ಮುರಳಿ ಮೋಹನ್ ಕಾಟಿ ಪ್ರಸಾದ್ ಶೆಟ್ಟಿ ವಿ.ಸೂ.: ಹೂವಿನ ಚಿತ್ರಗಳನ್ನು ಪ್ರಸಾದ್ ಶೆಟ್ಟಿಯವರು ಲಾಲ್ ಬಾಗ್ ನ ಪುಷ್ಪಮೇಳದಲ್ಲಿ ತೆಗೆದಿದ್ದಾರೆ. ಕೊನೆಯ ಮೂರು ಚಿತ್ರಗಳನ್ನು ಮುರಳಿ ಮೋಹನ್ ರವರು ತೆಗೆದಿದ್ದಾರೆ.
Author: editor
ನಮ್ಮ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ…..
1. ಮೊದಲು ಓದುಗನಾಗು: ಕಾರ್ನಾಡರ “ಹಯವದನ”- ರಾಜೇಂದ್ರ ಬಿ. ಶೆಟ್ಟಿ 2. ಪಂಜು ವಿಶೇಷ: ಓ ನಾಗರಾಜ ಅಪ್ಪಣೆಯೇ…-ಹರಿ ಪ್ರಸಾದ್ 3. ಕಥಾಲೋಕ: ಅಂತರಂಗದ ಗಂಗೆ – ಪಾರ್ಥಸಾರಥಿ ನರಸಿಂಗರಾವ್ 4. ಕಾವ್ಯಧಾರೆ: ಮೂರು ಕಾವ್ಯಗಳು -ಅರ್ಪಿತಾ ರಾವ್, ಕಾಂತರಾಜು ಕೆ ಮತ್ತು ರಾಜಹಂಸ 5. ಸಿನಿ-ಲೋಕ: ಕಾಂಟೆಕ್ಸ್ಟ್- ವಾಸುಕಿ ರಾಘವನ್ 6. ಪಂಜು-ವಿಶೇಷ: ಮಾತೃ ಭಾಷೆಗೆ ಸಿಕ್ಕ ಮನ್ನಣೆ […]
ಇದೇ ಮೇಲಲ್ಲವೇ?
"ದೇವರಮನೆ ಬಾಗಿಲು ಮುಚ್ಚಿಬಿಡೇ" ಅಪರೂಪಕ್ಕೆ ಬಂದ ಗೆಳತಿ ಅಸ್ಪೃಶ್ಯಳಂತೆ ಬಾಗಿಲಲ್ಲೇ ನಿಂತು ಹೇಳುತ್ತಿದ್ದಳು. ಯಾಕೆಂದು ಕೇಳುವ ಅಗತ್ಯವಿರಲಿಲ್ಲ. ನಾನು ಹೋಗಿ ಮುಚ್ಚಿದೆ. "ಅಯ್ಯೋ ಬಿಡೇ ನೀನೊಬ್ಬಳು ಅಡಗೂಲಜ್ಜಿ ತರಹ ಆಡ್ತೀಯಮ್ಮಾ"-ಜೊತೆಯಲ್ಲಿದ್ದ ಇನ್ನೊಬ್ಬ ಗೆಳತಿಯ ಪ್ರತಿಕ್ರಿಯೆ. ಅವಳಲ್ಲಿ ಉತ್ತರವಿರಲಿಲ್ಲ, ಮುಖ ಪೆಚ್ಚಾಯಿತು. ಅದೊಂದು ನಂಬಿಕೆಯಷ್ಟೆ. ನಂಬಿಕೆಯೊಳಗೆ ಪ್ರಶ್ನೆಗಳೂ ಹುಟ್ಟುವುದಿಲ್ಲ, ಹಾಗೂ ಉತ್ತರಗಳೂ ಇರುವುದಿಲ್ಲ. ಪ್ರಶ್ನೆ ಇದ್ದರದು ನಂಬಿಕೆಯಾಗಿರುವುದಿಲ್ಲ, ಒಂದು ಸಂಶಯವಾಗಿರುತ್ತದೆ. ಸಂಪ್ರದಾಯಸ್ಥ ಮನೆಗಳಿಂದ ಬಂದ ಇಂದಿನ ಹೆಣ್ಣುಮಕ್ಕಳೆಲ್ಲರೂ ಇದೊಂದು ಅರ್ಥವಿಲ್ಲದ ಆಚರಣೆ ಎಂದು ತಿಳಿದಿದ್ದರೂ, ಅದನ್ನೊಂದು ಸಹಜಪ್ರಕ್ರಿಯೆ […]
ಮತ್ತೆ ಮತ್ತೆ ತೇಜಸ್ವಿ
ಗೆಳೆಯ ಪರಮೇಶ್ವರ್ ಮತ್ತು ನನಗೂ ತುಂಬಾ ದಿನಗಳ ನಂಟು. ಈ ನಂಟನ್ನು ನನಗೆ ಕರುಣಿಸಿದ್ದು ಫೇಸ್ ಬುಕ್. ಫೇಸ್ ಬುಕ್ ನಲ್ಲಿ ಪರಿಚಯವಾದ ಈ ಗೆಳೆಯ ತನ್ನ ಕನಸುಗಳನ್ನು ಫೋನಿನಲ್ಲಿ ಎಷ್ಟೋ ಬಾರಿ ಹಂಚಿಕೊಂಡಿದ್ದಾರೆ. ಇವತ್ತು ಅವರ ಬಹುದಿನದ ಕನಸು ಎನ್ನಬಹುದಾದ ತೇಜಸ್ವಿಯವರ ಕುರಿತ ಸಾಕ್ಷ್ಯಚಿತ್ರವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿ ನಮ್ಮೆದುರು ಅದರ ತುಣುಕುಗಳನ್ನು ಯೂ ಟೂಬ್ ನಲ್ಲಿ ಹಾಕುವುದರ ಮೂಲಕ ಹಂಚಿಕೊಂಡಿದ್ದಾರೆ. 'ಮತ್ತೆ ಮತ್ತೆ ತೇಜಸ್ವಿ' ಎಂಬ ಶೀರ್ಷಿಕೆ ಹೊತ್ತ ಸಾಕ್ಷ್ಯಚಿತ್ರದ ಐದು ನಿಮಿಷದ ಪ್ರೊಮೋ ನೋಡಿದ […]
ಚಂಚಲ
ನಾ ಬರೆವ ಮುನ್ನ ಎದೆಯಲಿ ಕವಿತೆಯಾಗಿ ಹೊಮ್ಮಿದೆ ನೀನು, ಅದನು ಹಾಳೆಗಿಳಿಸುವ ಮುನ್ನ ನನಗೇ ಅರಿವಿರಲಿಲ್ಲ, ನನ್ನೊಳಗಿನ ನೀನು..! ನನ್ನ-ನಿನ್ನ ಆಂತರಿಕ ಸಂಘರ್ಷದ ಚಂಚಲತೆಯ ಭಯದಲಿ ಕರಗುತಿರುವೆ ನಾನು, ಕಾಣದೇ ಅಂತರ್ಮುಖಿಯಾಗಿ ಕಾಡುವ ನಿನಗೆ ನಾ ತಿಳಿಸಲಿ ಏನನು..? ಬರೆಯುವುದೇನನು? ಪದಗಳೇ ಇರದ ಭಾವನೆಗಳ, ಕಾಗದದಿ ಬಣ್ಣದ ಶಾಹಿಯಲಿ.. ಬರಿಯ ವರ್ಣ ಮಿಶ್ರಿತ ಅಸ್ಪಷ್ಟ ಮನದ ಪುಟದಲಿ […]
ಊರು-ಕೇರಿ ನಡುವ ನಾಗರಾವು ಮಿಸುಕಾಡಿ…
ಶ್ರಾವಣ ತಿಂಗಳ ಕೊನಿ ಸೋಮವಾರ. ಊರ ಬಸನದೇವ್ರ ಗುಡಿಯೊಳಗ ತಿಂಗಳಾನುಗಟ್ಲೆ ನಡೆದ ಬಸವ ಪುರಾಣಕ್ಕೆ ಅಂದು ಮಂಗಳ ಹೇಳೋ ದಿವ್ಸ. ಹೇಳಿಕೇಳಿ ಅದು ಲಿಂಗಾಯತರು ಬಾಳ ಮಂದಿ ಇರೋ ಬಸವನೂರು. ಲಿಂಗಾಯತರಿಗೆ ಬಸವಪುರಾಣದ ಮಂಗಲೋತ್ಸವೆಂದರೆ ಕೇಳಬೇಕೆ. ಪ್ರತಿಯೊಂದು ಮನೆಗೆ ಸಾವಿರಾರು ರೂ.ಪಟ್ಟಿ ವಸೂಲು ಮಾಡಿದ್ರು. ಊರು ಜನರು ಬುಟ್ಟಿಗಟ್ಟಲೆ ರೊಟ್ಟಿ, ಚೀಲಗಟ್ಟಲೆ ಜ್ವಾಳ-ಗೋದಿ ಕೊಟ್ಟು ‘ಬಸಣ್ಣ ನಿನ್ನ ಜಾತ್ರಿ ಚಂದಂಗ ನಡಿಯುವಂಗ ನೋಡಕೋಳ್ಳಪೋ. ಎಲ್ಲಾ ನಿನ್ನ ಕೂಡೇತಿ’ ಎಂದು ಬೇಡಿಕೊಂಡಿದ್ದರು. ಬಸಣ್ಣದೇವ್ರ ಗುಡಿಮುಂದಿನ ದೊಡ್ಡ ಪೆಂಡಾಲದೊಳಗ ಊರ […]
ನನ್ನೊಳಗಿನ ಗುಜರಾತ..!!! ಭಾಗ-2
ಆಗಷ್ಟ ತಿಂಗಳಲ್ಲಿ ನಮ್ಮ ಕರ್ಣಾಟಕದೆಲ್ಲೆಡೆ ಮುಂಗಾರು ಮಳೆಗಾಲ, ನಾವುಗಳು ಇಲ್ಲಿದ್ದುಕೊಂಡು ಸೂಯ್ಯೆಂದು ಸುರಿವ ಮಳೆಯ ಜೊತೆಗೆ ಚೆಂದದ ತಂಪನೆಯ ಹವಾಮಾನವನ್ನು ಸವಿಯುತ್ತಿರುತ್ತೇವೆ. ಆದರೆ, ಭೌಗೋಳಿಕವಾಗಿ ಇಲ್ಲಿಗೂ ಮತ್ತು ಗುಜರಾತಿನ ಹವಾಮಾನಕ್ಕೂ ತುಂಬಾ ವ್ಯತ್ಯಾಸವಿದೆ. ಆ ಆಗಷ್ಟ ಮಾಸದಲ್ಲಿ ಅಲ್ಲಿದ್ದಂತಹ ತಾಪಮಾನ ಸರಿ ಸುಮಾರು 42’ ಡಿಗ್ರಿ ಸೆಲ್ಸಿಯಸ್. ಉರಿಯುವ ಕೆಂಡದಂತಹ ತಾಪಮಾನಕ್ಕೆ ಬಳಲಿ ಬೆಂಡಾಗಿ ಅವರ ಮನೆ ತಲುಪಿದೆ. ಆ ಮೊದಲೇ ರಂಜನ ಪಟೇಲ್ ರವರನ್ನು ನಾನು ಒಂದೆರಡು ಬಾರಿ ನಮ್ಮ ಕರ್ಣಾಟಕಕ್ಕೆ ಬಂದಾಗ ಭೇಟಿಮಾಡಿದ್ದೆ. […]
ವುಡೀ ಆಲೆನ್ ಮತ್ತು ವಾಸುಕಿ ರಾಘವನ್
ಕೆಲವು ಚಿತ್ರಗಳೇ ಹಾಗೆ. ಮೊದಲ ಬಾರಿ ನೋಡಿದಾಗ ಅಷ್ಟೊಂದು ಅದ್ಭುತ ಅಂತ ಅನ್ನಿಸಿರೋಲ್ಲ. ಅದಕ್ಕೆ ನಾವು ನೋಡಿದಾಗಿನ ಮನಸ್ಥಿತಿ ಕಾರಣ ಇರಬಹುದು, ಅಥವಾ ಅಷ್ಟೊಂದು ವೈವಿಧ್ಯಮಯ ಚಿತ್ರಪ್ರಕಾರಗಳ ಪರಿಚಯ ಇಲ್ಲದಿರುವುದು ಕೂಡ. ನಂತರದ ಮರುವೀಕ್ಷಣೆಗಳಲ್ಲಿ ಆ ಚಿತ್ರಗಳು ಹೊಸ ಹೊಸ ಡೈಮೆನ್ಶನ್ ಗಳನ್ನು ತೋರುತ್ತವೆ. “ಅಯ್ಯೋ, ಇದನ್ನ ನಾನು ಗಮನಿಸಿಯೇ ಇರಲಿಲ್ಲ ಅಲ್ವಾ” ಅಂತ ನಮ್ಮನ್ನು ಚಕಿತಗೊಳಿಸುತ್ತವೆ. ಅಂತಹ ಒಂದು ಅದ್ಭುತ ಚಲನಚಿತ್ರ "ಆನೀ ಹಾಲ್". ಇದು ನನಗೆ ವೈಯಕ್ತಿಕವಾಗಿ ತುಂಬಾ ಪ್ರಿಯವಾದ ಚಿತ್ರವೂ ಹೌದು! […]
ಕಾಡತೊರೆಯ ಜಾಡಿನಲ್ಲಿ ಜೀವನ ಪ್ರೀತಿಯ ಚಿಲುಮೆ…
ಕಡಿದಾಳು ಶಾಮಣ್ಣನವರ ಬಗ್ಗೆ ತೇಜಸ್ವಿಯವರ ಪುಸ್ತಕಗಳಲ್ಲಿ, ಆವಾಗಿವಾಗ ಪತ್ರಿಕೆಗಳಲ್ಲಿ ಓದಿದ್ದೆನಷ್ಟೇ. ಅವರ ಆತ್ಮಕಥೆಯ ಕೆಲವು ಭಾಗಗಳನ್ನು ಮಯೂರ ಮಾಸಪತ್ರಿಕೆಯಲ್ಲಿ ಓದಿ ಆಸಕ್ತಗೊಂಡಿದ್ದೆನಾದರೂ ಪುಸ್ತಕ ಖರೀದಿಸಿರಲಿಲ್ಲ. ಕುಪ್ಪಳ್ಳಿಯಲ್ಲಿ ‘ನಾವು ನಮ್ಮಲ್ಲಿ’ ತಂಡ ಏರ್ಪಡಿಸಿದ್ದ ‘ಕರ್ನಾಟಕ ಕಂಡ ಚಳುವಳಿಗಳು’ ಸಂವಾದಗೋಷ್ಠಿಯಲ್ಲಿ ಕಡಿದಾಳು ಶಾಮಣ್ಣನವರನ್ನು ಮುಖತಃ ಭೇಟಿಯಾದಾಗ ಅವರಲ್ಲಿದ್ದ ಲವಲವಿಕೆ, ಉತ್ಸಾಹ ಕಂಡು ಅಚ್ಚರಿಪಟ್ಟಿದ್ದೆ. ಚಳುವಳಿಗಳ ಬಗ್ಗೆ ಬಹುತೇಕರಲ್ಲಿ ಸಿನಿಕತೆಯ ಭಾವವೇ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಯಾವ ನ್ಯಾಯಯುತ ಹೋರಾಟವೂ ವ್ಯರ್ಥವಾಗುವುದಿಲ್ಲ ಎಂಬ ಶಾಮಣ್ಣನವರ ಮನಸ್ಥಿತಿ ಮೆಚ್ಚುಗೆಯಾಗಿತ್ತು. ಅವರ ಜೀವನಗಾಥೆಯನ್ನು ಸಂಪೂರ್ಣ […]
ಹಂಬಲ
ಹಂಬಲ ಈ ದಾರಿಯ ತಿರುವಲ್ಲಿ ಒಂದು ಗುಡಿಸಲಿರಲಿ.. ಒಳಗೆ ಮಣ್ಣ ನೆಲದ ಮೇಲೆ ಚಿತ್ತಾರ ಅರಳಿರಲಿ… ಒಳಗಿನ ತಮ ಹೋಗಿಸುವಷ್ಟು ಬೆಳಕಿರಲಿ.. ಅನ್ನಪಾತ್ರೆ ಖಾಲಿಯಾದರೂ ಚಿಂತೆ ಇಲ್ಲ… ಒಡಕಲು ಮಡಿಕೆಯ ಕೆಳಗೆ ನಾಲ್ಕು ಹನಿ ಮಧು ಇರಲಿ.. ಸಖಿ ಅಲ್ಲಿ ನಿನ್ನ ನೆರಳಿರಲಿ… -ಉಮೇಶ್ ದೇಸಾಯಿ
ವಿಶ್ರಾಂತ
ಕೂಗು ಹಾಕುತ್ತಿದ್ದ ಮಸೀದಿಯ ಅಲ್ಲಾಹು…ಆವಾಜಿಗೆ ಎದುರಾಗಿ ಊರಿನ ಇದ್ದಬಿದ್ದ ನಾಯಿಗಳೆಲ್ಲ ಹಾಡತೊಡಗಿದಾಗ ಒಳ ಕೋಣೆಯ ಕತ್ತಲಲ್ಲಿ ಮಲಗಿದ್ದ ಅಂಜನಪ್ಪನಿಗೆ ಆಗಷ್ಟೆ ಗ್ರಾಸ ಬಡಧಂಗ ಬಡಕೊಂಡಿದ್ದ ನಿದ್ದೆಯ ಅಮಲು ತಟ್ಟನೆ ಹಾರಿ ಹೋಯಿತು. ಎಚ್ಚರಿಕೆಗೆ ಹೆದರಿಕೊಂಡು ಮತ್ತಷ್ಟು ಕೌದಿಯ ಮುಸುಕಿನೊಳಗೆ ಹುದುಗಲು ಚಡಪಡಿಸುತ್ತಿದ್ದಾಗ- ಹೊತ್ತುಕೊಂಡಿದ್ದ ಹಾಸಿಗೆ ಎಡ-ಬಲ ಸರಿದಾಡಿ ಕಾಲಕೆಳಗೆ ಬಂದು ಬಿಡುತ್ತಿರುವುದು ತಿಳ್ಳಿ ಆಟದಂತಾಗಿ ಬಿಟ್ಟಿತ್ತು. ನಿವೃತ್ತಿ ಸಿಕ್ಕಮ್ಯಾಲ. ದೇಶದಾಗಿನ ಎಲ್ಲ ದೇವಸ್ಥಾನ ತೋರಿಸತೀನಿ ಅಂತ ಹೆಂಡತಿಗೆ ಮಾತು ಕೊಟ್ಟಿದ್ದರೂ, ಮನಸ್ಸಿಗೆ ವಿಶ್ರಾಂತಿ ಸಿಕ್ಕದಾಗಿತ್ತು. ಮಗನೊಬ್ಬ […]
ನಮ್ಮ-ನಿಮ್ಮ ಕದ ತಟ್ಟಿದೆ ಈ ಬೆಳಕಿನ ‘ಪಂಜು’
ಒಮ್ಮೆ ಪ್ರಜಾವಾಣಿಯಲ್ಲಿ ಒಂದು ಸುಂದರ ವ್ಯಂಗ್ಯ ಚಿತ್ರ ಪ್ರಕಟವಾಗಿತ್ತು. ಅದನ್ನು ಬರೆದದ್ದು ಯಾರೆಂದು ಮರೆತಿದ್ದೇನೆ. ಆ ಚಿತ್ರ ಹೀಗಿತ್ತು: ಒಬ್ಬ ಯುವಕ, ಸಾಕಷ್ಟು ದಿನ ಕೂದಲು ಗಡ್ಡ ಟ್ರಿಮ್ ಮಾಡಿಸದೆ ಫಲವತ್ತಾಗಿ ಬೆಳೆದುಬಿಟ್ಟಿದೆ. ಆತ ಒಂದು ಕಂಪ್ಯೂಟರಿನ ಮುಂದೆ ಕುಳಿತಿದ್ದಾನೆ. ಆತನು ಆಚೀಚೆ ಅಲುಗಾಡದಂತೆ ಕುಳಿತಿದ್ದುದಕ್ಕೆ ಸಾಕ್ಷಿಯೆಂಬಂತೆ ಆತನ ಗಡ್ಡ–ಮುಖಕ್ಕೂ ಮತ್ತು ಆ ಕಂಪ್ಯೂಟರಿನ ಮಾನೀಟರಿಗೂ ದಟ್ಟಾದ ಜೇಡರ ಬಲೆ ಹೆಣೆದುಕೊಂಡುಬಿಟ್ಟಿದೆ. ಈ ಅರ್ಥವತ್ತಾದ ಚಿತ್ರ ಹೇಳುವಂತೆ ನಾವೆಲ್ಲರೂ ಇಂದು ಕಂಪ್ಯೂಟರ್, ಅಂತರ್ಜಾಲ ಎಂಬ ಮೋಹಕತೆಗೆ […]
ನನ್ನೊಳಗಿನ ಗುಜರಾತ..!!!
ಜೀವನಯೆಂದರೇನು? ಎಂಬ ಈ ಜಟಿಲ ಪ್ರಶ್ನೆಗೆ ನನ್ನ ಮನಸ್ಸು ತಡಬಡಿಸುತ್ತ ಇಲ್ಲಿಯವರೆಗೂ ಅದೆಷ್ಟು ಉತ್ತರ ನೀಡಿದೆಯೋ ಏನೋ. ಬಾಲ್ಯದ ದಿನಗಳಲ್ಲಿಯೇ ನನ್ನ ಮನಸ್ಸಿಗೆ ಆ ದೇವರು ಯವ್ವನವನ್ನು ನೀಡಿಯಾಗಿತ್ತೇನೊ. ಆವತ್ತಿನಿಂದ ಇವತ್ತಿನವರೆಗೂ ತನ್ನನ್ನೇ ತಾನು ಪ್ರಶ್ನಿಸುತ್ತ ತನಗೆ ತಾನೆ ಉತ್ತರಿಸುತ್ತಿರುವ ನನ್ನ ಮನಸಿಗೆ, ಇದೊಂದು ನಿರಂತರ ಕೆಲಸವಾಗಿ ಹೋಗಿದೆ. ಅಂಥದುದರಲ್ಲಿ ಒಂದಿಷ್ಟು ಉತ್ತರಗಳು ನೆಮ್ಮದಿ ನೀಡಿವೆಯಾದರು ಇನ್ನು ನಿಖರ ಉತ್ತರಕ್ಕಾಗಿ ಕಾಯುತ್ತಿದೆ. ನನು ಏಳನೆ ತರಗತಿ ಓದುವಾಗ ಈ ಪ್ರಶ್ನೆಗೆ ಎರಡು ಉತ್ತರವನ್ನು ಬರೆದು ನನ್ನ ಪುಸ್ತಕದಲಿ […]
ಅವತಾರ್ ವರ್ಸಸ್ ಬಬ್ರುವಾಹನ
ಆಗ ತಾನೆ "ಅವತಾರ್" ಸಿನಿಮಾ ನೋಡಿ ಬರುತ್ತಿದ್ದೆ. ದಾರಿಯುದ್ದಕ್ಕೂ ಅದೇ ಗುಂಗು, ಅದರ ನಿರ್ದೇಶಕ ಮತ್ತು ನಿರ್ಮಾಪಕ ಜೇಮ್ಸ್ ಕ್ಯಾಮೆರಾನ್, ಅದರಲ್ಲಿ ಕೆಲಸ ಮಾಡಿದ ಅಲ್ಲಲ್ಲ…..ಈ ಸಿನಿಮಾವನ್ನೇ ತಮ್ಮ ಊಟ ತಿಂಡಿ ನಿದ್ರೆಯಾಗಿಸಿಕೊಂಡ, ಕಲಾ ನಿರ್ದೇಶಕ, ಕ್ಯಾಮೆರಾಮೆನ್, ಚಿತ್ರದ ದೃಶ್ಯಕಾವ್ಯವನ್ನು ಸೃಷ್ಟಿಸಲು ಹಗಲು ರಾತ್ರಿಯೆನ್ನದೇ ಕೆಲಸಮಾಡಿದ ಗ್ರಾಫಿಕ್ಸ ತಂತ್ರಜ್ಞರು, ಕಲಾವಿದರೂ ಪ್ರತಿಯೊಂದು ಪಾತ್ರಗಳನ್ನು ಕಂಪ್ಯೂಟರುಗಳಲ್ಲಿ, ನಿಜವಾದ ಮಾಡೆಲ್ಲುಗಳಲ್ಲಿ ಸೃಷ್ಟಿಸಿ ನಿರ್ದೇಶಕ ಕ್ಯಾಮೆರಾನ್ಗೆ ತೋರಿಸಿದಾಗ, ಅರೆರೆ….ಇದು ಈ ರೀತಿ ಬೇಡ, ಅ ರೀತಿ ಮಾಡಿ, ಇದು ಓಕೆ ಅದ್ರೂ […]
ನಾ ಕಂಡ ಹೀರೋಗಳು
ನಾನಾಗ ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದೆ. ಆ ವರ್ಷದಲ್ಲಿ ನಡೆದ ರಾಷ್ಟ್ರ ಮಟ್ಟದ ಭಾರತೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮೊದಲು ಜಿಲ್ಲಾ ಮಟ್ಟದ ಸ್ಪರ್ಧೆ ಮೈಸೂರಿನಲ್ಲಿ ನಡೆದಿತ್ತು. ನಮ್ಮ ವಿಜ್ಞಾನ ಮಾಸ್ತರರಾಗಿದ್ದ ನಾಗೇಂದ್ರರವರ ಮಾರ್ಗದರ್ಶನದಲ್ಲಿ ಭಾಗವಹಿಸಿದ್ದ ನಾನು, ಗ್ರಾಮೀಣ ವಿಭಾಗದಿಂದ ರಾಜ್ಯ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಿದ್ದೆ. ಬರೀ ೧೫ ದಿನಗಳ ಕಾಲಾವಕಾಶವಿದ್ದುದರಿಂದ ನಾನು ನಮ್ಮ ಮಾಸ್ತರರ ಕೊಳ್ಳೇಗಾಲ ನಿವಾಸದಲ್ಲಿಯೇ ಬೀಡು ಬಿಟ್ಟು ಹಗಲಿರುಳು ಶ್ರಮಿಸಿದ್ದೆ. ರಾಜ್ಯಮಟ್ಟದ ಸಮಾವೇಶಕ್ಕೆ ಅರಸೀಕೆರೆ ಮದುವೆ ಹೆಣ್ಣಿನಂತೆ ಅಲಂಕಾರಗೊಂಡಿತ್ತು. ಬೆಳಿಗ್ಗೆಯೇ ಕೊಳ್ಳೇಗಾಲ ಬಿಟ್ಟ ನಾವು […]
ಪೂರ್ಣತೆಯ ಕಡೆಗೆ
ಬುಡಸೋರುವ ಕೊಡದಲ್ಲಿ, ಹಿಡಿದಿಡುವ ಆಸೆಯಲಿ ತುದಿಕಾಣದ ಪಯಣವಿದು ತೀರಬಹುದೇ ದಾರಿ||ಪ|| ಬಗೆಹರಿಯದ ಮೌಲ್ಯವದು ’ಪೈ’ ಎಂದು ಪರಿಧಿ ವ್ಯಾಸದ ಸರಳ ಅನುಪಾತವದು ನಿಜಪೂರ್ಣಬೆಲೆಯ ಕಂಡುಹಿಡಿಯಲಾಗದೆ ಎಷ್ಟು ಯುಗಗಳೋ ಅದರ ಹಿಂದೆ ಹಿಂದೆ ಆದಿ ಗೂತ್ತಿಲ್ಲ ಈ ಪಯಣಕೆ, ಅಂತ್ಯ ಮೊದಲಿಲ್ಲ ಮಸುಕು ಗಮ್ಯದ ಕಡೆಗೆ ಹುಡುಕಾಟವೇ ಎಲ್ಲ ಸನಿಹವಾದರೂ ಎಂದೂ ನಿಖರವಲ್ಲ ಪೂರ್ಣತೆಯ ಸುಳಿವಿಲ್ಲ, ಪ್ರಯತ್ನ ಬಿಟ್ಟಿಲ್ಲ ತೀರದ ಹಠಕೆ ಅರ್ಪಣೆಯೇನು ಕಡಿಮೆಯ ಹೋದೇವ ಹತ್ತಿರ, ಮುಟ್ಟೇವ ಗುರಿಯ?||೧| ಅನಿಲ ಖನಿಜಗಳಷ್ಟೇ ಅವನಿಯಲಿದ್ದವಂತೆ […]
‘ತಾಯಿಯ ಮಡಿಲು’
ಬೇಡುವೆನು ವರವನ್ನು ಕೊಡು ತಾಯಿ ಜನ್ಮವನು ಕಡೆತನಕ ಮರೆಯೊಲ್ಲ ಜೋಗಿ… ಕಡೆತನಕ ಮರೆಯೊಲ್ಲ ಜೋಗಿ… ಎನ್ನುವ 'ಜೋಗಿ ಚಿತ್ರದ ಗೀತೆಯನ್ನು ನಾವೆಲ್ಲಾ ಟೀವಿ, ರೇಡಿಯೋಗಳಲ್ಲಿ ಕೇಳಿರುತ್ತೇವೆ. ಇದು ೨೦೦೫ ರಲ್ಲಿ ತೆರೆಕಂಡ 'ಶಿವರಾಜ್ ಕುಮಾರ್' ನಾಯಕ ನಟನ ಸೂಪರ್ ಹಿಟ್ ಚಲನ ಚಿತ್ರ. ಈ ಚಿತ್ರ ಬಿಡುಗಡೆಯದಾಗ ಹೆಚ್ಚು ಸಿನೆಮಾ ಮಂದಿರಕ್ಕೆ ಹೋಗದವಳಾದ ನಾನು ಸಹ ಈ ಹಾಡಿಗೆ ಮನಸೋತು ಚಿತ್ರ ನೋಡಲು ಹೋಗಿದ್ದೆ. ಚಿತ್ರ ತುಂಬಾ ಚೆನ್ನಾಗಿತ್ತು. ತಾಯಿ ಪ್ರೀತಿ ಪ್ರಧಾನವಾದ ಚಿತ್ರ, ಎಂತಹವರನ್ನು ಬರಸೆಳೆಯುವ […]
ಕತೆಯಾದವಳು
ರೇಣುಕ ಎಂದಿನಂತೆ ಇಂದೂ ಕೂಡ ತನ್ನ ನಿತ್ಯಕಾಯಕವೆಂಬಂತೆ ಅರೆ ಆವಳಿಕೆಯ ಜೊತೆಗೇ ಬಂದಳು. ಬಂದವಳೇ ಮನೆಯ ಎದುರಿನ ಕಾರ್ಪೆಟ್ಟನ್ನು ಮುಟ್ಟಿ ನಮಸ್ಕರಿಸುವ ರೀತಿ ಎರಡೂ ಕೈಗಳಿಂದ ಎತ್ತಿ ಹೊರಗೆ ಎಸೆದು, ಕಾಲಿಂಗ್ ಬೆಲ್ಲಿಗೊಮ್ಮೆ ಕುಟುಕಿದಳು. ಬಾಗಿಲನ್ನು ತೆರೆದವಳು ರೂಪ. ಎಂದಿನಂತೆ ತಾನು ಈಗ ಹೊರಡುತ್ತೇನೆ, ನೀನು ಬರೋದು ಇಷ್ಟು ತಡವಾದರೆ ಹೇಗೆ ರೇಣುಕಾ? ಇವತ್ತೂ ಮೀಟಿಂಗ್ ಇದೆ. ಇನ್ನು ಅರ್ಧ ಘಂಟೆಯಲ್ಲಿ ನಾನು ಹೊರಡಬೇಕು.. ಎಂದೆಲ್ಲಾ ಗುಣುಗುಣಿಸಿ ತಾನು ಅದ್ಯಾವುದೋ ರೂಮ್ ಸೇರಿಕೊಂಡಳು. ರೇಣುಕನ ಎಂದಿನ […]
ಪಂಜು ಕುರಿತು…
ಜೇಬಿನಲ್ಲಿ ದುಡ್ಡಿಲ್ಲದಿದ್ದರೂ ಕಣ್ಣೊಳಗೆ ಕನಸುಗಳಿರಬೇಕು ಎಂದು ಬಲವಾಗಿ ನಂಬಿರುವವನು ನಾನು. ಆ ನಂಬಿಕೆಯ ಫಲವೇ ಈ "ಪಂಜು" ಅಂತರ್ಜಾಲ ತಾಣ. ದೂರದೂರಿನಲ್ಲಿ ಕುಳಿತು ಒಬ್ಬ ಸಾಮಾನ್ಯ ಓದುಗನಂತೆ ಕನ್ನಡದ ಸಾಹಿತ್ಯ ತಾಣಗಳಿಗಾಗಿ ಅಂತರ್ಜಾಲದಲ್ಲಿ ಹುಡುಕಾಡುವಾಗ, ಕೇವಲ ಸಾಹಿತ್ಯ ಸಂಬಂಧಿತ ಬರಹಗಳಷ್ಟೇ ತುಂಬಿರುವ ಅಂತರ್ಜಾಲ ತಾಣ ಕಣ್ಣಿಗೆ ಕಂಡಿದ್ದು ಅಪರೂಪ. ದಿನ ನಿತ್ಯ ಹೆಚ್ಚು ಓದಿಗೆ ಸಿಕ್ಕುವ ಫೇಸ್ ಬುಕ್ ನಂತಹ ಪ್ರಭಾವಿ ಅಂತರ್ಜಾಲ ತಾಣದಲ್ಲಿ ಸಾಹಿತ್ಯವೆಂದರೆ ಬರೀ ಕವನಗಳು ಚುಟುಕಗಳು ಎನ್ನುವಂತಹ ವಾತಾವರಣ ಇಂದಿನ ದಿನಗಳಲ್ಲಿ […]