ದಿಕ್ಕುಗಳು (ಭಾಗ 8): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಮಾರನೆ ದಿನ ಶಾಮಣ್ಣ ದಿನ ಪತ್ರಿಕೆಯಲ್ಲಿರುವ ಜಾಹೀರಾತು ನೋಡಿ ಯೋಚನಾಮಗ್ನಾಗಿದ್ದ. ತಾನು ಹತ್ತನೇ ತರಗತಿಯಲ್ಲಿ ಸಾಧಾರಣ ಅಂಕದೊಂದಿಗೆ ಪಾಸಾಗಿ ಮನೆಯ ಹಿರಿಯ ಮೊಮ್ಮಗನಾಗಿದ್ದುದರಿಂದ ತಂದೆಯೊಂದಿಗೆ ಕೆಲಸಕ್ಕೆ ನಿಂತಿದ್ದ. ಆತ ಜಾಸ್ತಿ ಓದಿರದಿದ್ದರೂ, ಓದುವ ಹುಡುಗರಿಗೆ ಸಹಾಯ ಮಾಡುವ ಸ್ವಭಾವದವನು. ಆತನ ಅಂತಹ ಸಹಾಯ ಮಾಡುವ ಗುಣಕ್ಕೆ ಮನೆಯಲ್ಲಿ ಎಲ್ಲರಿಗೂ ಹೆಮ್ಮೆ ಎನ್ನಿಸಿತ್ತು. ಶಾಮಣ್ಣ ಆ ಪತ್ರಿಕೆಯನ್ನು ಹಿಡಿದುಕೊಂಡು ನಡುವಮನೆಯಲ್ಲಿ ಟಿ.ವಿ ನೋಡುತ್ತಾ ಕುಳಿತ್ತಿದ್ದ ಲಲಿತೆಯನ್ನು ಕರೆದನು, “ಲಲ್ಲೀ, ಲೇ ಲಲ್ಲೀ ಬಾ ಇಲ್ಲೆ ಸ್ವಲ್ಪ” ಎಂದು ಶಾಮಣ್ಣ … Read more

ಸಮಾಜಮುಖಿ ಚಿಂತನೆಯ ಹುಡುಕಾಟದಲ್ಲಿ ಮೊದಲ ಜೋಡು ಕಥಾ ಸಂಕಲನ: ಶಿವಕುಮಾರ ಸರಗೂರು

ಇತ್ತೀಚಿಗೆ ಸಣ್ಣ ಕತೆಗಳು ಕನ್ನಡ ಸಾಹಿತ್ಯದಲ್ಲಿ ವೈಶಾಲ್ಯತೆಯಿಂದ ಬೆಳೆಯುತ್ತಿರುವ ಪ್ರಕಾರವಾಗಿದೆ. ಸುತ್ತಲಿನ ಅನುಭವಗಳಿಗೆ ಸ್ಪಂದಿಸುವ ಮೂಲಕ ಸರಳವಾಗಿ ಲೇಖಕನಿಗೆ ದಕ್ಕುವ ವಸ್ತು ಸಣ್ಣ ಕತೆಯ ವೈಶಿಷ್ಟವಾಗಿದೆ. ಸೂಕ್ಷ್ಮ ಸಂವೇದನೆಯುಳ್ಳ ಕಥೆಗಾರ ಆಯ್ದುಕೊಳ್ಳುವ ಏಕೈಕ ಪ್ರಕಾರವೂ ಇದೆ ಆಗಿದೆ. ಕತೆಗಾರ ಮುಧುಕರ ಮಳವಳ್ಳಿ ಅವರ ಮೊದಲ ಜೋಡು ಕಥಾಸಂಕಲನವು ದಲಿತರ ಬದುಕಿನ ಅನಂತ ಸಾಧ್ಯತೆಗಳನ್ನು ಚಿಂತನೆಗೆ ಹಚ್ಚುವಂತೆ ಮಾಡುತ್ತವೆ. ಸಾಮಾಜಿಕ ಕಟ್ಟುಪಾಡುಗಳು ಎಂದು ತಿಳಿದ ಅದೆಷ್ಟೋ ಅಂಶಗಳನ್ನು ಬಹುತ್ವದ ನೆಲೆಯಲ್ಲಿ ಮರುಶೋಧಿಸಬೇಕು ಎಂಬ ಸಂದೇಶವನ್ನು ಕತೆಗಾರರು ನೀಡ ಬಯಸುತ್ತಾರೆ. … Read more

ವೃದ್ಧೋಪನಿಷತ್ (16-20): ಡಾ ರಾಜೇಶ್ವರಿ ದಿವಾಕರ್ಲ

16,ಅವಳೂ ಸಹವಯಸು ಮೇಲೆ ಬಿದ್ದರೂಎಲ್ಲ ಕೆಲಸಕ್ಕೂ ಈಗಲೂ ಆಕೆಯೇಸೂರ್ಯನು ಉದಯಿಸುವುದು ತಡವಾಗಿದ್ದರೆಮೋಡಗಳ ಹೊದಿಕೆ ತೆಗೆದು ಹಾಕುತ್ತಾಳೆ ನಡಿಗೆ ಸ್ವಲ್ಪ ಮಂದವಾಗಿದೆ.ಆದರೂ ಮನೆಕೆಲಸಕೊನೆಗಾಣಿಸುತ್ತಾಳೆ,ನನ್ನ ಮೇಲೆ ಆಕೆಗಿರುವ ಪ್ರೀತಿಯನ್ನುರೆಕ್ಕೆಗಳ ಕಷ್ಟಕ್ಕೆ ಒಪ್ಪಿಸುವಕತ್ತೆ ಕೆಲಸ ಗಾರ್ತಿ ಆಕೆ, ನಾನು ಇತ್ತೀಚಿಗೆಸ್ವಲ್ಪ ನಾಚುವುದನ್ನು ಕಲೆತೆಆಕೆಗೆ ಸಹಾಯ ಮಾಡಬೇಕೆಂದುನಿರ್ಧಾರಿಸಿದ್ದೇನೆಸಹಾಯವೆಂದರೆ ಬೇರೇನೂ ಅಲ್ಲನನ್ನ ಕೆಲಸಗಳನ್ನು ನಾನೇ ಮಾಡುಕೊಳ್ಳುತ್ತಿದ್ದೇನೆ ನನಗೆ ಸಮಸ್ಯೆಗಳಾಗಿ ಕಾಣುವೆವುಅವಳಿಗೆಪೊರಕೆ ಕಡ್ಡಿ ಸಮಾನ ಬೇಗನೆಎರಡನೆಯ ಪೀಳಿಗೆ ಬಂದೇಬಿಟ್ಟೆದೆ.ಮಮತೆ ಯ ಮಹಾ ಸಮುದ್ರದಲ್ಲಿಅವಲೀಲೆಯಾಗಿ ದೂಕಿಬಿಟ್ಟಳು ಆಕೆ.ಇಂತಹ ಈಜುಗೆ ನಾನು ಕಲಿಸಿದ್ದಲ್ಲ.ಈಜು ಬರುವುದೆಂದು ನನಗೆ ಗೊತ್ತಿಲ್ಲ. ಆಗಾಗ … Read more

ಮಗು, ನೀ ನಗು (ಕೊನೆಯ ಭಾಗ): ಸೂರಿ ಹಾರ್ದಳ್ಳಿ

ಇನ್ನೂ ಒಂಬತ್ತು ತಿಂಗಳ ನಂತರ ನಡೆಯಬೇಕಾದದ್ದರ ಬಗ್ಗೆ ಈಗಲೇ ಈಗಲೇ ಯಾಕೆ ಯೋಚಿಸುತ್ತೇನೆ ನಾನು? ಆಗ ಮಗು ನಮ್ಮ ಮನೆಯಲ್ಲಿಯೇ ಇರುತ್ತದೆಯೋ? ಅದಕ್ಕಿಂತ ಮುಖ್ಯವಾಗಿ ನಾವು ಇರುತ್ತೇವೆಯೋ? ಥೂ, ಥೂ, ಕೆಟ್ಟದ್ದನ್ನು ಯೋಚಿಸಬಾರದು. ಅಸ್ತು ದೇವತೆಗಳು ಅಲ್ಲೆಲ್ಲಾ ಸುತ್ತುತ್ತಾ ‘ಅಸ್ತು, ಅಸ್ತು’ ಅನ್ನುತ್ತಿರುತ್ತಾರಂತೆ. ಹಾಗೆ ಆಗಿಯೂಬಿಡುತ್ತದಂತೆ. ಬಿಡ್ತು, ಬಿಡ್ತು, ನಾನು ಗಲ್ಲಕ್ಕೆ ಹೊಡೆದುಕೊಂಡಿದ್ದೆ. ಮಗುವಿನ ಉತ್ತರೋತ್ತರ ಅಭಿವೃದ್ಧಿಗೆ ಈಗಲೇ ಯಾಕೆ ಬುನಾದಿ ಹಾಕುತ್ತೇವೆಯೋ ಗೊತ್ತಿಲ್ಲ. ಆಗ ಗಂಡ ಮತ್ತು ಹೆಂಡತಿಯರ ಸಂಬ ಂಧಗಳು ಹೇಗೆ ಉಳಿಯುತ್ತವೆ? ನಮ್ಮ … Read more

ಬುಕ್ಸ್ ಲೋಕ ಮತ್ತು ಸಾಗರ ಸಂಗಮ ಇಂಜಿನಿಯರ್ಸ್ ಅಸೋಸಿಯೇಷನ್ ಅರ್ಪಿಸುವ 3 ಪುಸ್ತಕಗಳ ಬಿಡುಗಡೆ

ಬುಕ್ಸ್ ಲೋಕ ಮತ್ತು ಸಾಗರ ಸಂಗಮ ಇಂಜಿನಿಯರ್ಸ್ ಅಸೋಸಿಯೇಷನ್ ಅರ್ಪಿಸುವ 3 ಪುಸ್ತಕಗಳ ಬಿಡುಗಡೆ ಕೊಳ್ಳೇಗಾಲ ಶರ್ಮ ಅವರ ಪ್ಲಾಸ್ಟಿಕಾಯಣ ಐ.ಜಿ.ಶ್ರೀನಿಧಿ ಅವರ ಮೈಸೂರಿನ ಚುರುಮುರಿಗೆ ಅಂತರಿಕದ ಟೊಮೇಟೊ ಸುನೀಲ್ ಬಾರ್ಕೂರ್ ಅವರ ಒಂಟಿತೋಳಗಳ ಬೆನ್ನು ಹತ್ತಿದವರು ಮತ್ತು ಇತರೆ ಸ್ವಾರಸ್ಯಗಳು ಅತಿಥಿಗಳು:ಕೊಳ್ಳೇಗಾಲ ಶರ್ಮರವಿರಾಮ್ ಸಾಗರ,ಟಿ.ಜಿ.ಶ್ರೀನಿಧಿಪ್ರಶಾಂತ್ ಎನ್ಸುನೀಲ್ ಬಾರ್ಕೂರ್ ಸ್ಥಳ : ಇಂಜಿನಿಯರ್ ಭವನ, ಪಿ.ಡಬ್ಲ್ಯೂಡಿ, ಕ್ಯಾಂಪಸ್, ನೃಪತುಂಗ ರಸ್ತೆ, ಕೆ.ಆರ್. ಸರ್ಕಲ್, ಬೆಂಗಳೂರು ದಿನಾಂಕ: 21 ಸೆಪ್ಟೆಂಬರ್ 2025ಮಧ್ಯಾಹ್ನ: 1: 30ಕ್ಕೆ

ಮೂರು ಕವಿತೆಗಳು: ಎಂ ಜವರಾಜ್

ಅಪ್ಪ ಅಪ್ಪನ ವರ್ಷದ ಕಾರ್ಯ. ಇದು ಮೊದಲಲ್ಲವರ್ಷಾ ವರ್ಷ ತಪ್ಪದೆ. ಇಷ್ಟದ ಊಟ ತಿಂಡಿ ಮದ್ಯಬೀಡಿ ಬೆಂಕಿ ಪೊಟ್ಟಣ ಜೊತೆ ಹೊಸ ಬಟ್ಟೆ ಎಡೆಗೆಇಡಬೇಕು ಅವ್ವನೆದುರು ಆಕಾಶದಂಥ ಅಪ್ಪನಿಗೆ! ನೋವಿನ ಮೂಟೆ ಹೊತ್ತು ಮಲಗಿರುವ ಅವ್ವ,ಹಗಲು ರಾತ್ರಿ ಎನ್ನದೆ ಗಂಟೆ ಗಳಿಗೆ ಎನ್ನದೆಯಾರು ಕೇಳುತ್ತಾರೊ ಬಿಡುತ್ತಾರೊ ಎಂಬರಿವಿಲ್ಲದೆತನಗೆ ತಾನೇ ತುಟಿ ಕುಣಿಸುತ್ತ ಅಪ್ಪನ ಗುಣಗಾನ!! ಅಪ್ಪ ಕಾಲವಾಗಿ ಹತ್ತಕ್ಕು ಹೆಚ್ಚು ವರ್ಷವಾಯ್ತುಒಂದು ಜೊತೆ ಹಸು ಒಂದು ಬಳ್ಳದ ಗಾಡಿ ಜೊತೆಗೆಅವ್ವ ಮತ್ತು ಆರು ಹೆಣ್ಣು ಆರು ಗಂಡಲ್ಲಿ … Read more

ವೃದ್ಧೋಪನಿಷತ್ (11-15): ಡಾ ರಾಜೇಶ್ವರಿ ದಿವಾಕರ್ಲ

ಅಂದುನಿಮ್ಮ ಹಾಗೆ ಓಡು ತ್ತಿದ್ದೆ.ಬೆಟ್ಟ,ಗಿಡ,ಆಕಾಶಆತ್ಮ ವಿಶ್ವಾಸಕದಲಿದರೆ ಬೆನ್ನಟ್ಟುವ ಕವನ.ನನ್ನ ಜೊತೆ ಇದ್ದವು.ಅಂದಿನ ದಿನಗಳಲ್ಲಿನನ್ನ ಉಸಿರೇ ಒಂದು ತೂಫಾನ್.ನನ್ನ ಹುಮ್ಮಸು ಒಂದು “ಪಟ್ಟಣದ ಉದ್ಯಾನ” ಒಮ್ಮೆ ನನ್ನದೂ ಸಹ ನಿಮ್ಮ ಹಾಗೆಯೆನನ್ನದು ಸಹ ಹದ ವಿಲ್ಲದ ಹಾಡು,ಒಂದು ಗಾಳಿಯ ಕಾರಂಜಿ.ಪ್ರೀತಿ ಇಲ್ಲವೆಂದಲ್ಲಮುಖ್ಯವಾಗಿ ಸ್ನೇಹ,ಎಂದಿಗೂ ತಣಿಯದ ದಾಹಸ್ವೇಚ್ಛ ವಾಗಿ ಗಿರಿಕೀ ಹೊಡಯುವ ವಿಹಂಗನನ್ನ ಅಂತರಂಗ,ಹಿಂದೆಗೆ ಹೋಗುವಹಾದಿಯ ಹಾಗೆ,ಯೌವನ ಜೀವದಿಂದ ಜಾರಿಹೋಗಿದೆಬೆಳಗಿನಜಾವ ತಂತಿಯಮೇಲೆನೀರಿನ ಬಿಂದುಗಳುಮುತ್ತುಗಳಹಾಗೆ ಹೊಳೆಯುತ್ತಿತ್ತುಈಗ ಅವುಗಳನ್ನುಕಣ್ಣೇರೆಂದು ಹೋಲಿಸಬೇಕೇನೋಆದರೆ ಜ್ಞಾಪಕಗಳೀಗತೋಟದ ಹೂಗಳಾದವುಮೂಳೆಗಳು ಸೋತಿದ್ದರೂಬೆರಳಿನ ತುಂಬಾತೃಪ್ತಿಯ ನಾದಗಳುಕೇಳಲಿಸುತ್ತವೆಇಷ್ಷ್ಟು ದಿನ ಹುಮ್ಮಸು ನಿಂದಹರೆದ ನದಿ … Read more

ಮಗು, ನೀ ನಗು (ಭಾಗ 6): ಸೂರಿ ಹಾರ್ದಳ್ಳಿ

ಸರಕಾರ ಏನಾದರೊಂದು ನಿಯಮ ಮಾಡಿ ಖಾಸಗಿ ಅಡುಗೆ ಕೆಲಸಗಳನ್ನು ನಿಯಂತ್ರಿಸಬೇಕು. ಸಮೂಹ ಸಾರಿಗೆ ಇರುವಂತೆಯೇ ಸಾಮೂಹಿಕ ಅಡುಗೆ ಮನೆ ಇರಬೇಕು. ಇದರಿಂದ ಸಮಯ, ವೆಚ್ಚ, ಶ್ರಮ, ಇವನ್ನು ಉಳಿಸಬಹುದು, ಎಂಬುದು ಅವರ ಅಭಿಪ್ರಾಯ. ಕಂದನಿಗೆ ಹಾಲು ಕೊಟ್ಟು ಮೂರು ಗಂಟೆ ಕಳೆಯುತ್ತಾ ಬಂತು, ಇನ್ನೇನು ಮಗು ಏಳಬಹುದು, ಎದ್ದು ಪ್ರಾಂ ಎಂದು ರಾಗ ಎಳೆಯಬಹುದು. ಸರಿಯಾಗಿ ಮೂರು ಗಂಟೆಯ ಅವಧಿಗೇ ಏಳುತ್ತೆ. ಗಡಿಯಾರವೇ ಅವಳನ್ನು ನೋಡಿ ತನ್ನ ಸಮಯ ಸೆಟ್ ಮಾಡಿಕೊಳ್ಳಬಹುದು, ಹಾಗೆ. ಹಗಲಾದರೆ ಪರವಾಗಿಲ್ಲ, ರಾತ್ರಿ … Read more

ದಿಕ್ಕುಗಳು (ಭಾಗ 7): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಆದರೆ ಇಂದು ಲಲಿತಳ ಹುಡುಗುತನವೆಲ್ಲಾ ಒಂದೇ ಏಟಿಗೆ ಸತ್ತು ಹೋಗಿದೆ. ಅವಳು ಚೈತನ್‌ನನ್ನು ಮರೆಯಲು ಸಾಧ್ಯವೇ ಇಲ್ಲವೆಂದುಕೊಂಡಳು. ಹಾಗಂತ ಆತನನ್ನು ಬೇರೊಬ್ಬಳೊಂದಿಗೆ ನೋಡುಡುವುದೂ ತನ್ನಿಂದಾಗದು ಎಂದು ಬಿಕ್ಕಿದಳು. ಆಕೆ ತನ್ನ ರೂಮಿಗೆ ಬಂದಾಗ ಎಂಟು ಗಂಟೆಯಾಗಿತ್ತು. ಎಂದಿನಂತೆ ಮುಖ ತೊಳೆಯಲಿಲ್ಲ. ಬಟ್ಟೆ ಬದಲಾಯಿಸಲಿಲ್ಲ. ತನ್ನ ಕಂಪ್ಯೂಟರ್ ಮುಂದೆ ಕುಳಿತು, ಇ-ಮೈಲ್ ಬಾಕ್ಸ್ ತೆರೆದಳು. ಅಲ್ಲಿ ಹಲವಾರು ಪತ್ರಗಳು ತನಗಾಗಿ ಕಾಯುತ್ತಿದ್ದವು. ಚೈತನ್‌ನಿಂದ ಕೂಡ ಒಂದು ಪತ್ರ ಬಂದು ಕುಳಿತಿತ್ತು. ಏನು ಬರೆದಿರಬಹುದು ಎಂದು ಆತನ ಪತ್ರವನ್ನು ತೆರೆದಳು. … Read more

ಎರಡು ಕೊಂಕಣಿ ಅನುವಾದಿತ ಕವಿತೆಗಳು: ಜಾನ್ ಸುಂಟಿಕೊಪ್ಪ

ನೆನಪಿದೆ ನನಗೆ ಕೊಂಕಣಿ ಮೂಲ: ವಲ್ಲಿ ಕ್ವಾಡ್ರಸ್ಕನ್ನಡಕ್ಕೆ ಅನುವಾದ: ಜಾನ್ ಸುಂಟಿಕೊಪ್ಪ ನಾನು ಬದುಕಿದ್ದೆಈ ಭೂಮಿಯಲ್ಲಿ ಮನುಷ್ಯನಾಗಿ!ಸಮಯವು ಅಂದೂ ಇದ್ದಿರಲಿಲ್ಲಎಂದಿಗೂ ಅರ್ಥವಾಗದ ಅವಸರದಲ್ಲಿ;ಒಂದೆರಡು ಬಾರಿಹೇಗೋ ನಾನು ಬದುಕಿದ್ದೆನೆನಪಿದೆ ನನಗೆಸತ್ಯವಾಗಿಯೂಇಂದೂ ನೆನಪಿದೆ…. ಹೆಣಗಳ ರಾಶಿ ಬಿದ್ದಿತ್ತು!ರಣಭೂಮಿ ದಾಟಿ ಬಂದಿದ್ದೆಕೊಂದವರು ಯಾರು!?ಸತ್ತವರು ಯಾರು!?ನನಗೇನಾಗಬೇಕಿದೆ…ಯಾರು ಕೊಲ್ಲವವರು,ಯಾರು ಸಾಯುವವರು,ದಟ್ಟಗಿನ ಕೆಂಪು ನೆತ್ತರವಾರೆ ಕಣ್ಣಲ್ಲಾದರೂನೋಡುತ್ತಾ ಬಂದಿದ್ದೇನೆನಿಜವಾಗಿಯೂ ನನಗೆಇಂದಿಗೂ ನೆನಪಿದೆ… ದೇವಾಲಯಕ್ಕೆ ಹೊಕ್ಕುವಾಗನನ್ನ ದಿರಿಸು ನೋಡಿಬರೆ ಹೊಟ್ಟೆಯವರು ಬೇಡುವುದನ್ನುಸತ್ಯವಾಗಿಯೂ ನಾನು ಕೇಳಿಸಿಕೊಂಡಿದ್ದೆ –’ಅಯ್ಯಾ ಏನಾದ್ರೂ ಕೊಡಪ್ಪಾ..!’ಹುಂ….ನನ್ನ ಭಕ್ತಿಯೇ ನನ್ನ ಶಕ್ತಿಕಣ್ಣ ಮುಚ್ಚಿ ಕೈ ಎತ್ತಿಭಕ್ತಿಯಿಂದ ಮಾಡಿದ … Read more

“ಸಾಧಾರಣ ಮದುವೆಯಲ್ಲ, ವಿಶೇಷ ಆತಿಥ್ಯ”: ರಶ್ಮಿ ಎಂ ಟಿ

ನಾನು ಅಂಗವಿಕಲತೆಯ ಸಮುದಾಯದಲ್ಲಿ ಕೆಲಸ ಮಾಡುವಾಗ ಕೇವಲ ಅಂಗವಿಕಲ ವ್ಯಕ್ತಿಗಳ ಕುಟುಂಬ ಮಾತ್ರವಲ್ಲದೆ ನೆರೆಹೊರೆಯವರ ಜೊತೆಯೂ ಸಂಭಾಷಣೆ ಮಾಡಬೇಕಾಗುತ್ತದೆ, ಒಂದು ದಿನ ಸಮುದಾಯದಲ್ಲಿ ಅಂಗವಿಕಲ ವ್ಯಕ್ತಿಗಳ ಮನೆ ಬೇಟಿ ಮಾಡುವ ಸಂದರ್ಬದಲ್ಲಿ ಸುಮಾರು 25 ವರ್ಷದ ಆಸು ಪಾಸಿನ ಒಬ್ಬ ಯುವಕ ಕಾರಿನಿಂದ ಇಳಿದು ನನ್ನ ಬಳಿ ಬಂದು, ನಿಮಗೆ ಸಮಯವಿದ್ದರೆ ನಿಮ್ಮ ಜೊತೆ ಸ್ವಲ್ಪ ಮಾತನಾಡಬೇಕು, ನಿಮ್ಮಿಂದ ನನಗೆ ಒಂದು ಸಹಾಯ ಬೇಕು ಎಂದು ಕೇಳಿದರು. ಇಷ್ಟು ಶ್ರೀಮಂತ ವ್ಯಕ್ತಿ ನಾನೇನು ಇವರಿಗೆ ಸಹಾಯ ಮಾಡಬಹುದು, … Read more

ಪಂಜು ಕಾವ್ಯಧಾರೆ

ಎಲ್ಲಿ ಕವಿತೆ? ಹಾರಿದ ಕರ್ಕಶ ವಿಮಾನಕಾಣದ ಡ್ರೋನುಟ್ಯಾಂಕರು ಕ್ಷಿಪಣಿ ಶೆಲ್ಲುಬಂದೂಕ ಟ್ರಿಗರು ಎಳೆವ ಸದ್ದುಅಣುಸ್ಥಾವರಕ್ಕಳಿವುಂಟೆ!ಕಗ್ಗಂಟು ಉಕ್ರೇನು ಗಾಜಾಇಸ್ರೇಲು ಇರಾನುಮತ್ತೆಲ್ಲೋ ಗುಪ್ತಮಸೆಯುತ್ತಿವೆ ಹಲ್ಲುಒಪ್ಪಂದಗಳಿಗೆಲ್ಲ ಕಲ್ಲು ಸುಟ್ಟ ಕಿಟಕಿ ಬಾಗಿಲು ಕಪ್ಪಿಟ್ಟಅರೆ ಗೋಡೆಗಳ ಬೂದಿಮುದಿ ನಾಯಕರ ಮುಖ ವಿಕಾರಗಳುಎಚ್ಚರ ತಪ್ಪಿದ ಧಮಕಿಧಿಮಾಕು ಹೇಳಿಕೆಗಳ ತೆವಲುಹೃದಯವಿಹೀನ ಭೃತ್ಯರಭೂತ ನೃತ್ಯ ಆಕ್ರಂದನ ಸಾಮಾನ್ಯ ಹುಯಿಲುವಿಶ್ವತುಂಬಾ ಕದನ ಕುತೂಹಲಿಗಳುಯಾರು ಗೆದ್ದರು ಏಕೆ ಬಿದ್ದರುತನ್ನ ಮನೆ ಬಾಗಿಲ ಭದ್ರ ಗುಮಾನಿಗರು ಪುಟಾಣಿ ಕೈಗಳ ಗೊಂಬೆಗಳುನೆಲಕ್ಕುರುಳುಮರೆತ ಅಳುಚಿಣ್ಣರು ಬರೆವ ಚಿತ್ರಗಳಲ್ಲುಕಪ್ಪು ಹೊಗೆಯಾರದ ಪಿಸ್ತೂಲು ಇಂತಿರುವಲ್ಲಿಎಲ್ಲಿ ಯಾರಿಗೆ ಏಕೆಕವಿ … Read more

ಮತ್ತೆ ಒಂದು ನಾಟಕ: ಕೊಡೀಹಳ್ಳಿ ಮುರಳೀಮೋಹನ್

ತೆಲುಗು ಮೂಲ: ಕಸ್ತೂರಿ ಮುರಳೀಕೃಷ್ಣಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್ ನನ್ನ ಕಣ್ಣುಗಳು ಅವನ ನಡೆ, ನುಡಿಗಳನ್ನು ಹಿಂಬಾಲಿಸಿದವು. ಅವನ ನಡಿಗೆಯಲ್ಲೇ ಒಂದು ವಿಚಿತ್ರ ಲಯವಿತ್ತು. ಆ ಲಯ, ನನ್ನ ನಾಟಕದ ಮುಖ್ಯ ಪಾತ್ರದಂತೆಯೇ ಕಂಡಿತು. ‘ಯಾರವನು?’ ಎಂದು ನನ್ನ ಸಹೋದ್ಯೋಗಿಯನ್ನು ಕೇಳಿದೆ. ‘ಅವನು ಪ್ರಸಾದರಾವ್. ಒಂದು ರೀತಿಯಲ್ಲಿ ಹುಚ್ಚ. ಅವನ ವಿಷಯದಲ್ಲಿ ಯಾರೂ ತಲೆ ಹಾಕುವುದಿಲ್ಲ’ ಎಂದು ನಕ್ಕ. ಆದರೂ ನನ್ನ ಮನಸ್ಸು ಆತನನ್ನೇ ಹಿಂಬಾಲಿಸಿತು. ಆತ ಇನ್ನೊಬ್ಬರೊಂದಿಗೆ ನಗುತ್ತಾ, ಹರಟುತ್ತಿದ್ದ. ಆ ನಗು, ಆ ಹರಟೆಗಳಲ್ಲಿ … Read more

ಸ್ಮಾರ್ಟ್ವಾಚು ಮತ್ತು ಹಳದಿ ಮೀನು: ಡಾ. ವಿಶ್ವನಾಥ ಎನ್ ನೇರಳಕಟ್ಟೆ

ನೆರಳಿನಲ್ಲಿದ್ದ ಬಂಡೆಗಲ್ಲಿನ ಮೇಲೆ ನೀಳವಾಗಿ ಮೈಚಾಚಿದ್ದ ಸೋಂಪ ದಿಗ್ಗನೆ ಒಂದೇಸಲಕ್ಕೆಎದ್ದುಕುಳಿತ. ಒಳಸೇರಿದ್ದ ದಿವ್ಯಾಮೃತ ಇದುವರೆಗೂ ಬೇರೆ ಯಾವಯಾವುದೋ ಲೋಕದಲ್ಲಿ ತನ್ನನ್ನು ಸುತ್ತಾಡಿಸುತ್ತಿತ್ತು. ಈಗದು ವೈಜಯಂತೀ ಹೊಳೆಯ ತೀರಕ್ಕೆ ಒಗೆದಿದೆ ಎಂದುಕೊಂಡ. ಒಂದು ಹಳೆಯ ಪಂಚೆ ಅವನ ಕೆಳಮೈಯ್ಯನ್ನು ಅರ್ಧಂಬರ್ಧವಾಗಿ ಆವರಿಸಿತ್ತು. ಮೇಲ್ಗಡೆ ಇದ್ದದ್ದು ಬಗೆಬಗೆಯ ಶೂನ್ಯಾಕೃತಿಗಳಿಗೆ ಜೀವಂತ ಸಾಕ್ಷಿ ಎನಿಸಿದ್ದ ಬನಿಯನ್ನು. ಅಂಗಿ ಅಲ್ಲೇ ಆ ಬಂಡೆಗಲ್ಲಿನ ಹಿಂದೆ ಬಿದ್ದಿತ್ತು. ಏನೋ ಸದ್ದು ಕೇಳಿದಂತಾಯಿತಲ್ಲ! ಅದರಿಂದಲೇ ಅಲ್ಲವೇ ತನಗೆ ಎಚ್ಚರ ಆದದ್ದು!ಎಂದುಕೊಂಡ ಅವನು. ಯಾರೋ ನೀರಿಗೆ ಹಾರಿದ … Read more

ಅವರು ನಮ್ಮ ತಾಯಿ ಸಾರ್ !!!!!!: ನಾಗಸಿಂಹ ಜಿ ರಾವ್

ಕೆಲವೊಮ್ಮೆ ನಮಗಾಗುವ ಮುಜುಗರವನ್ನು ಪದಗಳಲ್ಲಿ ವಿವರಿಸಲು ಅಸಾಧ್ಯ. ಅಂತಹ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯೆ ನೀಡಬೇಕು ಅನ್ನುವುದೂ ಕಲ್ಪನೆಗೆ ಮೀರಿದ ಸಂವಹನಾ ಸಾಮರ್ಥ್ಯ. ಇಂತಹ ಒಂದು ಪ್ರಸಂಗ ನಾನು ಎದುರಿಸಿದೆ. ಆ ಪ್ರಸಂಗವನ್ನು ಸಮರ್ಥವಾಗಿ ನಿಭಾಯಿಸಲಿಲ್ಲ ಎಂಬುದು ನನ್ನ ಅನಿಸಿಕೆ. ನನ್ನ ಹುಟ್ಟೂರು ಹಾಸನದ ಬಾಲಕರ ಬಾಲಭವನದಿಂದ ನನಗೊಂದು ಅಹ್ವಾನ ಬಂದಿತ್ತು, ಆ ಬಾಲಕರ ಬಾಲಭವನದ ಸಿಬ್ಬಂದಿಗಳಿಗೆ ಮತ್ತು ಮಕ್ಕಳಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆಯ ಬಗ್ಗೆ ಮಾಹಿತಿ ನೀಡಿ ಅಲ್ಲಿ ಮಕ್ಕಳ ರಕ್ಷಣಾ ನಿಯಮಗಳನ್ನು ಸಿದ್ಧಪಡಿಸಲು … Read more

ಬದುಕಿಗೆ ಗುರಿ – ಗುರುವಿನ ಸಾಂಗತ್ಯವಿರಲಿ: ಮಧು ಕಾರಗಿ, ಕೆರವಡಿ

ತಮ್ಮ ಮಕ್ಕಳು ವಿದ್ಯಾವಂತರಾಗಲಿ ಎನ್ನುವುದು ಪ್ರತಿ ತಂದೆತಾಯಿಯ ಮನದಾಳದ ಮಾತು ಹಾಗೆಯೇ ಅವರು ಎಷ್ಟೋ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ .ತಮಗೆ ಬಡತನವಿದ್ದರೂ ಕೂಲಿ ಮಾಡಿ ದುಡಿದು ಮಕ್ಕಳನ್ನು ಓದಿಸುವ ಎಷ್ಟೋ ತಂದೆ ತಾಯಂದಿರಿದ್ದಾರೆ . ಇಂದಿನ ತಂತ್ರಜ್ಞಾನದ ದಿನಮಾನದಲ್ಲಿ ಅಶಿಕ್ಷಿತನೊಬ್ಬ ಬದುಕು ನಡೆಸುವುದು ಕಷ್ಟಸಾಧ್ಯ ಆದ್ದರಿಂದಲೇ ಶಿಕ್ಷಣ ಬದುಕಿನ ಅವಿಭಾಜ್ಯ ಅಂಗವಾಗಿದೆ” ಜೀವನವೇ ಶಿಕ್ಷಣ ; ಶಿಕ್ಷಣವೇ ಜೀವನ ” ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ . ಬಾಲ್ಯದಲ್ಲಿ ದೊಡ್ಡವರು ಯಾರಾದರೂ ನೀನು ದೊಡ್ಡವನಾ/ಳಾದರೆ ಮುಂದೆ ಏನಾಗಬಯಸುತ್ತಿ ಎಂದು … Read more

“ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು”: ಅಪೇಕ್ಷಾ ಎಂ ಎಸ್

ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳ ಜೀವನವು ತಂತ್ರಜ್ಞಾನ, ಸ್ಪರ್ಧೆ ಮತ್ತು ಹೊಸ ಆಲೋಚನೆಗಳ ನಡುವೆ ಸಾಗುತ್ತಿದೆ. ಮೊಬೈಲ್, ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ದಿನನಿತ್ಯದ ಬದುಕಿನ ಒಂದು ಭಾಗವಾಗಿವೆ. ಆದರೆ ಇವುಗಳ ನಡುವೆಯೂ ಉತ್ತಮ ಮಾರ್ಗದರ್ಶನದ ಅಗತ್ಯತೆ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ, ಬದಲಾಗಿ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವವರು, ದಾರಿದೀಪವಾಗುವವರು. ಅವರು ಜ್ಞಾನ ಮಾತ್ರ ನೀಡುವುದಲ್ಲದೇ ಜೀವನ ಮೌಲ್ಯಗಳನ್ನು ಬೋಧಿಸುತ್ತಾರೆ. ಶ್ರದ್ಧೆ, ಶಿಸ್ತು, ಪರಿಶ್ರಮ ಮತ್ತು ಮಾನವೀಯತೆ ಎಂಬ … Read more

ಗುರುವಂದನೆ: ಚಂದಕಚರ್ಲ ರಮೇಶ ಬಾಬು

| ಗುರುಃ ಬ್ರಹ್ಮ ಗುರುಃ ವಿಷ್ಣುಃ ಗುರುಃ ದೇವೋ ಮಹೇಶ್ವರಃ|ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ || ವೇದಕಾಲದಿಂದಲೂ ನಮ್ಮ ಭಾರತದಲ್ಲಿ ಗುರು ಶಿಷ್ಯ ಪರಂಪರೆಯಿಂದಲೇ ವಿದ್ಯೆಯ ಕಲಿಕೆ ಸಾಗಿ ಬಂದಿದೆ. ತನ್ನ ಅರಿವಿಗೆ ಬಂದದ್ದನ್ನೆಲ್ಲವನ್ನೂ ಶಿಷ್ಯನಿಗೆ ಧಾರೆ ಎರೆಯುವ ಗುರು, ಗುರುವಿಗೆ ತನ್ನ ತನು ಮನಗಳಿಂದ ಸೇವೆ ಮಾಡಿ ಅವರ ಜ್ಞಾನವನ್ನು ತಾನು ಪಡೆದು ಮುಂದೆ ತಾನೊಬ್ಬ ಶ್ರೇಷ್ಠ ಗುರುವಾಗಿ ತನ್ನ ಶಿಷ್ಯರಿಗೆ ಜ್ಞಾನ ಹಂಚುವುದು ಇದು ಪರಂಪರೆ. ಇದೇ ರೀತಿಯಲ್ಲಿ ಪ್ರಾಚೀನ … Read more

ಬಂಡಾಯ ಚಿಂತನೆಯ ಒಂದು ಕೃತಿ – “ಹಕೀಮನೊಬ್ಬನ ತಕರಾರು”: ನಾರಾಯಣಸ್ವಾಮಿ ವಿ (ನಾನಿ)

ಹಿಂದಿನ ಕಾಲದ ಕನ್ನಡ ಸಾಹಿತ್ಯದಲ್ಲಿ ಅಂದರೆ ದಾಸ ಸಾಹಿತ್ಯ, ವಚನ ಸಾಹಿತ್ಯ ಪ್ರಾರಂಭವಾದಾಗ ಬಂಡಾಯದ ಸಾಲುಗಳು ಪ್ರಾರಂಭವಾದರೂ ಕೂಡ ಎಂಭತ್ತರ ದಶಕದಲ್ಲಿ ಬಂಡಾಯ ಸಾಹಿತ್ಯ ಉಚ್ಛ್ರಾಯ ಸ್ಥಿತಿಗೆ ಬಂತು ಅಂತಲೇ ಹೇಳಬಹುದು. ಅಂದಿನ ಕಾಲದಲ್ಲಿ ನೆಲೆಯೂರಿನಿಂತಿದ್ದ ಅಸ್ಪೃಶ್ಯತೆ, ಸಮಾನತೆ, ಶೋಷಣೆ ಮುಂತಾದ ವಿಷಯಗಳ ಬಗ್ಗೆ ವಿರೋಧಿಸುತ್ತಾ, ಅನ್ಯಾಯದ ವಿರುದ್ಧ ಲೇಖಕರು ತಮ್ಮ ಬರವಣಿಗೆಯ ಮೂಲಕ ಸಮಾಜದ ಮತ್ತು ಸರ್ಕಾರದ ವಿರುದ್ದ ಹೋರಾಡುವ ಬರಹದ ಮೂಲಕ ಜನರ ಮನೋಭಾವವನ್ನು ತಿದ್ದಲು ಪ್ರಯತ್ನ ಪಡುತ್ತಿದ್ದರು. ಅದರೆ ಇವತ್ತಿನ ದಿನಗಳಲ್ಲಿ ಕನ್ನಡ … Read more

“ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಬ್ಬರು ಸಾಧನೆಯ ಬಿಂಬ-ಪ್ರತಿಬಿಂಬ”: ಚಂದನ ಮಲ್ಲಿಕಾರ್ಜುನ್

ಕಲಿಯುಗದಲ್ಲಿ ವಿದ್ಯಾರ್ಥಿಗಳು ಗುರು-ಶಿಷ್ಯರ ಸಂಬಂಧ ಕೇವಲ ಪುಸ್ತಕದಲ್ಲಿ ಇರುವುದನ್ನು ಬೋಧಿಸುವ ತನಕ ಎಂದು ಭಾವಿಸಿದ್ದಾರೆ. ಆದರೆ ಗುರುಗಳಕ ತಮ್ಮ ವಿದ್ಯಾರ್ಥಿಗಳಲ್ಲಿ ಇಟ್ಟಿರುವ ಪ್ರೀತಿ, ವಿಶ್ವಾಸ ಯಾವುದಕ್ಕೂ ಸಮನಾಗಿರುವುದಿಲ್ಲ. ಶಿಕ್ಷಕರು ಹೇಳುವ ಒಂದು ಸಾಲಿನ ಅರ್ಥ ಮೇಲ್ನೋಟಕ್ಕೆ ಸಾಮಾನ್ಯವಾಗಿರಬಹುದು. ಆದರೆ ಅದರಲ್ಲಿ ನಿಗೂಢ ಅರ್ಥವನ್ನು ತಿಳಿದುಕೊಳ್ಳುವುದು ವಿದ್ಯಾರ್ಥಿಗಳ ಕೈಯಲ್ಲಿರುತ್ತದೆ. ಇದನ್ನು ಅರ್ಥಮಾಡಿಕೊಂಡ ವಿದ್ಯಾರ್ಥಿಗಳ ಜೀವನವು ಕಾಮನ ಬಿಲ್ಲಿನಂತೆ ಸುಂದರವಾಗಿರುತ್ತದೆ. ವಿದ್ಯಾರ್ಥಿಗಳ ಜೀವನವು ಒಂದು ಸುಂದರವಾದ ಬಿಳಿಯ ಹಾಳೆಯ ರೀತಿ. ಅದರ ಮೇಲೆ ಸಣ್ಣ ಕಪ್ಪುಚುಕ್ಕೆ ಬಿದ್ದರು ಅವರ ತಂದೆ … Read more

ಮಕ್ಕಳ ಕವಿತೆಗಳು

ಶ್ರೀ ಗುರುವೇ ಗುರುವೇ ನಿಮಗೆ ನಮನನಿಮ್ಮಿಂದಲೇ ಪಡೆದೆವು ಜ್ಞಾನಜ್ಞಾನದ ದೀಪವನು ಹಚ್ಚಿದಿರಿಅಂಧಕಾರವ ದೂರ ಸರಿಸಿದಿರಿ. ನಿಮ್ಮ ಮಾತುಗಳು ಕೇಳಲುನಮ್ಮಿಂದ ತಪ್ಪುಗಳಾಗದುಕೀಟಲೆ, ಕಿತಾಪತಿಗಳೆಂದಿಗೂನಮ್ಮಿಂದ ಎಂದೆಂದಿಗಾಗದು‌. ತಿಳಿದೋ ತಿಳಿಯದೆಯೋನೋವುಂಟು ಮಾಡಿದ್ದರೆ ನಾವುಕೈಮುಗಿದು, ಶಿರಬಾಗಿ ನಿಮಗೆಕ್ಷಮೆಯ ಕೇಳುವೆವು ನಾವು. ನೀವು ನೀಡಿದ ಶಿಕ್ಷಣವುನಮ್ಮೆಲ್ಲರ ಬದುಕಿಗೆ ಉಸಿರುಪ್ರತಿಕ್ಷಣವೂ ಮರೆಯದೇಸ್ಮರಿಸುವೆವು ನಿಮ್ಮ ಹೆಸರು. ಅಭಿನಂದನಾ ಕೆ ಎಂ ಗೆಲ್ಲುವಿರಿ ನಿಮ್ಮ ದಿನಗಳುಚಲಿಸುತ್ತಿವೆ ಬೇಗಅದಕ್ಕಾಗಿ ಸತತವಿರಲಿನಿಮ್ಮ ಶ್ರಮದ ವೇಗ. ಜೀವನದಲ್ಲಿ ಒಂದೇ ಸಾರಿಬಂದೇ ಬರುತ್ತದೆ ಯೋಗಆಗ ನಿಮಗೆ ಸಮಾಜದಲ್ಲಿಸಿಗುವುದು ಉನ್ನತ ಜಾಗ. ನಿಮ್ಮ ಗುರಿಯೆಂದಿಗೂದೊಡ್ಡ ದೊಡ್ಡದಾಗಿರಲಿಗುರಿ … Read more

ವೃದ್ಧೋಪನಿಷತ್ (6-10): ಡಾ ರಾಜೇಶ್ವರಿ ದಿವಾಕರ್ಲ

6. ವಯಸ್ಸು ಮರಳಿದ ಹಾಡುದಿಗಂತ ರೇಖೆಸ್ವಲ್ಪ ಮಂಜಾಗುತ್ತದೆ.ವರ್ಷಗಳುಎಲೆಗಳಂತೆ ಉದುರೋಗುತ್ತಲಿವೆ.ಸ್ನೇಹಿತರು ಸಾಯುತ್ತಾಸ್ಮೃತಿ ನಕ್ಷತ್ರಗಳಾಗುತ್ತಾರೆದೃಶ್ಯ ಗಳಿಗೆಫ್ರೆಮುಗಳು ಅಮರುತ್ತವೆಲೋಕಮಾರ್ಪಾಡಾಗುತ್ತಲಿದೆಎಂದು ಆರ್ಥವಾಗಿದೆ. ನಮ್ಮ ಮಾತುಗಳಿಗೆಬೇಕಾಗಿರುವ ಉತ್ತರಗಳು ಬರಲ್ಲ.ನಮ್ಮ ಮಾತುಗಳಲ್ಲಿ ಕೆಲವುಚಲಾವಣೆ ಯಾಗದ ನಾಣ್ಯ ಗಳಾಗುತ್ತವೆ. ವಯಸ್ಸು ಮರಳಿದೆ ಶರೀರ ಗಳಿಗೆಪ್ರಾಧಾನ್ಯತೆಗಳು ಅದಲು ಬದಲಾಗುತ್ತವೆ.ಜೀವನ ಮರಣಗಳ ನಡುವೆ ಸ್ಪಷ್ಟವಾದರೇಖೆ ಗಳು ಚೆದರಿಹೋಗುತ್ತವೆ. ದೇಶಗಳ ಗಡಿ ಗಳುಬದಲಾಗುತ್ತವೆಕ್ರಾಂತಿ ಗೆಹೊಸ ಆವಶ್ಯಕತೆ ಗಳುಂಟಾಗುತ್ತವೆ. ಕೆಲವುಸಲ ಸೂರ್ಯನುಸುಸ್ತಾಗಿ ಉದಯಿಸುವುದೇ ಗೊತ್ತಾಗುವುದಿಲ್ಲಆಗ ಬದಲಾವಣೆ ಎಂದರೆಪುರೋಗಮನದ ಪ್ರತೀಕ್ಷೆ.ಈಗ ಬದಲಾವಣೆ ಎಂದರೆಭಯವಾಗುತ್ತದೆ. ಯಾರನ್ನೊಕರೆಯುತ್ತೀವಿವಾಸ್ತವವಾಗಿ ಯಾರನ್ನುಕರಿಯುವುದೋ ತಿಳಿಯದು.ವಯಸ್ಸು ಮೇಲೆ ಬೀಳುತ್ತಲಿದೆಆಕಾಶದಲ್ಲಿ ಮೋಡಗಳು ಹಮ್ಮುಕೊಳ್ಳುತ್ತಲಿವೆ. 7. … Read more

ಎರಡು ತೆಲುಗು ಕವಿತೆಗಳ ಅನುವಾದ

ಕದ ತೆರೆಯಿರಿ ಗಾಳಿಗೆ ಆಹ್ವಾನವಿರಲಿ, ಬೆಳಕಿಗೆ ಪ್ರವೇಶವಿರಲಿ,ಸೆರೆಹಿಡಿದ ಮನದಿ, ಬರಿದೆ ಗತದ ನೆನಪಲಿ,ಕತ್ತಲೆಯ ಗವಿಯಲಿ ಸುಮ್ಮನೆ ಅಲೆಯದಿರಿ.ನೆನಪಿಸಿಕೊಳ್ಳಿ ಬಂದ ದಾರಿಯ ಪಯಣವನು,ಎಲ್ಲ ಭಾವಗಳ ಬಿಡುಗಡೆ ಮಾಡಿ,ಯಾವುದೇ ದ್ವಾರದಿಂದ ಜಾರಿಹೋಗದಿರಿ. ನಿಮ್ಮ ಸತ್ವ ಜಗಕೆ ಕಾಣಲಿ, ಕಿಟಕಿ-ಬಾಗಿಲು ತೆರೆಯಿರಿ,ಬರುವವರು ಬರಲಿ, ಹೋಗುವವರು ಸಾಗಲಿ.ಮುಚ್ಚಿದ ಕಿಟಕಿಗಳ ಹಿಂದೆ ಅಡಗದಿರಿ ನೀವಿಂದು,ಅನಾದಿ ಕಾಲದ ಸ್ವಾತಂತ್ರ್ಯದ ಬೀಗಗಳ ಕಿತ್ತೊಗೆಯಿರಿ. ಮನದ ಕದವ ತೆರೆದಿಡಿ, ತೊಳೆಯಿರಿ ಕಲ್ಮಷಗಳನು,ಮುಖ್ಯದ್ವಾರಗಳು ಸದಾ ತೆರೆದಿರಲಿ ಪೂರ್ಣವಾಗಿ,ಯಾವುದನ್ನೂ ಕಳೆವ ಭಯದ ಭ್ರಮೆಯ ಬಿಡಿ.ಹೃದಯದ ಕೋಣೆಗಳಿಗೆ ಬೀಗ ಹಾಕುವುದು ಸಲ್ಲ, ಅರಿಯಿರಿ. … Read more

ಮಾಸಿದ ಪಟ: ಎಫ್.‌ ಎಂ. ನಂದಗಾವ

ಕ್ರಿಸ್ಮಸ್ ಬಂತಂದ್ರ ನನಗ ನಮ್ಮ ಮನ್ಯಾಗಿದ್ದ ಮಾಸಿದ ಪಟ ನೆನಪಾಗ್ತದ. ಸಣ್ಣಾಂವ ಇದ್ದಾಗ ನಾ ಮಾಡಿದ್ದ ಹಳವಂಡದ ಕೆಲಸ ನೆನಪಾಗಿ ಮನಸ್ಸ ಖಜೀಲ ಆಗ್ತದ. ನನಗ ತಿಳಿವಳಿಕಿ ಬಂದಾಗಿಂದಲೂ, ನಮ್ಮ ಮನೆಯ ದೇವರ ಪೀಠದಾಗ ಅಪ್ಪ ಜೋಸೆಫ್, ಅವ್ವ ಮರಿಯವ್ವ ಮತ್ತು ಬಾಲಯೇಸುಸ್ವಾಮಿ ಅವರ ಪವಿತ್ರ ಕುಟುಂಬದ ಚಿತ್ರಪಟದ ಜೋಡಿ ಒಬ್ಬರು ಸ್ವಾಮಿಗಳ ಚಿತ್ರಪಟಾನೂ ಐತಿ. ಕನ್ನಡ ಸಾಲಿ ಓದ ಮುಗಿಸಿ, ನಾನು ಪ್ಯಾಟಿಯೊಳಗಿನ ಹೈಸ್ಕೂಲ್ ಕಟ್ಟಿ ಏರಿದಾಗ ನನ್ನ ಸಹಪಾಠಿಗಳು ನಮ್ಮ ಮನಿಗೆ ಬಂದಾಗಲೆಲ್ಲಾ, `ಅದೇನೋ, … Read more

ಸಾಂಪ್ರದಾಯಿಕವಾಗಿ ಆಚರಿಸುವ ಪ್ರಾಣಿ ಸ್ಪರ್ಧೆಗಳು, ಪ್ರಾಣಿ ಹಿಂಸೆ ಹಾಗು ಪ್ರಾಣಿ ಕಲ್ಯಾಣದ ಅಗತ್ಯತೆ: ಡಾ. ಕಾವ್ಯ ವಿ.

ಜಲ್ಲಿಕಟ್ಟುಗುಮ್ಮೋಗೂಳಿಯ ಸ್ಪರ್ಧೆ ಹಾಗು ಬುಲ್ ಟೇಮಿಂಗ್ ಎಂದು ಕರೆಯಲ್ಪಡುವ ಜಲ್ಲಿಕಟ್ಟು, ಇದು ತೆಮಿಳುನಾಡಿನ ಸಾಂಪ್ರದಾಯಿಕ ಪೊಂಗಲ್ ಹಬ್ಬದ ಕ್ರೀಡೆಯಾಗಿದೆ. ಈ ಕ್ರೀಡೆಯಲ್ಲಿ ಕಂಗಾಯಾಮ್ ತಳಿಯ ಗೂಳಿಯನ್ನು ಸ್ಪರ್ಧೆಯ ಗುಂಪಿನಲ್ಲಿ ಬಿಡಲಾಗುತ್ತದೆ ಹಾಗು ಓಡುವ ಗೂಳಿಯನ್ನು ನಿಲ್ಲಿಸಲು ಸ್ಪರ್ಧಾಳುಗಳು ಗೂಳಿಯ ಗೂನನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತಾರೆ. ಇದರ ಜೊತೆಗೆ ಗೂಳಿಯ ಕೊಂಬಿಗೆ ಕಟ್ಟಿದ ಬಾವುಟವನ್ನು ಹಿಡಿದು ಅಂತಿಮ ಗುರಿಯನ್ನು ತಲುಪಬೇಕಿರುತ್ತದೆ. ಕಂಬಳಇದು ದಕ್ಷಿಣ ಕರ್ನಾಟಕದ ತುಳುನಾಡಿನ ಒಂದು ಸಾಂಪ್ರದಾಯಿಕ ಆಟವಾಗಿದ್ದು, ಇದರಲ್ಲ್ಲಿ ದಷ್ಟ ಪುಷ್ಟವಾಗಿ ಸಾಕಿರುವ ಕೋಣಗಳನ್ನು ಕೆಸರು ಭತ್ತದ … Read more

ವೃದ್ಧೋಪನಿಷತ್ (೧-೫): ಡಾ ರಾಜೇಶ್ವರಿ ದಿವಾಕರ್ಲ

ತೆಲುಗು ಮೂಲ: ಡಾ ಎನ್ ಗೊಪಿ ರವರ ವೃದ್ಧೋ ಪನಿಷತ್ ಕನ್ನಡ ಅನುವಾದ: ಡಾ ರಾಜೇಶ್ವರಿ ದಿವಾಕರ್ಲ 1. ವೃದ್ಧನು ವೃದ್ಧನೆಂದರೆಮುದುಕ ನೆಂದಲ್ಲವೃದ್ಧಿಹೊಂದಿದವನೆಂದರ್ಥಅಂತಹ ವೃದ್ಧಿಕಾಲದ ಪುರೋಗಮನದಲಿ ಮಾತ್ರವೆ ಅಲ್ಲ,ಅನುಭವದ ಪರಿಣತಿ ಯಲ್ಲಿಯೂ ಸಹವಯಸು ಕಳೆದಿರುವುದರಲಿ ಮಾತ್ರ ವಲ್ಲಮನಸು ಬೆಳೆದಿರುವುದುರಲ್ಲಿಯೂ ಸಹ,ಶಿಥಿಲವಾಗಿತ್ತಿರುವುದು ಶರೀರವೇ !ಆದರೆಅದು ಸಾಧಿಸಿದ್ದುಕಡಿಮೆಯೇನೂ ಅಲ್ಲ,ಗಿಡ ಹೊಂದಿದಸಾಫಲ್ಯ ವಂತಹುದೇ ಇದೂ ಸಹ.ಇದೊಂದು ಜ್ಞಾನದ ಕುಂಡ.ಜೀವನ ಬಿಗಿಹಿಡಿದ ತತ್ವವೃದ್ಧಾಪ್ಯ ವೆಂದರೆಪೊದೆತುಂಬಿದಅರಣ್ಯ ಯಾನದಲ್ಲಿಹಸಿರು ಹಾದಿಗಳನ್ನುಕೆತ್ತಿದ ಕಂಕಣ ಬದ್ದರುಸಂಸಾರ ಮಹಾ ಸಾಗರದಲ್ಲಿನೆಂದ ಮಮತೆಯ ಮುದ್ದೆಗಳು.ಜೀವನದ ವೇದಿಕೆಯಲ್ಲಿತಂದೆ ತಾಯಿತಾತ, ಗುರುಗಳ ಪಾತ್ರಗಳನ್ನೂನಿರ್ವಹಿಸಿದ ಸಿದ್ಧರುಈದಿನ … Read more

ನಿರ್ಲಿಪ್ತತೆಯಲ್ಲಿ ಹರಿದುಬಂದ ಜೀವಭಾವ “ಬೊಗಸೆ ನೀರು”: ಬಿ.ಕೆ.ಮೀನಾಕ್ಷಿ, ಮೈಸೂರು.

ಪತ್ರಕರ್ತನ ಸತ್ಯಕಥೆ: ಬೊಗಸೆ ನೀರುಲೇಖಕರು: ಅರುಣಕುಮಾರ ಹಬ್ಬುಪ್ರಕಾಶನ: ಸುದರ್ಶನ ಪ್ರಕಾಶನ, ಬೆಂಗಳೂರು. ಬೊಗಸೆ ನೀರನ್ನು ಹೀರಿ ಮುಗಿಸುವಷ್ಟರಲ್ಲಿ ಗಂಗೆಯಲ್ಲಿ ಮಿಂದು ಮಡಿಯಾದಂತಾಯಿತು. ಪದ ಕುಸಿಯೆ ನೆಲವಿಹುದು ಮಂಕುತಿಮ್ಮ ಎಂದು ಡಿವಿಜಿಯವರು ಹೇಳಿದಂತೆ ಪ್ರತಿಸಾರಿ ಮನುಷ್ಯ, ತನ್ನ ಚೈತನ್ಯವನ್ನು ಆತ್ಮಸ್ಥೈರ್ಯವನ್ನು ಕಳೆದುಕೊಂಡಾಗೆಲ್ಲ ಯಾವುದೋ ಒಂದು ದಿವ್ಯಶಕ್ತಿ ಆಸರೆಯಾಗಿ ಒದಗಿಬರುತ್ತದೆ ಎಂಬುದು ಸತ್ಯವಾದ ಮಾತು. ಬದುಕೆಂಬ ಕತ್ತಿಯಲಗಿನ ಮೇಲೆ ನಡೆಯುತ್ತಾ, ಜೀವನವನ್ನು ಸರಿದೂಗಿಸಲು ಸಮತೋಲನಗೊಳಿಸುತ್ತಾ, ಇಡೀ ಜೀವನವನ್ನೇ ಸವೆಸುವುದಿದೆಯಲ್ಲ ಅದಕ್ಕಿಂತ ದೌರ್ಭಾಗ್ಯ ಇನ್ನೊಂದಿಲ್ಲ. ಆದರೆ ಆ ದುರದೃಷ್ಟವನ್ನೇ ತನ್ನ ಪಾಲಿನ … Read more

ಈ ಪ್ರಶ್ನೆಗೆ ಉತ್ತರವೇನು?: ಕೊಡೀಹಳ್ಳಿ ಮುರಳೀ ಮೋಹನ್

ತೆಲುಗು ಮೂಲ: ಸಂಘಮಿತ್ರಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್ ದೇರೆಬೈಲು ಐ.ಟಿ. ಹಿಲ್ಸ್, ಟವರ್ ನಂಬರ್ 4, ಹತ್ತನೇ ಮಹಡಿ.ವಿವಿಧ ಕ್ಷೇತ್ರಗಳ ವಿಶ್ವಪ್ರಸಿದ್ಧ ವಿಜ್ಞಾನಿಗಳು ಮತ್ತು ಹಲವಾರು ದೇಶಗಳ ಸರ್ಕಾರಿ ಪ್ರತಿನಿಧಿಗಳಿಂದ ತುಂಬಿರುವ ಸಭಾಂಗಣ. ಇನ್ನೆಷ್ಟು ಹೊತ್ತು? ಇನ್ನು ಐದೇ ನಿಮಿಷ. ಇಡೀ ಜಗತ್ತು ಕಾತರದಿಂದ ಕಾಯುತ್ತಿರುವ ಅದ್ಭುತ ಆವಿಷ್ಕಾರವೊಂದು ಅಲ್ಲಿ ಸಂಭವಿಸಲಿದೆ. ನೋಡುತ್ತಿದ್ದಂತೆ, ವೇದಿಕೆಯ ಮೇಲೆ ತಿಳಿನೀಲಿ ಬಣ್ಣದ ತೆಳುವಾದ ಮಂಜು ಆವರಿಸಿತು. ಕುತೂಹಲಕ್ಕೆ ತೆರೆ ಎಳೆದಂತೆ, ಡಾ. ವಾಣಿ ಅವರ ಐದು ವರ್ಷಗಳ ಕಠಿಣ … Read more

ಹಕ್ಕರಕಿಯೂ, ಸಮೀಕ್ಷೆಯೂ: ಎಫ್.‌ ಎಂ. ನಂದಗಾವ

ʻʻನಾವ್, ಹಕ್ಕರಕಿ ಮಾರೂದಿಲ್ಲರಿ ಸಾವಕಾರರ.ʼʼ ʻʻಯಾಕವ್ವ, ಹಕ್ಕರಕಿ ನೀವ್ಯಾಕ ಮಾರೂದಿಲ್ಲ?ʼʼ ʻʻನಿಮಗ ಕಾಯಿಪಲ್ಲೆ ಬೇಕಲಾ? ಮೆಂತೆ ಪಲ್ಲೆ ಬೇಕೋ? ಪುಂಡಿಪಲ್ಲೆ ಬೇಕೋ, ಸಬ್ಬಸಗಿ ಬೇಕೋ, ರಾಜಗಿರಿ ಬೇಕೋ ತಗೊಳ್ರಿ. ಕೋತಂಬ್ರಿ ಬೇಕಾತು ತಗೊಳ್ರಿ. ಬರಿ ಕರಿಬೇವು ಕೊಡಾಂಗಿಲ್ಲ ನೋಡ್ರಿ.ʼʼ ಸಂತೆ ಮೈದಾನದ ಒಳಗೆ ಎತ್ತರದ ಕಟ್ಟೆಗಳಲ್ಲಿನ ಒಂದು ಕಟ್ಟೆಯಲ್ಲಿ ಕುಳಿತು ಕಾಯಿಪಲ್ಲೆ ಮಾರುತ್ತಿದ್ದ ಸಾಂವತ್ರಕ್ಕ ಹೇಳಾಕ್ಹತ್ತಿದ್ದಳು. ಸಾಂವತ್ರಕ್ಕನ ಹಣಿ ಮ್ಯಾಲ ಮೂರು ಬೆರಳಿನ ವಿಭೂತಿ ಇದ್ದರ, ಕೊರಳಾಗ ತಾಳಿ ಜೋಡಿ ಬೋರಮಾಳ ಮತ್ತು ಅವಲಕ್ಕಿ ಸರಗಳು ಇದ್ದವು. … Read more

ವಾಸು ಸಿಕ್ಕಿದ್ದು…. !!!!: ನಾಗಸಿಂಹ ಜಿ ರಾವ್

ಸಿಂಹಾವಲೋಕನ 5 ಸಮುದಾಯದ ಪುಲಪೇಡಿ ನಾಟಕದ ತಾಲೀಮಿನ ಸಮಯದಲ್ಲಿ ಒಂದು ಘಟನೆ ನಡೆಯಿತು. ನಾನು ಲಿಂಗದೇವರು ಹಳೆಮನೆಯವರ ಜೊತೆ ನನ್ನ ಪಾತ್ರದ ಬಗ್ಗೆ ಮಾಹಿತಿ ಕೇಳುತ್ತಾ ನಿಂತಿದ್ದೆ. ಆಗ ನನಗಿಂತ ಸ್ವಲ್ಪ ದೊಡ್ಡ ಹುಡುಗ ಬಂದು ” ನೀವು ನಾಗಸಿಂಹ ಅಲ್ವ ?? ” ಎಂದು ಕೇಳಿದ, ನನಗೆ ಆಶ್ಚರ್ಯ, ಮೈಸೂರಿಗೆ ಬಂದು ಇನ್ನೂ ನಾಲ್ಕು ತಿಂಗಳು ಆಗಿಲ್ಲ ಯಾರಪ್ಪ ಇವರು ? ನನ್ನ ಹೆಸರು ಇವರಿಗೆ ಹೇಗೆ ಗೊತ್ತು? ಹೌದು ನಾನೆ ನಾಗಸಿಂಹ, ನೀವು ಯಾರು … Read more