ಮೂವರ ಕವಿತೆಗಳು: ಜ್ಯೋತಿ ಕುಮಾರ್‌ ಎಂ. (ಜೆ.ಕೆ.), ಕುಸುಮ ರಾವ್, ಉಮಾ ಸೂಗೂರೇಶ ಹಿರೇಮಠ

ಉಗಾದಿ ಏಸೊಂದು ದಿವ್ಸಾತುನೀನು ಬಿಟ್ಟು ವ್ಹಾದಬ್ಯಾಸರದ ನೆನೆಕೆಗಳಿಗೆ ಎದೆ ಮ್ಯಾಲೆ ಬಂಡೆಏರಿಕೊಂಡು, ಬಡಕೊಂಡು.ಉಗಾದಿನೇ ಬಂತು ತಿರುಗಿ ಮನದ ಬಾಗ್ಲಮ್ಯಾಲಿನ ಮಾಂತೊಪ್ಲಒಣ್ಗಿ ಶ್ಯಾನೆ ಮಾಸಾತು ಬೇನ್ಗಿಡದ ತುಂಬಸಿ ನೆನಪಾ ಹೂಕಾದು ಬಿಟ್ಟಾವ ಭಾಳ ಕೋಗ್ಲಿಯ ಗಂಟ್ಲುವಿರಹ ಕಟ್ಟೈತಿಮೌನವಾಗಿ ಕುಂತೈತಿ ಶಾಬಾದಿ ಮಠ್ಕ್ಯಾಲೆಂಡರ್ ಕಾಯೋದಖಾಯಂ ಅಂದೈತಿ ಹಾಕ್ಕೊಂಡ ಅರಿವಿನಿನ್ನ ನೆನಪ ಜಳಕದಾಗತೋಯ್ದು ತಪ್ಡಿಯಾಗೈತಿ ಪಚ್ಚಿಮದ ಸಂಜಿ ಬಾನಾಗಚಂದ್ರನಂತ ನಿನ್ನ ಮಾರಿಕಂಡು ಜೀವ ಜಲ್ ಅಂದೈತಿ ಅಂದ್ರ ಬಾಹ್ರ ಆಟದಾಗನಗುವ ನಿನ್ನ ರಾಣಿ ಕಾರ್ಡ್ಸಿಕ್ಕಿ ಕೈ ಕೋಸಿರಾಡೈತಿ ಉಗಾದಿಯಾದ್ರೂಯಾಕ್ ಬಂತೋನಿನ್ನ ನೆನಪ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವಿತೆಗಳು: ಜೊನ್ನವ (ಪರಶುರಾಮ್ ಎಸ್ ನಾಗುರ್)

ಸ್ವಾತಂತ್ರ್ಯ ಭಾರತದಲ್ಲಿ ನೀರಿಗಾಗಿ ಸೂರಿಗಾಗಿಭಾವಕ್ಕಾಗಿ ಬಾಷೆಗಾಗಿದೇಶದೊಳಗೆ ಕದನಹೇಳು ಯಾರು ಕಾರಣ ಗುಡಿ ಗೋಪುರ ಮಣ್ಣಾದವುಮಸಿದಿ ಚರ್ಚ್ ಮುಕ್ಕಾದವುಪ್ರೇಮ ತುಂಬಿದೆದೆ, ಏಕೆ ಕಲ್ಲಾದವುಹಸಿ ನೆತ್ತರದ ಕಂಪು, ಸುತ್ತ ಸುಳಿದಾಡಿದವು 75ನೇ ಸ್ವಾತಂತ್ರ್ಯ ಸಂಭ್ರಮಿಸಿದೇವುಚುಟಿ ತೊಟ್ಟಿಲ ತೂಗುವರ ನಡುವೆಮೂಲಭೂತ ಹಕ್ಕಿಗಾಗಿ,ಇದ್ದೇ ಇರುವುದುದೇಶದಲ್ಲೊಂದು ಗೊಡವೆ ಅಂಗಲಾಚ ಬೇಕಾಗಿದೆಅರ್ಜಿಗಳ ಮೇಲೆ ಅರ್ಜಿ ಕೊಟ್ಟುಇದೇ ಸ್ವಾತಂತ್ರ್ಯದಒಳಗಿನ ಗುಟ್ಟು ಕೋಪವೆ ನಲ್ಲೆ? ಕೋಪವೆ ನಿನಗೆನನ್ನ ಮೇಲೆ ನಲ್ಲೆಅದಕ್ಕೆ ನಾ ತಂದೆಕಂಪು ಸೂಸುವ ದುಂಡು ಮಲ್ಲೆ ನಿನ್ನ ಚೂಟಿ ರೇಗಿಸಿ, ಮತ್ತೆ ರಮಿಸಿಎದೆಗಾನಿಸಿ ಮತ್ತೆ ಪ್ರೇಮಿಸಿಉಸಿರಲೆ ಪಿಸು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕುಬೇರನ ಸಂಪತ್ತು ತೃಣಕ್ಕೆ ಸಮಾನ!: ಹರ್ಷವರ್ಧನ್ ಜಯಕುಮಾರ್

‘ಪ್ಲಾಟಿನಂ ಆಭರಣಗಳು ಬೇಕೆ ? ಬ್ರಹ್ಮಾಂಡದಲ್ಲೇ ಅತಿ ಕಡಿಮೆ ಬೆಲೆ!ಸ್ಥಳ – 2011UW158 ಕ್ಷುದ್ರ ಗ್ರಹ! – ಒಮ್ಮೆ ಭೇಟಿ ಕೊಡಿ’ಭವಿಷ್ಯದಲ್ಲಿ – ಹೀಗೊಂದು ಜಾಹೀರಾತು ಕಂಡರೆ ಅಚ್ಚರಿಪಡಬೇಕಿಲ್ಲ! 2011UW158 ಒಂದು ಕ್ಷುದ್ರಗ್ರಹ! Asteroid. ಅರ್ಧ ಕಿ.ಮೀ ಉದ್ದ – ಒಂದು ಕಿ.ಮೀ ಅಗಲ ಅಷ್ಟೇ! 2015ರಲ್ಲಿ ಭೂಮಿಗೆ ಸನಿಹ ಅಂದರೆ ಸುಮಾರು 25 ಲಕ್ಷ ಕಿ.ಮೀ ಅಂತರದಲ್ಲಿ ಸಾಗಿತ್ತು ಸಹ! Planetary Resources ಸಂಸ್ಥೆಯ ಪ್ರಕಾರ ಈ ಸಣ್ಣ ಕ್ಷುದ್ರಗ್ರಹದಲ್ಲಿ ಸುಮಾರು 90 ಮಿಲಿಯನ್ ಟನ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಇವಳೊಂದು ರಾಕ್ಷಸಿ ೧ ಕಟ್ಟಿ ಕಾಯುವವರಿಲ್ಲವೇ ಇವಳಮುರಿದ ಮೂರ್ತಿಗಳುಹರಿದ ಕನಸುಗಳ ತಿಂದು, ಒಡೆದ ಮನಸುಗಳನಿಂದೆ ಅಪಮಾನಭಯ ಶೋಕಗಳಕುಡಿಕುಡಿದೂ ಎಂದೆಂದೂ ಮುಗಿದಂತಿಲ್ಲಇವಳ ಹಸಿವು ದಾಹಬಡವರ ಅಂಗೈ ಬೆಂಕಿಯವಳುಇಂದ್ರ ಸಭೆಯ ನರ್ತಕಿ ಆಹಾ!ಕೋಮಲೆಯಂದೆವಳ ಮುಟ್ಟೀರಿ ಜೋಕೆತಲ್ಗೇರಿದಂತೆ ಸುರೆಮಿಂಚು ಹೊಡೆದಂತೆ ಅರೆಘಳಿಗೆಮುಂದೊಂದು ವರುಷ ಕವಿ ದೇವದಾಸಕ್ಷಣ ಚಿತ್ತ – ಕ್ಷಣ ಅಸ್ವಸ್ಥ! ೨ತುಂಬಿದ ಕಣ್‌ ರೆಪ್ಪೆಗಳು, ಒಣಗಿ ಬಣಗುಡುವ ಭಾವದೆದೆಅನ್ಯಾಯವಾಗಿ ಅಗಲಿದ ಕ್ರೌಂಚ ಪಕ್ಷಿಗಳುಈಗ ಹುಟ್ಟಿ ಸತ್ತ ಶಿಶುವುಟೀಪಾಯ್‌ ಮೇಲಿನ ಸಿಂಗಲ್‌ ಟೀ ಕಪ್ಪುಹೈವೇ ಮೇಲೆ ಸುಟ್ಟು ತಿಂದ ಬಣ್ಣದ ನವಿಲಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೇಮಗಂಗೆ: ಪದ್ಮಜಾ. ಜ. ಉಮರ್ಜಿ

“ಯಾವುದೇ ಫಲಾಪೇಕ್ಷೆಯಿಲ್ಲದೆ ಎಲ್ಲರಿಗೂ ಒಳ್ಳೆಯದನ್ನ ಬಯಸಿ, ಸಾಧ್ಯವಾದಷ್ಟು ಒಳ್ಳೆಯದನ್ನ ಮಾಡಿ, ಯಾಕೆಂದರೆ ಹೂವ ಮಾರುವವರ ಕೈಯಲ್ಲಿ ಯಾವಾಗಲೂ ಸುವಾಸನೆಯಿರುತ್ತದೆ.” ಈ ವಾಕ್ಯ ಓದುತ್ತಿರುವ ವೈಷ್ಣವಿಯ ಮನಸ್ಸು ಪಕ್ವತೆಯಿಂದ ತಲೆದೂಗಿತ್ತು. ತನ್ನ ಮತ್ತು ಪತಿ ವಿಭವರ ಬದುಕಿನ ಗುರಿಯೂ ಕೂಡಾ ಎಲ್ಲರಿಗೂ ಒಳ್ಳೆಯದನ್ನು ಬಯಸುವುದು. ಮತ್ತು ಒಳ್ಳೆಯದನ್ನು ಮಾಡುವುದು. ಆದರೂ ಬದುಕೆಂಬುದು ಒಂದು ವೈಚಿತ್ರದ ತಿರುವು. ಹಾಗೆ ನೋಡಿದರೆ ಬದುಕೇ ಬದಲಾವಣೆಗಳ ಸಂಕೋಲೆ. ಮನಸ್ಸು ಸವೆಸಿದ ಹಾದಿಯ ಕುರುಹುಗಳನ್ನು ಪರಿಶೀಲಿಸತೊಡಗಿತ್ತು. ತಾಯಿ ಸಂಧ್ಯಾ ಮತ್ತು ತಂದೆ ಸುಂದರರಾಯರ ಸುಮಧುರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಡಾ.ಎಸ್.ವಿ.ಪ್ರಭಾವತಿಯವರ ಕಾವ್ಯ: ಸಂತೋಷ್ ಟಿ

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಾದಂಬರಿ, ಸಂಶೋಧನೆ, ಕಾವ್ಯ , ಪ್ರಬಂಧ, ವಿಮರ್ಶೆಗಳಿಂದ ಕ್ರಿಯಾಶೀಲ ಲೇಖಕಿಯಾದ ಡಾ.ಎಸ್.ವಿ.ಪ್ರಭಾವತಿಯವರ ಕಾವ್ಯ ಚಿಂತನೆಗಳು ವಾಸ್ತವಿಕ ನೆಲೆಗಟ್ಟಿನ ಮೇಲೆ ಆಕ್ರತಿ ಪಡೆಯುವಂತಹದ್ದು. ಕಾವ್ಯ ಜಿಜ್ಞಾಸೆಯು ಎಂದಿಗೂ ನಿಂತ ನೀರಲ್ಲ, ಅದು ಸದಾ ಹರಿಯುತ್ತಲೇ ತನ್ನ ಸುತ್ತ ಹಸಿರನ್ನು ಕಾಣುತ್ತದೆ. ಹಾಗಾಗಿಯೇ ಇವರ ಕವಿತೆಗಳಿಗೆ ಸಾಂಕೇತಿಕವಾದ ಚಲನಶೀಲತೆ ಒದಗಿಬರುತ್ತದೆ. ಮಳೆ, ಮರ,ಆಕಾಶ ಮತ್ತು ಭೂಮಿಗಳನ್ನು ಬಳಸಿಬಂದ ಕವಯತ್ರಿ ಎಲ್ಲಿಯೂ ನಿಲ್ಲುವುದಿಲ್ಲ. ಪ್ರಕ್ರತಿಯೇ ಅವರಿಗೆ ಮೆಟಾಫರ್. “ನದಿ ಹರಿಯುತಿರಲಿ” ಸಮಗ್ರ ಕಾವ್ಯ ಸಂಪುಟ ಇವರದಾಗಿದೆ. ಸೇತುವೆಗಳಿರುವುದೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತೋತಾಪುರಿ ಮೂವಿಯ ನಂಜಮ್ಮನ ಕಥೆ ವ್ಯಥೆ: ಕಿರಣ್ ಕುಮಾರ್ ಡಿ

ತೋತಾಪುರಿ ೨೦೨೨ ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಈ ಚಲನಚಿತ್ರವನ್ನು ವಿಜಯ ಪ್ರಸಾದ್ ಅವರು ನಿರ್ದೇಶಿಸಿದ್ದರೆ, ಕೆ ಎ ಸುರೇಶ್ ರವರು ನಿರ್ಮಾಪಕರಾಗಿರುತ್ತಾರೆ. ಈ ಚಲನಚಿತ್ರದಲ್ಲಿ ಜಗ್ಗೇಶ್, ಡಾಲಿ ಧನಂಜಯ, ಸುಮನ್ ರಂಗನಾಥನ್, ಅದಿತಿ ಪ್ರಭುದೇವ ಮತ್ತು ಮುಂತಾದವರು ನಟನೆ ಮಾಡಿರುತ್ತಾರೆ. ಈ ಚಲನಚಿತ್ರದಲ್ಲಿ ಸ್ವತಃ ವಿಜಯ ಪ್ರಸಾದ್ ರವರು ತಮ್ಮ ಬಾಲ್ಯದಿಂದ ಅರಿವು ಬರುವವರೆಗೂ ನೋಡಿದ ಜಾತಿ ಸಂಘರ್ಷಗಳನ್ನು ಮತ್ತು ಅರಿವು ಬಂದ ಮೇಲೆ ಆದ, ಅದೇ ಜಾತಿ ಸಂಘರ್ಷಗಳ ಅನುಭವವನ್ನ ದೃಶ್ಯರೂಪಕ್ಕೆ ಅಳವಡಿಸಿ ಕೊಟ್ಟಿದ್ದಾರೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಂಕರ್ ಸಿಹಿಮೊಗ್ಗೆ ಅವರ “ದೇವರ ಕಾಡು” ಕಥೆಯ ವಿಶ್ಲೇಷಣೆ: ಅನುಸೂಯ ಯತೀಶ್

ಶಂಕರ್ ಸಿಹಿಮೊಗ್ಗೆ ಅವರ ಕವಿತೆ, ಲೇಖನ, ಕಥೆ ಸೇರಿದಂತೆ ಯಾವುದೇ ಪ್ರಕಾರಗಳನ್ನು ಓದಿದರೂ ನಮಗೆ ವೈಚಾರಿಕತೆಯ ವಿಚಾರಗಳು, ಚಿಂತನಾಶೀಲ ಅಭಿವ್ಯಕ್ತಿ ಹಾಗೂ ವೈಜ್ಞಾನಿಕ ತಳಹದಿ ಬಹುವಾಗಿ ಗೋಚರಿಸುತ್ತವೆ. ಬಹುಶಃ ಇವರು ವಿಜ್ಞಾನ ವಿದ್ಯಾರ್ಥಿಯಾಗಿದ್ದರ ಫಲಶೃತಿಯಿರಬಹುದು. ಅಂತಹುದೇ ಒಂದು ನೆಲೆಗಟ್ಟಿನಲ್ಲಿ ಸೃಷ್ಟಿಯಾದ ಕಥೆ ಶಂಕರ್ ಸಿಹಿಮೊಗ್ಗೆ ಅವರ ಈ ‘ದೇವರ ಕಾಡು’. ಇದು ಮಾನವನ ದುರಾಸೆಯ ಫಲಿತವಾಗಿ ಪರಿಸರ ವಿನಾಶದ ಅಂಚಿಗೆ ತಲುಪುತ್ತಿರುವ ಆಘಾತಕಾರಿ ಸಂಗತಿಯನ್ನು ತಮ್ಮ ಪರಿಸರ ಪ್ರೀತಿ ಮತ್ತು ವೈಚಾರಿಕ ಪ್ರಜ್ಞೆಯಡಿಯಲ್ಲಿ ಕಥಾನಕವಾಗಿಸಿದ್ದಾರೆ. ಅಪ್ಪಟ ಗ್ರಾಮೀಣ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾಯೆ: ಸಾವಿತ್ರಿ ಹಟ್ಟಿ

ಛೇ ಏನಿದು ಮದುವೆಯಾಗಿ ಮಕ್ಕಳು ಮರಿಯಾಗಿ ಬದುಕು ಅರ್ಧ ಮುಗಿದು ಹೋಯ್ತಲ್ಲ ! ಮತ್ಯಾಕೆ ಹಳೆಯ ನೆನಪುಗಳು ಎಂದುಕೊಂಡು ಮಗುವಿನ ಕೈಯನ್ನು ತೆಗೆದು ಹಗೂರಕ್ಕೆ ಕೆಳಗಿರಿಸಿದಳು. ಹಾಲುಂಡ ಮಗುವಿನ ಕಟವಾಯಿಯಲ್ಲಿ ಇಳಿದಿದ್ದ ಹಾಲನ್ನು ಸೆರಗಿನಿಂದ ಒರೆಸಿದಳು. ಮಗುವಿಗೆ ಹೊದಿಕೆ ಹೊದಿಸಿ ಅದರ ಗುಂಗುರುಗೂದಲಿನ ತಲೆಯನ್ನು ಮೃದುವಾಗಿ ನೇವರಿಸಿದಳು. ಮಗು ಜಗತ್ತಿನ ಯಾವುದೇ ಗೊಡವೆಯಿಲ್ಲದೇ ನಿದ್ರಿಸತೊಡಗಿತ್ತು. ಅಷ್ಟು ದೂರದಲ್ಲಿ ಸಿಂಗಲ್ ಕಾಟ್ ಮೇಲೆ ಗಂಡ ಎಂಬ ಪ್ರಾಣಿ ಗೊರಕೆ ಹೊಡೆಯುತ್ತ ಮಲಗಿತ್ತು. ಸಿಟ್ಟು, ಅಸಹ್ಯ, ಅನುಕಂಪ ಯಾವ ಭಾವನೆಯೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೀಳ್ಕೊಡುಗೆ ಎಂಬ ಕೊನೆ ಘಳಿಗೆಯಲ್ಲಿ…..: ಪಿ.ಎಸ್.ಅಮರದೀಪ್

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರತರೇನೂ ಅರಿತೆವೇನು ನಾವು ನಮ್ಮ  ಅಂತರಾಳವಾ? ಅನ್ನುವ ಹಾಡನ್ನು ಅದೆಷ್ಟು ಬಾರಿ ಕೇಳಿದ್ದೇನೋ ಕೇಳುತ್ತೇನೋ ಗೊತ್ತಿಲ್ಲ.   ಆದರೆ ಇಡೀ ಹಾಡಿನ ಸಾಲುಗಳು ಮಾತ್ರ ನನ್ನನ್ನು ತುಂಬಾ ಕಾಡಿವೆ, ಕಾಡುತ್ತವೆ.  ಸುಮಾರು ಒಂಭತ್ತು ತಿಂಗಳ ಕಾಲ  ನಾನಿದ್ದ ಪರಿಸ್ಥಿತಿ ಆರ್ಥಿಕವಾಗೇನೂ ಕಷ್ಟಕರವಾಗಿದ್ದಿಲ್ಲ.  ಆದರೆ, ನನ್ನತನವನ್ನು ನಾನು ಎಷ್ಟೇ ಪ್ರಯತ್ನಪಟ್ಟರೂ ಕಾಪಿಟ್ಟುಕೊಳ್ಳುವಲ್ಲಿ ಸೋಲುತ್ತಲೇ ತಾತ್ಕಾಲಿಕವಾಗಿ ಗೆದ್ದ ದಿನದ ಸಂಜೆಗೆ ನನ್ನಲ್ಲಿದ್ದ ಒಟ್ಟು ಅಭಿಪ್ರಾಯ ಕಕ್ಕಿಬಿಟ್ಟೆ.   ನನ್ನದಲ್ಲದ ತಪ್ಪಿಗೆ ಬೇರೆಯವರ ಮಸಲತ್ತಿಗೆ ನನ್ನ ಸ್ಥಾನಪಲ್ಲಟವಾಗಿದ್ದ ದಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭೂಲೋಕದಲ್ಲಿ ಅಪ್ಸರೆಯರು (ಕಾಂಬೋಡಿಯಾ ಭಾಗ-2): ಎಂ ನಾಗರಾಜ ಶೆಟ್ಟಿ

ಹಿಂದಿನ ಸಂಚಿಕೆಯಲ್ಲಿ… ಟೋನ್ಲೆ ಸಾಪ್‌ನಿಂದ ಹೊರಡುವಾಗ ಸಂಜೆ ಗಂಟೆ ಏಳಾಗಿರಲಿಲ್ಲ. ಸುಮ್ಮನೆ ಸುತ್ತಾಡಿ ಕಾಲ ಕಳೆಯುವ ಬದಲು ಸಾಂಸ್ಕೃತಿಕ ಕಾರ್ಯಕ್ರಮವೇನಾದರೂ ಇದೆಯೇ ಎಂದು ʼರಾʼ ನೊಡನೆ ವಿಚಾರಿಸಿದೆವು. ಸಾಮಾನ್ಯವಾಗಿ ಪ್ರತಿಯೊಂದು ಊರಿನಲ್ಲೂ ಅಲ್ಲಿಯದೇ ಹಾಡು,ನೃತ್ಯ ಪರಂಪರೆ ಇರುತ್ತದೆ. ಕೆಲವೊಮ್ಮೆ ನಮ್ಮ ಸಮಯಕ್ಕೆ ಅವು ದೊರಕುವುದಿಲ್ಲ. ತಿರುವನಂತಪುರದಲ್ಲಿ ಕಥಕ್ಕಳಿಯನ್ನು ನೋಡಬೇಕೆಂಬಾಸೆ ಇದ್ದರೂ ಅಲ್ಲಿಗೆ ಹೋದಾಗ ಪ್ರದರ್ಶನವಿರಲಿಲ್ಲ.ಕಾಂಬೋಡಿಯಾದಲ್ಲಿ ʼಅಪ್ಸರಾ ನೃತ್ಯʼ ಬಹಳ ಚೆನ್ನಾಗಿರುತ್ತದೆ ಎನ್ನುವುದನ್ನು ಕೇಳಿದ್ದೆ. ರಾ, ಸಿಯಾಮ್‌ರೀಪಲ್ಲಿ ಪ್ರತಿದಿನ ಒಂದಲ್ಲೊಂದು ಕಡೆ ಅಪ್ಸರಾ ನೃತ್ಯ ಪ್ರದರ್ಶನಗಳು ಇರುತ್ತಿತ್ತು, ಕೋವಿಡ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವಿತೆಗಳು: ಡಾ. ಸದಾಶಿವ ದೊಡಮನಿ, ಇಲಕಲ್ಲ

ʼಮಾಂಸದಂಗಡಿಯ ನವಿಲು’ ನೆನಪಿನಲ್ಲಿ ನೀವು ಹೊರಟು ನಿಂತಿದ್ದು; ನಡು ಮಧ್ಯಾಹ್ನ, ಕಡು ಬಿಸಿಲಲ್ಲಿಹೊಲಗೇರಿಯ ಕಪ್ಪುಕಾವ್ಯ ಕಣಗಿಲೆಯರಳಿಶತಮಾನದ ನೋವಿಗೆ ಮುದ್ದು ಅರಿಯುವ ಗಳಿಗೆಯಲ್ಲಿ ಮುದಿ ಬೆಕ್ಕುಗಳು ಹುಲಿಯ ಗತ್ತಿನಲಿಹಗಲು ಗಸ್ತು ತಿರುಗುವಾಗ ನೀವು ಹುಲಿಯ ಗುಟುರು ಹಾಕಿದಿರಿ ಗುಟುರಷ್ಟೇ ಕೇಳಿಸಿತು;ಕೇಳುತ್ತಿದೆಹಿಮದ ಹೆಜ್ಜೆಯೂ ತೋರುತ್ತಿಲ್ಲಚಿತ್ರದ ಬೆನ್ನು ಕಾಣುತ್ತಿಲ್ಲಮಾಂಸದಂಗಡಿಯ ನವಿಲು ಹುಡುಕುತ್ತಿದ್ದೇನೆನೀವು ಎಲ್ಲಿ? ಮಂಗಮಾಯ! ಕೆಂಪು ದೀಪದ ಕೆಳಗೆನನ್ನಕ್ಕ,ತಂಗಿಯರು ಎದೆ ಸುಟ್ಟುಕೊಂಡುನಲುಗುವಾಗ ನೀವು ತಾಯಿಯಾಗಿ ಹೆಗಲ ಕೊಟ್ಟು, ನೋವು ಆಲಿಸಿದಿರಿಹಗಲು ದೀವಟಿಗೆಯಾಗಿ ಉರಿದು,ಉಳ್ಳವರ ಎದೆಗೊದ್ದು ಅಸಲು ಸಹಿತ ಲೆಕ್ಕ ಚುಕ್ತಾ ಕೇಳಿದಿರಿನೀವು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2023 ಮತ್ತು ಕಾದಂಬರಿ ಪುರಸ್ಕಾರ 2023ʼ

ಭಾರತದ ಸ್ವಾತಂತ್ರ್ಯೋತ್ಸವ ಮತ್ತು ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಬುಕ್ ಬ್ರಹ್ಮ “ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ”ಯ ಜೊತೆಗೆ 2022ನೇ ಸಾಲಿನಲ್ಲಿ ಪ್ರಕಟವಾದ ಕಾದಂಬರಿಗೆ ಪುರಸ್ಕಾರ ನೀಡಲು ನಿರ್ಧರಿಸಿದೆ. 2022ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಅತ್ಯುತ್ತಮ ಕಾದಂಬರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು. ಈ ಒಂದು ಲಕ್ಷದಲ್ಲಿ 75 ಸಾವಿರ ರೂಪಾಯಿ ಲೇಖಕರಿಗೆ ಹಾಗೂ 25 ಸಾವಿರ ಪ್ರಕಾಶಕರಿಗೆ ವಿತರಿಸಲಾಗುತ್ತದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ 5 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು. ಈ ಪೈಕಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚನ್ನಕೇಶವ ಜಿ ಲಾಳನಕಟ್ಟೆ ಕವಿತೆಗಳು

ಅಂದದ ನಾರಿಗೆ ಚೆಂದದ ಸೀರೆಯುಸುಂದರವಾಗಿ ಕಾಣುತಿದೆ ಬಿಂದಿಯು ಹಣೆಯಲಿ ತಂದಿದೆ ಚೆಲುವನುಬಂಧಿತನಾದೆ ಪ್ರೀತಿಯಲಿ ಕೆಂದನೆ ತುಟಿಯಲಿ ಕುಂದದ ಸೊಬಗಿದೆಅಂದುಗೆ ಸದ್ದು ಮಾಡುತಿವೆ ಚೆಂದಿರ ವದನೆಯ ಚೆಂದದ ಚೆಲುವೆಗೆಮುಂದಣ ಕೈಯ ಹಿಡಿಯುವೆನು ತಂದಳು ಹರುಷವ ಕುಂದದ ಚೆಲುವಲಿಬಂಧುವೆ ಆಗಿ ನಿಂತಿಹಳು ಬಂದಳು ಹೃದಯಕೆ ಬಂಧಿಸಿ ನನ್ನನುನಂದಿನಿ ಧೇನು ಸೊಬಗಿವಳು ವಂದಿಸಿ ಹೊಸಿಲಿಗೆ ಗಂಧವ ಹಚ್ಚುತತಂದಳು ಸಿರಿಯ ನನ್ನವಳು ಹಾಲಿನ ರೂಪದಿನೀಲಿಯ ಬಾನಲಿಬಾಲಕ ಚಂದಿರ ನಗುತಿಹನುತೇಲುತಲಿರುವನು‌ಗಾಳಿಯು ಬೀಸಲುಸೀಳುತ ಮೋಡವ ಮೂಡುವನು ಇಳೆಯನು ಸುತ್ತುತಹೊಳೆಯುತಲಿರುವನುಬೆಳಕನು ನೀಡುತಲಿರುಳೆಲ್ಲಸೆಳೆಯುತ ಮಕ್ಕಳತಿಳಿ ಬೆಳಕಿಳಿಸುತಹೊಳೆಯೊಳು ಬಿಂಬವನಿಳಿಸುತ್ತ ಧರೆಗಿವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತವಕ ತಲ್ಲಣಗಳ ತಾಜಾಭಿವ್ಯಕ್ತಿ ; ಮೊಗೆದ ಬಾನಿಯ ತುಂಬ ತಿಳಿನೀರ ಬಿಂಬ: ಡಾ. ಹೆಚ್ ಎನ್ ಮಂಜುರಾಜ್

ಛದ್ಮವೇಷ- ಕವನ ಸಂಕಲನಕವಯಿತ್ರಿ- ಎಂ ಕುಸುಮ, ಹಾಸನಪ್ರಕಾಶಕರು: ರಚನ ಪ್ರಕಾಶನ, ಮೈಸೂರುಮೊದಲ ಮುದ್ರಣ: 2012ಬೆಲೆ: 80 ರೂಗಳು, ಒಟ್ಟು ಪುಟ: 128 ಈ ಕವನ ಸಂಕಲನವನ್ನು ಕವಯಿತ್ರಿಯಾದ ಶ್ರೀಮತಿ ಎಂ ಕುಸುಮ ಅವರು ಹೃದಯ ಶ್ರೀಮಂತಿಕೆಯುಳ್ಳ ಎಲ್ಲ ಮನುಜರಿಗೆ ಅರ್ಪಿಸಿದ್ದಾರೆ. ಶುದ್ಧ ಮಾನವತಾವಾದದಲ್ಲಿ ನಂಬುಗೆಯಿಟ್ಟ ಇವರ ಧ್ಯೇಯ ಮತ್ತು ಧೋರಣೆಗಳು ಇದರಿಂದಲೇ ಮನವರಿಕೆಯಾಗುತ್ತವೆ. ಇದು ಇವರ ಎರಡನೆಯ ಕವನ ಸಂಕಲನ. ಮೂಲತಃ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕನ್ನಡದಲ್ಲಿ ತಮ್ಮ ಸೃಜನಾತ್ಮಕವನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮನುಷ್ಯರು ಪ್ರಕೃತಿಯನ್ನು ಮೀರಬಲ್ಲರೆ?: ಡಾ. ಶಿವಕುಮಾರ್ ಆರ್.

ಶಿವಕುಮಾರ್ ದಂಡಿನ ಅವರು ಸಾಮಾಜಿಕ ಕಳಕಳಿಯುಳ್ಳ ಅಭೂತಪೂರ್ವ ಯುವ ಸಾಹಿತ್ಯ ಪ್ರತಿಭೆ. ಇವರು ಬರೆದದ್ದು ನಲವತ್ತೆಂದು ಕವಿತೆಗಳ “ಮೋಹದ ಪಥವೋ ಇಹಲೋಕದ ರಿಣವೋ” ಎಂಬ ಒಂದು ಕವನ ಸಂಕಲನ. ಅವರ ಎಲ್ಲ ಕವಿತೆಗಳಲ್ಲಿ ಸಾಮಾಜಿಕ ಕಳಕಳಿ ಕಂಡು ಬಂದರೂ ಕೆಲವು ಕವಿತೆಗಳು ಪ್ರಕೃತಿ ಪರವಾಗಿ ಹೆಚ್ಚಾಗಿ ಚಿಂತಿಸಿವೆ. ಅವರ ಪ್ರಕೃತಿಯ ಮುನಿಸು, ಹನಿ, ಪ್ರಕೃತಿಯ ಒಡಲೂ ಸಮಾನತೆಯ ಪಾಠವೂ ಎಂಬ ಕವಿತೆಗಳು ನಿಸರ್ಗತತ್ತ್ವವನ್ನು ಹೇಳುತ್ತವೆ. ಮನುಷ್ಯರು ಮೂಲತಃ ಅರಣ್ಯವಾಸಿಗಳು ಎಂಬುದು ನಮಗೆಲ್ಲ ತಿಳಿದಿರುವ ವಿಚಾರ. ಅವರಿಗೆ ಆರಂಭದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಡಾ. ಶಾಂತಲಕ್ಷ್ಮಿಯವರ ಕಾವ್ಯ ಚಿಂತನೆ: ಸಂತೋಷ್ ಟಿ

ಅಭಿಜಾತ ಕನ್ನಡ ಲಲಿತಾಕಲಾ ಲೋಕದ ಕಾವ್ಯನ್ವೇಷಣೆಯಲ್ಲಿ ಹೊಸಚಿಂತನೆಗಳ ಬೆರಗು ಮೂಡಿಸಿದ ಕವಯತ್ರಿ ಡಾ. ಶಾಂತಲಕ್ಷ್ಮಿ. ಭಾವನೂಭೂತಿಯ ಅಭೀಪ್ಸೆಯ ಉತ್ಸುಕತೆಯಿಂದ ಸ್ರಜನಶೀಲ ಅಭಿವ್ಯಕ್ತಿ ಮಾಧ್ಯಮ ಕಾವ್ಯದಲ್ಲಿ ತಮ್ಮ ಧ್ವನಿಯನ್ನು ಅನುಸಂಧಾನ ಮಾಡುತ್ತಿರುವ ಮಹಿಳಾ ಸಾಧಕರಲ್ಲಿ ಈ ಕವಯತ್ರಿಯ ಕಾವ್ಯ ನವಿರಾದ ಭಾವಗಳಿಂದ ಜೀವತುಂಬಿ ಹರಿಯುವಂತದ್ದು. ವಾಸ್ತವದ ಬದುಕಿನ ನುಂಟು ಉಂಟು ಮಾಡಿದ ಸಹನೀಯತೆˌ ಕರುಳು ಮಿಡಿಯುವ ಭಾವಧಾರೆˌಪ್ರಕ್ರತಿಯ ಜೀವ ವೈವಿಧ್ಯ ದ್ರವ್ಯˌಬದುಕಿನ ಮೌಲ್ಯಗಳುˌ ಜಾಗತಿಕವಾಗಿ ಬದಲಾದ ಸನ್ನಿವೇಶಗಳುˌ ಕೃತಕತೆಯ ಮೋಡಿ ನಿಯೋನ್ ಸನ್ನೆಗಳು, ಸ್ವಾರ್ಥ ಪರಿಸ್ಥಿತಿಯ ಬಿಕ್ಕಟುಗಳ ಲಾಲಸೆಗಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಿನಿ ಕತೆಗಳು: ಅರವಿಂದ. ಜಿ. ಜೋಷಿ.

“ಹರಿದ ಜೇಬು” ಸಂಜೆ, ಶಾಲೆಯಿಂದ ಮನೆಗೆ ಬಂದ ಹತ್ತರ ಪೋರ, ಗೋಪಿ ತನ್ನ ಏಳೆಂಟು ಗೆಳೆಯರೊಂದಿಗೆ ಸೇರಿ, ಮನೆಯ ಎದುರಿನ ರಸ್ತೆಮೇಲೆ ಲಗೋರಿ ಆಡುತ್ತಿದ್ದ. ಆಗ, ಆತನ ಪಕ್ಕದ ಮನೆ ಯಲ್ಲಿ ವಾಸವಾಗಿದ್ದ  ನಡುವಯಸ್ಸಿನ ಭಾಗ್ಯ (ಆಂಟಿ) ಮನೆಯಿದಾಚೆಗೆ ಬಂದು, ಜಗುಲಿ ಮೇಲೆ ನಿಂತು, “ಗೋಪೀ. . ಗೋಪೀ. . “ಎಂದು ಕೂಗಿ ಕರೆದು ಆತನ ಕೈಗೆ ಇನ್ನೂರು ರೂಪಾಯಿ ನೋಟು ಕೊಡುತ್ತ, “ಲೋ. . ಗೋಪೀ. ಇಲ್ಲೇ ಹಿಂದ್ಗಡೆ ಶೇಟ್ರ ಅಂಗ್ಡಿಗೆ ಹೋಗಿ ಒಂದ್ ಪ್ಯಾಕೆಟ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತೇಲುವ ಗ್ರಾಮಗಳ ಮುಳುಗುವ ಬದುಕು: ಎಂ ನಾಗರಾಜ ಶೆಟ್ಟಿ

ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ ಸ್ವಲ್ಪವೇ ಚಿಕ್ಕದಾದ ದಕ್ಷಿಣ ಏಷ್ಯಾದ ಪುಟ್ಟ ರಾಷ್ಟ್ರ ಕಾಂಬೋಡಿಯಾ. ಕಾಂಬೋಡಿಯಾದ ಜನಸಂಖ್ಯೆ ಒಂದು ಕೋಟಿ ಎಂಬತ್ತು ಲಕ್ಷ. ಅದರಲ್ಲಿ ಸುಮಾರು ಒಂದು ಲಕ್ಷ ಜನರು ತೇಲುವ ಗ್ರಾಮಗಳಲ್ಲಿ ವಾಸಿಸುತ್ತಾರೆ. ಕಾಂಬೋಡಿಯಾದಲ್ಲಿ ಏಳುನೂರು ತೇಲುವ ಗ್ರಾಮಗಳಿವೆಯೆಂದು ಹೇಳಲಾಗುತ್ತಿದೆ. ಕಾಂಬೋಡಿಯಾಕ್ಕೆ ಬರುವ ಪ್ರಯಾಣಿಕರಿಗೆ ವಿಶ್ವದ ಅತಿ ಹೆಚ್ಚು ವಿಸ್ತೀರ್ಣದ ಅಂಗೋರವಾಟ್ ದೇವಾಲಯ ಹೇಗೋ, ಹಾಗೆಯೇ ತೇಲುವ ಗ್ರಾಮಗಳು ಕೂಡಾ ಆಕರ್ಷಣೆಯ ಕೇಂದ್ರಗಳು. ಲಕ್ಷಾಂತರ ಜನರನ್ನು ಬಲಿ ಪಡೆದ ಪೋಲ್‌ಪಾಟ್‌ರಂತಹ ಸರ್ವಾಧಿಕಾರಿಯನ್ನು ಕಂಡ ಕಾಂಬೋಡಿಯವನ್ನು ನೋಡಬೇಕೆಂದು ಬಹಳ ವರ್ಷಗಳಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಡಾ.ಜಿ.ಎನ್.ಉಪಾಧ್ಯರ ಸಮೀಕ್ಷೆಯಲ್ಲರಳಿದ ಡಾ.ಜನಾರ್ದನ ಭಟ್ ಅವರ “ವಾಙ್ಞಯ ವಿವೇಕ”: ಅನುಸೂಯ ಯತೀಶ್

ಡಾ. ಜನಾರ್ದನ ಭಟ್ ನಮ್ಮೊಳಗಿನ ಸಂವೇದನಾಶೀಲ ಲೇಖಕರು. ಇವರು ಯಾವುದೇ ಸಾಹಿತ್ಯ ಪ್ರಕಾರಗಳಿಗೆ ಅಂಟಿಕೊಳ್ಳದೆ ಸೃಜನ ಮತ್ತು ಸೃಜನೇತರ ಎರಡು ಪ್ರಕಾರಗಳಲ್ಲೂ ತಮ್ಮನ್ನು ಅವಿರತ ತೊಡಗಿಸಿಕೊಂಡು ಧಣಿವರಿಯದೆ ಸಾಹಿತ್ಯಾರಾಧನೆಯಲ್ಲಿ ತೊಡಗಿರುವ ಬಹುಶ್ರುತ ವಿದ್ವಾಂಸರು. ಬಹುಭಾಷಾ ಪ್ರವೀಣರಾದ ಇವರು ಕಥೆ, ಕಾದಂಬರಿ, ವೈಚಾರಿಕ ಕೃತಿಗಳು, ಅಂಕಣಗಳು, ವಿಮರ್ಶೆ, ಮಕ್ಕಳ ಸಾಹಿತ್ಯ, ಇಂಗ್ಲೀಷ್ ಸಾಹಿತ್ಯ ರಚನೆಯ ಜೊತೆಗೆ ಹಲವಾರು ಕೃತಿಗಳ ಸಂಪಾದನೆ ಕೂಡ ಮಾಡಿ ಆಡು ಮುಟ್ಟದ ಸೊಪ್ಪಿಲ್ಲ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಕನ್ನಡ ಸಾಹಿತ್ಯದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ