ಇಷ್ಟು ಕಾಲ ಒಟ್ಟಿಗಿದ್ದು, ಎಷ್ಟು ಬೆರೆತರೂ…: ದಿವ್ಯ ಆಂಜನಪ್ಪ

ಹೆಚ್.ಎಸ್. ವೆಂಕಟೇಶ ಮೂರ್ತಿ ರವರ ಕವನ:- ಇಷ್ಟು ಕಾಲ ಒಟ್ಟಿಗಿದ್ದು, ಎಷ್ಟು ಬೆರೆತರೂ, ಅರಿತೆವೇನು ನಾವು ನಮ್ಮ ಅಂತರಾಳವಾ… ಕವಿಯು ತಮ್ಮ ಈ ಕವನದಲ್ಲಿ ಮಾನವ ಸಂಬಂಧಗಳ ನಡುವಿನ ಅಂತರವನ್ನು ವಿಶ್ಲೇಷಿಸಿದ್ದಾರೆ. ನಾವು ನಮ್ಮೊಂದಿಗಿರುವ ಜನರೊಂದಿರೆ ಎಷ್ಟೇ ಕಾಲ ಒಟ್ಟಿಗೆ ಕಳೆದರೂ, ಒಬ್ಬರಿಗೊಬ್ಬರು ಅಂತರಾತ್ಮವನ್ನು ತೆರೆದುಕೊಂಡಿರುವುದಿಲ್ಲ ಎಂದು ಕವಿ ಹೇಳುವಾಗ ಹೋಲಿಕೆಗಳನ್ನು ಹೀಗೆ ನೀಡುತ್ತಾರೆ. ಕಡಲ ಮೇಲೆ ಸಾಗುವ ದೋಣಿ ಎಷ್ಟೇ ದೂರ ಸಾಗಿದರೂ ಕಡಲ ಆಳವನ್ನು ತಿಳಿಯುವ ಗೊಡವೆಗೆ ಹೋಗುವುದಿಲ್ಲ. ಸಾಗರಕ್ಕೂ ದೋಣಿಗೂ ತೀರ ಅಂಟಿದ … Read more

ಫ್ಲಾಪೀ ಬಾಯ್ ಕಂಡ ಕೆಂಪುತೋಟ: ಸಚಿನ್ ಎಂ. ಆರ್.

ಈ ಫ್ಲಾಪೀ ಬಾಯ್‍ಗೆ ಕೆಲಸ ಇಲ್ಲ. ಇದ್ದರೂ ಅವ ಮಾಡೊಲ್ಲ. ಅಂತಹ ಈ ನಿಮ್ಮ ಹುಡುಗ ಹೀಗೆ ಒಂದು ದಿನ ಎಲ್ಲಾ ಬಿಟ್ಟು ಅವನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮ ಬೆಂಗಳೂರಿನ ಲಾಲ್‍ಬಾಗ್ ಗೆ ಹೊಂಟ. ಅಲ್ಲಿ ಅವನು ಏನೇನು ನೋಡಿದ, ಏನೇನು ಮಾಡಿದ ಅನ್ನುವ ಕುತೂಹಲವಿದ್ದರೆ ಮುಂದೆ ಒದಿ. ಬೆಳಿಗ್ಗೆ ಹತ್ತು ಮೂವತ್ತರ ಸಮಯ. ಒಳಗೆ ಹೋಗುವಾಗ ಒಬ್ಬನೇ ಏಕಾಂಗಿ ಫ್ಲಾಪೀಬಾಯ್, ಆದರೆ ಹೊರಬರುವಾಗ ಅವನ ತಲೆಯಲ್ಲಿತ್ತು ಏನೇನೋ ಆಲೋಚನೆಗಳು, ವಿಚಾರಗಳು ಅವೆಲ್ಲ ಏನು … Read more

ಓಡಿ ಹೋಗುವ ಮುನ್ನ ಓದಿ ಹೋಗಿ: ಪ್ರವೀಣ್ ಕುಲಕರ್ಣಿ

ಹಲೋ ಹಲೋ ಥೂ ಈ ಹುಡುಗರು ಸರಿಯಾದ ಟೈಮ್ ಗೆ ಬರೋದು ಇಲ್ಲ ಫೋನ್ ಎತ್ತೋದು ಇಲ್ಲ ಹಲೋ …. ಹಾಂ ಹ..ಲೊ ..ಇನ್ನೂ ಎದ್ದಿಲ್ವ ದಂಡ ಪಿಂಡ ನೀನು..? ಇಲ್ಲಿ ನನಗೆ ಒಂದೊಂದು ನಿಮಿಷ ಉಸಿರು ಕಟ್ತಾ ಇದೆ ಏಳೋ ಬೇಗ .. ಅಯ್ಯೋ ಎದ್ದೆ ತಡಿಯೇ… ಮಾತಾಡಿದ ನಿಮ್ಮ ಅಮ್ಮ ಅಪ್ಪನ ಹತ್ತಿರ ಏನಂತೆ ? ಮರ್ಯಾದೆಯಾಗಿ ಮದುವೆ ಮಾಡಿಕೊಟ್ಟು ದೊಡ್ಡವರು ಅನ್ನಿಸಿಕೊಳ್ತಾರೋ  ಇಲ್ವಾ ಫಿಲ್ಮಲ್ಲಿ ತೋರಿಸೋ ಹಾಗೆ ಇಲ್ಲ ಆಗಲ್ಲ ಅಂದ್ಕೊಂಡು ತಲೆ … Read more

ಜಾರಿ ಹೋಗುವ ಕಾನೂನು: ಸಂದೀಪ ಫಡ್ಕೆ

ಕಾನೂನಿನ ದೃಷ್ಟಿಯಿಂದ ಎಲ್ಲರೂ ಒಂದೇ. ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನಾತ್ಮಕ ವ್ಯವಸ್ಥೆಯಿರುವ ಭಾರತದಲ್ಲಿ ಇದು ಎಷ್ಟು ಸತ್ಯವೆನ್ನುವುದು ಮಾತ್ರ ಪ್ರಶ್ನಾರ್ಥಕ. ಉತ್ತಮ ಆಡಳಿತದ ಸೂತ್ರದಂತಿರಬೇಕಾದ ಕಾನೂನು ಯಾರದೋ ಕೈ ಗೊಂಬೆಯಾಗುತ್ತಿದೆ. ದೆಹಲಿ ಅತ್ಯಾಚಾರ ಪ್ರಕರಣದ ಸಂದರ್ಭ, ಕಾನೂನು ಸಮರಕ್ಕೆ ಒಂದಷ್ಟು ಜನ ಜಮಾಯಿಸಿದ್ದರೆ, ಅವರ ವಿರುದ್ಧ ಕಿಡಿಕಾರುವ ಉದ್ಧಟತನ ಸರ್ಕಾರ ತೋರಿತ್ತು. ಬಹುಕೋಟಿ ಹಗರಣಗಳ ಕಳಂಕ ಹೊತ್ತಿದ್ದರೂ, ನಮ್ಮನ್ನು ಆಳುವ ದೊರೆಗಳು ಅದನ್ನೆಲ್ಲಾ ಸಮರ್ಥಿಸಿಕೊಳ್ಳುತ್ತಾರೆ. ಹೀಗೆ ಕಾನೂನಿರುವುದೇ ಮುರಿಯುವುದಕ್ಕೆ ಎಂದಾದರೆ ಹೊಸ ಕಾನೂನು ಜಾರಿಯಾದರೂ ಊಟಕ್ಕಿಲ್ಲದ … Read more

ಚುಟುಕಗಳು: ಹೇಮಲತಾ ಪುಟ್ಟನರಸಯ್ಯ

ಉಗುರುಗಳದು ನೆನಪಿನದು , ಕತ್ತರಿಸಿದಷ್ಟು ವೇಗದಲಿ ಮೂಡುವುದು , ಸಿಬಿರಾಗಿ ನಿಂತು ಚುಚುತ್ತಲೇ ಇರುವುದು ******************** ನೀ ಕೊಟ್ಟ ನೋವಿನ ವಿಷವನ್ನು  ಗಟಗಟನೆ ಕುಡಿದೂ ಸಾಯದೆ ಉಳಿಯಲು ನಾನೇನು ನೀಲಕಂಠನಲ್ಲ ಒಳಗೆ ಸತ್ತಿರುವೆ ಆದರು ಇನ್ನು ಬದುಕೇ ಇರುವೆ *************** ಅವನ ಗಂಡಸುತನವ ದಿಕ್ಕರಿಸಿದ ನನ್ನ ಹೆಣ್ತನ ಕದವಿಕ್ಕಿ ಅಳುತ್ತಿತ್ತು ಒಳಗೆ ********** ಇಂಚಿಂಚು ಕೊಂದಿರುವೆ ಚುಚ್ಚಿ ಚುಚ್ಚಿ ಹುಡುಕಲು ನಿನ್ನ ಬಿಂಬವನ್ನು ಚೂರುಗಳಲ್ಲಿ ನಾನೇನು ಕನ್ನಡಿಯಲ್ಲ ********** ನವಿಲಿಗೆ ಕುಣಿವುದೇ ಧರ್ಮ ಕೆಂಬೂತದ ಸಹವಾಸಕ್ಕೆ ಕುಣಿವುದ … Read more

ಮನಸ್ಸು ಒಮ್ಮೊಮ್ಮೆ ಹೀಗೆಲ್ಲಾ ಯೋಚಿಸುವುದು೦ಟು…!: ರಾಮಚಂದ್ರ ಶೆಟ್ಟಿ

"ನನಗೆ ದೇವರು ಏನನ್ನೂ ಕೊಟ್ಟಿಲ್ಲ" ಇದು ಸಾಮಾನ್ಯವಾಗಿ ಎಲ್ಲಾ ಇರುವವರ ಒ೦ದು ದೂರು,ಒ೦ದು ಹೇಳಿಕೆ ದೇವರೆಡೆಗೆ .ನನ್ನನ್ನೂ ಸಹ ಸೇರಿಸಿ..ಸಾಮಾನ್ಯವಾಗಿ ನಾವು ನೋವಿನ ಪರಿಧಿಯೊಳಗೆ ಸಿಕ್ಕಿಕೊ೦ಡು ಒದ್ದಾಡುತ್ತಿರುವಾಗ ,ನಾವು ಆಸೆ ಪಟ್ಟಿದ್ದು ನಮಗೆ ದಕ್ಕದಿದ್ದಾಗ, ಅಥವಾ ನಮಗೆ ಹತ್ತಿರ ಎ೦ದೆನಿಸಿದವರೂ ನಮ್ಮಿ೦ದ ದೂರ ನಡೆದಾಗ ಇ೦ಥ ಅನೇಕ ಸ೦ಧರ್ಭದಲ್ಲಿ ಅದರ ಪರಿಣಾಮವನ್ನು ಸ್ವೀಕರಿಸಲಾಗದೆ ಮಾನಸಿಕ ಸ್ಥಿತಿಯಲ್ಲಿ ವ್ಯತ್ಯಯವಾಗಿ ಅಥವಾ ಗೊ೦ದಲವಾಗಿ ನಾವು ಪೂರ್ತಿಯಾಗಿ ಸೋತು ಬಿಟ್ಟೆವು ಅ೦ದುಕೊ೦ಡುಬಿಡುತ್ತೇವೆ..ಈ ಸಮಯದಲ್ಲಿನ ನೋವು, ನಿರಾಶೆ ಹತಾಶೆಯನ್ನು ಹತ್ತಿಕ್ಕಲಾಗದೆ ಗೊ೦ದಲದಲ್ಲಿದ್ದಾಗ ಈ … Read more

ನಾನು ನಿನ್ನ ಮಿಸ್ ಮಾಡಿಕೊಂಡರೂ ಪರವಾಗಿಲ್ಲ: ರೂಪ ರಾವ್

ನನ್ನ ಪ್ರೀತಿಯ ವಿಕಿಗೆ,   ನೆನ್ನೆ ನೀನು ಐ ಲವ್ ಯು ಸುಮಾ ಅಂದಾಗ ಎಷ್ಟು ಖುಷಿಯಾಯ್ತು ಗೊತ್ತಾ ಮಾತಾಡೋಕೆ ಆಗಲಿಲ್ಲ. ಒಂದು ವರ್ಷದಿಂದ ಪ್ರೀತ್ಸೋ ಪ್ರೀತ್ಸೋ ಅಂತ ನಿನ್ನ ಹಿಂದೆ ಬಿದ್ದಿದ್ದ ನನ್ನನ್ನ ಫ್ರೆಂಡ್ ಆಗೇ ನೋಡ್ತಿದ್ದ ನೀನು ಇದ್ದಕಿದ್ದ ಹಾಗೆ ಬೇಸಿಗೆಕಾಲದ ಮಳೆ ಥರ ಪ್ರೀತಿಸ್ತೀನಿ ಅಂದ್ರೆ……. ಒಂದು ಕ್ಷಣ ಎದೆ ಝಲ್ಲೆಂತು… ಪ್ರೀತಿಸಿದ ಹುಡುಗನ ಬಾಯಲ್ಲಿ ಇಂಥ ಮಾತು ಕೇಳುವಾಗಿನ ಸ್ವರ್ಗ ಸುಖವೇ ಬೇರೆ ಕಣೋ..ಅಂತಹ ಗಾಳೀಲಿ ತೇಲ್ತಾ ತೇಲ್ತಾ ನಗ್ತಾ  ಇದ್ದ … Read more

ತಾಯಿಯ ಮನಸ್ಸು: ಲಿಂಗರಾಜು

           ಅಂದು ಸೋಮವಾರ, ನಾನು ಒಬ್ಬ ಮುಖ್ಯ ವ್ಯಕ್ತಿಯೊಬ್ಬರನ್ನು ಬೇಟಿ ಮಾಡಲು ಬೆಂಗಳೂರಿನ ಗಾಂದಿನಗರದ ಕಡೆ ಹೋಗಬೇಕಾಗಿತ್ತು..ಬೆಳಿಗ್ಗೆ 10 ಗಂಟೆಯ ಸಮಯ, ಕೆಂಪೇಗೌಡ ಬಸ್ ನಿಲ್ಧಾಣದಲ್ಲಿ ಬಸ್ಸಿನಿಂದ ಇಳಿದು ನಿಂತೆ.  ಸುತ್ತಲೂ ನೋಡಿ ಒಮ್ಮೆ ಬೆರಗಾದೆ ಎತ್ತ ನೋಡಿದರೂ ಜನರ ಗಜಿಬಿಜಿ. ಒಂದು ರಸ್ತೆಯಿಂದ ಮತ್ತೂಂದು ರಸ್ತೆಗೂ ದಾಟಲು ಅಸಾದ್ಯವಾದ ವಾಹನಗಳ ಸಾಲು.          ಮನಸ್ಸಿನಲ್ಲಿ ಏನೋ ಗೊಂದಲ, ಒಂದು ಕಡೆ ಸುಮ್ಮನೆ ನಿಂತುಬಿಟ್ಟೆ. ತಕ್ಷಣ ಒಂದು … Read more

ಒಂದು ಲವ್ ಕಹಾನಿ!: ನವೀನ್ ಮಧುಗಿರಿ

ಸುಡು ಸುಡು ಬಿಸಿಲಿನ ಬೇಸಿಗೆಯ ಒಂದು ಮಧ್ಯಾಹ್ನ. ಸಿಮೆಂಟು ಕಾಡಿನ ಮಧ್ಯೆ ಅಪರೂಪಕ್ಕೆ ಅಲ್ಲಲ್ಲಿ ಕಾಣಿಸುವ ರಸ್ತೆ ಬದಿಯಲ್ಲಿರುವ  ಒಂದೆರಡು ಮರಗಳೂ ಸಹ ತಲೆಬಾಗುವುದನ್ನು ಮರೆತು ತಟಸ್ಥ ಧ್ಯಾನಕ್ಕೆ ಶರಣಾಗಿವೆ. ಸೂರ್ಯೋದಯದ ನಂತರ ಆ ಊರಿನಲ್ಲಿ ಒಮ್ಮೆಯೂ ಗಾಳಿ ಬೀಸಿಲ್ಲ. ಒಂದೆಲೆಯೂ ಅಲುಗಿಲ್ಲ. ಮರದ ರೆಂಬೆಗಳು  ಬಿಸಿಲ ಬೇಗೆಗೆ ಬೆಂದು, ಚಲನವಿಲ್ಲದೆ ನಿರ್ಜೀವ ವಸ್ತುವಿನಂತೆ (ಸತ್ತಂತೆ) ಮಲಗಿವೆ.  ಆ ಊರಿನ ಯಾವುದೋ ಒಂದು ಬೀದಿಯಲ್ಲಿನ ಒಂದು ಮೂಲೆಯಲ್ಲಿ ಆಗಷ್ಟೇ ಗೃಹ ಪ್ರವೆಶವೋ, ನಾಮಕರಣವೋ, ಅಥವಾ ಇನ್ನಾವುದೋ ಕಾರ್ಯಕ್ರಮವು ನಡೆದಿತ್ತು. ಬಂದ … Read more

ರೋಗ ಯಾವುದೆಂದು ಕೇಳುವ ವ್ಯವಧಾನವಿಲ್ಲದಿದ್ದರೂ…:ಶರತ್ ಎಚ್ ಕೆ

ಮೊನ್ನೆ ಬೆಳಿಗ್ಗೆ ಆಗಷ್ಟೇ ತಿಂಡಿ ತಿಂದು ಮನೆಯವರೆಲ್ಲ ಟೀವಿ ನೋಡುತ್ತ, ಪೇಪರ್ ಓದುತ್ತಾ ಕುಳಿತಿದ್ದೆವು. ಗೇಟ್ ತೆರೆದ ಸದ್ದಾಯಿತು. ಯಾರೆಂದು ನೋಡಿದರೆ ಚರಂಡಿ ಶುಚಿಗೊಳಿಸುವ ಮತ್ತು ಹೂದೋಟದ ಕಳೆ ಕೀಳುವ ಕೆಲಸ ಮಾಡುವ ಹುಡುಗ. ಅವನು ಈ ಹಿಂದೆ ಒಂದೆರಡು ಬಾರಿ ನಮ್ಮ ಮನೆ ಹೂದೋಟದ ಕಳೆ ಕಿತ್ತಿದ್ದ. ’ಕೆಲಸ ಇದ್ಯ’ ಅಂತ ಕೇಳ್ದ. ಬಾಗಿಲು ತೆರೆದ ಅಮ್ಮ ’ಇಲ್ಲ ಹೋಗಪ್ಪ’ ಅಂತೇಳಿ ಒಂದೇ ಮಾತಲ್ಲಿ ಅವನನ್ನು ಸಾಗಾಕಲು ಮುಂದಾದರು. ತಕ್ಷಣವೇ ಬಾಗಿಲು ಹಾಕಿದರು. ’ಅಮ್ಮ ತಿಂಡಿ … Read more

ಕನ್ನಡಿಗರ ಬೇಜವಾಬ್ದಾರಿಯಿಂದಲ್ಲವೆ ಕನ್ನಡನಾಡು ಪರಭಾಷಿಕರಿಂದ ತುಂಬುತ್ತಿರುವುದು….? : ನಿಶಾಂತ್ ಜಿ.ಕೆ

      ಮೊನ್ನೆ ಧಾರವಾಡದಿಂದ ಬೆಂಗಳೂರಿಗೆ ಹೋಗಿದ್ದೆ ಹಾಗೆ ಕಾರ್ಯ ನಿಮಿತ್ತ ಹೋದವನು ಅಲ್ಲೆ ರಾಜರಾಜೇಶ್ವರಿ ನಗರದಲ್ಲಿರುವ ಅಕ್ಕನ ಮನೆಗೆ ಭೇಟಿ ಇತ್ತೆ, ಹೋದ ಕೂಡ್ಲೆ ಎಲ್ಲಿಲ್ಲದ ಖುಷಿಯಿಂದ ಓಡಿ ಬಂದ ಪುಟ್ಟ ಪ್ರಾರ್ಥನ ಕೈ ಹಿಡಿದು ಒಳಗೆ ಎಳೆದೊಯ್ದು ತನ್ನ ಹೊಸ ಆಟಿಕೆಗಳನ್ನ ತೋರಿಸೋಕೆ ಶುರು ಮಾಡಿದ್ಲು, ಸ್ವಲ್ಪ ಸಮಯ ವಿಶ್ರಾಂತಿ ಬಳಿಕ ಮತ್ತೆ ಅವರು ಕಟ್ಟಿಸುತ್ತಿರುವ ಹೊಸ ಮನೆ ತೋರಿಸೋಕೆ ಇಲ್ಲೆ ವಾಕಿಂಗ್ ಹೋಗೋಣ ಬಾ ಮಾಮ ಅಂತ ಕರೆದುಕೊಂಡ್ ಹೋದ್ಲು. ಹೋದ ಸ್ವಲ್ಪ … Read more

ಅಮಲು ಮೋಜಿನ ಜೀವನದಲ್ಲಿ ಬದುಕಿಗೊಂದು ಸಂಕಲ್ಪ ಬೇಕು: ಪ್ರವೀಣ್ ದಾನಗೌಡ

    ಅರೆ ಉಪದೇಶಿಸುತ್ತಿರುವೆ ಎಂದುಕೊಂಡ್ರಾ, ಇಲ್ಲ ಉಪದೇಶವಲ್ಲಾ ಇದು ಒಂದು ಮಸ್ತಿ ಮಜದ ಘಟನೆ !  ಇದಕ್ಕೆ ನೀವು ಒಪ್ಪುತ್ತಿರೊ ಇಲ್ಲವೋ , ಈ ಜಗತ್ತು ಇಂದ್ರ ಲೋಕವನ್ನು ಮೀರಿದ ಸುಖ ಹಾಗೂ ಸೌಂದರ್ಯವನ್ನು ಹೊಂದಿದ ಜಗತ್ತು. ಇಲ್ಲಿ ರಂಬೆ ,ಊರ್ವಶಿ, ಮೇನಕೆಯರನ್ನು ಮೀರಿದ ರೂಪಶಿಯರು ಉಂಟು ಎಂದ ಮೇಲೆ ಈ ಜಗತ್ತು ಅಲ್ಲಿಗಿಂತಲು ಸೌಂದರ್ಯ ಪೂರಿತ ಜಗತ್ತೆ ಸರಿ, ಇನ್ನು ಅಮಲಿಗೆ ಮೋಜಿಗೆ ಸುಖಕ್ಕೆ ಇಂದ್ರನೇ ಇಲ್ಲಿಯ ಅಲ್ಕೋ ಹಾಲ್ ಬ್ರ್ಯಾಂಡ್ ಗಳನ್ನು ಆಮದು … Read more

ಆಕಾಲಿಕ ಮರಣನ್ನಪ್ಪಿದ ಸಾಹಿತಿ ಶ್ರೀಯುತ ರವಿಮುರ್ನಾಡುರವರ ಕುಟುಂಬಕ್ಕೆ ಅರ್ಥಿಕ ಸಹಾಯದ ಕೋರಿಕೆ

  ಆತ್ಮೀಯರೇ , ಕಳೆದ 27 ಮಾರ್ಚ್ 2013 ರಂದು ಹಠಾತ್ ನಿಧನರಾದ ಕವಿ, ಲೇಖಕ ರವಿ ಮೂರ್ನಾಡ್ ಅವರು ಭಾರತಕ್ಕೆ ಬಂದು ನೆಲೆಸುವ ಕನಸು ಕೊನೆಗೂ ನನಸಾಗಲೇ ಇಲ್ಲ. ಇದೇ ಜೂನ್ ನಂತರ ಭಾರತಕ್ಕೆ ಬಂದು ನೆಲೆಸುವ ಇರಾದೆಯನ್ನು ತನ್ನ ಹಲವು ಆತ್ಮೀಯರೊಂದಿಗೆ ಹಂಚಿಕೊಂಡಿದ್ದ ರವಿ ತಾಯ್ನಾಡ ನೆಲವ ಮತ್ತೆ ತಲುಪುವ ಋಣವನ್ನು ಕಾಣದೇ ದೂರದ ಕ್ಯಾಮರೂನಿನಲ್ಲಿ ಅಸ್ತಂಗತರಾಗಿದ್ದು ವಿಪರ್ಯಾಸ, ವಿಧಿಯಾಟ. ತೀವ್ರ ಬಡತನದಲ್ಲಿದ್ದ ಕುಟುಂಬಕ್ಕೆ ಅವರೊಬ್ಬರೇ ಅಧಾರಸ್ತಂಭವಾಗಿದ್ದರು . ಪುಟ್ಟ ಕುಟುಂಬವೊಂದನ್ನು ಸಾಕಿ ಸಲಹುತ್ತಿದ್ದ … Read more

ತುಮುಲಗಳು ತೀರಿ ಹೋದ ಹೊತ್ತು:ಎಚ್.ಕೆ.ಶರತ್

    ತುಮುಲಗಳು ತೀರಿ ಹೋದ ಹೊತ್ತು… ಭಾವುಕ ಕನ್ನಡಿ ಚೂರಾಯ್ತು. ಮನಸ್ಸು ಮೋಡ ಕವಿದ ಸಂಜೆಯಷ್ಟೇ ನೀರವ. ದೂರದಲ್ಲೆಲ್ಲೋ ಮಳೆ ಹನಿಗಳ ಕಲರವ. ಬರ ಬರಬಾರದಿತ್ತು ಭಾವುಕತೆಗೆ. ಸುಖಾಸುಮ್ಮನೆ ಅಳುವುದರಲ್ಲೂ ಒಂದು ಸುಖ. ಅಕಾರಣವಾಗಿ ನಗೆ ಚೆಲ್ಲಿದಾಗಲೂ ಇಣುಕುವ ದುಃಖ… ಬದುಕು ಕಳೆಗುಂದದಿರಲು ಕಣ್ಣಂಚಲ್ಲಿ ಒಂದಷ್ಟು ನೀರು ಶೇಖರಿಸಿಟ್ಟುಕೊಳ್ಳುವ ಜಾಣ್ಮೆ ಮೊದಲೇ ಮೈಗೂಡಬೇಕಿತ್ತು. ಎರಡು ಬದಿಯ ಮೌನ ಮಾತಾಡುವಷ್ಟು, ಒಂದು ಬದಿಯ ಕದನ ಪದ ಕಕ್ಕಲಾರದು. ಮೌನವಿರಬೇಕಿತ್ತು ಇಬ್ಬರ ನಡುವೆ… ನಮ್ಮಿಬ್ಬರಿಗೂ ಇಷ್ಟವಾದ ಮಾತನಾಡುವ ಸಲುವಾಗಿಯಾದರೂ! … Read more

ಪಂಜು ಚುಟುಕ ಸ್ಪರ್ಧೆ ಫಲಿತಾಂಶ

  ಪಂಜು ಚುಟುಕ ಸ್ಪರ್ಧೆಯ 2013 ಫಲಿತಾಂಶ….   ಮೊದಲ ಬಹುಮಾನ:  ಸುಷ್ಮಾ ಮೂಡುಬಿದರೆ ಎರಡನೇ ಬಹುಮಾನ:  ಮಂಜುನಾಥ್ ಪಿ. ಮೂರನೇ ಬಹುಮಾನ:  ಕೃಷ್ಣಮೂರ್ತಿ ಎನ್.   ಸಮಾಧಾನಕರ ಬಹುಮಾನಗಳು: ಶರತ್ ಚಕ್ರವರ್ತಿ, ಈಶ್ವರ ಕಿರಣ ಭಟ್, ಮಾಲಿನಿ ವಿ. ಭಟ್ಟ, ರಾಘವೇಂದ್ರ ಭಟ್ಟ, ಡಂಕಿನ್ ಝಳಕಿ..   ಒಟ್ಟು 42 ಜನ ಕವಿಗಳು ನಾಡಿನ ಮೂಲೆಮೂಲೆಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.    ಖ್ಯಾತ ಕವಿಗಳಾದ ಪ್ರೊ. ಎಲ್.ಎನ್. ಮುಕುಂದರಾಜ್ ಈ ಚುಟುಕ ಸ್ಪರ್ಧೆಯ ತೀರ್ಪುಗಾರರಾಗಿದ್ದರು.   ಬಹುಮಾನಿತ … Read more

ಪುಸ್ತಕ ಬಿಡುಗಡೆ ಸಮಾರಂಭ

  ಪುಸ್ತಕ ಬಿಡುಗಡೆ 'ಪಂಜು ಅಂತರ್ಜಾಲ ಪತ್ರಿಕೆ' ಚುಟುಕ ಸ್ಪರ್ಧೆಯ ಬಹುಮಾನ ವಿತರಣೆ ಈಶಾನ್ಯ ಭಾರತೀಯ ನೃತ್ಯಗಳ ಕಿರುಚಿತ್ರ ಪ್ರದರ್ಶನ     ಡಾ. ಎಸ್.ಎಂ.ನಟರಾಜು ಅವರ 'ವಂಡರ್ ಲ್ಯಾಂಡಿನ ಪುಟ್ಟ ರಾಜಕುಮಾರನೂ… ಮತ್ತು ಖುಷಿನಗರಿಯ ಆತನ ನಲ್ಮೆಯ ಗೆಳತಿಯೂ…' ಹಾಗೂ 'ಎಲೆಮರೆಕಾಯಿ' ಕೃತಿಗಳ ಬಿಡುಗಡೆ ಗೋಪಾಲ ವಾಜಪೇಯಿ ಅವರಿಂದ 'ಪಂಜು' ಅಂತರ್ಜಾಲ ತಾಣ ಬಿಡುಗಡೆ: ಡಾ. ಬಾನಂದೂರು ಕೆಂಪಯ್ಯ, ಗಾಯಕರು, ಅಧ್ಯಕ್ಷರು, ಜಾನಪದ ಅಕಾಡೆಮಿ ಚುಟುಕ ಸ್ಪರ್ಧೆಯ ಬಹುಮಾನ ವಿತರಣೆ:  ಜರಗನಹಳ್ಳಿ ಶಿವಶಂಕರ್, ಕವಿಗಳು ಅಧ್ಯಕ್ಷತೆ: … Read more

ಚೇತನ: ದಿವ್ಯ ಆಂಜನಪ್ಪ

"ಜಗತ್ಚೇತನದೆದುರು, ನಾನು ನನ್ನದು ಎಂಬ ಅಹಂ ಭಾವಕ್ಕಿಂತ, ನೀನು ನಿನ್ನದು ನಿನ್ನದೇ ಎಂಬ ಸಮರ್ಪಣಾ ಮನೋಭಾವ ಮಿಗಿಲು. ಸಕಲ ಜೀವ-ಸಂಕುಲಗಳನ್ನು ನಿಯಮಬದ್ದವಾಗಿ, ನಿಖರವಾಗಿ, ಆಯಾಯ ಪಾತ್ರಗಳನ್ನು ಸಮರ್ಪಕವಾಗಿ ನಿರ್ವವಹಿಸುವಂತೆ ಮಾಡುವ ವ್ಯವಸ್ಥಾಪಕ-ಕಾಣದ ಕೈಯೊಂದು ಇರಲೇಬೇಕು" ಎಂದು ಎಷ್ಟೋ ಸಂದರ್ಭಗಳಲ್ಲಿ ನಮ್ಮೆಲ್ಲರ ಮನಸ್ಸಿಗೆ ಅನ್ನಿಸಿರುತ್ತದೆ. ಆ ಕಾಣದ ಕೈ ಕೆಲವೊಮ್ಮೆ ವರಕೊಡುವ ಕೈಯಾಗಿಯೂ, ಬುದ್ಧಿ ಕಲಿಸುವ ಕೈಯಾಗಿಯೂ, ದಾರಿ ತೋರುವ ಕೈಯಾಗಿಯೂ ನಮ್ಮ ಅನುಭವಕ್ಕೆ ಬಂದಿರುವುದು. ಜೀವಸಂಕುಲದಲ್ಲಿನ ಬುದ್ಧಿ ಜೀವಿ ಮಾನವಕುಲವೊಂದು ತನ್ನ ಉಪಕುಲಗಳು-ಧರ್ಮಗಳ ನೆಲೆಗಳಲ್ಲಿ ಆ ಕೈಯನ್ನು 'ದೇವ'ನೆಂದು:ಕೃಷ್ಣ, ಏಸು, ಬುದ್ಧ, ಜಿನ, ಅಲ್ಲಾ ಎಂದು ಅವರವರಂತೆ ಕರೆದಿರುವುದುಂಟು. … Read more

ಆತ್ಮ ಮತ್ತು ಮನಸ್ಸುಗಳಿಗೆ ಆನಂದ ತರುವದೆ, ಆಧ್ಯಾತ್ಮ: ಕೆ.ಎಂ. ವಿಶ್ವನಾಥ

ಈ ಭೂಮಿಯಲ್ಲಿ ಯಾವುದೂ ಶಾಶ್ವತವಲ್ಲ, ಎಲ್ಲವೂ ಒಂದು ದಿನ ನಶಿಸಿ ಹೋಗುತ್ತದೆ. ಅದರಲ್ಲಿ ಉಳಿವುದೊಂದೇ ಜೀವಾತ್ಮ. ಅದನ್ನು ಸದಾ ಸಂತೋಷವಾಗಿಡುವ ಏಕೈಕ ಅಸ್ತ್ರವೆಂದರೆ ಅದೇ ಆಧ್ಯಾತ್ಮ . ಸಂಸಾರದ ಈ ಸಾಗರದಲ್ಲಿ ತಾಪತ್ರಯಗಳು, ವೇದನೆ  ನೋವು, ಜಿಗುಪ್ಸೆ, ಹತಾಶೆ, ಸಂತೋಷ, ಇವೆಲ್ಲ ತಪ್ಪಿದಲ್ಲ, ಎಲ್ಲವೂ ನಮ್ಮನ್ನು ತಿಂದು ಹಾಕುವುದು, ಸದಾ ನಮ್ಮ ಮನಸ್ಸು ಮತ್ತು ಆತ್ಮಗಳಿಗೆ ಚಿಂತನೆಗೆ ಹಚ್ಚುವುದು. ನಿಂತಲ್ಲಿ ನಿಲ್ಲದೆ, ಕೂತಲ್ಲಿ ಕೂಡದೆ ಹೋಗುವುದು, ಅತ್ತಿಂದ ಇತ್ತ ಮಂಗದಂತೆ ಜಿಗಿದಾಡುವದು, ನಾವು ವಿನಾಕಾರಣ ಕೋಪಗೊಳ್ಳುವುದು, ಮತ್ತೊಬ್ಬರ … Read more

ಪಂಜು ಚುಟುಕ ಸ್ಪರ್ಧೆ

ಪಂಜು ಅಂತರ್ಜಾಲ ವಾರಪತ್ರಿಕೆ ಮತ್ತು ಪಂಜು ಪ್ರಕಾಶನದ ವತಿಯಿಂದ ಚುಟುಕ ಸ್ಪರ್ಧೆಗೆ ನಿಮ್ಮ ಚುಟುಕಗಳನ್ನು ಆಹ್ವಾನಿಸಲಾಗಿದೆ. ಒಬ್ಬರು ಕನಿಷ್ಠ 25 ಚುಟುಕಗಳನ್ನು ಕಳುಹಿಸಬೇಕು (ಗರಿಷ್ಠ ಮಿತಿ 30). ಚುಟುಕಗಳು ಸ್ವಂತ ರಚನೆಗಳಾಗಿರಬೇಕು. ಚುಟುಕಗಳನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com   ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಚುಟುಕ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮಿಂಚಂಚೆ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ ಹಾಗು ಫೇಸ್ ಬುಕ್ ಲಿಂಕ್ ಕಳುಹಿಸಿ.. ಚುಟುಕಗಳು ತಲುಪಬೇಕಾದ ಕೊನೆಯ … Read more

ಸೋಮವಾರದ ಸಂಚಿಕೆಯಲ್ಲಿ ನಿರೀಕ್ಷಿಸಿ…

1. ಚುಟುಕ ನಾಲ್ವರ ಹನಿಗಳು: ಹುಸೇನ್ ಎನ್, ಶೀತಲ್, ಉಪೇಂದ್ರ ಪ್ರಭು, ಹರಿಪ್ರಸಾದ್ ಎ. 2. ಸಿನಿಲೋಕ ಕನ್ನಡದಲ್ಲಿನ ‘ತುಂಟ’ ಚಿತ್ರಗೀತೆಗಳು: ವಾಸುಕಿ ರಾಘವನ್ 3. ಕಾವ್ಯಧಾರೆ  ಗೌತಮನ ಘಾಟುವಾಸನೆ: ಪ್ರವರ ಕೊಟ್ಟೂರು ಕಣ್ಮುಚ್ಚಿ ತವಕಿಸುವ ಜೀವೋನ್ಮಾದ: ರಘುನಂದನ ಹೆಗಡೆ 4. ಹಾಸ್ಯ  ಕೊಂಕು….ಕೊಂಚ ಕಚಗುಳಿಗೆ!!:ಸಂತು 5. ಪ್ರೀತಿ ಪ್ರೇಮ  ಏಕಾಂಗಿ ಮನಸು ಮತ್ತು ಅವಳ ಕನಸು: ರವಿಕಿರಣ್ 6. ಕಥಾಲೋಕ  ತಂತ್ರ: ರಾಘವೇಂದ್ರ ತೆಕ್ಕಾರ್ 7. ಕಥಾಲೋಕ  ವಿಪರ್ಯಾಸ: ಬದರಿನಾಥ ಪಲವಳ್ಳಿ 8. ಸರಣಿ ಬರಹ  … Read more

ನಮ್ಮ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ…..

1. ಮೊದಲು ಓದುಗನಾಗು:       ಕಾರ್ನಾಡರ “ಹಯವದನ”- ರಾಜೇಂದ್ರ ಬಿ. ಶೆಟ್ಟಿ 2. ಪಂಜು ವಿಶೇಷ:       ಓ ನಾಗರಾಜ ಅಪ್ಪಣೆಯೇ…-ಹರಿ ಪ್ರಸಾದ್ 3. ಕಥಾಲೋಕ:      ಅಂತರಂಗದ ಗಂಗೆ – ಪಾರ್ಥಸಾರಥಿ ನರಸಿಂಗರಾವ್ 4. ಕಾವ್ಯಧಾರೆ:      ಮೂರು ಕಾವ್ಯಗಳು -ಅರ್ಪಿತಾ ರಾವ್, ಕಾಂತರಾಜು ಕೆ ಮತ್ತು ರಾಜಹಂಸ 5. ಸಿನಿ-ಲೋಕ:       ಕಾಂಟೆಕ್ಸ್ಟ್- ವಾಸುಕಿ ರಾಘವನ್ 6. ಪಂಜು-ವಿಶೇಷ:     ಮಾತೃ ಭಾಷೆಗೆ ಸಿಕ್ಕ ಮನ್ನಣೆ … Read more