೩೬೦ ಡಿಗ್ರೀ ಪುಸ್ತಕದ ತಾಕಿದ ಸಾಲುಗಳು: ಅನುರಾಧಾ ಪಿ. ಸಾಮಗ  

ಕವಿ ಕೊಲರಿಜ್ ನ ಪ್ರಕಾರ, ʼಗದ್ಯದ ಗುರಿ ಓದುಗನಿಗೆ ವಾಸ್ತವವನ್ನು ತಲುಪಿಸುವುದು ಮತ್ತು ಪದ್ಯದ ಗುರಿ ಓದುಗನನ್ನು ತಾನೇ ತಲುಪಿ ಸಂತೋಷಗೊಳಿಸುವುದುʼ. ಹಾಗಾಗಿ ಗದ್ಯವೊಂದು ತಾನೆಷ್ಟೇ ಪ್ರಭಾವಶಾಲಿಯೆನಿಸಿಕೊಂಡಿದ್ದರೂ  ಹೆಚ್ಚಿನಸಲ ಬುದ್ದಿಯ ಪರಿಧಿಯೊಳಗೇ ನೆಲೆ ನಿಲ್ಲುತ್ತದೆ. ಅದೇ ಚಂದದ ಪದ್ಯವೊಂದು ಬುದ್ದಿಯನ್ನು ದಾಟಿ ಸೀದಾ ಭಾವದ ಕದ ತಟ್ಟಿಯೊಳಗೆ ಪದವಿಟ್ಟು ಮನಸ ಮನೆ ಮಾಡಿ ನಿಲ್ಲುತ್ತದೆ.  ವಾಸ್ತವವನ್ನೇ ಎದುರಿನವನ ಬುದ್ಧಿ-ಭಾವಗಳೆರಡೂ ತಣಿಯುವಂತೆ ಹೇಳಬೇಕಾದರೆ ಬಹುಶಃ ಪದ್ಯದ ಜಾಡಿನಲ್ಲಿ ಗದ್ಯವನ್ನು ಮುನ್ನಡೆಸಲಿಕ್ಕೆ ಬೇಕಾದಂತೆ ಒಂದು ಸೂಕ್ಷ್ಮ ಎಚ್ಚರದಲ್ಲಿ ಭಾಷೆಯನ್ನು ಬಳಸಿಕೊಳ್ಳುವ … Read more

ಒಂದು ಐ ಲವ್ ಯು ಗೆ ಒಂದು ಮುತ್ತು ಅಂದ್ರು…: ಮಾಲಾ ಕೆ.

ಬಾಗಿಲು ತೆಗೆದು ಒಳಗೆ ಬಂದೆ, ಸ್ಕೂಲ್ ನಿಂದ ಬಂದಿರೋ ನನಗೆ ಈಗ ವಿಶ್ರಾಂತಿ ಬೇಕು ಅಂತ ಅನಿಸ್ತು, ಕೆಲ ಗಳಿಗೆ ಕಾಲು ಚಾಚಿ ಕೂತೇ…. ನೀನು ಬೇಕು ಅನಿಸ್ತು, ಮನಸು ಖಾಲಿ ಅನ್ಸುದ್ರು ಆವರಿಸಿಕೊಂಡೇ ಇರೋ ಶಕ್ತಿ ಇರೋದು ನಿನ್ ಒಬ್ಬನಿಗೆ. ದಣಿದ ದೇಹಕ್ಕೆ ನಿನ್ನ ನೆನಪು ಹಿತ ಅನಿಸ್ತಾ ಇದೆ. ವಿಶಾಲ ಎದೆಯಲ್ಲೊಮ್ಮೆ ತಲೆ ಇರಿಸಿ, ನಿನ್ನ ಹೂ ಮುತ್ತೊಂದ ಬಯಸ್ತಾ ಇದ್ದೀನಿ ಒಂಥರಾ ಎನರ್ಜಿ ಟಾನಿಕ್. ನೀನು ನನ್ ಜೊತೆ ಇರೋ ಪ್ರತಿಗಳಿಗೇನೂ ಸಂಭ್ರಮ … Read more

ಪ್ರೀತಿಯ ಪರಾಕಾಷ್ಠೆ- ಕಾತಲ್‌, ದಿ ಕೋರ್ : ಎಂ ನಾಗರಾಜ ಶೆಟ್ಟಿ

ಪ್ರತಿಯೊಬ್ಬ ಮನುಷ್ಯನಿಗೂ ಅವನಿಚ್ಛೆಯಂತೆ ಬದುಕುವ ಹಕ್ಕಿದೆ. ಆದರೆ ಆ ಹಕ್ಕನ್ನು ನಿರಾಕರಿಸಲಾಗುತ್ತದೆ. ಲಿಂಗ ತಾರತಮ್ಯ, ಶ್ರೇಣೀಕರಣಗಳ ಜೊತೆಯಲ್ಲಿ ದೈಹಿಕ ಬೇಡಿಕೆಗಳನ್ನೂ ಸಮಾಜ ಕಟ್ಟುಪಾಡಿಗೊಳಪಡಿಸಿದೆ. ಅನಾದಿ ಕಾಲದಿಂದಲೂ ಸಿದ್ಧ ಮಾದರಿಗಿಂತ ಭಿನ್ನವಾದ ಗಂಡು- ಹೆಣ್ಣಿನ ಲೈಂಗಿಕ ತುಡಿತಗಳಿವೆ. ಇವು ಪ್ರಕೃತಿ ದತ್ತವಾಗಿಯೇ ಇದ್ದರೂ ಸಾಮಾಜಿಕ ನಿಷೇಧದಿಂದಾಗಿ ಅವಹೇಳನೆ, ಬರ್ತ್ಸನೆ ಹಾಗೂ ದುರಂತಗಳಿಗೆ ಕಾರಣವಾಗಿವೆ. ಇತ್ತೀಚೆಗೆ- ಕೋರ್ಟ್‌ ತೀರ್ಪೂ ಕಾರಣವಾಗಿ- ಜನರಲ್ಲಿ ಕೆಲ ಮಟ್ಟಿಗೆ ಅರಿವು ಉಂಟಾಗಿ ಲೈಂಗಿಕ ಅಲ್ಪಸಂಖ್ಯಾತರ ಕುರಿತ ಸಿನಿಮಾ, ನಾಟಕ, ಮುಕ್ತ ಸಂವಾದಗಳಿಗೆ ಅವಕಾಶ ದೊರೆತಿದೆ. … Read more

ಪುಸ್ತಕದ ಪೇಟೆಯಲ್ಲಿ ಈಗ ಹೊಚ್ಚ ಹೊಸ ಪುಸ್ತಕ “ಡಂಕಲ್ ಪೇಟೆ”

ಪುಸ್ತಕ: ಡಂಕಲ್ ಪೇಟೆ (ಕಥಾ ಸಂಕಲನ)ಲೇಖಕರು: ವೀರೇಂದ್ರ ರಾವಿಹಾಳ್ಪ್ರಕಾಶಕರು: ವಿಜಯ ಬುಕ್ಸ್, ಬಳ್ಳಾರಿಪುಟಗಳು: 148ಬೆಲೆ: Rs. 180/- (ಅಂಚೆ ವೆಚ್ಚ ಸೇರಿ)ಪ್ರತಿಗಳಿಗಾಗಿ ಸಂಪರ್ಕಿಸಿ: 9449622737Phone pay: 8660557637Google pay : 9449622737

ಹಲ್ಮಿಡಿ ಶಾಸನ ಕ್ರಿ.ಶ.ಸುಮಾರು ೪೫೦ -ಒಂದು ಟಿಪ್ಪಣಿ: ಸಂತೋಷ್ ಟಿ

ಜಯತಿ ಶ್ರೀ ಪರಿಷ್ವಙ್ಗ ಶಾರ್ಙ್ಗ (ಮಾನ್ಯತಿ) ರಚ್ಯುತಃದಾನವಾಕ್ಷೋರ್ಯುಗಾನ್ತಾಗ್ನಿಃ (ಶಿಷ್ಟಾನಾನ್ತು) ಸುದರ್ಶನಃನಮಃ ಶ್ರೀಮತ್ಕದಂಬನ್ತ್ಯಾಗಸಂಪನ್ನನ್ಕಲಭೋರ(ನಾ)ಅರಿಕಕುಸ್ಥಭಟ್ಟೋರನಾಳೆ ನರಿದಾವಿ(ಳೆ) ನಾಡುಳ್ ಮೃಗೇಶನಾಗೇನ್ದ್ರಾಭೀಳರ್ಭ್ಭಟಹರಪ್ಪೋರ್ ಶ್ರೀಮೃಗೇಶನಾಗಾಹ್ವಯರಿರ್ವ್ವರಾ ಬಟರಿಕುಲಾಮಲವ್ಯೋಮತಾರಾಧಿನಾಥನ್ನಳಪಗಣಪಶುಪತಿಯಾ ದಕ್ಷಿಣಾದಿ ಬಹು ಶತವಹನಾಹವದು(ಳ್ ) ಪಶುಪ್ರದಾನ ಶೌರ್ಯ್ಯೋದ್ಯಮಭರಿತೊ(ನ್ದಾನ ) ಪಶುಪತಿಯೆನ್ದು ಪೊಗಳೆಪ್ಪೊಟಣ ಪಶುಪತಿನಾಮಧೇಯನಾ ಸರಕ್ಕೆಲ್ಲ ಭಟರಿಯಾ ಪ್ರೇಮಾಲಯಸುತನ್ಗೆ ಸೇನ್ದ್ರಕಬಣೋಭಯ ದೇಶದಾವೀರಾಪುರುಷ ಸಮಕ್ಷದೆ ಕೇಕೆಯಪಲ್ಲವರಂ ಕಾದೆರೆದು ಪೆತ್ತಜಯನಾ ವಿಜಅರಸನ್ಗೆ ಬಾಳ್ಗಚ್ಚು ಪಲ್ಮಿಡಿಉಂ ಮೂಳವಳ್ಳಉಂ ಕೊಟ್ಟಾರ್ ಬಟಾರಿಕುಲದೊನಳಕದಮ್ಬನ್ಕಳ್ದೋನ್ ಮಹಾಪಾತಕನ್ಇರ್ವ್ವರುಂ ಸಳ್ಬಙ್ಗದರ್ ವಿಜಾರಸರುಂ ಪಲ್ಮಿಡಿಗೆ ಕುರುಮ್ಬಿಡಿವಿಟ್ಟಾರ್ ಅದಾನಳೆವೊನ್ಗೆ ಮಹಾಪಾತಕಮ್ ಸ್ವಸ್ತಿಭಟ್ಟರ್ಗ್ಗಿಗಳ್ದು ಒಡ್ತಲಿ ಆಪತ್ತೊನ್ದಿವಿಟ್ಟಾರಕರ. ಕನ್ನಡನಾಡಿನ ಮೊತ್ತಮೊದಲ ಭಾಷಿಕ ಸಾಂಸ್ಕೃತಿಕ ದಾಖಲೆಯಾಗಿರುವ ಈ … Read more

ಪದ್ದಕ್ಕಜ್ಜಿ ಮದುವಿ: ಡಾ.ವೃಂದಾ ಸಂಗಮ್

ಅಂದರ ಇದು ನಮ್ಮ ಪದ್ದಕ್ಕಜ್ಜಿ ಮದುವಿ ಅಲ್ಲ, ಅಕೀ ಮದುವ್ಯಾಗಿ ಐವತ್ತ ಅರವತ್ತ ವರ್ಷಾಗೇದ. ಅಕೀ ಮೊನ್ನೆ ಮೊನ್ನೆ ಮಾಡಿದ ಮೊಮ್ಮಗನ ಮದುವೀ ಕತಿಯಿದು. ಅಷ್ಟ. ಮೊನ್ನೆ ನಮ್ಮ ಪದ್ದಕ್ಕಜ್ಜಿ ಬಂದಿದ್ದಳು. ಪದ್ದಕ್ಕಜ್ಜಿ ಅಂದರ ಅಕೀ ಏನೂ ಸಾಮಾನ್ಯದಾಕಿ ಅಲ್ಲ. ಒಂದು ಕಾಲದಾಗ, ನಮ್ಮ ಇಡೀ ಬಾಳಂಬೀಡವನ್ನು ಆಳಿದಾಕಿ. ಅಂದರ, ನಿಮ್ಮ ಬಾಳಂಬೀಡ ಅಂದರ ಒಂದು ದೊಡ್ಡ ಸಾಮ್ರಾಜ್ಯವೇನು ಅಂತಲೋ ಅಥವಾ ಪದ್ದಕ್ಕಜ್ಜಿ ತಾಲೂಕು ಮತ್ತ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೋ ಅಂತ ಪ್ರಶ್ನೆ ಕೇಳ ಬ್ಯಾಡರೀ. ಉತ್ತರಾ … Read more

ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಪದ್ಯಗಳು

(೧)ಮುಚ್ಚಿ ನಿಮ್ಮ ಒಡಕು ಬಾಯಿಬೆದರಿಬಿಟ್ಟಾನು ಮುಗ್ಧ ಹೃದಯಿಕೆಕ್ಕರಿಸುವ ನೋಟ ಬೂದಿಯಾಗುವ ಕೆಂಡಹೊಂಗನಸಿನ ಮನೆಯ ಕಟ್ಟಲುತೊಗಲೊಂದೇ ತೊಟ್ಟಿಲು ಕತೂಹಲದ ರೆಪ್ಪೆಯಗಲಿಸಿಕಲಿವ ತುಡಿತದೆ ನಗೆಯರಳಿಸಿಕುಳಿತ ಭಂಗಿಯ ನೋಡಿಮೋಡಿ ಮಾಡುವ ತೊದಲು ನುಡಿಭವ್ಯಲೋಕಕೆ ಮುನ್ನುಡಿ ಎತ್ತೆತ್ತಲೋ ಸಾಗುತಿಹವು ಕನಸುಗಳುಥಟ್ಟನೆ ಮೈದಳೆದು ಮುಂದೆ ಕುಳಿತಿವೆಮಂಡಿಯೂರಿ; ಎದೆಯ ಕದವ ತೆರೆತೆರೆದುತುಂಬಿ ತುಳುಕಲಿ ಸಿಹಿನುಡಿಯ ಹೊಂದೆರೆಸಾಕಿನ್ನು ಅರೆಬರೆ ಮಾತುಗಳು ಬಿತ್ತಿಬಾರದೇ ನಲ್ನುಡಿ ಇವನು ಅವನಲ್ಲ ಅವನಂತೆ ಇವನಿಲ್ಲಇವನಂತೆ ಅವನಿಲ್ಲ ಅವರಿವರಂತೆ ಇರಬೇಕಿಲ್ಲಅವನೊಲ್ಲೆನೆಂದದ್ದು ಇವನೇನು ಅರಿಯಬೇಕಿಲ್ಲಚಿಗುರುವ ಬಳ್ಳಿಯಿದು ಪಸರಿಸಲಿ ನವಕಂಪು ತನ್ನೊಡಲಲ್ಲಿ. ಒಂದು ಲೋಟದೊಳಗೆ ಹೃದಯಮತ್ತೊಂದರಲ್ಲಿ ಎದೆಯ … Read more

“ಸಿದ್ಧಾಂತಗಳ ಹೇಗೆ ಕೊಲ್ಲುವೆ..?” ಅವಲೋಕನ: ವಿಮಲಾರುಣ ಪಡ್ಡಂಬೈಲ್

ಆನ್ಲೈನ್ ಸಂಗಾತಿ ಪತ್ರಿಕೆಯ ಸಂಪಾದಕರಾದ ಕವಿ ಶ್ರೀ ಕು. ಸ. ಮಧುಸೂದನ ರಂಗೇನಹಳ್ಳಿಯವರ “ಸಿದ್ಧಾಂತಗಳ ಹೇಗೆ ಕೊಲ್ಲುವೆ..?” 50 ಕವಿತೆಗಳ ಗುಚ್ಛದಲ್ಲಿ ಸಮಾಜದ ಸೂಕ್ಷ್ಮತೆಯ ಪಿಸುಮಾತುಗಳು ಮಾರ್ದನಿಸುತ್ತವೆ. ಆಗಾಗ ಪತ್ರಿಕೆಯಲ್ಲಿ ಪ್ರಕಟವಾಗುವ ಇವರ ಕವನಗಳು ಇತರ ಕವಿಗಳ ಕವನಗಳಿಗಿಂತ ಭಿನ್ನವಾಗಿವೆ. ವಾಚ್ಯತೆ ಇದ್ದರೂ ಹರಿತ ಪದಗಳು ಕವನಗಳಲ್ಲಿ ತಿವಿದಂತೆ ಭಾಸವಾಗುತ್ತವೆ. ಬಿಡಿ ಬಿಡಿ ಕವನಗಳನ್ನು ಓದುತ್ತಿದ್ದ ನನಗೆ ಇಡಿಯಾಗಿ ಓದುವ ಅವಕಾಶಕ್ಕಾಗಿ ಸಂತೋಷ ಪಡುತ್ತೇನೆ. ನನ್ನ ಮನದ ಬಾಗಿಲನ್ನು ತಟ್ಟಿದ ಈ ಕವನ ಸಂಕಲನ ಕಾವ್ಯದ ಅರಿವನ್ನು … Read more

ಪಂಜು ಕಾವ್ಯಧಾರೆ

ಬಾಳ ಹಣತೆ ಸುಳ್ಳು ಸತ್ಯದಾಟದಲ್ಲಿಶೂನ್ಯವಾಯಿತೇ ಬದುಕಿಲ್ಲಿ…..ಅನ್ಯಾಯವ ಅವಮಾನವ ಸಹಿಸಿಮುಖವಾಡದ ನಾಟಕವ ದಿಟ್ಟಿಸಿ….ಹಣತೆಯೊಂದನ್ನು ಹಚ್ಚಬೇಕಿದೆಇರಿಸು ಮುರಿಸಿನ ವ್ಯಥೆಯಲ್ಲಿ….ದಾರಿಯ ದೂರ ಸಹಿಸನೆಂದರೆನೆರಳ ಹಂಗು ಬಿಡುವುದೇ….ಯಾರದ್ದೋ ಬದುಕ ಬೆಳಕ ನಂದಿಸಿಕಗ್ಗತ್ತಲು ಎಂಬುವುರೇ……ಗುಡುಗು ಸಿಡಿಲಿನ ಆರ್ಭಟಕ್ಕೆಅಂಜದಿರೆಂದು….ಮತ್ತೆ ಮತ್ತದೇ ಹಣತೆಯಲ್ಲಿಪ್ರಕಾಶಮಾನವಾದ ಬೆಳಕು ಹೊಮ್ಮಲಿ…..ನೋವು ನಲಿವಿಗೆ ಕಾಲದಲೆಕ್ಕವಿಲ್ಲಿ…..ಅಂಧಕಾರವೇ ತುಂಬಿದ ಮನಗಳಲ್ಲಿಹೃದಯ ಜ್ಯೋತಿ ಬೆಳಗಲಿ -ರೋಹಿಣಿ ಪೂಜಾರಿ ಕೋಣಾಲು. ದೂರು… ಈ ಪದಗಳೇ ಮೊದಲಿನಂತಿಲ್ಲ..ಯಾವ ಭಾವಕ್ಕೂಹೊಂದಿಕೊಳ್ಳುವುದಿಲ್ಲಕವಿತೆಗಾಗಿ ಹಂಬಲಿಸುವ ನನ್ನಂಥವನನ್ನು ಬೆಂಬಲಿಸುವುದಿಲ್ಲ..ಅರ್ಥಕ್ಕೆ ಅಪಾರ್ಥ ಕೊಡುವ ಇವು ಪದಗಳೇ ಅಲ್ಲ ಎದೆಯೊಳಗೆ ಹದವಾಗಿ ಹುಟ್ಟುವ ಇವುಯಾರ ಕಿವಿಗೂ ಮುಟ್ಟುವುದಿಲ್ಲ..ಗಂಟಲಲ್ಲಿ ತೂರಿ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೬): ಎಂ.ಜವರಾಜ್

ಭಾಗ – 6 ದಂಡಿನ ಮಾರಿಗುಡಿಲಿ ಹಾಕಿರೊ ಮೈಕ್ ಸೆಟ್ಟಿಂದ ಪರಾಜಿತ ಪಿಚ್ಚರ್ ನ ‘ಸುತ್ತ ಮುತ್ತಲು ಸಂಜೆ ಗತ್ತಲು..’ ಹಾಡು ಮೊಳಗುತ್ತಿತ್ತು. ಸುಣ್ಣಬಣ್ಣ ಬಳಿದುಕೊಂಡು ಹೊಳೆಯುತ್ತಿದ್ದ ಮಾರಿಗುಡಿ ಮುಂದೆ ಐಕ್ಳುಮಕ್ಳು ಆ ಹಾಡಿಗೆ ಥಕ್ಕಥಕ್ಕ ಅಂತ ಕುಣಿಯುತ್ತಿದ್ದವು. ಅವುಗಳೊಂದಿಗೆ ಕಿಸಿಕಿಸಿ ಅಂತ ಪಾಚಿ ಕಟ್ಟಿಕೊಂಡಿದ್ದ ಹಲ್ಲು ಬಿಡುತ್ತ ನೀಲಳೂ ಕುಣಿಯುತ್ತಿದ್ದಳು. ಈ ಐಕಳು ಕುಣಿಯುತ್ತಾ ಕುಣಿಯುತ್ತಾ ಗುಂಪು ಗುಂಪಾಗಿ ಒತ್ತರಿಸಿ ಒತ್ತರಿಸಿ ಅವಳನ್ನು ಬೇಕಂತಲೇ ತಳ್ಳಿ ಇನ್ನಷ್ಟು ಒತ್ತರಿಸಿ ನಗಾಡುತ್ತಾ ಎಂಜಾಯ್ ಮಾಡುತ್ತಿದ್ದವು. ನೀಲಳು ಆ … Read more

ಸ್ವಾಮ್ಯಾರ `ಸೌಜನ್ಯ’ : ಎಫ್. ಎಂ. ನಂದಗಾವ

ಬೆಂಗಳೂರಿನ ಸಂಚಲನ ಪ್ರಕಾಶನ ಸಂಸ್ಥೆಯು ಪ್ರಕಟಿಸುತ್ತಿರುವ, ಎಫ್. ಎಂ. ನಂದಗಾವ ಅವರ ಹೊಸ ಕಥಾ ಸಂಕಲನ ಘಟ ಉರುಳಿತು’ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಅದರಲ್ಲಿ ಒಟ್ಟು ಹತ್ತು ಕತೆಗಳಿದ್ದು, ಅವುಗಳಲ್ಲಿನ ಕೆಲವು ನಾಡಿನ ಹಲವಾರು ಪತ್ರಿಕೆಗಳಲ್ಲಿ ಈಗಾಗಲೆ ಪ್ರಕಟಗೊಂಡು ಓದುಗರ ಗಮನ ಸೆಳೆದಿವೆ. ಪ್ರಸ್ತುತಘಟ ಉರುಳಿತು’ ಕಥಾ ಸಂಕಲನದಲ್ಲಿನ ಸ್ವಾಮ್ಯಾರ ಸೌಜನ್ಯ’ ಕತೆ ‘ಪಂಜು’ವಿನ ಓದುಗರಿಗಾಗಿ. . “ಊರಾಗ, ಬಾಳ ಅನ್ಯಾಯ ಆಗಾಕ ಹತ್ತೇದ, ಸ್ವಾಮ್ಯಾರು ಎಡವಟ್ಟ . . ” ಸಂತ ಅನ್ನಮ್ಮರ ಗುಡಿಯ ವಿಚಾರಣಾ ಗುರುಗಳ … Read more

ದೀವಾಪುರ: ರವಿರಾಜ್ ಸಾಗರ್. ಮಂಡಗಳಲೆ.

ತವರು ನೆಲಕ್ಕೆ ಕಾಲಿಡುತ್ತಿದ್ದಂತೆ ಕಳೆದುಕೊಂಡ ಅಮೂಲ್ಯ ವಸ್ತುವೊಂದು ಮತ್ತೆ ಸಿಕ್ಕಾಗಿನ ಸಂತಸ, ಮತ್ತದೇನೂ ಅನುಭೂತಿ, ನವ ಯುವಕರಲ್ಲಿ ಕಾಣುವಷ್ಟು ಉತ್ಸಾಹ, ಎಂಭತ್ತರ ಇಳಿವಯಸ್ಸಿನ ನಾರಣಪ್ಪನಲ್ಲಿ ಆದ್ರೆಮಳೆಯ ವರದಾನದಿಯಂತೆ ಉಕ್ಕಿ ಹರಿಯುತ್ತಿತ್ತು. ಬಹಳ ದಶಕದ ನಂತರ ಅಮೆರಿಕದಿಂದ ಊರಿಗೆ ಬರುತಿದ್ದ ನಾರಣಪ್ಪ ಅವರನ್ನು ಸ್ವಾಗತಿಸಲು ಊರಿನ ಅರಳೀಕಟ್ಟಿ ಬಳಿ ಒಂದಿಷ್ಟು ಜನ ಜಮಾಯಿಸಿದ್ದರು. ಅಮೆರಿಕದಿಂದ ಬರುತ್ತಿದ್ದಾರೆ ಎಂದಮೇಲೆ ನಾರಣಪ್ಪ ಅವರು ಅಲ್ಲಿ ಇಂಜಿನಿಯರೋ, ಡಾಕ್ಟರೋ, ವಿಜ್ಞಾನಿಯೋ, ಯಾವುದೋ ದೊಡ್ಡ ನೌಕರಿಗೋ ಹೋಗಿರಬೇಕೆಂದು ತಿಳಿಯಬೇಡಿ. ಅವರು ಎಪ್ಪತ್ತರ ದಶಕದ ಗೇಣಿ … Read more

ಸ್ತ್ರೀ ಮತ್ತು ದಲಿತ ಸಂವೇದನೆಯ ವೈರುಧ್ಯಗಳ ನಡುವಿನ ಮಾನವೀಯ ಮೌಲ್ಯಗಳ ಶೋಧ: ಎಂ ಜವರಾಜ್

ನಾನು ಈಚೆಗೆ ಕಣ್ಣಾಡಿಸಿದ ಒಂದು ಕೃತಿ ಕೆ.ಶ್ರೀನಾಥ್ ಅವರ ‘ಕನಸು ಸೊಗಸು’. ಇದಕ್ಕು ಮುನ್ನ ಇವರ ಕೆಲವು ಬರಹಗಳನ್ನು ಫೇಸ್ ಬುಕ್ ನಲ್ಲಿ ಗಮನಿಸಿದ್ದೆ. ಅವು ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಸ್ಪಂದಿಸುವ ಪ್ರಗತಿಪರವಾದ ಧ್ವನಿಪೂರ್ಣವಾದ ಮಾನವೀಯ ತುಡಿತದ ಬರಹಗಳು. ಆಗಾಗ ಎಫ್.ಬಿ ಲೈವ್ ಗೆ ಬರುವ ಕೆ.ಶ್ರೀನಾಥ್ – ಕಥೆ ಕವಿತೆ ವಾಚಿಸಿ ಗಮನ ಸೆಳೆದವರು. ವೀಣೆ ಮತ್ತಿತರ ವಾದ್ಯ ನುಡಿಸುವ, ವಿವರಿಸುವ ಬಹುಗುಣವುಳ್ಳವರು. ಇದಲ್ಲದೆ ಕನ್ನಡ ಕಿರುತೆರೆ, ಹಿರಿತೆರೆ ಕಲಾವಿದರೂ ಕೂಡ. ಇವರ ಬರಹಗಳನ್ನು ಗಮನಿಸಿದಂತೆ … Read more

ಇದು ಬೇಬಿ ಮೀಲ್ಸ್ ಕಾಲವಯ್ಯ: ಸರ್ವ ಮಂಗಳ ಜಯರಾಮ್

ಮೊನ್ನೆ ನಮಗೆ ಪರಿಚಯದವರೊಬ್ಬರ ಮದುವೆಗೆ ಹೋಗಿದ್ದೆವು. ಮದುವೆ ಊಟಕ್ಕೆ ರಶ್ಶೋ ರಶ್ಶು.. ಹೋಗಲಿ ಮೊದಲು ವೇದಿಕೆ ಹತ್ತಿ ಗಂಡು ಹೆಣ್ಣನ್ನು ಮಾತನಾಡಿಸಿ ಪ್ರೆಸೆಂಟೇಷನ್ ಕವರ್ ಕೊಟ್ಟು ಫೋಟೋಗೆ ಫೋಸ್ ನೀಡಿ ನಂತರ ಊಟಕ್ಕೆ ಹೋಗೋಣವೆಂದು ಹೋದರೆ ಅಲ್ಲಿಯೂ ವಿಪರೀತ ರಶ್ಶು.. ಮತ್ತೇನು ಮಾಡುವುದು ಸರತಿ ಸಾಲಿನಲ್ಲಿ ಒಂದು ಗಂಟೆ ನಿಂತು ಮುಂದೆ ಹೋಗಿದ್ದಾಯಿತು. ಮದುವೆಯಲ್ಲಿ ಗಂಡು ಹೆಣ್ಣಿನ ಸಂಭ್ರಮವೇ ಸಂಭ್ರಮ. ಅವರು ತಮ್ಮದೇ ಆದ ಪ್ರೇಮಲೋಕದಲ್ಲಿ ಅದಾಗಲೇ ವಿಹರಿಸುತ್ತಾ ಇರುತ್ತಾರೆ. ಸುಮ್ಮನೆ ನೆಪ ಮಾತ್ರಕ್ಕೆ ಅಲ್ಲಿ ಬಂದವರ … Read more

“ಕತ್ತಲ ಹೂವು” ನೀಳ್ಗತೆ (ಭಾಗ ೫): ಎಂ.ಜವರಾಜ್

ಭಾಗ 5 ಬೆಳಗಿನ ಜಾವದೊತ್ತಲ್ಲಿ ಮುಂಗಾರು ಬೀಸ್ತಿತ್ತು. ಶೀತಗಾಳಿ. ದೊರ, ವಾಟೀಸು, ಕಾಂತ, ಕುಮಾರ, ಚಂದ್ರ ಎಲ್ಲ ಶಿಶುವಾರದ ಜಗುಲಿ ಮೇಲೆ ಶೀತಗಾಳಿಗೆ ನಡುಗುತ್ತ ತುಟಿ ಅದುರಿಸುತ್ತ ಪಚ್ಚಿ ಆಡುತ್ತಿದ್ದವು. ಶೀತಗಾಳಿ ಜೊತೆಗೆ ಸಣ್ಣ ಸಣ್ಣ ಹನಿ ಉದುರಲು ಶುರು ಮಾಡಿತು. ಶಿಶುವಾರದ ಜಗುಲಿ ಕೆಳಗೆ ನೆಲ ಕೆಂಪಗಿತ್ತು. ಕೆಮ್ಮಣ್ಣು. ಕೆಂಪು ಅಂದ್ರೆ ಕೆಂಪು. ಹನಿ ಉದುರುವುದ ಕಂಡು ಪಚ್ಚಿ ಆಡುವುದನ್ನು ನಿಲ್ಲಿಸಿ ಕೆಳಗಿಳಿದು ಮೊನಚಾದ ಬೆಣಚು ಕಲ್ಲು, ಕಡ್ಡಿ ತೆಗೆದುಕೊಂಡು ಕೆಮ್ಮಣ್ಣು ಕೆದಕಿ ಅಲ್ಲೆ ಅವರವರದೇ … Read more

ಪಂಜು ಕಾವ್ಯಧಾರೆ

ಕನ್ನಡ ಬಳಗ ನೋಡ ಬನ್ನಿರಿ ಗೆಳೆಯರೆನಮ್ಮ ಕನ್ನಡ ಬಳಗವನುಕಸ್ತೂರಿಯ ತವರನ್ನು. . . . ವಿಕ್ರಮಾರ್ಜುನ ಸಾಹಸ ಭೀಮಅವತಾರ ತೋರಿದವು.ಪಂಚತಂತ್ರ ರಾಮಚರಿತಪುರಾಣವು ಬೆಳಗಿದವು ಪ್ರಭುವಿನ ಜೊತೆಯಲ್ಲಿ ಅಕ್ಕನುಅಣ್ಣನು ಪುಣ್ಯವಿದೇನುರೀರಗಳೆಯ ಜೊತೆಯಲಿ ಷಟ್ಟದಿಕೀರ್ತನೆ ನೃತ್ಯವ ನೋಡಿರೀ ಶ್ರೀರಾಮನ ನಾಕು ಕನಸನು ಸಣ್ಣಕಥೆಯಲಿ ಹೇಳಿದ ಮಂಕುತಿಮ್ಮಮಲ್ಲಿಗೆ ಸಂಪಿಗೆ ಬಕುಲದ ಹೂಗಳುಅರಳಿವೆ ನೋಡು ಬಾರೊ ತಮ್ಮ ಕಾಂತಿಯಿಂದ ಹೊಳೆಯುವ ಬಹುವಿಧವಾಸ್ತಿಶಿಲ್ಪದ ಚಂದವುಕಣ್ಣೆದುರಿದ್ದರು ಕಾಣದಾಗಿದೆಕವಿದಿದೆ ಕಪ್ಪು ಮೋಡವು -ಡಾ. ಶಿವಕುಮಾರ್ ಆರ್ ಕನ್ನಡಉಸಿರುಸಿರಲಿ ಹೆಸರೆಸರಲಿಹೊಸೆದಿರಲಿ ಕನ್ನಡ.ಕಸುವಾಗಲಿ ಬೆಸಗೊಳ್ಳಲಿಜಸವಾಗಲಿ ಕನ್ನಡ. ಹಸಿರಸಿರ ಸಹ್ಯಾದ್ರಿಯೇಶಿಖರ ನಿನಗೆ … Read more

ಡಿಜಿಟಲ್ ಯುಗದಲ್ಲಿ ಕನ್ನಡ ಮತ್ತು ಸೃಜನಶೀಲತೆ: ವಿಜಯ್ ದಾರಿಹೋಕ

ಸುಮಾರು ಏಳು ಸಾವಿರ ಕಿಲೋ ಮೀಟರ್ ದೂರದ ಸ್ವೀಡನ್ ನಿಂದ, ಬಾಳೆಕಾಯಿಯ ಹಲ್ವಾ ಮಾಡುವ ವಿಧಾನ ತಿಳಿಸುವಂತೆ ಅಮ್ಮನಿಗೆ ಕರೆ ಮಾಡಿದಾಗ ಆಕೆ, ಯು ಟ್ಯೂಬ್ ಗೆ ಹೋಗಿ ಭಟ್ ಎನ್ ಭಟ್ ಎನ್ನುವ ಚಾನ್ನೆಲ್ ಹುಡುಕಿ, ಅಲ್ಲಿ ಕೊಟ್ಟ ಅಡುಗೆ ವಿಡಿಯೋ ನೋಡಿ ಮಾಡು, ಚೆನ್ನಾಗಿರುತ್ತೆ ಅಂದು ಬಿಡಬೇಕೇ?. ಕೇವಲ ಒಂದು ಸ್ಮಾರ್ಟ್ ಫೋನ್ ಹಾಗೂ 4G ಯ ನೆಟ್ವರ್ಕ್ ಜೊತೆಗೆ ಅಮ್ಮ ಈಗ ಡಿಜಿಟೀಕರಣದ ತೆಕ್ಕೆಗೆ ಬಂದಿರುವ ಬಗ್ಗೆ ನನಗೆ ಸ್ಪಷ್ಟ ಸಂದೇಶ ಸಿಕ್ಕಿತು. … Read more

ದೇಶ ದೇಶಗಳ ಗಡಿಗಳ ಗೂಗಲ್ ನೋಟ: ಎಫ್. ಎಂ. ನಂದಗಾವ

ಪ್ರಭುತ್ವಕ್ಕೆ ತನ್ನ ಆಡಳಿತಕ್ಕೆ ಒಳಪಟ್ಟ ಪ್ರದೇಶದ ನಿಗದಿಗೆ ನಕಾಶೆ ಬೇಕು. ಊರುಗಳ, ಹೋಬಳಿಗಳ, ತಾಲ್ಲೂಕುಗಳ, ರಾಜ್ಯಗಳ, ರಾಷ್ಟ್ರಗಳ ನಕಾಶೆ ಎಂದಾಗ ಅವುಗಳ ಭೌಗೋಳಿಕ ವ್ಯಾಪ್ತಿ ನಿಗದಿಯಾಗಬೇಕು, ಆ ವ್ಯಾಪ್ತಿಯನ್ನು ನಿಗದಿ ಮಾಡುವುದು ಎಂದರೆ ಗಡಿ ಅಥವಾ ಎಲ್ಲೆಯನ್ನು ಗುರುತಿಸುವುದು. ಗಡಿ ಗೆರೆಯು ಅಥವಾ ಎಲ್ಲೆಯ ರೇಖೆಯು ಆಯಾ ಭೌಗೋಳಿಕ ಪ್ರದೇಶದ ವ್ಯಾಪ್ತಿಯನ್ನು ಗುರುತಿಸುವ ಗೆರೆ. ಇದು ದೇಶ ದೇಶಗಳ ನಡುವಣ ಲಕ್ಷö್ಮಣ ರೇಖೆ. ಪರವಾನಿಗೆ, ರಹದಾರಿ ದಾಖಲೆ (ಪಾಸ್ ಪೋರ್ಟ) ಇಲ್ಲದೇ ಈ ಕಡೆಯವರು ಆ ಕಡೆಗೆ … Read more