ಅಂಕಲ್ ಗಣಪತಿ ಇಡ್ತೀವಿ…….: ನಾಗಸಿಂಹ ಜಿ ರಾವ್

ಪ್ರತಿವರ್ಷ ಆಗಸ್ಟ್ ಸೆಪ್ಟೆಂಬರ್ ಬಂತು ಅಂದ್ರೆ ಕೆಲವು ಮಕ್ಕಳ ಗುಂಪು ಗಣಪತಿ ಇಡೋಕೆ ಪ್ಲಾನ್ ಮಾಡುತ್ತಾರೆ, ನಾವು ಅಷ್ಟೇ 1979 ರಲ್ಲಿ ಏಳನೇ ಕ್ಲಾಸ್ ನಲ್ಲಿ ಓದುತ್ತಿದ್ದಾಗ ನಾನು, ಅಶೋಕ, ಗಣೇಶ, ಮಿಲಟರಿ ಮಂಜ, ನನ್ನ ತಮ್ಮ ಪ್ರಸಾದಿ ಗಣಪತಿ ಇಡೋಕೆ ನಿರ್ಧಾರ ಮಾಡಿ ಬಿಟ್ಟೆವು. ಡಬ್ಬಗಳ ಮುಚ್ಚಳದ ಮೇಲೆ ಅಡ್ಡ ವಾಗಿ ಸಂದಿ ಮಾಡಿ ಹಣ ಸಂಗ್ರಹ ಮಾಡೋಕೆ ಶುರು, ಯಾವುದೇ ಪ್ಲಾನಿಂಗ್ ಇಲ್ಲ, ಎಷ್ಟು ಬಜೆಟ್ ಬೇಕು ಅನ್ನೋ ಅಂದಾಜಿಲ್ಲ, ಎದುರಾಗಬಹುದಾದ ಅಪಾಯಗಳ ಅರಿವಿಲ್ಲದೆ … Read more

ಪೋಸ್ಟ್ ಮ್ಯಾನ್ ಗಂಗಣ್ಣ (ಕೊನೆಯ ಭಾಗ)”: ಎಂ.ಜವರಾಜ್

-13- ಆ ಗುಡುಗು ಸಿಡಿಲು ಮಿಂಚು ಬೀಸುತ್ತಿದ್ದ ಗಾಳಿಯೊಳಗೆ ಉದರುತ್ತಿದ್ದ ಸೀಪರು ಸೀಪರು ಮಳೆಯ ಗವ್ಗತ್ತಲೊಳಗೆ ಮನೆ ಸೇರಿದಾಗ ಎಲ್ಲರೂ ನಿದ್ರೆಗೆ ಜಾರಿದ್ದರು. ಚಿಲಕ ಹಾಕದೆ ಟೇಬಲ್ ಒತ್ತರಿಸಿ ಹಾಗೇ ಮುಚ್ಚಿದ್ದ ಬಾಗಿಲು ತಳ್ಳಿ ಒಳ ಹೋಗಿ ಮೊಂಬತ್ತಿ ಹಚ್ಚಿದೆ. ಕರೆಂಟ್ ಬಂದಾಗ ಮೊಬೈಲ್ ಚಾರ್ಜ್ ಆಗಲೆಂದು ಪಿನ್ ಹಾಕಿ ಒದ್ದೆಯಾದ ಬಟ್ಟೆ ಬಿಚ್ಚಿ ಬದಲಿಸಿ ಕೈಕಾಲು ಮುಖ ತೊಳೆದು ಉಂಡು ಮಲಗಿದವನಿಗೆ ರಾತ್ರಿ ಪೂರಾ ಬಸ್ಟಾಪಿನಲ್ಲಿ ಷಣ್ಮುಖಸ್ವಾಮಿ ಗಂಗಣ್ಣನ ಬಗ್ಗೆ ಆಡಿದ ಮಾತಿನ ಗುಂಗು. ಆ … Read more

“ನಾರಾಯಣ” ಕೇವಲ “ಲಕ್ಷ್ಮಿ” ಜಪ ಮಾಡುತ್ತಾ ಕುಳಿತರೆ!!!!: ಪಿ. ಎಸ್. ಅಮರದೀಪ್

ಏಳು ವರ್ಷವಾಯ್ತು. ಅದೊಂದು ದಿನ ಕಛೇರಿ ಕೆಲಸದ ಮೇಲೆ ಬಳ್ಳಾರಿಗೆ ಹೋಗಿದ್ದೆ. ಅದರ ಹಿಂದಿನ ದಿನ ಸಮಸ್ಯೆಯಾಗಿ ಕೊಪ್ಪಳದ ವೈದ್ಯರ ಬಳಿ ಹೋಗಿದ್ದೆ. “ಯಾವುದಕ್ಕೂ ಕಾರ್ಡಿಯೋ ಎಕೊ ಟೆಸ್ಟ್ ಮಾಡಿಸಿ” ಅಂದಿದ್ದರು. ಅದಕ್ಕೆಂದೇ ವೈದ್ಯರೊಬ್ಬರಲ್ಲಿ ಹೋಗಿದ್ದೆ. ಕಾರಣ ಹೇಳಿದೆ. ಅಲ್ಲಿಗೆ ತಜ್ಞ ವೈದ್ಯರೊಬ್ಬರು ಬಂದು ಬಿಪಿ ಚೆಕ್ ಮಾಡಿದರು. “ಏನ್ರಿ ನೀವು, ಇಷ್ಟು ನೆಗ್ಲೆಕ್ಟ್ ಮಾಡಿದಿರಿ, ನೋಡಿ ಬಿಪಿ ಹೈ ಆಗಿ ನಿಮಗೆ ಮೇಜರ್ ಹಾರ್ಟ್ ಆಟ್ಯಾಕ್ ಆಗಿದೆ “ ಅಂದುಬಿಟ್ಟ… ರೀ ಸ್ವಾಮಿ ಬಿಪಿ ತೀರ … Read more

ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 12)”: ಎಂ.ಜವರಾಜ್

-೧೨-ಕರೋನಾ ನಂತರ ಆಫೀಸಲ್ಲಿ ಕೆಲಸವೂ ಹೆಚ್ಚಾಗಿತ್ತು. ಸರ್ಕಾರದ ನಿಯಮಾವಳಿ ಬದಲಾಗಿತ್ತು. ಕರೋನಾ ಭೀತಿಯಲ್ಲೆ ಮನೆಯಲ್ಲಿ ಅದು ಇದು ಕೆಲಸ ಮುಗಿಸಿ ಬೆಳಗ್ಗೆ ಆರೇಳು ಗಂಟೆಗೆ ಮನೆ ಬಿಟ್ಟರೆ ಆಫೀಸ್ ಕೆಲಸ ಮುಗಿಸಿ ಎರಡೆರಡು ಬಸ್ ಹತ್ತಿ ಮನೆ ಸೇರುತ್ತಿದ್ದುದು ರಾತ್ರಿ ಒಂಭತ್ತು ಹತ್ತು ಗಂಟೆಯಾಗುತ್ತಿತ್ತು. ಈ ಒತ್ತಡದಲ್ಲಿ ಗಂಗಣ್ಣ ಸಿಕ್ಕಿದ್ದು ಮರೆತು ಹೋಗಿತ್ತು. ಆದರೆ ಮೊಬೈಲ್ ಓಪನ್ ಮಾಡಿ ಅದು ಇದು ನೋಡುವಾಗ ಗಂಗಣ್ಣನ ಫೋಟೋ ಕಣ್ಣಿಗೆ ಬಿದ್ದು ನೆನಪಾಗ್ತಿತ್ತು. ಅದು ಬಿಟ್ಟರೆ ಪೋಸ್ಟ್ ಆಫೀಸಲ್ಲಿ ಪೋಸ್ಟ್ … Read more

ಚಿಗುರು ಫಾರ್ಮ್ ನಲ್ಲಿ ಶ್ರಾವಣ ಉತ್ಸವ

ರವಿ ಅರೋಮಾ ಎಂಟರ್ಪ್ರೈಸಸ್, ಬೆಂಗಳೂರು ನೋಂದಣಿ ಶುಲ್ಕ ಪ್ರತಿಯೊಬ್ಬರಿಗೆ ರೂ 1000/- ಸಮಯ : 31-08-2024, ಶನಿವಾರ ಸ್ಥಳ : ಚಿಗುರು ಫಾರ್ಮ್, ತೇರುಬೀದಿ, ಮರಳವಾಡಿ, ಹಾರೋಹಳ್ಳಿ ,ರಾಮನಗರ ಜಿಲ್ಲೆ ಸಮಯ ಸಾರಿಣಿ ಬೆಳಿಗ್ಗೆ 09.30 AMನೋಂದಣಿ ಮತ್ತು ಉಪಹಾರಸ್ವಾಗತ! ನಾವು ದಿನದ ಈವೆಂಟ್ಗಳನ್ನು ಪ್ರಾರಂಭಿಸುವ ಮೊದಲು ನೋಂದಣಿ ಮತ್ತು ಲಘು ಉಪಹಾರ. 10.00 AMಪರಿಚಯ ಶ್ರಾವಣ ಉತ್ಸವದ ಉದ್ಘಾಟನೆ. 10.30 AMಪಂಚವಟಿ ವನ ಪ್ರಾತ್ಯಕ್ಷಿಕೆ ಡಾ ಜಗನ್ನಾಥ ರಾವ್ , ಪ್ರೊಫೆಸರ್, ಟಿಡಿಯು, ಬೆಂಗಳೂರು ಇವರಿಂದ … Read more

ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 11)”: ಎಂ.ಜವರಾಜ್

-೧೧-ಮಾರನೆ ದಿನ ಹತ್ತನ್ನೊಂದು ಗಂಟೆಗೆಲ್ಲ ಬಂದ ಗಂಗಣ್ಣ ಶಿಶುವಾರದ ಜಗುಲಿಲಿ ಧೂಳೊಡೆದು ಕುಂತ. ಕಾಲೇಜಿಗೆ ಚಕ್ಕರ್ ಹೊಡೆದು ಕ್ಯಾಸ್ಟ್ ಸರ್ಟಿಫಿಕೇಟ್ ಮಾಡಿಸಲು ರೆಡಿಯಾಗಲು ತೆಂಗಿನ ಮರಕ್ಕೆ ಒರಗಿಸಿ ನಿಲ್ಲಿಸಿದ್ದ ಸೈಕಲ್ ಒರೆಸುತ್ತಿದ್ದೆ. ಇದೇನು ಗಂಗಣ್ಣ ಇವತ್ತು ಇಷ್ಟು ಬೇಗ ಬಂದಿದಾನೆ ಅಂತ ಅಂದುಕೊಳ್ಳುವುದಕ್ಕು ಅವನು “ಯೋ ಬಾರಪ್ಪ ಇಲ್ಲಿ” ಅನ್ನುವುದಕ್ಕು ಸರಿ ಹೋಯ್ತು. ನಾನು “ಏನ್ ಗಂಗಣ್ಣ ಇವತ್ತು ಇಷ್ಟು ಜಲ್ದಿ ಬಂದಿದಿಯಾ” ಅಂದೆ. ಅಷ್ಟೊತ್ತಿಗೆ ಶಿಶುವಾರದ ಮೇಡಂ ಹೊರ ಬಂದು “ಗಂಗಣ್ಣ ಗುಗ್ರಿ ಕಾಳು ತಿಂತಿಯ.. … Read more

ಶಾಲೆಗಳಲ್ಲಿ ಜಾರಿಯಾಗದ ಮಕ್ಕಳ ರಕ್ಷಣಾ ನೀತಿ: ನಾಗಸಿಂಹ ಜಿ ರಾವ್

ಮಕ್ಕಳನ್ನು ಶಾಲೆಗೆ ಕರೆತರುವ ವಾಹನಗಳ ಸುಮಾರು ೨೨ ಚಾಲಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ, ಈ ಚಾಲಕರು ಕರ್ತವ್ಯ ನಿರ್ವಹಣೆ ಮಾಡುವಾಗ ಮದ್ಯಪಾನ ಮಾಡಿದ್ದರು ಎನ್ನುವ ಆರೋಪ. ಸುಮಾರು ಮೂರು ತಿಂಗಳ ಹಿಂದೆ ಬೆಂಗಳೂರಿನ ಶಾಲೆಗಳಲ್ಲಿ ಬಾಂಬ್ ಇದೆ ಎನ್ನುವ ಹುಸಿ ಇ-ಮೇಲ್ ಶಾಲೆಗಳಿಗೆ ಬಂದಾಗ ಶಾಲೆಯ ಆಡಳಿತ ಮಂಡಳಿ ಪೋಷಕರಿಗೆ ಕರೆ ಮಾಡಿ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಎಂದು ತಿಳಿಸಿದಿದ್ದರಿಂದ ಗಾಬರಿಯಾದ ಪೋಷಕರು ಶಾಲೆಗಳತ್ತ ಓಡಿದ್ದರು. ಪ್ರತಿಷ್ಠಿತ ಶಾಲೆಗಳ ವಿದ್ಯಾರ್ಥಿನಿಯರು ರಸ್ತೆಯಲ್ಲಿ ಹೊಡೆದಾಡಿದರು. ಈ ಹೊಡೆದಾಟದ … Read more

ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 10)”: ಎಂ.ಜವರಾಜ್

-೧೦-ನಮ್ಮ ಮುಳ್ಳೂರು ಚಿಕ್ಕಿಯ ತಂಗಿ ಮಗಳು ಮೂರು ದಿನದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಇವತ್ತೊ ನಾಳೆಯೊ ನಾಳಿದ್ದೊ ಆಗುವ ಹೆರಿಗೆ ನೋವು. ಡಾಕ್ಟರು ಯಾವುದನ್ನು ಸರಿಯಾಗಿ ಹೇಳದೆ ನಾಳೆ ಬನ್ನಿ ರಾತ್ರಿ ಬನ್ನಿ ಬೆಳಗ್ಗೆ ಬನ್ನಿ ಇದು ಹೆರಿಗೆ ನೋವಲ್ಲ ಅಂತ ಏನೇನೊ ಸಮಜಾಯಿಸಿ ನೀಡುತ್ತಿದ್ದರು. ಮುಳ್ಳೂರು ಚಿಕ್ಕಿಗೆ ತಂಗಿ ಮಗಳ ಕಷ್ಟ ನೋಡಲಾರದೆ ಬಿಕ್ಕಿ ಬಿಕ್ಕಿ ಅಳುತ್ತ ನನ್ನನ್ನು ಕರೆದು ಬೆಂಗಳೂರಿನ ತಂಗಿಗು ತಂಗಿ ಗಂಡನಿಗೂ ಅವರ ಮೂವರು ಗಂಡು ಮಕ್ಳಳಿಗೂ, ಮುಳ್ಳೂರಿನ ತನ್ನವ್ವಳಿಗೂ “ಎರ‌್ಗ … Read more

ಅಣ್ಣ ಮತ್ತು ಪರಿವರ್ತನೆ: ಬಿ.ಟಿ.ನಾಯಕ

ಅದೊಂದು ದಿನ ‘ಅಣ್ಣ’ರಂಗಣ್ಣನ ದರಬಾರು ನಡೆದಿತ್ತು. ಅಲ್ಲಿ ಸುಮಾರು ಹತ್ತರಿಂದ ಹದಿನೈದು ಆತನ ಚೇಲಾಗಳಿದ್ದರು. ಯಾವುದೋ ಗಹನವಾದ ವಿಷಯದ ಬಗ್ಗೆ ಚರ್ಚೆ ನಡೆದಿತ್ತು. ಅವರ ಸಂಭಾಷಣೆ ಹೀಗಿತ್ತು;‘ಅಣ್ಣಾ …ನೀನು ಏನೋ ಹೇಳು, ಆ ಧೀರನ ಪಾಳ್ಯದ ಗೋವಿಂದಣ್ಣ ನಮ್ಮ ಏರಿಯಾಕ್ಕೆ ಬಂದು ಗಲಾಟೆ ಮಾಡಿ, ಸೀನನನ್ನ ಎತ್ತಾಕ್ಕೊಂಡು ಹೋಗಬಾರದಿತ್ತು. ಆತ ಹಾಗೆ ಮಾಡಿ ಅದರ ಕಳಂಕ ನಮ್ಮ ಮೇಲೆ ಹೊರಿಸುವುದಲ್ಲದೆ, ಲಾಭ ಕೂಡಾ ಮಾಡಿ ಕೊಂಡ’ ಎಂದ ರೇವ್ಯ.‘ಏಯ್ ಸುಮ್ಕಿರಲೇ, ಅವನು ಹಾಗ ಮಾಡಿದಾ ಅಂತ ಏನೋ … Read more

ಸಂಚಿ ಹೊನ್ನಮ್ಮನ ಹದಿಬದೆಯ ಧರ್ಮ – ಒಂದು ವಿವೇಚನೆ: ಸಂತೋಷ್ ಟಿ

ಮೈಸೂರು ರಾಜ ಸಂಸ್ಥಾನದಲ್ಲಿ ಎಲೆ ಅಡಿಕೆ ನೀಡುವ ಸಂಚಿಯ ಕಾಯಕದ ಸಖಿಯಾಗಿ ವೃತ್ತಿಧರ್ಮದಲ್ಲಿದ್ದ ಹೊನ್ನಮ್ಮನ ಕೃತಿ ‘ಹದಿಬದೆಯ ಧರ್ಮ’ವಾಗಿದೆ. ಚಿಕ್ಕದೇವರಾಜ ಒಡೆಯರ್ ಕಾಲದ ಸರಿಸುಮಾರು ಕ್ರಿ.ಶ. ೧೬೭೨-೧೭೦೪ ನೇ ಶತಮಾನದ ಕಾಲಘಟ್ಟದಲ್ಲಿ ಸರಸ ಸಾಹಿತ್ಯದ ವರದೇವತೆ ಎಂಬ ಅಗ್ಗಳಿಕೆಗೆ ಪಾತ್ರಳಾದವಳು ಹೊನ್ನಮ್ಮ. ದೇವರಾಜಮ್ಮಣ್ಣಿಯ ರಾಣಿ ವಾಸದ ಸಖಿಯಾಗಿ ಎಳಂದೂರಿನಿಂದ ಬಂದು ಸೇರಿದ್ದ ಹೊನ್ನಮ್ಮನು, ಅರಮನೆಯ ಪರಿವಾರಕ್ಕೆ ತಾಂಬೂಲ ಅಥವಾ ಎಲೆಅಡಿಕೆ ನೀಡುವ ಕಾಯಕ ಮಾಡುತ್ತಿದ್ದಳು. ತನ್ನ ಬುದ್ಧಿ ಶಕ್ತಿಯಿಂದ ಅರಮನೆಯ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಾಹಿತ್ಯ ಪರಿಸರದಿಂದ … Read more

ಮಕ್ಕಳ ಹಕ್ಕುಗಳು ಮತ್ತು ಧರ್ಮ: ನಾಗಸಿಂಹ ಜಿ ರಾವ್

ಈ ದಿನಗಳಲ್ಲಿ ನನ್ನನ್ನು ಹಲವಾರು ಜನರು ಕೇಳುತ್ತಿರುವುದು ಒಂದೇ ಪ್ರಶ್ನೆ , ಈಗ ರಾಜ್ಯದಲ್ಲಿ ಆಗುತ್ತಿರುವ ಗಲಭೆಯ ಹಿನ್ನಲೆಯಲ್ಲಿ ಮಕ್ಕಳ ಹಕ್ಕುಗಳು ಏನು ಹೇಳುತ್ತದೆ ? ಧರ್ಮದ ಬಗ್ಗೆ ಮಕ್ಕಳ ಹಕ್ಕುಗಳು ಇವೆಯೇ ? ವಿಶ್ವದ ಪ್ರತಿಯೊಂದು ಧರ್ಮಾದಲ್ಲೂ ಮಕ್ಕಳನ್ನು ಹಿರಿಯರ ಅಸ್ಥಿ ಎಂದೇ ಪರಿಗಣಿಸಲ್ಪಟ್ಟಿರುವುದು ಕಂಡು ಬರುತ್ತದೆ , ಪುರಾಣ ಪುಣ್ಯ ಕಥೆಗಳನ್ನು ವಿಮರ್ಶಿಸಿದರೆ ಕಂಡು ಬರುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯೇ ! ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಮಕ್ಕಳಿಗೆ ಜೀವಿಸುವ ಹಕ್ಕುಗಳು … Read more

ಕತೆ ಮತ್ತು ಆತ್ಮಕತೆಗಳ ನಡುವಿನ ನಯವಾದ ನೇಯ್ಗೆ: ಡಾ. ಹೆಚ್ ಎನ್ ಮಂಜುರಾಜ್

ಕೃತಿ: ಕಿಟಕಿಗಳಾಚೆ (ಪ್ರಬಂಧ ಸಂಕಲನ)ಲೇಖಕರು: ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟುಪ್ರಕಾಶಕರು: ಸಮನ್ವಿತ, ಬನ್ನೇರುಘಟ್ಟ, ಬೆಂಗಳೂರುಮೊದಲ ಮುದ್ರಣ: ೨೦೨೩, ಕೃತಿ ಬಿಡುಗಡೆ: ೧೩-೦೭-೨೦೨೪ಪುಟಗಳು: ೧೩೨+೪, ಬೆಲೆ: ₹ ೧೫೦ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಲೋಕಾರ್ಪಣೆಗೊಂಡ ‘ಕಿಟಕಿಗಳಾಚೆ’ ಕೃತಿಯಲ್ಲಿ ಒಟ್ಟು ಇಪ್ಪತ್ತೆಂಟು ಪ್ರಬಂಧಗಳಿವೆ. ಈಗಾಗಲೇ ಮೂರು ಕವನ ಸಂಕಲನಗಳನ್ನು ಪ್ರಕಟಿಸಿರುವ ಕವೀಂದ್ರ ರವೀಂದ್ರರು ತಮ್ಮ ಕವನಗೀತಗಳಿಂದಾಗಿ ತಮ್ಮದೇ ಯುಟ್ಯೂಬ್ ಚಾನೆಲ್ ಮೂಲಕ ನಾಡಿನ ಅಸಂಖ್ಯಾತ ಸಹೃದಯರನ್ನು ಮುಟ್ಟಿದ್ದಾರೆ. ಹೆಸರಾಂತ ಗಾಯಕರಾದ ಶ್ರೀ ರಾಘವೇಂದ್ರ ಬೀಜಾಡಿ, ಶ್ರೀ ಗಣೇಶ ದೇಸಾಯಿಯವರ ಸಂಗೀತ ತಂಡವು … Read more

ಮಾತನಾಡುವ ಮಂಚ: ಡಾ. ಮಲರ್ ವಿಳಿ ಕೆ

ತಮಿಳು ಮೂಲ : ಪುದುಮೈಪಿತ್ತನ್ರಚಿಸಿದ ಕಾಲ: ೧೯೩೪ಅನುವಾದ : ಡಾ. ಮಲರ್ ವಿಳಿ ಕೆ, ಕನ್ನಡ ಪ್ರಾಧ್ಯಾಪಕರು,, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ. ಸರ್ಕಾರಿ ಆಸ್ಪತ್ರೆಯಲ್ಲಿ ಪೂರ್ವದ ಕಡೆಯ ವಾರ್ಡ್ ನ ಹಾಸಿಗೆಯಲ್ಲಿ, ನನ್ನ ರೋಗಕ್ಕೆ ಏನೋ ಒಂದು ಉದ್ದನೆಯ ಲ್ಯಾಟಿನ್ ಹೆಸರನ್ನು ಹೇಳಿ, ನನ್ನನ್ನು ಕರೆದುಕೊಂಡು ಹೋಗಿ ಮಲಗಿಸಿದರು. ನನ್ನ ಇಕ್ಕೆಲಗಳಲ್ಲಿಯೂ ನನ್ನಂತೆ ಹಲವು ರೋಗಿಗಳು ಗೋಳಿಡುತ್ತಾ, ಹೂಂಗುಡುತ್ತಾ ನರಕದ ಉದಾಹರಣೆಯಂತೆ.ಒಂದೊಂದು ಮಂಚದ ಪಕ್ಕದಲ್ಲಿಯೂ ಔಷಧಿಯನ್ನು ಗಂಜಿಯನ್ನು ಇಡಲು ಒಂದು ಚಿಕ್ಕ ಆಲಮಾರು, ಮಂಚದ ಕಂಬಿಯಲ್ಲಿ ಡಾಕ್ಟರ ಗೆಲುವು … Read more

ಸಮಾಜಮುಖಿ ಯುವ ಲೇಖನ ಸ್ಪರ್ಧೆ-2024

ಕನ್ನಡದ ಹೊಸ ಪೀಳಿಗೆಯ ಆಲೋಚನೆ ಮತ್ತು ಬರವಣಿಗೆಯನ್ನು ಉದ್ದೀಪಿಸುವ ಉದ್ದೇಶದಿಂದ ಬೆಂಗಳೂರಿನ ಸಮಾಜಮುಖಿ ಪ್ರಕಾಶನ 16 ರಿಂದ 32 ವಯಸ್ಸಿನ ಯುವಕ-ಯುವತಿಯರಿಗಾಗಿ ‘ಯುವ ಲೇಖನ ಸ್ಪರ್ಧೆ’ ಏರ್ಪಡಿಸಿದೆ. ಆಯ್ಕೆಯಾದ ಐದು ಲೇಖನಗಳಿಗೆ ತಲಾ ರೂ.5,000 ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.ಲೇಖನದ ವಿಷಯ: ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗಬೇಕು ಎಂದು ಹೇಳುವಲ್ಲಿನ ವೈಚಾರಿಕ ಮತ್ತು ಜಾಗತಿಕ ತಳಹದಿಯೇನು..? ಲೇಖನ 1,600 ರಿಂದ 2,000 ಪದಗಳ ಮಿತಿಯಲ್ಲಿರಬೇಕು. ಲೇಖನದ ಜೊತೆಗೆ ಹುಟ್ಟಿದ ದಿನಾಂಕದ ಯಾವುದಾದರೂ ದಾಖಲೆಯ ಪ್ರತಿ, ಪೂರ್ಣ … Read more

ಓ ನನ್ನ ಚೇತನ ಆಗು ಅನಿಕೇತನ…:ಅಶ್ಫಾಕ್ ಪೀರಜಾದೆ

ಕೆಲ ವರ್ಷಗಳ ಹಿಂದಿನ ಮಾತು, ಹೆಸರಾಂತ ಲೇಖಕ ಅಬ್ಬಾಸ್ ಮೇಲಿನಮನಿಯವರು “ಲೋಕ-ದರ್ಶನ” ಸಾಪ್ತಾಹಿಕದಲ್ಲಿ ಬೆಳಕು ಕಂಡ ನನ್ನ ಕಥೆ “ಜನ್ನತ್” ಬಗ್ಗೆ ಪ್ರತಿಕ್ರಿಯಿಸಿ ಬೆನ್ನ ತಟ್ಟಿದ್ದರು. ಹಾಗೇ ನಾನು ಸಹ “ಪ್ರಜಾ-ವಾಣಿ”ಯಲ್ಲಿ ಪ್ರಕಟವಾದ ಅವರ ಕಥೆ “ಅಮಿನಾಳ ಹಝ್ ಯಾತ್ರೆ”ಯ ಬಗ್ಗೆ ಮಾತಾಡಿದ್ದೆ. ತನ್ನ ಗಂಡನ ಹಝ್ ಯಾತ್ರೆಯ ಕನಸು ಪರೋಪಕಾರದಲ್ಲಿ ಸಾಕಾರಗೊಳಿಸುವ ಒಂದು ಶೋಷಿತ ಹೆಣ್ಣಿನ ಕರಳು ಮಿಡಿಯುವ ಕಥೆ ತುಂಬಾ ಹೈದಯ ಸ್ರ‍್ಶಿಯಾಗಿ ಮೂಡಿ ಬಂದಿತ್ತು. ಆ ಕಥೆಯ ಬಗ್ಗೆ ಬರೆಯುವುದು ಈ ಲೇಖನದ … Read more

“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 9)”: ಎಂ.ಜವರಾಜ್

-೯-ದಿನಗಳೂ ಉರುಳುತ್ತ ವಾರಗಳೂ ಉರುಳುತ್ತ ತಿಂಗಳುಗಳೂ ಉರುಳುತ್ತ ಹಂಗೆ ವರ್ಷಗಳೂ ಉರುಳಿದವು. ಈಗ ಊರು ಬದಲಾಗಿತ್ತು. ಹಿಂಗೆ ಬದಲಾಗ್ತ ಇದ್ದದ್ದ ನಾನೂ ನೋಡ್ತಾ ಬೆಳಿತಾ ಎಸೆಸೆಲ್ಸಿಯಲ್ಲೇ ಐದಾರು ವರ್ಷ ಏಗಿ ಕೊನೆಗೂ ಅದಾಗಿ ಪಿಯುಸಿಗೂ ಸೇರಿದ್ದಾಯ್ತು. ನಾನೋ ಕಾಲೇಜು ಹ್ಯಾಂಗೋವರಲ್ಲಿ ಎಲ್ಲರು ನೋಡಲೆಂದು ಇರೊ ಹಳೇ ಬಟ್ಟೆನೆ ಒಗೆದು ಐರನ್ ಉಜ್ಜಿ ಮನೆಯೊಳಗಿನ ತಂತಿ ಮೇಲೆ ಬಟ್ಟೆ ಅಂಗಡಿಯಲ್ಲಿ ಜೋಡಿಸಿಟ್ಟಂಗೆ ಮಡಚಿ ಇಟ್ಟುಕೊಂಡು ದಿನಾ ಒಂದೊಂದು ಸೆಲೆಕ್ಟ್ ಮಾಡಿಟ್ಟು ಇನ್ಸರ್ಟ್ ಮಾಡಿಕೊಂಡು ಪೌಡರ್ ಸ್ನೊ ಹಾಕೊಂಡು ಸ್ಟೈಲಾಗಿ … Read more

ʼ ರೂಪಾಂತರ ʼ- ಹೊಸತರ ಹಂಬಲ: ಎಂ ನಾಗರಾಜ ಶೆಟ್ಟಿ

ಸಿನಿಮಾ ಮುಗಿದು ತೆರೆಯ ಮೇಲೆ ಕ್ರೆಡಿಟ್ಸ್‌ ಬರತೊಡಗುತ್ತದೆ. ಆದರೆ ಪ್ರೇಕ್ಷಕರು ಸೀಟು ಬಿಟ್ಟು ಕದಲುವುದಿಲ್ಲ. ಮಾತಿಲ್ಲದೆ, ಯಾವುದೋ ಗುಂಗಿಗೊಳಗಾದವರಂತೆ ಕೂತಿದ್ದು, ನಿಧಾನವಾಗಿ ಏಳುತ್ತಾರೆ. ಇದು ʼ ರೂಪಾಂತರ ʼ ಸಿನಿಮಾದ ಕುರಿತು ಬಹಳಷ್ಟನ್ನು ಹೇಳುತ್ತದೆ. ಒಂದು ರೀತಿಯಲ್ಲಿ ಪ್ರೇಕ್ಷಕನ್ನು ಆವರಿಸಿಕೊಂಡರೆ, ಇನ್ನೊಂದು ತರದಲ್ಲಿ ಗೊಂದಲʼ. ರೂಪಾಂತರ ʼ ಚಿತ್ರದ ವಿಶೇಷವಿರುವುದೇ ಇಲ್ಲಿ! ಮೊದಲ- ವಿಚಿತ್ರ, ಕರಾಳ, ವಿಕೃತ- ದೃಶ್ಯದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ತನ್ನನ್ನು ತಾನು ಬಚಾವು ಮಾಡಿಕೊಳ್ಳಲು ಕತೆ ಹೇಳಲು ಶುರುವಿಟ್ಟುಕೊಳ್ಳುತ್ತಾನೆ. ಕತೆ ಚೆನ್ನಾಗಿಲ್ಲದ್ದರೆ ಸಾಯಿಸುತ್ತೇವೆ ಎನ್ನುವ … Read more

ವೃತ್ತ ಮೀರುವ ತವಕ – ‘ಬಾಬ್‌ ಮಾರ್ಲಿ ಫ್ರಂ ಕೋಡಿಹಳ್ಳಿ’: ಎಂ. ನಾಗರಾಜ ಶೆಟ್ಟಿ

ವೃತ್ತ ಮೀರುವ ತವಕ – ʼ ಬಾಬ್‌ ಮಾರ್ಲಿ ಫ್ರಂ ಕೋಡಿಹಳ್ಳಿ ಅಗ್ನಿ ಮಾಂಸದ ಕುಲುಮೆಯಲಿನನ್ನ ಕಾಯಿಸಿ ಬಣ್ಣವ ಮಾಡಿಮರಳಿ ನನ್ನ ರೂಪನೇ ಕಡೆವಏ ನನ್ನಾಳದ ಅಳುವೇನನ್ನ ಚಿತ್ರಕ್ಕೇಕೆ ಬೆನ್ನು ಬರೆವೆ? ಎನ್ಕೆ ಹನುಮಂತಯ್ಯನವರ ಕವಿತೆ ಕೇಳುವ ʼ ನನ್ನ ಚಿತ್ರಕ್ಕೇಕೆ ಬೆನ್ನು ಬರೆವೆ? ʼ ಪ್ರಶ್ನೆಯೇ ” ಬಾಬ್‌ ಮಾರ್ಲಿ ಫ್ರಂ ಕೋಡಿಹಳ್ಳಿ ʼ ನಾಟಕದ ಮೂರು ಪಾತ್ರಗಳ ಒಳಗುದಿ. ಚಂದ್ರಶೇಖರ್‌ ಮಾಡಿದ ಬಾರ್‌ ಸಿಂಗರ್‌ ಪಾತ್ರ ತನ್ನ ಹೆಸರನ್ನು ʼಬಾಬ್ ಮಾರ್ಲಿʼ ಎಂದು ಬದಲಾಯಿಸಿಕೊಂಡು … Read more

ಪ್ರಾರ್ಥನೆಯು ಧ್ಯಾನಸ್ಥಗೊಂಡ ಪರಿಮಳದ ಪರಿ: ಡಾ. ಹೆಚ್ ಎನ್ ಮಂಜುರಾಜ್

ವಿವಶತೆ ಮತ್ತು ಆರ್ತತೆಗಳ ನಡುವೆ ತೂಗುಯ್ಯಾಲೆಯಾಡುವ ಘನಮೌನ ಪ್ರಭುವೇ,ಇನ್ನಾದರೂ ಹೊರಗೆ ಕತ್ತಲಾಗಿಸುಈ ಬೆಳಕು ದಾರಿ ತೋರಿಸಿದ್ದು ಸಾಕುನಡೆದೂ ನಡೆದೂ ಸುಸ್ತಾಗಿದ್ದೇನೆ,ದಾರಿ ಗುರಿಗಳ ನಡುವೆ ಸಾಗುವಲ್ಲಿಸಾಧನೆಗಳ ಮಿಂಚುಳದ ಬೆಳಕಿನಲ್ಲಿದಾಹ ತೀರದ ಚಪ್ಪಾಳೆಯಲ್ಲಿನಾನಿಲ್ಲದಂತೆ ಬಂಧಿಯಾಗಿದ್ದೇನೆ ನಿದ್ದೆ ಮತ್ತು ಎಚ್ಚರದ ನಡುವಿನಸ್ಥಿತಿಯೊಂದು ಮೂರ್ತವಾದ ಹಾಗೆಬದುಕು ಎರಡು ಕೊನೆಗಳ ನಡುವೆಸಿಲುಕಿ ಇಲ್ಲವಾದ ಹಾಗೆ,ಇರುವ ಸ್ಥಿತಿಯಲ್ಲಿ ಕಣ್ಣು ಮುಚ್ಚಲಾಗದಷ್ಟುಬದುಕು ಬಟ್ಟ ಬಯಲಾಗಿದೆ ನಗುವ ಧರಿಸಿ ಸುಮ್ಮನೆ ಒಟ್ಟಿಗಿದ್ದದ್ದು ಸಾಕುಕೆಳಗಿಳಿಸಿ ಬಿಡು ಈ ಹೆಗಲ ಭಾರದೂರ ಮಾಡಿಸು; ಕಳಚಿಕೊಳ್ಳುತ್ತೇನೆಸಾಕಿನ್ನು ಒಣಮಾತಿನ ಉಪಚಾರ;ನನಗೆ ನಾನೊಂದಿಷ್ಟು ಹತ್ತಿರವಾಗುತ್ತೇನೆ ದೂರುತ್ತಿರಲಿ … Read more

“ಸಿಎಮ್ಮೆನ್ ಎಂಬ ರಂಗ ರೂವಾರಿ”: ಎಂ.ಜವರಾಜ್

ಕೃಷ್ಣಮೂರ್ತಿ ಹನೂರರು “ಚಾಮರಾಜನಗರ ಸೆರಗಿನ ಇಲ್ಲವೇ, ತಿರುಮಕೂಡಲು ನರಸೀಪುರ ಸುತ್ತಮುತ್ತಲಿನ ಬದುಕು ಬವಣೆ ಹೇಳುವ..” ಎಂದು ನನ್ನ ಮೊದಲ ಕಥಾ ಸಂಕಲನದ ಮುನ್ನುಡಿಯಲ್ಲಿ ಬರೆಯುತ್ತಾರೆ. ಇದು ಮೈಸೂರು ಚಾಮರಾಜನಗರ ಜಿಲ್ಲೆಗಳ ಅವಿನಾಭಾವ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಮನೋಸ್ಥಿತಿಯ ದ್ಯೂತಕದ ಬೆಸುಗೆಯಾಗಿದೆ. ಮೈಸೂರು ಜೆಲ್ಲೆಯ ಭಾಗವಾಗಿದ್ದ ಚಾಮರಾಜನಗರ, ರಾಜ್ಯದ ದಕ್ಷಿಣ ಗಡಿ ನೆಲವಾಗಿ ಆಳುವವರಿಂದ ನಿರ್ಲಕ್ಚ್ಯಕ್ಕೆ ಗುರಿಯಾಗಿ ಅಭಿವೃದ್ಧಿಹೀನವಾಗಿ ಅನಾಥವಾದಂತೆ ಕಾಣುತ್ತಿತ್ತು. ಇದನ್ನರಿತ ಸ್ಥಳೀಯ ಜನ ಸಮೂಹದಲ್ಲಿ ಪ್ರಭುತ್ವದ ವಿರುದ್ಧ ಅಸಹನೆಯ ಕಾರಣವಾಗಿ ಅದೊಂದು ಸಮಯ ಓಟ್ ಬ್ಯಾಂಕ್ … Read more