ಬಾರಿನಲ್ಲಿ ‘ಬುದ್ಧ’: ಡಾ. ಸುಶ್ಮಿತಾ ವೈ.

ಮಳೆಗಾಲದ ಒಂದು ಸಂಜೆ ತೀರ್ಥಹಳ್ಳಿಯ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಬೇಕು-ಬೇಡದ ಆಲೋಚನೆಗಳ ನಡುವೆ ಈ ರಣಮಳೆಯಿಂದ ತಪ್ಪಿಸಿಕೊಂಡು ಮನೆ ಸೇರಿದರೆ ಸಾಕಪ್ಪ ಎನಿಸುತ್ತಿತ್ತು. ಗಡಿಬಿಡಿಯ ಗಾಡಿಗಳು ನಿಂತ ನೀರಿನ ಮೇಲೆ ಚಕ್ರ ಹರಿಸಿ ಎಳ್ಳಮಾವಾಸ್ಯೆಯ ತೀರ್ಥಸ್ನಾನ ಈಗಲೇ ಆಗಬಹುದೆಂಬ ಭಯದಲ್ಲಿ ಸುತ್ತ-ಮುತ್ತ ಕಣ್ಣರಳಿಸಿ ನೋಡುತ್ತಾ ಹೆಜ್ಜೆ ಹಾಕುತ್ತಿದ್ದೆ. ಎಡಕ್ಕೆ ತಿರುಗಿ ಇನ್ನೊಂದು ರಸ್ತೆಗೆ ಕಾಲಿಡುವಾಗ ರಸ್ತೆ ಪಕ್ಕದ ‘ಬಾರ್’ನ ಕ್ಯಾಶ್‌ಕೌಂಟರ್ ಟೇಬಲ್ ಮೇಲೆ ‘ರಿಸಪ್ಯನಿಸ್ಟ್’ನಂತೆ ಮಂದಸ್ಮಿತನಾಗಿ ಕುಳಿತಿದ್ದ ‘ಬುದ್ಧಮೂರ್ತಿ’ಯ ದರ್ಶನವಾಯಿತು. ಒಮ್ಮೆಲೆ ನನ್ನಲ್ಲಿ ನಗು, ಬೇಸರ, ಪ್ರಶ್ನೆ, … Read more

ಮಕ್ಕಳಿಗೆ ಬೋಧಿಸಬೇಕಾದ ಕುವೆಂಪು ತತ್ವ: ಶಿವಕುಮಾರ ಸರಗೂರು.

“ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು, ಜೀವಧಾತೆಯನಿಂದು ಕೂಗಬೇಕು” ಎಂಬ ಯುಗದ ಕವಿಯ ಕೂಗು ಇವತ್ತಿನವರೆಗೆ ಕೇಳಿಸಿಕೊಂಡರೂ ಕೂಡ ಮೈನವಿರೇಳದಿರುವುದು ವಿವೇಕವೇ ಬತ್ತಿ ಹೋಗುವುದರ ಸೂಚಕವೆಂದು ಕಾಣುತ್ತದೆ. ಕನ್ನಡ ನವೋದಯ ಕಾಲದಲ್ಲಿ ಸಮಸ್ತ ಜನ ಸಮುದಾಯವನ್ನು ಪ್ರತಿನಿಧಿಸುವ ಕುವೆಂಪು ಅವರ ಸಾಹಿತ್ಯ ಪರಿಮಾಣ ಮತ್ತು ಮೌಲ್ಯ ಎರಡರಲ್ಲೂ ಅತ್ಯುತ್ಕೃಷ್ಟ ಎಂಬುದರಲ್ಲಿ ಮರುಮಾತಿಲ್ಲ. ಜೀವನದ ಎಲ್ಲಾ ಮಗ್ಗುಲುಗಳನ್ನು ಹತ್ತಿರದಿಂದ ಕಂಡ ಅನುಭಾವದ ಅವರ ಕವಿತೆ, ಕತೆ, ಕಾದಂಬರಿ, ನಾಟಕ, ಪ್ರಬಂಧ, ವೈಚಾರಿಕ ಲೇಖನ ಕನ್ನಡ ಸಾಹಿತ್ಯಕ್ಕೆ ಅನನ್ಯ … Read more

ಅಯ್ಯ..!!: ಡಾ. ಮಂಜುನಾಥ

‘ಲೈ ಮಂಜಾ, ಬಾರ್ಲಾ ಇಲ್ಲಿ ! ‘ ಅಯ್ಯನ ಕೂಗು. ಆಗಷ್ಟೇ ಸ್ಕೂಲಿಂದ ಕುಪ್ಪಳಿಸಿಕೊಂಡು ಬಂದ ನನ್ನ ಕಿವಿ ತಲುಪಿತು. ಒಂದೇ ಉಸುರಿಗೆ ನಡ್ಲುಮನೆಯಲ್ಲಿದ್ದ ಮಂಚದ ಮ್ಯಾಕೆ ಬ್ಯಾಗು ಎಸೆದವನೇ ಅಯ್ಯನ ಹತ್ತಿರ ಓಡೋಡಿ ಹೋದೆ. ನನಗೆ ಗೊತ್ತಿತ್ತು ಅಯ್ಯನ ಹತ್ರ ಹೋದ್ರೆ ಏನಾದ್ರೂ ಸಿಗುತ್ತೆ ಎಂದು. ‘ ಏನಯ್ಯಾ? – ಹೋಗ್ಬುಟ್ಟು ಭೋಜಯ್ಯನ ಅಂಗಡೀಲಿ ಒಂದು ಕಟ್ಟು ನಾಟಿ ಬೀಡಿ ತಗಬಾ ! ಎಂದು ಕೈಗೆ ಒಂದು ರೂಪಾಯಿ ಕೊಡ್ತು. ಒಂದು ರೂಪಾಯಿ ನೋಡಿ ನಿರಾಶೆಯಾಯಿತು. … Read more

ಉಪದೇಶಿ ರಾಯಪ್ಪ ಮೆನೆಜಸ್: ಎಲ್.ಚಿನ್ನಪ್ಪ, ಬೆಂಗಳೂರು

೨೦ ವರ್ಷಗಳಷ್ಟು ಕಾಲ ಯಲಹಂಕ ಉಪನಗರದಲ್ಲಿ ನೆಲೆಸಿದ್ದ ನಾವು ೨೦೦೩ರಲ್ಲಿ ಯಲಹಂಕ ಉಪನಗರ ಬಿಟ್ಟು ಬಂದೆವು. ಅಲ್ಲಿ ಅತ್ಯಂತ ಆತ್ಮೀಯರಾಗಿದ್ದ ಮಾಜಿ ಉಪಪೇಶಿ ರಾಯಪ್ಪ ಮನೆಜಸ್‌ರವರು ಸುಮಾರು ೮-೧೦ ವರ್ಷಗಳ ಹಿಂದೆಯೇ ತೀರಿಕೊಂಡರೆಂಬ ಸುದ್ದಿ ಇತ್ತೀಚೆಗೆ ತಿಳಿದು ನನಗೆ ದುಃಖವಾಯಿತು. ದುಃಖ ಅಥವಾ ಸಂತೋಷದ ಸಂಗತಿ ತಿಳಿದಾಗ ಹಳೆಯ ನೆನಪುಗಳು ಜೀವ ತಾಳುತ್ತವೆ. ರಾಯಪ್ಪ ಮೆನೆಜಸ್ ಒಡನಾಟದ ಸುಮಾರು ೩೦-೩೫ ವರ್ಷಗಳಷ್ಟು ಹಳೆಯ ನೆನಪುಗಳು ನನ್ನಲ್ಲಿ ಪುನಃ ಗರಿಗೆದರಿದವು. ಉಪದೇಶಿ ರಾಯಪ್ಪ ಮೆನೆಜಸ್‌ರದು ಎತ್ತರದಲ್ಲಿ ಗಿಡ್ಡಗಿದ್ದರೂ, ದ್ವನಿಯಲ್ಲಿ … Read more

ಬೆಂಕಿ ಅವಘಡ: ಮಂಜುನಾಥ್ ಚಿನಕುಂಟಿ

ರೂಮಿಗೆ ತಲುಪಿದ್ದೆ ತಡವಾಯಿತು ಎಂದು ಮುಖ ತೊಳೆದುಕೊಳ್ಳದ್ದೆ ಸ್ವಚ್ಚಾಗಿರುವ ಮಂಚದ ಮೇಲೆ ತಲೆ ಇಟ್ಟಿದ್ದೆ ತಡ. ಗಾಢ ರಾತ್ರಿಯಲ್ಲಿ ಗಾಢ ನಿದ್ರೆಗೆ ಜಾರಿದ್ದೆ ತಿಳಿಯಲಿಲ್ಲ. ಕೊಂಚ ಸಮಯದ ಬಳಿಕ ರೂಮಿನ ಹೊರಗಡೆ ಯಾರೊ ಕಿರುಚುವ ಶಬ್ದಗಳು ಕಿವಿಗೆ ಬಡೆಯುತ್ತಿದ್ದರು ಕನಸೇ ಎಂಬಂತೆ ನಾನು ನನ್ನ ರೂಮಿನ ಇನ್ನೊಬ್ಬ ಸಹೋದ್ಯೋಗಿ ಗೊರಕೆ ಹೊಡಿಯುತ್ತ ಮಲಗಿದ್ದೆವು. ದಡ್ ದಡ್ ದಡ್ ದಡ್ ರೂಮಿನ ಹೊರಗಡೆ ಯಾರೊ ಬಾಗಿಲು ಬಡೆಯುವ ಶಬ್ದ ಕೇಳಿದರು ಕೇಳದಂತೆ ಕುಂಭಕರಣರಂತೆ ಮಲಗಿದ್ದೆವು. ರೂಮಿನ ಹೊರಗಡೆ ಮತ್ತಷ್ಟು … Read more

ಮೇಷ್ಟ್ರು ಡೈರಿ ೧: ಲಿಂಗರಾಜು ಕೆ ಮಧುಗಿರಿ.

ಎಂದಿನಂತೆ ಶಾಲೆಯ ಬಿಸಿಯೂಟಕ್ಕೆ ತರಕಾರಿ ತರಲು ಹೆಂಡತಿ ಜೊತೆ ಹೋಗಿದ್ದೆ. ರಸ್ತೆ ಬದಿಯ ತರಕಾರಿ ಅಂಗಡಿಯಮ್ಮನ ಜೊತೆ ಸುಮಾರು ಒಂದರವತ್ತೊಂದರ ವಯಸ್ಸಿನ ಅಜ್ಜಿ ಕೂಡಾ ಮೊಳಕೆ ಕಟ್ಟಿದ್ದ ಹೆಸರುಕಾಳು, ತೆಂಗಿನಕಾಯಿ ಮಾರುತ್ತಾ ಕುಳಿತಿತ್ತು. ತರಕಾರಿ ತೆಗೆದುಕೊಳ್ಳುತ್ತಾ ತರಕಾರಿಯಮ್ಮನ ಜೊತೆ ಮಾತನಾಡುತ್ತಿದ್ದ ಹೆಂಡತಿಯನ್ನು ನೋಡಿದ ಆ ಅಜ್ಜಮ್ಮ, “ಏ ಎಂಗ್ಸೆ ಪ್ರಂಗ್ನೆಂಟ್ ಇದ್ದಂಗ್ ಇದ್ಯ, ಇಂಗೆ ಬಿಗ್ಯಗಿರೋ ಡ್ರೆಸ್ಸಾ ಆಕಬರದು? ಯರ‍್ಯಾರ್ ಕಣ್ ಎಂಗರ‍್ತವೋ ಏನೋ, ಮೈ ತುಂಬಾ ಬಟ್ಟೆ ಆಕಂಡ್ ಓಡಾಡು” ಎಂದು ಅಧಿಕಾರಯುತವಾಗಿ ಹೆಂಡತಿಗೆ ಸಲಹೆ … Read more

ಪಥವೋ! ಪಂಥವೋ !?: ಡಾ. ಹೆಚ್ ಎನ್ ಮಂಜುರಾಜ್

‘ಸುಮ್ಮನೆ ಗಮನಿಸಿ; ಅದರೊಂದಿಗೆ ಗುರುತಿಸಿಕೊಳ್ಳಲು ಹೊರಡಬೇಡಿ’ ಎಂದರು ಓಶೋ ರಜನೀಶರು. ಇದನ್ನೇ ಭಗವದ್ಗೀತೆಯು ಬೇರೊಂದು ರೀತಿಯಲ್ಲಿ ‘ನಿಷ್ಕಾಮ ಕರ್ಮ’ ಎಂದಿದೆ. ಇದರ ಎದುರು ರೂಪವೇ ಸಕಾಮ ಕರ್ಮ. ಇದು ಲೋಕಾರೂಢಿ. ಏನಾದರೊಂದು ನಿರೀಕ್ಷೆ, ಪರೀಕ್ಷೆಗಳನ್ನಿಟ್ಟುಕೊಂಡು ಮಾಡುವಂಥ ಕೆಲಸ. ‘ನನ್ನನ್ನು ಗುರುತಿಸಲಿ, ಮೆಚ್ಚಲಿ, ಹತ್ತು ಜನರ ಮುಂದೆ ಕೀರ್ತಿಸಲಿ’ ಎಂಬ ಲೌಕಿಕ ಮೋಹಕ! ನಿಷ್ಕಾಮವು ಹಾಗಲ್ಲ. ತನ್ನ ಪಾಡಿಗೆ ತಾನು ಕೆಲಸಗಳನ್ನು ಮಾಡಿಕೊಂಡು ಹೋಗುವಂಥದು. ಯಾರು ಮೆಚ್ಚಲಿ, ಬಿಡಲಿ. ಇದು ನೈಸರ್ಗಿಕ. ಚೈತ್ರೋದಯವಾಯಿತೆಂದು ಮರಗಿಡಗಳು ತಮ್ಮದೇ ಆದ ರೀತಿಯಲ್ಲಿ … Read more

ಗುಂಡೂಮಾಮನ ಜಾದು ಮತ್ತು ಇಕ್ಕಳ: ಡಾ. ಹೆಚ್ ಎನ್ ಮಂಜುರಾಜ್

ಪ್ರೌಢಶಾಲೆಯಲ್ಲಿ ಓದುವಾಗ ಕೆ ಎಸ್ ನರಸಿಂಹಸ್ವಾಮಿಯವರ ‘ಇಕ್ಕಳ’ ಎಂಬೊಂದು ಪದ್ಯವಿತ್ತು. ಮೇಡಂ ಪಾಠ ಮಾಡುವಾಗ ಅದೇನು ಹೇಳಿದರೋ ಆಗ ತಲೆಗೆ ಹೋಗಿರಲಿಲ್ಲ. ಆದರೆ ನಮ್ಮ ಮನೆಯ ಅಡುಗೆಮನೆಯಲ್ಲೊಂದು ಇಕ್ಕಳ ಇತ್ತು. ಆ ಪದ್ಯಪಾಠ ಓದುವಾಗೆಲ್ಲ ನನಗೆ ಅದೊಂದೇ ನೆನಪಾಗುತ್ತಿತ್ತು. ಮನೆಮಂದಿಗೆಲ್ಲಾ ಆ ಇಕ್ಕಳದ ಮೇಲೆ ಬಲು ಅಕ್ಕರೆ. ಏಕೆಂದರೆ ಕೆಳಮಧ್ಯಮವರ್ಗದವರಾದ ನಮ್ಮ ಮನೆಗೆ ಬಂದಿದ್ದ ಮೊತ್ತ ಮೊದಲ ವಿದೇಶಿ ವಸ್ತುವದು. ನಮ್ಮ ತಂದೆಯ ಸೋದರಮಾವ ಚಿಕ್ಕಂದಿನಲ್ಲೇ ಮುಂಬಯಿಗೆ ಓಡಿ ಹೋಗಿ ಅಲ್ಲೆಲ್ಲೋ ಇದ್ದು, ಏನೇನೋ ವಿದ್ಯೆಗಳನ್ನು ಕಲಿತು, … Read more

ಶಿಕ್ಷಣ, ಉದ್ಯೋಗ ಮತ್ತು ನೈತಿಕತೆ: ಪರಮೇಶ್ವರಿ ಭಟ್

ಎಲ್ಲರೂ ತಿಳಿದಂತೆ ಶಿಕ್ಷಣ‌ ಮತ್ತು ಉದ್ಯೋಗ ಒಂದಕ್ಕೊಂದು ಸಂಬಂಧಪಟ್ಟ ವಿಷಯಗಳು. ಉತ್ತಮ ಶಿಕ್ಷಣ ಉತ್ತಮ ಉದ್ಯೋಗಕ್ಕೆ, ಉತ್ತಮ ಉದ್ಯೋಗವು ಉತ್ತಮ ಜೀವನ ಮಟ್ಟಕ್ಕೆ ಕಾರಣವಾಗುತ್ತದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಜೀವನ ಒದಗಿಸಿಕೊಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುತ್ತಾರೆ. ಆದರೆ ಹಾಗೆ ಮಾಡುವಾಗ ಜೀವನಕ್ಕೆ ಅತೀ ಅಗತ್ಯವಾದ ನೈತಿಕತೆಯ ಬಗ್ಗೆ ಗಮನ ಹರಿಸುವುದಿಲ್ಲ. ಹಾಗೆಂದು ಅವರು ವಾಮ‌ಮಾರ್ಗ ಅನುಸರಿಸುತ್ತಾರೆ ಅಂತ ಅರ್ಥವಲ್ಲ. ಅವರ ಗಮನ ಮಕ್ಕಳು ಗಳಿಸುವ ಅಂಕಗಳಿಗೆ. . ಯಾಕೆಂದರೆ ಅಂಕಗಳೇ ಬುದ್ಧಿವಂತಿಕೆಯ ಅಳತೆಗೋಲು ಅಂತ‌ … Read more

ಕೆನಡಾದಲ್ಲಿ ಒಂದು ಸಂಜೆ

ಕೆನಡಾದಲ್ಲಿ ಇರುವ ಮಗನ ಮನೆಯಲ್ಲಿ ಆ ಸಂಜೆ ಅದಾಗ ತಾನೇ ಬರುತ್ತಿದ್ದ ತುಂತುರು ಮಳೆ ನಿಂತಿತ್ತು. ಆದರೆ ಬೆಳಗಿನಿಂದ ರಸ್ತೆ ಪೂರಾ ಚೆಲ್ಲಿದ್ದ ಮಂಜು ಮತ್ತಷ್ಟು ಗಟ್ಟಿಯಾಗಿ ಕಾಲಿಟ್ಟರೆ ಜಾರುವ ಸ್ಥಿತಿಯನ್ನು ತಲುಪಿತ್ತು. ರಸ್ತೆಯಲ್ಲಿ ವಿರಳವಾಗಿ ಅಲ್ಲೊಂದು ಇಲ್ಲೊಂದು ವಾಹನಗಳು ಚಲಿಸುತ್ತಿದ್ದವು. ಗಟ್ಟಿಯಾದ ಮಂಜನ್ನು ಸರಿಸಲು ಟ್ರಕ್ಕುಗಳಲ್ಲಿ ‘ ರಾಕ್ ಸಾಲ್ಟ್ ‘ ಲವಣವನ್ನು ರಸ್ತೆ ತುಂಬಾ ಸುರಿಯುತ್ತಿದ್ದರು. ರಾಕ್ ಸಾಲ್ಟ್ ನಮ್ಮಲ್ಲಿ ಸಿಗುವ ಉಪ್ಪಿನಂತೆ ಲವಣದ ರೂಪದಲ್ಲಿ ಇದ್ದು ಗಾತ್ರದಲ್ಲಿ ದೊಡ್ಡ ಸ್ಪಟಿಕಾಗಳಾಗಿ ದೊರೆಯುತ್ತದೆ. ನೇರಳೆ … Read more

ಜೀರಂಗಿ ಜಗತ್ತು: ವೀರಯ್ಯ ಕೋಗಳಿಮಠ್

“ಕಾಲುತೊಳಿ ಮುಖತೊಳಿ, ಜೀಯೆನ್ನಲೇ”, ಅಂತ ಪದೇಪದೇ ರಾಗವಾಗಿ ಹಾಡುತ್ತಾ ಅದರ ಕಾಲು ಚಿವುಟಿ ನೆಲದಿಂದ ಮೇಲಕ್ಕೆ ಹಾರುವವರೆಗೆ ಬಿಡದೆ ಚಿತ್ರಹಿಂಸೆ ನೀಡಿ ಆಟ ಆಡಿಸುತ್ತಿದ್ದುದು ನಮ್ಮ ಬಾಲ್ಯದಲ್ಲಿ ನೆಚ್ಚಿನ ಜೀರಂಗಿ (Jewel Beetle/ Sternocera ruficornis) ಮತ್ತು ಹೆದ್ದುಮ್ಮಿಗಳಿಗೆ. ಹಲವು ಕಡೆ ಅವುಗಳಿಗೆ ಜಿಲಗಂಬಿ, ಜೀರ್ಜಿಂಬೆ, ಕಂಚುಗಾರ ಅಂತಾನೂ ಕರೀತಾರೆ. ಕೈಗೆ ಸಿಕ್ಕ ಜೀರಂಗಿಗಳನ್ನ ನಡೆಸಿಕೊಳ್ಳುವ ಪರಿಯನ್ನ ಹೇಳುವಂತಿಲ್ಲ. ಮನೇಲಿರೋ ಬೆಂಕಿಪೊಟ್ಣದ ಕಡ್ಡಿಗಳನ್ನೆಲ್ಲ ಚೆಲ್ಲಿ ಅದನ್ನೇ ಜೀರಂಗಿ ಗೂಡನ್ನಾಗಿ ಮಾಡಿ ಜೀಕುಜಾಲಿ ಅಥವಾ ತುಗಲಿ ಮರದ ತೊಪ್ಪಲು … Read more

ಇದು ಕತೆಗಳ ಕಾಲವಯ್ಯಾ..: ಸಂಜಯ್ ಚಿತ್ರದುರ್ಗ

” ಬರೀ ಬರವಣಿಗೆಯಿಂದ ಬದುಕು ಕಟ್ಟಿಕೊಳ್ಳೊಕೆ ಸಾಧ್ಯವಿಲ್ಲ ” ಎಂದಿದ್ದ ಸಾಹಿತಿ ಏನಾದರೂ ಇವತ್ತು ಬದ್ಕಿದ್ರೆ ಮೂಗಿನ ಮೇಲೆ ಬೆರಳಿಟ್ಟುಕೊಂಡು ” ಹೌದೇನ್ರಿ. ಒಂದು ಕತೆಗೆ ಐವತ್ತು ಸಾವ್ರ ಬಹುಮಾನ ಕೊಡ್ತಾರಾ.. ಏನು ಲಕ್ಷ ರೂಪಾಯಿಯ ಸ್ಪರ್ಧೆ..! ಅದೂ ಬರೀ ಕಥಾ ಸ್ಪರ್ಧೆನಾ.. ಕಾಲ ಬದಲಾಗಿ ಬಿಡ್ತುಬಿಡಿ.. ನಮ್ ಕಾಲದಲ್ಲಿ ವರ್ಷಾನುಗಟ್ಟಲೆ ಅಧ್ಯಯನ ಮಾಡಿ, ಹಗಲು ರಾತ್ರಿ ಕೂತ್ಕೊಂಡು ಒಂದು ರಾಶಿ ಹಾಳೆ ತುಂಬಾ ಗೀಚಿ ಕೊನೆಗೆ ಅದ್ನ ಹಿಡ್ಕೊಂಡು ನೂರಾರು ಪ್ರಕಾಶನ ಅಲೆದು ಕೊನೆಗೂ ಯಾರೊ … Read more

ಅಮ್ಮಾ ನಾನು ಶಾಲೆಗೆ ಹೋಗಲ್ಲ!: ಪರಮೇಶ್ವರಿ ಭಟ್

ನಾಲ್ಕು ವರ್ಷದ ವಿಭಾ ಶಾಲೆಯಿಂದ ಬರುವಾಗ ಸಪ್ಪಗಿದ್ದಳು. ಅವಳ ತಾಯಿ ರಮ್ಯ’ ಏನಾಯ್ತು ಪುಟ್ಟ?’ಅಂತ ಕೇಳಿದರೆ ಉತ್ತರಿಸಲಿಲ್ಲ. ಮರುದಿನ ‘ಅಮ್ಮ, ನಾನು ಶಾಲೆಗೆ ಹೋಗಲ್ಲ ‘ಅಂತ ಅಳತೊಡಗಿದಳು‌ . ಏನಾಯ್ತು ಅಂದರೆ ಸುಮ್ಮನೆ ಅಳತೊಡಗಿದಳು. ಆದರೂ ಅವಳನ್ನು ಸ್ನಾನಕ್ಕೆ ಕರಕೊಂಡು ಹೋದಾಗ ತಾಯಿಗೆ ದಿಗಿಲಾಯಿತು. ಅವಳನ್ನು ತಕ್ಷಣ ಡಾಕ್ಟರರಲ್ಲಿ ಕರಕೊಂಡು ಹೋದಳು.ಆಗ ವಿಭಾಳ‌ ಮೇಲೆ ನಡೆದ ಅತ್ಯಾಚಾರ ನಡೆದಿದೆ ಎಂದು ತಿಳಿಯಿತು. ರಮ್ಯಾಳ ರಕ್ತ ಕುದಿಯಿತು. ವಿದ್ಯಾ ದೇಗುಲದಲ್ಲಿ ನೀಚ ಕೃತ್ಯ! ಒಂದಲ್ಲಾ ಒಂದು ಶಾಲೆಯಲ್ಲಿ ಈ … Read more

ಮಾತಿನ ಮಾತು: ಡಾ. ಮಸಿಯಣ್ಣ ಆರನಕಟ್ಟೆ.

“ನೀಲಕುರಿಂಜಿ” ಅರೇ, ಅದೆಂತಹ ಮುದ್ದಾದ ಹೆಸರು. ಒಂದು ಕ್ಷಣ ಮನಸ್ಸಿನ ಮಾದಕತೆಯಲ್ಲಿ ಕರಗುವುದಂತೂ ಖಂಡಿತ. ಈ ನೀಲಕುರಿಂಜಿ ಅನ್ನುವ ಹೆಸರನ್ನು ಕೇಳಿದ್ದು ಕಾಲೇಜಿನಲ್ಲಿ ಜನಾರ್ಧನ್ ಮೇಷ್ಟ್ರು ಜೀವಶಾಸ್ತ್ರ ಪಾಠ ಮಾಡುತ್ತಿರಬೇಕಾದ್ರೆ ಅನ್ನೋ ನೆನಪು ಬ್ಯಾಕ್ ಆಫ್ ಮೈಂಡ್ ಅಲ್ಲಿ ಇದೆ. ‘ಸ್ಟ್ರಾಬಲೆಂತಸ್ ಕುಂತಿಯಾನ ‘ ಇದು ಒಂದು ಹೂ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುತ್ತೆ; ವಿಶೇಷ ಏನಂದ್ರೆ ೧೨ ವರ್ಷಕ್ಕೆ ಒಮ್ಮೆ ಅರಳುತ್ತೆ ಜೊತೆಗೆ ಬಿದಿರಿನ ವಿಶೇಷತೆ ಬಗ್ಗೆಯೂ ಒಂದಷ್ಟು ತರಗತಿಯಲ್ಲಿ ಹೇಳಿದ್ದರು. ನನಗೇಕೆ ಈಗ ನೆನಪಾಗಿದೆ ಅಂದ್ರೆ … Read more

ಎಲ್ಲೆಲ್ಲೋ ಓಡುವ ಮನಸೇ….: ಶೀತಲ್ ವನ್ಸರಾಜ್

ಮೊನ್ನೆ ಆಫೀಸಿಗೆ ಹೋಗಲು ಕ್ಯಾಬ್ ಬುಕ್ ಮಾಡ್ತಾ ಇದ್ದೆ. ಯಾಕೋ ಯಾವ ವಾಹನವೂ ಸಿಗುತ್ತಿರಲಿಲ್ಲ. ನಮಗೆಲ್ಲಾ ಗೊತ್ತಿರುವ ವಿಚಾರವೇ, ನಮ್ಮ ರಾಜಧಾನಿಯ ಟ್ರಾಫಿಕ್ ಗೋಳು. ಇಲ್ಲಿ ಅರ್ಧ ಜೀವನ ರೋಡಿನಲ್ಲಿ ಇನ್ನರ್ಧ ವಾಹನಕ್ಕಾಗಿ ಕಾಯುವುದರಲ್ಲಿ ಮುಗಿದು ಹೋಗುತ್ತದೆ ಎಂಬುವುದು. ನಮ್ಮೂರಿನ ಎಲ್ಲಾ ಸಾಮಾನ್ಯರಿಗೂ ಸಾಮಾನ್ಯವಾಗಿ ಹೋಗಿದೆ, ರೋಡಿನಲ್ಲಿ ವ್ಯಯ ಮಾಡಿದ ಸಮಯವನ್ನು ನಿರ್ಲಕ್ಷಿಸುವುದು. ಹೋಗಲಿ ಬಿಡಿ ಈಗ ನೇರ ವಿಚಾರಕ್ಕೆ ಬರುವೆ. ಅಂದು ಕೊನೆಗೂ ನನಗೊಂದು ಕ್ಯಾಬ್ ಸಿಕ್ಕಿತು. ಮರುಭೂಮಿಯಲ್ಲಿ ಸಣ್ಣ ಒರತೆ ಸಿಕ್ಕ ಸಂತೋಷ ನನಗೆ. … Read more

ದೇವರ ಜಪವೆನ್ನುವ ಜಿಪಿಎಸ್: ರೂಪ ಮಂಜುನಾಥ, ಹೊಳೆನರಸೀಪುರ.

ಸಜ್ಜನರ ಸಹವಾಸ ಯಾವಾಗಲೂ ನಮ್ಮನ್ನ ಉಚ್ಚ ವಿಚಾರಗಳನ್ನು ಯೋಚನೆ ಮಾಡಲು ಪ್ರೇರೇಪಿಸುತ್ತವೆ. ಹಾಗೇ ಹೆಚ್ಚೆಚ್ಚು ಜ್ಞಾನ ಸಂಪಾದನೆಯ ಉಪಾಯಕ್ಕೆ ಹಚ್ಚುತ್ತವೆ ಎನ್ನುವುದು ಬಹಳ ಜನರ ಅನುಭವಕ್ಕೆ ಬಂದಿರುತ್ತದೆ. ಇದೇ ರೀತಿ, ಯಾವ ಜನ್ಮದ ಪುಣ್ಯವೋ ಎನುವಂತೆ ನನಗೂ ಹಲವಾರು ಸಜ್ಜನರು, ಸುಜ್ಞಾನಿಗಳು ಹಾಗೂ ಹಿತ ಕೋರುವವರು, ನನ್ನ ತಿಳುವಳಿಕೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದಾದ ಯುಕ್ತಿಗಳನ್ನು ತಿಳಿಸುವ ಗುರುಗಳ ಸ್ಥಾನದಲ್ಲಿರುವ ಸನ್ಮಿತ್ರರ ಪರಿಚಯ ಆಗಿದೆ. ಅದು ನನ್ನ ಸೌಭಾಗ್ಯವೇ ಸರಿ. ನಮ್ಮದೇ ಊರಿನ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಪ್ರೊಫೆಸರ್ … Read more

ಅರ್ಥಾ ಅಯಿತ್ರೀಯಪ್ಪಾ: ಬಿ.ಟಿ.ನಾಯಕ್

ಅದೊಂದು ದಿನ ಮಾನ್ಯ ಜಿಲ್ಲಾಧಿಕಾರಿಗಳು ಒಂದು ಹಳ್ಳಿಯನ್ನು ಸರಕಾರಿ ಕರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡು ಅಲ್ಲಿಗೆ ಬಂದಿದ್ದರು. ಹೀಗಾಗಿ, ಅವರು ಹೆಮ್ಮೆಯಿಂದ ಮತ್ತು ಬಹಳೇ ಅನಂದದಿಂದ ಕರ್ಯಕ್ರಮ ಮಾಡಲು ತಮ್ಮ ಸಹೋದ್ಯೋಗಿಗಳಿಗೂ ಕೂಡ ತಿಳಿಸಿದ್ದರು. ಒಟ್ಟಿನಲ್ಲಿ ಆ ಹಳ್ಳಿಯ ಜನರ ಮನಸ್ಸು ಗೆದ್ದು ಹೋಗಲು ತವಕ ಪಡುತ್ತಿದ್ದರು. ಅಲ್ಲಿ ಕಾರ್ಯಕ್ರಮ ನಿಗದಿ ಪಡಿಸಿದಂತೆ ಮತ್ತು ವೇದಿಕೆಗೆ ಆಗಮಿಸಲು, ಅಲ್ಲಿ ಕಾರ್ಯಕ್ರಮ ಆಯೋಜಿಸಿದ್ದವರು ಮನವಿ ಮಾಡಿದಾಗ, ಅವರು ವೇದಿಕೆಗೆ ಅಲ್ಲಿಗೆ ಬಂದು ಕುಳಿತರು. ಅವರ ಪಕ್ಕದಲ್ಲಿ ಹಳ್ಳಿಯ ಮುಖ್ಯಸ್ಥರಾದ ನಾಗನಗೌಡರುಉಪಸ್ಥಿತರಿದ್ದರು. … Read more

ನನ್ನ ಗೊಂದಲ ಏನೆಂದರೆ: ಶೈಲಜ ಮಂಚೇನಹಳ್ಳಿ

AC ಅಂದರೆ Assistant Commissioner ಎನ್ನುವ ಪದಕ್ಕೆ ಸರಿಯಾದ ಕನ್ನಡ ಪದದ ಬಗ್ಗೆ . ಈ ಬಗ್ಗೆ ನನಗೆ ಗೊಂದಲ ಶುರುವಾಗಿದ್ದು ನಮ್ಮ ಜಮೀನುಗಳಲ್ಲಿ ಒಂದು ರಸ್ತೆ ಅನಧಿಕೃತವಾಗಿ ಹಾದು ಹೋಗಿ ಪಿ.ಎಂ.ಜಿ.ಎಸ್.ವೈ. ವತಿಯಿಂದ ಅಗಲೀಕರಣ ಕೂಡ ಆಗುತ್ತಿರುವುದರಿಂದ, ಭೂಸ್ವಾಧೀನವಾಗದೇ ರಸ್ತೆ ಇಲ್ಲದ ಖಾಸಗಿ ಜಮೀನುಗಳಲ್ಲಿ ರಸ್ತೆ ಮಾಡಲು ನಮ್ಮ ಒಪ್ಪಿಗೆ ಇಲ್ಲ ಎಂದು ತಿಳಿಸಿದಾಗ ಪಿ.ಎಂ.ಜಿ.ಎಸ್.ವೈ. ಯ ಅಧಿಕಾರಿಗಳು ಕೆಲ ರಾಜಕೀಯ ಪುಡಾರಿಗಳನ್ನು ಮತ್ತು ಕೆಲ ಕೆಟ್ಟ ಹಳ್ಳಿ ಜನರನ್ನು ಸೇರಿಸಿಕೊಂಡು ನಮಗೆ ತೊಂದರೆ ಕೊಟ್ಟಿರುವ … Read more

ಬೆಟ್ಟದ ಭೂತದ ಕತೆ ಮೇದರದೊಡ್ಡಿ ಹನುಮಂತ

ನಮ್ಮೂರು ಕಾವೇರಿ ತೀರದಲ್ಲಿ ಬರುವ ಸುಮಾರು ನಲವತ್ತು ಮನೆಗಳಿರುವ ಪುಟ್ಟ ಊರು. ಊರಿನ ಸುತ್ತೆಲ್ಲಾ ಬಂಡೆಗಳೇ ಸುತ್ತುವರಿದಿರುವ ಕಾರಣ ಊರಿನ ಯಾವ ಕಡೆ ನಿಂತು ಪೋಟೋ ಕ್ಲಿಕ್ಕಿಸಿದರೂ ಸಹ ಯಾವುದೋ ಕಾಡಿನಿಂದ ಪೋಟೋ ತೆಗೆದಂತೆ ಕಾಣುವುದು ವಿಸ್ಮಯವೇ ಸರಿ.ಸಾರಿಗೆ ಸಂಪರ್ಕವಿಲ್ಲದ ಕಾರಣ ಸಾಕ್ಷರತೆಯ ಪ್ರಮಾಣ ಕಡಿಮೆಯಿದೆ. ಹಾಗಾಗಿ ನಾನು ಹತ್ತನೇ ತರಗತಿಯಾಚೆಗಿನ ಮೆಟ್ಟಿಲು ತುಳಿಯಲಿಲ್ಲ.ಅತಿ ಹೆಚ್ಚು ಕರಡಿಗಳು ವಾಸಿಸುವ ಗವಿಗಳಿರುವ ಕಾರಣ ಊರಿನ ಸಮೀಪದ ಬಂಡೆ ಸಾಲಿಗೆ ಕರಡಿಕಲ್ಲು ಎಂಬ ಹೆಸರಿದೆ. ಊರಿಗೆ ಕರಡಿಕಲ್ ದೊಡ್ಡಿ ಎಂಬ … Read more

ನುಡಿವ ಬೆಡಗು: ಡಾ. ಹೆಚ್ ಎನ್ ಮಂಜುರಾಜ್

ನಮ್ಮಲ್ಲೊಂದು ವಿಚಿತ್ರವಾದ ಆದರೆ ಎಲ್ಲರೂ ಒಪ್ಪಿ ಆಚರಿಸುವ ನಡವಳಿಕೆಯ ಲೋಪವಿದೆ. ಇದು ಎಲ್ಲರ ಗಮನಕೂ ಬಂದಿರಬಹುದು. ಆದರೆ ಇದನ್ನು ಕುರಿತು ಬರೆದವರು ಕಡಮೆ. ಗೊತ್ತಿದ್ದರೆ ನೀವೇ ತಿಳಿಸಬೇಕು. ಯಾರನ್ನಾದರೂ ಭೇಟಿಯಾದಾಗ, ಲೋಕಾಭಿರಾಮ ಮಾತಾಡುವಾಗ, ಎದುರಿನವರು ಹೇಳುವುದನ್ನು ಕೇಳಿಸಿಕೊಳ್ಳುವಾಗ ಮತ್ತು ನಮ್ಮೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವಾಗ ನಾವು ಮಾಡುವ ಅತಿ ದುಷ್ಟವರ್ತನೆಯೆಂದರೆ ಪೂರ್ತ ಕೇಳಿಸಿಕೊಂಡು, ಪ್ರತಿಕ್ರಿಯಿಸುವ ಮುನ್ನವೇ ಅಂಥದೇ ಪ್ರಸಂಗ-ಪರಿಪರಿ ಪರಸಂಗಗಳನ್ನು ನಾವೇ ಮುಂದೊಡಗಿ ಹೇಳಲು ಉತ್ಸುಕರಾಗುವುದು; ಪೂರ್ತ ಕೇಳಿಸಿಕೊಳ್ಳದೇ ಆ ಸಂಬಂಧದ ನಮ್ಮ ಅನುಭವ ಮತ್ತು ನೆನಪುಗಳನ್ನು … Read more