ಇದುವೇ ಜೀವನ: ಪಾರ್ಥಸಾರಥಿ ಎನ್.

ಬೀ ಪ್ರಾಕ್ಟಿಕಲ್ ಮ್ಯಾನ್,  ನೋಡಿ ಇದಕ್ಕಿಂತ ಬೇರೆ ನಿರ್ದಾರ ತೆಗೆದುಕೊಳ್ಳುವುದು ಸಾದ್ಯವಿಲ್ಲ, ಯೋಚಿಸಿ ಡಾ!!ಜೋಷಿ ಹೇಳುತ್ತಿರುವಾಗ , ಮಧು ಗರಬಡಿದವನಂತೆ ಕುಳಿತಿದ್ದ,  ಏನಾಯಿತು ?  ತನ್ನ ಹಾಗು ಕೀರ್ತಿಯ ಕನಸುಗಳೆಲ್ಲ ಕರಗಿ ಹೀಗೆ ವಿಕಾರವಾಗುವದೆಂಬ ನಿರೀಕ್ಷೆಯು ಅವನಿಗಿರಲಿಲ್ಲ.  ಅಪ್ಪ ಅಮ್ಮ ನೋಡಿ ತಾನು ಮೆಚ್ಚಿ ಮದುವೆಯಾದ ಪ್ರೀತಿಯ ಪತ್ನಿ ಕೀರ್ತಿ. ಮದುವೆಯಾಗಿ ಆರು ವರ್ಷಗಳ ನಂತರ ತಾನು ತಂದೆಯಾಗುತ್ತಿರುವ ಸಮಾಚಾರ ತಿಳಿದಾಗ ಕುಣಿದಾಡಿಬಿಟ್ಟಿದ್ದ. ಮದುವೆಯಾದ ಮೊದಲು ಮೂರುವರ್ಷ ಮಕ್ಕಳು ಬೇಡವೆಂದು ಮುಂದೆ ಹಾಕಿದ್ದಾಗಿತ್ತು, ನಂತರ ಮೂರು ವರ್ಷ … Read more

ನೆನಪುಗಳ ಮಾತು ಮಧುರ!: ರುಕ್ಮಿಣಿ ನಾಗಣ್ಣನವರ

ಎಷ್ಟು ಹೊತ್ತಾಯಿತು ಬಸ್ಸಿನಲ್ಲಿ ಕುಳಿತು. ಯಾವಾಗ ಬಿಡುತ್ತೀರಿ? ನಮಗಿನ್ನೂ ತುಂಬ ಮುಂದೆ ಹೋಗಬೇಕಿದೆ. ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ತನ್ನ ಅಸಮಾಧಾನ ವ್ಯಕ್ತಪಡಿಸುತ್ತ ಕಂಡಕ್ಟರ್ನನ್ನು ದಬಾಯಿಸಿ ಕೇಳುತ್ತಿದ್ದ. ಬೇಗ ಬಿಡಿ ಸರ್ ತುಂಬ ಹೊತ್ತಾಯಿತಲ್ಲ ಎಂದು ಇನ್ನೇನು ನಾನೂ ಹೇಳಬೇಕು ಎನ್ನುವಷ್ಟರಲ್ಲಿ ಅಪ್ಪಯ್ಯನ ಕಾಲು ಬಂತು. ಹೊರಟ್ರ ಅಂತ ಕೇಳುತ್ತಿದ್ದರು. ಹೌದು. ಬಸ್ಸಿನಲ್ಲಿದ್ದೇನೆ. ಅವರಿಗೆ ರಜೆ ಸಿಕ್ಕಿಲ್ವಂತೆ ನಾಳೆ ಬರ್ತಾರೆ ಅಪ್ಪ ಅಂದೆ. ಆಯ್ತು. ಹುಷಾರಾಗಿ ಬಾ ಅಂತ ಹೇಳಿ ಕಾಲ್ ಕಟ್ ಮಾಡಿದ್ರು. ಕಿಟಕಿ … Read more

ಮತಿಭ್ರಮಣೆ: ಶಿವಕುಮಾರ ಚನ್ನಪ್ಪನವರ

ಪೆಣ್ಣು, ಪೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು  -ಸಂಚಿ ಹೊನ್ನಮ್ಮ ತಾನು ಸೋಮುವಿಗೆ ಹೀಗೆನ್ನಬಾರದಿತ್ತು. ಪಾಪ ಎಷ್ಟು ನೊಂದುಕೊಂಡನೋ ಏನೋ……? ತಾನೇ ಸಾಕಿ ಬೆಳೆಸಿದ ಕೂಸು ಆದರೂ ಅವನು ಹದ್ದುಮೀರಿ ಮಾತಾಡಿದ್ದ. ಬೇಡವೆಂದರೂ ಕೇಳದೇ ಹೆಂಡತಿಯ ಭ್ರೂಣಪತ್ತೆಯ ಕೆಲಸಕ್ಕೆ ಕೈ ಹಾಕಿದ್ದಿರಬಹುದು, ತಮ್ಮ ತಾಯಿಗೆ ಗಂಡು ಮಗುವೇ ಬೇಕೆಂದು, ತನಗೂ ಅದೇ ಇಷ್ಟವಿದೆಯೆಂದು, ಹಟ ಹಿಡಿದು ಈ ಸಲ ಹೆಣ್ಣಾದರೆ ಆಪರೇಷನ್ ಮಾಡಿಸದೇ ಮುಂದಿನದಕ್ಕೆ ಬಿಡಬೇಕೆಂದು ಹಟ ಹಿಡಿದದ್ದು ತಪ್ಪಲ್ಲವೇ……?, ಡಾಕ್ಟರು ಇದು ಎರಡನೇ ಬಾರಿ ಸಿಜೇರಿಯನ್ … Read more

ಚಲರೇ ಭೋಪಳ್ಯಾ ಟುಣಕ್-ಟುಣಕ್ (ಆಡಿಯೋ ಕತೆ): ಸುಮನ್ ದೇಸಾಯಿ

ಒಂದು ಭಯಂಕರ ದಟ್ಟ ಜಂಗಲ್ ಇತ್ತು. ಆಲ. ಹಲಸು, ಹುಣಸೆ, ಮಾವು ಸೊಗೆ, ದೊಡ್ಡ ದೊಡ್ಡ ಮರ ಇದ್ವು. ಅದೆಷ್ಟು ದಟ್ಟ ಇತ್ತಂದರ. ಮಟಾ ಮಟಾ ಮಧ್ಯಾಹ್ನದಾಗು ಸೂರ್ಯನ ಬೆಳಕಿಗೂ ಒಳಗ ಬರಲಿಕಕ್ಕೆ ಜಾಗ ಇದ್ದಿಲ್ಲ. ಆ ಕಾಡಿನ ತುಂಬ ಪ್ರಾಣಿಗಳು ಭಾಳ ಇದ್ವು. ಕಾಡಿಗೆ ಹಚ್ಚಿ ಇನ್ನೊಂದು ಕಡೆ ಸುಂದರ ಸರೋವರ ಇತ್ತು. ಸರೋವರದ ಇನ್ನೊಂದು ಕಡೆ ಒಂದು ಪುಟ್ಟ ಹಳ್ಳಿ ಇತ್ತು. ಅಲ್ಲಿಯ ಜನ ಯಾವಾಗಲೂ ಕಾಡಿನ ಭಯದಿಂದ ಜೀವ ಕೈಯ್ಯೊಳಗ ಹಿಡಕೊಂಡನ ಜೀವನ … Read more

ಮೌನ ತಳೆದ ಹುಡುಗಿ: ರುಕ್ಮಿಣಿ ನಾಗಣ್ಣವರ

ಆಗಷ್ಟೆ ಬೆಳಕಿನ ಬೆನ್ನಿಗೆ ಕತ್ತಲು ಪತ್ತಲ ಹಾಸುತ್ತಿತ್ತು. ಮಿಣಮಿಣ ಮಿನುಗುವ ತಾರೆಗಳು ಚಂದ್ರನೊಂದಿಗೆ ಕಣ್ಣಾ ಮುಚ್ಚಾಲೆ ಆಡಲು ಸಿದ್ಧವಾಗಿದ್ದವು. ಚಂದ್ರನೋ, ತಾರೆಗಳ ಬಳಗದಿಂದ ತಪ್ಪಿಸಿಕೊಂಡವನಂತೆ ರಮೇಶನ ಕೋಣೆಯನ್ನೇ ಇಣುಕಿ ಇಣುಕಿ ನೋಡುತ್ತಿದ್ದ. ದೀಪ ಹಚ್ಚದ ಕೋಣೆಯಲ್ಲಿ ಕತ್ತಲ ತೆಕ್ಕೆಯೊಳಗೆ ರಮೇಶ್ ಗಾಢ ಮೌನಕ್ಕೆ ಶರಣಾಗಿದ್ದ. ಮನದ ಮೈದಾನದಲಿ ಜಾನಕಿಯೆಡೆಗಿನ ವಿಚಾರಗಳು ಕಾಳಗದ ಹೋರಿಯಂತೆ ಕಾದಾಟ ನಡೆಸಿದ್ದವು. ಅರಳು ಹುರಿದಂತೆ ಮಾತಾಡುವ ಜಾನಕಿ ಕಳೆದ ಆರು ತಿಂಗಳಿನಿಂದ ಮೌನವಾಗಿದ್ದಳು. ಆ ದೀರ್ಘಮೌನ ರಮೇಶನನ್ನು ಭಾದಿಸುತ್ತಿತ್ತು.  ತಲೆ ಚಿಟ್ಟೆನ್ನುವ ಅಸಹನೆ. … Read more

ನಮ್ಮ ಇಂದ್ರಿ ಕತಿ: ರುಕ್ಮಿಣಿ ನಾಗಣ್ಣವರ

ಕೆಲಸದ ಮ್ಯಾಲ ಹೆಡ್ ಆಫಿಸಿಗಿ ಹ್ವಾದ್ರ ನನ್ನದಲ್ಲದ ಕೆಲಸಾನೂ ನಾ ಮಾಡಬೇಕಾಗಿ ಬರ್ತದ. ಮನ್ನಿ ಮನ್ನೆರ ಕಂಪ್ಯೂಟರ್ ಕೆಲಸಕಂತ ಒಬ್ಬ ಹುಡುಗನ ನೇಮಿಸ್ಯಾರ.  ಅದೇನೋ ಡಿಪ್ಲೊಮಾ ಕೋರ್ಸ್ ಮುಗಿಸ್ಯಾನಂತ. ಆ ಊರ ಪಲ್ಲಾಳಗಿತ್ತಿ ಪದ್ದಿ ಬಾಯಾಗಿಂದ ಕೇಳಿದ ಸುದ್ದಿ. ಡಿಪ್ಲೊಮಾ ಮುಗಿಸಿದ ಹುಡಗ ಇಲ್ಲಿ ಇವರ ಕೊಡು ಯಾಡ ಸಾವಿರಕ ಅವರ ಅಂದಿದ್ದ ಅನಿಸ್ಕೊಂಡ ನಾಯಿಗಿಂತ ಕಡೆ ಆಗಿ ಯಾಕ ಸಾಯ್ಲಿಕ್ ಬಂದಾನೊ? ಅಂತ ನನಗ ಅನಿಸಿದ್ದೂ ಅದ. ಅವನ ಮಾರಿ ನೋಡಿದರ ಅಯ್ಯೋ ಪಾಪ! ಅನಿಸಿ … Read more

ಅಗ್ನಿ: ಬೆಳ್ಳಾಲ ಗೋಪಿನಾಥ ರಾವ್

       ೧. ಬಲಿ   ಚಂದ್ರ ಹಾಸ ಮತ್ತೊಮ್ಮೆ ತಲೆ ಕೆರೆದುಕೊಂಡ.   ಎರಡಸ್ಥಂತಿನ  ಭದ್ರ ಬುನಾದಿ ಎಬ್ಬಿಸಿ ಕಟ್ಟಿಸಿದ ಈ ಕಟ್ಟೋಣ    ಅಲುಗಾಡುವದೆಂದರೇನು?  ಅರ್ಥವಾಗಲಿಲ್ಲ.     ಚೈತ್ರಂಗೆ ಹೇಳೋಣವೆಂದುಕೊಂಡ ಮತ್ತೆ ನಕ್ಕಾಳು.  ನಿನ್ನೆ ಹಲ್ಲಿನ ವೈದ್ಯರು ಕೊಟ್ಟ  ಮಾತ್ರೆಯದ್ದೇನಾದರೂ ಸೈಡ್ ಎಫೆಕ್ಟ್ ಆಗಿರಬಹುದಾ.   ಸ್ವಲ್ಪ ಮತ್ತಿನಲ್ಲಿದ್ದವರ ಹಾಗಿದ್ದೀರಾ ಚೈತ್ರನ ರಾತ್ರೆಯ ಮಾತು ನೆನಪಾಯ್ತು.  ಕಣ್ಣೂ ನಿಚ್ಚಳವಾಗಿ ಕಾಣ್ತಾ ಇದೆ.  ಚಿವುಟಿಕೊಂಡ.   ಇಲ್ಲ ಸರಿಯಾಗಿ ನೋವಾಗ್ತಾ ಇದೆ.  ಮತ್ತೆ,,?  … Read more

ಕಿರು ಕತೆಗಳು: ನವೀನ್ ಮಧುಗಿರಿ, ಮುಕುಂದ್ ಎಸ್.

ಚಪ್ಪಾಳೆ ಇಡೀ ಶಾಲೆಗೇ ವರ್ಷದ ಉತ್ತಮ ಪ್ರತಿಭಾವಂತ ವಿದ್ಯಾರ್ಥಿ ಎಂದು ಮಗ ವೇದಿಕೆಯ ಮೇಲೆ ಪ್ರಶಸ್ತಿಯನ್ನು ಪಡೆವಾಗಯುವಾಗ, ಪೋಷಕರ ಸಾಲಿನಲ್ಲಿ ಕುಳಿತ ಅವನ ಕುರುಡು ತಂದೆ ಸಂತಸದಿಂದ ಎಲ್ಲರೊಟ್ಟಿಗೆ ಚಪ್ಪಾಳೆ ತಟ್ಟಿದರು. *** ನಾಯಿ ಆ ಮನೆಯಲ್ಲಿ ಅದು ಊಟದ ಸಮಯ. ಗಂಡ ಊಟಕ್ಕೆ ಕುಳಿತಿದ್ದ, ಹೆಂಡತಿ ಬಡಿಸುತ್ತಿದ್ದಳು. ಎರಡು ತುತ್ತು ತಿನ್ನುವಾಗ ಗಂಡ ತನ್ನ ಮಾಮೂಲಿ ಗೊಣಗಾಟವನ್ನ ಶುರು ಮಾಡಿದ. ಅನ್ನ ಯಾಕಿಷ್ಟು ಮೆತ್ತಗೆ ಮಾಡಿದ್ದೀಯ?  ಸಾರಿಗೆ ಉಪ್ಪು ಕಡಿಮೆ. ಪಲ್ಯ ತುಂಬಾ ಖಾರ ಖಾರ. … Read more

ಸಾವಿರದ ನೋಟು: ಗಣೇಶ್ ಖರೆ

ಬೆಂಗಳೂರಿನ ರಸ್ತೆಯ ಮೂಲೆಯಲ್ಲಿ ಡೊಂಬರಾಟದವರು ತಮ್ಮ ಕಸರತ್ತು ತೋರಿಸುವಲ್ಲಿ ನಿರತರಾಗಿದ್ದರು. ನೋಡಿದರೆ ಯಾವುದೋ ಹಳ್ಳಿಯ ಮೂಲೆಯಿಂದ ಬಂದವರಂತೆ ಅವರ ವೇಶ ಭೂಶಣವಿತ್ತು. ಹಗ್ಗದ ಮೇಲೆ ನಡೆಯುವುದು, ಗೋಲಕದೊಳಗೆ  ತಮ್ಮ ಮೈಯ್ಯನ್ನು ತೂರಿಸುವುದು, ತಲೆ ಕೆಳಗಾಗಿ ಕೈಯ್ಯ ಮೇಲೆ ನಡೆಯುವುದು ಹೀಗೆ ಕಸರತ್ತು ಸಾಗಿತ್ತು. ಸಿಗುವ ಬಿಡಿ ಕಾಸಿಗಾಗಿ ಜೀವವನ್ನು ಪಣಕ್ಕಿಟ್ಟು ಮಾಡುವ ಕಸರತ್ತು ಜನರನ್ನು ಅವರತ್ತ ಆಕರ್ಷಿಸುತ್ತಿತ್ತು. ಡೊಂಬರಾಟದ ಗುಂಪಲ್ಲಿ ಇದ್ದದ್ದು ಮೂರು ಜನ, ಎಲ್ಲರೂ ಹೆಂಗಸರೇ. ಒಬ್ಬಳಿಗೆ ಸುಮಾರು ಮೂರರಿಂದ ನಾಲ್ಕು ವಯಸ್ಸಿರರಬಹುದು, ನೋಡೊಕೆ ಮುಗ್ಧ … Read more

ನೈಸ್ ರೋಡ್ ಮತ್ತು ಹೈವೇ ಕಳ್ಳರು: ವೀರ್ ಸಂತೋಷ್

ಸುಮಾರು ವರ್ಷಗಳ ಹಿಂದಿನ ಮಾತು. ಹೈವೇಗಳೆಂದರೆ ಏನೋ ಕುತೂಹಲ. ರೈಲೆಂದರೂ ಅಷ್ಟೇ. ಹೊಳೆನರಸೀಪುರದಿಂದ ಮೈಸೂರಿಗೆ ಬಸ್ಸಿನಲ್ಲಿ ಬರುವಾಗ ಮಾರ್ಗ ಮಧ್ಯೆ ಹಳ್ಳಿಯೊಂದರಲ್ಲಿ SH88 ಎಂದು ದಪ್ಪಕ್ಷರಗಳಲ್ಲಿ ಬರೆದಿದ್ದ ಮೈಲಿಗಲ್ಲೊಂದನ್ನು ನೋಡಿ ಪುಳಕಗೊಂಡಿದ್ದೆ. ಮತ್ತೊಮ್ಮೆ ಹಾಸನದಿಂದ ಧರ್ಮಸ್ಥಳಕ್ಕೆ ಹೋಗುವಾಗ ಸಕಲೇಶಪುರದ ಬಾಳ್ಳುಪೇಟೆ ಬಳಿ NH48 ಎಂಬ ಬೋರ್ಡೊಂದನ್ನು ನೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ಸಂಭ್ರಮಾಚರಣೆ ಮಾಡಿದ್ದೆ.  ಮಾನವನ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿರುವ ಅಗಣಿತ ಹರಿಕಾರರಲ್ಲಿ ಹೆದ್ದಾರಿಗಳ ಪಾತ್ರ ದೊಡ್ಡದು. ವಿಮಾನ, ಕಾರು ಜನಸಾಮಾನ್ಯರ ಮನಸ್ಸಿಗೆ ಮತ್ತು ಜೇಬಿಗೆ ಹತ್ತಿರವಾಗುವವರೆಗೆ … Read more

ತಿರಸ್ಕಾರ (ಭಾಗ 5): ಜೆ.ವಿ.ಕಾರ್ಲೊ, ಹಾಸನ

(ಇಲ್ಲಿಯವರೆಗೆ…) ಅವಳು ತನ್ನೊಟ್ಟಿಗಿದ್ದಾಳೆ ಎಂದು ಹ್ಯಾನ್ಸನಿಗೆ ಖಾತ್ರಿಯಾಯ್ತು. ಈ ಸಂಗತಿ ಅವನನ್ನು ನಿರಾಶೆಯ ಮಡಿಲಿಂದ ಮೇಲೆತ್ತಲು ನೆರವಾಯಿತು. ಆನ್ನೆಟ್ ಮತ್ತೊಬ್ಬನ ಪ್ರೇಮದಲ್ಲಿರುವ ಸಂಗತಿ ಅವನಿಗೆ ಜೀರ್ಣಿಸಿಕೊಳ್ಳುವುದು ಕಷ್ಟವಾಯಿತು. ಅದೃಷ್ಟವಶಾತ್ ಅವನ ಪ್ರತಿಸ್ಪರ್ಧಿ ಜರ್ಮನಿಯಲ್ಲಿ ಯುದ್ಧಕೈದಿಯಾಗಿದ್ದ. ಮಗು ಜನಿಸುವ ಮೊದಲೇ ಅವನಿಗೆ ಬಿಡುಗಡೆಯಾಗದಿದ್ದರೆ ಸಾಕೆಂದು ಅವನು ಭಗವಂತನಿಗೆ ಮೊರೆಯಿಟ್ಟ. ಮಗು ಜನಿಸಿದ ನಂತರ ಆನ್ನೆಟ್ ಬದಲಾದರೂ ಆದಳೇ. ಈ ಹುಡುಗಿಯರನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಊರಿನಲ್ಲಿ ಅವನಿಗೆ ಗೊತ್ತಿದ್ದ ಜೋಡಿಯೊಂದು ಎಷ್ಟೊಂದು ಅನ್ಯೋನ್ಯವಾಗಿತ್ತೆಂದರೆ, ಅವರಿಗೆ ಒಬ್ಬರನ್ನೊಬ್ಬರು ಬಿಟ್ಟು ನೋಡಲು ಸಾಧ್ಯವೇಯಿರಲಿಲ್ಲ. … Read more

ಕಾಲೇಜು ದಿನಗಳ ವಾಕಿಂಗ್: ಅಕ್ಷಯ ಕಾಂತಬೈಲು

ನನ್ನ ಇಂಜಿನಿಯರಿಂಗ್ ಕಲಿಕೆಯ ದಿನಗಳವು; ಅಸೈನ್ಮೆಂಟ್ ಬರೆಯದ್ದರಿಂದ, ಕ್ಲಾಸಿಗೆ ತಡವಾಗಿ ಹಾಜರಾಗುತ್ತಿದ್ದ ಕಾರಣ, ಲ್ಯಾಬ್ ರೆಕಾರ್ಡ್ ಸಮಯಕ್ಕೆ ಸರಿಯಾಗಿ ಕೊಡದ್ದರಿಂದ ಲೆಕ್ಚರರ ಕೈಯಲ್ಲಿ ನಾನು ಸಿಕ್ಕಾಪಟ್ಟೆ ಉಗಿಸಿಕೊಳ್ಳುತ್ತಿದ್ದೆನು. ನನ್ನೀ ಉದಾಸೀನತೆ ಅತಿರೇಕ ತಲುಪಿ ಲೆಕ್ಚರುಗಳು ಕ್ಲಾಸಿನಿಂದ ಉಚ್ಚಾಟನೆ ಮಾಡಿದ ಪ್ರಸಂಗವೂ ಬೇಜಾನ್ ಇದೆ. ಕಾಲೇಜಿನಲ್ಲಿ ಚೆಂದಮಾಡಿ ಬೈಗುಳ ಉಂಡು ಸಂಜೆ ಹೊತ್ತು ರೂಂಗೆ ಹಿಂತಿರುಗಿದಾಗ ಆ ದಿನದ ನಿರ್ವಹಣೆಯ ಬಗೆಗೆ ನನ್ನ ಮೇಲೆ ನನಗೇ ಬೇಸರ ಮೂಡುತ್ತಿತ್ತು. ಮನಸಿಗೆ ಮೂಡಿದ ಬೇಸರವ ಕಳೆಯಲು ಮಿತ್ರ -ಶಿವಕುಮಾರನ ಜೊತೆ … Read more

ಚೊಕ್ಕ ಕತೆಗಳು: ಮಾಧವ ಡೋಂಗ್ರೆ

1.ಸಂಸಾರ ಆತ ಸ್ಥಿತಪ್ರಜ್ಞ. ಆಕೆ ಚಂಚಲೆ. ಆದರೂ ಅವರದು ಬಿಡಲಾರದ ಅನುಬಂಧ.  ಆಕೆ ಆತನನ್ನು ಖುಶಿಪಡಿಸಲು ದಿನವೂ ಆತನಲ್ಲಿ ಬಂದು ಅವನಲ್ಲಿ ಸೇರುತ್ತಾಳೆ. ಆದರೆ ಕೆಲವೊಮ್ಮೆ ನಿತ್ರಾಣಳಾಗಿ ನಡುದಾರಿಯಲ್ಲೆ ಬಿದ್ದುಹೋಗುತ್ತಾಳೆ. ಅವನಾದರೋ ಇದ್ಯಾವುದರ ಪರಿವೆ ಇಲ್ಲದೆ ನಿಶ್ಚಲನಾಗಿದ್ದು ತನ್ನ ತಪಸ್ಸನ್ನಾಚರಿಸುತ್ತಾನೆ. ಇನ್ನೊಂದು ಆಯಾಮದಲ್ಲಿ ಆತ ಆಕೆಗಾಗಿ ಕ್ಷಣಕ್ಷಣವೂ ಹಾತೊರೆಯುತ್ತಿರುತ್ತಾನೆ. ಆಕೆಯ ಬರುವಿಕೆ ಗೊತ್ತಿದ್ದರೂ ಸುಮ್ಮನೆ ಮುನಿಸಿಕೊಳ್ಳುತ್ತಾನೆ. ಆದರೆ ಆಕೆ ಬಂದರೂ, ಬರದಿದ್ದರೂ ಅವರಿಬ್ಬರ ಮಕ್ಕಳನ್ನು ಜೊಪಾನವಾಗಿ ನೋಡಿಕೊಂಡು, ರಾತ್ರಿಯಾದಂತೆ ಮಕ್ಕಳನ್ನು ಮಲಗಿಸಿ ಅವಳಿಗೊಸ್ಕರ ಕಾಯತೊಡಗುತ್ತಾನೆ. ಆತನ ಹೆಸರು … Read more

ತಿರಸ್ಕಾರ (ಭಾಗ 2): ಜೆ.ವಿ.ಕಾರ್ಲೊ, ಹಾಸನ

(ಇಲ್ಲಿಯವರೆಗೆ) … ಹುಡುಗಿ ಅವನಿಗೆ ಒಂದು ಮುತ್ತು ಕೊಟ್ಟಿದ್ದರೆ ಅವನು ಸುಮ್ಮನೇ ಹೊರಟುಹೋಗಿ ಈ ಅನಾಹುತ ಜರುಗುತ್ತಿರಲಿಲ್ಲವೇನೋ? ನೆಲಕ್ಕುರುಳಿದ್ದ ರೈತನ ಮೇಲೆ ಅವನ ದೃಷ್ಟಿ ಹರಿದು ಅವನಿಗೆ ನಗು ಬಂದಿತು. ಹಾಗೆಯೇ ಹೆಂಗಸಿನೆಡೆಗೆ ನೋಡಿದಾಗ ಅವಳಿನ್ನೂ ಕಂಪಿಸುತ್ತಿದ್ದಳು. ಹುಡುಗಿಯ ನಂತರ ತನ್ನ ಸರದಿ ಎಂದು ಅವಳು ಭಾವಿಸಿರಬೇಕು! ಯಾಕೆ ಹೆಂಗ್ಸೇ ಅಳ್ತಾ ಇದ್ದೀಯಾ? ಇದು ಇವತ್ತಲ್ಲ ನಾಳೆ ಜರುಗಲೇ ಬೇಕಿತ್ತು. ಅವನು ಹಿಂಬದಿಯ ಜೇಬಿನಿಂದ ಪರ್ಸನ್ನು ಹೊರತೆಗೆದು, ತೆಗೋ ಇದರಲ್ಲಿ ನೂರು ಫ್ರಾಂಕುಗಳಿವೆ. ನಿನ್ನ ಮಗಳಿಗೊಂದು ಡ್ರೆಸ್ … Read more

ತಿರಸ್ಕಾರ (ಭಾಗ 1): ಜೆ.ವಿ.ಕಾರ್ಲೊ, ಹಾಸನ

ಮೂಲ: ಡಬ್ಲ್ಯು. ಸಾಮರ್ಸೆಟ್ ಮ್ಹಾಮ್. ಕನ್ನಡಕ್ಕೆ: ಜೆ.ವಿ.ಕಾರ್ಲೊ, ಹಾಸನ (ಬ್ರಿಟಿಶ್ ಲೇಖಕ ಡಬ್ಲ್ಯು. ಸಾಮರ್ಸೆಟ್ ಮ್ಹಾಮ್ (೧೮೭೪-೧೯೬೫) ಹುಟ್ಟಿದ್ದು ಪ್ಯಾರಿಸಿನಲ್ಲಿ. ತನ್ನ ಕುಟುಂಬದ ಸಂಪ್ರದಾಯದಂತೆ ಅವನು ವೃತ್ತಿಯಲ್ಲಿ ವಕೀಲನಾಗಬೇಕಿತ್ತು. ಹುಟ್ಟಿನಿಂದಲೇ ತೊದಲುವಿಕೆಯ ಕಾರಣಗಳಿಂದ ಅವನು ವಕೀಲನಾಗಲಿಲ್ಲ. ಹತ್ತು ವರ್ಷಗಳಲ್ಲೇ ಅನಾಥನಾದ್ದರಿಂದ ಅವನನ್ನು ಅವನ ಚಿಕ್ಕಪ್ಪ ಇಂಗ್ಲೆಂಡಿನಲ್ಲಿ ಸಾಕಿದರು. ಅವನು ಕಲಿತದ್ದು ವೈಧ್ಯ ಶಿಕ್ಷಣವಾದರೂ ಅವನ ಆಸಕ್ತಿ ಸಾಹಿತ್ಯದಲ್ಲಿತ್ತು. ಲೇಖಕನಾಗಿ ಹೆಸರು, ಹಣ ಗಳಿಸಲು ಅವನಿಗೆ ಬಹಳಷ್ಟು ವರ್ಷಗಳೇ ಹಿಡಿದವು. ಕಾದಂಬರಿಕಾರನಾಗಿ, ಸಣ್ಣ ಕತೆಗಾರನಾಗಿ ಹೆಸರುಗಳಿಸುವ ಮೊದಲು ಅವನು … Read more

ಒಂದು ಹನಿ ಕಣ್ಣೀರು: ಪಾರ್ಥಸಾರಥಿ ಎನ್

ಎಲ್ಲವೂ ಅನಿರೀಕ್ಷಿತ ಅನ್ನಿಸುವಂತೆ ಮುಗಿದುಹೋಯಿತು. ಬೆಳಗಿನ ಜಾವ ನಾಲಕ್ಕು ಗಂಟೆ ಇರಬಹುದು ರೂಮಿನಲ್ಲಿ ಮಲಗಿದ್ದ ಅಮ್ಮ ತುಂಬಾನೆ ಕೆಮ್ಮುತ್ತಿದ್ದಳು, ಇದೇನು ಎಂದು ಎದ್ದುಹೋದೆ. "ಏನಮ್ಮ ತುಂಬಾ ಕೆಮ್ಮು ಇರುವ ಹಾಗಿದೆ , ಕುಡಿಯಲು ನೀರು ಕೊಡಲಾ? " ಎಂದೆ, ದೀಪ ಹಾಕುತ್ತ. ಅವಳಿಗೆ ಉತ್ತರಿಸಲು ಆಗಲಿಲ್ಲ ಅನ್ನಿಸುತ್ತೆ, "ಕೊಡು" ಅನ್ನುವಂತೆ ತಲೆ ಆಡಿಸಿದಳು. ಹೋಗಿ ನೀರು ತಂದೆ. ಎದ್ದು ಕುಳಿತು ಕುಡಿಯಲು ಪ್ರಯತ್ನಿದಳು, ಆದರೆ ಪೂರ್ತಿ ನೀರು ಕುಡಿಯಲೇ ಇಲ್ಲ. ತಲೆ ಪಕ್ಕಕ್ಕೆ ವಾಲಿಸಿ ಹಾಗೆ ಹಿಂದಕ್ಕೆ … Read more

ಪತ್ರ: ಗಣೇಶ್ ಖರೆ

ಕಳೆದ ಕೆಲ ವರ್ಷಗಳಿಂದ ನಾನಾಯಿತು ನನ್ನ ಕೆಲಸವಾಯಿತು. ಇನ್ನೇನು ಕೆಲಸ ಕೆಲ ವರ್ಷದ್ದಷ್ಟೇ..  ಈಗಂತೂ ಟಿವಿ, ಕಂಪ್ಯೂಟರ್ ಅಂತ ಸಮಯ ಕಳೆದದ್ದೂ ತಿಳಿಯುವುದಿಲ್ಲ. ಇಂದಿನ ಆಧುನಿಕ ಯುಗದಲ್ಲಿ ಪತ್ರ ವ್ಯವಹಾರ ಮುಗಿದೇ ಹೋಗಿದೆ. ಆದರೆ ತುಂಬಾ ದಿನದ ಮೇಲೆ ಮನೆಗೊಂದು ಪತ್ರ ಬಂದಿತ್ತು… ಹಲ್ಲೋ ಸರ್… ನಾನು ಶರತ್ ಅಂತ. ಜರ್ನಲಿಸಮ್ ಮಾಡ್ತಾ ಇದ್ದೇನೆ. ಕೆಲ ಹಳೆಯ ಬರಹಗಾರರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಅದರಲ್ಲಿ ನಿಮ್ಮದೂ ಹೆಸರಿದೆ. ಸ್ವಲ್ಪ ಮಾಹಿತಿ ಸಂಗ್ರಹಿಸಿದಾಗ ನಿಮ್ಮ ಬಗ್ಗೆ ಕೆಲ ವಿಷಯ … Read more

ನನಗೂ ನಿನಗೂ ಅಂಟಿದ ನಂಟಿನ: ಪ್ರವೀಣ

ಆತ ಮರೆತುಹೋದಾಗಲೆಲ್ಲ ಆಕೆ ನೆನಪು ಮಾಡಿಕೊಡುತ್ತಾಳೆ.  ಅದು ಬಾನು, ಇದು ಭುವಿ, ಅವ ಚಂದ್ರ, ಇವ ರವಿ, ಇದು ಇರುವೆ ಸಾಲು, ಅದು ಕುಡಿಯುವ ಹಾಲು. ಆ ದಿನ ರೈಲಿನಲ್ಲಿ ಅವಳು ಎಲ್ಲೋ ಪ್ರಯಾಣಿಸುವಾಗ ಆತ ಮೊದಲ ಬಾರಿಗೆ ಕಂಡಿದ್ದ.  ಕೊಳಕು ಅರಿವೆ, ಜಿಡ್ಡುಗಟ್ಟಿದ ಕೂದಲು, ಮಹಾ ದುರ್ಗಂಧ ಸೂಸುತ್ತ ಬಾಗಿಲ ಬಳಿ ಮುದುಡಿ ಕುಳಿತಿದ್ದ.  ಆತ ನೇರವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದರಿಂದ ಅವಳು ಬೆದರಿ, ಬೇರೆಡೆ ದೃಷ್ಟಿ ತಿರುಗಿಸಿ ಬಾತರೂಮು ಹೊಕ್ಕು ಹೊರಬಂದಳು.  ವಾಪಸು ಬರುವಾಗ … Read more

ಏಟುತಿಂದ ಕೈಗಳಿಗೆ ಬಹುಮಾನ ಇಟ್ಟ ಕೈಗಳು: ತಿರುಪತಿ ಭಂಗಿ

        ಅಮ್ಮನಿಗೆ ಗೊತ್ತಾದ್ರೆ ಸತ್ತೆ ಹೋಗುತ್ತಾಳೆ ಅಂತ ಅಂಜಿ  ಹನುಮ ತಾನು ಸ್ಕೂಲಲ್ಲಿ ಗಣಿತ ಪೇಲಾದ ವಿಷಯವನ್ನು ಗೌಪ್ಯವಾಗಿಯೇ  ಕಾಯ್ದುಕೊಂಡಿದ್ದ. ಅಂದಿನಿಂದ ಯಾಕೋ ಅವನು ಸರಿಯಾಗಿ ಊಟಮಾಡುತಿರಲಿಲ್ಲ, ಕುಂತಲ್ಲಿ ಕೂಡುತಿರಲಿಲ್ಲ, ಪುಸ್ತಕದ ಸಹವಾಸವೇ ಸಾಕೆನಿಸದಂತಾಗಿ ಹನಿಗೆ ಕೈಹಚ್ಚಿಕೊಂಡು ಚಿಂತೆಯ ಮಡಿಲಿಗೆ ಜಾರಿದ್ದ. ಸುಳ್ಳು ಹೇಳಬಾರದೆಂದು  ಶಾಲೆಯಲ್ಲಿ ಕನ್ನಡಾ ಶಿಕ್ಷಕರು ಸಾವಿರ ಸಲ ಶಂಕಾ ಊದಿದ್ದು ಅರಿವಾಗಿ, ದೇವರಂತಾ ಅಮ್ಮನಿಗೆ ಸುಳ್ಳು ಹೇಳಿದಿನಲ್ಲ ಅಂತ ಮನಸಿಗೇಕೋ ನಾಚಿಕೆ ಅನಿಸಿತು.  ವಾರ್ಷಿಕ ಪರೀಕ್ಷೆಯಲ್ಲಿ ಕಂಡಿತಾ ಪಾಸಾಗೊದಿಲ್ಲ … Read more

ಹೆತ್ತ ಕರುಳು-ತಾಯ್ತನ-ಮಮತೆ: ಕೃಷ್ಣವೇಣಿ ಕಿದೂರು

ಸುಬ್ಬಕ್ಕ ಮಿಲಿಟರಿಯಲ್ಲಿದ್ದ ಮಗನಿಗೆ ಮದುವೆ ಮಾಡಿದರೂ ಸೊಸೆಯನ್ನು ಮಗನೊಂದಿಗೆ ಕಳಿಸಲೇ ಇಲ್ಲ. ವರ್ಷಕ್ಕೊಮ್ಮೆ ಎರಡು ತಿಂಗಳ ರಜಾದಲ್ಲಿ ಆತ ಬಂದಾಗ ಅವಳಿಗೆ ಗಂಡನ ದರ್ಶನ. ಅವನಿಗೂ ಅಮ್ಮ ಹೇಳುವುದರಲ್ಲಿ ತಪ್ಪೇನಿಲ್ಲವೆನಿಸುತ್ತಿತ್ತು. ಮುದುಕರು, ಇಬ್ಬರೇ ಇದ್ದಾರೆ; ಕೂಗಿ ಕರೆದರೆ ಓಗೊಡಲು ಸೊಸೆ ಇರಲಿ ಎಂದರೆ ತಪ್ಪೇನು? ರಜಾದಲ್ಲಿ ಮಗ ಬಂದರೂ ಸುಬ್ಬಕ್ಕನ ಒಂದು ಕಿವಿ ಇವರತ್ತಲೇ ಇರುತ್ತಿತ್ತು. ಸೊಸೆ ಮಗನ ಕಿವಿ ಊದಿ ಕರೆದುಕೊಂಡು ಹೋಗಲು ಹಟ ಹಿಡಿದರೆ ಎಂಬ ಭೀತಿ,  ಅವರಿಬ್ಬರನ್ನು ಹತ್ತಿರವಾಗಲು ಬಿಡದಂತೆ ಕಾಯುವಂತೆ ಮಾಡಿತ್ತು. … Read more

ಸುಳಿವ ಗಾಳಿಯ ಶಬ್ದ ಹಿಡಿದು: ನಾಗರಾಜ್ ಹರಪನಹಳ್ಳಿ

‘ನಮಸ್ತೆ’ ಅವಳು ‘ಎಫ್ ಬಿ’ ಯಲ್ಲಿ ಕಳಿಸಿದ ಮೊದಲ ಶಬ್ದ ಸಂದೇಶವಿದು. ನಾನು ಕುತೂಹಲದಿಂದಲೇ ಪ್ರತಿಕ್ರಿಯಿಸಿದೆ ಕೊಂಚ ಉತ್ಸುಕನಾಗಿ. ‘ಹಾಯ್ ’ ‘ಥ್ಯಾಂಕ್ಸ ನನ್ನ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದಕ್ಕೆ’ ‘ ನನ್ನ ಫ್ರೆಂಡ್ ಪೋಟೋ ಒಂದಕ್ಕೆ ನಾನು ಕಮೆಂಟ್ ಹಾಕಿದ್ದು ನಿಮಗೆ ಇಷ್ಟವಾಗಿ, ನೀವು ಲೈಕ್ ಒತ್ತಿದ್ದಿರಿ. ನಾನು ಕುತೂಹಲದಿಂದ ನಿಮ್ಮನ್ನ ಪರಿಚಯ ಮಾಡಿಕೊಳ್ಳಕ್ಕೆ ಮುಂದಾದೆ ನೋಡಿ. ಹಾಗಾಗಿ ಈ ಗೆಳೆತನ ಅಂದೆ.  ‘ಅವರು ನಿಮಗೆ ಗೊತ್ತಾ’ ಅಂತ ಅವಳು ಕೇಳಿದ್ಲು. ‘ತೀರಾ ಪರಿಚಿತರೇನಲ್ಲ. ಎಫ್ … Read more

ಸಂಸಾರ ಸಾರ: ಮಂಜು ಹಿಚ್ಕಡ್

ಟಕ್, ಟಕ್, ಟಕ್ ಎಂದು ಕೇಳಿ ಬರುವ ಜನರ ಹೆಜ್ಜೆಗಳ ಸಪ್ಪಳ. ಗುಂಯ್, ಗುಂಯ್, ಗುಂಯ್ ಎಂದು ರಸ್ತೆಯಲ್ಲಿ ಓಡಾಡುವ ವಾಹನಗಳ ಶಬ್ಧ. ಆಗೊಮ್ಮೆ ಈಗೊಮ್ಮೆ ಕೊಂಯ್, ಕೊಂಯ್, ಕೊಂಯ್ ಎಂದು ಕೇಳಿ ಬರುತ್ತಿದ್ದ ಅಂಬ್ಯೂಲನ್ಸ್ ಸಪ್ಪಳ. ಅಲ್ಲಲ್ಲಿ ಆಗಾಗ ಕೇಳಿ ಬರುತ್ತಿದ್ದ ಜನರ ಪಿಸುಮಾತುಗಳು. ಒಮ್ಮೊಮ್ಮೆ ಅಲ್ಲೊಬ್ಬರು, ಇಲ್ಲೊಬ್ಬರು ಅಳುವ ಸಪ್ಪಳ. ಇವೆಲ್ಲಾ ಆಗಾಗ ಕೇಳಿ ಬರುತ್ತಲೇ ಇದ್ದುದರಿಂದ ಇಂದಾದರೂ ಸ್ವಲ್ಪ ಹೊತ್ತು ನಿದ್ದೆ ಮಾಡಬೇಕೆಂದುಕೊಂಡು ಮಲಗಿದ ಸುಮಾಳಿಗೆ ನಿದ್ದೇನೆ ಹತ್ತಿರ ಸುಳಿಯುತ್ತಿರಲಿಲ್ಲ. ತಾನು ಮಲಗಿ … Read more

ಎಲ್ಲೋ ಹುಡುಕಿದೆ ಇಲ್ಲದ ದೇವರ: ಹನುಮಂತ ಹಾಲಿಗೇರಿ ಬರೆದ ಕತೆ

ಊರಾಗ ಸಿಕ್ಕಾಪಟ್ಟಿ ಮಳೆಯಾಗಿ ಎಲ್ಲ ಮನೆ ಬಿದ್ದಾವು. ನಮ್ಮ ಮನಿನೂ ಸೊರಾಕ ಹತೈತಿ. ಈ ಸಲ ಊರಿಗೆ ಬಂದು ಹೋಗಪಾ ಎಂದು ಅವ್ವ ಹೇಳಿದ್ದು ನೆನಪಾಗಿ ಈ ಸಲ ಹಬ್ಬದ ಸೂಟಿ ಉಪಯೋಗ ಮಾಡಿಕೊಳ್ಳುವುದಕ್ಕೋಸ್ಕರವಾದರೂ ಊರಿಗೆ ಹೋಗಲೇ ಬೇಕೆನಿಸಿದ್ದರಿಂದ ರಾತ್ರಿ ಕೆಲಸ ಮುಗಿದ ಮೇಲೆ ನೇರವಾಗಿ ರೂಮಿಗೆ ಹೋಗಿ ಒಂದೆರಡು ಪ್ಯಾಂಟು-ಶರಟುಗಳನ್ನು ಬ್ಯಾಗಿಗೆ ತುರುಕಿಕೊಂಡು ಬಸ್ಸು ಹತ್ತಿದೆ.  ಬೆಳಗ್ಗೆ ಬಸ್ ಇಳಿದಾಗ ಬಸ್ ನಿಲ್ದಾಣದ ಛಾವಣಿಯೊಳಗ ಮತ್ತು ರಡ್ಡೆರ ಕಾಂಪ್ಲೆಕ್ಸ್‌ನೊಳಗ ಊರ ಜನ ಅನ್ನ ಬೇಯಿಸಿಕೊಳ್ಳುತ್ತಿದ್ದುದು ಕಂಡು … Read more

ಹುಲಿಯೋ, ಸುಂದರಾಂಗಿಯೋ?: ಜೆ.ವಿ.ಕಾರ್ಲೊ

ಹುಲಿಯೋ, ಸುಂದರಾಂಗಿಯೋ? ಮೂಲ: ಫ್ರ್ಯಾಂಕ್ ಸ್ಟೊಕ್ಟನ್ ಅನುವಾದ: ಜೆ.ವಿ.ಕಾರ್ಲೊ ಬಹಳ ಬಹಳ ವರ್ಷಗಳ ಹಿಂದೆ ಒಬ್ಬ ರಾಜ ರಾಜ್ಯವನ್ನಾಳುತ್ತಿದ್ದ. ತನ್ನ ನೆರೆಯ ಲ್ಯಾಟಿನ್ ಸಾಮ್ರಾಜ್ಯದ ಪ್ರಭಾವದಿಂದಾಗಿ ಅವನು ತೋರಿಕೆಗೆ ನಾಗರಿಕನಾಗಿ ಕಾಣುತ್ತಿದ್ದನಾದರೂ, ಮೂಲತಃ ತುಂಬಾ ಕ್ರೂರಿಯಾಗಿದ್ದ, ಚಂಚಲ ಸ್ವಭಾವದವನಾಗಿದ್ದ. ಯಾವ ಗಳಿಗೆಯಲ್ಲಿ ಅವನ ಯೋಚನೆಗಳು ಹೇಗೆ ತಿರುಗುತ್ತವೆಂದು ಊಹಿಸಲು ಯಾರಿಗೂ ಸಾಧ್ಯವಿರಲಿಲ್ಲ. ಅವನೇ ಅವನ ಆಪ್ತ ಸಲಹಾಕಾರನಾಗಿದ್ದ ಮತ್ತು ಆ ಗಳಿಗೆಯಲ್ಲೇ ತೀರ್ಮಾನಿಸಿ ಜಾರಿಗೊಳಿಸುತ್ತಿದ್ದ. ಅವನ ರಾಜ್ಯಭಾರ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸರಾಗವಾಗಿ ನಡೆಯುತ್ತಿದ್ದರೆ ಅವನು ತುಂಬಾ … Read more

ಧ್ವಜ ಹಾರಿ ಪಾರಿವಾಳವಾಗಿ: ಪ್ರವೀಣ

೬೭ನೆಯ ಸ್ವಾತಂತ್ರ್ಯ ದಿನಾಚಾರಣೆಯ ಬೆಳಿಗ್ಗೆ ಎಂಟೂವರೆಗೆ ಕಣ್ಣೂರಿನ ಇತಿಹಾಸದಲ್ಲಿ ಅಸ್ತಿತ್ವವೇ ಇಲ್ಲದ ಜಾಲಪ್ಪ ಹೀಗೆ ಏಕಾಏಕಿ ಗೊಂದಲದಲ್ಲಿ ಸ್ಥಿಮಿತ ಕಳೆದುಕೊಂಡ ಜನಜಂಗುಳಿಯಲ್ಲಿ ಗೂಳಿಯಂತೆ ನುಗ್ಗಿ ತೋರಿದ ಧೈರ್ಯಕ್ಕೆ, ಮೆರೆದ ಸಾಹಸಕ್ಕೆ ಪೊಲೀಸ್ ಕೈಕೋಳ ತೊಡಿಸಿದರೆ ಊರಜನತೆ ಕರತಾಡನ ಜಯಕಾರಗಳಲ್ಲಿ ದುಮುದುಮಿಸಿತು.   ಜಾಡರ ಜಾಲಪ್ಪನ ಕೈಗೆ ಪೊಲೀಸರು ಕೈಕೋಳ ಹಾಕಿ ಬೀದಿಯಲ್ಲಿ ಮೆರವಣಿಗೆಯೋಪಾದಿಯಲ್ಲಿ ಅವನನ್ನು ಎಳೆದೊಯ್ಯುತ್ತಿದ್ದಾರೆಂಬ ಸುದ್ದಿ ಶರವೇಗದಲ್ಲಿ ಊರಿನ ಮೂಲೆಮೂಲೆಗಳಲ್ಲಿ ತಲುಪಿದರೆ ಅವನ ಜೋಕುಗಳನ್ನು ಗುಲಾಬ ಜಾಮೂನಿನಂತೆ ನುಂಗಿ ನಕ್ಕು ನಲಿದವರೂ ನಂಬುತ್ತಿರಲಿಲ್ಲ, ಬೆಳಿಗ್ಗೆ ಭಾಂಡೆ … Read more

ತಿಮ್ಮನ ಹುಚ್ಚು!: ಮಂಜು ಹಿಚ್ಕಡ್

ರಾತ್ರಿ ಪೂರ್ತಿ ಹಿಮ್ಮೇಳದಲ್ಲಿ ಕುಳಿತು ಪೇನುಪೆಟ್ಟಿಗೆ ನುಡಿಸುತ್ತಾ ಕುಳಿತ ತಿಮ್ಮನಿಗೆ ಬೆಳಿಗ್ಗೆಯಾಗುತ್ತಿದ್ದಂತೆ ನಿದ್ದೆಯೋ ನಿದ್ದೆ. ಯಕ್ಷಗಾನ ಮುಗಿಸಿ ಬಜನೆಕಟ್ಟೆಯ ಮೇಲೆ ಕುಳಿತ ತಿಮ್ಮನಿಗೆ ಅಲ್ಲೇ ನಿದ್ದೆ ಹತ್ತಿತು. ಚಕ್ರಾಸನ ಹಾಕಿ ಕುಳಿತಿದ್ದ ಆತ ನಿದ್ದೆಯ ಗುಂಗಿನಲ್ಲಿ ಶವಾಸನದ ರೀತಿಯಲ್ಲಿ ಮಲಗಿದ್ದ. ವೇಷದಾರಿಗಳು ಬಣ್ಣ ಕಳಚಿ ಮನೆಗೆ ಹೋಗುವಾಗ ಮಾತನ್ನಾಡುತ್ತಿದ್ದುದು, ಯಕ್ಷಗಾನದ ಚಪ್ಪರ ಬಿಚ್ಚಲು ಬಂದವರು ಗುಸು ಗುಸು ಮಾತನ್ನಾಡುತ್ತಿದ್ದುದು ನಿದ್ದೆಯ ಮಂಪರಿನಲ್ಲಿದ್ದ ಅವನ ಕಿವಿಗೆ ಬಿಳುತ್ತಿದ್ದವಾದರೂ ಅವೆಲ್ಲ ಕನಸಿನಲ್ಲಿ ನಡೆದಂತೆ ಭಾಸವಾಗುತ್ತಿದ್ದವು. ನಿದ್ದೆಯ ಸೆಳೆತದಲ್ಲಿ ಮೈಮರೆತ ಆತನಿಗೆ … Read more

ಇರುಳಲಿ ಕಂಡವಳು! (ದೆವ್ವದ ಕಥೆಗಳು – ಭಾಗ ೨): ಗುರುಪ್ರಸಾದ ಕುರ್ತಕೋಟಿ

ಬಿದರಕಾನ ಅನ್ನುವ ಮಲೆನಾಡಿನ ಸುಂದರ ಹಳ್ಳಿಗೆ, ನನ್ನ ಮಾವನ ಊರಾದ ಕಿಬ್ಬಳ್ಳಿಯಿಂದ ಒಂದು ಗಂಟೆಯ ದಾರಿ. ಕಿಲೋಮೀಟರುಗಳ ಲೆಕ್ಕದಲ್ಲಿ ಬರಿ ಹದಿನೈದು. ಆದರೆ ಬಳುಕುತ್ತ ಹರಿಯುವ ಮೋಹಕ ನದಿ ಅಘನಾಷಿನಿಯ ಪಕ್ಕಕ್ಕೆ ಚಾಚಿಕೊಂಡ ಏರಿಳಿತದ, ತಿರುವುಗಳಿಂದಲೇ ಭೂಷಿತವಾದ ಘಾಟ್ ರಸ್ತೆಯನ್ನು ಕ್ರಮಿಸುವುದಕ್ಕೆ ಒಂದು ಗಂಟೆ ಬೇಕು. ಆ ರಸ್ತೆಯಲ್ಲಿ ಕಾರು ಓಡಿಸುವುದೇ ಒಂದು ಖುಷಿ, ಎಷ್ಟೋ ಸಲ ಆ ಖುಷಿ ಓಡಿಸುವವರಿಗೆ ಮಾತ್ರ! ಯಾಕೆಂದರೆ ಹಿಂದೆ ಕುಳಿತವರು ರೋಡಿನ ತಿರುವಿಂಗ್ಸ್ ನಲ್ಲಿ ಹೊಟ್ಟೆ ತೊಳಸಿಕೊಳ್ಳುವವರಾಗಿದ್ದರೆ, 'ಗೊಳ್' ಅಂತ … Read more

ಗಲಭೆ: ವಾಸುಕಿ ರಾಘವನ್

ಕಳೆದೆರಡು ದಿನಗಳಿಂದ ನಾರಾಯಣ ತಂತ್ರಿಯವರಿಗೆ ಆ ಊರಿನ ರೈಲ್ವೆ ಸ್ಟೇಷನ್ನಿಂದ ಹೊರಬರಲಾಗಿರಲಿಲ್ಲ. ಊರಿಗೆ ಬರುವ ಮತ್ತು ಅಲ್ಲಿಂದ ಹೊರಡುವ ರೈಲುಗಳೆಲ್ಲಾ ರದ್ದಾಗಿದ್ದವು. ಊರಿನಲ್ಲಿನ್ನೂ ಗಲಭೆ ನಿಯಂತ್ರಣಕ್ಕೆ ಬಂದಿರಲಿಲ್ಲ. ಫೋನ್ ಸರ್ವೀಸುಗಳೂ ಬಂದ್ ಆಗಿದ್ದರಿಂದ ತಮ್ಮ ಮನೆಯವರಿಗೆ ತಾವಿಲ್ಲಿ ಇರುವ ವಿಷಯ ತಿಳಿಸಲು ಆಗಿರಲಿಲ್ಲ. ಹೊರಗಡೆ ಕರ್ಫ್ಯೂ ವಿಧಿಸಲಾಗಿತ್ತು. ತುಂಬಾ ಸುಸ್ತಾಗಿದ್ದರೂ, ತಂತ್ರಿ ಹತಾಶರಾಗಿ ಪ್ಲಾಟ್ಫಾರ್ಮಿನ ಆ ಕಡೆಯಿಂದ ಈ ಕಡೆಗೆ ಓಡಾಡುತ್ತಿದ್ದರು. ತಮ್ಮ ಮಗಳಿಗೆ ಒಳ್ಳೆ ಸಂಬಂಧ ಹುಡುಕಿಕೊಂಡು ಈ ಊರಿಗೆ, ಅದೂ ಈ ಹೊತ್ತಿನಲ್ಲಿ ಬಂದು … Read more

ಗುಂಡು ಕೊರೆದ ಮೊಳಕಾಲಿನ ಕಲೆಯೂ ಆ ದಿನಗಳ ನೆನಪೂ…: ಷಡಕ್ಷರಿ ತರಬೇನಹಳ್ಳಿ

ಮೊನ್ನೆ ಕಾಲ ಮೇಲೆ ಕಾಲ್ ಹಾಕಿ ಕುಳಿತು ಪ್ರಜಾವಾಣಿ ಓದುತ್ತಿದ್ದೆ. ಅದೇ ಎಡಗಾಲಿನ ಕಲೆ ಅವನ ನೆಚ್ಚಿನ ಚಿಣ್ಣರ ಚಿತ್ತಾರ ಅಂಕಣ ನೋಡಲು ಬಂದ ಅನಿಶನ ಕಣ್ಸೆಳೆದಿತ್ತು. “ಏನಪ್ಪಾ ಈ ಕಲೆ? ಯಾಕೆ ಅದು ಅಷ್ಟು ಅಗಲಕ್ಕಿದೆ? ಎಂದ. ನಾನು “ಸಣ್ಣವನಿದ್ದಾಗ ಬಿದ್ದು ಏಟು ಮಾಡಿಕೊಂಡಿದ್ದೆ ಕಣೋ, ಅದೇ ಮಚ್ಚೆಯಂತೆ ಉಳಿದು ಬಿಟ್ಟಿದೆ” ಎಂದರೂ ಅವನ ಕುತೂಹಲದ ಕಣ್ಣುಗಳಲ್ಲಿನ್ನೂ ಸಂಶಯ ಇಂಗಿರಲಿಲ್ಲ. ಆ ಕಲೆಯನ್ನೇ ಮುಟ್ಟಿ ಮುಟ್ಟಿ ನೋಡಿ, ಅಲ್ಲಿ ಗುಂಡಿ ಬಿದ್ದಿರುವಂತ ಅದರ ಅನುಭವ ಪಡೆದುಕೊಂಡ … Read more

ಕುರುಂಬಿಲನ ಪಂಚಾಂಗ: ಅಶೋಕ್ ಕುಮಾರ್ ವಳದೂರು (ಅಕುವ)

ಶೈಲೇಶ ಅದೆಷ್ಟು ವರ್ಷಗಳ ನಂತರ ಉಡುಪಿಗೆ ಬಂದಿದ್ದ. ಸದ್ಯ ಕಟಪಾಡಿಯಲ್ಲಿರುವ ತನ್ನ ಅಕ್ಕನ ಮನೆಗೆ ಬಂದು ಇಳಿಯುವುದೇ ಸುಲಭವಾಗಿ ಬಿಟ್ಟಿದ್ದೆ. ಅದು ಹೈವೇಗೆ ತಾಗಿ ಕೊಂಡೆ ಇರುವುದು ಕಾರಣ ಕೂಡಾ. ಮುಂಬೈಯಿಂದ ಬಸ್ಸು ಹಿಡಿದರೆ ಮನೆಯ ಅಂಗಳದಲ್ಲೇ ಉಳಿಯುವ ವ್ಯವಸ್ಥೆ ಅದು.ಇತ್ತೀಚೆಗೆ ತಾನು ಹುಟ್ಟಿ ಬೆಳೆದ ಅಜ್ಜನ ಊರು ಹೇರೂರಿನ ಕಡೆ ಹೋಗದೆ ಅನೇಕ ವರ್ಷಗಳೇ ಕಳೆದಿದ್ದವು.ಕಟಪಾಡಿಯಿಂದ ಒಳಮಾರ್ಗ ಶಂಕರಪುರದಿಂದ ಕಾರ್ಕಳ ಕಡೆ ಹೋಗುವ ಬಸ್ಸನ್ನು ಕಂಡಾಗ ಒಮ್ಮೆ ಹೇರೂರಿಗೆ ಹೋಗಿ ಬರುವ ಮನಸ್ಸಾಯಿತು. ಅಂದು ಶನಿವಾರ. … Read more