ಬಾರಿನಲ್ಲಿ ‘ಬುದ್ಧ’: ಡಾ. ಸುಶ್ಮಿತಾ ವೈ.
ಮಳೆಗಾಲದ ಒಂದು ಸಂಜೆ ತೀರ್ಥಹಳ್ಳಿಯ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಬೇಕು-ಬೇಡದ ಆಲೋಚನೆಗಳ ನಡುವೆ ಈ ರಣಮಳೆಯಿಂದ ತಪ್ಪಿಸಿಕೊಂಡು ಮನೆ ಸೇರಿದರೆ ಸಾಕಪ್ಪ ಎನಿಸುತ್ತಿತ್ತು. ಗಡಿಬಿಡಿಯ ಗಾಡಿಗಳು ನಿಂತ ನೀರಿನ ಮೇಲೆ ಚಕ್ರ ಹರಿಸಿ ಎಳ್ಳಮಾವಾಸ್ಯೆಯ ತೀರ್ಥಸ್ನಾನ ಈಗಲೇ ಆಗಬಹುದೆಂಬ ಭಯದಲ್ಲಿ ಸುತ್ತ-ಮುತ್ತ ಕಣ್ಣರಳಿಸಿ ನೋಡುತ್ತಾ ಹೆಜ್ಜೆ ಹಾಕುತ್ತಿದ್ದೆ. ಎಡಕ್ಕೆ ತಿರುಗಿ ಇನ್ನೊಂದು ರಸ್ತೆಗೆ ಕಾಲಿಡುವಾಗ ರಸ್ತೆ ಪಕ್ಕದ ‘ಬಾರ್’ನ ಕ್ಯಾಶ್ಕೌಂಟರ್ ಟೇಬಲ್ ಮೇಲೆ ‘ರಿಸಪ್ಯನಿಸ್ಟ್’ನಂತೆ ಮಂದಸ್ಮಿತನಾಗಿ ಕುಳಿತಿದ್ದ ‘ಬುದ್ಧಮೂರ್ತಿ’ಯ ದರ್ಶನವಾಯಿತು. ಒಮ್ಮೆಲೆ ನನ್ನಲ್ಲಿ ನಗು, ಬೇಸರ, ಪ್ರಶ್ನೆ, … Read more