ತಮ್ಮ ಶ್ರೇಷ್ಟತೆಯನ್ನು ಬೇರೆಯವರ ನಿಮ್ನತೆಯಲ್ಲಿ ಕಾಣುವವರ ಮೂಲಗುಣಗಳ ಅನಾವರಣ ಮಾಡುವ “ಸ್ನೇಕ್‌ ಟ್ಯಾಟೂ”: ಡಾ. ನಟರಾಜು ಎಸ್‌ ಎಂ

ಬೆಳ್ಕೆ ಮಹಾದೇವ ಗಿರಿರಾಜರವರು ಕಳೆದ ಒಂದು ದಶಕದಿಂದ ಎಫ್‌ ಬಿ ಗೆಳೆಯರು. ಸಿನಿಮಾ ನಟರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ ಹೆಸರು ಮಾಡಿದವರು. ಈಗ “ಕಥೆಗೆ ಸಾವಿಲ್ಲ” ಪುಸ್ತಕದ ಮೂಲಕ ಕಾದಂಬರಿಕಾರರಾಗಿದ್ದಾರೆ. ಜೊತೆಗೆ “ಸ್ನೇಕ್‌ ಟ್ಯಾಟೂ” ಎಂಬ ಹೊಸ ಕಥಾಸಂಕಲನದ ಮೂಲಕ ಕಥೆಗಾರರಾಗಿದ್ದಾರೆ. ಬಿ ಎಂ ಗಿರಿರಾಜರವರ “ನವಿಲಾದವರು” ಚಿತ್ರವನ್ನು ಯೂ ಟ್ಯೂಬ್‌ ನಲ್ಲಿ ನೋಡಿದ್ದೆ. ಆ ಚಿತ್ರದಲ್ಲಿನ ಅವರ ನಟನೆ ನನಗೆ ತುಂಬಾ ಇಷ್ಟವಾಗಿತ್ತು. ಒಬ್ಬ ಆತಂಕವಾದಿಯ ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ನಂತರ ಬಂದ ಅವರ ಚಿತ್ರಗಳನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೀತಿಯು ನೀಡಿದ ಕಣ್ಣು: ಮನು ಗುರುಸ್ವಾಮಿ

ರಾಧಾ ಕೃಷ್ಣರ ಪ್ರೇಮವೆಂದರೆ ಅದೊಂದು ಅಪೂರ್ವ ಕಾವ್ಯಾ; ಭಾಗಶಃ ಹೊಸಗನ್ನಡ ಸಾಹಿತ್ಯದಲ್ಲಿ ಈ ಪ್ರೇಮ ಕಾವ್ಯದ ಬಗ್ಗೆ ಹಾಡಿ ಹೊಗಳದ ಕವಿಗಳಿಲ್ಲ. ಈ ಪ್ರೇಮಕಥೆಯನ್ನು ಕೇಳಿ ತಣಿಯದ ಕನ್ನಡ ಮನಗಳಿಲ್ಲ. ರಾಧೆ ಕೃಷ್ಣನೇ ಆಗಿ ಕೃಷ್ಣನನ್ನು ಆರಾಧಿಸುತ್ತಾ, ಪ್ರೇಮಿಸುತ್ತಾ, ಸಂಭ್ರಮಿಸುತ್ತಾ ಬಂದ ಕಥೆಯೇ ಈ ರಾಧಾಕೃಷ್ಣ ಪ್ರೇಮ. ಕುವೆಂಪು, ಪು.ತಿ.ನ, ಕೆಎಸ್ ನರಸಿಂಹಸ್ವಾಮಿ, ಜಿ ಎಸ್ ಶಿವರುದ್ರಪ್ಪ , ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ, ವೆಂಕಟೇಶಮೂರ್ತಿ ಮೊದಲಾದ ಹಲವಾರು ಕವಿಗಳು ತಮ್ಮ ಕಾವ್ಯಗಳಲ್ಲಿ ರಾಧಾಕೃಷ್ಣ ಪ್ರೇಮವನ್ನು ಬಹಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜುವಿನ ದಶಕದ ಸಂಭ್ರಮದ ವಿಶೇಷಾಂಕಕ್ಕೆ ಬರಹಗಳ ಆಹ್ವಾನ

ಸಹೃದಯಿಗಳೇ, ಇದೇ ಜನವರಿ ೨೧ನೇ ತಾರೀಖಿಗೆ ಪಂಜುವಿಗೆ ಹತ್ತು ವರ್ಷ ತುಂಬುತ್ತಿದೆ. ಪಂಜುವಿನ ದಶಕದ ಸಂಭ್ರಮದ ಆಚರಣೆಗಾಗಿ ವಿಶೇಷ ಸಂಚಿಕೆಯೊಂದನು ತರಲು ಬಯಸುತ್ತಿದ್ದೇವೆ. ಈ ವಿಶೇಷ ಸಂಚಿಕೆಗೆ ನಿಮ್ಮ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ಕಳುಹಿಸಿಕೊಡಿ. ನಮ್ಮ ಇ ಮೇಲ್ ವಿಳಾಸ editor.panju@gmail.com ಒಮ್ಮೊಮ್ಮೆ ತಾಂತ್ರಿಕ ತೊಂದರೆಗಳಿಂದ ನೀವು ಕಳುಹಿಸಿದ ಲೇಖನ ನಮಗೆ ತಲುಪದೇ ಇರಬಹುದು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೆಂಪು ಎಂದರೆ ನಿಲ್ಲುವುದಲ್ಲ: ಡಾ. ನಟರಾಜು ಎಸ್‌.ಎಂ.

ಕ್ಲಬ್ ಹೌಸ್ ನ ‘ಸಿನಿಮಾ ಓದು’ ಎಂಬ ಗುಂಪಿನಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಕುರಿತು ಕಳೆದ ಗುರುವಾರ ಮಾತುಕತೆ ನಡೆಯುತ್ತಿತ್ತು. ಕೆ ಫಣಿರಾಜ್ ಅವರ ಸಾರಥ್ಯದಲ್ಲಿ ಪ್ರತಿ ಗುರುವಾರ ನಡೆಯುವ ಕಾರ್ಯಕ್ರಮಕ್ಕೆ ನಮ್ಮ ನಡುವಿನ ಕವಿ, ಕತೆಗಾರ, ಅಂಕಣ ಬರಹಗಾರರಾದ ಚಂದ್ರಪ್ರಭ ಕಠಾರಿಯವರ ಆಮಂತ್ರಣದ ಮೇರೆಗೆ ಕಳೆದ ವಾರ ನಾನೂ ಕೂಡ ಕೂಡಿಕೊಂಡಿದ್ದೆ. ಕಾರ್ಯಕ್ರಮದಲ್ಲಿ ಸಿನಿಮಾ ಕುರಿತ ಚರ್ಚೆಯನ್ನು ಕೇಳುತ್ತಾ ಅಲ್ಲಿನ ಮಾತುಗಾರರ ಸಿನಿಮಾ ಕುರಿತ ಪಾಂಡಿತ್ಯಕ್ಕೆ ನಿಜಕ್ಕೂ ಬೆರಗಾಗಿ ಹೋದೆ. ಆ ಗುಂಪಿನಲ್ಲಿದ್ದ ಅರ್ಪಣ ಎಚ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕುವೆಂಪು ಪುಸ್ತಕ ಮನೆಗೆ ಪುಸ್ತಕಗಳ ದೇಣಿಗೆ ನೀಡಿರಿ

ಬಡಮಕ್ಕಳ ಜ್ಞಾನಾರ್ಜನೆಯ ಉದ್ದೇಶಕ್ಕಾಗಿ ಗ್ರಾಮೀಣ ಭಾಗದಲ್ಲಿ ಸ್ಥಾಪನೆಗೊಂಡಿರುವ ‘ಕುವೆಂಪು ಪುಸ್ತಕ ಮನೆ’ ಗೆ ನಿಮ್ಮಲ್ಲಿರುವ ಯಾವುದೇ ಬಗೆಯ ಪುಸ್ತಕಗಳನ್ನು ದೇಣಿಗೆಯಾಗಿ, ದಾನವಾಗಿ ನೀಡಬಹುದಾಗಿದೆ.ನೀವು ನೀಡುವ ಒಂದು ಪುಸ್ತಕ ಒಂದು ಕೋಟಿಗೂ ಮಿಗಿಲು.ಮಕ್ಕಳಿಗೆ ಪುಸ್ತಕಗಳನ್ನು ಓದಲು ನೀಡಿ; ಸಹಕರಿಸಿ.ಪ್ರಕಟಣೆ : ಕುವೆಂಪು ಪುಸ್ತಕ ಮನೆಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿದೂ ಸಂ : 8549957444 ಅಂಚೆ ಮೂಲಕ ಪುಸ್ತಕ ತಲುಪಿಸಲುಕುವೆಂಪು ಪುಸ್ತಕ ಮನೆನಂ ೯೬/ಎ, ಪರಿಣಾಮಿಪುರ, ಕಾವೇರಿಪುರ ಅಂಚೆತಲಕಾಡು ಹೋಬಳಿ, ತಿ ನರಸೀಪುರ ತಾಲ್ಲೂಕು,ಮೈಸೂರು – ೫೭೧೧೨೩ ಕನ್ನಡದ ಬರಹಗಳನ್ನು ಹಂಚಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಮಿಠಾಯಿ ಮಾಮ ಕವಿತೆ ಸವಿಯೋಣ ಬಾ ತಮ್ಮ”: ಯಲ್ಲಪ್ಪ ಎಮ್ ಮರ್ಚೇಡ್, ರಾಯಚೂರು

ಮಕ್ಕಳ ಸಾಹಿತ್ಯ ಎಂದರೆ ಮಕ್ಕಳ ಮನಸ್ಸನ್ನು ತಣಿಸಿ, ಕುಣಿಸಿ, ಅವರ ಕುತೂಹಲವನ್ನು ಕೇರಳಿಸಿ ಅರಳಿಸಿ, ಅವರ ಭಾವನೆಗಳಿಗೆ ರೆಕ್ಕೆ ಕಟ್ಟಿ, ಗಾಳಿಯಲ್ಲಿ ತೇಲಾಡುವಂತೆ, ಅವರ ಮನಸ್ಸು ಸಂತುಷ್ಟಗೊಳಿಸುವುದಲ್ಲದೇ, ಅವರನ್ನು ಮಾನಸಿಕವಾಗಿ ದೈಹಿಕವಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡು ಹೋಗುವಂತೆ ಇರುವ ಸಾಹಿತ್ಯ. ಕನ್ನಡ ಸಾಹಿತ್ಯ ಲೋಕದೊಳಗೆ ಹಲವಾರು ಹಿರಿಯ ಸಾಹಿತಿಗಳು ಮಕ್ಕಳಿಗಾಗಿ ಬರೆದಿರುವಂತಹ ಕವಿಗಳನ್ನು ಸಹ ಕಾಣಬಹುದು. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಸೋಂಪುರದವರದಾ ಶಿಕ್ಷಕರು, ಕವಿಗಳು, ವಚನಕಾರರು, ಮಕ್ಕಳ ಸಾಹಿತಿಯು ಆಗಿರುವ ಶ್ರೀ ವೀರೇಶ ಬ ಕುರಿ ಸೋಂಪುರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಚಾರ ಮಂಟಪ ಸಾಹಿತ್ಯ ಬಳಗದ ಕವನ ಸಂಕಲನಕ್ಕೆ ಕವನಗಳ ಅಹ್ವಾನ

ವಿಚಾರ ಮಂಟಪ ಸಾಹಿತ್ಯ ಬಳಗವು ಯುವ ಕವಿಗಳ ಕವಿತೆಗಳನ್ನು ಸಂಕಲಿಸಿ ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಆಸಕ್ತರು ಸಮಕಾಲೀನ ಸಮಸ್ಯೆಗಳ, ಸಾಮಾಜಿಕ ಪಿಡುಗುಗಳ ಕುರಿತಾಗಿ ಜಾಗೃತಿ ಮೂಡಿಸುವ ಆಶಯವುಳ್ಳ, 20-25 ಸಾಲುಗಳಿಗೆ ಮೀರದ ಎರಡು ಸ್ವರಚಿತ ಕವನಗಳನ್ನು ದಿನಾಂಕ: 30.01.2023 ರ ಒಳಗಾಗಿ 8217744886 ಈ ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಲು ಕೋರಿದೆ. ಆಯ್ಕೆಯಾದ ಮೂರು ಅತ್ಯುತ್ತಮ ಕವನಗಳಿಗೆ ಮತ್ತು ಒಂದು ಉತ್ತಮ ಶೀರ್ಷಿಕೆಗೆ ಪ್ರಮಾಣಪತ್ರ ಹಾಗೂ ಪುಸ್ತಕ ಬಹುಮಾನವಿರುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:ಧನುಷ್ ಎಚ್ ಶೇಖರ್ – … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಮಾಜಮುಖಿ ವಾರ್ಷಿಕ ಕಥಾಸ್ಪರ್ಧೆಗೆ ಆಹ್ವಾನ

ಸಮಾಜಮುಖಿ ಪ್ರಕಾಶನ ಕನ್ನಡದ ಕಥಾಪರಂಪರೆಗೆ ಅರ್ಥಪೂರ್ಣ ಪ್ರಚೋದನೆ ನೀಡುವ ಉದ್ದೇಶದಿಂದ ‘ಸಮಾಜಮುಖಿ ವಾರ್ಷಿಕ ಕಥಾಸ್ಪರ್ಧೆ-2023’ ಏರ್ಪಡಿಸಿದೆ. ಸಮಾಜಮುಖಿ ಪುರಸ್ಕಾರಕ್ಕೆ ಆಯ್ಕೆಯಾಗುವ ಐದು ಕಥೆಗಾರರಿಗೆ ತಲಾ ರೂ.5000 ನಗದು ನೀಡಿ ಗೌರವಿಸಲಾಗುವುದು. ಜೊತೆಗೆ ಆಯ್ದ ಹದಿನೈದು ಕಥೆಗಳಿಗೆ ಸಮಾಜಮುಖಿ ವಾರ್ಷಿಕ ಕಥಾ ಸಂಕಲನದಲ್ಲಿ ಅವಕಾಶ ಸಿಗಲಿದೆ. ಕಥೆಗಾರರು 2000 ಪದಮಿತಿಯ, ಯಾವ ಮಾಧ್ಯಮದಲ್ಲೂ ಪ್ರಕಟವಾಗದ, ನುಡಿ/ಯುನಿಕೋಡ್ ಲಿಪಿಯಲ್ಲಿರುವ ಕಥೆಯನ್ನು ವರ್ಡ್ ಕಡತದಲ್ಲಿ 15 ಜನೆವರಿ 2023ರೊಳಗೆ ಕಳುಹಿಸಬೇಕಾದ ಇಮೇಲ್ ವಿಳಾಸ: samajamukhi2017@gmail.com ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶತಾವಧಾನಿ ಗಣೇಶರ ’ಮಣ್ಣಿನ ಕನಸು’ – ಆಧುನಿಕೋತ್ತರ ಕಾಲಘಟ್ಟದಲ್ಲಿ ತೆರೆದುಕೊಳ್ಳುವ ಪ್ರಾಚೀನ ಭಾರತದ ಕಥೆ: ರಾಘವೇಂದ್ರ ಅಡಿಗ ಎಚ್ಚೆನ್

‘ಮಣ್ಣಿನ ಕನಸು’ ಇದು ಒಂದು ಕಾದಂಬರಿ ಎಂದು ಹೇಳುವುದಕ್ಕಿಂತ 2022ರಲ್ಲಿ ಪ್ರಕಟವಾದ ಆಧುನಿಕೋತ್ತರ ಭಾರತೀಯ ಮಹಾಗದ್ಯ ಎಂದು ಹೇಳಲು ಅಡ್ಡಿ ಇಲ್ಲ. ಶತಾವಧಾನಿ ಗಣೇಶ್ ಅವರ ಸಾಕಷ್ಟು ಉಪನ್ಯಾಸಗಳನ್ನು ಕೇಳಿದ್ದ ನಾನು ಅವರ ಕಾದಂಬರಿಯನ್ನು ಓದಲೇಬೇಕೆನ್ನುವ ಆಸೆಯಿಂದ ಬೆಲೆ ದುಬಾರಿ ಎಂದೆನಿಸಿದರೂ ಖರೀದಿಸಿ ಓದಿದೆ. ಒಟ್ಟೂ 634 ಪುಟಗಳ ಗಾತ್ರ, 14 ಅಧ್ಯಾಯಗಳಿರುವ ’ಮಣ್ಣಿನ ಕನಸು’ ನಮ್ಮನ್ನು ಎರಡೂವರೆ ಸಾವಿರ ವರ್ಷಗಳ ಹಿಂದಿನ ಭಾರತದಲ್ಲಿ ಪಯಣಿಸುವಂತೆ ಮಾಡುತ್ತದೆ. ಅದರಲ್ಲಿಯೂ ನೀವು ಸಂಸ್ಕೃತ ನಾಟಕಗಳನ್ನು ಓದಿರುವಿರಾದರೆ ಖಂಡಿತವಾಗಿ ಇದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಷ್ಟು ಪ್ರೀತಿ ಇಷ್ಟು ಪ್ರೀತಿ ಎಣಿಸಿ ಕಷ್ಟಬಡದಿರು: ಮನು ಗುರುಸ್ವಾಮಿ

ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇನೀಡುವೆನು ರಸಿಕ ನಿನಗೆಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆಆ ಸವಿಯ ಹಣಿಸು ನನಗೆ ಬೇಂದ್ರೆ… ಧಾರವಾಡ ಅಜ್ಜ, ಶಬ್ದಗಾರುಡಿಗ, ಬದುಕಿನ ಅನನ್ಯತೆಯನ್ನು ಪದ್ಯಗಳಲ್ಲಿ ಹಿಡಿದಿಟ್ಟ ಮಾಂತ್ರಿಕ. ಬಡತನದ ಬೇಗೆಯಲ್ಲೂ ದಾಂಪತ್ಯವೆಂಬುದು ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟ ಕವಿ. ಕೆ ಎಸ್ ನರಸಿಂಹಸ್ವಾಮಿ ಒಂದುಕಡೆ “ಪ್ರೇಮವೆನಲು ಹಾಸ್ಯವೆ ?” ಎಂದ ಪ್ರಶ್ನಿಸುತ್ತಾರೆ. ಆಗಿದ್ದರೆ ? ಒಲವೆಂಬುದೇನು ? ಅದು ಹುಡುಗಾಟವಲ್ಲ. “ಒಲವೆಂಬುದು ಹೊತ್ತಿಗೆ” ಎನ್ನುವುದೇ ಬೇಂದ್ರೆಯವರ ನಿಲುವು. ಪ್ರೀತಿ ಮತ್ತು ದಾಂಪತ್ಯವನ್ನು ಒಂದುಗೊಳಿಸಿ ಕಾವ್ಯವನ್ನು ಕಟ್ಟಿಕೊಡುವ ಬೇಂದ್ರೆ, ತಮ್ಮ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಳೆದುಕೊಂಡಾಗಲೇ ಪಡೆದುಕೊಳ್ಳುವುದು !: ಡಾ. ಹೆಚ್ ಎನ್ ಮಂಜುರಾಜ್,

ಸಾಧನೆ ಎಂದರೆ ಗಳಿಸಿಕೊಳ್ಳುವುದಲ್ಲ; ಕಳೆದುಕೊಳ್ಳುವುದು ಎಂದರು ಗುರುಗಳು. ನನಗೆ ಅಚ್ಚರಿಯಾಯಿತು. ಲೌಕಿಕಾರ್ಥದಲ್ಲಿ ಇದನ್ನು ಹೇಳುತ್ತಿಲ್ಲ ಎಂದೂ ಮನದಟ್ಟಾಯಿತು! ಮಗುವೊಂದು ಹುಟ್ಟುತ್ತಲೇ ವಿಶ್ವಮಾನವ. ಬೆಳೆಯುತ್ತ ಅಲ್ಪಮಾನವ ಆಗುತ್ತದೆ; ಮತ್ತೆ ಏನೆಲ್ಲ ಸಂಕೋಲೆಗಳನ್ನು ಕಳಚಿಕೊಂಡು ವಿಶ್ವಮಾನವರಾಗಬೇಕು ಎಂದು ಕುವೆಂಪು ಅವರು ಹೇಳುತ್ತಿದ್ದುದು ಈ ಅರ್ಥದಲ್ಲೇ ಎಂದುಕೊಂಡೆ!! ಆಗವರು ಹೇಳಿದರು. ಸರಿಯಾಗಿ ಗುರುತಿಸಿದೆ. ಹಾಗೆ ನೋಡಿದರೆ ಇರುವುದು ಒಂದೇ ಲೋಕ. ಲೌಕಿಕ, ಅಲೌಕಿಕ, ಪಾರಲೌಕಿಕ ಅಂತೆಲ್ಲ ಇರುವುದಿಲ್ಲ. ಇದು ನಮ್ಮ ಮಾನಸಿಕ ಭ್ರಮೆ. ಹೇಗೆ ನೋಡುವುದೆಲ್ಲ ಮತ್ತು ಕೇಳುವುದೆಲ್ಲ ಸತ್ಯವಲ್ಲವೋ ಹಾಗೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ: ಆದಿತ್ಯಾ ಮೈಸೂರು, ವಿನಯಚಂದ್ರ, ಪ್ರಶಾಂತ್ ಬೆಳತೂರು

ನಮ್ಮ ಮಹಾ ನಗರದ ಬದುಕು ಇಂದುಒತ್ತಡದ ಜೀವನಯಾಂತ್ರಿಕತೆಯ ಬದುಕುಅಪ್ಪ ಅಮ್ಮನ ಇನಿದನಿಸಂಬಂಧ ಪ್ರೀತಿಯ ಛಾಯೆಒಂದ್ಹೊತ್ತಿನ ನೆಮ್ಮದಿಎಲ್ಲವು ಕಾಣದಾಗಿವೆ ಜನಜಂಗುಳಿಯ ಮುಂದೆಬಿಡುವಿಲ್ಲದ ಕೆಲಸಸಮಯ ಅರಿವಿದ್ದರುಬಿಡದ ಧಣಿ , ತಲೆ ಬಿಸಿಅವ ಇನ್ನೆಲ್ಲಿ ಕಾಣಲು ಸಾಧ್ಯ ಯಾರಾದೋ ಕೀಲಿಕೈಗೆಗಿರಗಿರಗುಟ್ಟುತ್ತಯಂತ್ರವಾಗಿ, ಚಕ್ರದಂತೆತಿರುಗಬೇಕಿದೆ ಎದ್ದಕೂಡಲೆ ಅವಸರದಲೆಇಸ್ತ್ರೀ ಕಾಣದ ಬಟ್ಟೆಪಾಲಿಶ್ ಇಲ್ಲದ ಬೂಟು ತೊಟ್ಟುಸ್ಕೂಟರೋ, ಬಸ್ಸೋ, ಟ್ಯಾಕ್ಸಿಯೋ ಹಿಡಿದು ನಡೆಅಲ್ಲಿ ಬಟ್ಟೆಗುಂಡಿ ಹಾಕಿದಿಯೊ ತಿಳಿಯದುಆದರೆ ಬಯೋಮೆಟ್ರಿಕ್ ಗುಂಡಿ ಹಾಕಬೇಕಿದೆಇಲ್ಲವಾದರೆ ಮೇಲವರ ಕಾಟಹೊಟ್ಟೆಗೆ ಅನ್ನ, ನೀರುಹೊತ್ತಿಗೆ ನಿದ್ರೆ, ಸೇರದು, ಬಾರದುಓಡು ಓಡು ಹಗಲು ಇರುಳೆನ್ನದೆನಿನ್ನಲ್ಲಿ ಶಕ್ತಿಯಿರೋತನಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದೇವರ ಹುಂಡಿಯೂ ಮತ್ತು ರಾಚಪ್ಪನೂ…: ಶ್ರೀ ಕೊಯ.

ಈ ಬಾರಿಯ ಜಾತ್ರೆಯಲ್ಲಿ ಆ ದೇವರ ಹುಂಡಿಗೆ ಹೇರಳವಾಗಿ ಧನ, ಕನಕಗಳು ಬಂದು ಹುಂಡಿ ತುಂಬಿತ್ತು. ಇದು ದೇವಿಯ ಸನ್ನಿಧಾನಕ್ಕೆ ವರುಷದ ಕಾಣಿಕೆಯಾಗಿ ಬರುವ ಹುಂಡಿ ಆದಾಯ. ಇದಲ್ಲದೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹರಿದು ಬರುವ ಹಣ ಹೇರಳವಾಗಿ ಶೇಖರಣೆ ಆಗುತ್ತದೆ. ಇಲ್ಲಿಯ ಜನ, ದೇವರ ಕೈಂಕರ್ಯ ಕೈಗೊಂಡು ಪುಣ್ಯ ಪಡೆಯಲು ದೇವರ ಕಾಣಿಕೆಯನ್ನು ಎಣಿಸುವ ಮತ್ತು ವಿಂಗಡಿಸುವ ಕಾರ್ಯವನ್ನು ಮಾಡಲು ಕಾತರಿಸುತ್ತಾರೆ. ಆಡಳಿತ ಮಂಡಳಿ ಕಳೆದ ಬಾರಿ ಹುಂಡಿಯ ಎಲ್ಲಾ ಹಣವನ್ನು ಎಣಿಕೆ ಮಾಡಿ, ಒಟ್ಟು ಒಂದೂವರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸತ್ಮೇಲೆ ಏನೈತಣ್ಣ ? ದೊಡ್ ಸೊನ್ನೆನೆ ! : ಮನು ಗುರುಸ್ವಾಮಿ

“ಯೆಂಡ, ಯೆಡ್ತಿ, ಕನ್ನಡ ಪದಗೊಳ್” ಎಂದ ತಕ್ಷಣ ನಮಗೆ ನೆನಪಾಗುವುದೇ ಕನ್ನಡದ ಪ್ರಸಿದ್ಧ ಬರಹಗಾರರಾದ ಜಿ ಪಿ ರಾಜರತ್ನಂರವರು. ಯೆಂಡ, ಹೆಂಡತಿ, ಕನ್ನಡದ ಬಗ್ಗೆ ಅಪಾರ ಒಲವಿದ್ದ ಕವಿ ತಮ್ಮ ಕವಿತೆಗಳಲ್ಲಿ ತಿಳಿಹಾಸ್ಯದ ಮೂಲಕ ಬದುಕನ್ನು, ಬದುಕುವ ರೀತಿಯನ್ನು ಬಹಳ ವಿಸ್ತಾರವಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಭಾಷೆಯ ಸೊಗಡಿನಿಂದ ಕೂಡಿದ ಪದಪುಂಜಗಳು, ಪ್ರಾಸಗಳ ಸರಳ ಹೊಂದಿಕೆ, ವಾಸ್ತವಕ್ಕೆ ಹತ್ತಿರವಾದ ವಿಚಾರಗಳು ಈ ಎಲ್ಲವೂ ಒಟ್ಟಿಗೆ ಸೇರಿ ಕವಿತೆಗಳನ್ನು ಒಮ್ಮೆ ಓದಿದ ಸಹೃದಯನನ್ನು ಮತ್ತೆ ಮತ್ತೆ ತಮ್ಮತ್ತ ಆಕರ್ಷಿಸುತ್ತವೆ. ಈಗಾಗಲೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಡಲ ಕಿನಾರೆಯಲಿ ನಿಂತು ನೀಲಾಕಾಶವ ಕಂಡಾಗ !: ಡಾ. ಹೆಚ್ ಎನ್ ಮಂಜುರಾಜ್

‘ಕಷ್ಟಕಾಲದಲಿ ಯಾರು ನಮ್ಮ ಜೊತೆ ಬಂದಾರು? ಕತ್ತಲಲಿ ನೆರಳು ಕೂಡ ನಮ್ಮನ್ನು ಬಿಟ್ಟು ಹೋಗುತ್ತದೆ!’ ಎಂಬ ಮಾತು ಸತ್ಯ. ಆದರೆ ಹಲವೊಮ್ಮೆ ನೆರಳು ಕೈ ಬಿಟ್ಟರೂ ಯಾರದೋ ಬೆರಳು ನಮ್ಮನ್ನು ಕಾಪಾಡುವಂಥ ಪವಾಡ ಈ ಜಗತ್ತಿನಲ್ಲಿ ಸದ್ದಿಲ್ಲದೆ ನಡೆಯುತ್ತಲೇ ಇರುತ್ತದೆ. ನಮ್ಮ ಜೀವಿತಾವಧಿಯಲ್ಲಿ ಇಂಥ ಅದೆಷ್ಟೋ ಅಪರಿಚಿತರು ಆಪದ್ಬಾಂಧವರಾಗಿ ಬಂದು ನಮ್ಮನ್ನು ನಿರಾಳಗೊಳಿಸಿರುತ್ತಾರೆ. ಆಪದ್ಬಾಂಧವ ಎಂದರೆ ಆಪತ್ತಿಗೆ ಆದವರೇ ನೆಂಟರು ಎಂದು. ಆಪತ್ತು ಎಂದರೆ ದಿಢೀರನೆ ಎದುರಾಗುವ ಕಷ್ಟಕಾಲ. ಇದು ಯಾರಿಗೆ ಬರುವುದಿಲ್ಲ? ಸಾಕ್ಷಾತ್ ಪ್ರಭು ಶ್ರೀರಾಮಚಂದ್ರನಿಗೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಸನ್ಮಾರ್ಗ ತೋರುವ “ಸತ್ ಪಾತ” ಕವಿತೆಗಳು”: ಅನುಸೂಯ ಯತೀಶ್

“ಸತ್ ಪಾತ” ಎಸ್. ಬಿ. ಮಾಳಗೊಂಡ ವಿರಚಿತ ಕವನ ಸಂಕಲನವಾಗಿದ್ದು 66 ಕವಿತೆಗಳನ್ನು ಒಳಗೊಂಡ ಬೃಹತ್ ಹೊತ್ತಿಗೆಯಾಗಿದೆ. ನಾಡಿನ ಖ್ಯಾತ ಲೇಖಕರಾದ “ರಾಗಂ” ಎಂದೆ ಹೆಸರು ವಾಸಿವಾಸಿಯಾದ ರಾಜಶೇಖರ ಮಠಪತಿಯವರ ಬೆನ್ನುಡಿಯ ಕಳಶದೊಂದಿಗೆ ಚೆನ್ನಬಸವಣ್ಣ ಎಸ್.ಎಲ್. IPS. ರವರ ಮುನ್ನುಡಿಯ ಶುಭ ಹಾರೈಕೆ ಜೊತೆಗೂಡಿ 2022 ರಲ್ಲಿ ಕನ್ನಡ ಸಾರಸ್ವತ ಲೋಕವನ್ನು ಪ್ರವೇಶಿಸಿದ ಕೃತಿ ಇದಾಗಿದೆ. ಎಸ್. ಬಿ. ಮಾಳಗೊಂಡರವರು ಪೊಲೀಸ್ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಲಾಟಿ ಹಿಡಿದು ಸಮಾಜಘಾತುಕರ ವಿರುದ್ಧ ಚಾಟಿ ಬೀಸುವ ಹುದ್ದೆಯಲ್ಲಿ ಇರುವವರು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕುವೆಂಪು ಯುವ ಮಂಥನ ಲೇಖನ ಸ್ಪರ್ಧೆಗೆ ಆಹ್ವಾನ

ತುಮಕೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಪೀಠ ಹಾಗೂ ಬುಕ್ ಬ್ರಹ್ಮ ಸಂಸ್ಥೆ ಜಂಟಿಯಾಗಿ “ಕುವೆಂಪು: ಯುವ ಮಂಥನ” ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ. ಕುವೆಂಪು ಅವರ ನಾಡು ನುಡಿ ಚಿಂತನೆ, ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ದೃಷ್ಟಿ, ಅಧ್ಯಾತ್ಮಿಕ ಮನೋಧರ್ಮಗಳನ್ನು ಅರಿಯುವ ಬಗೆಗಳನ್ನು ಈ ಲೇಖನಗಳು ಒಳಗೊಂಡಿರಲಿ. ನಿಯಮಗಳು: ಲೇಖನಗಳು ವಿಮರ್ಶಾತ್ಮಕ ಒಳನೋಟಗಳನ್ನು ಹೊಂದಿರಬೇಕು. 2000 ಪದಗಳನ್ನು ಮೀರದಂತಿರಲಿ. ಲೇಖಕರ ವಯಸ್ಸು 35 ವರ್ಷಗಳನ್ನು ಮೀರದಂತಿರಬೇಕು. ಲೇಖನಗಳು ಎಲ್ಲಿಯೂ ಪ್ರಕಟವಾಗಿರಬಾರದು. ಮೊದಲ ಬಹುಮಾನ 5 ಸಾವಿರ + 3 ಸಾವಿರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಅವ್ವನೊಂದಿಗಿನ ಬದುಕಿನ ಒಡನಾಟವನ್ನು ಆಪ್ತವಾಗಿ ಮನಬಿಚ್ಚಿ ಹೇಳಿರುವ ಬಯೋಗ್ರಫಿ”: ಎಂ.ಜವರಾಜ್

ಈಚೆಗೆ ಒಂದು ಪುಟ್ಟ ಕೃತಿ ‘ನನ್ನವ್ವನ ಬಯೋಗ್ರಫಿ’ ಓದಿದೆ. ಬಯೋಗ್ರಫಿ – ಜೀವನ ಚರಿತ್ರೆ, ಜೀವನ ಚಿತ್ರ, ಲೈಫ್ ಸ್ಟೋರಿ, ದಿನಚರಿ, ಇದೆಲ್ಲಕ್ಕು ಮೀರಿದ ಆಪ್ತವಾದ ಗಾಢವಾದ ಆತ್ಮಕಥನ ಅನ್ನಬಹುದು. ಆತ್ಮಕಥನದ ಲಕ್ಷಣ- ಇರುವುದನ್ನು ಮತ್ತು ಇದ್ದು ಬದುಕಿದ್ದನ್ನು ಪ್ರಾಮಾಣಿಕವಾಗಿ ಹೇಳುವುದು; ನೋಡಿದ್ದನ್ನು ಕೇಳಿಸಿಕೊಂಡಿದ್ದನ್ನು ಯಥಾವತ್ ದಾಖಲಿಸುವುದು; ಅರ್ಥಾತ್ ‘ಇದ್ದದ್ದು ಇದ್ದ ಹಾಗೆ’! ಸಾಹಿತ್ಯ ಪ್ರಾಕಾರಗಳಲ್ಲಿ ಆತ್ಮಕಥನವೂ ಒಂದು. ಆತ್ಮಕಥನಗಳ ರಚನೆ ಅಷ್ಟು ಸುಲಭವಲ್ಲ. ಅಲ್ಲಿ ಮರೆಮಾಚುವುದಕ್ಕೆ ಅವಕಾಶವಿಲ್ಲ. ಹಾಗೇನಾದರು ಮರೆಮಾಚಿದರೆ ಅದು ಆತ್ಮಕಥನವೇ ಅಲ್ಲ. ಗಾಂಧಿಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಥಾ ಸಂಕಲನ ಸ್ಪರ್ಧೆ ಫಲಿತಾಂಶ

ಪಂಜು ದಶಕದ ಸಂಭ್ರಮದ ಪ್ರಯುಕ್ತ ಏರ್ಪಡಿಸಿದ್ದ 2021 ನೇ ಸಾಲಿನ ಪಂಜು ಕಥಾ ಸಂಕಲನ ಪ್ರಶಸ್ತಿಯ ವಿವರ ಈ ಕೆಳಗಿನಂತಿದೆ ಪಂಜು ಕಥಾ ಸಂಕಲನ ಪ್ರಶಸ್ತಿ ಪಡೆದ ಕೃತಿಬಯಲಲಿ ತೇಲುತ ತಾನು: ಅಕ್ಷಯ ಪಂಡಿತ್ ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು೧. ಅಗ್ಗಷ್ಟಿಕೆ: ರಾಜಶ್ರೀ ಟಿ. ರೈ, ಪೆರ್ಲ೨. ಪೂವಿ: ಮಲ್ಲೇಶ್ ಮಾಲಿಂಕಟ್ಟೆ೩. ದಶಕದ ಕತೆಗಳು: ಟಿ ಎಂ ರಮೇಶ೪. ನೀಲಕುರಿಂಜಿ: ದಾದಾಪೀರ್ ಜೈಮನ್೫. ಮಾರ್ಗಿ: ಲಿಂಗರಾಜ ಸೊಟ್ಟಪ್ಪನವರ ಒಟ್ಟು 25 ಕಥೆಗಾರರು ನಾಡಿನ ಮೂಲೆಮೂಲೆಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಉಪ್ಪುಚ್ಚಿ ಮುಳ್ಳು” ವಿಲಕ್ಷಣ, ವಿಕ್ಷಿಪ್ತ, ವಿಚಿತ್ರ ಎನಿಸಿದರೂ ವಿಶಿಷ್ಟ ಕೃತಿ: ಡಾ. ನಟರಾಜು ಎಸ್.‌ ಎಂ.

ಕಳೆದ ವರ್ಷ ಅನಿಸುತ್ತೆ ಸಿರಾ ಸೀಮೆಯ ರಂಗಕರ್ಮಿ ಗೋಮಾರದಹಳ್ಳಿ ಮಂಜುನಾಥ್‌ ರವರು ತಾವು ಇಷ್ಟಪಟ್ಟು ಶುರು ಮಾಡಿರುವ Native nest ಎಂಬ ಯೂ ಟ್ಯೂಬ್‌ ಚಾನೆಲ್‌ ನಲ್ಲಿ ಕವಿತೆಯೊಂದನ್ನು ವಾಚನ ಮಾಡಿದ್ದರು. ಕವಿತೆಯ ಶೀರ್ಷಿಕೆ “ಮೊಲೆ” ಎಂದಾಗಿತ್ತು. ಕವಿಯ ಹೆಸರು ದಯಾ ಗಂಗನಘಟ್ಟ (ದಾಕ್ಷಾಯಿಣಿ). “ಮೊಲೆ” ಅನ್ನುವ ಕವನವನ್ನು ಅದಕ್ಕೂ ಮೊದಲು ಆಶಾ ಜಗದೀಶ್‌ ರವರು ಫೇಸ್‌ ಬುಕ್‌ ನಲ್ಲಿ ಬರೆದಿದ್ದರು. ಎರಡೂ ಕವಿತೆಗಳನ್ನು ನೋಡಿದ್ದ ನನಗೆ ದಯಾ ಗಂಗನಘಟ್ಟ, ಆಶಾ ಜಗದೀಶ್‌ ರವರಿಂದ ಸ್ಫೂರ್ತಿ ಪಡೆದರಾ? … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆಡಿ ಬಾ ನನ ಕಂದ ; ಅಂಗಾಲ ತೊಳೆದೇನು!: ಡಾ. ಹೆಚ್ ಎನ್ ಮಂಜುರಾಜ್,

ಮಕ್ಕಳನ್ನು ಕುರಿತು ನಮ್ಮ ಜನಪದರು ಇನ್ನಿಲ್ಲದಂತೆ ಹಾಡಿ ಹರಸಿದ್ದಾರೆ. ಜನವಾಣಿ ಬೇರು; ಕವಿವಾಣಿ ಹೂವು ಎಂದು ಆಚಾರ್ಯ ಬಿಎಂಶ್ರೀಯವರು ಹೇಳಿದಂತೆ, ಜನಪದ ಹಾಡು, ಗೀತ ಮೊದಲಾದ ಸಾಹಿತ್ಯದ ಸೃಷ್ಟಿಕರ್ತರು ಬಹುತೇಕ ಹೆಣ್ಣುಮಕ್ಕಳೇ. ಅದರಲ್ಲೂ ತವರು, ದಾಂಪತ್ಯ, ಬಡತನ, ದೇವರು, ಸೋದರರು, ಗಂಡ, ಗಂಡನಮನೆ ಹೀಗೆ ಜನಪದ ತ್ರಿಪದಿಗಳನ್ನು ಗಮನಿಸಿದರೆ ಸಾಕು, ನಮಗೆ ಅರ್ಥವಾಗುತ್ತದೆ. ಏಕೆಂದರೆ ಭಾರತೀಯ ಕುಟುಂಬ ವ್ಯವಸ್ಥೆ ಹಾಗಿತ್ತು. ಈಗಿನದೆಲ್ಲ ಮೈಕ್ರೋ ಫ್ಯಾಮಿಲಿ ಯುಗ. ಕೂಡು ಕುಟುಂಬ ಮತ್ತು ಹಿರಿಯರ ಯಾಜಮಾನ್ಯಗಳು ನಮ್ಮ ಕೌಟುಂಬಿಕ ಪದ್ಧತಿಯನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಂದು ಪರ್ಸಿನ ಕತೆ…: ಅಮರದೀಪ್

ಆಗಾಗ ನಾವು ಗಂಡಸರು  ಎದೆ ಮೇಲಿನ ಜೇಬು ಮುಟ್ಟಿ ನೋಡಿಕೊಳ್ಳುತ್ತೇವೆ. ಖಾತರಿಯಾದರೆ ಸಮಾಧಾನ; ಮೊಬೈಲ್ ಇದೆ ಅಂತ. ಪ್ಯಾಂಟಿನ ಹಿಂಬದಿಯ ಜೇಬು ಮುಟ್ಟುತ್ತೇವೆ.ಪರ್ಸ್ ಇದೆಯಾ?! ಇಲ್ಲವಾ?!! ಅಂತ.  ಎದೆ  ಜೇಬಿನಲ್ಲಿ ಮೊಬೈಲ್ ಬಿಟ್ಟು ಚೀಟಿ ಚಪಾಟಿ,  ವಿಸಿಟಿಂಗ್ ಕಾರ್ಡ್, ಪೆಟ್ರೋಲ್ ಹಾಕಿಸಿದ ಬಿಲ್ಲು, ಎಟಿಎಂ ನಲ್ಲಿ ದುಡ್ಡು ಡ್ರಾ ಮಾಡಿದ ಪ್ರಿಂಟೆಡ್ ರಸೀತಿ, ಮೆಡಿಕಲ್ ಶಾಪಿಗೆ ಹೋಗಲೆಂದು ಇಟ್ಟುಕೊಂಡ ಡಾಕ್ಟರ್ ಬರೆದುಕೊಟ್ಟ ಗುಳಿಗೆ ಚೀಟಿ.. ಹಾಳು ಮೂಳು ಎಲ್ಲವನ್ನು ತುರಿಕೊಂಡಿರುತ್ತೇವೆ…  ದುಡ್ಡೊಂದನ್ನು ಬಿಟ್ಟು. ಪರ್ಸಿನ ಕತೆಯೂ ಹಾಗೇ… … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗ್ರಹಣ: ಡಾ. ವೃಂದಾ ಸಂಗಮ್

ಗ್ರಹಣ ಎಂದರೇನು? ಅಂತ ಐದನೇ ಕ್ಲಾಸಿನೊಳಗ ವಿಜ್ಞಾನದ ವಿಷಯದೊಳಗ ಒಂದು ಪ್ರಶ್ನೆ ಇತ್ತು. ಒಂದು ಆಕಾಶಕಾಯ ಇನ್ನೊಂದು ಆಕಾಶ ಕಾಯದ ನೆರಳಿನಿಂದ ಆಂಶಿಕವಾಗಿ ಇಲ್ಲವೇ ಪೂರ್ಣವಾಗಿ ಅಸ್ಫುಟವಾಗುವಿಕೆಯನ್ನು ಗ್ರಹಣ ಎನ್ನುವರು ಅಂತ ಬಾಯಿಪಾಠಾನೂ ಮಾಡಿಸಿದ್ದಳು, ನಮ್ಮವ್ವ. ಹಿಂದ ನಾವು ಬಾಯಿಪಾಠ ಕಲಿತಿದ್ದು ಈಗಲೂ ನೆನಪಿರತದ, ಮೂರು ವರುಷದ ುದ್ಧಿ ನೂರು ವರುಷದ ತನಕಾಂತ. ಆದರ, ಈಗ ಗ್ರಹಣ ಎಂದರೇನು? ಪ್ರಶ್ನೆ ಮುಂದ ನಿಮ್ಮ ಮಾತಿನಲ್ಲಿ ಬರೆಯಿರಿ ಅಂತ ಇತ್ತು, ನಾನೂ ಹಿಂದ ಮುಂದ ನೋಡಲಿಲ್ಲ, ನಮ್ಮವ್ವ ಬಾಯಿಪಾಠ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕುಗ್ಗಿದಾಗಲೆಲ್ಲಾ ಕಗ್ಗ ಓದಬೇಕು !: ಮನು ಗುರುಸ್ವಾಮಿ

ಹೌದು.. ಮನುಷ್ಯ ಕುಗ್ಗಿದಾಗಲೆಲ್ಲಾ ಮಂಕುತಿಮ್ಮನ ಕಗ್ಗ ಓದಬೇಕು. ಬಹುತೇಕ ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ, ಇರುವಷ್ಟು ಕಾಲ ಸೂರ್ಯನಂತೆ ಬೆಳಗಿ ಮರೆಯಾಗಬೇಕೆಂಬ ಸಂದೇಶವನ್ನು ಸಾರುವಲ್ಲಿ, ಬದುಕಿನ ಅಪರಿಮಿತ ಹೋರಾಟ, ಅನಿರೀಕ್ಷಿತ ಸವಾಲುಗಳನ್ನು ಹೇಗೆ ಎದುರುಗೊಳ್ಳಬೇಕೆಂಬ ವಿಚಾರವನ್ನು ಮನದಟ್ಟು ಮಾಡುವಲ್ಲಿ ಈ ಕೃತಿ ಮಹತ್ವದ ಪಾತ್ರವಹಿಸಿದೆ. ನಾನು, ನನ್ನದೆಂಬ ಭ್ರಮೆಯಲ್ಲಿ ಜೀವನವಿಡೀ ನಡೆದು, ಕೊನೆಗೆ ಎಲ್ಲವನ್ನು ಬಿಟ್ಟು ಮಣ್ಣು ಸೇರುವ ಮನುಷ್ಯನ ನಶ್ವರ ಬದುಕಿನ ಬಗ್ಗೆ ಇಲ್ಲಿನ ಚೌಪದಿಗಳು ಎಳೆ ಎಳೆಯಾಗಿ ತಿಳಿಸಿಕೊಡುತ್ತವೆ. ನಾಲ್ಕು ಸಾಲಿನ ಸಣ್ಣ ಸಣ್ಣ ಪದ್ಯಗಳಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆತ್ಮಾನುಬಂಧದ ಸಖಿಯೊಡನೆ ಒಂದು ಸಹೃದಯ ಸಂವಾದ: ವರುಣ್ ರಾಜ್ ಜಿ.

ಕವಿ ಶ್ರೀ ರಾಘವೇಂದ್ರ ಡಿ. ತಳವಾರರ “ಆತ್ಮಾನುಬಂಧದ ಸಖಿ” ಕೃತಿಯ ಕುರಿತು ಇತ್ತೀಚೆಗೆ ತನುಶ್ರೀ ಪ್ರಕಾಶನದಿಂದ ಪ್ರಕಟಣೆಯಾಗಿದ್ದು ಅತ್ಯಲ್ಪ ಕಾಲದಲ್ಲಿಯೇ ಹಲವು ಸಹೃದಯರ ಮನಸ್ಸನ್ನು ಗೆದ್ದಿದೆ. ಈ ಕೃತಿಯು ರೂಪ – ಸ್ವರೂಪ ಮತ್ತು ವಿಷಯ ವ್ಯಾಪ್ತಿಯ ದೃಷ್ಠಿಯಿಂದ ಒಂದು ವಿಶಿಷ್ಟವಾದ ಕೃತಿ ಎನಿಸಿದ್ದು, ಓದುಗರನ್ನು ಎಲ್ಲಿಯೂ ನಿರಾಸೆಗೊಳಿಸದ ಗುಣ ಈ ಕೃತಿಯಲ್ಲಿದೆ. “ಆತ್ಮಾನುಬಂಧದ ಸಖಿ” ಕೃತಿಯ ಕವನದ ಸಾಲುಗಳು ಪದ್ಯದಂತೆ ಓದುವವರಿಂದ ಪದ್ಯವಾಗಿಯೂ, ಗದ್ಯದಂತೆ ಓದುವವರಿಂದ ಗದ್ಯವಾಗಿಯೂ ಓದಿಸಿಕೊಳ್ಳುತ್ತವೆ. ಪದ್ಯದಂತೆ ಹಾಡಿದರೂ ಗದ್ಯದಂತೆ ಓದಿದರೂ ಅರ್ಥ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯವ್ವಾ ಯವ್ವಾ “ಭೂಮಿಯ ಋಣ” ಚಂದ ಕಣವ್ವಾ: -ಡಾ. ನಟರಾಜು ಎಸ್.‌ ಎಂ.

ಒಂದು ಪೇಜಿನ ಕತೆ, ಕವಿತೆ ಕಟ್ಟುವುದು ಸುಲಭ. ಹತ್ತಾರು ಪುಟಗಳ ಕಥೆ, ನೂರಾರು ಪುಟಗಳ ಕಾದಂಬರಿ ಬರೆಯುವುದು ಕಷ್ಟ. ಆ ಕಷ್ಟಕ್ಕೆ ಯುವ ಲೇಖಕರು ತೆರೆದುಕೊಂಡಂತೆ ಯುವ ಲೇಖಕಿಯರು ತೆರೆದುಕೊಂಡಿದ್ದು ಬಹಳ ವಿರಳ. ಆ ಕಾರಣಕ್ಕೆ ಯುವ ಲೇಖಕಿಯರ ಕವಿತೆಗಳು ನಮಗೆ ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷಾಂಕಗಳಲ್ಲಿ ಹೆಚ್ಚಾಗಿ ಓದಲು ಸಿಗುತ್ತವೆ. ಲೇಖಕಿಯರು ಕಥಾಲೋಕಕ್ಕೆ ತೆರೆದುಕೊಳ್ಳಲು ಒಂದಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎನಿಸುತ್ತದೆ. ಬದುಕಿನ ಅನುಭವಗಳನ್ನು ತುಂಬಾ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಕೆಲಸ ಅಷ್ಟು ಸುಲಭವಲ್ಲ. ಆ ಸುಲಭವಲ್ಲದ ಕೆಲಸವನ್ನು ಒಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಂಡಾಯ ಕಾವ್ಯ: ಗೋಲ್ಡನ್ ಅಶು, ಜಬೀವುಲ್ಲಾ ಎಂ. ಅಸದ್, ಪ್ರಶಾಂತ್ ಬೆಳತೂರು

ಗಾಂಧಿ ಮತ್ತು ಅವನ ಖಾಯಿಲೆ ಬಿದ್ದ ಸ್ವಾತಂತ್ರ್ಯ ಭವಿಷ್ಯವಿರದ ಸಾಲಿಯ ಗೋಡೆಗಳುಬದುಕು ಕಟ್ಟುವ ಕನಸು ಕಾಣುತ್ತವೆಹೆಗಲಿಗೆ ಐಡಿ ಕಾರ್ಡಿಲ್ಲದ – ಕೆಂಪು ಶಾಲಿನ ಪೋರಶಾಲೆಗೊರಟ ಒಂಟಿ ಸಾಬರ ಮನೆಯ ಹುಡುಗಿಗೆರಾಮ ನಾಮ ಹೇಳುತ್ತಿದ್ದಆ ಗಟ್ಟಿಗಿತ್ತಿಯೂ ಸುಮ್ಮನಿರಲಿಲ್ಲಬೀದಿ ಮಧ್ಯೆಯೇ ಆಜಾನ್ ಕೂಗಿದಳು ಆಗ –ಕಪ್ಪು ಕೋಮುವಿನ ಹಲಗೆಯ ಮೇಲೆಕಲಿಸುವವ ಸಂವಿಧಾನದ ಕೊಲೆಮಾಡುತ್ತಿದ್ದ ! ಸತ್ಯಕ್ಕೆ ಗಲ್ಲಾದ ಈ ಹೊತ್ತುಹಸಿಮೈಯ್ಯ ಅತ್ಯಾಚಾರಿ ಬಾಲೆಯೊಬ್ಬಳ ಮನೆಯಮುಂದೆ –ಸ್ವತಂತ್ರ್ಯದ ಸಂಭ್ರಮ ಮನೆ ಮಾಡಿತ್ತು ! ಹೌದುನವ ಭಾರತಕ್ಕೆ ಎಪ್ಪತ್ತೈದರಸಂಭ್ರಮ , ಅತ್ಯಾಚಾರಿಗೆ – … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪರಿಮಳದ ಪಯಣದಲಿ ಜೀವ ಜೀವನ ಧನ್ಯ: ಡಾ. ಹೆಚ್ ಎನ್ ಮಂಜುರಾಜ್

ಪುಸ್ತಕದ ಹೆಸರು : ಪರಿಮಳಗಳ ಮಾಯೆಲಲಿತ ಪ್ರಬಂಧ ಸಂಕಲನಲೇಖಕಿ : ಶ್ರೀಮತಿ ಆರ್ ಸಮತಾಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಶಿವಮೊಗ್ಗಮೊದಲ ಮುದ್ರಣ : 2022, ಬೆಲೆ: ರೂ. 140 ಶ್ರೀಮತಿ ಸಮತಾ ಅವರ ಈ ಲಲಿತ ಪ್ರಬಂಧಗಳ ಪುಸ್ತಕವು ಓದಲು ಸಿಕ್ಕಿದ್ದು ನನಗೆ ಆಕಸ್ಮಿಕವಾಗಿ. ಸಮತಾ ಅವರು ನನ್ನ ತಂಗಿಯ ಸಹಪಾಠಿಯಾಗಿದ್ದವರು. ನಿನ್ನೆ ನನ್ನ ಸೋದರಿ ಲಕ್ಷ್ಮಿ ಉರುಫ್ ಪಮ್ಮಿಯ ಮನೆಗೆ ಹೋದಾಗ ಅದೂ ಇದೂ ಮಾತಾಡುವಾಗ ಲೇಖಕಿಯ ವಿಚಾರ ಬಂತು. ಈಕೆ ನನ್ನ ತಂಗಿಯ ಸ್ನೇಹಿತೆ. ನನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

‘ಕಾಂತಾರ’ದೊಳಗೊಂದು ಸುತ್ತು: ಶ್ರೀಧರ ಪತ್ತಾರ, ವಿಜಯಪುರ.

ಕಾಡು, ಅದರ ಸುತ್ತಲಿನ ಜಗತ್ತು ಮತ್ತು ಭೂತಕೋಲದ ದೈವದೊಂದಿಗೆ ತಳಕು ಹಾಕಿಕೊಂಡಿರುವ ಕಾಂತಾರ ನೋಡುಗರಿಗೆ ತನ್ನೊಳಗಿನ ಭಾವವನ್ನು ಬಹಳ ಬೇಗನೆ ಬಿಟ್ಟುಕೊಡುವುದಿಲ್ಲ. ಕಾಂತಾರದ ಕತ್ತಲೆ ಬೆಳಕು, ರವ-ನಿರವಯತೆಯ ಚುಂಗುಹಿಡಿದು ಹೊರಟರೆ ಖಂಡಿತವಾಗಿಯೂ ಕಥೆಯ ಕಾಡಿನೊಳಕ್ಕೆ ಪಯಣಿಸುತ್ತೇವೆ. ನೋಡುನೋಡುತ್ತಲೇ ಅದರೊಳಗೆ ಕಳೆದುಹೋಗುತ್ತೇವೆ. ತನ್ನ ವಾದ್ಯ, ತಾಳಮೇಳದ ಸದ್ದುಗದ್ದಲದೊಂದಿಗೆ ನಮ್ಮನ್ನು ಆಗಾಗ ಬೆಚ್ಚಿಬೀಳಿಸುತ್ತ, ಮೈನವಿರೇಳಿಸುವ ಕಾಂತಾರವೆಂಬ ದೃಶ್ಯಕಾವ್ಯ ನಮ್ಮಲ್ಲಿ ನಿಜಕ್ಕೂ ಆಶ್ಚರ್ಯ ಅದ್ಭುತವೆನ್ನಬಹುದಾದ ಭಾವವೊಂದನ್ನು ಹುಟ್ಟುಹಾಕುತ್ತದೆ. ವಿಭಿನ್ನ ಮತ್ತು ವಿಶೇಷ ಎಂದೆನಿಸುವ ಕಾಡೆಂಬ ನಿಗೂಢ ಜಗತ್ತನ್ನು ತೆರೆದಿಡುವ ಕತೆ ನೋಡುಗರನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ