ಸಮಾಜಮುಖಿ ಕಥಾ ಪುರಸ್ಕಾರ-2024 ಆಹ್ವಾನ

ಸಮಾಜಮುಖಿ ಪ್ರಕಾಶನ ಕನ್ನಡದ ಕಥಾಪರಂಪರೆಗೆ ಅರ್ಥಪೂರ್ಣ ಪ್ರಚೋದನೆ ನೀಡುವ ಉದ್ದೇಶದಿಂದ ‘ಸಮಾಜಮುಖಿ ವಾರ್ಷಿಕ ಕಥಾ ಪುರಸ್ಕಾರ-2024’ ಏರ್ಪಡಿಸಿದೆ. ಸಮಾಜಮುಖಿ ಪುರಸ್ಕಾರಕ್ಕೆ ಆಯ್ಕೆಯಾಗುವ ಐದು ಕಥೆಗಾರರಿಗೆ ತಲಾ ರೂ.5000 ನಗದು ನೀಡಿ ಗೌರವಿಸಲಾಗುವುದು. ಜೊತೆಗೆ ಆಯ್ದ ಹದಿನೈದು ಕಥೆಗಳಿಗೆ ಸಮಾಜಮುಖಿ ವಾರ್ಷಿಕ ಕಥಾ ಸಂಕಲನದಲ್ಲಿ ಅವಕಾಶ ಸಿಗಲಿದೆ. ಕಥೆಗಾರರು 2000 ಪದಮಿತಿಯ, ಯಾವ ಮಾಧ್ಯಮದಲ್ಲೂ ಪ್ರಕಟವಾಗದ, ನುಡಿ/ಯುನಿಕೋಡ್ ಲಿಪಿಯಲ್ಲಿರುವ ಕಥೆಯನ್ನು ವರ್ಡ್ ಕಡತದಲ್ಲಿ 31 ಡಿಸೆಂಬರ್ 2024ರೊಳಗೆ ಕಳುಹಿಸಬೇಕಾದ ಇಮೇಲ್ ವಿಳಾಸ: samajamukhi2017@gmail.com

ಯುದ್ಧ ಮತ್ತು ಮಕ್ಕಳು: ನಾಗಸಿಂಹ ಜಿ ರಾವ್

ಯುದ್ಧ, ನೈಸರ್ಗಿಕ ವಿಕೋಪ, ಶೋಷಣೆ, ದೌರ್ಜನ್ಯಗಳಿಂದ ಮಕ್ಕಳಿಗೆ ರಕ್ಷಣೆ ಕೊಡಬೇಕೆಂದು ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ತಿಳಿಸಿದೆ. ವಿಶ್ವಸಂಸ್ಥೆಯ ಈ ಆದೇಶವನ್ನು ಒಪ್ಪಿಕೊಂಡು ಒಡಂಬಡಿಕೆಗೆ ಸಹಿ ಮಾಡಿ ಯುದ್ಧದಲ್ಲಿ ತೊಡಗಿರುವ ರಾಷ್ಟ್ರಗಳ ಮಕ್ಕಳ ಪರಿಸ್ಥಿತಿ ನಿಜಕ್ಕೂ ಶೋಚನೀಯ. ಯುದ್ಧ ಮಾನವನ ಎಲ್ಲಾ ಹಕ್ಕುಗಳನ್ನು ಉಲ್ಲಂಘನೆ ಮಾಡಿ ಮಾನವನ ಘನತೆ ಮತ್ತು ಗೌರವವನ್ನು ಮಣ್ಣುಪಾಲು ಮಾಡುತ್ತದೆ. ಯುದ್ಧದಲ್ಲಿ ಗೆದ್ದೆವು ಎಂದು ಭ್ರಮೆಗೆ ಒಳಗಾಗುವ ರಾಷ್ಟ್ರಗಳು ಹಾಗೂ ಸೋತೆವು ಎಂದು ಪರಿತಪಿಸುವ ರಾಷ್ಟ್ರಗಳು ಚೇತರಿಸಿಕೊಳ್ಳಲು ಹಲವಾರು … Read more

ಕ್ಷಮಾ ಕೊನೆಗೂ ನಕ್ಕಳು . . . . . !!!!!: ನಾಗಸಿಂಹ ಜಿ. ರಾವ್

“ಗುರುಗಳೇ. . ಮುಂದಿನ ವಾರದಿಂದ ನಮ್ಮ ಸಂಸ್ಥೆಗೆ ಕಥೆ ಹೇಳೋಕೆ ಬರಬೇಕು. . ಇಲ್ಲಾ ಅನ್ನಬೇಡಿ” ಅಂತ ಫಾದರ್ ಜಾನ್ ಹೇಳಿದಾಗ ಬಹಳ ಖುಷಿಯಾಯ್ತು .“ಮಕ್ಕಳಿಗೆ ಕಥೆ ಹೇಳೋ ಚಾನ್ಸ್ ಬಿಡೋಕೆ ಆಗುತ್ತಾ ಫಾದರ್ ಖಂಡಿತ ಬರ್ತೀನಿ, ಪ್ರತಿದಿನ ಸಂಜೆ ೪-೬ ಸಮಯ ಕೇವಲ ಎರಡು ವಾರ ಓಕೆನಾ? ಅಂದೆ, ಫಾದರ್ ಬಹಳ ಸಂತೋಷದಿಂದ ಒಪ್ಪಿಕೊಂಡರು.ಫಾದರ್ ಜಾನ್ “ಆಸರೆ” ಅನ್ನೂ ಮಕ್ಕಳ ಸಂರಕ್ಷಣಾ ಗೃಹವನ್ನ ಸುಮಾರು ವರುಷಗಳಿಂದ ನಡೆಸಿಕೊಂಡು ಬರ್ತಿದಾರೆ. ಅವರ ಸಂಸ್ಥೆಗೆ ಮಕ್ಕಳ ರಕ್ಷಣಾ ನೀತಿ … Read more

ಮಾತಿನ ಮಾತು: ಡಾ. ಮಸಿಯಣ್ಣ ಆರನಕಟ್ಟೆ.

“ನೀಲಕುರಿಂಜಿ” ಅರೇ, ಅದೆಂತಹ ಮುದ್ದಾದ ಹೆಸರು. ಒಂದು ಕ್ಷಣ ಮನಸ್ಸಿನ ಮಾದಕತೆಯಲ್ಲಿ ಕರಗುವುದಂತೂ ಖಂಡಿತ. ಈ ನೀಲಕುರಿಂಜಿ ಅನ್ನುವ ಹೆಸರನ್ನು ಕೇಳಿದ್ದು ಕಾಲೇಜಿನಲ್ಲಿ ಜನಾರ್ಧನ್ ಮೇಷ್ಟ್ರು ಜೀವಶಾಸ್ತ್ರ ಪಾಠ ಮಾಡುತ್ತಿರಬೇಕಾದ್ರೆ ಅನ್ನೋ ನೆನಪು ಬ್ಯಾಕ್ ಆಫ್ ಮೈಂಡ್ ಅಲ್ಲಿ ಇದೆ. ‘ಸ್ಟ್ರಾಬಲೆಂತಸ್ ಕುಂತಿಯಾನ ‘ ಇದು ಒಂದು ಹೂ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುತ್ತೆ; ವಿಶೇಷ ಏನಂದ್ರೆ ೧೨ ವರ್ಷಕ್ಕೆ ಒಮ್ಮೆ ಅರಳುತ್ತೆ ಜೊತೆಗೆ ಬಿದಿರಿನ ವಿಶೇಷತೆ ಬಗ್ಗೆಯೂ ಒಂದಷ್ಟು ತರಗತಿಯಲ್ಲಿ ಹೇಳಿದ್ದರು. ನನಗೇಕೆ ಈಗ ನೆನಪಾಗಿದೆ ಅಂದ್ರೆ … Read more

ಎಲ್ಲೆಲ್ಲೋ ಓಡುವ ಮನಸೇ….: ಶೀತಲ್ ವನ್ಸರಾಜ್

ಮೊನ್ನೆ ಆಫೀಸಿಗೆ ಹೋಗಲು ಕ್ಯಾಬ್ ಬುಕ್ ಮಾಡ್ತಾ ಇದ್ದೆ. ಯಾಕೋ ಯಾವ ವಾಹನವೂ ಸಿಗುತ್ತಿರಲಿಲ್ಲ. ನಮಗೆಲ್ಲಾ ಗೊತ್ತಿರುವ ವಿಚಾರವೇ, ನಮ್ಮ ರಾಜಧಾನಿಯ ಟ್ರಾಫಿಕ್ ಗೋಳು. ಇಲ್ಲಿ ಅರ್ಧ ಜೀವನ ರೋಡಿನಲ್ಲಿ ಇನ್ನರ್ಧ ವಾಹನಕ್ಕಾಗಿ ಕಾಯುವುದರಲ್ಲಿ ಮುಗಿದು ಹೋಗುತ್ತದೆ ಎಂಬುವುದು. ನಮ್ಮೂರಿನ ಎಲ್ಲಾ ಸಾಮಾನ್ಯರಿಗೂ ಸಾಮಾನ್ಯವಾಗಿ ಹೋಗಿದೆ, ರೋಡಿನಲ್ಲಿ ವ್ಯಯ ಮಾಡಿದ ಸಮಯವನ್ನು ನಿರ್ಲಕ್ಷಿಸುವುದು. ಹೋಗಲಿ ಬಿಡಿ ಈಗ ನೇರ ವಿಚಾರಕ್ಕೆ ಬರುವೆ. ಅಂದು ಕೊನೆಗೂ ನನಗೊಂದು ಕ್ಯಾಬ್ ಸಿಕ್ಕಿತು. ಮರುಭೂಮಿಯಲ್ಲಿ ಸಣ್ಣ ಒರತೆ ಸಿಕ್ಕ ಸಂತೋಷ ನನಗೆ. … Read more

ದೇವರ ಜಪವೆನ್ನುವ ಜಿಪಿಎಸ್: ರೂಪ ಮಂಜುನಾಥ, ಹೊಳೆನರಸೀಪುರ.

ಸಜ್ಜನರ ಸಹವಾಸ ಯಾವಾಗಲೂ ನಮ್ಮನ್ನ ಉಚ್ಚ ವಿಚಾರಗಳನ್ನು ಯೋಚನೆ ಮಾಡಲು ಪ್ರೇರೇಪಿಸುತ್ತವೆ. ಹಾಗೇ ಹೆಚ್ಚೆಚ್ಚು ಜ್ಞಾನ ಸಂಪಾದನೆಯ ಉಪಾಯಕ್ಕೆ ಹಚ್ಚುತ್ತವೆ ಎನ್ನುವುದು ಬಹಳ ಜನರ ಅನುಭವಕ್ಕೆ ಬಂದಿರುತ್ತದೆ. ಇದೇ ರೀತಿ, ಯಾವ ಜನ್ಮದ ಪುಣ್ಯವೋ ಎನುವಂತೆ ನನಗೂ ಹಲವಾರು ಸಜ್ಜನರು, ಸುಜ್ಞಾನಿಗಳು ಹಾಗೂ ಹಿತ ಕೋರುವವರು, ನನ್ನ ತಿಳುವಳಿಕೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದಾದ ಯುಕ್ತಿಗಳನ್ನು ತಿಳಿಸುವ ಗುರುಗಳ ಸ್ಥಾನದಲ್ಲಿರುವ ಸನ್ಮಿತ್ರರ ಪರಿಚಯ ಆಗಿದೆ. ಅದು ನನ್ನ ಸೌಭಾಗ್ಯವೇ ಸರಿ. ನಮ್ಮದೇ ಊರಿನ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಪ್ರೊಫೆಸರ್ … Read more

ನಾಲ್ಕು ಕವಿತೆಗಳು: ವಾಣಿ ಭಂಡಾರಿ

ಗಾಳಿ ಮಾತು ಭೂತ ವರ್ತಮಾನವನ್ನುಒಮ್ಮೆ ಬಾಚಿ ಆಲಂಗಿಸಿದರೆ,,,ಅಳುವಿನ ಸಾಗರವೇ ಬಾಳುಎನಿಸದೆ ಇರದು!.ಭಾವನೆಗಳೇ ಸತ್ತ ಮೇಲೆಬದುಕು ಬಯಲೇ ತಾನೆ? ಚಿಗುರೊಡೆಯಲು ಅಲ್ಲೇನುಇದ್ದಂತಿರಲಿಲ್ಲ,,,ಸಪಾಸಪಾಟದ ಒಡಲತುಂಬಾ ಕಲ್ಲು ಮುಳ್ಳುಗಳೇ,,ಚುಚ್ಚಿದ್ದೊ ಎಷ್ಟೊ ,,ಕಣ್ಣೀರು ಕೋಡಿ ಹರಿದಿದ್ದು ಎಷ್ಟೊ ಬಲ್ಲವರಾರು!ಒಳಗೊಳಗೆ ಹರಿದ ಕಂಬನಿಗೆಇಂತದ್ದೆ ಕಾರಣ ಬೇಕಿರಲಿಲ್ಲ!!. ಒಳಗೆ ಕುದ್ದ ಭಾವ ಕಾವಿನಲಿಆವಿಯಾಗಿ ಕಣ್ಣ ಹನಿಯಂತೆಆಗಾಗ ಹೊರಬರುತ್ತಿತ್ತಷ್ಟೆ.ಎಷ್ಟಾದರೂ ಭೂಮಿ ಬಿಸಿಯಾಗಿತಂಪಾಗುವುದು ನಿಸರ್ಗನಿಯಮ ಎಂಬುದೊಂದುತಾತ್ಸಾರ ಮಾತಿದೆ ಎಲ್ಲರಲಿ!. ಹೌದೌದು!,,ಕೆತ್ತುವುದು ಚುಚ್ಚುವುದುಜಪ್ಪುವುದು ಗುಂಡಿ ತೋಡಿಅವರಿಷ್ಟ ಬಂದ ಕಡೆಯೆಲ್ಲ,,,,ಅವರದೆ ಜೊಲ್ಲು ಸುರಿಸಿಕಾಮನಹುಣ್ಣಿಮೆ ಆಚರಿಸುವುದುಅವರೇ ಮಾಡಿಟ್ಟುಕೊಂಡ ಪದ್ದತಿ.ಶತ ಶತಮಾನಗಳಿಂದಲೂನಡೆಯುತ್ತಲೇ ಇದೆ ದರ್ಬಾರು!.ಕೇಳುವವರು … Read more

ಪಂಜು ಕವಿತೆ ಸ್ಪರ್ಧೆ

ಪಂಜು ಅಂತರ್ಜಾಲ ಪತ್ರಿಕೆ ವತಿಯಿಂದ ಕವಿತೆ ಸ್ಪರ್ಧೆಗೆ ನಿಮ್ಮ ಕವಿತೆಯನ್ನು ಆಹ್ವಾನಿಸಲಾಗಿದೆ. ಸೂಚನೆಗಳು:-ಕವಿತೆ ಸ್ವಂತ ರಚನೆಯಾಗಿರಬೇಕು.-ಕವಿತೆ ಯೂನಿಕೋಡ್ ನಲ್ಲಿ ಇದ್ದರೆ ಒಳ್ಳೆಯದು.-ಸ್ಪರ್ಧೆಗೆ ಅಪ್ರಕಟಿತ ಕವಿತೆಯನ್ನು ಮಾತ್ರ ಕಳುಹಿಸಬೇಕು. ಕವಿತೆಯು, ಎಫ್ ಬಿ, ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಕವಿತೆಯನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.-ಬೇರೆಯವರ ಕದ್ದ ಕವಿತೆಯನ್ನು ಕಳುಹಿಸಿದರೆ ಅಂತಹ ಲೇಖಕರನ್ನು ಪಂಜುವಿನ ಬ್ಲಾಕ್ ಲಿಸ್ಟ್ ಗೆ ಹಾಕಲಾಗುವುದು. ಕವಿತೆಯನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಕವಿತೆ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. … Read more

ಮೂರು ಕವಿತೆಗಳು: ದೊಡ್ಡಬಸಪ್ಪ ನಾ ಚಳಗೇರಿ

ಅಂಬರದ ಬಯಲೊಳಗೆ ಅಂಬರದ ಬಯಲೊಳಗೆ ಅರಳಿದ್ದ ಮಲ್ಲಿಗೆಯಸತಿ ಮುಡಿಗೆ ನಾನೊಮ್ಮೆ ಮುಡಿಸಲೆಂದುಇರುಳೇಣಿ ಏರೇರಿ ಇರುಳೂರು ನಾ ಸುತ್ತಿತಾರೆಗಳ ಮಲ್ಲಿಗೆಯ ಬನ ಸೇರಿದೆ ಇಳಿಬಿದ್ದ ಮಲ್ಲಿಗೆಯ ಹೂಬಳ್ಳಿ ತುಂಬಿತ್ತುದುಂಡು ಆ ದುಂಡಗಿನ ಮೊಗ್ಗರಳಿಸಿಹಾಲ್ಬಣ್ಣ ಹೂಮಾಲೆ ಇನಿಯಳಿಗೆ ಕಟ್ಟಿಸಲುಚುಕ್ಕಿಗಾಗಿರುಳಲ್ಲಿ ಕೈ ಚಾಚಿದೆ ಶಶಿ ಬೆಳ್ಳಿ ಬುಟ್ಟಿಯಲಿ ಹರಿದಾಕಿ ಹೊತ್ತಂದುಹೂಗಾರ ಮನೆಯೊಳಗ ನಾನಿಳಿಸಿದೆನಗೆಮೊಗದ ಮುತ್ತೈದೆಯ ಮದರಂಗಿ ಕೈಯೊಳಗಸೊಗಸಾಗಿ ಹೆಣೆಸಿದ್ದೆ ಒಂದಾರದಿ ಮುಂಜಾವು ನೀ ಹೆಣೆದು ಇಳಿಬಿಟ್ಟ ಜಡೆಮೇಲೆಮುಡಿ ಮಾಡಿ ಹೋಗೆಂದೆ ರವಿಕಿರಣಕೆಇನಿದಾದ ಮಾತೊಳಗ ಬಳಿ ಬಂದು ಮಾಡೋದಮುಡಿಯೊಳಗ ಮುಡಿಸಿದ್ದೆ ಹೂ ಮಾಲೆಯ … Read more

ಪಂಜು ಕಾವ್ಯಧಾರೆ

ಕನಸಿನೊಳಗೊಂದು ಕಣಸು ನಿನ್ನೆ ತಮ್ಮ ಮತ್ತೆಕನಸಿನ ಮನೆಗೆ ಬಂದಿದ್ದನುಹೆಂಡತಿ, ಮಕ್ಕಳನ್ನು ಕರೆದು ತಂದಿದ್ದನುಅವ್ವ, ಕಣ್ಣ ತುಂಬಾ ನೀರು ತುಂಬಿಕೊಂಡು ವಯ್ದು ಕೊಟ್ಟಳು ನಾನು, ಯಾಕೋ ಇಷ್ಟು ದಿನ ಎಲ್ಲಿ ಹೋಗಿದ್ದೆ?ಏನೇನೋ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದೆಅವನು, ಮುಗಿಲಿಗೆ ಮುಖ ತೋರಿಏನೇನೋ ಉತ್ತರಿಸುತ್ತಿದ್ದಒಂದೂ ಅರ್ಥವಾಗುತ್ತಿರಲಿಲ್ಲ!ಈ ನಡುವೆ ಅವ್ವ,ನನ್ನ ಪ್ರಶ್ನೆಗಳ ನಡವನ್ನೇ ತುಂಡರಿಸಲು ಯತ್ನಿಸುತ್ತಿದ್ದಳುಇರಲಿ ಬಾ, ಒಳಗೆವಾತ್ಸಲ್ಯ ಗುಡ್ಡವೇ ಕರಗಿ ತಮ್ಮನನ್ನು ಒಳಗೆಆಹ್ವಾನಿಸುತ್ತಿದ್ದಳು ತಮ್ಮನ ಕಿರಿ ಮಗನನ್ನು ಎತ್ತಿಕೊಂಡೆನನ್ನ ನೋಡಿ ಒಂದೇ ಸಮನೆ ಆಳುತ್ತಿದ್ದನುಎಲ್ಲೋ ಬಿದ್ದು ಹಣೆ ಒಡೆದುಕೊಂಡಿದ್ದನುಹಿರಿಯ ಮಗನನ್ನು ತೊಡೆಯ … Read more

ನಂದಾದೀಪ ಅವರ “ಕಾವ್ಯದರ್ಶಿನಿ”ಯ ಭಾವನಾತ್ಮಕ ದರ್ಶನ: ದೇವೇಂದ್ರ ಕಟ್ಟಿಮನಿ

ಆಕಾಶಕ್ಕೆ ಅಣಕಿಸುವಷ್ಟು ಅನುಭವ ನನಗಿಲ್ಲ.ನಕ್ಷತ್ರಗಳ ತಪ್ಪು ಎಣಿಕೆಯ ತೊದಲು ಪ್ರಯತ್ನ ನಿಂತಿಲ್ಲ.ಇಂದಲ್ಲ ನಾಳೆ, ನಿನ್ನದೆಲ್ಲ ನನ್ನದು ನನ್ನದೆಲ್ಲ ನಿನ್ನದು,ಆಳವಿಲ್ಲದ ಬಾವಿಯಂತೆ ಬರಿ ಮಾತು ನನ್ನದು.ಓದುಗರ ಮಡಿಲಲ್ಲಿ ಓದಿಗಾಗಿ ಮಿಡಿಯುತ್ತಿರುವ ಕವಿಯಿತ್ರಿ ನಂದಾದೀಪ ಅವರ “ಕಾವ್ಯದರ್ಶಿನಿ” ಇದೊಂದು ಬದುಕಿನ ಪ್ರತಿಕ್ಷಣವೂ ಕಾವ್ಯದ ಕಣ್ಣಿನಿಂದ ದಿಟ್ಟಿಸಿ ಸೆರೆಹಿಡಿದ ಭಾವಗಳ ಸಂಗಮವಾಗಿದೆ. ಶ್ರೀ ಯಲ್ಲಪ್ಪ. ಎಂ. ಮರ್ಚೇಡ್ ಇವರ ಸಾರಥ್ಯದ ಶ್ರೀ ಗೌರಿ ಪ್ರಕಾಶನ ರಾಯಚೂರು ಇವರು ಪ್ರಕಟಿಸಿದ ಈ ಕೃತಿ ಸಾಹಿತ್ಯದ ಹಸಿವಿದ್ದವರಿಗೆ ಕಾವ್ಯಗಳ ರಸದೂಟ, ಮೈ ಮನಗಳಿಗೆ ಹೊಸ … Read more

ಸ್ವಾಮಿ ಆಲದ ಮರದಪ್ಪ: ಎಫ್. ಎಂ. ನಂದಗಾವ

ಚಿಕ್ಕ ಸ್ವಾಮ್ಯಾರು ರಾಯಪ್ಪ ಅವರು ಜ್ವರ ಹಿಡಿದು ಮಲಗಿದ್ದರು. `ನಿನ್ನೆ ರಾತ್ರಿಯವರೆಗೂ ಚೆನ್ನಾಗಿಯೇ ಇದ್ದ ಚಿಕ್ಕ ಸ್ವಾಮ್ಯಾರು ರಾಯಪ್ಪರಿಗೆ ಇಂದು ಬೆಳಿಗ್ಗೆ ಆಗುವಷ್ಟರಲ್ಲಿ ಏನಾಯಿತು?’ ಅಡುಗೆ ಆಳು ಸಿಲ್ವಿಯಾ ಚಿಂತಿಸತೊಡಗಿದ್ದಳು. ಗಂಡ ಉಪದೇಶಿ ಆರೋಗ್ಯಪ್ಪ ಗುಡಿಯಲ್ಲಿ ಪೂಜೆಗೆ ಸಿದ್ಧತೆ ಮಾಡಲು ಹೋದಾಗ, ಅವನ ಹೆಂಡತಿ ಅಡುಗೆ ಆಳು ಸಿಲ್ವಿಯಾ ಕೊಟ್ಟಿಗೆಯನ್ನು ಸ್ವಚ್ಛ ಮಾಡಿ ದನಕರುಗಳಿಗೆ ಹುಲ್ಲು ಹಾಕಿ ಗುರುಗಳ ಮನೆಗೆ ಬಂದಿದ್ದಳು. ಹೊಸದಾಗಿ ತಾಯಿ ಸಂತ ಥೆರೇಸಮ್ಮರ ಗುಡಿ ಮತ್ತು ಪಕ್ಕದಲ್ಲಿ ಗುರುಗಳ ಮನೆಯನ್ನು ಕಟ್ಟಿದಾಗ, ಹಿಂದೆ … Read more

ಓದ್ರೋ ಮಕ್ಕಳ .. ಓದ್ರೋ…: ನಾಗಸಿಂಹ ಜಿ. ರಾವ್

ಓದ್ರೋ ಮಕ್ಕಳ.. ಓದ್ರೋ… ಅಂತ ಮಕ್ಕಳಿಗೆ ಹೇಳ್ತಿರೋದು ಪಠ್ಯ ಪುಸ್ತಕ ಓದಿ ಅಂತಲ್ಲ, ಕಥೆ, ಕಾದಂಬರಿ, ಜೀವನಚರಿತ್ರೆಗಳನ್ನ ಓದಿ ಅಂತ ಹೇಳ್ತಿರೋದು, ಪಠ್ಯಪುಸ್ತಕ ಬಿಟ್ಟು ಬೇರೆ ಪುಸ್ತಕ ಓದುವ ಅಭ್ಯಾಸ ಮಕ್ಕಳಿಂದ ದೂರ ಆಗ್ತಿದೆ, ಪುಸ್ತಕಗಳು ಮಾನವನ ಗೆಳೆಯರು, ಕಲ್ಪನೆಯ ಬಾಗಿಲು ಹಾಗೆ ಹೀಗೆ ಅಂತ ಹೇಳ್ತಾ ಇದ್ವಿ, ಈಗ ಈ ವಾಕ್ಯಗಳಿಗೆ ಅರ್ಥವೇ ಇಲ್ಲ ಅನ್ನಿಸೋ ತರ ಆಗಿಹೋಗಿದೆ. ಸದಾ ಮೊಬೈಲು, ರೀಲ್ಸ್ ಇದರಲ್ಲಿಯೇ ಮುಳುಗಿಹೋಗ್ತಿದಾರೆ ನಮ್ಮ ಮಕ್ಕಳು. ಮಕ್ಕಳಲ್ಲಿ ಪದ ಸಂಪತ್ತು ಕಡಿಮೆಯಾಗ್ತಿದೆ.. ಎರಡು … Read more

ಪತ್ರ ರಹಸ್ಯ: ನಾಗಸಿಂಹ ಜಿ. ರಾವ್

, ನಮಸ್ಕಾರ ಮಕ್ಕಳೇ, ನೀವು ಈ ಕಥೆ ಓದೋದಕ್ಕೆ ಶುರು ಮಾಡಿದ್ದೀರಾ ಅಂದ್ರೆ ಮಕ್ಕಳ ಹಕ್ಕುಗಳ ಲೋಕವನ್ನ ಪ್ರವೇಶ ಮಾಡೋಕೆ ಸಿದ್ಧರಾಗಿದೀರಾ ಅಂತ ಅರ್ಥ. ಈ ಕಥೆ ಓದಿದ ಮೇಲೆ ನಿಮ್ಮ ಗೆಳಯರಿಗೆ ಈ ಕಥೆ ಬಗ್ಗೆ ಹೇಳಬೇಕು, ಸರಿನಾ?ಒಂದು ಊರಲ್ಲಿ ಒಂದು ಮಕ್ಕಳ ಸಂರಕ್ಷಣಾ ಗೃಹ ಇತ್ತು. ಏನಪ್ಪಾ ಇದು ಅಂದುಕೊಂಡ್ರಾ? ಮೊದಲು ಅನಾಥಾಲಯ ಅಂತ ಕರೀತಿದ್ವಲ್ಲ ಅದರ ಬದಲಾಗಿ ಮಕ್ಕಳ ಸಂರಕ್ಷಣಾ ಗೃಹ ಅಂತ ಕರಿಬೇಕು, ಅನಾಥ ಮಕ್ಕಳು ಅನ್ನುವ ಬದಲಾಗಿ ರಕ್ಷಣೆ ಪೋಷಣೆ … Read more

ಮೈಗ್ರೇನ್ ಮಾತು !: ಡಾ. ಹೆಚ್ ಎನ್ ಮಂಜುರಾಜ್

‘ಏನೇನೋ ಕುರಿತು ಬರೆಯುತ್ತೀರಿ? ನಿಮ್ಮ ತಲೆನೋವನ್ನು ಕುರಿತು ಬರೆಯಿರಿ!’ ಎಂದರು ನನ್ನ ಸಹೋದ್ಯೋಗಿಯೊಬ್ಬರು. ಸ್ವಲ್ಪ ಹೊತ್ತು ಸುಮ್ಮನಿದ್ದು ಆಮೇಲೆ ಹೇಳಿದೆ: ‘ಏಳೆಂಟು ಅಧ್ಯಾಯಗಳಿರುವ ಇನ್ನೂರು ಪುಟಗಳ ಪುಸ್ತಕವನ್ನೇ ಬರೆದೆ. ಆಮೇಲೆ ನೋವನ್ನು ಹಂಚುವುದು ಸಾಹಿತ್ಯದ ಕೆಲಸವಾಗಬಾರದು ಎಂದು ಹರಿದೆಸೆದೆ!’ ಎಂದೆ. ‘ಹೌದೇ!?’ ಎಂದಚ್ಚರಿಪಟ್ಟರು. ಆಗ ಕವಿ ಬೇಂದ್ರೆ ನೆನಪಾದರು: ‘ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ; ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹನಿಸು ನನಗೆ’ ಎಂದವರು. ‘ಬೆಂದರೆ ಬೇಂದ್ರೆ ಆದಾರು, ಯಾರು ಬೇಕಾದರೂ’ … Read more

ಕೃಷಿ ಅನುಭವಗಳ ಹೂರಣ “ಗ್ರಾಮ ಡ್ರಾಮಾಯಣ”: ಡಾ. ನಟರಾಜು ಎಸ್ ಎಂ

ಗುರುಪ್ರಸಾದ್ ಕುರ್ತಕೋಟಿಯವರು ನನಗೆ ಅನೇಕ ವರ್ಷಗಳಿಂದ ಎಫ್ ಬಿ ಯಲ್ಲಿ ಪರಿಚಿತರು. ನಮ್ಮ ಇಷ್ಟು ವರ್ಷಗಳ ಪರಿಚಯದಲ್ಲಿ ಅವರ ಅನೇಕ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ಹೊಸದರಲ್ಲಿ ಗುರು ಅವರು ಹಾಸ್ಯ ಬರಹಗಾರರಾಗಿ ಪರಿಚಿತರಾದರು. ಪರಿಚಯದ ನಂತರ ನಮ್ಮ ಪಂಜು ಅಂತರ್ಜಾಲ ಪತ್ರಿಕೆಯಲ್ಲಿ “ಪಂಚ್ ಕಜ್ಜಾಯ” ಎಂಬ ಹಾಸ್ಯ ಲೇಖನಗಳ ಅಂಕಣ ಶುರು ಮಾಡಿದರು. ಅದಾದ ನಂತರ ಬರಹದ ಜೊತೆ ಬೇರೆ ಏನನ್ನಾದರು ಮಾಡಬೇಕೆನ್ನುವ ಅವರ ತುಡಿತ ಅವರನ್ನು ರಂಗಭೂಮಿ ಕಡೆಗೆ ಕರೆದೊಯ್ದಿತು. ಬೆಂಗಳೂರಿನಲ್ಲಿ ಕೆಲ ಕಾಲ ರಂಗಕರ್ಮಿಯಾಗಿದ್ದರು, … Read more

ನಿಲ್ಲಿಸೋಣ ಮಕ್ಕಳ ಆತ್ಮಹತ್ಯೆ: ನಾಗಸಿಂಹ ಜಿ ರಾವ್

” ಕ್ರಿಕೆಟ್ ನೋಡಿದ್ದು ಸಾಕು . ಪಾಠ ಓದು ಹೋಗು , ಅಂತ ಹೇಳಿ ಅವನ ಕೈ ಯಲ್ಲಿದ್ದ ಟಿವಿ ರಿಮೋಟ್ ಕಿತ್ತುಕೊಂಡೆ ಸಾರ್ .. ಕೋಪ ಮಾಡಿಕೊಂಡು ರೂಮ್ ಒಳಗೆ ಹೋಗಿ ಬಾಗಿಲು ಹಾಕಿಕೊಂಡೋನು ಮತ್ತೆ ಈಚೆ ಬರಲೇ ಇಲ್ಲ ಸಾರ್ .. ಅಪ್ಪ ಅಮ್ಮ ಆಗಿ ನಮಗೆ ಅಷ್ಟು ಅಧಿಕಾರ ಇಲ್ವಾ ಸಾರ್ ? ಆತ್ಮಹತ್ಯೆ ಮಾಡಿಕೊಳ್ಳೋ ಪರಿಸ್ಥಿತಿ ಏನಿತ್ತು ನೀವೇ ಹೇಳಿ ಸಾರ್ ? ಮಕ್ಕಳನ್ನ ಹೇಗೆ ಅರ್ಥ ಮಾಡಿಕೊಳ್ಳೋದು ? ?” … Read more

ಹಗೆಯ ಬೆಂಕಿಯಲ್ಲಿ ಸುಟ್ಟು ಕರಕಲಾದ ಪ್ರೇಮಕಥೆ ಟ್ರಾಯ್: ವರದೇಂದ್ರ ಕೆ ಮಸ್ಕಿ

ಕೃತಿ: ಟ್ರಾಯ್ಪ್ರಕಾರ: ಕಾದಂಬರಿಲೇಖಕರು: ಗಾಯತ್ರಿ ರಾಜ್ ಗ್ರೀಕರು ಟ್ರಾಯ್ ನಗರವನ್ನು ವಶಪಡಿಸಿಕೊಳ್ಳುವ ಸಂಚಿನಲ್ಲಿ ಕಾದಂಬರಿಯ ನಾಯಕಿ, ಓದುಗನ ಮನಸಿನಲ್ಲಿ ಅಪ್ಸರೆಯಾಗಿ, ಪ್ರೇಮದ ವ್ಯಾಖ್ಯಾನವಾಗಿ, ಓದುಗ ತನ್ನ ಪ್ರೇಮಿಯಲ್ಲೂ ಕಾಣಬಹುದಾದಂತಹ ಸ್ಫುರದ್ರೂಪ ಗೊಂಬೆಯಾಗಿ, ಮನದಣಿಯ ನೋಡಿದರೂ ಕಣ್ಣು, ಅರೆಕ್ಷಣವೂ ಬಿಟ್ಟಗಲದಂತೆ ಮನಸೂರೆಗೊಂಡ ದಂತದ ಬೊಂಬೆ “ಹೆಲೆನ್” ಭಾಗಿಯಾಗಿದ್ದಳು ಎಂಬುದು ಸಹಿಸಲಸಾಧ್ಯವಾದುದು. ಕೃತಿ ಓದಿದ ನಂತರ ಇದನ್ನು ಓದುಗನು ಊಹಿಸಿಕೊಳ್ಳಲೂ ಇಷ್ಟಪಡುವುದಿಲ್ಲ ಎಂದಾದ ಮೇಲೆ ಈ ತರಹದ ವಾದವೂ ಕೂಡ ಒಂದಿದೆ, ಒಂದಿತ್ತು ಎಂಬುದನ್ನು ನೇರಾನೇರ ಮೊದಲೇ ನಾನು ತಳ್ಳಿಹಾಕಿಬಿಡುತ್ತೇನೆ. … Read more

ಗಣಪ್ಪನ ಪೂಜೀ ಅರ್ಭಾಟಾಗಿ ಮಾಡೋದೇ…….: ಡಾ.ವೃಂದಾ ಸಂಗಮ್‌

“ಹೂಂ, ಛೊಲೋ ಆಗೋದದಲಾ, ಅದೇ ಎಲ್ಲಾರ ಆಶಾನೂ ಆಗಿರತದ, ಮಕ್ಕಳು ಛೊಲೋತಾಂಗ ಓದಿ, ಅಮೇರಿಕಾದಾಗ ಕೆಲಸ ಮಾಡೋದು ನನಗೇನು ಬ್ಯಾಡನಸತದನು” “ಅಲ್ಲ, ಹೋದ ವರಷ, ಸುಬ್ಬಣ್ನಾ ಗಣಪತಿ ನೋಡಲಿಕ್ಕಂತ ಬಂದಾಂವ, ಹೆಂಗ ಹೇಳಿದಾ, ನೋಡಿದಿಲ್ಲೋ, ಒಂದು ಖುಷಿ ಖಬರ ಅದನಪಾ, ನಮ್ಮ ರಾಹುಲಗ ಅಮೇರಿಕಾದ ಓದಲಿಕ್ಕೆ ಸೀಟು ಸಿಕ್ಕೇದ. ಮುಂದಿನ ವರಷ ಗಣಪತಿ ಹಬ್ಬದಾಗ ಅವಾ ಅಲ್ಲಿರತಾನ ನೋಡು, ಅಂತ, ತಾನೇ ಅಮೇರಿಕಾಕ್ಕ ಹೋದಂಗ ಹೇಳತಾನ. ನಾನೂ ಅವತ್ತೇ ನಿರ್ಧಾರ ಮಾಡೇನಿ, ರಶ್ಮಿನ್ನ ಡಾಕ್ಟರ್‌ ಮಾಡಬೇಕು, ರಂಜುನ್ನ … Read more