ಮೂರು ಕವಿತೆಗಳು: ರಾಜಹಂಸ

ಅಭಿವ್ಯಕ್ತಿಗಳ ಧರ್ಮಸಂಕಟ -೧-ಉಸಿರಿನಿಂದ ರಚಿಸಿದ ಬೇಲಿಯಿಂದಮನದ ಅಭಿವ್ಯಕ್ತಿಗಳಿಗೆ ಬಂಧಿಸಿದ್ದೇನೆಸೂಕ್ಷ್ಮಕ್ರಿಮಿಗಳು ಹಾರುವಹೂದೋಟದಲಿ ಅರಳದ ಹಾಗೆ ಭೂಮಿಯ ಗುರುತ್ವಾಕರ್ಷಣೆಯಿಂದತಪ್ಪಿಸಿಕೊಳ್ಳುವಷ್ಟೇ ಕಷ್ಟವಿದ್ದರೂಬೇಲಿ ಜಿಗಿದು ಹೂಬನದಲಿ ಹೆಜ್ಜೆಇಡಲೇಬೇಕೆಂಬುವ ದಿವ್ಯ ಉತ್ಸಾಹಹೊಂದಿರುವ ಈ ಅಭಿವ್ಯಕ್ತಿಗಳಿಗೆಮನವೊಲಿಸುವಲ್ಲಿ ಪೂರ್ಣ ವೈಫಲ್ಯಬಂಧಮುಕ್ತಗೊಳಿಸಲೂ ಅಸಾಧ್ಯಚಂಚಲ ಮನಸ್ಸಿನ ಅಭಿವ್ಯಕ್ತಿಗಳಿಗೆಅನುಕ್ಷಣ ಕಾವಲು ಕಾಯುವ ತುಟಿಗಳು -೨-ಅಭಿವ್ಯಕ್ತಿ ಇಡುವ ಹೆಜ್ಜೆಗಳಿಗೆ ಧರ್ಮದಗೆಜ್ಜೆ ಕಟ್ಟಿ ರಾಜಕೀಯದ ಬಣ್ಣ ಬಳಿದುಅವಾಚ್ಯ ಶಬ್ದಗಳ ಪಲ್ಲಕ್ಕಿಯಲಿಹೂದೋಟದ ತುಂಬೆಲ್ಲ ಮೆರವಣಿಗೆಅದಕ್ಕಾಗಿಯೇ ಜನ್ಮಪಡೆದ ಅಭಿವ್ಯಕ್ತಿಗಳಕೊರಳು ಹಿಸುಕಿ ಉಸಿರು ನಿಲ್ಲಿಸುತ್ತಿದ್ದೇನೆಮರಳಿ ಸೇರುತಿವೆ ಪಂಚಭೂತಗಳ ಗೂಡಿಗೆ! -೩-ಬೆಳಕಿನ ಮೇಲೆ ಭಯದ ಗುರುತುಗಳುರೇಖಾಚಿತ್ರಗಳು ಬರೆಯಲುಬಣ್ಣ ತುಂಬುತಿವೆ ನೋವಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೊಸ ಕಿರು ಚಿತ್ರ “ಆಡು ಆನೆಯ ನುಂಗಿ”

ಆಡು ಆನೆಯ ನುಂಗಿ ಕಿರುಚಿತ್ರವನ್ನು ನೋಡಿ. ತಳಸಮಾಜಗಳು ವ್ಯವಸ್ಥೆಯು ಹೇರಿರುವ ಬಡತನವ ಮೈತುಂಬಾ ಹೊದ್ದು ಬದುಕುತ್ತಿರುವವರು. ಆದರೆ ಬಿಟ್ಟಿಯಾಗಿ ಬರುವ ಹಣ(ದಾನ) ಕ್ಕೆ ಆಸೆ ಪಡುವ ಮತ್ತು ಅದರ ಹಂಗಿನಲ್ಲಿ ತಮ್ಮ ಸ್ವಾಭಿಮಾನವ ಅಡವಿಟ್ಟು ಬದುಕುವವರಲ್ಲ. ರಟ್ಟೆಲಿ ಶಕ್ತಿ ಇರೋ ತನಕ ದುಡಿದು ಉಣ್ಣೋರು ಅವರು. ಹಸಿದು ಮಲಗಿದರೂ ಆತ್ಮಗೌರವ ಮಾರಿಕೊಳ್ಳರು. ಅದಕ್ಕೆ ಹೇಳೋದು ಬಡವನಿಗೆ ಸ್ವಾಭಿಮಾನ ಜಾಸ್ತಿ‌ ಅಂತ. ಅಂತಹ ಸ್ವಾಭಿಮಾನವ ಬಿಟ್ಟು ಅಂಗಲಾಚುವ ಪರಿಸ್ಥಿತಿಯನ್ನ ಹೇಗಾದರೂ ತಂದು ಮತ್ತೆ ತಾವೇ ಸಹಾಯ‌ ಮಾಡುವ ಔದಾರ್ಯವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತನಿಖಾ ಸಮಿತಿಯ ಸದಸ್ಯ. . . . !!!!!: ನಾಗಸಿಂಹ ಜಿ ರಾವ್

”ನಾಗಸಿಂಹ ಏನ್ರಿ ?” ”ಹೌದು ನೀವು ಯಾರು ಸರ್ ?” ”ಪೊಲೀಸ್ ಕಮಿಷನರ್ ಆಫೀಸ್ ಇಂದ ಫೋನ್ ಮಾಡಿದೀನಿ, ನಿಮ್ಮ ಮೇಲೆ ಸರ್ಕಾರೇತರ ಶಾಲೆಯ ಸಂಘದ ಅಧ್ಯಕ್ಷರು ದೂರು ಕೊಟ್ಟಿದ್ದಾರೆ, ನೀವು ಅವರ ಶಾಲೆಗೆ ನುಗ್ಗಿ ಗಲಾಟೆ ಮಾಡಿ, ಮಕ್ಕಳಿಗೆ, ಶಿಕ್ಷಕರಿಗೆ ಬೆದರಿಕೆ ಹಾಕಿದೀರಾ, ಅತಿಕ್ರಮಣ ಪ್ರವೇಶ ಮಾಡಿದ್ದೀರಾ ಅಂತ ದೂರು ಕೊಟ್ಟಿದ್ದಾರೆ, ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ನೀವು ಕಮಿಷನ್ ಆಫೀಸ್ ಗೆ ಬಂದು ಹೇಳಿಕೆ ಕೊಡಿ ” ಫೋನ್ ಕಟ್ ಆಯಿತು. ನನಗೆ ಸಹಜವಾಗಿಯೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗುಸು ಗುಸು ಮಾಡುವವರು ಹೆಂಗಸರಷ್ಟೆಯೇ? ಒಬ್ಬ ಐಲ್ಯಾಂಡರ್‌ನ ಕೇಳಲೇಬೇಕು: ಡಾ.ಅಮೂಲ್ಯ ಭಾರದ್ವಾಜ್

ನಾನು ಹಲವು ಬಾರಿ ಯೋಚಿಸುತ್ತಿರುತ್ತೇನೆ. ಭಾರತೀಯ ಹೆಂಗಸರ ಬಗ್ಗೆ ಯಾವಾಗಲೂ ಗುಸು ಗುಸು ಮಾಡುತ್ತಾರೆ ಎಂಬ ಆಪಾದನೆ ಎಷ್ಟು ಸರಿ ಎಂದು. ಕೆನಡಾಗೆ ಹೋದಾಗಿನಿಂದ ಇದು ನನ್ನ ಮೂರನೇ ಕೆಲಸ. ಹಾಲು ಕೃಷಿಕರ ಹಿತಾಸಕ್ತಿಯನ್ನು ಕಾಯುವ ಇಲ್ಲಿನ ರಾಜ್ಯದ ನಂದಿನಿಯಂತಹ ಸಂಸ್ಥೆಯಲ್ಲಿರುವ ಈ ನನ್ನ ಕೆಲಸ ನನಗೆ ಅತಿ ಪ್ರಿಯವಾದದ್ದು. ಹಾಲು ಉತ್ಪಾದಕರಿಗೆ ಇಲ್ಲಿ ಎರಡು ರೀತಿಯ ವ್ಯವಸ್ಥೆಗಳಿವೆ – ಕ್ರೆಡಿಟ್ ಮತ್ತು ಕೋಟಾ ವ್ಯವಸ್ಥೆ. ಈ ಎರಡೂ ವ್ಯವಸ್ಥೆಗಳು ಹಾಲು ಮಾರಾಟದ ಕೋಟಾವನ್ನು ನಿರ್ವಹಿಸಲು ಸಹಾಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವಿತೆಗಳು: ಎನ್. ಶೈಲಜಾ, ಹಾಸನ

ಕದಲಿಕೆ ನಿನ್ನದೊದು ಸಣ್ಣಸಾಂತ್ವನಕ್ಕಾಗಿಅದೆಷ್ಟು ಕಾದಿದ್ದೆನಿನಗದರ ಅರಿವಿತ್ತೇ ನನ್ನ ದಿಮ್ಮನೆ ಭಾವನೋಡಿ ಹೊರಟುಬಿಟ್ಟೆಯಲ್ಲ ದೂರ ಹೋಗುವಾಗ ಹಾಗೆನನ್ನ ಕಂಗಳದಿಟ್ಟಿಸಿದ್ದರೆಕಾಣುತ್ತಿತ್ತುನನ್ನ ಹಂಬಲಿಕೆತೆಳ್ಳನೆ ಕಣ್ಣೀರಪಸೆಯ ಆರ್ದ್ರತೆ ನಿನ್ನದೊಂದು ಕದಲಿಕೆಗೆನನ್ನೊಳಗಿನಭಾವಗಳ ಸಡಿಲಿಕೆ ಒಮ್ಮೆ ಕಣ್ಣಲ್ಲಿ ಕಣ್ಣುನೆಟ್ಟಿದ್ದರೆ ಸಾಕಿತ್ತುನೋಟ ಹೇಳುತ್ತಿತ್ತುನೀನು ಬೇಕೆಂದು ಕೇಳಿಸಿಕೊಳ್ಳುವತಾಳ್ಮೆ ಇಲ್ಲದ ನೀನುಹೇಳುವ ವಾಂಛೆಇಲ್ಲದ ನಾನುಆಹಾ ಅದೆಂತಹಜೋಡಿ ನಮ್ಮದು. ಎದೆಯ ಗೂಡಿನೊಳಗೆಬಚ್ಚಿಟ್ಟಿದ್ದೆ ಅನುರಾಗಆದರೆ ನಿನಗೆ ಕಂಡಿದ್ದುಬಿರು ವದನ ಮಾತ್ರ ಹುಡುಕುವಪ್ರಾಮಾಣಿಕತೆನಿನ್ನಲ್ಲಿದ್ದಿದ್ದರೆಜೋಡಿ ಹಕ್ಕಿಯಾಗಿಸುತ್ತಾಡ ಬಹುದಿತ್ತುಬಾನ ತುಂಬಾ ಆದರೀಗ ರೆಕ್ಕೆಮುರಿದಹಕ್ಕಿಯಂತೆನಿಂತಲ್ಲೇಸುತ್ತುತ್ತಾಚಡಪಡಿಸುವದುಸ್ಥಿತಿ * ವಿಕಾರದ ಮರಳು ಇದಿರು ಹಳಿಯುವುದುಬೇಡವೆ ಬೇಡತನ್ನ ತಾ ಬಣ್ಣಿಸಿಕೊಳ್ಳುವುದಂತುಇಲ್ಲವೆ ಇಲ್ಲಈ ಅಂತರಂಗದಬಹಿರಂಗದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಿರುಕವಿತೆಗಳು: ಚಾರುಶ್ರೀ ಕೆ ಎಸ್

ಪ್ರೀತಿ ಎಷ್ಟು ಪ್ರೀತಿ, ಎಷ್ಟ್ ಎಷ್ಟೋ ಪ್ರೀತಿ,ಸತ್ಯವೇ ಕಾಣುವ ಪ್ರೀತಿಯಾಗಿ,ನಂಬಿಕೆಯ ಅನಿವಾರ್ಯತೆ ಇಲ್ಲದ ಪ್ರೀತಿ,ಬಯಕೆಗಳ ಮೀರಿ ಇರುವ ಪ್ರೀತಿ,ಪರರ ಕಾಡದ, ಎನ್ನ ನೋಯಿಸದ,ಗೌರವದ ಶ್ರೇಣಿ ಇದು ಪ್ರೀತಿ,ಶಾಂತಿಯ ಧರಿಸಿದ ಪ್ರೀತಿ,ಬದುಕನ್ನ ಸ್ವೀಕರಿ‌ಸಿ ಅದುವೇ,ಬಯಲೆಂದು ಅರಿತ ಪ್ರೀತಿ,ಅರಿತು ಓಡುತಲಿರಲು,ಜಂಗಮನಲ್ಲವೆ ಶರಣಾಗತಿಯೆಅಧಮ್ಯ ಶಕ್ತಿಯ ಮೇಲಿನ ಪ್ರೀತಿ. * ತರಂಗ ರೂಪ ಬೆಲೆಯುಳ್ಳ ಚುಕ್ಕಿಗಳು,ಬಗೆ ಬಗೆಯ ಜೋಡಿಗಳ,ಸುಂದರ ಮಿಲನ ನಾ,ನನ್ನೀ ಗಣಿತ ಕಾರ್ಯಕ್ಕೆ,ಪ್ರಕ್ಷೇಪಣಗೆ ಜಾಗ ಉಂಟು,ಹೊರತೆಗೆಯುವಿಕೆಯು ಸಾಧ್ಯ,ಅಂಶಗಳ ಧರಿಸುವ ಭರದಲ್ಲಿ,ಸಾಗರದ ತೀರವ,ಮುಟ್ಟಿ ಬಂದಿದ್ದೇ, ಬಂದಿದ್ದು,ಪ್ರೀತಿಯ ಅಂಶಗಳ ತೊಟ್ಟ ನಂತರ,ಕತೃ, ಕರ್ಮ, ಕ್ರಿಯೆ,ಎಲ್ಲಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗುಂಡೂಮಾಮನ ಜಾದು ಮತ್ತು ಇಕ್ಕಳ: ಡಾ. ಹೆಚ್ ಎನ್ ಮಂಜುರಾಜ್

ಪ್ರೌಢಶಾಲೆಯಲ್ಲಿ ಓದುವಾಗ ಕೆ ಎಸ್ ನರಸಿಂಹಸ್ವಾಮಿಯವರ ‘ಇಕ್ಕಳ’ ಎಂಬೊಂದು ಪದ್ಯವಿತ್ತು. ಮೇಡಂ ಪಾಠ ಮಾಡುವಾಗ ಅದೇನು ಹೇಳಿದರೋ ಆಗ ತಲೆಗೆ ಹೋಗಿರಲಿಲ್ಲ. ಆದರೆ ನಮ್ಮ ಮನೆಯ ಅಡುಗೆಮನೆಯಲ್ಲೊಂದು ಇಕ್ಕಳ ಇತ್ತು. ಆ ಪದ್ಯಪಾಠ ಓದುವಾಗೆಲ್ಲ ನನಗೆ ಅದೊಂದೇ ನೆನಪಾಗುತ್ತಿತ್ತು. ಮನೆಮಂದಿಗೆಲ್ಲಾ ಆ ಇಕ್ಕಳದ ಮೇಲೆ ಬಲು ಅಕ್ಕರೆ. ಏಕೆಂದರೆ ಕೆಳಮಧ್ಯಮವರ್ಗದವರಾದ ನಮ್ಮ ಮನೆಗೆ ಬಂದಿದ್ದ ಮೊತ್ತ ಮೊದಲ ವಿದೇಶಿ ವಸ್ತುವದು. ನಮ್ಮ ತಂದೆಯ ಸೋದರಮಾವ ಚಿಕ್ಕಂದಿನಲ್ಲೇ ಮುಂಬಯಿಗೆ ಓಡಿ ಹೋಗಿ ಅಲ್ಲೆಲ್ಲೋ ಇದ್ದು, ಏನೇನೋ ವಿದ್ಯೆಗಳನ್ನು ಕಲಿತು, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಮ್ಮ ಮಕ್ಕಳು.. ನೀವೇ ಹೊಣೆ !!!: ನಾಗಸಿಂಹ ಜಿ ರಾವ್

‘ ಸಾರ್ ನಮ್ಮ ಮಕ್ಕಳನ್ನ ಶಾಲೆಯಿಂದ ಹೊರಗಡೆ ಹಾಕಿದ್ದಾರೆ, ಸಹಾಯ ಮಾಡಿ ಸಾರ್ ”ಹೀಗೆ ಪೋಷಕರ ಕರೆ ಬಂತು, ಸುಮಾರು ಎಂಟು ಜನ ಏಳನೇ ತರಗತಿಯ ಮಕ್ಕಳನ್ನು ಸರಿಯಾಗಿ ಓದು ಬಾರದವರು ಎಂದು ವಸಂತನಗರದ ಸರಸ್ವತಿ ಶಾಲೆಯಿಂದ ಹೊರಗಡೆ ಕಳಿಸುವ ತೀರ್ಮಾನವನ್ನ ಶಾಲೆಯ ಆಡಳಿತ ಮಂಡಳಿ ಮಾಡಿದ್ದರು. ಪೋಷಕರನ್ನು ಕರೆದು ಟಿಸಿ ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದರು. ಕೆಲವು ಪೋಷಕರಿಗೆ ಟಿಸಿ ಕೊಟ್ಟುಬಿಟ್ಟಿದ್ದರು. ಈ ಮಕ್ಕಳಿಗೆ ಓದಲು ಬರುವುದಿಲ್ಲ ಎಂದು ಸರಸ್ವತಿ ಶಾಲೆಯಿಂದ ಹೊರಗಡೆ ಹಾಕಿದ್ದಾರೆ ನಾವೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಮ್ರಾವತಿಯ ಗಂಡ: ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ

“ಮುಂಗಾಲಿನ ಮ್ಯಾಲೆ ನಡೆಯೋ ಹೆಂಗ್ಸು ಮೂರೊಲೇ ಗುಂಡು ಒಂದ್ಕಡೆ ಇಕ್ಕಲ್ಲ, ಯಿಟ್ನೊತ್ಗೇ ಒಲೆ ಕಿತ್ತಾಕಿ ಮುಂಗೈನ ತಿಕುಕ್ಕೆ ಸೀಟ್ಕಂಡು ಮುಂದ್ಲೂರಿಗೆ ವೋತಾಳೆ, ನೀನು ಅಂಗೇ ಕಣೇಳೇ ಬಿತ್ರೀ ಆಹ ಹ ಹಾ… ಹೆಂಗ್ ವನಿತಾಳ್ನೋಡು ಇವುಳ್ ವೈಯ್ಯಾರುಕ್ಕೆ ನನ್… ” ಮಲ್ಲಕ್ಕ ಕುಂತಲ್ಲೇ ಕೊಸರಾಡತೊಡಗಿದಳು, ಅವಳ ಆವೇಶ, ಆಕ್ರೋಶ ಎಷ್ಟಿತ್ತೆಂದರೆ ಅವಳು ಕುಂತಿರೋ ಜಾಗಕ್ಕೆ ಗಾರೆ ಬಳಿಯದೇ ಬರೀ ಮಣ್ಣಿನ ನೆಲವಾಗಿದ್ದಿದ್ರೇ ಅವಳ ಕೊಸರಾಟಕ್ಕೆ ಅವಳ ಕುಂಡಿಯಷ್ಟಗಲವೂ ನೆಲ ತೂತು ಬಿದ್ದು ನೆಲದೊಳಗೆ ವೊಲ್ಟೋಗಿರೋಳು, ಇವಳ ಕೊಸರಾಟ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಾತಿ ಜಾನಪದ ಬೇರೆ ಬೇರೆ ಅಲ್ಲ ಎನ್ನುವ “ದಲಿತ ಜಾನಪದ”: ಡಾ. ನಟರಾಜು ಎಸ್ ಎಂ

ಮೊಗಳ್ಳಿ ಗಣೇಶ್ ಅವರದು ಕನ್ನಡ ಕಥಾಲೋಕದಲ್ಲಿ ಬಹು ದೊಡ್ಡ ಹೆಸರು. ೧೯೯೨ ರಲ್ಲಿ ತಮ್ಮ ಮೂವತ್ತನೇ ವಯಸ್ಸಿಗೆ ಮೊದಲ ಕಥಾಸಂಕಲನ ಪ್ರಕಟಿಸಿದ್ದ ಮೊಗಳ್ಳಿಯವರು ೨೦೨೪ ರ ತಮ್ಮ ಅವರತ್ತೆರಡನೇ ವಯಸ್ಸಿನವರೆಗೂ ಅಂದರೆ ಕಳೆದ ಮೂವತ್ತೆರಡು ವರ್ಷದಲ್ಲಿ ನವತ್ತೇಳಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಬರಹಗಳು ಕಥೆಗಳಾಗಿ, ಕಾದಂಬರಿಗಳಾಗಿ, ಸಂಸ್ಕೃತಿ ಚಿಂತನೆಗಳಾಗಿ, ಕಾವ್ಯಗಳಾಗಿ, ಬೀದಿ ನಾಟಕಗಳಾಗಿ, ಸಂಪಾದಿತ ಕೃತಿಗಳಾಗಿ ಕನ್ನಡ ಸಾರಸ್ವತ ಲೋಕಕೆ ಸೇರ್ಪಡೆಯಾಗಿವೆ. ಅವರ ಸಾಹಿತ್ಯ ಸೇವೆಗೆ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ೨೦೧೭ ರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೇಷ್ಟ್ರು ರವಿ, ರಾಜಿ ಮತ್ತು ಮಗ ರವಿರಾಜ: ಲಿಂಗರಾಜು ಕೆ ಮಧುಗಿರಿ

ಅಗ್ರಹಾರಕ್ಕೆ ವರ್ಗವಾಗಿ ಬಂದ ರವಿಯನ್ನು, “ಆ ಶಾಲೆಯನ್ಯಾಕೆ ತೆಗೆದುಕೊಂಡೆ ಗುರು? ನೆಕ್ಸ್ಟ್ ಅಕಾಡೆಮಿಕ್ ಇಯರ್‌ಗೆ ನೀನು ಹೆಚ್ಚುವರಿ ಆಗೋದು ಪಕ್ಕಾ. ಆ ಹೆಸ್ರಿಗೂ ಆ ಊರ್ಗೂ ಸಂಬಂಧಾನೇ ಇಲ್ಲ. ಊರಿನ ತುಂಬೆಲ್ಲಾ ಇರೋದು ಮಾದಿಗ್ರು, ಹೊಲೇರು, ಕುರುಬ್ರು, ಮಡಿವಾಳ್ರೇ. ಗೊತ್ತಲ್ಲಾ ಅವ್ರೆಂಗೆ ಅಂತಾ?”, ಹೀಗೆ ತುಟಿಗೆ ಇಷ್ಟಿಷ್ಟೇ ವೋಡ್ಕಾನಾ ಮುತ್ತಿಡ್ತಾ, ರವಿಯ ಕಸಿನ್, ಕುಮಾರ ಮುಂದಾಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸಿದ. ರವಿ, ಅಗ್ರಹಾರದ ಹೆಸರಿನಿಂದ ಹಾಗೂ ಕೌನ್ಸೆಲಿಂಗ್ ನಲ್ಲಿ ಉಳಿದ ಒಂದೇ ಒಂದು ಶಾಲೆ ಇದಾಗಿದ್ದುದರಿಂದ ಅನಿವಾರ್ಯವಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಿರು ಕತೆಗಳು: ಸುಜಾತಾ ಎಸ್ ಹೆಗಡೆ ದಂಟಕಲ್

ಅಂತರ್ಗತ “ಲೇ ಭಾವನಾ ಎಲ್ಲೆ ಇದ್ದೀಯಾ ? ನನಗೆ ಕೆಲಸಕ್ಕೆ ಹೊರಡೋಕೆ ಸಮಯ ಆಯ್ತು. ಚಿನ್ನುಗೆ ಬೇರೆ ಸಮವಸ್ತ್ರ ಹಾಕಿಲ್ಲಾ. ಅವನನ್ನ ಶಾಲೆಗೆ ಬಿಟ್ಟು ನಾನು ತಲುಪೋದು ಯಾವಾಗಾ ?. ಹರ್ಷ ಏರು ಧ್ವನಿಯಲ್ಲಿ ಕೂಗಿದಾಗಲೇ ವಾಸ್ತವಕ್ಕೆ ಬಂದಳು. ಅವಸರವಸರವಾಗಿ ಉಕ್ಕುತ್ತಿದ್ದ ಹಾಲಿನ ಪಾತ್ರೆಯ ಉರಿಯನ್ನು ನಂದಿಸಿದಳು. ಅಡಿಗೆ ಮನೆಯ ಬಾಗಿಲಿಗೆ ಬಂದ ಪತಿಯನ್ನು ಕಂಡು ಮುಖ ಬಾಡಿಸಿಕೊಂಡಳು. ಕಣ್ಣಾಲಿಗಳು ತುಂಬಿಕೊಂಡವು. ಭಾವುಕಳಾದ ಹೆಂಡತಿಯನ್ನು ಕಂಡು ಸ್ವಲ್ಪ ಮೆತ್ತಗಾದ. “ಇದೇನೆ ಭಾವನಾ ? ಇಷ್ಟಕ್ಕೆಲ್ಲ ಯಾರಾದ್ರು ಕಣ್ಣೀರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಿಕ್ಷಣ, ಉದ್ಯೋಗ ಮತ್ತು ನೈತಿಕತೆ: ಪರಮೇಶ್ವರಿ ಭಟ್

ಎಲ್ಲರೂ ತಿಳಿದಂತೆ ಶಿಕ್ಷಣ‌ ಮತ್ತು ಉದ್ಯೋಗ ಒಂದಕ್ಕೊಂದು ಸಂಬಂಧಪಟ್ಟ ವಿಷಯಗಳು. ಉತ್ತಮ ಶಿಕ್ಷಣ ಉತ್ತಮ ಉದ್ಯೋಗಕ್ಕೆ, ಉತ್ತಮ ಉದ್ಯೋಗವು ಉತ್ತಮ ಜೀವನ ಮಟ್ಟಕ್ಕೆ ಕಾರಣವಾಗುತ್ತದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಜೀವನ ಒದಗಿಸಿಕೊಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುತ್ತಾರೆ. ಆದರೆ ಹಾಗೆ ಮಾಡುವಾಗ ಜೀವನಕ್ಕೆ ಅತೀ ಅಗತ್ಯವಾದ ನೈತಿಕತೆಯ ಬಗ್ಗೆ ಗಮನ ಹರಿಸುವುದಿಲ್ಲ. ಹಾಗೆಂದು ಅವರು ವಾಮ‌ಮಾರ್ಗ ಅನುಸರಿಸುತ್ತಾರೆ ಅಂತ ಅರ್ಥವಲ್ಲ. ಅವರ ಗಮನ ಮಕ್ಕಳು ಗಳಿಸುವ ಅಂಕಗಳಿಗೆ. . ಯಾಕೆಂದರೆ ಅಂಕಗಳೇ ಬುದ್ಧಿವಂತಿಕೆಯ ಅಳತೆಗೋಲು ಅಂತ‌ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೆನಡಾದಲ್ಲಿ ಒಂದು ಸಂಜೆ

ಕೆನಡಾದಲ್ಲಿ ಇರುವ ಮಗನ ಮನೆಯಲ್ಲಿ ಆ ಸಂಜೆ ಅದಾಗ ತಾನೇ ಬರುತ್ತಿದ್ದ ತುಂತುರು ಮಳೆ ನಿಂತಿತ್ತು. ಆದರೆ ಬೆಳಗಿನಿಂದ ರಸ್ತೆ ಪೂರಾ ಚೆಲ್ಲಿದ್ದ ಮಂಜು ಮತ್ತಷ್ಟು ಗಟ್ಟಿಯಾಗಿ ಕಾಲಿಟ್ಟರೆ ಜಾರುವ ಸ್ಥಿತಿಯನ್ನು ತಲುಪಿತ್ತು. ರಸ್ತೆಯಲ್ಲಿ ವಿರಳವಾಗಿ ಅಲ್ಲೊಂದು ಇಲ್ಲೊಂದು ವಾಹನಗಳು ಚಲಿಸುತ್ತಿದ್ದವು. ಗಟ್ಟಿಯಾದ ಮಂಜನ್ನು ಸರಿಸಲು ಟ್ರಕ್ಕುಗಳಲ್ಲಿ ‘ ರಾಕ್ ಸಾಲ್ಟ್ ‘ ಲವಣವನ್ನು ರಸ್ತೆ ತುಂಬಾ ಸುರಿಯುತ್ತಿದ್ದರು. ರಾಕ್ ಸಾಲ್ಟ್ ನಮ್ಮಲ್ಲಿ ಸಿಗುವ ಉಪ್ಪಿನಂತೆ ಲವಣದ ರೂಪದಲ್ಲಿ ಇದ್ದು ಗಾತ್ರದಲ್ಲಿ ದೊಡ್ಡ ಸ್ಪಟಿಕಾಗಳಾಗಿ ದೊರೆಯುತ್ತದೆ. ನೇರಳೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂಗು ಸುಂದರಿಯೂ ಕಪ್ಪು ಹುಡುಗನೂ: ಎಂ ನಾಗರಾಜ ಶೆಟ್ಟಿ

ಹಾರ ಹಾಕಿ, ಧಾರೆ ಎರೆದು ಅಕ್ಷತೆ ಕಾಳು ಹಾಕುವುದನ್ನೇ ಕಾದಿದ್ದ ಅವಸರದ ಅನೇಕ ಆಮಂತ್ರಿತರು ಶುಭಕೋರಲು ಸಭಾಂಗಣದಿಂದ ಎದ್ದು ವೇದಿಕೆಯ ಎಡಭಾಗದಲ್ಲಿ ಒತ್ತೊತ್ತಾಗಿ ನೆರೆದುದನ್ನು ಕಂಡು ʼ ಸ್ವಲ್ಪ ತಾಳಿ ʼ ಎಂದು ಸುಧಾರಿಸಿಕೊಂಡು ಬರಲು ಮದುಮಕ್ಕಳನ್ನು ವೇದಿಕೆಯ ಪಕ್ಕದ ಕೋಣೆಗಳಿಗೆ ಕಳಿಸಿ ಕೊಡಲಾಯಿತು. ಹೆಚ್ಚೆಚ್ಚು ಜನ ಸೇರುತ್ತಿದ್ದಂತೆಲ್ಲಾ ಸರತಿಯ ಮುಂದಿದ್ದ ಆತುರಗಾರರು ʼ ಬೇಗ ಬರಕ್ಕೆ ಹೇಳಿ ʼ ಎಂದು ತಾಳ್ಮೆಗೆಟ್ಟು ಕೂಗುವುದನ್ನು ಕಂಡು, ಜನ ಅವಸರ ಮಾಡುತ್ತಿದ್ದಾರೆ ಬೇಗ ಬರಬೇಕಂತೆ ಎಂದು ಮದುಮಕ್ಕಳಿಗೆ ಹೇಳಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕಲರ್ ಕಲರ್” ಮಾತುಗಳು ಮತ್ತು ಮಂಗರಾಯ: ಡಾ. ಅಮೂಲ್ಯ ಭಾರದ್ವಾಜ್

ಹುಟ್ಟಿದ ಕೂಡಲೇ ಬಿಳಿಯ ಜಗತ್ತು ಕಂಡಿದ್ದರೇ ಹೀಗಾಗುತ್ತಿರಲಿಲ್ಲವೇನೋ! ಆದರೆ ಕಂಡದ್ದು ಗಡಸು ಬ್ರೌನ್. ನಾವು ಹುಟ್ಟಿದಾಗಿನಿಂದ ಜನರು ನಮ್ಮ ಕಲರ್ಗಳ ನಡುವೆ ನಾವು ಎಷ್ಟು ಬಿಳಿ ಎಂದದ್ದೇ ಹೆಚ್ಚು ಕೇಳಿದ್ದು. ಆದರೆ ದೇಶ ಬಿಟ್ಟು ದೇಶಕ್ಕೆ ಬಂದ ನಂತರ ಆ ವೈಭವೀಕೃತ ಜಗತ್ತು ಹರಿದು ಬಹಳ ತಿಂಗಳುಗಳೇ ಆಗಿಹೋಗಿವೆ. ಅಂದು ನಾನು ಆಫೀಸಿನಲ್ಲಿದ್ದೆ. ಮಧ್ಯಾಹ್ನ ಊಟ ಮುಗಿಸಿ ಕುಳಿತಿದ್ದೆ. ದಿಢೀರನೆ ಮಗಳ ಸ್ಕೂಲಿನಿಂದ ಒಂದು ಕರೆ ಬಂತು.“ಹಲೋ!” ಎಂದ ಕೂಡಲೆ ಆ ಬದಿಯಿಂದ ಶಾಲೆಯ ಪ್ರಾಂಶುಪಾಲರು. ವಿಷಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತಾಕತ್ತಿದ್ರೆ ಒಂದಿನ ಕ್ಲಾಸ್ ಮಾಡಿ ..!!!!!!!!: ನಾಗಸಿಂಹ ಜಿ ರಾವ್

ಶಾಲೆಗಳಲ್ಲಿ ದೈಹಿಕ ಶಿಕ್ಷೆ ಇಂದಾಗಿ ಇಡೀ ದೇಶದಲ್ಲಿ ಸುಮಾರು ೩೦% ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಅನ್ನೋ ಒಂದು ಕಹಿ ಸತ್ಯವನ್ನ ರಾಷ್ಟ್ರೀಯ ಮಕ್ಕಳ ರಕ್ಷಣಾ ಆಯೋಗ ತನ್ನ ಒಂದು ವರದಿಯಲ್ಲಿ ತಿಳಿಸಿತ್ತು. ಶಾಲೆಗಳಲ್ಲಿ ದೈಹಿಕ ಶಿಕ್ಷೆ ನೀಡದೆ ಹೇಗೆ ಪಾಠ ಮಾಡಬಹುದು ಅನ್ನುವ ಕೈಪಿಡಿಯನ್ನು ಸಿದ್ದಪಡಿಸಿ ಪ್ರತಿ ರಾಜ್ಯದ ಶಾಲೆಗಳಲ್ಲಿ ತರಬೇತಿ ನೀಡಿ ಎಂದು ತಿಳಿಸಿತ್ತು. ಅದೂ ಅಲ್ಲದೆ ಕೈಪಿಡಿಯನ್ನು ಕುರಿತು ಶಿಕ್ಷಕರಿಗೆ ತರಬೇತಿ ನೀಡಲು ಹೈದರಾಬಾದ್‌ನಲ್ಲಿ ತರಬೇತುದಾರರ ತರಬೇತಿಯನ್ನು ಆಯೋಗ ಏರ್ಪಡಿಸಿತ್ತು. ಮೂರುದಿನಗಳ ಈ ತರಬೇತಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಿಂಕ್ರ: ಶಿವಕುಮಾರ ಸರಗೂರು

ಚಿಂಕ್ರ ಎಲ್ಲೊದ್ನಡ ನನ್ನ ಕೂಸು ಅಂತಿದ್ದಅವ್ವನ ಬೋ ಪ್ರೀತಿ ಮಗ್ನ ಮೇಲಿತ್ತುಒಂದ್ಗಳ್ಗಾದ್ರು ಎಡ್ಬಿಡದ ಜೀವ ಅದುಅವಳ್ಗ ಇವ್ನ್ಬಿಟ್ರಾ ಇನ್ಯಾರಿದ್ದರು?ಒಂದ್ಪ್ರಾಣವಾಗಿ ಜೋಕಾಗಿದ್ರು. ಬೆಳಿ ಬೆಳಿತ ಚೂರಾದ್ರು ಕಲ್ತೊಳ್ಳಿ ಅಂತಸ್ಕೂಲ್ಗ ಸೇರುಸ್ಬುಟ್ರಾ ಸರೋಯ್ತದಇಂಕ್ರ ಬುದ್ದಿ ತಲ್ಯಾಗ ಒಕ್ಬುಟ್ಟಂದ್ರನನ್ಮಗ ಪರಪಂಚ ಗ್ಯಾನ ತಿಳ್ಕಂಡುಪಸಂದಾಗಿ ಬೆಳ್ದ್ಬುಡ್ತಾನ ಅನ್ಕೊಂಡ್ಳು. ಗೌರ್ಮೆಂಟೌವ್ರು ಏನೇಳ್ಕೊಟ್ಟಾರು?ಪ್ರವೀಟ್ಗಾದ್ರು ಹಾಕ್ಬಾರ್ದ ಮಂಕೆಅಂತೇಳ್ದ ನೆರ್ಮನೆ ಗೌರಿ ಮಾತುಬಾಳ ಹಿಡಿಸ್ಬುಡ್ತು ತಲೆಚಿಟ್ಟಿಡಿತುಸಾಲಸೋಲ ಮಾಡಿ ಸೇರ್ಸ್ಬುಡದ.! ಅವ್ನ್ಗೇನೊ ಅವರ್ರಿಂಗ್ಲೀಸು ಹಿಡೀಸ್ದು.ಗೀಚಿ ಪಾಚಿ ಕಲಿಯಾಕ್ ಸುರ್ಮಾಡ್ದ.ಯಾರೊಂದ್ಗು ಮಾತಾಡ್ನಾರ. ಸಂಕೋಚಕಲ್ತ್ರುವ ಹೇಳೋಕು ಮುಜ್ಗರ ತಪ್ಪಾದ್ದು ಅಂತ.ಆದ್ರೂ ಅವ್ರವ್ವನ ಮೆಚ್ಸಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೇಮದ ಪರಿಭಾಷೆ: ದೇವರಾಜ್ ಹುಣಸಿಕಟ್ಟಿ

ಪ್ರೇಮದ ಪರಿಭಾಷೆ ಪ್ರೇಮದ ಪರಿಭಾಷೆ ಏನುಇಮ್ರೋಜ್ ಹೇಳಿಲ್ಲಿ…. ಇನ್ನೇನಿದೆ…ಕಂಬನಿಗೆ ತಂಗಾಳಿ ಸೋಕಿಮೋಡವಾಗಿ ಸುರಿವ ಮಳೆಯಂತೆ….. ಅಷ್ಟೇ ಅಂದನಂತೆ.. ಇಮ್ರೋಜ್ ಅಷ್ಟೇ ನಾ ಅಂದ್ರೇ…. ಇಲ್ಲಾ ಕೇಳಿಲ್ಲಿ.. ಭೂಮಿ ಭಾರ ವಿರಹದಉರಿಯ ಹೊತ್ತು..ಕ್ಷಣ ಕ್ಷಣವು ಯುಗದಂತೆ ಕಳೆದು ಭೂಮಿಗೆ ಬಿದ್ದ ಮೇಲೂ.. ಅವಳು ತಿರಸ್ಕರಿಸಿದರೆಕಂಬನಿ ಮಿಡಿಯದೆ..ಎದೆ ಭಾರ ಮಾಡಿಕೊಳ್ಳದೆ ನಗು ಮುಖವ ತೋರಿತುಟಿಯಲ್ಲಿ ಬಿಕ್ಕಳಿಕೆ ಕುಡಿದು…ಕಣ್ಣಲ್ಲಿ ಹುಸಿ ಹೊಳಪು..ಮುಡಿದು…ಕಣ್ಣ ಕಾಡಿಗೆಯಲ್ಲಿ ಮುಚ್ಚಿನಗುವ ಬಡಪಾಯಿ ಪ್ರೇಮಿಯಂತೆಅಷ್ಟೇ ಅಂದ ಅವ್ಹ ಇಮ್ರೋಜ್ ಮತ್ತೆ….ಹೆಚ್ಚೇನಿಲ್ಲ..ಭೂಮಿ ಆಗಸ ಚುಂಬಿಸುವುದಕಂಡು..ಮುಖದ ತುಂಬ ಹಾಲ್ ಬೆಳಕ ಚೆಲ್ಲಿ..ಶರಧಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಂದ್ರಶೇಖರ ಕಂಬಾರರ “ಕರಿಮಾಯಿ “ಮತ್ತು ಇತರೆ ಕಾದಂಬರಿಗಳು: ರಾಘವೇಂದ್ರ ಅಡಿಗ ಎಚ್ಚೆನ್.

1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನಿಸಿದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಡಾ. ಚಂದ್ರಶೇಖರ ಕಂಬಾರರು ಹಲವು ಕ್ಷೇತ್ರಗಳಲ್ಲಿ ಪರಿಣತರು. ಅಸಂಖ್ಯಾತ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡವರು. ಸಾಹಿತ್ಯ, ಸಂಗೀತ, ರಂಗಭೂಮಿ,ಸಿನಿಮಾ ಎಲ್ಲವೂ ಅವರ ತೆಕ್ಕೆಗೆ ಸಿಕ್ಕಿ ಹೆಜ್ಜೆ ಗುರುತನ್ನು ಮೂಡಿಸಿಕೊಂಡವು. ಧಾರವಾಡದಲ್ಲಿ ಎಂ.ಎ ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದು ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-91) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೊಟ್ಟ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ