ಪುರಾಣ ಪರಿಕರಗಳು ಮತ್ತು ಚರಿತ್ರೆಯ ನಿರಚನೆ: ಸಂಗನಗೌಡ ಹಿರೇಗೌಡ

[ಎಚ್.ಎಸ್.ಶಿವಪ್ರಕಾಶರ ಮಹಾಚೈತ್ರ, ಮಂಟೆಸ್ವಾಮಿ, ಮಾದಾರಿ ಮಾದಯ್ಯ ನಾಟಕಗಳನ್ನು ಅನುಲಕ್ಷಿಸಿ] ಹನ್ನೆರಡನೇ ಶತಮಾನದಲ್ಲಿ ಶರಣರು ಸನಾತನದ ಒಂದಷ್ಟು ಎಳೆಗಳಿಂದ ಬಿಡಿಸಿಕೊಂಡು ವಿನೂತನದೆಡೆಗೆ ಹೊರಳಿದ್ದು ಈಗಾಗಲೇ ಚರಿತ್ರೆಯಲ್ಲಿ ದಾಖಲಾಗಿದೆ. ಅಂಥ ವಿನೂತನಕ್ಕೆ ಬರಗುಗೊಂಡ ಹರಿಹರ, ಚಾಮರಸ, ಪಾಲ್ಕುರಿಕೆ ಸೋಮನಾತ, ಬೀಮ ಕವಿಯನ್ನೂ ಒಳಗೊಂಡು ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಸಾಹಿತ್ಯದ ಮೇಲೆ ದಟ್ಟ ಪ್ರಭಾವವಾದ್ದರಿಂದ ಕನ್ನಡ ಸೃಜನಶೀಲ ಬರೆಹಗಾರರು ಮತ್ತೆ ಮತ್ತೆ ಆ ಕಾಲಕ್ಕೆ ತಿರುಗಿ ನೋಡುವಂತಾಯಿತು. ಹಾಗಾಗಿಯೇ ಕನ್ನಡ ಸಾಹಿತ್ಯದಲ್ಲಿ ಅನೇಕ ನಾಟಕಗಳು ಹಾಗೂ ಕಾದಂಬರಿಗಳು, ಕವಿತೆಗಳು … Read more

ದಾರಿ ಯಾವುದಯ್ಯ: ಅಂಬಿಕ ರಾವ್

ಪ್ರಯಾಣಕ್ಕೆ ಹೊರಟಾಗ ದಾರಿಯ ಬಗ್ಗೆ ಒಮ್ಮೊಮ್ಮೆ ಗೊಂದಲ ಉಂಟಾಗುತ್ತದೆ. ಆಗ ಸಾಮಾನ್ಯವಾಗಿ ವಾಹನ ನಿಲ್ಲಿಸಿ ಸ್ಥಳೀಯ ಜನರನ್ನು ಅಂಗಡಿಯವರನ್ನು “ ದಾರಿ ಯಾವುದು?” ಎಂದು ಕೇಳುತ್ತೇವೆ. ನಮ್ಮದೇ ನಾಡಾಗಿದ್ದಲ್ಲಿ ನಮ್ಮ ಭಾಷೆಯಲ್ಲಿ ದಾರಿಯನ್ನು ಹೇಳುತ್ತಾರೆ. ಬೇರೆ ಜಾಗಕ್ಕೆ ಹೋದಾಗ ಅವರ ಭಾಷೆಯನ್ನು ಹರುಕು ಮುರುಕಾಗಿ ಉಪಯೋಗಿಸಿ ಅದರೊಂದಿಗೆ ಸಂಗಮ ಭಾಷೆಯನ್ನು ಬಳಸಿ ಕೇಳಬೇಕು. ಅವರು ಹೇಳಿದ ಮಾತು ಅರ್ಥವಾದರೆ ಪುಣ್ಯ, ಇಲ್ಲದಿದ್ದರೆ ಬಂದ ದಿಕ್ಕಿಗೆ ವಾಪಸ್ ಹೋದರು ಹೋಗಬಹುದು!! . ದಾರಿ ತೋರಿಸುವವರನ್ನು ಹಲವಾರು ವಿಧಗಳಿವೆ; ನನ್ನ … Read more

“ಪುನರ್ಜನ್ಮದಂತೆ ಪುನರ್ವಸತಿ – ಸಂಗೀತಾಳ ಸಮರ್ಥ ಕಥೆ”: ರಶ್ಮಿ ಎಂ.ಟಿ.

ಸಂಗೀತಾ ಎಂಬ 16 ವರ್ಷದ ಅಂಗವಿಕಲ ಹೆಣ್ಣು ಮಗಳು, ಇವಳಿಗೆ ಪೋಲಿಯೋದಿಂದ ಒಂದು ಕಾಲಿಗೆ ತೊಂದರೆ ಆಗಿದ್ದು ಸರಾಗವಾಗಿ ನಡೆಯಲು ಬರುತ್ತಿರಲಿಲ್ಲ. ಇವಳು ಮೂಲತಃ ತಮಿಳುನಾಡಿನವಳು. 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ಓದಿದ್ದು, ಇವಳು 9ನೇ ತರಗತಿ ಓದುವಾಗ ಒಂದೇ ವರ್ಷದಲ್ಲಿ ಆರೋಗ್ಯದ ಸಮಸ್ಯೆಯಿಂದ ತಂದೆ-ತಾಯಿ ಇಬ್ಬರು ಮರಣ ಹೊಂದಿದರು. ಇವಳಿಗೆ ಮೂರು ಜನ ಅಕ್ಕಂದಿರು, ಎಲ್ಲರಿಗೂ ಮದುವೆಯಾಗಿದ್ದು, ಒಬ್ಬರು ತಮಿಳುನಾಡಿನಲ್ಲಿ, ಒಬ್ಬರು ಬೆಂಗಳೂರಿನಲ್ಲಿ ಹಾಗೂ ಒಬ್ಬ ಅಕ್ಕ ವಿದೇಶದಲ್ಲಿ ವಾಸವಾಗಿದ್ದಾರೆ. ಸಂಗೀತಾ 10ನೇ ತರಗತಿ ಪರೀಕ್ಷೆ … Read more

ನಗುತಿರುವ ನೆನೆಪು – ಸುನಿತಾಳ ಜೊತೆ ನಾಲ್ಕು ವರ್ಷ: ರಶ್ಮಿ ಎಂ. ಟಿ.

ನಾನು ಸಮುದಾಯ ಅಭಿವೃದ್ಧಿ ಕಾರ್ಯಕರ್ತಳಾಗಿ ಬೆಂಗಳೂರಿನ ಆರ್ಥಿಕವಾಗಿ ಹಿಂದುಳಿದ ಒಂದು ಸಮುದಾಯದಲ್ಲಿ ಅಂವಿಕಲರ ಜೊತೆ ಕೆಲಸ ಮಾಡುವಾಗ ಅಂಗವಿಕಲ ವ್ಯಕ್ತಿಯ ಕುಟುಂಬದ ಮೂಲಕ ಇನ್ನೊಂದು ಅಂಗವಿಕಲ ಕುಟುಂಬದ ಪರಿಚಯವಾಯಿತು ಇದೇ ಸುನಿತಾಳ ಕುಟುಂಬ. ಈ ಸಮುದಾಯದಲ್ಲಿ ಅಂಗವಿಕಲರನ್ನು ಗುರುತಿಸಲು ನನ್ನ ಸಹ ಸಿಬ್ಬಂದಿಗಳ ಜೊತೆ ಸೇರಿ ಮನೆ ಮನೆ ಸರ್ವೆ ಮಾಡಿದ್ದೆನು. ಆ ಸಮಯದಲ್ಲಿ ಸುನಿತಾಳ ಮನೆಗೂ ಹೋಗಿ ವಿಚಾರಿಸಿದ್ದೆವು ಆದರೆ ಮನೆಯಲ್ಲಿ ಅಂಗವಿಕಲತೆಯ ವ್ಯಕ್ತಿ ಇರುವ ಯಾವುದೇ ಸುಳಿವು ಸಿಗಲಿಲ್ಲ, ಮನೆಯವರೂ ಸಹ ಅಂಗವಿಕಲ ವ್ಯಕ್ತಿಯ … Read more

ಖಾಸಗಿ ಕಂಪನಿಗಳ ಗೋಳು: ಮಂಜುನಾಥ್. ಚಿನಕುಂಟಿ

ಮಿಡಲ್ ಕ್ಲಾಸ್ ಕುಟುಂಬದ ಹುಡುಗರು ಅಥವಾ ಹುಡುಗಿಯರ ಬದುಕು ಹೊಂದಾಣಿಕೆಯೊಂದಿಗೆಯೇ ಸರಿದೂಗಿಸುವ ಪರಿಸ್ಥಿತಿಗೆ ಬಂದು ನಿಂತಿದೆ. ಅದೂ ಸಂಸಾರ, ಜೀವನವೆಂಬ ಪಾಠದಲ್ಲಲ್ಲ ಕೆಲಸ ಎನ್ನುವ ದುಡಿಮೆಯಲ್ಲಿ. ಈ ಮಿಡಲ್ ಕ್ಲಾಸ್ ಕುಟುಂಬದ ತಂದೆ ತಾಯಿಯ ಆಲೋಚನೆಗಳು ಎಲ್ಲಿಗೆ ಸೀಮಿತವಾಗಿರುತ್ತವೆ ಎಂದರೆ, ನನ್ನ ಮಕ್ಕಳಿಗೆ ಒಂದೊಳ್ಳೆ ಶಿಕ್ಷಣ ಕೊಡಿಸಿದ್ದೇನೆ ಯಾವುದೋ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕರೆ ಸಾಕು ತಿಂಗಳಿಗೆ ಮನೆಗೆ ಹಾಗೂ ಸಾಲಕ್ಕೆ ತೀರಿಸುವ ಮೊತ್ತ ಕಳುಹಿಸಿದರೆ ಸಾಕು ಜೀವನವೆಂಬದುನ್ನು ಸಾಯುವವರೆಗೂ ಸರಿದೂಗಿಸಕೊಂಡು ಹೋಗಬಹುದು ಎಂಬ ನಂಬಿಕೆ. ಅದು … Read more

ಹೊತ್ತಿಗೆಯ ಹೊತ್ತು: ರಜನಿ ಜಿ‌ ಆರ್

ಪುಸ್ತಕವೆಂಬುದು ಜ್ಞಾನ ಪ್ರಸರಣದ ಮುಖ್ಯ ಮಾಧ್ಯಮ/ವಾಹಿನಿಯಾಗಿದೆ. ಪುರಾತನ ಕಾಲದಿಂದಲೂ ಪುಸ್ತಕಗಳ ಮಹತ್ವ ಅತ್ಯಂತ ಪ್ರಮುಖ ಸ್ಥಾನದಲ್ಲಿರುವುದು ಶ್ಲಾಘನೀಯ. ಭರತ ಖಂಡದಲ್ಲಿ ಉಪಯುಕ್ತವಾದ ಮಾಹಿತಿಗಳು, ತಾಳೆಗರಿ ಗಳಲ್ಲಿ ಬರೆದಿರುವ ಉದಾಹರಣೆಗಳೂ ಈಗಲೂ ಲಭ್ಯವಿದೆ. ಯಾವುದೇ ವಿಷಯವನ್ನು/ ಮಾಹಿತಿಯನ್ನು ಅಕ್ಷರ ರೂಪಕ್ಕಿಳಿಸಿ ಮುದ್ರಣದ ಮೂಲಕ ಓದುಗರನ್ನು ತಲುಪುವಂತೆ ಮಾಡುವುದೇ ಪುಸ್ತಕ. ಮಧ್ಯಕಾಲೀನ ಯುರೋಪಿನ ಪುನರುತ್ಥಾನದ ಕಾಲಘಟ್ಟದಲ್ಲಿ ಜಾನ್ ಗ್ಯುಟೆನ್ ಬರ್ಗ್ ರವರು ಅನ್ವೇಷಿಸಿದ ಮೊದಲಿಗೆ ಪುಸ್ತಕ ಮುದ್ರಣ ವ್ಯವಸ್ಥೆಯು ಬೆಳಕಿಗೆ ಬಂತು. ಅನಂತರ ಜ್ಞಾನ ಪ್ರಸರಣದ ಕಾರ್ಯ ವು ತೀವ್ರಗತಿಯಲ್ಲಿ … Read more

ಚಂದ್ರಶೇಖರ ಕಂಬಾರರ “ಕರಿಮಾಯಿ “ಮತ್ತು ಇತರೆ ಕಾದಂಬರಿಗಳು: ರಾಘವೇಂದ್ರ ಅಡಿಗ ಎಚ್ಚೆನ್.

1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನಿಸಿದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಡಾ. ಚಂದ್ರಶೇಖರ ಕಂಬಾರರು ಹಲವು ಕ್ಷೇತ್ರಗಳಲ್ಲಿ ಪರಿಣತರು. ಅಸಂಖ್ಯಾತ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡವರು. ಸಾಹಿತ್ಯ, ಸಂಗೀತ, ರಂಗಭೂಮಿ,ಸಿನಿಮಾ ಎಲ್ಲವೂ ಅವರ ತೆಕ್ಕೆಗೆ ಸಿಕ್ಕಿ ಹೆಜ್ಜೆ ಗುರುತನ್ನು ಮೂಡಿಸಿಕೊಂಡವು. ಧಾರವಾಡದಲ್ಲಿ ಎಂ.ಎ ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದು ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-91) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೊಟ್ಟ … Read more

ಸಾರ್. ಪ್ಲೀಸ್ ಸಹಾಯ ಮಾಡಿ … !!!!!!!!!: ನಾಗಸಿಂಹ ಜಿ ರಾವ್

( ಈ ಘಟನೆಯನ್ನು ಘಟನೆಯ ಪ್ರಮುಖ ವ್ಯಕ್ತಿಯ ಅನುಮತಿ ಪಡೆದು ಬರೆಯಲಾಗಿದೆ.. ಗೋಪ್ಯತೆಯ ಉದ್ದೇಶದಿಂದ ಹೆಸರುಗಳನ್ನು ಬದಲಿಸಿ ಬರೆದಿದ್ದೇನೆ ) ಸಾಮಾನ್ಯವಾಗಿ ನಾನು ಹೆಸರಿಲ್ಲದೆ ಬರಿ ನಂಬರ್ ಬರುವ ಕರೆಗಳನ್ನ ಬೇಗ ತೆಗೆಯೊಲ್ಲ. ನನ್ನ ಮೊಬೈಲ್ ನಂಬರ್ ಪದೇ ಪದೇ ಪತ್ರಿಕೆಗಳಲ್ಲಿ, ಟಿವಿ ನಲ್ಲಿ ಬಂದು ಸುಮ್ಮನೆ ಕರೆ ಮಾಡುವವರ ಸಂಖ್ಯೆ ಜಾಸ್ತಿ. ಇದು ಏನು ? ಯಾಕೆ ಸಹಾಯ ಮಾಡ್ತೀರಾ ? ಅನ್ನೂ ಪ್ರಶ್ನೆಗಳೇ.. ಅದಕ್ಕೆ ನಾನು ಹೆಸರಿಲ್ಲದೆ ಬರುವ ಕರೆ ಸ್ವೀಕಾರ ಮಾಡಲ್ಲ. ಆದ್ರೆ … Read more

ಆಹಾರವೇ ವಿಷವಾಗಿ, ವಿಷವೇ ಆಹಾರವಾಗಿರುವ ಈ ಕಾಲಘಟ್ಟದಲ್ಲಿ…: ಚಂಸು ಪಾಟೀಲ

ಮನುಷ್ಯ ಆಕಾಶದಲ್ಲಿ ಹಕ್ಕಿಯಂತೆ ಹಾರಬಲ್ಲ, ನೀರಿನಲ್ಲಿ ಮೀನಿನಂತೆ ಈಜಬಲ್ಲ; ಆದರೆ, ಮನುಷ್ಯ ಮನುಷ್ಯನಂತೆ ಭೂಮಿಯ ಮೇಲೆ ಬದುಕುವುದನ್ನು ಕಲಿಯಲಿಲ್ಲ. ಎಂದುಡಾ. ರಾಧಾಕೃಷ್ಣನ್ ರು ಹೇಳಿದ ಮಾತು ನನಗಿಲ್ಲಿ ನೆನಪಾಗ್ತಾ ಇದೆ. ನಮ್ಮ ಹಿರಿಯರು ಎಷ್ಟು ಗಟ್ಟಿಮುಟ್ಟಾಗಿದ್ದರು, ದೀರ್ಘಾಯುಷಿಗಳಾಗಿದ್ದರು. ಬೇಸಿಗೆಯಿಂದ ಹಿಡಿದು ಮಾಗಿಯವರೆಗೂ ನಿರಂತರ ಎಷ್ಟೊಂದು ಕೃಷಿ ಚಟುವಟಿಕೆಗಳನ್ನು ನಿಭಾಯಿಸುತ್ತಿದ್ದರು. ನೀರಾವರಿ ಇಲ್ಲದ ಕಾಲದಲ್ಲಿ ಕೇವಲ ಮಳೆಯನ್ನೇ ನೆಚ್ಚಿ ಬೆಳೆದರು.ಟ್ರ್ಯಾಕ್ಟರ್ಗಳಿಲ್ಲದಾಗ ಬರಿ ಎತ್ತುಗಳನ್ನು ಹೂಡಿಯೆ ಹೊಲ ಉಳುಮೆ ಮಾಡಿದರು. ಒಕ್ಕುವ ಯಂತ್ರಗಳೇ ಇಲ್ಲದ ಸಂದರ್ಭದಲ್ಲಿ ಖಣದಲ್ಲಿ ತಿಂಗಳುಗಟ್ಟಲೇ ತೂರಿ, … Read more

ಪುರುಷರಿಗೂ ಇದೆ ಆಚರಿಸುವ ಒಂದು ಅಂತರ ರಾಷ್ಟ್ರೀಯ ಪುರುಷ ದಿನ: ಚಂದ್ರು ಪಿ ಹಾಸನ್

ಈ ಭೂಮಿಯ ಮೇಲೆ ಜೀವ ರಾಶಿಗಳು ಉದಯವಾಗಬೇಕೆಂದರೆ ಅಲ್ಲಿ ಒಂದು ಗಂಡು ಕುಲ ಮತ್ತೊಂದು ಹೆಣ್ಣು ಕುಲವೆಂಬ ಎರಡು ಸಮಾನ ಗುಂಪುಗಳನ್ನು ಕಾಣಬಹುದಾಗಿದೆ. ಅಲ್ಲಿ ಮುಂದಿನ ಪೀಳಿಗೆಯ ಸೃಷ್ಟಿ ಇವೆರಡರ ಸಮ್ಮಿಲನದಿಂದ ಎಂಬುದು ತಿಳಿದಿರುವ ವಿಷಯವಾಗಿದೆ. ಇಲ್ಲಿ ಸ್ತ್ರೀ ಕುಲವು ಮುಂದಿನ ಪೀಳಿಗೆಯನ್ನು ತನ್ನ ಮಡಿಲಲ್ಲಿ ಸಾಕಿ ಸಲಹಿ ಪ್ರಪಂಚಕ್ಕೆ ಪರಿಚಯಿಸುವ ಒಂದು ಮಹತ್ವವಾದ ನಿಯಮವನ್ನು ಪಾಲಿಸುತ್ತಾ ಈ ಭೂಮಿಯಲ್ಲಿ ಹೊಸ ಹೊಸ ಜೀವಿಗಳ ಉಗಮಕ್ಕೆ ಕಾರಣವಾಗಿದೆ ಎಂಬುದನ್ನು ನಾವು ಪುಸ್ತಕಗಳಲ್ಲಿ ಓದುತ್ತಾ, ಪ್ರಕೃತಿಯನ್ನು ಗಮನಿಸುತ್ತಾ, ತಮ್ಮ … Read more

“ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗಬೇಕು ಎಂಬುದರ ವೈಚಾರಿಕ ಚಿಂತನೆ”: ರವಿತೇಜ.ಎಂ.ಎನ್

ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ ಭಾಷೆ ಒಂದು ಅಮೂಲ್ಯ ಸಾಧನ ಮತ್ತು ಸಂವಹನ ಮಾಧ್ಯಮ. ಇದು ಮಾತು,ಬರಹ ಮತ್ತು ಭಾವಾಭಿವ್ಯಕ್ತತೆ ರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ.ಭಾಷೆಗೆ ರೂಪ, ಆಕಾರ, ಭೌತಿಕ ಅಥವಾ ರಚನಾತ್ಮಕ ಗುಣಗಳೇನೂ ಇಲ್ಲ. ಇದು ಪ್ರಾದೇಶಿಕವಾಗಿ ಜನಜೀವನದ ನಿತ್ಯ ವ್ಯವಹಾರದ ಸನ್ನಿವೇಶವನ್ನು ಅರ್ಥೈಸುವ ಹೊಂದಾಣಿಕೆ ಕೆಲಸವನ್ನು ಪ್ರಾತಿನಿಧಿಕವಾಗಿ ನಿರ್ವಹಿಸುವ ಮಾಧ್ಯಮವಾಗಿರುತ್ತದೆ. ಮಾನವನಗಿರುವ ಚಿಂತಿಸುವ, ಪರಿಭಾವಿಸುವ , ಸದಾ ಚೈತನ್ಯದಾಯಕದಿಂದ ಮೌಖಿಕವಾಗಿ ಸ್ಪಂದಿಸುವ , ಪ್ರತಿಕ್ರಿಯಿಸುವ ಬೌದ್ಧಿಕ ಶಕ್ತಿಯೇ ಭಾಷೆಗೆ ಮೂಲ ಹಿನ್ನೆಲೆಯಾಗಿದೆ.ಈ ಪ್ರಕ್ರಿಯೆಯ … Read more

ನಮ್ಮ ಕನ್ನಡದ ನೋವು ನಲಿವು !: ಕೆ ಟಿ ಸೋಮಶೇಖರ್ ಹೊಳಲ್ಕೆರೆ

ಮಾತುಗಳ ಮೂಲಕ ಭಾವನೆಗಳನ್ನು ಹೊರ ಹಾಕುವ ಸಾಮರ್ಥ್ಯ ಮಾನವನಿಗೆ ಮಾತ್ರ ಇದೆ. ಇದು ಪ್ರಕೃತಿ ಮಾನವನಿಗೆ ಕೊಟ್ಟಿರುವ ವರ! ಭಾಷೆಯ ಸೃಷ್ಟಿ ಮಾನವನ ಸೃಜನೆಗಳಲ್ಲಿ ಅಧ್ಬುತವಾದುದು. ಕೊಡಲು ಕೊಳ್ಳಲು, ಸಂವಹನ ಮಾಡಲು, ಭಾವನೆಗಳನ್ನು ಅಭಿವ್ಯಕ್ತಿಸಲು, ವ್ಯವಹರಿಸಲು ಭಾಷೆ ಅತಿ ಅವಶ್ಯಕ. ಹುಟ್ಟಿದ ಮನೆಯಲ್ಲಿ ನಡೆಯಂತೆ ನುಡಿಯನ್ನೂ ಕಲಿತಿರುತ್ತೇವೆ ಅದೇ ಆಗುವುದು ಮಾತೃಭಾಷೆ. ಎಲ್ಲರ ಮಾತೃಭಾಷೆಯಲ್ಲಿ ಎಲ್ಲಿ ಜ್ಞಾನ ಇರುವುದಿಲ್ಲ. ಹಾಗೆ ಅಲ್ಲಿ ಇಲ್ಲದ ಜ್ಞಾನವನ್ನು ಅನ್ಯ ಭಾಷೆಯಲ್ಲಿ ಕಲಿಯಬೇಕಾಗುತ್ತದೆ. ವಿಜ್ಞಾನ, ತಂತ್ರಜ್ಞಾನ, ಜೀವವಿಜ್ಞಾನ, ವೈದ್ಯವಿಜ್ಞಾನ ಮುಂತಾದವು ನಮ್ಮ … Read more

ಕನ್ನಡವೆಂದರೆ ಬರಿನುಡಿಯಲ್ಲ: ಸಂತೋಷ್‌ ಟಿ.

ಕನ್ನಡವೆಂದರೆ ಬರಿನುಡಿಯಲ್ಲ ಹಿರಿದಿದೆ ಅದರರ್ಥ ಎಂದು ನಲ್ಮೆಯ ಕವಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಆದ ಪ್ರೊ. ಕೆ.ಎಸ್. ನಿಸಾರ್ ಅಹಮ್ಮದ್ ಅವರ ನವೋಲ್ಲಾಸ ಕೃತಿಯ ಒಂದು ಕವಿತೆಯ ಉವಾಚ. ಕನ್ನಡವೆಂದರೆ ಬರಿ ನುಡಿಯಲ್ಲ ಅದರ ಅರ್ಥ ಬಹಳ ಹಿರಿದು ಎಂಬ ಕವಿಯ ಪರಿಕಲ್ಪನೆ ಮಹೋನ್ನತವಾದ ಧ್ಯೇಯ ಮತ್ತು ಅಧ್ಯಯನದಿಂದ ಕೂಡಿದೆ. ಕನ್ನಡ ಅಥವಾ ಕರ್ನಾಟಕವೆಂದರೆ ಭಾರತದಲ್ಲಿ ಮಹತ್ವದ ಸ್ಥಾನವಾಗಿದೆ. ಭೌಗೋಳಿಕ, ಭಾಷಿಕ, ಸಾಹಿತ್ಯಿಕ, ಸಾಂಸ್ಕೃತಿಕ ರಾಜಕೀಯ ಎಲ್ಲಾ ರೀತಿಯಿಂದಲೂ ಅದು ಉನ್ನತವಾದ ಚರಿತ್ರೆಯನ್ನು ತನ್ನ ಇತಿಹಾಸದ ಪುಟಗಳ … Read more

ಬದಲಾದ ಕಾಲಘಟ್ಟದಲ್ಲಿ ಪತ್ರಿಕಾ ಮಾಧ್ಯಮ: ವಿಜಯ್ ಕುಮಾರ್ ಕೆ.ಎಂ.

ಭಾರತ ದೇಶಕ್ಕೆ ಸ್ವಾತಂತ್ರ್ಯ ಬರುವ ಪೂರ್ವದಿಂದಲೂ ಮಾಧ್ಯಮ ಎಂದರೆ ಪತ್ರಿಕೆ, ಪತ್ರಿಕೆಯಿಂದಲೇ ಹತ್ತಾರು ಕ್ರಾಂತಿಕಾರಿ ಬದಲಾವಣೆಗಳು, ಪತ್ರಿಕೆಯಿಂದಲೇ ಜ್ಞಾನ, ಪತ್ರಿಕೆಯೇ ಮಾಧ್ಯಮ ಎಂಬ ಸ್ಥಿತಿ ನಿರ್ಮಾಣವಾಗಿ ಶತಮಾನಗಳೇ ಉರುಳಿದರೂ ಅಳಿಯದೇ ಉಳಿದಿರುವ ಒಂದು ಶಕ್ತಿಯುತ ಮಾಧ್ಯಮ ಎಂದರೆ ಅದು ಪತ್ರಿಕೆ(ಮುದ್ರಣ) ಮಾಧ್ಯಮ. ಕ್ರಿ.ಪೂ 1956 ರಲ್ಲಿ ರೋಮನ್ನರು ಪ್ರಾರಂಭಿಸಿದ ಪತ್ರಿಕೆ ಹಂಚಿಕೆಯ ವಿಧಾನ ಮುಂದೊಂದು ದಿನ ದಿನಪತ್ರಿಕೆಯಾಗಿ ಬದಲಾಗಿ 1605 ರಲ್ಲಿ ಜಾನ್ ಕಾರ್ಲೋಸ್ ನ ಮೂಲಕ ಜಗತ್ತನ್ನು ಪ್ರವೇಶಿಸಿತು. ತದನಂತರ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ … Read more

ನಡೆಯಿರಿ.. ನಡೆಯಿರಿ ಬರಿಗಾಲಲ್ಲಿ ನಡೆಯಿರಿ: ಸಂತೋಷ್ ರಾವ್ ಪೆರ್ಮುಡ

ನಿಸರ್ಗದ ಜೊತೆಗೆ ಅವಿನಾಭಾವ ಸಂಬಂಧ ಇಟ್ಟುಕೊಂಡರೆ ಸದಾ ಒಳ್ಳೆಯದು ಎನ್ನುವ ಮಾತಿದೆ. ಮನುಷ್ಯನ ಜೀವನದ ಎಲ್ಲಾ ಹಂತಗಳೂ ನೈಸರ್ಗಿಕವಾಗಿ ಜರುಗಿದರೆ ಅದಕ್ಕೆ ಹೆಚ್ಚಿನ ಮೌಲ್ಯವಿದೆ. ದೈಹಿಕವಾಗಿ ಆರೋಗ್ಯವಾಗಿ ಮತ್ತು ಶಾಂತಿಯುತವಾಗಿ ಇರಲು ವ್ಯಾಯಾಮ ಅತ್ಯಗತ್ಯ. ಓಡಾಡುವುದು (Walking) ದೇಹಕ್ಕೆ ಲಭ್ಯವಿರುವ ಉತ್ತಮ ವ್ಯಾಯಾಮಗಳ ಪೈಕಿ ಒಂದಾಗಿದೆ. ನಡೆದಾಟ ದೇಹವನ್ನು ಆರೋಗ್ಯವಾಗಿ ಇರಿಸುತ್ತದೆ. ಆದರೆ ಈ ನಡಿಗೆ ಸಾಧ್ಯವಾದಷ್ಟು ಸಕ್ರಿಯವಾಗಿ ಇರಬೇಕು. ವೇಗವಾಗಿ ನಡೆಯುವುದರಿಂದ ಉಸಿರಾಟದ ವೇಗ ಹೆಚ್ಚಿ, ಶ್ವಾಸಕೋಶ ಮತ್ತು ಹೃದಯದ ಕಾರ್ಯವನ್ನು ಸುಧಾರಿಸುತ್ತದೆ. ಆದರೆ ಹೆಚ್ಚಿನವರು … Read more

ಕನ್ನಡಾಭಿಮಾನಿಗಳ ನಾಡಗೀತೆಗಳು: ಎಸ್. ರೋಹಿಣಿ ಶರ್ಮಾ

ಸರಿ ಸುಮಾರು ಎರಡೂವರೆ ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಈ ಕನ್ನಡ ನಾಡು ಸಾಹಿತ್ಯ-ಸಂಸ್ಕೃತಿ-ಸಂಗೀತ- ವೇಷಭೂಷಣ-ಭೌಗೋಳಿಕ ಹಿನ್ನೆಲೆ ಮುಂತಾದ ವಿಶೇಷಗಳಿಂದ ಕೂಡಿವೆ. ಶಾತವಾಹನ, ಗಂಗ, ಕದಂಬ, ಚಾಲುಕ್ಯ, ಹೊಯ್ಸಳ ಮೊದಲಾದ ರಾಜವಂಶದವರು ಸಮರ್ಥವಾಗಿ ಆಳಿದ್ದಲ್ಲದೆ ತಮ್ಮ ಕೀರ್ತಿಪತಾಕೆಯನ್ನು ಸುವರ್ಣಾಕ್ಷರಗಳಿಂದ ದಾಖಲಿಸಿದ್ದಾರೆ. ಪಂಪ, ರನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸ ಮೊದಲಾದವರು ಕನ್ನಡ ನಾಡಿನಲ್ಲಿ ಅಕ್ಷರಕ್ರಾಂತಿಯನ್ನು ಹರಡಿದವರು. ಬೇಲೂರು, ಹಳೇಬೀಡು, ಪಟ್ಟದಕಲ್ಲು, ಹಂಪಿ, ಬಾದಾಮಿ, ಐಹೊಳೆ ಮುಂತಾದ ಶಿಲ್ಪಕಲೆಗಳು ಇಂದಿಗೂ ತಮ್ಮ ಗತವೈಭವಕ್ಕೆ ಸಾಕ್ಷಿಗಳಾಗಿವೆ. ಇವೆಲ್ಲಕ್ಕಿಂತಲೂ ನಮ್ಮ ಪ್ರಾಚೀನ … Read more

ಕನ್ನಡ ನಾಡು ನುಡಿ ಸಂಸ್ಕೃತಿಯ ಬೆಳವಣಿಗೆಗೆ ಕನ್ನಡಿಗರಾಗಿ ಕೈಗೊಳ್ಳಬೇಕಾದ ಹತ್ತು ಮಹತ್ವದ ನಿರ್ಧಾರಗಳು: ಶಿವಮೂರ್ತಿ ಹೆಚ್.

ಹೀಗೆ ಪ್ರತಿಯೊಬ್ಬರು ಕನ್ನಡ ನಾಡು ನುಡಿಗಾಗಿ ದೃಢಸಂಕಲ್ಪ ಮಾಡಿದರೆ ಕನ್ನಡ ಭಾಷೆಯ ಪರಿಮಳವು ಜಗತ್ತಿನಾದ್ಯಂತ ಪಸರಿಸಲು ಸಾಧ್ಯ. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.ಕನ್ನಡವೇ ಸತ್ಯ, ಕನ್ನಡವೇ ನಿತ್ಯ.ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಸಾರ್ವಭೌಮರು. –ಶಿವಮೂರ್ತಿ ಹೆಚ್.

ದಸರಾ ರಜೆಯ ಮಜದ ಸಮೃಧ್ಧಿ ಪ್ರವಾಸ: ಚಂದ್ರು ಪಿ ಹಾಸನ್

ಮಕ್ಕಳಿಗೆ ರಜೆ ಅಂದ್ರೆ ತುಂಬಾ ಖುಷಿ. ಯಾವ ಮಕ್ಕಳನ್ನು ಕೇಳಿದರೂ ರಜೆ ಬಂದ್ರೆ ಮಜಾ ಮಾಡಬಹುದು, ಎಂಜಾಯ್ ಮಾಡಬಹುದು ಅನ್ನುವ ಉತ್ತರ ಆಗಾಗ ನನ್ನ ಕಿವಿಗೆ ಬೀಳುತ್ತಿತ್ತು.‌‌ ಆದರೆ ಅವರ ದೃಷ್ಠಿಯಲ್ಲಿ ಮಜಾ ಅನ್ನೋದು ಅಂದ್ರೆ ಏನು ಎಂಬ ಪ್ರಶ್ನೆ ನನಗೆ ಆಗಾಗ ಕಾಡುತ್ತಿತ್ತು. ತಿಳಿದುಕೊಳ್ಳಬೇಕೆಂಬ ಕುತೂಹಲದಲ್ಲಿದ್ದಾಗ ದಾರಿಯಲ್ಲಿ ಒಂದೆರಡು ಮಕ್ಕಳು ಹೋಗುತ್ತಿರುವುದನ್ನು ಕಂಡೆ. ಹಾಗೆ ಅವರನ್ನು ಮಾತನಾಡಿಸುತ್ತಾ ಮತ್ತು ಅವರ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸುತ್ತಾ ತಮ್ಮ ರಜಾ ಅವಧಿಯ ಬಗ್ಗೆ ವಿಚಾರಿಸಿದೆ. ಆಗ ಅವರು ಹೇಳ್ತಾರೆ, … Read more

“ಕನ್ನಡ ರಾಜ್ಯೋತ್ಸವ” ಕನ್ನಡಿಗರ ಹೃದಯೋತ್ಸವ: ಕಾಡಜ್ಜಿ ಮಂಜುನಾಥ

ಭಾರತದ ಸ್ವಾತಂತ್ರ್ಯದ ನಂತರ ಸಂವಿಧಾನ ರಚನೆಯಾಗಿ ಭಾಷೆಗಳ ಆಧಾರದ ಮೇಲೆ ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡ ನೆಲ, ಜಲ, ಜನರನ್ನು ಒಟ್ಟುಗೂಡಿಸಿ ರಚಿಸಿದ ಸುವರ್ಣ ಘಳಿಗೆ ಪ್ರತಿವರ್ಷ ನವೆಂಬರ್ ೧ ರಂದು ಕರ್ನಾಟಕ ಅಥವಾ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ೧೯೫೬ ರ ನವೆಂಬರ್ ೧ ರಂದು ಮೈಸೂರು ರಾಜ್ಯ ಉದಯವಾದ ಮರೆಯಲಾಗದ ದಿನವಾಗಿದೆ. ಕನ್ನಡಿಗರ ಅಸ್ಮಿತೆಗಾಗಿ ಅನೇಕ ಮಹನೀಯರು ಹೋರಾಟ ಮಾಡುವ ಮೂಲಕ ಕನ್ನಡ ನುಡಿಗೆ ಶಕ್ತಿ ತುಂಬುವ ಕೆಲಸ ಮಾಡುವ ಮೂಲಕ ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದ … Read more

ತವಾ ಪುಲಾವಿನ ತವಕ: ತೇಜಸ್‌ ಎಚ್‌ ಬಾಡಾಲ

ಮನುಷ್ಯನನ್ನು ಗೆಲ್ಲುವ ಪರಿ ಹಲವು. ಅದರಲ್ಲಿ ಪ್ರಮುಖವೂ ಸುಲಭವೂ ಆದ ಪರಿಯು ಅವನ ಉದರ. ಎಲ್ಲಾರು ಮಾಡುವುದು ಹೊಟ್ಟೆಗಾಗಿ ಎಂದು ದಾಸರು ಹೇಳಿರುವುದು ಸುಮ್ಮನೇಯೆ? ಹೊಟ್ಟೆಯ ಮೇಲೆ ಹೊಡೆಯುವುದು, ತಟ್ಟೆಗೆ ಮಣ್ಣು ಹಾಕುವುದು, ಉಪ್ಪು ತಿಂದ ಮನೆಗೆ ಎರಡು ಬಗೆಯುವುದು, ಎಷ್ಟೆಲ್ಲಾ ಗಾದೆಗಳೂ, ಗುಣಗಳೂ ಕೇವಲ ಊಟ, ನಾಲಗೆ ಇವುಗಳ ಸುತ್ತವೇ ತಿರುಗುತ್ತಿದೆ! ಹಾಗಾಗಿಯೇ ಮನುಷ್ಯನು ಹುಟ್ಟಿದ್ದು ಮೋಕ್ಷ ಸಾಧನೆಗಾಗಿ ಆದರೆ, ಅವನು ಬದುಕುತ್ತಿರುವುದು ಮಾತ್ರ ಊಟದ ಕೃಪೆಯಿಂದಾಗಿ. ಅಮ್ಮನ ಅಡುಗೆಯನ್ನು ತಿಂದು ಅದನ್ನು ಹೊಗಳುವುದೂ, ವಿಮರ್ಶಿಸುವುದೂ … Read more