ಕಾಂತಾರದ ಭೂತ ಬಿಡಿಸಿದ ʼ ಸು ಫ್ರಂ ಸೋʼ: ಎಂ ನಾಗರಾಜ ಶೆಟ್ಟಿ

ಎಂತಾ ಮಳೆ ಅಂದ್ರೆ ಮನೆಯೊಳಗೆ ಕುಳಿತುಕೊಳ್ಳುವುದಕ್ಕೆ ಆಗುವುದೇ ಇಲ್ಲ. ಹೊರಗೆ ಹೋದರೆ ಸುಟ್ಟು ಹೋದ ಹಾಗೆ ಆಗುತ್ತದೆ, ಒಂದು ಸಲ ಮಳೆ ಬಂದರೆ ಸಾಕಾಗಿದೆ ಎಂದು ಹೇಳುತ್ತಿದ್ದ ಕರಾವಳಿಯವರು ಮೇ ತಿಂಗಳ ನಂತರ ಬಿಡದೆ ಸುರಿಯುತ್ತಿರುವ ಮಳೆಗೆ ಇಷ್ಟು ವರ್ಷದಿಂದ ಇಂತಹ ಮಳೆ ನೋಡೇ ಇಲ್ಲ ಎಂದು ಹೇಳುತ್ತಿದ್ದಾರೆ. ಕನ್ನಡ ಚಿತ್ರರಂಗದ ಸ್ಥಿತಿಯೂ ಹೆಚ್ಚು ಕಮ್ಮಿ ಹೀಗೇ ಆಗಿತ್ತು. ಒಂದೆರಡು ಕಪ್ಪು ಮೋಡಗಳು ಕಾಣಿಸಿಕೊಂಡು ಮರೆಯಾಗುವಂತೆ ಹೊಸ ಚಿತ್ರಗಳಿಗೆ ಜನ ಬರುತ್ತಾರೆ ಎನ್ನುವಾಗಲೇ ಸಿನಿಮಾ ಚಿತ್ರಮಂದಿರಗಳಿಂದ ಹೊರಟು … Read more

ಬುದ್ಧನ ಕಥೆಯಲ್ಲಿ ‘ಸ್ತ್ರೀ’: ಡಾ. ಎಚ್.ಎಸ್. ಸತ್ಯನಾರಾಯಣ

ಮನುಕುಲದ ಮಹಾವ್ಯಕ್ತಿಗಳಲ್ಲಿ ಗೌತಮಬುದ್ಧನ ಸ್ಥಾನ ಅತ್ಯಂತ ಎತ್ತರದ್ದು, ಹಿರಿದಾದುದು. ಅವನ ಉನ್ನತ ವ್ಯಕ್ತಿತ್ವವು ಯಾವ ಹಂತಕ್ಕೇರಿದೆಯೆಂದರೆ ಆತ ಅವತಾರ ಪುರುಷನೆಂದು ಬಲವಾಗಿ ನಂಬುವಷ್ಟರಮಟ್ಟಿಗೆ! ಈಗಲೂ ಅನೇಕರಲ್ಲಿ ದಶಾವತಾರಗಳಲ್ಲಿ ಬುದ್ಧಾವತಾರವೂ ಒಂದೆಂಬ ನಂಬುಗೆ ಬಲವಾಗಿ ನೆಲೆಯೂರಿದೆ. ಆದರೂ ಬುದ್ಧನನ್ನು ಒಳಗೊಂಡು ರಚಿತವಾದ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ತೀರಾ ಕಡಿಮೆ. ಲೆಕ್ಕಮಾಡಿದರೆ ಸುಮಾರು ಮುವತ್ತೈದು ಪ್ರಕಟಣೆಗಳ ಶೀರ್ಷಿಕೆಯನ್ನು ಪಟ್ಟಿ ಮಾಡಬಹುದೇ ಹೊರತು ಓದುಗರ ನೆನಪಿನಲ್ಲುಳಿಯುವ ಗಟ್ಟಿ ಕೃತಿಗಳು ಕೆಲವು ಮಾತ್ರ! ಅದರಲ್ಲಿಯೂ ಬುದ್ಧನಿಗೆ ಸಂಬಂಧಿಸಿದ ವೈಚಾರಿಕ ಕೃತಿಗಳೂ, ಅನುವಾದಗಳೂ ಪಾಲು … Read more

“ಝೂನೋಟಿಕ್ (ಪ್ರಾಣಿಜನ್ಯ) ರೋಗಗಳು”: ಡಾ. ವೀಣಾಕುಮಾರಿ ಎ. ಎನ್.‌,

ಝೂನೋಟಿಕ್ (ಪ್ರಾಣಿಜನ್ಯ) ರೋಗಗಳು ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಪರಸ್ಪರ ಹರಡುವ ರೋಗಗಳಾಗಿವೆ. ʼಝುನೋಸಿಸ್ʼ ಎಂಬ ಪದವು ರುಡಾಲ್ಫ್ ವಿರ್ಚೊ (Rudolph Virchow) ಎಂಬಾತನಿಂದ 1880ರಲ್ಲಿ ಪರಿಚಯಿಸಲ್ಪಟ್ಟಿದೆ. ʼಝೂನೋಸಿಸ್ʼ ಎಂಬ ಪದವು ಮೂಲತಃ ಗ್ರೀಕ್ ಭಾಷೆಯ ಪದವಾಗಿದ್ದು, ʼಝೂನೋʼ ಎಂದರೆ ʼಪ್ರಾಣಿʼ ಹಾಗೂ ʼನೊಸೆಸ್ʼ ಎಂದರೆ ʼಅನಾರೋಗ್ಯʼ ಎಂದರ್ಥ. ಇವುಗಳು ವೈರಸ್ ಗಳು (ರೇಬೀಸ್‌, ಆರ್ಬೋವೈರಸ್‌ ಸೋಂಕುಗಳು, ಕ್ಯಾಸನೂರ್‌ ಫಾರಸ್ಟ್‌ ಡಿಸೀಸ್/ಮಂಗನ ಕಾಯಿಲೆ, ಹಳದಿ ಜ್ವರ, ಇನ್ ಫ್ಲುಯೆಂಜಾ), ಬ್ಯಾಕ್ಟೀರಿಯಾಗಳು (ಉದಾಹರಣೆ: ಆಂಥ್ರಾಕ್ಸ್‌, ಬ್ರುಸೆಲ್ಲೋಸಿಸ್‌, ಪ್ಮೇಗ್‌, ಲೆಪ್ಟೋಸ್ಪೈರೋಸಿಸ್‌, … Read more

ಅಣ್ಣ-ತಂಗಿ: ಸಿದ್ಧರಾಮ ಹಿಪ್ಪರಗಿ (ಸಿಹಿ), ಧಾರವಾಡ.

ರಂಗಭೂಮಿಯ ವೈಭವದ ದಿನಗಳ ಅಂದಿನ ಕಾಲದ ದೀಮಂತರ ಕುರಿತಾದ ಭಾಷಣ ಕೇಳಿ ಹೊರ ಬಂದ ಸುಮಾ ಮತ್ತು ಸೂರಜ ತೀವ್ರ ಭಾವುಕರಾಗಿದ್ದರು. ತನ್ನಜ್ಜಿಯ ಕಂಪನಿಯ ಕುರಿತು ಸವಿಸ್ತಾರವಾಗಿ ವಿವರಿಸಿದ್ದ ಅಧ್ಯಯನಶೀಲ ಅನಾಮಿಕ ಭಾಷಣಕಾರರ ಮಾತುಗಳಿಂದ ಉಬ್ಬಿಹೋಗಿದ್ದ ಸುಮಾಳಿಗೆ ಏನೋ ಹೇಳಿಕೊಳ್ಳಬೇಕೆಂಬ ಉಮೇದು. “ಆ ಉಮೇದಿಗೆ ಉತ್ತರವಾಗಿ ಸ್ಪಂಧಿಸುವವನೆಂದರೆ ಕ್ಲಾಸ್‌ಮೇಟ್‌ ಸೂರಜ್‌ ಮಾತ್ರ!” ಎಂದು ಮನದಲ್ಲಿಯೇ ಯೋಚಿಸುತ್ತಾ ಸೂರಜನೆಡೆಗೆ ನೋಡಿದಳು. “ಲೇಟಾದರೆ ಪಿಜಿಯಲ್ಲಿ ಊಟ ಸಿಗೋಲ್ಲಾ, ನಾನು ಬರಲಾ ಸುಮಾ?” ಎಂದು ತನ್ನ ಇಲೆಕ್ಟ್ರಿಕ್‌ ಸ್ಕೂಟಿ ಸ್ಟಾರ್ಟ ಮಾಡಲು … Read more

ಬಾ ಬಾ ಓ ಬೆಳಕೇ…..: ಚಂದಕಚರ್ಲ ರಮೇಶ ಬಾಬು

ಚರಿತ್ರೆ ಪುನರಾವೃತಗೊಳ್ಳುತ್ತದೆಂದು ಓದಿ ತಿಳಿದಿದ್ದರೂ, ಹೇಳಿದವರಿಂದ ಕೇಳಿದ್ದರೂ ಅದು ಇಷ್ಟುಬೇಗ ತನ್ನ ಆವರಿಸುತ್ತದೆ ಎಂದು ಮತ್ತು ಅದರ ಮಿಕ ತಾನಾಗಬೇಕಾಗುತ್ತದೆ ಎನ್ನುವ ಸತ್ಯ ಜಯತೀರ್ಥನಿಗೆ ಕಹಿಯೂಟವಾಗಿತ್ತು.ಮೊನ್ನೆ ವರೆಗೂ ತನ್ನ ಸಂಪತ್ತೇನು, ಮೆರೆದಾಟವೇನು, ಕಂಡ ಕನಸುಗಳೇನು ? ಒಂದೇ ಎರಡೇ? ಜೀವನವಿಡೀ ಕಾಮನಬಿಲ್ಲಿನ ಕನಸಿನಲ್ಲೇ ಕಳೆದುಹೋಗುತ್ತದೆ ಎಂದೆಣಿಸಿ, ಸೊಕ್ಕಿನಲ್ಲಿ ಮುಕ್ಕುತ್ತಿದ್ದ ಅವನಿಗೆ ಆರ್ಥಿಕ ಮುಗ್ಗಟ್ಟು ಲಕ್ವದ ತರ ಬಂದೆರಗಿತ್ತು. ಇಂಥ ಮುಗ್ಗಟ್ಟು ಶುರುವಾಗಿ ಒಂದು ವರ್ಷವಾಗಿದ್ದರೂ ಅವನು ಮತ್ತು ಅವನ ಹೆಂಡತಿ ಅದಕ್ಕೆ ಹೊರತಾಗೇ ಉಳಿದಿದ್ದರು. ಶುರುವಾದ ವರ್ಷಗಳಲ್ಲಿ … Read more

ಅನಿರೀಕ್ಷಿತ ಬದಲಾವಣೆಗಳ ಬೆನ್ನು ಏರಿ..: ವಿಜಯ್ ಕುಮಾರ್ ಕೆ. ಎಂ.

ಬದಲಾವಣೆಗಳು ಅನಿರೀಕ್ಷಿತ, ಇನ್ನಷ್ಟು ಬದಲಾವಣೆಗಳು ನಿರೀಕ್ಷಿತ. ಅನಿರೀಕ್ಷಿತವಾಗಿ ಉಂಟಾಗುವ ಬದಲಾವಣೆಗಳಲ್ಲಿ ಹೆಚ್ಚು ದೀರ್ಘಾವಧಿ ಆಯಸ್ಸು ಬಯಸಲು ಕಷ್ಟವಾಗಬಹುದು ಆದರೆ ನಿರೀಕ್ಷಿತ ಬದಲಾವಣೆಗೆ ಒಂದಷ್ಟು ಆಯಸ್ಸು ಹೆಚ್ಚು ಇರುತ್ತದೆ. ರಾತ್ರೋರಾತ್ರಿ ಸಿಕ್ಕ ಲಾಟರಿಯ ಜಯ, ತಾನು ಕಂಡು ಕೇಳರಿಯದಷ್ಟು ಸಿಕ್ಕ ಹಣ ಮತ್ತು ಒಡವೆ, ನಿರೀಕ್ಷೆಯಿಲ್ಲದೆ ದೊರೆತ ಗೆಲುವು, ಬಯಸದೆ ಸಿಕ್ಕ ಮೆಚ್ಚುಗೆ ಇದೆಲ್ಲವೂ ಮನಸ್ಸಿನಲ್ಲಿ ಇನ್ನಿಲ್ಲದ ಸಂತೋಷ ನೀಡಿತಾದರೂ ಅದರ ಹಿಂದೆ ಬರುವ ಒಂದಷ್ಟು ಜವಾಬ್ದಾರಿ, ಪ್ರಾಮಾಣಿಕತೆ, ನಿರಂತರ ಪರಿಶ್ರಮ ಇದೆಲ್ಲವೂ ಬಹು ಮುಖ್ಯವಾಗುವುದರಲ್ಲಿ ಸಂಶಯವಿಲ್ಲ. ಪ್ರೌಢಾವಸ್ಥೆಗೆ … Read more

ಅಂಕ ಪ್ರಯಾಣ: ನಾಗಸಿಂಹ ಜಿ ರಾವ್

ಸಿಂಹಾವಲೋಕನ 3 “ಪುಲಪೇಡಿ” ಎಂಬ ಸಮುದಾಯ ತಂಡದ ನಾಟಕದಲ್ಲಿ ಭಾಗವಹಿಸಿದ ನಂತರ, ನನ್ನ ಶಾರದಾವಿಲಾಸ ಕಾಲೇಜಿನ ಸಹಪಾಠಿಗಳು ಮತ್ತು ಅಧ್ಯಾಪಕರೆಲ್ಲರೂ ನನ್ನನ್ನು ಗುರುತಿಸತೊಡಗಿದರು. “ಮುಂದಿನ ನಾಟಕ ಯಾವಾಗ?” ಎಂಬ ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು. ಆದರೆ, ಆ ಪ್ರಶ್ನೆಗೆ ಉತ್ತರವೇ ನನಗೆ ತಿಳಿದಿರಲಿಲ್ಲ. ಒಂದು ದಿನ ಕಾಲೇಜ್ ಮುಗಿಸಿಕೊಂಡು ಮನೆಗೆ ಹೋಗುವಾಗ, ಚಾಮುಂಡಿಪುರಂ ವೃತ್ತದಲ್ಲಿ ಪಾಪು ಎದುರಾದರು. “ಏನ್ರಿ, ಹೇಗಿದ್ದೀರಾ? ನಾಟಕ ಮಾಡ್ತೀರಾ?” ಎಂದು ಕೇಳಿದರು. “ಹೂ, ಮಾಡ್ತೀನಿ, ” ಎಂದೆ. “‘ಬೆಲೆ ಇಳಿದಿದೆ’ ಎಂಬ ಬೀದಿನಾಟಕದ ರಿಹರ್ಸಲ್ … Read more

ಸೆರೆಮನೆರಹಿತ ಕೈದಿ: ಎಲ್.ಚಿನ್ನಪ್ಪ, ಬೆಂಗಳೂರು.

“ನನ್ನ ಮಗ ಎಷ್ಟೇ ಕೆಟ್ಟವನಾಗಿದ್ದರೂ ನಮ್ಮೊಡಲಿನ ರಕ್ತವನ್ನು ಹಂಚಿಕೊಂಡು ಧರೆಗೆ ಬಂದವನಲ್ಲವೆ? ನಮ್ಮ ಕರುಳ ಕುಡಿಯೇ ಅಲ್ಲವೆ? ತನ್ನ ತಾಯಿಯ ತದ್ರೂಪವನ್ನೇ ಹೊತ್ತು ಬಂದಿರುವ ಅವನ ಮುಖದಲ್ಲಿ ನನ್ನ ಪತ್ನಿಯ ಪ್ರತಿಬಿಂಬ ಕಾಣುತ್ತಿದ್ದೇನೆ” ಎಂದಿನಂತೆ ಕಛೇರಿ ಕೆಲಸ ಮುಗಿಸಿಕೊಂಡು ಅಂದು ಸಂಜೆ ಮನೆಗೆ ಮರಳಿದೆ. ಬೀಗ ಹಾಕಿದ್ದ ನನ್ನ ಮನೆಯ ಬಾಗಿಲ ಬಳಿ ಆ ವೃದ್ಧರು ಕಾದು ಕುಳಿತ್ತಿದ್ದರು. ನಾನೊಬ್ಬ ಸರಕಾರಿ ನೌಕರ, ಇಲ್ಲಿಗೆ ಬಡ್ತಿಯ ಮೇಲೆ ವರ್ಗವಾಗಿ ಬಂದು ಆರು ತಿಂಗಳಾಗಿವೆ. ನನ್ನ ಸ್ವಂತ ಸ್ಥಳವು … Read more

”ಕತ್ತಲ ಜಾಲ”(ಸೈಬರ್‌ ರಕ್ಷಣೆ ಕುರಿತಾದ ನಾಟಕ): ನಾಗಸಿಂಹ ಜಿ ರಾವ್

”ಕತ್ತಲ ಜಾಲ”(ಸೈಬರ್‌ ರಕ್ಷಣೆ ಕುರಿತಾದ ನಾಟಕ)ರಚನೆ: ನಾಗಸಿಂಹ ಜಿ ರಾವ್ಪಾತ್ರಗಳು: ಫೇಸ್ ಬುಕ್ಇನ್ಸಾಟಾಗ್ರಾಂವಾಟ್ಸ್ಆಪ್ಬಾಲಕಿ / ಬಾಲಕ (ಈ ನಾಟಕವನ್ನು ಬೀದಿನಾಟಕ, ರಂಗನಾಟಕ ಹಾಗೂ ಆತ್ಮೀಯ ರಂಗಭೂಮಿಯಲ್ಲೂ ಪ್ರದರ್ಶಿಸಬಹುದು) (ದೃಶ್ಯ ೧)ಹಾಡು:ಕತ್ತಲ ಜಾಲ ಇದುಕತ್ತಲ ಜಾಲಅಪಾಯತರುವಆಂತರ್ಜಾಲವಿಷದ ಹಾವಿನ ಮೋಹಕ ಬಾಲಗೋಮುಖ ವ್ಯಾಘ್ರನ ಬಣ್ಣದಜಾಲ ಕಾಮುಕ ಹರಡಿದ ಸುಂದರ ಬಲೆಲೈಕು ಕಾಮೆಂಟಿಗೆಆದರೆ ಮರುಳುಮುಗಿದೇ ಹೋಯಿತು ಬಾಲ್ಯದ ಕೊಲೆದೂರವಿರುಅದು ವಿಷದ ಹುಳು ಉತ್ತಮರೀತಿಯಲಿ ಬಳಸೋ ಜಾಣನೆನಪಿಡುಅದು ಸಾಮಾಜಿಕಜಾಲತಾಣಮರುಳಾಗದಿರು ಬಣ್ಣದ ಮಾತಿಗೆಅತಿ ಬಳಕೆ ಒಳ್ಳೆಯದಲ್ಲ ಬದುಕಿಗೆ ಕತ್ತಲ ಜಾಲ ಇದುಕತ್ತಲ ಜಾಲಅಪಾಯತರುವಆಂತರ್ಜಾಲವಿಷದ ಹಾವಿನ … Read more

ದಿಕ್ಕುಗಳು (ಭಾಗ 4): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಆ ಹಿರಿಯ ಮನುಷ್ಯ ವೆಂಕಟರಮಣರಾವ್ ತೋರಿಸಿದ ಮನೆ, ಶಿವಪ್ಪ ಮತ್ತು ಆತನ ಮಗಳಿಗೆ ಇಷ್ಟವಾಯಿತು. ಒಂದು ಕೋಲಿ, ನಡುಮನೆ, ಅಡುಗೆಮನೆ ಅಚ್ಚುಕಟ್ಟಾಗಿದ್ದವು. ಸುತ್ತಲೂ ಪೌಳಿ ಇತ್ತು. ಆ ಆವಾರದಲ್ಲಿ ಬಚ್ಚಲುಮನೆ ಮತ್ತು ಪಾಯಖಾನೆ ಇದ್ದವು. ನೀರಿಗೂ ಕೊರತೆ ಇರಲಿಲ್ಲ. ಆವಾರದಲ್ಲಿಯೇ ನೀರಿನ ನಳವನ್ನು ಹೊಂದಿಸಲಾಗಿತ್ತು. ಅನುಶ್ರೀ ಅಂತೂ, “ಇಲ್ಲೇ ಇದ್ದು ಬಿಡೂದು ಚೊಲೊ ನೋಡಪ್ಪಾ” ಎಂದಳು. ಅಮಾಯಕ ಜನ ಮತ್ತು ಇನ್ನೂ ಕೆಲಸ ಹುಡುಕಿಕೊಂಡಿಲ್ಲವೆಂಬುದನ್ನು ತಿಳಿದ ಮುನಿಶಿವರಾಜುವಿಗೆ ಶಿವಪ್ಪನ ಮೇಲೆ ಕನಿಕರ ಹುಟ್ಟಿತ್ತು. ಮುಂಗಡ ಹಣವನ್ನೇನೂ ಕೇಳದೇ … Read more

ಲೋಕದ ಡೊಂಕ ತಿದ್ದುವ ಬದಲು….!!: ಶೋಭಾ ಶಂಕರಾನಂದ

ಜಗತ್ತಿನಲ್ಲಿ ಇತರರನ್ನು ತಿದ್ದುವ ಅಧಿಕಾರ ಮತ್ತು ಶ್ರಮ ಬೇಡ. ಒಬ್ಬ ವ್ಯಕ್ತಿ ಒಳ್ಳೆಯವರು/ ಕೆಟ್ಟವರು ಎಂದು ನಿರ್ಧಾರ ಮಾಡುವ ಕಷ್ಟವೂ ನಮಗೆ ಬೇಡ. ಒಬ್ಬರಿಗೆ ಒಳ್ಳೆಯವರಾಗಿ ಕಂಡವರು ಇನ್ನೊಬ್ಬರಿಗೆ ಕೆಟ್ಟವರಾಗಿ ಕಾಣುಬಹುದು ಅಥವಾ ಇನ್ನೊಬ್ಬರಿಗೆ ಕೆಟ್ಟವರಾಗಿ ಕಂಡವರು ಮತ್ತೊಬ್ಬರಿಗೆ ಒಳ್ಳೆಯವರಾಗಿ ಕಾಣಬಹುದು. ಅದು ಆಯಾ ಸಂದರ್ಭಕ್ಕೆ ಅನ್ವಯಿಸಿರುತ್ತದೆ. ವಸ್ತುಗಳಿಗೆ ಕೊಟ್ಟಷ್ಟು ಬೆಲೆಯನ್ನು ನಾವು ಇಂದು ವ್ಯಕ್ತಿಗಳಿಗೆ ನೀಡುತ್ತಿಲ್ಲ. ಕಾರು ಬಂಗಲೆ ಐಷಾರಾಮಿ ಜೀವನಕ್ಕಾಗಿ ಕಾತರಿಸುತ್ತೇವೆಯೇ ಹೊರತು, ವ್ಯಕ್ತಿಗಳಿಗೆ ಅಲ್ಲ ಎನ್ನುವುದು ಹಲವಾರು ಸಂದರ್ಭದಲ್ಲಿ ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ … Read more

ದಪ್ಪಗಿದ್ದರೆ ಏನು ಜೀವ?: ಕೊಡೀಹಳ್ಳಿ ಮುರಳೀಮೋಹನ್

ಭೂಮಾತಾ ನಗರದ ರಸ್ತೆ ಸಂಖ್ಯೆ 10ರಲ್ಲಿರುವ ‘ಸೌಧ ಎಲ್-ಕ್ಯಾಸಲ್’ ಅಪಾರ್ಟ್‌ಮೆಂಟ್‌ನ ಬಿ ಬ್ಲಾಕ್, ಜಿ-1ರಲ್ಲಿ ವಾಸಿಸುವ ಜೀವನ್ ಮತ್ತು ಡಿ ಬ್ಲಾಕ್, ಎಫ್-2ರಲ್ಲಿರುವ ಸುಧೀರ್ ಬಾಲ್ಯದ ಗೆಳೆಯರು. ಚಿಕ್ಕಂದಿನಲ್ಲಿ ಅವರ ಸ್ವಂತ ಊರಿನಲ್ಲಿ ಇಬ್ಬರ ಮನೆಗಳೂ ಪಕ್ಕ ಪಕ್ಕವೇ ಇದ್ದವು. ಜೀವನ್ ಅವರ ತಾತ ಇಬ್ಬರಿಗೂ ಪದ್ಯಗಳು, ಶತಕಗಳನ್ನು ಕಲಿಸುತ್ತಿದ್ದರು. ಕಥೆಗಳನ್ನು ಹೇಳುತ್ತಿದ್ದರು. ಅವರು ಜೀವನನ್ನು ‘ಜೀವ’ ಎಂದೂ, ಸುಧೀರನನ್ನು ‘ಧೀರ’ ಎಂದೂ ಕರೆಯುತ್ತಿದ್ದರು. ಶಾಲೆಯಲ್ಲಿ, ಕಾಲೇಜಿನಲ್ಲಿ ಒಟ್ಟಿಗೆ ಓದಿದರು. ನಂತರ ಇಬ್ಬರಿಗೂ ಒಂದೇ ಊರಿನಲ್ಲಿ ಉದ್ಯೋಗಗಳು … Read more

“ಯುದ್ದಕ್ಕೂ ಸಿದ್ದ ಶಾಂತಿಗೂ ಬದ್ದ”: ಚಲುವೇಗೌಡ ಡಿ ಎಸ್

ನಾವು ಭಾರತೀಯರು, ಭಾರತಾಂಬೆಯ ಮಡಿಲಲಿ ಜೀವಿಸುತ್ತಿರುವ ಮಕ್ಕಳು, ಶಾಂತಿ, ಸೌಹಾರ್ದತೆ, ತ್ಯಾಗ, ಕರುಣೆ, ಮಮತೆ, ಏಕತೆ, ಧರ್ಮ ಸಹಿಷ್ಣುತೆ ಹಾಗೂ ಪರಸ್ಪರ ಸಹಕಾರ ಮನೋಭಾವನೆ ಪ್ರಜೆಗಳುಳ್ಳ ಬೃಹತ್ ರಾಷ್ಟ್ರ ನಮ್ಮದು. ಸರ್ವ ಧರ್ಮಗಳನ್ನು ಸಮಾನವಾಗಿ ಕಾಣುವ, ಅರಸಿ ಬಂದವರಿಗೆ ಆಶ್ರಯ ನೀಡುವ, ಮಾನವೀಯ ಗುಣಗಳನ್ನು ಹೊಂದಿರುವ ಶಾಂತಿಪ್ರಿಯವಾದ ರಾಷ್ಟ್ರ ನಮ್ಮದು. ನಾವು ನಮ್ಮ ಪಾಡಿಗೆ ಯಾವ ರಾಷ್ಟ್ರದ ತಂಟೆಗೂ ಹೋಗದೆ ಶಾಂತಿಯಿಂದ ಬದುಕು ಸಾಗಿಸುತ್ತಿದ್ದೆವು ಆದರೂ ನಮ್ಮ ಭಾರತಾಂಬೆಯ ನೆಲಕ್ಕೆ ಕಾಲಿಟ್ಟ ಉಗ್ರರಕ್ಕಸರು ಭಾರತಮಾತೆಯ ಪುತ್ರರ ಕೊಂದು … Read more

ಎಕ್ಸ್ಪೀರಿಯೆನ್ಸ್ ಅಂದ್ರೆ ಸುಮ್ನೆ ಅಲ್ಲ: ಮಧುಕರ್ ಬಳ್ಕೂರು

“ಬಿಡು, ಇದೆಲ್ಲ ಕಾಮನ್, ಒಂದ್ ಎಕ್ಸ್ಪೀರಿಯೆನ್ಸ್ ಅಷ್ಟೇ. ಇದರಲ್ಲೇನು ಹೋದಂಗಾಯಿತು..?” “ಸುಮ್ಮನೆ ಎಕ್ಸ್ಪೀರಿಯೆನ್ಸ್ ಗೆ ಇರಲಿ ಅಂತ ಮಾಡ್ತಿದೀನಿ ಮತ್ತಿನ್ನೇನಿಲ್ಲ. ಇದರಲ್ಲೇನು ಹೋಗೋದಿದೆ..?” ಒಂದ್ ನಿಮಿಷ… ಎಕ್ಸ್ಪೀರಿಯೆನ್ಸ್ ಅನ್ನೋದೆ ಒಂದ್ ದೊಡ್ಡ ವಿಚಾರ. ಇದನ್ನೇನು ಬಿಡು ಕಾಮನ್ ಅಂತ ಹೇಳೋದು..? ಎಕ್ಸ್ಪೀರಿಯೆನ್ಸ್ ಅನ್ನೋದೆ ಪ್ರಾಕ್ಟಿಕಲ್ ಜ್ಞಾನ. ಇನ್ನು ಅದರಲ್ಲೇನು ಹೋದಂಗಾಯಿತು ಅನ್ನೋದು..? ಏನೇ ಮಾಡಿದ್ರು ಎಕ್ಸ್ಪೀರಿಯೆನ್ಸ್ ಸಿಗ್ತದೆ ಅಂದ ಮೇಲೆ ಎಕ್ಸ್ಪೀರಿಯೆನ್ಸ್ ಗೆ ಅಂತಾನೇ ಮಾಡ್ತಿದೀನಿ ಅನ್ನೋದರಲ್ಲಿ ಅರ್ಥ ಇದೆಯಾ..? ಇಲ್ಲಾ ಅಲ್ವಾ.. ಹಾಗಿದ್ರೆ ಯಾಕೆ ಇಂತಹ … Read more

ಪಂಜು ಕಾವ್ಯಧಾರೆ

ಚೆಲುವೆಮಬ್ಬುಗವಿದ ಮುಸ್ಸಂಜೆಆಡು-ಹಸು-ಕುರಿ ಮರಳಿ ಬರುವಾಗಕೆಂಧೂಳು ಮೇಲೆದ್ದು ತಂಗಾಳಿಯು ಸೋಕಿದಂಗೆನೀ ನನ್ನ ಸನಿಹ ಬರಲು ಮೈ ಜುಮ್ಮೆಂದಿತುಓ ನನ್ನ ಒಲವೇ ಜಗವೆಲ್ಲಾ ನಾವೇಕೆಮ್ಮುಗಿಲು ನಕ್ಕು ಸೂರಪ್ಪ ನಾಚಿದಕದರಪ್ಪನ ಗುಡ್ಡವು ಕೆಂಪೇರಿತಾಗಕೆಂದಾವರೆಯಂತಹ ನಿನ್ನ ಕೆನ್ನೆ ಮನಸೆಳೆಯಿತುಇಳಿಜಾರಿನ ಕಲ್ಲು ಮುಳ್ಳು ನಗೆಬೀರಿಬೇಲಿ ಮೇಗಳ ಹೂ ಘಮ್ಮೆನ್ನೋ ಸುವಾಸನೆಯುನಿನ್ನ ಬೆವರಿನ ಸೌಗಂಧ ತಂದಾಗಮನದಲ್ಲೇನೋ ಆನಂದಮೊದಲ ಮಳೆ ಹನಿ ನೆಲವನ್ನು ಮುತ್ತಿಟ್ಟುಗಾಳಿ ಗಂಧವಾಗಿ ಬಯಲೆದೆ ಮೇಲೆ ನಿನ್ನ ಹೆಸರುನಾ ಬಯಸಿದೆ ನಿನ್ನ ಸಂಗನಾನಾಗ ಅಲೆದಲೆದು ಬಳಲಿದೆಮೊದಲ ಚುಂಬನಕ್ಕೆ ನರನಾಡಿ ರೋಮಾಂಚನಉಸಿರು ಉಸಿರಲ್ಲಿ ಬೆರೆಯಲು ಎಂಥಾ … Read more

ಮಗು, ನೀ ನಗು (ಭಾಗ 3): ಸೂರಿ ಹಾರ್ದಳ್ಳಿ

ಹಾಗೊಂದು ಕಾಲವಿತ್ತು, ನಾನು ದಿನಕ್ಕೆ ಎಂಟು ಗಂಟೆಗಳ ಕಾಲ ಗಾಢವಾಗಿ ನಿದ್ರಿಸುತ್ತಿದ್ದೆ. ನಿದ್ರೆಯ ಸುಖಕ್ಕೆ ನಿದ್ರೆಯೇ ಸಾಟಿ. ಈಗ ಮಗುವಿನ ಎಚ್ಚರದ ಸಮಯಕ್ಕೆ ಹೊಂದಿಕೊಳ್ಳಬೇಕಿದೆ. ಮಗು ಎಷ್ಟು ಗಂಟೆಗೆ ಮಲಗಿತು, ಎಷ್ಟಕ್ಕೆ ಎದ್ದಿತು, ನಿನ್ನೆ ಎಷ್ಟು ಹೊತ್ತು ನಿದ್ರೆ ಮಾಡಿತು, ಹಾಲು ಕುಡಿದು ಎಷ್ಟು ಹೊತ್ತಾಯಿತು, ಶೌಚ-ಮೂತ್ರ ಮಾಡಿಕೊಂಡಿತೋ ಇಲ್ಲವೋ, ಎಂದೆಲ್ಲಾ ರೆಕಾರ್ಡ್ ಇಟ್ಟಿರಕೊಂಡಿರಬೇಕು ಈಗ. ಅದು ಎಚ್ಚರವಾಗಿ ಕೊಸ, ಕೊಸ ಎಂದು ಸದ್ದು ಮಾಡಿದರೆ ತಕ್ಷಣವೇ ಎದ್ದು ಅದರ ಉಪಚಾರ ಮಾಡಬೇಕು. ನಾವು ಸ್ನಾನ ಮಾಡುತ್ತಿರಲಿ, … Read more

ವಿಭಾವರಿ (ಭಾಗ 3): ವರದೇಂದ್ರ ಕೆ ಮಸ್ಕಿ

ಹೇಮಂತ್ನ ಮನದರಸಿ ಆಗಿ ಮಹಾರಾಣಿಯಂತೆ ಇರಬೇಕೆಂದಿದ್ದ ವಿಭಾ ಮನಸಲ್ಲಿ ತನ್ನ ತಾಯಿ, ತಂದೆ ಮಾಡಿದ ಕುತಂತ್ರದ ಬಗೆಗೆ ಹೇಸಿಗೆ ಅನಿಸತೊಡಗಿತು. ನಿಷ್ಕಲ್ಮಶ ಹೃದಯಿ, ತನ್ನ ಪ್ರೇಯಸಿಗಾಗಿ ತನ್ನ ತನು, ಮನ, ಧನ ಸರ್ವಸ್ವವನ್ನೂ ಅರ್ಪಿಸಿಕೊಂಡ ತೇಜುವಿನ ನೆನಪು ಬಂದು ಮೈ ಬೆವರುತ್ತಿದೆ, ಈಗ ಏನು ಮಾಡಲಿ, ಏನು ಮಾಡಲಿ. ವಿಲಿ ವಿಲಿಯಾಗಿ ವಿಭಾಳ ಮನಸು ಒದ್ದಾಡುತ್ತಿದೆ. ತನಗರಿವಿಲ್ಲದೇ ತನ್ನ ನಿಶ್ಚಿತಾರ್ಥದ ಉಂಗುರವನ್ನು ತಿರುವುತ್ತಿದ್ದಾಳೆ. ತಕ್ಷಣ ಉಂಗುರದ ಸ್ಪರ್ಶ ಗಮನಕ್ಕೆ ಬಂದು ನೋಡುತ್ತಾಳೆ. ಊಗಿ ಎಂದು ಅಚ್ಚು ಹಾಕಿಸಿದ … Read more

ಸಮಕಾಲೀನ ಘಟನೆಯ ಪ್ರತಿರೂಪ: ‘ಹೆಬ್ಬುಲಿ ಕಟ್‌ʼ: ಎಂ ನಾಗರಾಜ ಶೆಟ್ಟಿ

ʼನಾವೆಲ್ಲ ಒಂದು ʼ ಎಂದು ಹೇಳಿಕೊಳ್ಳುವ ಘೋಷಣೆಗಳು ಎಷ್ಟು ಪೊಳ್ಳು ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಪಡಿಸುವ ಘಟನೆಗಳು ಆಗಾಗ್ಗೆ, ಅಲ್ಲಲ್ಲಿ ನಡೆಯುತ್ತಿವೆ. ಇಂತಹ ಘಟನೆಗಳು ನಡೆದಾಗ ಮನಸ್ಸು ಕುಸಿಯುತ್ತದೆ; ಪ್ರತಿಭಟನೆಯ ಸೊಲ್ಲೂ ಕೇಳುತ್ತದೆ. ಸೃಜನಶೀಲ ಮನಸ್ಸುಗಳು ಇವನ್ನು ಕ್ರಿಯಾತ್ಮಕವಾಗಿ ಬಳಸಿಕೊಳ್ಳುವ ಸಾಧ್ಯತೆಗಳೂ ಇರುತ್ತವೆ. ಇವು ಸಾಹಿತ್ಯದಲ್ಲಿ, ಸಿನಿಮಾದಲ್ಲಿ ಕೆಲವೊಮ್ಮೆ ಪರಿಣಾಮಕಾರಿಯಾಗಿ ರೂಪುಗೊಂಡರೆ ವರದಿ ಅಥವಾ ಸಾಕ್ಷ್ಯ ಚಿತ್ರವಾಗಿ ತೆಳುವಾಗುವ ಸಂದರ್ಭಗಳೂ ಇಲ್ಲದಿಲ್ಲ. ಭೀಮರಾವ್‌ ಪಿ ತಮ್ಮ ಮೊದಲ ಪ್ರಯತ್ನದಲ್ಲಿ ಇಂತಹದೊಂದು ಪ್ರಯತ್ನವನ್ನು ಮಾಡಿದ್ದಾರೆ. ಅಲ್ಲಲ್ಲಿ ದಲಿತರಿಗೆ … Read more

ಮಗು, ನೀ ನಗು (ಭಾಗ ೨): ಸೂರಿ ಹಾರ್ದಳ್ಳಿ

ಅಲ್ಲಿಯೇ ಇದ್ದ ಮಗಳು, ‘ವಾಟ್? ನೋ, ನೆವರ್. ಇನ್ನೊಂದಾ? ಇದೊಂದಕ್ಕೇ ಸಾಕು ಸಾಕಾಗಿದೆ,’ ಎಂದು ಉತ್ತರಿಸಿದಳು. ಆ ಮಹಿಳೆ ರೇಗಿದಳು, ‘ಏನೇ? ಒಂದೇನಾ? ಹೀಗಾದರೆ ನಮ್ಮ ಧರ್ಮದ ಜನ ಹೆಚ್ಚೋದು ಹೇಗೆ? ಆ ಕಮ್ಯುನಿಟಿಯವರು ನೋಡು, ನಾಲ್ಕು ನಾಲ್ಕು ಮದುವೆಯಾಗಿ, ಹತ್ತೋ, ಹದಿನೈದೋ ಮಕ್ಕಳನ್ನು ಹಡೆದು, ಸರಕಾರದವರು ಕೊಡುವ ಎಲ್ಲಾ ಸೌಲಭ್ಯಗಳನ್ನು ತಪ್ಪದೇ ಪಡೆದುಕೊಂಡು, ತಮ್ಮ ಧರ್ಮದ ಜನರ ಸಂಖ್ಯೆಯನ್ನು ಹೇಗೆ ಬೆಳೆಸುತ್ತಿದ್ದಾರೆ ಅಂತ? ನೀವು ಒಂದೇ ಸಾಕು ಎನ್ನುತ್ತೀರಿ,’ ಎಂದು ಆಪಾದಿಸಿದರು. ಪಕ್ಕದಲ್ಲಿಯೇ ಕುಳಿತಿದ್ದ ಅವರ … Read more

ವೀರೇಶ ಬ. ಕುರಿ ಸೋಂಪೂರ ಅವರ “ದುಡ್ಡಿನ ಮರ”: ಎನ್. ಶೈಲಜಾ ಹಾಸನ

ಕವಿ ವೀರೇಶ ಬ. ಕುರಿ ಸೋಂಪೂರ ಅವರು ಈಗಾಗಲೆ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸ್ವತಹ ಶಿಕ್ಷಕರಾಗಿರುವ ವೀರೇಶ್ ಅವರು ಸದಾ ಮಕ್ಕಳೊಂದಿಗೆ ಇದ್ದು, ಮಕ್ಕಳಿಗೆ ಬೇಕಾಗಿರುವಂತಹ, ಆಸಕ್ತಿದಾಯಕವಾಗಿರುವಂತಹ ಸಾಹಿತ್ಯವನ್ನು ನೀಡುತ್ತಾ, ಇದೀಗ ದುಡ್ಡಿನ ಮರ ಎಂಬ ಮಕ್ಕಳ ಕವನ ಸಂಕಲವನ್ನು ಹೊರತಂದಿದ್ದಾರೆ. ಇಲ್ಲಿನ ಹಲವಾರು ಕವಿತೆಗಳು ಹಲವಾರು ವಿಚಾರಗಳಿಂದ ಕೂಡಿದ್ದು, ಮಕ್ಕಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಮಕ್ಕಳ ಮನಸ್ಸು ಹೇಗೆ ಓಡುತ್ತದೆ, ಆ ಮಕ್ಕಳ ಮನಸ್ಸಿಗೆ ಏನು ಬೇಕು ಎಂಬುದನ್ನು ಬಹಳ ಚೆನ್ನಾಗಿ … Read more

ಪಂಜು ಕಾವ್ಯಧಾರೆ

ನೆನಪುಗಳೊಂದಿಗೆ ಮೌನ ಮೆರವಣಿಗೆ ನಡೆದಿದೆರಥೋತ್ಸವದಲ್ಲಿರಂಗುರಂಗಿನ ಕನಸುಗಳ ಹೊತ್ತುನೆನಪುಗಳ ಅನಾವರಣಕಹಿ ಮರೆವಿನ ಪಲಾಯನ ! ಉಳಿದು ಹೋಗಿದೆ ನೆನಪುಗಳುಎಂದೆಂದಿಗೂ ಕರಗದಂತೆ” ತಿಮ್ಮಪ್ಪನ ” ಐಶ್ವರ್ಯದಂತೆಬಳಸಿದಷ್ಟೊ ……ಕರಗಿಸಿದಷ್ಟೊ ……ಎಂದೆಂದಿಗೂ ಮುಗಿಯದಂತೆ….. ನೆನಪಿನ ಹನಿಗಳು ಜಾರುತಿದೆಬಿಸಿಬಿಸಿಯಾಗಿ ಕೆನ್ನೆಗಳ ಮೇಲೆಜಾರಿದರೂ ಉಳಿಸಿ ಹೋಗಿವೆನೆನಪಿನ ಚಿತ್ತಾರವನ್ನುನೆನಪುಗಳೇ ಹಾಗೆಮರೆಯಬೇಕೆಂದರೂ ,ಮರೆಯಲಾಗದ , ಹಳೆಯದಾದಷ್ಟೊನೆನಪುಗಳು ಮತ್ತೆ ಮತ್ತೆ ಕಾಡುತ್ತವೆ ಜೀವದೊಡನೆ ಬೆಸೆದಿರುವಆತ್ಮದಂತೆ ಹೃದಯದೊಳಗೇಬೆಚ್ಚಗೆ ಮುದುಡಿ ಮಲಗಿದೆ ನೆನಪುಗಳು …..ಆದರೂ,ನನಗೆ ಭಯರೆಕ್ಕೆ ಪುಕ್ಕ ಬಲಿತೊಡನೆಗೂಡುಬಿಟ್ಟು ಹಾರಿಹೋಗುವಪುಟ್ಟ ಹಕ್ಕಿಯಂತಾದರೆ ……?! –ಪ್ರಭಾಕರ ತಾಮ್ರಗೌರಿ ಹಾರುವ ಹಕ್ಕಿ ಒಂಟಿತನ ಬಹಳಸೊಗಸಿನ ಜೀವ-ನ! … Read more

ಚುಂಬಕ ಚಂದ್ರಮನೊಂದಿಗೆ ಚಲಿಸುತ್ತಾ….: ಶೋಭಾ ಶಂಕರಾನಂದ

ಪ್ರತಿನಿತ್ಯ ನಾವು ನೋಡಬಹುದಾದ ಪ್ರತ್ಯಕ್ಷ ದೈವಗಳಾದ ಸೂರ್ಯ ಮತ್ತು ಚಂದ್ರ ನಮ್ಮ ಬದುಕಿನಲ್ಲಿ ಅಗಾಧ ಪ್ರಭಾವವನ್ನು ಬೀರುತ್ತವೆ. ಅದರಲ್ಲೂ ಚಂದ್ರನಿಗೆ ವೇದಗಳಲ್ಲಿ ಅಧಿಕ ಪ್ರಾಶಸ್ತ್ಯವನ್ನು ಕೊಡಲಾಗಿದೆ. ಆತನನ್ನು ವೇದಗಳಲ್ಲಿ ‘ಸೋಮದೇವ’ ಎಂದು ಕರೆದಿದ್ದಾರೆ. ಪವಮಾನ ಸೂಕ್ತದಲ್ಲಿ ಅದರ ಹೆಚ್ಚಿನ ಮಾಹಿತಿ ನೋಡಬಹುದು. “ಚಂದ್ರಮಾ ಮನಸೋ ಜಾತಃ” ಎಂದು ಒಂದು ಉಲ್ಲೇಖವಿದೆ. ಚಂದ್ರ ನಮ್ಮ ಮನಸ್ಸಿಗೆ ಅಧಿಪತಿ ಎಂದು ಇದರ ಅರ್ಥ. ನಮ್ಮ ಮನಸ್ಸು ನೆಮ್ಮದಿಯಿಂದ ಇಲ್ಲವೆಂದಾದರೆ, ಚಂದ್ರನ ಧ್ಯಾನ ಮಾಡಬೇಕು. ಏಕೆಂದರೆ ಭೂಮಿಗೂ ಚಂದ್ರನಿಗೂ ನಡುವೆ ಒಂದು … Read more

ಪಾರ್ಟ್-ಪಲ್ಯಾ: ಸಿದ್ಧರಾಮ ಹಿಪ್ಪರಗಿ (ಸಿಹಿ)

ಅದ್ಯಾವುದೋ ರಂಗಾಸಕ್ತರ ವೇದಿಕೆಯವರು ರಂಗಭೂಮಿಯ ಕುರಿತು ಉಪನ್ಯಾಸ ನೀಡಲು ಆಹ್ವಾನಿಸಿದ್ದರು. ಹಿರಿಯನೆಂಬ ಕಾಲ್ಪನಿಕ ಗೌರವ ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ನನ್ನ ಸಂಗ್ರಹದ ಪುಸ್ತಕ-ಮಸ್ತಕಗಳ ರಾಶಿಯೊಳಗಿಂದ ರಂಗಭೂಮಿಯ ನೆನಪುಗಳನ್ನು ಹೆಕ್ಕಿಕೊಂಡು ಮಾತಾಡಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ನನ್ನ ಹೆಸರಿಡಿದು ಯಾರೋ ಕೂಗಿದರು. ಇತ್ತೀಚಿನ ದಿನಗಳಲ್ಲಿ ನನ್ನನ್ನು ಯಾರೂ ಹಾಗೇ ಕೂಗಿರಲಿಲ್ಲ. ನಮ್ಮ ಅವ್ವನ ಸಮಕಾಲೀನರು ಹಾಗೆ ಕರೆಯುತ್ತಿದ್ದರು. ತಿರುಗಿ ನೋಡಿದೆ. ಥೇಟ್‌ ಅವ್ವನ ಜಮಾನಾದ ಸೀರೆ-ಕುಪ್ಪಸ ತೊಟ್ಟರೂ ಆಧುನಿಕರಂತೆ ಕಾಣುತ್ತಿದ್ದ ಮಹಿಳೆಯೊಬ್ಬಳು “ಚಲೋತ್ನಾಗ ಮಾತಾಡಿದಿರಿ ಸರ್. ಕಂಪನಿ ನಾಟಕದ ಮಾಲೀಕಳು … Read more

ವಿಭಾವರಿ (ಭಾಗ 2): ವರದೇಂದ್ರ ಕೆ ಮಸ್ಕಿ

ಇದೇ ಸಂದರ್ಭದಲ್ಲಿ ಒಮ್ಮೆ ಹೇಮಂತ್ ತನ್ನ ಮನೆಗೆ ವಿಭಾಳನ್ನು ಕರೆದೊಯ್ದ. ಹೇಮಂತನ ತಂದೆ ತಾಯಿ ಎಲ್ಲರೂ ಅತ್ಯಂತ ಪ್ರೀತಿಯಿಂದ ವಿಭಾಳೊಂದಿಗೆ ಕಾಲ ಕಳೆದರು. ಆ ಬಂಗಲೆಯೋ ರಾಜನ ಅರಮನೆಯಂತಿತ್ತು. ಮನೆ ತುಂಬ ಆಳುಗಳು. ಖ್ಯಾತ ವೈದ್ಯ ದಂಪತಿಗಳ ಏಕೈಕ ಸುಪುತ್ರ ಹೇಮಂತ ಹುಟ್ಟುತ್ತಲೇ ಬಂಗಾರದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದ ಅನಿಸುವಷ್ಟು ಶ್ರೀಮಂತಿಕೆ. ಜೊತೆಗೆ ಒಬ್ಬಳೇ ತಂಗಿ ವಿಮಲಾ. ತುಂಬಾ ಚೂಟಿ, ಹಾಗೆಯೇ ಮಾತನಾಡುತ್ತ ವಿಮಲಾ, “ನೀವು ನನ್ನ ಅಣ್ಣನನ್ನು ಮದುವೆ ಆಗ್ತೀರಾ?” ಅಂತ ನೇರವಾಗಿ ಕೇಳಿಯೇ ಬಿಟ್ಟಳು, … Read more

293K CRC: ನಾಗಸಿಂಹ ಜಿ ರಾವ್

ನನ್ನ ಮನೆಯಿಂದ ಕಚೇರಿಗೆ 32 ಕಿಮೀ ದೂರ, 41 ಸ್ಟಾಪ್‌ಗಳು, 7:30ರ ಬಸ್‌ನಲ್ಲಿ ದಿನವೂ ಶಾಲಾ ಮಕ್ಕಳ ಜೊತೆಗಿನ ಪ್ರಯಾಣ. ಆರಂಭದಲ್ಲಿ, ಜನಜಂಗುಳಿಯಿಂದಾಗಿ ಬಸ್‌ನಲ್ಲಿ ಸೀಟು ಸಿಗದೆ ನಿಂತೇ ಪ್ರಯಾಣಿಸಬೇಕಿತ್ತು. ಕಚೇರಿಗೆ ತಲುಪುವಷ್ಟರಲ್ಲಿ ಸುಸ್ತಾಗಿರುತ್ತಿತ್ತು. ಆದರೆ, ಈ ಸವಾಲನ್ನು ಒಂದು ಅವಕಾಶವಾಗಿ ನಾನು ಪರಿವರ್ತಿಸಿಕೊಂಡ ಪ್ರಕರಣವೇ 293K CRCಯ ಜನನ. ಬಸ್‌ನಲ್ಲಿ ಪ್ರತಿದಿನ ಮಕ್ಕಳ ಗಲಾಟೆ, ನಾನು ಕೆಲವು ಮಕ್ಕಳನ್ನು ಅವರ ಶಾಲೆಯ ಬಗ್ಗೆ. ಆಟದ ಬಗ್ಗೆ ಪಾಠದ ಬಗ್ಗೆ ಚರ್ಚೆಗಳಿಂದ ಅವರ ಪರಿಚಯ ಸಂಪಾದಿಸಿದೆ. ಪ್ರತಿದಿನ … Read more

ದಿಕ್ಕುಗಳು (ಭಾಗ 3): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅನುಶ್ರೀ ತಂದೆಯೊಂದಿಗೆ ಪಟ್ಟಣಕ್ಕೆ ಬಂದಳು. ರೈಲು ನಿಂತಲ್ಲೆಲ್ಲಾ ಎಲ್ಲಿ ಇಳಿದರೆ ಒಳ್ಳೇದು ಅಂತ ಯೋಚಿಸುತ್ತಿದ್ದ ಶಿವಪ್ಪ. “ಎಪ್ಪಾ ಗೊತ್ತು ಕೂನ ಇಲ್ಲದಾರ ಹತ್ರ ಏನೂ ಕೇಳ್ ಬ್ಯಾಡಪ್ಪ ಸುಮ್ಕಿರು” ಎಂದಳು ಅನುಶ್ರಿ. ತಂದೆ, “ಸೈ ಬಿಡವ್ವಾ ಹಂಗಂದ್ರ ನಮಗ ಗೊತ್ತಿರೂ ಮಂದಿ ಅದಾರೇನಬೇ ಇಲ್ಲೀ” ಎಂದಾಗ ಅನುಶ್ರೀ ಪೆದ್ದಳಂತೆ ಕುಳಿತಳು. ಪಕ್ಕದಲ್ಲಿ ಕುಳಿತಿದ್ದ ವೃದ್ಧರೊಬ್ಬರು, “ನೀವು ಎಲ್ಲಿ ಇಳಿಯಬೇಕಿದೆ” ಎಂದು ಕೇಳಿದರು. ಶಿವಪ್ಪ ಅವರಿಗೆ ಉತ್ತರಿಸದೇ ಮಗಳ ಮುಖ ನೋಡಿದನು. ಆಗ ಅನುಶ್ರೀಯೇ, “ಅಜ್ಜಾರ ಬೆಂಗಳೂರು ಇನ್ನೂ … Read more

ಪಂಜು ಕಾವ್ಯಧಾರೆ

ವಿಮರ್ಶೆ.. ಚರಂಡಿ ಜಿಗಿದವನನ್ನು ಸಮುದ್ರ ದಾಟಿದನೆಂದು ಬಿಂಬಿಸುವುದೇ? ಅಂಬೆಗಾಲಿಡುವವನ್ನು ನಟರಾಜನೆನ್ನುವುದೇ? ಕಾಡಿನ ತೊರೆಯ ಬದಿಯಲ್ಲಿ ಪುಕ್ಕ ತರಿದು ಕೊಂಡಕೆಂಬೂತವನ್ನು ನವಿಲೆಂದು ವರ್ಣಿಸುವುದೇ?. ಮಣ್ಣು ತಿನ್ನುವ ಮುಕ್ಕಾವನ್ನುಕಾಳಿಂಗಕ್ಕೆ ಹೋಲಿಸುವುದೇ? ತರವಲ್ಲ.! ತರವಲ್ಲ.! ಬೇವು, ಬೇಲ ಎರಡೂ ಬೆಳೆದಿವೆಈ ಕಾಡಿನಲ್ಲಿ.!ಹಾಲುಗುಂಬಳ, ಹಾಗಲಎರಡೂ ಒಂದೇ ಮರಕೆ ಹಬ್ಬಿದಬೇರೆ ಬೇರೆ ಬಳ್ಳಿ.! ಆಳುದ್ದ ಹೊಂಡಕ್ಕೂ,ಆಳ ತಿಳಿಯದ ಸಮುದ್ರಕ್ಕೂ ವಿವರಣೆ ಬೇಕೆ? ಮರುಭೂಮಿಯ ಕುರುಚಲಿಗೂಸಹ್ಯಾದ್ರಿ ಕಾಡಿಗೂ ಹೋಲಿಕೆ ಏಕೆ? ಆಗದು ನನ್ನಿಂದಾಗದು.ಬೇರೆ ಯಾರನ್ನಾದರೂ ಹುಡುಕಿಕೋ.!ಬಣ್ಣದ ಕಲ್ಲನ್ನು ವಜ್ರವೆನ್ನಲು.!ಹುಲ್ಲಿನ ಬೆಂಕಿಯನ್ನು ಕಲ್ಲಿದ್ದಲ ಕಾವೆನ್ನಲು.! ಬಾ, ಇಲ್ಲಿ … Read more

ನಾಟಕ “ಪುಲಪೇಡಿ”: ನಾಗಸಿಂಹ ಜಿ ರಾವ್

ಸಿಂಹಾವಲೋಕನ ೨ ‘ಪುಲಪೇಡಿ’ ನಾಟಕವು ಕೇವಲ ಒಂದು ರಂಗ ಪ್ರದರ್ಶನವಾಗಿರದೆ, ಕೇರಳದ ಒಂದು ಕಾಲದ ಅನಿಷ್ಟ ಸಾಮಾಜಿಕ ಪದ್ಧತಿಯಾದ ‘ಪುಲಪೇಡಿ’ಯನ್ನು ತೆರೆದಿಡುವ ಸಾಮಾಜಿಕ ಕನ್ನಡಿಯಾಗಿದೆ. ಈ ನಾಟಕವು ಶೋಷಿತ ವರ್ಗದ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಖಂಡಿಸುವ ಜೊತೆಗೆ, ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿಯಾಗಿ ಎದ್ದು ಕಾಣುತ್ತದೆ. ಲಿಂಗದೇವರು ಹಳೆಮನೆಯವರ ರಚನೆಯಾದ ಈ ಕೃತಿಯನ್ನು ರಮೇಶ್‌ರವರ ನಿರ್ದೇಶನದಲ್ಲಿ ರಂಗದ ಮೇಲೆ ತರುವಾಗ, ನಾನು ಶೋಷಿತ ವರ್ಗದ ಯುವಕನ ಪಾತ್ರವನ್ನು ನಿರ್ವಹಿಸಿದ ಅನುಭವವು ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿ ಉಳಿದಿದೆ. … Read more

ಬಾರಿನಲ್ಲಿ ‘ಬುದ್ಧ’: ಡಾ. ಸುಶ್ಮಿತಾ ವೈ.

ಮಳೆಗಾಲದ ಒಂದು ಸಂಜೆ ತೀರ್ಥಹಳ್ಳಿಯ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಬೇಕು-ಬೇಡದ ಆಲೋಚನೆಗಳ ನಡುವೆ ಈ ರಣಮಳೆಯಿಂದ ತಪ್ಪಿಸಿಕೊಂಡು ಮನೆ ಸೇರಿದರೆ ಸಾಕಪ್ಪ ಎನಿಸುತ್ತಿತ್ತು. ಗಡಿಬಿಡಿಯ ಗಾಡಿಗಳು ನಿಂತ ನೀರಿನ ಮೇಲೆ ಚಕ್ರ ಹರಿಸಿ ಎಳ್ಳಮಾವಾಸ್ಯೆಯ ತೀರ್ಥಸ್ನಾನ ಈಗಲೇ ಆಗಬಹುದೆಂಬ ಭಯದಲ್ಲಿ ಸುತ್ತ-ಮುತ್ತ ಕಣ್ಣರಳಿಸಿ ನೋಡುತ್ತಾ ಹೆಜ್ಜೆ ಹಾಕುತ್ತಿದ್ದೆ. ಎಡಕ್ಕೆ ತಿರುಗಿ ಇನ್ನೊಂದು ರಸ್ತೆಗೆ ಕಾಲಿಡುವಾಗ ರಸ್ತೆ ಪಕ್ಕದ ‘ಬಾರ್’ನ ಕ್ಯಾಶ್‌ಕೌಂಟರ್ ಟೇಬಲ್ ಮೇಲೆ ‘ರಿಸಪ್ಯನಿಸ್ಟ್’ನಂತೆ ಮಂದಸ್ಮಿತನಾಗಿ ಕುಳಿತಿದ್ದ ‘ಬುದ್ಧಮೂರ್ತಿ’ಯ ದರ್ಶನವಾಯಿತು. ಒಮ್ಮೆಲೆ ನನ್ನಲ್ಲಿ ನಗು, ಬೇಸರ, ಪ್ರಶ್ನೆ, … Read more