ನಿಲುಗನ್ನಡಿ ಪುಸ್ತಕ ಕುರಿತು ಕುಂ.ವೀ.ಅವರ ಅನಿಸಿಕೆ

ಸಹಸ್ರಾರು ವರ್ಷಗಳ ಹಿಂದೆಯೇ ‘ಮಸ್ಕಿ’ ಸಾಮ್ರಾಟ್ ಅಶೋಕನನ್ನು ಆಕರ್ಷಿಸಿದ ರಾಜ್ಯದ ಪ್ರಾಚೀನಾತಿ ಪ್ರಾಚೀನ ಸ್ಥಳ. ಆದರೆ ಸ್ವಾತಂತ್ರ್ಯೋತ್ತರವಾಗಿ ಮಸ್ಕಿ, ‘ಕೋಡಗುಂಟಿ’ ಎಂಬ ಹೆಸರಿನಿಂದ ಸಾಹಿತ್ಯಿಕವಾಗಿ ಹೆಸರಾಗಿದೆ. ಇಲ್ಲಿನ ಈ ಫ್ಯಾಮಿಲಿಗೆ ಸಾಂಸ್ಕೃತಿಕ ಹಿನ್ನಲೆ ಇದೆ, ಸದಭಿರುಚಿ ವ್ಯಕ್ತಿತ್ವವಿದೆ. ಬಸವರಾಜ ಮತ್ತು ಅವರ ತಂಗಿ ರೇಣುಕಾ, ಬಂಡಾರ ಹೆಸರಿನ ಪ್ರಕಾಶನ ಸಂಸ್ಥೆ ಆರಂಭಿಸಿದವರು, ತನ್ಮೂಲಕ ಸದಭಿರುಚಿ ಕಿತಾಬುಗಳನ್ನು ಪ್ರಕಟಿಸಿದವರು, ಈ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಯುವ ಮನಸ್ಸುಗಳನ್ನು ಪ್ರೋತ್ಸಾಹಿಸಿದವರು. ರೇಣುಕಾಳ ಚಟವಟಿಕೆಗಳನ್ನು ಹಲವು ವರ್ಷಗಳಿಂದ ಸೂಕ್ಷ್ಮವಾಗಿ ಗಮನಿಸುತ್ತಿರುವೆ. … Read more

ಹಿಜಾಬ್ ಮತ್ತು ವಿದ್ಯಾಭ್ಯಾಸ: ರಾಘವೇಂದ್ರ ಅಡಿಗ ಎಚ್ಚೆನ್

ಕಳೆದ ಕೆಲ ದಿನಗಳಿಂದ ದೇಶದಾದ್ಯಂತ ಹಿಜಾಬ್ ಕುರಿತ ವಿವಾದ ಹೊಗೆಯಾಡುತ್ತಿದೆ. ಉಡುಪಿಯ ಕಾಲೇಜಿನಲ್ಲಿ ಪ್ರಾರಂಭವಾದ ಚಿಕ್ಕ ಘಟನೆಯೊಂದು ದೇಶದ ಗಡಿಗಳನ್ನು ಮೀರಿ ವಿವಾದವಾಗಿ ಮಾರ್ಪಟ್ಟಿದೆ ಎಂದರೆ ಈ ಆಧುನಿಕ ಕಾಲದಲ್ಲಿಯೂ ಮಾನವನು ಧರ್ಮದ ಸಂಬಂಧವಾಗಿ ಹೇಗೆ ಭಾವಿಸಿಕೊಂಡಿದ್ದಾನೆ ಎನ್ನುವುದಕ್ಕೆ ಸಾಕ್ಷಿ. ರಾಜ್ಯದ ನಾನಾ ಶಾಲೆ, ಕಾಲೇಜುಗಳಲ್ಲಿನ ಕೆಲ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಹಾಕಿಕೊಳ್ಳಲು ಅವಕಾಶ ಸಿಗದಿದ್ದರೆ ಶಿಕ್ಷಣವನ್ನೇ ಮೊಟಕು ಮಾಡುತ್ತೇವೆ ಎನ್ನುವವರೆಗೆ ಮುಂದುವರಿದಿದ್ದಾರೆ. ಇದು ನಿಜಕ್ಕೂ ಆಘಾತಕರ. ”ನಮಗೆ ನಮ್ಮ ಇಸ್ಲಾಂ ಧರ್ಮ, ಹಿಜಾಬ್ ಮುಖ್ಯ, ಶಾಲೆಯ … Read more

ಮಹಾಕಾವ್ಯಗಳ ಮಹಾಯಾನ: ಎನ್.ಎಸ್.ಶ್ರೀಧರ ಮೂರ್ತಿ

ಮಹಾಕಾವ್ಯಗಳು ಜಗತ್ತಿನ ಎಲ್ಲಾ ನಾಗರೀಕತೆಯಲ್ಲಿಯೂ ಮೂಡಿ ಬಂದಿವೆ, ಇನ್ನೂ ಕೆಲವು ಮಹಾ ಕಾವ್ಯಗಳು ಮೂಡಿ ಬರುತ್ತಲೇ ಇವೆ. ಮಹಾಕಾವ್ಯ ಎಂದು ಕರೆಸಿ ಕೊಳ್ಳುವುದು ಕೇವಲ ಗಾತ್ರದ ದೃಷ್ಟಿಯಿಂದಲ್ಲ ಅದರ ಅಂತಸತ್ವದ ದೃಷ್ಟಿಯಿಂದ. ಅದರಲ್ಲಿ ಒಂದು ರೀತಿಯಲ್ಲಿ ಪರಂಪರೆಯ ಮೌಲ್ಯಗಳೇ ಅಂತರ್ಗತವಾಗಿರುತ್ತವೆ. ಕೆಲವು ಜಗತ್ತಿನ ಅಂತಹ ಮಹಾಕಾವ್ಯಗಳ ಪರಿಶೀಲನೆ ಈ ಲೇಖನದ ಉದ್ದೇಶ. ಸಮೇರಿಯನ್ನರ ‘ಗಿಲ್ಗಮೇಶ್’ ಮತ್ತು ಜಪಾನಿನ ಮುರಸಾಕಿಯ ‘ಗೆಂಜಿ ಮನೋಗಟರಿ’ ಪ್ರಾರಂಭಿಕ ಮಹಾಕಾವ್ಯಗಳು ಎಂದು ಕರೆಸಿ ಕೊಂಡರೂ ಹೋಮರ್‍ನ ‘ಇಲಿಯಡ್’ನಿಂದ ಮಹಾಕಾವ್ಯಗಳ ಪರಂಪರೆ ಆರಂಭ. ಹೆಲನ್ … Read more

ನನ್ನ ಮನವ ತಿಳಿಯಾಗಿಸಿದ ಆ ನವಿಲು: ಹರೀಶ್ ಆರ್ ಅಡವಿ

ನಮ್ಮ ಚಳ್ಳಕೆರೆ(ಚಿತ್ರದುರ್ಗ ಜಿಲ್ಲೆ) ಅರಣ್ಯ ಪ್ರದೇಶವು ಅಂದಾಜು ಒಂದು ಸಾವಿರ ಹೆಕ್ಟೇರ್ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದೆ ಹಾಗೂ ಅನೇಕ ಪ್ರಾಣಿ ಪಕ್ಷಿಗಳಿಗೆ, ಬಯಲುಸೀಮೆಯ ವನ್ಯಜೀವಿಗಳಿಗೆ ಆವಾಸ ಸ್ಥಾನವಾಗಿದೆ. ಇಲ್ಲಿನ ಅಪರೂಪದ ಅರಣ್ಯ ಪ್ರದೇಶದಲ್ಲಿ ಓಡಾಡುವುದೆಂದರೆ ನನಗೆ ಒಂದು ಖುಷಿಯ ವಿಷಯವಾಗಿದೆ. ಕೆಲವೊಮ್ಮೆ ಕಾನನದ ಒಳಗೆ ಹೋಗಿ ಹೆದರಿದ್ದೂ ಉಂಟು, ಜೋರು ಗಾಳಿ ಬೀಸುವಾಗ ನೀಲಗಿರಿಮರದ ಎಲೆಯ ಶಭ್ಧಕ್ಕೆ ಹೆದರಿ ಓಡಿದ್ದೂ ಉಂಟು, ಅದೆಷ್ಟೋ ಬಾರಿ ನನ್ನ ಹೆಜ್ಜೆಯ ಸಪ್ಪಳಕ್ಕೆ ನಾನೇ ಭಯದಿಂದ ನಡುಗಿದ್ದೇನೆ, ದೂರದಲ್ಲೆಲ್ಲೋ ಕೇಳುವ ಕೋಗಿಲೆ … Read more

“The Critic -ವಿಮರ್ಶಕ’ನ ವಿಮರ್ಶೆಯ ದಿಕ್ಕುದೆಸೆಗಳಿಗೆ ಎಸೆದ ಸವಾಲು”: ಎಂ.ಜವರಾಜ್

Act -1978, ನಾತಿಚರಾಮಿ, ಹರಿವು ಚಿತ್ರ ನಿರ್ದೇಶಕ ಮಂನ್ಸೋರೆ ಅವರ ‘The Critic’ ಸದ್ಯ ಈಗ ಸದ್ದು ಮಾಡುತ್ತಿರುವ ಒಂದು ಕಿರುಚಿತ್ರ. ಹಾಗೆ ’19 20 21′ ಮತ್ತು ‘ಅಬ್ವಕ್ಕ’ ಬಹು ನಿರೀಕ್ಷೆಯ ಮುಂದಿನ ಚಿತ್ರಗಳು ಎಂಬ ಸುದ್ದಿ ಇದೆ. ಸಿನಿಮಾದಲ್ಲಿ ಎರಡು ಬಗೆ. ಒಂದು length movie ಇನ್ನೊಂದು Short movie. ಸದ್ಯ Short movie ಗಳದೇ ಕಾರುಬಾರು. ಏಕೆಂದರೆ ವೆಚ್ಚದ ದೃಷ್ಟಿಯಿಂದಲೂ ಮತ್ತು ಪ್ರಯಾಣ ರಹಿತವಾಗಿಯೂ ಒಂದು ನಿಗದಿತ ಸ್ಥಳದಲ್ಲಿ ತಮ್ಮ ಕಲ್ಪನೆಯ ಒಂದಿಡೀ … Read more

ನಿಲುವಂಗಿಯ ಕನಸು (ಅಧ್ಯಾಯ ೧೬-೧೭): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೬: ಹೊನ್ನೇಗೌಡನ ಟೊಮೆಟೋ ತೋಟ ತೀವ್ರಗತಿಯಲ್ಲಿ ಜರುಗಿದ ಘಟನಾವಳಿಗಳ ಹೊಡೆತದಿಂದ ಚೆನ್ನಪ್ಪನ ಮನ್ನಸ್ಸು ವಿಚಲಿತವಾಗಿತ್ತು. ಮಂಕು ಬಡಿದವರಂತೆ ಕುಳಿತ ಗಂಡನನ್ನು ಕುರಿತು ‘ಅದೇನೇನು ಬರುತ್ತೋ ಬರಲಿ ಎದುರಿಸೋಕೆ ತಯಾರಾಗಿರಣ. ನೀವು ಹಿಂಗೆ ತಲೆ ಕೆಳಗೆ ಹಾಕಿ ಕೂತ್ರೆ ನಮ್ಮ ಕೈಕಾಲು ಆಡದಾದ್ರೂ ಹೆಂಗೆ? ಈಗ ಹೊರಡಿ, ದೊಡ್ಡೂರಿನಲ್ಲಿ ಏನೇನು ಕೆಲ್ಸ ಇದೆಯೋ ಮುಗಿಸಿಕಂಡು ಬನ್ನಿ. ನಾನೂ ಅಷ್ಟೊತ್ತಿಗೆ ಮನೆ ಕೆಲಸ ಎಲ್ಲಾ ಮುಗ್ಸಿ ಬುತ್ತಿ ತಗಂಡ್ ಹೋಗಿರ್ತೀನಿ’. ಸೀತೆ ಗಂಡನಿಗೆ ದೈರ್ಯ ತುಂಬುವ ಮಾತಾಡಿದಳು. ನಂತರ ಸುಬ್ಬಪ್ಪನ … Read more

ಪದ್ದಕ್ಕಜ್ಜಿ ಫೇಸ್ ಬುಕ್ ಲೈವ್: ಡಾ. ವೃಂದಾ. ಸಂಗಮ್

ಹೆಂಗಿದೀರಿ ಎಲ್ಲಾರೂ. ಈ ಕರೋನಾ ಅಂತ ಎಲ್ಲಾರೂ ಭೇಟಿ ಆಗೋದ ಕಡಿಮಿ ಆಗೇದಲ್ಲ. ಏನು ಮಾಡೋದು. ನಮ್ಮ ಪದ್ದಕ್ಕಜ್ಜಿನೂ ಹೀಂಗ ಒದ್ದಾಡತಾರ. “ಹೂಂ ರೀ, ಭಾಳ ದಿನಾ ಆಗಿತ್ತಲ್ಲ, ಪದ್ದಕ್ಕಜ್ಜಿ ಬಗ್ಗೆ ಮಾತನಾಡಿ. ಏನು ಮಾಡೋದು, ಕಾಲಮಾನ ಕೆಟ್ಟ ಕೂತಾವ, ಸುಟ್ಟ ಬರಲೀ, ಈ ಕರೋನಾದಿಂದ ಒಬ್ಬರಿಗೊಬ್ಬರು ಒಂದ ಊರಾಗ, ಒಂದ ರಸ್ತೆದಾಗ, ಆಜೂ ಬಾಜೂ ಮನಿಯೊಳಗಿದ್ದರೂನೂ ಸೈತೇಕ, ಅಮೇರಿಕಾ – ಆಸ್ಟ್ರೇಲಿಯಾದಾಗ ಇದ್ಧಂಗ ಕಂಪ್ಯೂಟರಿನ್ಯಾಗ ಮಾರಿ ನೋಡೋ ಹಂಗಾದೇದ “ ಅಂತಾರ ನಮ್ಮ ಪದ್ದಕ್ಕಜ್ಜಿ. ನಿಮಗೆಲ್ಲಾರಿಗೂ … Read more

ಮಹಿಳಾ ಶಿಕ್ಷಣಕ್ಕೆ “ರಾಜ”ಮಾರ್ಗವನ್ನು ರೂಪಿಸಿದ ದಿನಗಳು: ಅಮೂಲ್ಯ ಭಾರದ್ವಾಜ್‌

ಒಂದು ದೇಶವನ್ನು ನಿರ್ಮಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶಿಕ್ಷಣದ ಮಹತ್ವ ಎಂದೆದಿಗೂ ಅಳಿಯಲಾರದ್ದು. ಮಹಿಳೆಯರ ಶಿಕ್ಷಣದ ಜಾಗೃತಿಯು ಅನೇಕ ಸ್ಥರಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಹಾಗೆಯೇ ಹೆಣ್ಣು ಮಕ್ಕಳ ಶಿಕ್ಷಣ ಯಾವುದೇ ರಾಷ್ಟ್ರಕ್ಕೆ ಎಷ್ಟು ಮುಖ್ಯವೆಂದು ನಿರೂಪಿತವೂ ಆಗಿದೆ. ಪ್ರತಿ ದೇಶವು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತನ್ನು ನೀಡುತ್ತಿದೆ. ಮಹಿಳೆಯರ ಶಿಕ್ಷಣ ಯಾವುದೇ ಶೋಷಣೆಯಿಂದ ದೂರವಿರಲು ಮತ್ತು ತಮ್ಮನ್ನು ತಾವೇ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. 1848 ರಲ್ಲಿ ಪುಣೆಯ ಬಿದೆ ವಾಡಾದಲ್ಲಿ ಸಾವಿತ್ರಿಬಾಯಿ ಪುಲೆಯವರು ಪ್ರಪ್ರಥಮ ಹೆಣ್ಣು … Read more

ಗಟ್ಟಿಗಿತ್ತಿ: ಡಾ. ದೋ. ನಾ. ಲೋಕೇಶ್

2016 ಅಥವಾ 2017 ನೇ ಇಸವಿಯ ಮಳೆಗಾಲದ ಒಂದು ದಿನ, ನಮ್ಮ ಇಲಾಖೆಯ ಅರೆತಾಂತ್ರಿಕ ಸಿಬ್ಬಂದ್ಧಿಯೊಬ್ಬರು ಎಮ್ಮೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮಗೆ ತೋರಿಸಲು ಹೇಳಿದ್ದಾರೆ ಬನ್ನಿ ಸರ್ ಎಂದು ಅವರ ವಿಳಾಸ ಹೆಸರು ಎಲ್ಲ ಹೇಳಿದರು. ಅದು ನಾನು ಕೆಲಸ ಮಾಡುವ ಸ್ಥಳದಿಂದ ಬೇರೊಂದು ದಿಕ್ಕಿಗಿದ್ದು ನಮ್ಮ ಮನೆಯಿಂದ 6-7 ಕಿ. ಮೀ. ದೂರವಿದ್ದದ್ದರಿಂದ, ನಾನು ಸಂಜೆ ಕೆಲಸ ಮುಗಿಸಿ ಬಂದು ನಿಮ್ಮ ಎಮ್ಮೆಯನ್ನು ನೋಡುತ್ತೇನೆ ಎಂದು ಹೇಳಿದೆ. ಅದರಂತೆ ಸಂಜೆ ಸುಮಾರು 5.30 ಅಥವಾ 5.45 … Read more

ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಎರಡನೇ ಪದಕ ಖಾತ್ರಿ

ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡೆಯ ಬಾಕ್ಸಿಂಗ್ ನ ಕ್ವಾರ್ಟರ್ ಫೈನಲ್ ನಲ್ಲಿ (64-69 ಕೆ.ಜಿ. ವಿಭಾಗ) ಭಾರತದ ಲವ್ಲೀನ ಬೊರ್ಗೊಹೈನ್ ತನ್ನ ಎದುರಾಳಿ ಚೀನಾದ ಚೆನ್ ನೀನ್-ಚಿನ್ ರವರನ್ನು ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಈ ಬಾರಿಯ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಖಾತ್ರಿಯಾಗಿದೆ. ಸೆಮಿ ಫೈನಲ್ ನಲ್ಲಿ ಗೆದ್ದರೆ ಚಿನ್ನದ ಪದಕಕ್ಕಾಗಿ ಸೆಣೆಸುವ ಅವಕಾಶ ಪಡೆಯುವ ಲವ್ಲೀನರವರು ಒಂದು ವೇಳೆ ಸೆಮಿ ಫೈನಲ್ ನಲ್ಲಿ ಸೋತರೆ ಕಂಚಿನ ಪದಕ ಪಡೆಯಲಿದ್ದಾರೆ. ಸೆಮಿಫೈನಲ್ ನಲ್ಲಿ … Read more

ಕಲಿಕೆ v/s ಕುಡಿತ: ಶೈಲಜ ಮಂಚೇನಹಳ್ಳಿ

ಈ ಹಿಂದೆ ನನ್ನ ಪುಟ್ಟ ಕಂಪ್ಯೂಟರ್ ಸೆಂಟರ್‌ಗೆ ಕಂಪ್ಯೂಟರ್ ಕಲಿಯಲೆಂದು ಸುಮಾರು ೨೫ ವರ್ಷದ ಒಬ್ಬ ವ್ಯಕ್ತಿ ಬಂದ, ಈಗ ಆತನ ಹೆಸರು ನೆನಪಿಗೆ ಬರುತ್ತಿಲ್ಲ, ತನ್ನನ್ನು ಪರಿಚಯಿಸಿಕೊಳ್ಳುವಾಗ ಆತ ನನಗೆ ಒತ್ತಿ ಒತ್ತಿ ಹೇಳಿದುದು ನನಗೆ ಕಂಪ್ಯೂಟರ್ ಕಲಿಯಬೇಕೆಂದು ತುಂಬಾ ಆಸೆ ಇದೆ ಎಂದು. ತಾವು ನನಗೆ ಹೇಳಿಕೊಡುವಿರ ಮೇಡಮ್? ಎಂದು ಕೇಳಿದ. ವಯಸ್ಸಿನ ವಯೋಮಿತಿ ಇಲ್ಲದೆ ಎಲ್ಲಾ ವಯಸ್ಸಿನವರಿಗೂ ನಾನು ಕಂಪ್ಯೂಟರ್ ಕಲಿಸುತ್ತಿದ್ದರಿಂದ ಆತನ ಈ ಕೇಳಿಕೆಯಿಂದ ನನಗೆ ಯಾವುದೇ ವಿಶೇಷವೆನಿಸಲಿಲ್ಲ. ನಾನು ಪ್ರತಿಕ್ರಿಯಿಸುವ … Read more

ಸಿದ್ಧಲಿಂಗಯ್ಯ ಎಂಬ ಬೇಲಿ ಮೇಗಳ ಹೂವು !: ಅಶ್ಫಾಕ್ ಪೀರಜಾದೆ

ಕವಿಯೆಂದರೆ ಹೇಗಿರಬೇಕು ಎನ್ನುವ ಪ್ರಶ್ನೆಗೆ ಇನ್ನೂವರೆಗೂ ಉತ್ತರ ಸಿಕ್ಕಂತಿಲ್ಲ. ತಥಾಗತಿತ ಸಮಾಜದ ಪ್ರತಿನಿಧಿಯಂದು ನಾವು ಭಾವಿಸುವ ಕವಿ ವಾಸ್ತವದಲ್ಲಿ ದೈವೀ ಗುಣಗಳಿಂದ ಕೂಡಿರಬೇಕು. ಗಾಂಧಿಯಂತೆ ಕ್ಷಮಾಗುಣ ಹೊಂದಿದ ಮಹಾತ್ಮನಾಗಿರಬೇಕು. ಪವಾಡ ಪುರಷನೋ.. ಪ್ರವಾದಿಯೋ ಅಥವಾ ಇದಕ್ಕಿಂತ ಮಿಗಿಲಾಗಿ ಸ್ವತಃ ದೇವರೇ ಆಗಿರಬೇಕೆಂದು ಬಯಸುವವರಿದ್ದಾರೆ. ಇನ್ನೂ ಅವನಿಗೆ ಸಂಸ್ಕೃತಿಕ ಲೋಕದ ಪ್ರತಿನಿಧಿ ಎನ್ನುವ ಹಣೆಪಟ್ಟಿ ಅಂಟಿದ ನಂತರವಂತೂ ಮುಗಿಯಿತು. ಅವನಾಡುವ ಒಂದೊಂದು ಮಾತೂ ತುಂಬ ಎಚ್ಚರಿಕೆಯಿಂದಿರಬೇಕಾಗುತ್ತದೆ. ಅವನಿಡುವ ಒಂದೊಂದು ಹೆಜ್ಜೆಗೂ ಸಾವಿರ ಸಲ ವಿಚಾರ ಮಾಡಬೇಕಾಗುತ್ತದೆ. ಅವನು ಸಾವಿರ … Read more

ಒಂದು ಪಲ್ಲವಿ ಎರಡು ಹಾಡು ಹಲವು ಚರಣ ಹಂಸಲೇಖರ ಪದ ಬೀಡು: ಜಯರಾಮ ಚಾರಿ

ಕಳೆದ ವಾರ ನಮ್ಮ ಅಡಕಸಬಿ ಅಡ್ಡದಲ್ಲಿ ಹಂಸಲೇಖರ ಬಗ್ಗೆ ಬರೋಬ್ಬರಿ ಆರು ದಿನಗಳ ಕಾಲ ಕೇವಲ ಅವರ ಸಾಹಿತ್ಯ ಕುರಿತು ಅದನ್ನು ಒಡೆದು ನೋಡುವ ಒಂದು ಸಣ್ಣ ಪ್ರಯತ್ನ ಮಾಡಿದ್ವಿ. ಆದರೆ ಹಂಸಲೇಖ ಬರೆದ ಹಾಡುಗಳ ಸಂಖ್ಯೆ ಕಮ್ಮಿಯಿಲ್ಲ 3500 ಕ್ಕೂ ಹೆಚ್ಚು ಹಾಡು ಬರೆದಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಹಂಸಲೇಖ ತಟ್ಟದ ಪದಗಳಿಲ್ಲ, ಅವರು ನಾದಬ್ರಹ್ಮನು ಹೌದು, ಪದಪರಮಾತ್ಮನು ಹೌದು .ಆರು ದಿವಸ ನಡೆಸಿದರು ಎಷ್ಟೋ ಹಾಡುಗಳು ಎಷ್ಟೋ ಸಾಲುಗಳು ಹಾಗೆ ಉಳಿದುಬಿಟ್ಟವು. ಹಂಸಲೇಖರು ಒಂದೇ … Read more

ಕ್ಲಬ್‌ ಹೌಸ್‌ ನಲ್ಲಿ ಒಂದೊಂದು ಸಂಜೆ ಒಂದೊಂದು ಹಂಸಗೀತೆ

ನಾದಬ್ರಹ್ಮ ಹಂಸಲೇಖರವರ ಹುಟ್ಟು ಹಬ್ಬದ ಪ್ರಯುಕ್ತ ಹೊಸ ಆಪ್‌ ಆದ ಕ್ಲಬ್‌ ಹೌಸ್‌ ನಲ್ಲಿ ಅಡ್ಡಕಸಬಿ ಅಡ್ಡ ಎಂಬ ಕ್ಲಬ್‌ ನಲ್ಲಿ ಸಂಜೆ 6.30 ಕ್ಕೆ ಪ್ರತಿದಿನ 23.06.2021 ರವರೆಗೆ ʼಹಂಸಮಯʼ ಎಂಬ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹೆಚ್ಚಿನ ವಿವರಗಳು ಈ ಕೆಳಗಿನ ಚಿತ್ರದಲ್ಲಿವೆ. ಕ್ಲಬ್‌ ಹೌಸ್‌ ನಲ್ಲಿ ಅಡ್ಡಕಸಬಿ ಅಡ್ಡ ಸೇರಲು ನಿಮ್ಮ ಮೊಬೈಲ್‌ ನಲ್ಲಿ ಕ್ಲಬ್‌ ಹೌಸ್‌ install ಮಾಡಿಕೊಂಡು ಲಾಗಿನ್‌ ಆದ ಮೇಲೆ ಈ ಲಿಂಕ್‌ ಕ್ಲಿಕ್ ಮಾಡಿ

“ಪರಿಸರ ದಿನ ಎನ್ನುವ ವರ್ಷದ ಶ್ರಾದ್ಧ”: ವೃಶ್ಚಿಕ ಮುನಿ

ಇವತ್ತಿನ ಜಮಾನಾದ ಜನರು ಪರಿಸರ ದಿನಾಚರಣೆ ಎಂದರೆ ವಾಟ್ಸಪ್, ಫೇಸ್ಬುಕ್, ಟ್ವಿಟ್ಟರ್,ಯೂಟುಬ್ ಇನ್ನಾವುದೋ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಗೀಚಿ, ಒಂದಿಷ್ಟು ಎಡಿಟ್ ಪೋಟೋ ಹಾಕಿ ಕೆಳಗೆ ಮೂಲೆಯಲ್ಲಿ ಇರಲಿ ನಮ್ಮದೊಂದು ಅಂತಾ ಫೋಟೋ ಹಾಕಿಕೊಂಡು ಮೆರೆದು ನಾವು ದೊಡ್ಡ ಪರಿಸರ ಪ್ರೇಮಿ ಎಂದು ಬಿಡುತ್ತೇವೆ. ಅವತ್ತು ನೆಟ್ಟು ಸಸಿ ಸಂಜೆಗೆ ಬಾಡಿ ಹೋಗಿರುತ್ತದೆ.ಪ್ರತಿ ವರ್ಷ ನೆಟ್ಟು ಜಾಗದಲ್ಲಿ ಮತ್ತೆ ಮತ್ತೆ ಸಸಿ ನೆಟ್ಟು ಹಲ್ಲು ಕಿಸಿದು ಫೋಟೋ, ಸೆಲ್ಫ್ ತೆಗೆಸಿಕೊಂಡು ಮತ್ತೆ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿಕೊಂಡು … Read more

ಜಪಾನ್ ಕಾವ್ಯ ಪ್ರಕಾರ ಹೈಕು ಕನ್ನಡಮ್ಮನ ಮಡಿಲಲ್ಲಿ….: ರತ್ನರಾಯಮಲ್ಲ

ಕನ್ನಡ ವಾಗ್ದೇವಿಯ ಭಂಡಾರವನ್ನೊಮ್ಮೆ ಅವಲೋಕಿಸಿದಾಗ ಹಲವಾರು ವಿಸ್ಮಯಗಳು ಸಹೃದಯ ಓದುಗರನ್ನು ಜಿಜ್ಞಾಸೆಗೆ ಹಚ್ಚುತ್ತವೆ. ಅರ್ವಾಚೀನ ಸಾಹಿತ್ಯದ ಮೇಲೆ ಸಂಸ್ಕೃತ ಭಾಷೆಯ ಪ್ರಭಾವವಿದ್ದಂತೆ ಆಧುನಿಕ ಸಾಹಿತ್ಯದ ಮೇಲೆ ಆಂಗ್ಲ ಭಾಷೆಯ ಪ್ರಭಾವವಿರುವುದನ್ನು ಕಾಣುತ್ತೇವೆ. ಅದರಲ್ಲಿ ಜಪಾನಿನ ಕಾವ್ಯ ಕಲೆ ‘ಹೈಕು’ ಕೂಡ ಒಂದು. ಜಪಾನಿನ ಜನಪದ ಲೋಕದಿಂದ ಒಡಮೂಡಿದ್ದ ಹಾಗೂ ಆಸ್ಥಾನದಲ್ಲಿ ನಲೆದಾಡುತಿದ್ದ ಹೈಕುಗೆ ಭವ್ಯವಾದ ದೀರ್ಘ ಪರಂಪರೆಯಿದೆ. ಜಪಾನಿನ ಭಾಷೆ ಚೀನಿಮಯ, ಚಿತ್ರಲಿಪಿ. ನಾವು ನಮ್ಮ ಭಾಷೆಯನ್ನು ಧ್ವನಿ ಮೂಲಕ ಗುರುತಿಸಿದರೆ ಜಪಾನೀಯರು ಚಿತ್ರದ ಮೂಲಕ ಗುರುತಿಸುವರು. … Read more

ಕನ್ನಡದ ನವೋದಯ ಸಾಹಿತ್ಯದ ಮೇಲೆ ಡಾ. ಬಿ.ಎಂ. ಶ್ರೀಯವರ ‘ಇಂಗ್ಲೀಷ್ ಗೀತಗಳು’ ಹಾಗೂ ಡಾ. ಹಟ್ಟಿಯಂಗಡಿಯವರ ‘ಆಂಗ್ಲ ಕವಿತಾವಳಿ’ಯ ಪುಸ್ತಕಗಳ ಪ್ರಭಾವ !: ಎಚ್. ಆರ್. ಲಕ್ಷ್ಮೀ ವೆಂಕಟೇಶ್

ಇಪ್ಪತ್ತನೇ ಶತಮಾನದ ಆದಿಯಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಭಾವದಿಂದ ಕನ್ನಡ ಸಾಹಿತ್ಯವು ಹೊಸ ಹುಟ್ಟನ್ನು ಪಡೆದು ಹಳೆಗನ್ನಡ -ನಡುಗನ್ನಡ ಸಾಹಿತ್ಯಕ್ಕಿಂತ ಬೇರೆಯಾದ ‘ನವೋದಯ ಸಾಹಿತ್ಯ’ ವೆಂದು ಹೊಸ ಸಾಹಿತ್ಯ ಪ್ರಕಾರದಲ್ಲಿ ಕಾಣಿಸಿಕೊಂಡಿತು. ಇದು ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಕಾವ್ಯ, ಕವನ, ಭಾವಗೀತೆ, ಹೀಗೆ ವಿವಿಧ ಪ್ರಕಾರಗಳಲ್ಲಿ ಬಹುಬೇಗ ಅಭಿವೃದ್ಧಿ ಪಡೆದು ವಿಫುಲ ಸಾಹಿತ್ಯ ಬೆಳವಣಿಗೆಗೆ ಕಾರಣವಾಯಿತು. ಇದರಲ್ಲಿ ಮುಖ್ಯವಾದ ಕಾವ್ಯ ಪ್ರಕಾರಗಳಲ್ಲಿ, ಭಾವಗೀತೆ, ಕವನ, ಕಗ್ಗ, ವಚನದ ಲಕ್ಷಣದ ಮತ್ತು ರಗಳೆ, ಛಂದಸ್ಸಿನ ಸಾನೆಟ್, ಮಾದರಿಯ ಪದ್ಯಗಳು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 72): ಎಂ. ಜವರಾಜ್

-೭೨- ಕತ್ಲು ಕವಿಕಂಡಿತ್ತು ಕಾರಮುಳ್ಳು ಚುಚ್ಚುಸ್ಕಂಡುಕುಂದ್ರಕಾಗ್ದೆ ನಿಂದ್ರಕಾಗ್ದೆನಳ್ತ ಮುಕ್ಕರಿತನಿಂತು ಕಾಲೂರಿ ಕುಂಟ್ತಿದ್ದಆ ಅಯ್ನೋರ ಕೈಹಿಡ್ಕಂಡುಮನ್ಗಂಟ ಬುಟ್ಟುಎಡಗೈಲಿ ನನ್ನಿಡ್ಕಂಡುದಾಪುಗಾಲಾಕಿ ಬಂದ ಮಾರಅದೇ ರಬುಸ್ದಲ್ಲಿನನ್ನ ತೂದಿತಡ್ಕ ಮೂಲ್ಗ ಎಸ್ದುಜಗುಲಿಗ ತಿಕ ಊರ್ದ ಲಾಟಿನ್ಲಿ ಬತ್ತಿ ಮ್ಯಾಕ್ಕೆದ್ದುಬತ್ತಿ ಮ್ಯಾಲಿನ್ ಬೆಳುಕ್ಕುನ್ ನಾಲ್ಗಕೆಂಪಾಗಿ ಮೇಲ್ಚಾಚಿ ವಾಲಾಡ್ತಹೊಗ ಸಯಿತ್ವಾಗಿಬೆಳ್ಕು ಬೆಳುಗ್ತಾ ಇತ್ತು ಆ ಮಾರನೆಡ್ತಿಆ ಬೆಳ್ಕ ನೋಡ್ತಲಾಟಿನ್ ಕೀಲಿ ಹಿಡ್ದುಬತ್ತಿ ಇಳಿಸಿಈಚ್ಗ ಬಂದುಲೊಚಲೊಚ ಲೊಚಗುಡ್ತಬಂದವ್ನ್ ಮುಂದ ಕುಂತುಕಿರಿಕಿರಿ ಎಟ್ಟಿಎರುಡು ಬಾಟ್ಲಿ ಹೆಂಡನ ಕುಕ್ಕಿ‘ಆ ಕಿತ್ತೊದ್ ಎಕ್ಡುವೇಕಾಲ್ ಕಾಲ್ದಿಂದೂಯಾವ್ ಕಾಲ ಆಯ್ತು ಅವ ಮಾಡ್ಸಿತೂ..ಒಂದ್ಜೊತ ಮಾಡುಸ್ಕಳಕ … Read more

ಪಂಜುವಿನ ಸಾವಿರ ಬರಹಗಾರರು

ಪಂಜುವಿನ ಸಾವಿರ ಬರಹಗಾರರು1 ಅಂಜಲಿ ರಾಮಣ್ಣ2 ಅಂಬಿಕಾ ಪ್ರಸಾದ್3 ಅಕ್ಕಿಮಂಗಲ ಮಂಜುನಾಥ4 ಅಕ್ಷತಾ ಕೃಷ್ಣಮೂರ್ತಿ5 ಅಕ್ಷಯ ಕಾಂತಬೈಲು6 ಅಕ್ಷಯಕುಮಾರ ಜೋಶಿ7 ಅಖಿಲೇಶ್ ಚಿಪ್ಪಳಿ8 ಅಜಯ್9 ಅಜಿತ್ ಭಟ್10 ಅಜ್ಜಿಮನೆ ಗಣೇಶ್11 ಅಣ್ಣಪ್ಪ ಆಚಾರ್ಯ12 ಅದಿತಿ ಎಂ. ಎನ್.13 ಅನಂತ ರಮೇಶ್14 ಅನಂತ್ ಕಳಸಾಪುರ15 ಅನಿತಾ16 ಅನಿತಾ ಕೆ. ಗೌಡ17 ಅನಿತಾ ನರೇಶ್ ಮಂಚಿ18 ಅನಿತಾ ಪಿ.ಪೂಜಾರಿ ತಾಕೊಡೆ19 ಅನಿರುದ್ಧ ಕುಲಕರ್ಣಿ20 ಅನಿಲ ತಾಳಿಕೋಟಿ21 ಅನಿಲ್ ಕುಮಾರ್ ವೆರ್ಣೇಕರ್22 ಅನಿಲ್ ಕುಲಕರ್ಣಿ23 ಅನೀಶ್ ಬಿ24 ಅನುಪಮಾ ಎಸ್ ಗೌಡ25 … Read more

ಕರೋನಾ ಕೋಲ್ಮಿಂಚು: ರವಿ ಶಿವರಾಯಗೊಳ

ನಮ್ಮೂರಿನ ಒಣಿಯ ಮನೆಯೊಂದರ ಜಗುಲಿಯಲ್ಲಿ ಕೂತ ಎರಡು ಪುಟಾಣಿ ಮಕ್ಕಳು ತಮ್ಮ ತೊದಲು ನುಡಿಯಲ್ಲೇ ಜುಗಲ್ಭಂದಿ ನಡೆಸುತಿದ್ದರು ಅದು ಹೀಗಿತ್ತು. “ಕರೋನಾ ಬಂತು ಕರೋನಾ” ಒಂದು ಮಗು ಅಂತು.‘ಜೀವನ ಆಯ್ತು ಹೈರಾಣ ’ ಮತ್ತೊಂದು ಮಗು ನುಡಿಯಿತು. ಮುಂದೆನ್ಮಾಡ್ತು ಕರೋನಾದಾರಿ ಬದಿಯಲ್ಲಿ ಶೌಚ ಮಾಡೋವರ್ನ್ನ ಓಡಿಸಿ ಬಿಟ್ತು ನೋಡಣ್ಣ. ಆ ಕ್ಷಣದಲ್ಲಿ ಅವರಿಬ್ಬರ ಆ ಜುಗಲ್ಭಂದಿ ಕೇಳಿದಾಗ ನಗು ಬಂತಾದರೂ ಅವರ ಮಾತು ಸತ್ಯವಾದವುಗಳು ಎಂದು ಅನ್ನಿಸದೇ ಇರಲಿಲ್ಲ. ಹೇಳಲಿಕ್ಕೆ ನನಗೆ ಮುಜುಗರ ಇಲ್ಲ ಓದಲಿಕ್ಕೆ ನಿಮಗೆ … Read more

ಅವ ಇನ್ನೆಂದೂ ಮರಳಿ ಬರಲಾರ: ಶೀಲಾ ಅರಕಲಗೂಡು

ರವಿ ಬೆಳಗೆರೆ ಎಂಬ ದೈತ್ಯ ಶಕ್ತಿ, ಪ್ರಖರ ಬೆಳಕು, ಬತ್ತದ ಪ್ರೀತಿಯ ಒರತೆ, ಅಕ್ಷರ ಮಾಂತ್ರಿಕ, ಇತ್ಯಾದಿ, ಇತ್ಯಾದಿ …… ಇದೇ ಮಾರ್ಚ್ 15ಕ್ಕೆ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ನಮ್ಮ ನಡುವೆ ಇಲ್ಲವೇ ಇಲ್ಲ! ಏನೋ ಆತುರವಿರುವಂತೆ ಅರವತ್ತೆರಡು ವರ್ಷಗಳಲ್ಲೇ ನೂರು ವರ್ಷಗಳಲ್ಲಿ ಮಾಡಬಹುದಾದುದನ್ನು ಮಾಡಿ, ನೋಡ ನೋಡುತ್ತಿದ್ದಂತೆ ಮರೆಯಾಗಿ ಹೋಗಿರುವುದು ಇಂದಿಗೂ ನಂಬಲಾಗುತ್ತಿಲ್ಲ. ಇಷ್ಟು ಬೇಗ ಅಲ್ಲೆಲ್ಲೋ ಹೋಗಿ ಮಾಡುವುದಿತ್ತಾದರೂ ಏನನ್ನು? ಏನು ಮಾಡುತ್ತಿರಬಹುದು ಈಗಲ್ಲಿ? ಇಷ್ಟೆಲ್ಲ ಜನ ಆತನಿಗಾಗಿ ಹಂಬಲಿಸಿ ನೆನೆಯುತ್ತಿರುವಾಗ ಅಲ್ಲಿ … Read more

ಅಗಲಿದ ಗೆಳೆಯನ ನೆನೆಯುತ್ತ…: ಅಶೋಕ ಶೆಟ್ಟರ್

ನನ್ನ ತುಂಬ ಹಳೆಯ ಗೆಳೆಯ, ನನಗಿರುವ ಕೆಲವೇ ಕೆಲವು ಏಕವಚನದ ಮಿತ್ರರಲ್ಲೊಬ್ಬ, ಲೇಖಕ, ಪತ್ರಕರ್ತ ರವಿ ಬೆಳಗೆರೆ ಅನಿರೀಕ್ಷಿತವಾಗಿ ಮತ್ತು ಅಕಾಲಿಕವಾಗಿ ಅಗಲಿದ್ದಾನೆ. ತನ್ನ ಆಪ್ತರು, ಸ್ನೇಹಿತರು, ಸಿಬ್ಬಂದಿ, ಕುಟುಂಬದ ಸದಸ್ಯರು ಬಂಧು-ಬಳಗದಲ್ಲಿ ಒಂದು ಶೂನ್ಯ ಭಾವವನ್ನುಳಿಸಿ ಹೊರಟುಹೋಗಿದ್ದಾನೆ. ಧಾರವಾಡದ ಕರ್ನಾಟಕ ಕಾಲೇಜಿನ ಪದವಿ ವಿದ್ಯಾಭ್ಯಾಸದ ಅವಧಿಯ ಮೂರು ವರ್ಷಗಳನ್ನು ಗೆಳೆಯ ಗೆಳತಿಯರ ಬೆಚ್ಚಗಿನ ಸ್ನೇಹದ ನಡುವೆ ಕಳೆದಿದ್ದ ನಾನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಪ್ರವೇಶ ದ್ವಾರದಲ್ಲಿ ಮೆಟ್ಟಿಲ ಮೇಲೆ … Read more

ಭಾವಕ ಮನಸ್ಸಿನ ಬುದ್ಧಿವಂತ ರವಿ: ಭುವನೇಶ್ವರಿ ಹೆಗಡೆ

ಎಂಭತ್ತರ ದಶಕದ ಕೊನೆಯ ಭಾಗ. ನಾನಾಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಎಂ ಎ. ಓದಲು ಬಂದವಳು. ಉತ್ತರ ಕನ್ನಡದ ಅನೇಕ ಹುಡುಗಿಯರು ನನ್ನಂತೆ ಹಾಸ್ಟೆಲಿನಲ್ಲಿ ಇದ್ದುದು ನಮ್ಮದೊಂದು ಗುಂಪು ರೆಡಿಯಾಗಿತ್ತು. ಶಿರಸಿಯ ನಮ್ಮ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು ಹಾಗೂ ನಾವು ಸೇರಿ ಕಟ್ಟಿದ ಸಾಹಿತ್ಯ ಬಳಗ ನನ್ನಲ್ಲಿ ಒಬ್ಬ ಭಾಷಣಕಾರಳನ್ನು ಹುಟ್ಟುಹಾಕಿತ್ತು. ಧಾರವಾಡದಲ್ಲಿಯೂ ಅದರ ವರಸೆ ಬಿಡದೆ ವಿಶ್ವವಿದ್ಯಾನಿಲಯ ಮಟ್ಟದ ಚರ್ಚಾ ಸ್ಪರ್ಧೆ ಗಳಿಗೆ ಹೆಸರು ಕೊಡುತ್ತಿದ್ದೆ. ಒಂದಲ್ಲ ಹಲವು ಚರ್ಚಾಸ್ಪರ್ಧೆಗಳಲ್ಲಿ ನಾನು ಭಾಗವಹಿಸಿದೆ. ಆಗೆಲ್ಲ … Read more

ಒಂದು ಸ್ನೇಹದ ಸುತ್ತ…: ವಿದ್ಯಾ ಭರತನಹಳ್ಳಿ

” ವಿದ್ಯಾ ಊಟ ಕೊಡೆ” ದೊಡ್ಡದಾದ ಧ್ವನಿ ಕೇಳಿಸಿತು. ಇದು ರವಿಯವರ ಧ್ವನಿಯೆಂದು ಗೊತ್ತಾಗಿ ಕೈ ತೊಳೆಯುತ್ತಿದ್ದವಳು ಓಡಿ ಬಂದೆ. ದೊಡ್ಡಪ್ಪ ಅನ್ನುತ್ತಾ ಮಗಳು ಪೂರ್ವಿಯೂ ಹೊರಬಂದಳು. ಉಮೇಶ್ ಮತ್ತು ವಾದಿರಾಜ ಅವರನ್ನು ವ್ಹೀಲ್ ಚೇರಲ್ಲಿ ಕುಳಿಸಿಕೊಂಡು ಒಳಗೆ ಕರೆದುಕೊಂಡು ಬರುತ್ತಿದ್ದರು. “ನಿಮ್ಮನ್ನ ನೋಡ್ಬೇಕು ಅನಸ್ತು ಬಂದ್ಬಿಟ್ನೆ. ” ಅಂದರು. ಒಂದು ಕಾಲದಲ್ಲಿ ಸಿಂಹದಂತಿದ್ದವರು ಅದೇ ಧ್ವನಿ ಇದ್ದರೂ ಮಗುವಿನಂತೆ ಕುಳಿತಿದ್ದು ನೋಡಿ ಸಂಕಟವಾಗುತ್ತಿದ್ದಾಗ, ಪೂರ್ವಿಯ ಹತ್ತಿರ ಅವಳ ಉದ್ಯೋಗ, ಮುಂದಿನ ಓದು ಎಲ್ಲ ವಿಚಾರಿಸಿದರು. ನನ್ನ … Read more

ಮುಳುಗದ ರವಿ…..: ಶೋಭಾ ಶಂಕರಾನಂದ

“ಪ್ರಿಯ ವೀಕ್ಷಕರೇ”…ಎಂದ ಕೂಡಲೇ…!!!! ಕೇಳುಗರು ಮತ್ತು ನೋಡುಗರೆಲ್ಲರೂ ಒಂದು ಕ್ಷಣ ತಮ್ಮನ್ನೇ ಮರೆತು ಮಂತ್ರ ಮುಗ್ಧರಂತೆ ಅತ್ತ ಗಮನವಿಟ್ಟು ಕೇಳಬೇಕು, ನೋಡಬೇಕು, ಹಾಗಿತ್ತು ಆ ಧ್ವನಿಯ ಆತ್ಮೀಯತೆ ಮತ್ತು ಗತ್ತು. ಆ ಧ್ವನಿ ಇನ್ನಿಲ್ಲ ಎಂದಾಗ ಏನೋ ಒಂಥರಾ ಸಂಕಟ ಮತ್ತು ತಳಮಳ. ಕಾರಣ… ಬಹುಶಃ ನಂಗೂ ಗೊತ್ತಿಲ್ಲ…..!!!??? ತಮ್ಮ ಬದುಕಿನುದ್ದಕ್ಕೂ ಬರವಣಿಗೆಯ ಮೂಲಕ ಹೋರಾಟವನ್ನೇ ಮಾಡುತ್ತಾ , ಹೇಳುವ ವಿಷಯವನ್ನು ನೇರವಾಗಿ ಮುಖಕ್ಕೆ ಹೊಡೆದ ಹಾಗೆ ಹೇಳಿ, ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದು, ಅವರ … Read more

ಬೆಳಗಿದ ರವಿಗೊಂದು ಅಕ್ಷರ ಮಾಲೆ: ಸಾವಿತ್ರಿ ಹಟ್ಟಿ

ರವಿ ಬೆಳಗೆರೆ ಅವರ ಬಗ್ಗೆ ಎಲ್ಲವನ್ನೂ ಬರೆಯುವುದೆಂದರೆ ಸಾಗರದ ನೀರನ್ನು ಕೊಡದಲ್ಲಿ ಹಿಡಿದಿಡುವೆನೆಂಬ ಹುಂಬತನ. ಅವರ ಪತ್ರಿಕೆಗಳು ಮತ್ತು ಲೇಖನಗಳನ್ನು ಓದಿ ಅವರನ್ನು ಪೂರಾ ಅರ್ಥ ಮಾಡಿಕೊಂಡಿದ್ದೇವೆ ಎನ್ನುವವರಿಗೆ ಅವರ ಬಗ್ಗೆ ತಿಳಿಯದ ಸಂಗತಿಗಳೂ ಹಲವು ಇವೆ ಅಂತ ಹೇಳಬಹುದು. ಅವರ ಲೇಖನಗಳೆಂದರೆ ಸ್ಫೂರ್ತಿಯ ಚಿಲುಮೆಗಳು. ಖಾಸ್ ಬಾತ್ ಮತ್ತು ಬಾಟಮ್ ಐಟಮ್ ಅಂಕಣಗಳನ್ನು ಓದಲೆಂದೇ ಮುಂದಿನ ಸಂಚಿಕೆಗಾಗಿ ಕಾಯ್ದು ನಿಲ್ಲುತ್ತಿದ್ದ ಅಗಾಧ ಸಂಖ್ಯೆಯ ಓದುಗ ಅಭಿಮಾನಿಗಳು ಅವರಿಗಿದ್ದರು. ಆ ಬಳಗದಲ್ಲಿ ನಾನೂ ಒಬ್ಬಳು. ಬದುಕಿನಲ್ಲಿ ನೊಂದ … Read more

ದಿಲ್ ನೆ ಫಿರ್ ಯಾದ್ ಕಿಯಾ….: ಪಿ.ಎಸ್. ಅಮರದೀಪ್.

ಫೆಬ್ರವರಿ-21, 1998. ಆ ದಿನ ಎಂತದೋ ಬೇಸರ. ಅನಾಹುತ ಮಾಡಿಕೊಳ್ಳುವಂಥ ಯಾವ ಸೀರಿಯಸ್ಸೂ ಇಲ್ಲ. ಆದರೂ ಜಗತ್ತು ತಲೆ ಮೇಲೆ ಬಿದ್ದೋರ ಥರಾ ಶನಿವಾರ ಆಫೀಸ್ ಮುಗಿಸಿಕೊಂಡವನೇ ಬಳ್ಳಾರಿಯ ರಾಯಲ್ ಸರ್ಕಲ್ ದಾಟಿದರೆ ಈಗಿನ ಹಳೇ ಬಸ್ ನಿಲ್ದಾಣದ ತನಕ ಕಾಲೆಳೆದುಕೊಂಡು ಹೊರಟೆ. ನಿಲ್ದಾಣದಿಂದ ಹೊರಬಂದ ಬಸ್ಸಿನ ಬೋರ್ಡ್ ನೋಡಿದೆ. ಮಂತ್ರಾಲಯ ಅಂತಿತ್ತು. ಯಾಕೆ ಹೋಗಬೇಕೆನ್ನಿಸಿತೋ ಏನೋ. ಸೀದಾ ಬಸ್ ಹತ್ತಿ ಕುಳಿತೆ. Actually, ನಾನು ಆ ದಿನ ಹಗರಿಬೊಮ್ಮನಹಳ್ಳಿಗೆ ಹೊರಡಬೇಕಿತ್ತು. ಹತ್ತಿ ಕುಳಿತದ್ದು ಮಾತ್ರ ಮಂತ್ರಾಲಯದ … Read more

ಆಪ್ತ ಬೆಳಗೆರೆ: ರವಿ ಶಿವರಾಯಗೊಳ

ರವಿ ಬೆಳಗೆರೆ ದೈತ್ಯ ಬರಹಗಾರ. ಅಕ್ಷರ ಮಾಂತ್ರಿಕ. ಸಹಸ್ರಾರು ಓದುಗರ ಹುಟ್ಟು ಹಾಕಿದ ಪ್ರತಿಭಾವಂತ ಲೇಖಕ. ಮುಂದೆಂದೂ ಮತ್ತೊಬ್ಬ ರವಿ ಬೆಳಗೆರೆಯನ್ನ ಕಾಣಲಾರೆವು. ಪತ್ರಿಕೋದ್ಯಮದಲ್ಲಿ ಬರವಣಿಗೆಯಲ್ಲಿ ಸ್ವಂತ ಪ್ರತಿಭೆ ಮುಂಖಾಂತರವೆ ಹೆಮ್ಮರವಾಗಿ ಬೆಳೆದು ನಿಂತ ಗಟ್ಟಿಗ ರವಿ ಬಾಸ್. ಕೂತು ಬರೆಯುವ; ಗಂಟೆ ಗಂಟೆಗಟ್ಟಲೆ ಓದುವ ಓದಿದ್ದನ್ನು ಇಷ್ಟವಾದದ್ದನ್ನು ತನ್ನದೇ ಓದುಗರೊಂದಿಗೆ ಆತ್ಮೀಯರೊಂದಿಗೆ ಹಂಚಿಕೊಳ್ಳುವ ಮನೋಭಾವದ ವ್ಯಕ್ತಿ. ಮಿತ್ರರನ್ನ ಓದುಗರನ್ನ ಹಿಂಬಾಲಕರ ಸಮ ಸಮಸಂಖ್ಯೆಯಲ್ಲಿ ಶತ್ರುಗಳನ್ನೂ ಹೊಂದಿದ್ದ ರವಿ ಬೆಳಗೆರೆ ಕಡೆಗೂ ಯಾರಿಗೂ ಜಗ್ಗದೆ ಬಗ್ಗದೆ ತನ್ನಿಷ್ಟದಂತೆ … Read more