“ಕತ್ತಲ ಹೂವು” ನೀಳ್ಗತೆ (ಭಾಗ ೧೪): ಎಂ.ಜವರಾಜ್
ಒಂಭತ್ತನೇ ಅಟೆಂಪ್ಟ್ ನಲ್ಲಿ ಎಸೆಸೆಲ್ಸಿ ಪಾಸು ಮಾಡಿದ ಚಂದ್ರ ಊರಲ್ಲಿ ಬೀಗುತ್ತಿದ್ದ. ಅವನ ಕಾಲು ನಿಂತಲ್ಲಿ ನಿಲ್ಲುತ್ತಿಲ್ಲ. ‘ಲೆ ಇವ್ನೆ ಎಸ್ಸೆಲ್ಸಿ ಪಾಸ್ ಮಾಡ್ಬುಟೆಂತ್ಯಾ ಸಕ್ರ ಬಾಳೆಣ್ಣು ಕೊಡಲ್ವ’ ಅಂತ ರೇಗಿಸಿದರೆ ಉಬ್ಬಿ ‘ಊ್ಞ ಕೊಡ್ತಿನಿ ಇರಿ’ ಅಂತ ಛಂಗನೆ ನೆಗೆದು ಓಡಿಬಿಡುತ್ತಿದ್ದ. ಈಗವನು ಅವನಣ್ಣ ಸೂರಿ ಮುಂದೆ ಹೆದರಿಕೆ ಇಲ್ಲದೆ ಕುಂತ್ಕತಿದ್ದ ನಿಂತ್ಕತಿದ್ದ ಮಾತಾಡ್ತಿದ್ದ. ಸೂರಿನು ತಮ್ಮನ ಎಸೆಸೆಲ್ಸಿ ಪಾಸಾದದ್ದನ್ನು ತನ್ನ ಜೊತೆಗಾರರಿಗೆ ‘ಅವ್ನ ಎಲ್ಯಾರ ಸೇರುಸ್ಬೇಕು. ಅಂತು ಇಂತು ಪಾಸಾಯ್ತಲ್ಲ’ ಅಂತ ಹೇಳ್ತ ಇದ್ದುದು … Read more