ಪಿಜ್ಜಾ ಹುಡುಗಿಗೆ: ವಿಜಯ್ ದಾರಿಹೋಕ

ನನ್ನ ಪ್ರೀತಿಯ ಪಿಜ್ಜಾ ಹುಡುಗಿಗೆ,ಸದಾ ಅಂತರಂಗದಲ್ಲಿ ಸ್ಫುರಿಸುತ್ತಿರುವ ಪ್ರೇಮ, ವ್ಯಾಲೆಂಟೈನ್ಸ್ ಡೇ ಬರುವ ಹೊತ್ತಿಗೆ ಅಕ್ಷರ ರೂಪದಲ್ಲಿ ಇಣುಕುವ ಹಂಬಲ ತೋರುತ್ತಿದೆ. ಹಿಂದೆಲ್ಲ ಪ್ರೇಮ ಪತ್ರಗಳನ್ನು ಬರೆದು ಪಾರಿವಾಳ ಇಲ್ಲವೇ ದೂತನ, ಅಂಚೆ ಮಾಮನ ಮೂಲಕ ತಲುಪಿಸುತ್ತಿದ್ದುದನ್ನು ನೀನು ಕೇಳಿಯೇ ಇರುತ್ತಿ.. !.. . ಈಗೆಲ್ಲ, ಕೆಲ ವರ್ಷಗಳಿಂದ ಎಂದಿನಂತೆಯೇ ನಾನು ನಿನ್ನ ವಾಟ್ಸಪ್ಪ್ ನಂಬರಿಗೆ ನೇರವಾಗಿ ಕಳಿಸುತ್ತಿರುವೆ…. . ! ಒಮ್ಮೆ ಓದಿ ನೋಡು.. ಆ ದಿನ ಸ್ಪಷ್ಟವಾಗಿ ನೆನಪಿದೆ. ವೀಕೆಂಡ್ ನ ಶುಕ್ರವಾರದ ಸಂಜೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಚ್ಚಿಟ್ಟ ಒಲವಿನ ಹಣತೆ: ಪಲ್ಲವಿ ಬಿ ಎನ್.

ಲೋ ಕರಿಯ, ಹೀಗೆ ಅಲ್ಲವೆ ನಿನ್ನನ್ನು ನಾನು ಅಂದು ಕರೆಯುತ್ತಿದ್ದು. ಗೋದಿ ಬಣ್ಣದ ನೀನು ಅದೆಷ್ಟು ಕೋಪಿಸಿಕೊಳ್ಳುತ್ತಿದ್ದೆ. ಪ್ರೀತಿಯನ್ನ ಅರ್ಥೈಸಲು, ವ್ಯಾಖ್ಯಾನಿಸಲು ನನಗೆ ಬರುವುದಿಲ್ಲ ಆದರೆ ನಿನ್ನ ಮೇಲಿನ ಪ್ರೀತಿಯಲ್ಲಿ ಒಡಮೂಡುವ ನಾನಾ ಪರಿಯ ಬಯಕೆ, ಹಂಬಲಗಳನ್ನ ನಿರೂಪಿಸಬಲ್ಲೆ. “ಇಂದು ನಾನು ನನ್ನ ದಿನವನ್ನು ಅತ್ಯಂತ ಖುಷಿಯಿಂದ ಕಳೆಯುತ್ತೇನೆ” ಎಬೊಂದು ಅಸ್ಥಿರವಾದ ಸಾಲನ್ನೇಳಿಕೊಂಡು ಮಧುರ ಮುಂಜಾವಿಗೆ ಹೆಜ್ಜೆ ಇಡುತ್ತಿದ್ದ ನನ್ನನ್ನ ಹಾದಿ ತಪ್ಪಿಸಿ ನಿನ್ನ ನೆನಪೆ ಸುಮದುರ ಶುಭಾಶಯ ಕೊರುವ ಹಾಗೆ ಮಾಡುಬಿಟ್ಟೆಯಲ್ಲ ಕರಿಯ. ನನ್ನ ನಿನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಕೊರಳ ಕರೆ ಯಾವ ದಾರಿಯಲಿ ಹೇಗೆ ಸಾಗಿದರುಬಂದು ಸೇರುವೆ ಇಲ್ಲಿಗೆದುಂಬಿ ಕಳವಳ ಹೂವು ಬಲ್ಲದುಕರೆಯದಿರುವುದೆ ಮೆಲ್ಲಗೆ? ರಾತ್ರಿ ರಮಣಿಯ ಚಂದ್ರ ಬಿಡುವನೆಎಳೆದು ತರುವನು ಗಲ್ಲಿಗೆಚಂದ್ರಿಕೆಯ ಆ ಇರುಳ ಹೆರಳಿಗೆಮುಡಿಸದಿರುವನೆ ಮಲ್ಲಿಗೆ? ಕಡಲ ಚುಂಬನ ಮಧುರ ಬಂಧನಬಿಡದೆ ಇರಿವುದು ಎನ್ನೆದೆರಾಗರಂಜಿನಿ ಗುಪ್ತಗಾಮಿನಿಬಿಡುವುದೇನೆ ನಿನ್ನೆದೆ? ಒಲವಗಾಳಿಯು ಸೆರಗು ಹಾಸಿದೆಭಾವ ಬೆಸೆದಿದೆ ಹರುಷದೆಬಾರದಿರುವ ಮಳೆಯ ತಂದುಸುರಿಸೆಯೇನೆ ಸರಸದೆ? ನಮ್ಮ ನಡುವಿನ ಹಮ್ಮುಬಿಮ್ಮುತೂರಿ ಹೋಗಲಿ ಬಾರದೆಬಮ್ಮ ಹಾಕಿದ ನಮ್ಮ ಗಂಟನುನಮಗೆ ಅದನು ತೋರದೆ ತಾಕುಗಣ್ಣಿನ ದುರುಳ ನೋಟವುಇಂಗಿಹೋಗಲಿ ಉಳಿಯದೆಉಸಿರಿಗುಸಿರನು ಬೆರೆಸಿ ಬದುಕುವನಾಕ ನರಕವನಳೆಯದೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕರೋನಾ ಕೋಲ್ಮಿಂಚು: ರವಿ ಶಿವರಾಯಗೊಳ

ನಮ್ಮೂರಿನ ಒಣಿಯ ಮನೆಯೊಂದರ ಜಗುಲಿಯಲ್ಲಿ ಕೂತ ಎರಡು ಪುಟಾಣಿ ಮಕ್ಕಳು ತಮ್ಮ ತೊದಲು ನುಡಿಯಲ್ಲೇ ಜುಗಲ್ಭಂದಿ ನಡೆಸುತಿದ್ದರು ಅದು ಹೀಗಿತ್ತು. “ಕರೋನಾ ಬಂತು ಕರೋನಾ” ಒಂದು ಮಗು ಅಂತು.‘ಜೀವನ ಆಯ್ತು ಹೈರಾಣ ’ ಮತ್ತೊಂದು ಮಗು ನುಡಿಯಿತು. ಮುಂದೆನ್ಮಾಡ್ತು ಕರೋನಾದಾರಿ ಬದಿಯಲ್ಲಿ ಶೌಚ ಮಾಡೋವರ್ನ್ನ ಓಡಿಸಿ ಬಿಟ್ತು ನೋಡಣ್ಣ. ಆ ಕ್ಷಣದಲ್ಲಿ ಅವರಿಬ್ಬರ ಆ ಜುಗಲ್ಭಂದಿ ಕೇಳಿದಾಗ ನಗು ಬಂತಾದರೂ ಅವರ ಮಾತು ಸತ್ಯವಾದವುಗಳು ಎಂದು ಅನ್ನಿಸದೇ ಇರಲಿಲ್ಲ. ಹೇಳಲಿಕ್ಕೆ ನನಗೆ ಮುಜುಗರ ಇಲ್ಲ ಓದಲಿಕ್ಕೆ ನಿಮಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಸಂಗಾತಿ” ದೇಹಕ್ಕೋ ಮನಸ್ಸಿಗೊ…: ಪೂಜಾ ಗುಜರನ್. ಮಂಗಳೂರು

“ಸಂಗಾತಿ” ಬೇಕಾಗಿರುವುದು ಮನಸ್ಸಿಗೊ ದೇಹಕ್ಕೊ.. ಇದನ್ನು ಅರ್ಥ ಮಾಡಿಕೊಂಡರೆ ಈ ಸಂಗಾತಿ ಅನ್ನುವ ಪದಕ್ಕೊಂದು ಅರ್ಥ ಸಿಗುತ್ತದೆ. ಯಾವಾಗ ನಾವು ಈ ಸಂಗಾತಿಯ ಅನ್ವೇಷಣೆಯನ್ನು ಮಾಡುತ್ತೇವೆ.? ನಮ್ಮ ಮನಸ್ಸು ಒಂಟಿತನದ ಬೇಗೆಯಲ್ಲಿ ಬೇಯುವಾಗ ಮನಸ್ಸಿಗೊಂದು ಆಸರೆಬೇಕು ಅನಿಸುತ್ತದೆ. ನಿಜವಾಗಿಯೂ ಮಾಗಿದ ವಯಸ್ಸು ಬಯಸುವ ಸಂಗಾತಿ ಅದು ದೇಹಕ್ಕಲ್ಲ. ತನ್ನ ಮನಸ್ಸಿಗೆ. ಯಾರು ಇಲ್ಲದಾಗ ತನಗಾಗಿ ಮಿಡಿಯುವ ಆತ್ಮೀಯ ಜೀವವೊಂದು ಬೇಕು ಅನಿಸುತ್ತದೆ. ಕೆಲವರು ಇದನ್ನು ಹೇಳಲಾಗದೆ ಮಾನಸಿಕವಾಗಿ ಕುಗ್ಗುತ್ತಾರೆ. ಬೆಳೆದ ಮಕ್ಕಳು ಅವರವರ ವೈಯಕ್ತಿಕ ಜೀವನದಲ್ಲಿ ಬ್ಯುಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನಸೆಂದರೆ ಅದು ನೀನೆ ತಾನೇ?: ಸರಿತಾಮಧುಕುಮಾರ್

ಪ್ರೀತಿಯ ಹನಿ (ಮಧು), ಮೊದಲ ಪ್ರೇಮ ಪತ್ರ ಬರೆಯೋ ಅವಕಾಶವೇ ಇರಲಿಲ್ಲ ನನಗೆ. ಕಾರಣ ಸದಾ ಜೊತೆಯಲ್ಲಿ ನನ್ನೊಂದಿಗೆ ನೀನಿದ್ದೆಯಲ್ಲ. ಅದು ನಿನಗೂ ಗೊತ್ತು. ಏನೆಂದು ಹೇಳಲಿ ನಲ್ಲ ಮೊದಲ ಭೇಟಿಯ ತವಕ ನನಗಿಂತಲೂ ನಿನಗೇ ಹೆಚ್ಚಿತ್ತು, ಅಲ್ವಾ? ನಮ್ಮ ಭೇಟಿ ನಿರೀಕ್ಷಿತವಾಗಿದ್ದರೂ ಅದು ವಿಶೇಷ ವಾಗಿತ್ತು. ಅದಕ್ಕಾಗಿ ನೀನು ಚಾತಕಪಕ್ಷಿಯಂತೆ ಕಾದಿದ್ದು ನನಗೆ ತಿಳಿದಿದೆ. ಹೀಗಂತ ಅದೆಷ್ಟೋ ಸಲ ನನ್ನ ಬಳಿ ಹೇಳಿದರೂ ಮತ್ತೆ ಮತ್ತೆ ಕೇಳುವಾಸೆ ಈ ಹೃದಯಕೆ. ನೀನಾಡಿದ ಮಾತು ಪ್ರತಿಧ್ವನಿಸುತ್ತಿದೆ , … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಿದ್ರಾಮ್ ಪಾಟೀಲರ ಜಂಗಮಕ್ಕಳಿವಿಲ್ಲ ಪುಸ್ತಕದ ವಿಮರ್ಶೆ: ಭಾರ್ಗವಿ ಜೋಶಿ

ಇತ್ತೀಚಿಗೆ ಓದಿದ ಪುಸ್ತಕ. ಪುಸ್ತಕದ ಹೆಸರು ನೋಡಿದ ಕೂಡಲೇ ಓದಬೇಕು ಅನಿಸಿತು. ಜಂಗಮಕ್ಕಳಿವಿಲ್ಲ ಅನ್ನೋದೇ ಒಂದು ದೊಡ್ಡ ವಿಷಯ. ಅರ್ಥ ಮಾಡಿಕೊಳ್ಳೋಕೆ ತುಂಬಾ ವಿವೇಕ ಇರಬೇಕು. ಇನ್ನು ಆ ಶೀರ್ಷಿಕೆ ಹೊತ್ತ ಪುಸ್ತಕದಲ್ಲಿನ ಕಥೆಗಳು ಹೇಗೆ ಇರಬಹುದು ಅನ್ನೋ ಕುತೂಹಲದಿಂದಲೇ ಪುಸ್ತಕ ಕೊಂಡುಕೊಂಡೆ. ಖಂಡಿತ ನನ್ನ ಊಹೆ ಸುಳ್ಳಾಗಲಿಲ್ಲ. ಹನ್ನೆರೆಡು ವೈವಿಧ್ಯಮಯ ಕಥೆಗಳನ್ನು ಹೊಂದಿದ ಈ ಪುಸ್ತಕ ನಿಜಕ್ಕೂ ತುಂಬಾ ಅರ್ಥ ಗರ್ಭಿತ ಕಥೆಗಳು. ಮೊದಲನೇ ಕಥೆ ಬಿಡಿ-ಕೊಂಡಿಗಳು. ತಂದೆ, ತಾಯಿ ಅಸೆ, ಕನಸುಗಳು, ಅವುಗಳನ್ನು ಮಿರಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮನಸ್ಸಿನಾಳದ ಪ್ರೀತಿ: ನಾಗರತ್ನಾ ಗೋವಿಂದನ್ನವರ.

ಜೀವದ ಗೆಳೆಯಾ, ನೀನು ಹೇಗಿರುವೆ? ಬಾಲ್ಯದಿಂದ ಸ್ನೇಹಿತೆಯಾಗಿದ್ದವಳು, ಪ್ರೇಮಿಯಾಗಿ, ಬದುಕಿಗೆ ಬಾಳ ಸಂಗಾತಿಯಾಗಿ ನಿನ್ನನ್ನು ಅದೆಷ್ಟು ಹಚ್ಚಿಕೊಂಡಿರುವೆ, ನೀನಂದ್ರೆ ನಂಗೆ ಅದೆಷ್ಟು ಇಷ್ಟಾ ಎಂದು ಹೇಳೋಕೆ ಶಬ್ದಗಳಿಲ್ಲಾ. ಒಂದೆ ಮಾತಲ್ಲಿ ಹೇಳುವುದಾದರೆ ನನ್ನ ಹೃದಯದಲ್ಲಿ ಮೊಳಕೆಯೊಡೆದ ಮೊದಲ ಹಾಗೂ ಕೊನೆಯ ಪ್ರೀತಿ ನೀನು. ನನ್ನ ತುಂಟಾಟಗಳು ಕೆಲವೊಂದು ಸಲ ನಿನಗೆ ಇಕ್ಕಟ್ಟಿಗೆ ಸಿಲುಕಿಸಿದ್ದು ನಿಜ, ಆಗ ಮದುವೆಯಾದ ಮೇಲಾದರೂ ನಿನ್ನ ತುಂಟತನ ಬಿಡು ಎಂದು ಹುಸಿಮುನಿಸು ತೋರಿದ್ದೆ. ಮದುವೆಯಾದ ಮೇಲು ಪ್ರೇಮಿಗಳಾಗಿಯೆ ಇರಬೇಕು ಎಂದಿದ್ದೆ ಅದಕ್ಕೆ ನೀನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೀನು ವಂಚಕಿ ಅಲ್ಲ, ಮೋಸಗಾತಿ ಅಲ್ಲ, ನಿರ್ದಯಿ ಹೆಣ್ಣಲ್ಲ, ನೀನೊಬ್ಬಳು ಮಾಟಗಾತಿ ಅಲ್ಲ…: ರವಿ ಶಿವರಾಯಗೊಳ

ಪ್ರೀತಿಯ? ಹುಡಗಿ. ನಾನಿಲ್ಲಿ ಕ್ಷೇಮವೋ! ಅಲ್ಲವೋ! ನಿನಗೆ ತಿಳಿಯದ ವಿಷಯ. ಆದರೂ ನಾನು ಕ್ಷೇಮ. ನೀನು ಹೋದ ಮರುಗಳಿಗೆಯಿಂದ ಒದ್ದಾಡಿದೆ , ಚಡಪಡಿಸಿದೆ, ಊಟ ಸೇರಲಿಲ್ಲ , ನಿದ್ದೆ ಬರಲಿಲ್ಲ, ಹಿಮಾಲಯದ ಸನ್ಯಾಸಿಯಂತೆ ಮುಖದ ತುಂಬೆಲ್ಲಾ ಗಡ್ಡ ಬೆಳೆದವು, ನೀರು ಕಾಣದ ಮುಖ ಕಪ್ಪಿಟ್ಟಿತು, ನನ್ನ ನೋಡಿದವರು ಹುಚ್ಚನೆಂದರು, ಇನ್ನೂ ಕೆಲವರು ಅನಾಥನೆಂದರು, ಉಳಿದವರು ಮಾನಸಿಕ ಅಸ್ವಸ್ಥನೆಂದರು. ಆದರೆ ನಾನೇನಾಗಿದ್ದೆ ? ಉಹುಂ ನನಗೂ ತಿಳಿಯದು. ಅವರೆಲ್ಲರೂ ಕೊಟ್ಟ ಸರ್ಟಿಫಿಕೇಟ್ ನಲ್ಲಿ ಯಾವುದಾದರೂ ಒಂದು ವ್ಯಕ್ತಿತ್ವ ಇರಬಹುದೇನೋ! … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಮ್ಮ ಧ್ವನಿ ಕೇಳದ ಒಂದೊಂದು ಕ್ಷಣವೂ: ಚೇತನ್‌ ಬಿ ಎಸ್.‌

ಎಲ್ಲರೂ ನನ್ನ ಬಹಳ ಮಾತುಗಾರನೆನ್ನುತ್ತಾರೆ ಆದರೆ ಅದೇಕೊ ಗೊತ್ತಿಲ್ಲ ನಿಮ್ಮನ್ನು ಕಂಡೊಡನೆ ಹೃದಯದಲ್ಲಿ ಕಂಪನಗಳು ಶುರುವಾಗಿಬಿಡುತ್ತವೆ. ಅದ್ಯಾವುದೋ ಆತಂಕ, ಹೇಳಿಕೊಳ್ಳಲಾಗದ ಭಯ ಆವರಿಸಿ ಮನಸು ತನ್ನ ಸ್ಥಿಮಿತವನ್ನೇ ಕಳೆದುಕೊಂಡು‌ ಮೌನಕ್ಕೆ ಶರಣಾಗಿಬಿಡುತ್ತಿದೆ. ಅತ್ತ ಹೇಳಲಾಗದೆ ಇತ್ತ ಸುಮ್ಮನಿರಲಾರದೆ ಚಡಪಡಿಸುತ್ತಾ ಉಳಿದ ಮಾತುಗಳೆಲ್ಲಾ ದಿನೇ ದಿನೇ ಹೃದಯವನ್ನು ಭಾರವಾಗಿಸುತ್ತಾ ಹೋಗಿವೆ. ಹಾಗಾಗಿಯೇ ಈ ಪತ್ರದ ಮೂಲಕ ನನ್ನ ಮನದ ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ. ನೀವು ಸುಸಂಸ್ಕೃತ ಕುಟುಂಬದಿಂದ ಬಂದವರು. ಈ ಪತ್ರ ಕಂಡೊಡನೆ ನಿಮಗೆ ಕೋಪ ಬರಬಹುದು ಅಥವಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 71): ಎಂ. ಜವರಾಜ್

-೭೧-ಅವತ್ತು ಸಂದವತ್ಲಿತ್ವಾಟ್ಗೇರಿ ಮಾರಿಗುಡಿಲಿಮರಿಗಿರಿ ಹೊಡ್ದು ಪರ ಮಾಡ್ತಿದ್ರು.. ಅದ ನಾ ಉಣ್ಣಗಿದ್ದಾ.. ಉಣ್ದೆದ್ ಮ್ಯಾಲಇನ್ಯಾಕ ಅನ್ಕಂಡುಹಂಗೆ ಬೀಸ್ಕಾಲ ಹಾಕಂಡುಬತ್ತಿರವತ್ಲಿಬಸ್ಟ್ಯಾಂಡು ಬಣ್ಗುಡ್ತಿತ್ತು.. ಮ್ಯಾಲ ತಿಂಗ್ಳು ಬೆಳುಗ್ತಿತ್ತು ಆ ಬೆಳ್ಗ ಬೆಳುಕ್ಲಿಆ ತಿಂಗ್ಳು ತರನೇ ಇರ ಮೊಖ ಕಾಣ್ತುಆ ಮೊಖ ನೋಡುದ್ಮೇಲನಂಗ ಎತ್ತಗು ದಿಗ್ಲಾಗ್ದೆಅತ್ತಗ ಇತ್ತಗ ಎಡ್ತಾಕಿಸುಮ್ನ ದಂಡುಕ್ಕ ಹೋಗಿ‘ಎಲ್ಲಿಗ್ಯಾ’ ಅಂದಿಅವ್ಳು ಸುಮ್ನ ನೋಡಿ ತಿರಿಕಂಡ ಆಮ್ಯಾಲ ಅವ್ಳೆ‘ಕಲ್ಲೂರ್ ಮುಳ್ಳೂರ್ ಕಡ ಬಸ್ಸಿಲ್ವ’ಅಂದ್ಲು ‘ಇಲ್ಲ ಕೇತಳ್ಳಿ ಕೆರ ಹೊಡ್ದುಸಂತಮಾಳ್ದಲಿ ನೀರು ತುಂಬ್ಕಂಡುರೋಡು ಕೊಚ್ಗ ಹೋಗದ’ಅಂದಿ ‘ಅಯ್ಯೋ ನಾನೇನ್ಮಾಡ್ಲಿನಾ ಹೆಂಗ್ಯಾ ಊರ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡ ಕಲರವ – ಆನ್ಲೈನ್ ಸಾಹಿತ್ಯಕೂಟದ ವಿವಿಧ ಸ್ಪರ್ಧೆಗಳು

ಕನ್ನಡ ಕಲರವ – ಆನ್ಲೈನ್ ಸಾಹಿತ್ಯಕೂಟ“ಇದು ಕನ್ನಡ ಸಾಹಿತ್ಯಾಸಕ್ತರ ಜೀವಾಳ” 23 ಏಪ್ರಿಲ್‍ 2020 ರಲ್ಲಿ ರಚಿತವಾದ ಈ ತಂಡವು ಈವರೆಗೆ ಯಶಸ್ವಿಯಾಗಿ ಸಾಹಿತ್ಯ ಸೇವೆಯಲ್ಲಿ ಒಂದು ವರ್ಷವನ್ನು ಪೂರೈಸಲಿದೆ. ಆ ನಿಟ್ಟಿನಲ್ಲಿ ಮೂರು ದಿನಗಳ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 20-ಏಪ್ರಿಲ್-2021 : ನ್ಯಾನೋ ಕಥಾ ಸ್ಪರ್ಧೆ*) 150 ಪದಮಿತಿಯ ಸ್ವತಂತ್ರ ವಿಷಯದ ಮೇಲೆ ಕಥೆ ರಚಿಸಿ (mobileನಲ್ಲಿ unicode fontನಲ್ಲಿ ಟೈಪ್ ಮಾಡಿದ ಕಥೆ) ಏಪ್ರಿಲ್ 20 ರಂದು avvapustakaalaya@gmail.com ಗೆ ಕಳಿಸಿಕೊಡಬೇಕು. 21-ಏಪ್ರಿಲ್-2021 : ಸ್ವರಚಿತ ಕವನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಕುರಿತು ಲೇಖನ ಸ್ಪರ್ಧೆಗೆ ಲೇಖನಗಳ ಆಹ್ವಾನ

ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆ ಯಾಪಲದಿನ್ನಿ, ರಾಯಚೂರು ಕಲಾಂ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಯೋಗ ಶಿಬಿರ ರಕ್ತದಾನ ಶಿಬಿರ ವ್ಯಕ್ತಿತ್ವ ವಿಕಸನ ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಕಲಾಂ ಕಲ್ಪ ವೃಕ್ಷವನ ಕಲಾಂ ಸ್ಮಾರಕ ಇನ್ನೂ ಹಲವಾರು ಸಾಮಾಜಿಕ ಚಟುವಟಿಕೆಗಳಮೂಲಕ ಗ್ರಾಮೀಣ ಪ್ರದೇಶದಲ್ಲಿ ಪ್ರತಿವರ್ಷ ವಿವಿಧ ಕಾರ್ಯಕ್ರಮವನ್ನು ಮಾಡುತ್ತಾ, ಸಮಾಜದ ಸುಧಾರಣೆಗಾಗಿ ವಿವಿಧ ರೀತಿಯ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ, ಪ್ರತಿವರ್ಷ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜಯಂತಿಯಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಧಾರವಾಡ ಎನ್ನುವ ಶಹರದೊಳಗೆ ಹಳೆ ಹುಡುಗಿಯ ನೆನೆಪಿನ ಜಾತ್ರೆ: ವೃಶ್ಚಿಕ ಮುನಿ

ಧಾರವಾಡ ಸವಿ ನೆನಪುಗಳುಕಾಡಕತ್ತವಾಧಾರವಾಡ ಮಳೆಯಂಗಆದರೇನು ಮಾಡುವುದೂಮಳೆಗಾಲಕ್ಕೆ ಇನ್ನೂ ಎರಡು ತಿಂಗಳ ಬಾಕಿ ಅದಅಲ್ಲಿವರೆಗೂಹಾಳಾದ ಈ ಬಿಸಿಲಿನ ಕಾಟಕ್ಕೆನಡುನಡುವೆ ನೆನಪುಗಳಬೆವರಿನ ಜಳಕ…! ಹೀಗಿತ್ತು ಧಾರವಾಡದ ಬದುಕುಬೇಕಾಗಿದ್ದು ಎಲ್ಲ ಇತ್ತುಹಸಿವು ಇತ್ತು, ಓದಿನ ಖುಷಿ ಇತ್ತುಹಣದ ಕೊರತೆ ಇತ್ತುಬದುಕಿನ ಚಿಂತಿ ಇತ್ತುಆದರೂ ಏನಾದರೂ ಮಾಡಬೇಕು ಎನ್ನುವ ಛಲ ಇತ್ತುಒಳ್ಳೆಯ ಗೆಳೆಯರು ಬಳಗ ಇತ್ತುಚಿಂತನೆ ಇತ್ತು ಚಿಂತಿಸುವಜೀವಗಳಿದ್ದವುರಾತ್ರಿ ಕನಸುಗಳಿಗೆ ಜೊತೆಯಾಗುವ ನನಸಿನ ಸರಮಾಲೆ ಇತ್ತು…! ಧಾರವಾಡ ಬಿಟ್ಟ ಬಂದ ನಂತರವೂ ಬಿಡದೆ ಕಾಡುವ ಮೋಹವಿತ್ತುಧಾರವಾಡ ಹಳೆ ಗೆಳತಿಯಂಗ ಕಾಡಾತ್ತೀತುಆಕಿ ನಗು, ಹುಡುಗಾಟ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾವ್ಯದ ಆದಿ ಮತ್ತು ಅಂತ್ಯದಂತೆ…: ಅಶ್ಫಾಕ್ ಪೀರಜಾದೆ.

ಕಾವ್ಯದ ಹುಟ್ಟು ಒಂದುವಿಚಿತ್ರವಾದ ಸೃಷ್ಟಿ ಕ್ರಿಯೆಹುಟ್ಟು ಮತ್ತು ಸಾವಿನಂತೆಯಾವುದೇ ಸಮಯದಲ್ಲಿಹುಟ್ಟಬಹುದು ಹಾಗೇಸಾಯಲೂ ಬಹುದುಆದರೆ ಅದರಾತ್ಮಅಮರವಾಗಬಹುದುಅಥವಾಹೇಳು ಹೆಸರಿಲ್ಲದಂತೆಅಳಿದೂ ಹೋಗಬಹುದು ಅದೊಂದು ರಾತ್ರಿದಟ್ಟ ಕತ್ತಲೆಯಲ್ಲಿವೈಬ್ರೇಟ ಆಗಿಬೆಳಗಿದ ಮೊಬೈಲ್‌ಪರದೆಯ ಮೇಲೆಎಲ್ಲಿಂದಲೋ ಹಾರಿಬಂದು ಬಂದು ಕುಳಿತಕೀಟಕ್ಕೇನು ಗೊತ್ತುಅರಿಸಿ ಬಂದ ಬೆಳಕಿನಲ್ಲೆಜವರಾಯ ಇರುವ ಸತ್ಯ ಸಾಯಬೇಡ ಹೋಗುಹೋಗೆಂದರು ಕೇಳದುಎಷ್ಟು ಊದಿದರೂಹಾರಿ ಹೋಗದುಮತ್ತೆ ಮತ್ತೆ ಅದೇಬೆಳಕಿನ ತೆರೆಗೆ ಡಿಕ್ಕಿಹೊಡೆಯುವುದುಮೋಜಿನಾಟ ಅವಿರತ ಪ್ರೇಮಿ ತನ್ನಪ್ರೇಯಸಿಯನುಮತ್ತೆ ಮತ್ತೆತಬ್ಕೊಳ್ಳುವಂತೆಮತ್ತೆ ಮತ್ತೆಮುತ್ತಿಕ್ಕುವುದು……………….. ಈ ಚೆಲ್ಲಾಟದಿಂದಮೊಬೈಲಿಗೇನುಬೇಜಾರಿಲ್ಲಆದರೆ ಮೊಬೈಲನೋಡುವಕಂಗಳಿಗೆ ಸ್ವಲ್ಪ ಕಿರಿಕಿರಿಮನದ ಅಣತಿಯಂತೆಮೈ- ಕಡವಿ ನಿಂತಘಟೋದ್ಗಜ ಹೆಬ್ಬರಳುಬೆಳಕಿಗೆ ಮುತ್ತಿಡುತ್ತಿದ್ದಕೀಟವನ್ನು ಸ್ಕ್ರೀನಿಗೆಒತ್ತಿ ಒರೆಸಿ ಹಾಕಿದೆ ಬೆಳಕನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿನ್ನ ಮಧುರ ಮಾತುಗಳ ಅಮಲಲ್ಲಿ: ಮನೋಹರ್‌ ಜನ್ನು

ಪ್ರಿಯೆ, ಬೆಳ್ಳಿ ಮೋಡದ ಮರೆಯಲ್ಲಿ ಹಪಹಪಿಸೋ ಚೆಂದ್ರಮನ ಹಾಗೆ, ಆ ನೀಳ ಗಗನದಲ್ಲಿ ಹೊಳೆವ ಚೆಂದ್ರನ ಹಾಗೆ ನಿನ್ನ ಹಣೆಯ ಕೆಂಪುಬಿಂದು ಮೈ ಪುಳಕಿತ ಗೊಳಿಸುತ್ತಿದೆ. ಮನ ಮಿಂಚುವ ಕೋಲ್-ಮಿಂಚಿನ ಥರ ಸದ್ದು ಮೊಳಗಿಸುತ್ತಿದೆ. ನಿನ್ನ ನಗುವಿನ ನೆನಪಲ್ಲಿ ಹಲ್ಲುಗಳ ಹೊಳಪು ಮನಸ್ಸನ್ನು ಉತ್ತೇಜಿಸುತ್ತಿದೆ. ಅಗಲಿಕೆ ಜೀವ ಹಿಂಡುತ್ತಿದೆ. ಅಂದು ಮೊದಲಸಲ ತುಂಬಿದ ಜಾತ್ರೆಯಲ್ಲಿ ನೀನು ನನ್ನ ಕಂಡು ಮಿಂಚುಳ್ಳಿಯಂತೆ ಮರೆಯಾದಾಗ ಹೃದಯ ರೋಧನದಲ್ಲಿ ನರಳಿತ್ತು ಗೆಳತಿ! ಮತ್ತೆ ಮತ್ತೆ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಅದು ನೀನೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಣಕರಂಗ (ರಿ), ಧಾರವಾಡ ಆಯೋಜಿಸಿರುವ ಕವನ ವಾಚನ ಅಥವಾ ಜನಪದ ಶೈಲಿಯಲ್ಲಿ ಗಾಯನ ಸ್ಪರ್ಧೆ

  #ಗಣಕರಂಗ (ರಿ), ಧಾರವಾಡ ಆಯೋಜಿಸುವ ವಿಶ್ವಜ್ಞಾನ ದಿನ ದ ಪ್ರಯುಕ್ತ ‘ಬಾಬಾಸಾಹೇಬ ಡಾ.ಅಂಬೇಡ್ಕರ್ ಕುರಿತ ಜಾನಪದ ಶೈಲಿಯ ಮುಕ್ತ ಕವನ ವಾಚನ ಮತ್ತು ಗಾಯನ ಸ್ಪರ್ಧೆಗೆ ಸ್ವಾಗತ . ಎಲ್ಲರಿಗೂ ಮುಂಚಿತವಾಗಿ (ಏಪ್ರಿಲ್-14) ವಿಶ್ವಜ್ಞಾನ ದಿನದ ಶುಭಾಶಯಗಳು. ಆತ್ಮೀಯರೇ, ನಿಮಗೆ ಈಗಾಗಲೇ ಗೊತ್ತಿರುವಂತೆ ಗಣಕರಂಗ (ರಿ), ಧಾರವಾಡ ಸಂಸ್ಥೆಯು ಇಲ್ಲಿಯವರೆಗೆ ಹಲವಾರು ಕಾರ್ಯಕ್ರಮಗಳನ್ನು ಸಭಾವೇದಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳ ಆನ್-ಲೈನ್ ದಲ್ಲಿ ಯಶಸ್ವಿಯಾಗಿ ನಡೆಸಿದೆ. ಅದರ ಮುಂದುವರಿಕೆಯಾಗಿ, ಈಗ ಬರುವ ಏಪ್ರಿಲ್-14ರಂದು ‘ವಿಶ್ವಜ್ಞಾನ ದಿನ’ದ ಪ್ರಯುಕ್ತ ವಾಟ್ಸಪ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬದಲಾಗಿದೆ ಭಾರತದ ಬೌಲಿಂಗ್ ಹವಾಮಾನ!: ವಿನಾಯಕ‌ ಅರಳಸುರಳಿ,

ಮೊನ್ನೆ ಮಂಗಳವಾರ ಭಾರತ ಹಾಗೂ ಇಂಗ್ಲೆಂಡ್ ಗಳ ನಡುವೆ ಮ್ಯಾಚ್ ಇರುವುದು ಗೊತ್ತಿರಲಿಲ್ಲ. ಗೊತ್ತಾಗಿ ನೋಡುವಷ್ಟರಲ್ಲಿ ಪ್ರಸಿದ್ ಕೃಷ್ಣ ಎನ್ನುವ ಹೊಸ ಬೌಲರ್ ಪಾದಾರ್ಪಣೆ ಮಾಡಿ, ಅವರಿಗೆ ಆಂಗ್ಲರು ಮೂರು ಓವರ್ ಗೆ ಮೊವ್ವತ್ತೇಳು ರನ್ ಚಚ್ಚಿರುವುದು ಕಾಣಿಸಿತು. ಏನು ನಡೆಯುತ್ತಿದೆ ಇಲ್ಲಿ? ವರ್ಲ್ಡ್ ಕಪ್ ಗೆ ಕೆಲವೇ ತಿಂಗಳು ಇರುವಾಗ ಹೀಗೇಕೆ ಹೊಸ ಹೊಸ ಪ್ರಯೋಗ ಮಾಡ್ತಿದ್ದಾರೆ? ಇರುವವರಿಗೇ ಮತ್ತಷ್ಟು ಆಡುವ ಅವಕಾಶ ಕೊಟ್ಟು ಇಂತಿಂತವನು ಇಂತಿಂತಲ್ಲಿ ಎಂದು ಫಿಕ್ಸ್ ಮಾಡಬಾರದಾ ಎಂದುಕೊಳ್ಳುವಷ್ಟರಲ್ಲಿ ಅದೇ ಪ್ರಸಿದ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾತೆಂಬ ಜ್ಯೋತಿ ಮನವ ಬೆಳಗಲಿ: ಸುಂದರಿ ಡಿ.

ಜೀವಜಗತ್ತು ಹಲವು ವಿಸ್ಮಯಗಳ ಆಗರ. ಇಲ್ಲಿ ನಾವು ಕಂಡು ಅಚ್ಚರಿಯಿಂದ ಹುಬ್ಬೇರಿಸಿದ ಹಲವು ಸಂಗತಿಗಳು ನಮ್ಮ ಅರಿವಿಗೆ ಬಾರದೆಯೂ ಇರಬಹುದು. ನಮ್ಮ ಅರಿವಿಗೆ ಬಂದರೆ ಕುತ್ತಾಗಬಹುದೆಂಬ ಭಯಕ್ಕೆ ಜೀವಜಗತ್ತು ಹೊಸ ಪಾಠವನ್ನೇ ಈ ವೇಳೆಗೆ ಕಲಿತಿರಲೂಬಹುದು ಅಥವಾ ಅದೆಷ್ಟೋ ವಿಸ್ಮಯಗಳನು ಅರಿವಾಗುವ ಮೊದಲೇ ನಾವು ನಮ್ಮ ಪಾಪಕೂಪಗಳಿಂದ ಇಲ್ಲವಾಗಿಸಿರಲೂಬಹುದು. ಅದೇನೇ ಇರಲಿ ಮನುಷ್ಯ ತನ್ನ ಅರಿವಿಗನುಗುಣವಾಗಿ ಮತ್ತು ವಾಸಪ್ರಪಂಚದ ಕೆಲವು ವಿಸ್ಮಯಗಳನ್ನಷ್ಟೇ ಅರಿತಿರಲು ಸಾಧ್ಯ. ಏಕೆಂದರೆ ಆ ಪ್ರಮಾಣದ ವಿಸ್ಮಯಗಳ ಹೊದ್ದು ನಿಂತಿದೇ ಈ ಜಗತ್ತು. ಕವಿಗಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೋವು ಸಾವಾಗದಿರಲಿ..: ಪೂಜಾ ಗುಜರನ್. ಮಂಗಳೂರು

ಬದುಕು ಒಂದೊಂದು ಸಲ ಹೀಗಾಗಿ ಬಿಡುತ್ತದೆ.. ಯಾರು ಬೇಡ ಏನೂ ಬೇಡ ಹಾಗೇ ಎದ್ದು ಹೋಗಿಬಿಡಬೇಕು. ಯಾರ ಜಂಜಾಟವೂ ಬೇಡ ಅನಿಸುವಷ್ಟು ಬದುಕು ರೋಸಿ ಹೋಗಿರುತ್ತದೆ..ಈ ಯೋಚನೆ ಪ್ರತಿಯೊಬ್ಬನ ಬದುಕಿನಲ್ಲಿಯೂ ಒಂದಲ್ಲ ಒಂದು ದಿನ ಬಂದಿರುತ್ತದೆ. ಕೆಲವರು ಎದ್ದು ಹೋದರೆ ಇನ್ನು ಕೆಲವರು ಯೋಚನೆಯ ಆಯಾಮವನ್ನು ಬದಲಿಸಿ ಸುಮ್ಮನಿರುತ್ತಾರೆ. ಆದರೆ ಎಲ್ಲರ ನಿರ್ಧಾರಗಳು ಬದಲಾಗಿರುವುದಿಲ್ಲ. ಬದಲಿಗೆ ಅವರಿಗೆ ಈ ಬದುಕಲ್ಲಿ ಇನ್ನೇನೂ ಇಲ್ಲ ಅನ್ನುವುದೊಂದೆ ಯೋಚನೆಯಾಗಿರುತ್ತದೆ. ಈ ಯೋಚನೆಯ ಯೋಜನೆಗಳೆಲ್ಲ ಮುಕ್ತಾಯವಾಗುವುದು ಸಾವಿನಲ್ಲಿ. ಅತಿಯಾದ ಖಿನ್ನತೆ ಸಾವಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿನ್ನ ಪ್ರೀತಿಯಲ್ಲಿ ಯಾವಾಗ ಮುಳುಗಿ ಹೋದೆನೋ ಗೊತ್ತೇ ಆಗಲಿಲ್ಲ: ದಿನೇಶ್‌ ಉಡಪಿ

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ ನಲ್ಮೆಯ ಗೆಳೆಯ,ಸುಮಾರು ದಿನಗಳಿಂದ ಹಗಲು ರಾತ್ರಿಗಳ ಪರಿವೆಯಿಲ್ಲದೇ, ಹೇಳಬೇಕೋ ಬೇಡವೋ? ಎಂಬ ತೊಳಲಾಟದಲ್ಲಿ ಬಳಲಿ, ಹೇಳಲೇಬೇಕಾದದ್ದು ಏನಾದರೂ ಇದೆಯಾ? ಹೇಳಲೇ ಬೇಕಾ? ಹೇಳಿದರೆ ಏನಾಗಬಹುದು? ಹೇಳದೆ ಇದ್ದರೆ ಏನಾಗಬಹುದು? ನಾನೀಗ ಹೇಳಬೇಕಾಗಿದೆಯಾ? ಅಥವಾ ಕೇಳಬೇಕಾಗಿದೆಯಾ? ಎಂಬ ಉತ್ತರವೇ ಇಲ್ಲದ ಪ್ರಶ್ನೆಗಳ ಕಾಡಲ್ಲಿ ಸಿಲುಕಿ, ದಿಕ್ಕು ತಪ್ಪಿ ಕೊನೆಗೆ ಏನಾದರೂ ಆಗಲಿ, ಆಗದೆ ಆದರೂ ಇರಲಿ ಎಂಬ ನಿರ್ಧಾರಕ್ಕೆ ಬಂದು, ನಡುಗುವ ಕೈಗಳಿಂದ ಈ ಪತ್ರ ಬರೆಯುತ್ತಿದ್ದೇನೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಮ್ಮ ನೋಡಲೆಂದೇ ನಾನು ಚರಂಡಿಗೆ ಬಿದ್ದಿದ್ದು ರೀ..: ನರೇಂದ್ರ ಎಸ್ ಗಂಗೊಳ್ಳಿ.

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ ನಮಸ್ತೆ ಪ್ರತೀಕ್ಷಾ ಮೇಡಂ,ನನ್ನ ಪರಿಚಯ ಖಂಡಿತಾ ನಿಮಗೆ ನೆನಪಿರಬಹುದೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಜೀವಮಾನದಲ್ಲಂತೂ ನಿಮ್ಮ ನೆನಪನ್ನು ಬಿಡಲು ಖಂಡಿತಾ ಸಾಧ್ಯವಿಲ್ಲ. ಹಾಗಾಗಿಯೇ ಇದು ನಿಮಗೂ ಗೊತ್ತಿರಲಿ ಅಂತಂದುಕೊಂಡು ಈ ಪ್ರೀತಿಯ ಪತ್ರ ಬರೆಯುತ್ತಿದ್ದೇನೆ. ಅಸಲಿಗೆ ಮೂರು ಕತ್ತೆ ವಯಸ್ಸು ಅಂತಾರಲ್ಲಾ ಅಷ್ಟಾಗುತ್ತಾ ಬಂದರೂ ಮದುವೆ ಅಂದರೆ ದೂರವೇ ನಿಲ್ಲುತ್ತಿದ್ದವನು ನಾನು. ಅದೇಕೋ ಏನೋ ಹೊಸದೊಂದು ಜವಾಬ್ದಾರಿ ಯಾಕೆ ತಗೋ ಬೇಕು? ಈಗಿರುವ ಅದ್ಭುತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮುಂದಿನ ಬೆಂಚಿನಿಂದ ಹಿಡಿದು ಕೊನೆ ಬೆಂಚಿನವರೆಗೂ ಎಷ್ಟೊಂದು ಹುಡುಗಿಯರಿದ್ದರೂ: ಕಪಿಲ ಪಿ ಹುಮನಾಬಾದೆ

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ ಲಾಸ್ಟ್ ಬೆಂಚ್ ಹುಡುಗಿಗೆ, ನಿನ್ನ ನಿರಾಕರಣೆಯ ನೋಟದಲ್ಲಿಯೂ ಸಹ ಪ್ರೀತಿಗೆ ಚಡಪಡಿಸುತ್ತಿರುವ ಜೀವವೊಂದರ ಮಾತುಗಳಿವು. ನೀನು ಕೂತೆದ್ದು ಹೋದ ಬೆಂಚಿನ ಮೇಲೆ, ಕ್ಲಾಸ್ ರೂಮ್ ಪೂರ್ತಿ ಖಾಲಿ ಆಗಿದ್ದಾಗ ನಾನು ಹೋಗಿ ಕೂತು ಬೆಚ್ಚನೆಯ ಸ್ಪರ್ಶವೊಂದು ಅನುಭವಿಸಿದ್ದೇನೆ. ಮೊನ್ನೆ ಮುಂಜಾನೆ ಯುನಿವರ್ಸಿಟಿಯ ಮೇನ್ ಗೇಟಿನ್ ರಸ್ತೆಯಲ್ಲಿ ನೀನು ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದೆ, ಗರಿ ಬಿಚ್ಚಿ ನಿಂತ ಆ ನಿನ್ನ ಹಸಿ ಕೂದಲುಗಳಲ್ಲೊಮ್ಮೆ ನನ್ನುಸಿರು ಸುಳಿದಾಡಿ ಬಂದಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿನ್ನ ಜೋಳಿಗೆಯಲ್ಲಿ ಪ್ರೇಮದ ಬುತ್ತಿ ಸದಾ ತುಂಬಿರುತ್ತೆ: ಸುಜಾತಾ ಲಕ್ಮನೆ

ಹಾಯ್ ದೊರೆ, ಎಲ್ಲಿಂದ ಶುರು ಮಾಡಲಿ? ಅದೇ ನೀ ಸಿಕ್ಕ ದಿನ ಕಣ್ಣ ಚುಂಗಲ್ಲಿ ನೀ ಎಸೆದ ಒಲವ ನೋಟವ ಪೋಣಿಸಿ ಎದುರಿಡಲೇ ಅಥವಾ ಕಳೆದ ಸವಿ ಕ್ಷಣಗಳ ನೆನಪ ನೇಯಲೇ? ಸುಂದರ, ಸಂತಸಮಯ ಕ್ಷಣಗಳು ದಿನದುದ್ದಕ್ಕೂ ಕಾಡಿ ಕಚಗುಳಿಯಿಡುವಾಗ ಮೈ ರೋಮಾಂಚನಗೊಳ್ಳುವ ಆ ಭಾವವನ್ನು ವರ್ಣಿಸೋದು ಹೇಗೆ? ಆ ದಿನಗಳಲ್ಲಿ ಭಾವಗಳು ತುಂಬಿ ತುಳುಕಿತ್ತು! ಎಲ್ಲ ಪೂರ್ಣವೂ ಚಂದ ನೋಡು. ಪೂರ್ಣ ಚಂದಿರ, ಆಡಿ ಮುಗಿವ ಮಾತಿನ ನಂತರದ ತುಂಬು ಮೌನ, ಕಣ್ತುಂಬುವ ನೋಟ; ಬೀಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿನಗೆ ನನ್ನ ಮೇಲೆ ಒಲವಿದ್ದರೆ: ಪರಮೇಶ್ವರಿ ಭಟ್

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಪತ್ರ ಪ್ರಿಯ ಮಧುರಾ, ನಿನಗೆ ಯಾರಿವನು ಅಂತ ಆಶ್ಚರ್ಯ ವಾಗಬಹುದು. ನಾನು ನಿನ್ನನ್ನು ಮೆಚ್ಚಿದ ಒಬ್ಬ ಸುಸಂಸ್ಕೃತ ಹುಡುಗ. ಹೆದರಬೇಡ. ಪತ್ರವನ್ನು ಪೂರ್ತಿ ಓದು. ನಾನು ಒಬ್ಬ ಸಂಶೋಧನ ವಿದ್ಯಾರ್ಥಿ. ನೀನು ಕೂಡ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವಿ ಎಂದು ತಿಳಿದುಕೊಂಡೆ. ನನ್ನ ನಿನ್ನ ಆಕಸ್ಮಿಕ ಭೇಟಿ ನಾನು ಮರೆತಿಲ್ಲ. ಈ ಪತ್ರ ಬರೆಯಲು ಅದುವೇ ನಾಂದಿಯಾಯಿತು ಗೊತ್ತಾ? ಹೇಗೆ ಅಂತೀಯಾ.. ಒಂದು ದಿನ ಲೈಬ್ರರಿಯಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಗೋಡೆಗಳು… ಅವ ತೋರಿಸೆಂದುದಕೆಇವಳು ತೋರಿಬಿಟ್ಟಳು..ಸುತ್ತಲ ಗೋಡೆಗಳೆಲ್ಲ ಕೇಳುತ್ತ ನೋಡಿಬಿಟ್ಟವುಕೆಲ ಗೋಡೆಗಳು ಮಾತಾಡಿಬಿಟ್ಟವುಅಡಗಿಸಿಡಬಹುದಾದ ಸಂಗತಿಗಳೆಲ್ಲತೆರದಿಡುವಂತಾಗಿ ಗೋಡೆಯ ಬಾಯಿಗಳುಬಡಬಡಿಸುವಂತಾದವು ಗೋಡೆಗಳ ಮಧ್ಯೆ ಗೌಪ್ಯವಾಗಿಡಬಹುದೆಂಬುದುಈಗೀಗ ಸುಲಭ ಸಾಧ್ಯವಲ್ಲಈಗಿನ ಗೋಡೆಗಳು ಆಗಿನ ಗೋಡೆಗಳಂತಲ್ಲ..ಕಣ್ಣುಗಳ ಜತೆಗೆ ಕಿವಿಗಳು ಇಷ್ಟಗಲವಾಗಿತೆರೆದು ನಿಮಿರುತ್ತವೆ..ಕೆಲವಂತೂ ಮಾತನ್ನೇ ಸ್ಖಲಿಸಿಬಿಡುತ್ತವೆ ಗೋಡೆಗಳ ನಡುವೆ ಖಾಸಗಿತನವೆಂಬ ಕಾಲಈಗೀಗ ಸಾಮಾನ್ಯವಾಗುಳಿದಿಲ್ಲಗೋಡೆಗಳ ಮಧ್ಯೆ ವಿರಕ್ತರ ಬಟ್ಟೆಗಳ ಕಲೆಯೂ ಸಹಸಾಕಷ್ಟು ಕತೆಗಳನ್ನು ಹಡೆಯುತ್ತಿದೆ. ಗೋಡೆಗಳಿಂದೀಚೆಗೆ ಬಂದ ಕತೆಗಳಲ್ಲಿನ ಪಾತ್ರಗಳುಒಂದನ್ನೊಂದು ಒಪ್ಪಿಕೊಳ್ಳುವುದಿಲ್ಲ..ಕಲ್ಪನೆಯ ಜಾಡಿನೊಳಗೆ ಸುಳಿದಾಡಿದ ಕಾಕತಾಳೀಯ ಎಂಬ ಷರಾದೊಂದಿಗೆಮರೆಯಾಗಿಬಿಡುತ್ತವೆ.. ದೇಹಗಳ ತೀಟೆಗೆ ಗೋಡೆಗಳೂ ಬೇಸತ್ತಿವೆ..ಮನಸು ತನ್ನ ತಪ್ಪನ್ನು ಕಾಲದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕೃತಿಕಾರಾಣಿ, ಯಲ್ಲಾಪುರ ಅವರ ಪ್ರೇಮ ಪತ್ರ

ಪ್ರಿಯ ಸಖಾ, ನಿನ್ನದೊಂದು ಸಾದಾ ಸೀದಾ ಮುಗುಳುನಗೆ ʻಪ್ರಿಯ ಸಖಾʼ ಎನ್ನುವ ಆಪ್ತತೆ ಒದಗಿಸಿತೆನಗೆ! ನಾನರಿವೆ, ನಿನಗಿದಚ್ಚರಿಯೇ. ಆ ಕಣ್ಣ ಹೊಳಪಲ್ಲಿ ಜಗವ ನೋಡುವ ಬೆರಗ ಕಂಡೆ. ಇನ್ನೇನು ಬೇಕೆನಗೆ ನಿನ್ನ ಮೋಹಕ್ಕೆ ಜಾರಲು? ಮೊನ್ನೆ ಮೊನ್ನೆವರೆಗೂ ತೀರಾ ಸಾಮಾನ್ಯ ಹುಡುಗಿ ನಾನು. ವಿಪರೀತ ಮಾತಿನ ಚಟದವಳು, ಮಕ್ಕಳಂತೆ ಚಲ್ಲಾಟವಾಡುತ್ತಾ, ಮನೆಯಲ್ಲಿ ಕಿವಿ ಹಿಂಡಿಸಿಕೊಂಡು, ಸ್ನೇಹ ಬಳಗದಲ್ಲಿ ಚೇಷ್ಟೆ ಮಾಡುತ್ತಾ ಹಾರಾಡಿಕೊಂಡಿದ್ದವಳು. ಅಚಾನಕ್ಕಾಗಿ ನಿನ್ನ ಮಾಯೆಗೆ ಮೌನಿಯಾಗಿಬಿಟ್ಟೆ! ಅರ್ಥವಾಗದ ಖುಷಿಯೂ ಜೊತೆಯಾಗಿದೆ. ಹರೆಯದ ಹುಡುಗಿಯೊಬ್ಬಳು ಪ್ರೇಮ ಪತ್ರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಸುಕೃತಿ ಕೆ ಪೂಜಾರಿ ಅವರ ಪ್ರೇಮ ಪತ್ರ

ನನ್ನ ಪ್ರೀತಿಯ ಇನಿಯ. ಹೇಗಿದ್ದೀಯಾ? ಹೊರ ನೋಟಕ್ಕೆ ಚೆನ್ನಾಗಿದ್ದೀನಿ ಅಂತಿಯಾ. ಅಂತರಂಗದ ಅಳಲು ನನಗೆ ಗೊತ್ತಿದೆ ಕಣೋ. ಯಾಕಂದ್ರೆ ನನ್ನ ಜೀವದ ಉಸಿರಿನ ಬಗ್ಗೆ ನನಗೆ ಗೊತ್ತಿಲ್ಲದೇ ಇರುವುದೇ? ಹೌದು. ನಾ ಈ ಪತ್ರ ಯಾಕೆ ಬರೆಯುತ್ತಿದ್ದೇನೆಂದು ನಾನರಿಯೇ. ಇದು ಅಮೂಲ್ಯ ಪ್ರೇಮದ ನಿವೇದನೆಯೋ? ಅಂತರಂಗದ ವಿರಹದ ವೇದನೆಯೋ? ಮನದ ಮೂಲೆಯಲ್ಲಿ ಹೇಳಲಾಗದೇ ಉಳಿದಿಹ ಅವೆಷ್ಟೋ ಭಾವನೆಗಳಿಗೆ ಇಲ್ಲಿ ಅಕ್ಷರ ರೂಪ ನೀಡುತ್ತಿದ್ದೇನೆ. ಒಮ್ಮೆ ಓದಿ ಬಿಡು ಬಂಗಾರ. ಅಂದು ನಾನ್ಯಾರೋ. ನೀನ್ಯಾರೋ! ಬಂಧು- ಬಾಂಧವರ ಸಮ್ಮುಖದಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಶರಣಬಸವ ಕೆ.ಗುಡದಿನ್ನ ಅವರ ಪ್ರೇಮ ಪತ್ರ

ನೀ ಇಲ್ಲದ ಈ ಘಳಿಗೆ. . ಈ ಸಮಯದಲ್ಲಿ ನಿನಗೆ ಪ್ರೇಮಪತ್ರ ಬರೆಯಬಹುದಾ? ಗೊತ್ತಿಲ್ಲ! ಈ ಪ್ರೇಮ ಪತ್ರ ನಿನಗೆ ತಲುಪಿಸುವ ಬಗೆಯೂ ನನಗೆ ಸ್ಪಷ್ಠವಿಲ್ಲ. ಅದೆಷ್ಟು ದಿನವಾಯಿತೊ ನಿನ್ನ ಮೊಬೈಲ್ ನಂಬರನ್ನು ದ್ಯಾಸ ಮಾಡಿಕೊಂಡು ಮೊಬೈಲಿನ ಮುಖದ ಮೇಲೆ ಡಯಲ್ ಮಾಡಿ. ಒಂದೇ ಒಂದು ಮೆಸೇಜು ಕೂಡ ಇತ್ತೀಚಿಗೆ ನಮ್ಮ ಮದ್ಯೆ ಹರಿದಾಡಿಲ್ಲ. ನನ್ನ ಅಂದಾಜು, ಮಾಡಿಕೊಂಡ ಬಾಯಿಲೆಕ್ಕ ಸರಿಯಿದ್ದರೆ ನಿನಗೀಗ ಭರ್ತಿ ಒಂಭತ್ತು ತಿಂಗಳು! ಘಳಿಗೆಗೊಂದು ಸಲ ನೀವಿಕೊಳ್ಳುತ್ತಿದ್ದ ಸೀರೆಯ ಬಣ್ಣದ ನೆರಿಗೆಗಳೇ ಉಳಿಯದಷ್ಟು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭಾಷೆ ಭಾರವಾಗದಿರಲಿ: ಪೂಜಾ ಗುಜರನ್ ಮಂಗಳೂರು..

ನಾವಾಡುವ ಭಾಷೆ, ನಮ್ಮ ಹೃದಯದ ಸಂವಹನವನ್ನು ಬೆಸೆಯುವ ಒಂದು ಮಾಧ್ಯಮ. ನಮ್ಮೊಳಗಿನ ನೋವು, ವಿಷಾದ, ಖುಷಿ, ಕೋಪ, ಎಲ್ಲವನ್ನೂ ನಾವು ವ್ಯಕ್ತಪಡಿಸಬೇಕಾದರೆ ಹೃದಯಕ್ಕೆ ಹತ್ತಿರವಾಗುವ ಭಾಷೆ ಬೇಕು. ನಮ್ಮ ಮಾತೃಭಾಷೆ ಯಾವುದೇ ಇರಲಿ. ಅದನ್ನು ಮಾತಾನಾಡುವವರು ಜೊತೆಗೆ ದೊರೆತರಂತೂ ಮನಸ್ಸಿನ ಭಾವನೆಗಳು ಸರಾಗವಾಗಿ ಹರಿಯುತ್ತದೆ. ಆದರೆ ಈಗ ಎಲ್ಲರಿಗೂ ಇಂಗ್ಲಿಷ್ ಮೋಹ. ತಮ್ಮೊಳಗೆ ಹರಿಯುವುದು ಇಂಗ್ಲೀಷ್ ರಕ್ತ ಅನಿಸುವಷ್ಟರ ಮಟ್ಟಿಗೆ ಟಸ್ಸು ಪುಸ್ಸು ಇಂಗ್ಲೀಷ್ ಬಳಕೆಯಾಗುತ್ತದೆ. ಇನ್ನು ಹೆಚ್ಚಿನವರ ಮಾತಿನಲ್ಲಿ ಈ ಇಂಗ್ಲೀಷ್ ಭಾಷೆ ಇನ್ನಷ್ಟು ಬೆರೆತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ