ಕಂಬಳ, ಕೃಷ್ಣಪ್ಪ ಮತ್ತು ಅಮರತ್ವ: ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಅಲೇ ಬುಡಿಯೆರಿಯೇ* ಎಂಬ ಕೂಗು ಕೇಳಿದ ತಕ್ಷಣವೇ ಎಂಟು ಕಾಲುಗಳನ್ನು ಅಟ್ಟಿಸಿಕೊಂಡು ಹೋಗಲಾರಂಭಿಸಿದ ಎರಡು ಕಾಲುಗಳು, ಎತ್ತರೆತ್ತರಕ್ಕೆ ಚಿಮ್ಮುತ್ತಿದ್ದ ನೀರು, ಕಬ್ಬಿಣಕ್ಕೂ ಕಠಿಣತೆಯೊಡ್ಡುವಂತಿದ್ದ ಮೈ ಎಲ್ಲವನ್ನೂ ನೋಡುತ್ತಲೇ ಇದ್ದ ಕೃಷ್ಣಪ್ಪನ ಕಣ್ಣುಗಳು ಕೊನೆಯ ಒಂದು ಬಿಂದುವಿನಲ್ಲಿ ಹೋಗಿ ನೆಲೆಸಿದವು. ತಮ್ಮ ತಮ್ಮ ಕಡೆಯ ಕೋಣಗಳನ್ನು ಕೈಬೀಸಿ ಕರೆಯುತ್ತಿದ್ದವರು ಹಲವರು. ಮತ್ತೀಗ ಕಂಬಳದ ಕರೆಯಾಚೆಗೆ ದೃಷ್ಟಿ ಬದಲಿಸಿದ ಕೃಷ್ಣಪ್ಪನಿಗೆ ಮುಂದೆ ಓಡುತ್ತಿದ್ದ ಎರಡು ಕೋಣಗಳು ಮತ್ತು ಹಿಂದೆ ಅಟ್ಟಿಸುತ್ತಿರುವ ಓಟಗಾರ ಈ ಇಡೀ ದೃಶ್ಯ ಹೊಸದು ಭಾವವೊಂದನ್ನು ಮೂಡಿಸಿತು. … Read more