ಕಲೆ-ಸಂಸ್ಕೃತಿ

ನೆಲದ ಘಮಲಿನ ʼಸಿನಿಹಬ್ಬʼ: ಎಂ ನಾಗರಾಜ ಶೆಟ್ಟಿ

   ʼನೆಲದ ದನಿಗಳ ಹುಡುಕಾಟʼ ಇದು ಈ ಬಾರಿಯ ʼಸಿನಿಹಬ್ಬʼದ ವಿಷಯ. ಡಾ ಬಿ ಆರ್‌ಅಂಬೇಡ್ಕರ್‌ವಿದ್ಯಾರ್ಥಿಗಳ ಕಲ್ಯಾಣ ಸಂಘ, ಕೃಷಿ ಮಹಾವಿದ್ಯಾಲಯ, ಧಾರವಾಡ ಹಾಗೂ ಮನುಜಮತ ಸಿನಿಯಾನ ಸಹಯೋಗದಲ್ಲಿ ಧಾರವಾಡದಲ್ಲಿ ಎರಡು ದಿನಗಳ ʼಸಿನಿಹಬ್ಬʼ ಮೇ 20 ಮತ್ತು 21ರಂದು ಜರಗಿತು. ನೆಲದ ದನಿಗಳ ಹುಡುಕಾಟಕ್ಕೆ 542 ಹೆಕ್ಟೇರುಗಳ ವಿಶಾಲ ಹಸಿರು ಪ್ರದೇಶದಲ್ಲಿ ಹರಡಿಕೊಂಡಿರುವ ಕೃಷಿ ಮಹಾವಿದ್ಯಾಲಯದ ಆವರಣಕ್ಕಿಂತ ಸೂಕ್ತವಾದ ಜಾಗ ಇಲ್ಲವೇನೋ ಎನ್ನುವಂತಿತ್ತು ಸಿನಿಹಬ್ಬದ ಜಾಗ. ಮೇ 20 ರ ಮುಂಜಾನೆ ಆಹ್ಲಾದಕರ ವಾತಾವರಣದಲ್ಲಿ ʼಸಿನಿಹಬ್ಬʼ […]

ಕಲೆ-ಸಂಸ್ಕೃತಿ

ಆಳುವ ಪ್ರಭುತ್ವದ ಅಮಾನವೀಯ ನಡೆಯ ಘನಘೋರ ಚಿತ್ರಣದ ಸಿನಿಮಾ – ಫೋಟೋ: ಚಂದ್ರಪ್ರಭ ಕಠಾರಿ

ಕೊರೊನಾ ಕಾಲದ ವಲಸಿಗರ ಸಂಕಷ್ಟಗಳ ಕತೆಯ ‘ಫೋಟೋ’ ಸಿನಿಮಾ ಅಷ್ಟಾಗಿ ಪ್ರಚಾರಗೊಳ್ಳದೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಯುವ ನಿರ್ದೇಶಕ ಉತ್ಸವ್ ಗೋನಾವರ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಸಿನಿಮಾವನ್ನು ಕಲೆಯಾಗಿ ಕಟ್ಟಿದ್ದಾರೆ. ಅಲ್ಲದೆ – ತನಗಿರುವ ಪ್ರತಿಭೆಯ ಜೊತೆಗೆ ಸಾಮಾಜಿಕ ಕಳಕಳಿ, ಬದ್ಧತೆಯನ್ನು ಮೆರೆದಿದ್ದಾರೆ.    ಉತ್ತರಕರ್ನಾಟಕದ ರಾಯಚೂರು ಜಿಲ್ಲೆಯ ಮಸ್ಕಿಯ ಪುಟ್ಟ ಗ್ರಾಮದ ಬಾಲಕ ದುರ್ಗ್ಯ, ಶಾಲೆಯಲ್ಲಿದ್ದ ವಿಧಾನಸೌಧದ ಪಟ ಕಂಡು, ಅದರ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳಬೇಕೆಂದು ಬಯಸುತ್ತಾನೆ. ಅದೇ ಹೊತ್ತಿಗೆ ಶಾಲೆಗೆ ಹದಿನೈದು […]

ಕಲೆ-ಸಂಸ್ಕೃತಿ ಪಂಜು-ವಿಶೇಷ

ಸಂವಿಧಾನದ ಮಹತ್ವವನ್ನು ಸಾರುವ ಮನೋಜ್ಞ ಸಿನಿಮಾ – 19.20.21: ಚಂದ್ರಪ್ರಭ ಕಠಾರಿ

ಹರಿವು, ನಾತಿಚರಾಮಿ, ಆಕ್ಟ್ 1978 ಸಿನಿಮಾಗಳಿಂದ ಸಂವೇದನಾಶೀಲ ನಿರ್ದೇಶಕರೆಂದು ಗುರುತಿಸಲ್ಪಟ್ಟಿರುವ  ಮಂಸೋರೆಯವರ ಹೊಸ ಸಿನಿಮಾ-19.20.21. ಟೈಟಲ್ ಸೇರಿದಂತೆ ಹಲವು ಕುತೂಹಲಗಳೊಂದಿಗೆ ಅವರು ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಹಾಗೆ ತರುವಾಗ ಹಲವು ಸವಾಲುಗಳನ್ನು ತಮ್ಮ ಸಿನಿಮಾ ತಯಾರಿಕೆಯ ಅನುಭವದಿಂದ, ಪ್ರತಿಭಾವಂತಿಕೆಯಿಂದ ನಿಭಾಯಿಸಿದ್ದಾರೆ.   ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಲ್ಲಿರುವ ಕುತ್ಲೂರು ಗ್ರಾಮದಲ್ಲಿ ಶತಮಾನಗಳಿಂದ ಬದುಕಿರುವ ಆದಿವಾಸಿ ಬುಡಕಟ್ಟು ಜನಾಂಗವಾದ ಮಲೆಕುಡಿಯರನ್ನು, ಸರ್ಕಾರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಯನ್ನು ಜಾರಿ ಮಾಡಿ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ, ಆಳುವ ಪ್ರಭುತ್ವದಿಂದ ನಡೆದ ದೌರ್ಜನ್ಯಗಳ […]

ಕಲೆ-ಸಂಸ್ಕೃತಿ

‘ಕಾಂತಾರ’ದೊಳಗೊಂದು ಸುತ್ತು: ಶ್ರೀಧರ ಪತ್ತಾರ, ವಿಜಯಪುರ.

ಕಾಡು, ಅದರ ಸುತ್ತಲಿನ ಜಗತ್ತು ಮತ್ತು ಭೂತಕೋಲದ ದೈವದೊಂದಿಗೆ ತಳಕು ಹಾಕಿಕೊಂಡಿರುವ ಕಾಂತಾರ ನೋಡುಗರಿಗೆ ತನ್ನೊಳಗಿನ ಭಾವವನ್ನು ಬಹಳ ಬೇಗನೆ ಬಿಟ್ಟುಕೊಡುವುದಿಲ್ಲ. ಕಾಂತಾರದ ಕತ್ತಲೆ ಬೆಳಕು, ರವ-ನಿರವಯತೆಯ ಚುಂಗುಹಿಡಿದು ಹೊರಟರೆ ಖಂಡಿತವಾಗಿಯೂ ಕಥೆಯ ಕಾಡಿನೊಳಕ್ಕೆ ಪಯಣಿಸುತ್ತೇವೆ. ನೋಡುನೋಡುತ್ತಲೇ ಅದರೊಳಗೆ ಕಳೆದುಹೋಗುತ್ತೇವೆ. ತನ್ನ ವಾದ್ಯ, ತಾಳಮೇಳದ ಸದ್ದುಗದ್ದಲದೊಂದಿಗೆ ನಮ್ಮನ್ನು ಆಗಾಗ ಬೆಚ್ಚಿಬೀಳಿಸುತ್ತ, ಮೈನವಿರೇಳಿಸುವ ಕಾಂತಾರವೆಂಬ ದೃಶ್ಯಕಾವ್ಯ ನಮ್ಮಲ್ಲಿ ನಿಜಕ್ಕೂ ಆಶ್ಚರ್ಯ ಅದ್ಭುತವೆನ್ನಬಹುದಾದ ಭಾವವೊಂದನ್ನು ಹುಟ್ಟುಹಾಕುತ್ತದೆ. ವಿಭಿನ್ನ ಮತ್ತು ವಿಶೇಷ ಎಂದೆನಿಸುವ ಕಾಡೆಂಬ ನಿಗೂಢ ಜಗತ್ತನ್ನು ತೆರೆದಿಡುವ ಕತೆ ನೋಡುಗರನ್ನು […]

ಕಲೆ-ಸಂಸ್ಕೃತಿ

ಜಾನಪದದಲ್ಲಿ ಪ್ರೇಮ: ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ

ಈ ಜಗತ್ತು ಸುಂದರ ಮತ್ತು ಸುಖಮಯವಾಗಿ ಕಾಣುವಲ್ಲಿ ಪ್ರೇಮದ ಕೊಡುಗೆಯು ಸಿಂಹಪಾಲು ಬಹುಶಃ ಮಾನವನೆದೆಯಲ್ಲಿ ಉಂಟಾಗುವ ಭಾವನೆಗಳಿಗೆ ಮೂರ್ತ ರೂಪ ನೀಡುವಲ್ಲಿ ಈ ಪ್ರೇಮಕ್ಕೆ ಹಲವು ರೀತಿಯ ಮುಖಗಳಿವೆ. ಮೊದಲ ನೋಟಕ್ಕ ಉಂಟಾಗುವಂತಹದ್ದು ಪ್ರೀತಿ ಆತ್ಮೀಯತೆ ಅರಳಿಸುವಂತಹದ್ದು ಪ್ರೇಮ ಕನಸುಗಳ ಮೈದಡವಿ ಬಯಕೆಗಳ ಬೆನ್ನೇರಿಸಿಕೊಂಡು ಭೂಮ್ಯಾಕಾಶದ ಆಚೆಗೂ ಪಯಣಿಸುವ ಹುಮ್ಮಸ್ಸು ತುಂಬುವಂತಹದ್ದು ಒಲವು. ಇಹಲೋಕದಲ್ಲವನ್ನೂ ಧಿಕ್ಕರಿಸುತ್ತಾ ಅನೂಹ್ಯ ಲೋಕದ ಸುಖವನ್ನು ಅನುಭವಿಸುವ ಸ್ವರ್ಗಲೋಕದ ತುತ್ತ‌ ತುದಿಗೆ ಒಯ್ದು ಬದುಕನ್ನು ಸುಂದರಗೊಳಿಸುವಂತಹದ್ದು ಪ್ರಣಯ. ಗಂಡು ಹೆಣ್ಣುಗಳ ಮನಸ್ಸುಗಳು ಹುಟ್ಟಾ […]

ಕಲೆ-ಸಂಸ್ಕೃತಿ

‘ಎಮ್ಮೆಗುಂಡಿಯಲ್ ಒಂದು ದಿನ ‘ “ನಿಲುವಂಗಿಯ ಕನಸು “: ದಾಕ್ಷಾಯಿಣಿ

ಯಾವುದೇ ಕೃತಿಯೊಂದನ್ನು ಓದುವಾಗಲೂ ನನ್ನನ್ನು ಬಹುವಾಗಿ ಸೆಳೆಯೋದು ಆ ಕೃತಿಯಲ್ಲಿ ಚಿತ್ರಿತವಾಗುವ ಸ್ತ್ರೀ ಪಾತ್ರಗಳ ಪರಿಭಾವನೆಗಳು.ಈ ನಿಟ್ಟಿನಲ್ಲಿ “ಹಾಡ್ಲಹಳ್ಳಿ ನಾಗರಾಜ್” ಸರ್ ಅವರ “ನಿಲುವಂಗಿಯ ಕನಸು ” ಕಾದಂಬರಿಯಲ್ಲಿಯೂ ನನ್ನ ಗಮನ ಸೆಳೆದ ಪ್ರಮುಖ ಸ್ತ್ರೀ ಪಾತ್ರಗಳು ಎರಡು, ಒಂದು”ಅವ್ವ” ನದು ಮತ್ತೊಂದು “ಸೀತೆ” ಯದು.ಇವರಿಬ್ಬರೂ ಇಡೀ ಕಾದಂಬರಿಯಲ್ಲಿ ಹಸಿರಿನೊಂದಿಗೆ ಜೀವ ಬೆಸೆದು ಮಾತನಾಡುವ ಸ್ತ್ರೀ ತತ್ವದ ಸಂಕೇತಗಳಾಗೇ ನನಗೆ ಕಂಡು ಬರುತ್ತಾರೆ. ಕೃಷಿ ಎಂದ ತಕ್ಷಣ ಅದ್ಯಾಕೋ ನನಗೆ ರೈತ ಪುರುಷನ ಚಿತ್ರ ಕಣ್ಮುಂದೆ ಬರೋದೇ […]

ಕಲೆ-ಸಂಸ್ಕೃತಿ

“ಅಲೈದೇವ್ರು” ನಾಟಕ ಪ್ರದರ್ಶನ

ಬೆಂಗಳೂರಿನ ವಿಶ್ವರಂಗ ತಂಡವು ಕೋರೊನಾ ನಂತರದಲ್ಲಿ “ಅಲೈದೇವ್ರು” ಎಂಬ ಮಹತ್ವದ ನಾಟಕವನ್ನು ಆಯ್ದುಕೊಂಡಿದ್ದು, ರವಿವಾರ ಸಂಜೆ ೪.೩೦ಕ್ಕೆ ಮತ್ತು ೭.೩೦ಕ್ಕೆ ಬಸವೇಶ್ವರ ಇಂಜಿನಿಯರ್ಸ್ ಅಕಾಡೆಮಿಯ ಕೆಇಎ ಪ್ರಭಾತ ರಂಗಮಂದಿರದಲ್ಲಿ ಎರಡು ಪ್ರದರ್ಶನ ನೀಡುತ್ತಿದೆ. ಹನುಮಂತ ಹಾಲಿಗೇರಿಯವರ ರಚನೆಯ ಈ ನಾಟಕವನ್ನು ಸಿದ್ದರಾಮ ಕೊಪ್ಪರ ನಿರ್ದೇಶಿಸುತ್ತಿದ್ದಾರೆ. ಈ ನಾಟಕದಲ್ಲಿ ೩೫ಕ್ಕೂ ಹೆಚ್ಚು ಕಲಾವಿದರು ನಟಿಸುತ್ತಿರುವುದು ವಿಶೇಷ. ಉತ್ತರ ಕರ್ನಾಟಕ ಪ್ರತಿಯೊಂದು ಹಳ್ಳಿಯಲ್ಲೂ ನಡೆಯುವ ಜನಪದರ ಹಬ್ಬ ಅಲೈಹಬ್ಬದ ಕುರಿತತಾದ ಕಥಾ ಹಂದರವನ್ನು ಈ ನಾಟಕ ಹೊಂದಿದೆ. ಈ ಹಬ್ಬದಲ್ಲಿ […]

ಕಲೆ-ಸಂಸ್ಕೃತಿ

ಪರಸಗಡ ನಾಟಕೋತ್ಸವ 2020: ವೈ. ಬಿ. ಕಡಕೋಳ

ಜನೇವರಿ 25 ರಿಂದ ಪೆಬ್ರವರಿ 2 ರ ವರೆಗೆ ಸವದತ್ತಿ ಕೋಟೆಯಲ್ಲಿ ಪರಸಗಡ ನಾಟಕೋತ್ಸವ 2020 ಈ ವರ್ಷ ಸವದತ್ತಿ ಕೋಟೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಮತ್ತು ರಂಗ ಆರಾಧನಾ ಸಾಂಸ್ಕøತಿಕ ಸಂಘಟನೆ(ರಿ) ಸವದತ್ತಿ ಇವರ ಸಹಯೋಗದಲ್ಲಿ ಪರಸಗಡ ನಾಟಕೋತ್ಸವ ಇದೇ ಜನೇವರಿ 25 ರಿಂದ ಆರಂಭವಾಗುತ್ತಿದೆ. ಈ ಸಂಘಟನೆಯವರು ಶ್ರೀ ವಿಶ್ವೇಶ್ವರತೀರ್ಥ ಪೇಜಾವರ ಶ್ರೀಗಳ ಹಾಗೂ ಶ್ರೀ ಗಿರೀಶ್ ಕಾರ್ನಾಡ್ ಸ್ಮರಣೆಯೊಂದಿಗೆ ಈ ನಾಟಕೋತ್ಸವವನ್ನು ಹಮ್ಮಿಕೊಂಡಿದ್ದು. ಸವದತ್ತಿ ಸ್ವಾದಿಮಠದ ಶ್ರೀ ಶಿವಬಸವ […]

ಕಲೆ-ಸಂಸ್ಕೃತಿ

ಬಾಲ್ಯದಲ್ಲಿ ಪ್ರಭಾವಿತವಾದ ಯಕ್ಷಗಾನ ಕಲೆ-ಕರ್ನಾಟಕದ ಜಾನಪದ ಕಲೆ: ಚಂದ್ರಿಕಾ ಆರ್ ಬಾಯಿರಿ

ಕಂಬಳಿ ಹೊದ್ದು ತೆಂಗಿನ ಗರಿಯ ಚಾಪೆಯ ಮೇಲೆ ಕುಳಿತು ತೂಕಡಿಸುತ್ತ ಕಡಲೆಬೀಜ, ಚುರುಮುರಿ ತಿನ್ನುತ್ತ ಯಕ್ಷಗಾನ ನೋಡುವ ಪರಿ ಆಹಾ! ಎಷ್ಟು ಸುಂದರ. ರಾತ್ರಿ 7 ಗಂಟೆಗೆ ಊರಿನವರೆಲ್ಲಾ ಸೇರಿ ಕಿಲೋಮೀಟರ್ ಗಟ್ಟಲೆ ಟಾರ್ಚ್ ಹಿಡಿದು ನಡೆದೇ ಹೋಗುವುದು ನನಗಿನ್ನೂ ನೆನಪಿದೆ. ಹಾಗೆಯೇ ಅಪ್ಪನೊಂದಿಗೆ ಯಕ್ಷಗಾನ ತರಗತಿಗೆ ಹೋಗಿ ಅವರೊಂದಿಗೆ ಒಂದೆರಡು ಹೆಜ್ಜೆ ಹಾಕಿದ ಆ ರಸಮಯ ಕ್ಷಣಗಳು ನಿಜಕ್ಕೂ ಅವಿಸ್ಮರಣೀಯ. ಇಂತಹ ಬಾಲ್ಯ ಖಂಡಿತ ಇನ್ನೊಮ್ಮೆ ಸಿಗದು. ಆ ಕಾಲಘಟ್ಟದಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು. ಕಂಬಳ, […]

ಕಲೆ-ಸಂಸ್ಕೃತಿ

ಶಕ್ತಿಸ್ವರೂಪಿಣಿ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ಸನ್ನಿದಿ: ಶ್ರೀ ಜಗದೀಶ ಸಂ.ಗೊರೋಬಾಳ

ಮಂದಾರ್ತಿ ಎಂದಾಕ್ಷಣ ಕುಂದ ಮಂದಾರಾದಿಗಳ ಗಂಧ ಮಕರಂದವನ್ನು ಆಗ್ರಾಣಿಸುವ ಆಸ್ವಾದಿಸುವ ವೃಂದಾರಕ ವೃಂದವೇ ಬಂದು ನೆಲೆಸಿರುವ ಪುಣ್ಯಭೂಮಿಯೇ ಮಂದಾರ್ತಿ ಎಂದು ಯಕ್ಷಗಾನದಲ್ಲಿ ಕೇಳಿದ ಮಾತು ನಮಗೆ ನೆನಪಾಗುತ್ತದೆ. ದಕ್ಷಿಣ ಭಾರತದ ಪ್ರಮುಖ ಹಿಂದೂ ದೇವಳಗಳಲ್ಲಿ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನವು ಬಹಳ ವಿಶಿಷ್ಟವಾದುದು. ಸರ್ವಮುನಿಜನ ಪೂಜಿತೆ, ಸಂಕಷ್ಟ ಕಳೆಯುವ ಅಂಬಿಕೆ ಶಕ್ತಿಸ್ವರೂಪಿಣಿ ಸನ್ನದಿಗೆ ರಾಜ್ಯ ಹೊರರಾಜ್ಯಗಳಿಂದ ಅಸಂಖ್ಯಾತ ಭಕ್ತರು ಶ್ರೀಕ್ಷೇತ್ರ ಮಂದಾರ್ತಿಗೆ ಆಗಮಿಸಿ ಇಷ್ಟಾರ್ಥ ನೆರವೇರಿಸಿಕೊಳ್ಳುತ್ತಾರೆ. ನಮ್ಮ ಕರ್ನಾಟಕದ ರಮ್ಯಮನೋಹರ ತಾಣ ಮಂದಾರ್ತಿಯ ಕಿರು ಪರಿಚಯ […]

ಕಲೆ-ಸಂಸ್ಕೃತಿ

ದಿಟ್ಟ ಬಾಲಕಿಯೋರ್ವಳ ಕಥಾನಕದ ‘ಸಮಸ್ಯೆಗಳ ಮೆಟ್ಟಿ ನಿಂತ ಬಾಲಕಿ’ ನಾಟಕ ಪ್ರದರ್ಶನ: ಪ್ರೊ.ಅನ್ನಪೂರ್ಣ ತಳಕಲ್

ಇತ್ತೀಚೆಗೆ (26-08-2018) ಹುಬ್ಳಳ್ಳಿ-ಧಾರವಾಡ ನಗರಗಳನ್ನು ಸುತ್ತ-ಮುತ್ತ ಬೆಳೆದರೂ ತನ್ನ ಸೊಗಡನ್ನು ಕಳೆದುಕೊಳ್ಳದ ಸುತಗಟ್ಟಿ ಗ್ರಾಮದಲ್ಲಿ ಮಕ್ಕಳ ನಾಟಕವೊಂದನ್ನು ವೀಕ್ಷಿಸುವ ಭಾಗ್ಯ ಸಿಕ್ಕಿತ್ತು. ಆ ನಾಟಕದಲ್ಲಿ ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ ಎಂಬ ಮಾತಿನಂತೆ ಗ್ರಾಮೀಣ ಪ್ರದೇಶದ ಬಡ ಕುಟುಂಬದ ಹಿನ್ನಲೆಯ ಬಾಲಕಿಯೋರ್ವಳು ತನಗೆದುರಾಗುವ ಸಂಕಷ್ಟಗಳನ್ನು ಸಮಯೋಚಿತವಾಗಿ ಜಾಣ್ಮೆಯಿಂದ ಎದುರಿಸುವ ಕಥಾನಕದ ಕು.ಬಿಂದು ಮತ್ತಿಕಟ್ಟಿ ರಚನೆಯ ‘ಸಮಸ್ಯೆಗಳ ಮೆಟ್ಟಿ ನಿಂತ ಬಾಲಕಿ’ ನಾಟಕವನ್ನು ಹುಬ್ಬಳ್ಳಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುತಗಟ್ಟಿಯ ವಿದ್ಯಾರ್ಥಿ ಮಕ್ಕಳು ಶಾಲಾ ಆವರಣದ ರಂಗಮಂದಿರದಲ್ಲಿ […]

ಕಲೆ-ಸಂಸ್ಕೃತಿ

ಬದಲಾದ ಗಣೇಶೋತ್ಸವದ ಸ್ವರೂಪ!: ಹೊರಾ.ಪರಮೇಶ್ ಹೊಡೇನೂರು

ನಮ್ಮ ಭಾರತೀಯ ಪರಂಪರೆಯಲ್ಲಿ ಹಬ್ಬಗಳು ವಿಶೇಷ ಸ್ಥಾನ ಪಡೆದಿವೆ. ಅದರಲ್ಲೂ  ಹಿಂದೂ ಪಂಚಾಂಗದ ಹೊಸ ವರ್ಷದ ದಿನವೆಂದೇ ಸಂಭ್ರಮಪಡುವ ಚಾಂದ್ರಮಾನ ಯುಗಾದಿಯಿಂದ ಹಿಡಿದು ನಾಗರ ಪಂಚಮಿ, ರಕ್ಷಾ ಬಂಧನ, ವರಲಕ್ಷ್ಮೀ ವ್ರತ, ಗೌರೀ ಗಣೇಶ ಚತುರ್ಥಿ, ನಾಡ ಹಬ್ಬ ದಸರಾ, ನರಕ ಚತುರ್ದಶಿ, ಬಲಿಪಾಡ್ಯಮಿ, ಸಂಕ್ರಾಂತಿ ಮುಂತಾದ ಹಬ್ಬಗಳ ಜೊತೆಗೆ ವಿವಿಧ ಹರಿದಿನಗಳನ್ನೂ ಆಚರಿಸುವ ಮೂಲಕ ಸಂಭ್ರಪಡುತ್ತೇವೆ.           ಈ ಎಲ್ಲಾ ಹಬ್ಬಗಳು ಒಂದೊಂದು ಪೌರಾಣಿಕ ಹಿನ್ನೆಲೆಯಲ್ಲಿ,  ಆಯಾ ಋತುಮಾನಗಳ ಹೊಂದಿಕೆಗೆ […]

ಕಲೆ-ಸಂಸ್ಕೃತಿ

ಮೇರು ವಿಮರ್ಶಕ- ರಾಷ್ಟ್ರಕವಿ ಕುವೆಂಪು ಮತ್ತು ಅವರ ವಿಮರ್ಶಾ ವೈಶಿಷ್ಟ್ಯತೆ: ಡಾ. ಹನಿಯೂರು ಚಂದ್ರೇಗೌಡ

ರಾಷ್ಟ್ರಕವಿ ಕುವೆಂಪು ಅವರ ವ್ಯಕ್ತಿತ್ವದಲ್ಲಿ ಭಾರತೀಯ ಸಂಸ್ಕøತಿಯ ಬಗ್ಗೆ ಅಭಿಮಾನ, ಅಧ್ಯಾತ್ಮ ಜ್ಯೋತಿಯ ವಿಷಯದಲ್ಲಿ ಅಚಲಶ್ರದ್ಧೆ, ವಿಭೂತಿಪೂಜೆಯಲ್ಲಿ ನಿಷ್ಠೆ, ಸಾಹಿತ್ಯದ ಪರಮಪ್ರಯೋಜನದಲ್ಲಿ ಪೂರ್ಣವಿಶ್ವಾಸ, ಪ್ರಕೃತಿಯ ಬಹುಮುಖ ವಿನ್ಯಾಸದಲ್ಲಿ ಒಂದು ಆತ್ಮೀಯತೆ, ಭವ್ಯತೆಯ ಅನುಭವದಲ್ಲಿ ಭಕ್ತಿ, ಜೀವನದಲ್ಲಿ ಧರ್ಮದ ಮೂಲಭೂತ ಅಗತ್ಯವನ್ನು ಒಪ್ಪುವ ಮನೋಧರ್ಮ, ಜನತೆಯ ಉದ್ಧಾರಕ್ಕಾಗಿ ಹಂಬಲಿಸುವ ಚೇತನ, ಆತ್ಮಸಾಕ್ಷಾತ್ಕಾರದ ಲಕ್ಷ್ಯ-ಇವೆಲ್ಲವೂ ಒಂದು ಸುಂದರ ಪಾಕದಲ್ಲಿ ಸಮರಸವಾಗಿ ಏಕತ್ರಗೊಂಡಿವೆ. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಟ್ಯಾಗೋರ್, ಶ್ರೀಅರವಿಂದ, ರಮಣಮಹರ್ಷಿ, ಗಾಂಧೀಜಿ-ಇನ್ನಿತರೆ ಭಾರತೀಯ ಮಹಾತ್ಮರ ವಿಚಾರಗಳಿಂದ ಭಾವಿತವೂ ಪ್ರಭಾವಿತವೂ […]

ಕಲೆ-ಸಂಸ್ಕೃತಿ

ಜನಜಾಗೃತಿಯ ಮಹಾಮಾರ್ಗದ ‘ಆಯುಧ’ ನಾಟಕ ಪ್ರಯೋಗ: ಹಿಪ್ಪರಗಿ ಸಿದ್ಧರಾಮ

ಬದುಕಿನಲ್ಲಿ ಸರ್ವವನ್ನು ಕಳೆದುಕೊಂಡ ವ್ಯಕ್ತಿಯೋರ್ವ ಅಂತಿಮವಾಗಿ ಗುರುವಿನ ಹುಡುಕಾಟದಲ್ಲಿ ಅಲೆಮಾರಿಯಾಗಿ ತಾಯಿಯನ್ನು ಕಳೆದುಕೊಂಡ ಮಗುವಿನಂತೆ ಹಂಬಲಿಸುತ್ತಾ ರಂಗಪ್ರವೇಶಿಸುವುದರೊಂದಿಗೆ ‘ಆಯುಧ’ ನಾಟಕ ಅಸಂಗತವಾಗಿ ಆರಂಭವಾಗುತ್ತದೆ. ಕೆಲಸವಿಲ್ಲದ ವಿದ್ಯಾವಂತ ನಿರುದ್ಯೋಗಿಗಳು ಬಡಾವಣೆಯೊಂದರ ಹರಟೆ ಕಟ್ಟೆಯಲ್ಲಿ ಕಲಿತ ವಿದ್ಯೆಯನ್ನು ಮರೆತು ಇಸ್ಪೀಟು, ಜೂಜಾಟದಲ್ಲಿ ತೊಡಗಿಸಿಕೊಂಡಿರುತ್ತಾರೆ. ಅಲ್ಲಿಗೆ ಆಗಮಿಸುವ ಅನಾಮಿಕನೋರ್ವನು ‘ಸೇವ್ ಇಂಡಿಯಾ ; ಸೇವ್ ಡೆಮಾಕ್ರಸಿ’ ಎಂದು ತನ್ನಷ್ಟಕ್ಕೆ ತಾನೆ ಬಡಬಡಿಸುತ್ತಾ, ನಗುತ್ತಾ ಅವಧೂತನಂತೆ ಆಗಮಿಸಿ, ಕುಳಿತುಕೊಳ್ಳುತ್ತಾನೆ. ಹೀಗೆ ಎಷ್ಟೋ ಹೊತ್ತು ನಡೆದರೂ ನಿರುದ್ಯೋಗಿಗಳು ಮತ್ತು ಅನಾಮಿಕರ ನಡುವೆ ಯಾವುದೇ ಸಂವಹನ […]

ಕಲೆ-ಸಂಸ್ಕೃತಿ

ಗಾದೆಗಳು- ರೂಪದಲ್ಲಿ ವಾಮನ, ಅರ್ಥದಲ್ಲಿ ತ್ರಿವಿಕ್ರಮ: ಹೊರಾ.ಪರಮೇಶ್ ಹೊಡೇನೂರು

         ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಜನಪದ ಸಾಹಿತ್ಯವೂ ಪ್ರಮುಖವಾದುದಾಗಿದೆ. ಜನಪದರ ಅನುಭವ ಜನ್ಯವಾಗಿ ಉದಯಿಸಿದ ಈ ಸಾಹಿತ್ಯ ಪ್ರಕಾರದಲ್ಲಿ "ಗಾದೆಗಳು" ವಿಶೇಷವಾಗಿ ಗಮನ ಸೆಳೆಯುತ್ತವೆ. "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎಂಬ ಜನಜನಿತವಾದ ಗಾದೆಯೆ ಗಾದೆಗಳ ಮಹತ್ವ, ಅರ್ಥವಂತಿಕೆಯನ್ನು ಎತ್ತಿ ತೋರಿಸುತ್ತದೆ.          ಗಾದೆಗಳು ಜನಸಾಮಾನ್ಯರ ಪ್ರತ್ಯಕ್ಷ ಅನುಭವಗಳ ಮೂಸೆಯಿಂದ ರೂಪುಗೊಂಡಿರುವುದರಿಂದ ಅವುಗಳ ಅರ್ಥ ಸುಲಭವಾಗಿ ತಿಳಿಯುವುದರ ಜೊತೆಗೆ ಹೆಚ್ಚಿನ ಆಸಕ್ತಿಯನ್ನು ಉಂಟುಮಾಡುತ್ತವೆ. ದೈನಂದಿನ ಸಂದರ್ಭಗಳಲ್ಲಿ ಇಕ್ಕಟ್ಟುಗಳು […]

ಕಲೆ-ಸಂಸ್ಕೃತಿ

ಮಹಿಳಾ ಕಲಾವಿದರ “ಏಕಲವ್ಯ” ದೊಡ್ಡಾಟ ಪ್ರದರ್ಶನ: ಹಿಪ್ಪರಗಿ ಸಿದ್ಧರಾಮ

ದಲಿತ ಕವಿ ಡಾ.ಸಿದ್ದಲಿಂಗಯ್ಯನವರು ರಚಿಸಿದ ‘ಏಕಲವ್ಯ’ ನಾಟಕವನ್ನು ಉತ್ತರ ಕರ್ನಾಟಕದ ಜನಪದರ ದೊಡ್ಡಾಟ ಶೈಲಿಗೆ ಅಳವಡಿಸಿ ದಶಕಗಳಷ್ಟು ಹಿಂದೆಯೇ ಮೆಚ್ಚುಗೆ ಪಡೆದ ಹಿರಿಯ ಕಲಾವಿದ ಟಿ.ಬಿ.ಸೊಲಬಕ್ಕನವರ ಮಾರ್ಗದರ್ಶನದಲ್ಲಿ ಹರಪನಹಳ್ಳಿಯ ‘ಸಮಸ್ತರು’ ತಂಡದ ಮಹಿಳಾ ಕಲಾವಿದರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ (ಕವಿವ) ಸಂಘದಲ್ಲಿ ಇತ್ತೀಚೆಗೆ (ಜ.17) ಬಿ.ಪರಶುರಾಮ ನಿರ್ದೇಶನದಲ್ಲಿ ಅಭಿನಯಿಸಿದರು. ಕವಿವ ಸಂಘದ ಕಲಾಮಂಟಪದ ಆಶ್ರಯದಲ್ಲಿ ಜರುಗಿದ ಈ ಪ್ರದರ್ಶನದಲ್ಲಿ ಒಂದೆರಡು ಪ್ರಮುಖ ಪಾತ್ರಗಳನ್ನು ಹೊರತುಪಡಿಸಿದರೆ ಎಲ್ಲರೂ ಮಹಿಳಾ ಕಲಾವಿದರು ದೊಡ್ಡಾಟದ ತಾಳಕ್ಕೆ ಹೆಜ್ಜೆಹಾಕಿದ್ದು ಇತ್ತೀಚಿನ ದಿನಗಳಲ್ಲಿ ಹೊಸಪ್ರಯೋಗವೆನಿಸಿ, […]

ಕಲೆ-ಸಂಸ್ಕೃತಿ

ಸಾವಿರದ ಸರದಾರ ರವಿ ಭಜಂತ್ರಿಯವರ “ನಗೆ ರತ್ನಮಂಜರಿ” ವಿಡಿಯೋ ಸಿ.ಡಿ.: ಗುಂಡೇನಟ್ಟಿ ಮಧುಕರ

ಅಂದು ಹುಕ್ಕೇರಿ ಬಾಳಪ್ಪನವರನ್ನು ಸಾವಿರ ಪದಗಳನ್ನು ಹಾಡಿದವರೆಂಬ ಹಿನ್ನೆಲೆಯಲ್ಲಿ ಬೇಂದ್ರೆಯವರು ‘ಸಾವಿರದ ಸರದಾರ’ ಅಂದರೆ ‘ಸಾವು’ ಇರದ ಸರದಾರ ಎಂಬ ಅರ್ಥದಲ್ಲಿ ಹೊಗಳಿದ್ದರಂತೆ. ಹುಕ್ಕೇರಿ ಬಾಳಪ್ಪನವರು ತಮ್ಮ ಹಾಡುಗಳಿಂದ ಇಂದಿಗೂ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅಂದು ಬೇಂದ್ರೆಯವರು ಹೇಳಿದ ಮಾತು ಇಂದು ಮಾತಿನ ಮೋಡಿಗಾರ ರವಿ ಭಜಂತ್ರಿಯವರಿಗೆ ಅನ್ವಯಿಸುತ್ತದೆ. ಸಾವಿರ ಹಾಸ್ಯಭಾಷಣಗಳ ಧಾಖಲೆ ಮಾಡುವ ಮೂಲಕ ಭಜಂತ್ರಿಯವರು ಸಾವಿರದ ಸರದಾರರಾಗಿದ್ದಾರೆ. ಇವರ ಭಾಷಣಗಳೂ ‘ಸಾವು’ ಇರದ ಭಾಷಣಗಳೆಂಬುದರಲ್ಲಿ ಎರಡು ಮಾತಿಲ್ಲ.        ರವಿ ಭಜಂತ್ರಿ ಹಾಸ್ಯಲೋಕದಲ್ಲಿ ಚಿರಪರಿಚಿತ […]

ಕಲೆ-ಸಂಸ್ಕೃತಿ

ಎಸ್ ಎಫ್ ಹುಸೇನಿಯವರ ಗಣೇಶ ಕಲಾಕೃತಿಗಳ ಪ್ರದರ್ಶನ

ತ್ರಿವರ್ಣ ಗಣಪ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರೀಯ ಧ್ವಜದ ಬಣ್ಣದಿಂದ ಕಂಗೊಳಿಸುತ್ತಿರುವ ಎಸ್ ಎಫ್ ಹುಸೇನಿಯವರ ಗಣೇಶ ಕಲಾಕೃತಿಗಳ ಪ್ರದರ್ಶನ ಮೈಸೂರಿನಲ್ಲಿ ನಡೆಯುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ನಂತರ ಸಾಲುಸಾಲು ಹಬ್ಬಗಳು ಆರಂಭವಾಗುತ್ತವೆ. ಇನ್ನೇನು ಕೆಲವೇ ದಿನಗಳಲ್ಲಿ ಗೌರಿ – ಗಣೇಶ ಹಬ್ಬವೂ ಬರಲಿದೆ. ಸ್ವಾತಂತ್ರ್ಯವೆನ್ನುವುದು ನಮ್ಮ ಸುತ್ತಲಿನ ಪರಿಸರ ರಕ್ಷಣೆಯ ಹೊಣೆಗಾರಿಕೆಯೊಂದಿಗೆ ಬರುತ್ತದೆ ಎನ್ನುತ್ತಾರೆ ಕಲಾವಿದ ಹುಸೇನಿ. ‘ಮುಂಬರಲಿರುವ ಗೌರಿ – ಗಣೇಶ ಹಬ್ಬದಲ್ಲಿ ರಾಸಾಯನಿಕ ಹಾಗೂ ಹಾನಿಕಾರಕ ಪದಾರ್ಥಗಳಿಂದ ಮುಕ್ತವಾದ ಗಣೇಶ ನಮ್ಮ ಮನೆಗಳನ್ನು ಪ್ರವೇಶಿಸಲಿ’ […]

ಕಲೆ-ಸಂಸ್ಕೃತಿ

ನಗಿಸಲು ಪ್ರಯತ್ನಿಸಿದ ನಗೆ ನಾಟಕೋತ್ಸವ: ಹಿಪ್ಪರಗಿ ಸಿದ್ಧರಾಮ

ಸದಭಿರುಚಿಯ ನಾಟಕಕಾರ ಹುಬ್ಬಳ್ಳಿಯ ಡಾ.ಗೋವಿಂದ ಮಣ್ಣೂರ ಅವರು ಹಿಂದೊಂದು ಕಾಲದ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ ಪುಟ್ಟಣ್ಣ ಕಣಗಾಲ ನಿರ್ದೇಶನದ ಕನ್ನಡ ಚಿತ್ರ ‘ಉಪಾಸನೆ’ಯಲ್ಲಿ ನಾಯಕಿ ಆರತಿಗೆ ಸಮಸಮನಾಗಿ ನಾಯಕ ಪಾತ್ರದಲ್ಲಿ ನಟಿಸಿ, ಹೆಸರಾದವರು. ಮುಂದೆ ಏನಾಯಿತೋ ಗೊತ್ತಿಲ್ಲ, ಚಿತ್ರರಂಗದ ಸಹವಾಸ ಬಿಟ್ಟು, ಹುಬ್ಬಳ್ಳಿಯಲ್ಲಿ ಸೈಲೆಂಟಾಗಿ ತಮ್ಮ ವೃತ್ತಿಯೊಂದಿಗೆ ಆಗಾಗ ಧಾರವಾಡ ಆಕಾಶವಾಣಿಗೆ ಸದಭಿರುಚಿಯ ಹಾಸ್ಯ ನಾಟಕಗಳನ್ನು ರಚಿಸಿ ಕೊಡುವುದು, ಕಲಾವಿದರನ್ನು ಪ್ರೋತ್ಸಾಹಸಿ, ಸಂಘಟಿಸುವುದು, ಪತ್ರಿಕೆಗಳಿಗೆ ಕಾಲಮ್ ಬರೆಯುತ್ತಾ ತಮ್ಮಲ್ಲಿರುವ ಸೃಜನಶೀಲತೆಯನ್ನು ಇಂದಿಗೂ ಕಾಪಿಟ್ಟುಕೊಂಡು ಸಕ್ರೀಯರಾಗಿದ್ದಾರೆ. ಇಂತಹ […]

ಕಲೆ-ಸಂಸ್ಕೃತಿ

ಅನ್ಯಾಯದ ವಿರುದ್ಧದ ಹೋರಾಟಕ್ಕೆ ಸ್ಪೂರ್ತಿ ‘ಅಗ್ನಿದಿವ್ಯ’ ನಾಟಕ ಪ್ರಯೋಗ: ಹಿಪ್ಪರಗಿ ಸಿದ್ಧರಾಮ

ಆಸ್ಟ್ರೀಯನ್ ಮೂಲದ ಜರ್ಮನಿಯ ರಾಜಕಾರಣಿಯಾಗಿದ್ದು, ನಂತರ ಸರ್ವಾಧಿಕಾರಿಯಾಗಿ ಬದಲಾದ ಅಡಾಲ್ಪ್ ಹಿಟ್ಲರ್ ಯಾರಿಗೆ ತಾನೆ ಗೊತ್ತಿಲ್ಲ ?  ಇತ್ತೀಚೆಗೆ (07-03-2016) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬೆಂಗಳೂರಿನ ಆವಿಷ್ಕಾರ ತಂಡದ ಕಲಾವಿದರು ಡಾ.ಬಿ.ಆರ್.ಮಂಜುನಾಥ ರಚಿಸಿದ ‘ಅಗ್ನಿದಿವ್ಯ’ ನಾಟಕವನ್ನು ಭಾನು ನಿರ್ದೇಶನದಲ್ಲಿ ಅಭಿನಯಿಸಿದರು. ಯುರೋಪಿನ ಇತಿಹಾಸದ ಕಾಲಘಟ್ಟವೊಂದರಲ್ಲಿ ಬದಲಾವಣೆಗೆ ತಹತಹಿಸುವ ಕ್ರಾಂತಿಕಾರಿ ಮನೋಭೂಮಿಕೆಯ ವ್ಯಕ್ತಿಯೊಬ್ಬನು ಚಾಣಾಕ್ಷತನದಿಂದ ಪರಿಸ್ಥಿತಿಯನ್ನು ಎದುರಿಸುತ್ತಾ ವ್ಯವಸ್ಥೆಯೊಂದಕ್ಕೆ ಸವಾಲಾಗುತ್ತಾ, ಅದೇ ವ್ಯವಸ್ಥೆಯನ್ನು ಪ್ರಶ್ನಿಸುವ ಗಂಭೀರ ಕಥಾನಕದ ಪ್ರಯೋಗವನ್ನು ಪ್ರೇಕ್ಷಕರು ಕುತೂಹಲದೊಂದಿಗೆ ವೀಕ್ಷಿಸಿದರು. ಆವಿಷ್ಕಾರ, ಎಐಡಿವೈಒ ಮತ್ತು […]

ಕಲೆ-ಸಂಸ್ಕೃತಿ

ಪುರಾಣಂ ಪರಾಭವಂ’ನ ಒಂದು ರಂಗ ನೋಟ: ಮಂಜುಳಾ ಎಸ್.

ಉತ್ತರ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ, ಮೈಸೂರು, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಾವಣಗೆರೆ ಹೀಗೆ ಕರ್ನಾಟಕದ ವಿವಿಧ ಭಾಗಗಳಿಂದ, ವಿವಿಧ ರೀತಿಯ ಸಂಸ್ಕøತಿ, ಸಾಮಾಜಿಕ ಹಿನ್ನಲೆಯನ್ನು ಹೊತ್ತು ಬಂದಿರುವ ನಮ್ಮ ತೆನೆ ಗುಂಪಿನಲ್ಲಿ, ಕೌರವರ ಜೊತೆ ಪಾಂಡವರು ಪಗಡೆಯಾಟದಲ್ಲಿ ಸೋತಾಗ ದ್ರೌಪದಿ ಬೆತ್ತಲಾಗಿದ್ಲು, ಪ್ರಸ್ತುತ ಕತ್ತಲಲ್ಲೂ, ಬೆಳಕಲ್ಲೂ ದೇವದಾಸಿ ವ್ಯವಸ್ಥೆಯಲ್ಲಿ, ಲೈಂಗಿಕ ಕಾರ್ಯಕರ್ತೆಯರಾಗಿ, ಬೇರೆ ಬೇರೆ ಕಾರಣಗಳಿಂದ, ಅನಿವಾರ್ಯತೆಗಳಿಂದ, ಬೆತ್ತಲಾದ ವ್ಯವಸ್ಥೆಯಿಂದ ಬಂದವರು, ನಮ್ಮ ಜೀವನದಲ್ಲಿ ಇನ್ಯಾರೋ ಬಂದು ನಿರ್ಧಾರದ ಅಧಿಕಾರ ಚಲಾಯಿಸುವ ವ್ಯವಸ್ಥೆಯನ್ನು […]

ಕಲೆ-ಸಂಸ್ಕೃತಿ

ಪುಣ್ಯಕೋಟಿ-ಜಾನಪದ ಕಥನ ನಾಟಕ ಪ್ರದರ್ಶನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಮೈಸೂರು ಸರ್ಕಾರಿ ಪ್ರೌಢಶಾಲಾ, ಕುಕ್ಕರಹಳ್ಳಿ ಮೈಸೂರು ಸರ್ವೋದಯ ದಿನಾಚರಣೆ ಉಪನ್ಯಾಸ ಮತ್ತು ನಾಟಕ ಪ್ರದರ್ಶನ  ನಮ್ಮೊಂದಿಗೆ ಶ್ರೀ ಎಂ.ಕೆ.ಬೋರೇಗೌಡ ನಿವೃತ್ತ ಮುಖ್ಯ ಶಿಕ್ಷಕರು      ಶ್ರೀ ಎನ್.ಎಸ್.ಗೋಪಿನಾಥ್ ಮಾಜಿ ಸಿಂಡಿಕೇಟ್ ಸದಸ್ಯರು,ಮೈಸೂರು ವಿಶ್ವವಿದ್ಯಾಲಯ ಮಕ್ಕಳು ಅಭಿನಯಿಸುವ ಜಾನಪದ ಕಥನ ಪುಣ್ಯಕೋಟಿ ಪರಿಕಲ್ಪನೆ ಮತ್ತು ವಿನ್ಯಾಸ :ಜೀವನ್ ಹೆಗ್ಗೋಡು ವಸ್ತ್ರ ವಿನ್ಯಾಸ : ಶೀಲಾ.ಎಸ್  ಪರಿಕರ ಮತ್ತು ಪ್ರಸಾಧನ : ಮಂಜು ಕಾಚಕ್ಕಿ ನಿರ್ದೇಶನ : ದೀಪಕ್ ಮೈಸೂರು ದಿನಾಂಕ : 30.01.16 […]

ಕಲೆ-ಸಂಸ್ಕೃತಿ

ನೆರಳು-ಬೆಳಕಿನ ಮಾಯಾಲೋಕದ ಮಹಿಳಾ ಭಾರತ: ಹಿಪ್ಪರಗಿ ಸಿದ್ಧರಾಮ, ಧಾರವಾಡ

ಜೋಗುಳ ಹಾಡುವ ತಾಯಿಯ ಇಂಪಾದ ಧನಿಗೆ ತೊಟ್ಟಿಲ ಮಗು ನಿದ್ರೆಗೆ ಜಾರುವುದರೊಂದಿಗೆ ತೆರೆದುಕೊಳ್ಳುವ ಪುರಾಣ, ಇತಿಹಾಸ ಮತ್ತು ಸಮಕಾಲೀನಗಳ ಸಮಾಗಮದ ಸಂದರ್ಭಗಳ ಸಮ್ಮೀಶ್ರಣದ ಹದವಾದ ಪಾಕದಂತಹ ನಾಟಕ ಪ್ರದರ್ಶನ. ಕಾಲಬೇಧ ಮತ್ತು ಭಾಷಾಬೇಧಗಳಿಲ್ಲದೇ ಮಹಿಳಾ ಆಲಾಪದ ಕಲಾಪಗಳು ರಂಗದಲ್ಲಿ ನಡೆಯುತ್ತಾ, ಹಲವಾರು ಪ್ರಸಂಗಗಳ ಚರ್ಚೆ, ವಿಮರ್ಶೆಯ ಗಂಭೀರ ಕಥನವು ಕುತೂಹಲವನ್ನು ಹುಟ್ಟಿಸುತ್ತಲೇ ಪ್ರೇಕ್ಷಕ ಪ್ರಭುವಿನ ಗ್ರಹಿಕೆಯನ್ನು ವಿಸ್ತರಿಸುತ್ತಾ ಸಾಗುವ “ಮಹಿಳಾ ಭಾರತ” ನಾಟಕ ಪ್ರದರ್ಶನವು ಅದ್ಬುತವಾಗಿ ಇತ್ತೀಚೆಗೆ (03.01.2016) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕರ್ನಾಟಕ […]

ಕಲೆ-ಸಂಸ್ಕೃತಿ

” ರಾಮನಾಥಪುರ ಜಾತ್ರಾ ವೈಭವ”: ಹೊರಾ.ಪರಮೇಶ್ ಹೊಡೇನೂರು(ರುದ್ರಪಟ್ಟಣ)

  (ಕೃತಯುಗದಲ್ಲಿ ಸಂವರ್ತಕಾಪುರಿ, ತ್ರೇತಾಯುಗದಲ್ಲಿ ವಾಸವಾಪುರಿ, ದ್ವಾಪರಯುಗದಲ್ಲಿ ವಹ್ನಿಕಾಪುರಿ ಮತ್ತು ಈ ಕಲಿಯುಗದಲ್ಲಿ ರಾಮನಾಥಪುರವೆಂದು ಜನಪ್ರಿಯವಾಗಿರುವ ಅರಕಲಗೂಡು ತಾಲ್ಲೂಕಿನ ಪ್ರಸಿದ್ಧ ಸುಕ್ಷೇತ್ರ "ರಾಮನಾಥ ಪುರ"ದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಡಿಸೆಂಬರ್ 17 ರಂದು ರಧೋತ್ಸವವು ಜರುಗಿದ್ದು ಮುಂದಿನ ತಿಂಗಳ(ಜನವರಿ) 16ರವರೆಗೂ ನಡೆಯುವ ಜಾತ್ರೆಗೆ ಮುನ್ನುಡಿಯಾಗಿದೆ. ಈ ನಿಮಿತ್ಯ ಜಾತ್ರಾ ವೈಭವ ಮತ್ತು ಬದಲಾಗುತ್ತಿರುವ ಸ್ವರೂಪ ಕುರಿತ ಲೇಖನವಿದು) ಪುರಾಣ ಕಾಲದಲ್ಲಿ ಸೀತೆಯನ್ನು ಅಪಹರಿಸಿದ ರಾವಣೇಶ್ವರನನ್ನು ಸಂಹರಿಸಿದ ಶ್ರೀರಾಮನು ತನಗೆ ಬ್ರಹ್ಮ ಹತ್ಯೆ ದೋಷ ಕಾಡದಿರಲೆಂದು ವಾಸವಾಪುರಿಯ […]