ವಿಜ್ಞಾನ ಭವನದಲ್ಲಿ ಮಕ್ಕಳ ಹಕ್ಕುಗಳ ಭಾಷಣ : ಒಂದು ಜೀವನ ಪಾಠ: ನಾಗಸಿಂಹ ಜಿ ರಾವ್

2011ರಲ್ಲಿ ದೆಹಲಿಯ ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ (NIPCCD) ಆಯೋಜಿಸಿದ್ದ ಒಂದು ತಿಂಗಳತರಬೇತಿಯಲ್ಲಿಭಾಗವಹಿಸಿದ್ದೆ. NIPCCD ನಮ್ಮ ದೇಶದ ಒಂದು ಪ್ರಮುಖ ಸಂಸ್ಥೆಯಾಗಿದ್ದು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ತರಬೇತಿ, ಸಂಶೋಧನೆ, ಮತ್ತು ನೀತಿ ರೂಪಿಸುವಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದು ಮಕ್ಕಳ ಹಕ್ಕುಗಳು, ಶಿಕ್ಷಣ, ಆರೋಗ್ಯ, ಮತ್ತು ರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಕಲ್ಯಾಣವನ್ನು ಪ್ರೋತ್ಸಹಿಸುವುದಲ್ಲದೆ ಸರ್ಕಾರೀ ಅಧಿಕಾರಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರಿಗೆ ನಿರಂತರವಾಗಿ ತರಬೇತಿಗಳನ್ನು ಆಯೋಜನೆ ಮಾಡುತ್ತಿರುತ್ತದೆ. ನಾನು … Read more

ನಮ್ಮ ಇಂದ್ರತ್ತೆ: ಒಂದು ಪುಸ್ತಕದ ಹುಚ್ಚಿನ ಕಥೆ: ನಾಗಸಿಂಹ ಜಿ ರಾವ್

ನನ್ನ ಒಂಬತ್ತನೇ ತರಗತಿಯ ದಿನಗಳು ಒಂದು ಸಾಹಸಕಥೆಯಂತಿತ್ತು. ಆಗ ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿ, ಆದರೆ ನನ್ನ ಒಳಗೊಂದು ವಿಶಾಲವಾದ ಜಗತ್ತಿತ್ತು—ಪುಸ್ತಕಗಳ ಜಗತ್ತು. ಆ ಜಗತ್ತಿನಲ್ಲಿ ನಾನು ಸಾಹಸಿಯಾಗಿರುತ್ತಿದ್ದೆ, ಕಾಲ್ಪನಿಕ ದೇಶಗಳಲ್ಲಿ ವಿಹರಿಸುತ್ತಿದ್ದೆ, ಕತೆಗಳ ರಸದೌತಣದಲ್ಲಿ ಮಿಂದೇಳುತ್ತಿದ್ದೆ. ಆದರೆ, ಈ ಜಗತ್ತಿನ ದ್ವಾರವನ್ನು ತೆರೆಯಲು ನನಗೊಂದು ದೊಡ್ಡ ಸವಾಲಿತ್ತು—ನಮ್ಮ ಇಂದ್ರತ್ತೆ. ಇಂದ್ರತ್ತೆ ಒಬ್ಬ ಸಾಮಾನ್ಯ ಗೃಹಿಣಿ ಅಲ್ಲ . ಅವರು ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದರು, ಮಕ್ಕಳಿಗೆ ಸಂಗೀತದ ಸೊಗಸಾದ ಲೋಕವನ್ನು ಪರಿಚಯಿಸುತ್ತಿದ್ದರು. ಅವರ ಕಂಠದಿಂದ ಹೊರಬರುವ ಶಾಸ್ತ್ರೀಯ … Read more

ವಿಶ್ವಸಂಸ್ಥೆಗೆ ಮಕ್ಕಳಿಂದ ವರದಿ: ಒಂದು ರಾತ್ರಿಯ ಕಥೆ: ನಾಗಸಿಂಹ ಜಿ ರಾವ್

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯು 1989ರಲ್ಲಿ ಜಾರಿಗೆ ಬಂದಾಗಿನಿಂದ, ಸಹಿ ಹಾಕಿದ ಪ್ರತಿ ದೇಶವು ಐದು ವರ್ಷಗಳಿಗೊಮ್ಮೆ ತಮ್ಮ ದೇಶದ ಮಕ್ಕಳ ಹಕ್ಕುಗಳ ಜಾರಿ ಬಗ್ಗೆ ವರದಿಯನ್ನು ಸಿದ್ಧಪಡಿಸಿ ವಿಶ್ವಸಂಸ್ಥೆಗೆ ಸಲ್ಲಿಸಬೇಕು. ಈ ವರದಿಯನ್ನು ‘ಕಂಟ್ರಿ ರಿಪೋರ್ಟ್’ ಎಂದು ಕರೆಯಲಾಗುತ್ತದೆ. ಭಾರತವು 1992ರಲ್ಲಿ ಈ ಒಡಂಬಡಿಕೆಗೆ ಸಹಿ ಹಾಕಿತು ಮತ್ತು 1997ರಲ್ಲಿ ಮೊದಲ ವರದಿಯನ್ನು ಸಲ್ಲಿಸಿತು. ಎರಡನೇ ವರದಿಯನ್ನು 2003-24ರ ಅವಧಿಯಲ್ಲಿ ಸಿದ್ಧಪಡಿಸಲಾಯಿತು. ಒಡಂಬಡಿಕೆಯ ಪರಿಚ್ಛೇದ 45ರ ಪ್ರಕಾರ, ಸರ್ಕಾರದ ವರದಿಗೆ ಪರ್ಯಾಯವಾಗಿ, ದೇಶದ ಮಕ್ಕಳ ಪರಿಸ್ಥಿತಿಯ … Read more

”ಒಂಟಿ ಶೂನ ಸಾಹಸ”: ನಾಗಸಿಂಹ ಜಿ ರಾವ್

ಜೀವನದಲ್ಲಿ ಕೆಲವು ಅವಕಾಶಗಳು ಎಲ್ಲಿಂದ ಬರುತ್ತವೆ ಹೇಗೆ ಬರುತ್ತವೆ ಎಂಬುದನ್ನು ಊಹಿಸಲು ಅಸಾಧ್ಯ. ಅವಕಾಶಗಳೊಂದಿಗೆ ಸವಾಲುಗಳು ಇರುತ್ತವೆ ಇದು ನನ್ನ ಅನುಭವ ನಾನು ಒಂದು ದಿನ ಮಧ್ಯಾಹ್ನ ಕಚೇರಿಯಲ್ಲಿ ಕುಳಿತಿದ್ದಾಗ ಒಂದು ದೊಡ್ಡ ಅವಕಾಶ ನನ್ನ ಬಾಗಿಲು ತಟ್ಟಿತು. ರಾಜ್ಯದ ಪ್ರಸಿದ್ಧ ಅಂಗವಿಕಲರ ಸಂಸ್ಥೆ APD ಇಂದ ಕರೆ ಬಂದಿತ್ತು ”ನಾಗಸಿಂಹ ಸಾರ್ ನಮ್ಮ ಸಂಸ್ಥೆಯ ಶಾಲೆಯ ಮಕ್ಕಳು ‘ಯೂಥ್ ಎಕ್ಸ್ಚೇಂಜ್’ ಕಾರ್ಯಕ್ರಮದ ಅಡಿಯಲ್ಲಿ ಸ್ಕಾಟ್ಲೆಂಡ್‌ಗೆ ಹೋಗುತ್ತಿದ್ದಾರೆ ಅಲ್ಲಿ ನಮ್ಮ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶನ ಮಾಡಬೇಕು … Read more

ಅಪ್ಪು ಅಣ್ಣನ ಮೇಲೆ ಕೇಸ್ ಮಾಡ್ತೀಯೇನೋಲೆ …. !!!!: ನಾಗಸಿಂಹ ಜಿ ರಾವ್

(ಪುನೀತ್ ರಾಜ್‌ಕುಮಾರ್ ರವರ ಹುಟ್ಟುಹಬ್ಬ ಮಾರ್ಚ್ ೧೭, ಈ ಸಂದರ್ಭದಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಅವರಿಗಿದ್ದ ಕಾಳಜಿಯನ್ನು ಸ್ಮರಿಸಿ ಈ ನೆನೆಪು ….) ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ೨೦೦೯ ನಮ್ಮ ರಾಜ್ಯದಲ್ಲಿ ಜಾರಿಯಾಗಿದ್ದು ಹಲವಾರು ಪ್ರತಿಭಟನೆ ಹಾಗೂ ಗೊಂದಲದ ನಡುವೆ ಈ ಕಾಯ್ದೆಗೆ ಸೂಕ್ತ ಪ್ರಚಾರವೇ ಇರಲಿಲ್ಲ. ಆದರೆ ಈ ಕಾಯ್ದೆಯ ವಿಭಾಗ ೧೨.೧.ಅ ಅಪಾರ ಪ್ರಚಾರ ಪಡೆದಿತ್ತು ಹಾಗೂ ಬಹಳ ಜನಪ್ರಿಯ ಸಹ ಆಗಿತ್ತು. ವಿಭಾಗ ೧೨.೧.ಅ ಯ ಪ್ರಕಾರ … Read more

ಗಾಂಜಾ ವ್ಯಸನಿಗಳು. . !!!!: ನಾಗಸಿಂಹ ಜಿ ರಾವ್

”ಮಕ್ಕಳಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೩೩ ಮಕ್ಕಳನ್ನು ಮಾದಕಪದಾರ್ಥಗಳಿಂದ ರಕ್ಷಿಸಬೇಕು ಎಂದು ಹೇಳಿದೆ. ಮಾದಕ ಪದಾರ್ತಗಳಿಗೆ ಮಕ್ಕಳು ಬಲಿಯಾಗದಿರುವಂತೆ ಮಾಡುವುದು ಮಕ್ಕಳಹಕ್ಕು. ನೀವು ಯೋಚಿಸಬೇಡಿ ಸಾರ್ ನಾವು ನಿಮ್ಮ ಶಾಲೆಗೆ ಬಂದು ಮಾದಕ ಪದಾರ್ಥಗಳಿಗಿಂದ ಆಗುವ ಅನಾಹುತಗಳ ಬಗ್ಗೆ ನಿಮ್ಮ ಶಾಲೆಯ ಮಕ್ಕಳಿಗೆ ಅರಿವು ಮೂಡಿಸುತ್ತೇವೆ” ಎಂದು ಮಾರೇನಹಳ್ಳಿ ಸರ್ಕಾರೀ ಹಿರಿಯ ಪ್ರೌಢಶಾಲೆಯ ಮುಖ್ಯೋಪಾದ್ಯಾಯರಿಗೆ ಭರವಸೆ ನೀಡಿದೆ, ತಮ್ಮ ಶಾಲೆಯ ಮಕ್ಕಳು ಬೀಡಿ, ಸಿಗರೇಟುಗಳಿಗೆ ಬಲಿಯಾಗುತ್ತಿದ್ದಾರೆ, ಅವರಿಗೆ ಅರಿವು ಮೂಡಿಸಿ ಎಂದು ನಮ್ಮನ್ನು ಆಹ್ವಾನಿಸಲು ದೂರದ ಮಾರೇನಹಳ್ಳಿಯಿಂದ ನಮ್ಮ … Read more

ತನಿಖಾ ಸಮಿತಿಯ ಸದಸ್ಯ. . . . !!!!!: ನಾಗಸಿಂಹ ಜಿ ರಾವ್

”ನಾಗಸಿಂಹ ಏನ್ರಿ ?” ”ಹೌದು ನೀವು ಯಾರು ಸರ್ ?” ”ಪೊಲೀಸ್ ಕಮಿಷನರ್ ಆಫೀಸ್ ಇಂದ ಫೋನ್ ಮಾಡಿದೀನಿ, ನಿಮ್ಮ ಮೇಲೆ ಸರ್ಕಾರೇತರ ಶಾಲೆಯ ಸಂಘದ ಅಧ್ಯಕ್ಷರು ದೂರು ಕೊಟ್ಟಿದ್ದಾರೆ, ನೀವು ಅವರ ಶಾಲೆಗೆ ನುಗ್ಗಿ ಗಲಾಟೆ ಮಾಡಿ, ಮಕ್ಕಳಿಗೆ, ಶಿಕ್ಷಕರಿಗೆ ಬೆದರಿಕೆ ಹಾಕಿದೀರಾ, ಅತಿಕ್ರಮಣ ಪ್ರವೇಶ ಮಾಡಿದ್ದೀರಾ ಅಂತ ದೂರು ಕೊಟ್ಟಿದ್ದಾರೆ, ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ನೀವು ಕಮಿಷನ್ ಆಫೀಸ್ ಗೆ ಬಂದು ಹೇಳಿಕೆ ಕೊಡಿ ” ಫೋನ್ ಕಟ್ ಆಯಿತು. ನನಗೆ ಸಹಜವಾಗಿಯೇ … Read more

ನಿಮ್ಮ ಮಕ್ಕಳು.. ನೀವೇ ಹೊಣೆ !!!: ನಾಗಸಿಂಹ ಜಿ ರಾವ್

‘ ಸಾರ್ ನಮ್ಮ ಮಕ್ಕಳನ್ನ ಶಾಲೆಯಿಂದ ಹೊರಗಡೆ ಹಾಕಿದ್ದಾರೆ, ಸಹಾಯ ಮಾಡಿ ಸಾರ್ ”ಹೀಗೆ ಪೋಷಕರ ಕರೆ ಬಂತು, ಸುಮಾರು ಎಂಟು ಜನ ಏಳನೇ ತರಗತಿಯ ಮಕ್ಕಳನ್ನು ಸರಿಯಾಗಿ ಓದು ಬಾರದವರು ಎಂದು ವಸಂತನಗರದ ಸರಸ್ವತಿ ಶಾಲೆಯಿಂದ ಹೊರಗಡೆ ಕಳಿಸುವ ತೀರ್ಮಾನವನ್ನ ಶಾಲೆಯ ಆಡಳಿತ ಮಂಡಳಿ ಮಾಡಿದ್ದರು. ಪೋಷಕರನ್ನು ಕರೆದು ಟಿಸಿ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದರು. ಕೆಲವು ಪೋಷಕರಿಗೆ ಟಿಸಿ ಕೊಟ್ಟುಬಿಟ್ಟಿದ್ದರು. ಈ ಮಕ್ಕಳಿಗೆ ಓದಲು ಬರುವುದಿಲ್ಲ ಎಂದು ಸರಸ್ವತಿ ಶಾಲೆಯಿಂದ ಹೊರಗಡೆ ಹಾಕಿದ್ದಾರೆ ನಾವೂ … Read more

ತಾಕತ್ತಿದ್ರೆ ಒಂದಿನ ಕ್ಲಾಸ್ ಮಾಡಿ ..!!!!!!!!: ನಾಗಸಿಂಹ ಜಿ ರಾವ್

ಶಾಲೆಗಳಲ್ಲಿ ದೈಹಿಕ ಶಿಕ್ಷೆ ಇಂದಾಗಿ ಇಡೀ ದೇಶದಲ್ಲಿ ಸುಮಾರು ೩೦% ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಅನ್ನೋ ಒಂದು ಕಹಿ ಸತ್ಯವನ್ನ ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗ ತನ್ನ ಒಂದು ವರದಿಯಲ್ಲಿ ತಿಳಿಸಿತ್ತು. ಶಾಲೆಗಳಲ್ಲಿ ದೈಹಿಕ ಶಿಕ್ಷೆ ನೀಡದೆ ಹೇಗೆ ಪಾಠ ಮಾಡಬಹುದು ಅನ್ನುವ ಕೈಪಿಡಿಯನ್ನು ಸಿದ್ದಪಡಿಸಿ ಪ್ರತಿ ರಾಜ್ಯದ ಶಾಲೆಗಳಲ್ಲಿ ತರಬೇತಿ ನೀಡಿ ಎಂದು ತಿಳಿಸಿತ್ತು. ಅದೂ ಅಲ್ಲದೆ ಕೈಪಿಡಿಯನ್ನು ಕುರಿತು ಶಿಕ್ಷಕರಿಗೆ ತರಬೇತಿ ನೀಡಲು ಹೈದರಾಬಾದ್‌ನಲ್ಲಿ ತರಬೇತುದಾರರ ತರಬೇತಿಯನ್ನು ಆಯೋಗ ಏರ್ಪಡಿಸಿತ್ತು. ಮೂರುದಿನಗಳ ಈ ತರಬೇತಿಗೆ … Read more

ಮೇಸ್ಟ್ರು ನನ್ನ ಮಗಳನ್ನು ಸಾಯಿಸಿ ಬಿಟ್ರು..!: ನಾಗಸಿಂಹ ಜಿ ರಾವ್

( ಗೌಪ್ಯತೆಯ ಉದ್ದೇಶದಿಂದ ವ್ಯಕ್ತಿಗಳು ಮತ್ತು ಸ್ಥಳದ ಹೆಸರನ್ನು ಬದಲಿಸಲಾಗಿದೆ ) ನಾನಿರೋದು ಪುಟ್ಟ ಹಳ್ಳಿ. ಬೆಂಗಳೂರಿಗೆ ಸುಮಾರು ಮೂವತ್ತು ಕಿಲೋಮೀಟರ್ ದೊರವಿದೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸ್ವಲ್ಪ ಹತ್ತಿರ. ವಿಮಾನ ನಿಲ್ದಾಣದ ಮುಖ್ಯರಸ್ಥೆ ಪಕ್ಕದಲ್ಲೀಯೇ ಇರುವ ಹಳ್ಳಿಯಾದ್ದರಿಂದ ಪಂಚಾಯತಿ, ಕಾರ್ಪೊರೇಷನ್ ಎರಡರಿಂದಲೂ ಅಂತಹ ಪ್ರಾಮುಖ್ಯತೆ ಪಡೆಯದ ಹಳ್ಳಿ. ಪ್ರಾಥಮಿಕ ಶಿಕ್ಷಣದ ನಂತರ ಮುಂದಿನ ಶಿಕ್ಷಣಕ್ಕಾಗಿ ನನ್ನ ಹಳ್ಳಿ ಮಕ್ಕಳು ಈಗಲೂ ಪಕ್ಕದ ಬಾಗಲೂರು, ಯಲಹಂಕ, ಬೆಂಗಳೂರನ್ನು ಅವಲಂಬಿಸ ಬೇಕು. ಪಠ್ಯದಲ್ಲಿ ಸಮಸ್ಯೆ ಬಂದರೆ, ಹೋಂ ವರ್ಕ್ … Read more

ಸಾರ್. ಪ್ಲೀಸ್ ಸಹಾಯ ಮಾಡಿ … !!!!!!!!!: ನಾಗಸಿಂಹ ಜಿ ರಾವ್

( ಈ ಘಟನೆಯನ್ನು ಘಟನೆಯ ಪ್ರಮುಖ ವ್ಯಕ್ತಿಯ ಅನುಮತಿ ಪಡೆದು ಬರೆಯಲಾಗಿದೆ.. ಗೋಪ್ಯತೆಯ ಉದ್ದೇಶದಿಂದ ಹೆಸರುಗಳನ್ನು ಬದಲಿಸಿ ಬರೆದಿದ್ದೇನೆ ) ಸಾಮಾನ್ಯವಾಗಿ ನಾನು ಹೆಸರಿಲ್ಲದೆ ಬರಿ ನಂಬರ್ ಬರುವ ಕರೆಗಳನ್ನ ಬೇಗ ತೆಗೆಯೊಲ್ಲ. ನನ್ನ ಮೊಬೈಲ್ ನಂಬರ್ ಪದೇ ಪದೇ ಪತ್ರಿಕೆಗಳಲ್ಲಿ, ಟಿವಿ ನಲ್ಲಿ ಬಂದು ಸುಮ್ಮನೆ ಕರೆ ಮಾಡುವವರ ಸಂಖ್ಯೆ ಜಾಸ್ತಿ. ಇದು ಏನು ? ಯಾಕೆ ಸಹಾಯ ಮಾಡ್ತೀರಾ ? ಅನ್ನೂ ಪ್ರಶ್ನೆಗಳೇ.. ಅದಕ್ಕೆ ನಾನು ಹೆಸರಿಲ್ಲದೆ ಬರುವ ಕರೆ ಸ್ವೀಕಾರ ಮಾಡಲ್ಲ. ಆದ್ರೆ … Read more

ಚಳಿಯಲ್ಲೊಂದು ಬೆಳಕು ….. !!!!!: ನಾಗಸಿಂಹ ಜಿ ರಾವ್

ಯಪ್ಪಾ.. ಬೆಂಗಳೂರಿನ ಚಳಿಯನ್ನೇ ತಡೆಯೋಕೇ ಆಗ್ತಾ ಇಲ್ಲಾ.. ಇನ್ನು ದೆಹಲಿ, ಹಿಮಾಲಯ ಅಲ್ಲಿನ ಚಳಿ ನನ್ನ ಊಹೆಗೂ ಮೀರಿದ್ದು. ಚಳಿ ಅಂದ್ರೆ ಬೀರು ಒಳಗಿದ್ದ ಶಾಲು, ಸ್ವೆಟರ್ ಎಲ್ಲಾ ಹೊರಕ್ಕೆ ಬರುತ್ತೆ, ದೇಹವನ್ನ ಬೆಚ್ಚಗೆ ಇಟ್ಟುಕೊಳ್ಳೋಕೆ ಹಲವಾರು ಕಸರತ್ತು ಮಾಡುತ್ತೇವೆ. ಬಿಸಿ ಬಿಸಿ ಕಾಫಿ, ಬಿಸಿ ಬಜ್ಜಿ ಬೋಂಡಾ ಹಲವಾರು ತೆರನಾದ ತಿಂಡಿ, ಮನೆಯ ವಾತಾವರಣವೇ ಬದಲಾಗಿ ಹೋಗುತ್ತದೆ. ಮನಶಾಸ್ತ್ರದ ಒಂದು ಅಂಶದ ಪ್ರಕಾರ ‘ಚಳಿಯಲ್ಲಿ ನಮ್ಮ ಯೋಚನೆ ಸಂಕುಚಿತವಾಗುತ್ತದೆ, ವಿಶಾಲವಾಗಿ ಯೋಚಿಸುವುದನ್ನು ನಿಲ್ಲಿಸಿಬಿಡುತ್ತೇವೆ’. ಇದು ನಿಜ. … Read more

ಸಮಸ್ಯೆ ಸಣ್ಣದೇ.. ಆದ್ರೂ …… !!!!!!: ನಾಗಸಿಂಹ ಜಿ ರಾವ್

ಸಮಸ್ಯೆ ಸಣ್ಣದೇ. . ಆದ್ರೂ. . . . . . !!!!!! (ಮಕ್ಕಳ ಹಿತದೃಷ್ಟಿ ಇಂದ ಹೆಸರು, ಸ್ಥಳಗಳನ್ನು ಬದಲಿಸಲಾಗಿದೆ ) ” ಕ್ರಿಕೆಟ್ ನೋಡಿದ್ದು ಸಾಕು. . ರಿಮೋಟ್ ಕೊಡು, ಅಂತ ರೇಗಿದೆ ಸಾರ್. ರಿಮೋಟನ್ನ ಬಿಸಾಕಿ ಮನೆಯಿಂದ ಆಚೆ ಹೋದೋನು ಒಂದುವರುಷ ಆದ್ರೂ ಮನೆಗೆ ಬಂದಿಲ್ಲ, ಪೊಲೀಸ್ ಕಂಪ್ಲೇಂಟ್ ಕೊಟ್ವಿ ಏನೂ ಉಪಯೋಗ ಆಗಿಲ್ಲ ಸಾರ್. . ” ಮಗನನ್ನ ಕಳೆದುಕೊಂಡ ದಂಪತಿಗಳು ನನ್ನ ಎದುರಿಗೆ ಕುಳಿತ್ತಿದ್ದರು, ಅವರಿಗೆ ಸಮಾಧಾನ ಮಾಡೋಕೆ ನನ್ನಲ್ಲಿ … Read more

ನವೆಂಬರ್ ಮಕ್ಕಳ ಮಾಸ !!!!!!!!!: ನಾಗಸಿಂಹ ಜಿ ರಾವ್

‘ಕನ್ನಡ ಮಾತೆಗೆ ಜೈ , ಜೈ ಭುವನೇಶ್ವರಿ ” ಈ ಘೋಷಣೆಗಳು ನವೆಂಬರ್ ತಿಂಗಳ ಪ್ರತಿದಿನ ಕೇಳುತ್ತಿರುತ್ತವೆ . ಕನ್ನಡ ಭಾಷೆ ಕುರಿತಾಗಿ ಯಾವುದಾದರೂ ಒಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ . ನಮ್ಮ ರಾಜ್ಯಗಳು ಭಾಷೆಯನ್ನು ಆಧರಿಸಿ ವಿಂಗಡಣೆಯಾದರೂ ಕರ್ನಾಟಕ ಎಂದು ಹೆಮ್ಮೆ ಪಡುವನಾಡು ಇಷ್ಟು ವರುಷದಲ್ಲಿ ಎಷ್ಟು ಪ್ರಗತಿ ಸಾಧಿಸಿದೆ ? ಮಾನವ ಹಕ್ಕುಗಳು , ಮಕ್ಕಳ ಹಕ್ಕುಗಳು , ಮಹಿಳೆಯರ ಹಕ್ಕುಗಳು ಹೇಗೆ ಜಾರಿಯಾಗಿದೆ ಹಾಗೂ ರಕ್ಷಿಸಲ್ ಪಡುತ್ತಿವೆ ಎಂಬ ವಿಚಾರಡಾ ಬಗ್ಗೆ ವರುಷಕ್ಕೆ … Read more

ಬಿಟ್ಟು ಹೋಗೋಣಾ ಅಂದ್ರು ಬಿಡಲ್ಲ …..: ನಾಗಸಿಂಹ ಜಿ ರಾವ್

ಬೆಳಗಿನ ಜಾವ ೪ ಗಂಟೆ ಇರಬಹುದು ಮೊಬೈಲ್ ಸದ್ದಾಯಿತು .. ಎದ್ದು ನೋಡಿದ್ರೆ ಸುಬ್ಬು ಫೋನ್ ಮಾಡಿದ್ದ, ಚೈಲ್ಡ್ ಹೆಲ್ಪ್ ಲೈನ್ ೧೦೯೮ನಲ್ಲಿ ಕೆಲಸ ಮಾಡ್ತಿದ್ದ.“ಹೇಳಣ್ಣ ಸುಬ್ಬು” ಅಂದೆನಗರದ ಪ್ರತಿಷ್ಟಿತ ಏರಿಯಾದ ಒಂದು ಶ್ರೀಮಂತರ ಮನೆಯಲ್ಲಿ ಸಂಜೆ ಎಂಟು ವರುಷದ ಬಾಲಕಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಪೊಲೀಸ್ ದೂರು ಕೊಟ್ಟಾಗಿದೆ, ಆದರೆ ಪ್ರಕರಣ ಏನೋ ಗೊಂದಲಮಯವಾಗಿದೆ ಅದಕ್ಕೆ ಬೆಳಗ್ಗೆ ೮ ಗಂಟೆಯೊಳಗೆ ಬನ್ನಿ ಅಂತ ಸುದ್ದಿ ಹೇಳಿದ ಸುಬ್ಬು. ಸುದ್ದಿ ಕೇಳಿ ಬಹಳ ಬೇಸರವಾಯಿತು, ಎಂಟು … Read more

ಯುದ್ಧ ಮತ್ತು ಮಕ್ಕಳು: ನಾಗಸಿಂಹ ಜಿ ರಾವ್

ಯುದ್ಧ, ನೈಸರ್ಗಿಕ ವಿಕೋಪ, ಶೋಷಣೆ, ದೌರ್ಜನ್ಯಗಳಿಂದ ಮಕ್ಕಳಿಗೆ ರಕ್ಷಣೆ ಕೊಡಬೇಕೆಂದು ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ತಿಳಿಸಿದೆ. ವಿಶ್ವಸಂಸ್ಥೆಯ ಈ ಆದೇಶವನ್ನು ಒಪ್ಪಿಕೊಂಡು ಒಡಂಬಡಿಕೆಗೆ ಸಹಿ ಮಾಡಿ ಯುದ್ಧದಲ್ಲಿ ತೊಡಗಿರುವ ರಾಷ್ಟ್ರಗಳ ಮಕ್ಕಳ ಪರಿಸ್ಥಿತಿ ನಿಜಕ್ಕೂ ಶೋಚನೀಯ. ಯುದ್ಧ ಮಾನವನ ಎಲ್ಲಾ ಹಕ್ಕುಗಳನ್ನು ಉಲ್ಲಂಘನೆ ಮಾಡಿ ಮಾನವನ ಘನತೆ ಮತ್ತು ಗೌರವವನ್ನು ಮಣ್ಣುಪಾಲು ಮಾಡುತ್ತದೆ. ಯುದ್ಧದಲ್ಲಿ ಗೆದ್ದೆವು ಎಂದು ಭ್ರಮೆಗೆ ಒಳಗಾಗುವ ರಾಷ್ಟ್ರಗಳು ಹಾಗೂ ಸೋತೆವು ಎಂದು ಪರಿತಪಿಸುವ ರಾಷ್ಟ್ರಗಳು ಚೇತರಿಸಿಕೊಳ್ಳಲು ಹಲವಾರು … Read more

ಕ್ಷಮಾ ಕೊನೆಗೂ ನಕ್ಕಳು . . . . . !!!!!: ನಾಗಸಿಂಹ ಜಿ. ರಾವ್

“ಗುರುಗಳೇ. . ಮುಂದಿನ ವಾರದಿಂದ ನಮ್ಮ ಸಂಸ್ಥೆಗೆ ಕಥೆ ಹೇಳೋಕೆ ಬರಬೇಕು. . ಇಲ್ಲಾ ಅನ್ನಬೇಡಿ” ಅಂತ ಫಾದರ್ ಜಾನ್ ಹೇಳಿದಾಗ ಬಹಳ ಖುಷಿಯಾಯ್ತು .“ಮಕ್ಕಳಿಗೆ ಕಥೆ ಹೇಳೋ ಚಾನ್ಸ್ ಬಿಡೋಕೆ ಆಗುತ್ತಾ ಫಾದರ್ ಖಂಡಿತ ಬರ್ತೀನಿ, ಪ್ರತಿದಿನ ಸಂಜೆ ೪-೬ ಸಮಯ ಕೇವಲ ಎರಡು ವಾರ ಓಕೆನಾ? ಅಂದೆ, ಫಾದರ್ ಬಹಳ ಸಂತೋಷದಿಂದ ಒಪ್ಪಿಕೊಂಡರು.ಫಾದರ್ ಜಾನ್ “ಆಸರೆ” ಅನ್ನೂ ಮಕ್ಕಳ ಸಂರಕ್ಷಣಾ ಗೃಹವನ್ನ ಸುಮಾರು ವರುಷಗಳಿಂದ ನಡೆಸಿಕೊಂಡು ಬರ್ತಿದಾರೆ. ಅವರ ಸಂಸ್ಥೆಗೆ ಮಕ್ಕಳ ರಕ್ಷಣಾ ನೀತಿ … Read more

ಓದ್ರೋ ಮಕ್ಕಳ .. ಓದ್ರೋ…: ನಾಗಸಿಂಹ ಜಿ. ರಾವ್

ಓದ್ರೋ ಮಕ್ಕಳ.. ಓದ್ರೋ… ಅಂತ ಮಕ್ಕಳಿಗೆ ಹೇಳ್ತಿರೋದು ಪಠ್ಯ ಪುಸ್ತಕ ಓದಿ ಅಂತಲ್ಲ, ಕಥೆ, ಕಾದಂಬರಿ, ಜೀವನಚರಿತ್ರೆಗಳನ್ನ ಓದಿ ಅಂತ ಹೇಳ್ತಿರೋದು, ಪಠ್ಯಪುಸ್ತಕ ಬಿಟ್ಟು ಬೇರೆ ಪುಸ್ತಕ ಓದುವ ಅಭ್ಯಾಸ ಮಕ್ಕಳಿಂದ ದೂರ ಆಗ್ತಿದೆ, ಪುಸ್ತಕಗಳು ಮಾನವನ ಗೆಳೆಯರು, ಕಲ್ಪನೆಯ ಬಾಗಿಲು ಹಾಗೆ ಹೀಗೆ ಅಂತ ಹೇಳ್ತಾ ಇದ್ವಿ, ಈಗ ಈ ವಾಕ್ಯಗಳಿಗೆ ಅರ್ಥವೇ ಇಲ್ಲ ಅನ್ನಿಸೋ ತರ ಆಗಿಹೋಗಿದೆ. ಸದಾ ಮೊಬೈಲು, ರೀಲ್ಸ್ ಇದರಲ್ಲಿಯೇ ಮುಳುಗಿಹೋಗ್ತಿದಾರೆ ನಮ್ಮ ಮಕ್ಕಳು. ಮಕ್ಕಳಲ್ಲಿ ಪದ ಸಂಪತ್ತು ಕಡಿಮೆಯಾಗ್ತಿದೆ.. ಎರಡು … Read more

ಪತ್ರ ರಹಸ್ಯ: ನಾಗಸಿಂಹ ಜಿ. ರಾವ್

, ನಮಸ್ಕಾರ ಮಕ್ಕಳೇ, ನೀವು ಈ ಕಥೆ ಓದೋದಕ್ಕೆ ಶುರು ಮಾಡಿದ್ದೀರಾ ಅಂದ್ರೆ ಮಕ್ಕಳ ಹಕ್ಕುಗಳ ಲೋಕವನ್ನ ಪ್ರವೇಶ ಮಾಡೋಕೆ ಸಿದ್ಧರಾಗಿದೀರಾ ಅಂತ ಅರ್ಥ. ಈ ಕಥೆ ಓದಿದ ಮೇಲೆ ನಿಮ್ಮ ಗೆಳಯರಿಗೆ ಈ ಕಥೆ ಬಗ್ಗೆ ಹೇಳಬೇಕು, ಸರಿನಾ?ಒಂದು ಊರಲ್ಲಿ ಒಂದು ಮಕ್ಕಳ ಸಂರಕ್ಷಣಾ ಗೃಹ ಇತ್ತು. ಏನಪ್ಪಾ ಇದು ಅಂದುಕೊಂಡ್ರಾ? ಮೊದಲು ಅನಾಥಾಲಯ ಅಂತ ಕರೀತಿದ್ವಲ್ಲ ಅದರ ಬದಲಾಗಿ ಮಕ್ಕಳ ಸಂರಕ್ಷಣಾ ಗೃಹ ಅಂತ ಕರಿಬೇಕು, ಅನಾಥ ಮಕ್ಕಳು ಅನ್ನುವ ಬದಲಾಗಿ ರಕ್ಷಣೆ ಪೋಷಣೆ … Read more

ನಿಲ್ಲಿಸೋಣ ಮಕ್ಕಳ ಆತ್ಮಹತ್ಯೆ: ನಾಗಸಿಂಹ ಜಿ ರಾವ್

” ಕ್ರಿಕೆಟ್ ನೋಡಿದ್ದು ಸಾಕು . ಪಾಠ ಓದು ಹೋಗು , ಅಂತ ಹೇಳಿ ಅವನ ಕೈ ಯಲ್ಲಿದ್ದ ಟಿವಿ ರಿಮೋಟ್ ಕಿತ್ತುಕೊಂಡೆ ಸಾರ್ .. ಕೋಪ ಮಾಡಿಕೊಂಡು ರೂಮ್ ಒಳಗೆ ಹೋಗಿ ಬಾಗಿಲು ಹಾಕಿಕೊಂಡೋನು ಮತ್ತೆ ಈಚೆ ಬರಲೇ ಇಲ್ಲ ಸಾರ್ .. ಅಪ್ಪ ಅಮ್ಮ ಆಗಿ ನಮಗೆ ಅಷ್ಟು ಅಧಿಕಾರ ಇಲ್ವಾ ಸಾರ್ ? ಆತ್ಮಹತ್ಯೆ ಮಾಡಿಕೊಳ್ಳೋ ಪರಿಸ್ಥಿತಿ ಏನಿತ್ತು ನೀವೇ ಹೇಳಿ ಸಾರ್ ? ಮಕ್ಕಳನ್ನ ಹೇಗೆ ಅರ್ಥ ಮಾಡಿಕೊಳ್ಳೋದು ? ?” … Read more

ಅಂಕಲ್ ಗಣಪತಿ ಇಡ್ತೀವಿ…….: ನಾಗಸಿಂಹ ಜಿ ರಾವ್

ಪ್ರತಿವರ್ಷ ಆಗಸ್ಟ್ ಸೆಪ್ಟೆಂಬರ್ ಬಂತು ಅಂದ್ರೆ ಕೆಲವು ಮಕ್ಕಳ ಗುಂಪು ಗಣಪತಿ ಇಡೋಕೆ ಪ್ಲಾನ್ ಮಾಡುತ್ತಾರೆ, ನಾವು ಅಷ್ಟೇ 1979 ರಲ್ಲಿ ಏಳನೇ ಕ್ಲಾಸ್ ನಲ್ಲಿ ಓದುತ್ತಿದ್ದಾಗ ನಾನು, ಅಶೋಕ, ಗಣೇಶ, ಮಿಲಟರಿ ಮಂಜ, ನನ್ನ ತಮ್ಮ ಪ್ರಸಾದಿ ಗಣಪತಿ ಇಡೋಕೆ ನಿರ್ಧಾರ ಮಾಡಿ ಬಿಟ್ಟೆವು. ಡಬ್ಬಗಳ ಮುಚ್ಚಳದ ಮೇಲೆ ಅಡ್ಡ ವಾಗಿ ಸಂದಿ ಮಾಡಿ ಹಣ ಸಂಗ್ರಹ ಮಾಡೋಕೆ ಶುರು, ಯಾವುದೇ ಪ್ಲಾನಿಂಗ್ ಇಲ್ಲ, ಎಷ್ಟು ಬಜೆಟ್ ಬೇಕು ಅನ್ನೋ ಅಂದಾಜಿಲ್ಲ, ಎದುರಾಗಬಹುದಾದ ಅಪಾಯಗಳ ಅರಿವಿಲ್ಲದೆ … Read more

ಶಾಲೆಗಳಲ್ಲಿ ಜಾರಿಯಾಗದ ಮಕ್ಕಳ ರಕ್ಷಣಾ ನೀತಿ: ನಾಗಸಿಂಹ ಜಿ ರಾವ್

ಮಕ್ಕಳನ್ನು ಶಾಲೆಗೆ ಕರೆತರುವ ವಾಹನಗಳ ಸುಮಾರು ೨೨ ಚಾಲಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ, ಈ ಚಾಲಕರು ಕರ್ತವ್ಯ ನಿರ್ವಹಣೆ ಮಾಡುವಾಗ ಮದ್ಯಪಾನ ಮಾಡಿದ್ದರು ಎನ್ನುವ ಆರೋಪ. ಸುಮಾರು ಮೂರು ತಿಂಗಳ ಹಿಂದೆ ಬೆಂಗಳೂರಿನ ಶಾಲೆಗಳಲ್ಲಿ ಬಾಂಬ್ ಇದೆ ಎನ್ನುವ ಹುಸಿ ಇ-ಮೇಲ್ ಶಾಲೆಗಳಿಗೆ ಬಂದಾಗ ಶಾಲೆಯ ಆಡಳಿತ ಮಂಡಳಿ ಪೋಷಕರಿಗೆ ಕರೆ ಮಾಡಿ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಎಂದು ತಿಳಿಸಿದಿದ್ದರಿಂದ ಗಾಬರಿಯಾದ ಪೋಷಕರು ಶಾಲೆಗಳತ್ತ ಓಡಿದ್ದರು. ಪ್ರತಿಷ್ಠಿತ ಶಾಲೆಗಳ ವಿದ್ಯಾರ್ಥಿನಿಯರು ರಸ್ತೆಯಲ್ಲಿ ಹೊಡೆದಾಡಿದರು. ಈ ಹೊಡೆದಾಟದ … Read more

ಮಕ್ಕಳ ಹಕ್ಕುಗಳು ಮತ್ತು ಧರ್ಮ: ನಾಗಸಿಂಹ ಜಿ ರಾವ್

ಈ ದಿನಗಳಲ್ಲಿ ನನ್ನನ್ನು ಹಲವಾರು ಜನರು ಕೇಳುತ್ತಿರುವುದು ಒಂದೇ ಪ್ರಶ್ನೆ , ಈಗ ರಾಜ್ಯದಲ್ಲಿ ಆಗುತ್ತಿರುವ ಗಲಭೆಯ ಹಿನ್ನಲೆಯಲ್ಲಿ ಮಕ್ಕಳ ಹಕ್ಕುಗಳು ಏನು ಹೇಳುತ್ತದೆ ? ಧರ್ಮದ ಬಗ್ಗೆ ಮಕ್ಕಳ ಹಕ್ಕುಗಳು ಇವೆಯೇ ? ವಿಶ್ವದ ಪ್ರತಿಯೊಂದು ಧರ್ಮಾದಲ್ಲೂ ಮಕ್ಕಳನ್ನು ಹಿರಿಯರ ಅಸ್ಥಿ ಎಂದೇ ಪರಿಗಣಿಸಲ್ಪಟ್ಟಿರುವುದು ಕಂಡು ಬರುತ್ತದೆ , ಪುರಾಣ ಪುಣ್ಯ ಕಥೆಗಳನ್ನು ವಿಮರ್ಶಿಸಿದರೆ ಕಂಡು ಬರುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯೇ ! ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಮಕ್ಕಳಿಗೆ ಜೀವಿಸುವ ಹಕ್ಕುಗಳು … Read more

ವಿಶ್ವಪ್ರಗತಿ?????: ನಾಗಸಿಂಹ ಜಿ ರಾವ್

ಹಾಸನದ ಮುನಿಸಿಪಲ್ ಹೈಸ್ಕೂಲ್, ಒಂಬತ್ತನೇ ತರಗತಿ ಮಕ್ಕಳು ಗಲಾಟೆ ಮಾಡ್ತಾ ಕೂತಿದ್ರು, ಸಮಾಜ ವಿಜ್ಞಾನದ ಶಿಕ್ಷಕ ಮರಿಯಪ್ಪ ತರಗತಿ ಪ್ರವೇಶ ಮಾಡಿದ ತಕ್ಷಣ ತರಗತಿಯಲ್ಲಿ ನಿಶ್ಯಬ್ದ. ಎಲ್ಲಾ ವಿದ್ಯಾರ್ಥಿಗಳನ್ನು ದಿಟ್ಟಿಸಿ ನೋಡಿ ಹೇಳಿದ್ರು “ಶಿಕ್ಷಣ ಇಲಾಖೆ ಹಾಗೂ ಯುನಿಸಿಫ್ ಒಟ್ಟಿಗೆ ಬೆಂಗಳೂರಲ್ಲಿ ಒಂದು ಸಮಾಲೋಚನೆ ಮಾಡ್ತಿದಾರೆ, ವಿಶ್ವಪ್ರಗತಿ ಮತ್ತು ವಿಶ್ವಶಾಂತಿಯ ಬಗ್ಗೆ ವಸ್ತುಪ್ರದರ್ಶನ, ರಾಜ್ಯದ ಯಾವುದೇ ಶಾಲೆಯಿಂದ ಮಕ್ಕಳು ಭಾಗವಹಿಸಬಹುದು, ವಿಶ್ವಪ್ರಗತಿ ಅಥವಾ ವಿಶ್ವಶಾಂತಿಯ ಬಗ್ಗೆ ಒಂದು ಮಾಡಲ್ ಸಿದ್ಧ ಮಾಡಿ ಪ್ರದರ್ಶನ ಮಾಡಬೇಕು. ಉತ್ತಮವಾದ ಮಾಡಲ್ಗೆ … Read more

ವಾಸ್ತವದಲ್ಲಿ ನಮ್ಮ ಮಕ್ಕಳು: ನಾಗಸಿಂಹ ಜಿ. ರಾವ್

''ಭಾರತದ ಶೇಖಡಾ ೮೦% ಮಕ್ಕಳು ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದಾರೆ. ನಮ್ಮ ದೇಶದಲ್ಲಿನ ಮಕ್ಕಳ ಮೇಲಾಗುವ ದೌರ್ಜನ್ಯ, ಶೋಷಣೆಗೆ ವಿರುದ್ದವಾಗಿ ಕಠಿಣ ಕಾನೂನು ಇರುವುದರಿಂದ ಮಕ್ಕಳ ಮೇಲಾಗುವ ಅಪರಾಧಗಳು, ಕಿರುಕುಳಗಳು ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ, ಕಡ್ಡಾಯ ಹಾಗು ಉಚಿತ ಶಿಕ್ಷಣ ಜಾರಿ ಮಾಡಿರುವುದರಿಂದ ೬ ರಿಂದ ೧೪ ವರುಷದೊಳಗಿನ ಮಕ್ಕಳೆಲ್ಲರೂ ಶಾಲೆಯಲ್ಲೇ ಇರುವುದರಿಂದ ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಮಕ್ಕಳ ಮೇಲಾಗುವ ಲೈಂಗಿಕ ಕಿರುಕುಳ ಕಮ್ಮಿಯಾಗಿದೆ" ಈ ಎಲ್ಲಾ ಅದ್ಬುತ ವಿಚಾರಗಳು ನಮ್ಮ ದೇಶ ವಿಶ್ವ ಸಂಸ್ಥೆಗೆ ೨೦೧೧ರಲ್ಲಿ … Read more