ಮೇಷ್ಟ್ರು ಡೈರಿ ೧: ಲಿಂಗರಾಜು ಕೆ ಮಧುಗಿರಿ.

ಎಂದಿನಂತೆ ಶಾಲೆಯ ಬಿಸಿಯೂಟಕ್ಕೆ ತರಕಾರಿ ತರಲು ಹೆಂಡತಿ ಜೊತೆ ಹೋಗಿದ್ದೆ. ರಸ್ತೆ ಬದಿಯ ತರಕಾರಿ ಅಂಗಡಿಯಮ್ಮನ ಜೊತೆ ಸುಮಾರು ಒಂದರವತ್ತೊಂದರ ವಯಸ್ಸಿನ ಅಜ್ಜಿ ಕೂಡಾ ಮೊಳಕೆ ಕಟ್ಟಿದ್ದ ಹೆಸರುಕಾಳು, ತೆಂಗಿನಕಾಯಿ ಮಾರುತ್ತಾ ಕುಳಿತಿತ್ತು. ತರಕಾರಿ ತೆಗೆದುಕೊಳ್ಳುತ್ತಾ ತರಕಾರಿಯಮ್ಮನ ಜೊತೆ ಮಾತನಾಡುತ್ತಿದ್ದ ಹೆಂಡತಿಯನ್ನು ನೋಡಿದ ಆ ಅಜ್ಜಮ್ಮ, “ಏ ಎಂಗ್ಸೆ ಪ್ರಂಗ್ನೆಂಟ್ ಇದ್ದಂಗ್ ಇದ್ಯ, ಇಂಗೆ ಬಿಗ್ಯಗಿರೋ ಡ್ರೆಸ್ಸಾ ಆಕಬರದು? ಯರ‍್ಯಾರ್ ಕಣ್ ಎಂಗರ‍್ತವೋ ಏನೋ, ಮೈ ತುಂಬಾ ಬಟ್ಟೆ ಆಕಂಡ್ ಓಡಾಡು” ಎಂದು ಅಧಿಕಾರಯುತವಾಗಿ ಹೆಂಡತಿಗೆ ಸಲಹೆ … Read more

ಪಥವೋ! ಪಂಥವೋ !?: ಡಾ. ಹೆಚ್ ಎನ್ ಮಂಜುರಾಜ್

‘ಸುಮ್ಮನೆ ಗಮನಿಸಿ; ಅದರೊಂದಿಗೆ ಗುರುತಿಸಿಕೊಳ್ಳಲು ಹೊರಡಬೇಡಿ’ ಎಂದರು ಓಶೋ ರಜನೀಶರು. ಇದನ್ನೇ ಭಗವದ್ಗೀತೆಯು ಬೇರೊಂದು ರೀತಿಯಲ್ಲಿ ‘ನಿಷ್ಕಾಮ ಕರ್ಮ’ ಎಂದಿದೆ. ಇದರ ಎದುರು ರೂಪವೇ ಸಕಾಮ ಕರ್ಮ. ಇದು ಲೋಕಾರೂಢಿ. ಏನಾದರೊಂದು ನಿರೀಕ್ಷೆ, ಪರೀಕ್ಷೆಗಳನ್ನಿಟ್ಟುಕೊಂಡು ಮಾಡುವಂಥ ಕೆಲಸ. ‘ನನ್ನನ್ನು ಗುರುತಿಸಲಿ, ಮೆಚ್ಚಲಿ, ಹತ್ತು ಜನರ ಮುಂದೆ ಕೀರ್ತಿಸಲಿ’ ಎಂಬ ಲೌಕಿಕ ಮೋಹಕ! ನಿಷ್ಕಾಮವು ಹಾಗಲ್ಲ. ತನ್ನ ಪಾಡಿಗೆ ತಾನು ಕೆಲಸಗಳನ್ನು ಮಾಡಿಕೊಂಡು ಹೋಗುವಂಥದು. ಯಾರು ಮೆಚ್ಚಲಿ, ಬಿಡಲಿ. ಇದು ನೈಸರ್ಗಿಕ. ಚೈತ್ರೋದಯವಾಯಿತೆಂದು ಮರಗಿಡಗಳು ತಮ್ಮದೇ ಆದ ರೀತಿಯಲ್ಲಿ … Read more

ಗುಂಡೂಮಾಮನ ಜಾದು ಮತ್ತು ಇಕ್ಕಳ: ಡಾ. ಹೆಚ್ ಎನ್ ಮಂಜುರಾಜ್

ಪ್ರೌಢಶಾಲೆಯಲ್ಲಿ ಓದುವಾಗ ಕೆ ಎಸ್ ನರಸಿಂಹಸ್ವಾಮಿಯವರ ‘ಇಕ್ಕಳ’ ಎಂಬೊಂದು ಪದ್ಯವಿತ್ತು. ಮೇಡಂ ಪಾಠ ಮಾಡುವಾಗ ಅದೇನು ಹೇಳಿದರೋ ಆಗ ತಲೆಗೆ ಹೋಗಿರಲಿಲ್ಲ. ಆದರೆ ನಮ್ಮ ಮನೆಯ ಅಡುಗೆಮನೆಯಲ್ಲೊಂದು ಇಕ್ಕಳ ಇತ್ತು. ಆ ಪದ್ಯಪಾಠ ಓದುವಾಗೆಲ್ಲ ನನಗೆ ಅದೊಂದೇ ನೆನಪಾಗುತ್ತಿತ್ತು. ಮನೆಮಂದಿಗೆಲ್ಲಾ ಆ ಇಕ್ಕಳದ ಮೇಲೆ ಬಲು ಅಕ್ಕರೆ. ಏಕೆಂದರೆ ಕೆಳಮಧ್ಯಮವರ್ಗದವರಾದ ನಮ್ಮ ಮನೆಗೆ ಬಂದಿದ್ದ ಮೊತ್ತ ಮೊದಲ ವಿದೇಶಿ ವಸ್ತುವದು. ನಮ್ಮ ತಂದೆಯ ಸೋದರಮಾವ ಚಿಕ್ಕಂದಿನಲ್ಲೇ ಮುಂಬಯಿಗೆ ಓಡಿ ಹೋಗಿ ಅಲ್ಲೆಲ್ಲೋ ಇದ್ದು, ಏನೇನೋ ವಿದ್ಯೆಗಳನ್ನು ಕಲಿತು, … Read more

ಶಿಕ್ಷಣ, ಉದ್ಯೋಗ ಮತ್ತು ನೈತಿಕತೆ: ಪರಮೇಶ್ವರಿ ಭಟ್

ಎಲ್ಲರೂ ತಿಳಿದಂತೆ ಶಿಕ್ಷಣ‌ ಮತ್ತು ಉದ್ಯೋಗ ಒಂದಕ್ಕೊಂದು ಸಂಬಂಧಪಟ್ಟ ವಿಷಯಗಳು. ಉತ್ತಮ ಶಿಕ್ಷಣ ಉತ್ತಮ ಉದ್ಯೋಗಕ್ಕೆ, ಉತ್ತಮ ಉದ್ಯೋಗವು ಉತ್ತಮ ಜೀವನ ಮಟ್ಟಕ್ಕೆ ಕಾರಣವಾಗುತ್ತದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಜೀವನ ಒದಗಿಸಿಕೊಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುತ್ತಾರೆ. ಆದರೆ ಹಾಗೆ ಮಾಡುವಾಗ ಜೀವನಕ್ಕೆ ಅತೀ ಅಗತ್ಯವಾದ ನೈತಿಕತೆಯ ಬಗ್ಗೆ ಗಮನ ಹರಿಸುವುದಿಲ್ಲ. ಹಾಗೆಂದು ಅವರು ವಾಮ‌ಮಾರ್ಗ ಅನುಸರಿಸುತ್ತಾರೆ ಅಂತ ಅರ್ಥವಲ್ಲ. ಅವರ ಗಮನ ಮಕ್ಕಳು ಗಳಿಸುವ ಅಂಕಗಳಿಗೆ. . ಯಾಕೆಂದರೆ ಅಂಕಗಳೇ ಬುದ್ಧಿವಂತಿಕೆಯ ಅಳತೆಗೋಲು ಅಂತ‌ … Read more

ಕೆನಡಾದಲ್ಲಿ ಒಂದು ಸಂಜೆ

ಕೆನಡಾದಲ್ಲಿ ಇರುವ ಮಗನ ಮನೆಯಲ್ಲಿ ಆ ಸಂಜೆ ಅದಾಗ ತಾನೇ ಬರುತ್ತಿದ್ದ ತುಂತುರು ಮಳೆ ನಿಂತಿತ್ತು. ಆದರೆ ಬೆಳಗಿನಿಂದ ರಸ್ತೆ ಪೂರಾ ಚೆಲ್ಲಿದ್ದ ಮಂಜು ಮತ್ತಷ್ಟು ಗಟ್ಟಿಯಾಗಿ ಕಾಲಿಟ್ಟರೆ ಜಾರುವ ಸ್ಥಿತಿಯನ್ನು ತಲುಪಿತ್ತು. ರಸ್ತೆಯಲ್ಲಿ ವಿರಳವಾಗಿ ಅಲ್ಲೊಂದು ಇಲ್ಲೊಂದು ವಾಹನಗಳು ಚಲಿಸುತ್ತಿದ್ದವು. ಗಟ್ಟಿಯಾದ ಮಂಜನ್ನು ಸರಿಸಲು ಟ್ರಕ್ಕುಗಳಲ್ಲಿ ‘ ರಾಕ್ ಸಾಲ್ಟ್ ‘ ಲವಣವನ್ನು ರಸ್ತೆ ತುಂಬಾ ಸುರಿಯುತ್ತಿದ್ದರು. ರಾಕ್ ಸಾಲ್ಟ್ ನಮ್ಮಲ್ಲಿ ಸಿಗುವ ಉಪ್ಪಿನಂತೆ ಲವಣದ ರೂಪದಲ್ಲಿ ಇದ್ದು ಗಾತ್ರದಲ್ಲಿ ದೊಡ್ಡ ಸ್ಪಟಿಕಾಗಳಾಗಿ ದೊರೆಯುತ್ತದೆ. ನೇರಳೆ … Read more

ಜೀರಂಗಿ ಜಗತ್ತು: ವೀರಯ್ಯ ಕೋಗಳಿಮಠ್

“ಕಾಲುತೊಳಿ ಮುಖತೊಳಿ, ಜೀಯೆನ್ನಲೇ”, ಅಂತ ಪದೇಪದೇ ರಾಗವಾಗಿ ಹಾಡುತ್ತಾ ಅದರ ಕಾಲು ಚಿವುಟಿ ನೆಲದಿಂದ ಮೇಲಕ್ಕೆ ಹಾರುವವರೆಗೆ ಬಿಡದೆ ಚಿತ್ರಹಿಂಸೆ ನೀಡಿ ಆಟ ಆಡಿಸುತ್ತಿದ್ದುದು ನಮ್ಮ ಬಾಲ್ಯದಲ್ಲಿ ನೆಚ್ಚಿನ ಜೀರಂಗಿ (Jewel Beetle/ Sternocera ruficornis) ಮತ್ತು ಹೆದ್ದುಮ್ಮಿಗಳಿಗೆ. ಹಲವು ಕಡೆ ಅವುಗಳಿಗೆ ಜಿಲಗಂಬಿ, ಜೀರ್ಜಿಂಬೆ, ಕಂಚುಗಾರ ಅಂತಾನೂ ಕರೀತಾರೆ. ಕೈಗೆ ಸಿಕ್ಕ ಜೀರಂಗಿಗಳನ್ನ ನಡೆಸಿಕೊಳ್ಳುವ ಪರಿಯನ್ನ ಹೇಳುವಂತಿಲ್ಲ. ಮನೇಲಿರೋ ಬೆಂಕಿಪೊಟ್ಣದ ಕಡ್ಡಿಗಳನ್ನೆಲ್ಲ ಚೆಲ್ಲಿ ಅದನ್ನೇ ಜೀರಂಗಿ ಗೂಡನ್ನಾಗಿ ಮಾಡಿ ಜೀಕುಜಾಲಿ ಅಥವಾ ತುಗಲಿ ಮರದ ತೊಪ್ಪಲು … Read more

ಇದು ಕತೆಗಳ ಕಾಲವಯ್ಯಾ..: ಸಂಜಯ್ ಚಿತ್ರದುರ್ಗ

” ಬರೀ ಬರವಣಿಗೆಯಿಂದ ಬದುಕು ಕಟ್ಟಿಕೊಳ್ಳೊಕೆ ಸಾಧ್ಯವಿಲ್ಲ ” ಎಂದಿದ್ದ ಸಾಹಿತಿ ಏನಾದರೂ ಇವತ್ತು ಬದ್ಕಿದ್ರೆ ಮೂಗಿನ ಮೇಲೆ ಬೆರಳಿಟ್ಟುಕೊಂಡು ” ಹೌದೇನ್ರಿ. ಒಂದು ಕತೆಗೆ ಐವತ್ತು ಸಾವ್ರ ಬಹುಮಾನ ಕೊಡ್ತಾರಾ.. ಏನು ಲಕ್ಷ ರೂಪಾಯಿಯ ಸ್ಪರ್ಧೆ..! ಅದೂ ಬರೀ ಕಥಾ ಸ್ಪರ್ಧೆನಾ.. ಕಾಲ ಬದಲಾಗಿ ಬಿಡ್ತುಬಿಡಿ.. ನಮ್ ಕಾಲದಲ್ಲಿ ವರ್ಷಾನುಗಟ್ಟಲೆ ಅಧ್ಯಯನ ಮಾಡಿ, ಹಗಲು ರಾತ್ರಿ ಕೂತ್ಕೊಂಡು ಒಂದು ರಾಶಿ ಹಾಳೆ ತುಂಬಾ ಗೀಚಿ ಕೊನೆಗೆ ಅದ್ನ ಹಿಡ್ಕೊಂಡು ನೂರಾರು ಪ್ರಕಾಶನ ಅಲೆದು ಕೊನೆಗೂ ಯಾರೊ … Read more

ಅಮ್ಮಾ ನಾನು ಶಾಲೆಗೆ ಹೋಗಲ್ಲ!: ಪರಮೇಶ್ವರಿ ಭಟ್

ನಾಲ್ಕು ವರ್ಷದ ವಿಭಾ ಶಾಲೆಯಿಂದ ಬರುವಾಗ ಸಪ್ಪಗಿದ್ದಳು. ಅವಳ ತಾಯಿ ರಮ್ಯ’ ಏನಾಯ್ತು ಪುಟ್ಟ?’ಅಂತ ಕೇಳಿದರೆ ಉತ್ತರಿಸಲಿಲ್ಲ. ಮರುದಿನ ‘ಅಮ್ಮ, ನಾನು ಶಾಲೆಗೆ ಹೋಗಲ್ಲ ‘ಅಂತ ಅಳತೊಡಗಿದಳು‌ . ಏನಾಯ್ತು ಅಂದರೆ ಸುಮ್ಮನೆ ಅಳತೊಡಗಿದಳು. ಆದರೂ ಅವಳನ್ನು ಸ್ನಾನಕ್ಕೆ ಕರಕೊಂಡು ಹೋದಾಗ ತಾಯಿಗೆ ದಿಗಿಲಾಯಿತು. ಅವಳನ್ನು ತಕ್ಷಣ ಡಾಕ್ಟರರಲ್ಲಿ ಕರಕೊಂಡು ಹೋದಳು.ಆಗ ವಿಭಾಳ‌ ಮೇಲೆ ನಡೆದ ಅತ್ಯಾಚಾರ ನಡೆದಿದೆ ಎಂದು ತಿಳಿಯಿತು. ರಮ್ಯಾಳ ರಕ್ತ ಕುದಿಯಿತು. ವಿದ್ಯಾ ದೇಗುಲದಲ್ಲಿ ನೀಚ ಕೃತ್ಯ! ಒಂದಲ್ಲಾ ಒಂದು ಶಾಲೆಯಲ್ಲಿ ಈ … Read more

ಮಾತಿನ ಮಾತು: ಡಾ. ಮಸಿಯಣ್ಣ ಆರನಕಟ್ಟೆ.

“ನೀಲಕುರಿಂಜಿ” ಅರೇ, ಅದೆಂತಹ ಮುದ್ದಾದ ಹೆಸರು. ಒಂದು ಕ್ಷಣ ಮನಸ್ಸಿನ ಮಾದಕತೆಯಲ್ಲಿ ಕರಗುವುದಂತೂ ಖಂಡಿತ. ಈ ನೀಲಕುರಿಂಜಿ ಅನ್ನುವ ಹೆಸರನ್ನು ಕೇಳಿದ್ದು ಕಾಲೇಜಿನಲ್ಲಿ ಜನಾರ್ಧನ್ ಮೇಷ್ಟ್ರು ಜೀವಶಾಸ್ತ್ರ ಪಾಠ ಮಾಡುತ್ತಿರಬೇಕಾದ್ರೆ ಅನ್ನೋ ನೆನಪು ಬ್ಯಾಕ್ ಆಫ್ ಮೈಂಡ್ ಅಲ್ಲಿ ಇದೆ. ‘ಸ್ಟ್ರಾಬಲೆಂತಸ್ ಕುಂತಿಯಾನ ‘ ಇದು ಒಂದು ಹೂ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುತ್ತೆ; ವಿಶೇಷ ಏನಂದ್ರೆ ೧೨ ವರ್ಷಕ್ಕೆ ಒಮ್ಮೆ ಅರಳುತ್ತೆ ಜೊತೆಗೆ ಬಿದಿರಿನ ವಿಶೇಷತೆ ಬಗ್ಗೆಯೂ ಒಂದಷ್ಟು ತರಗತಿಯಲ್ಲಿ ಹೇಳಿದ್ದರು. ನನಗೇಕೆ ಈಗ ನೆನಪಾಗಿದೆ ಅಂದ್ರೆ … Read more

ಎಲ್ಲೆಲ್ಲೋ ಓಡುವ ಮನಸೇ….: ಶೀತಲ್ ವನ್ಸರಾಜ್

ಮೊನ್ನೆ ಆಫೀಸಿಗೆ ಹೋಗಲು ಕ್ಯಾಬ್ ಬುಕ್ ಮಾಡ್ತಾ ಇದ್ದೆ. ಯಾಕೋ ಯಾವ ವಾಹನವೂ ಸಿಗುತ್ತಿರಲಿಲ್ಲ. ನಮಗೆಲ್ಲಾ ಗೊತ್ತಿರುವ ವಿಚಾರವೇ, ನಮ್ಮ ರಾಜಧಾನಿಯ ಟ್ರಾಫಿಕ್ ಗೋಳು. ಇಲ್ಲಿ ಅರ್ಧ ಜೀವನ ರೋಡಿನಲ್ಲಿ ಇನ್ನರ್ಧ ವಾಹನಕ್ಕಾಗಿ ಕಾಯುವುದರಲ್ಲಿ ಮುಗಿದು ಹೋಗುತ್ತದೆ ಎಂಬುವುದು. ನಮ್ಮೂರಿನ ಎಲ್ಲಾ ಸಾಮಾನ್ಯರಿಗೂ ಸಾಮಾನ್ಯವಾಗಿ ಹೋಗಿದೆ, ರೋಡಿನಲ್ಲಿ ವ್ಯಯ ಮಾಡಿದ ಸಮಯವನ್ನು ನಿರ್ಲಕ್ಷಿಸುವುದು. ಹೋಗಲಿ ಬಿಡಿ ಈಗ ನೇರ ವಿಚಾರಕ್ಕೆ ಬರುವೆ. ಅಂದು ಕೊನೆಗೂ ನನಗೊಂದು ಕ್ಯಾಬ್ ಸಿಕ್ಕಿತು. ಮರುಭೂಮಿಯಲ್ಲಿ ಸಣ್ಣ ಒರತೆ ಸಿಕ್ಕ ಸಂತೋಷ ನನಗೆ. … Read more

ದೇವರ ಜಪವೆನ್ನುವ ಜಿಪಿಎಸ್: ರೂಪ ಮಂಜುನಾಥ, ಹೊಳೆನರಸೀಪುರ.

ಸಜ್ಜನರ ಸಹವಾಸ ಯಾವಾಗಲೂ ನಮ್ಮನ್ನ ಉಚ್ಚ ವಿಚಾರಗಳನ್ನು ಯೋಚನೆ ಮಾಡಲು ಪ್ರೇರೇಪಿಸುತ್ತವೆ. ಹಾಗೇ ಹೆಚ್ಚೆಚ್ಚು ಜ್ಞಾನ ಸಂಪಾದನೆಯ ಉಪಾಯಕ್ಕೆ ಹಚ್ಚುತ್ತವೆ ಎನ್ನುವುದು ಬಹಳ ಜನರ ಅನುಭವಕ್ಕೆ ಬಂದಿರುತ್ತದೆ. ಇದೇ ರೀತಿ, ಯಾವ ಜನ್ಮದ ಪುಣ್ಯವೋ ಎನುವಂತೆ ನನಗೂ ಹಲವಾರು ಸಜ್ಜನರು, ಸುಜ್ಞಾನಿಗಳು ಹಾಗೂ ಹಿತ ಕೋರುವವರು, ನನ್ನ ತಿಳುವಳಿಕೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದಾದ ಯುಕ್ತಿಗಳನ್ನು ತಿಳಿಸುವ ಗುರುಗಳ ಸ್ಥಾನದಲ್ಲಿರುವ ಸನ್ಮಿತ್ರರ ಪರಿಚಯ ಆಗಿದೆ. ಅದು ನನ್ನ ಸೌಭಾಗ್ಯವೇ ಸರಿ. ನಮ್ಮದೇ ಊರಿನ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಪ್ರೊಫೆಸರ್ … Read more

ಅರ್ಥಾ ಅಯಿತ್ರೀಯಪ್ಪಾ: ಬಿ.ಟಿ.ನಾಯಕ್

ಅದೊಂದು ದಿನ ಮಾನ್ಯ ಜಿಲ್ಲಾಧಿಕಾರಿಗಳು ಒಂದು ಹಳ್ಳಿಯನ್ನು ಸರಕಾರಿ ಕರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡು ಅಲ್ಲಿಗೆ ಬಂದಿದ್ದರು. ಹೀಗಾಗಿ, ಅವರು ಹೆಮ್ಮೆಯಿಂದ ಮತ್ತು ಬಹಳೇ ಅನಂದದಿಂದ ಕರ್ಯಕ್ರಮ ಮಾಡಲು ತಮ್ಮ ಸಹೋದ್ಯೋಗಿಗಳಿಗೂ ಕೂಡ ತಿಳಿಸಿದ್ದರು. ಒಟ್ಟಿನಲ್ಲಿ ಆ ಹಳ್ಳಿಯ ಜನರ ಮನಸ್ಸು ಗೆದ್ದು ಹೋಗಲು ತವಕ ಪಡುತ್ತಿದ್ದರು. ಅಲ್ಲಿ ಕಾರ್ಯಕ್ರಮ ನಿಗದಿ ಪಡಿಸಿದಂತೆ ಮತ್ತು ವೇದಿಕೆಗೆ ಆಗಮಿಸಲು, ಅಲ್ಲಿ ಕಾರ್ಯಕ್ರಮ ಆಯೋಜಿಸಿದ್ದವರು ಮನವಿ ಮಾಡಿದಾಗ, ಅವರು ವೇದಿಕೆಗೆ ಅಲ್ಲಿಗೆ ಬಂದು ಕುಳಿತರು. ಅವರ ಪಕ್ಕದಲ್ಲಿ ಹಳ್ಳಿಯ ಮುಖ್ಯಸ್ಥರಾದ ನಾಗನಗೌಡರುಉಪಸ್ಥಿತರಿದ್ದರು. … Read more

ನನ್ನ ಗೊಂದಲ ಏನೆಂದರೆ: ಶೈಲಜ ಮಂಚೇನಹಳ್ಳಿ

AC ಅಂದರೆ Assistant Commissioner ಎನ್ನುವ ಪದಕ್ಕೆ ಸರಿಯಾದ ಕನ್ನಡ ಪದದ ಬಗ್ಗೆ . ಈ ಬಗ್ಗೆ ನನಗೆ ಗೊಂದಲ ಶುರುವಾಗಿದ್ದು ನಮ್ಮ ಜಮೀನುಗಳಲ್ಲಿ ಒಂದು ರಸ್ತೆ ಅನಧಿಕೃತವಾಗಿ ಹಾದು ಹೋಗಿ ಪಿ.ಎಂ.ಜಿ.ಎಸ್.ವೈ. ವತಿಯಿಂದ ಅಗಲೀಕರಣ ಕೂಡ ಆಗುತ್ತಿರುವುದರಿಂದ, ಭೂಸ್ವಾಧೀನವಾಗದೇ ರಸ್ತೆ ಇಲ್ಲದ ಖಾಸಗಿ ಜಮೀನುಗಳಲ್ಲಿ ರಸ್ತೆ ಮಾಡಲು ನಮ್ಮ ಒಪ್ಪಿಗೆ ಇಲ್ಲ ಎಂದು ತಿಳಿಸಿದಾಗ ಪಿ.ಎಂ.ಜಿ.ಎಸ್.ವೈ. ಯ ಅಧಿಕಾರಿಗಳು ಕೆಲ ರಾಜಕೀಯ ಪುಡಾರಿಗಳನ್ನು ಮತ್ತು ಕೆಲ ಕೆಟ್ಟ ಹಳ್ಳಿ ಜನರನ್ನು ಸೇರಿಸಿಕೊಂಡು ನಮಗೆ ತೊಂದರೆ ಕೊಟ್ಟಿರುವ … Read more

ಬೆಟ್ಟದ ಭೂತದ ಕತೆ ಮೇದರದೊಡ್ಡಿ ಹನುಮಂತ

ನಮ್ಮೂರು ಕಾವೇರಿ ತೀರದಲ್ಲಿ ಬರುವ ಸುಮಾರು ನಲವತ್ತು ಮನೆಗಳಿರುವ ಪುಟ್ಟ ಊರು. ಊರಿನ ಸುತ್ತೆಲ್ಲಾ ಬಂಡೆಗಳೇ ಸುತ್ತುವರಿದಿರುವ ಕಾರಣ ಊರಿನ ಯಾವ ಕಡೆ ನಿಂತು ಪೋಟೋ ಕ್ಲಿಕ್ಕಿಸಿದರೂ ಸಹ ಯಾವುದೋ ಕಾಡಿನಿಂದ ಪೋಟೋ ತೆಗೆದಂತೆ ಕಾಣುವುದು ವಿಸ್ಮಯವೇ ಸರಿ.ಸಾರಿಗೆ ಸಂಪರ್ಕವಿಲ್ಲದ ಕಾರಣ ಸಾಕ್ಷರತೆಯ ಪ್ರಮಾಣ ಕಡಿಮೆಯಿದೆ. ಹಾಗಾಗಿ ನಾನು ಹತ್ತನೇ ತರಗತಿಯಾಚೆಗಿನ ಮೆಟ್ಟಿಲು ತುಳಿಯಲಿಲ್ಲ.ಅತಿ ಹೆಚ್ಚು ಕರಡಿಗಳು ವಾಸಿಸುವ ಗವಿಗಳಿರುವ ಕಾರಣ ಊರಿನ ಸಮೀಪದ ಬಂಡೆ ಸಾಲಿಗೆ ಕರಡಿಕಲ್ಲು ಎಂಬ ಹೆಸರಿದೆ. ಊರಿಗೆ ಕರಡಿಕಲ್ ದೊಡ್ಡಿ ಎಂಬ … Read more

ನುಡಿವ ಬೆಡಗು: ಡಾ. ಹೆಚ್ ಎನ್ ಮಂಜುರಾಜ್

ನಮ್ಮಲ್ಲೊಂದು ವಿಚಿತ್ರವಾದ ಆದರೆ ಎಲ್ಲರೂ ಒಪ್ಪಿ ಆಚರಿಸುವ ನಡವಳಿಕೆಯ ಲೋಪವಿದೆ. ಇದು ಎಲ್ಲರ ಗಮನಕೂ ಬಂದಿರಬಹುದು. ಆದರೆ ಇದನ್ನು ಕುರಿತು ಬರೆದವರು ಕಡಮೆ. ಗೊತ್ತಿದ್ದರೆ ನೀವೇ ತಿಳಿಸಬೇಕು. ಯಾರನ್ನಾದರೂ ಭೇಟಿಯಾದಾಗ, ಲೋಕಾಭಿರಾಮ ಮಾತಾಡುವಾಗ, ಎದುರಿನವರು ಹೇಳುವುದನ್ನು ಕೇಳಿಸಿಕೊಳ್ಳುವಾಗ ಮತ್ತು ನಮ್ಮೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವಾಗ ನಾವು ಮಾಡುವ ಅತಿ ದುಷ್ಟವರ್ತನೆಯೆಂದರೆ ಪೂರ್ತ ಕೇಳಿಸಿಕೊಂಡು, ಪ್ರತಿಕ್ರಿಯಿಸುವ ಮುನ್ನವೇ ಅಂಥದೇ ಪ್ರಸಂಗ-ಪರಿಪರಿ ಪರಸಂಗಗಳನ್ನು ನಾವೇ ಮುಂದೊಡಗಿ ಹೇಳಲು ಉತ್ಸುಕರಾಗುವುದು; ಪೂರ್ತ ಕೇಳಿಸಿಕೊಳ್ಳದೇ ಆ ಸಂಬಂಧದ ನಮ್ಮ ಅನುಭವ ಮತ್ತು ನೆನಪುಗಳನ್ನು … Read more

ಬಸ್ಸಿನಲ್ಲಿಯ ಕಳ್ಳಿ: ಶೈಲಜ ಮಂಚೇನಹಳ್ಳಿ

ಒಂದು ದಿನ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ಹೋಗಿದ್ದ ನಾನು ಹಿಂದಿರುಗಲು ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬರುವ ಒಂದು ಖಾಸಗಿ ಬಸ್ಸಿನಲ್ಲಿ ಎರಡು ಸೀಟ್ ಇರುವ ಕಡೆ ಕಿಟಕಿಯ ಪಕ್ಕ ಕುಳಿತಿದ್ದೆ. ಸ್ವಲ್ಪ ಹೊತ್ತಾದ ನಂತರ ಇನ್ನೊಬ್ಬ ಹೆಂಗಸು ನನ್ನ ಪಕ್ಕದ ಸೀಟಿನಲ್ಲಿ ಕುಳಿತರು. ಕಿಟಕಿಯ ಪಕ್ಕದಲ್ಲಿ ಕುಳಿತಿದ್ದರಿಂದ ಎಂದಿನಂತೆ ನನ್ನ ಗಮನ ಹೊರಗಿನ ದೃಶ್ಯಗಳನ್ನು ಕಿಟಕಿಯಿಂದ ಇಣುಕಿ ನೋಡುವಂತೆ ಮಾಡಿತ್ತಾದ್ದರಿಂದ ಪಕ್ಕದಲ್ಲಿದ್ದವರ ಕಡೆ ಅಷ್ಟಾಗಿ ಗಮನ ಕೊಟ್ಟಿರಲಿಲ್ಲ. ಆಕೆ ಕುಳಿತು ಬಹುಶಃ ಒಂದೈದು ನಿಮಿಷವಾಗಿರಬಹುದು ಒಂದು ಮಗುವನ್ನು ಎತ್ತುಕೊಂಡಿದ್ದ … Read more

ಖಾಲಿಯೇ ಭರ್ತಿ!: ಡಾ. ಹೆಚ್ ಎನ್ ಮಂಜುರಾಜ್

ಪ್ರಾಚೀನ ಚೀನಾದ ಮೂರು ಮುಖ್ಯ ಜೀವನಧರ್ಮಗಳಲ್ಲಿ ಮೂಲತಃ ಎರಡು ಅಲ್ಲಿಯವೇ. ಒಂದು ತಾವೋ, ಇನ್ನೊಂದು ಕನ್ಫ್ಯೂಷಿಯಸ್. ಮತ್ತೊಂದು ಬೌದ್ಧವು ಭಾರತದ ಬಿಕ್ಕುಗಳ ಮೂಲಕ ಚೀನಾವನ್ನು ಪ್ರವೇಶಿಸಿದ್ದು. ಕ್ರಿ. ಪೂ. ಆರನೆಯ ಶತಮಾನದಲ್ಲೇ ತಾವೋ ಜನಿಸಿತು. ಇದರ ನಿರ್ಮಾತೃ ಆಚಾರ್ಯ ಲಾವೋತ್ಸೆ. ಇವನು ಚೌ ಚಕ್ರವರ್ತಿಯ ಆಸ್ಥಾನದಲ್ಲಿ ನೌಕರನಾಗಿದ್ದವನು ತರುವಾಯ ವಿರಕ್ತ ಜೀವನ ನಡೆಸಿದನು. ನಮ್ಮ ಉಪನಿಷತ್ತುಗಳ ನಿರ್ಗುಣ ಬ್ರಹ್ಮತತ್ತ್ವ ಮತ್ತು ಬೌದ್ಧರ ನಿರ್ವಾಣ ತತ್ತ್ವಗಳಂತೆ ಇವನ ಮಾತುಗಳಿವೆ. ಪಥವಲ್ಲದ ಪಥವೆಂದೂ ಬಾಗಿಲಿಲ್ಲದ ಹೆಬ್ಬಾಗಿಲೆಂದೂ ಇವನ ಸಿದ್ಧಾಂತವನ್ನು ವರ್ಣಿಸಲಾಗಿದೆ. … Read more

ಓದುವ ಸುಖ ಹಾಗೂ ಅರಿವು: ಗೋಳೂರ ನಾರಾಯಣಸ್ವಾಮಿ

ಓದುವ ಸುಖ ಹಾಗೂ ಅದು ನಮ್ಮಲ್ಲಿ ಮೂಡಿಸುವ ಅರಿವಿದೆಯಲ್ಲ ಅದರ ಆನಂದವೇ ಬೇರೆ. ನಾವು ಏನನ್ನೋ ಓದುವಾಗ ಇನ್ಯಾವುದೋ ಹೊಸದೊಂದು ಕಥೆ, ಚಿಂತನೆ ಹುಟ್ಟುಕೊಳ್ಳುವುದು ಅಥವಾ ಈಗಾಗಲೇ ನಡೆದು ಹೋಗಿರುವ ಘಟನೆಗಳ ನೆನಪು ಕಾಡುವುದು ಮನಸ್ಸಿಗೆ ಒಂಥರ ಮುದ ಅನ್ನಿ. ಕವಿ ಪ್ರೇಮಚಂದನ ಮಾತುಗಳಿವು: “ಒಳ್ಳೆಯವರ ಮಧ್ಯದಲ್ಲಿ ಯಾಕೆ ಅಷ್ಟೊಂದು ದ್ವೇಷ? ಹಾಗೆಯೇ ಕೆಟ್ಟವರ ನಡುವೆ ಯಾಕೆ ಅಷ್ಟೊಂದು ಪ್ರೀತಿ. ಇದೊಂದು ವಿಸ್ಮಯ. ಒಬ್ಬ ವಿದ್ವಾಂಸ ಇನ್ನೊಬ್ಬ ವಿದ್ವಾಂಸ ಎದುರಾದಾಗ, ಒಬ್ಬ ಸಾದು ಇನ್ನೊಬ್ಬ ಸಾದು ಎದುರಾದಾಗ, … Read more

ಸೀನು ಪುರಾಣ: ಡಾ. ವೃಂದಾ ಸಂಗಮ್

ಅರೆ ವ್ಹಾ, ಕ್ಯಾ ಸೀನ್ ಹೈ ಅಂತ ನಿಮಗ ಯಾರಾದರೂ ಹೇಳಿದರೂ ಅಂದರೆ, ಅದು ಭಾಳ ಭಾಳ ಚಂದದ ಸಿನಿಮಾದ ಒಂದು ಚಂದದ ಸೀನ್ ಅಂತನೋ, ಯಾವುದೋ ಒಂದು ಪ್ರಕೃತಿ ರಮ್ಯ, ರಮಣೀಯ ದೃಶ್ಯನೋ ಅಂತ ತಿಳಿದರೆ ನೀವು ನೂರಕ್ಕೆ ನೂರು ತಪ್ಪು. ಮತ್ತ, ಅಂದರೆ, ಅಂದರೇನು, ಅನಲಿಕ್ಕೇ ಬೇಕು. ಯಾಕಂದರೆ, ಆ ಸೀನು ಹಂಗದ. ಇದೇನರೀ, ಯಾವ ಸೀನು, ಅಂತ ಕೇಳಿದರೆ, ನಾನು ಹೇಳೋದಿಷ್ಟೇ, ನಾನು ಅಚ್ಚ ಕನ್ನಡದ, ನಮ್ಮ ಸೀನೂ ಮಾಮಾನ ಸೀನಿನ ಬಗ್ಗೆ … Read more

ಆಸಕ್ತಿಯು ಹವ್ಯಾಸವಾಗಿ ಬದಲಾದ ಕಥೆ…: ಅಶೋಕ ಬಾವಿಕಟ್ಟಿ

ವ್ಯಾಪಾರ, ಮನೆ ಮಕ್ಕಳು …ಇಷ್ಟೇ ಎನ್ನುವಂತಿದ್ದ ಕಾಲವದು. ಬೆಂಗಾಡಿನಂತಿದ್ದ ನಮ್ಮೂರ‌‌ ಪರಿಸರವೂ ಸಹಜವಾಗಿ ಹಸಿರು, ಜಲಪಾತ, ಬೆಟ್ಟಗುಡ್ಡ, ದಟ್ಟಕಾಡು, ನೀರಿನ ಹರಿವು ಇವುಗಳೆಡೆ ಒಂದು ಆಕರ್ಷಣೆ ಹುಟ್ಟಿಸುತ್ತಿದ್ದವು. ಶಾಲಾ ಕಾಲೇಜು ಸಮಯದಲ್ಲಿ ಪ್ರವಾಸಕ್ಕೆಂದು ಹೋದಾಗ ಇಳಿದ ಜೋಗದ ಗುಂಡಿಯೂ ಏರಿದ ಮುಳ್ಳಯ್ಯನಗಿರಿ ಬೆಟ್ಟವೇ ನಮ್ಮ ಪಾಲಿನ ಕೌತುಕಗಳು ಮತ್ತು ದಾರಿಯಲ್ಲಿ ಬರುವ ದಟ್ಟಕಾಡು, ಭೋರ್ಗರೆವ ಜಲಪಾತ, ಮಳೆಗಳೇ ಚೇತೊಹಾರಿ ಚಿತ್ರಗಳು. ವಿಪರೀತ ಆಸ್ಥೆಯಿಂದ ಗಿಡ ನೆಟ್ಟು , ನೀರುಣಿಸಿ, ಟಿಸಿಲೊಡೆದ ಚಿಗುರು ನೋಡಿ ” ನಾ ನೆಟ್ಟ … Read more

ಸೋನೆ ಮುಗಿಲಿನ ಕವಿ ಡಾ.ನಲ್ಲೂರು ಪ್ರಸಾದ್ ಅವರ ಕಾವ್ಯ ಜಿಜ್ಞಾಸೆ: ಸಂತೋಷ್ ಟಿ

“ಕವಿತೆ ನನ್ನೊಳಗೆ ಕೂತು ಪದ ಹಾಡುವುದಿಲ್ಲಜೇಡನಾಗಿ ಅದು ಬಲೆ ನೇಯುವುದೂ ಇಲ್ಲಬದಲಾಗಿ ಕಾಡುತ್ತದೆ ಸುತ್ತೆಲ್ಲಾ ನೋಡುತ್ತದೆಬತ್ತಲಾದ ಬಯಲಲ್ಲಿ ಸೋಮನ ಕುಣಿತ ಮಾಡುತ್ತದೆ”(ಕಾಡುತ್ತವೆ ನೆನಪುಗಳು ಕವಿತೆ, ನವಿಲು ಜಾಗರ) ಎನ್ನುವ ಕಾವ್ಯ ಪ್ರೀತಿಯ ಆಶಯ ಹೊಂದಿರುವ ಕವಿ ಕೆ.ಆರ್. ಪ್ರಸಾದ್ ತಮ್ಮ ಸ್ವ-ಅನುಭವದಿಂದ ಗಟ್ಟಿಗೊಳ್ಳಿತ್ತಾ ಮೊದಲ ಕವಿತೆಯಲ್ಲಿಯೆ ತನ್ನ ತನವನ್ನು ಕಾವ್ಯದ ಬಗೆಗಿನ ಉತ್ಕಟ ಆಕಾಂಕ್ಷೆಯನ್ನು ತೆರೆದಿಡುತ್ತಾರೆ. ಇಲ್ಲಿ ಕಾವ್ಯವು ಸಾರ್ವಜನಿಕ ಇತ್ಯಾತ್ಮಕ ದೃಷ್ಟಿಗೆ ನಿಲುಕುವ ಬತ್ತಲಾದ ಬಯಲಲ್ಲಿ ಇರುವಂತದ್ದು ಮತ್ತು ಸೋಮನ ಕುಣಿತ ಮಾಡುವಂತದ್ದು ಎಂದರೆ ನೇರವಾಗಿ … Read more

ಗುರುಗಳ ಪಾಠ: ಬಿ.ಟಿ.ನಾಯಕ್

ಅದಪ್ಪ ಮೇಸ್ಟ್ರು ಎಂದರೆ ಮಕ್ಕಳಿಗೆ ಬಲು ಪ್ರೀತಿ. ಅವರು ಎಂದೂ ಯಾವ ಮಕ್ಕಳಿಗೂ ಶಿಕ್ಷಿಸಿರಲಿಲ್ಲ. ಅದರ ಬದಲು ಅವರು ಮಕ್ಕಳಿಗೆ ತಮ್ಮ ತುಂಬು ಪ್ರೀತಿಯನ್ನು ಕೊಡುತ್ತಿದ್ದರು. ತಿಂಗಳಿಗೊಮ್ಮೆ ಯಾವುದಾದರೂ ಒಂದು ಸಿಹಿ ತಿಂಡಿಯನ್ನು ತಮ್ಮ ಮನೆಯಲ್ಲಿ ತಯಾರಿಸಿ ತಂದು ಶಾಲೆಯಲ್ಲಿ ಮಕ್ಕಳಿಗೆ ಹಂಚುತ್ತಿದ್ದರು. ಅಲ್ಲದೇ, ತಮ್ಮ ಬೋಧನಾ ಅವಧಿಯಲ್ಲಿ ಯಾವುದೋ ವಿಶೇಷವಾದ ಘಟನೆ ಅಥವಾ ಮನ ಮುಟ್ಟುವ ಒಂದು ಕಥೆಯನ್ನು ಐದರಿಂದ ಹತ್ತು ನಿಮಿಷಗಳಲ್ಲಿ ಹೇಳಿ ಮುಗಿಸುತ್ತಿದ್ದರು. ಹಾಗಾಗಿ, ಅವರ ಸ್ವಭಾವ, ಮಕ್ಕಳ ಬಗ್ಗೆ ಚಿಂತನೆ ಮತ್ತು … Read more

ಕಲಿಕೆಯೋ ನರಳಿಕೆಯೋ !? ಜಿಜ್ಞಾಸೆ: ಡಾ. ಹೆಚ್ ಎನ್ ಮಂಜುರಾಜ್

ಕಲಿಕೆ ನಿರಂತರ ಎಂಬ ಮಾತನ್ನು ಎಲ್ಲರೂ ಬಲ್ಲೆವು. ಆದರೆ ಯಾವುದು ಕಲಿಕೆ? ಯಾವುದು ಅಲ್ಲ? ಎಂಬುದನ್ನು ತಿಳಿಯುವುದು ಕಷ್ಟವೇ. ಇದು ಒಬ್ಬರಿಂದ ಒಬ್ಬರಿಗೆ ಬೇರೆಯೇ ಆಗುವಂಥದು. ನಂಬಿಕೆ ಮತ್ತು ಮೂಢನಂಬಿಕೆಗಳ ವಿಚಾರದಂತೆ. ‘ನನ್ನದು ಮಾತ್ರ ವೈಜ್ಞಾನಿಕ ಮನೋಭಾವ, ಉಳಿದವರದು ಕೇವಲ ನಂಬಿಕೆ’ ಎಂಬ ಅಹಂಭಾವ ಬಹುತೇಕರದು. ಕೆಲವರು ಇನ್ನೂ ಮುಂಬರಿದು ‘ಅವರದು ಮೂಢನಂಬಿಕೆ’ ಎಂದು ಜರಿಯುವರು. ವಿಚಾರವಾದಿಗಳ ವರಸೆ ಇದು. ಇನ್ನೊಬ್ಬರನ್ನು ಮತ್ತು ಇನ್ನೊಂದನ್ನು ಹೀನಾಯವೆಂದು ಪರಿಗಣಿಸುವುದೇ ಮಾನವತೆಗೆ ಮಾಡುವ ದ್ರೋಹ. ತಮ್ಮಂತೆಯೇ ಇತರರೂ ಇರಬೇಕೆಂಬ ಹಕ್ಕೊತ್ತಾಯವೇ … Read more

ನಾಲ್ಮೊಗದ ಬ್ರಹ್ಮನಂತೆ…: ಡಾ.ವೃಂದಾ ಸಂಗಮ್

“ಲೇ, ನಾ ಸುಮ್ಮನಿದ್ದೇನೆಂದರ, ಏನರ ತಿಳೀಬ್ಯಾಡ, ಇಷ್ಟ ದಿನ ನನ್ನ ಒಂದು ಮುಖಾ ನೋಡಿದ್ದಿ, ಇನ್ನ ಮುಂದ ನನ್ನ ಇನ್ನೊಂದು ಮುಖಾ ನೋಡ ಬೇಕಾಗತದ.” ಅಂತ ಯಾರೋ ಯಾರಿಗೋ ಬೈಯಲಿಕ್ಕೆ ಹತ್ತಿದ್ದು ಕೇಳಿಸಿತು. ಬಹುಷಃ ಅದು ಜಂಗಮ ದೂರವಾಣಿಯಲ್ಲಿ ಕಂಡು ಬಂದ ಒಂದು ಕಡೆಯ ಸಂಭಾಷಣೆ ಇರಬೇಕು, ಇನ್ನೊಂದು ಕಡೆಯವರ ಮಾತು ನನಗೆ ಕೇಳಲಿಲ್ಲ. ಆದರೂ, ಯಾರಿಗೋ ತಾವು ಅಂದುಕೊಂಡಂಗ ಕೆಲಸ ಆಗಿಲ್ಲ, ಅದಕ್ಕ, ಅವರು ಇನ್ನೊಬ್ಬರನ್ನ ಬೈಯಲಿಕ್ಕೆ ಹತ್ತಿದ್ದು ಖರೇ. ನಾನು ಈ ಬೈದವರು ಯಾರೂ … Read more

ಮೌಲ್ಯಾಧಾರಿತ ಶಿಕ್ಷಣದ ಕೊರತೆ: ವಿಜಯ್ ಕುಮಾರ್ ಕೆ.ಎಂ.

“ಶಿಕ್ಷಣ”ವೆಂಬುದು ಮನುಷ್ಯನ ಜ್ಞಾನಕ್ಕೆ ಹಚ್ಚುವ ಜ್ಯೋತಿ. ಅಂತಹ ಜ್ಯೋತಿಯಿಂದ ಮೌಢ್ಯದ ತಾಮಸವನ್ನು ಅಳಿಸಿ ಮೌಲ್ಯಯುತ ಮನುಜನಾಗಲು ಸಾಕ್ಷಿಯಾಗಿರುವ ಇಂದಿನ ಶಿಕ್ಷಣದ ವ್ಯವಸ್ಥೆ ಹತ್ತಾರು ಆಯಾಮಗಳಲ್ಲಿ ತನ್ನ ಸತ್ವ ಕಳೆದುಕೊಂಡು ಕೇವಲ ಅಂಕಗಳಿಗೆ ಸೀಮಿತವಾಗಿ ವ್ಯಾಪಾರೀಕರಣದೆಡೆಗೆ ಸಾಗುತ್ತಿರುವಾಗ ಇಂದಿನ ಮಕ್ಕಳ ಮುಂದಿನ ಭವಿಷ್ಯ ನಿಜಕ್ಕೂ ಚಿಂತನೆಗೆ ಎಡೆ ಮಾಡಿಕೊಡದೆ ಇರದು. ಐದು ದಶಕಗಳ ಹಿಂದೆ ತಾಂತ್ರಿಕತೆ ಹೆಚ್ಚಾಗಿರದಿದ್ದರು ಶಾಲಾ ಶಿಕ್ಷಣದಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕೇನು ಕೊರತೆ ಇರಲಿಲ್ಲ. ಕಾರಣ ಅಂದಿನ ಶಿಕ್ಷಣದಲ್ಲಿ ಕೇವಲ ಪಠ್ಯಧಾರಿತ ಶಿಕ್ಷಣವಲ್ಲದೆ ಮಗುವಿನ ಭವಿಷ್ಯಕ್ಕೆ ಬೇಕಾದ … Read more

ಕಪ್ಪೆರಾಯನ ಟ್ರೈನಿಂಗ್….: ರೂಪ ಮಂಜುನಾಥ

ಮನುಷ್ಯ ಭಾಳ ಸ್ವಾರ್ಥಿ ಕಣ್ರೀ. ಏನಾದ್ರೂ ಒಳ್ಳೆಯದಾಗ್ಲಿ, ಕರ್ಮ, ವಿಧಿ, ಹಣೆಬರಹ, ಪ್ರಾರಬ್ಧಗಳನ್ನೆಲ್ಲಾ ಮರ್ತೇಬಿಡ್ತಾನೆ. ತನ್ನ ಸಫಲತೆಯ ಕಾರಣಕ್ಕೆ ತನ್ನ ಸಾಧನೆಯ ಹಾದಿಯ ಪಟ್ಟಿಯನ್ನೇ ಕೊಡ್ತಾನೆ. ಅದೇ ಏನಾದ್ರೂ ವಿಷ್ಯ ಉಲ್ಟಾ ಆಯ್ತಾ, ಆ ಸೋಲಿಗೆಲ್ಲಾ ಕರ್ಮ, ವಿಧಿ…..ಮುಂತಾದವುಗಳ ಮೇಲೆ ಆರೋಪ ಹೊರಿಸಿ ತಾನು ಬಲು ಸಾಚಾ ಅಂತ ತನ್ನ ಹುಳುಕನ್ನ ತೇಪೆ ಹಾಕಿ ಮುಚ್ಚಿಕೊಳ್ತಾನೆ. ನಾನೂ ಮನುಷ್ಯಳೇ ಆಗಿರುವುದರಿಂದ ಇದಕ್ಕೆ ನಾನೂ ಹೊರತಲ್ಲ ಬಿಡಿ.ಇದೇ ರೀತಿ ನಾವು ನುಣುಚಿಕೊಳ್ಳೋದೂಂದ್ರೆ,”ಅಯ್ಯೋ ಯಾಕೋ ಸಮಯ ಕೂಡಿ ಬರ್ಲೇ ಇಲ್ಲ”,ಅಂತ … Read more

ಇದು ಬೇಬಿ ಮೀಲ್ಸ್ ಕಾಲವಯ್ಯ: ಸರ್ವ ಮಂಗಳ ಜಯರಾಮ್

ಮೊನ್ನೆ ನಮಗೆ ಪರಿಚಯದವರೊಬ್ಬರ ಮದುವೆಗೆ ಹೋಗಿದ್ದೆವು. ಮದುವೆ ಊಟಕ್ಕೆ ರಶ್ಶೋ ರಶ್ಶು.. ಹೋಗಲಿ ಮೊದಲು ವೇದಿಕೆ ಹತ್ತಿ ಗಂಡು ಹೆಣ್ಣನ್ನು ಮಾತನಾಡಿಸಿ ಪ್ರೆಸೆಂಟೇಷನ್ ಕವರ್ ಕೊಟ್ಟು ಫೋಟೋಗೆ ಫೋಸ್ ನೀಡಿ ನಂತರ ಊಟಕ್ಕೆ ಹೋಗೋಣವೆಂದು ಹೋದರೆ ಅಲ್ಲಿಯೂ ವಿಪರೀತ ರಶ್ಶು.. ಮತ್ತೇನು ಮಾಡುವುದು ಸರತಿ ಸಾಲಿನಲ್ಲಿ ಒಂದು ಗಂಟೆ ನಿಂತು ಮುಂದೆ ಹೋಗಿದ್ದಾಯಿತು. ಮದುವೆಯಲ್ಲಿ ಗಂಡು ಹೆಣ್ಣಿನ ಸಂಭ್ರಮವೇ ಸಂಭ್ರಮ. ಅವರು ತಮ್ಮದೇ ಆದ ಪ್ರೇಮಲೋಕದಲ್ಲಿ ಅದಾಗಲೇ ವಿಹರಿಸುತ್ತಾ ಇರುತ್ತಾರೆ. ಸುಮ್ಮನೆ ನೆಪ ಮಾತ್ರಕ್ಕೆ ಅಲ್ಲಿ ಬಂದವರ … Read more

ಕನ್ನಡಕ್ಕಾಗಿ ಒಂದನ್ನು ಒತ್ತಿ: ಪಿ. ಎಸ್. ಅಮರದೀಪ್

“ನೀವು ಕರೆ ಮಾಡಿದ ಚಂದಾದಾರರು ಬೇರೊಂದು ಕರೆಯಲ್ಲಿ  ಕಾರ್ಯನಿರತರಾಗಿದ್ದಾರೆ”. ಧ್ವನಿ ಕೇಳಿದಾಗೊಮ್ಮೆ ನಿಮಗೆ ಏನನ್ನಿಸುತ್ತೆ ಹೇಳಿ?!!!!  ಆ ಕಡೆಯವರು ಬಿಜಿ ಇದಾರೆ ಅಂತೆಲ್ಲಾ ನೀವು ಹೇಳಬಹುದು….. ಆದರೆ ನನಗೆ ಮಾತ್ರ  “ಅವ್ರು ಕರ್ನಾಟಕದಲ್ಲೇ ಇದ್ದಾರಪ್ಪ”. ಅಂತ.. ಹೌದಲ್ಲ?!! ಮಾತಿಗೆ ಹೇಳಿದೆ….  ಪ್ರತಿ ಬಾರಿ ಏನಾದರೊಂದು ಬರಹ ಶುರು ಮಾಡುವ ಮುನ್ನ ಏನು ಬರೆಯಬೇಕು… ಯಾವುದರ ಬಗ್ಗೆ ಬರೀಬೇಕು. ಯಾಕೆ ಬರೀಬೇಕು ಅಂತೆಲ್ಲಾ ಅನ್ಸುತ್ತೆ… ಬರೆವಾಗ ನಿಜಕ್ಕೂ ಅಷ್ಟುದ್ದ ಏನಾದರೂ ಬರೆದೇನು ಎಂಬ ಖಾತರಿ ಇರುವುದಿಲ್ಲ….  ನನಗೆ ಸ್ಪಷ್ಟವಾಗಿ … Read more

ಮಧ್ಯಮವರ್ಗದ ಪಾಠವನ್ನು ಮತ್ತೆ ಪರಿಚಯಿಸಿಕೊಟ್ಟ ಆ ಸಂಜೆ. . .: ಡಾ. ಅಮೂಲ್ಯ ಭಾರದ್ವಾಜ್‌

ಒಮ್ಮೆ ಕಾಲೇಜಿನಿಂದ, ಮೀಟಿಂಗ್ ಮುಗಿಸಿ ಹೊರಡುವಷ್ಟರಲ್ಲಿ ತಡವಾಗಿತ್ತು. ಪರೀಕ್ಷೆಯ ಸಮಯವಾದ್ದರಿಂದ ಪ್ರಿನ್ಸಿಪಾಲರು ಎಲ್ಲಾ ಶಿಕ್ಷಕರನ್ನು ಕರೆಸಿ ತಮ್ಮ ತಮ್ಮ ಪ್ರಶ್ನೆ-ಪತ್ರಿಕೆಗಳನ್ನು ತಯಾರಿಸಿ ಕೊಡಲು ನಿರ್ದೇಶಿಸಿದ್ದರು. ಅಂತೆಯೇ ನಾನು ನಿರ್ವಹಿಸುತ್ತಿದ್ದ, ‘ಸಮಾಜಶಾಸ್ತ’್ರ ಪ್ರಶ್ನೆ-ಪತ್ರಿಕೆಯ ಮೂರು ಜೊತೆಯನ್ನು ಸಲ್ಲಿಸಿದ್ದೆ. ಶಕ್ಕುವೂ ತನ್ನ ಇಂಗ್ಲಿಷ್ ಭಾಷೆಯ ಕುರಿತು ನೀಡಿದ್ದಳು. ಎಲ್ಲಾ ಮುಗಿಸಿ ಹೊರಡುವ ಅವಸರದಲ್ಲಿ, ನನಗೆ ಅರಿವಿಲ್ಲದೆ ಪ್ರಿನ್ಸಿಪಾಲರ ಕೊಠಡಿಯಲ್ಲಿಯೇ ನನ್ನ ಪಠ್ಯಕ್ರಮ-ನಕಾಶೆಯನ್ನು ಬಿಟ್ಟು ಬಂದಿದ್ದೆ. ಕಾಲೇಜಿನಾಚೆ ಬಂದಾಗ, ನನ್ನ ಸಹೋದ್ಯೋಗಿ ಮತ್ತು ಹಿರಿಯ ಕನ್ನಡ ಉಪನ್ಯಾಸಕರಾದ ಪ್ರೊ. ಚಂದ್ರಶೇಖರ ಹೆರೂರರು … Read more

“ದೇಶ ದೇಶದಾರತಿ ಬಂದೋ”: ಗೋಳೂರ ನಾರಾಯಣಸ್ವಾಮಿ

ಅಕ್ಕ ಮಾರಮ್ಮ ಗುಡಿಗಾ ಚಿಕ್ಕವೆರೆಡು ಗಿಳಿಬಂದೋ….ಕಪ್ಪು ತುಂಬಿವೋ ಗುಡಿಗೆಲ್ಲಾಕಪ್ಪು ತುಂಬಿವೋ ಗುಡಿಗೆಲ್ಲಾ ಮಾರಮ್ಮ-ಬಣ್ಣ ಬಳದಾವೋ ಗುಡಿಗೆಲ್ಲದೇಶ ದೇಶದಾರತಿ ಬಂದೋ|| ಹಟ್ಟಿ ಮುಂದ ಹರಡಿಕೊಂಡಿದ್ದ ಸೂಜಿ ಮಲ್ಲುಗ ಚಪ್ಪರದ ಕೆಳಗೆ ಕುಳಿತು ಇದುವರೆಗೂ ನಾನು ನಮ್ಮ ಸೀಮೆಯೊಳಗೆ ಎಲ್ಲೂ ಕ್ಯೋಳದೇ ಇರುವ ಈ ಅಪರೂಪದ ಸಾಲುಗಳನ್ನು ಹಾಡುತ್ತಿದ್ದ ನಮ್ಮಜ್ಜಿ ಪುಟ್ಟಸಿದ್ದಮ್ಮನ ಈ ಹಾಡು, ಈ ಹಾಡಿನ ಮೇಲು ಸ್ವರವ ಕೇಳಿ ನನ್ನೆದೆಯೊಳಗಿಂದೆದ್ದ ಸಂಕಟಕ್ಕೆ ಕೊನೆಯಿಲ್ಲದಾಯಿತು. ಆಗ ತಾನೇ ಗದ್ದ ಕೆಲಸದಿಂದ ಬಂದ ನನ್ನ ನೋಡಿದ ಅಜ್ಜಿ ತಾನು ಹಾಡುತ್ತಿದ್ದ … Read more