“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 5)”: ಎಂ.ಜವರಾಜ್

-೫- ಒಂದ್ಸಲ ನಮ್ಮಣ್ಣ ಕೆಲಸದ ಅಪಾಯಿಂಟ್ಮೆಂಟ್ ಲೆಟರಿಗೆ ಕಾಯ್ತಾ ಇದ್ದ. ಟ್ರೈನಿಂಗ್ ಮಾಡಿ ಎರಡು ವರ್ಷವಾದರು ಕೆಲಸದ ಆಸೆಯಿಂದ ಇದ್ದವನಿಗೆ ಅಪಾಯಿಂಟ್ಮೆಂಟ್ ಲೆಟರ್ ಬರಲೇ ಇಲ್ಲ. ಅದೇ ಹೊತ್ತಿಗೆ ಸರ್ಕಾರದ ಕೃಷಿ ನೀರಾವರಿ ಯೋಜನೆಯಡಿ ಬಲದಂಡೆ ನಾಲೆ ಕೆಲಸ ಶುರುವಾಗಿತ್ತು. ಇದರಿಂದ ನಮಗಿದ್ದ ಎರಡು ಮೂರು ಎಕರೆ ಡ್ರೈಲ್ಯಾಂಡಿಗೆ ನೀರು ಸಿಕ್ಕಿ ಭತ್ತದ ಫಸಲು ಕಾಣುವ ಹಂಬಲದಿಂದ ರಂಗೋಲಿ ಕಲ್ಲಿನ ಹೊಲ ಅಗೆದು ಮಟ್ಟ ಮಾಡುವ ಕೆಲಸವೂ ನಡೆಯುತ್ತಿತ್ತು. ಇದರ ದೆಸೆಯಿಂದ ಅಪ್ಪ ಮತ್ತು ಇಬ್ಬರು ಅಣ್ಣಂದಿರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೆಟ್ಟದ ಭೂತದ ಕತೆ ಮೇದರದೊಡ್ಡಿ ಹನುಮಂತ

ನಮ್ಮೂರು ಕಾವೇರಿ ತೀರದಲ್ಲಿ ಬರುವ ಸುಮಾರು ನಲವತ್ತು ಮನೆಗಳಿರುವ ಪುಟ್ಟ ಊರು. ಊರಿನ ಸುತ್ತೆಲ್ಲಾ ಬಂಡೆಗಳೇ ಸುತ್ತುವರಿದಿರುವ ಕಾರಣ ಊರಿನ ಯಾವ ಕಡೆ ನಿಂತು ಪೋಟೋ ಕ್ಲಿಕ್ಕಿಸಿದರೂ ಸಹ ಯಾವುದೋ ಕಾಡಿನಿಂದ ಪೋಟೋ ತೆಗೆದಂತೆ ಕಾಣುವುದು ವಿಸ್ಮಯವೇ ಸರಿ.ಸಾರಿಗೆ ಸಂಪರ್ಕವಿಲ್ಲದ ಕಾರಣ ಸಾಕ್ಷರತೆಯ ಪ್ರಮಾಣ ಕಡಿಮೆಯಿದೆ. ಹಾಗಾಗಿ ನಾನು ಹತ್ತನೇ ತರಗತಿಯಾಚೆಗಿನ ಮೆಟ್ಟಿಲು ತುಳಿಯಲಿಲ್ಲ.ಅತಿ ಹೆಚ್ಚು ಕರಡಿಗಳು ವಾಸಿಸುವ ಗವಿಗಳಿರುವ ಕಾರಣ ಊರಿನ ಸಮೀಪದ ಬಂಡೆ ಸಾಲಿಗೆ ಕರಡಿಕಲ್ಲು ಎಂಬ ಹೆಸರಿದೆ. ಊರಿಗೆ ಕರಡಿಕಲ್ ದೊಡ್ಡಿ ಎಂಬ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮದುವೆ ಅವರವರ ಭಾವ: ಬಿ.ಟಿ.ನಾಯಕ್

ಶಾಮುನ ತಂದೆ ತಾಯೀ ಅದಾಗಲೇ ಹಿರಿಯ ನಾಗರೀಕರಾಗಿದ್ದರು. ತಾವು ಮಾಡುತ್ತಿರುವ ಶ್ರಮದ ಕೆಲಸಗಳಿಂದ ಮುಕ್ತಿ ಹೊಂದಬೇಕೆಂದು, ತಮ್ಮ ಪುತ್ರನನ್ನು ಕರೆದು ಒಂದು ವಿಷಯ ಚರ್ಚಿಸೋದಿದೆ ಬಾ ಎಂದು ಕರೆದರು. ಆಗ ಆತ ಬಂದು;‘ಅದೇನಮ್ಮಾ ಚರ್ಚಿಸುವಂಥಹ ವಿಷಯ ?’ ಎಂದ.‘ಅಂದ ಹಾಗೆ ನಿನಗೆಷ್ಟು ವಯಸ್ಸು ?’ ಎಂದಳು ಅಮ್ಮ.‘ಹತ್ರ..ಹತ್ರ ಇಪ್ಪಂತ್ತೆಂಟು’ ಎಂದ.‘ನಿನ್ನಈ ವಯಸ್ಸಿಗೆ ಏನು ಆಗಬೇಕು ಅದು ಆಗಬೇಕಲ್ಲವೇ ?’ ಎಂದ ಅಪ್ಪ.‘ಉದ್ಯೋಗವಂತೂ ಸಿಕ್ಕಿದೆ, ಸರಿಯಾದ ಸಂಬಳ ಕೂಡ ಸಿಗುತ್ತಿದೆ, ಮತ್ತಿನ್ನೇನು ಬೇಕು ?’ ಎಂದ ಶಾಮು.‘ಅಲ್ವೋ.. ದಡ್ಡ.. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 4)”: ಎಂ.ಜವರಾಜ್

-೪- ಅವತ್ತು ಸ್ಕೂಲಿಗೆ ರಜೆ ಅಂತ ಎಲ್ಲ ಮಾತಾಡುತ್ತಿದ್ದರು. ಸ್ಕೂಲಿಗೆ ಅಂತಲ್ಲ ಎಲ್ಲರಿಗೂ ಗೌರ್ಮೆಂಟ್ ರಜೆ ಅಂತ ಸಿಕ್ಕಸಿಕ್ಕವರು ಹೇಳ್ತಾ ಇದ್ದರೆ ನಮಗೆ ಹಿಗ್ಗೊ ಹಿಗ್ಗು. ಅದನ್ನು ಕೇಳ್ತಾ ಕೇಳ್ತಾ ಪಂಚಾಯ್ತಿ ಆಫೀಸ್ ಮುಂದಿದ್ದ ಮರಯ್ಯನ ಟೀ ಅಂಗಡಿ ಹತ್ತಿರ ಬಂದಾಗ ಆ ಟೀ ಅಂಗಡಿ ಮುಂದೆ ಒಂದಷ್ಟು ಜನ ಹೆಚ್ಚಾಗೇ ನಿಂತು ಟೀ ಕುಡಿತಾ ಬೀಡಿ ಸೇದುತ್ತಾ ಪೇಪರ್ ಓದುತ್ತಾ ರಾಜ್ ಕುಮಾರ್ ಬಗ್ಗೆ ಜೋರಾಗೇ ಮಾತಾಡ್ತ ಇದ್ದರು. ಎಲ್ಲರು ರಾಜ್ ಕುಮಾರ್ ಬಗ್ಗೆ ಮಾತಾಡುತ್ತಿದ್ದರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಶ್ವಪ್ರಸಿದ್ಧ ಪಶುವೈದ್ಯರು: ಪ್ರೊ. ಎಂ. ನಾರಾಯಣಸ್ವಾಮಿ

ಪ್ರತಿ ವರ್ಷದ ಏಪ್ರಿಲ್ ತಿಂಗಳ ಕೊನೆಯ ಶನಿವಾರದಂದು ವಿಶ್ವ ಪಶುವೈದ್ಯಕೀಯ ದಿನವನ್ನು ಆಚರಿಸಲಾಗುತ್ತಿದೆ. ಕಳೆದ 25 ವರ್ಷಗಳಿಂದ ಅಂತಹ ಆಚರಣೆ ನಡೆಯುತ್ತಿದೆ. ಆದು ಆರಂಭವಾದದ್ದು 2000ನೇ ಇಸವಿಯಲ್ಲಿ. ಅಂತಹ ದಿನದ ಆಚರಣೆಗೊಂದು ಧ್ಯೇಯವಾಕ್ಯವನ್ನು ವಿಶ್ವ ಪಶುವೈದ್ಯಕೀಯ ಸಂಘವು ಕೊಡುತ್ತದೆ. ಅದರಂತೆ, 2024 ರ ವಿಶ್ವ ಪಶುವೈದ್ಯಕೀಯ ದಿನದ ಧ್ಯೇಯವಾಕ್ಯವು ‘ಪಶುವೈದ್ಯರು ಅತ್ಯಗತ್ಯ ಆರೋಗ್ಯ ಕಾರ್ಯಕರ್ತರಾಗಿದ್ದಾರೆ’ ಎಂಬುದಾಗಿದೆ. ಪಶುವೈದ್ಯರು ಪ್ರಾಣಿಗಳ ಆರೋಗ್ಯವನ್ನು ಕಾಪಾಡುತ್ತಿದ್ದಾರೆ. ಅದಷ್ಟೇ ಅಲ್ಲದೆ ಮಾನವನ ಆರೋಗ್ಯವನ್ನೂ ಕಾಪಾಡುತ್ತಿದ್ದಾರೆ. ಪ್ರಾಣಿಗಳ ರೋಗಗಳನ್ನು ಹತೋಟಿಯಲ್ಲಿಟ್ಟಿದ್ದರಿಂದಾಗಿ ಮಾನವನ ದೈಹಿಕ, ಮಾನಸಿಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕವಿತೆ ಮತ್ತು ವಿಮರ್ಶೆ: ಅಜಿತ್ ಹರೀಶಿ, ಎನ್. ಎಸ್. ಶ್ರೀಧರ ಮೂರ್ತಿ

ಒಂದು ಸತ್ಯ ಕವಿತೆ ಕವಿಯೊಬ್ಬ ಬಯಸಿದ್ದ ಸತ್ತು ಹೋಗಲುಅದೂ ಹಾಡುಹಗಲುಜೇಡದ ಉದರದ ಎಳೆ ಕಾಣಲುದಾರಿಯೊಂದು ತೋರಲು ಹೇಳಿ ಹೋಗಬೇಕು ಕಾರಣನನ್ನ ಸಾವಿಗೆ ನಾನೇ ಕಾರಣಕೆಟ್ಟ ಸಂಯೋಗದಿಂದ ನಾನೀಗ ಬಸಿರುಲಜ್ಜೆಯಾಗಿದೆ ಬೇಡ ಉಸಿರು ಕುಣಿಕೆ ಬಿಗಿದು ಕುರ್ಚಿ ಒದ್ದುವಿದಾಯ ಹೇಳಬಯಸಿದ್ದುಪಾಪದ ಕೊಡ ಬಲು ಭಾರಅಂಗುಷ್ಟ ನೆಲ ತಾಗಿ ಹಗ್ಗ ಹಾರ ಜಗತ್ತು ಜಾಗೃತವಾಯಿತು ಜರೆಯಿತುಎಲ್ಲ ನಾಟಕ ಕವಿ ಕಟುಕದಯೆ ತೋರದಿರಿ ಹೂತುಹಾಕಿರಿಬೆಳೆಯದಿರಲಿ ರಕ್ಕಸ ಸಂತತಿ ಕರುಣೆ ಇದ್ದವರು ಲೇಖನಿ ಹಿಡಿದರುಕವಿ ಸಾಯಬಹುದು ಕವಿತೆ ಅಮರಬದುಕು ಬರಹ ಒಂದೆಯೋ ಬೇರೆಯೋಕೊಲ್ಲಬೇಡಿರೆಂದರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮನದ ಮೌನಕ್ಕೆ ಕೊನೆಯ ಪತ್ರ: ಪೂಜಾ ಗುಜರನ್ ಮಂಗಳೂರು..

ಮನಸ್ಸು ಮೌನವಾಗಿದೆ ಅಂದ್ರೆ ಯಾವುದು ಬೇಡ ಅಂತಲ್ಲ.‌ಯಾವುದನ್ನು ತಲೆಗೆ ಹಚ್ಚಿಕೊಳ್ಳದೆ ನಿರಾಳವಾಗಿರು ಅಂತ ಅರ್ಥ. ಒಂದೊಂದು ಸಲ ಇಂತಹ ಮೌನಗಳು ಬದುಕಿಗೆ ಅನಿವಾರ್ಯ.. ಎಲ್ಲ ನೋವುಗಳೂ ಖುಷಿಗಳು ಮರೆಯಾದಾಗ ಅಲ್ಲೊಂದು ನಿಶ್ಯಬ್ದವಾದ ಮೌನ ಆವರಿಸಿ ಬಿಡುತ್ತದೆ. ಅದನ್ನು ಅನುಭವಿಸಿ ನೋಡುವಾಗ ಮನಸಿಗೆ ಅನಿಸುವುದು ಇಷ್ಟೆ.ಇಲ್ಲಿ ಎಲ್ಲವೂ ಶೂನ್ಯ. ಯಾವುದು ಶಾಶ್ವತವಲ್ಲ‌. ನಾವು ಬಯಸಿದಂತೆ ಎಲ್ಲವೂ ಆಗುತ್ತದೆ ಅಂದುಕೊಳ್ಳುವುದು ಮೂರ್ಖತನ. ಬದುಕೆಂಬ ಕತೆಯನ್ನು ಬರೆಯುವ ಬರಹಗಾರರು ನಾವೇ ಆದರೂ ಅದರೊಳಗಿರುವ ಪಾತ್ರಗಳು ಮಾತ್ರ ಹಲವಾರು. ಈ ಬದುಕಲ್ಲಿ ನಮಗಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 3)”: ಎಂ.ಜವರಾಜ್

-೩-ಸೋಸಲೆ ಮೇಷ್ಟ್ರು ಹಸಿಹುಣಸೇ ಕಡ್ಡಿಲಿ ಹೊಡೆದ ಹೊಡೆತದ ನೆಪ ಮಾಡಿಕೊಂಡು ಮಲಗಿದ್ದವನು ಏಳದೆ ನರಳುತ್ತ ರಗ್ಗು ಮುದುಡಿ ಮಲಗಿದ್ದೆ. ರಾತ್ರಿ ಅಪ್ಪ ನನ್ನ ಕೈಲಿದ್ದ ಬಾಸುಂಡೆ ನೋಡಿ ಆ ಸೋಸಲೆ ಮೇಷ್ಟ್ರನ್ನು ಅವ್ವನಿಗೆ ಒಪ್ಪಿಸುತ್ತ “ಆ ಬೋಳಿಮಗ ಐಕುಳ್ಗ ಕೊಡೊ ಉಪ್ಪಿಟ್ನು ಕೊಡ್ದೆ ಕಳಿಸನ. ಉಪ್ಪಿಟೇನು ಅವ್ರಪ್ಪನ ಮನೆಯಿಂದ ತಂದಿದ್ನ” ಅಂತ ಅಪ್ಪ ಮೇಷ್ಟ್ರನ್ನು ಬೈತಿದ್ದರೆ ನನಗೆ ಒಳಗೊಳಗೆ ಹಿಗ್ಗು. ಹಂಗೆ “ಆ ಗಂಗ ಬೋಳಿಮಗ ಬರ‌್ಲಿ ಮಾಡ್ತಿನಿ ಅವುನ್ಗ. ಸಣ್ಮುಕಪ್ಪವ್ರು ಪೋಸ್ಟಾಪಿಸ್ ತಂದ್ರು. ಅವ್ರೆ ಇಲ್ಲಿಗಂಟ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ನಾಡು ನುಡಿ ಮಣ್ಣ ಪ್ರತಿಯ ಕಣದಿ ಪ್ರೇಮ ಭಾವದೇವನು ನೋಡಿಹ ಬೆರಗಲಿ ಈ ಸ್ವಭಾವಹಳದಿ ಕೆಂಪಿನ ಅಂದಕೆ ಸಮವಲ್ಲ ಹೊನ್ನ ಭಾರನಾಡ ದೇವಿಗೆ ಹೊನ್ನುಡಿಯ ಸಿಂಗಾರ. ನಾಡ ಹೃದಯ ತಬ್ಬಿರಲು ವಚನ ಗಾನಬಾಳ ಹಾದಿಗೆ ಬೆಳಕ ಚೆಲ್ಲಿದೆ ಸುಗಾನಕೀರ್ತನೆಯಲಿ ತುಂಬಿರಲು ಭಕ್ತಿಯ ರಸ ಸಾರತೊಳೆದಿಹಳು ಕಾವೇರಿ ಕಲ್ಮಷಗಳ ಭಾರ. ಇತಿಹಾಸ ಮರೆಯದು ನಾಡ ಚರಿತೆಯಬರಿಯ ಒನಕೆ ಬರೆದ ಸಾಹಸ ಗಾಥೆಯಕದಂಬರು ಪೋಣಿಸಿದ ನುಡಿಯ ಸಿರಿಯಜಲವು ಹಸಿರಿಗೊಲಿದ ಸೊಬಗ ರಾಜವೈಖರಿಯ. ಜ್ಞಾನದಿ ವಿಜ್ಞಾನವಿಂದು ಅರಿತು ಬೆರೆತಿದೆಪ್ರಗತಿಯ ಪಥದಿ ನಾಡನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನುಡಿವ ಬೆಡಗು: ಡಾ. ಹೆಚ್ ಎನ್ ಮಂಜುರಾಜ್

ನಮ್ಮಲ್ಲೊಂದು ವಿಚಿತ್ರವಾದ ಆದರೆ ಎಲ್ಲರೂ ಒಪ್ಪಿ ಆಚರಿಸುವ ನಡವಳಿಕೆಯ ಲೋಪವಿದೆ. ಇದು ಎಲ್ಲರ ಗಮನಕೂ ಬಂದಿರಬಹುದು. ಆದರೆ ಇದನ್ನು ಕುರಿತು ಬರೆದವರು ಕಡಮೆ. ಗೊತ್ತಿದ್ದರೆ ನೀವೇ ತಿಳಿಸಬೇಕು. ಯಾರನ್ನಾದರೂ ಭೇಟಿಯಾದಾಗ, ಲೋಕಾಭಿರಾಮ ಮಾತಾಡುವಾಗ, ಎದುರಿನವರು ಹೇಳುವುದನ್ನು ಕೇಳಿಸಿಕೊಳ್ಳುವಾಗ ಮತ್ತು ನಮ್ಮೊಂದಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವಾಗ ನಾವು ಮಾಡುವ ಅತಿ ದುಷ್ಟವರ್ತನೆಯೆಂದರೆ ಪೂರ್ತ ಕೇಳಿಸಿಕೊಂಡು, ಪ್ರತಿಕ್ರಿಯಿಸುವ ಮುನ್ನವೇ ಅಂಥದೇ ಪ್ರಸಂಗ-ಪರಿಪರಿ ಪರಸಂಗಗಳನ್ನು ನಾವೇ ಮುಂದೊಡಗಿ ಹೇಳಲು ಉತ್ಸುಕರಾಗುವುದು; ಪೂರ್ತ ಕೇಳಿಸಿಕೊಳ್ಳದೇ ಆ ಸಂಬಂಧದ ನಮ್ಮ ಅನುಭವ ಮತ್ತು ನೆನಪುಗಳನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರಾಜಕುಮಾರ ಮತ್ತು ಭಿಕ್ಷುಕ: ಬಿ. ಟಿ. ನಾಯಕ್

ಪಾಲ್ಮರ್ ಎಂಬ ರಾಜ್ಯಕ್ಕೆ ಶುಭೋಧನ ಮಹಾರಾಜರು ಆಡಳಿತ ನಡೆಸುತ್ತಿದ್ದರು. ಅವರ ರಾಜ್ಯ ಬಹಳೇ ಸುಭೀಕ್ಷೆಯಿಂದ ಕೂಡಿ, ಅಲ್ಲಿಯ ಪ್ರಜೆಗಳು ಸಕ್ಷೇಮವಾಗಿ ಸುಖಿಯಾಗಿದ್ದರು. ತಮ್ಮ ಪ್ರಜೆಗಳಿಗೆ ಯಾವ ತರಹದ ಕಷ್ಟ ನಷ್ಟ ಉಂಟಾಗುವುದನ್ನು ಮಹಾರಾಜರು ಸಹಿಸುತ್ತಿರಲಿಲ್ಲ. ಬಹಳ ದಿನಗಳ ಹಿಂದೆ ಅಲ್ಲಿ ಒಮ್ಮೆ ಕ್ಷಾಮ ಉಂಟಾದಾಗ, ಅರಮನೆಯಲ್ಲಿಯ ಎಲ್ಲಾ ಭೋಗ್ಯ ವಸ್ತುಗಳನ್ನು ತಮ್ಮ ಪ್ರಜೆಗಳ ಮನೆ ಮನೆಗೆ ಹಂಚಿಬಿಟ್ಟರು. ಆ ಘಟನಾವಳಿಯಾದ ನಂತರ ಕ್ಷಾಮ ಮುಗುದೊಮ್ಮೆ ಅಲ್ಲಿಗೆ ಬರಲು ಹಿಂಜರಿಯಿತೇನೋ ಎನ್ನೋ ಹಾಗೆ ಅದು ಅನಂತರ ಮೂಡಲೇ ಇಲ್ಲ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 2)”: ಎಂ.ಜವರಾಜ್

-೨- ಸ್ಕೂಲಿನೊಳಗೆ ಗೊಳಗೊಳ ಮಾತು. ಒಂದೇ ರೂಮಿನಲ್ಲಿ ಎರಡು ಕ್ಲಾಸಿನವರು ಒಟ್ಟಿಗೆ ಕುಳಿತಿದ್ದೆವು. ಅಲ್ಲೆ ಕ್ಲಾಸು ಅಲ್ಲೆ ಸ್ಟಾಫ್ ರೂಮು. ಪ್ರೆಯರ್ ಮುಗಿದ ಮೇಲೆ ಎಲ್ಲ ಟೀಚರುಗಳು ಇಲ್ಲೆ ಬಂದು ಮಾತಾಡುತ್ತಿದ್ದುದು ನಮಗೆ ಮಜ. ನಾವೆಷ್ಟೆ ಗಲಾಟೆ ಮಾಡಿದರು ಯಾವ ಮೇಷ್ಟ್ರೂ ಏನೂ ಅಂತಿರಲಿಲ್ಲ. ಗಂಟೆಗಟ್ಟಲೆ ಕುಂತು ಮಾತಾಡೋರು. ಸೋಸಲೆ ಮೇಷ್ಟ್ರು ಯಾವಾಗಲೊ ಒಂದು ಸಲ ಎದ್ದು ನಿಂತು ‘ಏಯ್ ಸುಮ್ನಿರ‌್ರೊ ಅದೇನ್ ವಟವಟ ಅಂತಿರ.. ” ಅಂತ ಬೋರ್ಡ್ ಹತ್ರ ಬಂದು ಬೋರ್ಡಿನ ಮೇಲೆ ತುದಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜೀವನ ಪ್ರೀತಿ ಎಂಬ ಎದೆಯ ಹಸಿವನು ಮೆದುಳಿನಲಿ ತುಂಬಿಕೊಂಡಿರುವವರ ಕಥನಗಳು…: ಡಾ. ನಟರಾಜು ಎಸ್ ಎಂ

ಒಮ್ಮೆ ವಿಧವಿಧದ ಮಸಾಲ ಪುಡಿಯ ಚಿತ್ರಗಳನ್ನು ಇವರು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು. ಅವು ತಮ್ಮ‌ ಮನೆಯಲ್ಲಿ ತಯಾರು ಮಾಡಿದ ಮಸಾಲೆಗಳೆಂದು, ಮಾರಾಟಕ್ಕೆ ಲಭ್ಯವಿವೆ ಎಂದು ಪೋಸ್ಟ್ ಹಾಕಿದ್ದರು. ಇವರ ಅನೇಕ ಎಫ್ ಬಿ ಬಳಗದಿಂದ ಇವರಿಗೆ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ನಂತರ ಇವರ ತಂದೆಯವರ ಸಮಾಧಿ ಸ್ಥಳವನ್ನು ಲೋಕಲ್ ವ್ಯಕ್ತಿಯೊಬ್ಬ ದ್ವಂಸಗೊಳಿಸಿದನೆಂಬ ಕಾರಣಕ್ಕೆ ದಾವಣಗೆರೆಯಲ್ಲಿ ಪುಟ್ಟ ಹೋರಾಟವನ್ನು ಮಾಡುತ್ತಿರುವ ಇವರ ಭಾವಚಿತ್ರಗಳು ಕಣ್ಣಿಗೆ ಬಿದ್ದಿದ್ದವು. ಇವೆರಡು ವಿಷಯಗಳಿಗೆ ಬಿಟ್ಟು ಅನೇಕ ವರ್ಷದಿಂದ ಇವರ ಫೇಸ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎರಡು ಕವಿತೆಗಳು: ನಾಗರಾಜ ಜಿ. ಎನ್. ಬಾಡ

ಅಮ್ಮ ಆಯ್ ಲವ್ ಯು ಕರವ ಹಿಡಿದು ನನ್ನ ಎತ್ತಿ ಆಡಿಸಿದೆಅಪ್ಪಿ ಮುದ್ದಾಡುತ್ತಾ ಹಾಲು ಉಣ್ಣಿಸಿದೆಅತ್ತು ಕರೆದಾಗ ಗುಮ್ಮನ ಕರೆದುಸುಮ್ಮನಾಗಿಸಿದೆಚಂದಿರನ ತೋರಿಸುತಊಟವ ಮಾಡಿಸಿದೆಜೋ ಜೋ ಲಾಲಿಹಾಡಿ ನಿದ್ದೆಯಮಾಡಿಸಿದೆಹಠವ ಮಾಡಿದಾಗ ಒಂದುಪೆಟ್ಟು ಹಾಕಿದೆಜೋರಾಗಿ ಅಳಲು ಎದೆಗೆ ಅಪ್ಪಿನೋವನ್ನು ಮರೆಸಿದೆಗಲ್ಲವ ಹಿಡಿದು ಮುತ್ತನು ನೀಡಿದೆಪಪ್ಪಿಯ ನೀಡೆಂದು ಕಾಡಿಬೇಡಿದೆಮಡಿಲಲ್ಲಿ ಇಟ್ಟುಕೊಂಡು ಬೆಚ್ಚನೆಯಭಾವ ಮೂಡಿಸಿದೆಅರಳು ಹುರಿದಂತೆ ಮಾತನಾಡುವಪರಿಗೆ ನಕ್ಕು ನಲಿದೆಹೆಜ್ಜೆ ಹೆಜ್ಜೆಗೂ ತಡವರಿಸಿ ಬೀಳದಂತೆ ಜೊತೆಯಾದೆಎಷ್ಟೇ ಕಷ್ಟವಾದರೂ ನನ್ನ ನೋಡಿ ನೀ ಎಲ್ಲವನ್ನೂ ಮರೆತೆಜಗದ ಸಂಭ್ರಮ ನನಗಾಗಿ ನೀ ತಂದೆನೀನೇ ನನ್ನ ಸರ್ವಸ್ವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೇಸಗೆ ದಿನಗಳ ಮುಂಜಾವಿನ ನಡಿಗೆಯಲ್ಲಿ ಕಂಡಂತೆ: ಪಿ.ಎಸ್. ಅಮರ ದೀಪ್

ಬೆಳಿಗ್ಗೆ ಐದೂವರೆಗೆಲ್ಲ ಅಲಾರ್ಮ್ ಹೊಡೆದುಕೊಳ್ಳುತ್ತದೆ. ಇನ್ನೊಂದೈದು ನಿಮಿಷ ಎಂಬಂತೆ ಮಗ್ಗುಲು ಬದಲಿಸಿ ನೋಡುವುದರಲ್ಲೇ ಹತ್ತು ನಿಮಿಷ ದಾಟಿರುತ್ತದೆ. ಎದ್ದು ದೇಹ ವಿಸರ್ಜನೆಗಳನ್ನು ಮುಗಿಸಿ, ಹಲ್ಲುಜ್ಜಿ ಬರ್ಮುಡಾ, ಮೇಲೊಂದು ತೆಳು ಟೀಶರ್ಟ್ ಒಳಗೆ ತೂರಿಕೊಂಡು ಬೈಕ್ ಸ್ಟಾರ್ಟ್ ಮಾಡುವುದರೊಳಗೆ ಒಮ್ಮೆ ಕೃಷ್ಣನಿಗೆ ಕರೆ ಮಾಡುತ್ತೇನೆ. ” ಈಗ ಮನೆ ಬಿಡ್ತಿದೀನಿ ಸರ್” ಅನ್ನುತ್ತಾನೆ. ಅವನು ಸೈಕಲ್ ಏರಿ ಬಂದು, ನಾನು ಬೈಕ್ ನಿಲ್ಲಿಸುವುದಕ್ಕೂ ಹೊಸದಾಗಿ ಲೇ ಔಟ್ ಆದ ಜಾಗದ ಎಂಟ್ರೆನ್ಸ್ ನಲ್ಲಿರುತ್ತೇವೆ. ರಾತ್ರಿ ಪೂರ್ತಿ ಕಾದು, ಬೆವರಿ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಪೋಸ್ಟ್ ಮ್ಯಾನ್ ಗಂಗಣ್ಣ” (ಭಾಗ ೧): ಎಂ.ಜವರಾಜ್

-೧- ಕರೋನ ಅಪ್ಪಳಿಸಿ ಜನ ಆಚೀಚೆ ಹೋಗಲೂ ಆಗದ ಸ್ಥಿತಿ. ಸರ್ಕಾರದ ಕಟ್ಟುನಿಟ್ಟಿನ ನಿಯಮಾವಳಿ. ಲಾಕ್ಡವ್ನ್ ಕಾರಣ ಜನಜೀವನವೇ ತತ್ತರಿಸಿತ್ತು. ನ್ಯೂಸ್ ಚಾನೆಲ್ಗಳ ಬ್ರೇಕಿಂಗ್ ನ್ಯೂಸ್ಗಳು, ಸೋಶಿಯಲ್ ಮೀಡಿಯಾಗಳ ಪೋಸ್ಟ್ಗಳು ಭೀತಿಯನ್ನು ಹುಟ್ಟಿಸಿದ್ದವು. ಈ ತತ್ತರದ ಭೀತಿಯಲ್ಲೇ ಸರ್ಕಾರಕ್ಕೆ ತನ್ನ ಬೊಕ್ಕಸದ ಚಿಂತೆಯಾಗಿತ್ತು. ಕೇಂದ್ರ ಸರ್ಕಾರದ ರಾಜ್ಯವಾರು ಸಡಿಲ ನಿಯಮಾವಳಿಗಳ ಅಡಿಯಲ್ಲಿ ಎಂದಿನಂತೆ ಜನರ ಓಡಾಟ ಕೆಲಸ ಕಾರ್ಯಗಳು ನಿಧಾನಕೆ ಎಂದಿನ ಸ್ಥಿತಿಗೆ ಮರಳತೊಡಗಿತು. ನನಗೂ, ಒಂದೂ ಒಂದೂವರೆ ತಿಂಗಳು ಮನೆಯಲ್ಲಿ ಕುಂತು ಕುಂತು ಲೈಫ್ ಇಷ್ಟೇನಾ..? … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಂಕಲ್ ಮತ್ತು ಮಿ. ಬ್ರೂಮ್‌ಫೀಲ್ಡ್: ಜೆ ವಿ ಕಾರ್ಲೊ

ಮೂಲ ಇಂಗ್ಲಿಷ್: ಜೇಮ್ಸ್ ಹೆರಿಯಟ್ಕನ್ನಡಕ್ಕೆ: ಜೆ ವಿ ಕಾರ್ಲೊ (ಬ್ರಿಟಿಷ್ ಪಶು ವೈದ್ಯಕೀಯ ಶಸ್ತ್ರಚಿಕಿತ್ಸಕರಾದ ಜೇಮ್ಸ್ ಆಲ್‌ಫ್ರೆಡ್ ವೈಟ್ (1916-1995) ಜೇಮ್ಸ್ ಹೆರಿಯಟ್ ಹೆಸರಿನಲ್ಲೇ ಹೆಚ್ಚು ಪರಿಚಿತರು. 1939ರಲ್ಲಿ ಗ್ಲಾಸ್ಗೊ ಪಶು ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದುಯಾರ್ಕ್‌ಷೈರ್‌ನಲ್ಲಿ ಸುಮಾರು 50 ವರ್ಷಗಳ ಕಾಲ ತಮ್ಮ ವೃತ್ತಿ ಜೀವನವನ್ನು ನಡೆಸಿದರು. ತಮ್ಮ 50ನೇ ವಯಸ್ಸಿನಲ್ಲಿ ಮಡದಿಯ ಒತ್ತಾಯದ ಮೇರೆಗೆ ತಮ್ಮ ವೃತ್ತಿ ಜೀವನದ ಅನುಭವಗಳನ್ನು ಜೇಮ್ಸ್ ಹೆರಿಯಟ್ ಎಂಬ ಹೆಸರಿನಿಂದ ಬರೆಯತೊಡಗಿದರು. ಇಂಗ್ಲೆಂಡಿನಲ್ಲಿ ಪ್ರಕಟವಾದ ಅವರ ಎರಡು ಪುಸ್ತಕಗಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಸ್ಸಿನಲ್ಲಿಯ ಕಳ್ಳಿ: ಶೈಲಜ ಮಂಚೇನಹಳ್ಳಿ

ಒಂದು ದಿನ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ಹೋಗಿದ್ದ ನಾನು ಹಿಂದಿರುಗಲು ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬರುವ ಒಂದು ಖಾಸಗಿ ಬಸ್ಸಿನಲ್ಲಿ ಎರಡು ಸೀಟ್ ಇರುವ ಕಡೆ ಕಿಟಕಿಯ ಪಕ್ಕ ಕುಳಿತಿದ್ದೆ. ಸ್ವಲ್ಪ ಹೊತ್ತಾದ ನಂತರ ಇನ್ನೊಬ್ಬ ಹೆಂಗಸು ನನ್ನ ಪಕ್ಕದ ಸೀಟಿನಲ್ಲಿ ಕುಳಿತರು. ಕಿಟಕಿಯ ಪಕ್ಕದಲ್ಲಿ ಕುಳಿತಿದ್ದರಿಂದ ಎಂದಿನಂತೆ ನನ್ನ ಗಮನ ಹೊರಗಿನ ದೃಶ್ಯಗಳನ್ನು ಕಿಟಕಿಯಿಂದ ಇಣುಕಿ ನೋಡುವಂತೆ ಮಾಡಿತ್ತಾದ್ದರಿಂದ ಪಕ್ಕದಲ್ಲಿದ್ದವರ ಕಡೆ ಅಷ್ಟಾಗಿ ಗಮನ ಕೊಟ್ಟಿರಲಿಲ್ಲ. ಆಕೆ ಕುಳಿತು ಬಹುಶಃ ಒಂದೈದು ನಿಮಿಷವಾಗಿರಬಹುದು ಒಂದು ಮಗುವನ್ನು ಎತ್ತುಕೊಂಡಿದ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವನಗಳು: ಡಾ. ತೇಜಸ್ವಿನಿ

1) ಕವಿತೆ ಎಂದರೆ ಕವಿತೆ ಎಂದರೆಮನದಾಳದ ಭಾವನೆಗಳಕವಿಯಾಗಿ ಹಾಡುವುದು. ಕವಿತೆ ಎಂದರೆಹೃದಯಾಳದ ನೆನಪುಗಳುಭಾವನೆಯಾಗಿ ಅರಳುವುದು. ಕವಿತೆ ಎಂದರೆಮನದ ಧರೆಯೊಳಗೆಅವಿತಿರುವ ಸುಪ್ತಭಾವಗಳ ಹೊರಸೂಸುವುದು. ಕವಿತೆ ಎಂದರೆರವಿ ಕಾಣದನ್ನುಕವಿಯಾಗಿ ಕಂಡುಕೋಗಿಲೆಯಂತೆ ಹಾಡುವುದು. ಕವಿತೆ ಎಂದರೆಕವಿ ತನ್ನತನವ ತಾಕವಿಯಾಗಿ ಕಾಣುವುದು. 2) ಕನ್ನಡ ಕನ್ನಡ ನಾಡಿನ ಕೋಗಿಲೆಗಳಿರಾಕನ್ನಡ ನಾಡಿನ ಕಂದಗಳಿರಾಕನ್ನಡಕ್ಕಾಗಿ ಕೈ ಎತ್ತಿಕನ್ನಡಕ್ಕಾಗಿ ಹೋರಾಡಿಕನ್ನಡ ನಾಡಿನ ಕಣ್ಮಣಿಗಳಾಗಿ. ತನು ಕನ್ನಡ, ಮನ ಕನ್ನಡನುಡಿ ಕನ್ನಡ ಭವ ಕನ್ನಡಹಳೆಗನ್ನಡ ನಡುಗನ್ನಡಎಲ್ಲವೂ ಕನ್ನಡ, ಕನ್ನಡ ಕನ್ನಡ ಹರ ಕನ್ನಡ, ಹರಿ ಕನ್ನಡಸಿರಿಕನ್ನಡ, ತಾಯಿಕನ್ನಡಅವ ಕನ್ನಡ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ