ಆರಿದ ದೀಪ: ಎಲ್.ಚಿನ್ನಪ್ಪ, ಬೆಂಗಳೂರು

“ಸ್ಮಿತಾ ಹಸ್ಬೆಂಡ್ ಯಾರು ಎನ್ನುತ್ತ, ಡಾಕ್ಟರ್ ಐಸಿಯು ವಾರ್ಡ್ನಿಂದ ಹೊರಕ್ಕೆ ಬಂರರು. “ನಾನೇ ಡಾಕ್ಟರ್” ಎನ್ನುತ್ತ ಮೋಹನ್, ಸೀನಿಯರ್ ಡಾಕ್ಟರ್ ಸೀತಾರಾಂರವರ ಕಂಚಿನ ಕಂಟದ ಕರೆಗೆ ಅವರ ಹತ್ತಿರಕ್ಕೆ ಹೋದ. ಎದುರಿಗೆ ಬಂದು ನಿಂತ ಮೋಹನ್ನ ಮುಖ ನೋಡಿದ ಡಾಕ್ಟರ್, “ನೋಡಿ ಮಿಸ್ಟರ್ ಮೋಹನ್, ನಾವು ನಮ್ಮ ಶಕ್ತಿಮೀರಿ ಪ್ರಯತ್ನಿಸಿದ್ದೇವೆ, ನಿಮ್ಮ ಪತ್ನಿಗೆ ಕೊಡಬೇಕಾದ ಚಿಕಿತ್ಸೆಯನ್ನೆಲ್ಲಾ ಕೊಟ್ಟಿದ್ದೇವೆ, ಮುಂದಿನದು ದೈವೇಚ್ಚೆ. ನಿಮ್ಮ ಪತ್ನಿ ಈಗ ಆಕ್ಸಿಜನ್ನಿಂದ ಉಸಿರಾಡುತ್ತಿದ್ದಾರೆ. ಆಕೆಯ ನಾಡಿ ಮಿಡಿತ ಕ್ಷಣ ಕ್ಷಣಕ್ಕು ಕ್ಷೀಣಿಸುತ್ತಿದೆ. ಇನ್ನು … Read more

ಅಣ್ಣ-ತಂಗಿ: ಸಿದ್ಧರಾಮ ಹಿಪ್ಪರಗಿ (ಸಿಹಿ), ಧಾರವಾಡ.

ರಂಗಭೂಮಿಯ ವೈಭವದ ದಿನಗಳ ಅಂದಿನ ಕಾಲದ ದೀಮಂತರ ಕುರಿತಾದ ಭಾಷಣ ಕೇಳಿ ಹೊರ ಬಂದ ಸುಮಾ ಮತ್ತು ಸೂರಜ ತೀವ್ರ ಭಾವುಕರಾಗಿದ್ದರು. ತನ್ನಜ್ಜಿಯ ಕಂಪನಿಯ ಕುರಿತು ಸವಿಸ್ತಾರವಾಗಿ ವಿವರಿಸಿದ್ದ ಅಧ್ಯಯನಶೀಲ ಅನಾಮಿಕ ಭಾಷಣಕಾರರ ಮಾತುಗಳಿಂದ ಉಬ್ಬಿಹೋಗಿದ್ದ ಸುಮಾಳಿಗೆ ಏನೋ ಹೇಳಿಕೊಳ್ಳಬೇಕೆಂಬ ಉಮೇದು. “ಆ ಉಮೇದಿಗೆ ಉತ್ತರವಾಗಿ ಸ್ಪಂಧಿಸುವವನೆಂದರೆ ಕ್ಲಾಸ್‌ಮೇಟ್‌ ಸೂರಜ್‌ ಮಾತ್ರ!” ಎಂದು ಮನದಲ್ಲಿಯೇ ಯೋಚಿಸುತ್ತಾ ಸೂರಜನೆಡೆಗೆ ನೋಡಿದಳು. “ಲೇಟಾದರೆ ಪಿಜಿಯಲ್ಲಿ ಊಟ ಸಿಗೋಲ್ಲಾ, ನಾನು ಬರಲಾ ಸುಮಾ?” ಎಂದು ತನ್ನ ಇಲೆಕ್ಟ್ರಿಕ್‌ ಸ್ಕೂಟಿ ಸ್ಟಾರ್ಟ ಮಾಡಲು … Read more

ಸೆರೆಮನೆರಹಿತ ಕೈದಿ: ಎಲ್.ಚಿನ್ನಪ್ಪ, ಬೆಂಗಳೂರು.

“ನನ್ನ ಮಗ ಎಷ್ಟೇ ಕೆಟ್ಟವನಾಗಿದ್ದರೂ ನಮ್ಮೊಡಲಿನ ರಕ್ತವನ್ನು ಹಂಚಿಕೊಂಡು ಧರೆಗೆ ಬಂದವನಲ್ಲವೆ? ನಮ್ಮ ಕರುಳ ಕುಡಿಯೇ ಅಲ್ಲವೆ? ತನ್ನ ತಾಯಿಯ ತದ್ರೂಪವನ್ನೇ ಹೊತ್ತು ಬಂದಿರುವ ಅವನ ಮುಖದಲ್ಲಿ ನನ್ನ ಪತ್ನಿಯ ಪ್ರತಿಬಿಂಬ ಕಾಣುತ್ತಿದ್ದೇನೆ” ಎಂದಿನಂತೆ ಕಛೇರಿ ಕೆಲಸ ಮುಗಿಸಿಕೊಂಡು ಅಂದು ಸಂಜೆ ಮನೆಗೆ ಮರಳಿದೆ. ಬೀಗ ಹಾಕಿದ್ದ ನನ್ನ ಮನೆಯ ಬಾಗಿಲ ಬಳಿ ಆ ವೃದ್ಧರು ಕಾದು ಕುಳಿತ್ತಿದ್ದರು. ನಾನೊಬ್ಬ ಸರಕಾರಿ ನೌಕರ, ಇಲ್ಲಿಗೆ ಬಡ್ತಿಯ ಮೇಲೆ ವರ್ಗವಾಗಿ ಬಂದು ಆರು ತಿಂಗಳಾಗಿವೆ. ನನ್ನ ಸ್ವಂತ ಸ್ಥಳವು … Read more

ದಪ್ಪಗಿದ್ದರೆ ಏನು ಜೀವ?: ಕೊಡೀಹಳ್ಳಿ ಮುರಳೀಮೋಹನ್

ಭೂಮಾತಾ ನಗರದ ರಸ್ತೆ ಸಂಖ್ಯೆ 10ರಲ್ಲಿರುವ ‘ಸೌಧ ಎಲ್-ಕ್ಯಾಸಲ್’ ಅಪಾರ್ಟ್‌ಮೆಂಟ್‌ನ ಬಿ ಬ್ಲಾಕ್, ಜಿ-1ರಲ್ಲಿ ವಾಸಿಸುವ ಜೀವನ್ ಮತ್ತು ಡಿ ಬ್ಲಾಕ್, ಎಫ್-2ರಲ್ಲಿರುವ ಸುಧೀರ್ ಬಾಲ್ಯದ ಗೆಳೆಯರು. ಚಿಕ್ಕಂದಿನಲ್ಲಿ ಅವರ ಸ್ವಂತ ಊರಿನಲ್ಲಿ ಇಬ್ಬರ ಮನೆಗಳೂ ಪಕ್ಕ ಪಕ್ಕವೇ ಇದ್ದವು. ಜೀವನ್ ಅವರ ತಾತ ಇಬ್ಬರಿಗೂ ಪದ್ಯಗಳು, ಶತಕಗಳನ್ನು ಕಲಿಸುತ್ತಿದ್ದರು. ಕಥೆಗಳನ್ನು ಹೇಳುತ್ತಿದ್ದರು. ಅವರು ಜೀವನನ್ನು ‘ಜೀವ’ ಎಂದೂ, ಸುಧೀರನನ್ನು ‘ಧೀರ’ ಎಂದೂ ಕರೆಯುತ್ತಿದ್ದರು. ಶಾಲೆಯಲ್ಲಿ, ಕಾಲೇಜಿನಲ್ಲಿ ಒಟ್ಟಿಗೆ ಓದಿದರು. ನಂತರ ಇಬ್ಬರಿಗೂ ಒಂದೇ ಊರಿನಲ್ಲಿ ಉದ್ಯೋಗಗಳು … Read more

ಮಗು, ನೀ ನಗು (ಭಾಗ ೨): ಸೂರಿ ಹಾರ್ದಳ್ಳಿ

ಅಲ್ಲಿಯೇ ಇದ್ದ ಮಗಳು, ‘ವಾಟ್? ನೋ, ನೆವರ್. ಇನ್ನೊಂದಾ? ಇದೊಂದಕ್ಕೇ ಸಾಕು ಸಾಕಾಗಿದೆ,’ ಎಂದು ಉತ್ತರಿಸಿದಳು. ಆ ಮಹಿಳೆ ರೇಗಿದಳು, ‘ಏನೇ? ಒಂದೇನಾ? ಹೀಗಾದರೆ ನಮ್ಮ ಧರ್ಮದ ಜನ ಹೆಚ್ಚೋದು ಹೇಗೆ? ಆ ಕಮ್ಯುನಿಟಿಯವರು ನೋಡು, ನಾಲ್ಕು ನಾಲ್ಕು ಮದುವೆಯಾಗಿ, ಹತ್ತೋ, ಹದಿನೈದೋ ಮಕ್ಕಳನ್ನು ಹಡೆದು, ಸರಕಾರದವರು ಕೊಡುವ ಎಲ್ಲಾ ಸೌಲಭ್ಯಗಳನ್ನು ತಪ್ಪದೇ ಪಡೆದುಕೊಂಡು, ತಮ್ಮ ಧರ್ಮದ ಜನರ ಸಂಖ್ಯೆಯನ್ನು ಹೇಗೆ ಬೆಳೆಸುತ್ತಿದ್ದಾರೆ ಅಂತ? ನೀವು ಒಂದೇ ಸಾಕು ಎನ್ನುತ್ತೀರಿ,’ ಎಂದು ಆಪಾದಿಸಿದರು. ಪಕ್ಕದಲ್ಲಿಯೇ ಕುಳಿತಿದ್ದ ಅವರ … Read more

ಪಾರ್ಟ್-ಪಲ್ಯಾ: ಸಿದ್ಧರಾಮ ಹಿಪ್ಪರಗಿ (ಸಿಹಿ)

ಅದ್ಯಾವುದೋ ರಂಗಾಸಕ್ತರ ವೇದಿಕೆಯವರು ರಂಗಭೂಮಿಯ ಕುರಿತು ಉಪನ್ಯಾಸ ನೀಡಲು ಆಹ್ವಾನಿಸಿದ್ದರು. ಹಿರಿಯನೆಂಬ ಕಾಲ್ಪನಿಕ ಗೌರವ ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ನನ್ನ ಸಂಗ್ರಹದ ಪುಸ್ತಕ-ಮಸ್ತಕಗಳ ರಾಶಿಯೊಳಗಿಂದ ರಂಗಭೂಮಿಯ ನೆನಪುಗಳನ್ನು ಹೆಕ್ಕಿಕೊಂಡು ಮಾತಾಡಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ನನ್ನ ಹೆಸರಿಡಿದು ಯಾರೋ ಕೂಗಿದರು. ಇತ್ತೀಚಿನ ದಿನಗಳಲ್ಲಿ ನನ್ನನ್ನು ಯಾರೂ ಹಾಗೇ ಕೂಗಿರಲಿಲ್ಲ. ನಮ್ಮ ಅವ್ವನ ಸಮಕಾಲೀನರು ಹಾಗೆ ಕರೆಯುತ್ತಿದ್ದರು. ತಿರುಗಿ ನೋಡಿದೆ. ಥೇಟ್‌ ಅವ್ವನ ಜಮಾನಾದ ಸೀರೆ-ಕುಪ್ಪಸ ತೊಟ್ಟರೂ ಆಧುನಿಕರಂತೆ ಕಾಣುತ್ತಿದ್ದ ಮಹಿಳೆಯೊಬ್ಬಳು “ಚಲೋತ್ನಾಗ ಮಾತಾಡಿದಿರಿ ಸರ್. ಕಂಪನಿ ನಾಟಕದ ಮಾಲೀಕಳು … Read more

ಮಗು, ನೀ ನಗು (ಭಾಗ ೧): ಸೂರಿ ಹಾರ್ದಳ್ಳಿ

ಪ್ರಿಯ ಗೆಳತಿ,ನನ್ನ ಅರವತ್ತನೆಯ ವಯಸ್ಸಿನಲ್ಲಿ, ಅರೆ, ನಾನು ಇಷ್ಟು ಬೇಗ ಮುದುಕಿ ಎಂಬ ಕೆಟಗರಿಗೆ ಸೇರಿಬಿಟ್ಟೆನೇ?, ನಾನು ಮೊಮ್ಮಗಳೊಂದರ ಅಜ್ಜಿಯಾದೆ. ಮೊದಲು ಯಾವುದಾದರೊಂದು ಮಗು ‘ಅಜ್ಜಿ’ ಎಂದು ಸಂಬೋಧಿಸಿದರೆ ರೇಗುತ್ತಿದ್ದವಳು ಈಗ ಈ ಪುಟ್ಟಿ, ತನ್ನ ತೊದಲು ನುಡಿಯಲ್ಲಿ ಎಂದು ‘ಅಜ್ಜಿ’ ಎಂದು ಕರೆಯುತ್ತದೆಯೋ ಎಂದು ಕಾಯುವಂತಾಗಿದೆ. ತೊಡೆಯ ಮೇಲೆ ಮಲಗಿಸಿಕೊಂಡು, ಅದರ ಕಣ್ಣಲ್ಲೇ ಕಣ್ಣು ನೆಟ್ಟು, ‘ಪುಟ್ಟ, ನಾನು ನಿನ್ನ ಅಜ್ಜಿ, ಅವಳು ನಿನ್ನ ಅಮ್ಮ, ಅವರು ನಿನ್ನ ಅಜ್ಜ, ಮಗೂ, ಅಜ್ಜಿ ಅನ್ನು,’ ಎನ್ನುತ್ತಾ … Read more

ವಿಭಾವರಿ (ಭಾಗ 1): ವರದೇಂದ್ರ ಕೆ ಮಸ್ಕಿ

                                     ಅದೊಂದು ದಿನ ನಿಸ್ತೇಜತೆ ಮೈಯಲ್ಲಿ ಹೊಕ್ಕು, ತನ್ನೆಲ್ಲ ಸಂತೋಷವನ್ನು ಸಮಾಧಿಗೊಳಿಸಿ.. ತಲೆ ಮೇಲೆ ಕೈ ಹೊತ್ತು ಕೂಡುವಂತೆ ಮಾಡಿತ್ತು. ನಡೆದ ಇತಿಹಾಸವೆಲ್ಲ ಕಣ್ಣಿನ ಹನಿಗಳು ಬೇಡವೆಂದರೂ ನೆನಪಿಸುತ್ತಿವೆ… ಅರೆ ಘಳಿಗೆಯೂ ಸುಮ್ಮನಿರದ ಮನಸು ಇಂದೇಕೋ ಸ್ಮಶಾನ ಮೌನಕ್ಕೆ ಬಲಿಯಾಗಿದೆ. ಹೌದು… ಹೌದು….. ಅವನೇಕೆ ಹೀಗೆ ಮಾಡಿದ…!! ಸುಖಾಸುಮ್ಮನೆ ಕೋಪಗೊಳ್ಳದವನು ಇಂದೇಕೆ ಮೃಗದಂತಾದ, ಗೋವಿನಂತಹ ಮನಸ್ಸುಳ್ಳ ನನ್ನ ತೇಜು, ಏಕೆ ಈ ದಿನ ಹೆಬ್ಬುಲಿಯಂತಾಡಿದ. ಸದಾ ಹಸನ್ಮುಖಿ ಲವಲವಿಕೆಯ ಗಣಿ ನೂರು ಮಾತಿಗೆ ಒಂದು ಮಾತನಾಡುವವ ಒಂದು … Read more

ಸಂದಿಗ್ಧತೆ: ಬಂಡು ಕೋಳಿ

ರಾಂ ಪಹರೆ ಬರೊಬ್ಬರಿ ಐದರ ಅಂಕಿಯ ಮೇಲೆ ಹೊಂದಿಸಿಟ್ಟಿದ್ದ ಅಲರ‍್ಮನೇ ರಿಂಗಣಿಸಿತೇನೋ ಅಂತಿಳಿದು ಬಾಪೂ ನಿದ್ದೆಯಿಂದ ಎಚ್ಚರಾಗಿ ಗೊಣಗುತ್ತ ತಲೆದಿಂಬಿನ ಬುಡಕ್ಕೆ ಕೈಯ್ಯಾಡಿಸಿದ; ಮೊಬೈಲ್ ಕೈಗತ್ತಿತು. ಅದರ ಮಗ್ಗುಲಿನ ಗುಂಡಿಯ ಮೇಲೆ ಹೆಬ್ಬೆಟ್ಟೂ ಹಿಚುಕಿದ. ಮೊಬೈಲ್ ಬಾಯಿ ಬಂದಾತು. ಹಾಳಾದ ಕಿಣಿಕಿಣಿ ಸಪ್ಪಳ ಸುಖ ನಿದ್ದೆಯ ಮಜಾನೆಲ್ಲಾ ಕೆಡಿಸಿತು ಎನ್ನುತ್ತ ಮನಸ್ಸಿನಲ್ಲೇ ಬೈದ. ತನ್ನಿಷ್ಟದ ಭಂಗಿಯಾಗಿದ್ದ ನೆಲದ ಹೊಟ್ಟೆಯ ಮೇಲೆ ಹೊಟ್ಟೆಯೂರಿದ್ದ ನಿದ್ರಾಸನ ಬದಲಿಸಿದ. ಎಡ ಕಪಾಳು ಹೊಳ್ಳಿಸಿ ಬಲಕಿನದು ಊರಿದ. ಸೊಂಟದ ಕೆಳಗ ಜಾರಿದ್ದ ದುಬ್ಟಿಯನ್ನು … Read more

ಭಗ್ನ ಪ್ರೇಮಿಗಳು: ಎಲ್.ಚಿನ್ನಪ್ಪ, ಬೆಂಗಳೂರು.

“ಮಾರ್ಗರೆಟ್, ನಾವು ಮೊದಲು ಹೇಗಿದ್ದೆವು ಈಗ ಹೇಗಾಗಿದ್ದೇವೆ ನೋಡು . . . ! ನಾವೀಗ ನಿರ್ಜರ ಆತ್ಮಗಳು. ಭೂಲೋಕದಲ್ಲಿ ಶಾರೀರಿಕ ಆತ್ಮಗಳಾಗಿ ಜೀವಿಸಬೇಕಾದವರು ಇಲ್ಲಿ ಆಕಾರವಿಲ್ಲದ ನಿರ್ವಿಕಾರ ಆತ್ಮಗಳಾಗಿದ್ದೇವೆ. ದಂಪತಿಯರಾಗಿ ಬಾಳಬೇಕಾಗಿದ್ದವರು ಬಾಳಿಗೆ ಮುಕ್ತಾಯ ಹಾಡಿದ್ದೇವೆ. ಪ್ರೀತಿ ಎಂಬ ನೌಕೆಯಲ್ಲಿ ಸಾಗುತ್ತಿದ್ದ ನಾವು ಸಾಗರದಲ್ಲಿ ಮುಳುಗಿ ಈಜಿ ಜೈಸಲಾಗದೆ ಹೋದವರು. ಪ್ರೇಮ ವೈಪಲ್ಯಕ್ಕೆ ತುತ್ತಾಗಿ ‘ಭಗ್ನ ಪ್ರೇಮಿಗಳು’ ಎಂಬ ಹಣೆಪಟ್ಟಿಯನ್ನು ತೊಟ್ಟುಕೊಂಡವರು. ನಾವು ಹುಟ್ಟಿ ಬೆಳೆದ ಜಾತಿ ಧರ್ಮಗಳೇ ನಮಗೆ ಆತ್ಮಹತ್ಯೆಯ ಹಾದಿ ತೋರಿಸಿದವು. ಅದರೊಟ್ಟಿಗೆ … Read more

ರಮಾಬಾಯಿಯ ಸೇಡು: ಕೊಳ್ಳೇಗಾಲ ಶರ್ಮ

ರೋಬಾಟು ಸೇವಕಿ ಮಾಡಿದ ತಪ್ಪುಗಳು ರಮಾಬಾಯಿಯನ್ನು ದೋಷಿಯಾಗಿಸಿವೆ. ರಕ್ಷಣೆ ಹೇಗೆ? ರಮಾಬಾಯಿ ತಲೆ ಕೊಡವಿದಳು. ಅವಳ ಒದ್ದೆ ಕೈಗಳು ಸುತ್ತಲೂ ನೀರನ್ನು ಸಿಂಪಡಿಸಿದುವು. ತೊಳೆದ ಕೈಗಳು ಇನ್ನೂ ಕೆಸರಾಗಿದೆಯೋ ಎನ್ನುವಂತೆ ಮತ್ತೊಮ್ಮೆ ಅವನ್ನು ಕೊಡವಿದಳು. ಅವಳಿಗೆ ಹಾಗೆಯೇ ಅನ್ನಿಸುತ್ತಿತ್ತು.ತನ್ನ ಕೈ ಕೊಳೆಯಾಗಿದೆ ಎಂಬ ಭಾವನೆ ಅವಳಿಗೆ ಬಂದಿದ್ದು ಇದೇ ಮೊದಲಲ್ಲ. ಇತ್ತೀಚೆಗೆ ಈ ರೀತಿ ಆಗಾಗ್ಗೆ ಆಗುತ್ತಿರುತ್ತದೆ. ಇದು ಆರಂಭವಾಗಿದ್ದೂ ಇತ್ತೀಚೆಗಷ್ಟೆ..ಇವೆಲ್ಲ ಆರಂಭವಾಗಿದ್ದು ಯಾವಾಗ ಎನ್ನುವುದನ್ನು ರಮಾಬಾಯಿ ಮರೆತಿಲ್ಲ. ಸರಿಯಾಗಿ ನಾಲ್ಕೂವರೆ ವರ್ಷಗಳ ಹಿಂದೆ, ದೀದೀ ಸೈಬರ್‌ಬಾಯಿಯನ್ನು … Read more

ನೀರಿನ ಪೊಟ್ಟಣಗಳು: ಕೋಡಿಹಳ್ಳಿ ಮುರಳೀ ಮೋಹನ್

ತೆಲುಗು ಮೂಲ: ಗಡ್ಡಂ ದೇವೀ ಪ್ರಸಾದ್ಕನ್ನಡ ಅನುವಾದ: ಕೋಡಿಹಳ್ಳಿ ಮುರಳೀ ಮೋಹನ್ “ತಂಪಾದ ಕುಡಿಯುವ ನೀರು ಪ್ಯಾಕೆಟ್‌ಗಳು”, “ ಚಲ್ಲ ಚಲ್ಲನಿ ನೀಟಿ ಪೊಟ್ಲಾಲು””… ಬಸ್ಸಿನ ನಿಲ್ದಾಣಕ್ಕೆ ಬಂದು ನಿಂತ ದೂರದ ಊರಿನ ಬಸ್ಸಿನ ಸುತ್ತಲೂ ಎಡಗೈಯಲ್ಲಿ ಬಕೆಟ್ ಹಿಡಿದು, ಬಲಗೈಯಲ್ಲಿ ನೀರಿನ ಪ್ಯಾಕೆಟ್‌ಗಳನ್ನು ಮೇಲಕ್ಕೆತ್ತಿ ಹಿಡಿದುಕೊಂಡು ದಾಸಪ್ಪ ಕೂಗುತ್ತಿದ್ದ. ಅಷ್ಟರಲ್ಲಿ ಮತ್ತೊಂದು ಬಸ್ಸು ಬಂದರೆ, ತಕ್ಷಣ ಅದರೊಳಗೆ ಹೋಗಿ ಎರಡು ಭಾಷೆಗಳಲ್ಲಿ ಕೂಗುತ್ತಾ ಹತ್ತು ಪ್ಯಾಕೆಟ್‌ಗಳನ್ನು ಮಾರಿದ.ನೀರಿನ ಪ್ಯಾಕೆಟ್‌ಗಳನ್ನು ಬಕೆಟ್‌ನಲ್ಲಿ ಭತ್ತದ ಹೊಟ್ಟಿರುವ ಐಸ್ ದಿಮ್ಮಿಯ ಹತ್ತಿರ … Read more

ನಮ್ಮ ಗೋದವ್ವಜ್ಜಿ: ಎಫ್.ಎಂ.ನಂದಗಾವ

ಸೊಸೆಯತ್ತ ಮುಖ ಮಾಡಿ, ʻಇರ್ಲಿ ಬಿಡವ, ಕೂಸು ಅದಕ್ಕೇನ ಗೊತ್ತಾಗ್ತದ?ʼ ಎನ್ನುತ್ತಾ ಅಜ್ಜ ಅರಳಪ್ಪ, ಮೊಮ್ಮಗ ಅಂತಪ್ಪನ ಕಡೆ ತಿರಗಿ, ʻಕೂಸ, ನಾ ಯಾಕ ಸುಳ್ಳ ಹೇಳಲಿ?ʼ ʻನೀ ನಿನ್ನೆ ರಾತ್ರಿ ಪೂಜಿಗೆ ಹೋಗಿದ್ದಿ. ನಿನಗ ಮುಂಜಾನಿ ಒಂಬುತ್ತೂವರಿತನ ಎಚ್ಚರ ಆಗಿಲ್ಲ.ʼ ʻಹೌದ ಅಜ್ಜಾ, ನೀ ಹೇಳೂದು ಖರೆ ಅದ. ನಾ ಇಂದ ತಡಾ ಮಾಡಿ ಎದ್ನಿʼ ʻ… …ʼ ʻಆದರೂ ಅಜ್ಜ, ನಿನ್ನೆ ರಾತ್ರಿ ಪೂಜಿಗೆ ನೀ ಬರಬೇಕಿತ್ತು. ರಾತ್ರಿ ಪೂಜಿಯೊಳಗ ಸ್ವಾಮಿಗಳು ಕಬ್ಬಿಣದ ದೊಡ್ಡ … Read more

ಗಡಿ: ಶ್ರೀಪ್ರಸಾದ್

ಅಣ್ಣೇ ಗೌಡ ಮತ್ತು ಮರೀಗೌಡರದ್ದು ಊರಿನ ಗೌರವಸ್ತ ಕುಟುಂಬ. ಇವರ ಅಪ್ಪ ಲಿಂಗೇ ಗೌಡರು ಊರಿನವರಿಗೆಲ್ಲ ಒಂದಿಲ್ಲೊಂದು ಕೆಲಸದಲ್ಲಿ ನೆರವಾಗಿದ್ದರಿಂದ ಇವರ ಕುಟುಂಬದ ಬಗ್ಗೆ ಊರ ಜನಕ್ಕೆ ಅದೇನೋ ಆತ್ಮೀಯತೆ ಮತ್ತು ಗೌರವ ಇತ್ತು. ಅಗರ್ಭ ಅನ್ನೋವಷ್ಟು ಅಲ್ಲದಿದ್ದರೂ ಒಂದೆರಡು ತಲೆಮಾರು ಕೂತು ತಿನ್ನೋವಷ್ಟು ಆಸ್ತಿ ಅಂತೂ ಇತ್ತು. ಲಿಂಗೇ ಗೌಡರು ಹೋಗಿ 3 ವರ್ಷ ಆಯ್ತು… ಅಲ್ಲಿಂದಲೇ ಶುರುವಾಗಿದ್ದು ಮಕ್ಕಳಿಬ್ಬರ ನಡುವೆ ಆಸ್ತಿಯ ಕುರಿತು ಶೀತಲ ಸಮರ… ಮುಂದೆ ತಗಾದೆ ಬೇಡ ಅಂದುಕೊಂಡು ದೊಡ್ಡ ಗೌಡರು … Read more

ಲವ್ ಕ್ರುಷಾದ್: ಎಫ್ ಎಂ ನಂದಗಾವ

ರಾಜ್ಯದ ಸಚಿವ ಸಂಪುಟದ ನಡುವಯಸ್ಸಿನ ಹಿರಿಯ ಸದಸ್ಯ, ಗೃಹ ಖಾತೆಯ ಜವಾಬ್ದಾರಿ ಹೊತ್ತ ಸಚಿವ ಕೆ.ಟಿ.ಕಿರಣ ಅವರು, ಅಂದು ಸಂಗಮನೂರು ನಗರ ಪೊಲೀಸ್ ಠಾಣೆಗೆ ಭೇಟಿಕೊಡುವವರಿದ್ದರು. ಸಮಯ ನಿಗದಿ ಆಗಿರಲಿಲ್ಲ. ಊರಲ್ಲಿನ ಅವರ ಪಕ್ಷದ ನಾಯಕ ಹಿರಿಯಣ್ಣ ನಾಯ್ಕ ಎಂಬುವವರ ಮಗಳು ಮಂಗಳಾಳ ಮದುವೆಗೆ ಅವರು ಬಂದಿದ್ದರು. ಅವರ ಈ ಖಾಸಗಿ ಭೇಟಿಯನ್ನು ಅಧಿಕೃತಗೊಳಿಸುವ ಉದ್ದೇಶದಿಂದ ಸಂಗಮನೂರು ನಗರ ಪೊಲೀಸ್ ಠಾಣೆಯ ಭೇಟಿಯ ಕಾರ‍್ಯಕ್ರಮವನ್ನು ಆಯೋಜಿಸಲಾಗಿತ್ತು. ಬಾಲ್ಯದಿಂದಲೇ ಸಂಘಟನೆಯ ಶಾಖೆಯಲ್ಲಿ ಪ್ರಾಥಮಿಕ ಸದಸ್ಯತ್ವ ಹೊಂದಿ, ಅದರಲ್ಲಿಯೇ ಬೆಳೆಯುತ್ತಾ … Read more

ಜೀವನ ಮಕರಂದ: ಕೋಡಿಹಳ್ಳಿ ಮುರಳೀಮೋಹನ್

ತೆಲುಗು ಮೂಲ: ವಿಜಯ ಶ್ರೀಮುಖಿಕನ್ನಡ ಅನುವಾದ: ಕೋಡಿಹಳ್ಳಿ ಮುರಳೀಮೋಹನ್ “ಅಮ್ಮಾ, ಕೈವಲ್ಯಾ! ಅಭಿನವ್ ಕಾಲ್ ಮಾಡಿದ್ರು.. ನಿನ್ನ ಜೊತೆ ಮಾತಾಡೋಣ ಅಂತ ಎರಡು ಮೂರು ಸಾರಿ ಮಾಡಿದ್ರೂ ನೀನು ಲಿಫ್ಟ್ ಮಾಡ್ಲಿಲ್ಲ ಅಂತೆ?” ಕರೆದು ಕೇಳಿದ್ರು ರಾಮಚಂದ್ರ.“ಹೌದಾ ಅಪ್ಪಾ? ನನ್ನ ಮೊಬೈಲ್ ಬೆಡ್‌ರೂಮ್‌ನಲ್ಲಿದೆ. ನಾನು ಅಮ್ಮ, ಅಕ್ಕ ಅವರ ಜೊತೆ ಮಾತಾಡ್ತಾ ಅಡುಗೆಮನೆಯಲ್ಲಿದ್ದೆ. ಹೋಗಿ ನೋಡ್ತೀನಿ” ತಂದೆಯೊಂದಿಗೆ ಹೇಳುತ್ತಲೇ ಬೆಡ್‌ರೂಮ್‌ಗೆ ಹೋದಳು ಕೈವಲ್ಯ. “ನನ್ನಗೆ ಕಾಲ್ ಮಾಡಿದ್ರಂತೆ? ನಾನು ನೋಡಲೇ ಇಲ್ಲ, ಮೊಬೈಲ್ ಇನ್ನೊಂದು ರೂಮ್‌ನಲ್ಲಿದೆ” ಕಾಲ್ … Read more

ಅಮ್ರಾವತಿಯ ಗಂಡ: ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ

“ಮುಂಗಾಲಿನ ಮ್ಯಾಲೆ ನಡೆಯೋ ಹೆಂಗ್ಸು ಮೂರೊಲೇ ಗುಂಡು ಒಂದ್ಕಡೆ ಇಕ್ಕಲ್ಲ, ಯಿಟ್ನೊತ್ಗೇ ಒಲೆ ಕಿತ್ತಾಕಿ ಮುಂಗೈನ ತಿಕುಕ್ಕೆ ಸೀಟ್ಕಂಡು ಮುಂದ್ಲೂರಿಗೆ ವೋತಾಳೆ, ನೀನು ಅಂಗೇ ಕಣೇಳೇ ಬಿತ್ರೀ ಆಹ ಹ ಹಾ… ಹೆಂಗ್ ವನಿತಾಳ್ನೋಡು ಇವುಳ್ ವೈಯ್ಯಾರುಕ್ಕೆ ನನ್… ” ಮಲ್ಲಕ್ಕ ಕುಂತಲ್ಲೇ ಕೊಸರಾಡತೊಡಗಿದಳು, ಅವಳ ಆವೇಶ, ಆಕ್ರೋಶ ಎಷ್ಟಿತ್ತೆಂದರೆ ಅವಳು ಕುಂತಿರೋ ಜಾಗಕ್ಕೆ ಗಾರೆ ಬಳಿಯದೇ ಬರೀ ಮಣ್ಣಿನ ನೆಲವಾಗಿದ್ದಿದ್ರೇ ಅವಳ ಕೊಸರಾಟಕ್ಕೆ ಅವಳ ಕುಂಡಿಯಷ್ಟಗಲವೂ ನೆಲ ತೂತು ಬಿದ್ದು ನೆಲದೊಳಗೆ ವೊಲ್ಟೋಗಿರೋಳು, ಇವಳ ಕೊಸರಾಟ … Read more

ಮೇಷ್ಟ್ರು ರವಿ, ರಾಜಿ ಮತ್ತು ಮಗ ರವಿರಾಜ: ಲಿಂಗರಾಜು ಕೆ ಮಧುಗಿರಿ

ಅಗ್ರಹಾರಕ್ಕೆ ವರ್ಗವಾಗಿ ಬಂದ ರವಿಯನ್ನು, “ಆ ಶಾಲೆಯನ್ಯಾಕೆ ತೆಗೆದುಕೊಂಡೆ ಗುರು? ನೆಕ್ಸ್ಟ್ ಅಕಾಡೆಮಿಕ್ ಇಯರ್‌ಗೆ ನೀನು ಹೆಚ್ಚುವರಿ ಆಗೋದು ಪಕ್ಕಾ. ಆ ಹೆಸ್ರಿಗೂ ಆ ಊರ್ಗೂ ಸಂಬಂಧಾನೇ ಇಲ್ಲ. ಊರಿನ ತುಂಬೆಲ್ಲಾ ಇರೋದು ಮಾದಿಗ್ರು, ಹೊಲೇರು, ಕುರುಬ್ರು, ಮಡಿವಾಳ್ರೇ. ಗೊತ್ತಲ್ಲಾ ಅವ್ರೆಂಗೆ ಅಂತಾ?”, ಹೀಗೆ ತುಟಿಗೆ ಇಷ್ಟಿಷ್ಟೇ ವೋಡ್ಕಾನಾ ಮುತ್ತಿಡ್ತಾ, ರವಿಯ ಕಸಿನ್, ಕುಮಾರ ಮುಂದಾಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸಿದ. ರವಿ, ಅಗ್ರಹಾರದ ಹೆಸರಿನಿಂದ ಹಾಗೂ ಕೌನ್ಸೆಲಿಂಗ್ ನಲ್ಲಿ ಉಳಿದ ಒಂದೇ ಒಂದು ಶಾಲೆ ಇದಾಗಿದ್ದುದರಿಂದ ಅನಿವಾರ್ಯವಾಗಿ … Read more

ಕಿರು ಕತೆಗಳು: ಸುಜಾತಾ ಎಸ್ ಹೆಗಡೆ ದಂಟಕಲ್

ಅಂತರ್ಗತ “ಲೇ ಭಾವನಾ ಎಲ್ಲೆ ಇದ್ದೀಯಾ ? ನನಗೆ ಕೆಲಸಕ್ಕೆ ಹೊರಡೋಕೆ ಸಮಯ ಆಯ್ತು. ಚಿನ್ನುಗೆ ಬೇರೆ ಸಮವಸ್ತ್ರ ಹಾಕಿಲ್ಲಾ. ಅವನನ್ನ ಶಾಲೆಗೆ ಬಿಟ್ಟು ನಾನು ತಲುಪೋದು ಯಾವಾಗಾ ?. ಹರ್ಷ ಏರು ಧ್ವನಿಯಲ್ಲಿ ಕೂಗಿದಾಗಲೇ ವಾಸ್ತವಕ್ಕೆ ಬಂದಳು. ಅವಸರವಸರವಾಗಿ ಉಕ್ಕುತ್ತಿದ್ದ ಹಾಲಿನ ಪಾತ್ರೆಯ ಉರಿಯನ್ನು ನಂದಿಸಿದಳು. ಅಡಿಗೆ ಮನೆಯ ಬಾಗಿಲಿಗೆ ಬಂದ ಪತಿಯನ್ನು ಕಂಡು ಮುಖ ಬಾಡಿಸಿಕೊಂಡಳು. ಕಣ್ಣಾಲಿಗಳು ತುಂಬಿಕೊಂಡವು. ಭಾವುಕಳಾದ ಹೆಂಡತಿಯನ್ನು ಕಂಡು ಸ್ವಲ್ಪ ಮೆತ್ತಗಾದ. “ಇದೇನೆ ಭಾವನಾ ? ಇಷ್ಟಕ್ಕೆಲ್ಲ ಯಾರಾದ್ರು ಕಣ್ಣೀರು … Read more

ಮೂಗು ಸುಂದರಿಯೂ ಕಪ್ಪು ಹುಡುಗನೂ: ಎಂ ನಾಗರಾಜ ಶೆಟ್ಟಿ

ಹಾರ ಹಾಕಿ, ಧಾರೆ ಎರೆದು ಅಕ್ಷತೆ ಕಾಳು ಹಾಕುವುದನ್ನೇ ಕಾದಿದ್ದ ಅವಸರದ ಅನೇಕ ಆಮಂತ್ರಿತರು ಶುಭಕೋರಲು ಸಭಾಂಗಣದಿಂದ ಎದ್ದು ವೇದಿಕೆಯ ಎಡಭಾಗದಲ್ಲಿ ಒತ್ತೊತ್ತಾಗಿ ನೆರೆದುದನ್ನು ಕಂಡು ʼ ಸ್ವಲ್ಪ ತಾಳಿ ʼ ಎಂದು ಸುಧಾರಿಸಿಕೊಂಡು ಬರಲು ಮದುಮಕ್ಕಳನ್ನು ವೇದಿಕೆಯ ಪಕ್ಕದ ಕೋಣೆಗಳಿಗೆ ಕಳಿಸಿ ಕೊಡಲಾಯಿತು. ಹೆಚ್ಚೆಚ್ಚು ಜನ ಸೇರುತ್ತಿದ್ದಂತೆಲ್ಲಾ ಸರತಿಯ ಮುಂದಿದ್ದ ಆತುರಗಾರರು ʼ ಬೇಗ ಬರಕ್ಕೆ ಹೇಳಿ ʼ ಎಂದು ತಾಳ್ಮೆಗೆಟ್ಟು ಕೂಗುವುದನ್ನು ಕಂಡು, ಜನ ಅವಸರ ಮಾಡುತ್ತಿದ್ದಾರೆ ಬೇಗ ಬರಬೇಕಂತೆ ಎಂದು ಮದುಮಕ್ಕಳಿಗೆ ಹೇಳಿ … Read more