ಮಗಾ ಸಾಹೇಬ..! : ಶರಣಗೌಡ ಬಿ ಪಾಟೀಲ ತಿಳಗೂಳ

ಅಂಚಿನ ಮನೀ ಚಂದ್ರಣ್ಣ ಬಿಸಿಲು ನಾಡಿನ ಕೊನೆಯಂಚಿನ ಹಳ್ಳಿಯವನು. ತಮ್ಮೂರ ಯಾವಾಗ ದೊಡ್ಡದಾಗ್ತಾದೋ ಏನೋ ಅಂತ ಆಗಾಗ ಚಿಂತೆ ಮಾಡತಿದ್ದ ಊರ ಕುದ್ಯಾ ಮಾಡಿ ಮುಲ್ಲಾ ಬಡು ಆದಂಗಾಯಿತು ಅಂತ ಹೆಂಡತಿ ಶಾಂತಾ ಮುಗ್ಳನಕ್ಕಿದ್ದಳು. ಇವನ ಹಳ್ಳಿ ಬಹಳ ಅಂದ್ರ ಬಹಳ ಸಣ್ಣದು ಬೆರಳಿನಿಂದ ಎಷ್ಟು ಬಾರಿ ಎಣಿಸಿದರೂ ಲೆಕ್ಕ ತಪ್ಪುತಿರಲಿಲ್ಲ ಹಳ್ಳಿಯಲ್ಲಿ ಹೆಚ್ಚಿಗೆ ಓದಿವರೂ ಇರಲಿಲ್ಲ ಕೆಲವರು ಹತ್ತನೇ ಒಳಗೇ ಓದು ಮುಗಿಸಿದರೆ ಇನ್ನೂ ಕೆಲವರು ಹೆಬ್ಬೆಟ್ಟೊತ್ತುವವರಾಗಿದ್ದರು. ಚಂದ್ರಣ್ಣ ಅತ್ತ ಅಕ್ಛರಸ್ತನೂ ಅಲ್ಲದೆ ಅನಕ್ಛರಸ್ತನೂ ಅಲ್ಲದೆ … Read more

ಮರಕುಟಿಗ ನೀಲಣ್ಣ: ಮಂಜಯ್ಯ ದೇವರಮನಿ, ಸಂಗಾಪುರ

ನಮ್ಮ ಊರಿನಲ್ಲಿ ಯಾರಾದರೂ ಬಲಶಾಲಿ ಇರುವನೋ ಎಂದು ಕೇಳಿದರೆ ನೀಲಣ್ಣನನ್ನು ತೋರಿಸಬೇಕು. ಆರು ಅಡಿ ಎತ್ತರದ ಗಟ್ಟಿಮುಟ್ಟಾದ ಶರೀರ, ಕಡುಕಪ್ಪ ಮೈಬಣ್ಣ, ತೆಲತುಂಬ ಕೂದಲು, ಗಡ್ಡ ಮೀಸೆ ಪೊಗರ್ದಸ್ತಾಗಿ ಬೆಳೆದಿವೆ. ಬಲಿಷ್ಠವಾದ ತೋಳುಗಳು, ಬಲತೊಳಿಗೆ ಅಜ್ಜಯ್ಯನ ತಾಯತ ಕಟ್ಟಿದ್ದಾನೆ. ಮೈಮೇಲೆ ಅಂಗಿ ಹಾಕಿದ್ದನ್ನು ನಾನೆಂದು ನೋಡಿಲ್ಲ. ಉಡಲಿಕ್ಕೆ ದಪ್ಪ ದಟ್ಟಿನ ಪಂಚೆ, ಹೆಗಲ ಮೇಲೆ ಅರಿತವಾದ ಕೊಡಲಿ ಇದು ನಮ್ಮೂರ ಮರಕುಟಿಗ ನೀಲಣ್ಣನ ಚಿತ್ರ. ನೀಲಣ್ಣ ವರಟನಾದರೂ ನಡೆನುಡಿಯಲ್ಲಿ ಅತ್ಯಂತ ವಿನಯಶಾಲಿ. ಮಗುವಿನಂತ ಮನಸ್ಸು. ಮಕ್ಕಳ ಅಂದರೆ … Read more

ಪುಟ್ಟ ಆರತಿ ಕೊಟ್ಟ ಮಣ್ಣಿನ ಕೇಕು: ಸವಿತಾ ಇನಾಮದಾರ್

‘ಮೇಡಂ, ಇಂದು ಆಫೀಸಿಗೆ ಹೋಗುವಾಗ FM ರೇಡಿಯೋದಲ್ಲಿ ನಿಮ್ಮ GST ಜಾಹಿರಾತು ಕೇಳಿದೆ ‘ ಅಂತ ಮೊನ್ನೆ ನನ್ನ ಪರಿಚಯದವರು ಫೋನ್ ಕಾಲ್ ಮಾಡಿ ಹೇಳಿದಾಗ ತುಂಬಾ ಖುಷಿ ಆಯಿತು. ಮೊದಲೆಲ್ಲ ‘ಇಂದಿನ ರೇಡಿಯೋ ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿ ಬಂತು ಕಣೆ ‘ ಅಥವಾ ‘ ಮೇಡಂ, ಇಂದಿನ ನಿಮ್ಮ ಕವನ ವಾಚನ ಕೇಳಿ ಕಂಗಳು ತುಂಬಿ ಬಂದವು’ ಅಂತ ಸ್ನೇಹಿತರು, ಪರಿಚಯದವರು ಹೇಳುತ್ತಿದ್ದಾಗ ತುಂಬಾ ಖುಷಿ ಆಗುತ್ತಿತ್ತು. ಕೇಳುಗರ ಪ್ರತಿಕ್ರಿಯೆಗಳು ತುಂಬಾ ಮುಖ್ಯ. ಹದಿನೈದು … Read more

ಪೀಗ: ಡಾ. ಶಿವಕುಮಾರ್‌ ಡಿ ಬಿ

ಪರ್ನಳ್ಳಿ ಗಂಗಪ್ಪ ಅಲಿಯಾಸ್ ಪೀಗ ತಂದೆಯ ಕಾರಣದಿಂದಾಗಿ ಸಮಾಜದ ನಿರ್ಲಕ್ಷಕ್ಕೆ ಗುರಿಯಾಗಿದ್ದ. ಈತನ ತಂದೆ ನಾಗಪ್ಪ ಕುಡುಕ. ಹೆಂಡತಿ ಮಕ್ಕಳ ಮೇಲೆ ಒಂದು ಚೂರು ಜವಾಬ್ದಾರಿ ಇಲ್ಲದವ, ಊರಿನ ಯಾವುದೋ ಒಂದು ಜಗಳದಲ್ಲಿ ಕಾಲಿಗೆ ಗಾಯ ಅದು ಗ್ಯಾಂಗ್ರಿನ್ ಆಗಿ ಗುಣಪಡಿಸಲಾಗದೆ ಸತ್ತ. ಈ ನಾಗಪ್ಪನಿಗೆ ಹುಟ್ಟಿದವರು ಮೂರು ಜನ ಗಂಡು ಮಕ್ಕಳು. ಮೂರು ಜನರ ಶಿಕ್ಷಣ ಬಾಲ್ಯದಲ್ಲಿಯೇ ಮೊಟಕಾಯಿತು. ತಾಯಿಯ ಮಾತನ್ನು ಕೇಳದ ಈ ಮೂವರು ಐದು, ಆರರವರೆಗೂ ಶಾಲೆಯಲ್ಲಿ ಕಲಿಯಲಿಲ್ಲ. ಹೊಲ ಗದ್ದೆ ಬಯಲುಗಳಲ್ಲಿ … Read more

ಕರ್ಮ……..: ರೂಪ ಮಂಜುನಾಥ

“ಥೂ ಬೋ…. ಮಕ್ಳಾ! ಹರಾಮ್ ಚೋರ್ಗುಳಾ? ಕೆಲ್ಸಕ್ ಬಂದು ಬೆಳ್ಬೆಳಗ್ಗೇನೇ ಏನ್ರೋ ನಿಮ್ ಮಾತುಕತೆ ಕಂಬಕ್ತ್ ಗುಳಾ!ಇರಿ ಇರಿ ನಿಮ್ಗೆ ಹೀಗ್ ಮಾಡುದ್ರಾಗಲ್ಲ. ಸರ್ಯಾಗ್ ಆಪಿಡ್ತೀನಿ ಇವತ್ತಿಂದ ನೀವ್ ಮಾಡೊ ದರಿದ್ರದ ಕೆಲಸಕ್ಕೆ ನಿಮ್ ಕೂಲಿ ಐವತ್ತು ರೂಪಾಯಿ ಅಷ್ಟೆ. ಬೇಕಾದ್ರೆ ಇರಿ. ಇಲ್ದೋದ್ರೆ, ನಿಮ್ಗೆಲ್ಲಿ ಬೇಕೋ ಅಲ್ಲಿ ನೆಗೆದ್ಬಿದ್ದು ಸಾಯ್ರೀ”, ಅಂದು ಮಂಡಿಯೂರಿ ಕೂತು ಬಾರ್ ಬೆಂಡಿಂಗ್ ಮಾಡುತ್ತಿದ್ದ ಕೆಲಸದವರು ಭುವನ್ ಮತ್ತೆ ಅಮೋಲ್ ನನ್ನ ಮಾಲೀಕ ಬಿಪುಲ್ ತನ್ನ ಬೂಟು ಕಾಲಿನಿಂದ ಒದ್ದು, ಇಬ್ಬರ … Read more

ಪಂಜು ಕಾವ್ಯಧಾರೆ

ಉತ್ತರ ದಶಶಿರನಹಂಕಾರ ಮುರಿದು ಮಣ್ಣಾಗುವ ಘಳಿಗೆಹೆಬ್ಬಾಣವ ಹೂಡಿ ರಾಘವನು ಹೂಂಕರಿಸಿದ ಪರಿಗೆಅಂತರಿಕ್ಷ ಈಗ ಅಕ್ಷರಶಃ ಸ್ತಬ್ಧಮಂಡೋದರಿಯ ಎದೆಯಲನಲ ಅಬ್ಬರಿಸಿ ದಗ್ದ… ಜನಕನಂಗಳದಲಿ ಏಕೋ ನರಳುತಿದೆ ಪಾರಿಜಾತನಡೆಯುವದ ನೆನೆಸಿ ನಡುಗಿದನೆ ಆ ಜಾತವೇದ?ಮೌನವಾಗಿದೆ ಅಂಬುಧಿ ಅಂಬುಗಳ ಒಳಗಿಳಿಸಿಮೂಡಣದ ಕಣ್ಣಂಚ ಹನಿ ಎದೆಯಾಳಕಿಳಿಸಿ…. ಅದೋ ಉರುಳಿದೆ ವಿಪ್ರ ಶ್ರೇಷ್ಠನ ಶೀರ್ಷಒಂದಲ್ಲ ಎರಡಲ್ಲ ಸರಿಯಾಗಿ ಹತ್ತುಹರಿತ ರಾಮನ ಶರಕೆ ಶರಣಾದ ರಾವಣನಇಪ್ಪತ್ತು ಕಣ್ಣುಗಳಲ್ಲೂ ಗತ್ತೋ ಗತ್ತು…. ಮೆಲ್ಲ ಮೆಲ್ಲನೆ ಅಡಿಯಿಟ್ಟು ಬಂದಳಾ ಸುಮಬಾಲೆಕಣ್ಣಲ್ಲಿ ನೂರಾರು ಹೊಂಗನಸ ಮಾಲೆನಗುಮುಖದ ಒಡೆಯ ಎದುರುಗೊಳ್ಳಲೆ ಇಲ್ಲತೋಳ್ತೆರೆದು … Read more

“ದೇಶದಲ್ಲಿ ಅಭಿವೃದ್ಧಿಯಾಗಬೇಕಾದ ಶಿಕ್ಷಣ ವ್ಯವಸ್ಥೆ”: ವಿದ್ಯಾಶ್ರೀ ಭಗವಂತಗೌಡ್ರ

ಮಾನವನ ಮೂಲಭೂತ ಸೌಕರ್ಯಗಳಾದ ಗಾಳಿ, ನೀರು, ಆಹಾರ, ವಸತಿ ಜೊತೆಗೆ ಶಿಕ್ಷಣವೂ ಒಂದು ಎಂದರೆ ತಪ್ಪಾಗಲಾರದು. ಅನಾದಿ ಕಾಲದಿಂದಲೂ ವಿದ್ಯೆಗೆ ಮಹತ್ವದ ಸ್ಥಾನವಿದೆ. “ವಿದ್ಯೆ ಇರುವವನ ಮುಖವು ಮುದ್ದು ಬರುವಂತಿಕ್ಕು, ವಿದ್ಯೆ ಇಲ್ಲದವನ ಬರಿ ಮುಖವು ಹಾಳೂರು ಹದ್ದಿನಂತಿಕ್ಕು “ಎಂಬ ಸರ್ವಜ್ಞ ನ ಮಾತು ಇಂದಿಗೂ ಪ್ರಸ್ತುತ. ದೇಶ ୭೬ ನೇ ಸ್ವಾತಂತ್ರ ದಿನದ ಹೊಸ್ತಿಲಲ್ಲಿದೆ. ಆದರೆ ಬಡತನ, ನಿರುದ್ಯೋಗ, ಹಸಿವು, ಅನಕ್ಷರತೆ ಇನ್ನೂ ದೇಶದಿಂದ ತೊಲಗಿಲ್ಲ. ದೇಶದ ಹಲವಾರು ಸಮಸ್ಯೆಗಳಿಗೆ ಶಿಕ್ಷಣ ಮದ್ದಾಗಬಲ್ಲದು. “ಮನೆಯೇ ಮೊದಲ … Read more

ಅಂಡೇ ಪಿರ್ಕಿ ಅಮೀರ..: ಶರಣಬಸವ. ಕೆ.ಗುಡದಿನ್ನಿ

ದೋ ಅಂತ ಮೂರಾ ಮುಂಜಾನಿಯಿಂದ ಬಿಡ್ಲಾರದ ಸುರಿಯೋ ಮಳ್ಯಾಗ ಅವನ್ಗೀ ಎಲ್ಲಿ ನಿಂತ್ಕಂಡು ಚೂರು ಸುಧಾರಿಸ್ಕೆಳ್ಳಬೌದೆಂಬ ಅಂದಾಜು ಹತ್ಲಿಲ್ಲ. ಹಂಗಾ ನೆಟ್ಟಗ ನಡದ್ರ ಪೂಜಾರಿ ನಿಂಗಪ್ಪನ ಮನೀ ಅದರ ಎಡಕ್ಕಿರದೇ ಅಮೀರನ ತೊಟಗು ಮನಿಯಂಗ ಕಾಣೊ ತಗ್ಡಿನ ಶೆಡ್ಡು. ಗಂವ್ವೆನ್ನುವ ಇಂತಾ ಅಪರಾತ್ರ್ಯಾಗ ಅಮೀರನೆಂಬೋ ಆಸಾಮಿ ಹಿಂಗ್ ಅಬ್ಬೇಪಾರಿಯಂಗ ಓಣಿ ಓಣ್ಯಾಗ ತಿರಗಾಕ ಅವ್ನ ಹಾಳ ಹಣೀಬರ ಮತ್ಯಾ ಮಾಡ್ಕೆಂಡ ಕರುಮಾನ ಕಾರಣ ! ಅವ್ನ ಹೇಣ್ತೀ ನೂರಾನಿ ರಾತ್ರ್ಯಾಗಿಂದ ಒಂದ್ಯಾ ಸವನ ಹೆರಿಗಿ ಬ್ಯಾನಿ ಅಂತ … Read more

ಮಾನ್ಸೀ. . . : ಗೀತಾ ನಾಗರಾಜ.

ಮುಗ್ಧ ಮಾನ್ಸಿ ಗೆ ಸಿಕ್ಕ ಮಹಾ ಒರಟು ಗಂಡ ಪರೀಕ್ಷಿತ್.ಅವನ ಒರಟುತನಕ್ಕೆ ಬೇಸತ್ತು ಹೋಗಿದ್ದರೂ ಹೇಗೋ ಸಂಸಾರವನ್ನು ನಿಭಾಯಿಸಲೇ ಬೇಕಾದ ಅನಿವಾರ್ಯತೆ ಅವಳಿಗೆ. ಅಣ್ಣ ಸಂಪ್ರೀತನಿಗೆ ಅವಳೆಂದ್ರೆ ಪ್ರಾಣ.ಡಬಲ್ ಡಿಗ್ರಿ ಮಾಡಿದ್ದ. ತುಂಬಾ ನೇ ಇಂಟಲಿಜೆಂಟ್.ಪರಸ್ಪರ ಸದಾಕಾಲ ಇಬ್ಬರೂ ಕಷ್ಟ – ಸುಖಗಳನ್ನು ಹಂಚಿಕೊಳ್ಳುತ್ತಾರೆ.ಇದೊಂದೆ ಅವರ ಮನ ತೃಪ್ತಿಹೊಂದುವ ಆಯಾಮವಾಗಿತ್ತು. ಹೀಗೇ, ಕೆಲ ದಿನಗಳ ನಂತರ ಸಂಪ್ರೀತನಿಗೆ ಅವನದೇ ಕಂಪನಿಯ ಸ್ಟೆನೋ ಕನಕಳ ಪರಿಚಯವಾಗುತ್ತದೆ.ಪರಿಚಯ ಪ್ರೀತಿಯಾಗಿ, ಪ್ರೀತಿ ಪ್ರೆಮವಾಗಿ, ಒಂದು ಹದಕ್ಕೆ ಬಂದಾಗ,ಅವನೇ “ಮಾನ್ಸಿ ನಾನೊಂದು ಹುಡಗೀನ್ನ … Read more

ಪಂಜು ಕಾವ್ಯಧಾರೆ

ನನ್ನವ್ವ ಬೆವರುತ್ತಾಳೆ. . . . . . ಕೆಂಡ ಕಾರುವರಣ ಭೀಕರ ಬಿಸಿಲನ್ನು ತಲೆಗೆ ಸುತ್ತಿಕೊಂಡುಮಾಸಿದ ಸೀರೆಯಜೋಳಿಗೆಯಲಿ ಬೆತ್ತಲೆ ಮಗುವ ಮಲಗಿಸಿಜಗದ ಹೊಟ್ಟೆ ತುಂಬಿಸಲೆಂದುಭತ್ತ ನಾಟಿ ಮಾಡುವಾಗನನ್ನವ್ವ ಬೆವರುತ್ತಾಳೆಮಂಜುನಾಥನ ಮಾತಾಡಿಸಲುಮಾರಿಕಾಂಬೆಯ ಮುಂದೆ ಸೆರಗೊಡ್ಡಲುಚಾಮುಂಡಿಯ ಕಾಲುಗಳಲಿ ಬಿಕ್ಕಳಿಸಲುಮಹಾನಗರದ ಗಗನಚುಂಬಿ ಕಟ್ಟಡದಬುಡದ ಸಂದಿಯಲಿಉಸಿರಾಡಲು ಕಷ್ಟ ಪಡುತಿರುವಕರುಳ ಬಳ್ಳಿಯ ಬೆನ್ನ ಸವರಲೆಂದುತಿರುಗಾಡುವಾಗನನ್ನವ್ವ ಬೆವರುತ್ತಾಳೆತುಂಡು ಬ್ರೆಡ್ಡುಅರ್ಧ ಕಪ್ಪು ಹಾಲು ಕೊಟ್ಟುಪತ್ರಿಕೆಯಲಿ ಫೋಟೋ ಹಾಕಿಸಿಕೊಳ್ಳುವತೆರಿಗೆಗಳ್ಳರ ದುಡ್ಡಿನಲಿ ಮಾಡುವಸಮಾನತೆಯ ಕಾರ್ಯಕ್ರಮದಊಟದ ಮನೆಯಲಿಕಸ ಹೊಡೆಯುವಾಗನನ್ನವ್ವ ಬೆವರುತ್ತಾಳೆಒಂಟಿ ಚಪ್ಪಲಿಯನ್ನು ಬೀದಿಯಲಿಬಿಸಾಕುವಂತೆಬಿಟ್ಟು ಹೋದವರಮನೆ ಮುರಿಯದೆಮೂಕ ಪರದೆಗಳಹಿಂದೆ ತುಟಿ ಕಚ್ಚಿ … Read more

ಕನ್ನಡ ಸಂಘ: ಮನು ಗುರುಸ್ವಾಮಿ

“ಏನ್ರಯ್ಯ ಇಡೀ ಕರ್ನಾಟಕನೇ ಆಳೋ ಪ್ಲಾನ್ನಿದ್ದಂಗದೆ.” ಕಾಡಾ ಆಫೀಸಿನ ಸಿಬ್ಬಂದಿಯೊಬ್ಬ ವ್ಯಂಗ್ಯವಾಡಿದ. “ಆಗೇನೂ ಇಲ್ಲ ಸರ್; ಸಮಾಜಮುಖಿ ಕೆಲಸಕ್ಕಾಗಿ” ವಿಶಾಲ್ ಸಮರ್ಥಿಸಿಕೊಂಡ.“ನಂಗೊತ್ತಿಲ್ವೇ ? ನೀವ್ ಮಾಡೋ ಉದ್ಧಾರ! ಹಾಕಿ ಹಾಕಿ ಸೈನಾ..” ಮತ್ತದೇ ಅಪಹಾಸ್ಯ ಕಿವಿಮುಟ್ಟಿತು.“ಉದ್ಧಾರನೋ ಹಾಳೋ; ಕೆಲ್ಸ ಮುಗಿದಿದ್ರೆ ಪತ್ರ ತತ್ತರಲ್ಲ ಇತ್ಲಾಗೆ” ವಿನೋದ ಕಿಡಿಕಾರಿದ.ಸಂಸ್ಥೆಯೊಂದರ ನೊಂದಣಿಗೆ ಈ ಯುವಕರಿಷ್ಟು ಎಣಗಾಡಿದ್ದು ಆ ಸಿಬ್ಬಂದಿಗೆ ತಮಾಷೆಯಾಗಿ ಕಂಡರೂ ಆ ಹತ್ತದಿನೈದು ಐಕ್ಳು ಮಾತ್ರ ಏನ್ನನ್ನೋ ಸಾಧಿಸಲಿಕ್ಕಿದು ಮುನ್ನುಡಿಯೆಂದೇ ಭಾವಿಸಿದ್ದರು. ಅಂದಹಾಗೆ ಅದು ಆಲಹಳ್ಳಿ. ಹಚ್ಚಹಸಿರಿನಿಂದ ಕೂಡಿರುವ … Read more

ಸಖಿ-2050: ಶ್ರೀಪ್ರಸಾದ್

ಬೆಳಗ್ಗೆ3 ಕ್ಕೆ ಎದ್ದೆ. ನಿದ್ದೆ ಬಂದಿಲ್ಲ ಅಂತೇನು ಅಲ್ಲ . ಆದ್ರೆ ನಿದ್ದೆ ಮಾಡೋಕೆ ಆಗ್ತಾ ಇಲ್ಲ. ಕೈಯ್ಯಲ್ಲಿ ಕಟ್ಟಿರೋ ಫಿಟ್ನೆಸ್ ಬ್ಯಾಂಡ್ ಮಾತ್ರ ಒಂದೇ ಸಮನೆ ವೈಬ್ರೇಟ್ ಆಗ್ತಾ ಇದೆ. ಎದ್ದು ನೋಡಿದ್ರೆ ಮೈ ತುಂಬಾನೆ ಬಿಸಿ ಇದೆ. ಮೊಬೈಲ್ ಚೆಕ್ ಮಾಡಿದ್ರೆ ಆಗಲೇ ಅಲರ್ಟ್ ಬಂದಿದೆ …. “ಹೈ ಬಾಡಿ ಟೆಂಪರೇಚರ್” ಅಂತ. ಅದು ಆಗಲೇ ಫ್ಯಾಮಿಲಿ ಡಾಕ್ಟರ್ ರೋಬೋಗೆ ಹೈ ಫೀವರ್ ಅಂತ ಮೆಸೇಜ್ ಕಳಿಸಿದೆ. ಆ ಕಡೆಯಿಂದ ” ಟೇಕ್ ಡೊಲೊ-650” … Read more

ಹೃದಯದ ಭಾಷೆ –ಕನ್ನಡ ಉಳಿಸಿ ಬೆಳೆಸಿ: ನಾಗರೇಖಾ ಗಾಂವಕರ

ಕನ್ನಡ ಎನೆ ಕುಣ ದಾಡುವುದೆನ್ನೆದೆಕನ್ನಡವೆನೆ ಕಿವಿ ನಿಮಿರುವುದು!!ಕಾಮನ ಬಿಲ್ಲನು ಕಾಣುವ ಕವಿಯೊಳುತೆಕ್ಕನೆ ಮನ ಮೈ ಮರೆಯುವುದು- ಪ್ರಾಥಮಿಕ ಹಂತದಲ್ಲಿ ಕಲಿತ ಕುವೆಂಪು ಕವಿತೆಯ ಈ ಸಾಲುಗಳು ಬಾಯಲ್ಲಿ ಇಂದಿಗೂ ಮೆರೆದಾಡುತ್ತವೆ. ಯಾಕೆಂದರೆ ಅದು ಮಾತೃಭಾಷೆಯ ಬಗ್ಗೆ ನಮ್ಮಲ್ಲಿದ್ದ ಪ್ರೀತಿ ಅದರಲ್ಲಿದ್ದ ಸೊಗಡುತನ ಹಾಗೂ ಕನ್ನಡ ಎದೆಯ ಭಾಷೆಯಾಗಿರುವುದು ಅದಕ್ಕೆ ಕಾರಣ. ಆದರೆ ಇಂದು ಕನ್ನಡದ ಬಳಕೆ ಕಡಿಮೆಯಾಗುತ್ತಿದೆ. ಕನ್ನಡವೆಂದರೆ ಯುವ ಜನರಲ್ಲಿ ಒಂದು ರೀತಿಯ ತಾತ್ಸಾರ ಬೆಳೆಯುತ್ತಿರುವಂತೆ ಅನಿಸುತ್ತಿದೆ. ಹಾಗಾಗಿ ಕನ್ನಡ ಕಟ್ಟುವ ಕೆಲಸವಾಗಬೇಕಿದೆ.ಮಾತೃಭಾಷೆ ಉಳಿಸುವ ನಿಟ್ಟಿನಲ್ಲಿ … Read more

ನಮ್ಮೂರಾಗಿನ ನವೆಂಬರ – ಒಂದು: ಡಾ.ವೃಂದಾ ಸಂಗಮ್

ನಮ್ಮೂರಂದರ ಅದು ನಮ್ಮೂರು ಮಾತ್ರ ಅಲ್ಲ, ನಿಮ್ಮೂರೂ ಆಗಿರಬಹುದಾದಂತಹ ಒಂದು ಸಾಮಾನ್ಯ ಹಳ್ಳಿ, ವರದಾ ನದಿಯ ದಡದ ಮ್ಯಾಲಿರೋ ಒಂದು ಚಿಕ್ಕ ಊರು. ನಾವೆಲ್ಲಾ ಚಿಕ್ಕವರಿದ್ದಾಗ, ನಿಮ್ಮೂರಲ್ಲಿನ ವಿಶೇಷತೆ ಹೇಳರೀ ಅಂದರೆ, ನಮ್ಮೂರಿಗೆ ದಿನಕ್ಕೆ ಒಂದು ಬಸ್ಸು ಬರತದ ಅಂತಿದ್ವಿ, ಅದು ಸ್ವರ್ಗ ಲೋಕದಿಂದ ಬಂದ ಪುಷ್ಪಕ ವಿಮಾನಕ್ಕೂ ವಿಶೇಷದ್ದು, ಅದು ಗರ್ಭಿಣಿ ಸ್ತ್ರೀಯಂತೆ ಸದಾ ಹೊಟ್ಟೆ ಊದಿಸಿಕೊಂಡಿರುತ್ತಿತ್ತು, ಅಲ್ಲದೇ, ಇನ್ನು ಯಾರೂ ಹತ್ತಲಿಕ್ಕೆ ಸಾಧ್ಯವಿಲ್ಲ ಅನಿಸುವಷ್ಟು ಜನರನ್ನ ತನ್ನ ಉದರದೊಳಗ ತುಂಬಿಕೊಂಡು ಪರಮಾತ್ಮನಂಗ ನಮಗ ಕಾಣತಿತ್ತು, … Read more

ಕನ್ನಡ ಮುತ್ತು: ಶ್ರೀನಿವಾಸ

ಶಂಕರಯ್ಯ ರೂಮು ಬಿಟ್ಟು ಹೊರಟ. ಅವನು ಗೋಕಾಕ್ ವರದಿ ಜಾರಿಗೆ ತರಲೇಬೇಕೆಂಬ ಪಣ ಮನದಲ್ಲಿ ತೊಟ್ಟು ಹೊರಟಿದ್ದ. ರಾಷ್ಟ್ರ ಕವಿ ಕುವೆಂಪು ಅವರ ” ಬಾರಿಸು ಕನ್ನಡ ಡಿಂಡಿಮವ… ” ಗೀತೆ ಅವನ ಕಿವಿಯಲ್ಲಿ ಮೊಳಗುತ್ತಿತ್ತು. ” ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ” ಎಂಬ ಉದ್ಘೋಷ ಅವನ ಮನದಲ್ಲಿ ಮೊಳುಗುತ್ತಿತ್ತು. ಶಂಕರಯ್ಯ ಮೈಸೂರಿನ ಕಡೆಯವನು. ಇದ್ದುದರಲ್ಲಿ ಹೇಗೋ ಒಂದಿಷ್ಟು ಓದಿಕೊಂಡು ಬೆಂಗಳೂರು ಸೇರಿದ್ದ. ಅವನ ಹಳ್ಳಿಯ ಹತ್ತಿರದ ತಾಲೂಕಿನಲ್ಲಿ ತನ್ನ ಪದವಿ ಮುಗಿಸಿ ಕೆಲಸ ಹುಡುಕಿ … Read more

ವೃದ್ಧಜೀವ ಹರೋಹರ!: ಹುಳಗೋಳ ನಾಗಪತಿ ಹೆಗಡೆ

ಅಂದಾಜು ಮೂರು ದಿನಗಳಾಗಿರಬಹುದು, ಬಾಳಕೃಷ್ಣ ಮಾಮಾ ತಮ್ಮ ಊರುಗೋಲಿಗಾಗಿ ತಡಕಾಡಲು ಪ್ರಾರಂಭಿಸಿ. ಯಾವ ಸುತ್ತಿನಲ್ಲಿ ತಡಕಾಡಿದರೂ ಕೈಗೆ ಸಿಗೂದೇ ಇಲ್ಲ ಅದು! ತಡಕಾಡುವ ಐಚ್ಛಿಕ ಕ್ರಿಯೆಯೊಂದಿಗೆ ‘ಪಾರತೀ, ನನ್ ದೊಣ್ಣೆ ಎಲ್ಲಿ…?’ ಎಂಬ ಅನೈಚ್ಛಿಕ ಕರೆಯೂ ಬೆರೆತಿದೆ. ಪಿತುಗುಡುವ ವೃದ್ಧಾಪ್ಯದ ಸಿನುಗು ನಾತದೊಂದಿಗೆ ಮೂರು ದಿನಗಳ ಅವರ ಮಲಮೂತ್ರಾದಿ ಸಕಲ ವಿಸರ್ಜನೆಗಳೂ ಒಂದರೊಳಗೊಂದು ಬೆರೆತು ಮನುಷ್ಯ ಮಾತ್ರರು ಕಾಲಿಡಲಾಗದಂತಹ ದುರ್ನಾತ ಆ ಕೋಣೇಲಿ ಇಡುಕಿರಿದಿದೆ. ಬಾಳಕೃಷ್ಣ ಮಾಮನ ಗೋಳನ್ನು ಕೇಳಿ ಅವನನ್ನು ಆ ಉಚ್ಚಿಷ್ಟಗಳ ತಿಪ್ಪೆಯಿಂದ ಕೈಹಿಡಿದು … Read more

ಕನ್ನಡದ ಕನ್ನಡಿ: ಡಾ. ಹೆಚ್ ಎನ್ ಮಂಜುರಾಜ್

ಪ್ರತಿ ವರುಷ ನವೆಂಬರ್ ಬಂದಾಗಲೆಲ್ಲ ನಮಗೆ ಕನ್ನಡ ನೆನಪಾಗುತ್ತದೆ ಅಥವಾ ನಾಡು-ನುಡಿ-ನೆಲ-ಜಲ-ಸಂಸ್ಕೃತಿಗಳನ್ನು ಕುರಿತು ಮಾತಾಡಲು ನೆಪವಾಗುತ್ತದೆ! ಅದರಲೂ ಕನ್ನಡ ಭಾಷಾಭಿಮಾನ ಮುಗಿಲು ಮುಟ್ಟುವ ಮಾಸವಿದು. ಕನ್ನಡಾಂಬೆಯನು ಪೂಜಿಸಿ ನಮ್ಮ ಅಸ್ಮಿತೆಯನ್ನು ಸ್ಮೃತಿಗೆ ತಂದುಕೊಳ್ಳುವ ಸಂದರ್ಭವಿದು. ಉಳಿದಂತೆ ನಮ್ಮದು ನಿತ್ಯದ ಬದುಕಿನ ಪಡಿಪಾಟಲು ; ಆಗೆಲ್ಲಾ ಕನ್ನಡತನ ಹಿನ್ನೆಲೆಗೆ ಸರಿಯುತ್ತದೆ. ನವೆಂಬರ್ ನಾಯಕರಾಗದೇ ಎಲ್ಲ ಮಾಸಗಳಲ್ಲೂ ಮಾಸದಂಥ ಕನ್ನಡದ ಕಾಯಕದಲ್ಲಿ ನಿರತರಾದ ಸದ್ದು ಸುದ್ದಿಯಿಲ್ಲದ ಸಾವಿರಾರು ಮಂದಿ ನಮ್ಮೊಡನಿದ್ದಾರೆ. ವೃತ್ತಿ ಯಾವುದಾದರೇನು? ಕಲಿತದ್ದು ಏನಾದರೇನು? ಕನ್ನಡದಲ್ಲಿ ಬರೆಯುವ, ನುಡಿಯುವ … Read more

ಕನ್ನಡಕ್ಕಾಗಿ ಒಂದನ್ನು ಒತ್ತಿ: ಪಿ. ಎಸ್. ಅಮರದೀಪ್

“ನೀವು ಕರೆ ಮಾಡಿದ ಚಂದಾದಾರರು ಬೇರೊಂದು ಕರೆಯಲ್ಲಿ  ಕಾರ್ಯನಿರತರಾಗಿದ್ದಾರೆ”. ಧ್ವನಿ ಕೇಳಿದಾಗೊಮ್ಮೆ ನಿಮಗೆ ಏನನ್ನಿಸುತ್ತೆ ಹೇಳಿ?!!!!  ಆ ಕಡೆಯವರು ಬಿಜಿ ಇದಾರೆ ಅಂತೆಲ್ಲಾ ನೀವು ಹೇಳಬಹುದು….. ಆದರೆ ನನಗೆ ಮಾತ್ರ  “ಅವ್ರು ಕರ್ನಾಟಕದಲ್ಲೇ ಇದ್ದಾರಪ್ಪ”. ಅಂತ.. ಹೌದಲ್ಲ?!! ಮಾತಿಗೆ ಹೇಳಿದೆ….  ಪ್ರತಿ ಬಾರಿ ಏನಾದರೊಂದು ಬರಹ ಶುರು ಮಾಡುವ ಮುನ್ನ ಏನು ಬರೆಯಬೇಕು… ಯಾವುದರ ಬಗ್ಗೆ ಬರೀಬೇಕು. ಯಾಕೆ ಬರೀಬೇಕು ಅಂತೆಲ್ಲಾ ಅನ್ಸುತ್ತೆ… ಬರೆವಾಗ ನಿಜಕ್ಕೂ ಅಷ್ಟುದ್ದ ಏನಾದರೂ ಬರೆದೇನು ಎಂಬ ಖಾತರಿ ಇರುವುದಿಲ್ಲ….  ನನಗೆ ಸ್ಪಷ್ಟವಾಗಿ … Read more

“ಪರಿಸರ”: ನಳಿನ ಬಾಲಸುಬ್ರಹ್ಮಣ್ಯ

ಈ ಪರಿಸರದ ಮಧ್ಯೆ ನಾವು ಜೀವಿಸಿ ರುವುದು, ನಮ್ಮ ಪರಿಸರ ನಮ್ಮ ಜೀವನ. ಅರಣ್ಯ ಸಂಪತ್ತು ತುಂಬ ಉಪಯುಕ್ತವಾದದ್ದು ಹಾಗೂ ಅಮೂಲ್ಯವಾದದ್ದು. ಪೀಠೋಪಕರಣಗಳಿಗೆ ಅಥವಾ ಮನೆ ಅಲಂಕಾರಕ್ಕೆಂದು ಮರಗಳನ್ನು ಕಡಿಯುತ್ತೇವೆ, ಇದರಿಂದ ಕಾಡು ನಾಶವಾಗಿ ಮಳೆ ಇಲ್ಲದಂತಾಗುತ್ತದೆ, ಅಂತರ್ಜಲ ಕಡಿಮೆಯಾಗುತ್ತದೆ. ಕಾಡು ಪ್ರಾಣಿಗಳು ನಾಡಿಗೆ ನುಗ್ಗುವ ಕಾಲ ಅದಾಗಲೇ ಬಂದಿದೆ. ಸಸಿ ನೆಡುವುದು ಆಗಲಿಲ್ಲವೆಂದರೆ ತೊಂದರೆಯಿಲ್ಲ, ಬೆಳೆಸಿದ ಮರಗಳನ್ನು ಕಡಿಯುವ ಕೆಟ್ಟ ಕೆಲಸಕ್ಕೆ ಇಳಿಯುವುದು ಬೇಡ. ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ಸಂರಕ್ಷಿಸುತ್ತದೆ. ಗಿಡ ಮರಗಳನ್ನು … Read more

ಮಧ್ಯಮವರ್ಗದ ಪಾಠವನ್ನು ಮತ್ತೆ ಪರಿಚಯಿಸಿಕೊಟ್ಟ ಆ ಸಂಜೆ. . .: ಡಾ. ಅಮೂಲ್ಯ ಭಾರದ್ವಾಜ್‌

ಒಮ್ಮೆ ಕಾಲೇಜಿನಿಂದ, ಮೀಟಿಂಗ್ ಮುಗಿಸಿ ಹೊರಡುವಷ್ಟರಲ್ಲಿ ತಡವಾಗಿತ್ತು. ಪರೀಕ್ಷೆಯ ಸಮಯವಾದ್ದರಿಂದ ಪ್ರಿನ್ಸಿಪಾಲರು ಎಲ್ಲಾ ಶಿಕ್ಷಕರನ್ನು ಕರೆಸಿ ತಮ್ಮ ತಮ್ಮ ಪ್ರಶ್ನೆ-ಪತ್ರಿಕೆಗಳನ್ನು ತಯಾರಿಸಿ ಕೊಡಲು ನಿರ್ದೇಶಿಸಿದ್ದರು. ಅಂತೆಯೇ ನಾನು ನಿರ್ವಹಿಸುತ್ತಿದ್ದ, ‘ಸಮಾಜಶಾಸ್ತ’್ರ ಪ್ರಶ್ನೆ-ಪತ್ರಿಕೆಯ ಮೂರು ಜೊತೆಯನ್ನು ಸಲ್ಲಿಸಿದ್ದೆ. ಶಕ್ಕುವೂ ತನ್ನ ಇಂಗ್ಲಿಷ್ ಭಾಷೆಯ ಕುರಿತು ನೀಡಿದ್ದಳು. ಎಲ್ಲಾ ಮುಗಿಸಿ ಹೊರಡುವ ಅವಸರದಲ್ಲಿ, ನನಗೆ ಅರಿವಿಲ್ಲದೆ ಪ್ರಿನ್ಸಿಪಾಲರ ಕೊಠಡಿಯಲ್ಲಿಯೇ ನನ್ನ ಪಠ್ಯಕ್ರಮ-ನಕಾಶೆಯನ್ನು ಬಿಟ್ಟು ಬಂದಿದ್ದೆ. ಕಾಲೇಜಿನಾಚೆ ಬಂದಾಗ, ನನ್ನ ಸಹೋದ್ಯೋಗಿ ಮತ್ತು ಹಿರಿಯ ಕನ್ನಡ ಉಪನ್ಯಾಸಕರಾದ ಪ್ರೊ. ಚಂದ್ರಶೇಖರ ಹೆರೂರರು … Read more