ಒಳತೋಟಿ: ಆನಂದ್ ಗೋಪಾಲ್

‘ಒಂದು ಶುಕ್ರವಾರ ಸರಿ; ಪ್ರತಿ ಶುಕ್ರವಾರವೂ ಕಾಲೇಜಿಗೆ ತಡ ಎಂದರೆ ಯಾವ ಪ್ರಿನ್ಸಿಪಾಲ್ ತಾನೆ ಸುಮ್ಮನಿರುತ್ತಾರೆ?’ – ಹೀಗೆ ಯೋಚಿಸುತ್ತಲೇ ಶೀಲಶ್ರೀ ಪ್ರಿನ್ಸಿಪಾಲರ ಕಚೇರಿಯೊಳಗೆ ಕಾಲಿಟ್ಟಳು. ಅದೇ ಅಲ್ಲಿಂದ ಎಲ್ಲಿಗೋ ಹೊರಟಿದ್ದ ಅವರು ಇವಳತ್ತ ನೋಡಲೂ ಸಮಯವಿಲ್ಲದವರಂತೆ ದುಡುದುಡು ನಡದೆಬಿಟ್ಟರು. ಶೀಲಶ್ರೀಗೆ ಇದು ತುಸು ಸಮಾಧಾನ ತಂದಿತು. ಆದರೂ ‘ವಾರದ ಮೀಟಿಂಗ್’ನಲ್ಲಿ ಇದನ್ನು ಅವರು ಪ್ರಸ್ತಾಪಿಸದೆ ಬಿಡುವವರಲ್ಲ ಎಂದು ಅವಳಿಗೆ ಗೊತ್ತಿತ್ತು! ಸದ್ಯ ಇವತ್ತಿಗೆ ಮುಜುಗರ ತಪ್ಪಿತು ಎಂದು ಹಾಜರಾತಿ ವಹಿಯಲ್ಲಿ ಸಹಿ ಹಾಕಿ ಕ್ಲಾಸ್ನತ್ತ ನಡೆದಳು. … Read more

ಸುಳ್ಳ ಸಾಕ್ಷಿಗಳ ಊರಿಗೆ: ಅಶ್ಫಾಕ್ ಪೀರಜಾದೆ

1 – Balu is imprisoned for murder. come soon sms ಓದುತ್ತಿದ್ದಂತೆಯೇ ನನಗೆ ದಿಗ್ಭ್ರಮೆಯಾಯಿತು ಮತ್ತು ಕಣ್ಣು ಸುತ್ತು ಬಂದಂತಾಗಿತ್ತು. ಬಾಲು ಒಂದು ಹೆಣ್ಣಿನ ಕೊಲೆ ಮಾಡಿ ಪೋಲೀಸರ ಅತಿಥಿಯಾಗಿದ್ದಾನೆ ಎಂದು ನನ್ನ ಇನ್ನೊಬ್ಬ ಗೆಳೆಯ ಕುಮಾರ್ ಬರೆದಿದ್ದ. ಆತ ಹೆಚ್ಚಿನ ವಿವರವೇನೂ ನೀಡಿರಲಿಲ್ಲ. ನನಗೆ ಕುಮಾರ್ ತಿಳಿಸಿದ ಸುದ್ದಿಯಿಂದ ಆಘಾತವಾಗಿದ್ದರೂ ಇದೆಲ್ಲ ಸತ್ಯವಾಗಿರಲಿಕ್ಕಿಲ್ಲ ಸತ್ಯವಾಗುವುದೂ ಬೇಡವೆಂದು ಮನದಲ್ಲಿ ಪ್ರಾರ್ಥಿಸಿದೆ. ಏಕೆಂದರೆ ಬಾಲುವಿನ ನಡವಳಿಕೆ ಸ್ವಭಾವದ ಪೂರ್ಣ ಪರಿಚಯ ನನಗಿದೆ. ಅವನ ನಿರ್ಮಲವಾದ ಪ್ರಶಾಂತವಾದ … Read more

ಬಸವಣ್ಣನ ವಚನಗಳಲ್ಲಿ ‘ಅವಳು’: ಮನು ಗುರುಸ್ವಾಮಿ

“ಹೆಣ್ಣಿನ ಚಂಚಲ ಮನಸ್ಥಿತಿಯ ಮೇಲೆ ಬಸವಣ್ಣನವರ ವಚನಗಳ ಪ್ರಯೋಗ”ಅವಳ ವಚನ ಬೆಲ್ಲದಂತೆ!ಹೃದಯದಲಿಪ್ಪುದೆಲ್ಲಾ ನಂಜು ಕಂಡಯ್ಯ!!ಕಂಗಳಲೊಬ್ಬನ ಕರೆವಳು ಮನದಲೊಬ್ಬನ ನೆನೆವಳು,ವಚನದಲೊಬ್ಬನ ನೆರೆವಳು!ಇಂತಿವಳ ತನು ಒಂದೆಸೆ, ಮನ ಒಂದೆಸೆ, ಮಾತೊಂದೆಸೆ!!ಈ ಮಾನಿಸಗಳ್ಳಿಯ ನನ್ನವಳೆಂದು ನಂಬುವಕುರಿನರರನೇನೆಂಬೆನಯ್ಯ ಕೂಡಲಸಂಗಮದೇವ. ಬಸವಣ್ಣನವರ ಇದೊಂದು ವಚನ ನನ್ನನ್ನು ತುಂಬಾ ಆಳವಾಗಿ ಚಿಂತನೆಗೆ ಗುರಿ ಮಾಡಿದೆ. ಮಹಾಮಾನವತಾವಾದಿಯಾದ ಬಸವಣ್ಣನವರ ವಚನವೊಂದು ದೃಢ ಮನಸ್ಸಿಲ್ಲದ ಹೆಣ್ಣೊಬ್ಬಳ ಬಗ್ಗೆ ಮಾತನಾಡುತ್ತಿರುವುದು, ‘ಹೆಣ್ಣು ಚಂಚಲೆ’ ಎಂಬ ವಿಚಾರವನ್ನು ಒತ್ತಿ ಹೇಳುತ್ತಿರುವುದು ಬಹಳ ಅಚ್ಚರಿ ತಂದಿತು. ಅನುಭವ ಇಲ್ಲದವ ಕವಿಯಾಗಲಾರ ಎಂಬ ಮಾತಿನಂತೆ … Read more

ಕ್ಷಮಿಸಿ ಸಂಪಾದಕರೇ. . ಕತೆ ಕಳುಹಿಸಲಾಗುತ್ತಿಲ್ಲ. . : ಸತೀಶ್ ಶೆಟ್ಟಿ ವಕ್ವಾಡಿ

“ಏನ್ರೀ ಅದು, ಅಷ್ಟು ಡೀಪಾಗಿ ಮೊಬೈಲ್ ನೋಡ್ತಾ ಇದ್ದೀರಾ, ಏನ್ ಗರ್ಲ್ ಫ್ರೆಂಡ್ ಮೆಸೇಜಾ ? ” ರಾತ್ರಿ ಊಟದ ಸಮಯದಲ್ಲಿ ಗೆಳೆಯ ಪ್ರಕಾಶ ಮೈಸೂರಿನ ಅಕ್ಕನ ಮನೆಗೆ ಹೋದವ ತಂದು ಕೊಟ್ಟ ನಾಟಿ ಕೋಳಿಯಿಂದ ಮಾಡಿದ ಚಿಕ್ಕನ್ ಸುಕ್ಕ ಮೆಲ್ಲುತ್ತಿದ್ದ ಹೆಂಡತಿ ನನ್ನ ಕಾಲೆಳೆದಿದ್ದಳು ” ಅಲ್ಲ ಕಣೆ. . ಪ್ರಪಂಚದಲ್ಲಿ ಯಾವ ಗಂಡಸಿಗಾದರೂ ಹೆಂಡತಿ ಎದುರುಗಡೆ ತನ್ನ ಗರ್ಲ್ ಫ್ರೆಂಡ್ ಮೆಸೇಜ್ ನೋಡುವ ಧೈರ್ಯ ಇರುತ್ತೆ ಹೇಳು ? ಅದು ನಮ್ಮ ನಟರಾಜ್ ಡಾಕ್ಟರ್ … Read more

ಜವಾಬ್ದಾರಿ: ಬಂಡು ಕೋಳಿ

ಗುರುಪ್ಪ ಚಿಂತಿ ಮನಿ ಹೊಕ್ಕು ಕುಂತಿದ್ದ. ಹಿಂದಿನ ದಿನ ಊರಿಂದ ಬಂದಾಗಿಂದ ಅವ್ನ ಮಾರಿ ಮ್ಯಾಲಿನ ಕಳೀನ ಉಡುಗಿತ್ತು. ಅವ್ವ ಅಂದಿದ್ದ ಮಾತು ಖರೇನ ಅವ್ನ ಆತ್ಮಕ್ಕ ಚೂಪಾದ ಬಾಣದಂಗ ನಟ್ಟಿತ್ತು. ಅದೆಷ್ಟ ಅಲಕ್ಷ ಮಾಡಾಕ ಪ್ರಯತ್ನಿಸಿದ್ರೂ ಆತ್ಮಸಾಕ್ಷಿ ಅವನನ್ನ ಅಣಕಿಸಿ ಮತ್ಮತ್ತ ಹಿಂಸಿಸಾಕ ಹತ್ತಿತ್ತು. ಮನಸ್ಸಿನ ಮೂಲ್ಯಾಗ ಒಂದ್ಕಡಿ ತಾನು ಹಡೆದಾವ್ರಿಗಿ ಮೋಸಾ ಮಾಡಾಕ ಹತ್ತೇನಿ ಅನ್ಸಾಕ ಹತ್ತಿತ್ತು. ಒಂದ್ರೀತಿ ಅಂವಗ ಎದ್ರಾಗೂ ಚೌವ್ವ ಇಲ್ದಂಗಾಗಿ ತನ್ನಷ್ಟಕ್ಕ ತಾನ ಅಪರಾಧಿ ಮನಸ್ಥಿತಿಯೊಳ್ಗ ಕುಸ್ದ ಕುಂತಿದ್ದ. ಕಾಲೇಜಿನ್ಯಾಗ … Read more

ಇಡಿ ಕಿಡಿ ಕವಿತೆಗಳು: ಅನುಸೂಯ ಯತೀಶ್

ಮಂತ್ರಮುಗ್ಧಗೊಳಿಸುವಅಕ್ಷರ ಮಾಂತ್ರಿಕನ ಕಾವ್ಯ ಚಮತ್ಕಾರಿಕೆಯಲ್ಲರಳಿದಇಡಿ ಕಿಡಿ ಕವಿತೆಗಳು. ಹನಿಗವಿತೆಗಳ ಚಕ್ರವರ್ತಿ, ಚುಟುಕುಗಳು ರಾಜ, ಶಬ್ದ ಗಾರುಡಿಗ, ಹರಟೆಯ ಕವಿ, ಕಾವ್ಯ ಲೋಕದ ವಿದೂಷಕ, ಹಾಸ್ಯ ಲೇಖಕ, ನಗು ಬಿಗುವಿನ ಕವಿ, ಸಾಮಾಜಿಕ ಪ್ರಜ್ಞೆಯ ಬರಹಗಾರ ಮುಂತಾದ ನಾಮಾಂಕಿತಗಳಿಗೆ ಭಾಜನರಾದ ನಮ್ಮ ನಾಡಿನ ಹೆಮ್ಮೆಯ ಕವಿಯನ್ನು ಕನ್ನಡದ ಹಿರಿಯ ಹಾಗೂ ಶ್ರೇಷ್ಠ ಸಾಹಿತಿಗಳಾದ ಅ.ರಾ.ಮಿತ್ರರವರು “ಇಡಿ ಕಿಡಿ ಕವನಗಳು” ಕೃತಿಯ ಮುನ್ನುಡಿಯಲ್ಲಿ ಓದುಗರಿಗೆ ಪರಿಚಯಿಸಿರುವ ಪರಿಯಿದು. “ಚೇಷ್ಟೆಯ ಬುದ್ಧಿಯ ತುಂಟತನ ಇವಗುಂಟುಶಬ್ದಗಳ ವಕ್ರ ಸಂಚಾರವೂ ಉಂಟುಮೂಲೆ ಮೂಲೆಗಳಲ್ಲಿ ಬಾಯಾಡಿಸುವ … Read more

ಮಂಜಿನಂತೆ ಮರೆಯಾದ ಮಂಜುಳಾ: ಎಂ. ಜಿ. ರವೀಂದ್ರ

ಚಂದನವನದ ಮಂಜುಳಾ ರವರು ಮರೆಯಾಗಿ 35 ವರ್ಷಗಳು ಗತಿಸಿದರೂ ಅವರ ಮನೋಜ್ಞ ಪಾತ್ರಗಳು ಇಂದಿಗೂ ಜೀವಂತ. ಸ್ವಾಭಿಮಾನಿ ಹೆಣ್ಣಿನ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸುತ್ತಿದ್ದರು. ಸುಮಾರು 100ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಎರಡು ಕನಸು, ಸಂಪತ್ತಿಗೆ ಸವಾಲ್, ಮೂರುವರೆ ವಜ್ರಗಳು ಮುಂತಾದ ಚಿತ್ರಗಳಲ್ಲಿ ಡಾ. ರಾಜಕುಮಾರ್ ರವರ ಜೊತೆ ನಟಿಸಿ ತಮ್ಮ ಅಭಿನಯ ಪ್ರೌಢ ಪ್ರತಿಭೆ ಪ್ರದರ್ಶಿಸಿ ಇಂದಿಗೂ ಚಿರಸ್ಥಾಯಿಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ವಿಷ್ಣುವರ್ಧನ್, ಶಂಕರನಾಗ್, ಶ್ರೀನಾಥ್ ಮುಂತಾದ ನಟರ ಜೊತೆಗೆ ಅತ್ಯುತ್ತಮ ವಾಗಿ ಆಭಿನಯಿಸಿ … Read more

ನೆತ್ತರ ಕಲೆ ?: ಶರಣಗೌಡ ಬಿ ಪಾಟೀಲ ತಿಳಗೂಳ

ಆ ಘಟನೆ ನನ್ನ ಕಣ್ಮುಂದೆ ನಡೆದು ಹೋಯಿತು ಅದು ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಾಗಿದೆ ಇಂತಹ ಘಟನೆ ಇದೇ ಮೊದಲ ಸಲ ನೋಡಿದೆ ಅಂತ ಆಗ ತಾನೆ ಬಸ್ಸಿಳಿದು ಬಂದ ಫಕೀರಪ್ಪನ ಬೀಗ ಬಸಪ್ಪ ಶಂಕ್ರಾಪೂರದ ಕಟ್ಟೆಯ ಮೇಲೆ ದೇಶಾವರಿ ಮಾತಾಡುವವರ ಮುಂದೆ ಹೇಳಿದಾಗ ಅವರು ಗಾಬರಿಯಿಂದ ಕಣ್ಣು, ಕಿವಿ ಅಗಲಿಸಿದರು. ಬಾ ಬಸಪ್ಪ ಅಂಥಾದು ಏನಾಯಿತು? ಅಂತ ಪ್ರಶ್ನಿಸಿ ಅತಿಥಿ ಸತ್ಕಾರ ತೋರಿ ತಮ್ಮ ಮಧ್ಯೆ ಕೂಡಿಸಿಕೊಂಡರು. ಕಲ್ಬುರ್ಗಿ ರಿಂಗ ರಸ್ತಾ ಮೊದಲಿನಂಗ ಇಲ್ಲ ಜನರ … Read more

ಮುಷಾಯಿರಾದಲ್ಲಿ ಕಾವ್ಯವಾಚನ: ಹೆಚ್. ಶೌಕತ್ ಆಲಿ ಮದ್ದೂರು

ಚನ್ನಪಟ್ಟಣ ಗೊತ್ತಲ್ಲ, ಗೊಂಬೆಗಳ ನಾಡು ಎಂದು ಅದಕ್ಕೆ ಸರ್ಕಾರ ನೀಡುವ ಬಿರುದು. ಹಿಂದೂ ಮುಸ್ಲಿಂ ಭಾವೈಕ್ಯದ ನಾಡು ಎಂದು ಜನಸಾಮಾನ್ಯರ ನುಡಿ. ಕನ್ನಡ ವೇದಿಕೆಗಳು ಕನ್ನಡ ಸಂಘಟನೆಗಳು ಕನ್ನಡ ಸಂಘ ಸಂಸ್ಥೆಗಳು ಹತ್ತಾರು ಇವೆ. ಜನರ ಬದುಕು ಅವರ ವ್ಯಾಪಾರ ವಹಿವಾಟು ಬದುಕು ಬವಣೆಯೊಂದಿಗೆ ಅಪರೂಪಕ್ಕಾದರೂ ಒಂದೊಂದು ಸಾಹಿತಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದುಂಟು.ಆದರೆ ಇಲ್ಲಿ ಮುಸ್ಲಿಂ ಸಮುದಾಯದ ಉರ್ದು ಭಾಷೆಯಲ್ಲಿ ಪಾಂಡಿತ್ಯ ಹೊಂದಿರುವುದು, ಒಳ್ಳೊಳ್ಳೆ ಕೆಲಸ ಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವರ ಆಶಯದಂತೆ ಉರ್ದು ಕವಿಗೋಷ್ಠಿ, ಉರ್ದು … Read more

ಹುತ್ತದ ಅರಮನೆಯಲ್ಲಿ ವಿಷದ ಸುಂಟರಗಾಳಿಯು: ಶ್ರೀಧರ ಬನವಾಸಿ

“ಆಂಧ್ರದ ವೀರಬ್ರಹ್ಮೇಂದ್ರಸ್ವಾಮಿ ಎಂಬ ಕಾಲಜ್ಞಾನಿಗಳು ಮುನ್ನೂರು ವರ್ಷಗಳ ಹಿಂದೆನೇ ಈಶಾನ್ಯ ದಿಕ್ಕಿಂದ ಕೊರೊಂಗೊ ಅನ್ನೋ ಮಹಾಮಾರಿ ಕಾಯಿಲೆ ಇಡೀ ಜಗತ್ತನ್ನು ಆವರಿಸಿ ಜನ್ರ ನೆಮ್ದಿನಾ ಹಾಳ್ ಮಾಡುತ್ತೆ, ಜನ್ರು ಕಾಯಿಲೆಯಿಂದ ದಿನಾ ಸಾಯೋ ಹಂಗೆ ಮಾಡುತ್ತೆ ಅಂತ ಭವಿಷ್ಯವಾಣಿ ನುಡಿದಿದ್ರಂತೆ. ನೋಡ್ರಪ್ಪ ನಮ್ ದೇಶ್ದದಲ್ಲಿ ಎಂತಂಥಾ ಮಹಾನ್‌ಪುರುಷ್ರು ಈ ಹಿಂದೆನೇ ಬದುಕಿ ಬಾಳಿ ಹೋಗವ್ರೆ ಇಂತವ್ರ ಹೆಸ್ರನ್ನ ಈ ಹಾಳಾದ್ ಕೊರೊನಾ ಕಾಲ್ದಲ್ಲೇ ನಾವು ಕೇಳೊಂಗಾಯ್ತು. ಈ ಕೆಟ್ಟ ಕಾಯಿಲೆನಾ ಮುನ್ನೂರು ವರ್ಷಗಳ ಹಿಂದೇನೆ ಅವ್ರು ಹೇಳಿದ್ರು … Read more

ಪಂಜು ಕಾವ್ಯಧಾರೆ

ಒಮ್ಮೆ ಬಾರೋ.. ಒಮ್ಮೆ ಬಾರೋ ದೇವರೇನಮ್ಮ ನೋವಿನ ಹಾಡಿಗೆನೀರು ತುಂಬಿದ ಕಣ್ಣ ಹಣತೆಯಬೆಳಗಲಾಗದ ಪಾಡಿಗೆ. ದೇವ ನಿನ್ನನು ಪೂಜಿಸಿನೋವ ಪಡೆದೆವು ಪ್ರೀತಿಸಿಮಳೆಯ ಭ್ರಮೆಯನು ಮನದಿ ತಂದೆಯಸಿಡಿಲ ಎದೆಯಲಿ ಹೊತ್ತಿಸಿ? ನೆನ್ನೆಯೆಲ್ಲೋ ಕಳೆದಿದೆನಾಳೆ ಕಾಣದೆ ಅಡಗಿದೆನೆನ್ನೆ-ನಾಳೆಯ ಕಣ್ಣಾಮುಚ್ಚೆಯ–ಲಿಂದು ಸುಮ್ಮನೆ ಜಾರಿದೆ. ಏಕೆ ಹೀಗಿದೆ ಜೀವನ?ಯಾವ ವಿಷದ ಪ್ರಾಶನ?ಬೆಳಕ ಹುಡುಕುತ ಎದೆಯ ಕಡೆಯಲುಬೆಂಕಿ ದೊರೆಯುವ ಮಂಥನ. ಮೃದುಲ ಹೃದಯವೇ ಶಾಪವೇ?ಒಳಿತು ಬಗೆದುದೇ ಪಾಪವೇ?ಬಾಳ ಹೂವಿದು ಅರಳೊ ಜಾಗವುಸಾವು ಕುದಿಯುವ ಕೂಪವೇ? -ವಿನಾಯಕ ಅರಳಸುರಳಿ, ಪಾದಕ್ಕೊಂದು ಕಣ್ಣು ದೇವ ದೇವಳ ತೇರು … Read more

ನನ್ನೆದೆಯ ಗುಬ್ಬಚ್ಚಿ: ಸುರೇಖಾ ಕುಚನೂರ

ನನ್ನೊಲವಿನ ಜೀವವೇ……ನಿನ್ನೆದೆಯ ಗುಬ್ಬಚ್ಚಿಯ ಕಥೆ ಕೇಳು. ಹಗಲೆನ್ನದೇ, ಇರುಳೆನ್ನದೇ ನಿನ್ನೇ ನೆನಪಿಸಿಕೊಳ್ಳುವ ಹೃದಯದ ವ್ಯಥೆ ಕೇಳು. ಹಸಿವಿನ ಹಂಗಿಲ್ಲದೇ ನಿದಿರೆಯ ಗುಂಗಿಲ್ಲದೇ ನಿನ್ನ ಹೆಸರನ್ನೇ ಜಪಿಸುವ ಮನಸ್ಸಿನ ಗತಿ ಕೇಳು. ಆ ಒಂದು ದಿನ ನಿನ್ನ ನೋಡಿದಾಕ್ಷಣ ನನ್ನನ್ನೆ ನಾ ಮರೆತ ದಿನ. ನಿನಗರಿವಿಲ್ಲದೆ ನನ್ನನ್ನು ನೀ ಸೇರಿದ ದಿನ. ನನ್ನ ಉಸಿರೊಳಗುಸಿರಾದ ದಿನ. ಜಗವೇ ನನ್ನ ಮರೆತರೂ ನಾ ಹೇಗೆ ಮರೆಯಲಿ ಆ ದಿನವನ್ನು. ಅಂದಿನಿಂದ ಇಂದಿನವರೆಗೂ ಮರಳಿ ನೀ ನನಗೆ ಸಿಗುತ್ತಿಲ್ಲ. ಆದರೆ ನಾ … Read more

ಶಾಲಾ ಮಕ್ಕಳ ತರಲೆ ಕತೆಗಳ ವರ್ತಮಾನದ ಗಂಭೀರ ಕತಾ ಸಂಕಲನ “ಮಕ್ಕಳೇನು ಸಣ್ಣವರಲ್ಲ”: ರವಿರಾಜ್ ಸಾಗರ್

ಬಾಲಕನಾದರೂ ಬಾಲಕನು ಬಿಡುವ ಬಾಣವೇನೂ ಬಾಲಕನಲ್ಲ ಎನ್ನುವಂತೆ ಮಕ್ಕಳು ಸಣ್ಣವರಾದರೂ ಅವರ ಮಾತುಗಳು, ಪ್ರಶ್ನೆಗಳು ,ಕುತೂಹಲಗಳು, ಅವರ ತರಲೆಗಳು, ಅವರು ಸೃಷ್ಟಿಸುವ ಅವಾಂತರಗಳು ದೊಡ್ಡವು. ಶಿಕ್ಷಕರಾಗಿ ಎರಡು ದಶಕಗಳಿಂದ ಮಕ್ಕಳ ಜೊತೆ ಒಡನಾಟ ಇಟ್ಟು ಕೊಂಡು ಸಂವೇದನಶೀಲರಾಗಿರುವ ಗುಂಡುರಾವ್ ದೇಸಾಯಿಯವರು ಮಕ್ಕಳ ಮನೋವಿಜ್ಞಾನವನ್ನು ಚೆನ್ನಾಗಿ ಬಲ್ಲರು. ಅವರ ಸಾಹಿತ್ಯ ಕೃಷಿಯ ಅನುಭವ, ಮಕ್ಕಳ ಕಾಳಜಿ ಅವರ ಮಕ್ಕಳ ಕಥೆಗಳ ಸಂಕಲನ “ಮಕ್ಕಳೇನು ಸಣ್ಣವರಲ್ಲ” ಕೃತಿಯಲ್ಲಿ ವ್ಯಕ್ತವಾಗಿದೆ. ಮಕ್ಕಳ ಕಥೆಗಳು ಎಂದರೆ ಮಕ್ಕಳ ಮನೋರಂಜನೆ, ಮಕ್ಕಳಿಗೆ ನೀತಿ ಬೋಧನೆಯೇ … Read more

ರಕ್ತ ಸಂಬಂಧ: ಮಾಲತಿ ಮುದಕವಿ

ಅಂದು ಬೆಳಿಗ್ಗೆಯಿಂದಲೇ ನನ್ನ ತಲೆ ಚಿಂತೆಯ ಗೂಡಾಗಿತ್ತು. ಮಗ ಹಾಗೂ ಸೊಸೆ ಇಬ್ಬರೂ ಕೆಲಸಕ್ಕೆ ಹೋಗಿದ್ದರು. ಅವರು ಬರುವುದು ಇನ್ನು ಸಂಜೆಯೇ. ಅಲ್ಲದೆ ಸೊಸೆಯ ಎದುರು ಮಗಳನ್ನು ಬೈಯಲಾದೀತೆ? ಅವಳೆದುರು ಮಗಳ ಕಿಮ್ಮತ್ತು ಕಡಿಮೆಯಾಗಲಿಕ್ಕಿಲ್ಲವೇ? ಇನ್ನು ನನ್ನ ಗಂಡ ರವಿಯೋ ಈ ಅರುವತ್ತರ ಸಮೀಪದಲ್ಲಿಯೂ ಬಿಜಿನೆಸ್ ಎಂದು ಯಾವಾಗಲೂ ಟೂರಿನ ಮೇಲೆಯೇ ಇರುತ್ತಾರೆ. ನಾನು, ಇತ್ತೀಚೆಗೆ ಶ್ರೀವತ್ಸ ಹಾಗೂ ಅವನ ಹೆಂಡತಿ ಎಂದರೆ ನನ್ನ ಸೊಸೆ ನಂದಿನಿ ಕೂಡ “ನೀವು ಇದುವರೆಗೂ ದುಡಿದದ್ದು ಸಾಕು. . ಈಗ … Read more

ಮುಗ್ಧ ಮಾಂಗಲ್ಯ: ಸಿದ್ರಾಮ ತಳವಾರ

ಕೇರಿಯ ಮುಂಭಾಗದಲ್ಲೇ ಶತಮಾನಗಳಷ್ಟು ಹಳೆಯದಾದ ಹುಣಸೀಮರದ ಬುಡದಲ್ಲಿ ತಲೆ ಮೇಲೆ ಕೈ ಹೊತ್ತು ಪೇಚು ಮಾರಿ ಹಾಕಿಕೊಂಡು ಕೂತ ಕರವೀರನನ್ನು ಸಮಾಧಾನ ಮಾಡಲು ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಅಷ್ಟಕ್ಕೂ ಅಲ್ಲೇನಾಗಿದೆ ಅನ್ನೋ ಕುತೂಹಲವಂತೂ ಇತ್ತು. ಹೀಗಾಗಿ ಎಲ್ಲರ ಮುಖದಲ್ಲೂ ಒಂಥರದ ಭಯ, ಸಂಶಯ, ಕುತೂಹಲ ಮನೆ ಮಾಡಿದಂತಿತ್ತು. ಆಗಷ್ಟೇ ಹೊರಗಡೆಯಿಂದ ಬಂದ ಮಂಜನಿಗೆ ಆ ಬಗ್ಗೆ ಸ್ಪಷ್ಟತೆ ಏನೂ ಇರದಿದ್ದರೂ ಅಲ್ಲಿ ಒಂದು ದುರ್ಘಟನೆ ನಡೆದಿದೆ ಅನ್ನೋ ಗುಮಾನಿ ಮಂಜನ ತಲೆಯಲ್ಲಿ ಓಡುತ್ತಿತ್ತು. “ನನ್ ಮಗಳು ಅಂಥಾದ್ದೇನ … Read more

ಪಂಜು ಕಾವ್ಯಧಾರೆ

“ಹೊಲಿಗೆಯ ದರ್ಜಿಯವಳು ಬೇಕು” ಅಲ್ಲಲ್ಲಿ ಹರಿದ ಹೆಗಲುಗಳಿಗೆ ತೇಪೆ ಹಾಕಿಜೋಳಿಗೆಯ ಕಟ್ಟಿ ತಂಬೂರಿ ಕೊಟ್ಟುಕನಸು ಮನಸಿನ ಆಳ ಅರಿತುಮನಸುಗಳ ಬೆಸೆಯುವವಳುಬೇಕು ಯುವ ಕನಸುಗಳ ವ್ಯಾಖ್ಯಾನಿಸುವವಳು ವಿಶ್ವದ ಪೊರೆಬಿದ್ದ ಕಣ್ಣಿಗೆಪೊರೆಯ ತೆಗೆದು ಸತ್ಯಪ್ರೇಮವ ಸೃಷ್ಟಿಸುವವಳುಉಸಿರಿಗೆ ಹಸಿರಾಗಿ ಹೃದಯಗಳಿಗೆಪ್ರೇಮದ ರಕ್ತವ ಬಸಿಯುವವಳುಕೋಮು ಪಾಶಾಂಡದ ಬೇರಚಿವುಟಿ ಬೆಂಕಿಗಾಹುತಿ ಕೊಡುವವಳುಬೇಕು ವಿಶ್ವದ ಓಜೋನ್ ತೇಪೆಯ ಹೊಲಿಯುವವಳು ತಲ್ಲಣಗೊಂಡ ಯುವ ಮನಸುಗಳವಿದಾಯ ಕೇಳಿಸಿಕೊಂಡ ಕನಸುಗಳವಿಚಾರ ಕ್ರಾಂತಿಯ ನಡೆಸಿ ಮನವ ಬಲಪಡಿಸುವವಳುಸೂರೆಗೊಂಡ ಕನಸುಗಳ ಬಿಡಿಸಿಆ ಮನಗಳಿಗೆ ಪ್ರೇಮದ ಕೌದಿಯ ಹೊಲಿಯುವವಳುಬೇಕು ಸ್ನೇಹದೊಲಿಗೆಯ ಹಾಕುವವಳು ಸರ್ವಾಧಿಕಾರಿಯ ಆದೇಶದಂತೆಸುಟ್ಟ … Read more

ಗಜಲ್:‌ ಜಯಶ್ರೀ.ಭ.ಭಂಡಾರಿ., ರೇಣುಕಾ ಕೋಡಗುಂಟಿ, ಸರೋಜ ಪ್ರಶಾಂತಸ್ವಾಮಿ, ದೇವರಾಜ್ ಹುಣಸಿಕಟ್ಟಿ.

ಗಝಲ್ 1 ಸರೋವರದ ತುಂಬಾ ತೇಲಾಡುವ ಹಂಸೆಗಳುಸರೋವರದ ಸೊಬಗನು ಹೆಚ್ಚಿಸಿದ ಕಮಲಗಳು ಅದೇಕೋ ಸುಂದರ ಹಂಸೆ ತಪಗೈಯುತಿದೆಸಿಗದೆ‌ ಆಹಾರ ಮನನೊಂದಂತಿದೆ ಕಂಗಳಗಳು. ಹೆಜ್ಜೆ ಕಿತ್ತಿಡಲಾರದೆ ಸುಮ್ಮನೆ ಆಕಾಶ ನೋಡುತಿದೆ.ಲಜ್ಜೆಯ ತೆರದಿ ನಾಚಿದಂತೆ ಬೆಳ್ಳನೆ ರೆಶ್ಮೆಯ ಪಂಕಗಳು ಪಾದಗಳ ಒತ್ತಿ ಹಿಡಿದು ಜಪವ ಮಾಡುತಿದೆ ಎನಿಸುವುದುಪದಗಳ ಜೋಡಿಸಿ ವೈರಾಗ್ಯ ರಾಗದಿ ಹಾಡುವ ಕಂಗಳು ನೀಲ ಅಂಬರದಿ ಗುಟ್ಟಾಗಿ ಏನೋ ಹುಡುಕುತಿದೆಅಲೆಗಳು ಹೇಳುತಿವೆ ರಾತ್ರಿ ಬರುವುದು ಬೆಳದಿಂಗಳು ಕೆಂಪು ಎತ್ತರದ ಮೂಗು ತಂಪಾಗಿ ಉಬ್ಬಿ ಸೊಕ್ಕಿದಂತಿದೆ.ಮಂಪರು ಬಂದಂತೆ ಮಂಕಾಗಿ ಹಾರುದ … Read more

ಸಂದ್ಯಾಕಾಲ (ಮಿನಿಕಥೆ): ವೆಂಕಟೇಶ ಪಿ. ಗುಡೆಪ್ಪನವರ

ವಿದೇಶದಲ್ಲಿದ್ದ ಮಗ ಶೆಟ್ಟರ ಅಂಗಡಿಗೆ ಪೋನ್ ಮಾಡಿದ್ದನು. ‘ನಾನು ಊರಿಗೆ ಬರುವದಿಲ್ಲ, ನಾನು ಮದುವೆಯಾಗಿದ್ದೇನೆ, ನೀವು ಬೇಕಾದರೆ ಇಲ್ಲಿಗೆ ಬನ್ನಿ” ಇಳಿವಯಸ್ಸಿನ ಜೀವಗಳು ಎಷ್ಟು ಪರಿಪರಿಯಾಗಿ ಬೇಡಿದರು ಮಗ ಮರಳಿ ದೇಶಕ್ಕೆ ಬರುವುದೇ ಇಲ್ಲ. ಬಂಜೆ ಎನಿಸಿಕೊಂಡ ಜೀವಕ್ಕೆ ಈ ಮಗು ಯಾಕಾಗಿ ಬಂತೋ ಏನೋ ಎಂದು ಅನಿಸಿಕೊಂಡು ಅಡಿಕೆ ತೋಟದ ನೀರಿನ ಹೊಂಡದ ಹತ್ತಿರ ಕುಳಿತ ಇಳಿ ವಯಸ್ಸಿನ ಜೀವಗಳು ಕಣ್ಣೀರು ಹಾಕಿದಾಗ ನೆನೆಪು ಹಿಂದೆ ಹೋಯಿತು. ತೋಟದಲ್ಲಿ ಅಡಿಕೆ ಇಳಿಸಿದ ನಡುವಯಸ್ಸಿನ ಜೋಡಿ ಜೀವಗಳು … Read more

ವೇಣು ಜಾಲಿಬೆಂಚಿ ಅವರ ಕೃತಿ “ತಿಳಿಯದೇ ಹೋದೆ”: ಮಹಾದೇವ ಎಸ್, ಪಾಟೀಲ

ಕನ್ನಡ ಸಾಹಿತ್ಯ ಪರಂಪರೆ ದಿನದಿನೆ ಹುಲುಸಾಗಿ ಬೆಳೆಯುತ್ತ ಸಾಗಿದೆ. ಅದೊಂದು ಕಾಲದಲ್ಲಿ ಸಾಹಿತ್ಯ, ಬರಹವೆಂದರೆ ಪ್ರಾಧ್ಯಾಪಕರು,ಪಂಡಿತರಿಗೆ ಮಾತ್ರ ಸಿಮೀತ ವಾಗಿತ್ತು. ಆ ದಿನದ ಸಾಹಿತ್ಯವು ತನ್ನದೇ ಆದ ಛಂದೋಬದ್ಧ ಚೌಕಟ್ಟಿನಲ್ಲಿತ್ತು. ಆಧುನಿಕ ಸಾಹಿತ್ಯದ ಕಾಲದ ಈ ದಿನಮಾನದಲ್ಲಿ ‘ಮುಕ್ತಛಂದ’ದ ಮೂಲಕ ಎಲ್ಲವೂ ಮುಕ್ತವಾಗಿ ಅನಾವರವರಣಗೊಳ್ಳುತ್ತಿದೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ವಾಟ್ಸಪ್,ಫೇಸ್ ಬುಕ್ಕ್, ಇಂಟರ್ನೆಟ್ ಗಳ ಸಂಪರ್ಕ ಹಾಗೂ ಸಂವಹನದ ಮೂಲಕ ವೇದಿಕೆಯನ್ನು ಹಂಚಿಕೊಳ್ಳುವದರೊಂದಿಗೆ ಸಾಹಿತ್ಯ ಸಮೃದ್ಧವಾಗಿ ಬೆಳೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ರಾಯಚೂರಿನ ಸೃಜನಶೀಲ ಬರಹಗಾರ ಕವಿ,ಕಥೆಗಾರರಾದ ಶ್ರೀ … Read more

ವಿಶ್ವ ಸಾಹಿತ್ಯ ಎಂದರೇನು?: ಕಿರಣ್ ಕುಮಾರ್ ಡಿ

ವಿಶ್ವಸಾಹಿತ್ಯ ಎಂಬ ಪದವನ್ನು ಗೋಥೆ ಅವರು ಮಂಡಿಸಿದರು, ಅವರು ಜಾಗತಿಕ ಆಧುನಿಕತೆಯ ತಯಾರಿಕೆಯಲ್ಲಿ, ಕಾವ್ಯವು ಸಾರ್ವತ್ರಿಕ ಅನುಭೋಗವೆಂದು ಭಾವಿಸಿದರು. ಗೊಥೆ ಪ್ರಕಾರ ರಾಷ್ಟ್ರೀಯ ಸಾಹಿತ್ಯ ಈಗ ಅರ್ಥಶೂನ್ಯ ಪದವಾಗಿದೆ. ಗೊಥೆಯವರನ್ನು ವ್ಯಾಪಕವಾಗಿ ಜರ್ಮನ್ ಭಾಷೆಯ ಶ್ರೇಷ್ಠ ಮತ್ತು ಅತ್ಯಂತ ಪ್ರಭಾವಶಾಲಿ ಬರಹಗಾರ ಎಂದು ಪರಿಗಣಿಸಲಾಗಿದೆ.ಗೊಥೆಯ ಪದಗುಚ್ಛವು ವಿಶ್ವ ಸಾಹಿತ್ಯ ಎಂದರೇನು?, ಪಶ್ಚಿಮ ಯೂರೋಪ್ ಮತ್ತು ಭೂಗೋಳದ ಇತರೆ ಭಾಗಗಳ ನಡುವೆ ಯಾವ ಸಂಬಂಧವಿದೆ? , ಪ್ರಾಚೀನತೆ ಮತ್ತು ಆಧುನಿಕತೆಯ ನಡುವೆ ಯಾವ ಸಂಬಂಧವಿದೆ?, ಸಾಮೂಹಿಕ ಸಂಸ್ಕೃತಿ ಮತ್ತು … Read more