“ಸಿಎಮ್ಮೆನ್ ಎಂಬ ರಂಗ ರೂವಾರಿ”: ಎಂ.ಜವರಾಜ್

ಕೃಷ್ಣಮೂರ್ತಿ ಹನೂರರು “ಚಾಮರಾಜನಗರ ಸೆರಗಿನ ಇಲ್ಲವೇ, ತಿರುಮಕೂಡಲು ನರಸೀಪುರ ಸುತ್ತಮುತ್ತಲಿನ ಬದುಕು ಬವಣೆ ಹೇಳುವ..” ಎಂದು ನನ್ನ ಮೊದಲ ಕಥಾ ಸಂಕಲನದ ಮುನ್ನುಡಿಯಲ್ಲಿ ಬರೆಯುತ್ತಾರೆ. ಇದು ಮೈಸೂರು ಚಾಮರಾಜನಗರ ಜಿಲ್ಲೆಗಳ ಅವಿನಾಭಾವ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಮನೋಸ್ಥಿತಿಯ ದ್ಯೂತಕದ ಬೆಸುಗೆಯಾಗಿದೆ. ಮೈಸೂರು ಜೆಲ್ಲೆಯ ಭಾಗವಾಗಿದ್ದ ಚಾಮರಾಜನಗರ, ರಾಜ್ಯದ ದಕ್ಷಿಣ ಗಡಿ ನೆಲವಾಗಿ ಆಳುವವರಿಂದ ನಿರ್ಲಕ್ಚ್ಯಕ್ಕೆ ಗುರಿಯಾಗಿ ಅಭಿವೃದ್ಧಿಹೀನವಾಗಿ ಅನಾಥವಾದಂತೆ ಕಾಣುತ್ತಿತ್ತು. ಇದನ್ನರಿತ ಸ್ಥಳೀಯ ಜನ ಸಮೂಹದಲ್ಲಿ ಪ್ರಭುತ್ವದ ವಿರುದ್ಧ ಅಸಹನೆಯ ಕಾರಣವಾಗಿ ಅದೊಂದು ಸಮಯ ಓಟ್ ಬ್ಯಾಂಕ್ … Read more

ವಿಶ್ವಪ್ರಗತಿ?????: ನಾಗಸಿಂಹ ಜಿ ರಾವ್

ಹಾಸನದ ಮುನಿಸಿಪಲ್ ಹೈಸ್ಕೂಲ್, ಒಂಬತ್ತನೇ ತರಗತಿ ಮಕ್ಕಳು ಗಲಾಟೆ ಮಾಡ್ತಾ ಕೂತಿದ್ರು, ಸಮಾಜ ವಿಜ್ಞಾನದ ಶಿಕ್ಷಕ ಮರಿಯಪ್ಪ ತರಗತಿ ಪ್ರವೇಶ ಮಾಡಿದ ತಕ್ಷಣ ತರಗತಿಯಲ್ಲಿ ನಿಶ್ಯಬ್ದ. ಎಲ್ಲಾ ವಿದ್ಯಾರ್ಥಿಗಳನ್ನು ದಿಟ್ಟಿಸಿ ನೋಡಿ ಹೇಳಿದ್ರು “ಶಿಕ್ಷಣ ಇಲಾಖೆ ಹಾಗೂ ಯುನಿಸಿಫ್ ಒಟ್ಟಿಗೆ ಬೆಂಗಳೂರಲ್ಲಿ ಒಂದು ಸಮಾಲೋಚನೆ ಮಾಡ್ತಿದಾರೆ, ವಿಶ್ವಪ್ರಗತಿ ಮತ್ತು ವಿಶ್ವಶಾಂತಿಯ ಬಗ್ಗೆ ವಸ್ತುಪ್ರದರ್ಶನ, ರಾಜ್ಯದ ಯಾವುದೇ ಶಾಲೆಯಿಂದ ಮಕ್ಕಳು ಭಾಗವಹಿಸಬಹುದು, ವಿಶ್ವಪ್ರಗತಿ ಅಥವಾ ವಿಶ್ವಶಾಂತಿಯ ಬಗ್ಗೆ ಒಂದು ಮಾಡಲ್ ಸಿದ್ಧ ಮಾಡಿ ಪ್ರದರ್ಶನ ಮಾಡಬೇಕು. ಉತ್ತಮವಾದ ಮಾಡಲ್ಗೆ … Read more

ಭ್ರಮಾ – ಸತ್ಯ – ಭಾಮಾ !: ಡಾ. ಹೆಚ್ ಎನ್ ಮಂಜುರಾಜ್

ನಾನು ಸಾಮಾನ್ಯವಾಗಿ ಪ್ರಶ್ನೆಗಳನ್ನು ಕೇಳುತ್ತಾ ಕೂರುವುದಿಲ್ಲ; ಆದರೆ ನನ್ನನ್ನೇ ಕೇಳಿಕೊಳ್ಳುತ್ತಿರುತ್ತೇನೆ. ಸಾಧ್ಯವಾದಷ್ಟೂ ಪ್ರಶ್ನೆಗಳೇ ಹುಟ್ಟದಂತೆ ನೋಡಿಕೊಳ್ಳುತ್ತಿರುತ್ತೇನೆ! ಇದೊಂದು ಸುಖವಾದ ಮತ್ತು ನಿರಾಯಾಸ ಸ್ಥಿತಿ. ಇದಕ್ಕೆ ವಿಶೇಷವಾದ ಜ್ಞಾನವೇನೂ ಬೇಡ; ಎಂಥದೋ ಅಲೌಕಿಕವೋ; ಅಧ್ಯಾತ್ಮಸಿದ್ಧಿಯೋ ಎಂಬಂಥ ಹೆಸರಿಡುವುದೂ ಬೇಡ. ಲೌಕಿಕದಲ್ಲೇ ಇದ್ದು, ಮುಳುಗಿ, ಎದ್ದು ಬದುಕು ನಡೆಸಿದರೂ ಸುಖ ಮತ್ತು ನೆಮ್ಮದಿಯನ್ನು ಹೊಂದಬಹುದು. ಅದಕ್ಕಾಗಿ ಪೂಜೆ, ಪುರಸ್ಕಾರ, ದೇವರು, ಧರ್ಮ, ಅಧ್ಯಾತ್ಮ ಅಂತ ಲೋಕೋತ್ತರಕೆ ಕೈ ಚಾಚುವ ಅಗತ್ಯವಿಲ್ಲ. ಕೈ ಚಾಚಿದರೆ ತಪ್ಪೇನೂ ಇಲ್ಲ. ಅವರವರ ಸ್ವಾತಂತ್ರ್ಯ. ನಿರ್ಬಂಧಗಳಿಗೆ … Read more

“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 4)”: ಎಂ.ಜವರಾಜ್

-೪- ಅವತ್ತು ಸ್ಕೂಲಿಗೆ ರಜೆ ಅಂತ ಎಲ್ಲ ಮಾತಾಡುತ್ತಿದ್ದರು. ಸ್ಕೂಲಿಗೆ ಅಂತಲ್ಲ ಎಲ್ಲರಿಗೂ ಗೌರ್ಮೆಂಟ್ ರಜೆ ಅಂತ ಸಿಕ್ಕಸಿಕ್ಕವರು ಹೇಳ್ತಾ ಇದ್ದರೆ ನಮಗೆ ಹಿಗ್ಗೊ ಹಿಗ್ಗು. ಅದನ್ನು ಕೇಳ್ತಾ ಕೇಳ್ತಾ ಪಂಚಾಯ್ತಿ ಆಫೀಸ್ ಮುಂದಿದ್ದ ಮರಯ್ಯನ ಟೀ ಅಂಗಡಿ ಹತ್ತಿರ ಬಂದಾಗ ಆ ಟೀ ಅಂಗಡಿ ಮುಂದೆ ಒಂದಷ್ಟು ಜನ ಹೆಚ್ಚಾಗೇ ನಿಂತು ಟೀ ಕುಡಿತಾ ಬೀಡಿ ಸೇದುತ್ತಾ ಪೇಪರ್ ಓದುತ್ತಾ ರಾಜ್ ಕುಮಾರ್ ಬಗ್ಗೆ ಜೋರಾಗೇ ಮಾತಾಡ್ತ ಇದ್ದರು. ಎಲ್ಲರು ರಾಜ್ ಕುಮಾರ್ ಬಗ್ಗೆ ಮಾತಾಡುತ್ತಿದ್ದರೆ … Read more

ವಿಶ್ವಪ್ರಸಿದ್ಧ ಪಶುವೈದ್ಯರು: ಪ್ರೊ. ಎಂ. ನಾರಾಯಣಸ್ವಾಮಿ

ಪ್ರತಿ ವರ್ಷದ ಏಪ್ರಿಲ್ ತಿಂಗಳ ಕೊನೆಯ ಶನಿವಾರದಂದು ವಿಶ್ವ ಪಶುವೈದ್ಯಕೀಯ ದಿನವನ್ನು ಆಚರಿಸಲಾಗುತ್ತಿದೆ. ಕಳೆದ 25 ವರ್ಷಗಳಿಂದ ಅಂತಹ ಆಚರಣೆ ನಡೆಯುತ್ತಿದೆ. ಆದು ಆರಂಭವಾದದ್ದು 2000ನೇ ಇಸವಿಯಲ್ಲಿ. ಅಂತಹ ದಿನದ ಆಚರಣೆಗೊಂದು ಧ್ಯೇಯವಾಕ್ಯವನ್ನು ವಿಶ್ವ ಪಶುವೈದ್ಯಕೀಯ ಸಂಘವು ಕೊಡುತ್ತದೆ. ಅದರಂತೆ, 2024 ರ ವಿಶ್ವ ಪಶುವೈದ್ಯಕೀಯ ದಿನದ ಧ್ಯೇಯವಾಕ್ಯವು ‘ಪಶುವೈದ್ಯರು ಅತ್ಯಗತ್ಯ ಆರೋಗ್ಯ ಕಾರ್ಯಕರ್ತರಾಗಿದ್ದಾರೆ’ ಎಂಬುದಾಗಿದೆ. ಪಶುವೈದ್ಯರು ಪ್ರಾಣಿಗಳ ಆರೋಗ್ಯವನ್ನು ಕಾಪಾಡುತ್ತಿದ್ದಾರೆ. ಅದಷ್ಟೇ ಅಲ್ಲದೆ ಮಾನವನ ಆರೋಗ್ಯವನ್ನೂ ಕಾಪಾಡುತ್ತಿದ್ದಾರೆ. ಪ್ರಾಣಿಗಳ ರೋಗಗಳನ್ನು ಹತೋಟಿಯಲ್ಲಿಟ್ಟಿದ್ದರಿಂದಾಗಿ ಮಾನವನ ದೈಹಿಕ, ಮಾನಸಿಕ … Read more

ಮನದ ಮೌನಕ್ಕೆ ಕೊನೆಯ ಪತ್ರ: ಪೂಜಾ ಗುಜರನ್ ಮಂಗಳೂರು..

ಮನಸ್ಸು ಮೌನವಾಗಿದೆ ಅಂದ್ರೆ ಯಾವುದು ಬೇಡ ಅಂತಲ್ಲ.‌ಯಾವುದನ್ನು ತಲೆಗೆ ಹಚ್ಚಿಕೊಳ್ಳದೆ ನಿರಾಳವಾಗಿರು ಅಂತ ಅರ್ಥ. ಒಂದೊಂದು ಸಲ ಇಂತಹ ಮೌನಗಳು ಬದುಕಿಗೆ ಅನಿವಾರ್ಯ.. ಎಲ್ಲ ನೋವುಗಳೂ ಖುಷಿಗಳು ಮರೆಯಾದಾಗ ಅಲ್ಲೊಂದು ನಿಶ್ಯಬ್ದವಾದ ಮೌನ ಆವರಿಸಿ ಬಿಡುತ್ತದೆ. ಅದನ್ನು ಅನುಭವಿಸಿ ನೋಡುವಾಗ ಮನಸಿಗೆ ಅನಿಸುವುದು ಇಷ್ಟೆ.ಇಲ್ಲಿ ಎಲ್ಲವೂ ಶೂನ್ಯ. ಯಾವುದು ಶಾಶ್ವತವಲ್ಲ‌. ನಾವು ಬಯಸಿದಂತೆ ಎಲ್ಲವೂ ಆಗುತ್ತದೆ ಅಂದುಕೊಳ್ಳುವುದು ಮೂರ್ಖತನ. ಬದುಕೆಂಬ ಕತೆಯನ್ನು ಬರೆಯುವ ಬರಹಗಾರರು ನಾವೇ ಆದರೂ ಅದರೊಳಗಿರುವ ಪಾತ್ರಗಳು ಮಾತ್ರ ಹಲವಾರು. ಈ ಬದುಕಲ್ಲಿ ನಮಗಾಗಿ … Read more

ಇಂದಿನ ಸಮಾಜದಲ್ಲಿ ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ….: ಹರೀಶ್ ಕುಮಾರ್ ಎಸ್

ಪ್ರಸ್ತುತ ಸಮಾಜಕ್ಕೆ ಅವರ ಹೊನ್ನುಡಿಯನ್ನು ಅರ್ಥೈಸುವ ಅವಶ್ಯಕತೆ ಮತ್ತು ಅನಿವಾರ್ಯತೆ ಬಹಳ ಇದೆ. ಸದಾ ಆತ್ಮವಿಶ್ವಾಸವಿಲ್ಲದ ಅಲೆದಾಡುವ ಮನಸಿಗೆ ಸಾಂತ್ವನ ಇದೆ. ಸಾಧಿಸಲು ಮುಂದಾಗುವವರಿಗೆ ಸ್ಫೂರ್ತಿ ಸೆಲೆಯಿದೆ. “ಜನರು ಮನಸಿಗೆ ಬಂದ ಹಾಗೆ ಅಂದುಕೊಳ್ಳಲಿ. ನಿಮ್ಮ ನಿರ್ಧಾರದಿಂದ ನೀವು ಕದಲದಿರಿ. ಆಗ ಮಾತ್ರ ಜಗತ್ತು ನಿಮ್ಮನ್ನು ಗೌರವಿಸುವುದು. ಸಮಾಜವು ಈ ಮನುಷ್ಯನನ್ನು ನಂಬು, ಆ ಮನುಷ್ಯನನ್ನು ನಂಬು ಎಂದು ಹೇಳುತ್ತದೆ. ಆದರೆ ನಿಮ್ಮಲ್ಲಿ ನಿಮಗೆ ಶ್ರದ್ಧೆಯಿರಲಿ. ಸಕಲ ಶಕ್ತಿಯೂ ನಿಮ್ಮಲ್ಲಿ ಅಡಗಿದೆ. ಇದನ್ನರಿತು ನಿಮ್ಮ ವ್ಯಕ್ತಿತ್ವದಲ್ಲಿ ಆ … Read more

ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಶ್ರೀರಾಮಪಟ್ಟಾಭಿಷೇಕಂ – ಒಂದು ತೌಲನಿಕ ವಿವೇಚನೆ: ಸಂತೋಷ್ ಟಿ.

“ರಾಮಾಯಣ ಜಗತ್ತಿನ ಮಹಾಕಾವ್ಯಗಳಲ್ಲಿ ಒಂದು. ಭಾರತಕ್ಕಂತೂ ಅದು ಆದಿ ಕಾವ್ಯ. ಅದನ್ನು ಕಾವ್ಯವೆಂದು ಆಸ್ವಾದಿಸುವ, ಪುರಾಣವೆಂದು ಆರಾಧಿಸುವ ಜನ ಕೋಟಿ ಕೋಟಿ. ಸಾಮಾನ್ಯ ಭಾರತೀಯನಿಗೆ ರಾಮಾಯಣವೊಂದು ಐತಿಹಾಸಿಕ ಘಟನೆ. ಅದರ ಬಗೆಗೆ ಅವನಲ್ಲಿ ಯಾವ ಪ್ರಶ್ನೆಗೂ, ಶಂಕೆಗೂ ಆಸ್ಪದವಿಲ್ಲ. ಸಂಸ್ಕೃತದಲ್ಲಿಯೂ ನಮ್ಮ ದೇಶಭಾಷೆಗಳಲ್ಲಿಯೂ ರಾಮಾಯಣ ಸಾವಿರಾರು ಕೃತಿಗಳಿಗೆ ಆಕರವಾಗಿದೆ. ಸಾವಿರಾರು ಕವಿಗಳಿಗೆ ಸ್ಫೂರ್ತಿಯನ್ನೊದಗಿಸಿದೆ. ಅದರ ಪಾತ್ರಗಳು ಪ್ರಸಂಗಗಳು ಆದರ್ಶಗಳು ನಾನಾ ವಿಧದ ಕಲಾಕೃತಿಗಳಾಗಿ ರೂಪ ತಾಳಿವೆ. ರಾಮಾಯಣ ಎಷ್ಟರ ಮಟ್ಟಿಗೆ ಜನಪ್ರಿಯವಾಯಿತೆಂದರೆ, ಎಷ್ಟು ಕೃತಿಗಳು ಅದನ್ನು ಆಧರಿಸಿ … Read more

ಹಲ್ಮಿಡಿ ಶಾಸನ ಕ್ರಿ.ಶ.ಸುಮಾರು ೪೫೦ -ಒಂದು ಟಿಪ್ಪಣಿ: ಸಂತೋಷ್ ಟಿ

ಜಯತಿ ಶ್ರೀ ಪರಿಷ್ವಙ್ಗ ಶಾರ್ಙ್ಗ (ಮಾನ್ಯತಿ) ರಚ್ಯುತಃದಾನವಾಕ್ಷೋರ್ಯುಗಾನ್ತಾಗ್ನಿಃ (ಶಿಷ್ಟಾನಾನ್ತು) ಸುದರ್ಶನಃನಮಃ ಶ್ರೀಮತ್ಕದಂಬನ್ತ್ಯಾಗಸಂಪನ್ನನ್ಕಲಭೋರ(ನಾ)ಅರಿಕಕುಸ್ಥಭಟ್ಟೋರನಾಳೆ ನರಿದಾವಿ(ಳೆ) ನಾಡುಳ್ ಮೃಗೇಶನಾಗೇನ್ದ್ರಾಭೀಳರ್ಭ್ಭಟಹರಪ್ಪೋರ್ ಶ್ರೀಮೃಗೇಶನಾಗಾಹ್ವಯರಿರ್ವ್ವರಾ ಬಟರಿಕುಲಾಮಲವ್ಯೋಮತಾರಾಧಿನಾಥನ್ನಳಪಗಣಪಶುಪತಿಯಾ ದಕ್ಷಿಣಾದಿ ಬಹು ಶತವಹನಾಹವದು(ಳ್ ) ಪಶುಪ್ರದಾನ ಶೌರ್ಯ್ಯೋದ್ಯಮಭರಿತೊ(ನ್ದಾನ ) ಪಶುಪತಿಯೆನ್ದು ಪೊಗಳೆಪ್ಪೊಟಣ ಪಶುಪತಿನಾಮಧೇಯನಾ ಸರಕ್ಕೆಲ್ಲ ಭಟರಿಯಾ ಪ್ರೇಮಾಲಯಸುತನ್ಗೆ ಸೇನ್ದ್ರಕಬಣೋಭಯ ದೇಶದಾವೀರಾಪುರುಷ ಸಮಕ್ಷದೆ ಕೇಕೆಯಪಲ್ಲವರಂ ಕಾದೆರೆದು ಪೆತ್ತಜಯನಾ ವಿಜಅರಸನ್ಗೆ ಬಾಳ್ಗಚ್ಚು ಪಲ್ಮಿಡಿಉಂ ಮೂಳವಳ್ಳಉಂ ಕೊಟ್ಟಾರ್ ಬಟಾರಿಕುಲದೊನಳಕದಮ್ಬನ್ಕಳ್ದೋನ್ ಮಹಾಪಾತಕನ್ಇರ್ವ್ವರುಂ ಸಳ್ಬಙ್ಗದರ್ ವಿಜಾರಸರುಂ ಪಲ್ಮಿಡಿಗೆ ಕುರುಮ್ಬಿಡಿವಿಟ್ಟಾರ್ ಅದಾನಳೆವೊನ್ಗೆ ಮಹಾಪಾತಕಮ್ ಸ್ವಸ್ತಿಭಟ್ಟರ್ಗ್ಗಿಗಳ್ದು ಒಡ್ತಲಿ ಆಪತ್ತೊನ್ದಿವಿಟ್ಟಾರಕರ. ಕನ್ನಡನಾಡಿನ ಮೊತ್ತಮೊದಲ ಭಾಷಿಕ ಸಾಂಸ್ಕೃತಿಕ ದಾಖಲೆಯಾಗಿರುವ ಈ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೬): ಎಂ.ಜವರಾಜ್

ಭಾಗ – 6 ದಂಡಿನ ಮಾರಿಗುಡಿಲಿ ಹಾಕಿರೊ ಮೈಕ್ ಸೆಟ್ಟಿಂದ ಪರಾಜಿತ ಪಿಚ್ಚರ್ ನ ‘ಸುತ್ತ ಮುತ್ತಲು ಸಂಜೆ ಗತ್ತಲು..’ ಹಾಡು ಮೊಳಗುತ್ತಿತ್ತು. ಸುಣ್ಣಬಣ್ಣ ಬಳಿದುಕೊಂಡು ಹೊಳೆಯುತ್ತಿದ್ದ ಮಾರಿಗುಡಿ ಮುಂದೆ ಐಕ್ಳುಮಕ್ಳು ಆ ಹಾಡಿಗೆ ಥಕ್ಕಥಕ್ಕ ಅಂತ ಕುಣಿಯುತ್ತಿದ್ದವು. ಅವುಗಳೊಂದಿಗೆ ಕಿಸಿಕಿಸಿ ಅಂತ ಪಾಚಿ ಕಟ್ಟಿಕೊಂಡಿದ್ದ ಹಲ್ಲು ಬಿಡುತ್ತ ನೀಲಳೂ ಕುಣಿಯುತ್ತಿದ್ದಳು. ಈ ಐಕಳು ಕುಣಿಯುತ್ತಾ ಕುಣಿಯುತ್ತಾ ಗುಂಪು ಗುಂಪಾಗಿ ಒತ್ತರಿಸಿ ಒತ್ತರಿಸಿ ಅವಳನ್ನು ಬೇಕಂತಲೇ ತಳ್ಳಿ ಇನ್ನಷ್ಟು ಒತ್ತರಿಸಿ ನಗಾಡುತ್ತಾ ಎಂಜಾಯ್ ಮಾಡುತ್ತಿದ್ದವು. ನೀಲಳು ಆ … Read more

ಡಿಜಿಟಲ್ ಯುಗದಲ್ಲಿ ಕನ್ನಡ ಮತ್ತು ಸೃಜನಶೀಲತೆ: ವಿಜಯ್ ದಾರಿಹೋಕ

ಸುಮಾರು ಏಳು ಸಾವಿರ ಕಿಲೋ ಮೀಟರ್ ದೂರದ ಸ್ವೀಡನ್ ನಿಂದ, ಬಾಳೆಕಾಯಿಯ ಹಲ್ವಾ ಮಾಡುವ ವಿಧಾನ ತಿಳಿಸುವಂತೆ ಅಮ್ಮನಿಗೆ ಕರೆ ಮಾಡಿದಾಗ ಆಕೆ, ಯು ಟ್ಯೂಬ್ ಗೆ ಹೋಗಿ ಭಟ್ ಎನ್ ಭಟ್ ಎನ್ನುವ ಚಾನ್ನೆಲ್ ಹುಡುಕಿ, ಅಲ್ಲಿ ಕೊಟ್ಟ ಅಡುಗೆ ವಿಡಿಯೋ ನೋಡಿ ಮಾಡು, ಚೆನ್ನಾಗಿರುತ್ತೆ ಅಂದು ಬಿಡಬೇಕೇ?. ಕೇವಲ ಒಂದು ಸ್ಮಾರ್ಟ್ ಫೋನ್ ಹಾಗೂ 4G ಯ ನೆಟ್ವರ್ಕ್ ಜೊತೆಗೆ ಅಮ್ಮ ಈಗ ಡಿಜಿಟೀಕರಣದ ತೆಕ್ಕೆಗೆ ಬಂದಿರುವ ಬಗ್ಗೆ ನನಗೆ ಸ್ಪಷ್ಟ ಸಂದೇಶ ಸಿಕ್ಕಿತು. … Read more

ದೇಶ ದೇಶಗಳ ಗಡಿಗಳ ಗೂಗಲ್ ನೋಟ: ಎಫ್. ಎಂ. ನಂದಗಾವ

ಪ್ರಭುತ್ವಕ್ಕೆ ತನ್ನ ಆಡಳಿತಕ್ಕೆ ಒಳಪಟ್ಟ ಪ್ರದೇಶದ ನಿಗದಿಗೆ ನಕಾಶೆ ಬೇಕು. ಊರುಗಳ, ಹೋಬಳಿಗಳ, ತಾಲ್ಲೂಕುಗಳ, ರಾಜ್ಯಗಳ, ರಾಷ್ಟ್ರಗಳ ನಕಾಶೆ ಎಂದಾಗ ಅವುಗಳ ಭೌಗೋಳಿಕ ವ್ಯಾಪ್ತಿ ನಿಗದಿಯಾಗಬೇಕು, ಆ ವ್ಯಾಪ್ತಿಯನ್ನು ನಿಗದಿ ಮಾಡುವುದು ಎಂದರೆ ಗಡಿ ಅಥವಾ ಎಲ್ಲೆಯನ್ನು ಗುರುತಿಸುವುದು. ಗಡಿ ಗೆರೆಯು ಅಥವಾ ಎಲ್ಲೆಯ ರೇಖೆಯು ಆಯಾ ಭೌಗೋಳಿಕ ಪ್ರದೇಶದ ವ್ಯಾಪ್ತಿಯನ್ನು ಗುರುತಿಸುವ ಗೆರೆ. ಇದು ದೇಶ ದೇಶಗಳ ನಡುವಣ ಲಕ್ಷö್ಮಣ ರೇಖೆ. ಪರವಾನಿಗೆ, ರಹದಾರಿ ದಾಖಲೆ (ಪಾಸ್ ಪೋರ್ಟ) ಇಲ್ಲದೇ ಈ ಕಡೆಯವರು ಆ ಕಡೆಗೆ … Read more

ಪುಟ್ಟ ಆರತಿ ಕೊಟ್ಟ ಮಣ್ಣಿನ ಕೇಕು: ಸವಿತಾ ಇನಾಮದಾರ್

‘ಮೇಡಂ, ಇಂದು ಆಫೀಸಿಗೆ ಹೋಗುವಾಗ FM ರೇಡಿಯೋದಲ್ಲಿ ನಿಮ್ಮ GST ಜಾಹಿರಾತು ಕೇಳಿದೆ ‘ ಅಂತ ಮೊನ್ನೆ ನನ್ನ ಪರಿಚಯದವರು ಫೋನ್ ಕಾಲ್ ಮಾಡಿ ಹೇಳಿದಾಗ ತುಂಬಾ ಖುಷಿ ಆಯಿತು. ಮೊದಲೆಲ್ಲ ‘ಇಂದಿನ ರೇಡಿಯೋ ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿ ಬಂತು ಕಣೆ ‘ ಅಥವಾ ‘ ಮೇಡಂ, ಇಂದಿನ ನಿಮ್ಮ ಕವನ ವಾಚನ ಕೇಳಿ ಕಂಗಳು ತುಂಬಿ ಬಂದವು’ ಅಂತ ಸ್ನೇಹಿತರು, ಪರಿಚಯದವರು ಹೇಳುತ್ತಿದ್ದಾಗ ತುಂಬಾ ಖುಷಿ ಆಗುತ್ತಿತ್ತು. ಕೇಳುಗರ ಪ್ರತಿಕ್ರಿಯೆಗಳು ತುಂಬಾ ಮುಖ್ಯ. ಹದಿನೈದು … Read more

“ದೇಶದಲ್ಲಿ ಅಭಿವೃದ್ಧಿಯಾಗಬೇಕಾದ ಶಿಕ್ಷಣ ವ್ಯವಸ್ಥೆ”: ವಿದ್ಯಾಶ್ರೀ ಭಗವಂತಗೌಡ್ರ

ಮಾನವನ ಮೂಲಭೂತ ಸೌಕರ್ಯಗಳಾದ ಗಾಳಿ, ನೀರು, ಆಹಾರ, ವಸತಿ ಜೊತೆಗೆ ಶಿಕ್ಷಣವೂ ಒಂದು ಎಂದರೆ ತಪ್ಪಾಗಲಾರದು. ಅನಾದಿ ಕಾಲದಿಂದಲೂ ವಿದ್ಯೆಗೆ ಮಹತ್ವದ ಸ್ಥಾನವಿದೆ. “ವಿದ್ಯೆ ಇರುವವನ ಮುಖವು ಮುದ್ದು ಬರುವಂತಿಕ್ಕು, ವಿದ್ಯೆ ಇಲ್ಲದವನ ಬರಿ ಮುಖವು ಹಾಳೂರು ಹದ್ದಿನಂತಿಕ್ಕು “ಎಂಬ ಸರ್ವಜ್ಞ ನ ಮಾತು ಇಂದಿಗೂ ಪ್ರಸ್ತುತ. ದೇಶ ୭೬ ನೇ ಸ್ವಾತಂತ್ರ ದಿನದ ಹೊಸ್ತಿಲಲ್ಲಿದೆ. ಆದರೆ ಬಡತನ, ನಿರುದ್ಯೋಗ, ಹಸಿವು, ಅನಕ್ಷರತೆ ಇನ್ನೂ ದೇಶದಿಂದ ತೊಲಗಿಲ್ಲ. ದೇಶದ ಹಲವಾರು ಸಮಸ್ಯೆಗಳಿಗೆ ಶಿಕ್ಷಣ ಮದ್ದಾಗಬಲ್ಲದು. “ಮನೆಯೇ ಮೊದಲ … Read more

ಹೃದಯದ ಭಾಷೆ –ಕನ್ನಡ ಉಳಿಸಿ ಬೆಳೆಸಿ: ನಾಗರೇಖಾ ಗಾಂವಕರ

ಕನ್ನಡ ಎನೆ ಕುಣ ದಾಡುವುದೆನ್ನೆದೆಕನ್ನಡವೆನೆ ಕಿವಿ ನಿಮಿರುವುದು!!ಕಾಮನ ಬಿಲ್ಲನು ಕಾಣುವ ಕವಿಯೊಳುತೆಕ್ಕನೆ ಮನ ಮೈ ಮರೆಯುವುದು- ಪ್ರಾಥಮಿಕ ಹಂತದಲ್ಲಿ ಕಲಿತ ಕುವೆಂಪು ಕವಿತೆಯ ಈ ಸಾಲುಗಳು ಬಾಯಲ್ಲಿ ಇಂದಿಗೂ ಮೆರೆದಾಡುತ್ತವೆ. ಯಾಕೆಂದರೆ ಅದು ಮಾತೃಭಾಷೆಯ ಬಗ್ಗೆ ನಮ್ಮಲ್ಲಿದ್ದ ಪ್ರೀತಿ ಅದರಲ್ಲಿದ್ದ ಸೊಗಡುತನ ಹಾಗೂ ಕನ್ನಡ ಎದೆಯ ಭಾಷೆಯಾಗಿರುವುದು ಅದಕ್ಕೆ ಕಾರಣ. ಆದರೆ ಇಂದು ಕನ್ನಡದ ಬಳಕೆ ಕಡಿಮೆಯಾಗುತ್ತಿದೆ. ಕನ್ನಡವೆಂದರೆ ಯುವ ಜನರಲ್ಲಿ ಒಂದು ರೀತಿಯ ತಾತ್ಸಾರ ಬೆಳೆಯುತ್ತಿರುವಂತೆ ಅನಿಸುತ್ತಿದೆ. ಹಾಗಾಗಿ ಕನ್ನಡ ಕಟ್ಟುವ ಕೆಲಸವಾಗಬೇಕಿದೆ.ಮಾತೃಭಾಷೆ ಉಳಿಸುವ ನಿಟ್ಟಿನಲ್ಲಿ … Read more

ಕನ್ನಡದ ಕನ್ನಡಿ: ಡಾ. ಹೆಚ್ ಎನ್ ಮಂಜುರಾಜ್

ಪ್ರತಿ ವರುಷ ನವೆಂಬರ್ ಬಂದಾಗಲೆಲ್ಲ ನಮಗೆ ಕನ್ನಡ ನೆನಪಾಗುತ್ತದೆ ಅಥವಾ ನಾಡು-ನುಡಿ-ನೆಲ-ಜಲ-ಸಂಸ್ಕೃತಿಗಳನ್ನು ಕುರಿತು ಮಾತಾಡಲು ನೆಪವಾಗುತ್ತದೆ! ಅದರಲೂ ಕನ್ನಡ ಭಾಷಾಭಿಮಾನ ಮುಗಿಲು ಮುಟ್ಟುವ ಮಾಸವಿದು. ಕನ್ನಡಾಂಬೆಯನು ಪೂಜಿಸಿ ನಮ್ಮ ಅಸ್ಮಿತೆಯನ್ನು ಸ್ಮೃತಿಗೆ ತಂದುಕೊಳ್ಳುವ ಸಂದರ್ಭವಿದು. ಉಳಿದಂತೆ ನಮ್ಮದು ನಿತ್ಯದ ಬದುಕಿನ ಪಡಿಪಾಟಲು ; ಆಗೆಲ್ಲಾ ಕನ್ನಡತನ ಹಿನ್ನೆಲೆಗೆ ಸರಿಯುತ್ತದೆ. ನವೆಂಬರ್ ನಾಯಕರಾಗದೇ ಎಲ್ಲ ಮಾಸಗಳಲ್ಲೂ ಮಾಸದಂಥ ಕನ್ನಡದ ಕಾಯಕದಲ್ಲಿ ನಿರತರಾದ ಸದ್ದು ಸುದ್ದಿಯಿಲ್ಲದ ಸಾವಿರಾರು ಮಂದಿ ನಮ್ಮೊಡನಿದ್ದಾರೆ. ವೃತ್ತಿ ಯಾವುದಾದರೇನು? ಕಲಿತದ್ದು ಏನಾದರೇನು? ಕನ್ನಡದಲ್ಲಿ ಬರೆಯುವ, ನುಡಿಯುವ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೧): ಎಂ.ಜವರಾಜ್

-೧- ಸಂಜೆ ಆರೋ ಆರೂವರೆಯೋ ಇರಬಹುದು. ಮೇಲೆ ಕಪ್ಪು ಮೋಡ ಆವರಿಸಿತ್ತು. ರಿವ್ವನೆ ಬೀಸುವ ಶೀತಗಾಳಿ ಮೈ ಅದುರಿಸುವಷ್ಟು. ಕಪ್ಪುಮೋಡದ ನಿಮಿತ್ತವೋ ಏನೋ ಆಗಲೇ ಮಬ್ಬು ಮಬ್ಬು ಕತ್ತಲಾವರಿಸಿದಂತಿತ್ತು. ಕೆಲಸ ಮುಗಿಸಿ ಇಲವಾಲ ಕೆಎಸ್ಸಾರ್ಟೀಸಿ ಬಸ್ಟಾಪಿನಲ್ಲಿ ಮೈಸೂರು ಕಡೆಗೆ ಹೋಗುವ ಸಿಟಿ ಬಸ್ಸಿಗಾಗಿ ಕಾಯುತ್ತಿದ್ದ ಚಂದ್ರನಿಗೆ ಮನೆ ಕಡೆ ದಿಗಿಲಾಗಿತ್ತು. ಆಗಲೇ ಒಂದೆರಡು ಸಲ ಕಾಲ್ ಬಂದಿತ್ತು. ಬೇಗನೆ ಬರುವೆ ಎಂದು ಹೇಳಿಯೂ ಆಗಿತ್ತು. ಹಾಗೆ ಹೇಳಿ ಗಂಟೆಯೇ ಉರುಳಿತ್ತು. ಸಮಯ ಕಳಿತಾ ಕಳಿತಾ ಮನೆ ಕಡೆ … Read more

ಒಂದ್ ಡೇ ವಿತ್ ಗಣಪ!: ರೂಪ ಮಂಜುನಾಥ

ಆ ದಿನ ಭಾದ್ರಪದ ಶುಕ್ಲದಾ ಚೌತಿ! ಬೆಳಗಿನಿಂದಲೇ ಮುದ್ದು ವಿನಾಯಕನನ್ನು ಸ್ವಾಗತಿಸಲು ಸಂಭ್ರಮದಿಂದ ಮಿಂದುಮಡಿಯನುಟ್ಟು, ದೇವರ ಮನೆಯ ಮಾಡಿ ಅಚುಕಟ್ಟು, ಪೂಜಾ ಸಲಕರಣೆಗಳನ್ನು ಜೋಡಿಸಿಟ್ಟು, ಹೂ ಬಿಡಿಸಿಟ್ಟು, ಫಲತಾಂಬೂಲ ನೈವೇದ್ಯಕಿಟ್ಟೂ, ಗಣಪನಿಗೆ ಒಳ್ಳೆಯ ಪೀಠವಿಟ್ಟೂ, ಅಡಿಗೆಮನೆಗೆ ಹೆಜ್ಜೆಯಿಟ್ಟು, ನಮ್ಮ ಈಶಣ್ಣನ ಮಗ ಗಣಪ್ಪನ ಜೊತೆಗೆ ನಮ್ಮಮನೆಯಲಿರುವ ಗಣಪ್ಪನಿಗೆ( ನನ್ ಮಗನೂ ಸ್ವಲ್ಪ ಠೊಣಪನೇ) ಇಷ್ಟವಾಗುವ ಅಡಿಗೆಯ ತಯಾರಿಯಲ್ಲಿದ್ದೆ. ಅಪ್ಪ ಮಕ್ಕಳು ಎದ್ದುಸ್ನಾನ ಮಾಡಿ ಪೂಜೆ ಮಾಡಲು ಸಿದ್ದವಾದರು. ನಮ್ಮ ಟ್ಯಾಬ್ ಗುರುಗಳನ್ನ “ ಸ್ವಾಮಿ ಬರ್ತೀರಾ”?ಅಂದಿದ್ದೇ ತಡ … Read more

ಅಬ್ಬಾ…..ಆ ದಿನಗಳು: ಸರ್ವಮಂಗಳ ಜಯರಾಂ

ಹೆಣ್ಣು ಗರ್ಭ ಧರಿಸಿ 9 ತಿಂಗಳು ತನ್ನ ಉದರದಲ್ಲಿ ಮಗುವನ್ನು ಪೋಷಿಸಿ ಸುರಕ್ಷಿತವಾಗಿ ಭುವಿಗೆ ತರುವಲ್ಲಿನ ಪ್ರಕ್ರಿಯೆ ಆ ದಿನಗಳಲ್ಲಿ ಆಕೆಯ ಅನುಭವಗಳು ಹೇಳತೀರದು, ಯಾವುದೇ ಆಹಾರ ಪದಾರ್ಥಗಳನ್ನು ಕಂಡರೂ ಅದರಲ್ಲೂ ಎಣ್ಣೆ ಪದಾರ್ಥಗಳು , ಬೋಂಡಾ, ಬಜ್ಜಿ ಕರಿಯುವಾಗ, ಸಾಂಬಾರಿಗೆ ಬೇಳೆ ಬೇಯಿಸುವಾಗ ಹೊಟ್ಟೆ ತೊಳಸಿದಂತಾಗಿ ವಾಂತಿ ಉಮ್ಮಳಿಸಿ ಬಂದು ಊಟದ ಮೇಲೆ ವಿರಕ್ತಿ ಬಂದುಬಿಡುತ್ತದೆ ತಟ್ಟೆಯಲ್ಲಿ ಊಟ ಇಟ್ಟುಕೊಂಡು ಕುಳಿತೆವೆಂದರೆ ಹಿಂದೆಯೇ ಎದ್ದು ಹೋಗಿ ವಾಂತಿ ಮಾಡಿ ಬರಬೇಕಾಗುತ್ತದೆ. ಏಕೆಂದರೆ ಊಟದ ವಾಸನೆ ಮೂಗಿಗೆ … Read more

ಕುಬೇರನ ಸಂಪತ್ತು ತೃಣಕ್ಕೆ ಸಮಾನ!: ಹರ್ಷವರ್ಧನ್ ಜಯಕುಮಾರ್

‘ಪ್ಲಾಟಿನಂ ಆಭರಣಗಳು ಬೇಕೆ ? ಬ್ರಹ್ಮಾಂಡದಲ್ಲೇ ಅತಿ ಕಡಿಮೆ ಬೆಲೆ!ಸ್ಥಳ – 2011UW158 ಕ್ಷುದ್ರ ಗ್ರಹ! – ಒಮ್ಮೆ ಭೇಟಿ ಕೊಡಿ’ಭವಿಷ್ಯದಲ್ಲಿ – ಹೀಗೊಂದು ಜಾಹೀರಾತು ಕಂಡರೆ ಅಚ್ಚರಿಪಡಬೇಕಿಲ್ಲ! 2011UW158 ಒಂದು ಕ್ಷುದ್ರಗ್ರಹ! Asteroid. ಅರ್ಧ ಕಿ.ಮೀ ಉದ್ದ – ಒಂದು ಕಿ.ಮೀ ಅಗಲ ಅಷ್ಟೇ! 2015ರಲ್ಲಿ ಭೂಮಿಗೆ ಸನಿಹ ಅಂದರೆ ಸುಮಾರು 25 ಲಕ್ಷ ಕಿ.ಮೀ ಅಂತರದಲ್ಲಿ ಸಾಗಿತ್ತು ಸಹ! Planetary Resources ಸಂಸ್ಥೆಯ ಪ್ರಕಾರ ಈ ಸಣ್ಣ ಕ್ಷುದ್ರಗ್ರಹದಲ್ಲಿ ಸುಮಾರು 90 ಮಿಲಿಯನ್ ಟನ್ … Read more

ಡಾ. ಶಾಂತಲಕ್ಷ್ಮಿಯವರ ಕಾವ್ಯ ಚಿಂತನೆ: ಸಂತೋಷ್ ಟಿ

ಅಭಿಜಾತ ಕನ್ನಡ ಲಲಿತಾಕಲಾ ಲೋಕದ ಕಾವ್ಯನ್ವೇಷಣೆಯಲ್ಲಿ ಹೊಸಚಿಂತನೆಗಳ ಬೆರಗು ಮೂಡಿಸಿದ ಕವಯತ್ರಿ ಡಾ. ಶಾಂತಲಕ್ಷ್ಮಿ. ಭಾವನೂಭೂತಿಯ ಅಭೀಪ್ಸೆಯ ಉತ್ಸುಕತೆಯಿಂದ ಸ್ರಜನಶೀಲ ಅಭಿವ್ಯಕ್ತಿ ಮಾಧ್ಯಮ ಕಾವ್ಯದಲ್ಲಿ ತಮ್ಮ ಧ್ವನಿಯನ್ನು ಅನುಸಂಧಾನ ಮಾಡುತ್ತಿರುವ ಮಹಿಳಾ ಸಾಧಕರಲ್ಲಿ ಈ ಕವಯತ್ರಿಯ ಕಾವ್ಯ ನವಿರಾದ ಭಾವಗಳಿಂದ ಜೀವತುಂಬಿ ಹರಿಯುವಂತದ್ದು. ವಾಸ್ತವದ ಬದುಕಿನ ನುಂಟು ಉಂಟು ಮಾಡಿದ ಸಹನೀಯತೆˌ ಕರುಳು ಮಿಡಿಯುವ ಭಾವಧಾರೆˌಪ್ರಕ್ರತಿಯ ಜೀವ ವೈವಿಧ್ಯ ದ್ರವ್ಯˌಬದುಕಿನ ಮೌಲ್ಯಗಳುˌ ಜಾಗತಿಕವಾಗಿ ಬದಲಾದ ಸನ್ನಿವೇಶಗಳುˌ ಕೃತಕತೆಯ ಮೋಡಿ ನಿಯೋನ್ ಸನ್ನೆಗಳು, ಸ್ವಾರ್ಥ ಪರಿಸ್ಥಿತಿಯ ಬಿಕ್ಕಟುಗಳ ಲಾಲಸೆಗಳು … Read more

ಸಂವಿಧಾನದ ಮಹತ್ವವನ್ನು ಸಾರುವ ಮನೋಜ್ಞ ಸಿನಿಮಾ – 19.20.21: ಚಂದ್ರಪ್ರಭ ಕಠಾರಿ

ಹರಿವು, ನಾತಿಚರಾಮಿ, ಆಕ್ಟ್ 1978 ಸಿನಿಮಾಗಳಿಂದ ಸಂವೇದನಾಶೀಲ ನಿರ್ದೇಶಕರೆಂದು ಗುರುತಿಸಲ್ಪಟ್ಟಿರುವ  ಮಂಸೋರೆಯವರ ಹೊಸ ಸಿನಿಮಾ-19.20.21. ಟೈಟಲ್ ಸೇರಿದಂತೆ ಹಲವು ಕುತೂಹಲಗಳೊಂದಿಗೆ ಅವರು ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಹಾಗೆ ತರುವಾಗ ಹಲವು ಸವಾಲುಗಳನ್ನು ತಮ್ಮ ಸಿನಿಮಾ ತಯಾರಿಕೆಯ ಅನುಭವದಿಂದ, ಪ್ರತಿಭಾವಂತಿಕೆಯಿಂದ ನಿಭಾಯಿಸಿದ್ದಾರೆ.   ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಲ್ಲಿರುವ ಕುತ್ಲೂರು ಗ್ರಾಮದಲ್ಲಿ ಶತಮಾನಗಳಿಂದ ಬದುಕಿರುವ ಆದಿವಾಸಿ ಬುಡಕಟ್ಟು ಜನಾಂಗವಾದ ಮಲೆಕುಡಿಯರನ್ನು, ಸರ್ಕಾರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಯನ್ನು ಜಾರಿ ಮಾಡಿ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ, ಆಳುವ ಪ್ರಭುತ್ವದಿಂದ ನಡೆದ ದೌರ್ಜನ್ಯಗಳ … Read more

ತೇರ ಹಳ್ಳಿಯ ಸಿನಿಮಾ ತೇರು: ಎಂ ನಾಗರಾಜ ಶೆಟ್ಟಿ

ʼಸಿನ್ಮಾ ಚೆನ್ನಾಗಿತ್ತು, ದರ್ಶನ್ ಸಿನ್ಮಾನೂ ತೋರ್ಸ್‌ಬೇಕಿತ್ತು” ಆರು ವರ್ಷದ ಪೋರ ಹೇಳಿದ ಮಾತು. ಈ ಮಾತಲ್ಲಿ ಸತ್ಯವಿದೆ. ಆರೇನು, ಅರವತ್ತರ ವಯಸ್ಸಿನವರೂ ಒಂದೇ ಬಗೆಯ, ರಂಜನೆಯ ಸಿನಿಮಾಗಳನ್ನು ನೋಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದಕ್ಕಿಂತ ಭಿನ್ನವಾದ, ಸಾಮಾಜಿಕ ಅರಿವು ಮೂಡಿಸುವ, ಬುದ್ದಿಯನ್ನು ಕೆಣಕುವ, ಕಟು ವಾಸ್ತವವನ್ನು ತಿಳಿಸುವ ಚಿತ್ರಗಳ ಬಗ್ಗೆ ಅರಿವು ಮೂಡಿಸಬೇಕು. ನಮ್ಮ ಪಠ್ಯಕ್ರಮದಲ್ಲಿ ಅದಕ್ಕೆ ಅವಕಾಶವಿಲ್ಲ. ಸಿನಿಮಾ ಹಬ್ಬಗಳು, ಸಿನಿಮೋತ್ಸವಗಳು ಸ್ವಲ್ಪ ಮಟ್ಟಿಗೆ ಈ ಕೊರತೆಯನ್ನು ನೀಗಿಸುತ್ತವೆ. ಅವು ಸಿನಿಮಾ ನೋಡುವ, ಅರ್ಥ ಮಾಡಿಕೊಳ್ಳುವ, ವಿಶ್ಲೇಷಿಸುವ … Read more

ರಾಷ್ಟ್ರಕವಿ ಡಾ.ಜಿ.ಎಸ್ ಶಿವರುದ್ರಪ್ಪನವರ ಕಾವ್ಯ ಒಂದು ಅಧ್ಯಯನ: ಸಂತೋಷ್ ಟಿ

ಕನ್ನಡ ಸಾರಸ್ವತ ಲೋಕದ ಕೇಂದ್ರಬಿಂದುವಾಗಿ ಸಾಹಿತ್ಯದ ವಿವಿಧ ಜ್ಞಾನಶಿಸ್ತುಗಳನ್ನು ಬೆಳಗಿಸಿದ ಹಣತೆ ಜಿ.ಎಸ್.ಶಿವರುದ್ರಪ್ಪನವರು. 1926 ಫೆಬ್ರವರಿ 7ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರಿನಲ್ಲಿ ಜನಿಸಿದರು. ತಂದೆ ಶಾಂತವೀರಪ್ಪˌತಾಯಿ ವೀರಮ್ಮ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 1949ರಲ್ಲಿ ಬಿ.ಎ ಅನರ್ಸ್ ಪದವಿˌ1953ರಲ್ಲಿ ಎಂ.ಎ ಪದವಿ ಪಡೆದರು. ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಸುವರ್ಣ ಪದಕಗಳನ್ನು ಪಡೆದಿರುವರು.1960ರಲ್ಲಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ಸೌಂದರ್ಯ ಸಮೀಕ್ಷೆ ಎಂಬ ಸಂಶೋಧನಾ ಪ್ರೌಢಪ್ರಬಂಧ ಮಂಡಿಸಿ ಪಿಎಚ್ ಡಿ ಡಾಕ್ಟರೇಟ್ ಪದವಿ ಪಡೆದರು. ವ್ರತ್ತಿಜೀವನವನ್ನು 1949ರಲ್ಲಿ ಆರಂಭಿಸಿದ ಇವರು … Read more

“ಸಂಪಾದಕರಿಗೊಂದು ಪತ್ರ”: ಎಂ. ಜವರಾಜ್

-೧- ಸರ್ ನಮಸ್ಕಾರ, ಏನ್ ಸರ್ ನೀವು ಆಡಾಡ್ತ ಹತ್ತು ವರ್ಷ ತುಂಬಿಸಿ ಬಿಟ್ಟಿರಲ್ಲ. ಗ್ರೇಟ್ ಸರ್. ಹತ್ತು ವರ್ಷ ಅಂದ್ರೆ ಸಾಮಾನ್ಯನ ಸರ್. ಸಾಹಿತ್ಯ ಸಂಬಂಧಿತ ಪತ್ರಿಕೆಯನ್ನು ಮಾಡಿ ಅದರಲ್ಲು ಸಾಹಿತ್ಯಾಸಕ್ತ ಆನ್ ಲೈನ್ ಓದುಗರನ್ನು ಹಿಡಿದಿಟ್ಟುಕೊಂಡು ನಿಗಧಿತವಾಗಿ ಪತ್ರಿಕೆ ರೂಪಿಸುವುದಿದೆಯಲ್ಲ ಸುಮ್ನೆನಾ ಸರ್. ಪ್ರತಿ ಸಂಚಿಕೆಗೂ ಕಥೆ, ಕವಿತೆ, ವಿಮರ್ಶೆ, ಪ್ರಬಂಧ ತರಹದ ಭಿನ್ನ ಬರಹಗಳನ್ನು ಆಯ್ದು ಸೋಸಿ ರಂಗೋಲಿ ಚಿತ್ತಾರದಾಗೆ ತುಂಬುವುದಿದೆಯಲ್ಲ ಅದು ಸರ್. ಅದಕ್ಕೆ ನಾನ್ ಹೇಳಿದ್ದು ಗ್ರೇಟ್ ಅಂತ. ಈ … Read more

ವಿಧಿಯ ವಕಾಲತ್ತು: ಹೆಚ್ ಷೌಕತ್ ಆಲಿ, ಮದ್ದೂರು

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸದ ಹೊರೆ ಜಾಸ್ತಿ ಇರುತ್ತೆ.ಪ್ರತಿ ದಿನ ಪ್ರಯಾಣ, ಬೆಳಿಗ್ಗೆಯಿಂದ ಸಂಜೆವರೆವಿಗೂ ವೃತ್ತಿ ನಂತರ ಸಂಜೆ ರಾತ್ರಿಯಾಗಿ ಇಡೀ ದಿನದ ಆಗು ಹೋಗುಗಳ ಅರಿವೇ ಇಲ್ಲದಂತಾಗುತ್ತೆ, ಆದರೂ ನಮ್ಮ ಸುತ್ತ-ಮುತ್ತಲಿನ ವಿದ್ಯುನ್ಮಾನಗಳೆಲ್ಲ ನಾವು ತಿಳಿದುಕೊಂಡು ವಿದ್ಯಾರ್ಥಿಗಳಿಗೆ ಅವರ ಜ್ಞಾನಾರ್ಜನೆಯಲ್ಲಿ ಪ್ರಗತಿ ಕಾಣುವಂತೆ ಮಾಡಬೇಕಾಗುತ್ತೆ. ಸಮಾಜದಲ್ಲಿ ಶಿಕ್ಷಕರಿಗೆ ಅತ್ಯಂತ ಗೌರವ ದೃಷ್ಠಿಯಿಂದ ಸ್ವೀಕರಿಸಿದರೂ ಶಿಕ್ಷಕರಿಗೂ ಅಂತಃಕರಣ ವಿರುತ್ತೆ ಅವರದೇ ಆದ ಅನೇಕ ಸಮಸ್ಯೆಗಳು ಅವರೊಂದಿಗೆ ಮನದ ಮೂಲೆಯಲ್ಲಿ ಚರ್ಚಾ ಗೋಷ್ಠಿಗಳನ್ನೇ ಏರ್ಪಡಿಸಿರುತ್ತವೆ. ಇವುಗಳನ್ನು ಗೌಣವಾಗಿಟ್ಟುಕೊಂಡು ಮೇಲ್ನೋಟಕ್ಕೆ … Read more

ದೀಪವೂ ನಿನ್ನದೇ ಗಾಳಿಯು ನಿನ್ನದೇ !: ಮನು ಗುರುಸ್ವಾಮಿ

ಕನ್ನಡದ ಸಾಹಿತ್ಯದಲ್ಲಿ ಜ್ಯೋತಿ, ಹಣತೆ, ದೀಪ ಈ ಪದಗಳು ಯಾವುದೋ ಒಂದು ವಿಚಾರದ ಘನತೆ ಅಥವಾ ಹೆಮ್ಮೆಯ ಸಂಕೇತವಾಗಿ ಬಂದು ಹೋಗುತ್ತವೆ. ಸು 16ನೇ ಶತಮಾನದಲ್ಲಿ ಜೀವಿಸಿದ್ದ ಸರ್ವಜ್ಞ ಜಾತಿ ವ್ಯವಸ್ಥೆಯ ವಿರುದ್ದ ಮಾತುನಾಡುವಾಗ “ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ”‌ ಎಂದಿದ್ದಾನೆ. ಅಂದರೆ ಜಾತಿಗನ ಮನೆಯೇ ಆಗಿರಲಿ ಜಾತಿ ಹೀನನ ಮನೆಯೇ ಆಗಿರಲಿ ಹಣತೆಯ ಕೆಲಸವೇನಿದ್ದರೂ ಬೆಳಕನ್ನು ನೀಡುವುದು. ಅದು ಯಾವುದೇ ತಾರತಮ್ಯ ಮಾಡುವುದಿಲ್ಲ. ಅದಕ್ಕಾಗಿಯೇ ಚೆನ್ನವೀರ ಕಣವಿ ಅವರು “ಅರಿವೇ ಗುರು; ನುಡಿ … Read more

ಅಷ್ಟು ಪ್ರೀತಿ ಇಷ್ಟು ಪ್ರೀತಿ ಎಣಿಸಿ ಕಷ್ಟಬಡದಿರು: ಮನು ಗುರುಸ್ವಾಮಿ

ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇನೀಡುವೆನು ರಸಿಕ ನಿನಗೆಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆಆ ಸವಿಯ ಹಣಿಸು ನನಗೆ ಬೇಂದ್ರೆ… ಧಾರವಾಡ ಅಜ್ಜ, ಶಬ್ದಗಾರುಡಿಗ, ಬದುಕಿನ ಅನನ್ಯತೆಯನ್ನು ಪದ್ಯಗಳಲ್ಲಿ ಹಿಡಿದಿಟ್ಟ ಮಾಂತ್ರಿಕ. ಬಡತನದ ಬೇಗೆಯಲ್ಲೂ ದಾಂಪತ್ಯವೆಂಬುದು ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟ ಕವಿ. ಕೆ ಎಸ್ ನರಸಿಂಹಸ್ವಾಮಿ ಒಂದುಕಡೆ “ಪ್ರೇಮವೆನಲು ಹಾಸ್ಯವೆ ?” ಎಂದ ಪ್ರಶ್ನಿಸುತ್ತಾರೆ. ಆಗಿದ್ದರೆ ? ಒಲವೆಂಬುದೇನು ? ಅದು ಹುಡುಗಾಟವಲ್ಲ. “ಒಲವೆಂಬುದು ಹೊತ್ತಿಗೆ” ಎನ್ನುವುದೇ ಬೇಂದ್ರೆಯವರ ನಿಲುವು. ಪ್ರೀತಿ ಮತ್ತು ದಾಂಪತ್ಯವನ್ನು ಒಂದುಗೊಳಿಸಿ ಕಾವ್ಯವನ್ನು ಕಟ್ಟಿಕೊಡುವ ಬೇಂದ್ರೆ, ತಮ್ಮ … Read more

ಸತ್ಮೇಲೆ ಏನೈತಣ್ಣ ? ದೊಡ್ ಸೊನ್ನೆನೆ ! : ಮನು ಗುರುಸ್ವಾಮಿ

“ಯೆಂಡ, ಯೆಡ್ತಿ, ಕನ್ನಡ ಪದಗೊಳ್” ಎಂದ ತಕ್ಷಣ ನಮಗೆ ನೆನಪಾಗುವುದೇ ಕನ್ನಡದ ಪ್ರಸಿದ್ಧ ಬರಹಗಾರರಾದ ಜಿ ಪಿ ರಾಜರತ್ನಂರವರು. ಯೆಂಡ, ಹೆಂಡತಿ, ಕನ್ನಡದ ಬಗ್ಗೆ ಅಪಾರ ಒಲವಿದ್ದ ಕವಿ ತಮ್ಮ ಕವಿತೆಗಳಲ್ಲಿ ತಿಳಿಹಾಸ್ಯದ ಮೂಲಕ ಬದುಕನ್ನು, ಬದುಕುವ ರೀತಿಯನ್ನು ಬಹಳ ವಿಸ್ತಾರವಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಭಾಷೆಯ ಸೊಗಡಿನಿಂದ ಕೂಡಿದ ಪದಪುಂಜಗಳು, ಪ್ರಾಸಗಳ ಸರಳ ಹೊಂದಿಕೆ, ವಾಸ್ತವಕ್ಕೆ ಹತ್ತಿರವಾದ ವಿಚಾರಗಳು ಈ ಎಲ್ಲವೂ ಒಟ್ಟಿಗೆ ಸೇರಿ ಕವಿತೆಗಳನ್ನು ಒಮ್ಮೆ ಓದಿದ ಸಹೃದಯನನ್ನು ಮತ್ತೆ ಮತ್ತೆ ತಮ್ಮತ್ತ ಆಕರ್ಷಿಸುತ್ತವೆ. ಈಗಾಗಲೇ … Read more