ದಾರಿ ಯಾವುದಯ್ಯ: ಅಂಬಿಕ ರಾವ್

ಪ್ರಯಾಣಕ್ಕೆ ಹೊರಟಾಗ ದಾರಿಯ ಬಗ್ಗೆ ಒಮ್ಮೊಮ್ಮೆ ಗೊಂದಲ ಉಂಟಾಗುತ್ತದೆ. ಆಗ ಸಾಮಾನ್ಯವಾಗಿ ವಾಹನ ನಿಲ್ಲಿಸಿ ಸ್ಥಳೀಯ ಜನರನ್ನು ಅಂಗಡಿಯವರನ್ನು “ ದಾರಿ ಯಾವುದು?” ಎಂದು ಕೇಳುತ್ತೇವೆ. ನಮ್ಮದೇ ನಾಡಾಗಿದ್ದಲ್ಲಿ ನಮ್ಮ ಭಾಷೆಯಲ್ಲಿ ದಾರಿಯನ್ನು ಹೇಳುತ್ತಾರೆ. ಬೇರೆ ಜಾಗಕ್ಕೆ ಹೋದಾಗ ಅವರ ಭಾಷೆಯನ್ನು ಹರುಕು ಮುರುಕಾಗಿ ಉಪಯೋಗಿಸಿ ಅದರೊಂದಿಗೆ ಸಂಗಮ ಭಾಷೆಯನ್ನು ಬಳಸಿ ಕೇಳಬೇಕು. ಅವರು ಹೇಳಿದ ಮಾತು ಅರ್ಥವಾದರೆ ಪುಣ್ಯ, ಇಲ್ಲದಿದ್ದರೆ ಬಂದ ದಿಕ್ಕಿಗೆ ವಾಪಸ್ ಹೋದರು ಹೋಗಬಹುದು!! . ದಾರಿ ತೋರಿಸುವವರನ್ನು ಹಲವಾರು ವಿಧಗಳಿವೆ; ನನ್ನ … Read more

ಅಯ್ಯ..!!: ಡಾ. ಮಂಜುನಾಥ

‘ಲೈ ಮಂಜಾ, ಬಾರ್ಲಾ ಇಲ್ಲಿ ! ‘ ಅಯ್ಯನ ಕೂಗು. ಆಗಷ್ಟೇ ಸ್ಕೂಲಿಂದ ಕುಪ್ಪಳಿಸಿಕೊಂಡು ಬಂದ ನನ್ನ ಕಿವಿ ತಲುಪಿತು. ಒಂದೇ ಉಸುರಿಗೆ ನಡ್ಲುಮನೆಯಲ್ಲಿದ್ದ ಮಂಚದ ಮ್ಯಾಕೆ ಬ್ಯಾಗು ಎಸೆದವನೇ ಅಯ್ಯನ ಹತ್ತಿರ ಓಡೋಡಿ ಹೋದೆ. ನನಗೆ ಗೊತ್ತಿತ್ತು ಅಯ್ಯನ ಹತ್ರ ಹೋದ್ರೆ ಏನಾದ್ರೂ ಸಿಗುತ್ತೆ ಎಂದು. ‘ ಏನಯ್ಯಾ? – ಹೋಗ್ಬುಟ್ಟು ಭೋಜಯ್ಯನ ಅಂಗಡೀಲಿ ಒಂದು ಕಟ್ಟು ನಾಟಿ ಬೀಡಿ ತಗಬಾ ! ಎಂದು ಕೈಗೆ ಒಂದು ರೂಪಾಯಿ ಕೊಡ್ತು. ಒಂದು ರೂಪಾಯಿ ನೋಡಿ ನಿರಾಶೆಯಾಯಿತು. … Read more

ಮೂರು ಕವನಗಳು

ಪ್ರಕೃತಿ ಸೌಂದರ್ಯ ಭೂರಮೆಯ ಅಂದ ಚಂದದ ನೋಟಸವಿಯುವ ಬನ್ನಿ ಪ್ರಕೃತಿಯ ರಸದೂಟಪ್ರಕೃತಿಗೆ ವಿಕೃತಿಯಾಗಿ ಮೆರೆಯ ಬೇಡವೋ ಮರ್ಕಟಸಂಭ್ರಮಿಸೋಣ ಬನ್ನಿ ಪ್ರಕೃತಿಯಔತಣ ಕೂಟ ಧರೆಗಿಳಿದು ಬಂದ ರಮಣಿಯಂತೆನಿನ್ನ ಅರಮನೆಯ ದೃಶ್ಯಕ್ಕೆ ನಾಶರಣಾದಂತೆನೀನು ಹಚ್ಚ ಹಸಿರಿನ ಸೀರೆ ಹುಟ್ಟಂತೆನನ್ನ ನಯನಗಳಿಗೆ ಹಿತವಾದಂತೆ ಬೆಟ್ಟ ಗುಡ್ಡಗಳಿಂದ ಇಳಿದು ಬರುವಜಲಧಾರೆಯ ರೌದ್ರ ನರ್ತನನೋಡುಗರ ಕಣ್ಣಿಗೆ ಸೌಂದರ್ಯದ ದರ್ಶನಪ್ರಾಣಿ ಪಕ್ಷಿಗಳ ವಾಸಸ್ಥಳ ಕಾನನಪ್ರಕೃತಿ ಮತ್ತು ಮಾನವನ ಮಿಲನ ಝರಿ ತೊರೆಗಳಿಂದ ಇಣುಕುವ ಜಲಧಾರೆನೋಡಲು ಹಂಬಲಿಸುತ್ತಿರುವೆನು ಮನಸಾರೆಇಡೀ ಜೀವಸಂಕುಲಕ್ಕೆ ನೀ ಆಸರೆಹಸಿರಿನ ಸೌಂದರ್ಯಕ್ಕೆ ತಲೆಬಾಗಿಸುರಿಯುವುದು ವರ್ಷಧಾರೆ … Read more

”ಹಕ್ಕು ಇದ್ರೆ ನಾವು ಬದುಕುತ್ತೇವಾ ಸಾರ್ ? ”: ನಾಗಸಿಂಹ ಜಿ ರಾವ್

ಒಂದು ವಾರದ ಹಿಂದೆ ಮನೆಗೆ ಬಂದಾಗ, ಎದುರಿನ ತೋಟದಲ್ಲಿ ಏನೋ ಕಾಣೆಯಾಗಿದೆ ಎಂದು ಅನಿಸಿತು. ಕುತೂಹಲವನ್ನು ತಡೆಯಲಾಗದೆ ತೋಟದೊಳಗೆ ನಡೆದು, ಸುತ್ತಲೂ ಕಣ್ಣಾಡಿಸಿದೆ. ಆ ಕ್ಷಣದಲ್ಲಿ ಹೃದಯವೇ ನಿಂತ ಅನುಭವ ಆಯಿತು —ನಮ್ಮ ಪ್ರೀತಿಯ ನಲ್ಲಿಕಾಯಿ ಮರದ ಒಂದು ಭಾಗವನ್ನು ಕತ್ತರಿಸಲಾಗಿತ್ತು. ತೆಂಗಿನ ಮರ ಹಾಗೂ ಹೊಂಗೆಯ ಮರದ ತೋಳಿನಡಿಯಲ್ಲಿ ಹನ್ನೆರಡು ವರ್ಷಗಳಿಂದ ಗಗನಕ್ಕೆ ಎದ್ದು ನಿಂತಿದ್ದ ಆ ಮರದ ಕೊಂಬೆಗಳು ಈಗ ಕಾಂಪೌಂಡ್‌ನಾಚೆಗಿನ ವಿದ್ಯುತ್ ತಂತಿಗೆ ತಾಗದಂತೆ “ಟ್ರಿಮ್” ಮಾಡಲ್ಪಟ್ಟಿದ್ದವು. ಆದರೆ, ಆ ಮರದ ಕತ್ತರಿಯ … Read more

ನೀರಿನ ಪೊಟ್ಟಣಗಳು: ಕೋಡಿಹಳ್ಳಿ ಮುರಳೀ ಮೋಹನ್

ತೆಲುಗು ಮೂಲ: ಗಡ್ಡಂ ದೇವೀ ಪ್ರಸಾದ್ಕನ್ನಡ ಅನುವಾದ: ಕೋಡಿಹಳ್ಳಿ ಮುರಳೀ ಮೋಹನ್ “ತಂಪಾದ ಕುಡಿಯುವ ನೀರು ಪ್ಯಾಕೆಟ್‌ಗಳು”, “ ಚಲ್ಲ ಚಲ್ಲನಿ ನೀಟಿ ಪೊಟ್ಲಾಲು””… ಬಸ್ಸಿನ ನಿಲ್ದಾಣಕ್ಕೆ ಬಂದು ನಿಂತ ದೂರದ ಊರಿನ ಬಸ್ಸಿನ ಸುತ್ತಲೂ ಎಡಗೈಯಲ್ಲಿ ಬಕೆಟ್ ಹಿಡಿದು, ಬಲಗೈಯಲ್ಲಿ ನೀರಿನ ಪ್ಯಾಕೆಟ್‌ಗಳನ್ನು ಮೇಲಕ್ಕೆತ್ತಿ ಹಿಡಿದುಕೊಂಡು ದಾಸಪ್ಪ ಕೂಗುತ್ತಿದ್ದ. ಅಷ್ಟರಲ್ಲಿ ಮತ್ತೊಂದು ಬಸ್ಸು ಬಂದರೆ, ತಕ್ಷಣ ಅದರೊಳಗೆ ಹೋಗಿ ಎರಡು ಭಾಷೆಗಳಲ್ಲಿ ಕೂಗುತ್ತಾ ಹತ್ತು ಪ್ಯಾಕೆಟ್‌ಗಳನ್ನು ಮಾರಿದ.ನೀರಿನ ಪ್ಯಾಕೆಟ್‌ಗಳನ್ನು ಬಕೆಟ್‌ನಲ್ಲಿ ಭತ್ತದ ಹೊಟ್ಟಿರುವ ಐಸ್ ದಿಮ್ಮಿಯ ಹತ್ತಿರ … Read more

ಮೈಸೂರು ಸ್ಯಾಂಡಲ್‌ ಸೋಪ್‌ ರಾಯಭಾರಿ: ಡಾ.ವೃಂದಾ. ಸಂಗಮ್‌

ಮೊನ್ನೆ ನಮ್‌ ಪದ್ದಕ್ಕಜ್ಜಿ ಮುಂಜಾನೆದ್ದು, ಧಡಾ ಭಡಾ ಧಡಾ ಭಡಾ ಮಾಡಲಿಕ್ಕೆ ಹತ್ತಿದ್ದರು. ನಮ್‌ ರಾಯರು ಹಾಸಿಗಿ ಮ್ಯಾಲ ಮಲಕೊಂಡವರು ಒಂಚೂರು ಚೂರೇ ಕಣ್ಣು ಬಿಟ್ಟು ಚಹಾ ಆಗೇದ ಎಳತೀರ್ಯಾ ಅನ್ನೂ ಶಬ್ದಕ್ಕ ಕಾಯತಿದ್ದರು. ಆದರ, ಈ ಬೆಳಕು ಕಣ್ಣು ಚುಚ್ಚಿದರೂ ಪದ್ದಕ್ಕಜ್ಜಿ ಧಡಾಭಡಾ ಮುಗೀಲಿಲ್ಲ. “ಹಂಗಾರ, ಚಹಾ ಇನ್ನೂ ತಡಾ ಅನೂ” ಅಂದರು. “ಇನ್ಯಾಕ, ತಡಾ, ನೀವು ಎದ್ದು, ಇಲ್ಲೆ, ವಾರ್ಡರೋಬ್‌ ಮ್ಯಾಲಿರೋ ಮೈಸೂರು ಪೇಟಾ ತಗದ ಕೊಟ್ಟರೆ, ಚಹಾ ಮಾಡೇಬಿಡತೀನಿ” ಅಂದರು. ರಾಯರಿಗೆ ಆಶ್ಚರ್ಯ, … Read more

“ಪುನರ್ಜನ್ಮದಂತೆ ಪುನರ್ವಸತಿ – ಸಂಗೀತಾಳ ಸಮರ್ಥ ಕಥೆ”: ರಶ್ಮಿ ಎಂ.ಟಿ.

ಸಂಗೀತಾ ಎಂಬ 16 ವರ್ಷದ ಅಂಗವಿಕಲ ಹೆಣ್ಣು ಮಗಳು, ಇವಳಿಗೆ ಪೋಲಿಯೋದಿಂದ ಒಂದು ಕಾಲಿಗೆ ತೊಂದರೆ ಆಗಿದ್ದು ಸರಾಗವಾಗಿ ನಡೆಯಲು ಬರುತ್ತಿರಲಿಲ್ಲ. ಇವಳು ಮೂಲತಃ ತಮಿಳುನಾಡಿನವಳು. 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ಓದಿದ್ದು, ಇವಳು 9ನೇ ತರಗತಿ ಓದುವಾಗ ಒಂದೇ ವರ್ಷದಲ್ಲಿ ಆರೋಗ್ಯದ ಸಮಸ್ಯೆಯಿಂದ ತಂದೆ-ತಾಯಿ ಇಬ್ಬರು ಮರಣ ಹೊಂದಿದರು. ಇವಳಿಗೆ ಮೂರು ಜನ ಅಕ್ಕಂದಿರು, ಎಲ್ಲರಿಗೂ ಮದುವೆಯಾಗಿದ್ದು, ಒಬ್ಬರು ತಮಿಳುನಾಡಿನಲ್ಲಿ, ಒಬ್ಬರು ಬೆಂಗಳೂರಿನಲ್ಲಿ ಹಾಗೂ ಒಬ್ಬ ಅಕ್ಕ ವಿದೇಶದಲ್ಲಿ ವಾಸವಾಗಿದ್ದಾರೆ. ಸಂಗೀತಾ 10ನೇ ತರಗತಿ ಪರೀಕ್ಷೆ … Read more

ಉಪದೇಶಿ ರಾಯಪ್ಪ ಮೆನೆಜಸ್: ಎಲ್.ಚಿನ್ನಪ್ಪ, ಬೆಂಗಳೂರು

೨೦ ವರ್ಷಗಳಷ್ಟು ಕಾಲ ಯಲಹಂಕ ಉಪನಗರದಲ್ಲಿ ನೆಲೆಸಿದ್ದ ನಾವು ೨೦೦೩ರಲ್ಲಿ ಯಲಹಂಕ ಉಪನಗರ ಬಿಟ್ಟು ಬಂದೆವು. ಅಲ್ಲಿ ಅತ್ಯಂತ ಆತ್ಮೀಯರಾಗಿದ್ದ ಮಾಜಿ ಉಪಪೇಶಿ ರಾಯಪ್ಪ ಮನೆಜಸ್‌ರವರು ಸುಮಾರು ೮-೧೦ ವರ್ಷಗಳ ಹಿಂದೆಯೇ ತೀರಿಕೊಂಡರೆಂಬ ಸುದ್ದಿ ಇತ್ತೀಚೆಗೆ ತಿಳಿದು ನನಗೆ ದುಃಖವಾಯಿತು. ದುಃಖ ಅಥವಾ ಸಂತೋಷದ ಸಂಗತಿ ತಿಳಿದಾಗ ಹಳೆಯ ನೆನಪುಗಳು ಜೀವ ತಾಳುತ್ತವೆ. ರಾಯಪ್ಪ ಮೆನೆಜಸ್ ಒಡನಾಟದ ಸುಮಾರು ೩೦-೩೫ ವರ್ಷಗಳಷ್ಟು ಹಳೆಯ ನೆನಪುಗಳು ನನ್ನಲ್ಲಿ ಪುನಃ ಗರಿಗೆದರಿದವು. ಉಪದೇಶಿ ರಾಯಪ್ಪ ಮೆನೆಜಸ್‌ರದು ಎತ್ತರದಲ್ಲಿ ಗಿಡ್ಡಗಿದ್ದರೂ, ದ್ವನಿಯಲ್ಲಿ … Read more

ಪಂಜು ಕಾವ್ಯಧಾರೆ

ಬೆವರಿಳಿಸೋ ಬಿಸಿಲು ಅಯ್ಯೋ….ಎಂಥಹ ಬಿಸಿಲು ಕಾಣಿ ಎನ್ನುವ ಮನುಜಮರೆತೇ ಬಿಟ್ಟ ತಾನು ಮಾಡಿದ ಕರ್ಮವಬೆಳಗೆದ್ದು ಅಂಗಳ ದಾಟಿದರೆ ಸಾಕುಸುರಿವುದು ಬೆವರಿನ ಧಾರಾಕಾರ ಮಳೆ. ಮೊಳಕೆಯೊಡೆದು ಬೆಳೆದ ಮರವ ಕಡಿದುಕಟ್ಟಿ ಬಿಟ್ಟ ಕಟ್ಟಡವ ಬೆವರ ಸುರಿದುಇಂದು ಕಟ್ಟಡದ ಕೆಳಗೆ ನಿಂತು ಅಂಬರವ ನೋಡಿಎನ್ನುವ ಅಯ್ಯೋ…ಎಂಥಹ ಬಿಸಿಲು ಕಾಣಿ. ಕಾನನ ಕಡಿದು ನೆಲಸಮಗೊಳಿಸಿಕಟ್ಟಿದ ಕಟ್ಟಡದಲೊಂದು ಗಿಡವನು ನೆಟ್ಟುಮರಗಳ ಕಡಿದು ತಂಪೆರೆವ ಗಾಳಿಯ ಕೆಡಿಸಿಪೊದೆ ಮರೆಯಲಿ ನಿಂತೆನ್ನುವ *ಅಯ್ಯೋ ಎಂಥಹ ಬಿಸಿಲು ಕಾಣಿ.. –ಹರ್ಷಿತ.ಎಸ್ ನನ್ನಯ ಮುದ್ದು ಕುಸುಮಗಳು ಶಾಲೆ ಪ್ರಾರಂಭವಾಗುತ್ತಿದೆ … Read more

ಹೊಸ ಪುಸ್ತಕ “ಮುರಿದ ಕಡಲು” ಕಾದಂಬರಿಯ ಆಯ್ದ ಭಾಗ: ಚಂದ್ರಶೇಖರ ಮದಭಾವಿ

ಅಕ್ಕಕಾಡಿನಲ್ಲಿ ಅಲೆದಾಡಿ ಎರಡು ದಿನಗಳಾದ ಮೇಲೆ ನಾನು ಹಳ್ಳಿಯನ್ನು ತಲುಪಿದಾಗ, ನನ್ನ ಇಡೀ ಕುಟುಂಬ ಬೆರಗಾಗಿತ್ತು. ಏಕೆಂದರೆ ಒಂದು ದಿನದ ಹಿಂದೆಯೇ ಯಾರೋ ಒಬ್ಬ ರೇಂಜರ್ ನನ್ನ ಶಾಲೆಯ ಚೀಲವನ್ನು ಅವರಿಗೆ ತಂದುಕೊಟ್ಟಿದ್ದ. ಅಂದಿನಿಂದ ನನ್ನ ಕುಟುಂಬದವರು ನನಗಾಗಿ ಕಾಯುತ್ತಿರಲಿಲ್ಲ, ನನ್ನ ಅಳಿದುಳಿದ ಶವಕ್ಕಾಗಿ ಕಾಯುತ್ತಿದ್ದರು. ಮೊದಲು ನನ್ನ ಅಪ್ಪ ಮುಂದೆ ಬಂದು ನನ್ನ ಕೆನ್ನೆಗೆ ಬಿರುಸಾಗಿ ಹೊಡೆದ. ನಾನು ಸ್ವಲ್ಪ ದೂರ ಹೋಗಿ ಬಿದ್ದೆನಾದರೂ ಮರುಕ್ಷಣವೇ ಮತ್ತೆ ಎದ್ದುನಿಂತೆ. ಸ್ವಲ್ಪವೂ ವಿಚಲಿತನಾಗದೆ, ಒಮ್ಮೆಯೂ ಕೆನ್ನೆಯನ್ನು ಸವರಿಕೊಳ್ಳದೆ … Read more

ನಗುತಿರುವ ನೆನೆಪು – ಸುನಿತಾಳ ಜೊತೆ ನಾಲ್ಕು ವರ್ಷ: ರಶ್ಮಿ ಎಂ. ಟಿ.

ನಾನು ಸಮುದಾಯ ಅಭಿವೃದ್ಧಿ ಕಾರ್ಯಕರ್ತಳಾಗಿ ಬೆಂಗಳೂರಿನ ಆರ್ಥಿಕವಾಗಿ ಹಿಂದುಳಿದ ಒಂದು ಸಮುದಾಯದಲ್ಲಿ ಅಂವಿಕಲರ ಜೊತೆ ಕೆಲಸ ಮಾಡುವಾಗ ಅಂಗವಿಕಲ ವ್ಯಕ್ತಿಯ ಕುಟುಂಬದ ಮೂಲಕ ಇನ್ನೊಂದು ಅಂಗವಿಕಲ ಕುಟುಂಬದ ಪರಿಚಯವಾಯಿತು ಇದೇ ಸುನಿತಾಳ ಕುಟುಂಬ. ಈ ಸಮುದಾಯದಲ್ಲಿ ಅಂಗವಿಕಲರನ್ನು ಗುರುತಿಸಲು ನನ್ನ ಸಹ ಸಿಬ್ಬಂದಿಗಳ ಜೊತೆ ಸೇರಿ ಮನೆ ಮನೆ ಸರ್ವೆ ಮಾಡಿದ್ದೆನು. ಆ ಸಮಯದಲ್ಲಿ ಸುನಿತಾಳ ಮನೆಗೂ ಹೋಗಿ ವಿಚಾರಿಸಿದ್ದೆವು ಆದರೆ ಮನೆಯಲ್ಲಿ ಅಂಗವಿಕಲತೆಯ ವ್ಯಕ್ತಿ ಇರುವ ಯಾವುದೇ ಸುಳಿವು ಸಿಗಲಿಲ್ಲ, ಮನೆಯವರೂ ಸಹ ಅಂಗವಿಕಲ ವ್ಯಕ್ತಿಯ … Read more

ಬೆಂಕಿ ಅವಘಡ: ಮಂಜುನಾಥ್ ಚಿನಕುಂಟಿ

ರೂಮಿಗೆ ತಲುಪಿದ್ದೆ ತಡವಾಯಿತು ಎಂದು ಮುಖ ತೊಳೆದುಕೊಳ್ಳದ್ದೆ ಸ್ವಚ್ಚಾಗಿರುವ ಮಂಚದ ಮೇಲೆ ತಲೆ ಇಟ್ಟಿದ್ದೆ ತಡ. ಗಾಢ ರಾತ್ರಿಯಲ್ಲಿ ಗಾಢ ನಿದ್ರೆಗೆ ಜಾರಿದ್ದೆ ತಿಳಿಯಲಿಲ್ಲ. ಕೊಂಚ ಸಮಯದ ಬಳಿಕ ರೂಮಿನ ಹೊರಗಡೆ ಯಾರೊ ಕಿರುಚುವ ಶಬ್ದಗಳು ಕಿವಿಗೆ ಬಡೆಯುತ್ತಿದ್ದರು ಕನಸೇ ಎಂಬಂತೆ ನಾನು ನನ್ನ ರೂಮಿನ ಇನ್ನೊಬ್ಬ ಸಹೋದ್ಯೋಗಿ ಗೊರಕೆ ಹೊಡಿಯುತ್ತ ಮಲಗಿದ್ದೆವು. ದಡ್ ದಡ್ ದಡ್ ದಡ್ ರೂಮಿನ ಹೊರಗಡೆ ಯಾರೊ ಬಾಗಿಲು ಬಡೆಯುವ ಶಬ್ದ ಕೇಳಿದರು ಕೇಳದಂತೆ ಕುಂಭಕರಣರಂತೆ ಮಲಗಿದ್ದೆವು. ರೂಮಿನ ಹೊರಗಡೆ ಮತ್ತಷ್ಟು … Read more

”ನಾಗಸಿಂಹ ಗುರುಗಳು”: ನಾಗಸಿಂಹ ಜಿ ರಾವ್

ಕೆಲವು ದಿನಗಳ ಹಿಂದೆ ಬೆಂಗಳೂರಿನ ಸಂಪಿಗಿರಾಮ ನಗರದ SCM ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಈ ಕೇಂದ್ರವು ಸ್ವಯಂ ಸೇವಾ ಸಂಸ್ಥೆಗಳಿಗೆ ಚಿರಪರಿಚಿತವಾದ ಸ್ಥಳವಾಗಿದ್ದು, ಇಲ್ಲಿ ತರಬೇತಿಗಳು, ಸಮಾಲೋಚನೆಗಳು, ಮತ್ತು ಸಮ್ಮೇಳನಗಳು ನಿರಂತರವಾಗಿ ನಡೆಯುತ್ತವೆ. ಆ ದಿನ ನಾನು ಒಂದು ಸ್ವಯಂ ಸೇವಾ ಸಂಸ್ಥೆಯ ಸದಸ್ಯರಿಗೆ ಮಕ್ಕಳ ರಕ್ಷಣಾ ನೀತಿಯ ಬಗ್ಗೆ ಮಾಹಿತಿ ನೀಡಲು ತೆರಳಿದ್ದೆ. ಅದೇ ವೇಳೆ ಅಲ್ಲಿ ಮತ್ತೊಂದು ಕಾರ್ಯಕ್ರಮವೂ ನಡೆಯುತ್ತಿತ್ತು—ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕ್ರಿಶ್ಚಿಯನ್ ಫಾದರ್‌ಗಳ ಸಮಾಲೋಚನೆ. ಊಟದ ಸಮಯದಲ್ಲಿ SCMನ … Read more

ಜಾತ್ಯಾತೀತ ಮನಸ್ಸಿನ ಹಂಬಲಿಕೆ ಮತ್ತು ಮಾನವೀಯ ತುಡಿತದ ಮೌಲಿಕ ಕಥೆಗಳು: ಎಂ. ಜವರಾಜ್

ಪ್ರಕಾಶ್ ಪುಟ್ಟಪ್ಪ “ಅವ್ವ ದುಡಿದು ಬಂದು ರಾತ್ರಿ ರಾಗಿ ಬೀಸುವಾಗ ತನ್ನ ಮಡಿಲಲ್ಲಿ ಮಲಗಿಸಿಕೊಂಡು ಹೇಳುತ್ತಿದ್ದ ಕಾಲ್ಪನಿಕ ಕಥೆಗಳು, ಗೌರಜ್ಜಿ ರಾತ್ರಿ ಹೊತ್ತು ಬೀದಿಯಲ್ಲಿ ವಠಾರದ ಮಕ್ಕಳನ್ನೆಲ್ಲ ಮಲಗಿಸಿಕೊಂಡು ಹೇಳುತ್ತಿದ್ದ ಕಥೆಗಳು ನಮ್ಮ ಬಾಲ್ಯವನ್ನು ಸಮೃದ್ಧವಾಗಿಸಿದ್ದವು” ಎಂದು ಹೇಳುವುದರಲ್ಲಿ ಅವರ ಕಥೆಗಳ ರಚನೆಯ ಹಿನ್ನೆಲೆ ಇದೆ. ಹಾಗೆ “ಬರಹ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತದೊ ಇಲ್ಲವೊ ಗೊತ್ತಿಲ್ಲ ಆದರೆ ನನ್ನನ್ನು ಸೆಳೆದುಕೊಂಡದ್ದು ಮಾತ್ರ ಒಂದು ಸೋಜಿಗ” ಎಂದು ಬರಹಗಾರನಾಗಿ ತೊಡಗಿಸಿಕೊಂಡ ‘ಆಕಸ್ಮಿಕ’ ಅಂಶದ ಬಗ್ಗೆ ತಮ್ಮ ಬರಹಗಳ ಓದುಗನಿಗೆ … Read more

ಪಂಜು ಕಾವ್ಯಧಾರೆ

ಸೂಂಕತ್ತಿ ಹೂವುಗಳು ಕೆಂಪಗೆ ಮೈಯರಳಿ ನಿಂತವು ರಸ್ತೆಯ ಬದಿಗೆನನಗಿಂತ ಸುಂದರಿ ಯಾರೆಂದವು ಸುಮ್ಮಗೆ ಚೆಲುವೆಲ್ಲ ನಂದೆ ಎಂದವು ನಾಚಿ ನೀರಾದಂತೆಲಜ್ಜೆಯ ಬಿಂಕ ದಿಬ್ಬಣವೇರಿ ಕುಣಿದಂತೆ ಮಳೆಯ ಕಾಸರದ ಮುಂಗಾರಿನ ಆಗಮನಕೆಚಿತ್ತಾಕರ್ಷಕ ಹಸಿರು ಭೂರಮೆಯ ಸಿಂಗಾರಕೆ ಗುಲ್ ಮೊಹರೆಯೊತ್ತಿ ಅಗಸದ ಡಿಂಬಿಗೆ ಅರಳಿಕೊನಕೊನರಿ ಪುತ್ಕರಿಸಿ ಕೆಂಪು ಗೋಣು ಚೆಲ್ಲಿ ಕ್ರಾಂತಿಯೊ ಶಾಂತಿಯೊ ನಾನಿರುವುದೆ ಹೀಗೆ ಕೆಂಪಗೆಹಸಿರು ಮರದೊಳಗೆ ಕಾಯಿ ಹೂವಾಗಿ ಅರಳಿದೆಕೆಂಪಗೆ ಕಾಡ ಹಾದಿಯ ಹೂವಾದರೂ ನಾನು ಸೊಗಸೆ ಸೊಗಸುಸೊಗಯಿಸುವ ಹೂವೆ ಆದರೂ ಎಲ್ಲರ ಕಾಂಬ ಕಣ್ಣು ಎಲ್ಲರೆದೆಯ … Read more

ಖಾಸಗಿ ಕಂಪನಿಗಳ ಗೋಳು: ಮಂಜುನಾಥ್. ಚಿನಕುಂಟಿ

ಮಿಡಲ್ ಕ್ಲಾಸ್ ಕುಟುಂಬದ ಹುಡುಗರು ಅಥವಾ ಹುಡುಗಿಯರ ಬದುಕು ಹೊಂದಾಣಿಕೆಯೊಂದಿಗೆಯೇ ಸರಿದೂಗಿಸುವ ಪರಿಸ್ಥಿತಿಗೆ ಬಂದು ನಿಂತಿದೆ. ಅದೂ ಸಂಸಾರ, ಜೀವನವೆಂಬ ಪಾಠದಲ್ಲಲ್ಲ ಕೆಲಸ ಎನ್ನುವ ದುಡಿಮೆಯಲ್ಲಿ. ಈ ಮಿಡಲ್ ಕ್ಲಾಸ್ ಕುಟುಂಬದ ತಂದೆ ತಾಯಿಯ ಆಲೋಚನೆಗಳು ಎಲ್ಲಿಗೆ ಸೀಮಿತವಾಗಿರುತ್ತವೆ ಎಂದರೆ, ನನ್ನ ಮಕ್ಕಳಿಗೆ ಒಂದೊಳ್ಳೆ ಶಿಕ್ಷಣ ಕೊಡಿಸಿದ್ದೇನೆ ಯಾವುದೋ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕರೆ ಸಾಕು ತಿಂಗಳಿಗೆ ಮನೆಗೆ ಹಾಗೂ ಸಾಲಕ್ಕೆ ತೀರಿಸುವ ಮೊತ್ತ ಕಳುಹಿಸಿದರೆ ಸಾಕು ಜೀವನವೆಂಬದುನ್ನು ಸಾಯುವವರೆಗೂ ಸರಿದೂಗಿಸಕೊಂಡು ಹೋಗಬಹುದು ಎಂಬ ನಂಬಿಕೆ. ಅದು … Read more

ಕಥಾ ಜಗತ್ತಿನ ಸುಂದರ ಲೋಕ ‘ತಿತ್ತಿಬ್ವಾಸನ ಟೈಟಾನ್ ವಾಚು’: ಶಿವಕುಮಾರ ಸರಗೂರು

ಕಥಾ ಪ್ರಪಂಚದಲ್ಲಿ ಪಂಜೆ ಮಂಗೇಶರಾಯರು ಕನ್ನಡಕ್ಕೆ ನೀಡಿದ ಕಾಣ್ಕೆ ಅತ್ಯಮೂಲ್ಯವಾದದು. ತದನಂತರದ ಕಾಲದಲ್ಲಿ ಸಣ್ಣಕಥೆಗಳ ಜನಕರೆಂದೇ ಹೆಸರಾದ ಮಾಸ್ತಿ ಅವರು ಸಣ್ಣಕಥೆಯನ್ನು ತಮ್ಮ ಬರವಣಿಗೆಯ ಮುಖ್ಯ ಮಾಧ್ಯಮವನ್ನಾಗಿ ಬಳಸಿದರು ಮಾತ್ರವಲ್ಲ ಬೆಳೆಸಿದರು. ಚಾಮರಾಜನಗರ ಪರಿಸರವು ಕಥಾ ಜಗತ್ತಿಗೆ ತೆರೆದುಕೊಳ್ಳಲು ಹವಣಿಸುತ್ತಿರುವ ಈ ಕಾಲದಲ್ಲಿ ಕೊಳ್ಳೇಗಾಲದ ಸೂಕ್ಷ್ಮ ಸಂವೇದನಾಶೀಲ ಬರಹಗಾರರಾದ ದಿಲೀಪ್ ಎನ್ಕೆ ಅವರ ನಾಲ್ಕನೇ ಪುಸ್ತಕ ತಿತ್ತಿಬ್ವಾಸನ ಟೈಟಾನ್ ವಾಚು ಹೊರ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಒಂಬತ್ತು ಕಥೆಗಳಲ್ಲಿ ಹರಡಿಕೊಂಡಿರುವ ಈ ಸಂಕಲನವು ಭಾಷೆ, ವಸ್ತು, ತಂತ್ರ … Read more

ಸುನಿಲ್ ಅಗಡಿ ಫೋಟೋಗ್ರಫಿ

ಸುನಿಲ್ ಅಗಡಿ ವೃತ್ತಿಯಿಂದ ಮೆಕ್ಯಾನಿಕಲ್ ಅಭಿಯಂತರರು. ಕವಿಗಳ ತವರು ಎಂದು ಕರೆಸಿಕೊಳ್ಳುವ ” ಧಾರವಾಡ ” ಇವರ ಸ್ವಂತ ಊರು. ಕವನಗಳ ಬರೆಯುವುದು ಬಿಡುವಿನ ಸಮಯದ ಹವ್ಯಾಸ ಹಾಗು ವನ್ಯಜೀವಿಗಳು ಹಾಗೂ ಪಕ್ಷಿಗಳ ಚಟುವಟಿಕೆಗಳನ್ನು ಕ್ಯಾಮರಾ ಕಣ್ಣಿನಿಂದ ಸೆರೆಹಿಡಿಯುವುದು ಇವರ ಮತ್ತೊಂದು ಹವ್ಯಾಸವಾಗಿದೆ. Instagram profile : agadis_wild_world Facebook page : Panorama – Agadi Brothers Photography

ವಿಜ್ಞಾನ ಭವನದಲ್ಲಿ ಮಕ್ಕಳ ಹಕ್ಕುಗಳ ಭಾಷಣ : ಒಂದು ಜೀವನ ಪಾಠ: ನಾಗಸಿಂಹ ಜಿ ರಾವ್

2011ರಲ್ಲಿ ದೆಹಲಿಯ ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ (NIPCCD) ಆಯೋಜಿಸಿದ್ದ ಒಂದು ತಿಂಗಳತರಬೇತಿಯಲ್ಲಿಭಾಗವಹಿಸಿದ್ದೆ. NIPCCD ನಮ್ಮ ದೇಶದ ಒಂದು ಪ್ರಮುಖ ಸಂಸ್ಥೆಯಾಗಿದ್ದು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ತರಬೇತಿ, ಸಂಶೋಧನೆ, ಮತ್ತು ನೀತಿ ರೂಪಿಸುವಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದು ಮಕ್ಕಳ ಹಕ್ಕುಗಳು, ಶಿಕ್ಷಣ, ಆರೋಗ್ಯ, ಮತ್ತು ರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಕಲ್ಯಾಣವನ್ನು ಪ್ರೋತ್ಸಹಿಸುವುದಲ್ಲದೆ ಸರ್ಕಾರೀ ಅಧಿಕಾರಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರಿಗೆ ನಿರಂತರವಾಗಿ ತರಬೇತಿಗಳನ್ನು ಆಯೋಜನೆ ಮಾಡುತ್ತಿರುತ್ತದೆ. ನಾನು … Read more