ನೀಲಿ: ತಿರುಪತಿ ಭಂಗಿ

                                     ಮೊದಲ ಕೋಳಿ ಕೂಗಿತು. “ಅಯ್ಯೋ ಬೆಳಕ ಆತು. ಇಂದ ಬ್ಯಾರೆ ಅಮವಾಸಿ ಐತಿ ಹಾರಿಗೆಡಿಲಿ, ಈ ನಿದ್ದಿ ಒಂದ ನನಗ ದೆವ್ವ ಕಾಡಿದಂಗ ಕಾಡ್ತೈತಿ ನೋಡ, ಅಮವಾಸಿ ಅಡಗಿ ಮಾಡಬೇಕಾದ್ರ ಸೂರ್ಯಾ ನೆತ್ತಿ ಮ್ಯಾಲ ಬರ್ತಾನ” ಎಂದು ಗಡಬಡಿಸಿ ಹಾಸಗಿಯಿಂದ ಮ್ಯಾಲೆದ್ದು ನೀಲವ್ವ ಕಣ್ಣುಜ್ಜತೊಡಗಿದಳು. ತನ್ನ ಮಗ್ಗಲ ಮಲಿಗಿದ್ದ ಲಕ್ಕಪ್ಪ ಇನ್ನ … Read more

‘ನಿರ್ಧಾರ’: ರಮೇಶ್ ನೆಲ್ಲಿಸರ

'ನಂಗೊತ್ತಿತ್ತು ಒಂದ್ ದಿನ ನೀನು ಬಂದೇ ಬರ್ತೀಯ ಅಂತ' ಎಲ್ಲ ಸಂಬಂಧಗಳ ಬಂಧನವನ್ನು ಕಳಚಿ ಬಹುದೂರ ಸಾಗಿಬಂದ ಜಾಹ್ನವಿ,ರಾಘವ್ ತನ್ನನ್ನು ಏಂದಾದರೂ ಹುಡುಕಿಕೊಂಡು ಬಂದೇಬರುವನೆಂಬ ಆಸೆಯನ್ನು ಮನದ ಗರ್ಭದಲಿ ಸುಪ್ತ ಶಿಲಾಪಾಕದಂತೆ ಕಾಯ್ದಿಟ್ಟುಕೊಂಡಿದ್ದಳು. ಕಳೆದ ಹತ್ತು ವರ್ಷಗಳಿಂದ ಅನಾಥ ಮಕ್ಕಳ ಸೇವಾಸಂಸ್ಥೆ ನಡೆಸುತ್ತಿ‌ದ ಜಾಹ್ನವಿ ಮೊದಲ ಬಾರಿಗೆ ತನಗಾಗಿ ಇಷ್ಟೊಂದು ಖುಷಿಪಟ್ಟಿದ್ದಳು. ರಾಘವ್ ನ ಮುಖವನ್ನು ಕಣ್ತುಂಬಿಕೊಳ್ಳುತ್ತಿರುವಾಗಲೇ,ಹಿಂದೆ ಎಂದೋ ಕೀಲಿಹಾಕಿ ಭದ್ರಪಡಿಸಿ‌ದ್ದ ನೆನಪಿನ ಬಾಗಿಲು ತಂತಾನೆ ತೆರೆದುಕೊಂಡಿತು. ““““““““` ರಾಘವ್ ಹಾಗೂ ಜಾಹ್ನವಿ ಒಂದೇ ಕಾಲೇಜಿನಲ್ಲಿ ಕಲಿತದ್ದು,ರಾಘವ್ … Read more

ಶಾಲಿನಿ: ಶ್ರೀ, ಧಾರವಾಡ.

  ಸಂಜೆಗೆಂಪಿನ ಸೂರ್ಯ ಪೂರ್ವದಿಂದ ಪಶಚಿಮಕ್ಕೆ ಬಾಡಿಗೆಗೆ ಬಿಟ್ಟ ತನ್ನ ಕಿರಣಗಳನ್ನೆಲ್ಲ ಲೆಕ್ಕಹಾಕಿ ಹಿಂಪಡೆಯುತ್ತ ಮನೆಯ ಹಾದಿ ಹಿಡಿದಿದ್ದ. ಹುಬ್ಬಳ್ಳಿಯ ದುರ್ಗದಬೈಲಿನ ತುಂಬ ಬದಲಾಯಿಸಿದ ಚಹಾ ಪುಡಿಯ ಚಹಾ ಕುದಿಯುತ್ತ ತನ್ನ ಕಂಪನ್ನೆಲ್ಲ ಹರಡಿ ಸೂರ್ಯನಿಗೆ ಬೀಳ್ಕೊಟ್ಟು ಅಲ್ಲಿದ್ದವರನ್ನೆಲ್ಲ ತನ್ನ ಕಡೆಗೇ ಸೆಳೆಯುತ್ತಿತ್ತು. ಸಂಜೆಯಾಗುತ್ತಲೇ ಇಲ್ಲಿ ಹುಟ್ಟುವ ತಾತ್ಕಾಲಿಕ ಸಾಮ್ರಾಜ್ಯದಲ್ಲಿ ತರಾವರಿ ತಿನಿಸಿನಂಗಡಿಗಳು, ಮುಂಬೈಯಿಂದ ತರಿಸಿದ ಸೋವಿ ಬೂಟು, ಚಪ್ಪಲ್ಲು, ಜರ್ಕಿನ್ನುಗಳು, ದಾರಿಯ ಬದಿಗೆ ಬಿಕರಿಯಾಗುವ ಬ್ರ್ಯಾಂಡೆಡ್ ವಾಚುಗಳ ವಹಿವಾಟು ತನ್ನದೇ ತನ್ಮಯತೆಯಲ್ಲಿ ಸಾಗುತ್ತದೆ. ಈ ಪೇಟೆಯ … Read more

ಮಂಗಳಗೌರಿಯೂ ಫಾರಿನ್ ಸೊಸೆಯೂ: ಪಾರ್ಥಸಾರಥಿ ಎನ್

ಗೆಳೆಯ ಶಿವರಾಜ್ ಮನೆಗೆ ಹೋಗಿ ತುಂಬಾ ದಿನಗಳೆ ಕಳೆದಿದ್ದವು. ಅವನು ಮೊದಲಾದರು ದಿನಾ ಅಂತ ನಮ್ಮ ಮನೆಗೆ ಬರುತ್ತಿದ್ದವರು ಈಗ ರಿಟೈರ್ಡ್ ಆದಮೇಲೆ ಕಾಣಿಸುತ್ತಲೇ ಇಲ್ಲ,  ’ನಾನು ರಿಟೈರ್ಡ್ ಆದ ಮೇಲೆ ತುಂಬ ಎಂಗೇಂಜ್ ಆಗಿ ಬಿಟ್ಟಿದ್ದೀನಿ ಯಾವುದಕ್ಕು ಸಮಯವಿಲ್ಲ ಅಂತ ಅವನ ಗೋಳಾಟ’  ಒಮ್ಮೆ ಮಾತನಾಡಿಸಿಯಾದರು ಬರೋಣ, ಇನ್ನು ನನ್ನ ಮುಖ ಮರೆತೀತು ಎಂದು ಬಾನುವಾರ ಅವರ ಮನೆಗೆ ಹೋದೆ. ಮುಂಬಾಗಿಲು ತೆರೆದಿತ್ತು, ಸೀದಾ ಒಳಗೆ ಹೋದೆ, ಯಾರು ಕಾಣಲಿಲ್ಲ ಅನ್ನುವಷ್ಟರಲ್ಲಿ, ರೂಮಿನಲ್ಲಿ ಸಣ್ಣ ಶಬ್ದ, … Read more

ಹೀಗೊಂದಿಷ್ಟು ಕಥೆಗಳು (ಕಥೆಗಳಾ !!?) … : ಸುನೀತಾ ಮಂಜುನಾಥ್

ಹೀಗೊಂದಿಷ್ಟು ಕಥೆಗಳು ಪುಟ್ಟ ಪಾದಗಳಿಗೆ ಗೆಜ್ಜೆ ತೊಡಿಸಿದ್ದ ಅಪ್ಪ 'ಮಹಾಲಕ್ಷ್ಮಿಯ ಕಾಲು ಅಂತ ಮುತ್ತಿಟ್ಟಿದ್ದ  …  ಮದುವೆಯಾದ ವರ್ಷದೊಳಗೆ ಕುಡಿತ ಚಟವಾಗಿದ್ದ ಮಾವ ತೀರಿ ಹೋದ ಅತ್ತೆ ಮೈದುನಂದಿರು 'ಅದ್ಯಾವ ಘಳಿಗೆಯಲ್ಲಿ ಕಾಲಿಟ್ಟಳೋ ಮಾವನ್ನೇ ತಿಂದ್ಬಿಟ್ಲು' ಅಂತ ಮುಖ ಮುರಿದರು …  **** ಈವತ್ತು ಉಪವಾಸದ ಹಬ್ಬ (ಏಕಾದಶಿ )' ಅಂದ್ಲು ಅಮ್ಮ . ನಕ್ಕುಬಿಟ್ಟಳು   'ಅದೆಷ್ಟೋ ವರ್ಷಗಳಿಂದ  ದಿನಾ ಎರಡ್ಹೊತ್ತು ಉಪವಾಸ ಮಾಡ್ತಾನೆ ಇದ್ದೇವೆ . ಅದಕ್ಕೂ ಒಂದು ಹಬ್ಬ ಬೇಕೇ'   ಎಂಬಂತೆ … Read more

ಬ್ರೇಕಿಂಗ್ ನ್ಯೂಸ್ !!: ಜಯಶ್ರೀ ದೇಶಪಾಂಡೆ

ಮುಸ್ಸ೦ಜೆಯ ಮುಗಿಲು ಸೂರ್ಯನನ್ನು ಬೀಳ್ಕೊಟ್ಟು  ದಣಿವಾರಿಸಿಕೊಳ್ಲುವ ಹೊತ್ತಿನಲ್ಲಿ ಬಹುಶ: ದಾರಿ ತಪ್ಪಿರಬೇಕೆನಿಸಿ  ಮೇಲೆ ಒಮ್ಮೆ ದೃಷ್ಟಿ  ಹಾಯಿಸಿದ್ದಕ್ಕೂ  ಯಾರೋ ಪಿಸುದನಿಯಲ್ಲಿ ಮಾತಾಡಿದರೆ೦ಬ ಆಭಾಸವಾದದ್ದಕ್ಕೂ  ತಾಳೆಯಾಗಿತ್ತು. .ಯಾರಿರಬೇಕು ? ಅಥವಾ ಅದೊ೦ದು ಭ್ರಮೆಯೇ. . . ?              " ನಿಮ್ಮ ಧೈರ್ಯ ದೊಡ್ಡದು ಸ್ವಾಮಿ. . " ಅಚ್ಚರಿಯನ್ನು ಹೆಚ್ಚಿಸುತ್ತ ಸ್ವರ ಮು೦ದುವರಿಯಿತು, "ನಿಮಗೇ  ಸ್ವಾಮೀ ಹೇಳುತ್ತಿರುವುದು. . ನೀವು ಯಾರೆ೦ದು ನಾ ಕೇಳುವುದಿಲ್ಲ, ಆದರೆ ನೀವು ನೇರವಾಗಿ ಇಲ್ಲಿಗೇ … Read more

ಇವನು ಬದುಕಲೇ ಬೇಕು: ಜೆ.ವಿ.ಕಾರ್ಲೊ, ಹಾಸನ.

ಇಂಗ್ಲಿಷಿನಲ್ಲಿ: ರೊಆಲ್ಡ್ ದಾಹ್ಲ್ ಕನ್ನಡಕ್ಕೆ: ಜೆ.ವಿ.ಕಾರ್ಲೊ, ಹಾಸನ. ‘ಚಿಂತೆ ಮಾಡುವ ಅವಶ್ಯಕತೆಯೇ ಇಲ್ಲ. ಎಲ್ಲಾ ಸರಿಯಾಗಿದೆ.’ ವೈದ್ಯರು ಹೇಳುತ್ತಿದ್ದರು.. ಅವಳಿಗೆ ವೈದ್ಯರ ಸ್ವರ ಗಟ್ಟಿಯಾಗಿ, ಬಹಳ ದೂರದಿಂದೆಂಬಂತೆ ಕೂಗಿ ಹೇಳಿದಂತೆ ಭಾಸವಾಯಿತು. ‘ನಿನಗೆ ಗಂಡು ಮಗು ಹುಟ್ಟಿದ್ದಾನೆ!’ ವೈದ್ಯರು ಹೇಳಿದರು. ‘ಏನು?’ ಆಕೆ ಪ್ರಯಾಸದಿಂದ ಕೇಳಿದಳು.  ‘ಗಂಡು ಮಗು, ಗಂಡು ಮಗು. ಈಗ ಕೇಳಿಸಿತೇನು?’ ‘ಮಗು ಹೇಗಿದೆ ಡಾಕ್ಟರ್?’ ‘ಚೆನ್ನಾಗಿದೆ. ಚೆನ್ನಾಗಿದೆ.’ ‘ನಾನು ನೋಡಬಹುದೆ, ಡಾಕ್ಟರ್?’ ‘ಖಂಡಿತಾ, ಖಂಡಿತಾ. ಇನ್ನೊಂದು ಗಳಿಗೆ..’ ‘ಮಗು ಖಂಡಿತವಾಗಿಯೂ ಆರೋಗ್ಯದಿಂದೆಯಾ ಡಾಕ್ಟರ್?’ … Read more

ಅಂತ:ಕರಣ: ಕು.ಸ.ಮಧುಸೂದನ್

ಕಳೆದ ಒಂದು ತಿಂಗಳಿನಿಂದ ಶುರುವಾಗಿದ್ದ ರಾಮೇಗೌಡನ ಕಲ್ಲಿನ ಪುರಾಣ ಅವನ ಹೆಂಡತಿ ಮಗನ ತಲೆ ಕೆಡಿಸಿತ್ತು. ಅನ್ನ ಕಲೆಸಿ ಒಂದು ತುತ್ತು ಬಾಯಿಗಿಟ್ಟು ಅಗಿಯುತ್ತಿದ್ದಂತೆ, ‘ಅಯ್ಯೋ!ಕಲ್ಲು!ಕಲ್ಲು!’ ಅಂತ ರಾಮೆಗೌಡ ಕೂಗಾಡಲು ಪ್ರಾರಂಭಿಸುತ್ತಿದ್ದ. ಇದರಿಂದ ರೋಸತ್ತ ತಾಯವ್ವ ಪ್ರತಿ ಸಾರಿಯೂ ತಾನೇ ಅನ್ನ ಸಾರು ಕಲೆಸಿ ಒಂದೊಂದು ಅಗುಳನ್ನೂ ಹಿಚುಕಿ ನೋಡಿಊಟ ಬಡಿಸುತ್ತಿದ್ದಳು. ಅಷ್ಟಾದರು ಬಾಯಿಗಿಟ್ಟ ತುತ್ತನ್ನು ಉಗಿದು ಕಲ್ಲು, ಕಲ್ಲು ಎಂದು ಕೂಗಾಡುವುದನ್ನೇನು ರಾಮೇಗೌಡ ಬಿಟ್ಟಿರಲಿಲ್ಲ. ಜೊತೆಗೆ ‘ಬಡ್ಡೆತ್ತದೆ, ಬರೀ ಕಲ್ಲೇ ಉಣ್ಣಾಕಿಕ್ತಿಯಲ್ಲೇ ಬೇವಾರ್ಸಿ’ ಅಂತ ತಾಯವ್ವನ … Read more

ಸಾವ ಅರಸುತ್ತಾ……..: ರೋಷನ್ ಪೂಜಾರಿ

ಮರಳನ್ನ ಅಗೆದು ಅಗೆದು ರಾಶಿ ಮಾಡಿದ ಕಡೆಯಲ್ಲಿ  ನಿಧಾನವಾಗಿ ಹತ್ತುತ್ತಿರುವ, ಇರುವೆಗಳ ಸಾಲನ್ನ ತುಂಡರಿಸಿ ಹೋಗಿದ್ದು ಸಮುದ್ರದ ನೀರು …. ಅದೆಷ್ಟೋ ಬಾರಿ ಸಾರಿಕಾಳ ಕಾಲುಗಳನ್ನ ಮುಟ್ಟಿ ಹಿಂತಿರುಗಿ ಹೋದರು ಸಹ, ಸಮುದ್ರವನ್ನ ಕ್ಷಮಿಸುವ ಮನಸ್ಸು ಅವಳಿಗಿಲ್ಲವಾಗಿತ್ತು…..ಮದುವೆಯ ನಂತರದ ದಿನಗಳು , ಅವಳು ತನ್ನ ಜೀವನದಲ್ಲಿ ಕಳೆದ ಅತ್ಯಮೂಲ್ಯ ಕ್ಷಣ. ಹನಿಮೂನಿಗೆ ಒಂದು ವಾರ ಮುಂಚೆಯೇ ಇದ್ದ ಖುಷಿ, ಹನಿಮೂನು ಮುಗಿಸಿದ ಒಂದು ವಾರದ ನಂತರ ಇರಲಿಲ್ಲ. ವಿಧಿವಶರಾಗಿದ್ದ ತನ್ನ ಗಂಡನ ನೆನಪನ್ನ ಮರೆಯಲು, ಸಮುದ್ರದ ತಟಕ್ಕಿಂತ ಬೇರೆ … Read more

ತೆರೆದ ಕಿಟಕಿ: ಜೆ.ವಿ.ಕಾರ್ಲೊ

ಮೂಲ: ‘ಸಕಿ’ (ಹೆಚ್.ಹೆಚ್.ಮನ್ರೊ) ಅನುವಾದ: ಜೆ.ವಿ.ಕಾರ್ಲೊ ‘ಇನ್ನೇನು ಚಿಕ್ಕಮ್ಮ ಬರೋ ಹೊತ್ತಾಯ್ತು ಮಿಸ್ಟರ್ ನಟ್ಟೆಲ್. ಅಲ್ಲೀವರೆಗೂ ನೀವು ನನ್ನ ಕೊರೆತ ಕೇಳಲೇ ಬೇಕು. ಬೇರೆ ದಾರಿಯೇ ಇಲ್ಲ!’ ಎಂದಳು ಹುಡುಗಿ. ಅವಳಿಗೆ ಹದಿನಾಲ್ಕೋ, ಹದಿನೈದು ಆಗಿದ್ದಿರಬಹುದು. ವಯಸ್ಸೇ ಅಂತಾದ್ದು. ಚುರುಕಾಗಿದ್ದಳು. ಕಣ್ಣುಗಳಲ್ಲಿ ತುಂಟತನ, ಆತ್ಮವಿಶ್ವಾಸ ಭರಪೂರು ಎದ್ದು ಕಾಣುತ್ತಿತ್ತು. ಹುಡುಗಿಯ ದೃಷ್ಟಿಯಲ್ಲಿ ತೀರಾ ಮಂಕಾಗದಂತೆ ಏನಾದರೂ ಆಸಕ್ತಿ ಕೆರಳುವಂತಾದ್ದು ಹೇಳಲು ಅವನು ಮಾತುಗಳಿಗಾಗಿ ತಡಕಾಡಿದ. ಮನೋವ್ಯಾಕುಲತೆಯಿಂದ ಬಳಲುತ್ತಿದ್ದ ಅವನು ಈಗಷ್ಟೇ ಚೇತರಿಸಿಕೊಂಡಿದ್ದು, ವೈಧ್ಯರ ಸಲಹೆ ಮೇರೆಗೆ ವಿಶ್ರಮಿಸಿಕೊಳ್ಳಲು … Read more

ಕಗ್ರಾಸ ಹಿಡಿದ ಹೊತ್ತಲ್ಲಿ….: ಮಹಾದೇವ ಹಡಪದ

ನವಿಲುತೀರ್ಥದ ಈ ಮೂಲೆಯ ಹಳ್ಳಿಗೂ ಆ ಧಾರವಾಡ ಶಹರಕ್ಕೂ ಎಲ್ಲಿಂದೆಲ್ಲಿಯ ನಂಟು..?  ಅಪೂಟ ಮಳೆ ಹೋದಾಗಿನಿಂದ ಒಂದಳತಿ ನೆತ್ತಿ ಮ್ಯಾಗಳ ಸೂರ್ಯ ಇನ್ನೇನು ಬ್ಲಾಸ್ಟ ಆಗ್ತಾನೇನೋ ಅನ್ನೋ ಹಂಗ ಉರಿತಿದ್ದ. ರಸ್ತಾದ ಮ್ಯಾಲ ಬಿಸಿಲಗುದುರೆ ಅವಸರ ಮಾಡಿ ಓಡುತ್ತಿದ್ದರಿಂದ ಎಳೆಬಿಸಿಲು ರಣಹೊಡೆಧಂಗ ಹೊಡಿತಿತ್ತು. ಬಸ್ಸಿನ ಓಟವೂ, ನಿದ್ದಿಗೆಟ್ಟ ಹಸಿವು ಒಂದನಮೂನಿ ಕಸಾರಕಿ ಬಂದವರಂಗ ಹೊಟ್ಟಿಯಳಗ ಸುಳ್ಳಿ ಸುತ್ತುತ್ತಿದ್ದರಿಂದ – ಇದ್ದಬಿದ್ದದ್ದೆಲ್ಲ ಬಾಯಿಗೆ ಬಂದಂತಾಗಿ ವ್ಯಾ..ಕ ಎಂದು ಕಿಟಕಿಯೊಳಗ ಕಾರಿಕೊಂಡಳು. ಆಗ ಫ್ರೆಶ್ ಆಗಿ ಬಸ್ ಹತ್ತಿದವರ ಗರಿಗರಿ … Read more

ಅವ್ವ: ಸತೀಶ್ ಜೋಶಿ

ಅವ್ವ ನನ್ನನ್ನು ಕರೆದು ನನಗ ಸಲ್ಪು ಅಫು ತಂದು ಕೊಡು ಅಂದ್ಳು, ನಾ ಎಲ್ಲೆ ಸಿಗತದವ್ವಾ ಅಂದಾಗ ಬಾಯಿ ಮೇಲೆ ಸೆರಗಿಟ್ಟುಕೊಂಡು ಅಳಲು ಶುರು ಮಾಡಿದಳು. ನನಗೆ ಗಾಬರಿ ಆಗಿತ್ತೋ ಸಿಟ್ಟು ಬಂದಿತ್ತೋ ಈಗ ನೆನಪಿಲ್ಲ. ಅಫು ಅಂದ್ರೇನಂತ ನಾನೂ ಕೇಳ್ಲಿಲ್ಲ, ಅವ್ವನೂ ಹೇಳ್ಲಿಲ್ಲ. ಆ ಅಫು ತರೋ ವಿಚಾರ ಮಾತ್ರ ಅಲ್ಲಿಗೇ ನಿಂತಿತ್ತು. ನಾನು ಆಗ ಪಿಯುಸಿ ಓದ್ತಿದ್ದೆ, ಅಂದ್ರೆ, ಅಷ್ಟು ದೊಡ್ಡವನಿದ್ದೆ, ಆದ್ರೂ ನನಗೆ ಅಫು ಬಗ್ಗೆ ಗೊತ್ತಿರಲಿಲ್ಲ. ಈಗಿನ ಜನರೇಷನ್ ಹುಡುಗರಿಗೆ ಹೋಲಿಸಿದರೆ … Read more

ಮಲೆನಾಡಿನ ಕಂದರಗಳ ನಡುವೆ: ವಿನೋದ್ ಕುಮಾರ್

..ಹೇ.. ಆಶೋಕ..ರಾಘು.. ಕವಿತಾ.. ಬೇಗ ಬನ್ರೇ.. ಇಲ್ಲಿದೆ ಅದು.. ಬೇಗ ಬನ್ನಿ.. ಸಕತ್ತಾಗಿದೆ ನೋಡೋಕೆ.. ಅಂತ ಕೂಗಿದಳು ವೀಣಾ.. ಮಲೆನಾಡಿನ ಕಾಡಿನ ಆ ಕಡಿದಾದ ಹಾದಿಯಲ್ಲಿ.. ಅದೂ ಜಾರು ರಸ್ತೆ ಬೇರೆ.. ವೀಣಾಳ ಕೂಗಿಗೆ.. ಕವಿತಾ ಮತ್ತು ರಾಘು ಕೂಡಲೇ ವೀಣಾ ಇದ್ದ ಸ್ಥಳಕ್ಕೆ ತಲುಪಿದರು.. ಎಲ್ಲೇ ವೀಣಾ.. ಎಲ್ಲೇ ತೋರಿಸೇ ಬೇಗ.. ಅದೋ ಅಲ್ಲಿ ನೋಡಿ.. ಆ ಮತ್ತಿ ಮರದ ಬಲಭಾಗದ ದೊಡ್ಡ ಕೊಂಬೆ ಇದೆಯಲ್ಲ.. ಅದರ ತುದಿಯಲ್ಲಿ.. ಕೆಂಪು ಕಾಣ್ತಿದೆ ನೋಡಿ ಅದೇ.. ಮಲಬಾರ್ … Read more

ಮಾನಸಿ: ಮಹಾದೇವ ಹಡಪದ

        ಬರೋ…. ಬಂಧು ಬಳಗ ದೊಡ್ಡದು, ಆದ್ದರಿಂದ ಮದುವಿ ಮನಿ ತುಂಬ ಬರೇ ಹೊಯ್ಯ-ನಯ್ಯ ಮಾತುಕತೆ ಜೋರಾಗಿ ನಡೆದಿತ್ತು. ಅತ್ತಿ ಮಾವ ಬಂದ ಮಂದೀನ ಸಂಭಾಳಸಲಿಕ್ಕ ಮತ್ತು ಯಾವ ಅನಾನುಕೂಲ ಆಗಧಂಗ ನೋಡಕೊಳ್ಳಲಿಕ್ಕ ಒದ್ದಾಡೊ ಆ ಹೊತ್ತಿನಾಗ ಮನುಕುಮಾರ ಮತ್ತವನ ವಿಧವೆ ತಾಯಿ ಶಿವಕ್ಕ ಧೂಳಸಂಜಿ ಅಷ್ಟೊತ್ತಿಗೆ ಬಂದ್ರು. ‘ಇದೇನವಾ ಬೆಂಗ್ಳೂರು ಸೇರಿದ್ದ ಮಗರಾಯ ಅಪರೂಪಕ್ಕ ಅತ್ತಿ ಮನೀಗೆ ಬಂದನಲ’್ಲ ಸಣ್ಣತ್ತಿ ಚಾಷ್ಟಿ ಮಾಡಿದಳು. ಹೌದು ನಾಟಕ, ಹಾಡು, ಕುಣಿತ ಅಂತ ತಿರುಗೋ … Read more

ಕಾಡಹಾದಿ: ಮಹಾದೇವ ಹಡಪದ

ಆಷಾಢದ ಒಂದು ದಿನ ಹೊರಡಲು ನಿರ್ಧರಿಸಿ ಕೌದಿಯೊಳಗೆ ಮುಖವಿಟ್ಟು ಮಲಗಿದ. ಬಣ್ಣ-ಬಣ್ಣದ ಚೌಕಡಿಯೊಳಗೆ ಚಂದಮಾಮನ ಚಿತ್ರದಂತೆ ಗುಂಗುರು ಗುಂಗುರವಾಗಿ ನೂರಾರು ಆಲೋಚನೆಗಳು. ಸಗಣಿ ಸಾರಿಸಿದ್ದ ತಂವಟು ವಾಸನೆಯ ಕೋಣೆಯೊಳಗೆ ಬೀಡಿ ತುಂಡುಗಳೇ ನೆಲಹಾಸಿಗೆ. ಗುದ್ದು ಮುಚ್ಚಿದಷ್ಟು ನೆಲಗೆಬರಿ ತೂತು ಮಾಡುವ ಇಲಿಗಳು ಹಾಡಹಗಲಲ್ಲಿ ನಿರ್ಭಿಡೆಯಿಂದ ಓಡಾಡುತ್ತಲಿದ್ದವು. ಸತತ ಒಂಭತ್ತು ಸಲ ಪ್ರಯತ್ನಿಸಿ ಮೇಲೇರಿದ್ದ ಮಹ್ಮದನ ಕಾಲದ ಜೇಡ, ಜಂತಿ ತುಂಬೆಲ್ಲ ತನ್ನ ಹರಕು-ಮುರುಕು ಸಂಸ್ಥಾನಗಳ ಬಲೆ ಹೆಣೆದಿತ್ತು. ಹೂಸದಾಗಿ ಬಾಡಿಗೆಗೆ ಬಂದಾಗ ಸುಣ್ಣದ ಗೋಡೆಗೆ ಹಸಿರು ಡಿಸ್ಟೆಂಪರ್ … Read more

ಆಸರಕ್ಕೊಂದು ಬ್ಯಾಸರದ ನೆನಪು: ಮಹಾದೇವ ಹಡಪದ

ಶ್ರಾವಣದ ಜಿಟಿಜಿಟಿ ಮಳೀಗೆ ಧಾರವಾಡದ ಓಣಿಗಳೊಳಗೆ ರಾಡಿ ಹಿಡಿದಿತ್ತು. ಹಿಂಗ ನಿಂತ ಮಳಿ ಹಾಂಗ ಸುಳ್ಳಿ ಸುತಗೊಂಡು ರಪರಪ ಹೊಡಿತಿತ್ತು. ಬರೊ ತಿಂಗಳ ಒಂದನೇ ತಾರೀಖಿಗೆ ಖೋಲಿಯ ಬಾಡಿಗೆ ವಾಯಿದೆ ಮುಗಿಯೋದು ಇದ್ದುದ್ದರಿಂದ ನಾನು ಮತ್ತೊಂದು ಖೋಲಿ ತಪಾಸ ಮಾಡಲೇಬೇಕಿತ್ತು. ಅಗಸಿ ಓಣಿಯ ಕಡೀ ಮನಿ ಇದಾದುದರಿಂದ ಪ್ಯಾಟೀಗೂ ಮನೀಗೂ ಭಾಳ ದೂರ ಆಗ್ತಿತ್ತು. ಆಫಿಸಿನಿಂದ ಮಧ್ಯಾಹ್ನದ ಆಸರ-ಬ್ಯಾಸರಾ ಕಳಿಲಿಕ್ಕ ಮನಿಗೆ ಹೋಗಬೇಕಂದ್ರೂ ಅಡ್ಯಾಡೋದು ದೊಡ್ಡ ತ್ರಾಸ ಆಗತಿತ್ತು. ಹಂಗಾಗಿ ಎನ್.ಟಿ.ಟಿ,ಎಫ್, ಸಂಗಮ ಟಾಕೀಜ್ ಸುತ್ತಹರದು ಖೋಲಿ … Read more

ಹೀಗೊಂದು ಧರ್ಮ, ಜಾತಿ: ಪಾರ್ಥಸಾರಥಿ ಎನ್

’ನಿಮ್ಮದು ಯಾವ ಧರ್ಮ? ’  ’…. ಧರ್ಮವೆ?  ಹಿಂದೂ ಇರಬಹುದು’  ಆಕೆ ನನ್ನ ಮುಖವನ್ನು ವಿಚಿತ್ರವಾಗಿ ನೋಡಿದಳು.  ’ಇರಬಹುದು , ಅಂದರೆ ಏನು ಸಾರ್ ಸರಿಯಾಗಿ ಹೇಳಿ’  ಆಕೆಯ ಮುಖದಲ್ಲಿ ಅಸಹನೆ. ’ಸರಿ, ಹಿಂದೂ ಎಂದು ಬರೆದುಕೊಳ್ಳಿ’  ’ಮತ್ತೆ ಜಾತಿ ಯಾವುದು ಸಾರ್, ಅದರಲ್ಲಿ ಪಂಗಡ ಯಾವುದು ತಿಳಿಸಿ’  ’ಜಾತಿಯೆ ? ಯಾವುದೆಂದು ಸರಿಯಾಗಿ ತಿಳಿಯದು. ಪಂಗಡವು ಗೊತ್ತಿಲ್ಲ’  ಆಕೆಗೆ ನನ್ನ ಉತ್ತರದಿಂದ ರೇಗಿಹೋಯಿತು, ಆಕೆಯ ಸಹನೆಯೂ ಮೀರಿಹೋಗಿತ್ತು. ಬಿಸಿಲಿನಲ್ಲಿ ಅಲೆಯುತ್ತ ಮನೆಯಿಂದ ಮನೆಗೆ ಸುತ್ತುತ್ತ ಇದ್ದ … Read more

ಹರಕೆ ತೀರಿತ್ತು…! (ಕೊನೆ ಭಾಗ) : ಸಾವಿತ್ರಿ ವಿ. ಹಟ್ಟಿ

ನಾಗರಾಜ ಗದಗ್‍ಗೆ ಸ್ಥಳಾಂತರವಾದ ಮೇಲೆ ಮೊದಲ ದಿನಗಳಲ್ಲಿ ಮಂಕು ಬಡಿದವನಂತೆ ಕುಳಿತಿರುತ್ತಿದ್ದ. ಕ್ರಮೇಣ ಅವನು ಗೆಲುವಾಗತೊಡಗಿದ. ಮಕ್ಕಳೊಂದಿಗೆ ಬ್ಯಾಂಕ್ ರೋಡ್‍ನಲ್ಲಿರುವ ವಾಸು ಸ್ಟೋರ್‍ನಿಂದ ದೀಪಿಕಾಳಿಗೆ ಬೇಕಾಗುವ ಹೊಲಿಗೆ ಪರಿಕರಗಳನ್ನು ತರುವುದು, ಮಾರ್ಕೆಟ್‍ನಿಂದ ತರಕಾರಿ ತರುವುದು, ಸಾಯಂಕಾಲ ಹೆಂಡತಿ-ಮಕ್ಕಳೊಂದಿಗೆ ಪಂಚಾಕ್ಷರಿ ಗವಾಯಿಗಳ ಮಠಕ್ಕೆ ಹೋಗಿ ಅಜ್ಜನವರ ದರ್ಶನ ಪಡೆಯುವುದು… ಹೀಗೆ ಹೊಸ ದಿನಚರಿಯೊಂದಿಗೆ ಅವನು ಹೊಂದಾಣಿಕೆಯನ್ನು ಸಾಧಿಸತೊಡಗಿದ್ದ. ದೀಪಿಕಾಳ ಹೊಲಿಗೆ ವಿದ್ಯೆ ತನ್ನ ನಿಜವಾದ ವಿಸ್ತಾರವನ್ನು ವ್ಯಕ್ತಪಡಿಸುವ ಕಾಲ ಅದಾಗಿತ್ತು. ಆಕೆ ಮನೆಯ ಹತ್ತಿರದಲ್ಲೇ ಇರುವ ಪಠೇಲ್ ರೋಡ್‍ನಲ್ಲಿ, … Read more

ಹರಕೆ ತೀರಿತ್ತು…! (ಮೊದಲ ಭಾಗ) : ಸಾವಿತ್ರಿ ವಿ. ಹಟ್ಟಿ

ದೀಪಿಕಾ ಮೇಲೆದ್ದು ಕುಳಿತಳು. ಎಷ್ಟೊ ಹೊತ್ತು ನಿದ್ರೆ ಬಾರದೆ ಸೆಖೆ ಸೆಖೆ ಎಂದು ಒದ್ದಾಡುತ್ತಲೆ ಇದ್ದ ಪತಿ ನಾಗರಾಜ ಅದೇ ದನೇ ನಿದ್ರೆ ಹೋಗಿದ್ದ. ಗಡಿಯಾರದ ಕಡೆ ನೋಡಿದಳು. ಆಗಲೆ ಮಧ್ಯರಾತ್ರಿ. ಪಕ್ಕದಲ್ಲಿ ಮಕ್ಕಳು ಲೋಕದ ಯಾವ ಚಿಂತೆಯ ಸೋಂಕೂ ಇಲ್ಲದೆ ಶಾಂತವಾಗಿ ನಿದ್ರಿಸುತ್ತಿದ್ದಾರೆ. ಅವಳಿಗೆ ಮಾತ್ರ ನಿದ್ರೆ ಸನಿಹವೂ ಸುಳಿಯುತ್ತಿಲ್ಲ. ಅವಳ ಒಡಲು ಬೆಂಕಿಗೆ ಆಹುತಿಯಾಗಿ ದಗದಗಿಸುತ್ತಿದೆ. ಕಟು ಸತ್ಯ ಸಂಗತಿಯನ್ನು ತಿಳಿದುಕೊಂಡಾಗಲೆ ಎದೆ ಬಿರಿದು ಎರೆಭೂಮಿ ಬಾಯಿ ಬಿಟ್ಟಂತಾಗಿದೆ. ಕಣ್ಣುಗಳಲ್ಲಿ ಆ ಮದ್ಯಾಹ್ನದವರೆಗೂ ನಳನಳಿಸುತ್ತಿದ್ದ … Read more

ನಡುವೆ ಸುಳಿವಾತ್ಮ…: ಮಹಾದೇವ ಹಡಪದ

 ಬನದ-ಭಾರತ ಹುಣಿವಿಗೆ ಯಲ್ಲಮ್ಮ ತಾಯಿ ಜಾತ್ರೆ ಜೋರು ನಡಿತದ. ಉಡಿ ತುಂಬಸೋದು, ಮುತ್ತು ಕಟಗೊಂಡವರು ಸೇವಾ ಮಾಡೋದು, ಬೇವಿನ ತಪ್ಪಲದಾಗ ಕುಂತ ತಾಯಿಯನ್ನ ಎರೆಯೋದು, ದೀಡ ನಮಸ್ಕಾರ ಹಾಕೋದು, ಪಡ್ಡಲಗಿ ಹಿಡದು ನೇಮದ ಸಲುವಾಗಿ ನಾಕೈದು ಮನಿ ಜೋಗ ಬೇಡೋದು ಹಿಂಗ ಒಕ್ಕಲ ಮಕ್ಕಳ ಮನಿಯೊಳಗ ಸಡಗರ ಹೊಗೆಯಾಡತಿರತದ. ಜಡೆಬಿಟ್ಟ ಜೋಗಮ್ಮ ಜೋಗಪ್ಪಗಳು ತಿಂಗಳ ಕಾಲ ಬಿಡುವಿಲ್ಲದ ಮುಯ್ಯಿ ಮಾಡತಿರತಾರು. ಬಳಿ ಒಡೆದು ರಂಡೆ ಮಾಡೋದರಿಂದ ಶುರುವಾಗುವ ವಿಧಿವಿಧಾನಗಳು ಸೀರಿ ಉಡಿಸಿ, ಮುತ್ತು ಕಟ್ಟಿ, ಕುಂಕಮ ಇಡೋವರೆಗೂ … Read more

ಆರಭಿ: ಅಭಿಲಾಷ್ ಟಿ.ಬಿ.

         ಉರಿ ಬಿಸಿಲು, ಬೇಸಿಗೆ ರಜ, ಮೇ ತಿಂಗಳ ಮೊದಲ ವಾರದಲ್ಲೇ ಸೂರ್ಯ ತನ್ನ ದರ್ಪವನ್ನು ತೋರುಸುತ್ತಿದ್ದಾನೆ. ಬೆಳ್ಳಿಗ್ಗೆ ಒ೦ಭತ್ತುಮುಕ್ಕಾಲು ಘ೦ಟೆ, ಲಕ್ಷ್ಮೀ ಆ೦ಟಿ ಆಫೀಸ್ಗೆ ಹೊರಡುವ ಸಮಯ. ಬಿಸಿಲು ಹೆಚ್ಚು ತಾಕದಿರಲಿ ಎ೦ದು ನೀಲಿ ಬಣ್ಣದ ಛತ್ರಿಯನ್ನು ಹಿಡಿದು ಗೇಟ್ ಬಾಗಿಲಿಗೆ ಬೀಗ ಹಾಕುತ್ತಿದ್ದರು. ಮಹಡಿ ಮೇಲಿನ ಗ್ರಿಲ್ ಸ೦ಧಿಯಿ೦ದ ಇಣುಕಿ, "ಅಮ್ಮ, ಬರ್ತಾ ಸಾಯ೦ಕಾಲ ಬಾಲ್ ಐಸ್ ಕ್ರೀಮ್ ತರುತ್ತೀಯಾ" ಎ೦ದು ಒಂದು ಮಗು ಮುದ್ದಾಗಿ ಕೇಳಿತು. ಮುಖದಲ್ಲಿ ಆತುರದ ಭಾವನೆ … Read more

ಥ್ರೀರೋಜಸ್ ಕಥೆ (ಕೊನೆಯ ಭಾಗ): ಸಾವಿತ್ರಿ ವಿ. ಹಟ್ಟಿ

ಇಲ್ಲಿಯವರೆಗೆ ಇದಾದ ನಂತರ ಮತ್ತೊಮ್ಮೆ ಅವರ ಕಾಲೇಜಿನ ಹತ್ತಿರ ಹೋಗಲು ನಾವು ಸಮಯ ಹೊಂಚುತ್ತಿದ್ದೆವು. ಬನ್ನಿಹಬ್ಬದ ದಿನ ಭೆಟ್ಟಿ ಮಾಡಬೇಕೆಂದುಕೊಂಡರೂ ಸರಿ ಅನ್ನಿಸಲಿಲ್ಲ. ಏಕೆಂದರೆ ಅಂದು ಬಾನುವಾರ. ಝಡ್ ಪಿಯ ಸಲಹೆಯ ಮೇರೆಗೆ ಶನಿವಾರ, ಅವರ ವಿರಾಮದ ಅವಧಿಯಲ್ಲಿ ಅವರನ್ನು ಭೆಟ್ಟಿ ಮಾಡಿದ್ದೆವು. ಪರಸ್ಪರರು ಬನ್ನಿ ಹಂಚಿಕೊಂಡು ಖುಷಿಯಾಗಿ ಹರಟಿದೆವು. ಪಿ.ಯು ದಿನಗಳನ್ನು ಸ್ಮರಿಸಿಕೊಂಡು ನಕ್ಕೆವು. ಮಾತಿನ ಮಧ್ಯೆ ಮದುವೆ ವಿಷಯಕ್ಕೆ ಬಂದಾಗ ವಂದನಾ ಓದು, ನೌಕರಿ ಆದ ನಂತರವೇ ಮದುವೆ ಆಗುವುದಾಗಿಯೂ, ತನ್ನ ತಂದೆ ತಾಯಿಗೂ … Read more

ಕನ್ನಡಿಗಳು: ಪ್ರಸಾದ್ ಕೆ.

ಕಳೆದ ಒಂದೆರಡು ತಿಂಗಳಿನಿಂದ ಇದು ತುಂಬಾ ಕಷ್ಟವಾಗಿಬಿಟ್ಟಿದ್ದರೂ ಅಭ್ಯಾಸವಾಗಿ ಹೋಗಿದೆ.  ನನ್ನ ಸಮಸ್ಯೆಯೇನೆಂದರೆ ನಾನು ನೋಡುತ್ತಿರುವ ದೃಶ್ಯಗಳೆಲ್ಲಾ ತಿರುಗುಮುರುಗಾಗಿ ಕಾಣಿಸುತ್ತಿವೆ. ಮಿರರ್ ಇಮೇಜ್ ಅಂತೀವಲ್ಲಾ, ಆ ಥರಾನೇ. ಪುಸ್ತಕದಲ್ಲಿರುವ ಅಕ್ಷರಗಳು, ಬೀದಿಯ ಸೈನ್ ಬೋರ್ಡುಗಳು, ಕಟ್ಟಡಗಳಿಗೆ ಜೋತುಬಿದ್ದಿರುವ ಫಲಕಗಳು ಹೀಗೆ ಎಲ್ಲವೂ, ಎಲ್ಲೆಲ್ಲೂ ಕನ್ನಡಿಯಿಂದ ನೋಡಿದಂತೆ ಕಾಣುತ್ತಿವೆ. ಮಗುವೊಂದು ಮೊಟ್ಟಮೊದಲ ಬಾರಿಗೆ ನಡೆದಾಡಲು ಆರಂಭಿಸಿದಾಗ ಜಗತ್ತನ್ನು ಹೇಗೆ ಅಚ್ಚರಿಯಿಂದ ಕಣ್ಣರಳಿಸಿ ನೋಡುತ್ತದೆಯೋ ಹಾಗೇ ನನಗೂ ಅನುಭವವಾಗುತ್ತಿದೆ. ಎಲ್ಲವೂ ನಿಗೂಢ, ಎಲ್ಲವೂ ವಿಚಿತ್ರ. ಮೊದಲೊಮ್ಮೆ ಭಯಭೀತನಾಗಿದ್ದರೂ ಈಗ ಸಾಮಾನ್ಯವಾಗಿ … Read more

ಪರಶುವಿನ ದೇವರು (ಕೊನೆ ಭಾಗ): ಶಾಂತಿ ಕೆ. ಅಪ್ಪಣ್ಣ

ಇಲ್ಲಿಯವರೆಗೆ… "ಅವ್ವ, ಚಡ್ಡಿ ಹಾಕ್ಕೊಡು" ಮಗು ಕೈ ಜಗ್ಗಿದಾಗ ಅದರ ಬೆನ್ನಿಗೆ ಗುದ್ದಿದಳು ಸುಜಾತ. "ಏ ಮುಂಡೇದೇ,  ಎಷ್ಟು ಸಲ ಹೇಳಿಲ್ಲ, ಮಮ್ಮಿ ಅನ್ಬೇಕು ಅಂತ, ಇನ್ನೊಂದ್ಸಲ ಅವ್ವ ಪವ್ವ ಅಂದ್ರೇ ಹೂತಾಕ್ಬುಟ್ಟೇನು" ಮಾತೇನೋ ಆಡಿ ಮುಗಿಸಿದಳು. . ಆದರೆ ಅವಳಿಗೆ ತನ್ನದೇ ವರಸೆಯ ಬಗೆ ನಾಚಿಕೆಯೆನಿಸಿತು. ಅಪರೂಪಕ್ಕೂ ಅವಳಲ್ಲಿ ಇಂಥ ಬಯ್ಗುಳಗಳು ಹೊರಬಿದ್ದದ್ದಿಲ್ಲ ಆದರೆ ಇಲ್ಲಿಗೆ ಬಂದ ಮೇಲೆ ತನಗೆ ಇವೆಲ್ಲ ಸಲೀಸಾಗಿ ಬರುತ್ತಿದೆ. ಏಟು ತಂದು ಮಗು ಅಳುವುದಕ್ಕೂ ಕೆಳಗಿನಿಂದ ಪಾಪಯ್ಯನ ಹೆಂಡತಿ ಅವಳನ್ನು … Read more

ಥ್ರೀರೋಜಸ್ ಕಥೆ (ಭಾಗ 2): ಸಾವಿತ್ರಿ ವಿ. ಹಟ್ಟಿ

  ಇಲ್ಲಿಯವರೆಗೆ… ಮೊದಲನೇ ಕಿರು ಪರೀಕ್ಷೆಗಳು ಮುಗಿದಿದ್ದವು. ಅವತ್ತು ಶನಿವಾರ. ಕೊನೆಯಲ್ಲಿ ಆಟದ ಅವಧಿ ಇತ್ತು. ಏಕೋ ಆಟದಲ್ಲಿ ತೊಡಗಿಕೊಳ್ಳಲು ಮನಸ್ಸು ಬರಲಿಲ್ಲ. ನನ್ನ ವಾಸದ ಕೋಣೆಗೆ ಹೋಗಿ ಅಕ್ಕಿ ತೊಳೆದು, ಒಲೆ ಹೊತ್ತಿಸಿಟ್ಟೆ. ಅನ್ನ ಬೇಯುವಷ್ಟರಲ್ಲಿ ರವೀಂದ್ರ ಕಲ್ಲಯ್ಯಜ್ಜನವರ ಖಾನಾವಳಿಯಿಂದ ಕೆಟ್ಟ ಖಾರದ ರುಚಿಯಾದ ಸಾರು ತಂದಿರಿಸಿದ್ದ. ಊಟದ ನಂತರ, ಸಾಕಷ್ಟು ಸಮಯವಿದ್ದುದರಿಂದ ಒಂದೆರಡು ತಾಸು ಚೆಂದಗೆ ನಿದ್ದೆ ಮಾಡಿಬಿಟ್ಟೆ. ಎಚ್ಚರವಾದಾಗ ಕೋಣೆಯಲ್ಲಿ ರವೀ ಇರಲಿಲ್ಲ. ಅವನು ಸಮಯ ಸಿಕ್ಕಾಗೆಲ್ಲ ಗೆಳೆಯರನ್ನು ಹುಡುಕಿಕೊಂಡು ಹೋಗುವವನು. ಎಲ್ಲಿದ್ದಾನೆಂದು … Read more

ಪರಶುವಿನ ದೇವರು: ಶಾಂತಿ ಕೆ. ಅಪ್ಪಣ್ಣ

ಪರಶುವಿಗೆ ದೇವರು ಬಂದಾಗ ಡೊಳ್ಳನ ಕೇರಿಯ ಜನ ಅದಿನ್ನೂ ತಂತಮ್ಮ ಕೆಲಸಗಳಿಂದ ಮರಳಿ ದಣಿವಾರಿಸಿಕೊಳ್ಳುತ್ತ,  ಅಲ್ಲಲ್ಲೆ ಜಗುಲಿ ಕಟ್ಟೆಯ ಮೇಲೆ ಕುಳಿತು ಗಂಡಸರು ಬೀಡಿಯ ಝುರುಕಿ ಎಳೆದು ಕೊಳ್ಳುತ್ತಿದ್ದರೆ, ಹೆಂಗಸರು ಒಂದು ಬಾಯಿ ಕಾಫಿ ಕುಡಿಯುವ ಆತುರಕ್ಕೆ ಒಳಗೆ ಒಲೆ ಹಚ್ಚುವ ಕೆಲಸದಲ್ಲಿ ತೊಡಗಿದ್ದರು. ಮೊದಲಿನಂತೆ ಚೂರುಪಾರು ಸೌದೆ ತಂದು ಪ್ರಯಾಸದಿಂದ ಒಲೆ ಹಚ್ಚುವ ಕೆಲಸವೇನೂ ಈಗಿರಲಿಲ್ಲ, ಊರು ನಾಡು ಕಾಣುತ್ತಿದ್ದ ಬದಲಾವಣೆಯ ಗಾಳಿ ಯಾವುದೇ ತಕರಾರು ಮಾಡದೆ ಕೇರಿಯೊಳಗೂ ನುಸುಳಿ ಅಲ್ಲೂ ಅಲ್ಪಸ್ವಲ್ಪ ಬದಲಿಕೆ ತರತೊಡಗಿತ್ತು. … Read more

ಥ್ರೀರೋಜಸ್ ಕಥೆ: ಸಾವಿತ್ರಿ ವಿ. ಹಟ್ಟಿ

ನನ್ನವಳಿಗೆ ನಾನೇನೂ ಕಡಿಮೆ ಮಾಡಿಲ್ಲ. ಅವಳು ನಮ್ಮ ತುಂಬು ಮನೆತನಕ್ಕೆ ಏಕೈಕ ಸೊಸೆ. ಸದ್ಯಕ್ಕೆ ನನಗೆ ಅವಳೇ ಮಗಳೂ, ಮಗನೂ ಇದ್ದ ಹಾಗೆ ಕೂಡ. ತಂದೆ ಉಮಾಶಂಕರ ತಾಯಿ ಗೌರಮ್ಮನವರಿಗೆ ಏಕೈಕ ಸುಪುತ್ರನಾಗಿರುವ ನಾನು ಈ ಗೊಂಬೆಯನ್ನು ಕೈ ಮಾಡಿ ತೋರಿಸಿ, ನನಗೆ ಬೇಕು ಎಂದಾಗ ಅಪ್ಪ ಮೌನವಾಗಿ ನನ್ನನ್ನೇ ನೋಡಿದ್ದರು ವಿಸ್ಮಯದಿಂದ. ಅವ್ವ ಹನಿಗಣ್ಣಳಾಗಿದ್ದರೂ ನಂತರ ನನ್ನ ಆಸೆಗೆ ಬೇಡ ಎನ್ನಲಿಲ್ಲ. ನಾನು ಚಿಕ್ಕವನಿದ್ದಾಗ ಏನೆಲ್ಲ ಕೇಳಿದರೂ ಇಲ್ಲವೆನ್ನದೇ ಕೊಡಿಸುತ್ತಿದ್ದರು ತಂದೆ-ತಾಯಿ. ನನ್ನ ಜೀವನದ ಎರಡನೇ … Read more

ನ್ಯಾನೋ ಕತೆಗಳು: ನವೀನ್ ಮಧುಗಿರಿ

ಪ್ರೇಮಿಗಳು ಇಬ್ಬರೂ ಮೌನವಾಗಿ ಕುಳಿತಿದ್ದರು. ಮುಂದೇನು ಮಾಡುವುದೆಂದು ಇಬ್ಬರಿಗೂ ತೋಚುತ್ತಿಲ್ಲ. ಜಾತಿಯ ನೆಪವೊಡ್ಡಿ ಎರಡೂ ಮನೆಯವರು ಪ್ರೇಮಿಗಳನ್ನು ದೂರ ಮಾಡಲು ಯತ್ನಿಸುತ್ತಿದ್ದರು. "ಮುಂದೇನು ಮಾಡುವುದು?" ಹುಡುಗಿ ಪ್ರಶ್ನಿಸಿದಳು. "ಗೊತ್ತಿಲ್ಲ, ಏನೊಂದು ತೋಚುತ್ತಿಲ್ಲ" ಹುಡುಗ ಉತ್ತರಿಸಿದ. "ಎಲ್ಲಾದರೂ ದೂರ ಹೋಗಿ ಜೊತೆಯಾಗಿ ಬದುಕೋಣ" "ಬದುಕು ಎರಡೂವರೆ ಗಂಟೆಯ ಸಿನಿಮಾವಲ್ಲ" "ಹಾಗಾದರೆ ನಾವು ಪ್ರೀತಿಸಿದ್ದಾದರೂ ಯಾಕೆ?" ಹುಡುಗಿಯ ಕಣ್ಣಲ್ಲಿ ನೀರು ತುಂಬಿತ್ತು. ಅವಳ ಕಣ್ಣಲ್ಲಿನ ನೋವು ಗುರುತಿಸಿದ. ಎದೆಗೆ ಕೊಳ್ಳಿಯಿಂದ ತಿವಿದಂತಾಯ್ತು, ನೋವಿನಿಂದಲೇ ನುಡಿದ "ಜೊತೆಯಾಗಿ ಬದುಕೋಣವೆಂದು, ಆದರೆ.." "ಆದರೆ … Read more

ವೀಣಾ: ಶ್ರೀಮಂತ್ ಎಮ್. ಯನಗುಂಟಿ

’ಏ ಮಾಮು ಏಳೋ ಇನ್ನು ಎಷ್ಟೊತ್ತು ಮಲಗ್ತೀಯಾ’ ರಾತ್ರಿಯೆಲ್ಲಾ ಸೀಟು ಸಿಗದೆ ನಿಂತುಕೊಡಿದ್ದವನಿಗೆ ನಸುಕಿನ ಮೂರು ಗಂಟೆಯಲ್ಲೊಂದು ಸೀಟು ಸಿಕ್ಕಿತ್ತು. ನಿದ್ದೆಬರುವುದಿಲ್ಲ ಅಂತ ಗೊತ್ತಿತ್ತು. ಆದರೂ ಸುಮ್ಮನೆ ಬೋರಲಾಗಿ ಮಲಗಿದ್ದೆ. ಯಾರೋ ಚಪ್ಪಾಳೆ ಹಾಕುತ್ತಾ ಮೈದಡವಿದಂತಾಯ್ತು. ಎದ್ದು ಸಮಯ ನೋಡಿದೆ ಇನ್ನೂ ಗಂಟೆಯ ಮುಳ್ಳು ಐದನ್ನೆ ದಾಟಿರಲಿಲ್ಲ. ಸ್ವಲ್ಪ ಹಿಂತಿರುಗಿ ನೋಡಿದೆ. ಮಂಗಳಮುಖಿಯೊಬ್ಬಳು ಬಹಳ ಸಹಜವೆಂಬಂತೆ ಮಾಮೂಲಿ ಕೇಳಲು ಬಂದಿದ್ದಳು.  "ರೀ ನಿಮಗೆ ಹೊತ್ತು ಗೊತ್ತು ಏನೂ ಇಲ್ವಾ. ಇಗಲಾದ್ರೂ ಮಲಗಿದ್ದಿನಿ ನಿಮ್ಮದೊಳ್ಳೆ ಸಹವಾಸ" ಎಂದು ನಿದ್ದೆಯಲ್ಲಿ ಗೊಣಗುತ್ತಲೇ … Read more

ಮನಸ್ವಿನಿ: ಅಭಿಲಾಷ್ ಟಿ ಬಿ

ಕುರಿಗಾಹಿಯೊಬ್ಬನು ತನ್ನ ಎಲ್ಲಾ ಕುರಿಗಳನ್ನು ಒ೦ದೇ ಕಡೆ ಮೇಯಿಸಲು ಹೊರಟನೆ೦ದರೆ ಅದು ಬಯಲುಸೀಮೆಯೇ ಆಗಿರುತ್ತದೆ. ಬರ, ಕ್ಷಾಮ, ಅನಾವೃಷ್ಠಿ, ಅಭಾವ, ಇವರಿಗೆ ಸಾಮಾನ್ಯವಾಗಿ ಹೋಗಿದೆ. ಈ ಕಾರಣಕ್ಕಾಗಿ ಬಯಲುಸೀಮೆಯ ಕೆರೆಗಳಿಗೆ  ಸರ್ಕಾರ ಅಣೆಕಟ್ಟುಗಳಿ೦ದ ನಾಲೆಗಳ ಮುಖಾ೦ತರ ಜೀವಜಲವನ್ನು ಒದಗಿಸುತ್ತಿದೆ. ಕಲ್ಲೂರು, ಗ೦ಗರ, ಚ೦ದ್ರಾಪುರ, ಬೆಣ್ಣೆನಹಳ್ಳಿ,..ಒ೦ದೇ ಎರಡೇ, ಇ೦ತಹ ನೂರಾರು ಹಳ್ಳಿಯ ಜನರು, ಜಾನುವಾರುಗಳು ರಾಮನಿಗಾಗಿ ಶಬರಿ ಕಾಯುವ ಹಾಗೆ ನೀರಿಗಾಗಿ ಕಾಯುತ್ತಿರುತ್ತಾರೆ. ಈ ನೀರಿಗಾಗಿ ಕಾಯುತ್ತಿರುವ ಜನರು, ಎಮ್ಮೆಗಳೂ, ಹೋತಗಳು, ಬಸವಿಗಳು, ಟಗರುಗಳು, ಹಸುಗಳ ಪೈಕಿ ಸತ್ಯವೇ … Read more