ಬೇಸಗೆ ದಿನಗಳ ಮುಂಜಾವಿನ ನಡಿಗೆಯಲ್ಲಿ ಕಂಡಂತೆ: ಪಿ.ಎಸ್. ಅಮರ ದೀಪ್
ಬೆಳಿಗ್ಗೆ ಐದೂವರೆಗೆಲ್ಲ ಅಲಾರ್ಮ್ ಹೊಡೆದುಕೊಳ್ಳುತ್ತದೆ. ಇನ್ನೊಂದೈದು ನಿಮಿಷ ಎಂಬಂತೆ ಮಗ್ಗುಲು ಬದಲಿಸಿ ನೋಡುವುದರಲ್ಲೇ ಹತ್ತು ನಿಮಿಷ ದಾಟಿರುತ್ತದೆ. ಎದ್ದು ದೇಹ ವಿಸರ್ಜನೆಗಳನ್ನು ಮುಗಿಸಿ, ಹಲ್ಲುಜ್ಜಿ ಬರ್ಮುಡಾ, ಮೇಲೊಂದು ತೆಳು ಟೀಶರ್ಟ್ ಒಳಗೆ ತೂರಿಕೊಂಡು ಬೈಕ್ ಸ್ಟಾರ್ಟ್ ಮಾಡುವುದರೊಳಗೆ ಒಮ್ಮೆ ಕೃಷ್ಣನಿಗೆ ಕರೆ ಮಾಡುತ್ತೇನೆ. ” ಈಗ ಮನೆ ಬಿಡ್ತಿದೀನಿ ಸರ್” ಅನ್ನುತ್ತಾನೆ. ಅವನು ಸೈಕಲ್ ಏರಿ ಬಂದು, ನಾನು ಬೈಕ್ ನಿಲ್ಲಿಸುವುದಕ್ಕೂ ಹೊಸದಾಗಿ ಲೇ ಔಟ್ ಆದ ಜಾಗದ ಎಂಟ್ರೆನ್ಸ್ ನಲ್ಲಿರುತ್ತೇವೆ. ರಾತ್ರಿ ಪೂರ್ತಿ ಕಾದು, ಬೆವರಿ, … Read more