ಕಥೆಗಾರರ ದೇಶಕಾಲವ ತೊರೆದು ಓದುಗನ ಎಲ್ಲೆ ಪ್ರವೇಶಿಸುವ ಕತೆಗಳು: ಸ್ವಾಲಿ ತೋಡಾರ್
ಒಂದು ಕೃತಿಗೆ ಮುಖ್ಯವಾಗಿ ಎರಡು ಗುಣಗಳಿರಬೇಕು. ಓದುಗನನ್ನು ಸೆಳೆದುಕೊಳ್ಳುವ ಆಕರ್ಷಣೆ ಮತ್ತು ಓದುಗನೊಳಗಿನ ತರ್ಕಶೀಲತೆಯನ್ನು ವಿಶಾಲಗೊಳಿಸುವ ಹೂರಣ. ಲಂಕೇಶರು ಇದನ್ನೇ ರಂಜನೆ ಮತ್ತು ಪ್ರಚೋದನೆ ಎಂದು ಕರೆದಿದ್ದಾರೆ. ಬೋಧನೆ ಎನ್ನುವುದು ಕೃತಿಕಾರನ ಪ್ರಜ್ಞೆ, ಪ್ರಬುದ್ಧತೆಯನ್ನು ಆಧರಿಸಿದ ನಂತರದ ಎತ್ತರ. ಅದು ಸಾಹಿತ್ಯ ಕೃತಿಯಾಗಿರಲಿ, ವೈಚಾರಿಕ ಹೊತ್ತಿಗೆಯಾಗಿರಲಿ ರಂಜನೆ, ಪ್ರಚೋದನೆಗಳು ತುಂಬಾ ಮುಖ್ಯ. ಇತ್ತೀಚೆಗೆ ಪ್ರಕಟವಾಗುತ್ತಿರುವ ಕೃತಿಗಳಲ್ಲಿ ‘ಎಲ್ಲೆ ತೊರೆದ ಕಥೆಗಳು’ ಸಂಕಲನ ಅಂತಹ ಒಂದು ಕೃತಿ ಎನ್ನಬಹುದು. ಗಿರೀಶ್ ತಾಳಿಕಟ್ಟೆ ಅವರು ಕನ್ನಡಕ್ಕೆ ಅನುವಾದಿಸಿದ ಭಾರತದ ಶ್ರೇಷ್ಠ … Read more