“ಮಿಠಾಯಿ ಮಾಮ ಕವಿತೆ ಸವಿಯೋಣ ಬಾ ತಮ್ಮ”: ಯಲ್ಲಪ್ಪ ಎಮ್ ಮರ್ಚೇಡ್, ರಾಯಚೂರು

ಮಕ್ಕಳ ಸಾಹಿತ್ಯ ಎಂದರೆ ಮಕ್ಕಳ ಮನಸ್ಸನ್ನು ತಣಿಸಿ, ಕುಣಿಸಿ, ಅವರ ಕುತೂಹಲವನ್ನು ಕೇರಳಿಸಿ ಅರಳಿಸಿ, ಅವರ ಭಾವನೆಗಳಿಗೆ ರೆಕ್ಕೆ ಕಟ್ಟಿ, ಗಾಳಿಯಲ್ಲಿ ತೇಲಾಡುವಂತೆ, ಅವರ ಮನಸ್ಸು ಸಂತುಷ್ಟಗೊಳಿಸುವುದಲ್ಲದೇ, ಅವರನ್ನು ಮಾನಸಿಕವಾಗಿ ದೈಹಿಕವಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡು ಹೋಗುವಂತೆ ಇರುವ ಸಾಹಿತ್ಯ. ಕನ್ನಡ ಸಾಹಿತ್ಯ ಲೋಕದೊಳಗೆ ಹಲವಾರು ಹಿರಿಯ ಸಾಹಿತಿಗಳು ಮಕ್ಕಳಿಗಾಗಿ ಬರೆದಿರುವಂತಹ ಕವಿಗಳನ್ನು ಸಹ ಕಾಣಬಹುದು. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಸೋಂಪುರದವರದಾ ಶಿಕ್ಷಕರು, ಕವಿಗಳು, ವಚನಕಾರರು, ಮಕ್ಕಳ ಸಾಹಿತಿಯು ಆಗಿರುವ ಶ್ರೀ ವೀರೇಶ ಬ ಕುರಿ ಸೋಂಪುರ … Read more

ಶತಾವಧಾನಿ ಗಣೇಶರ ’ಮಣ್ಣಿನ ಕನಸು’ – ಆಧುನಿಕೋತ್ತರ ಕಾಲಘಟ್ಟದಲ್ಲಿ ತೆರೆದುಕೊಳ್ಳುವ ಪ್ರಾಚೀನ ಭಾರತದ ಕಥೆ: ರಾಘವೇಂದ್ರ ಅಡಿಗ ಎಚ್ಚೆನ್

‘ಮಣ್ಣಿನ ಕನಸು’ ಇದು ಒಂದು ಕಾದಂಬರಿ ಎಂದು ಹೇಳುವುದಕ್ಕಿಂತ 2022ರಲ್ಲಿ ಪ್ರಕಟವಾದ ಆಧುನಿಕೋತ್ತರ ಭಾರತೀಯ ಮಹಾಗದ್ಯ ಎಂದು ಹೇಳಲು ಅಡ್ಡಿ ಇಲ್ಲ. ಶತಾವಧಾನಿ ಗಣೇಶ್ ಅವರ ಸಾಕಷ್ಟು ಉಪನ್ಯಾಸಗಳನ್ನು ಕೇಳಿದ್ದ ನಾನು ಅವರ ಕಾದಂಬರಿಯನ್ನು ಓದಲೇಬೇಕೆನ್ನುವ ಆಸೆಯಿಂದ ಬೆಲೆ ದುಬಾರಿ ಎಂದೆನಿಸಿದರೂ ಖರೀದಿಸಿ ಓದಿದೆ. ಒಟ್ಟೂ 634 ಪುಟಗಳ ಗಾತ್ರ, 14 ಅಧ್ಯಾಯಗಳಿರುವ ’ಮಣ್ಣಿನ ಕನಸು’ ನಮ್ಮನ್ನು ಎರಡೂವರೆ ಸಾವಿರ ವರ್ಷಗಳ ಹಿಂದಿನ ಭಾರತದಲ್ಲಿ ಪಯಣಿಸುವಂತೆ ಮಾಡುತ್ತದೆ. ಅದರಲ್ಲಿಯೂ ನೀವು ಸಂಸ್ಕೃತ ನಾಟಕಗಳನ್ನು ಓದಿರುವಿರಾದರೆ ಖಂಡಿತವಾಗಿ ಇದು … Read more

“ಸನ್ಮಾರ್ಗ ತೋರುವ “ಸತ್ ಪಾತ” ಕವಿತೆಗಳು”: ಅನುಸೂಯ ಯತೀಶ್

“ಸತ್ ಪಾತ” ಎಸ್. ಬಿ. ಮಾಳಗೊಂಡ ವಿರಚಿತ ಕವನ ಸಂಕಲನವಾಗಿದ್ದು 66 ಕವಿತೆಗಳನ್ನು ಒಳಗೊಂಡ ಬೃಹತ್ ಹೊತ್ತಿಗೆಯಾಗಿದೆ. ನಾಡಿನ ಖ್ಯಾತ ಲೇಖಕರಾದ “ರಾಗಂ” ಎಂದೆ ಹೆಸರು ವಾಸಿವಾಸಿಯಾದ ರಾಜಶೇಖರ ಮಠಪತಿಯವರ ಬೆನ್ನುಡಿಯ ಕಳಶದೊಂದಿಗೆ ಚೆನ್ನಬಸವಣ್ಣ ಎಸ್.ಎಲ್. IPS. ರವರ ಮುನ್ನುಡಿಯ ಶುಭ ಹಾರೈಕೆ ಜೊತೆಗೂಡಿ 2022 ರಲ್ಲಿ ಕನ್ನಡ ಸಾರಸ್ವತ ಲೋಕವನ್ನು ಪ್ರವೇಶಿಸಿದ ಕೃತಿ ಇದಾಗಿದೆ. ಎಸ್. ಬಿ. ಮಾಳಗೊಂಡರವರು ಪೊಲೀಸ್ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಲಾಟಿ ಹಿಡಿದು ಸಮಾಜಘಾತುಕರ ವಿರುದ್ಧ ಚಾಟಿ ಬೀಸುವ ಹುದ್ದೆಯಲ್ಲಿ ಇರುವವರು. … Read more

“ಅವ್ವನೊಂದಿಗಿನ ಬದುಕಿನ ಒಡನಾಟವನ್ನು ಆಪ್ತವಾಗಿ ಮನಬಿಚ್ಚಿ ಹೇಳಿರುವ ಬಯೋಗ್ರಫಿ”: ಎಂ.ಜವರಾಜ್

ಈಚೆಗೆ ಒಂದು ಪುಟ್ಟ ಕೃತಿ ‘ನನ್ನವ್ವನ ಬಯೋಗ್ರಫಿ’ ಓದಿದೆ. ಬಯೋಗ್ರಫಿ – ಜೀವನ ಚರಿತ್ರೆ, ಜೀವನ ಚಿತ್ರ, ಲೈಫ್ ಸ್ಟೋರಿ, ದಿನಚರಿ, ಇದೆಲ್ಲಕ್ಕು ಮೀರಿದ ಆಪ್ತವಾದ ಗಾಢವಾದ ಆತ್ಮಕಥನ ಅನ್ನಬಹುದು. ಆತ್ಮಕಥನದ ಲಕ್ಷಣ- ಇರುವುದನ್ನು ಮತ್ತು ಇದ್ದು ಬದುಕಿದ್ದನ್ನು ಪ್ರಾಮಾಣಿಕವಾಗಿ ಹೇಳುವುದು; ನೋಡಿದ್ದನ್ನು ಕೇಳಿಸಿಕೊಂಡಿದ್ದನ್ನು ಯಥಾವತ್ ದಾಖಲಿಸುವುದು; ಅರ್ಥಾತ್ ‘ಇದ್ದದ್ದು ಇದ್ದ ಹಾಗೆ’! ಸಾಹಿತ್ಯ ಪ್ರಾಕಾರಗಳಲ್ಲಿ ಆತ್ಮಕಥನವೂ ಒಂದು. ಆತ್ಮಕಥನಗಳ ರಚನೆ ಅಷ್ಟು ಸುಲಭವಲ್ಲ. ಅಲ್ಲಿ ಮರೆಮಾಚುವುದಕ್ಕೆ ಅವಕಾಶವಿಲ್ಲ. ಹಾಗೇನಾದರು ಮರೆಮಾಚಿದರೆ ಅದು ಆತ್ಮಕಥನವೇ ಅಲ್ಲ. ಗಾಂಧಿಯ … Read more

ಆತ್ಮಾನುಬಂಧದ ಸಖಿಯೊಡನೆ ಒಂದು ಸಹೃದಯ ಸಂವಾದ: ವರುಣ್ ರಾಜ್ ಜಿ.

ಕವಿ ಶ್ರೀ ರಾಘವೇಂದ್ರ ಡಿ. ತಳವಾರರ “ಆತ್ಮಾನುಬಂಧದ ಸಖಿ” ಕೃತಿಯ ಕುರಿತು ಇತ್ತೀಚೆಗೆ ತನುಶ್ರೀ ಪ್ರಕಾಶನದಿಂದ ಪ್ರಕಟಣೆಯಾಗಿದ್ದು ಅತ್ಯಲ್ಪ ಕಾಲದಲ್ಲಿಯೇ ಹಲವು ಸಹೃದಯರ ಮನಸ್ಸನ್ನು ಗೆದ್ದಿದೆ. ಈ ಕೃತಿಯು ರೂಪ – ಸ್ವರೂಪ ಮತ್ತು ವಿಷಯ ವ್ಯಾಪ್ತಿಯ ದೃಷ್ಠಿಯಿಂದ ಒಂದು ವಿಶಿಷ್ಟವಾದ ಕೃತಿ ಎನಿಸಿದ್ದು, ಓದುಗರನ್ನು ಎಲ್ಲಿಯೂ ನಿರಾಸೆಗೊಳಿಸದ ಗುಣ ಈ ಕೃತಿಯಲ್ಲಿದೆ. “ಆತ್ಮಾನುಬಂಧದ ಸಖಿ” ಕೃತಿಯ ಕವನದ ಸಾಲುಗಳು ಪದ್ಯದಂತೆ ಓದುವವರಿಂದ ಪದ್ಯವಾಗಿಯೂ, ಗದ್ಯದಂತೆ ಓದುವವರಿಂದ ಗದ್ಯವಾಗಿಯೂ ಓದಿಸಿಕೊಳ್ಳುತ್ತವೆ. ಪದ್ಯದಂತೆ ಹಾಡಿದರೂ ಗದ್ಯದಂತೆ ಓದಿದರೂ ಅರ್ಥ … Read more

ಯವ್ವಾ ಯವ್ವಾ “ಭೂಮಿಯ ಋಣ” ಚಂದ ಕಣವ್ವಾ: -ಡಾ. ನಟರಾಜು ಎಸ್.‌ ಎಂ.

ಒಂದು ಪೇಜಿನ ಕತೆ, ಕವಿತೆ ಕಟ್ಟುವುದು ಸುಲಭ. ಹತ್ತಾರು ಪುಟಗಳ ಕಥೆ, ನೂರಾರು ಪುಟಗಳ ಕಾದಂಬರಿ ಬರೆಯುವುದು ಕಷ್ಟ. ಆ ಕಷ್ಟಕ್ಕೆ ಯುವ ಲೇಖಕರು ತೆರೆದುಕೊಂಡಂತೆ ಯುವ ಲೇಖಕಿಯರು ತೆರೆದುಕೊಂಡಿದ್ದು ಬಹಳ ವಿರಳ. ಆ ಕಾರಣಕ್ಕೆ ಯುವ ಲೇಖಕಿಯರ ಕವಿತೆಗಳು ನಮಗೆ ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷಾಂಕಗಳಲ್ಲಿ ಹೆಚ್ಚಾಗಿ ಓದಲು ಸಿಗುತ್ತವೆ. ಲೇಖಕಿಯರು ಕಥಾಲೋಕಕ್ಕೆ ತೆರೆದುಕೊಳ್ಳಲು ಒಂದಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎನಿಸುತ್ತದೆ. ಬದುಕಿನ ಅನುಭವಗಳನ್ನು ತುಂಬಾ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಕೆಲಸ ಅಷ್ಟು ಸುಲಭವಲ್ಲ. ಆ ಸುಲಭವಲ್ಲದ ಕೆಲಸವನ್ನು ಒಂದು … Read more

ಪರಿಮಳದ ಪಯಣದಲಿ ಜೀವ ಜೀವನ ಧನ್ಯ: ಡಾ. ಹೆಚ್ ಎನ್ ಮಂಜುರಾಜ್

ಪುಸ್ತಕದ ಹೆಸರು : ಪರಿಮಳಗಳ ಮಾಯೆಲಲಿತ ಪ್ರಬಂಧ ಸಂಕಲನಲೇಖಕಿ : ಶ್ರೀಮತಿ ಆರ್ ಸಮತಾಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಶಿವಮೊಗ್ಗಮೊದಲ ಮುದ್ರಣ : 2022, ಬೆಲೆ: ರೂ. 140 ಶ್ರೀಮತಿ ಸಮತಾ ಅವರ ಈ ಲಲಿತ ಪ್ರಬಂಧಗಳ ಪುಸ್ತಕವು ಓದಲು ಸಿಕ್ಕಿದ್ದು ನನಗೆ ಆಕಸ್ಮಿಕವಾಗಿ. ಸಮತಾ ಅವರು ನನ್ನ ತಂಗಿಯ ಸಹಪಾಠಿಯಾಗಿದ್ದವರು. ನಿನ್ನೆ ನನ್ನ ಸೋದರಿ ಲಕ್ಷ್ಮಿ ಉರುಫ್ ಪಮ್ಮಿಯ ಮನೆಗೆ ಹೋದಾಗ ಅದೂ ಇದೂ ಮಾತಾಡುವಾಗ ಲೇಖಕಿಯ ವಿಚಾರ ಬಂತು. ಈಕೆ ನನ್ನ ತಂಗಿಯ ಸ್ನೇಹಿತೆ. ನನ್ನ … Read more

ಕುಟುಂಬವೆಂದರೆ ಒಬ್ಬ ವ್ಯಕ್ತಿಯಲ್ಲ, ಅವನೊಡನೆ ನಿಲ್ಲುವ ಪ್ರಪಂಚವೇ ಕುಟುಂಬ ಎನ್ನುವ “ಅಜ್ಜನ ಕಮೋಡು”: ಡಾ. ನಟರಾಜು ಎಸ್.‌ ಎಂ.

ಈ ತಿಂಗಳ ಮೊದಲ ವಾರದಲ್ಲಿ ಹಾಸನಕ್ಕೆ ಹೋಗಿದ್ದೆ. ನಮ್ಮ ನಡುವಿನ ಅಧ್ಬುತವಾದ ಅನುವಾದಕರಾದ ಜೆವಿ ಕಾರ್ಲೊ ಸರ್‌, ಮೈಸೂರಿನ ಕಥೆಗಾರ ಗೆಳೆಯ ಡಾ. ಗವಿಸ್ವಾಮಿ ಸಿಕ್ಕಿದ್ದರು. ಅವರ ಜೊತೆ ಮಾತನಾಡಿ ಸಂಜೆ ಹಿರಿಯ ಸಾಹಿತಿಗಳಾದ ಹಾಡ್ಲಹಳ್ಳಿ ನಾಗರಾಜು ರವರನ್ನು ಭೇಟಿಯಾದೆ. ಹಾಸನದ ಬಳಿ ಅತ್ತಿಹಳ್ಳಿಯ ತೋಟದ ಮನೆಯಲ್ಲಿ ವಾಸವಿರುವ ಹಿರಿಯರಾದ ನಾಗರಾಜುರವರನ್ನು ಭೇಟಿಯಾದ ದಿನ ಹೊರಗೆ ಸಣ್ಣನೆ ತುಂತುರು ಮನೆ ಹನಿಯುತ್ತಿತ್ತು. ಒಂದೆರಡು ಗಂಟೆ ಅವರೊಡನೆ ಹರಟೆ ಹೊಡೆದು ರಾತ್ರಿ ಊಟ ಮಾಡಿ ವಾಪಸ್ಸು ಬರುವಾಗ ನನ್ನ … Read more

“ಸಂಪ್ರೀತಿ ಲೋಕದಲ್ಲೊಂದು ರೋಚಕ ಪಯಣ”: ಅನುಸೂಯ ಯತೀಶ್

ಕಾವ್ಯವೆಂದರೆ ಕೇವಲ ಒಡಿಬಡಿ ಕೌರ್ಯಗಳ ಅನಾವರಣವಲ್ಲ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಬರಹಗಳ ಸೃಷ್ಟಿಯದು. ನೋಂದವರ ಪಾಲಿಗೆ ಅಳುವ ಮಗುವನ್ನು ಲಾಲಿಸಿ ಪಾಲಿಸಿ ಸಂತೈಸುವ ಹೆತ್ತವ್ವನ ಮಡಿಲು‌, ಅಂತಕರಣದ ತೊಟ್ಟಿಲು, ಭರವಸೆಯ ಬೆಳದಿಂಗಳು, ಅನುಭವಗಳ ಹಾರ, ಪ್ರೀತಿ ಪ್ರೇಮದ ಸಮ್ಮಿಲನ. ಒಟ್ಟಾರೆ ಜೀವ ಕಾರುಣ್ಯವೇ ಕಾವ್ಯವಾಗಿದೆ. ಜೀವನ ಎಂಬುದು ಸಮತಟ್ಟಾದ ನುಣ್ಣನೆಯ ದಾರಿಯಂತಲ್ಲ. ಹುಬ್ಬು ತಗ್ಗುಗಳನ್ನು, ಅಂಕುಡೊಂಕುಗಳನ್ನು ಒಳಗೊಂಡ ದುರ್ಗಮ ಹಾದಿಯದು. ನಮಗರಿವಿಲ್ಲದಂತೆ ತಿರುವುಗಳನ್ನು ಪಡೆದುಕೊಂಡು, ಅನಿರೀಕ್ಷಿತವಾಗಿ ಘಟಿಸುವ ಸವಾಲುಗಳ ಸರಮಾಲೆಯದು. ಕೆಲವೊಮ್ಮೆ ನಮ್ಮ ತೀರ್ಮಾನಗಳೇ ನಮಗೆ ತಿರುಮಂತ್ರಗಳಾಗಿ … Read more

“ಆಟಗಾಯಿ ಕಥೆಗಳು ಧ್ಯಾನಸ್ಥ ಸ್ಥಿತಿಗೆ ಜಾರಿ ಒಳಗಣ್ಣಿಂದ ನೋಡುವ ಪರೀಕ್ಷಿತ ಗುಣ ರೂಪದ್ದು”: ಎಂ.ಜವರಾಜ್

ಆನಂದ್ ಗೋಪಾಲ್ ಅವರ ‘ಆಟಗಾಯಿ’ ಕಥಾ ಸಂಕಲನ ನನ್ನ ಕೈಸೇರಿ ಸುಮಾರು ದಿನಗಳಾದರು ಓದಲು ಆಗದೆ ತಡವಾಗಿ ನೆನ್ನೆ ಬಿಡುವು ಮಾಡಿಕೊಂಡು ಒಂದೇ ಗುಕ್ಕಿಗೆ ಓದಿ ಮುಗಿಸಿದೆ. ಇಲ್ಲಿನ ಹನ್ನೊಂದು ಕಥೆಗಳಲ್ಲಿ ಐದಾರು ಕಥೆಗಳು ನನ್ನನ್ನು ಇನ್ನಿಲ್ಲದಂತೆ ಕಾಡಿದವು ಎಂಬುದಕ್ಕೆ ಅವುಗಳಲ್ಲಿನ ವಿಭಿನ್ನ ನಿರೂಪಣೆಯ ಕಥಾಧಾಟಿ! ‘ಆಟಗಾಯಿ’ ಗ್ರಾಮ್ಯ ಸೊಗಡಿರುವ ಪದ. ಇದರ ಮೂಲ ಭಾಷಾ ನುಡಿಗಟ್ಟು ‘ಪಗಡೆ’! ನನ್ನ ಕಾದಂಬರಿಗೆ ನಾನಿಟ್ಟ ಮೊದಲ ಹೆಸರು ‘ಪಗಡೆ’. ಕಾದಂಬರಿಯ ವಸ್ತು ವಿಷಯ ಮಾಸಾಳಿಗ ಮಾದಿಗರ ಕುಟುಂಬವೊಂದರ ಕುಲಕಸುಬು, … Read more

“ಅಣುವಿನಲ್ಲಿ ಸಮಷ್ಠಿಯನ್ನು ಕಟ್ಟಿಕೊಡುವ ಪ್ಯಾರಿ ಪದ್ಯಗಳು”: ಅನುಸೂಯ ಯತೀಶ್

ಕನ್ನಡ ಸಾಹಿತ್ಯ ಕ್ಷೇತ್ರ ಚಲನಶೀಲ ಗುಣವನ್ನು ಹೊಂದಿದ್ದು ಸೃಜನಶೀಲತೆಗೆ ನಿರಂತರವಾಗಿ ತನ್ನನ್ನು ತೆರೆದುಕೊಳ್ಳುತ್ತದೆ. ಇದರಿಂದ ಸಾಹಿತ್ಯ ರಚಿಸುವವರ ಸಂಖ್ಯೆ ಹೇರಳವಾಗುತ್ತಿದೆ. ನವ ನವೀನ ಪ್ರಯೋಗಗಳು ಸಾಹಿತ್ಯಕ್ಷೇತ್ರದಲ್ಲಿ ನಡೆಯುತ್ತಿರುತ್ತವೆ. ಇದು ನಮ್ಮ ಕನ್ನಡ ಭಾಷೆಗೆ ಇರುವ ಗಮ್ಮತ್ತು. ಅಂತಹುದೇ ಒಂದು ಹೊಸ ಪ್ರಯೋಗಕ್ಕೆ ನಾಂದಿ ಹಾಡಿದವರು ಎ.ಎಸ್. ಮಕಾನದಾರರವರು. ಇವರು ಪ್ಯಾರಿ ಪದ್ಯಗಳು ಎಂಬ ಹನಿಗವನ ಸಂಕಲನವನ್ನು ಸಖಿ‌ ಚೆಲ್ಲಿದ ಕಾವ್ಯಗಂಧ ಎಂಬ ಟ್ಯಾಗ್ ಲೈನ್ ನೊಂದಿಗೆ ಸಾಹಿತ್ಯಕ್ಷೇತ್ರಕ್ಕೆ ಪರಿಚಯಿಸಿದ್ದಾರೆ. ನಮ್ಮ ನಾಡಿನ ಹಿರಿಯ ಹಾಗೂ ಖ್ಯಾತ ಕವಿಗಳಾದ … Read more

ಸೇತುರಾಮ್.ಎಸ್.ಎನ್. ಇವರ ದಹನ ಪುಸ್ತಕದ ಬಗ್ಗೆ ಅನಿಸಿಕೆ: ದೀಪು ಹುಲ್ಕುಳಿ

ನಾನು ಓದಿದ ಪುಸ್ತಕ : ದಹನಲೇಖಕರು : ಶ್ರೀ ಸೇತುರಾಮ್ ಇಲ್ಲಿ ಬಂಡಾಯವಿಲ್ಲ … ಭಾವವಿದೆನೈತಿಕತೆಗೆ ಬಣ್ಣಗಳಿಲ್ಲ … ಒಳ ನೊಟವಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಅನೇಕ ಸ್ತ್ರೀ ಸಂವೇದಿಶೀಲ ಸಾಹಿತಿಗಳಿದ್ದಾರೆ, ಆಗಿ ಹೋಗಿದ್ದಾರೆ, ಮುಂದೆ ಭವಿಷ್ಯದಲ್ಲಿ ಆಗುವರು ಇದ್ದಾರೆ. ಆ ಎಲ್ಲಾ ಸಾಹಿತಿಗಳ ಸಾಹಿತ್ಯ ಒಳಗೊಂಡ ಮಹಿಳಾ ಸಂವೇದನಾ ಶೀಲ ಸಾಹಿತ್ಯದ ವಿಮರ್ಷೆ ಸಂಪೂರ್ಣವೆನಿಸುವುದು ಶ್ರೀ ಸೇತುರಾಮರ ದಹನ ಹಾಗೂ ನಾವಲ್ಲ ಈ ಎರಡು ಪುಸ್ತಕಗಳ ಬಗ್ಗೆ ಉಲ್ಲೇಖಿಸಿದಾಗ ಮಾತ್ರ ಎಂಬುವುದು ನನ್ನ ದೃಢವಾದ ಅಭಿಮತ. … Read more

ಉತ್ತರ ಪುಸ್ತಕ ಪರಿಚಯ: ಪೂಜಾ ಮಂಗಳೂರು

ಮನಸ್ಸನ್ನು ಕಾಡಿಸುವ ಪ್ರಶ್ನೆಗಳು ಬದುಕಲ್ಲಿ ಬಂದಾಗ “ಉತ್ತರ” ದ ಮೂಲವನ್ನು ಹುಡುಕುವ ನಿರ್ಧಾರವನ್ನು ಮನಸ್ಸು ಮಾಡುತ್ತದೆ. ಆ “ಉತ್ತರ”ಕ್ಕಾಗಿಯೇ ಸುಪ್ರೀತ್ ಕೆ.ಎನ್. ಅವರು ಈ ಕೃತಿಯನ್ನು ಆಧ್ಯಾತ್ಮದ ಬೇರೆ ಬೇರೆ ಆಯಾಮದಲ್ಲಿ ರಚಿಸಿದ್ದಾರೆ.ಕೆಲಸದ ಒತ್ತಡದ ಮಧ್ಯೆಯೂ ಈ ಪುಸ್ತಕವನ್ನು ಓದಿ ಕೆಳಗಿಟ್ಟಾಗ ಮನಸ್ಸು ಒಮ್ಮೆ ಅಧ್ಯಾತ್ಮದತ್ತ ವಾಲಿದ್ದೂ ನಿಜ.‌ ಇದರ ಮೊದಲು ಸುಪ್ರೀತ್ ಅವರ ಎಲ್ಲ ಬರವಣಿಗೆಯನ್ನು ಓದಿದ್ದೇನೆ. ಕಳೆದ ಬಾರಿ ಅವರು ಬರೆದ “ಸಾವು” ಕಾದಂಬರಿಯು ತುಂಬಾ ಕಾಡಿಸಿತ್ತು. ಈಗ “ಉತ್ತರ” ದ ಮೂಲಕ ಅವರು … Read more

ಸೋಜಿಗದ ಬಳ್ಳಿ ಎಂಬ ನವಿರು ಪ್ರೇಮ ಕಥನ: ನಟರಾಜು ಎಸ್.‌ ಎಂ.

ಎಂ ಆರ್‌ ಭಗವತಿಯವರ ನಿರೂಪಣೆ ಮತ್ತು ಸಂಯೋಜನೆ ಇರುವ ಸೋಜಿಗದ ಬಳ್ಳಿ ಮೊನ್ನೆ ಮೊನ್ನೆಯಷ್ಟೇ ನನ್ನ ಕೈ ಸೇರಿತು. ಪುಸ್ತಕವನ್ನು ಒಂದೆರಡು ದಿನಗಳಲ್ಲಿ ಪಟ್ಟು ಹಿಡಿದು ಓದಿ ಮುಗಿಸಿದೆ. ಒಮ್ಮೊಮ್ಮೆ ಕುತೂಹಲದಿಂದಲೂ, ಒಮ್ಮೊಮ್ಮೆ ಆಲಸ್ಯದಿಂದಲೂ, ಒಮ್ಮೊಮ್ಮೆ ನಿದ್ದೆಗಣ್ಣಿನಿಂದಲೂ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಈ ಪುಸ್ತಕದ ಕುರಿತು ಬರೆಯಲೇಬೇಕು ಅನಿಸಿತು. ಆ ಕಾರಣಕ್ಕೆ ಈ ಲೇಖನ. ಸೋಜಿಗದ ಬಳ್ಳಿ ಪುಸ್ತಕ ನನಗೆ ಗಮನ ಸೆಳೆದಿದ್ದು ಅದರಲ್ಲಿ ಮಿಳಿತಗೊಂಡಿರುವ ನವಿರಾದ ಪ್ರೇಮದ ಕಾರಣಕ್ಕೆ. ಅದಕ್ಕೆ ಸಾಕ್ಷಿ ಎಂಬಂತೆ ನವಿರಾದ … Read more

ಕತ್ತಲ ಗರ್ಭಕ್ಕೆ ಬೆಳಕು ಹಿಡಿದ ಗಜಲ್ಗಳು: ಕಲ್ಲೇಶ್ ಕುಂಬಾರ್

ಕವಿಯಾದವನು ತಾನು ಬದುಕಿದ ಕಾಲದ ಸಂವೇದನೆಗಳಿಂದ ಪಾರಾಗಿ ಏಕಾಂತವಾಗಿ ಉಳಿಯಲಾರ ಏಕೆಂದರೆ ಅವನು ಬದುಕಿದ ಕಾಲಘಟ್ಟದಲ್ಲಿನ ವ್ಯವಸ್ಥೆ ಅವನ ಮೇಲೆ ಖಚಿತವಾದ ಪರಿಣಾಮವನ್ನು ಬೀರಿರುತ್ತದೆ. ಅಂತೆಯೇ ಕವಿಯು ತನ್ನ ಕಾಲದ ವ್ಯವಸ್ಥೆಯನ್ನು ತಾನೇ ರೂಪಿಸಿಕೊಂಡ ಆಕೃತಿ(ದೃಷ್ಟಿಕೋನ)ಯ ನೆಲೆಯಲ್ಲಿ ವಿಶ್ಲೇಷಿಸುತ್ತಿರುತ್ತಾನೆ. ಹಾಗೆಯೇ ಬದುಕು ಮತ್ತು ಮನುಷ್ಯನನ್ನು ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ಮಾತು ಕೊಡುವ ಗುಣವನ್ನು ಬೆಳೆಸಿಕೊಂಡಿರುತ್ತಾನೆ. ಇದು ಒಂದು ರೀತಿಯಲ್ಲಿ ಕವಿಯ ಸಮಾಧಾನಕ್ಕೆ ದಾರಿ ಮಾಡಿಕೊಡುವಂತಹ ಸೃಜನಶೀಲ ಪ್ರಕ್ರಿಯೆ ಎನ್ನಬೇಕು. ಪ್ರಸ್ತುತ ಈ ಮಾತಿಗೆ ಪೂರಕವಾದ ಗುಣಗಳನ್ನು ಮೈಗೂಡಿಸಿಕೊಂಡಿರುವ … Read more

ಬದುಕಿನ ಗೆಲುವಿಗೆ ಹೊಸ ದಿಕ್ಕು ತೋರಿಸುವ ಮಧುಕರ್‌ ಬಳ್ಕೂರ್‌ ಅವರ ’ಆಸೆಗಳು ಕನಸಾಗಿ ಬದಲಾಗಲಿ’: ರಾಘವೇಂದ್ರ ಅಡಿಗ ಎಚ್ಚೆನ್

’ಆಸೆಗಳು ಕನಸಾಗಿ ಬದಲಾಗಲಿ’ ಎಂತಹಾ ಅದ್ಭುತ ಮಾತು! ಮಾನವನ ಆಸೆಗಳಿಗೆ ಕೊನೆ ಮೊದಲಿರುವುದಿಲ್ಲ. ಆದರೆ ಅದೇ ಆಸೆ ಕನಸುಗಳಾಗಿ ಬದಲಾಗುವುದು ಎನ್ನುವ ಹಾಗಿದ್ದರೆ ಅದೆಷ್ಟು ಚೆನ್ನ? ಇಷ್ಟಕ್ಕೂ ಇಲ್ಲಿ ಇದನ್ನು ಹೇಳುತ್ತಿರುವುದಕ್ಕೆ ಕಾರಣವಿದೆ. ಉದಯೋನ್ಮುಖ ಲೇಖಕ ಮಧುಕರ್ ಬಳ್ಕೂರು ಅವರ ಚೊಚ್ಚಲ ಕೃತಿಯ ಹೆಸರು ’ಆಸೆಗಳು ಕನಸಾಗಿ ಬದಲಾಗಲಿ’ ಈ ಪುಸ್ತಕ ಸಹ ಶೀರ್ಷಿಕೆಯಷ್ಟೇ ಸುಂದರವಾಗಿದೆ. ಮೂಲತಃ ಉಡುಪಿಯ ಕುಂದಾಪುರದ ಬಳ್ಕೂರು ಗ್ರಾಮದವರಾದ ಮಧುಕರ್ ವಿದ್ಯಾಭ್ಯಾಸ, ವೃತ್ತಿ ಸಂಬಂಧ ನಾನಾ ಊರುಗಳಲ್ಲಿದ್ದು ಅನುಭವ ಹೊಂದಿದವರು. ಕಳೆದ ಆರೇಳು … Read more

ಖಾಕಿಯೊಳಗಿನ ಖಾದಿ ಕವಿತೆಗಳು: ಅಶ್ಫಾಕ್ ಪೀರಜಾದೆ

ಕೃತಿ; “ಗಾಂಧಿ ನೇಯಿದಿಟ್ಟ ಬಟ್ಟೆ”ಕವಿ; ರಾಯಸಾಬ ಎನ್. ದರ್ಗಾದವರ.ಪುಟ ಸಂಖ್ಯೆ; 80 ಬೆಲೆ; 90ಅನಾಯ ಪ್ರಕಾಶನ, ಕಟ್ನೂರ್, ಹುಬ್ಬಳ್ಳಿಸಂಪರ್ಕ ಸಂಖ್ಯೆ; 7259791419 ಕವಿತೆ ಸಶಕ್ತ ಸಕಾಲಿಕ ರೂಪಕಗಳ ಮೂಲಕವೇ ಓದುಗನ ಭಾವ ಪರಿಧಿಯಲ್ಲಿ ಬಿಚ್ಚಿಕೊಳ್ಳುತ್ತ ಹೊಸಹೊಸ ಅರ್ಥ ಆಯಾಮಗಳಲ್ಲಿ ಪಡೆದುಕೊಳ್ಳುತ್ತ ಸಾಗಿ ಹೃದಯಕ್ಕೆ ತಲುಪಬೇಕ ತಟ್ಟಬೇಕು. ಆಗಲೇ ಕವಿಗೂ ಬರೆಸಿಕೊಂಡ ಕವಿತೆಗೂ ಒಂದು ಘನತೆ. ಕವಿಯ ಮನದ ಚದುರಿದ ಭಾವಮೋಡಗಳು ಕವಿತೆಯನ್ನುವ ಒಂದು ನಿಖರವಾದ ಅಭಿವ್ಯಕ್ತಿಯ ಮಾಧ್ಯಮದಲ್ಲಿ ಕಾವ್ಯಶಿಲ್ಪ ಕೆತ್ತಿದ್ದರೂ ಕೂಡ ಕಾವ್ಯಾಸಕ್ತ ಮನಮಸ್ತಿಕದಲ್ಲಿ ಭಿನ್ನವಾದ ಅರ್ಥಗಳು … Read more

ಬುದ್ಧ ಕಾಣದ ನಗೆ ಪುಸ್ತಕ ವಿಮರ್ಶೆ: ವರುಣ್ ರಾಜ್

ಪುಸ್ತಕದ ಹೆಸರು : ಬುದ್ಧ ಕಾಣದ ನಗೆಕೃತಿ ಪ್ರಕಾರ : ಕವನ ಸಂಕಲನಕವಿ : ಎಸ್. ರಾಜು ಸೂಲೇನಹಳ್ಳಿ.ಪ್ರಕಾಶಕರು : ತನುಶ್ರೀ ಪ್ರಕಾಶನ, ಸೂಲೇನಹಳ್ಳಿ.ಪುಟ : 86ಬೆಲೆ : 90 ಕವಿ ಹಾಗೂ ಕಾದಂಬರಿಕಾರರೂ ಆದ ರಾಜು ಎಸ್ ಸೂಲೇನಹಳ್ಳಿ ರವರು ತಮ್ಮ ಕೃತಿಗೆ ಕೊಟ್ಟಿರುವ ‘ಬುದ್ಧ ಕಾಣದ ನಗೆ’ ಎಂಬ ಶೀರ್ಷಿಕೆಯೇ ಬಹಳ ಆಕರ್ಷಕವಾಗಿದೆ. ಪುಟ ತಿರುಗಿಸುತ್ತಾ ಹೋದರೆ ಮತ್ತಷ್ಟು ಆಕರ್ಷಣೆ ಇವರ ಕವಿತೆಗಳಲ್ಲಿ ಕಂಡುಬರುತ್ತೆ. ಕೃತಿಯ ಮೊದಲ ಕವಿತೆಯಲ್ಲಿಯೇ ಕವಿಗಳು ಬುದ್ದಿವಂತಿಕೆ ಮತ್ತು ಹೃದಯಸಂಪನ್ನತೆಯ … Read more

ಸೀಮಾತೀತ ಸಿಮೊನ್‌ ದ ಬೋವಾ: ಸಂಗನಗೌಡ ಹಿರೇಗೌಡ

ಭಾರತೀಯ ಮತ್ತು ಭಾರತೇತರ ಪ್ರಮುಖ ಸಾಂಸ್ಕೃತಿಕ ನಾಯಕರು, ಕವಿಗಳು, ಲೇಖಕರು ಅವರ ಒಟ್ಟು ಬದುಕಿನಲ್ಲಿ ಘಟಿಸಿದ ಮುಖ್ಯ ಘಟನೆಗಳನ್ನಿಟ್ಟುಕೊಂಡು ಕನ್ನಡಕ್ಕೆ ತರ್ಜುಮೆಗೊಂಡ ನಾಲ್ಕು ಕೃತಿಗಳನ್ನು ನನ್ನ ಮಿತಿಯೊಳಗೆ ಓದಿಕೊಂಡಿದ್ದೇನೆ. ನಟರಾಜ ಹುಳಿಯಾರವರು ಸಂಪಾದಿಸಿರುವ “ಲೋಹಿಯಾ ಕಂಡ ಗಾಂಧಿ” ಇದರಲ್ಲಿ ಬಿ.ಎ ಸನದಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹಸನ್‌ ನಯೀಂ ಸುರಕೋಡ. ಸತ್ಯವ್ರತ, ರವೀಂದ್ರ ರೇಶ್ಮೆ, ಸಿ, ನಾಗಣ್ಣ, ನಟರಾಜ ಹುಳಿಯಾರ, ಈ ಏಳು ಜನ ಲೇಖಕರು ಲೋಹಿಯಾ ಅವರ ಬದುಕಿನ ಪ್ರಮುಖವಾದ ಭಾಷಣ, ಚಳುವಳಿ, ಹೋರಾಟಗಳಿನ್ನಿಟ್ಟುಕೊಂಡು, ಗಾಂಧಿಯ ಕುರಿತು … Read more

“ಕತ್ತಲ ಗೋಡೆಯ ಮೇಲೆ ತಮ್ಮದೇ ರಕ್ತದಲ್ಲಿ ಗೀಚಿ ಗೀಚಿ ಬರೆದ ದಲಿತ ತಲೆಮಾರುಗಳ ತವಕ ತಲ್ಲಣ!”: ಎಂ. ಜವರಾಜ್

“ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ” ಬಿದಲೋಟಿ ರಂಗನಾಥ್ ಅವರ ನಲವತ್ತು ಕವಿತೆಗಳನ್ನೊಳಗೊಂಡ ಒಂದು ಪರಿಪೂರ್ಣ ಸಂಕಲನ. ಇಲ್ಲಿ ‘ಪರಿಪೂರ್ಣ’ ಪದ ಬಳಕೆಯು ಕವಿತೆಗಳು ಓದುಗನಿಗೆ ಗಾಢವಾಗಿ ಆವರಿಸಿಕೊಳಬಹುದಾದ ಲಯದ ಒಂದು ದಟ್ಟ ದನಿ. ಈ ಆವರಿಕೆ, ಕವಿಯು ಕಾವ್ಯ ಕಟ್ಟುವಿಕೆಯಲ್ಲಿ ಅನುಸರಿಸಿರುವ ಒಂದು ಕುಶಲ ತಂತ್ರವೇ ಆಗಿದೆ. ಈ ಪರಿಪೂರ್ಣತೆಯನ್ನೆ ಹಿಗ್ಗಿಸಿ ಬಿದಲೋಟಿ ರಂಗನಾಥರ ಕವಿತೆಗಳ ಓದು ಮತ್ತು ಮುನ್ನೋಟವನ್ನು ಪರಿಣಾಮಕಾರಿಯಾಗಿ ಒಳಗಣ್ಣಿನಿಂದ ನೋಡುತ್ತಾ ಪರಾಮರ್ಶನೆಗೆ ಒಳಪಡಿಸುವುದಾದರೆ “ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ” ಎಂಬುದು ದಲಿತ ನೆಲೆಯ … Read more

“ಹೆಣ್ಣಿನ ಒಳ ವೇದನೆಯ ಚಿತ್ರಣವನ್ನು ಓದುಗನ ಎದೆಗೆ ಎರಕ ಉಯ್ದು ಬೆಚ್ಚಿಸುವ ಕವಿತೆಗಳು”: ಎಂ. ಜವರಾಜ್

ಬದುಕಿನ ಸತ್ಯಗಳನ್ನು ಕೆಲವೇ ಪದಗಳಲ್ಲಿ ಕೆಲವೇ ಸಾಲುಗಳಲ್ಲಿ ಕೆಲವೇ ನುಡಿಗಟ್ಟುಗಳಲ್ಲಿ ಹೇಳಬಲ್ಲ ಶಕ್ತಿ ಇರುವುದು ಕಾವ್ಯಕ್ಕೆ. ಸಾಹಿತ್ಯದ ಹುಟ್ಟಿನ ಮೂಲ ಸಾಮಾನ್ಯ ಜನರ ‘ಪದ’ದಿಂದ. ಈ ಜಾನಪದಕ್ಕೆ ಶಕ್ತಿ ಹೆಚ್ಚು. ಒಂದು ಕವಿತೆ ತನ್ನ ಎದೆಯೊಳಗೆ ನೂರಾರು ಸಂಕಟಗಳನ್ನು ನೋವುಗಳನ್ನು ಅಭಿಲಾಷೆಗಳನ್ನು ಇಟ್ಟಕೊಂಡಿರುವ ದೈತ್ಯ ಕಣಜ. ಈ ಕಣಜದೊಳಗೆ ಪ್ರೀತಿ ಪ್ರೇಮ ಪ್ರಣಯ ಲೋಲುಪ ಸಾವು ಹಾಸ್ಯ ಲಾಸ್ಯ ಸರಸ ವಿರಸ ಕಾಮ ಭೋಗ ಸಂಭೋಗ ಒಳಿತು ಕೆಡುಕು ಕಸ ರಸಗಳ ವಿವರಗಳೂ ಉಂಟು. ಹೀಗಾಗಿ ನೂರು … Read more

“ಗಾಂಧಿ ಆಗ್ಬೇಕಂದುಕೊಂಡಾಗ” ಪುಸ್ತಕ ಪರಿಚಯ: ಸುನೀಲ ಚಲವಾದಿ

ನಮ್ಮ ಹೆಮ್ಮೆಯ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಗ್ರಾಮದವರಾದ “ವೀರಣ್ಣ ಮಂಠಾಳಕರ” ಬರೆದಿರುವಂತಹ ಒಂದು ಕವನ ಸಂಕಲನ “ಗಾಂಧಿ ಆಗ್ಬೇಕಂದುಕೊಂಂಡಾಗ” ಎಂಬ ಪುಸ್ತಕದ ಒದುಗನಾದ ನಾನು ನಿಮ್ಮೆಲ್ಲರಿಗು ಪರಿಚಯಿಸುವುದಕ್ಕೆ ತುಂಬಾನೇ ಸಂತಸವಾಗುತ್ತಿದೆ. ಶ್ರೀಯುತ ವೀರಣ್ಣ ಮಂಠಾಳಕರ್ ಅವರು ಈ ವರೆಗೆ ಒಟ್ಟು 13 ಕೃತಿಗಳನ್ನು, ಬರೆದಿದ್ದಾರೆ. ಚುಟುಕು, ಹನಿಗವನ, ಕಥಾಸಂಕಲನ, ಮಾಧ್ಯಮದ ಕುರಿತಾದ ಲೇಖನಗಳನ್ನು ರಚಿಸಿ ಓದುಗರಿಗೆ ಕೊಡುಗೆಯಾಗಿ ನೀಡಿರುವುದು ಅವರ ಸಾಹಿತ್ಯ ಕೃಷಿಯ ಕನ್ನಡಿ ನಮ್ಮ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ವೀರಣ್ಣ ಮಂಠಾಳಕರ್ ಅವರು … Read more

“ತುದಿಯಿರದ ಹಾದಿ – ಅಂಬೇಡ್ಕರ್ ರನ್ನು ಧೇನಿಸುವ ದಲಿತ ಲೋಕದ ಜೀವನ ವಿಧಾನವನ್ನು ಕಟ್ಟಿಕೊಡುವ ಒಂದು ಮಹತ್ವದ ಕೃತಿ”: ಎಂ.ಜವರಾಜ್

ಮೋದೂರು ತೇಜ ಅವರ ‘ತುದಿಯಿರದ ಹಾದಿ’ ಕಾದಂಬರಿಯ ಪುಟ ತಿರುವುತ್ತಾ ಹೋದಂತೆಲ್ಲ ರಾವಬಹದ್ದೂರ್ ಅವರ ‘ಗ್ರಾಮಾಯಣ’ ಎಂಬ ದಟ್ಟವಾದ ಜೀವನಾನುಭವ ನೀಡುವ ಗ್ರಾಮೀಣ ವಸ್ತುವಿಷಯದ ಕಾದಂಬರಿಯ ಪುಟಗಳತ್ತ ಮನಸ್ಸು ಹರಿಯಿತು. ರಾವಬಹದ್ದೂರ್ ಅವರು ತಮ್ಮ ‘ಗ್ರಾಮಾಯಣ’ ಕಾದಂಬರಿಯನ್ನು ಮೂರು ಭಾಗಗಳಾಗಿ ವಿಭಾಗಿಸಿ ಅಲ್ಲಿನ ಕಥೆಯನ್ನು ವಿಸ್ತರಣೆ ಮಾಡುತ್ತಾ ಕಥೆಗೆ ಒಂದು ಚೌಕಟ್ಟು ನಿರ್ಮಿಸಿದಂತೆ ಅಲ್ಲಿನ ಪಾತ್ರವರ್ಗವನ್ನೂ ಆ ಚೌಕಟ್ಟಿನೊಳಗೇ ರಂಗ ವೇದಿಕೆಯಲ್ಲಿ ಕಾಣ ಬರುವಂತೆ ಕಡೆದು ನಿಲ್ಲಿಸುತ್ತಾರೆ. ಆ ಪಾತ್ರಗಳು ಪಾದಳ್ಳಿಯಲ್ಲೇ ಹುಟ್ಟಿ ಪಾದಳ್ಳಿಯಲ್ಲೇ ಬೆಳೆದು ಆ … Read more

ಕಾಲಕೋಶ ಎನ್ನುವ ಕಳೆದುಹೋದ ಕಾಲದ ಕನ್ನಡಿ: ಸತೀಶ್ ಶೆಟ್ಟಿ ವಕ್ವಾಡಿ

ಶಶಿಧರ ಹಾಲಾಡಿಯವರ ಕಾಲಕೋಶ ಕೈಸೇರುವ ಸಮಯದಲ್ಲಿ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾದ ಗ್ರಹಣವೆನ್ನುವ ವೆಬ್ ಸೀರೀಸ್ ಅನ್ನು ನೋಡಿ ಒಂದೆರಡು ದಿನವಾಗಿತ್ತಸ್ಟೆ. ಈ ಗ್ರಹಣ ಬಂದು 1984ರ ಇಂದಿರಾ ಗಾಂಧಿ ಹತ್ಯೆಯ ನಂತರ ನೆಡೆದ ಸಿಖ್ಖರ ಮೇಲಿನ ದಾಳಿಯ ಕುರಿತಾದ ವಸ್ತುವನ್ನು ಒಳಗೊಂಡ ವೆಬ್ ಸೀರೀಸ್ . ಕಾಲಕೋಶದಲ್ಲೂ ಸಹ ಅದೇ ವಸ್ತು ಇದೆ ಅನ್ನೋ ಅಂಶ ಪುಸ್ತಕದ ಬಗ್ಗೆ ಬಂದ ವಿಮರ್ಶೆಯಲ್ಲಿ ಓದಿದ್ದರಿಂದ ಪುಸ್ತಕವನ್ನು ಓದಲು ಆರಂಭಿಸಿದಾಗ ಅದೇ ವಿಷಯ ಪುನಃ ಇಲ್ಲಿ ಮತ್ತೆ ಮರುಕಳಿಸಿ … Read more

“ಬಸಿದ ಕಣ್ಣೀರ ಭಾಷೆಯೊಳಗಿನ ಮತಂಗ ಕುಲದ ಧ್ಯಾನಸ್ಥ ಪರಂಪರೆಯ ಜೀವ ಕಾರುಣ್ಯದ ಮೋಹಕ ನವಿಲುಗಳ ಹೆಜ್ಜೆ ಗುರುತು!”: ಎಂ.ಜವರಾಜ್

ಆರನಕಟ್ಟೆ ರಂಗನಾಥರ ‘ಕಾರುಣ್ಯದ ಮೋಹಕ ನವಿಲುಗಳೇ’ ಕವಿತೆಗಳ ಆಳವು “ಬೋಧಿಸತ್ವ ಮಾತಂಗನು ತನಗೆ ಸಿಕ್ಕ ಭಿಕ್ಷಾನ್ನವನ್ನು ತೆಗೆದುಕೊಂಡು ಒಂದು ಗೋಡೆಯನ್ನಾಶ್ರಯಿಸಿ ಜಗಲಿ ಮೇಲೆ ಕೂತು ತಿನ್ನ ಹತ್ತಿದ್ದನು.. ಆತನ ಗಮನ ಬ್ರಹ್ಮಲೋಕದಲ್ಲಿತ್ತು. ಉಣ್ಣುತ್ತಿದ್ದ ಬೋಧಿಸತ್ವ ಮಾತಂಗನನ್ನು ರಾಜಭಟರು ಖಡ್ಗದಿಂದ ಕತ್ತರಿಸಿ ಹಾಕಿದರು. ಆ ಚಂಡಾಲನು ಸತ್ತ ಕೂಡಲೆ ಬ್ರಹ್ಮಲೋಕದಲ್ಲಿ ಉದಯಿಸಿದನು. ದೇವತೆಗಳು ಕೋಪಗೊಂಡು ಮೇಧರಾಷ್ಟ್ರದ ಮೇಲೆ ಕೆಂಡದ ಮಳೆಗರೆದರು. ಇಡೀ ರಾಷ್ಟ್ರ ಮತ್ತು ಪರಿಷತ್ತು ಸುಟ್ಟು ನಷ್ಟವಾಯಿತು. ಮೆಜ್ಜಾರಣ್ಯ ಮಾತಂಗಾರಣ್ಯ ಎಂದಾಯಿತು. ಬುದ್ದನು ಹೇಳಿದನು ‘ನಾಯಿಯ ಮಾಂಸವನ್ನು … Read more

ತಾನೇ ಕವಿತೆಯಾದ ಕವಿಯ ಕವಿತೆಗಳ ಜಾಡ್ಹಿಡಿದು ನಡೆದಾಗ…..!: ಜಬೀವುಲ್ಲಾ ಎಮ್. ಅಸದ್, ಮೊಳಕಾಲ್ಮುರು.

ಕೃತಿ: ನನ್ನೊಳಗಿನ ಕವಿತೆ (ಕವನ ಸಂಕಲನ – ೨೦೨೦)ಲೇಖಕರು: ಅಷ್ಫಾಕ್ ಪೀರಜಾದೆಪ್ರಕಾಶನ: ಹೆಚ್. ಎಸ್. ಆರ್. ಎ. ಪ್ರಕಾಶನ, ಬೆಂಗಳೂರು.ಬೆಲೆ: ೧೫೦/- “ಕವಿ ಕೊರಳಿಗೆಉರಳಾದ ಕವಿತೆಅದ್ಹೇಗೋಅಮರವಾಗಿತ್ತುಕವಿ ಮಾತ್ರಜಗದ ಬೆಳಕಿಗೆಅಪರಿಚಿತನಾಗಿಯೇಉಳಿದುಬಿಟ್ಟ” ಹೀಗೆಲ್ಲಾ ಸಶಕ್ತವಾದ, ಅರ್ಥಪೂರ್ಣವಾಗಿ ಧ್ವನಿಸುವ ಕವಿತೆ ರಚಿಸುವ ‘ಅಷ್ಫಾಕ್ ಪೀರಜಾದೆ’ ರವರು, ಲೋಕದ ಬೆಳಕಿಗೆ ಅಪರಿಚಿತನಾಗಿ ಕತ್ತಲಲ್ಲೇ ಉಳಿದು ಬಿಡುವ ಕಹಿ ಸತ್ಯವನ್ನು ಕಾವ್ಯದ ಮೂಲಕ ತಮ್ಮ ಮನದಾಳದ ಇಂಗಿತವನ್ನು, ನೋವನ್ನು, ಹತಾಶೆಯನ್ನು, ತಲ್ಲಣವನ್ನು “ನನ್ನೊಳಗಿನ ಕವಿತೆ” ಎಂಬ ಭಾವಪೂರ್ಣ ಕವನ ಸಂಕಲನ ದಲ್ಲಿ ಹಂಚಿಕೊಂಡಿದ್ದಾರೆ. ಬರಹಗಾರನು … Read more

ಬುದ್ಧ ಧ್ಯಾನದ “ಪ್ಯಾರಿ ಪದ್ಯ” ಗಳು: ಅಶ್ಫಾಕ್ ಪೀರಜಾದೆ

ಚುಟುಕು, ಹನಿಗವನ, ಹನಿಗವಿತೆ, ಹಾಯ್ಕು, ಶಾಯರಿ, ರೂಬಾಯಿ, ಫರ್ದ, ಶೇರ್, ದ್ವಿಪದಿ, ತ್ರಿಪದಿ, ಚೌಪದಿ ಇತ್ಯಾದಿ ಇತ್ಯಾದಿಯಾಗಿ ಕರೆಯಲ್ಪಡುವ ಸಾಹಿತ್ಯದ ವಿವಿಧ ಪ್ರಕಾರಗಳು ಸಾಸಿವೆಯಲ್ಲಿ ಸಾಗರ ಅಡಕಗೊಳಿಸಿದಂತೆ ಅತಿ ಸ್ವಲ್ಪದರಲ್ಲಿ ಬಹಳಷ್ಟು ಹೇಳುವ ಅಭಿವ್ಯಕ್ತಿ ಮಾಧ್ಯಮ. ಇಲ್ಲಿ ಕತೆ, ಕವಿತೆಯಂತೆ ಸ್ವಲ್ಪೂ ಕೂಡ ವಾಚ್ಯತೆಗೆ ಜಾಗವಿರುವುದಿಲ್ಲ. ಹೀಗಾಗಿ ಪ್ರಸ್ತುತ ಅಕ್ಕಡಿ ಸಾಲಿನ ಮೂಲಕ ಶ್ರೇಷ್ಠ ಕವಿಯಾಗಿ ಗುರುತಿಸಿಕೊಂಡಿರತಕ್ಕಂತಹ ಎ. ಎಸ್. ಮಕಾನದಾರ ಅವರ ಇತ್ತೀಚಿನ ಸಂಕಲನ ಮೇಲಿನ ಯಾವುದೇ ಒಂದು ಪ್ರಕಾರಕ್ಕೆ ಬದ್ಧವಾಗಿರದೆ, ಅಷ್ಟೂ ಪ್ರಕಾರಗಳನ್ನು ತನ್ನೊಳಗೆ … Read more

ಓದುವ ಹಕೀಕತ್ತಿಗೆ ನೂಕಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವ ಅಜ್ಜ ನೆಟ್ಟ ಹಲಸಿನ ಮರ”: ಎಂ. ಜವರಾಜ್

ಕನ್ನಡದ ಪ್ರಗತಿಶೀಲ, ನವ್ಯ, ಬಂಡಾಯ ಸಾಹಿತ್ಯಗಳ ನಾನಾ ಸ್ತರಗಳ ಪ್ರಭಾವಗಳ ಪ್ರಗತಿಪರ ಚಿಂತನಶೀಲ ಲೇಖಕ ವ್ಯಾಸರಾಯ ಬಲ್ಲಾಳರು “ನಾನು ಒಂದು ಕಥೆಯೊ ಕಾದಂಬರಿಯೊ ಬರೆಯಲು ಆತುರ ತೋರುವುದಿಲ್ಲ. ಅದು ಒಳಗೆ ಗುದ್ದಿದಾಗ ಬರೆಯಲು ತೊಡಗುವೆ. ಹಾಗೆ ಸಮಯದ ಹೊಂದಾಣಿಕೆಯೂ ಇರಬೇಕು. ಈ ಮುಂಬಯಿ ಜೀವನ ವಿಧಾನಕ್ಕು ಬೆಂಗಳೂರಿನ ಜೀವನಕ್ಕು ವ್ಯತ್ಯಾಸ ಇದೆ. ಬೆಂಗಳೂರಿನ ಜೀವನ ವಿಧಾನಕ್ಕು ಉಡುಪಿಯ ಜೀವನಕ್ಕು ವ್ಯತ್ಯಾಸ ಇದೆ. ಜೊತೆಗೆ ಉಡುಪಿಯ ಜೀವನ ವಿಧಾನಕ್ಕು ಅಂಬಲಪಾಡಿಯ ಜೀವನಕ್ಕು ವ್ಯತ್ಯಾಸವಿದೆ. ಹೀಗೆ ನಾನು ಇಲ್ಲೆಲ್ಲ ಸುತ್ತಾಡಿದ … Read more

ಸೂಗೂರೇಶ ಹಿರೇಮಠ ಅವರ “ಮುರಿದ ಟೊಂಗೆಯ ಚಿಗುರು” ಕವನ ಸಂಕಲನ: ಸುರೇಶ್ ಮಲ್ಲಿಗೆ ಮನೆ….

ತನ್ನ ಮೊದಲ ಕವನ ಸಂಕಲನದಲ್ಲಿ ದಾರಿಗುಂಟ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟು ಓದುವಿಕೆ ಮನುಷ್ಯನ ಪೂರ್ಣತೆಗೆ ಕೊಂಡೊಯ್ಯುತ್ತದೆ, ಸಂವಾದ ಸಿದ್ಧಗೊಳಿಸುತ್ತದೆ, ಬರವಣಿಗೆಯಿಂದ ಆತನ ಪರಿಪೂರ್ಣ ಮನುಷ್ಯನನ್ನಾಗಿಸುತ್ತದೆ ಎಂಬ ಇಂಗ್ಲಿಷ್ನ ಖ್ಯಾತ ಬರಹಗಾರ Francis Bacon ಅವರ ಮಾತುಗಳನ್ನು ನೆನೆಸಿಕೊಳ್ಳುತ್ತ, ಪ್ರಕಾಶ ಕಡಮೆ(ನಾಗಸುಧೆ) ಅವರಿಂದ ಚಂದದ ಮುನ್ನುಡಿ ಬರೆಸಿ , ಲಲಿತ ಸಾಹಿತ್ಯದಲ್ಲಿ ತನ್ನದೇ ಛಾಪು ಮೂಡಿಸಿದ, ನಮ್ಮೆಲ್ಲರ ಬೆನ್ನೆಲುಬಾದ ಪ್ರೀತಿಯ ಗುಂಡುರಾವ್ ದೇಸಾಯಿ ಸರ್ ಅವರಿಂದ ಬೆನ್ನುಡಿ ಬರೆಸಿ,ಯಾವ ಆಡಂಬರವಿಲ್ಲದೆಕರಿಮಣಿಯಲ್ಲೆ ಬದುಕಿದಬಂಗಾರಅವರ ಅಮ್ಮನಿಗೆ ತನ್ನ ಕೃತಿಯನ್ನು ಅರ್ಪಿಸುವ … Read more

ಕವಿ ಮನಸ್ಸಿನ ಭಾವಯಾನ ‘ಮೌನಸೆರೆ’ ಕಾದಂಬರಿ: ಅಶ್ಫಾಕ್ ಪೀರಜಾದೆ

ಒಂದು ಕಥೆ ಓದಿಸಿಕೊಳ್ಳಬೇಕು ಮತ್ತು ಓದುಗನನ್ನು ಕಾಡಬೇಕು. ಇಂತಹ ವಿಚಾರವುಳ್ಳ ಕಥೆಗಳು ಎಂದೆಂದಿಗೂ ಅಮರತ್ವ ಪಡೆದುಕೊಳ್ಳುತ್ತವೆ. ಈ ದಿಶೆಯಲ್ಲಿ ಇಲ್ಲಿರುವ ಕಥಾವಸ್ತು ಅಮರತ್ವ ಪಡೆದುಕೊಳ್ಳುವತ್ತ ಸಾಗಿರುವುದು ಉತ್ತಮ ಬೆಳವಣಿಗೆಯ ಹಂತವೆಂದು ಖ್ಯಾತ ಸಾಹಿತಿ ಕವಿ ಮುದಲ್ ವಿಜಯ್ ಬೆಂಗಳೂರು ಅವರು ಯುವ ಸಾಹಿತಿ ಗಣಪತಿ ಹೆಗಡೆ ಅವರ ಚೊಚ್ಚಲ ಕಾದಂಬರಿ ಮೌನಸೆರೆಗೆ ಮುನ್ನುಡಿಯ ರೂಪದಲ್ಲಿ ನೀಡಿರುವ ಪ್ರಮಾಣ ಪತ್ರ. ಈ ಹಿನ್ನಲೆಯಲ್ಲಿ ಕಾದಂಬರಿ ಮೊದಲಿನಿಂದ ಕೊನೆಯವರೆಗೂ ಯಾವುದೇ ಅಡೆತಡೆಗಳು ಇಲ್ಲದೇ ಓದಿಸಿಕೊಂಡು ಹೋಗುವುದರಿಂದ ಇಲ್ಲಿ ಮುದಲ್ ವಿಜಯ್ … Read more