ಕತೆ ಮತ್ತು ಆತ್ಮಕತೆಗಳ ನಡುವಿನ ನಯವಾದ ನೇಯ್ಗೆ: ಡಾ. ಹೆಚ್ ಎನ್ ಮಂಜುರಾಜ್
ಕೃತಿ: ಕಿಟಕಿಗಳಾಚೆ (ಪ್ರಬಂಧ ಸಂಕಲನ)ಲೇಖಕರು: ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟುಪ್ರಕಾಶಕರು: ಸಮನ್ವಿತ, ಬನ್ನೇರುಘಟ್ಟ, ಬೆಂಗಳೂರುಮೊದಲ ಮುದ್ರಣ: ೨೦೨೩, ಕೃತಿ ಬಿಡುಗಡೆ: ೧೩-೦೭-೨೦೨೪ಪುಟಗಳು: ೧೩೨+೪, ಬೆಲೆ: ₹ ೧೫೦ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಲೋಕಾರ್ಪಣೆಗೊಂಡ ‘ಕಿಟಕಿಗಳಾಚೆ’ ಕೃತಿಯಲ್ಲಿ ಒಟ್ಟು ಇಪ್ಪತ್ತೆಂಟು ಪ್ರಬಂಧಗಳಿವೆ. ಈಗಾಗಲೇ ಮೂರು ಕವನ ಸಂಕಲನಗಳನ್ನು ಪ್ರಕಟಿಸಿರುವ ಕವೀಂದ್ರ ರವೀಂದ್ರರು ತಮ್ಮ ಕವನಗೀತಗಳಿಂದಾಗಿ ತಮ್ಮದೇ ಯುಟ್ಯೂಬ್ ಚಾನೆಲ್ ಮೂಲಕ ನಾಡಿನ ಅಸಂಖ್ಯಾತ ಸಹೃದಯರನ್ನು ಮುಟ್ಟಿದ್ದಾರೆ. ಹೆಸರಾಂತ ಗಾಯಕರಾದ ಶ್ರೀ ರಾಘವೇಂದ್ರ ಬೀಜಾಡಿ, ಶ್ರೀ ಗಣೇಶ ದೇಸಾಯಿಯವರ ಸಂಗೀತ ತಂಡವು … Read more