ದೀವಾಪುರ: ರವಿರಾಜ್ ಸಾಗರ್. ಮಂಡಗಳಲೆ.

ತವರು ನೆಲಕ್ಕೆ ಕಾಲಿಡುತ್ತಿದ್ದಂತೆ ಕಳೆದುಕೊಂಡ ಅಮೂಲ್ಯ ವಸ್ತುವೊಂದು ಮತ್ತೆ ಸಿಕ್ಕಾಗಿನ ಸಂತಸ, ಮತ್ತದೇನೂ ಅನುಭೂತಿ, ನವ ಯುವಕರಲ್ಲಿ ಕಾಣುವಷ್ಟು ಉತ್ಸಾಹ, ಎಂಭತ್ತರ ಇಳಿವಯಸ್ಸಿನ ನಾರಣಪ್ಪನಲ್ಲಿ ಆದ್ರೆಮಳೆಯ ವರದಾನದಿಯಂತೆ ಉಕ್ಕಿ ಹರಿಯುತ್ತಿತ್ತು. ಬಹಳ ದಶಕದ ನಂತರ ಅಮೆರಿಕದಿಂದ ಊರಿಗೆ ಬರುತಿದ್ದ ನಾರಣಪ್ಪ ಅವರನ್ನು ಸ್ವಾಗತಿಸಲು ಊರಿನ ಅರಳೀಕಟ್ಟಿ ಬಳಿ ಒಂದಿಷ್ಟು ಜನ ಜಮಾಯಿಸಿದ್ದರು. ಅಮೆರಿಕದಿಂದ ಬರುತ್ತಿದ್ದಾರೆ ಎಂದಮೇಲೆ ನಾರಣಪ್ಪ ಅವರು ಅಲ್ಲಿ ಇಂಜಿನಿಯರೋ, ಡಾಕ್ಟರೋ, ವಿಜ್ಞಾನಿಯೋ, ಯಾವುದೋ ದೊಡ್ಡ ನೌಕರಿಗೋ ಹೋಗಿರಬೇಕೆಂದು ತಿಳಿಯಬೇಡಿ. ಅವರು ಎಪ್ಪತ್ತರ ದಶಕದ ಗೇಣಿ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೫): ಎಂ.ಜವರಾಜ್

ಭಾಗ 5 ಬೆಳಗಿನ ಜಾವದೊತ್ತಲ್ಲಿ ಮುಂಗಾರು ಬೀಸ್ತಿತ್ತು. ಶೀತಗಾಳಿ. ದೊರ, ವಾಟೀಸು, ಕಾಂತ, ಕುಮಾರ, ಚಂದ್ರ ಎಲ್ಲ ಶಿಶುವಾರದ ಜಗುಲಿ ಮೇಲೆ ಶೀತಗಾಳಿಗೆ ನಡುಗುತ್ತ ತುಟಿ ಅದುರಿಸುತ್ತ ಪಚ್ಚಿ ಆಡುತ್ತಿದ್ದವು. ಶೀತಗಾಳಿ ಜೊತೆಗೆ ಸಣ್ಣ ಸಣ್ಣ ಹನಿ ಉದುರಲು ಶುರು ಮಾಡಿತು. ಶಿಶುವಾರದ ಜಗುಲಿ ಕೆಳಗೆ ನೆಲ ಕೆಂಪಗಿತ್ತು. ಕೆಮ್ಮಣ್ಣು. ಕೆಂಪು ಅಂದ್ರೆ ಕೆಂಪು. ಹನಿ ಉದುರುವುದ ಕಂಡು ಪಚ್ಚಿ ಆಡುವುದನ್ನು ನಿಲ್ಲಿಸಿ ಕೆಳಗಿಳಿದು ಮೊನಚಾದ ಬೆಣಚು ಕಲ್ಲು, ಕಡ್ಡಿ ತೆಗೆದುಕೊಂಡು ಕೆಮ್ಮಣ್ಣು ಕೆದಕಿ ಅಲ್ಲೆ ಅವರವರದೇ … Read more

ಮಗಾ ಸಾಹೇಬ..! : ಶರಣಗೌಡ ಬಿ ಪಾಟೀಲ ತಿಳಗೂಳ

ಅಂಚಿನ ಮನೀ ಚಂದ್ರಣ್ಣ ಬಿಸಿಲು ನಾಡಿನ ಕೊನೆಯಂಚಿನ ಹಳ್ಳಿಯವನು. ತಮ್ಮೂರ ಯಾವಾಗ ದೊಡ್ಡದಾಗ್ತಾದೋ ಏನೋ ಅಂತ ಆಗಾಗ ಚಿಂತೆ ಮಾಡತಿದ್ದ ಊರ ಕುದ್ಯಾ ಮಾಡಿ ಮುಲ್ಲಾ ಬಡು ಆದಂಗಾಯಿತು ಅಂತ ಹೆಂಡತಿ ಶಾಂತಾ ಮುಗ್ಳನಕ್ಕಿದ್ದಳು. ಇವನ ಹಳ್ಳಿ ಬಹಳ ಅಂದ್ರ ಬಹಳ ಸಣ್ಣದು ಬೆರಳಿನಿಂದ ಎಷ್ಟು ಬಾರಿ ಎಣಿಸಿದರೂ ಲೆಕ್ಕ ತಪ್ಪುತಿರಲಿಲ್ಲ ಹಳ್ಳಿಯಲ್ಲಿ ಹೆಚ್ಚಿಗೆ ಓದಿವರೂ ಇರಲಿಲ್ಲ ಕೆಲವರು ಹತ್ತನೇ ಒಳಗೇ ಓದು ಮುಗಿಸಿದರೆ ಇನ್ನೂ ಕೆಲವರು ಹೆಬ್ಬೆಟ್ಟೊತ್ತುವವರಾಗಿದ್ದರು. ಚಂದ್ರಣ್ಣ ಅತ್ತ ಅಕ್ಛರಸ್ತನೂ ಅಲ್ಲದೆ ಅನಕ್ಛರಸ್ತನೂ ಅಲ್ಲದೆ … Read more

ಪೀಗ: ಡಾ. ಶಿವಕುಮಾರ್‌ ಡಿ ಬಿ

ಪರ್ನಳ್ಳಿ ಗಂಗಪ್ಪ ಅಲಿಯಾಸ್ ಪೀಗ ತಂದೆಯ ಕಾರಣದಿಂದಾಗಿ ಸಮಾಜದ ನಿರ್ಲಕ್ಷಕ್ಕೆ ಗುರಿಯಾಗಿದ್ದ. ಈತನ ತಂದೆ ನಾಗಪ್ಪ ಕುಡುಕ. ಹೆಂಡತಿ ಮಕ್ಕಳ ಮೇಲೆ ಒಂದು ಚೂರು ಜವಾಬ್ದಾರಿ ಇಲ್ಲದವ, ಊರಿನ ಯಾವುದೋ ಒಂದು ಜಗಳದಲ್ಲಿ ಕಾಲಿಗೆ ಗಾಯ ಅದು ಗ್ಯಾಂಗ್ರಿನ್ ಆಗಿ ಗುಣಪಡಿಸಲಾಗದೆ ಸತ್ತ. ಈ ನಾಗಪ್ಪನಿಗೆ ಹುಟ್ಟಿದವರು ಮೂರು ಜನ ಗಂಡು ಮಕ್ಕಳು. ಮೂರು ಜನರ ಶಿಕ್ಷಣ ಬಾಲ್ಯದಲ್ಲಿಯೇ ಮೊಟಕಾಯಿತು. ತಾಯಿಯ ಮಾತನ್ನು ಕೇಳದ ಈ ಮೂವರು ಐದು, ಆರರವರೆಗೂ ಶಾಲೆಯಲ್ಲಿ ಕಲಿಯಲಿಲ್ಲ. ಹೊಲ ಗದ್ದೆ ಬಯಲುಗಳಲ್ಲಿ … Read more

ಕರ್ಮ……..: ರೂಪ ಮಂಜುನಾಥ

“ಥೂ ಬೋ…. ಮಕ್ಳಾ! ಹರಾಮ್ ಚೋರ್ಗುಳಾ? ಕೆಲ್ಸಕ್ ಬಂದು ಬೆಳ್ಬೆಳಗ್ಗೇನೇ ಏನ್ರೋ ನಿಮ್ ಮಾತುಕತೆ ಕಂಬಕ್ತ್ ಗುಳಾ!ಇರಿ ಇರಿ ನಿಮ್ಗೆ ಹೀಗ್ ಮಾಡುದ್ರಾಗಲ್ಲ. ಸರ್ಯಾಗ್ ಆಪಿಡ್ತೀನಿ ಇವತ್ತಿಂದ ನೀವ್ ಮಾಡೊ ದರಿದ್ರದ ಕೆಲಸಕ್ಕೆ ನಿಮ್ ಕೂಲಿ ಐವತ್ತು ರೂಪಾಯಿ ಅಷ್ಟೆ. ಬೇಕಾದ್ರೆ ಇರಿ. ಇಲ್ದೋದ್ರೆ, ನಿಮ್ಗೆಲ್ಲಿ ಬೇಕೋ ಅಲ್ಲಿ ನೆಗೆದ್ಬಿದ್ದು ಸಾಯ್ರೀ”, ಅಂದು ಮಂಡಿಯೂರಿ ಕೂತು ಬಾರ್ ಬೆಂಡಿಂಗ್ ಮಾಡುತ್ತಿದ್ದ ಕೆಲಸದವರು ಭುವನ್ ಮತ್ತೆ ಅಮೋಲ್ ನನ್ನ ಮಾಲೀಕ ಬಿಪುಲ್ ತನ್ನ ಬೂಟು ಕಾಲಿನಿಂದ ಒದ್ದು, ಇಬ್ಬರ … Read more

ಅಂಡೇ ಪಿರ್ಕಿ ಅಮೀರ..: ಶರಣಬಸವ. ಕೆ.ಗುಡದಿನ್ನಿ

ದೋ ಅಂತ ಮೂರಾ ಮುಂಜಾನಿಯಿಂದ ಬಿಡ್ಲಾರದ ಸುರಿಯೋ ಮಳ್ಯಾಗ ಅವನ್ಗೀ ಎಲ್ಲಿ ನಿಂತ್ಕಂಡು ಚೂರು ಸುಧಾರಿಸ್ಕೆಳ್ಳಬೌದೆಂಬ ಅಂದಾಜು ಹತ್ಲಿಲ್ಲ. ಹಂಗಾ ನೆಟ್ಟಗ ನಡದ್ರ ಪೂಜಾರಿ ನಿಂಗಪ್ಪನ ಮನೀ ಅದರ ಎಡಕ್ಕಿರದೇ ಅಮೀರನ ತೊಟಗು ಮನಿಯಂಗ ಕಾಣೊ ತಗ್ಡಿನ ಶೆಡ್ಡು. ಗಂವ್ವೆನ್ನುವ ಇಂತಾ ಅಪರಾತ್ರ್ಯಾಗ ಅಮೀರನೆಂಬೋ ಆಸಾಮಿ ಹಿಂಗ್ ಅಬ್ಬೇಪಾರಿಯಂಗ ಓಣಿ ಓಣ್ಯಾಗ ತಿರಗಾಕ ಅವ್ನ ಹಾಳ ಹಣೀಬರ ಮತ್ಯಾ ಮಾಡ್ಕೆಂಡ ಕರುಮಾನ ಕಾರಣ ! ಅವ್ನ ಹೇಣ್ತೀ ನೂರಾನಿ ರಾತ್ರ್ಯಾಗಿಂದ ಒಂದ್ಯಾ ಸವನ ಹೆರಿಗಿ ಬ್ಯಾನಿ ಅಂತ … Read more

ಮಾನ್ಸೀ. . . : ಗೀತಾ ನಾಗರಾಜ.

ಮುಗ್ಧ ಮಾನ್ಸಿ ಗೆ ಸಿಕ್ಕ ಮಹಾ ಒರಟು ಗಂಡ ಪರೀಕ್ಷಿತ್.ಅವನ ಒರಟುತನಕ್ಕೆ ಬೇಸತ್ತು ಹೋಗಿದ್ದರೂ ಹೇಗೋ ಸಂಸಾರವನ್ನು ನಿಭಾಯಿಸಲೇ ಬೇಕಾದ ಅನಿವಾರ್ಯತೆ ಅವಳಿಗೆ. ಅಣ್ಣ ಸಂಪ್ರೀತನಿಗೆ ಅವಳೆಂದ್ರೆ ಪ್ರಾಣ.ಡಬಲ್ ಡಿಗ್ರಿ ಮಾಡಿದ್ದ. ತುಂಬಾ ನೇ ಇಂಟಲಿಜೆಂಟ್.ಪರಸ್ಪರ ಸದಾಕಾಲ ಇಬ್ಬರೂ ಕಷ್ಟ – ಸುಖಗಳನ್ನು ಹಂಚಿಕೊಳ್ಳುತ್ತಾರೆ.ಇದೊಂದೆ ಅವರ ಮನ ತೃಪ್ತಿಹೊಂದುವ ಆಯಾಮವಾಗಿತ್ತು. ಹೀಗೇ, ಕೆಲ ದಿನಗಳ ನಂತರ ಸಂಪ್ರೀತನಿಗೆ ಅವನದೇ ಕಂಪನಿಯ ಸ್ಟೆನೋ ಕನಕಳ ಪರಿಚಯವಾಗುತ್ತದೆ.ಪರಿಚಯ ಪ್ರೀತಿಯಾಗಿ, ಪ್ರೀತಿ ಪ್ರೆಮವಾಗಿ, ಒಂದು ಹದಕ್ಕೆ ಬಂದಾಗ,ಅವನೇ “ಮಾನ್ಸಿ ನಾನೊಂದು ಹುಡಗೀನ್ನ … Read more

ಕನ್ನಡ ಸಂಘ: ಮನು ಗುರುಸ್ವಾಮಿ

“ಏನ್ರಯ್ಯ ಇಡೀ ಕರ್ನಾಟಕನೇ ಆಳೋ ಪ್ಲಾನ್ನಿದ್ದಂಗದೆ.” ಕಾಡಾ ಆಫೀಸಿನ ಸಿಬ್ಬಂದಿಯೊಬ್ಬ ವ್ಯಂಗ್ಯವಾಡಿದ. “ಆಗೇನೂ ಇಲ್ಲ ಸರ್; ಸಮಾಜಮುಖಿ ಕೆಲಸಕ್ಕಾಗಿ” ವಿಶಾಲ್ ಸಮರ್ಥಿಸಿಕೊಂಡ.“ನಂಗೊತ್ತಿಲ್ವೇ ? ನೀವ್ ಮಾಡೋ ಉದ್ಧಾರ! ಹಾಕಿ ಹಾಕಿ ಸೈನಾ..” ಮತ್ತದೇ ಅಪಹಾಸ್ಯ ಕಿವಿಮುಟ್ಟಿತು.“ಉದ್ಧಾರನೋ ಹಾಳೋ; ಕೆಲ್ಸ ಮುಗಿದಿದ್ರೆ ಪತ್ರ ತತ್ತರಲ್ಲ ಇತ್ಲಾಗೆ” ವಿನೋದ ಕಿಡಿಕಾರಿದ.ಸಂಸ್ಥೆಯೊಂದರ ನೊಂದಣಿಗೆ ಈ ಯುವಕರಿಷ್ಟು ಎಣಗಾಡಿದ್ದು ಆ ಸಿಬ್ಬಂದಿಗೆ ತಮಾಷೆಯಾಗಿ ಕಂಡರೂ ಆ ಹತ್ತದಿನೈದು ಐಕ್ಳು ಮಾತ್ರ ಏನ್ನನ್ನೋ ಸಾಧಿಸಲಿಕ್ಕಿದು ಮುನ್ನುಡಿಯೆಂದೇ ಭಾವಿಸಿದ್ದರು. ಅಂದಹಾಗೆ ಅದು ಆಲಹಳ್ಳಿ. ಹಚ್ಚಹಸಿರಿನಿಂದ ಕೂಡಿರುವ … Read more

ಕನ್ನಡ ಮುತ್ತು: ಶ್ರೀನಿವಾಸ

ಶಂಕರಯ್ಯ ರೂಮು ಬಿಟ್ಟು ಹೊರಟ. ಅವನು ಗೋಕಾಕ್ ವರದಿ ಜಾರಿಗೆ ತರಲೇಬೇಕೆಂಬ ಪಣ ಮನದಲ್ಲಿ ತೊಟ್ಟು ಹೊರಟಿದ್ದ. ರಾಷ್ಟ್ರ ಕವಿ ಕುವೆಂಪು ಅವರ ” ಬಾರಿಸು ಕನ್ನಡ ಡಿಂಡಿಮವ… ” ಗೀತೆ ಅವನ ಕಿವಿಯಲ್ಲಿ ಮೊಳಗುತ್ತಿತ್ತು. ” ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ” ಎಂಬ ಉದ್ಘೋಷ ಅವನ ಮನದಲ್ಲಿ ಮೊಳುಗುತ್ತಿತ್ತು. ಶಂಕರಯ್ಯ ಮೈಸೂರಿನ ಕಡೆಯವನು. ಇದ್ದುದರಲ್ಲಿ ಹೇಗೋ ಒಂದಿಷ್ಟು ಓದಿಕೊಂಡು ಬೆಂಗಳೂರು ಸೇರಿದ್ದ. ಅವನ ಹಳ್ಳಿಯ ಹತ್ತಿರದ ತಾಲೂಕಿನಲ್ಲಿ ತನ್ನ ಪದವಿ ಮುಗಿಸಿ ಕೆಲಸ ಹುಡುಕಿ … Read more

ವೃದ್ಧಜೀವ ಹರೋಹರ!: ಹುಳಗೋಳ ನಾಗಪತಿ ಹೆಗಡೆ

ಅಂದಾಜು ಮೂರು ದಿನಗಳಾಗಿರಬಹುದು, ಬಾಳಕೃಷ್ಣ ಮಾಮಾ ತಮ್ಮ ಊರುಗೋಲಿಗಾಗಿ ತಡಕಾಡಲು ಪ್ರಾರಂಭಿಸಿ. ಯಾವ ಸುತ್ತಿನಲ್ಲಿ ತಡಕಾಡಿದರೂ ಕೈಗೆ ಸಿಗೂದೇ ಇಲ್ಲ ಅದು! ತಡಕಾಡುವ ಐಚ್ಛಿಕ ಕ್ರಿಯೆಯೊಂದಿಗೆ ‘ಪಾರತೀ, ನನ್ ದೊಣ್ಣೆ ಎಲ್ಲಿ…?’ ಎಂಬ ಅನೈಚ್ಛಿಕ ಕರೆಯೂ ಬೆರೆತಿದೆ. ಪಿತುಗುಡುವ ವೃದ್ಧಾಪ್ಯದ ಸಿನುಗು ನಾತದೊಂದಿಗೆ ಮೂರು ದಿನಗಳ ಅವರ ಮಲಮೂತ್ರಾದಿ ಸಕಲ ವಿಸರ್ಜನೆಗಳೂ ಒಂದರೊಳಗೊಂದು ಬೆರೆತು ಮನುಷ್ಯ ಮಾತ್ರರು ಕಾಲಿಡಲಾಗದಂತಹ ದುರ್ನಾತ ಆ ಕೋಣೇಲಿ ಇಡುಕಿರಿದಿದೆ. ಬಾಳಕೃಷ್ಣ ಮಾಮನ ಗೋಳನ್ನು ಕೇಳಿ ಅವನನ್ನು ಆ ಉಚ್ಚಿಷ್ಟಗಳ ತಿಪ್ಪೆಯಿಂದ ಕೈಹಿಡಿದು … Read more

“ಪರಿಸರ”: ನಳಿನ ಬಾಲಸುಬ್ರಹ್ಮಣ್ಯ

ಈ ಪರಿಸರದ ಮಧ್ಯೆ ನಾವು ಜೀವಿಸಿ ರುವುದು, ನಮ್ಮ ಪರಿಸರ ನಮ್ಮ ಜೀವನ. ಅರಣ್ಯ ಸಂಪತ್ತು ತುಂಬ ಉಪಯುಕ್ತವಾದದ್ದು ಹಾಗೂ ಅಮೂಲ್ಯವಾದದ್ದು. ಪೀಠೋಪಕರಣಗಳಿಗೆ ಅಥವಾ ಮನೆ ಅಲಂಕಾರಕ್ಕೆಂದು ಮರಗಳನ್ನು ಕಡಿಯುತ್ತೇವೆ, ಇದರಿಂದ ಕಾಡು ನಾಶವಾಗಿ ಮಳೆ ಇಲ್ಲದಂತಾಗುತ್ತದೆ, ಅಂತರ್ಜಲ ಕಡಿಮೆಯಾಗುತ್ತದೆ. ಕಾಡು ಪ್ರಾಣಿಗಳು ನಾಡಿಗೆ ನುಗ್ಗುವ ಕಾಲ ಅದಾಗಲೇ ಬಂದಿದೆ. ಸಸಿ ನೆಡುವುದು ಆಗಲಿಲ್ಲವೆಂದರೆ ತೊಂದರೆಯಿಲ್ಲ, ಬೆಳೆಸಿದ ಮರಗಳನ್ನು ಕಡಿಯುವ ಕೆಟ್ಟ ಕೆಲಸಕ್ಕೆ ಇಳಿಯುವುದು ಬೇಡ. ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ಸಂರಕ್ಷಿಸುತ್ತದೆ. ಗಿಡ ಮರಗಳನ್ನು … Read more

“ಹೀಗೊಂದು ಪ್ರೇಮ ಕಥೆ. . !” : ಅರವಿಂದ. ಜಿ. ಜೋಷಿ.

ಹುಡುಗ:-“I, love you, . . ನೀನು ನನ್ನನ್ನು ಪ್ರೀತಿಸುವೆಯಾ?. . ಹಾಗಿದ್ದರೆ ನಾ ಹೆಳಿದ ಹಾಗೆ “ಏ ಲವ್ ಯು”ಅಂತ ಹೇಳು.ಹುಡುಗಿ:-” ನಿನ್ನ ಪ್ರಶ್ನೆಗೆ ಉತ್ತರೀಸುವೆ. . . ಆದರೆ ಒಂದು ಕಂಡೀಷನ್ ಮೇರೆಗೆ”ಹುಡುಗ, :-“ಆಯ್ತು. . ಅದೇನು ಕಂಡೀಷನ್ , ಹೇಳು”ಹುಡುಗಿ:-“ನೀನು ಬದುಕಿನುದ್ದಕ್ಕೂ ನನ್ನ ಜೊತೆ ಇರುವುದಾದರೆ ಮಾತ್ರ ಉತ್ತರಿಸುವೆ.ಹುಡುಗ:-(ಮುಗುಳು ನಗೆ ನಗುತ್ತ) “ಅಯ್ಯೋ. . ಪೆದ್ದೇ ಇದೂ ಒಂದು ಕಂಡೀಷನ್ನಾ? ನಾನಂತೂ ತನು-ಮನದಿಂದ ನಿನ್ನವನಾಗಿದ್ದೇನೆ, ಇಂತಹುದರಲ್ಲಿ ನಿನ್ನ ಬಿಟ್ಟು ನಾ ಎಲ್ಲಿ ಹೋಗಲಿ?”ಹುಡುಗಿಗೆ, … Read more

“ಕತ್ತಲ ಹೂವು” ನೀಳ್ಗತೆ (ಭಾಗ ೪): ಎಂ.ಜವರಾಜ್

-೪- ಮದ್ಯಾಹ್ನದ ಚುರುಚುರು ಬಿಸಿಲು. ಊರಿನ ಮುಂಬೀದಿ ಹಳ್ಳ ಕೊಳ್ಳ ಕಲ್ಲು ಮಣ್ಣಿಂದ ಗಿಂಜಿಕೊಂಡು ಕಾಲಿಟ್ಟರೆ ಪಾದ ಮುಳುಗಿ ಧೂಳೇಳುತ್ತಿತ್ತು. ಮಲ್ಲ ಮೇಷ್ಟ್ರು ಮನೆಯ ಎರಡು ಬ್ಯಾಂಡಿನ ರೇಡಿಯೋದಲ್ಲಿ ಪ್ರದೇಶ ಸಮಾಚಾರ ಬಿತ್ತರವಾಗುತ್ತಿತ್ತು. ಆಗ ಬಿಸಿಲ ಝಳಕ್ಕೆ ತಲೆ ಮೇಲೆ ಟವೆಲ್ ಇಳಿಬಿಟ್ಟು ಲಳಲಳ ಲಳಗುಟ್ಟುವ ಕ್ಯಾರಿಯರ್ ಇಲ್ಲದ ಅಟ್ಲಾಸ್ ಸೈಕಲ್ಲಿ ಭರ್ರಂತ ಬಂದ ಮಂಜ ಉಸ್ಸಂತ ಸೈಕಲ್ ಇಳಿದು ತಲೇಲಿದ್ದ ಟವೆಲ್ ಎಳೆದು ಬೆವರು ಒರೆಸಿಕೊಂಡು ತೆಂಗಿನ ಮರ ಒರಗಿ ನಿಂತಿದ್ದ ನೀಲಳನ್ನು ಒಂಥರಾ ನೋಡಿ … Read more

“ಕಿಂಚಿತ್ತೇ ಸಹಾಯ!”: ರೂಪ ಮಂಜುನಾಥ

ಈ ಕತೆಯ ನಾಯಕಿ ಸುಮ ಆ ದಿನ ಕೂಡಾ ಪಕ್ಕದ ಮನೆಯ ಆ ಹೆಂಗಸು ತನ್ನ ಗಂಡನ ಆಟೋನಲ್ಲಿ ಕೂತು ಕೆಲಸಕ್ಕೆ ಹೋಗುವುದನ್ನ ಕಂಡು”ಅಬ್ಬಾ, ಅದೇನು ಪುಣ್ಯ ಮಾಡಿದಾಳಪ್ಪಾ. ಅವರ ಮನೆಯವರು ಏನೇ ಕೆಲಸವಿದ್ದರೂ ಸರಿಯೆ, ಸಮಯಕ್ಕೆ ಸರಿಯಾಗಿ ಬಂದು ಹೆಂಡತಿಯನ್ನ ಆಟೋನಲ್ಲಿ ಕೂರಿಸಿಕೊಂಡು ಕೆಲಸಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರ್ತಾರೆ. ಅಯ್ಯೋ, ನಮ್ ಮನೇಲೂ ಇದಾರೇ ದಂಡಕ್ಕೆ!ಏನೇ ಕಷ್ಟ ಪಡ್ತಿದ್ರೂ ಕ್ಯಾರೇ ಅನ್ನೋಲ್ಲ. ಇತ್ತೀಚೆಗಂತೂ ಬಲ್ ಮೋಸ ಆಗೋಗಿದಾರೆ! ನಾನು ಗಾಡಿ ಕಲಿತಿದ್ದೇ ತಪ್ಪಾಯಿತೇನೋ! ಏನ್ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೩): ಎಂ.ಜವರಾಜ್

-೩- ಅವತ್ತು ಮಳೆ ಜೋರಿತ್ತು. ಬಿರುಗಾಳಿ. ಶಿವಯ್ಯನ ಮನೆಯ ಮಗ್ಗುಲಿಗಿದ್ದ ದೊಡ್ಡ ವಯನುಗ್ಗೆ ಮರ ಬೇರು ಸಮೇತ ಉರುಳಿತು. ಮರದ ರೆಂಬೆ ಕೊಂಬೆಗಳು ಮನೆಯ ಮೇಲೂ ಬಿದ್ದು ಕೈಯಂಚು ನುಚ್ಚಾಗಿದ್ದವು. ಮಳೆಯಿಂದ ಮನೆಯೆಲ್ಲ ನೀರು ತುಂಬಿತ್ತು. ಶಿವಯ್ಯ, ಅವನ ಹೆಂಡತಿ ಸಿದ್ದಿ ಮಕ್ಕಳನ್ನು ತಬ್ಬಿಕೊಂಡು ಕೊಟ್ಟಿಗೆ ಮೂಲೇಲಿ ನಿಂತು ಸೂರು ನೋಡುವುದೇ ಆಯ್ತು. ಪಕ್ಕದ ಗೋಡೆಯಾಚೆ ಅಣ್ಣ ನಿಂಗಯ್ಯನ ಮನೆಯಲ್ಲಿ ಆರು ತಿಂಗಳ ಹೆಣ್ಗೂಸು ಕರ್ರೊ ಪರ್ರೊ ಅಂತ ಒಂದೇ ಸಮ ಅರಚುತ್ತಿತ್ತು. ಶಿವಯ್ಯ ‘ಅಣ್ಣ.. ಅಣೈ … Read more

“ಕರುಳಿನ ಕರೆ”: ರೂಪ ಮಂಜುನಾಥ

ಆ ದಿನ ಮನೆಯ ಒಡತಿ ಪ್ರೇಮ, ನಾಟಿಕೋಳಿ ಸಾರಿನ ಜೊತೆಗೆ ಬಿಸಿಬಿಸಿ ಮುದ್ದೆ ಮಾಡಿದ್ದಳು. ಆದಾಗಲೇ ರಾತ್ರೆ ಎಂಟೂವರೆ ಆಗಿತ್ತು. “ಅಮ್ಮಾವ್ರೇ ನಾನು ಮನೆಗೆ ಹೊಂಡ್ಲಾ?ವಾರದಿಂದ್ಲೂವ ಒಟ್ಟಿರ ಬಟ್ಟೆ ಸೆಣಿಯಕೇಂತ ವತ್ತಾರೇನೇ ನೆನೆಯಾಕಿ ಬಂದೀವ್ನಿ. ಈಗ್ ಓಗಿ ಒಗ್ದು ಒಣಾಕಬೇಕು”, ಎಂದು ಮನೆಯೊಡತಿಯ ಅಪ್ಪಣೆಗಾಗಿ ಕಾಯುತ್ತಾ ಅಡುಗೆ ಕೋಣೆಯ ಮುಂದೆ ನಿಂತಳು ಶಿವಮ್ಮ. ಅದಕ್ಕೆ ಪ್ರೇಮ, ”ಚಿನ್ಮಯ್ ಗೆ ತಿನ್ನಿಸಿ ಆಯ್ತಾ ಶಿವಮ್ಮಾ?”, ಅಂದ್ಲು. ಅದಕ್ಕೆ ಶಿವಮ್ಮ, ಕಂಕುಳಲ್ಲಿ ಎತ್ತಿಕೊಂಡ ಕೂಸನ್ನೇ ವಾತ್ಸಲ್ಯಪೂರಿತಳಾಗಿ ನೋಡುತ್ತಾ, ”ಊ ಕಣ್‌ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೨): ಎಂ.ಜವರಾಜ್

-೨- ಸಂಜೆ ನಾಲ್ಕರ ಹೊತ್ತು. ಚುರುಗುಟ್ಟುತ್ತಿದ್ದ ಬಿಸಿಲು ಸ್ವಲ್ಪ ತಂಪಾದಂತೆ ಕಂಡಿತು. ಕಾಡಿಗೆ ಹೋಗಿದ್ದ ಹಸು ಕರು ಕುರಿ ಆಡುಗಳು ಊರನ್ನು ಪ್ರವೇಶ ಮಾಡುತ್ತಿದ್ದವು. ಅದೇ ಹೊತ್ತಲ್ಲಿ ಉದ್ದದ ಬ್ಯಾಗು ನೇತಾಕಿಕೊಂಡು ಕೈಯಲ್ಲಿ ಕಡ್ಲೇಕಾಯಿ ಪೊಟ್ಟಣ ಹಿಡಿದು ಒಂದೊಂದಾಗಿ ಬಿಡಿಸಿ ಬಿಡಿಸಿ ಮೇಲೆ ಆಂತುಕೊಂಡು ಕಡ್ಲೇಬೀಜ ಬಾಯಿಗಾಕಿ ತಿನ್ನುತ್ತಾ ಸ್ಕೂಲಿಂದ ಬರುತ್ತಿದ್ದ ಚಂದ್ರನಿಗೆ, ಹಸು ಕರು ಕುರಿ ಆಡುಗಳ ಸರದಿಯ ನಂತರ ಮೇವು ಮೇಯ್ಕೊಂಡು ಮಲಕಾಕುತ್ತ ಹೊಳೆ ಕಡೆಯಿಂದ ಒಕ್ಕಲಗೇರಿಯ ಕಡೆ ಹೋಗುತ್ತಿದ್ದ ಲಿಂಗಾಯಿತರ ಹಾಲು ಮಾರುವ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೧): ಎಂ.ಜವರಾಜ್

-೧- ಸಂಜೆ ಆರೋ ಆರೂವರೆಯೋ ಇರಬಹುದು. ಮೇಲೆ ಕಪ್ಪು ಮೋಡ ಆವರಿಸಿತ್ತು. ರಿವ್ವನೆ ಬೀಸುವ ಶೀತಗಾಳಿ ಮೈ ಅದುರಿಸುವಷ್ಟು. ಕಪ್ಪುಮೋಡದ ನಿಮಿತ್ತವೋ ಏನೋ ಆಗಲೇ ಮಬ್ಬು ಮಬ್ಬು ಕತ್ತಲಾವರಿಸಿದಂತಿತ್ತು. ಕೆಲಸ ಮುಗಿಸಿ ಇಲವಾಲ ಕೆಎಸ್ಸಾರ್ಟೀಸಿ ಬಸ್ಟಾಪಿನಲ್ಲಿ ಮೈಸೂರು ಕಡೆಗೆ ಹೋಗುವ ಸಿಟಿ ಬಸ್ಸಿಗಾಗಿ ಕಾಯುತ್ತಿದ್ದ ಚಂದ್ರನಿಗೆ ಮನೆ ಕಡೆ ದಿಗಿಲಾಗಿತ್ತು. ಆಗಲೇ ಒಂದೆರಡು ಸಲ ಕಾಲ್ ಬಂದಿತ್ತು. ಬೇಗನೆ ಬರುವೆ ಎಂದು ಹೇಳಿಯೂ ಆಗಿತ್ತು. ಹಾಗೆ ಹೇಳಿ ಗಂಟೆಯೇ ಉರುಳಿತ್ತು. ಸಮಯ ಕಳಿತಾ ಕಳಿತಾ ಮನೆ ಕಡೆ … Read more

ಗೆಸ್ಟ್ ಫ್ಯಾಕಲ್ಟಿ: ಪ್ರಶಾಂತ್ ಬೆಳತೂರು

ಸರಗೂರು ಪಟ್ಟಣಕ್ಕೆ ಹೊಂದಿಕೊಂಡಂತಿರುವ ನಿಲುವಾಗಿಲಿನ ನಮ್ಮ ಚೆಲುವಕೃಷ್ಣನು ಬಾಲ್ಯದಿಂದಲೂ ಓದಿನಲ್ಲಿ ಮುಂದಿದ್ದವನು. . ! ಆದರೆ ರಾಯರ ಕುದುರೆ ಬರುಬರುತ್ತಾ ಕತ್ತೆಯಾಯಿತು ಎನ್ನುವ ಹಾಗೆ ಅದೇಕೋ ಎಸ್. ಎಸ್. ಎಲ್. ಸಿ. ಯಲ್ಲಿ ಅವನು ಗಾಂಧಿ ಪಾಸಾದ ಕಾರಣ ಅನಿವಾರ್ಯವೆಂಬಂತೆ ಪಿಯುಸಿಯಲ್ಲಿ ಕಲಾವಿಭಾಗಕ್ಕೆ ದಾಖಲಾಗಬೇಕಾಯಿತು. ಅಲ್ಲೂ ಕೂಡ ಆರಕ್ಕೇರದ ಮೂರಕ್ಕಿಳಿಯದ ಅವನ ಸರಾಸರಿ ಅಂಕಗಳು ಶೇ ೪೦ ಕೂಡ ದಾಟಲಿಲ್ಲ. . ! ಪದವಿ ಕೂಡ ಇದರ ಮುಂದುವರಿದ ಭಾಗದಂತೆ ಮುಕ್ತಾಯಗೊಂಡಿತ್ತು. . ! ಮುಂದೇನು ಎಂದು … Read more

ನಾಲ್ಕು ಕಿರುಗತೆಗಳು- ಎಂ ನಾಗರಾಜ ಶೆಟ್ಟಿ

ಗೌರವ ಮುನೀರ್​ಮಂಗಳೂರಲ್ಲಿ ಕಾರ್ಯಕ್ರಮವೊಂದಕ್ಕೆ ಬರಲೇ ಬೇಕೆಂದು ಒತ್ತಾಯ ಮಾಡಿದ್ದರಿಂದ ನಾವು ಮೂವರು ಗೆಳೆಯರು ಕಾರಲ್ಲಿ ಹೊರಟಿದ್ದೆವು. ಕಾರು ನನ್ನದೇ. ದೀರ್ಘ ಪ್ರಯಾಣದಿಂದ ಸುಸ್ತಾಗುತ್ತದೆ, ಡ್ರೈವಿಂಗ್ ಮಾಡುತ್ತಾ ಗೆಳೆಯರೊಂದಿಗೆ ಹರಟುವುದು ಕಷ್ಟವೆಂದು ಡ್ರೈವರ್​ಗೆ ಹೇಳಿದ್ದೆ. ಆತ ಪರಿಚಿರೊಬ್ಬರ ಖಾಯಂ ಡ್ರೈವರ್​. ಕೊಹ್ಲಿ ಸ್ಟೈಲಲ್ಲಿ ದಾಡಿ ಬಿಟ್ಟಿದ್ದ ಹಸನ್ಮುಖಿ ಯುವಕ.ಅವನನ್ನು ಗಮನಿಸಿದ ಗೆಳೆಯರೊಬ್ಬರು, “ಕ್ರಿಕೆಟ್​ನೋಡುತ್ತೀಯಾ?” ವಿಚಾರಿಸಿದರು.“ಬಿಡುವಿದ್ದಾಗ ನೋಡುತ್ತೇನೆ ಸಾರ್​, ಕಾಲೇಜಲ್ಲಿ ಕ್ರಿಕೆಟ್​ಆಡುತ್ತಿದ್ದೆ”“ಕಾಲೇಜಿಗೆ ಹೋಗಿದ್ದಿಯಾ?” ಆಶ್ಚರ್ಯ ವ್ಯಕ್ತಪಡಿಸಿದ ಮತ್ತೊಬ್ಬ ಗೆಳೆಯ “ಏನು ಓದಿದ್ದೆ?” ಕೇಳಿದರು.“ಬಿಎಸ್ಸಿ ಆಗಿದೆ ಸಾರ್”​ಕೂಲಾಗಿ ಹೇಳಿದ.“ನಿಮ್ಮ ಭಾಷಣಕ್ಕೆ ಇಲ್ಲೇ … Read more

ನಾಲ್ಕಾರು ನ್ಯಾನೋ ಕತೆಗಳು: ವೃಶ್ಚಿಕ ಮುನಿ (ಪ್ರವೀಣಕುಮಾರ ಸುಲಾಖೆ)

ಗಂಜಿ ಕತೆ ತೀರಾ ದೊಡ್ಡದಾಗಿರದೆ ನಾಲ್ಕೈದು ಸಾಲುಗಳಲ್ಲಿ ಕತೆ ಆಶಯವನ್ನು ಪರಿಣಾಮಕಾರಿಯಾಗಿ ಬಿಂಬಿತವಾಗಿದ್ದರೆ ಅದು ಮನಸಿಗೆ ಇಳಿದು ಬಹುಕಾಲ ಉಳಿಯುತ್ತದೆ ಎನ್ನುವ ತತ್ವ ನಂಬಿ ಇಂತಹ ಎರಡು ದಿನಗಳಿಂದ ಕತೆ ಬರೆಯಲು ಒದ್ದಾಡುತ್ತಿದ್ದ ಹೊಸ ಕತೆಗಾರನಿಗೆ ಹೇಗೋ ಎರಡು ಬಾರಿ ತನ್ನ  ನೆಚ್ಚಿನ ಜಾಗಕ್ಕೆ ಹೋಗಿ ಕುಳಿತು ಬರೆಯಲು ಪ್ರಯತ್ನಿಸುತ್ತಿದ್ದ, ಒಂದೇ ಒಂದು ಸಾಲು ಹೊರಬಂದಿರಲಿಲ್ಲ. ಆದರೆ ಪಕ್ಕದ ಮನೆಯ ರಂಗವ್ವ ಮನೆಗೆ ಬಂದು ಎರಡು ದಿನ ಆಯಿತು ಯಾವುದೇ ಕೆಲಸ ಇಲ್ಲ. ಊಟಕ್ಕೆ ಸರಿಯಾಗಿ ದಿನಸಿಯೂ … Read more

ಆಗಸ್ಟ್ ಹದಿನೈದು: ಎಫ್.ಎಂ.ನಂದಗಾವ್

ಜುಲೈ ಕಳೆಯಿತು ಅಂದರೆ, ಅದರ ಹಿಂದೆಯೇ, ಆಗಸ್ಟ್ ತಿಂಗಳು ಬರುತ್ತಿದೆ. ಅದರೊಂದಿಗೆ ಆಗಸ್ಟ್ ಹದಿನೈದು ಬರುತ್ತದೆ. ಆಗಸ್ಟ್ ಹದಿನೈದು ನಮ್ಮ ದೇಶ ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಹೊಂದಿ ಸ್ವತಂತ್ರ ದೇಶವಾದ ದಿನ. ದೇಶದ ಪ್ರಜೆಗಳೆಲ್ಲರೂ ಸಂಭ್ರಮಿಸುವ ದಿನ. ಆದರೆ ನನ್ನ ಪಾಲಿಗದು ಸಿಹಿಕಹಿಗಳ ಸಂಗಮ. ಕಹಿ ಮತ್ತು ಸಿಹಿಗಳ ಹುಳಿಮಧುರ ಸವಿ ನೆನಪುಗಳ ಮಾವಿನ ಬುಟ್ಟಿಗಳನ್ನು ಹೊತ್ತು ತರುವ ದಿನ. ಅಂದು ಒಂದು ದಿನವೆಲ್ಲಾ ಪೊಲೀಸ್ ಠಾಣೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೆ. ಮಾಡದ ತಪ್ಪಿಗೆ, ಅವಮಾನವನ್ನು ಅನುಭವಿಸಬೇಕಾಯಿತು. ಆದರೆ, … Read more

ದೃಷ್ಟಿ ಬೊಟ್ಟು: ಜ್ಯೋತಿ ಕುಮಾರ್. ಎಂ(ಜೆ. ಕೆ.)

ಒಂದಾನೊಂದು ಕಾಲದಲ್ಲಿ, ಒಂದೂರಿನಲ್ಲಿ ಒಂದು ಉತ್ತಮಸ್ಥ ಕೂಡು ಕುಟುಂಬದಲ್ಲಿ ಒಂದು ಗಂಡು ಮಗುವಿನ ಜನನವಾಯಿತು. ಯಪ್ಪಾ!ಎಂತಹ ಸ್ಫುರದ್ರೂಪಿ ಅಂದರೆ ನೋಡಲು ಎರಡು ಕಣ್ಣು ಸಾಲದು. ಅವನು ಹುಟ್ಟಿನಿಂದಲೆ, ಕುರೂಪವನ್ನು ಹೊತ್ತು ತಂದಿದ್ದ. ಗಡಿಗೆ ಮುಖ, ಗೋಲಿಯಂತ ಮುಖದಿಂದ ಹೊರಗಿರುವ ಕಣ್ಣುಗಳು, ಆನೆ ಕಿವಿ, ಮೊಂಡು ಡೊಣ್ಣೆ ಮೂಗು, ಬಾಯಿಯಿಂದ ವಿಕಾರವಾಗಿ ಹೊರ ಚಾಚಿದ ದವಡೆ, ಕೈ ಕಾಲು ಸಣ್ಣ, ಹೊಟ್ಟೆ ಡುಮ್ಮ. ಕೆಂಡ ತೊಳದಂತಹ ಮಸಿ ಕಪ್ಪು ಬಣ್ಣ.  ಹೆತ್ತವರಿಗೆ ಹೆಗ್ಗಣ ಮುದ್ದು, ಇಂತಿಪ್ಪ ರೂಪದಿ ಹುಟ್ಟಿದ … Read more

ಪ್ರೇಮಗಂಗೆ: ಪದ್ಮಜಾ. ಜ. ಉಮರ್ಜಿ

“ಯಾವುದೇ ಫಲಾಪೇಕ್ಷೆಯಿಲ್ಲದೆ ಎಲ್ಲರಿಗೂ ಒಳ್ಳೆಯದನ್ನ ಬಯಸಿ, ಸಾಧ್ಯವಾದಷ್ಟು ಒಳ್ಳೆಯದನ್ನ ಮಾಡಿ, ಯಾಕೆಂದರೆ ಹೂವ ಮಾರುವವರ ಕೈಯಲ್ಲಿ ಯಾವಾಗಲೂ ಸುವಾಸನೆಯಿರುತ್ತದೆ.” ಈ ವಾಕ್ಯ ಓದುತ್ತಿರುವ ವೈಷ್ಣವಿಯ ಮನಸ್ಸು ಪಕ್ವತೆಯಿಂದ ತಲೆದೂಗಿತ್ತು. ತನ್ನ ಮತ್ತು ಪತಿ ವಿಭವರ ಬದುಕಿನ ಗುರಿಯೂ ಕೂಡಾ ಎಲ್ಲರಿಗೂ ಒಳ್ಳೆಯದನ್ನು ಬಯಸುವುದು. ಮತ್ತು ಒಳ್ಳೆಯದನ್ನು ಮಾಡುವುದು. ಆದರೂ ಬದುಕೆಂಬುದು ಒಂದು ವೈಚಿತ್ರದ ತಿರುವು. ಹಾಗೆ ನೋಡಿದರೆ ಬದುಕೇ ಬದಲಾವಣೆಗಳ ಸಂಕೋಲೆ. ಮನಸ್ಸು ಸವೆಸಿದ ಹಾದಿಯ ಕುರುಹುಗಳನ್ನು ಪರಿಶೀಲಿಸತೊಡಗಿತ್ತು. ತಾಯಿ ಸಂಧ್ಯಾ ಮತ್ತು ತಂದೆ ಸುಂದರರಾಯರ ಸುಮಧುರ … Read more

ಮಾಯೆ: ಸಾವಿತ್ರಿ ಹಟ್ಟಿ

ಛೇ ಏನಿದು ಮದುವೆಯಾಗಿ ಮಕ್ಕಳು ಮರಿಯಾಗಿ ಬದುಕು ಅರ್ಧ ಮುಗಿದು ಹೋಯ್ತಲ್ಲ ! ಮತ್ಯಾಕೆ ಹಳೆಯ ನೆನಪುಗಳು ಎಂದುಕೊಂಡು ಮಗುವಿನ ಕೈಯನ್ನು ತೆಗೆದು ಹಗೂರಕ್ಕೆ ಕೆಳಗಿರಿಸಿದಳು. ಹಾಲುಂಡ ಮಗುವಿನ ಕಟವಾಯಿಯಲ್ಲಿ ಇಳಿದಿದ್ದ ಹಾಲನ್ನು ಸೆರಗಿನಿಂದ ಒರೆಸಿದಳು. ಮಗುವಿಗೆ ಹೊದಿಕೆ ಹೊದಿಸಿ ಅದರ ಗುಂಗುರುಗೂದಲಿನ ತಲೆಯನ್ನು ಮೃದುವಾಗಿ ನೇವರಿಸಿದಳು. ಮಗು ಜಗತ್ತಿನ ಯಾವುದೇ ಗೊಡವೆಯಿಲ್ಲದೇ ನಿದ್ರಿಸತೊಡಗಿತ್ತು. ಅಷ್ಟು ದೂರದಲ್ಲಿ ಸಿಂಗಲ್ ಕಾಟ್ ಮೇಲೆ ಗಂಡ ಎಂಬ ಪ್ರಾಣಿ ಗೊರಕೆ ಹೊಡೆಯುತ್ತ ಮಲಗಿತ್ತು. ಸಿಟ್ಟು, ಅಸಹ್ಯ, ಅನುಕಂಪ ಯಾವ ಭಾವನೆಯೂ … Read more

ಮಿನಿ ಕತೆಗಳು: ಅರವಿಂದ. ಜಿ. ಜೋಷಿ.

“ಹರಿದ ಜೇಬು” ಸಂಜೆ, ಶಾಲೆಯಿಂದ ಮನೆಗೆ ಬಂದ ಹತ್ತರ ಪೋರ, ಗೋಪಿ ತನ್ನ ಏಳೆಂಟು ಗೆಳೆಯರೊಂದಿಗೆ ಸೇರಿ, ಮನೆಯ ಎದುರಿನ ರಸ್ತೆಮೇಲೆ ಲಗೋರಿ ಆಡುತ್ತಿದ್ದ. ಆಗ, ಆತನ ಪಕ್ಕದ ಮನೆ ಯಲ್ಲಿ ವಾಸವಾಗಿದ್ದ  ನಡುವಯಸ್ಸಿನ ಭಾಗ್ಯ (ಆಂಟಿ) ಮನೆಯಿದಾಚೆಗೆ ಬಂದು, ಜಗುಲಿ ಮೇಲೆ ನಿಂತು, “ಗೋಪೀ. . ಗೋಪೀ. . “ಎಂದು ಕೂಗಿ ಕರೆದು ಆತನ ಕೈಗೆ ಇನ್ನೂರು ರೂಪಾಯಿ ನೋಟು ಕೊಡುತ್ತ, “ಲೋ. . ಗೋಪೀ. ಇಲ್ಲೇ ಹಿಂದ್ಗಡೆ ಶೇಟ್ರ ಅಂಗ್ಡಿಗೆ ಹೋಗಿ ಒಂದ್ ಪ್ಯಾಕೆಟ್ … Read more

ನೀಚನ ಸಾವು: ಮಂಜು ಡಿ ಈಡಿಗೆರ್

ಓದೋಕ್ಕೆ ಅಂತ ರೂಮ್ ಮಾಡ್ಕೊಂಡು ಕೊಪ್ಪಳ ದಲ್ಲೇ ಇದ್ದೆ. ದಿನ ಬೆಳಗ್ಗೆ ರನ್ನಿಂಗು ವರಮಪ್ಪು ವರ್ಕೌಟು ಮಾಡೋದು ನನ್ನ ದಿನ ನಿತ್ಯದ ಅಭ್ಯಾಸ ಆಗಿತ್ತು. ಹಾಗಾಗಿ ದಿನ ಬೆಳಗ್ಗೆ ಸ್ಟೇಡಿಯಂಗೆ ಪ್ರಾಕ್ಟೀಸ್ ಗೆ ಹೋಗ್ತಾ ಇದ್ದೆ. ಸಂಡೇ ಪ್ರಾಕ್ಟೀಸ್ ಮುಗಿಸಿಕೊಂಡು ರೂಮ್ಗೆ ಬಂದೆ. ನನ್ನ ರೂಮಿನ ಪಕ್ಕ ಮನೆ ಖಾಲಿ ಆಗಿತ್ತು, ಅದಕ್ಕೆ ಯಾರೋ ಹೊಸಬರು ಬಂದಾಗೆ ಇತ್ತು. ನನ್ನ ರೂಮು ಮತ್ತೆ ಅವರ ಮನೆ ಎರಡು ಪಕ್ಕದಲೆ ಇರುವುದರಿಂದ ಯಾರು ಎಂದು ಗಮನಿಸಬೇಕಾಯಿತು. ಮನೆ ಇಂದ … Read more

ನಾ ಕಂಡಂತೆ: ಶೀತಲ್

ನಾನು ಈ ಮನೆಗೆ ಬಂದು ಈಗ ನಾಲ್ಕು ವರ್ಷವಾಯಿತು. ಮನೆಯೆಂದರೆ ಅಬ್ಬಾ! ಇವರ ಮನೆಯಂತೆ ಯಾವ ಮನೆಯೂ ಇಲ್ಲ ಆ ಲೇಔಟ್ ನಲ್ಲಿ ಎಂದು ಆಗಾಗ ಕೆಲಸದಾಕೆ ಸುಗುಣ ಮನೆಯೊಡತಿ ವೈದೇಹಿ ಯವರ ಬಳಿ ಹೇಳುವುದನ್ನು ಕೇಳಿದ್ದೇನೆ. ಇವರ ಮನೆಯಲ್ಲದೆ ನಾನು ಯಾವ ಮನೆಗೂ ಹೋಗುವ ಹಾಗಿಲ್ಲವಲ್ಲ ಹಾಗಾಗಿ ನನ್ನ ಸ್ವಂತ ಅಭಿಪ್ರಾಯವಲ್ಲ ಇದು. ಇವರ ಮನೆಯಿಂದ ಎದುರು ಕಾಣುವ ಎರಡು ಮನೆಗಳು, ಹಾಗೆ ಬಲಗಡೆಗೆ, ಇವರ ಮನೆಯ ಹೂದೋಟ ದಾಟಿದರೆ ಕಾಣುವ ಮನೆ ಕೂಡ ಇವರ … Read more

ನೆನಪು: ಕೆ. ನಲ್ಲತಂಬಿ

ತಮಿಳಿನಲ್ಲಿ: ವಣ್ಣನಿಲವನ್ಕನ್ನಡಕ್ಕೆ: ಕೆ. ನಲ್ಲತಂಬಿ “ಹೋಗಲಿಕ್ಕೆ ಒಂದು ಗಂಟೆ, ಬರಲಿಕ್ಕೆ ಒಂದು ಗಂಟೆ. ಅಲ್ಲಿ ಅಣ್ಣನ ಮನೆಯಲ್ಲಿ ಹತ್ತು ನಿಮಿಷ ಆಗುತ್ಯೇ? ಈಗ ಗಂಟೆ ಹತ್ತೂವರೆ ಆಗಲಿದೆ. ಎರಡು ಎರಡುವರೆಯೊಳಗೆ ಬಂದು ಬಿಡಬಹುದು. ಹೋಗಿ ಹಣ ತೆಗೆದುಕೊಂಡು ಬಾ” ಎಂದ ಸೆಲ್ಲಚ್ಚಾಮಿ. ಸರೋಜಳಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಅಲ್ಲಿ ಕಲ್ಲಿಡೈಕುರುಚ್ಚಿ ರಾಮಸಾಮಿಯನ್ನು ನೆನಪು ಮಾಡಿಕೊಂಡರೆ ವಾಕರಿಕೆ ಬರುತ್ತದೆ.“ನಾನು ಅಂಗಡಿಯನ್ನು ನೋಡಿಕೊಳ್ಳುತ್ತೇನೆ. ನೀವು ಹೋಗಿ ಕೇಳಿ ತೆಗೆದುಕೊಂಡು ಬನ್ನಿ” ಎಂದಳು ಸರೋಜ. “ಅದು ಗೊತ್ತಿಲ್ಲವೇನು. ನಾನು ನಿನ್ನನ್ನು ಹೋಗಲು … Read more

ಗ್ರೀಸ್‍ಮನ್: ಡಾ. ಶಿವಕುಮಾರ ಡಿ.ಬಿ 

ಅಂದು ಜಯಣ್ಣ ಎಂದಿನಂತೆ ಇರಲಿಲ್ಲ. ಕೊಂಚ ವಿಷಣ್ಣನಾಗಿ ಕೂತಿದ್ದ. ಅವನ ತಲೆಯಲ್ಲಿ ಮಗಳ ಶಾಲಾ ಶುಲ್ಕ, ಮನೆಗೆ ಬೇಕಾಗಿರುವ ದಿನಸಿ ಪದಾರ್ಥಗಳಿಗೆ ಯಾರ ಬಳಿ ಹಣಕ್ಕಾಗಿ ಅಂಗಲಾಚುವುದು? ಎಂಬ ಚಿಂತೆ ಆವರಿಸಿತ್ತು. ಇತ್ತೀಚೆಗೆ ಯಾಕೋ ಮೊದಲಿನಂತೆ ಲಾರಿಗಳು ಟ್ರಕ್ ಲಾಬಿಯಲ್ಲಿ ಸರಿಯಾಗಿ ನಿಲ್ಲುತ್ತಿರಲಿಲ್ಲ. ಹೀಗಾಗಿ ಲಾರಿಗಳಿಗೆ ಗ್ರೀಸ್ ತುಂಬುವ ಕೆಲಸವು ಸರಿಯಾಗಿ ನಡೆಯದೆ ಸಂಸಾರದ ನಿರ್ವಹಣೆ ಕಷ್ಟವಾಗಿತ್ತು. ಅದರಲ್ಲೂ ಜಯಣ್ಣನ ಅಕ್ಕಪಕ್ಕದ ವೃತ್ತಿಸ್ನೇಹಿತರೇ ಅವನಿಗೆ ಪೈಪೋಟಿಯಾಗಿ ನಿಂತಿದ್ದರು. ಲಾರಿ ತಮ್ಮ ಮುಂದೆ ನಿಲ್ಲುವುದೇ ತಡ ತಾ ಮುಂದು, … Read more