“ಸಿಎಮ್ಮೆನ್ ಎಂಬ ರಂಗ ರೂವಾರಿ”: ಎಂ.ಜವರಾಜ್
ಕೃಷ್ಣಮೂರ್ತಿ ಹನೂರರು “ಚಾಮರಾಜನಗರ ಸೆರಗಿನ ಇಲ್ಲವೇ, ತಿರುಮಕೂಡಲು ನರಸೀಪುರ ಸುತ್ತಮುತ್ತಲಿನ ಬದುಕು ಬವಣೆ ಹೇಳುವ..” ಎಂದು ನನ್ನ ಮೊದಲ ಕಥಾ ಸಂಕಲನದ ಮುನ್ನುಡಿಯಲ್ಲಿ ಬರೆಯುತ್ತಾರೆ. ಇದು ಮೈಸೂರು ಚಾಮರಾಜನಗರ ಜಿಲ್ಲೆಗಳ ಅವಿನಾಭಾವ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಮನೋಸ್ಥಿತಿಯ ದ್ಯೂತಕದ ಬೆಸುಗೆಯಾಗಿದೆ. ಮೈಸೂರು ಜೆಲ್ಲೆಯ ಭಾಗವಾಗಿದ್ದ ಚಾಮರಾಜನಗರ, ರಾಜ್ಯದ ದಕ್ಷಿಣ ಗಡಿ ನೆಲವಾಗಿ ಆಳುವವರಿಂದ ನಿರ್ಲಕ್ಚ್ಯಕ್ಕೆ ಗುರಿಯಾಗಿ ಅಭಿವೃದ್ಧಿಹೀನವಾಗಿ ಅನಾಥವಾದಂತೆ ಕಾಣುತ್ತಿತ್ತು. ಇದನ್ನರಿತ ಸ್ಥಳೀಯ ಜನ ಸಮೂಹದಲ್ಲಿ ಪ್ರಭುತ್ವದ ವಿರುದ್ಧ ಅಸಹನೆಯ ಕಾರಣವಾಗಿ ಅದೊಂದು ಸಮಯ ಓಟ್ ಬ್ಯಾಂಕ್ … Read more