ಸೋನೆ ಮುಗಿಲಿನ ಕವಿ ಡಾ.ನಲ್ಲೂರು ಪ್ರಸಾದ್ ಅವರ ಕಾವ್ಯ ಜಿಜ್ಞಾಸೆ: ಸಂತೋಷ್ ಟಿ

“ಕವಿತೆ ನನ್ನೊಳಗೆ ಕೂತು ಪದ ಹಾಡುವುದಿಲ್ಲಜೇಡನಾಗಿ ಅದು ಬಲೆ ನೇಯುವುದೂ ಇಲ್ಲಬದಲಾಗಿ ಕಾಡುತ್ತದೆ ಸುತ್ತೆಲ್ಲಾ ನೋಡುತ್ತದೆಬತ್ತಲಾದ ಬಯಲಲ್ಲಿ ಸೋಮನ ಕುಣಿತ ಮಾಡುತ್ತದೆ”(ಕಾಡುತ್ತವೆ ನೆನಪುಗಳು ಕವಿತೆ, ನವಿಲು ಜಾಗರ) ಎನ್ನುವ ಕಾವ್ಯ ಪ್ರೀತಿಯ ಆಶಯ ಹೊಂದಿರುವ ಕವಿ ಕೆ.ಆರ್. ಪ್ರಸಾದ್ ತಮ್ಮ ಸ್ವ-ಅನುಭವದಿಂದ ಗಟ್ಟಿಗೊಳ್ಳಿತ್ತಾ ಮೊದಲ ಕವಿತೆಯಲ್ಲಿಯೆ ತನ್ನ ತನವನ್ನು ಕಾವ್ಯದ ಬಗೆಗಿನ ಉತ್ಕಟ ಆಕಾಂಕ್ಷೆಯನ್ನು ತೆರೆದಿಡುತ್ತಾರೆ. ಇಲ್ಲಿ ಕಾವ್ಯವು ಸಾರ್ವಜನಿಕ ಇತ್ಯಾತ್ಮಕ ದೃಷ್ಟಿಗೆ ನಿಲುಕುವ ಬತ್ತಲಾದ ಬಯಲಲ್ಲಿ ಇರುವಂತದ್ದು ಮತ್ತು ಸೋಮನ ಕುಣಿತ ಮಾಡುವಂತದ್ದು ಎಂದರೆ ನೇರವಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕತ್ತಲ ಹೂವು” ನೀಳ್ಗತೆ (ಭಾಗ ೧೪): ಎಂ.ಜವರಾಜ್

ಒಂಭತ್ತನೇ ಅಟೆಂಪ್ಟ್ ನಲ್ಲಿ ಎಸೆಸೆಲ್ಸಿ ಪಾಸು ಮಾಡಿದ ಚಂದ್ರ ಊರಲ್ಲಿ ಬೀಗುತ್ತಿದ್ದ. ಅವನ ಕಾಲು ನಿಂತಲ್ಲಿ ನಿಲ್ಲುತ್ತಿಲ್ಲ. ‘ಲೆ ಇವ್ನೆ ಎಸ್ಸೆಲ್ಸಿ ಪಾಸ್ ಮಾಡ್ಬುಟೆಂತ್ಯಾ ಸಕ್ರ ಬಾಳೆಣ್ಣು ಕೊಡಲ್ವ’ ಅಂತ ರೇಗಿಸಿದರೆ ಉಬ್ಬಿ ‘ಊ್ಞ ಕೊಡ್ತಿನಿ ಇರಿ’ ಅಂತ ಛಂಗನೆ ನೆಗೆದು ಓಡಿಬಿಡುತ್ತಿದ್ದ. ಈಗವನು ಅವನಣ್ಣ ಸೂರಿ ಮುಂದೆ ಹೆದರಿಕೆ ಇಲ್ಲದೆ ಕುಂತ್ಕತಿದ್ದ ನಿಂತ್ಕತಿದ್ದ ಮಾತಾಡ್ತಿದ್ದ. ಸೂರಿನು ತಮ್ಮನ ಎಸೆಸೆಲ್ಸಿ ಪಾಸಾದದ್ದನ್ನು ತನ್ನ ಜೊತೆಗಾರರಿಗೆ ‘ಅವ್ನ ಎಲ್ಯಾರ ಸೇರುಸ್ಬೇಕು. ಅಂತು ಇಂತು ಪಾಸಾಯ್ತಲ್ಲ’ ಅಂತ ಹೇಳ್ತ ಇದ್ದುದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗುರುಗಳ ಪಾಠ: ಬಿ.ಟಿ.ನಾಯಕ್

ಅದಪ್ಪ ಮೇಸ್ಟ್ರು ಎಂದರೆ ಮಕ್ಕಳಿಗೆ ಬಲು ಪ್ರೀತಿ. ಅವರು ಎಂದೂ ಯಾವ ಮಕ್ಕಳಿಗೂ ಶಿಕ್ಷಿಸಿರಲಿಲ್ಲ. ಅದರ ಬದಲು ಅವರು ಮಕ್ಕಳಿಗೆ ತಮ್ಮ ತುಂಬು ಪ್ರೀತಿಯನ್ನು ಕೊಡುತ್ತಿದ್ದರು. ತಿಂಗಳಿಗೊಮ್ಮೆ ಯಾವುದಾದರೂ ಒಂದು ಸಿಹಿ ತಿಂಡಿಯನ್ನು ತಮ್ಮ ಮನೆಯಲ್ಲಿ ತಯಾರಿಸಿ ತಂದು ಶಾಲೆಯಲ್ಲಿ ಮಕ್ಕಳಿಗೆ ಹಂಚುತ್ತಿದ್ದರು. ಅಲ್ಲದೇ, ತಮ್ಮ ಬೋಧನಾ ಅವಧಿಯಲ್ಲಿ ಯಾವುದೋ ವಿಶೇಷವಾದ ಘಟನೆ ಅಥವಾ ಮನ ಮುಟ್ಟುವ ಒಂದು ಕಥೆಯನ್ನು ಐದರಿಂದ ಹತ್ತು ನಿಮಿಷಗಳಲ್ಲಿ ಹೇಳಿ ಮುಗಿಸುತ್ತಿದ್ದರು. ಹಾಗಾಗಿ, ಅವರ ಸ್ವಭಾವ, ಮಕ್ಕಳ ಬಗ್ಗೆ ಚಿಂತನೆ ಮತ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಲಿಕೆಯೋ ನರಳಿಕೆಯೋ !? ಜಿಜ್ಞಾಸೆ: ಡಾ. ಹೆಚ್ ಎನ್ ಮಂಜುರಾಜ್

ಕಲಿಕೆ ನಿರಂತರ ಎಂಬ ಮಾತನ್ನು ಎಲ್ಲರೂ ಬಲ್ಲೆವು. ಆದರೆ ಯಾವುದು ಕಲಿಕೆ? ಯಾವುದು ಅಲ್ಲ? ಎಂಬುದನ್ನು ತಿಳಿಯುವುದು ಕಷ್ಟವೇ. ಇದು ಒಬ್ಬರಿಂದ ಒಬ್ಬರಿಗೆ ಬೇರೆಯೇ ಆಗುವಂಥದು. ನಂಬಿಕೆ ಮತ್ತು ಮೂಢನಂಬಿಕೆಗಳ ವಿಚಾರದಂತೆ. ‘ನನ್ನದು ಮಾತ್ರ ವೈಜ್ಞಾನಿಕ ಮನೋಭಾವ, ಉಳಿದವರದು ಕೇವಲ ನಂಬಿಕೆ’ ಎಂಬ ಅಹಂಭಾವ ಬಹುತೇಕರದು. ಕೆಲವರು ಇನ್ನೂ ಮುಂಬರಿದು ‘ಅವರದು ಮೂಢನಂಬಿಕೆ’ ಎಂದು ಜರಿಯುವರು. ವಿಚಾರವಾದಿಗಳ ವರಸೆ ಇದು. ಇನ್ನೊಬ್ಬರನ್ನು ಮತ್ತು ಇನ್ನೊಂದನ್ನು ಹೀನಾಯವೆಂದು ಪರಿಗಣಿಸುವುದೇ ಮಾನವತೆಗೆ ಮಾಡುವ ದ್ರೋಹ. ತಮ್ಮಂತೆಯೇ ಇತರರೂ ಇರಬೇಕೆಂಬ ಹಕ್ಕೊತ್ತಾಯವೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವೆಂಕಿ ಬಂದನೇ?: ಸುವ್ರತಾ ಅಡಿಗ ಮಣೂರು

ವೆಂಕಿ ಬರ್ತಾನೆ ಅಂತ ಹೇಳಿದ್ದ, ಇನ್ನು ಬಂದಿಲ್ಲ. ಕಳೆದ ಭಾನುವಾರ ಅವನ ಸೊಸೆಯ ಫೋನಿಗೆ ಕಾಲ್ ಮಾಡಿದ್ದೆ. ʻಪದೇ ಪದೇ ಕಾಲ್ ಮಾಡ್ಬೇಡ್ವೋ ಇವರಿಗೆ ಕಿರಿಕಿರಿ ಆಗುತ್ತೆʼ ಅಂತ ಹೇಳಿದ್ದ. ಮುಂದಿನ ಭಾನ್ವಾರ ಬರ್ತಿನಿ ಅಂತ ಹೇಳಿದ್ದ. ಇನ್ನೂ ಬಂದಿಲ್ವಲ್ಲ ಎಂದುಕೊಳ್ಳುತ್ತಾ ರಾಯರು, ಬಾಗಿಲು ತೆರೆದು ನೋಡಿದರು.“ಮಾವ … ಧೂಳ್ ಬರುತ್ತೆ ಬಾಗಿಲು ಹಾಕಿ” ಎಂದು ಅಡುಗೆ ಮನೆಯಿಂದ ಸುಮ ಕೂಗಿಕೊಂಡಳು.ಅಬ್ಬ.. ಅವಳ ಕಿವಿ ಎಷ್ಟು ಚುರುಕು. ಎಲ್ಲವೂ ಕೇಳಿಸುತ್ತೆ, ಹಿಂದೊಮ್ಮೆ ವೆಂಕಿ ಬಂದಾಗ, ನಾವು ನಿಧಾನವಾಗಿಯೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಲ್ಕು ಕವಿತೆಗಳು: ಜಹಾನ್ ಆರಾ ಕೋಳೂರು

ನನಗೂ ಹೇಳುವುದು ಬಹಳ ಇತ್ತು ಅಂದು ಶ್ರೀರಂಗ ಪಟ್ಟಣದ ವೇದಿಕೆಯ ಮೇಲೆಸೂಟು ಬೂಟಿನ ಠೀವಿನಲ್ಲಿ ಕುಳಿತ ನಿಸಾರ್ನನಗೆ ನನ್ನ ನೆಚ್ಚಿನ ಪದ್ಯದ ಕವಿಯಷ್ಟೆ ಜೋಗದ ಝರಿಗಳ ಮುಂದೆ ನಿಂತಾಗಲೆಲ್ಲಅದರ ಹನಿಗಳು ಮುಖಕ್ಕೆ ಚಿಮ್ಮುತ್ತಿದಾಗಲೆಲ್ಲಜೊತೆಯಲ್ಲಿ ಇಲ್ಲೇ ಕುಳಿತು ಮಾತಾಡಬೇಕೆಂಬ ಹಂಬಲವೇನೋ ಇತ್ತು. ಕಾಲಕ್ಕೆ ಕಾದೆಕಾಲ ಅವಕಾಶ ನೀಡಲೇ ಇಲ್ಲ ಶಿಲುಬೆ ಏರಿದವನು ನಿನ್ನ ಕಾಡಿದಂತೆನನಗೂ ಕಾಡಿದ ನಿನ್ನ ಪದಗಳ ಮೂಲಕ ಸಂಜೆ ಐದರ ಮಳೆ ಇರಬೇಕಿತ್ತುಲಾಲ್ ಬಾಗ್ನಲ್ಲಿ ಸ್ವಲ್ಪ ದೂರ ನಡೆದುನಾನು ನಿನ್ನಲ್ಲಿ ಹೇಳುವುದು ಬಹಳ ಇತ್ತು ಮನಸ್ಸು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದೇವರುಗಳ ಸುತ್ತ ಪ್ರದಕ್ಷಿಣೆ ಹಾಕುವ “ಬ್ಯಾಟೆಮರ”: ಡಾ. ನಟರಾಜು‌ ಎಸ್ ಎಂ

ದಾವಣಗೆರೆಯಲ್ಲಿ ಕಳೆದ ತಿಂಗಳು ಬೆಂಗಳೂರಿನ ಅರವಿಂದ ಬುಕ್ ಹೌಸ್ ನವರು ಒಂದು ಪುಸ್ತಕ ಹಬ್ಬ ಇಟ್ಟುಕೊಂಡಿದ್ದರು. ಬಹುಶಃ ಅವರದು ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ ಒಂದಷ್ಟು ದಿನ ಆಯ್ದ ಕನ್ನಡ ಪುಸ್ತಕಗಳನ್ನು ಮಾರುವ ಮೂಲಕ ಜನರಲ್ಲಿ ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಅಭ್ಯಾಸ ಬೆಳೆಸುವ ಅಭಿಯಾನ ಅನಿಸುತ್ತೆ. ಆ ಪುಸ್ತಕ ಹಬ್ಬಕ್ಕೆ ಹೋಗಿದ್ದಾಗ ಅಲ್ಲಿ ಅನೇಕ ಹೊಸ ಲೇಖಕರ ಪುಸ್ತಕಗಳೂ ಸಹ ಕಣ್ಣಿಗೆ ಬಿದ್ದಿದ್ದವು. ನನಗೆ ಬೇಕೆನಿಸಿದ ಪುಸ್ತಕಗಳನ್ನು ಕೊಂಡುಕೊಂಡ ಪುಸ್ತಕಗಳಲ್ಲಿ “ಬ್ಯಾಟೆಮರ”ವೂ ಒಂದಾಗಿತ್ತು. ಪುಸ್ತಕ ಕೊಂಡು ಅನೇಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತುಂಗಾತೀರದ ಸಿನಿಹಬ್ಬ: ಎಂ ನಾಗರಾಜಶೆಟ್ಟಿ

” ಟ್ರೈನ್‌ ಹತ್ತು ಮೂವತ್ತಕ್ಕೇರಿ”” ಹೌದಾ, ಎಲ್ಲಿದೀರಾ ನೀವು?“ಇಲ್ಲೇ ರೈಲ್ವೇ ಸ್ಟೇಷನ್ನಲ್ಲಿ. ಡಿಸ್‌ಪ್ಲೇ ಬೋರ್ಡ್‌ ಎದುರಲ್ಲಿ”” ಅಯ್ಯೋ, ನಾನಿನ್ನೂ ಹೊರಟೇ ಇಲ್ವಲ್ಲ!”” ಈಗಿನ್ನೂ ಹತ್ತು ಗಂಟೆ. ಬೇಗ ಹೊರಡಿ” ಪೋನಿಡುವುದರಲ್ಲಿ ಡಿಸ್‌ಪ್ಲೇ ಬದಲಾಯಿತು. ಮೈಸೂರಿಂದ 10. 30 ಕ್ಕೆ ಆಗಮಿಸುವ ಶಿವಮೊಗ್ಗ ಟ್ರೈನ್‌ 11. 15ಕ್ಕೆ ಹೊರಡುವುದೆಂದು ಪ್ರಕಟಣೆ ಬಂತು. ಮತ್ತೆ ಚಂದ್ರಪ್ರಭ ಕಠಾರಿಗೆ ಪೋನ್‌ ಮಾಡಿದೆ; ಹೊಟ್ಟೆಗೆ ಹಾಕಿಕೊಳ್ಳಿ, ತಪ್ಪಾಯಿತು ಎಂದೆ. ನಾವು ಹೊರಟಿದ್ದು ಜನವರಿ 27, 28ರಂದು ಶಿವಮೊಗ್ಗದಲ್ಲಿ ಮನುಜಮತ ಸಿನಿಯಾನ, ಶಿವಮೊಗ್ಗ ಪ್ರೆಸ್‌ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕತ್ತಲ ಹೂವು” ನೀಳ್ಗತೆ (ಭಾಗ ೧೩): ಎಂ.ಜವರಾಜ್

ಭಾಗ – 13 ಬೆಳಗ್ಗೆ ನಾಲ್ಕರ ಹೊತ್ತು. ಹುಣಸೇ ಮರದ ಬೊಡ್ಡೆಯಲ್ಲಿ ಚಳಿಗೆ ರಗ್ಗು ಮುದುಡಿ ಮಲಗಿದ್ದ ದೊಡ್ಡಬಸವಯ್ಯನ ಕಿವಿಗೆ – ಅಲ್ಲಿ ನಿಂತರೆ ಎಲ್ಲವೂ ಕಾಣುವ, ದೂರದಲ್ಲಿದ್ದ ಸೇತುವೆ ದಾಟಿ ಸ್ವಲ್ಪ ಮುಂದೆ ಹೋದರೆ ಅಗಸ್ತೇಶ್ವರ ದೇವಸ್ಥಾನದ ಗೋಪುರದಲ್ಲಿ ಕಟ್ಟಿದ್ದ ರೇಡಿಯೋದಲ್ಲಿ “ಶಿವಪ್ಪ ಕಾಯೊ ತಂದೆ ಮೂ ಲೋಕ ಸ್ವಾಮಿದೇವ” ಹಾಡು ಕೇಳಿತು. ಹಾಡು ಕೇಳುತ್ತ ಕೇಳುತ್ತ ಮುಸುಕು ತೆಗೆದು ಕಣ್ಣಾಡಿಸಿದ. ಇನ್ನೂ ನಿದ್ದೆಯ ಮಂಪರು. ಕಣ್ಣಿಗೆ ಕತ್ತಲು ಕತ್ತಲಾಗಿ ಕಂಡಿತು. ಅಲ್ಲೆ ಕಣ್ಣಳತೇಲಿ ಬೇಲಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಶಕ್ತಿ ಇಳಿದೊಮ್ಮೆ ನೋಡು ಎದೆಯೊಳಗೆಪ್ರೀತಿ ಒಸರುವುದು ದನಿಯೊಳಗೆಬಿತ್ತಿದವರ್ಯಾರು ಒಲವ ಇಳೆಗೆಹೆಣ್ಣಿಲ್ಲವೆ ಹುಡುಕು ನಿನ್ನೊಳಗೆ?! ತಾಯಾಗಿ ಹಾಲನು ಉಣಿಸಿಸೋದರಿ ಸ್ನೇಹವ ಸೃಜಿಸಿಮಡದಿ ಅಕ್ಕರೆಯಲಿ ರಮಿಸಿನೀನು ಗೆಲುವಾದೆ ಬಯಸಿ!! ಗುರುತಿರದಂತೆ ನೀ ನಟಿಸದಿರುಪಡೆದ ಕರುಣೆಯ ನೆನೆಯುತಿರುಇಂದಿಗೆ ನಾಳೆಗೆ ಮುನಿಯದಿರುಶಕ್ತಿಯಿಂದ ಬೆಳಕು ಕಡೆಗಣಿಸದಿರು!! ಆಕೆಯಿರದೆ ನೀನು ಶೂನ್ಯಹರಸಿ ಕೈಹಿಡಿದರೆ ಮಾನ್ಯಪ್ರೇಮ ಕಡಲು ಅನನ್ಯತೇಲಿದಾಗ ಬದುಕು ಧನ್ಯ.. -ನಿರಂಜನ ಕೆ ನಾಯಕ ಮಗಳಾಗಿ ಬೇಡವಾದೆನೇ…? ಹೆಣ್ಣಿನ ಜನುಮವೇಕೆ ಈ ಭೂಮಿಮ್ಯಾಲ,ಒಡಲ ಬಗೆದು ಕಿಚ್ಚತ್ತು ಉರಿಯುವಜ್ವಾಲೆಯಲಿ ತೇಲಾಡುವಳು ತನ್ನ ಬದುಕಿನಾಗ,ಕಣ್ತೆರೆದು ನೋಡುವ ಮುನ್ನವೇ ಕ್ಷೀಣಿಸುವಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಲ್ಮೊಗದ ಬ್ರಹ್ಮನಂತೆ…: ಡಾ.ವೃಂದಾ ಸಂಗಮ್

“ಲೇ, ನಾ ಸುಮ್ಮನಿದ್ದೇನೆಂದರ, ಏನರ ತಿಳೀಬ್ಯಾಡ, ಇಷ್ಟ ದಿನ ನನ್ನ ಒಂದು ಮುಖಾ ನೋಡಿದ್ದಿ, ಇನ್ನ ಮುಂದ ನನ್ನ ಇನ್ನೊಂದು ಮುಖಾ ನೋಡ ಬೇಕಾಗತದ.” ಅಂತ ಯಾರೋ ಯಾರಿಗೋ ಬೈಯಲಿಕ್ಕೆ ಹತ್ತಿದ್ದು ಕೇಳಿಸಿತು. ಬಹುಷಃ ಅದು ಜಂಗಮ ದೂರವಾಣಿಯಲ್ಲಿ ಕಂಡು ಬಂದ ಒಂದು ಕಡೆಯ ಸಂಭಾಷಣೆ ಇರಬೇಕು, ಇನ್ನೊಂದು ಕಡೆಯವರ ಮಾತು ನನಗೆ ಕೇಳಲಿಲ್ಲ. ಆದರೂ, ಯಾರಿಗೋ ತಾವು ಅಂದುಕೊಂಡಂಗ ಕೆಲಸ ಆಗಿಲ್ಲ, ಅದಕ್ಕ, ಅವರು ಇನ್ನೊಬ್ಬರನ್ನ ಬೈಯಲಿಕ್ಕೆ ಹತ್ತಿದ್ದು ಖರೇ. ನಾನು ಈ ಬೈದವರು ಯಾರೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕತ್ತಲ ಹೂವು” ನೀಳ್ಗತೆ (ಭಾಗ ೧೨): ಎಂ.ಜವರಾಜ್

ಭಾಗ – 12 ಚೆನ್ನಬಸವಿ ಚೆಲ್ಲಿಕೊಂಡ ಕವ್ಡಗಳನ್ನೇ ನೋಡುತ್ತಲೇ ತುಟಿ ಕುಣಿಸುತ್ತ ಕೈಬೆರಳು ಒತ್ತಿ ಎಣಿಸುತ್ತಿದ್ದ ಕಡ್ಡಬುಡ್ಡಯ್ಯ ಹೇಳುವ ಮಾತಿಗೆ ಕಾದಂತೆ ಕಂಡಳು. ಬಿಸಿಲು ರವ್ಗುಟ್ಟುತ್ತಲೇ ಇತ್ತು. ಆಗ ಹರಿದ ಲುಂಗಿ ಎತ್ತಿಕಟ್ಟುತ್ತ ಪಣ್ಣನೆ ಜಗುಲಿಗೆ ನೆಗೆದ ಚಂದ್ರ ಬಾಗಿಲತ್ತಿರ ಹೋದವನಿಗೆ ಕಂಚಿನ ತಣಗಕ್ಕೆ  ತಂಗ್ಳಿಟ್ಟು ಹಾಕಂಡು, ಅದಕ್ಕೆ ಈರುಳ್ಳಿ ಉಪ್ಪು ಬೆರುಸ್ಕೊಂಡು, ನೀರು ಉಯ್ಕಂಡು ಕಲಸಿ ಕಲಸಿ ಅಂಬ್ಲಿತರ ಮಾಡ್ಕಂಡು ಸೊರಸೊರ ಅಂತ ಕುಡೀತಿದ್ದ ಸೂರಿ ಕಂಡೊಡನೆ ಹೆದರಿ ಪಣ್ಣಂತ ಕೆಳಕ್ಕೆ ನೆಗೆದು ನೀಲ ನಿಂತಿದ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತಮವ ಕಳೆದಾಗ: ಶೇಖರಗೌಡ ವೀ ಸರನಾಡಗೌಡರ್

ಸಿಲಿಕಾನ್ ಸಿಟಿ ಬೃಹತ್ ಬೆಂಗಳೂರು ಮಹಾನಗರಿಯ ಎಲೆಕ್ಟ್ರಾನಿಕ್ ಸಿಟಿಗೆ ಹೊಂದಿಕೊಂಡಿರುವ “ಮಧುವನ” ಕಾಲೋನಿಯ “ಅನಿರೀಕ್ಷಿತಾ” ಅಪಾರ್ಟಮೆಂಟಿನಲ್ಲಿ ವಾಸಿಸುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ ರಾಹುಲ್ ಪಕ್ಕದ ಕಾಲೋನಿಯಲ್ಲಿ “ಸರಳ ಯೋಗ ಸಂಸ್ಥೆ”ಯವರು ಆಯೋಜಿಸಿದ್ದ ಹತ್ತು ದಿನಗಳ ಯೋಗ ಶಿಬಿರದಲ್ಲಿ ಭಾಗವಹಿಸಲು ತನ್ನ ಹೆಸರನ್ನು ನೊಂದಾಯಿಸಿದ್ದ. “ಧ್ಯಾನ, ಪ್ರಾಣಾಯಾಮ, ಭಕ್ತಿಯೋಗ, ಆಹಾರ ಪದ್ಧತಿ, ವ್ಯಕ್ತಿತ್ವ ವಿಕಸನ ಮತ್ತು ಸಾರ್ಥಕ ಜೀವನಕ್ಕಾಗಿ ಯೋಗ. ಅಲರ್ಜಿ, ಅಸ್ಥಮಾ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಸಂಧಿವಾತಗಳಂಥಹ ರೋಗಗಳನ್ನು ದೂರವಿಡುವುದಕ್ಕೆ ಯೋಗ. ಪೂಜ್ಯ ವಿವೇಕಾನಂದ ಗುರೂಜಿಯವರ ಅಮೃತವಾಣಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕತ್ತಲ ಹೂವು” ನೀಳ್ಗತೆ (ಭಾಗ ೧೧): ಎಂ.ಜವರಾಜ್

ಭಾಗ – 11 ಈಗ ಚೆನ್ನಬಸವಿ ಮೊದಲಿನಂತಿಲ್ಲ. ಅಲ್ಲಿ ಇಲ್ಲಿ ಸುತ್ತುವುದೂ ಕಮ್ಮಿಯಾಗಿತ್ತು. ಹೊಟ್ಟೆನೋವು, ಮೈ ಕೈ ನೋವು, ಸುಸ್ತು ಸಂಕ್ಟದ ಮಾತಾಡುತ್ತಿದ್ದಳು. ಯಾರಾದರು ಸುಮ್ನೆ “ಇದ್ಯಾಕಕ್ಕ” ಅಂತ ಕೇಳಿದರೆ “ನಂಗ ಯಾರ ಏನಾ ಕೆಟ್ಟದ್ ಮಾಡರ.. ಅದ್ಕೆ ಏನ್ ಮಾಡುದ್ರು ನನ್ ಸಂಕ್ಟ ನಿಲ್ದು” ಅಂತ ನಟಿಕೆ ಮುರಿದು ಶಾಪಾಕ್ತ ದೇವ್ರು ದಿಂಡ್ರು ಅಂತ ಮಾಡೋಕೆ ಶುರು ಮಾಡಿದ್ದಳು. ಊರಿನಲ್ಲಿ ಒಬ್ಬ ಗೋವಿಂದ ಅಂತ. ಅವನು ನಿಧಾನಕ್ಕೆ ಜಬರ‌್ದಸ್ತ್ ಪುಡಾರಿಯಾಗಿ ಬೆಳೀತಿದ್ದ. ಊರಾಚೆ ದೊಡ್ಡ ಮನೆಯನ್ನೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅನ್ನಪೂರಣಿ – ರುಚಿ ಕಮ್ಮಿ, ಸ್ಮೆಲ್‌ ಜಾಸ್ತಿ: ಎಂ ನಾಗರಾಜ ಶೆಟ್ಟಿ

ʼಅನ್ನಪೂರಣಿ- ದಿ ಗೊಡೆಸ್‌ ಆಫ್‌ ಫುಡ್‌ʼ ಹೆಸರಿನ ತಮಿಳು ಚಿತ್ರ ಸುದ್ದಿ ಮಾಡುತ್ತಿದೆ. ಆಹಾರ ಸಂಸ್ಕೃತಿ, ಮಹಿಳೆಯರ ವೃತ್ತಿ ಸ್ವಾತಂತ್ರ್ಯ ಮತ್ತು- ವಿನಾಕಾರಣ- ಲವ್‌ ಜಿಹಾದ್‌ ಇವು ಚರ್ಚಿತವಾಗುತ್ತಿರುವ ವಿಷಯಗಳು. ಚಿತ್ರ ಆಹಾರದ ಮಡಿವಂತಿಕೆಯನ್ನು ತೋರಿಸುತ್ತದೆ; ವೃತ್ತಿಯ ಆಯ್ಕೆಯ ಬಗೆಗಿನ ಮಹಿಳೆಯರ ಮಿತ ಅವಕಾಶವನ್ನೂ ಪ್ರಸ್ತಾಪಿಸುತ್ತದೆ. ಆದರೆ ಲವ್‌ ಜಿಹಾದ್‌ ಎನ್ನುವುದು ಆರೋಪಿತವಾದದ್ದು ಮಾತ್ರವಲ್ಲ, ಚಿತ್ರದ ಆಶಯಕ್ಕೆ ವಿರುದ್ಧವಾಗಿದೆ. ಆದರೆ ಈ ಚರ್ಚೆಗಳಿಂದಾಗಿ ʼಅನ್ನಪೂರಣಿʼ ಬಿಡುಗಡೆಯ ಬಳಿಕ ಥಿಯೇಟರ್‌ನಲ್ಲಿ ಗಳಿಸಲಾಗದ್ದನ್ನು ಓಟಿಟಿಯ ಮುಖಾಂತರ ಗಳಿಸಿತು. ʼದಿ ಗ್ರೇಟ್‌ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕತ್ತಲ ಹೂವು” ನೀಳ್ಗತೆ (ಭಾಗ ೧೦): ಎಂ.ಜವರಾಜ್

ಭಾಗ – 10 ನೀಲಳ ಅಪ್ಪ ನಿಂಗಯ್ಯನಿಗೆ ದಮ್ಮು ಸೂಲು ಬಂದು ಏನು ಮಾಡಿದರು ಆಗದೆ ಸತ್ತು ಹೋಗಿ ಈಗ್ಗೆ ಮೂರ‌್ನಾಕು ವರ್ಷಗಳೇ ಆಗಿದ್ದವು. ನೀಲಳ ಕೂದಲು ನೆರೆದು ತಲೆ ಕೂದಲು ಗಂಟುಗಂಟಾಗಿ ಗಟ್ಟಿಯಾಗಿ ಬೆಳ್ಳಗೆ ಕರ‌್ರಗೆ ಮಿಕ್ಸ್ ಆಗಿರೋ ತರ ಆಗಿ ಜಡೆ ಜಡೆಯಾಗಿತ್ತು. ಸುಶೀಲ ಎರಡನೆಯದರ ಮಗೂಗೆ ಬಾಣಂತನಕ್ಕೆ ಬಂದು ಕುಂತಿದ್ದಳು. ಪೋಲಿ ಅಲೀತಿದ್ದ ಸಿದ್ದೇಶನ ಮದ್ವೆ ಮಾತುಕತೆಗಳು ನಡೆದಿದ್ದವು. ಶಿವಯ್ಯ ತನ್ನ ಹನ್ನೊಂದು ಮಕ್ಕಳ ಪೈಕಿ ಗಂಡು ಮಕ್ಕಳು ಬಿಟ್ಟು ಉಳಿದ ಹೆಣ್ಣು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ತೋಳಗಳು ಅಳುತ್ತಿದೆ ಪುಟ್ಟ ಕಂದಎತ್ತಿಕೊಳ್ಳುವವರಿಲ್ಲದೇಕೆಸರು ಮೆತ್ತಿದೆ ಮೈಗೆ ಹೆಸರು ಭಾರತಿ ತೋಳಗಳು ಶುಭ್ರ ಬಟ್ಟೆ ತೊಟ್ಟುನಗುವಿನಲಂಕಾರದ ಬೊಟ್ಟನ್ನಿಟ್ಟುಗರತಿಯಂತೆ ಕೈ ಬೀಸುತ್ತಿವೆತಬ್ಬಲಿಯಾದಳು ಭಾರತಿ ತಬ್ಬುವ ತವಕದಲ್ಲಿಪಿತೂರಿಯ ಬಾಕನ್ನು ಅಡಗಿಸಿಟ್ಟಿಹರುಕೆದರಿದ ಕೇಶರಾಶಿಯ ಹಿಡಿದುಗಹಗಹಿಸುತಿಹ ತೋಳಗಳದ್ದು ಆತ್ಮರತಿ ಅಂಗಾಂಗ ಊನ ಮಾಡಿದವುಮುದ್ದು ಭಾರತಿ ಈಗ ಅಂಗವಿಕಲೆತೋಳಗಳ ಸಾಮ್ರಾಜ್ಯದಲ್ಲಿದಾರಿಗಾಣದೇ ನಿಂತಿಹ ಅಬಲೆ ಎದೆಯ ತೋಟದಲ್ಲಿ ಮಾತುಗಳ ಬೆಳೆಯಿಲ್ಲಬೇಡದ ಕಳೆ ಕಸ ಅಡ್ಡಾದಿಡ್ಡಿ ಬೆಳೆದ ಆಕ್ರೋಶತೋಳಗಳ ತೋಳ್ಬಲ ಹೆಚ್ಚಾಗಿದೆಊಳಿಡುತ್ತಿವೆ ಭಾರತಿಯ ಕರುಳ ಬಗೆದು ಏನು ಮಾಡಬಲ್ಲಳು ಅವಳುನಾಲಗೆಯ ಹೊರಗೆಳೆದಿವೆಕೈಕಾಲುಗಳ ಮುರಿದಿವೆತೋಳಗಳ ಕುಯುಕ್ತಿಗೆ ಎಲ್ಲೆಗಳುಂಟೇ!? ತಂದೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಕತ್ತಲ ಹೂವು” ನೀಳ್ಗತೆ (ಭಾಗ ೯): ಎಂ.ಜವರಾಜ್

ಭಾಗ -9 ಅವತ್ತು ಅಡಿನಿಂಗಿ ಸಿಲ್ಕ್ ಫ್ಯಾಕ್ಟರಿ ಕಾಂಪೌಂಡ್ ಮೂಲೇಲಿದ್ದ ಮರದ ಕೆಳಗೆ ನೀಲ ಶಿವನಂಜ ನಿಂತಿದ್ದು ನೋಡಿ ಲಕಲಕ ಅಂತ ಊರಿಗೇ ಗೊತ್ತಾಗುವಂತೆ ಮಾತಾಡಿದ್ದಾಯ್ತು. ಆಮೇಲೆ ಏನಾಯ್ತು… ಅವತ್ತೊಂದಿನ ನಡು ಮದ್ಯಾಹ್ನ. ನೀಲ ಕಾಲೇಜು ಮುಗಿಸಿ ಒಬ್ಬಳೇ ಬರುತ್ತಿದ್ದಳು. ನಸರುಲ್ಲಾ ಸಾಬರ ಭತ್ತದ ಮಿಲ್ ಕಾಂಪೌಂಡ್ ಕ್ರಾಸ್ ಹತ್ರ ಟ್ರಿಣ್ ಟ್ರಿಣ್ ಅಂತ ಬೆಲ್ಲು ಮಾಡುತ್ತಾ ಸೈಕಲ್ ಏರಿ ಬಂದ ಶಿವನಂಜ ಸರ‌್ರನೆ ಸೈಕಲ್ ನಿಂದ ಇಳಿದು ಅವಳ ಹೆಜ್ಜೆಗೆ ಹೆಜ್ಜೆ ಹಾಕ್ತ ಸೈಕಲ್ ತಳ್ಳಿಕೊಂಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೌಲ್ಯಾಧಾರಿತ ಶಿಕ್ಷಣದ ಕೊರತೆ: ವಿಜಯ್ ಕುಮಾರ್ ಕೆ.ಎಂ.

“ಶಿಕ್ಷಣ”ವೆಂಬುದು ಮನುಷ್ಯನ ಜ್ಞಾನಕ್ಕೆ ಹಚ್ಚುವ ಜ್ಯೋತಿ. ಅಂತಹ ಜ್ಯೋತಿಯಿಂದ ಮೌಢ್ಯದ ತಾಮಸವನ್ನು ಅಳಿಸಿ ಮೌಲ್ಯಯುತ ಮನುಜನಾಗಲು ಸಾಕ್ಷಿಯಾಗಿರುವ ಇಂದಿನ ಶಿಕ್ಷಣದ ವ್ಯವಸ್ಥೆ ಹತ್ತಾರು ಆಯಾಮಗಳಲ್ಲಿ ತನ್ನ ಸತ್ವ ಕಳೆದುಕೊಂಡು ಕೇವಲ ಅಂಕಗಳಿಗೆ ಸೀಮಿತವಾಗಿ ವ್ಯಾಪಾರೀಕರಣದೆಡೆಗೆ ಸಾಗುತ್ತಿರುವಾಗ ಇಂದಿನ ಮಕ್ಕಳ ಮುಂದಿನ ಭವಿಷ್ಯ ನಿಜಕ್ಕೂ ಚಿಂತನೆಗೆ ಎಡೆ ಮಾಡಿಕೊಡದೆ ಇರದು. ಐದು ದಶಕಗಳ ಹಿಂದೆ ತಾಂತ್ರಿಕತೆ ಹೆಚ್ಚಾಗಿರದಿದ್ದರು ಶಾಲಾ ಶಿಕ್ಷಣದಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕೇನು ಕೊರತೆ ಇರಲಿಲ್ಲ. ಕಾರಣ ಅಂದಿನ ಶಿಕ್ಷಣದಲ್ಲಿ ಕೇವಲ ಪಠ್ಯಧಾರಿತ ಶಿಕ್ಷಣವಲ್ಲದೆ ಮಗುವಿನ ಭವಿಷ್ಯಕ್ಕೆ ಬೇಕಾದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ