಸಿದಳು. ಇನ್ನೊಮ್ಮೆ ಬೊಂಬೆಯ ತುಂಡುಬಟ್ಟೆ ಹರಿಯಿತುಅರೆರೇ! ಗಾಂಧಿತಾತನ ಲಂಗೋಟಿ ಹರಿದುಏಸುವಿನ ಮಾನ ಮುಚ್ಚಿದಳು. ಈಗ ಷೋಕೇಸಿನ ಒಂದೊಂದು ಬೊಂಬೆಯಒಂದೊಂದು ಅಂಗ ಮುರಿದಿದ್ದಾಳೆಎಲ್ಲವೂ ಏಸುವಿನ … Read more

ಪಂಜು ಕವಿತೆ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕವಿತೆ

ಕೊಳಲ ಹಿಡಿದ ಕೃಷ್ಣ…. ಅಮ್ಮ ಮೆಕ್ಕೆಜೋಳದ ಸೆಪ್ಪೆತೊಗರಿ ಕುಳೆಎಳ್ಳು ಕಡ್ಡಿ ಆರಿಸಿ ಸಿಂಬೆ ಇಲ್ಲದ ತಲೆ ಮೇಲೆಹೊತ್ತು ತರುವಾಗೆಲ್ಲಾಅಮ್ಮ ಮತ್ತು ರೊಟ್ಟಿ ಕಣ್ಣೆದುರಿನ ಸೂರ್ಯ ರೊಟ್ಟಿ ಕೊಟ್ರೆ ಕುದಿಗೆಸಿಲವಾರದ ಪಾತ್ರೆಯಿಟ್ಟುನಾ ತಂದ ಬೀಳು ಹೊಲದಸಂಜೀವಿನಿ ಕಡ್ಡಿಗಳು ಒಲೆಗಿಕ್ಕಿ ಅಮ್ಮಊದುವಾಗ ಮರೆತ ಮಗ್ಗಿ ಬಾಯಿಗೆ ಬಂದಷ್ಟೇ ಖುಷಿ ತೆಳು ಕಬ್ಬಿಣದ ಕೊಳವೆ ಅದು,ಅಮ್ಮನ ತುಟಿ ತಾಗಿಎದೆಯ ಒಲವೆಲ್ಲಾ ಒಟ್ಟು ಹಾಕಿ ಊದುತ್ತಿದ್ದರೆಒಲೆ ತುಂಬಾ ಬೆಳಕು ; ಅಮ್ಮ ಥೇಟ್ ಕೊಳಲ ಹಿಡಿದ ಕೃಷ್ಣ ಅಮ್ಮನ ಮನಸ ಬಿಳಿಜ್ವಾಳದ ಹಿಟ್ಟಿಗೆ … Read more

ಪಂಜು ಕವಿತೆ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ನಳಿನ ಬಾಲು ಅವರ ಕವಿತೆ

ಕೆಂಪು ಕೆಂಪಾದ ಆ ದಿನ ಮರೆಯಲಾರೆನು ಇನ್ನೂಹಚ್ಚ ಹಸಿರಾಗಿದೆ ಅದರ ನೆನಪು.ಅಯ್ಯೋ ಮನೆಯೆಲ್ಲ ಮೈಲಿಗೆಯಾಯಿತು,ಶಾಲೆಯಿಂದ ಬಂದವಳಿಗೆ ಹಿರಿಯರ ವಟವಟ. ಅರ್ಥವಾಗದೆ ನೋಡಿದೆ ಅಮ್ಮನ ಮುಖವ,ಓಡಿ ಬಂದು ತಬ್ಬಿದಳು ಅರಿವು ಮೂಡಿಸುತ.ಮುಂಜಾನೆಯ ಮೂಡಣದ ದಿನಕರ ಕೆಂಪಾಗುವನಲ್ಲ ಅವನಿಗೂ ಉಂಟೆ ಮೈಲಿಗೆಯ ತಟವಟ? ಅಯ್ಯೋ ಅದನ್ನು ಯಾಕೆ ಮುಟ್ಟಿಸಿಕೊಂಡ್ಯೇ..ದೊಡ್ಡವಳವಳು ನಿಭಾಯಿಸಲಿ ಬಿಡು,ಅಜ್ಜಿಯ ಆಜ್ಞೆಯಂತಹ ಸಲಹೆ,ಅಮ್ಮನ ಕಣ್ಣಲ್ಲಿ ಕಂಡೂ ಕಾಣದಂತಹ ಹತಾಶೆ. ನನ್ನಣ್ಣ ಒಂದು ವರ್ಷ ಹಿರಿಯ,ಅವ ಚಿಕ್ಕವನಂತೆ, ಅದು ಹೇಗೆನಾನು ಮಾತ್ರ ದೊಡ್ಡವಳಾದೆ? ಯಾರನ್ನು ಪ್ರಶ್ನಿಸಲಿ?ಅಮ್ಮನ ತುಂಬಿದ ಕಂಗಳ ಕಂಡು … Read more

ಪಂಜು ಕವಿತೆ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅವರ ಕವಿತೆ

ದೀಪ ಹಚ್ಚಲು ಕತ್ತಲಾಗಲೇ ಬೇಕುವಸಂತ ಋತುವಿನ ವಿಷುವತ್ ಸಂಕ್ರಾಂತಿಇದುವೇ ಬೆಳಕಿನ ಹಬ್ಬ ಈಸ್ಟರ್ಸಂತ ಯೇಸುವಿನ ಪುನರುತ್ಥಾನದ ಸಂಭ್ರಮ. ದಾಸ್ಯತ್ವದ ಸಂಕೋಲೆಯಿಂದದೀನದಲಿತ ದುರ್ಬಲರನ್ನುಮುಕ್ತಗೊಳಿಸಲು ಓ ಮಹಾಸಂತನೆನೀನು ಏರಿದ್ದು ಅಧಿಕದ ಸಾವಿನ ಶೂಲ. ಅಂದು ಸಾವಿನ ಸೋಲಿನ ದಿನಕೆಂಡದ ಪಾತ್ರೆಯ ಜ್ವಾಲೆಯಲಿಹಚ್ಚಿಟ್ಟ ದೀಪ ನಿನ್ನ ಪ್ರೀತಿ, ದಯೆ,ಕರುಣೆಯಾಗಿ ಸದಾ ಬೆಳಗುತ್ತಿದೆ. ಕೇವಲ 30 ಬೆಳ್ಳಿ ನಾಣ್ಯಗಳ ಆಶೆಯಿಂದನಿನ್ನ ಪರಮ ಶಿಷ್ಯ ಯೂದನು ಮಾಡಿದಗುರು ದ್ರೋಹಕ್ಕೆ ಕೋಡಿಯಾಗಿಹರಿದುದು ರಕ್ತ ಕಣ್ಣೀರು. ನಿನ್ನ ಕೊನೆಯ ಔತಣಕೂಟದವಿಷದ ಬಟ್ಟಲವು ಕೂಡ ತುಂಬಿದ್ದುಪವಿತ್ರ ದೇಹದ ರಕ್ತ, … Read more

ಪಂಜು ಕವಿತೆ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಮಧು ಕಾರಗಿ ಅವರ ಕವಿತೆ

ವ್ಯಾಖ್ಯಾನ! ಹಬೆಯೇಳುವ ಕಾಫಿಯನ್ನುಸುರಿದುಕೊಂಡು ಬಟ್ಟಲಿಗೆ ಮುತ್ತಿಡುತ್ತಾರೆದೃಷ್ಟಿಯನ್ನು ಕಣ್ಣಿಂದ ಕಣ್ಣಿಗೆ ನೆಟ್ಟುಈ ಏಕಾಂತದ ಸಂಜೆಗಳುಮತ್ತಷ್ಟು ಸುಂದರಗೊಳ್ಳುವುದೇ ಆಗ ! ಮಾತುಗಳು ಬೇಕಾಗಿಲ್ಲ ಅವರಿಗೆಬೇಕಂತಲೇ ಬಿಟ್ಟಿರುವಾಗಮತ್ತುಕಣ್ಣ ಸನ್ನೆಗಳೊಂದಿಗೆ ಶಬುಧಗಳಾಗುವಅಸಂಖ್ಯಾತ ಮಾತುಗಳನ್ನುಪ್ರೇಮಿಯಲ್ಲದೆಜಗದ ಯಾವ ಗೋಡೆಯೂಕೇಳಿಸಿಕೊಳ್ಳಲಾಗುವುದಿಲ್ಲ! ಒಂದು ಹಿತವಾದ ಸ್ಪರ್ಶಸರ್ವಕಾಲಕ್ಕೂ ಮಡಿಲಾಗುವ ಹೆಗಲುಎದೆಯ ಮೇಲೆ ಕಿವಿಯಿಟ್ಟರೆತನ್ನದೇ ಹೆಸರನ್ನು ಪಿಸುಗುಡುವಪ್ರಾಮಾಣಿಕ ಹೃದಯಜೀವನವನ್ನು ನಿಶ್ಚಿಂತೆಯಿಂದ ಜೀವಿಸಲುನನಗಿಷ್ಟು ಸಾಕೆಂದುಪ್ರೇಮಿಯೊಬ್ಬ ನಿರ್ಧರಿಸಿದ ಆ ಘಳಿಗೆಗೆದೇವಾನುದೇವತೆಗಳು ಅನುಗ್ರಹಿಸುತ್ತಾರೋ ಇಲ್ಲವೋ ಗೊತ್ತಿಲ್ಲ ! ಆದರೆ,ಅರ್ಧಕುಡಿದು ಬದಲಾಯಿಸಿಕೊಂಡಕಾಪಿ ಬಟ್ಟಲುಗಳು…ಅವಳು ಹಚ್ಚಲೆಂದೇ ಮೈಮೇಲಿನಶರಟಿನಿಂದ ಕಿತ್ತುಕೊಂಡ ಗುಂಡಿಗಳು..ಕಣ್ಣಿಗೆ ಕಸ ಬಿದ್ದ ಸುಂದರ ಸುಳ್ಳುಉಫ್ ಎಂದು ಊದುವ … Read more

ಮೂರು ಕವಿತೆಗಳು: ಮಂಜುನಾಥ ಚಿನಕುಂಟಿ

ವಿಷಾದ ದುಡಿಯುವುದಕ್ಕೆ ನೂರಾರು ದಾರಿಆಯ್ಕೆ ಯಾರದ್ದು ನಮ್ಮದಇಲ್ಲ ನಮ್ಮ ಓದಿನದ್ದ ಈಗಲೂಗೊಂದಲವಿದೆ ಯಾರನ್ನ ಕೇಳಲಿಕೇಳಿದರೆ ತಿಳಿದರು ಕೇಳಿದೆಎಂಬುವ ವಿಷಾದ ಕುಳಿತಲ್ಲಿ ಕುಳಿತು ಗಣಕಯಂತ್ರವನ್ನುಕುಟ್ಟುತ್ತ ನನ್ನನ್ನ ನಾನು ಮರೆತಿದ್ದೆಕೆಲಸ ಮುಖ್ಯವ ನೆಮ್ಮದಿ ಮುಖ್ಯವಮತ್ತೊಂದು ಪ್ರೆಶ್ನೆ ನಿದ್ದೆಯೆ ನನ್ನಮನಸನ್ನ ಕೇಳಿತು ಅದಕ್ಕೂಉತ್ತರಿಸುವುದಕ್ಕೂ ವಿಷಾದ ಬರಿ ದೂರುಗಳೇ ಅವರ ಮೇಲೆಇವರು ಇವರ ಮೇಲೆ ಅವರು ಯಾರದ್ದು ಸರಿದೂರು ಕೊಟ್ಟಿದ್ದಅದಕ್ಕೆ ತಕ್ಕ ಹಾಗೆಕಾರಣಗಳು ಹೇಳಿದ್ದ ಇದಕ್ಕೂ ತೆಲೆಕೆಡುವ ಗುದ್ದಾಟಗಳು ಟಾರ್ಗೆಟ್ ಎಂಬ ಕೊಂಡಿಗೆ ನೇತುಬಿದ್ದು ತೂಗಾಡುತ್ತಿದ್ದೇವೆಅದೂ ಎಲ್ಲರಿಗೂ ತಿಳಿದಿದೆಅದಕ್ಕೆ ಕಾರಣ ಹಣವೆಂಬಪೆಡಂಭೂತಆಗೆ ನೋಡಿದರೆ … Read more

ಮೂವರ ಕವಿತೆಗಳು: ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಕಲ್ಲು ಒಂದುಕಲ್ಲುಒಂಟಿಯಾಗಿ ಬಿದ್ದಿತ್ತುನೆಲದ ಮೇಲೆಮಳೆ ಬಿಸಿಲು ಚಳಿಎಲ್ಲವನ್ನೂಕಂಡಿದ್ದಅದರಅಂತರಂಗದಲ್ಲಿದ್ದಬುದ್ಧಿವಂತಿಕೆಯಅರಿವುಯಾರಿಗೂಇರಲಿಲ್ಲ ಹಿಂದೆನಡೆದದ್ದೆಲ್ಲಕ್ಕೂಸಾಕ್ಷಿಯಾಗಿತ್ತು ಆ ಕಲ್ಲುಭೂಮಿ ಹುಟ್ಟಿದ್ದನ್ನುಅದುಕಂಡಿತ್ತುಬೆತ್ತಲೆಯಾಗಿ ಹುಟ್ಟಿದಮನುಷ್ಯಜಾತಿಧರ್ಮಭಾಷೆ ದೇಶಗಳೆಂಬಕವಲು ಕವಲುಗಳಲ್ಲಿದಿಕ್ಕಾಪಾಲಾಗಿ ಚಲಿಸಿಕಾಮ ಕ್ರೋಧಮದ ಮತ್ಸರಗಳನ್ನುಎದೆಯೊಳಗೆ ತುಂಬಿಕೊಂಡಬಗೆ ಅದಕ್ಕೆ ತಿಳಿದಿತ್ತುಸಾಮ್ರಾಜ್ಯಗಳುಉದಯವಾದದ್ದನ್ನುಪತನಗೊಂಡದ್ದನ್ನುಅದು ನೋಡಿತ್ತು ಹೊಮ್ಮಿದ ನಗುಚಿಮ್ಮಿದಕಣ್ಣೀರುಎಲ್ಲದರ ಲೆಕ್ಕವೂಅದರ ಬಳಿಯಿತ್ತು ಆದರೆಕಲ್ಲಿಗೆಬಾಯಿ ಇರಲಿಲ್ಲಕಂಡದ್ದನ್ನು ಹೇಳುವುದಕ್ಕಾಗದಸಹಜತೆಯೇದುರ್ಬಲತೆಯಾಗಿಅದನ್ನು ತೆಪ್ಪಗಾಗಿಸಿತ್ತುಏನೂ ತಿಳಿಯದಪಾಮರನಂತೆಬಿದ್ದುಕೊಂಡಿತ್ತುನೆಲವನ್ನಪ್ಪಿಕೊಂಡು ಹೀಗಿರುವಾಗಲೇಬೊಬ್ಬೆ ಹೊಡೆಯುತ್ತಾಬಂದಗುಂಪೊಂದುಎತ್ತಿಅದನ್ನುಬೀಸಿದರು ಎದುರು ದಿಕ್ಕಿಗೆಹಣೆಯೊಂದರಲ್ಲಿಚಿಮ್ಮಿದರಕ್ತಇದರ ಮೈಮೇಲೂ ಹರಿಯಿತುಬಡಿಯಿರಿ! ಕೊಲ್ಲಿ!ಕೇಳಿಬರುತ್ತಿದ್ದ ಬೊಬ್ಬೆಗೆವಿರಾಮವೇಇರಲಿಲ್ಲ ಕಲ್ಲು ಸಾಕ್ಷಿಯಾಗತೊಡಗಿತು ಈಗಹೊಸತೊಂದು ವಿದ್ಯಮಾನಕ್ಕೆತಾನು ಬಯಸದ ವಿದ್ಯಮಾನಕ್ಕೆ ಮರದಿಂದ ಮೂರ್ತಗೊಂಡದೇವರಿಗೆ… ನೀನೇ ರೂಪಿಸಿದ ಮಳೆನೀನೇ ಸೃಜಿಸಿದ ಚಳಿಗಾಳಿಸೋಕದಂತೆ ನಿನ್ನರಕ್ಷಿಸುವ ಭಾರ ನಮ್ಮದುನಮ್ಮೊಳಗಿನ ಭಕ್ತಿಭಾವಹೊದಿಕೆಯಾಗಿ ಆವರಿಸಿದೆಒಂದಷ್ಟು … Read more

ಪಂಜು ಕಾವ್ಯಧಾರೆ

ಧರಣಿಆಕಾಶ ನೋಡಿ ಮಳೆಯಾಗಲ್ಲಿಲ್ಲಎಂದು ಮುನಿಸಿಕೊಂಡರೇನುಪ್ರಯೋಜನ, ಮರ ಕಡಿದವನುನೀನಲ್ಲವೇ ಬತ್ತಿ ಹೋದ ಕೆರೆಯ ನೋಡಿಕಣ್ಣೀರು ಹಾಕಿದರೇನುಪ್ರಯೋಜನ, ಎರಡು ಹನಿಯಿಂದಬೊಗಸೆಯೂ ತುಂಬುವುದಿಲ್ಲ ಬಿರುಕು ಬಿಟ್ಟಿದೆ ಎಂದುಬೊಬ್ಬೆಹೊಡೆದರೇನುಪ್ರಯೋಜನ, ಬೆಂದ ಭೂಮಿಯುಎಷ್ಟು ನೊಂದಿರಬೇಕು ನೀರು, ಗಾಳಿಯನ್ನೆಲ್ಲಾಕಲುಷಿತ ಮಾಡಿಯಾಗಿದೆ,ಹಾಳು ಮಾಡಲು ಇನ್ನೇನುಉಳಿದಿದೆ ಮುಗಿಲು ಮುಟ್ಟುತ್ತಿದ್ದ ಬೆಟ್ಟಗಳನ್ನುಕೆಡವಿದ್ದಾಗಿದೆ, ದೊಡ್ಡ ಕಟ್ಟಡಗಳುಈಗಾಗಲೇ ಅವುಗಳನ್ನುಮುತ್ತಿಡುತ್ತಿದೆ. ಗುಬ್ಬಿಗಳ ಚಿಲಿಪಿಲಿಯರಿಂಗಣ ನಿಂತುಹೋಗಿದೆಆಧುನಿಕ ಜಂಗಮವಾಣಿಯತರಂಗಗಳಿಗೆ ಜಗವೇ ತ್ಯಾಜ್ಯ ಬಂಡಿಯಂತೆಗೋಚರಿಸುತ್ತಿದೆ,ಪ್ರಕೃತಿಯ ವಿಕೋಪಶುದ್ದಿಗೊಳಿಸಿ ಕಾಯುತ್ತಿದೆ. ತಾಯಿ ಧರಣಿಯ ಧಗೆಮಗುವಿಗೆ ನಷ್ಟಹೊರತು ತಾಯಿಗಲ್ಲಶುದ್ದಿಯಾಗಬೇಕಿದೆಮನುಷ್ಯನ ಅಂತರಂಗ. –ಅಜಿತ್ ಕೌಂಡಿನ್ಯ ನೆನಪುಗಳು ಈಗೀಗನೀರವರಾತ್ರಿಗಳುಬಿಕ್ಕುತ್ತಿವೆ,ನಿನ್ನನೆನಪುಗಳಂತೆ.ಕಣ್ಣೀರುಸಹ. ಎದೆಯಹೊಲಿದಹೊಲಿಗೆಗಳೂ,ನೀನೆಂಬನೆನಪುಗಳಗಾಯವಮಾಗಲುಬಿಡುತ್ತಿಲ್ಲ. ನಿನ್ನನೆನಪುಗಳೆಂಬಮಾರ್ಜಾಲಕಾಡಿಕೊಲ್ಲುತ್ತಿರಲು,ನಿನದೆಲ್ಲೊಖಿಲ್ಲನೆನಗುತಿರುವೆಯಲ್ಲ. ನನ್ನಕಣ್ಣ ಹಣತೆನಿನ್ನ ನೆನಪುಗಳೆಂಬತೈಲದಿಇನ್ನೆಷ್ಟು … Read more

ಮೂರು ಕವನಗಳು: ಇಂದು ಶ್ರೀನಿವಾಸ್

ಸಣ್ಣ ಭರವಸೆಗಳು ಸಾಕಲ್ಲವೇ ಬದುಕಿಗೆ… ..1..ಕೆಟ್ಟ ಆಲೋಚನೆಗಳೆಲ್ಲ ಜರ್ರನೆವಿಷದಂತೆದೇಹವೇರಿ ಕುಸಿದು ಬೀಳುವ ಮುನ್ನ..ಸಣ್ಣ ದೊಂದು ಪ್ರೀತಿಯ ಮಾತಿನ ಚಿಕಿತ್ಸೆ ದೊರೆತರೆ ಸಾಕಲ್ಲವೇ.?ಮರುಹುಟ್ಟಿಗೆ !!2..ಚಂಡಮಾರುತ ಬಿರುಗಾಳಿಯೆದ್ದುಹಡುಗು ಮುಳುಗಿಯೇ ಬಿಟ್ಟಿತು ಎನ್ನುವಾಗ.ಸಣ್ಣದೊಂದು ತುಂಡಿನ ಆಸರೆ ಸಾಕಲ್ಲವೇ.?ಮರುಜನ್ಮಕ್ಕೆ..!!3..ಜರಿವ ಮಾತುಗಳ ಇರಿವ ಕಣ್ಣೋಟಗಳ ಧಾಳಿಗೆ ಸೋತ ಅಬಲೆಯೊಂದು ಕರುಳುಬಳ್ಳಿಗಳ ಸಮೇತ ಕೆರೆಯಬದಿಗೆ ಬಂದು ನಿಂತಾಗ.!ಸಣ್ಣ ಭರವಸೆಯ ಮನಸೊಂದುಸಿಕ್ಕರೆ ಸಾಕಲ್ಲವೇ..?ಮರುಬದುಕಿಗೆ.!!4..ಸಣ್ಣ ಸಣ್ಣ ಭರವಸೆಗಳೇ ಸಾಕುಬಿಡಿ ಬದುಕ ನಗಿಸಲು.ಬದುಕಿನಖಾಡದಲ್ಲಿ ಸೋತ ಜಗಜಟ್ಟಿಗೂಸಣ್ಣ ಗೆಲುವೊಂದು ಸಾಕುಮತ್ತೆ ಮೀಸೆ ತಿರುವಲು.!!5..ಹೀಗೆ ಸಣ್ಣ ಪ್ರೀತಿ, ಆಸರೆ ಭರವಸೆಗಳೆ ತರುತ್ತವೆಜೀವನದಲ್ಲಿ ಹೊಸ … Read more

ಪಂಜು ಕಾವ್ಯಧಾರೆ

ನುಡಿ ಸಿರಿ ಕನ್ನಡವೇ ಶಕ್ತಿ ಕನ್ನಡವೇ ಯುಕ್ತಿಕನ್ನಡವೇ ದೇವರಿಲ್ಲಿ ಕನ್ನಡವೇ ಭಕ್ತಿ..! ಚಂದದಾ ಚಂದನವುಕನ್ನಡಿಗರ ಮನಸು‘ಛಂದ’ದಾ ಹಂದರವುಕನ್ನಡದಲೆ ರಮಿಸು..! ಸಕ್ಕರೆಗು ಸಿಹಿ ನೀಡೋನುಡಿಯಂತೆ ನಾಡುಅಕ್ಕರೆಗು ಮುದ ನೀಡೋಅಚ್ಚರಿಯ ನೀನಾಡು..! ಸ್ವರ್ಗದಾ ಸಾಂಗತ್ಯ ,ಖುಷಿಯಿಂದ ಕುಣಿದಾಡುಬೇರೇನಿಲ್ಲ ಕನ್ನಡವನೆತೆರಿಗೆಯಾಗಿ ನೀಡು..! ತುಟಿತೆರೆದರೆ ಉಲಿದಂತೆಬಂಗಾರದ ವೀಣೆಗರಿಬಿಚ್ಚಿದ ನವಿಲಂತೆಅಕ್ಷರದ ಜೋಡಣೆ..! ಇಲ್ಲಿ ಜನಿಸಿದ್ದೆ ಪುಣ್ಯವುನನ್ನವ್ವ ನಿನ್ನಾಣೆನೆಮ್ಮದಿಗೆ, ನಿನ್ನಂತ ಉಪಮೆಯಬೇರೆಲ್ಲೂ ನಾ ಕಾಣೆ..! –ಮನು ಪುರ. ಬಾಲ್ಯ.. ಆ ದಿನಗಳೆಷ್ಟು ಚಂದನಾನಾಗಿನ್ನೂ ಮುಗ್ಧ ಕಂದನಿತ್ಯ ತುಂಬಿ ತುಳುಕುವ ಆನಂದಮರೆಯಾದ ನೆನಪು ಗಾಯದಗುರುತಿನಿಂದ.. ಜೇನಿನಂತಹ ಮಧುರ … Read more

ನಾಲ್ಕು ಕವಿತೆಗಳು: ವಾಣಿ ಭಂಡಾರಿ

ಗಾಳಿ ಮಾತು ಭೂತ ವರ್ತಮಾನವನ್ನುಒಮ್ಮೆ ಬಾಚಿ ಆಲಂಗಿಸಿದರೆ,,,ಅಳುವಿನ ಸಾಗರವೇ ಬಾಳುಎನಿಸದೆ ಇರದು!.ಭಾವನೆಗಳೇ ಸತ್ತ ಮೇಲೆಬದುಕು ಬಯಲೇ ತಾನೆ? ಚಿಗುರೊಡೆಯಲು ಅಲ್ಲೇನುಇದ್ದಂತಿರಲಿಲ್ಲ,,,ಸಪಾಸಪಾಟದ ಒಡಲತುಂಬಾ ಕಲ್ಲು ಮುಳ್ಳುಗಳೇ,,ಚುಚ್ಚಿದ್ದೊ ಎಷ್ಟೊ ,,ಕಣ್ಣೀರು ಕೋಡಿ ಹರಿದಿದ್ದು ಎಷ್ಟೊ ಬಲ್ಲವರಾರು!ಒಳಗೊಳಗೆ ಹರಿದ ಕಂಬನಿಗೆಇಂತದ್ದೆ ಕಾರಣ ಬೇಕಿರಲಿಲ್ಲ!!. ಒಳಗೆ ಕುದ್ದ ಭಾವ ಕಾವಿನಲಿಆವಿಯಾಗಿ ಕಣ್ಣ ಹನಿಯಂತೆಆಗಾಗ ಹೊರಬರುತ್ತಿತ್ತಷ್ಟೆ.ಎಷ್ಟಾದರೂ ಭೂಮಿ ಬಿಸಿಯಾಗಿತಂಪಾಗುವುದು ನಿಸರ್ಗನಿಯಮ ಎಂಬುದೊಂದುತಾತ್ಸಾರ ಮಾತಿದೆ ಎಲ್ಲರಲಿ!. ಹೌದೌದು!,,ಕೆತ್ತುವುದು ಚುಚ್ಚುವುದುಜಪ್ಪುವುದು ಗುಂಡಿ ತೋಡಿಅವರಿಷ್ಟ ಬಂದ ಕಡೆಯೆಲ್ಲ,,,,ಅವರದೆ ಜೊಲ್ಲು ಸುರಿಸಿಕಾಮನಹುಣ್ಣಿಮೆ ಆಚರಿಸುವುದುಅವರೇ ಮಾಡಿಟ್ಟುಕೊಂಡ ಪದ್ದತಿ.ಶತ ಶತಮಾನಗಳಿಂದಲೂನಡೆಯುತ್ತಲೇ ಇದೆ ದರ್ಬಾರು!.ಕೇಳುವವರು … Read more

ಮೂರು ಕವಿತೆಗಳು: ದೊಡ್ಡಬಸಪ್ಪ ನಾ ಚಳಗೇರಿ

ಅಂಬರದ ಬಯಲೊಳಗೆ ಅಂಬರದ ಬಯಲೊಳಗೆ ಅರಳಿದ್ದ ಮಲ್ಲಿಗೆಯಸತಿ ಮುಡಿಗೆ ನಾನೊಮ್ಮೆ ಮುಡಿಸಲೆಂದುಇರುಳೇಣಿ ಏರೇರಿ ಇರುಳೂರು ನಾ ಸುತ್ತಿತಾರೆಗಳ ಮಲ್ಲಿಗೆಯ ಬನ ಸೇರಿದೆ ಇಳಿಬಿದ್ದ ಮಲ್ಲಿಗೆಯ ಹೂಬಳ್ಳಿ ತುಂಬಿತ್ತುದುಂಡು ಆ ದುಂಡಗಿನ ಮೊಗ್ಗರಳಿಸಿಹಾಲ್ಬಣ್ಣ ಹೂಮಾಲೆ ಇನಿಯಳಿಗೆ ಕಟ್ಟಿಸಲುಚುಕ್ಕಿಗಾಗಿರುಳಲ್ಲಿ ಕೈ ಚಾಚಿದೆ ಶಶಿ ಬೆಳ್ಳಿ ಬುಟ್ಟಿಯಲಿ ಹರಿದಾಕಿ ಹೊತ್ತಂದುಹೂಗಾರ ಮನೆಯೊಳಗ ನಾನಿಳಿಸಿದೆನಗೆಮೊಗದ ಮುತ್ತೈದೆಯ ಮದರಂಗಿ ಕೈಯೊಳಗಸೊಗಸಾಗಿ ಹೆಣೆಸಿದ್ದೆ ಒಂದಾರದಿ ಮುಂಜಾವು ನೀ ಹೆಣೆದು ಇಳಿಬಿಟ್ಟ ಜಡೆಮೇಲೆಮುಡಿ ಮಾಡಿ ಹೋಗೆಂದೆ ರವಿಕಿರಣಕೆಇನಿದಾದ ಮಾತೊಳಗ ಬಳಿ ಬಂದು ಮಾಡೋದಮುಡಿಯೊಳಗ ಮುಡಿಸಿದ್ದೆ ಹೂ ಮಾಲೆಯ … Read more

ಪಂಜು ಕಾವ್ಯಧಾರೆ

ಕನಸಿನೊಳಗೊಂದು ಕಣಸು ನಿನ್ನೆ ತಮ್ಮ ಮತ್ತೆಕನಸಿನ ಮನೆಗೆ ಬಂದಿದ್ದನುಹೆಂಡತಿ, ಮಕ್ಕಳನ್ನು ಕರೆದು ತಂದಿದ್ದನುಅವ್ವ, ಕಣ್ಣ ತುಂಬಾ ನೀರು ತುಂಬಿಕೊಂಡು ವಯ್ದು ಕೊಟ್ಟಳು ನಾನು, ಯಾಕೋ ಇಷ್ಟು ದಿನ ಎಲ್ಲಿ ಹೋಗಿದ್ದೆ?ಏನೇನೋ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದೆಅವನು, ಮುಗಿಲಿಗೆ ಮುಖ ತೋರಿಏನೇನೋ ಉತ್ತರಿಸುತ್ತಿದ್ದಒಂದೂ ಅರ್ಥವಾಗುತ್ತಿರಲಿಲ್ಲ!ಈ ನಡುವೆ ಅವ್ವ,ನನ್ನ ಪ್ರಶ್ನೆಗಳ ನಡವನ್ನೇ ತುಂಡರಿಸಲು ಯತ್ನಿಸುತ್ತಿದ್ದಳುಇರಲಿ ಬಾ, ಒಳಗೆವಾತ್ಸಲ್ಯ ಗುಡ್ಡವೇ ಕರಗಿ ತಮ್ಮನನ್ನು ಒಳಗೆಆಹ್ವಾನಿಸುತ್ತಿದ್ದಳು ತಮ್ಮನ ಕಿರಿ ಮಗನನ್ನು ಎತ್ತಿಕೊಂಡೆನನ್ನ ನೋಡಿ ಒಂದೇ ಸಮನೆ ಆಳುತ್ತಿದ್ದನುಎಲ್ಲೋ ಬಿದ್ದು ಹಣೆ ಒಡೆದುಕೊಂಡಿದ್ದನುಹಿರಿಯ ಮಗನನ್ನು ತೊಡೆಯ … Read more

“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 6)”: ಎಂ.ಜವರಾಜ್

-೬- ಅವತ್ತು ಸುಡು ಬಿಸಿಲ ಒಂದು ಮದ್ಯಾಹ್ನ ಗಂಗಣ್ಣ ಸುಸ್ತಾದವನಂತೆ ಸೈಕಲ್ ಏರಿ ಬಂದವನು ಅಗಸ್ತೇಶ್ವರ ದೇವಸ್ಥಾನದ ಉತ್ತರ ದಿಕ್ಕಿನ ಬಾಗಿಲ ಪಕ್ಕದ ಪಶ್ಚಿಮದ ಕಡೆ ಮುಖ ಮಾಡಿದ್ದ ಬಸಪ್ಪನ ವಿಗ್ರಹದ ಜಗುಲಿ ಅಂಚಿಗೆ ಕುಂತು ಕಾಗದ ಪತ್ರ ಚೆಲ್ಲಿಕೊಂಡು ತೊಟ್ಟಿಕ್ಕುತ್ತಿದ್ದ ಬೆವರು ಒರೆಸಿಕೊಳ್ಳುತ್ತ ಓದುತ್ತ ಜೋಡಿಸುತ್ತಿದ್ದ. ಬಿಸಿಲು ಧಗಧಗಿಸುತ್ತಿತ್ತು. ಅದೇ ಹೊತ್ತಿಗೆ ಭರ ್ರಂತ ಬಂದ ಅರ್ಚಕರು ಅವನಿಗೆ ಎದುರಾಗಿ ಕುಂತು “ಏನಪ್ಪ ಗಂಗ ಲೆಟ್ರು ಗಿಟ್ರು ಬಂದಿದಿಯಾ” ಅಂದರು. ಗಂಗಣ್ಣನ ಮುಖ ಇನ್ನಷ್ಟು ಬೆವರಿ … Read more

ಕವಿತೆ ಮತ್ತು ವಿಮರ್ಶೆ: ಅಜಿತ್ ಹರೀಶಿ, ಎನ್. ಎಸ್. ಶ್ರೀಧರ ಮೂರ್ತಿ

ಒಂದು ಸತ್ಯ ಕವಿತೆ ಕವಿಯೊಬ್ಬ ಬಯಸಿದ್ದ ಸತ್ತು ಹೋಗಲುಅದೂ ಹಾಡುಹಗಲುಜೇಡದ ಉದರದ ಎಳೆ ಕಾಣಲುದಾರಿಯೊಂದು ತೋರಲು ಹೇಳಿ ಹೋಗಬೇಕು ಕಾರಣನನ್ನ ಸಾವಿಗೆ ನಾನೇ ಕಾರಣಕೆಟ್ಟ ಸಂಯೋಗದಿಂದ ನಾನೀಗ ಬಸಿರುಲಜ್ಜೆಯಾಗಿದೆ ಬೇಡ ಉಸಿರು ಕುಣಿಕೆ ಬಿಗಿದು ಕುರ್ಚಿ ಒದ್ದುವಿದಾಯ ಹೇಳಬಯಸಿದ್ದುಪಾಪದ ಕೊಡ ಬಲು ಭಾರಅಂಗುಷ್ಟ ನೆಲ ತಾಗಿ ಹಗ್ಗ ಹಾರ ಜಗತ್ತು ಜಾಗೃತವಾಯಿತು ಜರೆಯಿತುಎಲ್ಲ ನಾಟಕ ಕವಿ ಕಟುಕದಯೆ ತೋರದಿರಿ ಹೂತುಹಾಕಿರಿಬೆಳೆಯದಿರಲಿ ರಕ್ಕಸ ಸಂತತಿ ಕರುಣೆ ಇದ್ದವರು ಲೇಖನಿ ಹಿಡಿದರುಕವಿ ಸಾಯಬಹುದು ಕವಿತೆ ಅಮರಬದುಕು ಬರಹ ಒಂದೆಯೋ ಬೇರೆಯೋಕೊಲ್ಲಬೇಡಿರೆಂದರು … Read more

ಪಂಜು ಕಾವ್ಯಧಾರೆ

ನಾಡು ನುಡಿ ಮಣ್ಣ ಪ್ರತಿಯ ಕಣದಿ ಪ್ರೇಮ ಭಾವದೇವನು ನೋಡಿಹ ಬೆರಗಲಿ ಈ ಸ್ವಭಾವಹಳದಿ ಕೆಂಪಿನ ಅಂದಕೆ ಸಮವಲ್ಲ ಹೊನ್ನ ಭಾರನಾಡ ದೇವಿಗೆ ಹೊನ್ನುಡಿಯ ಸಿಂಗಾರ. ನಾಡ ಹೃದಯ ತಬ್ಬಿರಲು ವಚನ ಗಾನಬಾಳ ಹಾದಿಗೆ ಬೆಳಕ ಚೆಲ್ಲಿದೆ ಸುಗಾನಕೀರ್ತನೆಯಲಿ ತುಂಬಿರಲು ಭಕ್ತಿಯ ರಸ ಸಾರತೊಳೆದಿಹಳು ಕಾವೇರಿ ಕಲ್ಮಷಗಳ ಭಾರ. ಇತಿಹಾಸ ಮರೆಯದು ನಾಡ ಚರಿತೆಯಬರಿಯ ಒನಕೆ ಬರೆದ ಸಾಹಸ ಗಾಥೆಯಕದಂಬರು ಪೋಣಿಸಿದ ನುಡಿಯ ಸಿರಿಯಜಲವು ಹಸಿರಿಗೊಲಿದ ಸೊಬಗ ರಾಜವೈಖರಿಯ. ಜ್ಞಾನದಿ ವಿಜ್ಞಾನವಿಂದು ಅರಿತು ಬೆರೆತಿದೆಪ್ರಗತಿಯ ಪಥದಿ ನಾಡನು … Read more

ಎರಡು ಕವಿತೆಗಳು: ನಾಗರಾಜ ಜಿ. ಎನ್. ಬಾಡ

ಅಮ್ಮ ಆಯ್ ಲವ್ ಯು ಕರವ ಹಿಡಿದು ನನ್ನ ಎತ್ತಿ ಆಡಿಸಿದೆಅಪ್ಪಿ ಮುದ್ದಾಡುತ್ತಾ ಹಾಲು ಉಣ್ಣಿಸಿದೆಅತ್ತು ಕರೆದಾಗ ಗುಮ್ಮನ ಕರೆದುಸುಮ್ಮನಾಗಿಸಿದೆಚಂದಿರನ ತೋರಿಸುತಊಟವ ಮಾಡಿಸಿದೆಜೋ ಜೋ ಲಾಲಿಹಾಡಿ ನಿದ್ದೆಯಮಾಡಿಸಿದೆಹಠವ ಮಾಡಿದಾಗ ಒಂದುಪೆಟ್ಟು ಹಾಕಿದೆಜೋರಾಗಿ ಅಳಲು ಎದೆಗೆ ಅಪ್ಪಿನೋವನ್ನು ಮರೆಸಿದೆಗಲ್ಲವ ಹಿಡಿದು ಮುತ್ತನು ನೀಡಿದೆಪಪ್ಪಿಯ ನೀಡೆಂದು ಕಾಡಿಬೇಡಿದೆಮಡಿಲಲ್ಲಿ ಇಟ್ಟುಕೊಂಡು ಬೆಚ್ಚನೆಯಭಾವ ಮೂಡಿಸಿದೆಅರಳು ಹುರಿದಂತೆ ಮಾತನಾಡುವಪರಿಗೆ ನಕ್ಕು ನಲಿದೆಹೆಜ್ಜೆ ಹೆಜ್ಜೆಗೂ ತಡವರಿಸಿ ಬೀಳದಂತೆ ಜೊತೆಯಾದೆಎಷ್ಟೇ ಕಷ್ಟವಾದರೂ ನನ್ನ ನೋಡಿ ನೀ ಎಲ್ಲವನ್ನೂ ಮರೆತೆಜಗದ ಸಂಭ್ರಮ ನನಗಾಗಿ ನೀ ತಂದೆನೀನೇ ನನ್ನ ಸರ್ವಸ್ವ … Read more

ಮೂರು ಕವನಗಳು: ಡಾ. ತೇಜಸ್ವಿನಿ

1) ಕವಿತೆ ಎಂದರೆ ಕವಿತೆ ಎಂದರೆಮನದಾಳದ ಭಾವನೆಗಳಕವಿಯಾಗಿ ಹಾಡುವುದು. ಕವಿತೆ ಎಂದರೆಹೃದಯಾಳದ ನೆನಪುಗಳುಭಾವನೆಯಾಗಿ ಅರಳುವುದು. ಕವಿತೆ ಎಂದರೆಮನದ ಧರೆಯೊಳಗೆಅವಿತಿರುವ ಸುಪ್ತಭಾವಗಳ ಹೊರಸೂಸುವುದು. ಕವಿತೆ ಎಂದರೆರವಿ ಕಾಣದನ್ನುಕವಿಯಾಗಿ ಕಂಡುಕೋಗಿಲೆಯಂತೆ ಹಾಡುವುದು. ಕವಿತೆ ಎಂದರೆಕವಿ ತನ್ನತನವ ತಾಕವಿಯಾಗಿ ಕಾಣುವುದು. 2) ಕನ್ನಡ ಕನ್ನಡ ನಾಡಿನ ಕೋಗಿಲೆಗಳಿರಾಕನ್ನಡ ನಾಡಿನ ಕಂದಗಳಿರಾಕನ್ನಡಕ್ಕಾಗಿ ಕೈ ಎತ್ತಿಕನ್ನಡಕ್ಕಾಗಿ ಹೋರಾಡಿಕನ್ನಡ ನಾಡಿನ ಕಣ್ಮಣಿಗಳಾಗಿ. ತನು ಕನ್ನಡ, ಮನ ಕನ್ನಡನುಡಿ ಕನ್ನಡ ಭವ ಕನ್ನಡಹಳೆಗನ್ನಡ ನಡುಗನ್ನಡಎಲ್ಲವೂ ಕನ್ನಡ, ಕನ್ನಡ ಕನ್ನಡ ಹರ ಕನ್ನಡ, ಹರಿ ಕನ್ನಡಸಿರಿಕನ್ನಡ, ತಾಯಿಕನ್ನಡಅವ ಕನ್ನಡ … Read more

ಮೂರು ಕವನಗಳು: ಮೇದರದೊಡ್ಡಿ ಹನುಮಂತ

1) ಒಂಟಿ ಚಪ್ಪಲಿ ನಾ ಕೊಂಡ ಆರಿಂಚಿನ ದುಬಾರಿ ಮೊತ್ತದ ಚಪ್ಪಲಿಗಳಲ್ಲಿಒಂದು ಮಾತ್ರ ಉಳಿದಿದೆ ಮತ್ತೊಂದು ನಾಯಿ ಪಾಲಾಯಿತೋ..ಬೀದಿ ಪಾಲಾಯಿತೋ..ನೀರು ಪಾಲಾಯಿತೋ..ಅರಿವಿಲ್ಲ ಹೈಕಳು ಹರಿದಿರಬಹುದೇ..?ಬೇಕಂತಲೇ ಎಸೆದಿರಬಹುದೆ?ಕಳುವಾದ ಸಾಧ್ಯತೆಯಿಲ್ಲಒಂಟಿ ಚಪ್ಪಲಿ ಎಲ್ಲಿ ನರಳಿಹುದೋ..? ದುಃಖಿಸಲೇ.. ಒಂದು ಚಪ್ಪಲಿ ಕಳೆದು ಹೋಗಿದಕ್ಕೆಸುಖಿಸಲೇ..ಒಂದು ಚಪ್ಪಲಿ ಉಳಿದಿದ್ದಕ್ಕೆಅತ್ರಂತ್ರ ಸ್ಥಿಥಿ ಬರಿಗಾಲು ಉಳಿದ ಕಾಣೆಯಾದಬಿಡಿಬಿಡಿಯಾದ ದುಬಾರಿ ಚಪ್ಪಲಿಗಳನುಅಣಕ ಮಾಡುತ್ತಿವೆಪುಟಪಾತಿನಲಿ ನೂರಕ್ಕೋ ಇನ್ನೂರಕ್ಕೋ..ಅಗ್ಗವಾಗಿ ಸಿಕ್ಕಹಳೆಯ ಅವಾಯಿ ಚಪ್ಪಲಿಗಳು 2) ಕೀಳರಿಮೆ ಮೆಳ್ಳೆಗಣ್ಣೆಂಬ ಕೀಳರಿಮೆ ಹೊರಟು ಹೋಯಿತೆನಗೆಕುರುಡರ ಕಂಡ ಮೇಲೆ ಎಡಚನೆಂಬ ಕೀಳರಿಮೆ ಹೋಯಿತೆನಗೆಕೈಯಿಲ್ಲದವರ ಕಂಡ ಮೇಲೆ … Read more

ಮೂರು ಕವಿತೆಗಳು: ಗೀತಾ ಡಿ. ಸಿ.

೧. ಮಹಾಕಾವ್ಯ ಬೀಜ ಮೊಳಕೆಯೊಡೆದುಮಣ್ಣಿನಾಳಕ್ಕೆ ಬೇರೂರುತ್ತಲೇಕತ್ತಲ ಮಣ್ಣಗರ್ಭ ಸೀಳಿಬೆಳಕು ಮೋಡ ಗಾಳಿ ಮಳೆಬಿಸಿಲು ಬೆಳದಿಂಗಳಿಗೆಮೈಯ್ಯೊಡ್ಡುತ್ತಾ ಮೊಗ್ಗಾಗಿಹೂವು ಹೀಚು ಕಾಯಿಹಣ್ಣಾಗಿ ಮಾಗಿ ಮಣ್ಣುಸೇರುವ ಅನುದಿನದಾಟಅಷ್ಟು ಸುಲಭದ್ದೇನೂ ಅಲ್ಲ. ಇಲಿ ಹೆಗ್ಗಣಗಳಾದಿಯಾಗಿದೊಡ್ಡ ಬೇರುಗಳ ನಡುವೆದಿಟ್ಟತನದಿ ಗಟ್ಟಿ ಬೇರೂರಿಒಂದಿಷ್ಟು ಚಿಗುರ ಚಾಚಿದರಷ್ಟಕ್ಕೇಮುಗಿಯುವುದಿಲ್ಲ..ಬಿಸಿಲು ಮಳೆ ಗಾಳಿಗಳ ಹೊಡೆತಕ್ಕೆದನಕರುಗಳ ಮನುಜರಕೈಕಾಲು ಬಾಯಿಗಳಿಂದಲೂಬಚಾವಾಗಬೇಕು! ತನ್ನ ಗುರುತೂರಲುಬೀಜ ಮೊಳಕೆಯೊಡೆದುಹಣ್ಣಾಗಿ ಮಣ್ಣಸೇರಿಮತ್ತೆ ಚೆಗುರೊಡೆಯಲುನಿತ್ಯ ಕನಸು ಭರವಸೆಗಳಹೊತ್ತು ನಂಬಿಕೆಯೇ ತಾನಾಗಿಬಯಲಲ್ಲಿ ಬಯಲಾಗಿಎಚ್ಚರದಿ ಸಹಜತನದಲಿತನ್ನನೊಡ್ಡಿಕೊಳ್ಳುತ್ತಲಿರಬೇಕು.. ಮುಗಿಲೆತ್ತರಕೆ ಬೆಳೆದರಷ್ಟೆ ಸಾಕೆ?ಮೊಗ್ಗು ಹೂವಾಗಿ ಕಂಪಬೀರಬೇಕುಹೀಚು ಕಾಯಾಗಿ ಹಣ್ಣಾಗಿಬಯಸಿದವರ ಬೊಗಸೆತುಂಬಬೇಕುನಂಬಿದವರ ಹಸಿವೆ ನೀಗಬೇಕು…ತಿಂದವರ ತೃಪ್ತಿರಲಿ ಬೀಜಮತ್ತೆ … Read more

ಮೂರು ಕವಿತೆಗಳು: ಚಲುವೇಗೌಡ ದೊಡ್ಡಹಳ್ಳಿ

ಉಪಕಾರಿಯಾಗು ಇರುವಂತಿದ್ದರೆ ತೆಂಗಿನ ಮರದಂತಿರುಬಿಸಲಲಿ ನೆರಳಾಗಿ ದೇವರ ಪೂಜೆಗೆ ಕಾಯಾಗಿಬಾಯಾರಿದವರಿಗೆ ಎಳನೀರಾಗಿಭುವಿಯ ಮೇಲಿನ ಕಲ್ಪವೃಕ್ಷವಾಗಿ… ಮನೆಯ ಮುಂದೆ ಚಪ್ಪರವಾಗಿಅನ್ನ ಮಾಡಲು ಕಟ್ಟಿಗೆಯಾಗಿಕಸಗುಡಿಸುವ ಪೊರಕೆಯಾಗಿನೆತ್ತಿಗೆ ಕೊಬ್ಬರಿ ಎಣ್ಣೆಯಾಗಿ… ಮನೆ ಮೇಲಣ ಚಾವಣಿಯಾಗಿಮನೆ ಭಾರ ಹೊರುವ ತೊಲೆಯಾಗಿಮಲಗುವರಿಗೆ ಸೋಗೆ ಹಾಸಾಗಿಶುಭ ಶಾಸ್ತ್ರಕೆ ಕೊಬ್ಬರಿಯಾಗಿ… ಹುಟ್ಟಿದರೆ ಹಸುವಿನಂತಾಗುಹಸಿದ ಮಕ್ಕಳಿಗೆ ಹಾಲಾಗಿಧಣಿದವರಿಗೆ ಮಜ್ಜಿಗೆಯಾಗಿಊಟಕ್ಕೆ ತುಪ್ಪವಾಗಿ ಇಳೆಯೊಳಗೆ ಕಾಮಧೇನುವಾಗಿ… ಹೊಲಕ್ಕೆ ಗೊಬ್ಬರವಾಗಿಅನ್ನದಾತರಿಗೆ ಬೆನ್ನೆಲುಬಾಗಿಪ್ರಥಮ ಪೂಜೆಗೆ ಇಡುವ ಸಗಣಿಯಾಗಿಪವಿತ್ರವಾದ ಗೋಮೂತ್ರವಾಗಿ… ಮನೆ ಮುಂದೆ ಸಾರಿಸುವ ಸಗಣಿಯಾಗಿದೇವರ ಅಭಿಷೇಕಕೆ ಹಾಲು-ಮೊಸರಾಗಿಜಗಕೆಲ್ಲ ನೀನೆ ಗೋಮಾತೆಯಾಗಿನೀನಿರುವೆ ಜಗದೊಳಗೆ ಉಪಕಾರಿಯಾಗಿ… ನೀನಾರಿಗಾದೆಯೋ … Read more

ನಾಲ್ಕು ಕವಿತೆಗಳು: ಜಹಾನ್ ಆರಾ ಕೋಳೂರು

ನನಗೂ ಹೇಳುವುದು ಬಹಳ ಇತ್ತು ಅಂದು ಶ್ರೀರಂಗ ಪಟ್ಟಣದ ವೇದಿಕೆಯ ಮೇಲೆಸೂಟು ಬೂಟಿನ ಠೀವಿನಲ್ಲಿ ಕುಳಿತ ನಿಸಾರ್ನನಗೆ ನನ್ನ ನೆಚ್ಚಿನ ಪದ್ಯದ ಕವಿಯಷ್ಟೆ ಜೋಗದ ಝರಿಗಳ ಮುಂದೆ ನಿಂತಾಗಲೆಲ್ಲಅದರ ಹನಿಗಳು ಮುಖಕ್ಕೆ ಚಿಮ್ಮುತ್ತಿದಾಗಲೆಲ್ಲಜೊತೆಯಲ್ಲಿ ಇಲ್ಲೇ ಕುಳಿತು ಮಾತಾಡಬೇಕೆಂಬ ಹಂಬಲವೇನೋ ಇತ್ತು. ಕಾಲಕ್ಕೆ ಕಾದೆಕಾಲ ಅವಕಾಶ ನೀಡಲೇ ಇಲ್ಲ ಶಿಲುಬೆ ಏರಿದವನು ನಿನ್ನ ಕಾಡಿದಂತೆನನಗೂ ಕಾಡಿದ ನಿನ್ನ ಪದಗಳ ಮೂಲಕ ಸಂಜೆ ಐದರ ಮಳೆ ಇರಬೇಕಿತ್ತುಲಾಲ್ ಬಾಗ್ನಲ್ಲಿ ಸ್ವಲ್ಪ ದೂರ ನಡೆದುನಾನು ನಿನ್ನಲ್ಲಿ ಹೇಳುವುದು ಬಹಳ ಇತ್ತು ಮನಸ್ಸು … Read more

ಪಂಜು ಕಾವ್ಯಧಾರೆ

ಶಕ್ತಿ ಇಳಿದೊಮ್ಮೆ ನೋಡು ಎದೆಯೊಳಗೆಪ್ರೀತಿ ಒಸರುವುದು ದನಿಯೊಳಗೆಬಿತ್ತಿದವರ್ಯಾರು ಒಲವ ಇಳೆಗೆಹೆಣ್ಣಿಲ್ಲವೆ ಹುಡುಕು ನಿನ್ನೊಳಗೆ?! ತಾಯಾಗಿ ಹಾಲನು ಉಣಿಸಿಸೋದರಿ ಸ್ನೇಹವ ಸೃಜಿಸಿಮಡದಿ ಅಕ್ಕರೆಯಲಿ ರಮಿಸಿನೀನು ಗೆಲುವಾದೆ ಬಯಸಿ!! ಗುರುತಿರದಂತೆ ನೀ ನಟಿಸದಿರುಪಡೆದ ಕರುಣೆಯ ನೆನೆಯುತಿರುಇಂದಿಗೆ ನಾಳೆಗೆ ಮುನಿಯದಿರುಶಕ್ತಿಯಿಂದ ಬೆಳಕು ಕಡೆಗಣಿಸದಿರು!! ಆಕೆಯಿರದೆ ನೀನು ಶೂನ್ಯಹರಸಿ ಕೈಹಿಡಿದರೆ ಮಾನ್ಯಪ್ರೇಮ ಕಡಲು ಅನನ್ಯತೇಲಿದಾಗ ಬದುಕು ಧನ್ಯ.. -ನಿರಂಜನ ಕೆ ನಾಯಕ ಮಗಳಾಗಿ ಬೇಡವಾದೆನೇ…? ಹೆಣ್ಣಿನ ಜನುಮವೇಕೆ ಈ ಭೂಮಿಮ್ಯಾಲ,ಒಡಲ ಬಗೆದು ಕಿಚ್ಚತ್ತು ಉರಿಯುವಜ್ವಾಲೆಯಲಿ ತೇಲಾಡುವಳು ತನ್ನ ಬದುಕಿನಾಗ,ಕಣ್ತೆರೆದು ನೋಡುವ ಮುನ್ನವೇ ಕ್ಷೀಣಿಸುವಳು … Read more

ಪಂಜು ಕಾವ್ಯಧಾರೆ

ತೋಳಗಳು ಅಳುತ್ತಿದೆ ಪುಟ್ಟ ಕಂದಎತ್ತಿಕೊಳ್ಳುವವರಿಲ್ಲದೇಕೆಸರು ಮೆತ್ತಿದೆ ಮೈಗೆ ಹೆಸರು ಭಾರತಿ ತೋಳಗಳು ಶುಭ್ರ ಬಟ್ಟೆ ತೊಟ್ಟುನಗುವಿನಲಂಕಾರದ ಬೊಟ್ಟನ್ನಿಟ್ಟುಗರತಿಯಂತೆ ಕೈ ಬೀಸುತ್ತಿವೆತಬ್ಬಲಿಯಾದಳು ಭಾರತಿ ತಬ್ಬುವ ತವಕದಲ್ಲಿಪಿತೂರಿಯ ಬಾಕನ್ನು ಅಡಗಿಸಿಟ್ಟಿಹರುಕೆದರಿದ ಕೇಶರಾಶಿಯ ಹಿಡಿದುಗಹಗಹಿಸುತಿಹ ತೋಳಗಳದ್ದು ಆತ್ಮರತಿ ಅಂಗಾಂಗ ಊನ ಮಾಡಿದವುಮುದ್ದು ಭಾರತಿ ಈಗ ಅಂಗವಿಕಲೆತೋಳಗಳ ಸಾಮ್ರಾಜ್ಯದಲ್ಲಿದಾರಿಗಾಣದೇ ನಿಂತಿಹ ಅಬಲೆ ಎದೆಯ ತೋಟದಲ್ಲಿ ಮಾತುಗಳ ಬೆಳೆಯಿಲ್ಲಬೇಡದ ಕಳೆ ಕಸ ಅಡ್ಡಾದಿಡ್ಡಿ ಬೆಳೆದ ಆಕ್ರೋಶತೋಳಗಳ ತೋಳ್ಬಲ ಹೆಚ್ಚಾಗಿದೆಊಳಿಡುತ್ತಿವೆ ಭಾರತಿಯ ಕರುಳ ಬಗೆದು ಏನು ಮಾಡಬಲ್ಲಳು ಅವಳುನಾಲಗೆಯ ಹೊರಗೆಳೆದಿವೆಕೈಕಾಲುಗಳ ಮುರಿದಿವೆತೋಳಗಳ ಕುಯುಕ್ತಿಗೆ ಎಲ್ಲೆಗಳುಂಟೇ!? ತಂದೆ … Read more

ಮೂರು ಕವನಗಳು: ಸುಮತಿ‌ ಕೃಷ್ಣಮೂರ್ತಿ

ಸಮರ ಮಿಣುಕು ನಕ್ಷತ್ರಗಳ ಒಡ್ಡೋಲಗರಾಕೇಂದು ಆಸ್ಥಾನದಲಿ ಮಹಾ ಕಾಳಗ ಹೆಚ್ಚು ಹೊಳೆಯುವ ಚುಕ್ಕಿ ಯಾವುದೆಂದುಬಾನ್ ಕಡಲ ಹೊಳೆ ಮುತ್ತು ತಾನೇ ಎಂದು ಕೋಟಿ ಕೋಟಿ ತೇಜ ಪುಂಜಗಳಿಗೆಹರಿಯುತಿದೆ ಅಪರಿಮಿತ ಬೆಳಕ ಬುಗ್ಗೆ ಸುಧಾಂಶುವಿನ ಸ್ನಿಗ್ಧ ಸೊದೆಯ ಕುಡಿದುಉನ್ಮತ್ತ ತಾರೆಗಳು ಮನದುಂಬಿ ಕುಣಿದು ಇರಳೂರ ಪ್ರಜೆಗಳಿಗೆ ಹೊನಲು ಹಬ್ಬಸಜ್ಜುಗೊಂಡಿದೆ ಇಂದು ಹುಣ್ಣಿಮೆಯ ದಿಬ್ಬ ಕಾತರದಿ ಕೈ ಕಟ್ಟಿ ಕಾಯುತಿರುವಶಾಮನ ಮನದಲ್ಲಿ ಪ್ರೇಮ ಕಲರವ ಬೆದರುತ್ತ ಬೆವರುತ್ತಾ ಬಂದ ನಲ್ಲೆವಿರಹ ಬೇಗೆಯಲಿ ನರಳಿತ್ತು ಮುಡಿದ ಮಲ್ಲೆ ಯಮುನೆಗೂ ವಿಸ್ತಾರ ಬೆಳದಿಂಗಳುನಾಚುತಲಿ … Read more