ಕಥಾಲೋಕ

ಹೆಜ್ಜೆ: ವಿಜಯಾಮೋಹನ್‍ ಮಧುಗಿರಿ

ಇನ್ನು ಮಸುಕರಿಯದ ಮೋಡ, ಅದು ನೆಟ್ಟಗೆ ಕಣ್ಣಿಗ್ಗಲಿಸ್‍ತ್ತಿಲ್ಲ. ಆವತ್ತು ಬೆಳಕರದ್ರೆ ಊರು ನಾಡಿಗೆ ಹೊಸ ಸಮೇವು(ಸಂದರ್ಭ) ಚೆಲ್ಲುವ. ಬೇವು ಬೆಲ್ಲ ಒಂದಾಗಿ,ಭೂಮಿ ಮ್ಯಾಲೆ ಬದುಕೀರೆ ಕಷ್ಟ ಸುಖದ ಸಮಪಾಲಾಗಿ ಹಂಚಿ ಬದುಕ ಬೇಕೆಂದು, ಮತ್ತು ಅಂಗೆ ಹಂಚಿ ಉಣ್ಣುಬೇಕೆಂದ, ಅಜ್ಜ ಮುತ್ತಜ್ಜಂದಿರೆಲ್ಲ ಹೇಳುತ್ತಿದ್ದ ಯುಗಾದಿ ಹಬ್ಬ. ಮೊಗ್ಗುಲಲ್ಲಿ ಮಲಗಿದ್ದ ಹೆಂಡತಿಯ ಗೊರಕೆ, ಅದು ಅದ್ರ ಪಾಡಿಗದು ಯಾರ ಮುಲಾಜಿಗಜಂದೆ ಏರಿಳಿತದ ಸವಾರಿ ಮಾಡುತ್ತಿತ್ತು. ಹಬ್ಬದ ದಿನಗಳೇನಾದರು ಬಂದರೆ ಯಾರಿಗ್ ಮಾಡ್‍ಬೇಕ್ ಹಬ್ಬ ಅದು ಇಂಗೆ ಮಾಡ್‍ಬೇಕ್‍ಅಂಬೋದೇನೈತೆ? ಹೆಂಡತಿಯ […]

ಕಥಾಲೋಕ

ಆಸೆ: ವಿಜಯಾಮೋಹನ್

ಆಸೆಊರೆಂದರೆ ಅದು ಎಲ್ಲ ಊರುಗಳಂತ ಊರಾಗಿರಲಿಲ್ಲ, ಅದೇನೊ ಅದೊಂತರ ರೀತಿ ನೀತಿಯೆಂಬಂಗೆ ಕಾಣ್ತ್ತಿರಲಿಲ್ಲ. ಆ ಊರಿನ ಮೊಗ್ಗುಲಿಗೆ ಹೋಗಿ ನಿಂತು ನಿಗಾ ಮಾಡಿದರೆ, ಅಲ್ಲಿ ಒಂದು ಕೇರಿಯಲ್ಲ, ಅದು ಒಂದು ಬೀದಿಯು ಅಲ್ಲ, ಏನೋ ಒಂತರ ಲೆಕ್ಕ ಬುಕ್ಕಕ್ಕೆ ಕಾಣದ ಮನೆಗಳು. ಈ ತಗ್ಗಿನೊಳಗೆ ನಾಕೈದು ಮನೆಗಳು, ಆ ಎತ್ತರಕ್ಕೆ ಮೂರು ನಾಕು ಮನೆಗಳು, ಈ ಬಾಗಕ್ಕೆ ನೋಡಿದರೆ ಎರೆಡೆ ಎರಡು ಮನೆಗಳು, ಆ ಪಕ್ಕಕ್ಕೆ ನೋಡಿದರೆ ಒಂದೊ ಎರಡೊ ಮನೆಗಳು, ಇಂತ ಸಾಲು ಮೂಲೆ ಕಾಣದ […]

ಕಥಾಲೋಕ

ಮನಸಿನ ರಾಜಕುಮಾರ: ಮಧುಕರ್ ಬಳ್ಕೂರ್

“ವಾವ್ಹ್..! ಯಶು ಈ ನಡುವೆ ಅದೆಷ್ಟು ಸುಂದರವಾಗಿ ಕಾಣ್ತಾಳೆ..! ಅದ್ಯಾಕೆ ನನ್ನನ್ನು ಅಷ್ಟೊಂದು ಅಟ್ರಾಕ್ಟಿವ್ ಮಾಡ್ತಿದಾಳೆ..! ಈಗ ಇದ್ದ ರೂಪವಲ್ಲವೆ ಆಗಲೂ ಇದ್ದಿದ್ದು..! ನನಗಂತೂ ಅರ್ಥ ಆಗ್ತಾ ಇಲ್ಲ. ಒಂದಂತೂ ನಿಜ. ಇಷ್ಟು ದಿನ ನಾನು ನೋಡಿರೋ ಹುಡುಗಿರಲ್ಲೆ ಯಶು ತುಂಬಾನೆ ಸ್ಪೇಷಲ್. ಅವಳಲ್ಲೆನೋ ಒಂದು ನಿಗೂಢತೆ ಇದೆ..! ಅದೇನು ಒಮ್ಮೆಲೇ ಹುಟ್ಟಿ ಸಾಯುವಂತ ಆಕರ್ಷಣೆ ಅಲ್ಲ. ಮುಗಿಲಾರದ ಸೆಳೆತವೆನೋ ಅನ್ನಿಸ್ತಾ ಇದೆ..! ಜೀವನ ಸಂಗಾತಿಯಲ್ಲಿ ನೋಡುವ ಸೆಳೆತವದು. ಸ್ಟುಪಿಡ್ ನಾನು. ಹೋಗಿ ಹೋಗಿ ಇಂತಹ ಹುಡುಗಿಯನ್ನು […]

ಕಥಾಲೋಕ

ಅನುರಣನ: ಡಾ. ಅನುಪಮಾ ದೇಶಮುಖ್

ಡಾ. ಪ್ರದೀಪ್ ಬಳ್ಳಾರಿಯ ಪ್ರಸಿದ್ಧ ವೈದ್ಯರು. ಅಕ್ಕರೆಯ ಹೆಂಡತಿ ಶಾಂತಾ ಹಾಗೂ ಮುದ್ದಾದ, ಮಿತಭಾಷಿಯಾದ ಮಗ ರಾಘವ ಅವರ ಪ್ರಪಂಚ. ಶಾಂತಾ ಅಚ್ಚುಕಟ್ಟಾಗಿ ಮನೆಯನ್ನೂ, ಮಗನನ್ನೂ ನೋಡಿಕೊಂಡು, ತಕ್ಕಮಟ್ಟಿಗೆ ಸಂಪ್ರದಾಯವನ್ನೂ ಪಾಲಿಸಿಕೊಂಡು, ಗಣ್ಯಸಮಾಜದ ರೀತಿನೀತಿಗಳಿಗೆ ಹೊಂದಿಕೊಂಡಂತಹ ಹೆಣ್ಣು. ಶಿಸ್ತು, ಕಟ್ಟುನಿಟ್ಟಿನ ಆಸಾಮಿಯಾದ ಡಾ ಪ್ರದೀಪ್ ಗೆ ಮುಂದೆ ತನ್ನ ಮಗ ಒಬ್ಬ ಒಳ್ಳೆಯ ವೈದ್ಯನೋ, ನ್ಯಾಯಮೂರ್ತಿಯೋ ಆಗಬೇಕೆಂಬ ಹಂಬಲ. ಆದ್ದರಿಂದಲೇ ಶಿಕ್ಷಣ, ಸಂಸ್ಕೃತಿಗಳಿಗೆ ಹೆಸರುವಾಸಿಯಾಗಿದ್ದ ತೋರಣಗಲ್ಲಿನ ಹತ್ತಿರದ ಪ್ರತಿಷ್ಠಿತ ವಸತಿ ಶಾಲೆಯೊಂದರಲ್ಲಿ ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣಕ್ಕಾಗಿ […]

ಕಥಾಲೋಕ

ಮನಸಿನ ಹೊಯ್ದಾಟ: ನೀರಜಾ ಎಚ್. ಕೆ., ಸುಮಾ ರಾಯ್ಕರ್, ಗೀತಾ ಕೆ. ಆರ್., ಶ್ರೀದೇವಿ, ಗಾಯತ್ರಿ ಜೋಯಿಸ್, ಅರ್ಚನಾ ಕೆ. ಎನ್., ಮತ್ತು ಸುಮತಿ ಮುದ್ದೇನಹಳ್ಳಿ

ನಾವಿಬ್ಬರೂ ಸಮಾನ೦ತರ ರೇಖೆಗಳು. ಎಲ್ಲೂ ಸ೦ಧಿಸಲಾಗದ, ಒ೦ದಾಗಲಾಗದ ರೇಖೆಗಳು.  ಇದಕ್ಕೆ ಪರಿಹಾರವೇ ಇಲ್ವೆ ಆ೦ತ ಯೋಚಿಸುತ್ತಾ ಕೂತವಳಿಗೆ ಯಾವಾಗ ಝೊ೦ಪು ಹತ್ತಿ ಸಣ್ಣಗೆ ನಿದ್ರೆ ಬ೦ತೋ ಗೊತ್ತಾಗಲೇ ಇಲ್ಲ. ಬಾಗಿಲಿನ ಕರೆಗ೦ಟೆ ಶಬ್ದ ಮಾಡುತ್ತಾ ವಾಸ್ತವಕ್ಕೆ ಕರೆತ೦ದಿತು. ಕಣ್ಣುಜ್ಜಿಕೊಳ್ಳುತ್ತಾ ಹೋಗಿ ಬಾಗಿಲು ತೆರೆದವಳು, ಬಾಗಿಲುದ್ದಕ್ಕೂ ನಿ೦ತಿದ್ದ ನಗುಮುಖದ ಆಜಾನುಬಾಹುವನ್ನು ಎಲ್ಲೋ  ನೋಡಿದ್ದೇನೆ ಅ೦ತ ಆಲೋಚಿಸುತ್ತಾ ಮಾತು ಹೊರಡದೇ ನಿ೦ತಳು.  ಆ ವ್ಯಕ್ತಿ, ಪರಿಚಯ ಸಿಗಲಿಲ್ವೆ? ಅನ್ನುತ್ತಾ ಮತ್ತೊಮ್ಮೆ ನಗು ತೂರಿದನು.  ಹೌದು, ಆ ನಗು ತುಂಬಾ ಚಿರಪರಿಚಿತ, […]

ಕಥಾಲೋಕ

ಆಭರಣಗಳು: ಜೆ.ವಿ.ಕಾರ್ಲೊ

ಮೂಲ: ಗೈ ಡಿ ಮೊಪಾಸಾಅನುವಾದ: ಜೆ.ವಿ.ಕಾರ್ಲೊ ಆ ದಿನ ಸಂಜೆ ಕಛೇರಿಯ ಮೇಲ್ವಿಚಾರಕರು ಇರಿಸಿದ್ದ ಔತಣಕೂಟದಲ್ಲಿ ‘ಆ’ ಹುಡುಗಿಯನ್ನು ನೋಡಿದ್ದೇ ಲ್ಯಾಂಟಿನ್ ಅವಳ ಮೋಹಪಾಶದಲ್ಲಿ ಸಿಲುಕಿ ನುಜ್ಜುಗುಜ್ಜಾಗಿಬಿಟ್ಟಿದ್ದ. ಆಕೆ ಕೆಲವೇ ವರ್ಷಗಳ ಹಿಂದೆ ಗತಿಸಿದ್ದ ತೆರಿಗೆ ಅಧಿಕಾರಿಯೊಬ್ಬರ ಮಗಳಾಗಿದ್ದಳು. ಆಗಷ್ಟೇ ಅವಳು ತನ್ನ ತಾಯಿಯೊಂದಿಗೆ ಪ್ಯಾರಿಸಿಗೆ ಬಂದಿಳಿದಿದ್ದಳು. ಅವಳ ತಾಯಿ ಮಗಳಿಗೊಬ್ಬ ಯೋಗ್ಯ ವರನನ್ನು ಹುಡುಕುವ ಉದ್ದೇಶದಿಂದ ಹಲವು ಮಧ್ಯಮ ವರ್ಗದ ಕುಟುಂಬಗಳ ಸಂಪರ್ಕಗಳನ್ನು ಬೆಳೆಸಿಕೊಳ್ಳುತ್ತಾ ಕಾರ್ಯೊನ್ಮುಖಳಾಗಿದ್ದಳು. ಬಡವರಾಗಿದ್ದರೂ ಸುಸಂಸ್ಕøತ ಮನೆತನದವರಾಗಿದ್ದರು. ಹುಡುಗಿಯಂತೂ, ಯಾವನೇ ಹುಡುಗನು ತನ್ನ […]

ಕಥಾಲೋಕ

ಹಂಸಭಾವಿಯ ಹಸಿ ಸುಳ್ಳು ..!: ಶರಣಗೌಡ ಬಿ ಪಾಟೀಲ ತಿಳಗೂಳ

ಊರ ಜನಾ ಹಸಿ ಸುಳ್ಳು ಹೇಳತಿದ್ದಾರೆ ನಾನು ಹೇಳುವ ಮಾತು ಖರೇ ಅಂತ ಯಾರೂ ನಂಬತಿಲ್ಲ ಯಾಕಂದ್ರೆ ನಾನೊಬ್ಬ ಹುಚ್ಚ ಅಂತ ಹರಿದ ಅಂಗಿ, ಗೇಣುದ್ದ ಗಡ್ಡ ಅಸ್ತವ್ಯಸ್ತ ಮುಖದ ಹುಚ್ಚನೊಬ್ಬ ಹಂಸ ಬಾವಿ ಕಟ್ಟೆಗೆ ಕುಳಿತು ತನ್ನಷ್ಟಕ್ಕೆ ತಾನೇ ವಟಗುಟ್ಟಿದ. ಜನರ ಮಾತು ಸುಳ್ಳು ಅಂತಾನೆ ನೋಡ್ರೋ ಎಂಥಾ ಹುಚ್ಚನಿವನು ಅಂತ ಆತನ ಮಾತು ಕೇಳಿಸಿಕೊಂಡ ಕೆಲವರು ಗಹಿಗಹಿಸಿ ನಗತೊಡಗಿದರು. ನಗರೋ ನಗರಿ ಯಾರ ಬ್ಯಾಡ ಅಂತಾರೆ ಮುಂದೊಂದಿನ ಸುಳ್ಯಾವದು ಖರೇ ಯಾವುದು ಅಂತ ಸಮಯ […]

ಕಥಾಲೋಕ

ಹೆಣದ ಗಾಡಿ: ಜಯರಾಮಚಾರಿ

ಅಲ್ಲೊಂದು ಸಾವಾಗಿದೆ. ಸತ್ತವನ ದೇಹ ಮನೆಯ ಹೊರಗೆ ಇದೆ, ಸತ್ತವನು ಕೆಲವು ವರ್ಷಗಳಿಂದ ಯಾವ ಕೆಲಸವೂ ಮಾಡದೇ ಕುಡಿಯುತ್ತಾ, ಮನೆಯವರನ್ನು ಪೀಡಿಸುತ್ತಾ, ತನ್ನ ಕುಡಿತದ ಚೇಷ್ಟೇಗಳಿಂದ ಪರರನ್ನು ನಗಿಸುತ್ತ ಬದುಕಿದ್ದಾಗಲೇ ಸತ್ತಿದ್ದ. ಈ ಸಂಜೆ ಮತ್ತೆ ಸತ್ತ. ಸತ್ತವನನ್ನು ಮಂಚದ ಮೇಲೆ ಮಲಗಿಸಲಾಗಿದೆ, ಅವನ ದೇಹವನ್ನು ಹಳೇ ಕಂಬಳಿಯಿಂದ ಮುಚ್ಚಲಾಗಿದೆ, ಆ ಕಂಬಳಿಗೆ ಸುಮಾರು ಆರರಿಂದ ಏಳು ತೂತುಗಳಿವೆ. ಅವನ ದೇಹದ ಕೆಳಗೆ ಮಾಸಲಾದ ಬೆಡ್ ಶೀಟ್ ಅದರ ಕೆಳಗೆ ಉಪಯೋಗಿಸದೇ ಇದ್ದ ಹಳೆಯ ಚಾಪೆಯಿದೆ. ಅವನ […]

ಕಥಾಲೋಕ

ಆಸೆಗಳು ನೂರಾರು: ಕೃಷ್ಣವೇಣಿ ಕಿದೂರ್.

”ನನ್ನಲ್ಲಿ ಕೇಳದೆ ನೀವು ಅದು ಹ್ಯಾಗೆ ಬರಲು ಹೇಳಿದ್ರಿ? ನನಗೆ ಒಪ್ಪಿಗೆ ಇಲ್ಲ. ಜುಜುಬಿ ಇಂಜನಿಯರು ಆತ. ಬೇಡವೇ ಬೇಡ. ಹೈಲಿ ಕ್ವಾಲಿಫೈಡ್ ಆದವರು ನಿಮ್ಮ ಕಣ್ಣಿಗೆ ಬೀಳುವುದೇ ಇಲ್ವಾ? ಬಿ. ಇ. ಮುಗಿಸಿದವನನ್ನು ನಾನು ಒಪ್ತೇನೆ ಎಂದು ಹೇಗೆ ಅಂದ್ಕೊಂಡ್ರಿ?ಹೋಗಲಿ, ಎಂ. ಟೆಕ್ ಆದ್ರೂ ಒಪ್ಪಬಹುದು. ಡಾಕ್ಟರು, ಅದರಲ್ಲೂ ಎಂ. ಡಿ. ಆದ ಡಾಕ್ಟರ್ಸ್, ಅಮೆರಿಕಾದಲ್ಲೇ ಕೆಲಸ ಮಾಡ್ತಿರುವ ಇಂಜನಿಯರ್ಸ್ ಅಂಥವರ ಸಂಬಂಧ ಬೇಡಾ ಅಂತ ನಾನು ಹೇಳಲ್ಲ. ನಿಮ್ಮ ಹಳೆ ಸ್ನೇಹಿತನ ಮಗ ಬೇಡವೇ […]

ಕಥಾಲೋಕ

ಮೇವು: ವಿಜಯಾ ಮೋಹನ್, ಮಧುಗಿರಿ

ಗೊಂತಿಗೆಯಲ್ಲಿ ಬಸ ಬಸನೆ ಉಸಿರು ಉಗುಳುತ್ತಿರುವ ಜೀವದನಗಳು. ಒಳಗೆ ಅಡುಗೆ ಮನೇಲಿ ಊದುರ (ಹೊಗೆ) ಸುತ್ತಿಕೊಂಡು, ಪಾಡು ಪಡುತ್ತ ಹೊಲೆ ಉರಿಸುತ್ತಿರುವ ಹೆಂಡತಿ ಅಮ್ಮಾಜಿ. ಅವಳ ಕಡೆಗೊಂದು ಕಣ್ಣು, ಅಲ್ಲೇ ಎದುಸಿರು ಬಿಡುತ್ತಿರುವ ಜೀವದನಗಳ ಕಡೆಗೊಂದು ಕಣ್ಣು, ಅಂಗೆ ನಡುಮನೆಯ ಗೋಡೆಗೆ ಕುಂತುಕೊಂಡು ನಿಗಾ ಮಾಡುತ್ತಿರುವ ಮಲ್ಲಣ್ಣನ ಮನಸ್ಸು ಎತ್ತಕಡೆಯಿಂದಾನೊ? ಯಾಕೊ ಯಾವುದು ಸರಿಯಾಗುತಿಲ್ಲವೆಂದು ತಿವಿಯಂಗಾಗುತಿತ್ತು. ಒಳಗೆ ಹೊತ್ತಿಗೆ ಸರಿಯಾಗಿ ಅಂಟಿಕೊಳ್ಳದ, ಬಂಗದ ಹೊಲೆಯನ್ನ ಉರುಬಿ ಉರುಬಿ, ಬಾದೆ ಬೀಳುವ ಹೆಂಡತಿ ಅಮ್ಮಾಜಮ್ಮಳನ್ನು ಸುಖವಾಗಿ ನೋಡಿಕೊಳ್ಳಲಾಗುತಿಲ್ಲ. ಇಲ್ಲಿ […]

ಕಥಾಲೋಕ

ಹರಿವು: ತಿರುಪತಿ ಭಂಗಿ

“ಕೇಳ್ರಪೋ..ಕೇಳ್ರೀ.. ಇಂದ ಹೊತ್ತ ಮುನಗೂದ್ರವಳಗಾಗಿ ಊರ ಖಾಲಿ ಮಾಡ್ಬೇಕಂತ ನಮ್ಮ ಡಿ.ಸಿ ಸಾಹೇಬ್ರ ಆದೇಶ ಆಗೇತಿ, ಲಗೂನ ನಿಮ್ಮ ಸ್ವಾಮಾನಾ ಸ್ವಟ್ಟಿ ತಗೊಂದ, ನಿಮ್ಮ ದನಾ ಕರಾ ಹೊಡ್ಕೊಂಡ, ತುಳಸಿಗೇರಿ ಗುಡ್ಡಕ ಹೋಗಿ ಟಿಕಾನಿ ಹೂಡ್ರೀ ಅಂತ ಹೇಳ್ಯಾರು, ನನ್ನ ಮಾತ ಚಿತ್ತಗೊಟ್ಟ ಕೇಳ್ರಪೋ..ಕೇಳ್ರೀ.. ಹೇಳಿಲ್ಲಂದಿರೀ.. ಕೇಳಿಲ್ಲಂದಿರೀ ಡಣ್..ಡಣ್” ಅಂತ ಡಬ್ಬಿ ಯಮನಪ್ಪ ಡಂಗರಾ ಹೊಡದದ್ದ ತಡಾ. ಊರ ಮಂದಿಯಲ್ಲಾ ಡಬ್ಬಿ ಯಮನಪ್ಪನ ಮಾತ ಕೇಳಿ ಗಾಬ್ರಿ ಆದ್ರು. ಕೆಂಪರಾಡಿ ಹೊತಗೊಂದ, ಎರಡೂ ಕಡವಂಡಿ ದಾಟಿ, ದಡಬಡಿಸಿ […]

ಕಥಾಲೋಕ

ಸ್ನೇಹ ಸ್ವರ್ಗ !: ಅಶ್ಫಾಕ್ ಪೀರಜಾದೆ

Marriages are made in heaven-John lyly ಬಿಎಂಡ್ಬ್ಲೂ ಕಾರೊಂದು ಮನೆ ಮುಂದೆ ನಿಂತಾಗ ಮನೆಯಿಂದ ಹೊರಗೆ ಬಂದು ಆಶ್ಚರ್ಯಚಕಿತಳಾಗಿ ಕಣ್ಣಗಲಿಸಿ ನೋಡುತ್ತಿರಬೇಕಾದರೆ ತಿಳಿಗುಲಾಬಿ ಸೀರೆ , ಕಡು ಕಪ್ಪು ಬಣ್ಣದ ರವಿಕೆ ತೊಟ್ಟು ಕಣ್ಣಿಗೆ ಕಪ್ಪು ಕೂಲಿಂಗ್ ಗ್ಲಾಸ್ ಧರಿಸಿದ್ದ ನೀಳಕಾಯದ ಸುಂದರ ಹೆಣ್ಣೊಂದು ಕಾರಿನಿಂದ ಇಳಿದು ಬರುತ್ತಿರಬೇಕಾದರೆ ಸಾಕ್ಷಾತ್ ಅಪ್ಸರೆಯೇ ತನ್ನತ್ತ ನಡೆದು ಬರುವಂತೆ ಕಲ್ಪನಾಳಿಗೆ ಭಾಸವಾಗಿತ್ತು.“ಗುರುತು ಸಿಗಲಿಲ್ಲವೇನೇ.. ಕಲ್ಪನಾ?”ಎಂದು ಆ ಗುಲಾಬಿ ಹೂವಿನಂತಹ ಹೆಣ್ಣು ತನ್ನ ಇಂಪಾದ ಕಂಠದಿಂದ ಉಲಿದಾಗಲೇ ಕಲ್ಪನಾ ವಾಸ್ತವಲೋಕಕ್ಕೆ […]

ಕಥಾಲೋಕ

ಕ್ಷಮಿಸು ಗೆಳೆಯ..: ಜೆ.ವಿ.ಕಾರ್ಲೊ

ಇಂಗಿಷಿನಲ್ಲಿ : ಒ’ಹೆನ್ರಿಅನುವಾದ: ಜೆ.ವಿ.ಕಾರ್ಲೊ ರಾತ್ರಿ ಹತ್ತು ಗಂಟೆಯಾಗುತ್ತಲಿತ್ತು ಎಂದಿನಂತೆ ಅವನು ಲಾಠಿ ಬೀಸುತ್ತಾ ಆ ಬೀದಿಗೆ ಇಳಿದ. ಮಾಮೂಲಿ ಪೋಲಿಸ್ ಗತ್ತಿನಿಂದ ರಸ್ತೆಯುದ್ದಕ್ಕೂ ತನ್ನ ಬೀಟ್ ಶುರು ಮಾಡಲಾರಂಭಿಸಿದ. ಮೈ ಕೊರೆಯುವ ತಣ್ಣನೆಯ ಗಾಳಿಯೊಳಗೆ ಮಳೆ ಬರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದ್ದವು. ರಸ್ತೆಯಲ್ಲಿ ಜನಸಂಚಾರ ವಿರಳವಾಗಿತ್ತು. ತನ್ನ ಲಾಠಿಯನ್ನು ಕಲಾತ್ಮಕವಾಗಿ ಬೀಸುತ್ತಾ ರಸ್ತೆಯ ಮೂಲೆ ಮೂಲೆಗಳ ಮೇಲೆ ತೀಕ್ಷ್ಣ ದೃಷ್ಠಿ ಹರಿಸುತ್ತಾ, ರಸ್ತೆ ಬದಿಯಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವವರ ರಕ್ಷಕನಂತೆ ನಡೆಯುತ್ತಿದ್ದ. ಅವನು ಬೀಟ್ ಮಾಡುತ್ತಿದ್ದ […]

ಕಥಾಲೋಕ

ಸಂಜೆ ಬಾನಿನಂಚಿನಲ್ಲಿ ಬಿದ್ದ ಬಿದಿಗೆ ಚಂದ್ರಮ: ಡಾ. ವೃಂದಾ. ಸಂಗಮ್

ನಾನು ಛಂದಾಗಿ ಓದಿ, ಶ್ಯಾಣ್ಯಾಕ್ಯಾಗಿ, ಛೊಲೋ ಕೆಲಸಾ ಹಿಡದು, ಅವ್ವಾ ಅಪ್ಪನ್ನ ಸುಖದಿಂದ ನೋಡಿಕೋಬೇಕು, ದಿನಾ ಇದ ಆಶೀರ್ವಾದ ಕೇಳಿ ಕೇಳಿ ನನಗ ಸಣ್ಣಕಿದ್ದಾಗ ಹೆಂಗನಸತಿತ್ತಂದರ, ಏನು ಮಾಡತಿದ್ದರೂ, ಅಯ್ಯೋ ಇದು ಬ್ಯಾಡ, ನಾನು ಬರೇ ಓದಕೋತ ಇರಬೇಕು, ಬ್ಯಾರೆ ಏನು ಮಾಡಿದರೂ ಅದು ತಪ್ಪು. ಆಮ್ಯಾಲೆ, ಆಮ್ಯಾಲೆ ನನಗ ಅರ್ಥ ಆತು. ಈ ಹಿರೇ ಮನಶ್ಯಾರಿಗೆ ಬ್ಯಾರೆ ಕೆಲಸಿಲ್ಲ. ಆಶೀರ್ವಾದ ಮಾಡೋದರಾಗೂ ತಮ್ಮ ಸುಖಾನ ನೋಡತಿರತಾರ. ನಾನು ಖರೇನ ಶಾಣ್ಯಾಕಿ ಆಗ ಬೇಕಂದ್ರ, ಆಟ ನೋಟ […]

ಕಥಾಲೋಕ

ಗೋರಿಯ ಸುತ್ತ ಸಪ್ತಪದಿ ತುಳಿದಾಗ…: ಶಿವಲೀಲಾ ಹುಣಸಗಿ ಯಲ್ಲಾಪುರ

ಅವಳೊಮ್ಮೆ ನೋಡಿದಾಗ ಕರುಳು ಕಿವುಚಿದ ಅನುಭವ. ದೈವಕ್ಕೊಂದು ಹಿಡಿಶಾಪ ಹಾಕಬೇಕೆನ್ನಿಸಿತು. ಅವನಾದರೋ ಹೇಳ ಹೆಸರಿಲ್ಲದೇ ತರಗಲೆಯಂತೆ ಮಣ್ಣೋಳು ಮಣ್ಣಾಗಿ ಹೋದ. ಗೋರಿ ಮೇಲೊಂದಿಷ್ಟು ಗರಿಕೆ ಹುಲ್ಲು ಬೆಳೆದು ಅವನು ಪುನಃ ಚಿಗುರಿದನೆಂಬ ನಂಬಿಕೆ ಅವಳಲ್ಲಿ. ಪ್ರತಿನಿತ್ಯ ಗೋರಿಗೊಂದು ಹೂ ಇಟ್ಟು ಊದಿನಕಡ್ಡಿ ಹಚ್ಚಿ ಗರಿಕೆ ಹುಲ್ಲು ಕೊಯ್ದಕೊಂಡು ಎರಡು ಮೂರು ಸಲ ಕಣ್ಣಿಗೆ ಒತ್ತಿಕೊಂಡು ಹೀಗೆ ಹುಟ್ಟುವ ಮನಸ್ಸಿದ್ದರೆ ನನ್ಯಾಕೆ ಮದುವೆಯಾದೆ? ದಿಕ್ಕುದಿಸೆಯಿಲ್ಲದೆ ಮರೆಯಾಗಿ ಹೋದಿ ಏಕೆ? ಎಂಬ ಸಂಕಟವನ್ನು ಹೊರ ಚೆಲ್ಲುವ ಅವಳಿಗೆ ಸಂತೈಸುವ ಪರಿವೆಯ […]

ಕಥಾಲೋಕ

ಮರಳಿ ಬಂದ ಪತ್ರ: ಅಶ್ಫಾಕ್ ಪೀರಜಾದೆ

ಇಂತಹದ್ದೊಂದು ತಿರುವು ನನ್ನ ಜೀವನದಲ್ಲಿ ಬರಬಹುದೆಂದು ನಾನು ಕನಸು ಮನಸಿನಲ್ಲೂ ಊಹಿಸಿರಲಿಲ್ಲ. ತೃಪ್ತಿದಾಯಕ ಅಖಂಡ ಮೂವತ್ತೈದು ವರ್ಷಗಳ ವೈವಾಹಿಕ ಜೀವನದಲ್ಲಿ ಆಕಸ್ಮಿಕವಾಗಿ ಅಲೆಯೊಂದು ಹುಟ್ಟಿ ಬಂದು ಸುಂದರವಾದ ನನ್ನ ಸಂಸಾರದಲ್ಲಿ ಹೀಗೆ ಹುಳಿ ಹಿಂಡಬಹುದು ಎಂದು ಭಾವಿಸಿರಲಿಲ್ಲ. ಬದುಕಿನ ಈ ಮುಸ್ಸಂಜೆಯಲ್ಲಿ ಹೀಗೆ ಅಪರಾಧಿಯಾಗಿ ಅವಳ ಮುಂದೆ ನಿಲ್ಲಬೇಕಾಗುತ್ತೆ ಎಂದು ನನಗೆ ಯಾವತ್ತಿಗೂ ಅನಿಸಿರಲಿಲ್ಲ. ನನಗಿಂತ ವಯಸ್ಸಿನಲ್ಲಿ ಕೇವಲ ಐದು ವರ್ಷ ಚಿಕ್ಕವಳು ಅವಳು. ಅವಳಿಗೆ ಐವತ್ತೈದು ನನಗೆ ಕೇವಲ ಅರವತ್ತು. ಈ ಅರವತ್ತನೇಯ ವಯಸ್ಸಿನ ಇಳಿ […]

ಕಥಾಲೋಕ

ಭಾವನೆಗಳ ರೋಲರ್-ಕೋಸ್ಟರ್: ಅಮೂಲ್ಯ ಭಾರದ್ವಾಜ್‌

“ಅದ್ಯಾಕೋ ನಿದ್ದೆನೆ ಬರ್ತಿಲ್ಲ ಕಣೆ”, ಎಂದು ಶ್ರೀಧರ ಇತ್ತಲಿಂದ ಅತ್ತ ತನ್ನ ಮಗ್ಗಲನ್ನು ಬದಲಿಸಿ ಪಕ್ಕದಲ್ಲಿ ಮಲಗಿದ್ದ ಸೀತಾಳಿಗೆ ಹೇಳಿದ. “ನಂಗೂನು ಅಷ್ಟೆ ರೀ”, ಅವಳು ಅವನ ಕಡೆ ತಿರುಗಿ ಹೇಳಿದಳು. “ಗಂಟೆ ಎಷ್ಟಾಯ್ತು ನೋಡು ಸ್ವಲ್ಪ” ಎಂದು ಕೇಳಿದ. ಸೀತಾ ದೀಪ ಹಚ್ಚಿಕೊಂಡು ಮಂಚದ ಕೆಳಗಿಟ್ಟಿದ್ದ ತನ್ನ ಮೊಬೈಲ್‌ಫೋನನ್ನು ಕೈಗೆತ್ತಿಕೊಂಡು- “ಓಹ್‌ ಆಗ್ಲೇ ೩.೩೦ ಆಗ್ಬಿಟಿದೆ, ಯೋಚ್ನೇಲಿ ಟೈಮಾಗಿದ್ದೇ ಗೊತ್ತಾಗ್ಲಿಲ್ಲ” ಎಂದು ಹುಬ್ಬೇರಿಸಿದಳು. “ಅದೇನ್‌ಯೋಚ್ನೆನೆ ನಿಂಗೆ? ಯಾವಾಗ್ಲು ಏನೋ ತಲೆಗ್‌ ಹಾಕೊತ್ಯಾಪ” ಶ್ರೀಧರನಿಗೆ ವಾಸ್ತವ ಗೊತ್ತಿದ್ದರೂ, […]

ಕಥಾಲೋಕ

ಮತ್ತೆ ಉದಯಿಸಿದ ಸೂರ್ಯ: ವೆಂಕಟೇಶ ಪಿ.ಗುಡೆಪ್ಪನವರ

“ವಿಶ್ವವನ್ನೇ ತಲ್ಲಣಗೊಳಿಸಿ, ಈಗ ನಮ್ಮ ದೇಶಕ್ಕ ಗಂಡಾಂತರ ತಂದ ಕೋರೋನಾ ವೈರಸ್ ಹಾವಳಿಯಿಂದ ನಮ್ಮನ್ನು ರಕ್ಷಣೆ ಮಾಡಲು, ಸರ್ಕಾರ ರಾಜ್ಯದಲ್ಲಿ ಇಂದಿನಿಂದ ಹದಿನಾಲ್ಕು ದಿನಗಳ ವರೆಗೆ ಲಾಕ್‍ಡೌನ್ ಜಾರಿಗೊಳಿಸಿದೆ.ಅತ್ಯಗತ್ಯ ಸಾಮಗ್ರಿಗಳನ್ನು ಸಂಗ್ರಹ ಮಾಡಿಕೊಳ್ಳಿ,ಒಬ್ಬರಿಂದ ಒಬ್ಬರಿಗೆ ಬೇಗ ಹರಡುವ ಈ ವೈರಸ್ ಹೆಚ್ಚಾದರೆ, ಲಾಕ್‍ಡೌನ್ ಅವಧಿ ವಿಸ್ತರಣೆ ಸಹ ಆಗಬಹುದು,ಯಾರೊಬ್ಬರೂ ಯಾವೂದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು, ಹೊರಗೆ ಕಾಣಿಸಿಕೊಂಡರೆ ಶಿಕ್ಷೆ ತಪ್ಪಿದಲ್ಲಿ….” ಪೋಲಿಸ್ ಜೀಪ್ ಮೇಲೆ ಹಾಕಿರುವ ಚಿಕ್ಕ ಸ್ಪೀಕರ್‍ದಲ್ಲಿನ ಮಾತುಗಳನ್ನು ಕೇಳಿಸಿಕೊಂಡ ತಿಮ್ಮಪ್ಪ ಮಾಸ್ತರ ಬೆಚ್ಚಿಬಿದ್ದನು. […]

ಕಥಾಲೋಕ

ಒಂದು ಕಡು ಬೇಸಿಗೆಯ ರಾತ್ರಿಯಂದು…: ಜೆ.ವಿ.ಕಾರ್ಲೊ

ಮೂಲ: ಆಂಬ್ರೋಸ್ ಬಿಯೆರ್ಸ್ಅನುವಾದ: ಜೆ.ವಿ.ಕಾರ್ಲೊ, ಹಾಸನ. -೧- ಹೆನ್ರಿ ಆರ್ಮ್ಸ್ಟ್ರಾಂಗ್ ನನ್ನು ನಂಬಿಸಿ ಒಪ್ಪಿಸುವುದು ಅಷ್ಟೇನೂ ಸುಲಭದ ಮಾತಾಗಿರಲಿಲ್ಲ. ಅವನನ್ನು ಭೂಮಿಯೊಳಗೆ ಹೂತಿದ್ದಂತೂ ನಿಜ. ಹೂತಿದ್ದ ಮಾತ್ರಕ್ಕೆ ತಾನು ಸತ್ತೆನೆಂದು ಒಪ್ಪಿಕೊಳ್ಳಲು ಅವನ ಯಾವತ್ತೂ ಬಂಡಾಯಕೋರ ಮನಸ್ಸು ಸಿದ್ಧವಿರಲಿಲ್ಲ. ಅಂತಿಮ ಸಂಸ್ಕಾರದ ಎಲ್ಲಾ ವಿಧಿವಿಧಾನಗಳೊಂದಿಗೆ ಅವನದೇ ಎದೆಯ ಮೇಲೆ ಅವನದೇ ಕೈಗಳನ್ನು ಜೋಡಿಸಿ ಅಂಗಾತನಾಗಿ ಪೆಟ್ಟಿಗೆಯೊಳಗೆ ಮಲಗಿಸಿದ್ದರು. ಹೆನ್ರಿ, ಅವನ ಕೈಗಳನ್ನು ಜೋಡಿಸಿದ್ದ ಬಂಧನದಿಂದ ಬಿಡಿಸಿಕೊಳ್ಳುವುದೇನೂ ದೊಡ್ಡ ವಿಷಯವಾಗಿರಲಿಲ್ಲ. ಆದರೂ, ಅದರಿಂದ ಹೆಚ್ಚೇನೂ ಉಪಯೋಗವಾಗುತ್ತಿರಲಿಲ್ಲ. ಅವನನ್ನು ಸುತ್ತುವರೆದಿದ್ದ […]

ಕಥಾಲೋಕ

ಲಾಕ್ ಡೌನ್: ಹಾಡ್ಲಹಳ್ಳಿ ನಾಗರಾಜ್

ಚೆಲುವೇಗೌಡನಿಗೆ ಮಾಮೂಲಿನಂತೆ ಬೆಳಗ್ಗೆ ಆರಕ್ಕೆ ಎಚ್ಚರವಾಯಿತು. ಹೊದಿಕೆಯೊಳಗೆ ಸದ್ದಾಗದಂತೆ ಮೆಲ್ಲಗೆ ಇನ್ನೊಂದು ಮಗ್ಗುಲಿಗೆ ಹೊರಳಿಕೊಂಡ. ನಿದ್ದೆ ಹರಿದಿದ್ದರೂ ಏಳುವ ಮನಸ್ಸಾಗಲಿಲ್ಲ. ಕಣ್ಣು ಮುಚ್ಚಿಕೊಂಡವನು ಕಿವಿ ತೆರೆದುಕೊಂಡು ಸದ್ದಿಲ್ಲದೇ ಮಲಗಲು ಯತ್ನಿಸಿದ. ತಾನು ಮಲಗಿರುವ ಪ್ಯಾಸೇಜಿನ ಹಿಂದಿನ ಬಚ್ಚಲು ಕಡೆ ಸೊಸೆಯ ಚಟುವಟಿಕೆ ನಡೆದಿತ್ತು. ಅವಳ ಗಂಡ ಹಾಗು ಮಕ್ಕಳು ಬಂದು ಹೋದ ನಂತರ ಕಕ್ಕಸ್ಸುಕೋಣೆಯನ್ನು ಬರಲಿನಿಂದ ರಪ್ ರಪ್ ಎಂದು ತೊಳೆದಳು. ಅಲ್ಲಿಂದ ಬಚ್ಚಲಿಗೆ ದಾವಿಸಿದವಳು ಬಟ್ಟೆ ಬಿಚ್ಚಿ ನಿಂತಿದ್ದ ಮಕ್ಕಳಿಗೆ ನೀರೆರೆದು ಹೊರಕಳಿಸಿ ತಾನೂ ಮೈತೊಳೆದುಕೊಂಡಳು. […]

ಕಥಾಲೋಕ

ಬದುಕು ಬಯಲಿಗೆ: ಆನಂದ ಎಸ್ ಗೊಬ್ಬಿ.

ದುಡಕಂದು ತಿನ್ನಾಕ ಅಂತ ಬೆಂಗ್ಳೂರಿಗೆ ಹೋಗಿದ್ದ ಶಂಕ್ರನ ಚಡ್ಡಿ ದೊಸ್ತ ಹಣಮಪ್ಪ ಪೋನ್ ಮಾಡಿ “ಬರ್ತೈಯಿದೀನಿ ಲೇ ಮಗ, ಕೆಲಸ ಇಲ್ಲ ಗಿಲಸ ಇಲ್ಲ. ಬಾಳ ತಿಪ್ಲ ಆಗ್ಯಾದಾ , ಹೋರಗ ಹ್ವಾದ್ರ ಸಾಕು ಪೋಲಿಸ್ರೂ ಕುಂಡಿ ಮ್ಯಾಗ ಬಾರಸದೇ ಬಾರಸಾಕ ಹತ್ಯಾರ ಲೇ ಅವರೌನ್. ನಮಗ ಸುಮ್ನೆ ಕುಂದ್ರದು ಆಗವಲ್ಲದು, ಸುಮ್ನೇ ಕುಂದ್ರು ಅಂದ್ರೇ ಎಷ್ಟು ದಿನ ಅಂತ ಕುಡ್ತಿ , ತಿಂಗ್ಳ‌ ಆಗಕ ಬಂತು, ಕೆಲಸ ಇಲ್ಲದೆ ಬಗಸಿ ಇಲ್ಲದೆ, ಹೊಟ್ಟಿ ನಡಿಬೇಕಲ್ಲಪ್ಪಾ ಮಾರಾಯ.” […]

ಕಥಾಲೋಕ

ಸಾವಿತ್ರಿ: ಸುರೇಶ್ ಮಲ್ಲಿಗೆ ಮನೆ

ಆವತ್ತು ಸೋಮಾರ ರಾತ್ರಿ ನಾನು ಒಬ್ಬಾಕೆ ಕತ್ತಲಾಗ ಹುಲಿಕಲ್ಲು ಕಾಡಾಗ ಒಣಗಿದ ಮರನಾ ಕಡೀತಿದ್ನ, ಆ ಬೆವರ್ಸಿ ಹುಲಿ ಗಿಡದ ಮಟ್ಟಿಂದ ಬಂದು ನನ್ನ ನೋಡಿ… ಘರ್… ಅಂತ ಘರ್ಜಿಸ್ತು…!!.. ಹಂಗೆ ಕತ್ತೀನ ಕೈಯಿಂದ ಹಿಡಿದು ಮೇಲಕ್ಕೆತ್ತಿ, ದೊಡ್ಡ ಕಣ್ಣುಬಿಡುತ್ತಾ, ಅಡ್ಡಿಡಿಡಿ……. ಅಡ್ಡಿಡಿಡಿ…… ಅಡ್ಡಿಡಿಡಿ…. ಅಂದೇ ನೋಡು……!!!ಅಹ್..ಹ್….ಹ್…ಹ್..ಹ್…ಹ…. ಇಲಿ ಮರಿತರ ಹೆದರಿ ಹಂದಿ ತರ ಬಿದ್ದು, ಕಾಡೊಳಗೆ ಓಡೋಯಿತು ನೋಡು…….ಅಹ್..ಹ್…ಹ್….ಹ್….ಹ್…ಹ….. ಅಂತ ನಗ್ತಾ,…… ಹುಲಿ ಮುಂದೆ ತಾನು ಒಬ್ಬಂಟಿಯಾಗಿ ತೋರಿದ ಪೌರುಷಾನ ಮುಂಜಾನೆ ತನ್ನ ಅಂಗೈ ಅಗಲದ […]

ಕಥಾಲೋಕ

ಸುಶೀಲೆ: ವರದೇಂದ್ರ ಕೆ.

ಜಮೀನ್ದಾರರ ಒಬ್ಬನೇ ಮಗ, ಕಣ್ಣಲ್ಲಿ ಸನ್ನೆ ಮಾಡಿದರೆ ಸಾಕು ತಟಕ್ಕನೆ ಕೆಲಸವಾಗಿಬಿಡುತ್ತದೆ. ಮಾತು ಆಡಿದರಂತೂ ಊರಿನ ಯಾವ ಧನಿಕನೂ ಎದುರಾಡುವಂತಿಲ್ಲ. ಅಷ್ಟೇ ಸಹಜ ನಡೆಯುಳ್ಳ ಪ್ರಾಮಾಣಿಕ ಜೀವ. ಗಾಂಭೀರ್ಯತೆಯೊಂದಿಗೆ ಕನಿಕರವೂ ತುಂಬಿಕೊಂಡ ಮುಖ. ಚಿರ ಯುವಕ, ಓದಿನಲ್ಲೂ ಚತುರನಾಗಿ ವೈದ್ಯಲೋಕಕ್ಕೆ ಕಾಲಿಟ್ಟ ಉತ್ತಮ ಕೈಗುಣವಿದೆ ಎಂಬ ಪ್ರಶಂಸೆಗೆ ಪಾತ್ರನಾದ ಸ್ಫುರದ್ರೂಪಿ ತರುಣಸುರೇಶ್ ಗೌಡನಿಗೆ ತಮ್ಮ ಮಗಳನ್ನೇ ಧಾರೆಯೆರೆಯಲು ದುಂಬಾಲುಬಿದ್ದ ಅದೆಷ್ಟೋ ಸಂಬಂಧಿಕರು ಹಿರಿಗೌಡರನ್ನು ಕೇಳಿ ಕೇಳಿ ಬಂದ ದಾರಿಗೆ ಸುಂಕವಿಲ್ಲವೆಂದು ಸೋತಮುಖದೊಂದಿಗೆ ಮರಳಿದ್ದಾರೆ. ಹಿರಿ ಧರ್ಮಗೌಡರು ತನ್ನ […]

ಕಥಾಲೋಕ

ದೀಪಗೃಹದಲ್ಲಿ ಒಂದು ರಾತ್ರಿ…..: ಜೆ.ವಿ.ಕಾರ್ಲೊ.

ಇಂಗ್ಲಿಷ್ ಮೂಲ: ಜೆ.ಎಸ್.ಫ್ಲೆಚರ್ಅನುವಾದ: ಜೆ.ವಿ.ಕಾರ್ಲೊ. ‘ಶಿವರಿಂಗ್ ಸ್ಯಾಂಡ್’ ದೀಪಗೃಹಕ್ಕೆ ಮತ್ತೊಬ್ಬ ಕಾವಲುಗಾರನಾಗಿ ಮೊರ್ಡೆಕಾಯ್ ಚಿಡ್ಡೋಕ್ ಬಂದು ಇಳಿದಾಗ , ಜೆಝ್ರೀಲ್ ಕಾರ್ನಿಶ್ ತನ್ನ ಪಾಲಿನ ಪಾಳಿಯನ್ನು ಮುಗಿಸಿ ಆಗ ತಾನೇ ನಿದ್ದೆ ಹೋಗಿದ್ದ. ಕಾರ್ನಿಶ್ ನಿದ್ದೆಯಿಂದ ಏಳುವಾಗ ತಾನು ಎದುರುಗೊಳ್ಳಲಿರುವ ಮನುಷ್ಯ ಯಾರು, ಎಂತವನು ಎಂದು ಅವನಿಗೆ ಆ ಗಳಿಗೆಯಲ್ಲಿ ಗೊತ್ತಾಗಿರುವ ಸಂಭವವಿರಲಿಲ್ಲ. ಗೊತ್ತಿದ್ದರೆ ಅವನು ಆಗಷ್ಟೇ ತಿಂಗಳ ರೇಶನ್ ಮತ್ತು ಚಿಡ್ಡೋಕನನ್ನು ಇಳಿಸಿ ಹಿಂದುರಿಗಿದ ದೋಣಿಯನ್ನು ಹತ್ತುವುದರಲ್ಲಿ ಯಾವುದೇ ಸಂಶಯವಿರಲಿಲ್ಲ! ಚಿಡ್ಡೋಕ್ ಬರುವ ಮುನ್ನ ನಾವಿಬ್ಬರೇ […]

ಕಥಾಲೋಕ

ಒಂದು ನಾಯಿಮರಿಗಾಗಿ….: ಜೆ.ವಿ.ಕಾರ್ಲೊ

ಅಂದು ಸಂಜೆ ಲಂಡನಿನಲ್ಲಿ ಮೈ ಕೊರೆಯುವಂತ ಚಳಿ. ಬಸ್ಸಿನೊಳಗೆ ಹಲ್ಲು ಕಚ್ಚಿಕೊಂಡು ಮುದುಡಿ ಕುಳಿತಿದ್ದ ಪ್ರಯಾಣಿಕರಿಗೆ ಯಾರೋ ಎಡೆಬಿಡದೆ ಚೂರಿಯಿಂದ ಕೊಚ್ಚುತ್ತಿರುವಂತ ಅನುಭವವಾಗುತ್ತಿತ್ತು. ಸದ್ದು ಮಾಡುತ್ತಾ ರೊಂಯ್ಯನೆ ಬಸ್ಸಿನೊಳಗೆ ನುಗ್ಗುತ್ತಿದ್ದ ಗಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಜನ ಹರಸಾಹಸ ಪಡುತ್ತಿದ್ದರು. ಬಸ್ಸು ಮುಂದಿನ ಸ್ಟಾಪಿನಲ್ಲಿ ನಿಂತಾಗ ಇಬ್ಬರು ಮಹಿಳೆಯರು, ಮತ್ತೊಬ್ಬ ಪುರುಷ ಬಸ್ಸು ಹತ್ತಿ ಖಾಲಿ ಇದ್ದ ಸೀಟುಗಳಲ್ಲಿ ಆಸೀನರಾದರು, ಮಹಿಳೆಯರಲ್ಲಿ ಒಬ್ಬಾಕೆಗೆ ಅಷ್ಟೇನೂ ವಯಸ್ಸಾಗಿರಲಿಲ್ಲ. ಆಕೆ ಸೀಲ್ ಚರ್ಮದ ಕೋಟು ಧರಿಸಿದ್ದಳು. ಅಂದಿನ ಮೇಲ್ಮಧ್ಯಮ ವರ್ಗದ ಸ್ತ್ರೀಯರ […]

ಕಥಾಲೋಕ

ಕತ್ತಲ ಗುಮ್ಮ: ಶೀಲಾ ಗೌಡ

ಕಾಲೇಜ್, ಟುಟೋರಿಯಲ್ಸ್, ಟೆಸ್ಟ್, ಪರೀಕ್ಷೆ ಬರೀ ಇದೇ ಆಗಿದೆ ನಮ್ಮ ದೈನಂದಿನ ಕೆಲಸ. ಬೇಜಾರು ಮಾಡಿಕೊಳ್ಳೋ ಹಾಗಿಲ್ಲ, ಅಕಾಸ್ಮಾತ್ತಾದರೂ ಹೇಳುವ ಹಾಗಿಲ್ಲ. ಅಪ್ಪಿ ತಪ್ಪಿ ಹೇಳಿದರೆ ಕೇಳಿದವರ ಪುಕಸಟ್ಟೆ ಭೋದನೆ ಜೊತೆಗೆ ನಗು ಮೊಗದಿಂದ ಆಲಿಸುವ ಶಿಕ್ಷೆ. ಒಟ್ಟಿನಲ್ಲಿ ಓದೋ, ಮಾರ್ಕ್ಸ್ ತೆಗೆಯೋ ರೇಸಿನಲ್ಲಿ ಓಡ್ತಿದಿವಿ. ಹೀಗೆ ತಮ್ಮ ಬೇಸರವನ್ನು ಹಂಚಿಕೊಳ್ಳುತ್ತ ಟುಟೋರಿಯಲ್ಸ ಕಡೆ ಹೆಜ್ಜೆ ಹಾಕುತಿದ್ದರು ಐವರು ಗೆಳೆಯರು. ಅರವಿಂದನ ಹಾಗೆ ನಾವೆಲ್ಲ ಡಿಪ್ಲೋಮ ಮಾಡಬೇಕಿತ್ತು ಹೀಗೆ ಒಂದೆ ಸರಿ ಟೆನ್ನಷನ್ ಇರ್ತಿರ್ಲಿಲ್ಲ ಎಂದ ಸುನಿಲನ […]

ಕಥಾಲೋಕ

ಸಾಲ: ಅನಂತ ರಮೇಶ್

1 ಹದಿನೈದು ವರ್ಷಗಳಿಂದ ಅಭ್ಯಾಸವಾಗಿ ಹೋಗಿದೆ. ಲತಾಳ ಅದೇ ವ್ಯಂಗ್ಯದ ಮಾತು. “ಸಾಹೇಬರ ಸವಾರಿ ಈವತ್ತು ಯಾವ ಕಡೆಗೆ?”. ನಾನು ಉತ್ತರಿಸುವ ಗೊಡವೆಗೆ ಹೋಗುವುದಿಲ್ಲ. ತಿಂಡಿಯೊಟ್ಟಿಗೆ ಕಾಫಿ ಲೋಟ ಟೇಬಲ್‌ಮೇಲೆ ಬಡಿಯುತ್ತಾಳೆ. ಸಾವಕಾಶ ತಿಂದು ಹೊರಡುತ್ತೇನೆ. ಆ ಸಮಯ ಮೀರುವುದಿಲ್ಲ. ಈಗ ಬೆಳಗಿನ 9:30. ಸಾಮಾನ್ಯವಾಗಿ ಎಲ್ಲರೂ ಆಫೀಸಿಗೆ ಹೊರಡುವ ಸಮಯ! ಹೊರಗೆ ರಸ್ತೆಯಲ್ಲಿ ನಡೆಯುವಾಗ, ಲತಾಳ ಬಗೆಗೆ ಕನಿಕರ ಅನ್ನಿಸುತ್ತೆ. ಅವಳಾದರೂ ಏನು ಮಾಡಿಯಾಳು? ನನಗಂತೂ ತಿಂಗಳಿಗೊಮ್ಮೆ ಸಂಬಳ ತರುವ ಕೆಲಸವಿಲ್ಲ. ಯಾವುದಾದರೂ ಮನೆ ಬಾಡಿಗೆ, […]

ಕಥಾಲೋಕ

ಇಳಾ: ಗಿರಿಜಾ ಜ್ಞಾನಸುಂದರ್‌

“ಪಿಂಕಿ, ಬಬ್ಲೂ ಬನ್ನಿ ಮನೆಗೆ… ತುಂಬ ಹೊತ್ತಾಗಿದೆ.. ಆಶಾ ಆಂಟಿ ಮನೆಗೆ ಬಂದ್ರೆ ನಿಮಗೆ ಏನು ಬೇಡ” ಅಂತ ತಮ್ಮ ಮಕ್ಕಳನ್ನು ಕರೆದುಕೊಂಡು ಹೋದಳು ಪಿಂಕು ಬಬ್ಲೂ ಅಮ್ಮ. ಆಗಲೇ ರಾತ್ರಿ ಎಂಟು ಗಂಟೆ ಆಗಿದೆ… ಇನ್ನೊಂದು ಹತ್ತು ನಿಮಿಷಕ್ಕೆ ಇನ್ನು ಆಶಾ ಆಂಟಿ ಮನೆಯಲ್ಲಿ ಉಳಿದುಕೊಂಡಿದ್ದ ೫- ೬ ಮಕ್ಕಳನ್ನೆಲ್ಲ ಅವರವರ ಮನೆಯವರು ಕರೆದುಕೊಂಡು ಹೋದರು. ಆಶಾ ಎಲ್ಲ ಮಕ್ಕಳು ಹೋದಮೇಲೆ ಸಪ್ಪೆ ಮುಖ ಹಾಕಿಕೊಂಡು ಕುಳಿತಿದ್ದಳು. ಮನೆಯೆಲ್ಲ ಚಾಕಲೇಟ್ ಪೇಪರ್ಸ್, ತಿಂಡಿ ತಿನಿಸುಗಳನ್ನು ಚೆಲ್ಲಿ […]

ಕಥಾಲೋಕ

ಸೇತುವೆ….: ಸತೀಶ್ ಶೆಟ್ಟಿ ವಕ್ವಾಡಿ.

ಅದು ಶರದೃತುವಿನ ಬೆಳಗಿನ ಜಾವ. ಮುಂಗಾರಿನ ಮೋಡಗಳು ತೆರೆಮರೆಗೆ ಸರಿದು ಆಕಾಶ ಶುಭ್ರವಾಗಿತ್ತು. ಹುಣ್ಣಿಮೆಯ ದಿನವಾಗಿದ್ದರಿಂದ ಚಂದಿರ ಬೆಳ್ಳಿಯ ಬಟ್ಟಲಂತೆ ಸುಂದರವಾಗಿ ಕಾಣಿಸುತ್ತಿದ್ದ. ಮೋಡಗಳ ಸವಾಲುಗಳಿಲ್ಲದ ಕಾರಣ ತಾರೆಗಳು ಇಡೀ ಆಗಸವನ್ನು ಆಕ್ರಮಿಸಿ ತಮ್ಮ ಆಧಿಪತ್ಯ ಸ್ಥಾಪಿಸಿ, ಭಾನ ತುಂಬೆಲ್ಲಾ ಬೆಳಕಿನ ಸರಪಳಿ ನಿರ್ಮಿಸಿದ್ದವು. ಹುಣ್ಣಿಮೆಯ ಚಂದಿರ, ರಾತ್ರಿಯ ಕತ್ತಲೆಯನ್ನೆಲ್ಲ ತನ್ನ ಒಡಲೊಳಗೆ ತುಂಬಿಕೊಂಡು ಬೆಳದಿಂಗಳ ಮಳೆಯನ್ನೇ ಸುರಿಸುತ್ತಿದ್ದ. ಪಶ್ಚಿಮದಿಂದ ಬೀಸುತ್ತಿದ್ದ ತಂಗಾಳಿ, ನುಸುಕಿನ ಮಂಜಿನ ಹನಿಗಳ ಸಾಂಗತ್ಯದಿಂದ ಚಳಿಯು ಅನ್ನಿಸಿದ ತಣ್ಣನೆಯ ವಾತಾವರಣ ಸೃಷ್ಟಿಸಿತ್ತು. ಮರಗಿಡಗಳ […]

ಕಥಾಲೋಕ

ಪ್ರೇಮನಾದ: ಸುಮ ಉಮೇಶ್

ರಾಧಮ್ಮನವರ ನಂತರ ಬಹಳ ವರ್ಷಗಳ ಮೇಲೆ ಹುಟ್ಟಿದವನೇ ಅವರ ತಮ್ಮ ಸುಧಾಕರ್. ರಾಧಮ್ಮನಿಗೂ ಸುಧಾಕರ್ ಗೂ ಅಂತರ ಹೆಚ್ಚಾಗಿದ್ದರಿಂದ ಅವನನ್ನು ಕಂಡರೆ ಎಲ್ಲರಿಗೂ ಅತೀವ ಪ್ರೀತಿ. ಅಕ್ಕನ ಮುದ್ದಿನ ತಮ್ಮ ಅವನು. ರಾಧಮ್ಮನವರ ಮದುವೆ ಆದಾಗ ಸುಧಾಕರ್ಗೆ ಕೇವಲ ಎಂಟು ವರ್ಷ. ಮದುವೆ ಆದ ವರ್ಷದೊಳಗೆ ರಾಧಮ್ಮ ಹೆಣ್ಣು ಮಗುವಿನ ತಾಯಿ ಆದಾಗ ಎಲ್ಲರಿಗೂ ಸಂತಸ. ರಾಧಳ ತಂದೆ ತಾಯಿಗೆ ದೂರದ ಒಂದು ಆಸೆ ಮೊಳೆಯಲಾರಂಭಿಸುತ್ತದೆ. ಪುಟ್ಟ ಸುರಭಿಯೇ ಮುಂದೆ ಸುಧಾಕರ್ನ ಕೈ ಹಿಡಿದು ಮೊಮ್ಮಗಳು ಮನೆ […]