ಊರ ತೇರ ಹಬ್ಬ: ಡಾ. ವೃಂದಾ ಸಂಗಮ್

ಭಾರತ ಹುಣ್ಣಿಮೆಯಾದ ಒಂಬತ್ತು ದಿನಕ್ಕೆ ಊರಾಗ ಲಕ್ಷ್ಮವ್ವನ ತೇರು. ಅಂದರ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಜಾತ್ರೆ. ತೇರಬ್ಬ (ತೇರು-ಹಬ್ಬ) ಅಂದ ಕೂಡಲೇ ಮಕ್ಕಳಾದ ನಮಗೆಲ್ಲಾ ಖುಷಿ ಆಗಬೇಕಾದ್ದು ಸಹಜನ. ಈಗ ಐವತ್ತು ವರ್ಷದ ಹಿಂದೆ, ನಮಗೆಲ್ಲಾ ಜಾತ್ರೆ ತೇರುಗಳೇ ಊರ ಜನರನ್ನು ಒಗ್ಗೂಡಿಸುವ ಹಬ್ಬಗಳು ವಿಶೇಷ ಮನರಂಜನೆಗಳು. ಮಕ್ಕಳಾದ ನಮಗೆ, ಹೋದ ವರ್ಷ ಜಾತ್ರೆಯಲ್ಲಿ ನಾನು ಪುಟ್ಟ ಮಣ್ಣಿನ ಕುಡಿಕೆ ಕೊಂಡಿದ್ದೆ. ಕಟ್ಟಿಗೆಯ ಆಟದ ಸಾಮಾನಿನ ಡಬ್ಬಿ ಕೊಂಡಿದ್ದೆ. ಅವತ್ತು ಕೊಂಡಿದ್ದ ಪುಗ್ಗ (ಬಲೂನು), ಗಿರಿಗಿಟ್ಲೆ ಮನೆಗೆ … Read more

‘ಐ ಡೊಂಟ್ ಕೇರ್ ಅನ್ನೋದಕ್ಕೂ ಮೊದಲು’: ಮಧುಕರ್ ಬಳ್ಕೂರ್

“ಐ ಡೊಂಟ್ ಕೇರ್, ನನ್ನ ಲೈಪು ನನ್ನ ಇಷ್ಟ, ನಾನು ಯಾರನ್ನು ಕೇರ್ ಮಾಡೋಲ್ಲ” ಹಾಗಂತ ಬೆಳಿಗ್ಗೆ ಜೋಶ್ ನಲ್ಲಿ ಎದೆ ಉಬ್ಬಿಸಿ ಹೊರಟು ಸಂಜೆ ಆಗೋ ಹೊತ್ತಿಗೆ “ನನ್ನನ್ನ ಯಾರೂ ಅರ್ಥಾನೆ ಮಾಡ್ಕೊತಾ ಇಲ್ಲವಲ್ಲ” ಅಂತಾ ಅನಿಸೋಕೆ ಶುರುವಾದ್ರೆ ಅವರದು ಮೊಸ್ಟ್ ಕನ್ಪ್ಯೂಶಿಯಸ್ ಸ್ಟೇಜ್. ಮೀಸೆ ಮೂಡುವಾಗ ದೇಶ ಕಾಣೊದಿಲ್ಲ. ಬೇಕೆಂದಾಗ ಕಡ್ಲೆಕಾಯಿ ಸಿಗೋದಿಲ್ಲ ಅನ್ನೋ ಹಾಗೆ ಮೀಸೆ ಮೂಡೊ ಪ್ರಾಯದಲ್ಲಿ ಈ ತರಹದ ತಲ್ಲಣಗಳು ಎದುರಾದರೆ ಅದು ಸಹಜವೆನ್ನಬಹುದು. ಅದರಂತೆ ರೆಕ್ಕೆ ಬಲಿತ ಹಕ್ಕಿ … Read more

ನಿಲುವಂಗಿಯ ಕನಸು (ಅಧ್ಯಾಯ ೧೦-೧೧): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೦: ಕತ್ತೆಯ ಅಂಗಡಿ ಇನ್ನೇನು ನಾಳೆ ನಾಡಿದ್ದರಲ್ಲಿ ಅಪ್ಪಣಿ ಬಂದ್‍ಬಿಡ್ತಾನೆ. ಈ ಸರ್ತಿ ಒಂದ್ ನಾಲ್ಕು ದಿನ ಇಟ್ಟುಕೊಂಡು ಬೇಲಿ, ಮೆಣಸಿನ ಪಾತಿ, ನೀರಿನ ಗುಂಡಿ ಎಲ್ಲಾ ಮಾಡಿಸಿಕೊಂಡೇ ಕಳಿಸ್ಬೇಕು… ಹತಾರ ಎಲ್ಲಾ ಹೊಂದಿಸಿ ಇಟ್ಗಳಿ. ನಿಮಗೇನು, ಕೋಲ್ ತಗಂಡು ದನಿನ ಹಿಂದುಗಡೆ ಹೊರಟು ಬಿಡ್ತೀರಿ. ಗುದ್ದಲಿ ಕೆಲಸ ಎಲ್ಲಾನೂ ನಾನೇ ಮಾಡಕ್ಕಾಗುತ್ತಾ…ಸೀತೆಯ ಗೊಣಗಾಟ ನಡೆದಿತ್ತು.ರಾತ್ರಿಯ ಊಟ ಮುಗಿಸಿ ದಿಂಬಿಗೆ ತಲೆಕೊಟ್ಟ ಚಿನ್ನಪ್ಪನಿಗೆ ಮಾಮೂಲಿನಂತೆ ಕೂಡಲೇ ನಿದ್ದೆ ಹತ್ತಲಿಲ್ಲ.‘ಸೀತೆ ಹೇಳುವುದು ಸರಿ. ಎಲ್ಲಾ ಹತಾರ ಹೊಂದಿಸಿಕೊಳ್ಳಬೇಕು. … Read more

ಗಂಡಸಿಗ್ಯಾಕೆ ಗೌರಿ ದುಃಖ: ಡಾ. ವೃಂದಾ ಸಂಗಮ್

ಅಷ್ಟಲ್ಲದೇ ಹೇಳ್ತಾರಾ, ಗಂಡಸಿಗ್ಯಾಕೆ ಗೌರಿ ದುಃಖ. ಇಂತಹದೊಂದು ಗಾದೆ ಮಾತು, ಹೆಣ್ಣು ಮಕ್ಕಳು ಬಸಿರು, ಬಾಣಂತನದಲ್ಲಿ ಮತ್ತೆ ಪ್ರತೀ ವರ್ಷ ಗೌರೀ ಹಬ್ಬದ ಪೂಜೆಯ ಸಮಯದಲ್ಲಿ ಹೇಳೇ ಹೇಳ್ತಾರೆ. ಯಾಕೆಂದರೆ, ಬಸಿರು – ಬಾಣಂತನ ಎನ್ನುವದು ಹೆಣ್ಣಿನ ಮರು ಜನ್ಮವೇ. ಆ ನೋವು ಗಂಡಸಿಗೇನೂ ತಿಳಿಯದು ಅಥವಾ ತಿಳೀಬಾರದು ಅಂತ ಹೇಳ್ತಾರೇನೋ. ಆದರೆ ಗೌರಿ ಹಬ್ಬ ಅಂದರೆ, ಸಡಗರ ಸಂಭ್ರಮ. ಅದ್ಯಾಕೆ ಗೌರೀ ದುಃಖ ಆಗಿ ಹೋಗಿದೆ ಅಂತ ನಮ್ಮ ಪದ್ದಕ್ಕಜ್ಜಿಗೇನೂ ತಿಳಿದಿರಲಿಲ್ಲ. ಬಹುಶಃ, ಹಿಂದಿನ ಕಾಲದಲ್ಲಿ … Read more

ಪಂಜು ಕಾವ್ಯಧಾರೆ

ಅವಳ ನೋವ ನೆನೆಯುತ.ಅವಳ ಮೋಹದ ಬಳ್ಳಿ ಎಲ್ಲೆಲ್ಲೋ ಚಿಗುರಿಅರಳಿ… ಒಣಗಿ.ಒಡಲ ದಾವಾನಲ ಕಮ್ಮನೆ ಕುಡಿದು.. ಹರಿದು.ಎಂತಾ ಮರವೇ ಅದು!ಎದೆಯಿಂದ ಎದೆಗೆ ಗುಂಯ್ ಗುಡುತಥೇಟು ಭ್ರಮರ ಬೃಂಗ.ಸುಳಿ ಗಾಳಿಗೆ ಹಾರಿ.. ತೂರಿ ಹಬ್ಬಿದಪರಿಮಳದಲ್ಲಿ…ಕಾಲಿಟ್ಟಲ್ಲಿ ಕೊಲೆ.. ನಕ್ಕರಂತೂ ಸುಲಿಗೆಕತ್ತಿ ಕಟಾರಿಗಳ ಮೇಳ!ವಾರನ್ನ .. ಬಿಕ್ಷಾನ್ನ ಹಗಲೆನ್ನದೆ ಇರುಳೆನ್ನದೆಗಿರ ಗಿರ ತಿರುಗಿ ಅಲೆದು!ನೀಲಿ ಕಡಲಿಗೆ ಮುಖ ಮಾಡಿ ದಾಹದಣಿವ ನೀಗಿದವಳು.ನೆನೆಯುತ್ತೇನೆ ಆ ಮುಖವನ್ನುಸ್ಪಷ್ಟ ವಾಗಿ ಮೂಡುವುದಿಲ್ಲ!ಭೂರ್ಗರೆವ ಮಳೆಯ ಸಿಡಿಲಬ್ಬರದಲ್ಲಿಫಳರನೆ ಮಿಂಚು.. ಹೃದಯ ಚೆಲ್ಲಾಡಿಕರುಳ ಕರೆಗೆ ಮರುಗಿ ತಿರುಗಿ ಬಂದಂತಮಮತೆ.ಎಂತ ಚೆಂದದ ಬೊಂಬೆ … Read more

“ಗೆಳೆಯ ನಿನ್ನ ಅದಮ್ಯ ಪ್ರೀತಿಯ ಸಾಂಗತ್ಯ ಸುಖವ ಮತ್ತೆ ಗುನುಗುತ್ತ”. .: ಡಾ. ಶ್ವೇತಾ ಬಿ.ಸಿ.

ನಲ್ಮೆಯ ದೀಪ್ˌನಮ್ಮಿಬ್ಬರ ಪ್ರೀತಿಯ ಅನುಸಂಧಾನಕ್ಕೆ ಮತ್ತೆ ಮತ್ತೆ ನೆಪವೊಡ್ಡುತ್ತ ನಿನ್ನ ಪ್ರೀತಿಯ ಬೀಜ ನನ್ನ ಮನಸ್ಸಿನ ಕನ್ನೆಲದ್ದಲ್ಲಿ ಬಿದ್ದು ಗಿಡವಾದ ಕ್ಷಣವನ್ನು ಸರಳವಾಗಿ ವಿವರಿಸಲಾಗುತ್ತಿಲ್ಲ, ಮದುವೆಯಾಗಿ ಪ್ರೀತಿಸಿದವರು ನಾವು. ನಮ್ಮ ಒಂದು ದಶಕದ ಹಾದಿಯ ದಿನಗಳು ಬರಿ ದಿನಗಳಲ್ಲˌ ಮಳೆಯ ಹನಿಗಳು. ಅದನ್ನು ನಾನ್ನಲ್ಲದೆ ಇನ್ಯಾರು ಸಂಭ್ರಮಿಸುತ್ತಾರೆ. ನನ್ನ ಬದುಕಿನ ಪ್ರತಿ ನಿಮಿಷದ ಉಲ್ಲಾಸ ನೀನುˌ ಪ್ರತಿ ದಿನ ಎದ್ದ ಕೂಡಲೆ ನನ್ನ ಮನದಲ್ಲಿ ಮೂಡುವ ಪ್ರೀತಿಯ ಗೀತೆ ನೀನುˌ ನೀನು ಜೊತೆಯಲ್ಲಿದ್ದರೆ ಪೂರ್ಣ ಎಂಬ ಭಾವ … Read more

ಕ್ಷಮಿಸು ಗೆಳೆಯ..: ಜೆ.ವಿ.ಕಾರ್ಲೊ

ಇಂಗಿಷಿನಲ್ಲಿ : ಒ’ಹೆನ್ರಿಅನುವಾದ: ಜೆ.ವಿ.ಕಾರ್ಲೊ ರಾತ್ರಿ ಹತ್ತು ಗಂಟೆಯಾಗುತ್ತಲಿತ್ತು ಎಂದಿನಂತೆ ಅವನು ಲಾಠಿ ಬೀಸುತ್ತಾ ಆ ಬೀದಿಗೆ ಇಳಿದ. ಮಾಮೂಲಿ ಪೋಲಿಸ್ ಗತ್ತಿನಿಂದ ರಸ್ತೆಯುದ್ದಕ್ಕೂ ತನ್ನ ಬೀಟ್ ಶುರು ಮಾಡಲಾರಂಭಿಸಿದ. ಮೈ ಕೊರೆಯುವ ತಣ್ಣನೆಯ ಗಾಳಿಯೊಳಗೆ ಮಳೆ ಬರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದ್ದವು. ರಸ್ತೆಯಲ್ಲಿ ಜನಸಂಚಾರ ವಿರಳವಾಗಿತ್ತು. ತನ್ನ ಲಾಠಿಯನ್ನು ಕಲಾತ್ಮಕವಾಗಿ ಬೀಸುತ್ತಾ ರಸ್ತೆಯ ಮೂಲೆ ಮೂಲೆಗಳ ಮೇಲೆ ತೀಕ್ಷ್ಣ ದೃಷ್ಠಿ ಹರಿಸುತ್ತಾ, ರಸ್ತೆ ಬದಿಯಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವವರ ರಕ್ಷಕನಂತೆ ನಡೆಯುತ್ತಿದ್ದ. ಅವನು ಬೀಟ್ ಮಾಡುತ್ತಿದ್ದ … Read more

ಚಿಟ್ಟೆ ಕ್ಲಾಸ್ ಎಂಬ ಮಾಯಾ ಲೋಕ: ಡಾ. ದೋ. ನಾ. ಲೋಕೇಶ್

ಅದೊಂದು ದಿನ 1994 ರ ಮೇ ತಿಂಗಳ ಅಂತ್ಯದಲ್ಲಿ ನಮ್ಮಜ್ಜಿ ಊರು ಚಲುವಯ್ಯನಪಾಳ್ಯದಲ್ಲಿ ಆಟವಾಡುತ್ತಾ ನಮ್ಮಜ್ಜಿ ಮನೆಯ ಮುಂದಿನ ರಸ್ತೆಗೆ ಇಳಿದೆ. ದೂರದಲ್ಲಿ ಅರಳಿ ಮರದ ಹತ್ತಿರ ನಮ್ಮಮ್ಮ ಬರುತ್ತಿರುವುದು ಕಂಡು ಕುಣಿಯುತ್ತಾ ಮನೆಗೆ ಹೋಗಿ ನಮ್ಮಜ್ಜಿಗೆ ವಿಷಯ ಮುಟ್ಟಿಸಿದೆ. ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಬೆಳಗುಂಬದಿಂದ ಸುಮಾರು ಎರಡು ಮೂರು ಕಿಲೋಮೀಟರ್ ನಡೆದು ಬಂದ ಅಮ್ಮ ತಣ್ಣನೆಯ ನೀರು ಕುಡಿದು ಸುಧಾರಿಸಿಕೊಂಡರು. ನಂತರ ಬಂದ ವಿಷಯವೇನು? ಎಂದು ಅಜ್ಜಿ ಕೇಳಿತು. ಅಮ್ಮನ ಉತ್ತರ ಕೇಳಿ ನನಗಂತೂ ಭಾರಿ … Read more

ಖಾಲಿ ಜೇಬು ಫಕೀರನ ಪ್ರೇಮದೋಲೆ..: ಆನಂದ ವೀ ಮಾಲಗಿತ್ತಿಮಠ

ಬಹಳ ದಿನಗಳ ನಂತರ ಓಲೆ ಬರೆಯುತಿಹೆನೆಂದು ಬೇಜಾರು, ಗಾಬರಿಯಾಗಬೇಡ ಗೆಳತಿ. ನನ್ನ ಚರ್ಮ ಸುಕ್ಕುಗಟ್ಟಿದರೂ ನಿನ್ನ ಮ್ಯಾಲಿನ ಪ್ರೀತಿಗೆ ತುಕ್ಕು ಹಿಡಿಯದು. ಕಡಲು ಬತ್ತಿದ ಉದಾಹರಣೆಯುಂಟೇನು? ಹುಚ್ಚಿ..ಸಣ್ಣ ಸಣ್ಣ ಹಳ್ಳ ತೊರೆ ನದಿಗಳು ಬತ್ತಿ ಹೋಗಬಹುದು. ನನ್ನ ಪ್ರೀತಿ ಆ ಸುಂದರ ಸುವಿಶಾಲ ನೀಲ್ಗಡಲಿನಂತೆ ಕಣೆ, ಸದಾ ನಿನಗಾಗಿ ಪುಟಿಯುತ್ತಲೇ ಇರುವುದು. ಚುಮುಚುಮು ಚಳಿಯಲ್ಲಿ ನಿನ್ನ ನೆನಪಾದರೆ ಸಾಕು, ಈಗಲೂ ಬೆಚ್ಚನೆಯ ಭಾವ ಚಿಗುರೊಡೆಯುವುದು. ನನಗೆ ವಯಸ್ಸಾಗಿದೆಯೆಂದು ಮೂಗು ಮುರಿಯಬೇಡ. ನೀ ಮೂಗು ಮುರಿದಾಗಲೆಲ್ಲ ಮತ್ತಷ್ಟು ಮುದ್ದಾಗಿ … Read more

ಹೆಸರು ಹೇಡಿ ಎಂದು ಬರೆದು ಬಿಡಿ (ಗಜಲ್ ಹಿಂದಿನ ಕಥನ): ಅಶ್ಫಾಕ್ ಪೀರಜಾದೆ.

ಮೊದಲು ನನ್ನ ರಚನೆಯ ಗಜಲ್ ಒಮ್ಮೆ ಓದಿ ಬಿಡಿ. ನಂತರ ನಾನು ಈ ಗಜಲ್ ಹುಟ್ಟಿನ ಹಿಂದಿನ ಕಥನವನ್ನು ವಿವರಿಸುವೆ. ಗಜಲ್; ನಗುನಗುತ್ತಲೇ ಉರುಳಿಗೆ ಕೊರಳ ನೀಡಿದೆವು ನಾವು/ನಗುನಗುತ್ತಲೇ ಮಣ್ಣಲ್ಲಿ ಮಣ್ಣಾಗಿ ಬೆರತೆವು ನಾವು// ದುರಂತ ಪ್ಯಾರ ಕಹಾನಿಗಳಿಗೆ ಆಸ್ತಿ ಅಂತಸ್ತಗಳೇ ಕಾರಣ/ನಸುನಗುತ್ತಲೇ ನಮ್ಮ ಪ್ರೇಮ ತ್ಯಾಗ ಮಾಡಿದೆವು ನಾವು// ಪ್ರೀತಿಗೆ ಗೋಡೆ ಬೇರೆಯಾಗಿದ್ದರೆ ಒದ್ದು ಕೆಡವ ಬಹುದಿತ್ತು/ಹಾಲೇ ಹಾಲಾಹಲವಾದಾಗ ಅಸಹಾಯಕರಾದೆವು ನಾವು// ಅವರು ಕೊಟ್ಟ ಹೂಗುಚ್ಚಕ್ಕೆ ಅದೆಂಥ ಮೊನಚಿತ್ತೋ ಕಾಣೆ/ಮುಳ್ಳಾಗಿ ನೆಟ್ಟಿದ್ದರೂ ಪ್ರೀತಿಯಿಂದ ಸ್ವೀಕರಿಸಿದೆವು ನಾವು// … Read more

ಹಾಡ್ಲಹಳ್ಳಿ ಪ್ರಕಾಶನದ ಐದು ಪುಸ್ತಕಗಳು ಈಗ ಒಂದೇ ಗುಚ್ಚದಲ್ಲಿ…

ಹಾಡ್ಲಹಳ್ಳಿ ಪಬ್ಲಿಕೇಷನ್ ವತಿಯಿಂದ ಉಲಿವಾಲ ಮೋಹನ್ ಕುಮಾರ್ ಅವರ “ಮುಳುಗಿದ್ದೆಲ್ಲಾ ಕಥೆಯಲ್ಲ” ಹಾಡ್ಲಹಳ್ಳಿ ನಾಗರಾಜ್ ಅವರ “ಅಜ್ಜನ ಕಮೋಡು” ಕಾದಂಬರಿ ಹಾಗು “ಮಳೆಯೆಂಬ ಮಾಯಾಂಗನೆ” ಪ್ರಬಂಧ ಹಾಗು ಚಲಂ ಹಾಡ್ಲಹಳ್ಳಿ ಅವರ “ಈ ಮಳೆಗಾಲ ನಮದಲ್ಲ” ಕವನ ಸಂಕಲನ, “ವಿ.ಸೂ. ಹೊಗೆ ಆರೋಗ್ಯಕ್ಕೆ ಒಳ್ಳೆಯದು” ಪುಸ್ತಕಗಳು ಇದೇ ಶನಿವಾರ, ಸೆಪ್ಟೆಂಬರ್‌ ೪, ೨೦೨೧ ರ ಸಂಜೆ ಐದಕ್ಕೆ ಹಾಸನದ ಸಾಹಿತ್ಯ ಪರಿಷತ್‌ ಭವನದಲ್ಲಿ ಬಿಡುಗಡೆಯಾಗಲಿವೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಪುಸ್ತಕ ಕೊಳ್ಳುವವರಿಗಾಗಿ ಈ ಐದು ಪುಸ್ತಕಗಳ … Read more

ನಿಲುವಂಗಿಯ ಕನಸು (ಅಧ್ಯಾಯ ೮-೯): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೮: ತೋಟ ಹಾಳಾಗುವ ಕಾಲಕ್ಕೆ… ‘ನಿಮ್ಮತ್ತೆ ನಿನ್ನ ಗಂಡನ್ನ ಏಳನೇ ಕ್ಲಾಸಿಗೇ ಬಿಡಿಸುವ ಬದಲು ಇನ್ನಷ್ಟು ಓದಿಸಬೇಕಾಗಿತ್ತು ಕಣಕ್ಕ. ಒಳ್ಳೆಯ ಸಾಹಿತ್ಯಗಾರ ಆಗಿಬಿಡೋರು’ ಸುಬ್ಬಪ್ಪ ಅಕ್ಕನನ್ನು ಕಿಚಾಯಿಸಿದ. ಸೀತೆ ನಾಚಿ ತಲೆ ತಗ್ಗಿಸಿದಳು.‘ನೋಡು ಹೇಗೆ ಈಗ ಇಲ್ಲೇ ನಡೆದ ಹಂಗೆ ಹೇಳಿಬಿಟ್ರು!… ಬಹಳ ಇಂಟರೆಸ್ಟ್ ಆಗಿಬಿಡ್ತು’ ಎನ್ನುತ್ತಾ ಭಾವನ ಕಡೆ ತಿರುಗಿ ‘ಮುಂದೇನಾಯ್ತು ಹೇಳಿಬಿಡಿ… ಈ ಜಾಗನೂ ಒಳ್ಳೆ ಚಂದಾಗೈತೆ. ಇಲ್ಲೇ ಇನ್ನೊಂದು ಗಂಟೆ ಇದ್ದು ಹೋಗಣ’ ಎಂದ.ಆ ಕಡೆ ಮರಳಿನ ದಂಡೆ ಕಡೆ ನೋಡಿ, ದನಗಳು … Read more

ನೀನೇ ನನ್ನವಳಾದ ಮೇಲೆ ನಿನ್ನ ಸಿಹಿ ಕಹಿಗಳು ಇನ್ನೂ ನನ್ನದೇ: ಆರ್‌ ಸುನಿಲ್‌, ತರೀಕೆರೆ

ಗೆಳತಿ ಈ ಪ್ರೀತಿಯೆಂದರೇನು. . !?ಅಕ್ಷರಶಃ ಮೂಕ ನಾ. . ! ನಿನ್ನ ನೋಡಿ ಬಂದಾಗಿನಿಂದ ನಿಜಕ್ಕೂ ಮಾತುಗಳೆಲ್ಲಾ ಕಳೆದುಹೋಗಿದ್ದವು. ಅಕ್ಷರಗಳು ಮುನಿಸಿಕೊಂಡಿದ್ದವು. ನಿನ್ನೊಲವ ದಾಳಿಯಲ್ಲಿ ನನಗಾಗ ರಕ್ಷಣೆಯೇ ಇರಲಿಲ್ಲವಲ್ಲೇ. ಮದುವೆಯೆಂದರೆ ಮಾರುದೂರ ಓಡುತ್ತಿದ್ದವನಿಗೆ ಅಯಸ್ಕಾಂತದಂತೆ ಸೆಳೆದವಳು ನೀನು. ಆದರೆ ಒಂದಂತೂ ನಿಜ ನಾನು ನಿನಗೆ ಸಂಪೂರ್ಣ ಶರಣಾಗಿಹೋಗಿದ್ದೆ. ಎಲ್ಲೋ ಏನೋ ಕಳೆದುಕೊಂಡತಿದ್ದ ನನಗೆ ಸದಾ ನಿನ್ನ ನೆನಪುಗಳೇ ನನಗೆ ಹುರುಪು ತುಂಬುತ್ತಿದ್ದವು. ಹೊಸ ಕನಸುಗಳಿಗೆ ನಾಂದಿ ಹಾಡುತಿದ್ದ್ತವು. ಅದೇನೋ ಹೊಸ ಹುರುಪು ಹೊಸ ಮುದ. . … Read more

ಚುಟುಕಗಳು: ಮಾಂತೇಶ ಗೂಳಪ್ಪ ಅಕ್ಕೂರ

೧. ಪ್ರೀತಿ ಕುರುಡು. ನಿಜವಾಗಿಯೂ ಪ್ರೀತಿಕುರುಡು ಹಾಗಾಗಿಯೇ ನಾನದರಕಣ್ಣಿಗೆ ಕಾಣಿಸಿಕೊಳ್ಳಲಿಲ್ಲ ಬಿಡು..! ೨. ಮುತ್ತು ಹವಳ. ಕೈಯ ಹಿಡಿದಾಕ್ಷಣ ನಾನವಳಸಿಕ್ಕಂತಾಯಿತಂಥವಳಿಗೆ ಮುತ್ತು ಹವಳಇದ್ದರೂ ಇರಬಹುದೇನೋ ನನ್ನಂಥಹುಡುಗರು ತುಂಬಾ ವಿರಳ..! ೩. ಪ್ರೀತಿ & ಮೋಸ ನಾ ಒರಗುವ ದಿಂಬಿಗೂಕರಗುವ ಕಣ್ಣ್ ಕಂಬನಿಗೂಮಾತ್ರ ಗೊತ್ತು ಗೆಳತಿ ನಾನು ನಿನ್ನಪ್ರೀತಿ ಮಾಡಿದ್ದು. ನನ್ನ್ ಕಣ್ಣಿಗೆ ಚುಚ್ಚಿದ ಸೂಜಿಯಿಂದಹಿಡಿದು ನಮ್ಮಿಬ್ಬರನ್ನು ರಾಜಿ ಮಾಡಲುಬಂದವರಿಗೆಲ್ಲ ಗೊತ್ತು ಗೆಳತಿ ನೀನು ನನಗೆಮೋಸ ಮಾಡಿದ್ದು..! ೪. Block.. ರೆಕ್ಕೆಗಳಿರದಿದ್ದರು ಹಾರಿ ಬಂದು ಸಾರಿಸಾರಿ ಹೇಳುತ್ತಿದ್ದವು ನನ್ನ … Read more

ನಿಲುವಂಗಿಯ ಕನಸು (ಅಧ್ಯಾಯ ೬-೭): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೬: ಕೃಷಿ ಎಂಬ ಧ್ಯಾನ ಹೊಳೆಗೆ ಇಳಿದ ದನಗಳು ಬೆಳಗಿನ ಬಾಯಾರಿಕೆ ನೀಗಿಕೊಂಡು, ಹಾಗೆಯೇ ಸ್ವಲ್ಪ ದೂರ ಹೊಳೆಯೊಳಗೇ ಮುದದಿಂದ ನಡೆದು, ಬಲದ ದಂಡೆಗೆ ಹತ್ತಿ, ಅಲ್ಲಿಂದ ಮತ್ತೊಂದು ದಿಣ್ಣೆ ಏರತೊಡಗಿದವು. ಎರಡು ಪರ್ಲಾಂಗ್ ನಡೆದರೆ ಮತ್ತೊಂದು ತಳಾರ ಜಾಗ. ಕಡಿದಾದ ದಿಣ್ಣೆ ಏರಿ ದಣಿದ ದನಗಳು ದಾರಿಯಲ್ಲಿ ಮುಂದೆ ಹೋಗದೆ ವಿಶಾಲವಾದ ಆ ತಳಾರದಲ್ಲಿ ಮೇಯತೊಡಗಿದವು.ಅಕ್ಕನೊಂದಿಗೆ ಲಘುವಾಗಿ ಕೀಟಲೆ ಮಾಡುತ್ತಾ ಬರುತ್ತಿದ್ದ ಸುಬ್ಬಪ್ಪ ದನಗಳು ಮುದದಿಂದ ಮೇಯುತ್ತಿದ್ದುದನ್ನು ನೋಡಿ, ‘ಓಹೋ, ಇದಕ್ಕೇ ನಮ್ಮ ಭಾವ … Read more

ನನ್ನ ಅಂತರಾಳಕ್ಕೆ ನೀನಿಳಿದು, ನಾನು ನಿನ್ನಂತರಾಳವಾ ಹೊಕ್ಕು: ಶ್ರೀ ಕೊ ಯ

ನನ್ನ ಪ್ರಿಯೆ,ಮುಂಬರುವ ‘ಪ್ರೇಮಿಗಳ ದಿನ’ ಕ್ಕೆ ನನ್ನ ಪ್ರೀತಿಯ ಶುಭಾಶಯಗಳು. ನೀನು ಸಾಗರದಾಚೆಯ ಆ ದೇಶದಲ್ಲಿ ಇದ್ದರೆ ನಾನು ಇಲ್ಲೇ, ನಮ್ಮ ತಾಯ್ನಾಡಿನಲ್ಲಿ ಇರುವ ಪರಿಸ್ಥಿತಿ ನಮಗಿಂದು. ಅದರ ಕಾರಣಗಳು ಇಲ್ಲಿ ಅಪ್ರಸ್ತುತ. ಪ್ರಿಯೆ, ನಿನಗೆ ನೆನಪಿದೆಯೇ ನಾವು ಕಳೆದ ವರುಷ ಕೊಂಡಾಡಿದ ಆ ‘ಪ್ರೇಮಿಗಳ ದಿನ’. ಇಗೋ ಆ ನೆನಪಿನೊಡನೆ ಮತ್ತಷ್ಟು ನೆನಪುಗಳ ಸರಮಾಲೆ ನಿನ್ನ ಕೊರಳಿಗೆ. ನಿನ್ನನ್ನು ಬಣ್ಣಿಸಲು ಹೊರಟರೆ ಬಹುಶಃ ನಿಘಂಟಿನ ಗುಣವಾಚಕಗಳೆಲ್ಲವೂ ಖಾಲಿಯಾಗಬಹುದೇನೋ ಎಂಬ ಗುಮಾನಿ ನನ್ನನ್ನು ಕಾಡುತ್ತಿದೆ ಪ್ರಿಯೆ. ಹೀಗೆ, … Read more

ಒಲವಿನ ಹೋಂ-ಕ್ವಾರಂಟೈನು!: ಸಂತೆಬೆನ್ನೂರು ಫೈಜ್ನಟ್ರಾಜ್

ಗಂಧ ಲೇಪಿತ ಸುರಭಿ ಘಮವಾಗಿ ಮನ ಮನ ವ್ಯಾಪಿಸಿದವಳೇ…ಒಲವೆಂದರೆ ಮುಳ್ಳುಎದೆಗೆ ಚುಚ್ಚಿದರೂ ಹಿತ ಹಿತಸುರಿದ ರಕುತ ಲೆಕ್ಕವಿಲ್ಲ ಸಾಕಿಮದಿರೆಯ ಬಟ್ಟಲ ತುಂ-ತುಂಬಿ ಕೊಡುಇಷ್ಟು ಗಾಯಕ್ಕೆ, ಮತ್ತಿಷ್ಟು ಒಲವ ಉತ್ಪಾದಿಸುವ ಹೃದಯಗೂಡಿಗೆ ಸುರಿದು ನಗುವೆ! ಅದ್ಯಾರೋ ಬರೆದ ಪದ್ಯವಿದು ಅದೆಷ್ಟು ಬಾರಿ ಓದಿಕೊಂಡೆನೋ ಸಖಿ.. ..ಮುಳ್ಳ ಒಲವೇ ನಮ್ಮದು, ಚುಚ್ಚಿದರೇನಂತೆ ಹಿತ ಇದೆಯೆಂದ ಮೇಲೆ ಆಹಾ ಆನಂದವೇ ಸರಿ! ವಿರಹಕ್ಕೂ ಪ್ರೇಮ ಶಾಸ್ತ್ರದಲ್ಲಿ ಒಂದು ಒಲವ ಚೌಕಟ್ಟಿದೆ. ಇದ್ಯಾವುದೋ ವಿಚಿತ್ರ ಹೆಸರಿನ ಕಾಯಿಲೆ ಬಂದು ನೋಡು, ಬರೋಬ್ಬರಿ ಹತ್ತು … Read more

ನಾನು ಭಾವನೆಗಳನ್ನು ಬಚ್ಚಿಟ್ಟ ಮಹಾ ಮೌನಿ..!: ಆಶಾ ಆರ್ ಸುರಿಗೇನಹಳ್ಳಿ

ಓ.‌. ನನ್ನ ಹೃದಯ ನಿವಾಸಿಯೇ..! ಹೇ, ಹೃದಯವೇ..! ನೀ ನನ್ನ ಹೃದಯದಲಿ ನೆಲೆಸಿ ಹಲವು ವರ್ಷಗಳೇ ಸರಿದಿವೆ.. ಇನ್ನಷ್ಟು ವಸಂತಗಳು ಕಳೆದರೂ ಅದೇ ಪ್ರೀತಿ, ಮತ್ತಷ್ಟು ಪಜೀತಿ…! ಪ್ರೀತಿ ಓಕೆ ಪಜೀತಿ ಯಾಕೆ ಅಂತ ಯೋಚ್ನೆ ಮಾಡ್ತಿದ್ದೀಯಾ? ಒಂದು ತಗೊಂಡ್ರೆ ಮತ್ತೊಂದು ಫ್ರೀ ಅನ್ನೋ ಹಾಗೆ ಈ ಪ್ರೇಮಯಾನದಲಿ ಬರೀ ಸುಖವೇ ತುಂಬಿರೊಲ್ಲ ; ರೊಮ್ಯಾನ್ಸ್, ಆತ್ಮೀಯತೆ, ಒಂದಷ್ಟು ಕಾಳಜಿ, ಲೆಕ್ಕಕ್ಕೆ ಸಿಗದಷ್ಟು ಕೋಳಿ ಜಗಳಗಳು, ಕುಸಿದು ಬೀಳುವಂತಹ ಕ್ಲಿಷ್ಟ ಪರಿಸ್ಥಿತಿಗಳು ಎಲ್ಲದರ ಸಮ್ಮಿಶ್ರಣವೀ ಒಲುಮೆಯ ದಾರಿ. … Read more

ಪಂಜು ಕಾವ್ಯಧಾರೆ

ಯುದ್ದಕಾಗುವಷ್ಟು… ಧರ್ಮದ ಜಾಗರಣೆಯಲ್ಲಿ ಯುದ್ದಕಾಗುವಷ್ಟು ಮದ್ದಿದೆಆ ಫಕೀರನ ಜೋಳಿಗೆಯಲ್ಲಿಜಗಕೆ ಹಂಚುವಷ್ಟು ಪ್ರೀತಿಯ ಧಾರಾಳತನ ಶಾಂತತೆಸಂನ್ಯಾಸಿ ಜೋಳಿಗೆಯಲ್ಲಿದೆ ಪಡೆಯುವ ಮನಸುಗಳ ಬರವಿದೆ…! ಇಂದೂ ನಾಳೆಗೂ ನಾಡಿದ್ದೂ ಹೇಳಹೆಸರಿಲ್ಲದೆ ಅಳಿದು ಹೋಗುವದುಷ್ಟ ಬುದ್ದಿಯ ಗೀರುಗಳೆಷ್ಟು ಕುರುವುಗಳಷ್ಟುಆಕ್ರಂದನ ಮೊರೆತಗಳಷ್ಟುಯುದ್ದಕ್ಕೆ ಶಾಂತಿಯ ಹಂಗಿಲ್ಲಪ್ರೀತಿಗೆ ಮಮತೆಗೆ ಗಡಿಯ ಹಂಗಿಲ್ಲ…! ಆಯುಧ ತಾನೇ ಉತ್ಖನನ ಮಾಡಿದ್ದಾರೂ ಕೊಲ್ಲದೆ ಇರಲು ಸಾಧ್ಯವೇನಿರಂತರವಾಗಿ ಅದರ ಬೆನ್ನು ನೇವರಿಸುತ್ತಾ ಮುದ್ದು ಮಾಡುತ್ತಾನೆಯುದ್ಧದ ವ್ಯಸನಿಅದೇ ಆಯುಧ ನಳಿಕೆಯ ತುದಿಯಲ್ಲಿ ಪಾರಿವಾಳ ಗೂಡುಕಟ್ಟಲಿ ಎಂದು ಕಾಯುತ್ತಾನೆ ಶಾಂತತೆ ವ್ಯಸನಿಇಲ್ಲಿ ಇಬ್ಬರದು ಕನಸುಬಹುಷಃ ಜಗತ್ತು … Read more

ಕೃಷ್ಣೆಗೊಂದು ಪ್ರಶ್ನೆ: ಡಾ. ಗೀತಾ ಪಾಟೀಲ, ಕಲಬುರಗಿ

ನಮ್ಮ ಹಿಂದೂ ಧರ್ಮದ ಶ್ರೇಷ್ಠ ಮಹಾಕಾವ್ಯ ಮಹಾಭಾರತ! ಕೌರವ ಮತ್ತು ಪಾಂಡವರ ನಡುವೆ ನಡೆದ ಕುರುಕ್ಷೇತ್ರ ಯುದ್ಧದ ಫಲಿತಾಂಶವನ್ನು ವಿಸ್ತಾರವಾಗಿ ವಿವರಿಸುವ ಈ ಮಹಾಕಾವ್ಯದಲ್ಲಿ ನಾವು ಓದಿದ, ಕೇಳಿದ ಕೆಲವು ಪಾತ್ರಗಳು ವಿಶಿಷ್ಟ ಹಾಗೂ ಇಂದಿಗೂ ನಿಗೂಢವಾಗಿವೆ. ಅಂತಹ ಪಾತ್ರಗಳಲ್ಲಿ ದ್ರೌಪದಿಯ ಪಾತ್ರವೂ ಒಂದು!! ದ್ರೌಪದಿ ದ್ರುಪದ ಮಹಾರಾಜನ ಮಗಳು, ದ್ರುಷ್ಟದ್ಯುಮ್ನನ ತಂಗಿ, ಪಾಂಡುರಾಜನ ಸೊಸೆ! ರಾಜಾಧಿರಾಜರನ್ನು ಗೆದ್ದು ರಾಜಸೂಯ ಯಾಗ ಮಾಡಿದ ವೀರರೈವರ ಪಟ್ಟದ ರಾಣಿ,, ಚಕ್ರವರ್ತಿನಿ! ಸೌಂದರ್ಯದಲ್ಲಿ, ವೈಭವದಲ್ಲಿ ಅವಳಿಗೆ ಸಮನಾದವರೇ ಇಲ್ಲ ಎನ್ನಿಸಿಕೊಂಡವಳು!! … Read more

“ಗಾಂಧಿ ಆಗ್ಬೇಕಂದುಕೊಂಡಾಗ” ಪುಸ್ತಕ ಪರಿಚಯ: ಸುನೀಲ ಚಲವಾದಿ

ನಮ್ಮ ಹೆಮ್ಮೆಯ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಗ್ರಾಮದವರಾದ “ವೀರಣ್ಣ ಮಂಠಾಳಕರ” ಬರೆದಿರುವಂತಹ ಒಂದು ಕವನ ಸಂಕಲನ “ಗಾಂಧಿ ಆಗ್ಬೇಕಂದುಕೊಂಂಡಾಗ” ಎಂಬ ಪುಸ್ತಕದ ಒದುಗನಾದ ನಾನು ನಿಮ್ಮೆಲ್ಲರಿಗು ಪರಿಚಯಿಸುವುದಕ್ಕೆ ತುಂಬಾನೇ ಸಂತಸವಾಗುತ್ತಿದೆ. ಶ್ರೀಯುತ ವೀರಣ್ಣ ಮಂಠಾಳಕರ್ ಅವರು ಈ ವರೆಗೆ ಒಟ್ಟು 13 ಕೃತಿಗಳನ್ನು, ಬರೆದಿದ್ದಾರೆ. ಚುಟುಕು, ಹನಿಗವನ, ಕಥಾಸಂಕಲನ, ಮಾಧ್ಯಮದ ಕುರಿತಾದ ಲೇಖನಗಳನ್ನು ರಚಿಸಿ ಓದುಗರಿಗೆ ಕೊಡುಗೆಯಾಗಿ ನೀಡಿರುವುದು ಅವರ ಸಾಹಿತ್ಯ ಕೃಷಿಯ ಕನ್ನಡಿ ನಮ್ಮ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ವೀರಣ್ಣ ಮಂಠಾಳಕರ್ ಅವರು … Read more

ಮೈತ್ರಿ ಪ್ರಕಾಶನದ ವತಿಯಿಂದ ಕಥಾಸ್ಫರ್ಧೆಗಾಗಿ ಕತೆಗಳ ಆಹ್ವಾನ

ಮೈತ್ರಿ ಪ್ರಕಾಶನದ ವತಿಯಿಂದ ಕಥಾಸ್ಫರ್ಧೆಗಾಗಿ ಕತೆಗಳ ಆಹ್ವಾನಿಸುತಿದ್ದೇವೆ..ಕತೆಗಳು ಸ್ವಂತದ್ದಾಗಿರಬೇಕು ಅನುವಾದ, ಆಧಾರದ ಕತೆಗಳು ಬೇಡ.ಮೂರು ಬಹುಮಾನಗಳು ಮೊದಲ ಬಹುಮಾನ ರೂಗಳಲ್ಲಿ 5000, ಎರಡನೇಯ ಬಹುಮಾನ 3000 ಹಾಗೂ ಕೊನೆಯದು 2000. ನಿಯಮಾವಳಿಗಳು:ಒಬ್ಬರು ಒಂದು ಕತೆ ಮಾತ್ರ ಕಳಿಸಬೇಕು, ಕತೆಯ ಪದಮಿತಿ 1500 .ಕತೆಗಳನ್ನು ನುಡಿ/ಯುನಿಕೋಡಿನಲ್ಲಿ ಟಂಕಿಸಿ ಕೊನೆಗೆ ನೀಡಿದ ಮೇಲ್ ಐಡಿಗೆ ಕಳಿಸಬೇಕು.ಎಲ್ಲ ಅಂದರೆ ಹಿರಿಯ ಹಾಗೂ ಹೊಸ ಲೇಖಕ/ಲೇಖಕಿಯರಿಗೆ ಈ ಸ್ಫರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ಆದಷ್ಟು ಹೊಸ ಕತೆಗಳ ಕಳಿಸಿ.. ಈಗಾಗಲೇ ಪತ್ರಿಕೆ, ಪುಸ್ತಕದಲ್ಲಿ ಪ್ರಕಟವಾದ … Read more

ಕಾಫಿ ಆಯ್ತಾ ಎನ್ನುತ್ತಲೇ ಇಳಿಸಂಜೆಯಲಿ ಮರೆಯಾಗಿ ಹೋದ ಕಿರಣ: ನಂದಾದೀಪ, ಮಂಡ್ಯ

ಎದೆಯ ಗೂಡಿನಲಿ ಭಾವನೆಯ ದೀಪ ಹೊತ್ತಿಸಿ, ಒಲವಿನ ಕಿರಣವ ಎಲ್ಲೆಡೆ ಹರಡಿ ತಮ್ಮ ಸತ್ಕಾರ್ಯದ, ಸವಿ ಮಾತಿನಲೆ ಎಲ್ಲರ ಮನದಲಿ ತಮ್ಮದೇ ಆದ ಸ್ಥಾನ ಗಳಿಸಿಕೊಂಡ ಕವಿ, ಲೇಖಕ, ಚಿತ್ರಕಲಾವಿದ, ಕಾದಂಬರಿಕಾರರು ಕಿರಣ ದೇಸಾಯಿಯವರು.. ಇವರು 17-07-1981ರಲ್ಲಿ ಬೆಳಗಾವಿಯ ಕಿತ್ತೂರಿನಲ್ಲಿ ಜನಿಸಿದರಾದರು.. ಬೆಳೆದಿದ್ದು ಮಾತ್ರ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ.. ತಂದೆ ಭಾಳಸಾಹೇಬ ದೇಸಾಯಿ, ತಾಯಿ ಲಕ್ಷ್ಮಿಬಾಯಿ ದೇಸಾಯಿ.. ವಿದ್ಯಾ ಪ್ರಸಾರಕ ಸಮಿತಿಯ C S ಬೆಂಬಳಗಿ ಕಲಾ ಕಾಲೇಜು, ರಾಮದುರ್ಗದಲ್ಲಿ ಬಿ. ಎ, ಬಿ.ಎಡ್ ವ್ಯಾಸಂಗ ಮಾಡಿರುವ … Read more

ಚಡಗ ಕಾದಂಬರಿ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ

ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಗಳ ಆಶ್ರಯದಲ್ಲಿ, ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ದಿ. ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ಕೊಡುವ ಹನ್ನೊಂದನೆಯ ವರ್ಷದ ಕಾದಂಬರಿ ಪ್ರಶಸ್ತಿಗೆ 2020ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾದ ಕಾದಂಬರಿಗಳನ್ನು ಲೇಖಕ/ ಪ್ರಕಾಶಕರಿಂದ ಆಹ್ವಾನಿಸಿದೆ. ಆಸಕ್ತರು ತಮ್ಮ ಕೃತಿಯ ಮೂರು ಪ್ರತಿಗಳನ್ನು ಸ್ಪರ್ಧೆಯ ಸಂಚಾಲಕರಾದ ಪ್ರೊ. ಉಪೇಂದ್ರ ಸೋಮಯಾಜಿ, “ಶ್ರೀ” ಚಿತ್ರಪಾಡಿ, ಅಂಚೆ: ಸಾಲಿಗ್ರಾಮ, ಉಡುಪಿ ಜಿಲ್ಲೆ – 575225 (9740842722) ಇವರಿಗೆ ಸೆಪ್ಟೆಂಬರ್ 30, 2021 ರ ಒಳಗೆ … Read more

‘ವಾಗರ್ಥಗಳ ರಥಕ್ಕೆ ಭಾವದಗ್ನಿಯ ಪಥ…..’: ಡಾ. ಹೆಚ್ ಎನ್ ಮಂಜುರಾಜ್

ಒಂದು ಹಂತ ಕಳೆದ ಮೇಲೆ ಎಲ್ಲವೂ ಎಲ್ಲಕೂ ಅರ್ಥ ಬರುತ್ತದೆ ಅಥವಾ ಅದುವರೆಗೆ ನಾವು ಕೊಟ್ಟು ಕೊಂಡಿದ್ದ ಅರ್ಥ ಹೋಗುತ್ತದೆ. ಮೂಲತಃ ಅರ್ಥ ಎಂಬುದೇ ಸಾಪೇಕ್ಷವಾದುದು; ನಿರಪೇಕ್ಷವಲ್ಲ! ಇದುವರೆಗಿನ ಭಾಷಾವಿಜ್ಞಾನದ ಅಧ್ಯಯನವು ಅರ್ಥವನ್ನು ಪದಗಳಲ್ಲಿ ಅಥವಾ ವಾಕ್ಯಗಳಲ್ಲಿ ಹುಡುಕುತ್ತಾ ಬಸವಳಿದಿದೆ. ಮಾತಿನಾಚೆಗೂ ಇರುವ ಅರ್ಥಸಾಧ್ಯತೆಗಳನ್ನು ಅರಿಯುವುದಾದರೂ ಹೇಗೆ? ಆಗ ಮನೋವಿಜ್ಞಾನ ಮತ್ತು ತತ್ತ್ವಜ್ಞಾನಗಳು ನಮ್ಮ ನೆರವಿಗೆ ಬರಬಹುದಾಗಿದೆ.‘ವಾಗರ್ಥವಿವ ಸಂಪೃಕ್ತೌ ವಾಗರ್ಥಃ ಪ್ರತಿಪತ್ತಯೇ, ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ’ ಎಂದು ಮಹಾಕವಿ ಕಾಳಿದಾಸನು ತನ್ನ ರಘುವಂಶ ಮಹಾಕಾವ್ಯದ … Read more

ನಿಲುವಂಗಿಯ ಕನಸು (ಅಧ್ಯಾಯ ೪-೫): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೪: ನನಗೊಂದು ನೈಂಟಿ ಕೊಡಿಸಿ! ಸೀತೆ ಯಾವ ವಿಚಾರದಲ್ಲೂ ಅತಿಯಾಸೆ ಉಳ್ಳವಳಲ್ಲ. ಬಟ್ಟೆ ಬರೆಯಲ್ಲೂ ಅಷ್ಟೇ. ಅವಳ ಬಳಿ ಇರುವವೇ ಮೂರು ವಾಯಿಲ್ ಸೀರೆ! ಎಲ್ಲಾದರೂ ಹೊರಗೆ ‘ಹೋಗಿ ಬರಲು’ ಹೊರಟಾಗ ಮಾತ್ರ ಅವುಗಳಲ್ಲೊಂದು ಟ್ರಂಕಿನಿಂದ ಹೊರಬರುತ್ತದೆ. ಉಪಯೋಗ ಮುಗಿದ ಕೂಡಲೇ ಒಗೆದು ಮಡಚಿ ಟ್ರಂಕಿನಲ್ಲಿಟ್ಟುಬಿಡುತ್ತಾಳೆ. ಇನ್ನೆರಡು ಸವೆದುಹೋದ ಹಳೆಯ ಸೀರೆ ತೋಟ ಗದ್ದೆಯ ಕೆಲಸದ ವೇಳೆ ಉಡಲು. ಇನ್ನು ಟ್ರಂಕಿನ ತಳ ಸೇರಿ ಕುಳಿತಿರುವ ರೇಷ್ಮೆ ಸೀರೆ! ತನ್ನ ಮದುವೆಯ ಧಾರೆಯ ವೇಳೆ ಧರಿಸಿದ್ದ … Read more

“ತುದಿಯಿರದ ಹಾದಿ – ಅಂಬೇಡ್ಕರ್ ರನ್ನು ಧೇನಿಸುವ ದಲಿತ ಲೋಕದ ಜೀವನ ವಿಧಾನವನ್ನು ಕಟ್ಟಿಕೊಡುವ ಒಂದು ಮಹತ್ವದ ಕೃತಿ”: ಎಂ.ಜವರಾಜ್

ಮೋದೂರು ತೇಜ ಅವರ ‘ತುದಿಯಿರದ ಹಾದಿ’ ಕಾದಂಬರಿಯ ಪುಟ ತಿರುವುತ್ತಾ ಹೋದಂತೆಲ್ಲ ರಾವಬಹದ್ದೂರ್ ಅವರ ‘ಗ್ರಾಮಾಯಣ’ ಎಂಬ ದಟ್ಟವಾದ ಜೀವನಾನುಭವ ನೀಡುವ ಗ್ರಾಮೀಣ ವಸ್ತುವಿಷಯದ ಕಾದಂಬರಿಯ ಪುಟಗಳತ್ತ ಮನಸ್ಸು ಹರಿಯಿತು. ರಾವಬಹದ್ದೂರ್ ಅವರು ತಮ್ಮ ‘ಗ್ರಾಮಾಯಣ’ ಕಾದಂಬರಿಯನ್ನು ಮೂರು ಭಾಗಗಳಾಗಿ ವಿಭಾಗಿಸಿ ಅಲ್ಲಿನ ಕಥೆಯನ್ನು ವಿಸ್ತರಣೆ ಮಾಡುತ್ತಾ ಕಥೆಗೆ ಒಂದು ಚೌಕಟ್ಟು ನಿರ್ಮಿಸಿದಂತೆ ಅಲ್ಲಿನ ಪಾತ್ರವರ್ಗವನ್ನೂ ಆ ಚೌಕಟ್ಟಿನೊಳಗೇ ರಂಗ ವೇದಿಕೆಯಲ್ಲಿ ಕಾಣ ಬರುವಂತೆ ಕಡೆದು ನಿಲ್ಲಿಸುತ್ತಾರೆ. ಆ ಪಾತ್ರಗಳು ಪಾದಳ್ಳಿಯಲ್ಲೇ ಹುಟ್ಟಿ ಪಾದಳ್ಳಿಯಲ್ಲೇ ಬೆಳೆದು ಆ … Read more

“ಓ ಇವ್ಳೆ”: ಮಧುಕರ್ ಬಳ್ಕೂರ್

ಓ ಇವ್ಳೆ , ಬಟ್ಲ್ ಕಣ್ಣೊಳೆ, ಕಣ್ಣಾಗ್ ಕಣ್ಣಿಟ್ಟ್ ಪ್ರೀತಿ ಹೊಳ್ಯಾಗ್ ಈಜೂಕ್ ಕಲ್ಸ್ ದೊಳೆ, ಸಾಕ್ ಮಾಡ್ ಮಾರಾಯ್ತಿ… ನನ್ ರಟ್ಟಿ ಸೋಲ್ತಾ ಇತ್… ಇನ್ ನನ್ ಕೈಯಾಗ್ ಆತಿಲಾ ಕಾಣ್, ಇದೊಂದ್ ಸಾತಿ ಪೂರ್ತಿ ಮುಳುಗಿ ಹೊತೆ ಅತ್ಲಾಗೆ… ಹೆಂಗೂ ನೀನ್ ನನ್ ಬದ್ಸ್ಕಂತೆ ಅಂದೇಳಿ ಗೊತಿತ್ ಹೆಣೆ.. ಎಷ್ಟಾರೂ ನೀನ್ನ್ ಕಣ್ಣಿಗ್ ನಾನ್ ಪಾಪದ್ ಗಂಡ್ ಅಲ್ದಾ…. ಓ ಹೆಣೆ, ಇದೆ ಆಸಾಡಿ ಮಳೆ ಬಪ್ಪೊತಿಗ್ ಅಲ್ದಾ.. ಕುಂದ್ರಾಪ ಶಾಸ್ತ್ರಿ ಸರ್ಕಲ್ ನಾಗ್ … Read more

ಪಂಜು ಕಾವ್ಯಧಾರೆ

ಮಳೆಯಾಗಿ ನೀ ಸುರಿದಂತೆಲ್ಲ ಏನು ಕೋಪವೋ ನಾನರಿಯೇಒಂದೇ ಸಮನೆ ಜಿಟಿಜಿಟಿಯೆಂದು ಹನಿಸುವ ನಿನ್ನ ಮೌನದ ಭಾಷೆಯುಮುನಿದಂತೆ ಭಾಸವಾಗಿ ಕನವರಿಸಿದೆ ಮುತ್ತಿಡಲು ಹರಸಾಹಸ ಪಟ್ಟಂತೆಹಗಲಿಗೊಂದು ಪರದೆ ಹರವಿದಂತೆ ಮುಸುಕಿನಲಿ ಗುದ್ದಾಟ ನಡೆಸುವಾಗೆಲ್ಲತುಂತುರು ಹನಿಯ ಮಂಪರು ಸಂಪಾಗಿ ಕೈಗೆ ಸಿಗದೆ ಕೊಸರಿ ಓಡುವೆಯೇಕೆ ಹೆದರಿನನ್ನ ಮುನಿಸಿಗೆ ಕಾರಣವೆಂಬಂತೆ ಬಿಂಬಿಸಿ ಹೊತ್ತಿಗೆ ಬಾರದವನ ಮುದ್ದಿಸಲೊಲ್ಲೆನುಪ್ರತಿಹನಿಯಲ್ಲೂ ಜಿನುಗುವ ಕಾರಂಜಿಗಳು ಮಳೆಗಾಳಿಗೆ ಸಿಲುಕಿ ನಲುಗಿದಷ್ಟು ಹಿತಜೀವಜಗತ್ತು ಚಿಗುರೊಡೆಯುವುದೀಗ ತೂತಿನ ಕೊಡೆಯೊಳಗೆ ಆಗಸದ ಚಿತ್ತಾರಕಾರ್ಮೋಡಗಳ ಹೊಯ್ದಾಟದಲಿ ಕಂಪನ ಗುಡುಗು ಮಿಂಚಿನಾರ್ಭಟದಲಿ ಸುಳಿವತಣ್ಣನೆಯ ಸುಳಿಗಾಳಿಯ ಪ್ರೇಮಾರಂಭ ಕೆಸರುಗದ್ದೆಯಲಿ … Read more