ನಾಲ್ಕು ಕವಿತೆಗಳು: ವಾಣಿ ಭಂಡಾರಿ

ಗಾಳಿ ಮಾತು ಭೂತ ವರ್ತಮಾನವನ್ನುಒಮ್ಮೆ ಬಾಚಿ ಆಲಂಗಿಸಿದರೆ,,,ಅಳುವಿನ ಸಾಗರವೇ ಬಾಳುಎನಿಸದೆ ಇರದು!.ಭಾವನೆಗಳೇ ಸತ್ತ ಮೇಲೆಬದುಕು ಬಯಲೇ ತಾನೆ? ಚಿಗುರೊಡೆಯಲು ಅಲ್ಲೇನುಇದ್ದಂತಿರಲಿಲ್ಲ,,,ಸಪಾಸಪಾಟದ ಒಡಲತುಂಬಾ ಕಲ್ಲು ಮುಳ್ಳುಗಳೇ,,ಚುಚ್ಚಿದ್ದೊ ಎಷ್ಟೊ ,,ಕಣ್ಣೀರು ಕೋಡಿ ಹರಿದಿದ್ದು ಎಷ್ಟೊ ಬಲ್ಲವರಾರು!ಒಳಗೊಳಗೆ ಹರಿದ ಕಂಬನಿಗೆಇಂತದ್ದೆ ಕಾರಣ ಬೇಕಿರಲಿಲ್ಲ!!. ಒಳಗೆ ಕುದ್ದ ಭಾವ ಕಾವಿನಲಿಆವಿಯಾಗಿ ಕಣ್ಣ ಹನಿಯಂತೆಆಗಾಗ ಹೊರಬರುತ್ತಿತ್ತಷ್ಟೆ.ಎಷ್ಟಾದರೂ ಭೂಮಿ ಬಿಸಿಯಾಗಿತಂಪಾಗುವುದು ನಿಸರ್ಗನಿಯಮ ಎಂಬುದೊಂದುತಾತ್ಸಾರ ಮಾತಿದೆ ಎಲ್ಲರಲಿ!. ಹೌದೌದು!,,ಕೆತ್ತುವುದು ಚುಚ್ಚುವುದುಜಪ್ಪುವುದು ಗುಂಡಿ ತೋಡಿಅವರಿಷ್ಟ ಬಂದ ಕಡೆಯೆಲ್ಲ,,,,ಅವರದೆ ಜೊಲ್ಲು ಸುರಿಸಿಕಾಮನಹುಣ್ಣಿಮೆ ಆಚರಿಸುವುದುಅವರೇ ಮಾಡಿಟ್ಟುಕೊಂಡ ಪದ್ದತಿ.ಶತ ಶತಮಾನಗಳಿಂದಲೂನಡೆಯುತ್ತಲೇ ಇದೆ ದರ್ಬಾರು!.ಕೇಳುವವರು … Read more

ಮೂರು ಕವಿತೆಗಳು: ದೊಡ್ಡಬಸಪ್ಪ ನಾ ಚಳಗೇರಿ

ಅಂಬರದ ಬಯಲೊಳಗೆ ಅಂಬರದ ಬಯಲೊಳಗೆ ಅರಳಿದ್ದ ಮಲ್ಲಿಗೆಯಸತಿ ಮುಡಿಗೆ ನಾನೊಮ್ಮೆ ಮುಡಿಸಲೆಂದುಇರುಳೇಣಿ ಏರೇರಿ ಇರುಳೂರು ನಾ ಸುತ್ತಿತಾರೆಗಳ ಮಲ್ಲಿಗೆಯ ಬನ ಸೇರಿದೆ ಇಳಿಬಿದ್ದ ಮಲ್ಲಿಗೆಯ ಹೂಬಳ್ಳಿ ತುಂಬಿತ್ತುದುಂಡು ಆ ದುಂಡಗಿನ ಮೊಗ್ಗರಳಿಸಿಹಾಲ್ಬಣ್ಣ ಹೂಮಾಲೆ ಇನಿಯಳಿಗೆ ಕಟ್ಟಿಸಲುಚುಕ್ಕಿಗಾಗಿರುಳಲ್ಲಿ ಕೈ ಚಾಚಿದೆ ಶಶಿ ಬೆಳ್ಳಿ ಬುಟ್ಟಿಯಲಿ ಹರಿದಾಕಿ ಹೊತ್ತಂದುಹೂಗಾರ ಮನೆಯೊಳಗ ನಾನಿಳಿಸಿದೆನಗೆಮೊಗದ ಮುತ್ತೈದೆಯ ಮದರಂಗಿ ಕೈಯೊಳಗಸೊಗಸಾಗಿ ಹೆಣೆಸಿದ್ದೆ ಒಂದಾರದಿ ಮುಂಜಾವು ನೀ ಹೆಣೆದು ಇಳಿಬಿಟ್ಟ ಜಡೆಮೇಲೆಮುಡಿ ಮಾಡಿ ಹೋಗೆಂದೆ ರವಿಕಿರಣಕೆಇನಿದಾದ ಮಾತೊಳಗ ಬಳಿ ಬಂದು ಮಾಡೋದಮುಡಿಯೊಳಗ ಮುಡಿಸಿದ್ದೆ ಹೂ ಮಾಲೆಯ … Read more

ಪಂಜು ಕಾವ್ಯಧಾರೆ

ಕನಸಿನೊಳಗೊಂದು ಕಣಸು ನಿನ್ನೆ ತಮ್ಮ ಮತ್ತೆಕನಸಿನ ಮನೆಗೆ ಬಂದಿದ್ದನುಹೆಂಡತಿ, ಮಕ್ಕಳನ್ನು ಕರೆದು ತಂದಿದ್ದನುಅವ್ವ, ಕಣ್ಣ ತುಂಬಾ ನೀರು ತುಂಬಿಕೊಂಡು ವಯ್ದು ಕೊಟ್ಟಳು ನಾನು, ಯಾಕೋ ಇಷ್ಟು ದಿನ ಎಲ್ಲಿ ಹೋಗಿದ್ದೆ?ಏನೇನೋ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದೆಅವನು, ಮುಗಿಲಿಗೆ ಮುಖ ತೋರಿಏನೇನೋ ಉತ್ತರಿಸುತ್ತಿದ್ದಒಂದೂ ಅರ್ಥವಾಗುತ್ತಿರಲಿಲ್ಲ!ಈ ನಡುವೆ ಅವ್ವ,ನನ್ನ ಪ್ರಶ್ನೆಗಳ ನಡವನ್ನೇ ತುಂಡರಿಸಲು ಯತ್ನಿಸುತ್ತಿದ್ದಳುಇರಲಿ ಬಾ, ಒಳಗೆವಾತ್ಸಲ್ಯ ಗುಡ್ಡವೇ ಕರಗಿ ತಮ್ಮನನ್ನು ಒಳಗೆಆಹ್ವಾನಿಸುತ್ತಿದ್ದಳು ತಮ್ಮನ ಕಿರಿ ಮಗನನ್ನು ಎತ್ತಿಕೊಂಡೆನನ್ನ ನೋಡಿ ಒಂದೇ ಸಮನೆ ಆಳುತ್ತಿದ್ದನುಎಲ್ಲೋ ಬಿದ್ದು ಹಣೆ ಒಡೆದುಕೊಂಡಿದ್ದನುಹಿರಿಯ ಮಗನನ್ನು ತೊಡೆಯ … Read more

“ಪೋಸ್ಟ್ ಮ್ಯಾನ್ ಗಂಗಣ್ಣ (ಭಾಗ 6)”: ಎಂ.ಜವರಾಜ್

-೬- ಅವತ್ತು ಸುಡು ಬಿಸಿಲ ಒಂದು ಮದ್ಯಾಹ್ನ ಗಂಗಣ್ಣ ಸುಸ್ತಾದವನಂತೆ ಸೈಕಲ್ ಏರಿ ಬಂದವನು ಅಗಸ್ತೇಶ್ವರ ದೇವಸ್ಥಾನದ ಉತ್ತರ ದಿಕ್ಕಿನ ಬಾಗಿಲ ಪಕ್ಕದ ಪಶ್ಚಿಮದ ಕಡೆ ಮುಖ ಮಾಡಿದ್ದ ಬಸಪ್ಪನ ವಿಗ್ರಹದ ಜಗುಲಿ ಅಂಚಿಗೆ ಕುಂತು ಕಾಗದ ಪತ್ರ ಚೆಲ್ಲಿಕೊಂಡು ತೊಟ್ಟಿಕ್ಕುತ್ತಿದ್ದ ಬೆವರು ಒರೆಸಿಕೊಳ್ಳುತ್ತ ಓದುತ್ತ ಜೋಡಿಸುತ್ತಿದ್ದ. ಬಿಸಿಲು ಧಗಧಗಿಸುತ್ತಿತ್ತು. ಅದೇ ಹೊತ್ತಿಗೆ ಭರ ್ರಂತ ಬಂದ ಅರ್ಚಕರು ಅವನಿಗೆ ಎದುರಾಗಿ ಕುಂತು “ಏನಪ್ಪ ಗಂಗ ಲೆಟ್ರು ಗಿಟ್ರು ಬಂದಿದಿಯಾ” ಅಂದರು. ಗಂಗಣ್ಣನ ಮುಖ ಇನ್ನಷ್ಟು ಬೆವರಿ … Read more

ಕವಿತೆ ಮತ್ತು ವಿಮರ್ಶೆ: ಅಜಿತ್ ಹರೀಶಿ, ಎನ್. ಎಸ್. ಶ್ರೀಧರ ಮೂರ್ತಿ

ಒಂದು ಸತ್ಯ ಕವಿತೆ ಕವಿಯೊಬ್ಬ ಬಯಸಿದ್ದ ಸತ್ತು ಹೋಗಲುಅದೂ ಹಾಡುಹಗಲುಜೇಡದ ಉದರದ ಎಳೆ ಕಾಣಲುದಾರಿಯೊಂದು ತೋರಲು ಹೇಳಿ ಹೋಗಬೇಕು ಕಾರಣನನ್ನ ಸಾವಿಗೆ ನಾನೇ ಕಾರಣಕೆಟ್ಟ ಸಂಯೋಗದಿಂದ ನಾನೀಗ ಬಸಿರುಲಜ್ಜೆಯಾಗಿದೆ ಬೇಡ ಉಸಿರು ಕುಣಿಕೆ ಬಿಗಿದು ಕುರ್ಚಿ ಒದ್ದುವಿದಾಯ ಹೇಳಬಯಸಿದ್ದುಪಾಪದ ಕೊಡ ಬಲು ಭಾರಅಂಗುಷ್ಟ ನೆಲ ತಾಗಿ ಹಗ್ಗ ಹಾರ ಜಗತ್ತು ಜಾಗೃತವಾಯಿತು ಜರೆಯಿತುಎಲ್ಲ ನಾಟಕ ಕವಿ ಕಟುಕದಯೆ ತೋರದಿರಿ ಹೂತುಹಾಕಿರಿಬೆಳೆಯದಿರಲಿ ರಕ್ಕಸ ಸಂತತಿ ಕರುಣೆ ಇದ್ದವರು ಲೇಖನಿ ಹಿಡಿದರುಕವಿ ಸಾಯಬಹುದು ಕವಿತೆ ಅಮರಬದುಕು ಬರಹ ಒಂದೆಯೋ ಬೇರೆಯೋಕೊಲ್ಲಬೇಡಿರೆಂದರು … Read more

ಪಂಜು ಕಾವ್ಯಧಾರೆ

ನಾಡು ನುಡಿ ಮಣ್ಣ ಪ್ರತಿಯ ಕಣದಿ ಪ್ರೇಮ ಭಾವದೇವನು ನೋಡಿಹ ಬೆರಗಲಿ ಈ ಸ್ವಭಾವಹಳದಿ ಕೆಂಪಿನ ಅಂದಕೆ ಸಮವಲ್ಲ ಹೊನ್ನ ಭಾರನಾಡ ದೇವಿಗೆ ಹೊನ್ನುಡಿಯ ಸಿಂಗಾರ. ನಾಡ ಹೃದಯ ತಬ್ಬಿರಲು ವಚನ ಗಾನಬಾಳ ಹಾದಿಗೆ ಬೆಳಕ ಚೆಲ್ಲಿದೆ ಸುಗಾನಕೀರ್ತನೆಯಲಿ ತುಂಬಿರಲು ಭಕ್ತಿಯ ರಸ ಸಾರತೊಳೆದಿಹಳು ಕಾವೇರಿ ಕಲ್ಮಷಗಳ ಭಾರ. ಇತಿಹಾಸ ಮರೆಯದು ನಾಡ ಚರಿತೆಯಬರಿಯ ಒನಕೆ ಬರೆದ ಸಾಹಸ ಗಾಥೆಯಕದಂಬರು ಪೋಣಿಸಿದ ನುಡಿಯ ಸಿರಿಯಜಲವು ಹಸಿರಿಗೊಲಿದ ಸೊಬಗ ರಾಜವೈಖರಿಯ. ಜ್ಞಾನದಿ ವಿಜ್ಞಾನವಿಂದು ಅರಿತು ಬೆರೆತಿದೆಪ್ರಗತಿಯ ಪಥದಿ ನಾಡನು … Read more

ಎರಡು ಕವಿತೆಗಳು: ನಾಗರಾಜ ಜಿ. ಎನ್. ಬಾಡ

ಅಮ್ಮ ಆಯ್ ಲವ್ ಯು ಕರವ ಹಿಡಿದು ನನ್ನ ಎತ್ತಿ ಆಡಿಸಿದೆಅಪ್ಪಿ ಮುದ್ದಾಡುತ್ತಾ ಹಾಲು ಉಣ್ಣಿಸಿದೆಅತ್ತು ಕರೆದಾಗ ಗುಮ್ಮನ ಕರೆದುಸುಮ್ಮನಾಗಿಸಿದೆಚಂದಿರನ ತೋರಿಸುತಊಟವ ಮಾಡಿಸಿದೆಜೋ ಜೋ ಲಾಲಿಹಾಡಿ ನಿದ್ದೆಯಮಾಡಿಸಿದೆಹಠವ ಮಾಡಿದಾಗ ಒಂದುಪೆಟ್ಟು ಹಾಕಿದೆಜೋರಾಗಿ ಅಳಲು ಎದೆಗೆ ಅಪ್ಪಿನೋವನ್ನು ಮರೆಸಿದೆಗಲ್ಲವ ಹಿಡಿದು ಮುತ್ತನು ನೀಡಿದೆಪಪ್ಪಿಯ ನೀಡೆಂದು ಕಾಡಿಬೇಡಿದೆಮಡಿಲಲ್ಲಿ ಇಟ್ಟುಕೊಂಡು ಬೆಚ್ಚನೆಯಭಾವ ಮೂಡಿಸಿದೆಅರಳು ಹುರಿದಂತೆ ಮಾತನಾಡುವಪರಿಗೆ ನಕ್ಕು ನಲಿದೆಹೆಜ್ಜೆ ಹೆಜ್ಜೆಗೂ ತಡವರಿಸಿ ಬೀಳದಂತೆ ಜೊತೆಯಾದೆಎಷ್ಟೇ ಕಷ್ಟವಾದರೂ ನನ್ನ ನೋಡಿ ನೀ ಎಲ್ಲವನ್ನೂ ಮರೆತೆಜಗದ ಸಂಭ್ರಮ ನನಗಾಗಿ ನೀ ತಂದೆನೀನೇ ನನ್ನ ಸರ್ವಸ್ವ … Read more

ಮೂರು ಕವನಗಳು: ಡಾ. ತೇಜಸ್ವಿನಿ

1) ಕವಿತೆ ಎಂದರೆ ಕವಿತೆ ಎಂದರೆಮನದಾಳದ ಭಾವನೆಗಳಕವಿಯಾಗಿ ಹಾಡುವುದು. ಕವಿತೆ ಎಂದರೆಹೃದಯಾಳದ ನೆನಪುಗಳುಭಾವನೆಯಾಗಿ ಅರಳುವುದು. ಕವಿತೆ ಎಂದರೆಮನದ ಧರೆಯೊಳಗೆಅವಿತಿರುವ ಸುಪ್ತಭಾವಗಳ ಹೊರಸೂಸುವುದು. ಕವಿತೆ ಎಂದರೆರವಿ ಕಾಣದನ್ನುಕವಿಯಾಗಿ ಕಂಡುಕೋಗಿಲೆಯಂತೆ ಹಾಡುವುದು. ಕವಿತೆ ಎಂದರೆಕವಿ ತನ್ನತನವ ತಾಕವಿಯಾಗಿ ಕಾಣುವುದು. 2) ಕನ್ನಡ ಕನ್ನಡ ನಾಡಿನ ಕೋಗಿಲೆಗಳಿರಾಕನ್ನಡ ನಾಡಿನ ಕಂದಗಳಿರಾಕನ್ನಡಕ್ಕಾಗಿ ಕೈ ಎತ್ತಿಕನ್ನಡಕ್ಕಾಗಿ ಹೋರಾಡಿಕನ್ನಡ ನಾಡಿನ ಕಣ್ಮಣಿಗಳಾಗಿ. ತನು ಕನ್ನಡ, ಮನ ಕನ್ನಡನುಡಿ ಕನ್ನಡ ಭವ ಕನ್ನಡಹಳೆಗನ್ನಡ ನಡುಗನ್ನಡಎಲ್ಲವೂ ಕನ್ನಡ, ಕನ್ನಡ ಕನ್ನಡ ಹರ ಕನ್ನಡ, ಹರಿ ಕನ್ನಡಸಿರಿಕನ್ನಡ, ತಾಯಿಕನ್ನಡಅವ ಕನ್ನಡ … Read more

ಮೂರು ಕವನಗಳು: ಮೇದರದೊಡ್ಡಿ ಹನುಮಂತ

1) ಒಂಟಿ ಚಪ್ಪಲಿ ನಾ ಕೊಂಡ ಆರಿಂಚಿನ ದುಬಾರಿ ಮೊತ್ತದ ಚಪ್ಪಲಿಗಳಲ್ಲಿಒಂದು ಮಾತ್ರ ಉಳಿದಿದೆ ಮತ್ತೊಂದು ನಾಯಿ ಪಾಲಾಯಿತೋ..ಬೀದಿ ಪಾಲಾಯಿತೋ..ನೀರು ಪಾಲಾಯಿತೋ..ಅರಿವಿಲ್ಲ ಹೈಕಳು ಹರಿದಿರಬಹುದೇ..?ಬೇಕಂತಲೇ ಎಸೆದಿರಬಹುದೆ?ಕಳುವಾದ ಸಾಧ್ಯತೆಯಿಲ್ಲಒಂಟಿ ಚಪ್ಪಲಿ ಎಲ್ಲಿ ನರಳಿಹುದೋ..? ದುಃಖಿಸಲೇ.. ಒಂದು ಚಪ್ಪಲಿ ಕಳೆದು ಹೋಗಿದಕ್ಕೆಸುಖಿಸಲೇ..ಒಂದು ಚಪ್ಪಲಿ ಉಳಿದಿದ್ದಕ್ಕೆಅತ್ರಂತ್ರ ಸ್ಥಿಥಿ ಬರಿಗಾಲು ಉಳಿದ ಕಾಣೆಯಾದಬಿಡಿಬಿಡಿಯಾದ ದುಬಾರಿ ಚಪ್ಪಲಿಗಳನುಅಣಕ ಮಾಡುತ್ತಿವೆಪುಟಪಾತಿನಲಿ ನೂರಕ್ಕೋ ಇನ್ನೂರಕ್ಕೋ..ಅಗ್ಗವಾಗಿ ಸಿಕ್ಕಹಳೆಯ ಅವಾಯಿ ಚಪ್ಪಲಿಗಳು 2) ಕೀಳರಿಮೆ ಮೆಳ್ಳೆಗಣ್ಣೆಂಬ ಕೀಳರಿಮೆ ಹೊರಟು ಹೋಯಿತೆನಗೆಕುರುಡರ ಕಂಡ ಮೇಲೆ ಎಡಚನೆಂಬ ಕೀಳರಿಮೆ ಹೋಯಿತೆನಗೆಕೈಯಿಲ್ಲದವರ ಕಂಡ ಮೇಲೆ … Read more

ಮೂರು ಕವಿತೆಗಳು: ಗೀತಾ ಡಿ. ಸಿ.

೧. ಮಹಾಕಾವ್ಯ ಬೀಜ ಮೊಳಕೆಯೊಡೆದುಮಣ್ಣಿನಾಳಕ್ಕೆ ಬೇರೂರುತ್ತಲೇಕತ್ತಲ ಮಣ್ಣಗರ್ಭ ಸೀಳಿಬೆಳಕು ಮೋಡ ಗಾಳಿ ಮಳೆಬಿಸಿಲು ಬೆಳದಿಂಗಳಿಗೆಮೈಯ್ಯೊಡ್ಡುತ್ತಾ ಮೊಗ್ಗಾಗಿಹೂವು ಹೀಚು ಕಾಯಿಹಣ್ಣಾಗಿ ಮಾಗಿ ಮಣ್ಣುಸೇರುವ ಅನುದಿನದಾಟಅಷ್ಟು ಸುಲಭದ್ದೇನೂ ಅಲ್ಲ. ಇಲಿ ಹೆಗ್ಗಣಗಳಾದಿಯಾಗಿದೊಡ್ಡ ಬೇರುಗಳ ನಡುವೆದಿಟ್ಟತನದಿ ಗಟ್ಟಿ ಬೇರೂರಿಒಂದಿಷ್ಟು ಚಿಗುರ ಚಾಚಿದರಷ್ಟಕ್ಕೇಮುಗಿಯುವುದಿಲ್ಲ..ಬಿಸಿಲು ಮಳೆ ಗಾಳಿಗಳ ಹೊಡೆತಕ್ಕೆದನಕರುಗಳ ಮನುಜರಕೈಕಾಲು ಬಾಯಿಗಳಿಂದಲೂಬಚಾವಾಗಬೇಕು! ತನ್ನ ಗುರುತೂರಲುಬೀಜ ಮೊಳಕೆಯೊಡೆದುಹಣ್ಣಾಗಿ ಮಣ್ಣಸೇರಿಮತ್ತೆ ಚೆಗುರೊಡೆಯಲುನಿತ್ಯ ಕನಸು ಭರವಸೆಗಳಹೊತ್ತು ನಂಬಿಕೆಯೇ ತಾನಾಗಿಬಯಲಲ್ಲಿ ಬಯಲಾಗಿಎಚ್ಚರದಿ ಸಹಜತನದಲಿತನ್ನನೊಡ್ಡಿಕೊಳ್ಳುತ್ತಲಿರಬೇಕು.. ಮುಗಿಲೆತ್ತರಕೆ ಬೆಳೆದರಷ್ಟೆ ಸಾಕೆ?ಮೊಗ್ಗು ಹೂವಾಗಿ ಕಂಪಬೀರಬೇಕುಹೀಚು ಕಾಯಾಗಿ ಹಣ್ಣಾಗಿಬಯಸಿದವರ ಬೊಗಸೆತುಂಬಬೇಕುನಂಬಿದವರ ಹಸಿವೆ ನೀಗಬೇಕು…ತಿಂದವರ ತೃಪ್ತಿರಲಿ ಬೀಜಮತ್ತೆ … Read more

ಮೂರು ಕವಿತೆಗಳು: ಚಲುವೇಗೌಡ ದೊಡ್ಡಹಳ್ಳಿ

ಉಪಕಾರಿಯಾಗು ಇರುವಂತಿದ್ದರೆ ತೆಂಗಿನ ಮರದಂತಿರುಬಿಸಲಲಿ ನೆರಳಾಗಿ ದೇವರ ಪೂಜೆಗೆ ಕಾಯಾಗಿಬಾಯಾರಿದವರಿಗೆ ಎಳನೀರಾಗಿಭುವಿಯ ಮೇಲಿನ ಕಲ್ಪವೃಕ್ಷವಾಗಿ… ಮನೆಯ ಮುಂದೆ ಚಪ್ಪರವಾಗಿಅನ್ನ ಮಾಡಲು ಕಟ್ಟಿಗೆಯಾಗಿಕಸಗುಡಿಸುವ ಪೊರಕೆಯಾಗಿನೆತ್ತಿಗೆ ಕೊಬ್ಬರಿ ಎಣ್ಣೆಯಾಗಿ… ಮನೆ ಮೇಲಣ ಚಾವಣಿಯಾಗಿಮನೆ ಭಾರ ಹೊರುವ ತೊಲೆಯಾಗಿಮಲಗುವರಿಗೆ ಸೋಗೆ ಹಾಸಾಗಿಶುಭ ಶಾಸ್ತ್ರಕೆ ಕೊಬ್ಬರಿಯಾಗಿ… ಹುಟ್ಟಿದರೆ ಹಸುವಿನಂತಾಗುಹಸಿದ ಮಕ್ಕಳಿಗೆ ಹಾಲಾಗಿಧಣಿದವರಿಗೆ ಮಜ್ಜಿಗೆಯಾಗಿಊಟಕ್ಕೆ ತುಪ್ಪವಾಗಿ ಇಳೆಯೊಳಗೆ ಕಾಮಧೇನುವಾಗಿ… ಹೊಲಕ್ಕೆ ಗೊಬ್ಬರವಾಗಿಅನ್ನದಾತರಿಗೆ ಬೆನ್ನೆಲುಬಾಗಿಪ್ರಥಮ ಪೂಜೆಗೆ ಇಡುವ ಸಗಣಿಯಾಗಿಪವಿತ್ರವಾದ ಗೋಮೂತ್ರವಾಗಿ… ಮನೆ ಮುಂದೆ ಸಾರಿಸುವ ಸಗಣಿಯಾಗಿದೇವರ ಅಭಿಷೇಕಕೆ ಹಾಲು-ಮೊಸರಾಗಿಜಗಕೆಲ್ಲ ನೀನೆ ಗೋಮಾತೆಯಾಗಿನೀನಿರುವೆ ಜಗದೊಳಗೆ ಉಪಕಾರಿಯಾಗಿ… ನೀನಾರಿಗಾದೆಯೋ … Read more

ನಾಲ್ಕು ಕವಿತೆಗಳು: ಜಹಾನ್ ಆರಾ ಕೋಳೂರು

ನನಗೂ ಹೇಳುವುದು ಬಹಳ ಇತ್ತು ಅಂದು ಶ್ರೀರಂಗ ಪಟ್ಟಣದ ವೇದಿಕೆಯ ಮೇಲೆಸೂಟು ಬೂಟಿನ ಠೀವಿನಲ್ಲಿ ಕುಳಿತ ನಿಸಾರ್ನನಗೆ ನನ್ನ ನೆಚ್ಚಿನ ಪದ್ಯದ ಕವಿಯಷ್ಟೆ ಜೋಗದ ಝರಿಗಳ ಮುಂದೆ ನಿಂತಾಗಲೆಲ್ಲಅದರ ಹನಿಗಳು ಮುಖಕ್ಕೆ ಚಿಮ್ಮುತ್ತಿದಾಗಲೆಲ್ಲಜೊತೆಯಲ್ಲಿ ಇಲ್ಲೇ ಕುಳಿತು ಮಾತಾಡಬೇಕೆಂಬ ಹಂಬಲವೇನೋ ಇತ್ತು. ಕಾಲಕ್ಕೆ ಕಾದೆಕಾಲ ಅವಕಾಶ ನೀಡಲೇ ಇಲ್ಲ ಶಿಲುಬೆ ಏರಿದವನು ನಿನ್ನ ಕಾಡಿದಂತೆನನಗೂ ಕಾಡಿದ ನಿನ್ನ ಪದಗಳ ಮೂಲಕ ಸಂಜೆ ಐದರ ಮಳೆ ಇರಬೇಕಿತ್ತುಲಾಲ್ ಬಾಗ್ನಲ್ಲಿ ಸ್ವಲ್ಪ ದೂರ ನಡೆದುನಾನು ನಿನ್ನಲ್ಲಿ ಹೇಳುವುದು ಬಹಳ ಇತ್ತು ಮನಸ್ಸು … Read more

ಪಂಜು ಕಾವ್ಯಧಾರೆ

ಶಕ್ತಿ ಇಳಿದೊಮ್ಮೆ ನೋಡು ಎದೆಯೊಳಗೆಪ್ರೀತಿ ಒಸರುವುದು ದನಿಯೊಳಗೆಬಿತ್ತಿದವರ್ಯಾರು ಒಲವ ಇಳೆಗೆಹೆಣ್ಣಿಲ್ಲವೆ ಹುಡುಕು ನಿನ್ನೊಳಗೆ?! ತಾಯಾಗಿ ಹಾಲನು ಉಣಿಸಿಸೋದರಿ ಸ್ನೇಹವ ಸೃಜಿಸಿಮಡದಿ ಅಕ್ಕರೆಯಲಿ ರಮಿಸಿನೀನು ಗೆಲುವಾದೆ ಬಯಸಿ!! ಗುರುತಿರದಂತೆ ನೀ ನಟಿಸದಿರುಪಡೆದ ಕರುಣೆಯ ನೆನೆಯುತಿರುಇಂದಿಗೆ ನಾಳೆಗೆ ಮುನಿಯದಿರುಶಕ್ತಿಯಿಂದ ಬೆಳಕು ಕಡೆಗಣಿಸದಿರು!! ಆಕೆಯಿರದೆ ನೀನು ಶೂನ್ಯಹರಸಿ ಕೈಹಿಡಿದರೆ ಮಾನ್ಯಪ್ರೇಮ ಕಡಲು ಅನನ್ಯತೇಲಿದಾಗ ಬದುಕು ಧನ್ಯ.. -ನಿರಂಜನ ಕೆ ನಾಯಕ ಮಗಳಾಗಿ ಬೇಡವಾದೆನೇ…? ಹೆಣ್ಣಿನ ಜನುಮವೇಕೆ ಈ ಭೂಮಿಮ್ಯಾಲ,ಒಡಲ ಬಗೆದು ಕಿಚ್ಚತ್ತು ಉರಿಯುವಜ್ವಾಲೆಯಲಿ ತೇಲಾಡುವಳು ತನ್ನ ಬದುಕಿನಾಗ,ಕಣ್ತೆರೆದು ನೋಡುವ ಮುನ್ನವೇ ಕ್ಷೀಣಿಸುವಳು … Read more

ಪಂಜು ಕಾವ್ಯಧಾರೆ

ತೋಳಗಳು ಅಳುತ್ತಿದೆ ಪುಟ್ಟ ಕಂದಎತ್ತಿಕೊಳ್ಳುವವರಿಲ್ಲದೇಕೆಸರು ಮೆತ್ತಿದೆ ಮೈಗೆ ಹೆಸರು ಭಾರತಿ ತೋಳಗಳು ಶುಭ್ರ ಬಟ್ಟೆ ತೊಟ್ಟುನಗುವಿನಲಂಕಾರದ ಬೊಟ್ಟನ್ನಿಟ್ಟುಗರತಿಯಂತೆ ಕೈ ಬೀಸುತ್ತಿವೆತಬ್ಬಲಿಯಾದಳು ಭಾರತಿ ತಬ್ಬುವ ತವಕದಲ್ಲಿಪಿತೂರಿಯ ಬಾಕನ್ನು ಅಡಗಿಸಿಟ್ಟಿಹರುಕೆದರಿದ ಕೇಶರಾಶಿಯ ಹಿಡಿದುಗಹಗಹಿಸುತಿಹ ತೋಳಗಳದ್ದು ಆತ್ಮರತಿ ಅಂಗಾಂಗ ಊನ ಮಾಡಿದವುಮುದ್ದು ಭಾರತಿ ಈಗ ಅಂಗವಿಕಲೆತೋಳಗಳ ಸಾಮ್ರಾಜ್ಯದಲ್ಲಿದಾರಿಗಾಣದೇ ನಿಂತಿಹ ಅಬಲೆ ಎದೆಯ ತೋಟದಲ್ಲಿ ಮಾತುಗಳ ಬೆಳೆಯಿಲ್ಲಬೇಡದ ಕಳೆ ಕಸ ಅಡ್ಡಾದಿಡ್ಡಿ ಬೆಳೆದ ಆಕ್ರೋಶತೋಳಗಳ ತೋಳ್ಬಲ ಹೆಚ್ಚಾಗಿದೆಊಳಿಡುತ್ತಿವೆ ಭಾರತಿಯ ಕರುಳ ಬಗೆದು ಏನು ಮಾಡಬಲ್ಲಳು ಅವಳುನಾಲಗೆಯ ಹೊರಗೆಳೆದಿವೆಕೈಕಾಲುಗಳ ಮುರಿದಿವೆತೋಳಗಳ ಕುಯುಕ್ತಿಗೆ ಎಲ್ಲೆಗಳುಂಟೇ!? ತಂದೆ … Read more

ಮೂರು ಕವನಗಳು: ಸುಮತಿ‌ ಕೃಷ್ಣಮೂರ್ತಿ

ಸಮರ ಮಿಣುಕು ನಕ್ಷತ್ರಗಳ ಒಡ್ಡೋಲಗರಾಕೇಂದು ಆಸ್ಥಾನದಲಿ ಮಹಾ ಕಾಳಗ ಹೆಚ್ಚು ಹೊಳೆಯುವ ಚುಕ್ಕಿ ಯಾವುದೆಂದುಬಾನ್ ಕಡಲ ಹೊಳೆ ಮುತ್ತು ತಾನೇ ಎಂದು ಕೋಟಿ ಕೋಟಿ ತೇಜ ಪುಂಜಗಳಿಗೆಹರಿಯುತಿದೆ ಅಪರಿಮಿತ ಬೆಳಕ ಬುಗ್ಗೆ ಸುಧಾಂಶುವಿನ ಸ್ನಿಗ್ಧ ಸೊದೆಯ ಕುಡಿದುಉನ್ಮತ್ತ ತಾರೆಗಳು ಮನದುಂಬಿ ಕುಣಿದು ಇರಳೂರ ಪ್ರಜೆಗಳಿಗೆ ಹೊನಲು ಹಬ್ಬಸಜ್ಜುಗೊಂಡಿದೆ ಇಂದು ಹುಣ್ಣಿಮೆಯ ದಿಬ್ಬ ಕಾತರದಿ ಕೈ ಕಟ್ಟಿ ಕಾಯುತಿರುವಶಾಮನ ಮನದಲ್ಲಿ ಪ್ರೇಮ ಕಲರವ ಬೆದರುತ್ತ ಬೆವರುತ್ತಾ ಬಂದ ನಲ್ಲೆವಿರಹ ಬೇಗೆಯಲಿ ನರಳಿತ್ತು ಮುಡಿದ ಮಲ್ಲೆ ಯಮುನೆಗೂ ವಿಸ್ತಾರ ಬೆಳದಿಂಗಳುನಾಚುತಲಿ … Read more

ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಪದ್ಯಗಳು

(೧)ಮುಚ್ಚಿ ನಿಮ್ಮ ಒಡಕು ಬಾಯಿಬೆದರಿಬಿಟ್ಟಾನು ಮುಗ್ಧ ಹೃದಯಿಕೆಕ್ಕರಿಸುವ ನೋಟ ಬೂದಿಯಾಗುವ ಕೆಂಡಹೊಂಗನಸಿನ ಮನೆಯ ಕಟ್ಟಲುತೊಗಲೊಂದೇ ತೊಟ್ಟಿಲು ಕತೂಹಲದ ರೆಪ್ಪೆಯಗಲಿಸಿಕಲಿವ ತುಡಿತದೆ ನಗೆಯರಳಿಸಿಕುಳಿತ ಭಂಗಿಯ ನೋಡಿಮೋಡಿ ಮಾಡುವ ತೊದಲು ನುಡಿಭವ್ಯಲೋಕಕೆ ಮುನ್ನುಡಿ ಎತ್ತೆತ್ತಲೋ ಸಾಗುತಿಹವು ಕನಸುಗಳುಥಟ್ಟನೆ ಮೈದಳೆದು ಮುಂದೆ ಕುಳಿತಿವೆಮಂಡಿಯೂರಿ; ಎದೆಯ ಕದವ ತೆರೆತೆರೆದುತುಂಬಿ ತುಳುಕಲಿ ಸಿಹಿನುಡಿಯ ಹೊಂದೆರೆಸಾಕಿನ್ನು ಅರೆಬರೆ ಮಾತುಗಳು ಬಿತ್ತಿಬಾರದೇ ನಲ್ನುಡಿ ಇವನು ಅವನಲ್ಲ ಅವನಂತೆ ಇವನಿಲ್ಲಇವನಂತೆ ಅವನಿಲ್ಲ ಅವರಿವರಂತೆ ಇರಬೇಕಿಲ್ಲಅವನೊಲ್ಲೆನೆಂದದ್ದು ಇವನೇನು ಅರಿಯಬೇಕಿಲ್ಲಚಿಗುರುವ ಬಳ್ಳಿಯಿದು ಪಸರಿಸಲಿ ನವಕಂಪು ತನ್ನೊಡಲಲ್ಲಿ. ಒಂದು ಲೋಟದೊಳಗೆ ಹೃದಯಮತ್ತೊಂದರಲ್ಲಿ ಎದೆಯ … Read more

ಪಂಜು ಕಾವ್ಯಧಾರೆ

ಬಾಳ ಹಣತೆ ಸುಳ್ಳು ಸತ್ಯದಾಟದಲ್ಲಿಶೂನ್ಯವಾಯಿತೇ ಬದುಕಿಲ್ಲಿ…..ಅನ್ಯಾಯವ ಅವಮಾನವ ಸಹಿಸಿಮುಖವಾಡದ ನಾಟಕವ ದಿಟ್ಟಿಸಿ….ಹಣತೆಯೊಂದನ್ನು ಹಚ್ಚಬೇಕಿದೆಇರಿಸು ಮುರಿಸಿನ ವ್ಯಥೆಯಲ್ಲಿ….ದಾರಿಯ ದೂರ ಸಹಿಸನೆಂದರೆನೆರಳ ಹಂಗು ಬಿಡುವುದೇ….ಯಾರದ್ದೋ ಬದುಕ ಬೆಳಕ ನಂದಿಸಿಕಗ್ಗತ್ತಲು ಎಂಬುವುರೇ……ಗುಡುಗು ಸಿಡಿಲಿನ ಆರ್ಭಟಕ್ಕೆಅಂಜದಿರೆಂದು….ಮತ್ತೆ ಮತ್ತದೇ ಹಣತೆಯಲ್ಲಿಪ್ರಕಾಶಮಾನವಾದ ಬೆಳಕು ಹೊಮ್ಮಲಿ…..ನೋವು ನಲಿವಿಗೆ ಕಾಲದಲೆಕ್ಕವಿಲ್ಲಿ…..ಅಂಧಕಾರವೇ ತುಂಬಿದ ಮನಗಳಲ್ಲಿಹೃದಯ ಜ್ಯೋತಿ ಬೆಳಗಲಿ -ರೋಹಿಣಿ ಪೂಜಾರಿ ಕೋಣಾಲು. ದೂರು… ಈ ಪದಗಳೇ ಮೊದಲಿನಂತಿಲ್ಲ..ಯಾವ ಭಾವಕ್ಕೂಹೊಂದಿಕೊಳ್ಳುವುದಿಲ್ಲಕವಿತೆಗಾಗಿ ಹಂಬಲಿಸುವ ನನ್ನಂಥವನನ್ನು ಬೆಂಬಲಿಸುವುದಿಲ್ಲ..ಅರ್ಥಕ್ಕೆ ಅಪಾರ್ಥ ಕೊಡುವ ಇವು ಪದಗಳೇ ಅಲ್ಲ ಎದೆಯೊಳಗೆ ಹದವಾಗಿ ಹುಟ್ಟುವ ಇವುಯಾರ ಕಿವಿಗೂ ಮುಟ್ಟುವುದಿಲ್ಲ..ಗಂಟಲಲ್ಲಿ ತೂರಿ … Read more

ಪಂಜು ಕಾವ್ಯಧಾರೆ

ಕನ್ನಡ ಬಳಗ ನೋಡ ಬನ್ನಿರಿ ಗೆಳೆಯರೆನಮ್ಮ ಕನ್ನಡ ಬಳಗವನುಕಸ್ತೂರಿಯ ತವರನ್ನು. . . . ವಿಕ್ರಮಾರ್ಜುನ ಸಾಹಸ ಭೀಮಅವತಾರ ತೋರಿದವು.ಪಂಚತಂತ್ರ ರಾಮಚರಿತಪುರಾಣವು ಬೆಳಗಿದವು ಪ್ರಭುವಿನ ಜೊತೆಯಲ್ಲಿ ಅಕ್ಕನುಅಣ್ಣನು ಪುಣ್ಯವಿದೇನುರೀರಗಳೆಯ ಜೊತೆಯಲಿ ಷಟ್ಟದಿಕೀರ್ತನೆ ನೃತ್ಯವ ನೋಡಿರೀ ಶ್ರೀರಾಮನ ನಾಕು ಕನಸನು ಸಣ್ಣಕಥೆಯಲಿ ಹೇಳಿದ ಮಂಕುತಿಮ್ಮಮಲ್ಲಿಗೆ ಸಂಪಿಗೆ ಬಕುಲದ ಹೂಗಳುಅರಳಿವೆ ನೋಡು ಬಾರೊ ತಮ್ಮ ಕಾಂತಿಯಿಂದ ಹೊಳೆಯುವ ಬಹುವಿಧವಾಸ್ತಿಶಿಲ್ಪದ ಚಂದವುಕಣ್ಣೆದುರಿದ್ದರು ಕಾಣದಾಗಿದೆಕವಿದಿದೆ ಕಪ್ಪು ಮೋಡವು -ಡಾ. ಶಿವಕುಮಾರ್ ಆರ್ ಕನ್ನಡಉಸಿರುಸಿರಲಿ ಹೆಸರೆಸರಲಿಹೊಸೆದಿರಲಿ ಕನ್ನಡ.ಕಸುವಾಗಲಿ ಬೆಸಗೊಳ್ಳಲಿಜಸವಾಗಲಿ ಕನ್ನಡ. ಹಸಿರಸಿರ ಸಹ್ಯಾದ್ರಿಯೇಶಿಖರ ನಿನಗೆ … Read more

ಪಂಜು ಕಾವ್ಯಧಾರೆ

ಉತ್ತರ ದಶಶಿರನಹಂಕಾರ ಮುರಿದು ಮಣ್ಣಾಗುವ ಘಳಿಗೆಹೆಬ್ಬಾಣವ ಹೂಡಿ ರಾಘವನು ಹೂಂಕರಿಸಿದ ಪರಿಗೆಅಂತರಿಕ್ಷ ಈಗ ಅಕ್ಷರಶಃ ಸ್ತಬ್ಧಮಂಡೋದರಿಯ ಎದೆಯಲನಲ ಅಬ್ಬರಿಸಿ ದಗ್ದ… ಜನಕನಂಗಳದಲಿ ಏಕೋ ನರಳುತಿದೆ ಪಾರಿಜಾತನಡೆಯುವದ ನೆನೆಸಿ ನಡುಗಿದನೆ ಆ ಜಾತವೇದ?ಮೌನವಾಗಿದೆ ಅಂಬುಧಿ ಅಂಬುಗಳ ಒಳಗಿಳಿಸಿಮೂಡಣದ ಕಣ್ಣಂಚ ಹನಿ ಎದೆಯಾಳಕಿಳಿಸಿ…. ಅದೋ ಉರುಳಿದೆ ವಿಪ್ರ ಶ್ರೇಷ್ಠನ ಶೀರ್ಷಒಂದಲ್ಲ ಎರಡಲ್ಲ ಸರಿಯಾಗಿ ಹತ್ತುಹರಿತ ರಾಮನ ಶರಕೆ ಶರಣಾದ ರಾವಣನಇಪ್ಪತ್ತು ಕಣ್ಣುಗಳಲ್ಲೂ ಗತ್ತೋ ಗತ್ತು…. ಮೆಲ್ಲ ಮೆಲ್ಲನೆ ಅಡಿಯಿಟ್ಟು ಬಂದಳಾ ಸುಮಬಾಲೆಕಣ್ಣಲ್ಲಿ ನೂರಾರು ಹೊಂಗನಸ ಮಾಲೆನಗುಮುಖದ ಒಡೆಯ ಎದುರುಗೊಳ್ಳಲೆ ಇಲ್ಲತೋಳ್ತೆರೆದು … Read more

ಪಂಜು ಕಾವ್ಯಧಾರೆ

ನನ್ನವ್ವ ಬೆವರುತ್ತಾಳೆ. . . . . . ಕೆಂಡ ಕಾರುವರಣ ಭೀಕರ ಬಿಸಿಲನ್ನು ತಲೆಗೆ ಸುತ್ತಿಕೊಂಡುಮಾಸಿದ ಸೀರೆಯಜೋಳಿಗೆಯಲಿ ಬೆತ್ತಲೆ ಮಗುವ ಮಲಗಿಸಿಜಗದ ಹೊಟ್ಟೆ ತುಂಬಿಸಲೆಂದುಭತ್ತ ನಾಟಿ ಮಾಡುವಾಗನನ್ನವ್ವ ಬೆವರುತ್ತಾಳೆಮಂಜುನಾಥನ ಮಾತಾಡಿಸಲುಮಾರಿಕಾಂಬೆಯ ಮುಂದೆ ಸೆರಗೊಡ್ಡಲುಚಾಮುಂಡಿಯ ಕಾಲುಗಳಲಿ ಬಿಕ್ಕಳಿಸಲುಮಹಾನಗರದ ಗಗನಚುಂಬಿ ಕಟ್ಟಡದಬುಡದ ಸಂದಿಯಲಿಉಸಿರಾಡಲು ಕಷ್ಟ ಪಡುತಿರುವಕರುಳ ಬಳ್ಳಿಯ ಬೆನ್ನ ಸವರಲೆಂದುತಿರುಗಾಡುವಾಗನನ್ನವ್ವ ಬೆವರುತ್ತಾಳೆತುಂಡು ಬ್ರೆಡ್ಡುಅರ್ಧ ಕಪ್ಪು ಹಾಲು ಕೊಟ್ಟುಪತ್ರಿಕೆಯಲಿ ಫೋಟೋ ಹಾಕಿಸಿಕೊಳ್ಳುವತೆರಿಗೆಗಳ್ಳರ ದುಡ್ಡಿನಲಿ ಮಾಡುವಸಮಾನತೆಯ ಕಾರ್ಯಕ್ರಮದಊಟದ ಮನೆಯಲಿಕಸ ಹೊಡೆಯುವಾಗನನ್ನವ್ವ ಬೆವರುತ್ತಾಳೆಒಂಟಿ ಚಪ್ಪಲಿಯನ್ನು ಬೀದಿಯಲಿಬಿಸಾಕುವಂತೆಬಿಟ್ಟು ಹೋದವರಮನೆ ಮುರಿಯದೆಮೂಕ ಪರದೆಗಳಹಿಂದೆ ತುಟಿ ಕಚ್ಚಿ … Read more