ದಿಕ್ಕುಗಳು (ಭಾಗ 2): ಹಟ್ಟಿ ಸಾವಿತ್ರಿ ಪ್ರಭಾಕರಗೌಡ
ಅಷ್ಟೊತ್ತಿಗೆ ಹತ್ತಾರು ಜನರು ಸೇರಿ ಬಿಟ್ಟಿದ್ದರು. ಮಲಕಾಜಪ್ಪ ದೋತರ ಚುಂಗನ್ನು ಹಿಡಿದುಕೊಂಡು ಬೆವರುತ್ತಿದ್ದ ಅಂಗೈಯನ್ನು ಅಲ್ಲೇ ಒರೆಸಿಕೊಳ್ಳುತ್ತಾ, “ನೋಡ್ರಪ್ಪಾ ಸಾಲ ವಾಪಸ್ ಕೊಡ್ರಿ ಅಂದ್ರ ಈ ಹೆಣ್ಮಗಳು ಹಿಂಗ ಮಾಡೀದ್ಲು” ಎಂದನು. ಕೆಲವರು ಆತನ ಪರವಾಗಿ ಮಾತಾಡಿದರು. ತಿಮ್ಮಣ್ಣಜ್ಜ ಮತ್ತು ಉಳಿದ ಮೂರ್ನಾಲ್ಕು ಜನರು ಅನುಶ್ರೀ ಪರವಾಗಿ ಮಾತಾಡಿದರು. ಅನುಶ್ರೀ ಹೇಳಿದಳು, “ನೋಡ್ರಪಾ ನಾವು ಹೊಲ ಮರ್ಬೇಕಂತ ನಿರ್ಧಾರ ಮಾಡೀವಿ. ಚಾಲ್ತೀ ರೇಟಿಗೆ ಯಾವುದೂ ಕಿರಿಕಿರಿ ಮಾಡ್ದ ಕೊಂಡುಕೊಳ್ಳಾರಿದ್ರ ಮುಂದ ಬರ್ಬೋದು”. “ಹೌದೇನ್ಬೆ ತಂಗಿ” ಸೇರಿದ ಜನರಲ್ಲಿ … Read more