”ಮುನ್ನೂರು ರೂಪಾಯಿ ಸಾರ್…”, ಅಂದಿದ್ದೆ ನಾನು. ಪರಿಚಿತ ಹಿರಿಯರೊಬ್ಬರು ನನ್ನ ಈ ಮಾತನ್ನು ಕೇಳಿ ನಿಜಕ್ಕೂ ಹೌಹಾರಿಬಿಟ್ಟಿದ್ದರು. ಅಂದು ನಾವು ಮಾತನಾಡುತ್ತಿದ್ದಿದ್ದು ಕ್ಷೌರದ ಬಗ್ಗೆ. ಊರಿನಲ್ಲಿ ನಲವತ್ತು-ಐವತ್ತು ರೂಪಾಯಿಗಳಿಗೆ ಮುಗಿದುಹೋಗುತ್ತಿದ್ದ ಹೇರ್ ಕಟ್ಟಿಂಗಿಗೆ ಅಷ್ಟೊಂದು ಹಣ ಸುರಿಯುವಂಥದ್ದೇನಿದೆ ಎನ್ನುವ ಅಚ್ಚರಿ ಅವರದ್ದು. ‘ಇವೆಲ್ಲ ಬೇಕಾ ನಿಂಗೆ’ ಎಂದು ಕಣ್ಣಲ್ಲೇ ನುಂಗುವಂತೆ ನನ್ನನ್ನು ನೋಡಿದರು. ಎಲ್ಲರಿಗೂ ಈಗ ಶೋಕಿಯೇ ಬದುಕಾಗಿಬಿಟ್ಟಿದೆ ಎಂದು ಬೈದೂಬಿಟ್ಟರು. ಬೈದಿದ್ದು ನನಗೋ ಅಥವಾ ಕ್ಷೌರ ಮಾಡಿಸಿದವನಿಗೋ ಗೊತ್ತಾಗಲಿಲ್ಲ. ಆದರೆ ಭೌತಿಕವಾಗಿ ನಾನೇ ಅಲ್ಲಿ ಇದ್ದಿದ್ದರ […]
ಪ್ರಸಾದ್ ಕೆ ಅಂಕಣ
ಓದಿ ಓದಿ ಲವ್ವೂ ಆಗಿ: ಪ್ರಸಾದ್ ಕೆ.
“ಪ್ರೀತಿಯು ಸದಾ ಕರುಣಾಮಯಿ. ಅದು ತಾಳ್ಮೆಯ ಪ್ರತಿರೂಪ. ಮತ್ಸರಕ್ಕೆ ಅಲ್ಲಿ ಜಾಗವಿಲ್ಲ. ಪ್ರೀತಿಯು ವೃಥಾ ಜಂಭ ಕೊಚ್ಚಿಕೊಳ್ಳುವುದನ್ನೋ, ದುರಹಂಕಾರವನ್ನೋ ತೋರಿಸುವುದಿಲ್ಲ. ಪ್ರೀತಿ ಒರಟೂ ಅಲ್ಲ, ಸ್ವಾಥರ್ಿಯೂ ಅಲ್ಲ. ಪ್ರೀತಿಯು ಸುಖಾಸುಮ್ಮನೆ ಎಲ್ಲವನ್ನೂ ತಪ್ಪುತಿಳಿದುಕೊಳ್ಳುವುದಿಲ್ಲ. ದ್ವೇಷವನ್ನೂ ಅದು ತನ್ನೊಳಗೆ ಬಿಟ್ಟುಕೊಳ್ಳಲಾರದು…'' ಹೀಗೆ ತಣ್ಣಗೆ ಶಾಂತಚಿತ್ತಳಾಗಿ ಹೇಳುತ್ತಾ ಹೋಗುತ್ತಿದ್ದಿದ್ದು `ಎ ವಾಕ್ ಟು ರಿಮೆಂಬರ್' ಚಿತ್ರದ ನಾಯಕಿ ಜೇಮಿ. ಹಾಗೆ ನೋಡಿದರೆ ಪ್ರೇಮಕಥೆಯ ಸುತ್ತ ಹೆಣೆದಿರುವ ನೂರಾರು ಚಲನಚಿತ್ರಗಳಲ್ಲಿ ಇದು ಅತ್ಯುತ್ತಮ ಚಿತ್ರವೇನೂ ಅಲ್ಲದಿದ್ದರೂ ಜೇಮಿ ಪಾತ್ರಕ್ಕೆ ಜೀವವನ್ನು ತುಂಬುವ […]
ಪಾಪದ ನಾಗರಿಕನೂ, ಪಾಲಿಟಿಕ್ಸೂ…: ಪ್ರಸಾದ್ ಕೆ.
ಆಗ ನಾನು ನಾಲ್ಕನೇ ಅಥವಾ ಐದನೇ ತರಗತಿಯಲ್ಲಿದ್ದೆ ಅನಿಸುತ್ತೆ. ಆ ದಿನ ನಮ್ಮ ಶಾಲಾಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಸ್ಥಳೀಯ ರಾಜಕಾರಣಿಯೊಬ್ಬರು ಬಂದಿದ್ದರು. ಉಡುಪಿ ಕ್ಷೇತ್ರದಲ್ಲಿ ತಕ್ಕಮಟ್ಟಿನ ಹೆಸರು ಮಾಡಿದ್ದ ರಾಜಕಾರಣಿ ಅವರು. ಪ್ರಾರ್ಥನೆ, ಉದ್ಘಾಟನೆ ಇತ್ಯಾದಿಗಳನ್ನು ಮುಗಿಸಿ ಅಧ್ಯಕ್ಷೀಯ ಭಾಷಣವು ಶುರುವಾಯಿತು ನೋಡಿ. ಅಚ್ಚರಿಯೆಂದರೆ ಆ ವಯಸ್ಸಿನಲ್ಲೂ ನಾನು ಭಾಷಣಗಳನ್ನು ಆಸಕ್ತಿಯಿಂದ ಕೇಳುತ್ತಿದ್ದೆ. ತೀರಾ ನೀರಸವಾಗಿದ್ದ ಉದಾಹರಣೆಗಳನ್ನು ಬಿಟ್ಟರೆ ಸಾಮಾನ್ಯವಾಗಿ ಭಾಷಣಗಳು ನನಗೆ ಬೋರುಹುಟ್ಟಿಸುತ್ತಿರಲಿಲ್ಲ. ಹೀಗೆ ವೇದಿಕೆಯಲ್ಲಿ ಮಾತನಾಡುತ್ತಲೇ “ನಾನು ಹಲವಾರು ಶಾಲೆಗಳಿಗೆ ವಿವಿಧ ಕಾರ್ಯಕ್ರಮಗಳಿಗೆಂದು ಹೋಗುತ್ತಿರುತ್ತೇನೆ. […]
ಹನ್ನೊಂದು ದಿನಗಳ ವನವಾಸ (ಕೊನೆಯ ಭಾಗ): ಪ್ರಸಾದ್ ಕೆ.
ಇಲ್ಲಿಯವರೆಗೆ ಇವೆಲ್ಲವೂ ಕಮ್ಮಿಯೆಂಬಂತೆ ಜೂಲಿಯಾನಳ ಹೆಜ್ಜೆಹೆಜ್ಜೆಗೂ ಅಪಾಯಗಳಿದ್ದವು. ನದಿಯ ಬದಿಯಲ್ಲಿ ನಡೆಯುತ್ತಿದ್ದರೆ ಅಪಾಯಕಾರಿ ಸ್ಟಿಂಗ್ ರೇಗಳಿಂದ ಮತ್ತು ನೋಡಲು ಮೊಸಳೆಗಳಂತಿರುವ ಕಾಯ್ಮನ್ ಗಳಿಂದ ರಕ್ಷಿಸಿಕೊಂಡು ನಡೆಯಬೇಕಾಗಿತ್ತು. ಇನ್ನು ಕಾಲ್ನಡಿಗೆಯು ನಿಧಾನವಾಗುತ್ತಿದೆ ಎಂದು ಅರಿವಾದಾಗಲೆಲ್ಲಾ ಆಗಾಗ ಈಜುತ್ತಲೂ ಇದ್ದುದರಿಂದ ಜೂಲಿಯಾನಳ ಬೆನ್ನಿನ ಚರ್ಮವು ಸೂರ್ಯನ ಬಿಸಿಲಿಗೆ ಸುಟ್ಟಂತಾಗಿ ಬಿಳಿಚಿಕೊಂಡಿತ್ತು. ಕೆಂಡ ಸುರಿದಂತೆ ನೋವಿನಿಂದ ಉರಿಯುತ್ತಿದ್ದ ತನ್ನ ಬೆನ್ನನ್ನು ಮೆಲ್ಲನೆ ಮುಟ್ಟಿ ನೋಡಿದಾಗ ಅವಳ ಬೆರಳುಗಳಿಗೆ ಸೋಕಿದ್ದು ರಕ್ತ. ಇನ್ನು ಮರದ ದಿಮ್ಮಿಗಳೂ ಕೂಡ ನದಿಯಲ್ಲಿ ತೇಲುತ್ತಿದ್ದರಿಂದ ಅವುಗಳಿಗೆ ಢಿಕ್ಕಿಯಾಗದಂತೆ […]
ಹನ್ನೊಂದು ದಿನಗಳ ವನವಾಸ (ಭಾಗ ೧): ಪ್ರಸಾದ್ ಕೆ.
ಅವಳು ಮೆಲ್ಲನೆ ತನ್ನ ಕಣ್ಣುಗಳನ್ನು ತೆರೆಯಲು ಪ್ರಯತ್ನಿಸಿದಳು. ಕಣ್ಣೆಲ್ಲಾ ಮಂಜು. ಎದ್ದೇಳಲು ಎಷ್ಟು ಪ್ರಯತ್ನಿಸಿದರೂ ಶಕ್ತಿಯೇ ಸಾಲುತ್ತಿಲ್ಲ. ಒದ್ದೆ ನೆಲವು ತನ್ನ ದೇಹದ ಶಕ್ತಿಯನ್ನೆಲ್ಲಾ ಹೀರಿ ಕಚ್ಚಿ ಹಿಡಿದಿರುವಂತೆ. ಹೀಗೆ ಅದೆಷ್ಟು ಬಾರಿ ಪ್ರಯತ್ನಿಸಿದಳೋ ಏನೋ ಆ ಹುಡುಗಿ. ಕೊನೆಗೂ ಹಲವು ಘಂಟೆಗಳ ನಂತರ ಪ್ರಜ್ಞೆಯು ಮರಳಿ ಬಂದಾಗ ತಾನು ದಪ್ಪನೆಯ ಕುಚರ್ಿಯಂತಿರುವ ಆಕೃತಿಯ ಕೆಳಗೆ ಮುದುಡಿ ಮಲಗಿರುವುದು ಅವಳಿಗೆ ಗೊತ್ತಾಗಿದೆ. ಮಲಗಿದ ಭಂಗಿಯಲ್ಲೇ ಪ್ರಯಾಸದಿಂದ ಕಣ್ಣನ್ನಾಡಿಸಿದರೆ ಸುತ್ತಲೂ ಕಾಡೇ ಕಾಡು. ಪ್ರಯಾಸದಿಂದ ತಲೆಯೆತ್ತಿ ನೋಡಿದರೆ ತಲೆಯ […]
ಕರಾಳ ಶುಕ್ರವಾರ: ಪ್ರಸಾದ್ ಕೆ.
ಕಳೆದ ಹನ್ನೆರಡು ವರ್ಷಗಳಿಂದ ನಿನ್ನ ಹೊಟ್ಟೆಪಾಡಿಗೆಂದಿದ್ದ ಮೆಕ್ಯಾನಿಕ್ ಉದ್ಯೋಗವೂ ಈಗ ಕಳೆದುಹೋಗಿದೆ. ಒಳ್ಳೆಯ ಉದ್ಯೋಗವಾಗಿತ್ತದು. ಒಳ್ಳೆಯ ಬಾಸ್ ಕೂಡ ಇದ್ದ. ನಿನ್ನ ಬಾಸ್ ನಿನ್ನ ಉದ್ಯೋಗದ ಬಗ್ಗೆ ಹೇಳುತ್ತಾ ಇದಕ್ಕೇನೂ ಭದ್ರತೆಯಿಲ್ಲವೆಂದೂ ಮತ್ತು ಇದು ದೇಶದ ಆಥರ್ಿಕತೆಯದ್ದೇ ಸಮಸ್ಯೆಯೆಂದೂ ಹೇಳಿದ್ದ. ಅವನ ಮಾತುಗಳ ಪ್ರಕಾರ ನಿನ್ನ ಬಗ್ಗೆ ಅವನಿಗೆ ಕಾಳಜಿಯಿತ್ತು. ವಿಚಿತ್ರವೆಂದರೆ ಅವನ ಮಾತನ್ನು ನೀನು ನಂಬಿಯೂ ಬಿಟ್ಟೆ. ಇದ್ದ ಒಂದು ಉದ್ಯೋಗವನ್ನು ಕಳೆದುಕೊಂಡ ನಂತರವಂತೂ ಭಾರವಾದ ಹೃದಯವನ್ನು ಮತ್ತು ಚುರುಗುಟ್ಟುವ ಹೊಟ್ಟೆಯನ್ನು ಸಂಭಾಳಿಸುತ್ತಾ ಅಷ್ಟಕ್ಕೂ ಆಗಿದ್ದೇನು […]
ಭಾಷಣ – ಭೀಷಣ – ಭೂಷಣ: ಪ್ರಸಾದ್ ಕೆ.
“ಈ ಎರಡು ಮಾತುಗಳನ್ನು ಹೇಳಿ ನಾನು ನನ್ನ ಮಾತನ್ನು ಮುಗಿಸುತ್ತಿದ್ದೇನೆ'', ಎಂದು ಆ ಗಣ್ಯರು ಹೇಳುತ್ತಿದ್ದರು. ಹೀಗೆ ವೇದಿಕೆಯಲ್ಲಿ ಮೈಕಿನ ಮುಂದೆ ಆ ಗಣ್ಯರು ಹೇಳುತ್ತಿದ್ದಿದ್ದು ಹತ್ತಕ್ಕೂ ಹೆಚ್ಚಿನ ಬಾರಿ. ಅದು ಶಾಲಾ ವಾಷರ್ಿಕೋತ್ಸವ ಒಂದರ ಸಮಾರಂಭ. ಆಮಂತ್ರಣ ಪತ್ರಿಕೆಯಲ್ಲಿ ಏಳು ಘಂಟೆಗೆ ಕಾರ್ಯಕ್ರಮವು ಶುರುವಾಗಲಿದೆಯೆಂದು ಮುದ್ರಿಸಿದ್ದರೂ ಶುರುವಾಗಿದ್ದು ಎಂಟೂವರೆಗೆ. ಮೊದಲು ಗಣ್ಯರ ಭಾಷಣ, ಸನ್ಮಾನ ಕಾರ್ಯಕ್ರಮ, ಬಹುಮಾನ ವಿತರಣೆ ಇತ್ಯಾದಿಗಳು, ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಂಬುದು ಆ ಶಾಲೆಯಲ್ಲಿ ಹಲವು ವರ್ಷಗಳಿಂದಲೂ ನಡೆದು ಬಂದ […]
“ಅಭಿಮಾನಿ ದೇವರುಗಳ ಲೀಲೆಗಳು”: ಪ್ರಸಾದ್ ಕೆ.
“ಭಯ್ಯಾ… ನನ್ನ ಭಾಯಿಯ ಸಿನೆಮಾ ಬರುತ್ತಿದೆ'', ಎಂದು ಕುಣಿಯುತ್ತಾ ಹೇಳಿದ್ದ ಆತ. ಹೀಗೆ ಉತ್ಸಾಹದಿಂದ ನನ್ನ ಜೊತೆ ಮಾತನಾಡುತ್ತಿದ್ದಿದ್ದು ದೆಹಲಿಯ ಮಯೂರ್ ವಿಹಾರ್ ನಿವಾಸಿಯೂ, ನನ್ನ ತಮ್ಮನಂತಿದ್ದ ಮಿತ್ರನೂ ಆಗಿದ್ದ ಸೋನು. ಇಲ್ಲಿ ತನ್ನ “ಭಾಯಿ'' ಎಂದು ಭುಜಕುಣಿಸುತ್ತಾ ಸೋನು ಕರೆಯುತ್ತಿದ್ದಿದ್ದು ನಟ ರಣಬೀರ್ ಕಪೂರ್ ನನ್ನು. ಸೋನು ರಣಬೀರ್ ಕಪೂರ್ ನ ಡೈ-ಹಾರ್ಡ್ ಅಭಿಮಾನಿ. ಅತ್ತ ನಟ ರಣಬೀರ್ ಕಪೂರ್ ಕೆಮ್ಮಿದರೆ ಇತ್ತ ಎದೆ ನೋವಾಗುತ್ತಿದ್ದಿದ್ದು ಸೋನುವಿಗೆ. ನಟ ರಣಬೀರ್ ಕಪೂರ್ ನ ನೆಲಕಚ್ಚಿದ ಚಿತ್ರಗಳ […]
ನಮ್ಮ ನಡುವಿನ ಗೋಮುಖವ್ಯಾಘ್ರರು: ಪ್ರಸಾದ್ ಕೆ.
“ಹೌದು, ಕಳೆದ ಕೆಲ ವರ್ಷಗಳಿಂದ ಈ ಕೃತ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ಅವುಗಳೆಲ್ಲಾ ಹತ್ತರಿಂದ ಹದಿನೈದು ವರ್ಷದ ಮಕ್ಕಳು'' ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ಹೇಳುತ್ತಾ ಹೋಗುತ್ತಿದ್ದ ಆತನನ್ನು ನೋಡಿ ನನಗೆ ದಿಗಿಲಾಗಿದ್ದು ಸತ್ಯ. ಈಗಷ್ಟೇ ಹತ್ತನೇ ತರಗತಿಯ ಕ್ಲಾಸಿನಿಂದ ಬಂಕ್ ಮಾಡಿಕೊಂಡು ಬಂದವನೇನೋ ಎಂಬಂತಿದ್ದ, ಇವನಿಗೇನಾದರೂ ಪೋಲೀಸರು ಎರಡೇಟು ಬಿಟ್ಟರೆ ಸತ್ತೇಹೋಗುವನೇನೋ ಎಂಬಂತಿದ್ದ ಈ ನರಪೇತಲನನ್ನು ನೋಡಿ ನಾನು ಒಂದು ಕ್ಷಣ ನಕ್ಕೂ ಬಿಟ್ಟಿದ್ದೆ. ವಿಪಯರ್ಾಸವೆಂದರೆ ಈತನ ಕೃತ್ಯಗಳನ್ನು ಟೆಲಿವಿಷನ್ ವರದಿಯಲ್ಲಿ ನೋಡಿದ ನಂತರ ನಾನು ನಗುವ […]
ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಕೊನೆಯ ಭಾಗ): ಪ್ರಸಾದ್ ಕೆ.
ಇಲ್ಲಿಯವರೆಗೆ ಕಾರ್ಲಾ ಹೊಮೋಲ್ಕಾ ಮಹಿಳೆಯರ ಕಿಂಗ್-ಸ್ಟನ್ ಜೈಲಿನಲ್ಲಿ ಬಂಧಿಯಾಗಿರುತ್ತಾಳೆ. ಮುಂದೆ 1997 ರಲ್ಲಿ ಆಕೆಯನ್ನು ಕ್ಯೂಬೆಕ್ ನಗರದ ಜೋಲಿಯೆಟ್ ಇನ್ಸ್ಟಿಟ್ಯೂಷನ್ ಗೆ ವರ್ಗಾಯಿಸಲಾಗುತ್ತದೆ. ಹಲವು ಮನಃಶಾಸ್ತ್ರಜ್ಞರು, ನ್ಯಾಯಾಲಯದ ಅಧಿಕಾರಿಗಳು, ಅಪರಾಧ ವಿಭಾಗದ ತಜ್ಞರ ತಂಡಗಳು ಸತತವಾಗಿ ಕಾರ್ಲಾಳನ್ನು ನಿಯಮಿತವಾಗಿ ಭೇಟಿ ಮಾಡುತ್ತಾ, ಅಗತ್ಯ ಚಿಕಿತ್ಸೆಯನ್ನು ನೀಡುತ್ತಿರುತ್ತವೆ. ಕಾರ್ಲಾ ಹೊಮೋಲ್ಕಾ ತೀವ್ರವಾದ ಗೃಹದೌರ್ಜನ್ಯಕ್ಕೆ ಬಲಿಯಾದ ಹೆಣ್ಣೆಂಬುದು ಸತ್ಯವಾದರೂ, ತನ್ನ ಪತಿಯ ಹಿಂಸಾಮನೋಭಾವಗಳೆಡೆಗೆ ವಿಪರೀತ ಎನ್ನುವಷ್ಟು ವ್ಯಾಮೋಹವಿದ್ದುದು ಅಧ್ಯಯನಗಳಿಂದಲೂ ತಿಳಿದುಬಂದವು. ಇಂಪಲ್ಸಿವ್ ಮತ್ತು ಸ್ಯಾಡಿಸ್ಟ್ ಗುಣಗಳನ್ನು ತನ್ನ ವ್ಯಕ್ತಿತ್ವದಲ್ಲಿ ಹೊಂದಿದ್ದ […]
ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 10): ಪ್ರಸಾದ್ ಕೆ.
ಇಲ್ಲಿಯವರೆಗೆ ನ್ಯಾಯಮೂರ್ತಿ ಆರ್ಚಿ ಕ್ಯಾಂಪ್ಬೆಲ್ ರ ವರದಿಯು ಸ್ಕಾರ್-ಬೋರೋ ಸರಣಿ ಅತ್ಯಾಚಾರ ಪ್ರಕರಣಗಳಲ್ಲದೆ ಉಳಿದ ಪ್ರಕರಣಗಳ ಮೇಲೂ ಬೆಳಕು ಚೆಲ್ಲಿ ಉತ್ತಮ ಒಳನೋಟವನ್ನು ಕೊಡುತ್ತದೆ. ಕಾರ್ಲಾ ಹೊಮೋಲ್ಕಾಳ ತಂಗಿ ಟ್ಯಾಮಿ ಹೊಮೋಲ್ಕಾಳ “ಆಕಸ್ಮಿಕ ಮತ್ತು ಸ್ವಾಭಾವಿಕ'' ಸಾವೆಂದು ತಪ್ಪಾಗಿ ದಾಖಲಾದ ಘಟನೆಯನ್ನು ಉಲ್ಲೇಖಿಸುತ್ತಾ, ಟ್ಯಾಮಿಯ ಎಡಕೆನ್ನೆ, ಮೇಲ್ದುಟಿ ಮತ್ತು ಎಡಭುಜದ ಮೇಲೆ ಕಂಡುಬಂದಿದ್ದ ದಟ್ಟಕೆಂಪುಕಲೆಗಳ ಬಗ್ಗೆ ವರದಿಯು ಒತ್ತಿಹೇಳುತ್ತದೆ. ಹಚ್ಚೆಯಂತೆ ದಟ್ಟವಾಗಿ ಮೂಡಿಬಂದಿದ್ದ ಈ ಅಪರೂಪದ ಕಲೆಗಳನ್ನು ಕಡೆಗಣಿಸುವುದು ಸಾಧ್ಯವೇ ಇರಲಿಲ್ಲ. ಅಸಲಿಗೆ ಆಕೆಯ ಉಸಿರಾಟ ನಿಂತುಹೋದಾಗಲೇ […]
ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 9): ಪ್ರಸಾದ್ ಕೆ.
ಇಲ್ಲಿಯವರೆಗೆ ಈ ಕುಖ್ಯಾತ ಪ್ರಕರಣಗಳಿಗೆ ಸಂಬಂಧಪಟ್ಟಂತೆ ನ್ಯಾಯಮೂರ್ತಿ ಆರ್ಚಿ ಕ್ಯಾಂಪ್ಬೆಲ್ ರ 1996 ರ ವಿಸ್ತøತ ವರದಿಯನ್ನು ಅವಲೋಕಿಸಿದರೆ ಈ ಪ್ರಕರಣಗಳ ಹಲವು ಭಯಾನಕ ರಹಸ್ಯಗಳು ಒಂದೊಂದಾಗಿ ತೆರೆದುಕೊಳ್ಳುವುದು ಸತ್ಯ. ಸ್ಕಾರ್-ಬೋರೋದ ಸರಣಿ ಅತ್ಯಾಚಾರಗಳ ಪ್ರಕರಣಗಳ ಮೇಲೆ ಮೊದಲು ಸಂಕ್ಷಿಪ್ತವಾಗಿ ಕಣ್ಣಾಡಿಸೋಣ. ಸ್ಥಳೀಯ ಮೆಟ್ರೋ ಟೊರಾಂಟೋ ಪೋಲೀಸ್ ಇಲಾಖೆಯು ಶಂಕಿತ ಆರೋಪಿಯ ರೇಖಾಚಿತ್ರಗಳನ್ನು ಬಿಡುಗಡೆಗೊಳಿಸಿದ ನಂತರ ಮಾಹಿತಿಗಳ ಮಹಾಪ್ರವಾಹವೇ ಹಲವು ಮೂಲಗಳಿಂದ ಹರಿದುಬಂದಿತ್ತು. ಮೊದಲೇ ಹೇಳಿದಂತೆ 1990 ರ ಅಕ್ಟೋಬರ್ ಅಂತ್ಯದ ಅವಧಿಯಲ್ಲಿ ಬರೋಬ್ಬರಿ ಒಂಭೈನೂರು ಹೆಸರುಗಳು […]
ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 8): ಪ್ರಸಾದ್ ಕೆ.
ಇಲ್ಲಿಯವರೆಗೆ 1993 ರಲ್ಲಿ ತನಿಖಾ ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ಟ್ಯಾಮಿ ಹೊಮೋಲ್ಕಾಳ ಶವಪೆಟ್ಟಿಗೆಯನ್ನು ಸ್ಮಶಾನದಿಂದ ಹೊರತೆಗೆಯಲಾಯಿತು. ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವೀಡಿಯೋ ಟೇಪ್ ಗಳನ್ನು ಅಕ್ರಮವಾಗಿ, ಹದಿನೇಳು ತಿಂಗಳುಗಳ ಕಾಲ ತನ್ನ ಸುಪರ್ದಿಯಲ್ಲಿ ಬಚ್ಚಿಟ್ಟುಕೊಂಡ ತಪ್ಪಿಗಾಗಿ, ಪೌಲ್ ಬರ್ನಾರ್ಡೊನ ವಕೀಲನಾಗಿದ್ದ ಕೆನ್ ನ ತಲೆದಂಡವಾಯಿತು. ಪೌಲ್ ಬರ್ನಾರ್ಡೊನನ್ನು ಪ್ರತಿನಿಧಿಸುತ್ತಿದ್ದ ಕೆನ್ ಮುರ್ರೇ, ಕಾರೊಲಿನ್ ಮೆಕ್-ಡೊನಾಲ್ಡ್ ಮತ್ತು ಕಿಮ್ ಡಾಯ್ಲ್ ರ ತಂಡ ಅಷ್ಟೇನೂ ಅನುಭವಿ ತಂಡವಾಗಿರಲಿಲ್ಲ. ಅದರಲ್ಲೂ ಈ ಪ್ರಕರಣದಲ್ಲಿ ಪೌಲ್ ಬರ್ನಾರ್ಡೊ ಜೊತೆ ಸೇರಿ ಮಾಡಿದ […]
ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 7): ಪ್ರಸಾದ್ ಕೆ.
ಇಲ್ಲಿಯವರೆಗೆ ಪೌಲ್ ಬರ್ನಾರ್ಡೊನಂತೆಯೇ ಕಾರ್ಲಾಳ ಬಾಲ್ಯದ ದಿನಗಳೂ ವಿಕ್ಷಿಪ್ತವಾಗಿದ್ದಿದು ಸತ್ಯ. ಕಾರ್ಲಾಳ ತಂದೆ, ತಾಯಿ ಇಬ್ಬರೂ ಉದ್ಯೋಗದಲ್ಲಿದ್ದು ಕುಟುಂಬವು ಆರ್ಥಿಕವಾಗಿ ಸದೃಢವಾಗಿದ್ದರೂ, ತನ್ನದೇ ಆದ ಚಿಕ್ಕಪುಟ್ಟ ಸಮಸ್ಯೆಗಳಲ್ಲಿ ತೊಳಲಾಡುತ್ತಿದ್ದವು. ಸ್ವಾಭಾವಿಕವಾಗಿಯೇ ಮಕ್ಕಳಾದ ಕಾರ್ಲಾ, ಲೋರಿ ಮತ್ತು ಟ್ಯಾಮಿ ಗೆ ಉತ್ತಮವಾದ ಜೀವನಶೈಲಿಯ ಪರಿಚಯವಿತ್ತು. ಕಾರ್ಲಾಳ ತಂದೆ ಕರೇಲ್ ಕುಡುಕನಾಗಿದ್ದು, ಲಿಂಡಾ ವೋಲಿಸ್ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದ. ಕಾರ್ಲಾಳ ತಾಯಿ ಡೊರೋಥಿಗೂ ಈ ವಿಷಯ ತಿಳಿದಿತ್ತು. ಕರೇಲ್ ಹೊಮೋಲ್ಕಾ ಮಿತಿಮೀರಿ ಕುಡಿಯುತ್ತಿದ್ದ ಸಮಯಗಳಲ್ಲಿ ಕೆಟ್ಟ ಬೈಗುಳಗಳು, […]
ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 6): ಪ್ರಸಾದ್ ಕೆ.
ಇಲ್ಲಿಯವರೆಗೆ ಪೌಲ್ ಬರ್ನಾರ್ಡೊ ನ ಬಂಧನದ ಬೆನ್ನಿಗೇ ಮಾಧ್ಯಮಗಳು “ದ ಸ್ಕಾರ್-ಬೋರೋ ರೇಪಿಸ್ಟ್'' ನ ಬಂಧನವಾಯಿತು ಎಂದು ಒಂದರ ಹಿಂದೊಂದರಂತೆ ಮುಖಪುಟಗಳಲ್ಲಿ ಪ್ರಕಟಿಸುತ್ತವೆ. ಮೊದಲೇ ಸೆನ್ಸೇಶನಲ್ ನ್ಯೂಸ್ ಆಗಿದ್ದ ಈ ಪ್ರಕರಣವು ಈಗಂತೂ ದಂಪತಿಗಳ ಬಂಧನದ ಬಳಿಕ ನಿತ್ಯವೂ ಒಂದಲ್ಲಾ ಒಂದು ಸುದ್ದಿಯನ್ನು ಬಿತ್ತರಿಸಿ ಪ್ರಕರಣದ ಬಿಸಿಯನ್ನು ಕಾಯ್ದುಕೊಂಡಿರುವಂತೆ ಮಾಡುತ್ತವೆ. ಈ ಸಂಬಂಧ ಒಂದು ಅಪೀಲನ್ನು ಸಲ್ಲಿಸುವ ದ ಕ್ರೌನ್ (ಪ್ರಾಸಿಕ್ಯೂಷನ್), `ಈ ಪ್ರಕರಣದ ಮಿತಿಮೀರಿದ ಕುಖ್ಯಾತಿಯ ಪರಿಣಾಮವಾಗಿ ನ್ಯಾಯಾಲಯದಿಂದ ನೇಮಿಸಲ್ಪಟ್ಟ ಜ್ಯೂರಿ ಸಮೂಹವು ಗಾಳಿಮಾತು ಮತ್ತು […]
ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 5): ಪ್ರಸಾದ್ ಕೆ.
ಇಲ್ಲಿಯವರೆಗೆ ಇತ್ತ ಕಾರ್ಲಾ ಹೊಮೋಲ್ಕಾ ಮತ್ತು ಪೌಲ್ ಬರ್ನಾರ್ಡೊ ದಂಪತಿಗಳ ವಿವಾಹಬಂಧನವೆಂಬ ಕನಸಿನ ಸೌಧ ದಿನೇದಿನೇ ಕುಸಿಯತೊಡಗುತ್ತದೆ. ತನ್ನ ವಿಲಕ್ಷಣ ದುರಭ್ಯಾಸಗಳ ಹೊರತಾಗಿ, ಪೌಲ್ ತನ್ನ ಪತ್ನಿಯ ಮೇಲೆಸಗುವ ದೈಹಿಕ ಹಿಂಸೆ ದಿನಕಳೆದಂತೆ ಭೀಕರವಾಗುತ್ತಾ ಹೋಗುತ್ತದೆ. ಪ್ರತೀಬಾರಿಯೂ ಅನಾರೋಗ್ಯವೆಂದು ದಿನಗಟ್ಟಲೆ ರಜೆ ಹಾಕಿ, ಮರಳಿ ಬಂದಾಗ ಕಾರ್ಲಾಳ ಮುಖದ ಮತ್ತು ದೇಹದ ಮೇಲೆ ಅಚ್ಚೊತ್ತಿದ್ದ ಕಲೆಗಳು ಕಾರ್ಲಾಳ ಸಹೋದ್ಯೋಗಿಗಳಿಗೆ ಬೇರೆಯದೇ ಕಥೆಯನ್ನು ಹೇಳುತ್ತವೆ. 1992 ರ ಡಿಸೆಂಬರ್ 27 ರಲ್ಲಂತೂ ಪೌಲ್ ತನ್ನ ಫ್ಲ್ಯಾಷ್ ಲೈಟ್ ಬಳಸಿ […]
ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 4): ಪ್ರಸಾದ್ ಕೆ.
ಇಲ್ಲಿಯವರೆಗೆ 1991 ರ ಜೂನ್ 29 ರಂದು ಅತ್ತ ಲೇಕ್ ಗಿಬ್ಸನ್ ಕೊಳದಲ್ಲಿ ಭಾರವಾದ ಕಾಂಕ್ರೀಟಿನ ಡಬ್ಬಗಳನ್ನು ಹೊರತಂದು ಸುಳಿವಿಗಾಗಿ ತಡಕಾಡುತ್ತಿದ್ದರೆ, ಇತ್ತ ನಯಾಗರಾದ ಆಸುಪಾಸಿನ ಪ್ರಖ್ಯಾತ ಚರ್ಚ್ ಒಂದರಲ್ಲಿ ಅದ್ದೂರಿ ವಿವಾಹದ ಸಮಾರಂಭವೊಂದು ನಡೆಯುತ್ತಿರುತ್ತದೆ. ಕಾರ್ಲಾ ಹೊಮೋಲ್ಕಾ ಮತ್ತು ಪೌಲ್ ಬರ್ನಾರ್ಡೊ ಕೊನೆಗೂ ತಮ್ಮ ಸ್ನೇಹಿತರು, ಹೆತ್ತವರು ಮತ್ತು ಬಂಧುಬಳಗದ ಉಪಸ್ಥಿತಿಯಲ್ಲಿ ಆ ದಿನ ಅದ್ದೂರಿಯಾಗಿ ಆಯೋಜಿಸಲ್ಪಟ್ಟ ಸಮಾರಂಭದಲ್ಲಿ ದಂಪತಿಗಳಾಗುತ್ತಾರೆ. ಬರೋಬ್ಬರಿ ಎರಡು ಸಾವಿರ ಡಾಲರುಗಳನ್ನು ತೆತ್ತು ಖರೀದಿಸಿದ ಮದುವಣಗಿತ್ತಿಯ ದಿರಿಸು, ಬಿಳಿಕುದುರೆಗಳನ್ನೊಳಗೊಂಡ ಸಾರೋಟು, ಮಿತಿಯಿಲ್ಲದ […]
ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 3): ಪ್ರಸಾದ್ ಕೆ.
ಇಲ್ಲಿಯವರೆಗೆ 1990 ರ ಡಿಸೆಂಬರ್ ನಲ್ಲಿ ಕೊಲೆಯಾದ ಟ್ಯಾಮಿಯ ಘಟನೆಯಿಂದ ಸ್ವಲ್ಪ ಹಿಂದಕ್ಕೆ ಹೋಗೋಣ. 1989 ಕಳೆದು 1990 ಆಗಲೇ ಬಂದಾಗಿದ್ದರೂ, ಅತ್ತ ಸ್ಕಾರ್-ಬೋರೋ ನಗರದ ವಿಶೇಷ ತನಿಖಾ ದಳದಿಂದ ಸರಣಿ ಅತ್ಯಾಚಾರದ ಬಗ್ಗೆ ಮಹತ್ವದ ಸುಳಿವೇನೂ ಸಿಕ್ಕಿರದಿದ್ದರೂ, ಸ್ಕಾರ್-ಬೋರೋದ ನಿವಾಸಿಗಳು ಯೋಚಿಸುತ್ತಿರುವಂತೆ ತನಿಖಾ ದಳವೇನೂ ನಿದ್ದೆ ಮಾಡುತ್ತಿರಲಿಲ್ಲ. ಏಕೆಂದರೆ ನಡೆದ ಪ್ರಕರಣಗಳನ್ನು ಆಧರಿಸಿ ಈ ಸ್ಯಾಡಿಸ್ಟ್ ರೇಪಿಸ್ಟ್ ನ ಒಂದು ಪ್ರೊಫೈಲ್ ಅನ್ನು ಇಲಾಖೆಯು ಪಕ್ಕದಲ್ಲೇ ಇರುವ ಅಮೇರಿಕಾದ ಎಫ್.ಬಿ.ಐ ಯ ಸಹಯೋಗದಿಂದ ಆಗಲೇ ತಯಾರು […]
ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 2): ಪ್ರಸಾದ್ ಕೆ.
ಇಲ್ಲಿಯವರೆಗೆ ಇತ್ತ ಕತ್ತಲಿನಲ್ಲಿ ಸುಳಿವಿಗಾಗಿ ತಡಕಾಡುತ್ತಿದ್ದ ಮೊಟ್ರೋಪಾಲಿಟನ್ ಟೊರಾಂಟೋ ಪೋಲೀಸರಿಗೆ ಮಹತ್ವದ್ದೇನೂ ಸಿಕ್ಕಿರಲಿಲ್ಲ. ಬದಲಿಗೆ 1987 ರ ಡಿಸೆಂಬರಿನಲ್ಲಿ ಹದಿನೈದರ ಪ್ರಾಯದ ಇನ್ನೊಬ್ಬ ಬಾಲಕಿ ಆಗಂತುಕನೊಬ್ಬನಿಂದ ಎಂದಿನ ರೀತಿಯಲ್ಲೇ ಅತ್ಯಾಚಾರಕ್ಕೊಳಗಾಗಿದ್ದಳು. ಸ್ಕಾರ್-ಬೋರೋ ನಗರದ ನಿವಾಸಿಗಳು ಸ್ವಾಭಾವಿಕವಾಗಿಯೇ ಕಂಗಾಲಾಗಿದ್ದರು. ಪೋಲೀಸರೂ ಕೈಚೆಲ್ಲಿ ಕುಳಿತಿರುವಾಗ ಯಾರ ಬಳಿ ಸಹಾಯಕ್ಕೆ ಧಾವಿಸುವುದೆಂಬುದೇ ಅವರಿಗೆ ತಿಳಿಯಲಿಲ್ಲ. ಪರಿಸ್ಥಿತಿ ಈಗಾಗಲೇ ಕೈಮೀರಿ ಹೋಗಿದ್ದು ಸ್ಪಷ್ಟವಾಗಿತ್ತು. ಕತ್ತಲಾದ ಬಳಿಕ ಹೆಣ್ಣುಮಕ್ಕಳು ಒಂಟಿಯಾಗಿ ಅಲೆದಾಡುವುದನ್ನು, ಓಡಾಡುವುದನ್ನು ಆದಷ್ಟು ಕಮ್ಮಿ ಮಾಡಬೇಕೆಂದೂ, ಪ್ರಕರಣದ ಬಗ್ಗೆ ಯಾವ ಸುಳಿವು ಸಿಕ್ಕರೂ […]
ಯಮಕಿಂಕರರು: ಒಂದು ಭಯಾನಕ ಸತ್ಯಕಥೆ: ಪ್ರಸಾದ್ ಕೆ.
1987 ರ ದಿನಗಳು ಕೆನಡಾದ ಓಂಟಾರಿಯೋ ಪ್ರೊವಿನ್ಸಿನ ಸ್ಕಾರ್-ಬೋರೋ ಭಾಗದಲ್ಲಿ ಸೂರ್ಯ ಎಂದಿನಂತೆ ಮುಳುಗುತ್ತಾ ಕತ್ತಲೆಯ ಚಾದರವನ್ನು ಮೆಲ್ಲಗೆ ಎಳೆಯುತ್ತಿದ್ದ. ಅತ್ತ ಸಂಜೆಯೂ ಅಲ್ಲದ, ಇತ್ತ ಪೂರ್ಣ ಪ್ರಮಾಣದ ರಾತ್ರಿಯೂ ಇಲ್ಲದ ಈ ಹೊತ್ತಿನಲ್ಲಿ ಕೈ-ಕೈ ಹಿಡಿದು ಪಾರ್ಕುಗಳಿಗೆ ಹೋಗುವ ಜೋಡಿಗಳು, ವಾಕಿಂಗಿಗೆ ತೆರಳುವ ವೃದ್ಧರು, ಬಿಯರ್ ಕುಡಿಯುವ ನೆಪದಲ್ಲಿ ಸಂಗಾತಿಗಳನ್ನು ಅರಸಿಕೊಂಡು ಹೋಗುವ ಹದಿಹರೆಯದ ಯುವಕ-ಯುವತಿಯರು ಹೀಗೆ ಹಲವು ಬಗೆಯ ಜನರು ತಮ್ಮದೇ ಗುಂಗಿನಲ್ಲಿ ಅಡ್ಡಾಡುವುದು ಇತರರಂತೆ ಸ್ಕಾರ್-ಬೋರೋ ನಿವಾಸಿಗಳಿಗೂ ಹೊಸದೇನಲ್ಲ. ಆದರೆ ಕಳೆದ […]
“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ” (ಕೊನೆಯ ಭಾಗ): ಪ್ರಸಾದ್ ಕೆ.
ಇಲ್ಲಿಯವರೆಗೆ…. 1991 ರಲ್ಲಿ ನ್ಯೂಯಾರ್ಕ್ ಗೆ ತೆರಳಿದ ವಾರಿಸ್ ನಿರೀಕ್ಷೆಗೂ ಮೀರಿ ಯಶಸ್ವಿಯಾಗುತ್ತಾರೆ. ರೆವಲಾನ್, ಲೆವಿಸ್, ಲಾರಿಯಲ್, ಬೆನೆಟನ್ ಮುಂತಾದ ಪ್ರತಿಷ್ಠಿತ ಕಂಪನಿಗಳ ಉತ್ಪನ್ನಗಳ ರಾಯಭಾರಿಯಾಗಿ ವಾರಿಸ್ ಮಿಂಚುತ್ತಾರೆ. ಮೂರು ತಿಂಗಳಲ್ಲೇ ವಾರಿಸ್ ರ ಚಿತ್ರವನ್ನು ಹೊತ್ತ ದೈತ್ಯ ಜಾಹೀರಾತು ಫಲಕಗಳು ವಿಶ್ವದಾದ್ಯಂತ ಬಿಡುಗಡೆಯಾಗಿ ಎಲ್ಲೆಲ್ಲೂ ರಾರಾಜಿಸತೊಡಗುತ್ತವೆ. ಸುಗಂಧ ದ್ರವ್ಯಗಳು, ಆಭರಣಗಳು, ಮದ್ಯತಯಾರಿಕೆ, ಬಟ್ಟೆಗಳು ಹೀಗೆ ನಾನಾ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಉತ್ಪನ್ನಗಳ ರಾಯಭಾರಿಯನ್ನಾಗಿಸಿಕೊಳ್ಳಲು ವಾರಿಸ್ ರ ಬೆನ್ನು ಬೀಳುತ್ತವೆ. […]
“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ” (ಭಾಗ 3): ಪ್ರಸಾದ್ ಕೆ.
ಇಲ್ಲಿಯವರೆಗೆ ಶ್ರಮಜೀವಿ ವಾರಿಸ್ ಮೆಕ್ ಡೊನಾಲ್ಡ್ ರೆಸ್ಟೊರೆಂಟಿನಲ್ಲಿ ನಿಷ್ಠೆಯಿಂದ ದುಡಿಯುತ್ತಾ ದಿನ ತಳ್ಳುತ್ತಿರುತ್ತಾಳೆ. ಆಗೊಮ್ಮೆ ಈಗೊಮ್ಮೆ ಹಾಲ್ವು ಳೊಂದಿಗೆ ವಾರಾಂತ್ಯಗಳಲ್ಲಿ ಕ್ಲಬ್ ಗಳಿಗೆ ತೆರಳಿ ಮಂದಬೆಳಕಿನಲ್ಲಿ ವೈಭವಿಸುವ ಹಾಡು, ನೃತ್ಯ, ಮದ್ಯಗಳನ್ನು ನಿರ್ಲಿಪ್ತತೆಯಿಂದ ಮೂಲೆಯಲ್ಲಿ ನಿಂತು ಸುಮ್ಮನೆ ನೋಡುತ್ತಿರುತ್ತಾಳೆ. ನಗರದ ಜನರ ಮುಕ್ತ ಲೈಂಗಿಕತೆ ಅವಳಿಗೆ ಅಸಹ್ಯ ಉಂಟುಮಾಡಿದರೆ, ಮೂತ್ರವಿಸರ್ಜನೆಗೂ ಬಾತ್ ರೂಮಿನಲ್ಲಿ ಬಹುಹೊತ್ತು ಹೊಟ್ಟೆಹಿಡಿದುಕೊಂಡು ನರಳಬೇಕಾಗಿ ಒದ್ದಾಡುವ ಅನಿವಾರ್ಯತೆ, ನೋವನ್ನು ಯಾರಲ್ಲೂ ಹೇಳಿಕೊಳ್ಳಲಾಗದ ಎಫ್.ಜಿ.ಎಮ್ ಬಗೆಗಿನ ಕೀಳರಿಮೆ ಅವಳನ್ನು ಮಾನಸಿಕವಾಗಿ ಬಳಲಿಸುತ್ತದೆ. ಆ ದಿನಗಳಲ್ಲಿ ತಕ್ಷಣದ […]
“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ” (ಭಾಗ 2): ಪ್ರಸಾದ್ ಕೆ.
ಇಲ್ಲಿಯವರೆಗೆ ಈ ಮೊದಲೇ ಹೇಳಿದಂತೆ ಎಫ್. ಜಿ. ಎಮ್ ಮಾಡಿಸಿಕೊಂಡ ಹೆಣ್ಣುಮಕ್ಕಳಿಗೆ ವಿವಾಹಕ್ಕೆ ಸೊಮಾಲಿಯಾದಲ್ಲಿ ಭಾರೀ ಬೇಡಿಕೆ. ಓರ್ವ ವ್ಯಕ್ತಿ ಎಷ್ಟು ಒಂಟೆಯನ್ನು ಹೊಂದಿರುತ್ತಾನೆ ಎಂಬುದರ ಮೇಲೆ ಇಲ್ಲಿ ಶ್ರೀಮಂತಿಕೆಯನ್ನು ಅಳೆಯುತ್ತಾರಂತೆ. ವಧುದಕ್ಷಿಣೆಯೆಂಬ ಪದ್ಧತಿ ಜಾರಿಯಲ್ಲಿರುವುದರಿಂದ ಒಂಟೆಯನ್ನೇ ವಧುದಕ್ಷಿಣೆಯನ್ನಾಗಿ ಕೊಡುವುದು ಇಲ್ಲಿಯ ವಾಡಿಕೆ. ಹೀಗಾಗಿ ಎಫ್. ಜಿ. ಎಮ್ ಮಾಡಿಸಿಕೊಂಡ ಹೆಣ್ಣುಮಕ್ಕಳು ಇಲ್ಲಿನ ತಂದೆ-ತಾಯಂದಿರಿಗೆ ಶುದ್ಧ ಮಾರಾಟದ ಸರಕುಗಳು. ************************ ವಾಪಾಸು ನಮ್ಮ ಕಥಾನಾಯಕಿ ವಾರಿಸ್ ಕಥನಕ್ಕೆ ಬರೋಣ. ತನ್ನ ಐದನೇ ವಯಸ್ಸಿಗೆ ಎಫ್. […]
“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ”: ಪ್ರಸಾದ್ ಕೆ.
ಆಗ ಹೆಚ್ಚೆಂದರೆ ನನಗೆ ಐದು ವರ್ಷ. ಅಕ್ಕ ಅಮನ್ ಗೆ ‘ಅದನ್ನು’ ಮಾಡಿಸುವುದರ ಬಗ್ಗೆ ಮನೆಯೆಲ್ಲಾ ಗುಲ್ಲು. ‘ಅದನ್ನು’ ಮಾಡಿಸಿಕೊಂಡರೆ ನಮ್ಮಲ್ಲಿಯ ಹೆಣ್ಣುಮಕ್ಕಳಿಗೆ ಭಾರೀ ಬೇಡಿಕೆ. ಒಂದು ಪ್ರತಿಷ್ಠೆಯ ಸಂಕೇತ. ಅಧಿಕೃತವಾಗಿ ಹೆಂಗಸಿನ ಪಟ್ಟಕ್ಕೆ ಭಡ್ತಿ. ನನಗಂತೂ ಈ ಬಗ್ಗೆ ಭಾರೀ ಕುತೂಹಲ. ‘ಅದು’ ಎಂಬುದು ಏನೆಂದು ತಲೆಬುಡ ಗೊತ್ತಿಲ್ಲದಿದ್ದರೂ ಅಮ್ಮನ ಕೊರಳಿಗೆ ಜೋತುಬಿದ್ದು ‘ಅಕ್ಕನಿಗೆ ಮಾಡಿಸುತ್ತೀರಲ್ಲಾ. ನನಗೂ ಮಾಡಿಸಿ’ ಎಂದು ಗೋಳು ಹುಯ್ದುಕೊಳ್ಳುವಷ್ಟರ ಮಟ್ಟಿಗೆ. ‘ಥೂ ಹೋಗೇ’ ಎಂದು ತಳ್ಳಿಹಾಕುವ ಅಮ್ಮ. ಕಣ್ಣಲ್ಲೇ ತುಂಟನಗೆಯೊಂದಿಗೆ ಕೆಣಕುವ […]
ಗಣಪನೆಂಬ ಅದ್ಭುತ: ಪ್ರಸಾದ್ ಕೆ.
ಕತೆ, ಕವಿತೆ, ಕ್ರೈಮು, ಕಾರ್ಟೂನು, ಸಿನಿಮಾ, ಟೀಕೆ-ಟಿಪ್ಪಣಿ, ಸತ್ವವಿಲ್ಲದ ಸರ್ಕಾರಿ ಪತ್ರಗಳು, ಆಫೀಸಿನ ನೀರಸ ಮಣಭಾರದ ರಿಪೋರ್ಟುಗಳು ಹೀಗೆ ಹಿರಿ, ಕಿರಿ, ಕಿರಿಕಿರಿಯೆನ್ನಿಸುವ ಏನೇನೋ ವಿಷಯಗಳ ಬಗ್ಗೆ ಬರೀತಾ ಬರೀತಾ ಚೌತಿಯ ಗಣೇಶನ ಬಗ್ಗೆ ವಾರದ ವಿಶೇಷ ಪುರವಣಿಗೆ ಬರೆಯುವುದೇ ಒಂದು ಖುಷಿ. ಗಣಪತಿ ಎಂದರೆ ನನಗೆ ಹೊಸ ಜಗತ್ತು ತೆರೆದುಕೊಳ್ಳುತ್ತದೆ. ನನಗೆ ಗಣಪ ಎಂದರೆ ಏನೆಲ್ಲಾ, ಎಷ್ಟೆಲ್ಲಾ… ಅತಿಮಧುರ ಸಂಸ್ಕøತ ಶ್ಲೋಕಗಳನ್ನು ಬದಿಗಿಟ್ಟುಕೊಂಡರೂ ಗಣಪತಿಯೆಂದರೆ ನನ್ನದೇ ಹಲವು ವರ್ಷನ್ನುಗಳು ನನಗೆ. 'ಗಣೇಶ' ಎಂದರೆ ಗಣೇಶನ ಮದುವೆಯ […]
ದ ಪ್ಲೇನ್-ಫೀಲ್ಡ್ ಕಿಲ್ಲರ್”: ಪ್ರಸಾದ್ ಕೆ.
೧೯೫೭ ರ ನವೆಂಬರ್ ೧೭ ರ ಒಂದು ಕರಾಳ ದಿನ. ಅಮೇರಿಕಾದ ವಿಲ್ಕಿನ್ಸನ್ ಸ್ಟೇಟ್ ನ ಪ್ಲೇನ್ ಫೀಲ್ಡ್ ಎಂಬ ಪುಟ್ಟ ಹಳ್ಳಿಯತ್ತ ಇಡೀ ಜಗತ್ತೇ ತಿರುಗಿ ನೋಡಿತು. ಮನೆಯೊಂದರ ಮೇಲೆ ನಡೆದ ಪೋಲೀಸರ ದಾಳಿಯಿಂದ ಪ್ಲೇನ್ ಫೀಲ್ಡ್ ಎಂಬ ಹೆಸರೇ ಗೊತ್ತಿರದ ಪುಟ್ಟ ಸ್ಥಳವೊಂದು ಏಕಾಏಕಿ ಕುಖ್ಯಾತಿಯನ್ನು ಪಡೆದು ಸುದ್ದಿ ಮಾಡಿತು. ಮನುಷ್ಯನ ಮೂಳೆಗಳು, ಮಾನವ ಚರ್ಮದಿಂದ ಮಾಡಲಾದ ಕಸದ ಬುಟ್ಟಿ, ಲ್ಯಾಂಪ್ ಶೇಡ್ಗಳು, ತಲೆಬುರುಡೆಯನ್ನು ಉಪಯೋಗಿಸಿ ಮಾಡಲಾದ ಬೌಲ್ ಗಳು, ಉಗುರುಗಳು, ನಾಲ್ಕು ಮೂಗುಗಳು, […]
ಫ್ರೀಡಾ ಕಾಹ್ಲೋ: ಬದುಕು, ಬವಣೆ ಮತ್ತು ಬಣ್ಣಗಳು: ಪ್ರಸಾದ್ ಕೆ.
"ಇಲ್ಲಿಂದ ಹೊರಬಿದ್ದವಳೇ ಮೂರು ಕೆಲಸಗಳನ್ನು ಮಾಡಬೇಕಿದೆ ನನಗೆ. ಪೈಂಟಿಂಗ್, ಪೈಂಟಿಂಗ್ ಮತ್ತು ಪೈಂಟಿಂಗ್" ಮೂವತ್ತಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡು, ನೋವನ್ನೆಲ್ಲಾ ದೇಹದ ಮೂಲೆಮೂಲೆಯಲ್ಲೂ ಆವರಿಸಿಕೊಂಡು ಮೆಕ್ಸಿಕೋದ ಆಸ್ಪತ್ರೆಯ ವಾರ್ಡೊಂದರಲ್ಲಿ ಮಲಗಿದ್ದ ಹೆಣ್ಣೊಬ್ಬಳು ಹೇಳಿದ ಮಾತಿದು. ಈ ಚಿತ್ರಕಲಾವಿದೆಯ ಹೆಸರು ಫ್ರೀಡಾ ಕಾಹ್ಲೋ. ಪಿಕಾಸೋ ಮತ್ತಿತರ ದಿಗ್ಗಜರ ಸಮಕಾಲೀನಳಾದಳೂ ಕೂಡ ತನ್ನ ಜನ್ಮಭೂಮಿ ಮೆಕ್ಸಿಕೋದಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ತನ್ನದೇ ಆದ ಛಾಪನ್ನು ಕಲಾಲೋಕದಲ್ಲಿ ಮೂಡಿಸಿದವರು ಫ್ರೀಡಾ. ತನ್ನ ದೇಹವನ್ನು ಮತ್ತು ಮನಸ್ಸಿನಲ್ಲಾ ಮಡುಗಟ್ಟಿ ಆವರಿಸಿದ್ದ ನೋವುಗಳೊಂದಿಗೆ ಜೀವನದುದ್ದಕ್ಕೂ ಹಟಬಿಡದೆ […]
ಪೌಲ್ ಬುರ್ರೆಲ್ ಎಂಬ ಡಯಾನಾರ ತೆರೆಮರೆಯ ತಾರೆ: ಪ್ರಸಾದ್ ಕೆ.
ಕೆಲವೊಂದು ಮುಖಗಳೇ ಹಾಗಿರುತ್ತವೆ. ವರ್ಷಗಳು ಸಂದು ಹೋದರೂ, ಪೀಳಿಗೆಗಳು ಕಳೆದರೂ "ಐಕಾನ್" ಎನಿಸಿಕೊಳ್ಳುತ್ತವೆ. ವಿನ್ಸ್ಟನ್ ಚರ್ಚಿಲ್ ಸಿಗಾರ್ ಸೇದುತ್ತಾ ರಾಜಭಂಗಿಯಲ್ಲಿ ಕುಳಿತ ಕಪ್ಪು ಬಿಳುಪು ಛಾಯಾಚಿತ್ರ ಈಗಲೂ ಆ ದಂತಕಥೆಗೆ ಮೆರುಗನ್ನು ನೀಡುತ್ತದೆ. ಮರ್ಲಿನ್ ಮನ್ರೋರ ಮಾದಕ ನಗುಮುಖಕ್ಕೆ ಮರ್ಲಿನ್ ಮನ್ರೋರೇ ಸಾಟಿ. ಇಂತಹ ವಿಶಿಷ್ಟ ಮುಖಗಳ ಬಗ್ಗೆ ಮಾತನಾಡುವಾಗ ಮೊದಲಿಗೆ ಮನಸ್ಸಿನಲ್ಲಿ ಹಾದುಹೋಗುವ ಚಿತ್ರ ಬ್ರಿಟನ್ನಿನ ರಾಜಕುಮಾರಿ ಡಯಾನಾರದ್ದು. ಪ್ರಪಂಚದಲ್ಲೇ ಅತೀ ಹೆಚ್ಚು ಬಾರಿ ಛಾಯಾಚಿತ್ರೀಕರಿಸಲ್ಪಟ್ಟ ಮಹಿಳೆಯೆಂದರೆ ರಾಜಕುಮಾರಿ ಡಯಾನಾ. ತನ್ನ ಜೀವಿತಾವಧಿಯಲ್ಲಿ ವಿಶಿಷ್ಟ ಕಾರ್ಯವೈಖರಿ, […]
ಯಶಸ್ಸಿನ ಬೆನ್ನು ಹತ್ತಿ:ಪ್ರಸಾದ್ ಕೆ.
ರಿಚರ್ಡ್ ಬ್ರಾನ್ಸನ್! ಈ ಶತಮಾನದ ಓರ್ವ ಯಶಸ್ವಿ ಉದ್ಯಮಿ, ಲೇಖಕ, ಸಾಹಸಿ ಮತ್ತು ವರ್ಜಿನ್ ಸಮೂಹ ಸಂಸ್ಥೆಗಳ ಅಧ್ಯಕ್ಷ. ವಿಶ್ವದಾದ್ಯಂತ ನಾಲ್ಕುನೂರಕ್ಕೂ ಹೆಚ್ಚು ಕಂಪೆನಿಗಳ ಮಾಲೀಕ. ಸಂಗೀತ, ಏರ್ ಲೈನ್ಸ್, ಮೊಬೈಲ್ಸ್ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಮೂವತ್ತಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಕಬಂಧಬಾಹುಗಳನ್ನು ವರ್ಜಿನ್ ಸಮೂಹ ಸಂಸ್ಥೆಗಳು ಹಬ್ಬಿಕೊಂಡಿವೆ. ಇವರ ಆತ್ಮಕಥೆ ’ಲೂಸಿಂಗ್ ಮೈ ವರ್ಜಿನಿಟಿ’ ಜಗತ್ತಿನಾದ್ಯಂತ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಬಿಕರಿಯಾದ ಬಹುಚರ್ಚಿತ ಕೃತಿ. ರಿಚರ್ಡ್ ತನ್ನ ಜೀವನದಲ್ಲಿ ಅನುಭವಗಳಿಂದ ಕಲಿತ ಪಾಠಗಳನ್ನು ’ಸ್ಕ್ರ್ಯೂ […]