ಪಂಜು ಕವಿತೆ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಸವಿರಾಜ್ ಆನಂದೂರು ಅವರ ಕವಿತೆ
ಏಸುವಿನ ಬೊಂಬೆ ಕಳೆದ ವರ್ಷದ ಜಾತ್ರೆಯಲ್ಲಿ ಮಗಳಿಗೊಂದು ಕ್ರಿಸ್ತನ ಬೊಂಬೆ ಕೊಡಿಸಿದ್ದೆ ಮಕ್ಕಳ ಮುತುವರ್ಜಿ ನಿಮಗೇ ಗೊತ್ತಲ್ಲತಿಂಗಳು ಕಳೆಯಲಿಲ್ಲ, ಕ್ರಿಸ್ತನ ಶಿಲುಬೆ ಮುರಿಯಿತುಅರ್ಧ ದಿನ ಅತ್ತಳು, ಮತ್ತೆಬುದ್ಧನ ಬೊಂಬೆಯ ಬೋಧಿಮರ ಮುರಿದುಏಸುವಿನ ಬೆನ್ನಿಗೆ ಮೆತ್ತಿದಳು. ಮರುವಾರ ಕ್ರಿಸ್ತನ ಕಾಲಿಗೆ ಜಡಿದಿದ್ದ ಮೊಳೆಗಳು ಸಡಿಲವಾದವುಮಾಡ್ತೀನಿ ಇದ್ಕೆ ಅಂದವಳೇ ವಿವೇಕಾನಂದರ ಕ್ಯಾಲೆಂಡರಿನಮೊಳೆ ಕಿತ್ತು ಕ್ರಿಸ್ತನ ಕಾಲಿಗೆ ಕೂಡಿಸಿದಳು. ಇನ್ನೊಮ್ಮೆ ಬೊಂಬೆಯ ತುಂಡುಬಟ್ಟೆ ಹರಿಯಿತುಅರೆರೇ! ಗಾಂಧಿತಾತನ ಲಂಗೋಟಿ ಹರಿದುಏಸುವಿನ ಮಾನ ಮುಚ್ಚಿದಳು. ಈಗ ಷೋಕೇಸಿನ ಒಂದೊಂದು ಬೊಂಬೆಯಒಂದೊಂದು ಅಂಗ ಮುರಿದಿದ್ದಾಳೆಎಲ್ಲವೂ ಏಸುವಿನ … Read more