ಕಾಲಾಯ ತಸ್ಮೈ ನಮಃ: ಪೂಜಾ ಗುಜರನ್ ಮಂಗಳೂರು

“ಸಂಬಂಧಗಳು ಸಮಯವನ್ನು ಬೇಡುತ್ತದೆ.ಸಮಯವಿಲ್ಲದೆ ಸಂಬಂಧಗಳು ಸಾಯುತ್ತದೆ”.. ನಿಜ ಈ ಸುಂದರ ಕ್ಷಣಗಳು ಬದುಕಿಗೆ ಅದೆಷ್ಟು ಮುಖ್ಯವಾಗಿರುತ್ತದೆ. ಈ ಸಮಯ ಅನ್ನುವುದು ಎಂತಹ ಅದ್ಭುತವನ್ನು ಸೃಷ್ಟಿಸಬಲ್ಲದು. ಹಾಗೇ ಎಂದೂ ಅಳಿಯದ ವಿಚಿತ್ರವನ್ನು ಉಳಿಸಬಲ್ಲದು. ಈ ಕ್ಷಣಗಳು ಕಳೆದು ಹೋದರೆ ಮತ್ತೆ ಬರುವುದೇ? ಅದಕ್ಕೆ ಉತ್ತರ ಯಾರಲ್ಲೂ ಇಲ್ಲ. ನಿಜ ಇಲ್ಲಿ ಸಮಯಕ್ಕೆ ತುಂಬಾ ಬೆಲೆ. ಒಂದು ಕ್ಷಣ ಕಳೆದು ಹೋದರು ಅದು ಮತ್ತೆ ಬರಲಾರದು. ಆ ಸಮಯಕ್ಕೆ ಏನು ಆಗಬೇಕು ಅದು ಆಗಿಯೇ ಆಗುತ್ತದೆ. ಕಾಲವನ್ನು ತಡೆಯೋರು ಯಾರು … Read more

ಮತ್ತೆ ಉದಯಿಸಿದ ಸೂರ್ಯ: ವೆಂಕಟೇಶ ಪಿ.ಗುಡೆಪ್ಪನವರ

“ವಿಶ್ವವನ್ನೇ ತಲ್ಲಣಗೊಳಿಸಿ, ಈಗ ನಮ್ಮ ದೇಶಕ್ಕ ಗಂಡಾಂತರ ತಂದ ಕೋರೋನಾ ವೈರಸ್ ಹಾವಳಿಯಿಂದ ನಮ್ಮನ್ನು ರಕ್ಷಣೆ ಮಾಡಲು, ಸರ್ಕಾರ ರಾಜ್ಯದಲ್ಲಿ ಇಂದಿನಿಂದ ಹದಿನಾಲ್ಕು ದಿನಗಳ ವರೆಗೆ ಲಾಕ್‍ಡೌನ್ ಜಾರಿಗೊಳಿಸಿದೆ.ಅತ್ಯಗತ್ಯ ಸಾಮಗ್ರಿಗಳನ್ನು ಸಂಗ್ರಹ ಮಾಡಿಕೊಳ್ಳಿ,ಒಬ್ಬರಿಂದ ಒಬ್ಬರಿಗೆ ಬೇಗ ಹರಡುವ ಈ ವೈರಸ್ ಹೆಚ್ಚಾದರೆ, ಲಾಕ್‍ಡೌನ್ ಅವಧಿ ವಿಸ್ತರಣೆ ಸಹ ಆಗಬಹುದು,ಯಾರೊಬ್ಬರೂ ಯಾವೂದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು, ಹೊರಗೆ ಕಾಣಿಸಿಕೊಂಡರೆ ಶಿಕ್ಷೆ ತಪ್ಪಿದಲ್ಲಿ….” ಪೋಲಿಸ್ ಜೀಪ್ ಮೇಲೆ ಹಾಕಿರುವ ಚಿಕ್ಕ ಸ್ಪೀಕರ್‍ದಲ್ಲಿನ ಮಾತುಗಳನ್ನು ಕೇಳಿಸಿಕೊಂಡ ತಿಮ್ಮಪ್ಪ ಮಾಸ್ತರ ಬೆಚ್ಚಿಬಿದ್ದನು. … Read more

ಓದುವ ಹಕೀಕತ್ತಿಗೆ ನೂಕಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವ ಅಜ್ಜ ನೆಟ್ಟ ಹಲಸಿನ ಮರ”: ಎಂ. ಜವರಾಜ್

ಕನ್ನಡದ ಪ್ರಗತಿಶೀಲ, ನವ್ಯ, ಬಂಡಾಯ ಸಾಹಿತ್ಯಗಳ ನಾನಾ ಸ್ತರಗಳ ಪ್ರಭಾವಗಳ ಪ್ರಗತಿಪರ ಚಿಂತನಶೀಲ ಲೇಖಕ ವ್ಯಾಸರಾಯ ಬಲ್ಲಾಳರು “ನಾನು ಒಂದು ಕಥೆಯೊ ಕಾದಂಬರಿಯೊ ಬರೆಯಲು ಆತುರ ತೋರುವುದಿಲ್ಲ. ಅದು ಒಳಗೆ ಗುದ್ದಿದಾಗ ಬರೆಯಲು ತೊಡಗುವೆ. ಹಾಗೆ ಸಮಯದ ಹೊಂದಾಣಿಕೆಯೂ ಇರಬೇಕು. ಈ ಮುಂಬಯಿ ಜೀವನ ವಿಧಾನಕ್ಕು ಬೆಂಗಳೂರಿನ ಜೀವನಕ್ಕು ವ್ಯತ್ಯಾಸ ಇದೆ. ಬೆಂಗಳೂರಿನ ಜೀವನ ವಿಧಾನಕ್ಕು ಉಡುಪಿಯ ಜೀವನಕ್ಕು ವ್ಯತ್ಯಾಸ ಇದೆ. ಜೊತೆಗೆ ಉಡುಪಿಯ ಜೀವನ ವಿಧಾನಕ್ಕು ಅಂಬಲಪಾಡಿಯ ಜೀವನಕ್ಕು ವ್ಯತ್ಯಾಸವಿದೆ. ಹೀಗೆ ನಾನು ಇಲ್ಲೆಲ್ಲ ಸುತ್ತಾಡಿದ … Read more

ಪ್ರಕೃತಿಯೊಂದಿಗೆ ಅನುಬಂಧ ; ಕೋವಿಡ್ ಗೆ ನಿರ್ಬಂಧ: ಗಾಯತ್ರಿ ನಾರಾಯಣ ಅಡಿಗ

ಅದ್ಭುತ ಮತ್ತು ಅಪೂರ್ವವಾದ ಈ ಭೂಮಂಡಲ ಆನೇಕ ವೈಚಿತ್ರ್ಯಗಳಿಂದ ಕೂಡಿದ ಸಕಲ ಜೀವರಾಶಿಗಳಿಗೂ ಆಶ್ರಯತಾಣವಾಗಿದೆ. ಆದರೆ ಹದಗೆಟ್ಟಿರುವುದು ಕೇವಲ ಮಾನವನಿಂದ ಮಾತ್ರ. ಪ್ರಕೃತಿ ನೀಡುವ ಮೂಲ ಅವಶ್ಯಕತೆಗಳಾದ ನೀರು, ಆಹಾರ, ಗಾಳಿಯನ್ನು ನಂಬಿಕೊಂಡು ಸಕಲ ಚೈತನ್ಯಗಳು ಜೀವನ ನಡೆಸುತ್ತಿವೆ. ಪ್ರಕೃತಿ ಮಾತೆಯೂ ಕೂಡ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸರ್ವಸಂಕುಲಗಳನ್ನು ರಕ್ಷಿಸುತ್ತಿದ್ದಾಳೆ. ಆದರೆ ಇಂದೇಕೋ ಆಕೆ ರೌದ್ರಾವತಾರ ತಾಳಿದಂತಿದೆ. ಮನುಷ್ಯನ ಮಿತಿಮೀರಿದ ಸ್ವಾರ್ಥ ಚಟುವಟಿಕೆಗಳು ಆಕೆಯ ಸಹನೆಯನ್ನು ಕದಡಿವೆ. ಆಧುನಿಕತೆಯ ಮೊರೆಹೊಕ್ಕ ಮಾನವ ತಂಗಾಳಿಯ ವೃಕ್ಷಗಳನ್ನು ಕಡಿದು ಗಗನಚುಂಬಿ … Read more

ಏನಂತ ಸಂಭೋದಿಸಲಿ ನಾ ನಿನ್ನ?: ಮಧು ಅಕ್ಷರಿ

ಏನಂತ ಸಂಭೋದಿಸಲಿ ನಾ ನಿನ್ನ? ಇದೇ ಪ್ರಶ್ನೆಯೊಂದಿಗೆ ಅದೆಷ್ಟು ಪತ್ರಗಳು ನಿನ್ನ ಮನೆಯಂಗಳವನ್ನಿರಲಿ, ಅಂಚೆಪೆಟ್ಟಿಗೆಯ ಮುಖವನ್ನೂ ಕಾಣದೆ, ಹರಿದು ಬರಿದಾಗಿ ಕಸದ ಬುಟ್ಟಿಯಲ್ಲಿ ಮೋಕ್ಷ ಪಡೆದಿವೆಯೋ? ಸಿಕ್ಕಿಬೀಳುವ ಭಯಕ್ಕೆ ಹೆದರಿ, ಅವಶೇಷವನ್ನೂ ಬಿಡದಂತೆ ಸುಟ್ಟು ಸಂಸ್ಕಾರ ಮಾಡಿದ್ದೂ ಆಯ್ತು. ಅಲ್ಲಿಗೆ ಎದೆಯಲ್ಲೋ, ತಲೆಯಲ್ಲೋ, ಅಸಲು ಸರಿಯಾದ ವಿಳಾಸವಿಲ್ಲದೇ, ನನ್ನಲ್ಲಿ ಉದಯಿಸಿದ ನವಿರಾದ ಭಾವನೆಗಳಿಗೆ ಕಾರಣನಾದ ನಿನ್ನ ಪರಿಚಯಿಸುವ ಮೊದಲೇ ಸಂಸ್ಕಾರವಾದದ್ದಾಯಿತು. ಮತ್ತೆ ಕುಳಿತಿರುವೆ ಉಕ್ಕಿಬರುವ ಭಾವಗಳ‌ ಅದುಮಿಡಲಾಗದೇ. ನಿನ್ನೆದೆಗೆ ತಲುಪಿಸಿ ನಿರುಮ್ಮಳವಾಗಿ ಬಿಡುವ ಹಂಬಲದಿಂದ. ವಾಟ್ಸಪ್, ಟಿಂಡರ್, … Read more

ಮಾತಾಡು ಓ ಗೆಳೆಯಾ… ಮಾತಾಡು: ಸಹನಾ ಕಾಂತಬೈಲು

ಮಾತಾಡು ಓ ಗೆಳೆಯಾ… ಮಾತಾಡು ಇದು ನನ್ನ ಮೊದಲ ಪ್ರೇಮ ಪತ್ರ. ನೀನು ನನ್ನ ಜೀವದ ಜೀವವಾದರೂ ನಾನು ನಿನಗೆ ಇದುವರೆಗೆ ಒಂದೂ ಪತ್ರ ಬರೆಯಲಿಲ್ಲ. ಬರೆಯುವ ಅಗತ್ಯವೇ ಬಿದ್ದಿರಲಿಲ್ಲ. ಏಕೆ ಗೊತ್ತ? ನೀನೇ ಆಗಾಗ ನನಗೆ ಫೋನ್ ಮಾಡುತ್ತಿದ್ದೆ. ಮೆಸ್ಸೇಜ್ ಮಾಡುತ್ತಿದ್ದೆ ಮತ್ತು ನನ್ನನ್ನು ತುಂ…….ಬ…… ಪ್ರೀತಿ ಮಾಡುತ್ತಿದ್ದೆ. ನಿನ್ನ ಪ್ರೇಮದಲ್ಲಿ ಮೀಯುತ್ತಿದ್ದ ನನಗೆ ಪತ್ರ ಬರೆಯುವ ಅವಶ್ಯಕತೆಯೇ ಬರಲಿಲ್ಲ. ಈ ವರ್ಷದ ಮುನ್ನಾ ದಿನ ನನಗಿಂತ ಮೊದಲೇ ನೀನು ನನಗೆ ಹೊಸ ವರ್ಷದ ಶುಭಾಶಯ … Read more

ನಾನು ನಿನ್ನ ಹುಚ್ಚು ಪ್ರೇಮಿಯೇ ಆದರೆ…: ಜಗದೀಶ ಸಂ.ಗೊರೋಬಾಳ

ಪ್ರೀತಿಯ ಚಂದ್ರಕಲಾ, ಹುಡುಕುತ್ತಾ ಹೋದ ನನ್ನಂತವನಿಗೆ ನಿನ್ನಂತ ಚೆಲುವೆ ಸಿಕ್ಕಿರಲಿಲ್ಲ.ಎಷ್ಟು ಹುಡುಕಿದರೂ ನನಗೆ ನಿನ್ನಂತ ರೂಪವತಿ ದರ್ಶನವಾಗಿರಲಿಲ್ಲ.ಹೃದಯದ ಬಡಿತ ನಾಟ್ಯವಾಡಿದೆ ಪ್ರೇಮದ ಮೊಗ್ಗು ಚಿಗುರಿದೆಕನಸೊಂದ ಕಟ್ಟಿರುವೆ ಕೊಲ್ಲದಿರು ಗೆಳತಿ ಒಲವ ಸುಧೆಯನು ಹರಿಸು ಬಾ. ನಿನ್ನ ಕಣ್ಣೋಟದ ಬಾಣ ನನಗೆ ತಾಕಿದಾಗಿನಿಂದ ನಾನು ನಿನ್ನ ಸೌಂದರ್ಯವೆಂಬ ಸವಿಯನ್ನು ಸವಿಯುತ್ತಾ ಹುಚ್ಚನಂತಾಗಿದ್ದೇನೆ. ನಿನ್ನ ಬೊಗಸೆ ಕಂಗಳ ಸೌಂದರ್ಯಕ್ಕೆ ಬೇರಿಲ್ಲ ಕಣೆ ಸಾಟಿ. ನನ್ನ ಹೃದಯ ಗೆದ್ದ ಚೆಂದದ ಚೆಲುವೆ ನೀನು. ಸಾವಿರ ಹೂಗಳ ಚೆಲುವು ನಿನ್ನ ಸೌದರ್ಯದ ಮುಂದೆ … Read more

ಪುಟ್ಟ ಕಾಫಿ ಕಪ್ ನಲ್ಲೂ ಕಡಲಷ್ಟು ಸ್ವಾದವಿದೆ: ಕಿರಣ ದೇಸಾಯಿ

ನನ್ನೊಲವಿಗೆ….ಏನೆಂದು ಸಂಬೋಧಿಸಲಿ….? ಜಾನು, ಡಿಯರ್, ಹೃದಯದ ಒಡತಿ.. ಮುದ್ದು ಗೆಳತಿ.. ಪ್ರೇಮಪತ್ರಕೆ ಒಕ್ಕಣೆ ಬೇಕೆ ? ಒಲವಿದ್ದರಷ್ಟೆ ಸಾಕಲ್ಲವೇ.. ? ಹೌದು ಶಾಲೆಯಲ್ಲಿ ಪತ್ರಲೇಖನಗಳ ಕಲಿಸುತ್ತಾರೆ ಅದಕೊಂದಿಷ್ಟು ನಿಯಮಗಳು ಅದಕ್ಕೆ ಮಾರ್ಕ್ಸು ಪ್ರೇಮಪತ್ರಕ್ಕೆನು ನಿಯಮವಿಲ್ಲ ಒಲವು ತುಂಬಿ ಬರೆದ ಪದಗಳೆ ಇಲ್ಲಿ ಅಂಕವನ್ನು ನಿರ್ಧರಿಸುತ್ತವೆ…ಆ ಅಂಕ ಕೊಡುವ “ಸ್ಟ್ರಿಕ್ಟ ಟೀಚರ್” ನನಗಿಗ.. ನನ್ನೊಲವಿನ ಹೋಮವರ್ಕು ನಿನ್ನ ಮುಂದೆ ಹಿಡಿದು ನಿಂತಿರುವೆ ನಿನ್ನ ವಿಧೇಯ ವಿದ್ಯಾರ್ಥಿಯಂತೆ.. ಓದು ಅಂಕನೀಡು… ಹಾಹಾ..ವಿಷಯಕ್ಕೆ ಬರ್ತಿನಿ… ಬೇಸಿಗೆಯ ಬಿಸಿಲಿಗೆ ಮಾಡಿಟ್ಟ ಅಟ್ಟದ ಮೇಲೆ … Read more

ವಂದನೆಗಳು ನಿನಗೆ ವಂದನೆಗಳು: ಲಕ್ಷ್ಮೀಬಾಯಿ ಅಪ್ಪನಗೌಡ ಪಾಟೀಲ

ನಿನ್ನ ಹೃದಯದರಸಿಯ ವಂದನೆಗಳು ನಾನು ನಿನ್ನ ಕುರಿತಾಗಿ ಬರೆದದ್ದು, ಏಳನೇ ತರಗತಿಯಲ್ಲಿ ಓದುತ್ತಿದ್ದಾಗ. ವಯಸ್ಸು ಅಂತಹದ್ದಲ್ಲ ಮನಸ್ಸು ಬಯಸಿರಲಿಲ್ಲ, ಬರೆದ ಸಾಲುಗಳು ನನಗೆ ವಿಚಿತ್ರವೂ, ಬರೆದವಳು ನಾನೇನ? ಎನ್ನುವಂತಿದ್ದವು. ಯಾರ ಕಣ್ಣಿಗೂ ಬೀಳ ಬಾರದು ಎಂದು ಮುಚ್ಚಿ ಮುಚ್ಚಿ ಇಟ್ಟರೂ, ಬರೆದ ಸಾಲುಗಳು ತಾವೇ ತೆರೆದು ಕೊಳ್ಳು ತ್ತಿವೆ ಎನ್ನುವಂತೆ ಭಾಸವಾಗುತ್ತಿತ್ತು. ಗೆಳತಿಯರು ಸುಮ್ಮನೆ ಇದ್ದಾರೆ, ಮುಚ್ಚಿ ಇಟ್ಟದ್ದನ್ನು ಕೆಣಕಿ ತೆಗೆಯುವ ಗಟ್ಟಿಗಿತ್ತಿಯರು. ತೆಗೆದು ಓದಿ ನನ್ನನ್ನು ನಿನ್ನನ್ನು ಹೋಲಿಕೆ ಮಾಡಿ ಜೋಡಿ ಮಾಡಿಬಿಟ್ಟರು. ಅಷ್ಟಕ್ಕೂ ನಿನ್ನನ್ನು … Read more

ಒಲವ ಮುಗಿಲೊಳಗೆ ಪ್ರೀತಿ ನುಡಿದ ಕಾವ್ಯ: ಅನಿತಾ ಪಿ ತಾಕೊಡೆ

ಪ್ರೀತಿಯ ಪುಟ್ಟ… ಬದುಕಿನ ಭಾವಗತಿಯಲಿ ಬಿಡದೆ ಕಾಡುವವನ ಎಂದು ಕಾಣುವೆನೆಂದು ಕಾದುಕೊಂಡಿರುವಾಗ ಅಂದು ಮೊದಲ ಬಾರಿ ನೀನು ಬಳಿಸಾರಿ ಬಂದೆ. ಹಿಂದೆಂದೂ ಮೂಡದ ಒಲವೊಂದು ಅನುವಾದಾಗ, ನಿನ್ನ ಹಿರಿತನವನು ಮರೆತು ನನ್ನ ಮಗುತನವನೇ ಪೆÇರೆದು ಇತಿಮಿತಿಯ ರೇಖೆಗಳಿಂದ ಮುಕ್ತವಾಗಿ ಹಕ್ಕಿ ಹಾಡನು ಮನಬಿಚ್ಚಿ ಹಾಡಿದಾಗಲೆಲ್ಲಾ ನೀನು ಕೇಳುತ್ತಿದ್ದುದೊಂದೇ ‘ಎಲೈ ಮುದ್ದು ಬಂಗಾರಿ ನಾನೆಂದರೆ ನಿನಗ್ಯಾಕೆ ಇಷ್ಟೊಂದು ಪ್ರೀತಿ…’ ಆಗ…ನನ್ನಾಲಯದಲ್ಲಿ ನೀನು ಇನ್ನಷ್ಟು ಪ್ರಕಾಶವಾಗುತ್ತಿದ್ದೆ. ಬೆಳ್ಳನೆ ಹೊಳಪು ಕೇಸರಿ ಕದಪಿನಲಿ ರಂಗು ಮೂಡಿ ನಿನ್ನಿರುವಿನಲಿ ಇನಿತಿನಿತಾಗಿ ಕರಗುತ್ತಲೇ ‘ನಾನೆಂದಿಗೂ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 74 & 75): ಎಂ. ಜವರಾಜ್

-೭೪- ಸೂರ್ಯ ಮುಳುಗ ಹೊತ್ತು ಆ ಆಳು ತ್ವಾಟ್ದಲ್ಲಿ ಓಡಾಡ್ತಿದ್ನಆ ಆಳ್ನೆಡ್ತಿ ತಿಗುನ್ ಗರಿ ಕಟ್ಗಂಟುತಲಮ್ಯಾಲ ಹೊತ್ಗಂಡು ನಡ್ದಂಗಾಯ್ತು ಈ ಅಯ್ನೋರುಆ ಮುಳುಗ ಸೂರ್ಯನ್ ಕಡಕಣ್ಣಾಡುಸ್ತಆ ಆಳ್ಗ ಸನ್ನ ಮಾಡುದ್ರು ಆ ಆಳುಆ ಸನ್ನುಕ್ಕಒಂದೇ ದಾಪ್ಗ ಓಡ್ದ* ಆ ಮಾರ ನನ್ನ ಹದ ಮಾಡಿಈ ಅಯ್ನೋರ್ ಪಾದ್ಗ ಮೆಟ್ಸಿ‘ಹೆಂಗಿದ್ದು ಅಳಿ ಜೋಕಗಿದ್ದವ’ ಅಂತಂದುಒಂದೇಡ್ ತಿಂಗ್ಳೇ ಆಗಿಅವತ್ತಿಂದ ಇವತ್ಗೂಅವುನ್ ಸುಳುವೆ ಕಾಣಿ* ಸೂರ್ಯ ಮುಳುಗಿಕತ್ಲು ಕವಿಕಂಡುಆ ಹೊತ್ಲಿಅದ್ಯಾರ ಹತ್ತಾರ್ ಜನ ಮಾತಾಡ್ತಬೇಲಿ ನೆಕ್ಕಂಡು ಬಂದಂಗಾಯ್ತು ಈ ಅಯ್ನೋರು ನಗ್ತ … Read more

ಪಂಜು ಕಾವ್ಯಧಾರೆ

ನಿನ್ನ ಅಮೃತಬಳ್ಳಿ ಪ್ರೀತಿ ತಟ್ಟಿ ಮಾತಾಡಿಸುವ ಮಾತುಗಳುನನ್ನೊಳಗನ್ನುಮೌನವಾಗಿಸಿಬಿಟ್ವಿವೆತಟ್ಟಿದ್ದು ಎಬ್ಬಿಸಕ್ಕೋ, ಬಗ್ಗಿಸಕ್ಕೋಅದು ನನಗೆ ತಿಳಿಯಬಾರದೂ ಕೂಡನಾನಂತೂ ಮೌನಿಯಾಗಿಯೇ ಇರುವೆ. ಬದುಕಿನ ಬರಗಾಲಕ್ಕೆಒಣಗಿದ ಮನದಲ್ಲಿಮೊಣದೊಲೆಯಷ್ಟು ಬೆಂಕಿಯತ್ತಿದ್ದು ನಿಜ;ಎದುರಿದ್ದಿದ್ದು ಮಂಜುಗಡ್ಡೆಯಾದ ನೀನು ಮಾತ್ರವೇ.ಆ ಅಗ್ನಿಜ್ವಾಲೆಯಲ್ಲಿ ಅನ್ನವನ್ನುಬೇಯಿಸಿಕೊಂಡವರೆಷ್ಟೋ ಕಾಣೆ,ತಣಿಸಿದ್ದು ವರುಣದೇವನತೀರ್ಥವಾದ ನಿನ್ನಕಣ್ಣೀರು. ಮತ್ತೆ ಈ ಮನದನೆಲದೊಳಗೆಪ್ರೀತಿಯ ಬೀಜಗಳನ್ನು ಉತ್ತಿದ್ದೇನೆಅವುಗಳ ಫಸಲಿಗಾಗಿನಿನ್ನ ಪ್ರೇಮದ ಮೀಮಾಂಸೆಯವ್ಯವಸಾಯವನ್ನು ಭರಿಸಿಕೊಳ್ಳಲುಈ ಮನದಮಣ್ಣು ಹಾತೊರೆಯುತ್ತಿದೆ,ಭಾರೀ ಭಾರಿ ಫಸಲಂತೂನನಗೇ ಬೇಡವೆ ಬೇಡಅತೀಯಾಗಿದ್ದು ಮತ್ತೆಅದೇ ದಿಕ್ಕುತಪ್ಪಿದ ಲೋಕದಸಿಂಹಾಸನಕ್ಕೆ ನನ್ನಅಧಿಪತಿಯಾಗಿಸಬಹುದು. -ಸತೀಶ ಜೆ ಜಾಜೂರು(ಸಜಲ) ನನ್ನವನು.. ಇದ್ದರೂ ಇರಬಹುದೇನೋ ಅವಳಂತೆ ಇವನುಪ್ರೀತಿ ,ಪ್ರೇಮಕೆ ಒಂಚೂರು … Read more

ಗಜಲ್

ಗಜಲ್ ಪ್ರೇಮ ಮದಿರೆಯ ನಶೆಗೆ ಸಿಹಿಮುತ್ತುಗಳೇ ಸಾಕ್ಷಿ ಸಾಕಿಮುತ್ತಿನ ಮತ್ತಿಗೆ ಜೋಲಾಡುತ್ತಿರುವ ಅಕ್ಷಿಗಳೇ ಸಾಕ್ಷಿ ಸಾಕಿ ಪ್ರೀತಿ ಪ್ರೇಮಕೂ ಕಾಮದ ರೂಪ ಉಂಟೂ ಲೋಕದಲಿನಮ್ಮಿಬ್ಬರ ಪರಿಶುದ್ಧ ಪ್ರೇಮಕೆ ಈ ರಾತ್ರಿಗಳೇ ಸಾಕ್ಷಿ ಸಾಕಿ ಸೌಂದರ್ಯವ ಆಸ್ವಾದಿಸದೇ ಅನುಭೋಗಿಸುವುದು ಸಲ್ಲದುಹೃದಯಾಂತರಾಳದಲಿ ಮಿಳಿತಗೊಂಡ ಆತ್ಮಗಳೇ ಸಾಕ್ಷಿ ಸಾಕಿ ನಿನ್ನೊಲವ ಸವಿರುಚಿಯ ಉಣಬಡಿಸು ನನ್ನೆದೆಗೆನೀನಿರದ ಅನುಕ್ಷಣಗಳಿಗೆ ವಿರಹಗಳೇ ಸಾಕ್ಷಿ ಸಾಕಿ ಪ್ರೀತಿ ಎಂದರೆ ಬರೀ ದೇಹಾಕರ್ಷಣೆ ಅಲ್ಲ ‘ ಬಾಬಾ ‘ಮನಸ್ಸು ಮನಸ್ಸುಗಳ ಸಮ್ಮೀಲನಗಳೇ ಸಾಕ್ಷಿ ಸಾಕಿ -ಶಿವರಾಜ್.ಡಿ (ಚಳ್ಳಕೆರೆ) ರಾಮನ … Read more

ಶಿಶುಗೀತೆ

ಉಪ್ಪಿಟ್ಟು ಅಮ್ಮನು ಮಾಡಿದ ಉಪ್ಪಿಟ್ಟುಸವಿಯಲು ನಾಲಿಗೆ ಕಾದಿತ್ತುತಟ್ಟೆಯು ಮುಂದಕೆ ಬಂದಿತ್ತುಜೊತೆಯಲಿ ತುಪ್ಪವು ಬೆರೆತಿತ್ತು ಅಮ್ಮನು ನೀಡಿದ ಕೈತುತ್ತುದೇಹಕೆ ಬಂದಿತು ತಾಕತ್ತುನಾಲಿಗೆ ರುಚಿಯನು ನೋಡಿತ್ತುಚಪ್ಪರಿಸುತಲಿ ನಲಿದಿತ್ತು ಗಂಟಲು ಸಂತಸ ತೋರಿತ್ತುಹೊಟ್ಟೆಯು ಆಗ ತುಂಬಿತ್ತುಮನಸಿಗು ಮೆಚ್ಚುಗೆ ಆಗಿತ್ತುಅಮ್ಮನ ರುಚಿಯನು ಹೊಗಳಿತ್ತು ದೇಸು ಆಲೂರು ಇರುವೆ…ಇರುವೆ ಇರುವೆ.. ಇರುವೆಇರುವೆ ನೀ ಎಲ್ಲೆಲ್ಲೂಇರುವೆ ! ಸಕ್ಕರೆ ಡಬ್ಬಿಲೂನೀ ಇರುವೆಬೆಲ್ಲದ ಅಚ್ಚಲೂನೀ ಮೆಲ್ಲಗೆಮೆಲ್ಲುತ ಇರುವೆ ! ದಾರೀಲಿ ಸಾಗುತಲಿರೆಸಾಲು ಸಾಲಾಗಿ ನೀಶಿಸ್ತು ತೋರುತಗಂಭೀರ ನಡೆಯಲಿ ನೀಸಾಗುತ ಇರುವೆ! ಗಾತ್ರದಲಿ ನೀಚಿಕ್ಕವನಾದರೂಕಚ್ಚಿದರೆ ಚುರು – ಚುರುಇರುವೆ … Read more

ಪಂಜು ಕಾವ್ಯಧಾರೆ

ವಜನು ಗೊತ್ತಿಲ್ಲದೇ ಅಡಗಿದೆಎಲ್ಲರ ಚಿತ್ತದಲೂತರತಮದ ತಕ್ಕಡಿಯೊಂದು ಬೇಕೋ ಬೇಡವೋಅಳೆಯುತ್ತದೆ ಸುತ್ತಲಿನ ಎಲ್ಲವ(ರ)ನ್ನು ಒಬ್ಬೊಬ್ಬರ ತಕ್ಕಡಿಯದೂಅಳತೆಗಲ್ಲು ಬೇರೆಇಂದಿನ ಲಕ್ಷುರಿ ನಾಳಿನಅವಶ್ಯಕತೆಯಾಗುವುದು ಖರೇ ಇವನ ನೂರರ ಕಲ್ಲುಆಗಬಹುದವನ ಸಾವಿರದ ಕಲ್ಲುಇವಳ ಸುಖದ ವ್ಯಾಖ್ಯಾನಸರಿಯೆನಿಸದಿರಬಹುದು ಅವಳಿಗೆ ಮಗುವಿಗೆ ಯಾವ ಸ್ಕೂಲಲ್ಲಿ ಸೀಟುಯಾವ ಲೇ ಔಟ್‌‌ನಲ್ಲಿ ಸೈಟುಹೊಸ ಮನೆ, ಕಾರಿನ ರೇಟು-ಗಳ ಮೇಲೆ ನಿರ್ಧಾರವಾಗುವುದು ವೇಯ್ಟು ಅವರಿವರ ತಕ್ಕಡಿಯಲಿಮೇಲಾಗಿ ತೂಗಲು ಜನರ ಪೈಪೋಟಿಜಾಗ್ರತೆ! ತಪ್ಪದಿರಲಿ ಹತೋಟಿ ತಕ್ಕಡಿಯಲಿ-ಇಂದೊಬ್ಬ ಮೇಲಾಗಿನಾಳೆ ಮತ್ತೊಬ್ಬ ಹೆಚ್ಚು ತೂಗಿ,ಒಮ್ಮೆ ಮೇಲಾದವನುಇನ್ನೊಮ್ಮೆ ಕೆಳಗೆ ಬಾಗಿತನ್ನ ತಾನೇ ತೂಗಿಕೊಳ್ಳಲು ಹೋಗಿಕೊನೆಗೆ ತೂಗಿ … Read more

ಒಂದು ಕಡು ಬೇಸಿಗೆಯ ರಾತ್ರಿಯಂದು…: ಜೆ.ವಿ.ಕಾರ್ಲೊ

ಮೂಲ: ಆಂಬ್ರೋಸ್ ಬಿಯೆರ್ಸ್ಅನುವಾದ: ಜೆ.ವಿ.ಕಾರ್ಲೊ, ಹಾಸನ. -೧- ಹೆನ್ರಿ ಆರ್ಮ್ಸ್ಟ್ರಾಂಗ್ ನನ್ನು ನಂಬಿಸಿ ಒಪ್ಪಿಸುವುದು ಅಷ್ಟೇನೂ ಸುಲಭದ ಮಾತಾಗಿರಲಿಲ್ಲ. ಅವನನ್ನು ಭೂಮಿಯೊಳಗೆ ಹೂತಿದ್ದಂತೂ ನಿಜ. ಹೂತಿದ್ದ ಮಾತ್ರಕ್ಕೆ ತಾನು ಸತ್ತೆನೆಂದು ಒಪ್ಪಿಕೊಳ್ಳಲು ಅವನ ಯಾವತ್ತೂ ಬಂಡಾಯಕೋರ ಮನಸ್ಸು ಸಿದ್ಧವಿರಲಿಲ್ಲ. ಅಂತಿಮ ಸಂಸ್ಕಾರದ ಎಲ್ಲಾ ವಿಧಿವಿಧಾನಗಳೊಂದಿಗೆ ಅವನದೇ ಎದೆಯ ಮೇಲೆ ಅವನದೇ ಕೈಗಳನ್ನು ಜೋಡಿಸಿ ಅಂಗಾತನಾಗಿ ಪೆಟ್ಟಿಗೆಯೊಳಗೆ ಮಲಗಿಸಿದ್ದರು. ಹೆನ್ರಿ, ಅವನ ಕೈಗಳನ್ನು ಜೋಡಿಸಿದ್ದ ಬಂಧನದಿಂದ ಬಿಡಿಸಿಕೊಳ್ಳುವುದೇನೂ ದೊಡ್ಡ ವಿಷಯವಾಗಿರಲಿಲ್ಲ. ಆದರೂ, ಅದರಿಂದ ಹೆಚ್ಚೇನೂ ಉಪಯೋಗವಾಗುತ್ತಿರಲಿಲ್ಲ. ಅವನನ್ನು ಸುತ್ತುವರೆದಿದ್ದ … Read more

ಸೂಗೂರೇಶ ಹಿರೇಮಠ ಅವರ “ಮುರಿದ ಟೊಂಗೆಯ ಚಿಗುರು” ಕವನ ಸಂಕಲನ: ಸುರೇಶ್ ಮಲ್ಲಿಗೆ ಮನೆ….

ತನ್ನ ಮೊದಲ ಕವನ ಸಂಕಲನದಲ್ಲಿ ದಾರಿಗುಂಟ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟು ಓದುವಿಕೆ ಮನುಷ್ಯನ ಪೂರ್ಣತೆಗೆ ಕೊಂಡೊಯ್ಯುತ್ತದೆ, ಸಂವಾದ ಸಿದ್ಧಗೊಳಿಸುತ್ತದೆ, ಬರವಣಿಗೆಯಿಂದ ಆತನ ಪರಿಪೂರ್ಣ ಮನುಷ್ಯನನ್ನಾಗಿಸುತ್ತದೆ ಎಂಬ ಇಂಗ್ಲಿಷ್ನ ಖ್ಯಾತ ಬರಹಗಾರ Francis Bacon ಅವರ ಮಾತುಗಳನ್ನು ನೆನೆಸಿಕೊಳ್ಳುತ್ತ, ಪ್ರಕಾಶ ಕಡಮೆ(ನಾಗಸುಧೆ) ಅವರಿಂದ ಚಂದದ ಮುನ್ನುಡಿ ಬರೆಸಿ , ಲಲಿತ ಸಾಹಿತ್ಯದಲ್ಲಿ ತನ್ನದೇ ಛಾಪು ಮೂಡಿಸಿದ, ನಮ್ಮೆಲ್ಲರ ಬೆನ್ನೆಲುಬಾದ ಪ್ರೀತಿಯ ಗುಂಡುರಾವ್ ದೇಸಾಯಿ ಸರ್ ಅವರಿಂದ ಬೆನ್ನುಡಿ ಬರೆಸಿ,ಯಾವ ಆಡಂಬರವಿಲ್ಲದೆಕರಿಮಣಿಯಲ್ಲೆ ಬದುಕಿದಬಂಗಾರಅವರ ಅಮ್ಮನಿಗೆ ತನ್ನ ಕೃತಿಯನ್ನು ಅರ್ಪಿಸುವ … Read more

ಯೋಚನೆಗಳು ಸ್ವತಂತ್ರವಾಗದ ಹೊರತು ಪ್ರಜಾಪ್ರಭುತ್ವ ಅತಂತ್ರ: ಮಧುಕರ್ ಬಳ್ಕೂರ್

ಇದು ಭಾರತೀಯರ ಹುಟ್ಟುಗುಣವೋ ಇಲ್ಲಾ ಕೆಟ್ಟಚಾಳಿಯೋ, ಒಂದಿಷ್ಟು ಗೌಜು ಗಲಾಟೆ ಜಟಾಪಟಿಯಂತ ಸ್ಥಳಗಳಲ್ಲಿ ಜೋರಾದ ಮಾತುಗಳು ಕೇಳಿಬಂದರೆ ಸಾಕು, ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಅಲ್ಲಿ ನೆರೆದು ಬಿಡುವುದು. ಒಂದು ಬಗೆಯ ಕೆಟ್ಟ ಕೂತೂಹಲದಲ್ಲಿ ಬಿಟ್ಟಿ ಎಂಟರ್ಟೈನ್ ಮೆಂಟ್ ಅಂತ ಮಜಾ ತಗೊಳ್ಳೊರು ಕೆಲವರಾದರೆ, ಜಗಳದ ಕಾರಣವನ್ನೆ ಅರಿಯದೆ ಮಧ್ಯೆ ಪ್ರವೇಶಿಸಿ ಹಿರೋಯಿಸಂ ತೊರಿಸಲು ಹಾತೊರೆಯುವ ಇನ್ನು ಕೆಲವರು. ಬಹುತೇಕ ಸಂಧರ್ಭಗಳಲ್ಲಿ ಅಲ್ಲಿ ವಿಷಯವೇ ಇರುವುದಿಲ್ಲ. ಏನ್ ಲುಕ್ ಕೊಡ್ತಾ ಇದ್ದೀಯಾ, ಹೆಂಗೈತೆ ಮೈಗೆ ಅನ್ನೊ ರೇಂಜ್ ನಲ್ಲೆ … Read more

ಕವಿ ಮನಸ್ಸಿನ ಭಾವಯಾನ ‘ಮೌನಸೆರೆ’ ಕಾದಂಬರಿ: ಅಶ್ಫಾಕ್ ಪೀರಜಾದೆ

ಒಂದು ಕಥೆ ಓದಿಸಿಕೊಳ್ಳಬೇಕು ಮತ್ತು ಓದುಗನನ್ನು ಕಾಡಬೇಕು. ಇಂತಹ ವಿಚಾರವುಳ್ಳ ಕಥೆಗಳು ಎಂದೆಂದಿಗೂ ಅಮರತ್ವ ಪಡೆದುಕೊಳ್ಳುತ್ತವೆ. ಈ ದಿಶೆಯಲ್ಲಿ ಇಲ್ಲಿರುವ ಕಥಾವಸ್ತು ಅಮರತ್ವ ಪಡೆದುಕೊಳ್ಳುವತ್ತ ಸಾಗಿರುವುದು ಉತ್ತಮ ಬೆಳವಣಿಗೆಯ ಹಂತವೆಂದು ಖ್ಯಾತ ಸಾಹಿತಿ ಕವಿ ಮುದಲ್ ವಿಜಯ್ ಬೆಂಗಳೂರು ಅವರು ಯುವ ಸಾಹಿತಿ ಗಣಪತಿ ಹೆಗಡೆ ಅವರ ಚೊಚ್ಚಲ ಕಾದಂಬರಿ ಮೌನಸೆರೆಗೆ ಮುನ್ನುಡಿಯ ರೂಪದಲ್ಲಿ ನೀಡಿರುವ ಪ್ರಮಾಣ ಪತ್ರ. ಈ ಹಿನ್ನಲೆಯಲ್ಲಿ ಕಾದಂಬರಿ ಮೊದಲಿನಿಂದ ಕೊನೆಯವರೆಗೂ ಯಾವುದೇ ಅಡೆತಡೆಗಳು ಇಲ್ಲದೇ ಓದಿಸಿಕೊಂಡು ಹೋಗುವುದರಿಂದ ಇಲ್ಲಿ ಮುದಲ್ ವಿಜಯ್ … Read more

ಪಂಜುವಿನ ಯೂ ಟ್ಯೂಬ್ ಚಾನಲ್ ನಲ್ಲಿ ಕವನ ಓದುವ ಅವಕಾಶ

ಕನ್ನಡದ ಉತ್ತಮವಾದ ಕವಿತೆಗಳನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಪಂಜು ಯೂ ಟ್ಯೂಬ್ ಚಾನಲ್ ಶುರು ಮಾಡಿದ್ದೇವೆ. ತಮ್ಮ ಕವಿತೆಗಳಿಗಿಂತ ಬೇರೆ ಕವಿಗಳ ಕವಿತೆಗಳನ್ನು ವಾಚಿಸುವ ಅವಕಾಶ ಪಂಜುವಿನ ಯೂ ಟ್ಯೂಬ್ ಚಾನಲ್ಲಿನಲ್ಲಿದೆ. ಬೇರೆಯವರ ಕವಿತೆಯನ್ನು ವಾಚಿಸುವ ಇಚ್ಚೆಯಿದ್ದರೆ ನೀವು ವಾಚಿಸಿರುವ ಕವಿತೆಯ voice ಸ್ಯಾಂಪಲ್ ಕಳಿಸಿ. ಉತ್ತಮವಾಗಿ ವಾಚನ ಮಾಡುವವರಿಗೆ ನಮ್ಮ ಯೂ ಟ್ಯೂಬ್ ಚಾನಲ್ ನಲ್ಲಿ ಕವಿತೆ ವಾಚಿಸುವ ಅವಕಾಶ ನೀಡಲಾಗುವುದು. ನಿಮ್ಮ ಕವಿತೆಯನ್ನು ಬೇರೆಯವರಿಂದ ವಾಚಿಸುವ ಇಚ್ಚೆ ಇದ್ದರೆ ನಿಮ್ಮ ಕವನ ಸಂಕಲನವನ್ನು ನಮಗೆ … Read more

ಪಂಜುವಿನ ಯೂಟ್ಯೂಬ್‌ ಚಾನೆಲ್‌ ಶುರು

ಕನ್ನಡದ ಅತ್ಯುತ್ತಮ ಕವಿತೆಗಳನ್ನು ಕೇಳಿಸಲು ಪಂಜುವಿನ ಯೂಟ್ಯೂಬ್‌ ಚಾನೆಲ್‌ ಶುರು ಮಾಡಿದ್ದೇವೆ. ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ. ಕವಿತೆ ವಾಚಿಸುವ ಇಚ್ಚೆಯುಳ್ಳವರು ಒಂದು ಮೇಲ್‌ ಮಾಡಿ. ನಮ್ಮ ಮೇಲ್‌ ವಿಳಾಸ: editor.panju@gmail.com, smnattu@gmail.com

ಒಂದಷ್ಟು ವೈನ್ ಕುಡಿದು ಪಕ್ಕಾ ಕುಡುಕರ ಹಾಗೆ ಅಳಬೇಕು: ಪುನರ್ವಸು

ಮುಗಿಲೂರ ದೊರೆ ಮಗನಿಗೆ. ಓಯ್ ಚಲ್ವಾ, ಹೇಗಿದೀಯಾ, ನಿನ್ನೆ ಬರ್ದಿದ್ದ ಪತ್ರ ಇಡೋಕೆ ಅಂತ ನಿನ್ ಮನೆಗೆ ಹೋದಾಗ, ನೀನು ನಮ್ಮೂರ ಸರಹದ್ದಿನಲ್ಲೆಲ್ಲೋ ಅದ್ಯಾವುದೋ ಕಿವುಡ ದೇವರ ಜಾತ್ರೆಯೊಳಗೆ, ಮೂಕ ಮೈಕಿಗೆ ದನಿಯಾಗಿ, “ದೇವತೆ ನಿನ್ನ ನೋಡಲು ಪ್ರತಿ ಕ್ಷಣವೂ ಕಾಯುವೆನು,ಅರೆ ಕ್ಷಣ ನೀ ಸಿಕ್ಕರೂ ನಾ ನಗುತಲೇ ಸಾಯುವೆನು.” ಅಂತ ಹಾಡ್ತಿದ್ದೆ ನೋಡು, ಜೀವ ನಿನ್ನ ದನಿಯ ದಾರಿಯಗುಂಟ ಸುಳಿಯಾಗಿ ಹರಿದು ಹೋದಂಗಾಯ್ತು, ಆ ನಡುರಾತ್ರಿ ಹನ್ನೆರಡರಲ್ಲೂ ಅಷ್ಟೆಲ್ಲ ಜೀವದ ತುಣುಕಿನೊಳಗೆ ಸೇರಿದ ಗುಂಗೀ ಹುಳದ … Read more

ತಿಳಿದೋ ತಿಳಿಯದೆಯೋ ಶರಣಾಗಿರುವೆ ಇಂದು ನಾನು ನಿನಗೆ: ಗಾಯತ್ರಿ ಭಟ್‌, ಶಿವಮೊಗ್ಗ

ನನ್ನೊಲವ ಪತ್ರ, ಹೌದು ನನಗೆ ಗೊತ್ತು. ಪ್ರೇಮ ಪತ್ರ ಬರೆಯಬೇಕಿಲ್ಲವೆಂದು ನಮ್ಮ ಪ್ರೀತಿಗೆ.ನಿನಗೂ ತಿಳಿದಿದೆ ನನ್ನ ಬಾಳ ಪಯಣದಲ್ಲಿ ನಿನ್ನ ನಾನು ಪ್ರೇಮಿಯಾಗಿ ಕಂಡೇ ಇಲ್ಲ. ತಿಳಿದಿಲ್ಲ ಅದು ಹೇಗೆ ಪ್ರೇಮಾಂಕುರವಾಗಿದೆ ಹಾಗೂ ಅಂದೆಂದಾಯಿತೆಂದು ? ಪ್ರೀತಿಯಿರುವುದಂತೂ ಸತ್ಯವೇ, ಅದಕ್ಕಾಗಿಯೇ ಮನದ ಲಹರಿಯನ್ನೆಲ್ಲಾ ಅಕ್ಷರಗಳಲ್ಲಿ ಬಿತ್ತಿಡುವ ಮನಸ್ಸಾಗಿದೆ ಯಾಕೋ ಇಂದು. ನನ್ನ ಮನದಂಗಳದ ಮಾತುಗಳನ್ನೆಲ್ಲಾ ನಿನ್ನ ಮನಸ್ಸೊಳಗೆ ಬಿತ್ತಿ ಅದಕ್ಕೊಂದು ಪ್ರೀತಿರೂಪಕ ಕೊಡುತ್ತಿರುವೆ. ಏನೆಂದು ಕರೆಯಲಿ ನಿನ್ನ ಗೆಳೆಯ, ಇನಿಯ ಇವೆಲ್ಲಾ ಯಾವುವೂ ಸರಿಹೊಂದುತ್ತಿಲ್ಲ. ಯಾರೂ ಇರದ … Read more

“ನನ್ನೊಲವಿಗೊಂದು ಒಲವಿನ ಓಲೆ.”: ವರದೇಂದ್ರ ಕೆ.

ನನ್ನ ನೆಚ್ಚಿನ, ನಲ್ಮೆಯ, ಪ್ರೀತಿಯ ಮುದ್ದು ಮಖದ ಗೆಳತಿ. ಸದಾ ನಗುತ್ತಲೇ ಇರುವ ಸುಮದೇವತೆ. ಹೇಗಿದ್ದೀಯಾ? . ನಿನ್ನನ್ನು ನಿತ್ಯವೂ ನನ್ನ ಮನದ ದೇಗುಲದಲ್ಲಿ ಪ್ರೇಮದಭಿಷೇಕ ಮಾಡಿ ಪೂಜಿಸುತ್ತ, ನಾನು ಪ್ರೇಮಭಕ್ತನೇ ಆಗಿಬಿಟ್ಟಿದ್ದೇನೆ. ಸದ್ದಿಲ್ಲದೇ ಶುರುವಾದ ಈ ಪ್ರೇಮಕ್ಕೆ ನೀನೇ ಸ್ಪೂರ್ತಿ. ಅದಕ್ಕೆ ಅನುರಾಗದ ಜೇನು ಹರಿಸಿ ಪೋಷಿಸಿ ಗಗನದಷ್ಟು ಪ್ರೇಮವನ್ನು ಬೆಳೆಸೆದವಳು ನೀನು. ಅದ್ಹೇಗೆ ನಿನ್ನನ್ನು ಮೋಹಿಸಿದೆನೋ ನಂಗೇ ಗೊತ್ತಿಲ್ಲ‌. ಮುದ್ದು, ನಿನ್ನ ಅಂದಕ್ಕೆ ಮರುಳಾಗಿ ನಿನ್ನ ಹಿಂದೆ ಬಿದ್ದು; ಪ್ರೇಮಿಸಿರುವುದು ಎಷ್ಟು ಸತ್ಯವೋ, ನಿನ್ನ … Read more

ಮುಸ್ಸಂಜೆಯ ಪ್ರೇಮ ಪ್ರಸಂಗ…: ಅಭಿಷೇಕ್ ಎಂ. ವಿ.

ಪ್ರೀತಿಯ ಮುಸ್ಸಂಜೆಯ ಒಡಲಾಳದ ಗೆಳತಿ ಮಧುರ, ನಿನ್ನ ಶ್ರಾವಣ ತಂಗಾಳಿಯ ನಗು, ನನ್ನ ವಸಂತ ಋತುವಿನ ಹೃದಯದ ಚಿಗುರಿನಲ್ಲಿ ಮುದುಡದೆ ಇಂದಿಗೂ ಹಸಿರಾಗಿದೆ. ಗೆಳತಿ ಎಂದಿದ್ದಕ್ಕೆ ಕ್ಷಮೆ ಇರಲಿ. ಅಂದು ನಾನು ಮೌನಿಯಾಗಿದ್ದೆ. ವರ್ಷಗಳು ಉರುಳಿದ ಮೇಲೆ ಮೌನದ ಬಯಲಿಂದ ಹೊರಬಂದು ಈ ಪತ್ರ ಬರೆಯುತ್ತಿದ್ದೇನೆ. ನೀ ಇರುವ ವಿಳಾಸವನ್ನು ನಿನ್ನ ಸ್ನೇಹಿತೆಯಾದ ಪ್ರಿಯಾಳ ಬಳಿ ಪಡೆದೆ. ಅವಳೂ ನಿನ್ನ ಜೊತೆಯಲ್ಲೇ ಕೆಲಸ ಮಾಡುತ್ತಿರುವ ವಿಷಯ ತಿಳಿಯಿತು. ಮೊನ್ನೆ ಊರಿಗೆ ಬಂದ್ದಿದ್ದಳು. ಹೇಗಿದ್ದೀಯ? ಮನಸಿನ ಅಂತರಾಳದ ಇತಿಹಾಸ … Read more

ನಾನು ನಿನ್ನವಳಾಗಿ ನಿನ್ನ ನೆರಳಿನ ನೆರಳಾಗಿ..: ನಂದಾದೀಪ, ಮಂಡ್ಯ

ಗೆಳೆಯಾ.. ನಿನ್ನ ನೆನೆದಾಗ ನನಗರಿವಿಲ್ಲದೆ ಮನಸಿನ ಯಾವುದೋ ಮೂಲೆಯಲ್ಲಿ ಸಂವೇದನ ಭಾವವೊಂದು ಆಗ ತಾನೇ ಬಿದ್ದ ಮಳೆಗೆ ಎಳೆ ಗರಿಕೆ ಚಿಗುರೊಡೆದಂತೆ ಚಿಗುರಿ ಬಿಡುತ್ತದೆ.. ಆ ಭಾವದ ಪರಿಯ ಹುಡುಕಲೊರಟರೆ ಪ್ರೇಮ ಲಹರಿಯೊಂದು ಮನದ ಕಣಿವೆಯೊಳಗೆ ಹರಿದು ಹಸಿರಾಗಿಸಿ ಬಿಡುತ್ತದೆ.. ನಿನ್ನೆಡೆಗಿನ ಮಧುರ ಭಾವವೊಂದು ನನ್ನೊಳಗೆ ಹರವಿಕೊಂಡು ಪ್ರೀತಿ ಹೇಳುವ ಆ ಕ್ಷಣಕೆ ಪ್ರತಿ ಘಳಿಗೆಯೂ ಹಾತೊರೆಯುವಂತೆ ಮಾಡಿಬಿಡುತ್ತದೆ.. ಮೊದಲ ನೋಟದ ಬೆಸುಗೆ ಹೃದಯದ ಅಂತರಂಗದಲ್ಲಿ ಒಲವಿನ ತರಂಗ ಎಬ್ಬಿಸಿ ಭಾವಗಳ ಬಂಧನದಲ್ಲಿ ಬಂಧಿಸಿ ಪ್ರೇಮಾಂಕುರವಾಗಿಸಿತು.. ನಿನ್ನ … Read more

ಬದುಕಲ್ಲಿ ಸ್ಪಷ್ಟತೆ ಇರಲಿ, ಪಡೆಯುವ ಉತ್ತರದಲ್ಲೂ ಏಳುವ ಪ್ರಶ್ನೆಗಳಲ್ಲೂ: ಮಧುಕರ್ ಬಳ್ಕೂರ್

ಅವನು : “ನನಗೂ ಬರೀಬೇಕು ಅಂತಾ ತುಂಬಾ ಆಸೆ ಸರ್. ಆದರೆ ಏನ್ಮಾಡೋದು? ಕೆಲಸದ ಒತ್ತಡ, ಬ್ಯುಸಿ. ಟೈಮೆ ಸಿಗಲ್ಲ ನೋಡಿ. ಡ್ಯೂಟಿ ಮುಗಿಸಿ ಮನೆಗ್ ಬಂದ್ ಮೇಲಂತೂ ಅದು ಇದು ಅಂತಲೆ ಆಗೊಗುತ್ತೆ. ಇನ್ನೆಲ್ಲಿ ಸರ್ ಬರೆಯೋದು..?” ಅವರು : “ಓ ಹೌದಾ, ಮನೆಗೆ ಬಂದ್ ಮೇಲೆ ಬಹಳ ಕೆಲ್ಸ ಇರುತ್ತೆ ಅನ್ನಿ ..?” ಅವನು : ” ಹಾಗೆನಿಲ್ಲ, ಡ್ಯೂಟಿ ಮಾಡಿ ದೇಹ ದಣಿದಿರತ್ತೆ ನೋಡಿ. ಹಾಸಿಗೆಗೆ ಹೋಗಿ ಒಂದ್ ಅರ್ಧ ಗಂಟೆ ಮಲಗಿರ್ತಿನಿ. … Read more

ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ: ಪೂಜಾ ಗುಜರನ್

ಮನುಷ್ಯನ ಒಳ್ಳೆತನ ಕೆಟ್ಟತನ ಎಲ್ಲದಕ್ಕೂ ಕಾಲ ಕ್ಷಣ ಕ್ಷಣವೂ ಉತ್ತರಿಸುತ್ತಿದೆ. ನನಗೆ ಎಲ್ಲವೂ ಗೊತ್ತು. ನಾನು ನನ್ನಿಂದಲೇ ಎಲ್ಲ ಅಂದಾಗಲೆಲ್ಲ ನೀನು ಅನ್ನುವುದು ಬರಿ ಒಂದು ಅಣು ಮಾತ್ರ ನಿನ್ನಿಂದ ಏನೇನೂ ಇಲ್ಲ ಅಂತ ಸೃಷ್ಟಿಕರ್ತ ಉತ್ತರಿಸುತ್ತಿದ್ದಾನೆ. ಬ್ರಹ್ಮಾಂಡವೇ ಅವನಗಿರುವಾಗ ಈ ಹುಳು ಮಾನವ ಏನೂ ತಾನೇ ಮಾಡಬಲ್ಲ. ಇಲ್ಲಿ ಏನಿದ್ದರೂ ಅದೂ ಕಾಕತಾಳೀಯ. ನೀನು ನಿನಗಾಗಿ ಮಾಡಿಕೊಂಡಿದ್ದು ಎಲ್ಲವೂ ತಾತ್ಕಾಲಿಕ. ಇವತ್ತು ನೀನು ಏನೇ ಅನುಭವಿಸುತ್ತಿದ್ದರೂ ಅದೆಲ್ಲವೂ ನಿನ್ನ ಉಪಯೋಗಕ್ಕಾಗಿ ಮಾಡಿಕೊಂಡಿದ್ದು. ಅತಿಯಾದ ಬುದ್ಧಿ ಎಲ್ಲವನ್ನೂ … Read more