ಇಚ್ಛಾಮರಣಿಯ ತ್ಯಾಗದ ಜೀವನ, ತ್ಯಾಗದ ಮರಣ!: ಕೆ ಟಿ ಸೋಮಶೇಖರ ಹೊಳಲ್ಕೆರೆ.
ಮಹಾಭಾರತದ ಮಹಾಪಾತ್ರಗಳಲ್ಲಿ ಭೀಷ್ಮನದು ಬಹು ಮುಖ್ಯವಾದ ಪಾತ್ರವಾಗಿದೆ! ತ್ಯಾಗವೆಂಬ ಮಹಾಮೌಲ್ಯದಿಂದ ಕೂಡಿ ಪ್ರಸಿದ್ದವಾದುದಾಗಿದೆ. ಇವ ಕೌರವ ಪಾಂಡವರಿಗೆ ಅಜ್ಜನೂ ಗುರುವೂ ಆಗಿದ್ದು ಮಹಾಪರಾಕ್ರಮಿಯಾಗಿದ್ದವ! ಶಂತನು ಮತ್ತು ಗಂಗಾದೇವಿಯರ ಪುತ್ರನೇ ಭೀಷ್ಮ! ಒಂದು ಕಟ್ಟುಪಾಡಿನ ಮೇರೆಗೆ ಶಂತನು ಗಂಗಾದೇವಿಯನ್ನು ಮದುವೆಯಾಗಿರುತ್ತಾನೆ. ಶಂತನು ಗಂಗಾ ದೇವಿಯಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಎಂಟು ಜನ ಗಂಡು ಮಕ್ಕಳನ್ನು ಪಡೆಯುತ್ತಾನಾದರೂ ಮಗು ಹುಟ್ಟುತ್ತಿದ್ದಂತೆ ಗಂಗಾದೇವಿ ಅದನ್ನು ತೆಗೆದುಕೊಂಡು ಗಂಗಾ ನದಿಯಲ್ಲಿ ಮುಳುಗಿಸಿ ಬರುತ್ತಿರುತ್ತಾಳೆ! ಪ್ರತಿ ಮಗು ಹುಟ್ಟಿದಾಗಲೂ ಶಂತನು ಅವಳ ಹಿಂದೆ ನದಿ … Read more
ಪಂಜು ಕಾವ್ಯಧಾರೆ
ನಿನ್ನ ಅಕ್ಷರ ಪ್ರೀತಿ ಅಮರವಾಗಲಿ (ಜಿಎಸ್ಎಸ್ ನೆನಪು) ಕನ್ನಡ ಸಾಹಿತ್ಯದ ಕಿರೀಟವಾದೆ ಕನ್ನಡಿಗರ ಮನದ ಮುಕುಟವಾದೆ ಪ್ರೀತಿ ಇಲ್ಲದ ಮೇಲೆ ಎಂದು ಎಲ್ಲರಿಗೂ ಪ್ರೀತಿಯ ಅರ್ಥ ತಿಳಿಸಿದೆ ಕಾಣದ ಊರಿಗೆ ನಿನ್ನ ಪಯಣ ಸದಾ ತುಂಬಿರುವೆ ಜನಮನ ಕನ್ನಡ ಭೂಮಿಯಲ್ಲಿರುವ ಒಂದೊಂದು ಕಣಕಣ ಹಾಡಿ ಹೊಗಳಿದೆ ನಿನ್ನ ಗುಣಗಾನ ಕನ್ನಡಾಂಬೆಯ ಪುತ್ರ ನೀ ಕನ್ನಡಿಗರೆಲ್ಲರ ಮಿತ್ರ ನೀ ದೇಹದಿ ಆತ್ಮ ಅಗಲಿದರೇನು ಭಾವದಿ, ಜೀವದಿ ನಿನ್ನ ನೆನಪು ಅಳಿಯುವುದೇನು? ನಾನು ನೊಂದೆ, ಒಮ್ಮೆ ನಿನ್ನ ನೋಡಬೇಕೆಂಬ ಆಸೆ … Read more
ಶ್ರೀ ಗುರೂಜಿ ಹೇಳಿದ ಕಥೆಗಳು: ಹೊರಾ.ಪರಮೇಶ್ ಹೊಡೇನೂರು
ಅದೊಂದು ಶನಿವಾರದ ಮಧ್ಯಾಹ್ನದ ಬಿಡುವಿನ ಸುದಿನ. ಅರಕಲಗೂಡಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲ್ಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಹಾಸನದ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ ಅವರ ಸಲಹೆ ಮಾರ್ಗದರ್ಶನ ಪಡೆಯಲು, ಬಿಜಿಎಸ್ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್ ಹೊಡೇನೂರು ಅವರ ಸಲಹೆಯಂತೆ, ನಿಯೋಜಿತ ಅಧ್ಯಕ್ಷ ಗಂಗೇಶ್ ಬಸವನಹಳ್ಳಿ, ಶಿವಣ್ಣ ಕೆರೆಕೋಡಿ ಮತ್ತು ಆರ್. ಬಿ.ರಂಗನಾಥ್ ಅವರೊಂದಿಗೆ ಶ್ರೀ ಮಠಕ್ಕೆ ಪ್ರವೇಶಿಸಿದೆವು. ಈ ಪವಿತ್ರವಾದ ಮಠದೊಳಗೆ ನನ್ನ ಮೊದಲ ಪ್ರವೇಶವೂ ಅದೇ ಆಗಿತ್ತು. … Read more
ಕಲಬುರ್ಗಿ: ರುಕ್ಮಿಣಿ ನಾಗಣ್ಣವರ
2018 ಫೆಬ್ರುವರಿ. ಕಲಬುರ್ಗಿಗೆ ಬೇಸಿಗೆಯ ಬಿಸಿಲು ಇನ್ನೂ ಆವರಿಸಿರಲಿಲ್ಲ. ಹುಬ್ಬಳ್ಳಿ-ದಾಂಡೇಲಿ ಪ್ರವಾಸ ಮುಗಿಸಿ, ರೈಲಿನಲ್ಲಿ ಬೆಳಿಗ್ಗೇನೆ ಕಲಬುರ್ಗಿಗೆ ಬಂದಿಳಿದ ನನಗೆ ಮೊದಲು ಕಾಣಿಸಿದ್ದೇ ಪುಟಾಣಿ ಚಹಾ ಅಂಗಡಿಗಳ ಸಾಲು. ಒಂದು ಅಂಗಡಿಯ ಹೆಸರು ಕರ್ನಾಟಕ ಟೀ ಸ್ಟಾಲ್, ಮತ್ತೊಂದರದ್ದು ಗಾಣಗಾಪುರ ಟೀ ಸ್ಟಾಲ್. ಮೊದಲ ಬಾರಿಗೆ ಕಲ್ಯಾಣ ನಾಡಿನ ನೆಲ ಸ್ಪರ್ಶಿಸಿದ ನನಗೆ ಬಿಸಿ ಬಿಸಿ ಚಹಾ ಕುಡಿದೇ ಮನೆಯತ್ತ ಹೆಜ್ಜೆ ಹಾಕಲು ಮನಸ್ಸು ಹೇಳಿತು. ಆದರೆ, ಮನೆ ತಲುಪಿದರೆ ಸಾಕು ಎಂಬಂತೆ ದಣಿವು ನನ್ನನ್ನು ಆಯಾಸಗೊಳಿಸಿತ್ತು. … Read more
ನಾ ಬದಲಾಗೊ ಗಿರಾಕಿ ಅಲ್ಲಾ….: ಸಹನಾ ಪ್ರಸಾದ್
ಬಹುತೇಕ ಹೆಣ್ಣು ಮಕ್ಕಳಿಗೆ. ನಾನೂ ಸೇರಿದಂತೆ ಭಾವನೆಗಳು ಜಾಸ್ತಿ, ಬಹಳ ಬೇಗ ಬೇರೆಯವರಿಗೆ ಹತ್ತಿರವಾಗಿಬಿಡುತ್ತಾರೆ, ಅದೇ ರೀತಿ ಮುನಿಸು, ವಿರಸವೂ ಬೇಗ ಬಂದುಬಿಡುತ್ತದೆ,. ನಮ್ಮೆಜಮಾನ್ರು ನನಗೆ ಯಾವಾಗಲೂ ಹೇಳುತ್ತಿರುತ್ತಾರೆ” ನಿಂದೆಲ್ಲಾ ಯಾವಾಗಲೂ ಅತಿರೇಕದ ಪ್ರತಿಕ್ರಿಯೆಗಳು. ಹಚ್ಚಿಕೊಂಡರೆ ಅತಿಯಾಗಿ, ಅದೇ ಏನಾದರೂ ಸಣ್ಣ ವಿಷಯ ನಡೆಯಲಿ, ಕುಗ್ಗಿ ಹೋಗುತ್ತೀಯ. ಸ್ವಲ್ಪ ಸಮತೋಲನ ಇರಬೇಕು ಅಲ್ಲವಾ?” ಆಗೆಲ್ಲಾ ನನಗೆನಿಸುತ್ತದೆ ಹೌದಲ್ವಾ, ನಾನು ಸ್ವಲ್ಪ ಬದಲಾಗಬೇಕು ಎಂದು. ಆದರೆ ಆ ನಿರ್ಧಾರಗಳೆಲ್ಲ ತಾತ್ಕಾಲಿಕ. ಮೊನ್ನೆ ನಮ್ಮ ಪಕ್ಕದ ಮನೆಗೆ ನವ ದಂಪತಿಗಳು … Read more
ನೆರೆ ಹೊರೆಯ ಸಂಬಂಧದ ಸವಿನೆನಪು: ಎನ್. ಶೈಲಜಾ ಹಾಸನ
ಅಕ್ಕಪಕ್ಕದ ಮನೆಯವರೊಂದಿಗೆ ಅಂದಿನ ದಿನಗಳಲ್ಲಿ ಅಪಾರವಾದ ಬಾಂಧವ್ಯವನ್ನು ಹೊಂದಿದ್ದು,ಕಷ್ಟ ಸುಖ ಎಲ್ಲಾದರಲ್ಲೂ ಪರಸ್ಪರ ಭಾಗಿಯಾಗಿ ಸ್ಪಂದಿಸುವ ಹೃದಯಗಳನ್ನು ಅಂದು ಹೆಚ್ಚು ಹೆಚ್ಚು ಕಾಣಬಹುದಿತ್ತು.ನಾವು ನಮ್ಮ ತಂದೆಯ ಉದ್ಯೋಗ ನಿಮಿತ್ತ ಎಲ್ಲಾ ಊರುಗಳನ್ನು ಸುತ್ತಿ ಕೊನೆಗೆ ಜಿಲ್ಲಾ ಕೇಂದ್ರಕ್ಕೆ ಬಂದು ನೆಲೆ ನಿಂತೆವು. ನಾವಿದ್ದ ಮನೆ ಒಂದು ವಠಾರದಲ್ಲಿ ಇತ್ತು.ಎಂಟು ಮನೆಗಳಿರುವ ಆ ವಠಾರದಲ್ಲಿ ಇಬ್ಬರು ಒಂದೊಂದು ಸಾಲಿನ ನಾಲ್ಕು ಮನೆಗಳ ಒಡೆಯರಾಗಿದ್ದರು. ವಠಾರವಾದರೂ ಮನೆ ದೊಡ್ಡದಿತ್ತು. ಹತ್ತು ಹದಿನೈದು ಜನ ವಾಸ ಮಾಡಬಹುದಾಗಿತ್ತು.ಒಂದು ರೂಮು,ಎರಡು ದೊಡ್ಡ ಹಾಲು,ಮಹಡಿ … Read more
ಕನ್ನಡದ ಗಗನಸಖಿ: ಸೂರಿ ಹಾರ್ದಳ್ಳಿ
ಸಂದರ್ಶಕರು ಮಾದೇವಿಯನ್ನು ಕೇಳಿದರು: ‘ನೀವು ಎಂದಿಗಾದರೂ ವಿಮಾನದಲ್ಲಿ ಪ್ರಯಾಣಿಸಿದ್ದೀರಾ?’ ‘ಕ್ವಚಿತ್ತಾಗಿ.’ ‘ವಿಮಾನಗಳಲ್ಲಿ ಏರ್ ಹೋಸ್ಟೆಸ್ಗಳು ಪ್ರಯಾಣಿಕರಿಗೆ ಕೆಲವು ಸಲಹೆಗಳನ್ನು ಕೊಡುವುದನ್ನು ನೀವು ಕೇಳಿದ್ದೀರಿ. ಅದನ್ನು ಹೇಳಿ.’ ‘ಗೋ ಔಟ್ ವಿಮಾನದಲ್ಲಿ ಪ್ರಯಾಣಿಸುತ್ತಿರುವ ನಿಮಗೆಲ್ಲಾ ಆದರದ ಸ್ವಾಗತ. ಸ್ವಾಗತ ಎಂದರೆಷ್ಟು ಬಿಟ್ಟರೆಷ್ಟು, ಬಂದು ಅಂಡೂರಿ ಕುಳಿತುಬಿಟ್ಟಿದ್ದಿರಲ್ಲ, ಬೇರೇನೂ ಕ್ಯಾಮೆ ಇರದವರ ಹಾಗೆ.’ ‘ಏನೆಂದಿರಿ?’ ‘ಏನೂ ಇಲ್ಲ. ನಮ್ಮ ವಿಮಾನದಲ್ಲಿ ಮುಂದೆ ಎರಡು ಬಾಗಿಲುಗಳಿವೆ, ಹಿಂದೆ, ತಿರುಗಿಯೇನೂ ನೋಡಬೇಕಾಗಿಲ್ಲ. ಅಲ್ಲೇನೂ ಕರಡಿ ಕುಣಿಯುತ್ತಿಲ್ಲ, ಅಲ್ಲಿ ಎರಡು ನಿರ್ಗಮನ ದ್ವಾರಗಳಿವೆ. ನಡುವೆ … Read more
ಅಂತರಾಗ್ನಿ (ಭಾಗ ೨): ಕಿರಣ್. ವ್ಹಿ
ಇಲ್ಲಿಯವರೆಗೆ ಆಗಲೇ ಮೊವತ್ತು ಕಿಲೋಮೀಟರ್ ಪ್ರಯಾಣಿಸಿಯಾಗಿತ್ತು. ಮುಂದೆ ಸಿಗುವುದು ಬರೀ ಕಾನನ, ತಿರುವು-ಮುರುವು ರಸ್ತೆ ಹಾಗು ನೀರವ ಮೌನವೆಂದು ಅವನಿಗೆ ಗೊತ್ತಿತ್ತು. ಇದನ್ನೇ ಅರಸಿ ಅವನ ಅಂತರಾಳ ಇಲ್ಲಿಗೆ ಕರೆದುಕೊಂಡು ಬಂದಿತ್ತೊ ಏನೊ…! ಸಪ್ತಗಿರಿಯದು ದೊಡ್ಡ ಘಾಟ್ ಆಗಿತ್ತು. ಸುಮಾರು ನಲವತ್ತು ಕಿಲೋಮೀಟರ್ ನಷ್ಟು ರಸ್ತೆ ತಿರುವಿನಿಂದಲೆ ಕೂಡಿತ್ತು. ಒಂದು ಬದಿಗೆ ಮುಗಿಲು ಮುಟ್ಟುವಷ್ಟು ಎತ್ತರದ ಗುಡ್ಡ, ಮತ್ತೊಂದು ಬದಿಗೆ ನೆಲ ಕಾಣಿಸದಷ್ಟು ಆಳವಾದ ಪ್ರಪಾತ. ಅದೆಷ್ಟು ಅಮಾಯಕ ಜೀವಿಗಳು ಪ್ರಾಣ ತೆತ್ತಿವೆಯೋ ಏನೊ. ಕಾಡು ಎಷ್ಟೊಂದು … Read more
ತಿರಂಗಾ ಧ್ವಜದ ರೂವಾರಿ ಪಿಂಗಳಿ ವೆಂಕಯ್ಯ: ನಾರಾಯಣ ಬಾಬಾನಗರ
ಏರುತಿಹುದು. . ಹಾರುತಿಹುದು ನೋಡು ನಮ್ಮ ಬಾವುಟಾ!! ಪುಟಾಣಿಗಳೇ, ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ನೀವು ಉಂಡಿರಬಹುದು. ಝೇಂಡಾ ಊಂಚಾ ರಹೇ ಹಮಾರಾ…ದಂತಹ ಹಾಡುಗಳನ್ನು ಹಾಡಿ, ಹೆಮ್ಮೆ ಗೌರವದಿಂದ ತಲೆ ಎತ್ತಿ, ನಮ್ಮ ದೇಶದ ಬಾವುಟಕ್ಕೆ ವಂದನೆ ಸಲ್ಲಿಸುತ್ತೀರಿ. ಬಾನಂಗಳದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿದ ಧ್ವಜ ಪಟ. . ಪಟನೆ ಹಾರಾಡುತ್ತಿದ್ದರೆ ನಮ್ಮ ಕಣ್ಣಿಗೆ ಹಬ್ಬ. ನಮ್ಮ ಭಾರತದ ಬಾವುಟ ನಮಗೆಷ್ಟು ಆಪ್ತವಾದದ್ದು, ಆಪ್ಯಾಯಮಾನವಾದದ್ದು ಎಂದನಿಸುತ್ತದಲ್ಲವೇ? ಬಾವುಟದ ಚಿತ್ರ ಬಿಡಿಸಿ ಹೆಮ್ಮೆಯಿಂದ ನೀವು ಬೀಗಿರಲೂ ಸಾಕು. ನೀವು … Read more
ತಮ್ಮನ್ನು ರಕ್ಷಿಕೊಳ್ಳಲಾಗದ ಸಜ್ಜನಿಕೆ ಏಕೆ ಬೇಕು?: ಕೆ ಟಿ ಸೋಮಶೇಖರ ಹೊಳಲ್ಕೆರೆ.
ದಿನ ಪತ್ರಿಕೆಯ ಪುಟಗಳನ್ನು ತಿರುವಿ ಹಾಕಿದರೆ ಒಂದೆರಡಾದರೂ ಸ್ತ್ರೀಯರ ಮೇಲಿನ ಅತ್ಯಾಚಾರಗಳು, ಚೀಟಿಹಾಕಿ ಮೋಸಹೋದ ಪ್ರಕರಣಗಳು, ಪೋಲೀಸ್ ಅಧಿಕಾರಿಗಳು ಪೋಲೀಸರಿಗೆ ನೀಡಿದ ಕಿರುಕುಳಗಳು, ವರದಕ್ಷಿಣೆ ಕಿರುಕುಳ ತಾಳಲಾಗದೆ ಹಸುಗೂಸನ್ನು ಬಿಟ್ಟು ತಾಯಿ ಮಾಡಿಕೊಂಡ ಆತ್ಮಹತ್ಯೆಗಳು, ಲಂಚ ಪ್ರಕರಣಗಳು, ಭಯೋತ್ಪಾದನೆಗಳು, ಜನಾಂಗೀಯ ದ್ವೇಷಕ್ಕೆ ತುತ್ತಾದ ಬಲಹೀನರು, ಬಹುಸಂಖ್ಯಾತರಿಂದ ತೊಂದರೆಗೊಳಗಾದ ಅಲ್ಪಸಂಖ್ಯಾತರ ನೋವುಗಳು ವರದಿ ಆಗಿಯೇ ಇರುತ್ತವೆ! ಇಲ್ಲೆಲ್ಲಾ ತೊಂದರೆ ಅನುಭವಿಸಿದ್ದು ದುರ್ಬಲರು! ತೊಂದರೆ ನೀಡಿದ್ದು ಸಬಲರು! ಅಂದರೆ ಪ್ರಬಲರು ದುರ್ಬಲರಿಗೆ ಸದಾ ತೊಂದರೆ ನೀಡುವುದನ್ನು ಕಾಣುವಂತಾಗಿದೆ. ದುರ್ಬಲರ ಶೋಷಣೆಗೆ … Read more
ಪಂಜು ಕಾವ್ಯಧಾರೆ
ಅದೆಷ್ಟು ಕಷ್ಟ ಬುದ್ಧನಾಗುವುದೆಂದರೆ…! ಅದೆಷ್ಟು ಕಷ್ಟ ಈಗ ಬುದ್ಧನಾಗುವುದೆಂದರೆ ಆಸೆಯ ಬಿಡುವ ಯುದ್ಧ ಒಂದೆಡೆಯಾದರೆ ಸಕಲವ ತ್ಯಜಿಸಿ ಎದ್ದು ಬಿಡುವುದು ಇನ್ನೊಂದು! ಕಲ್ಲೆಸೆದವರ ಎದೆಯಲ್ಲಿ ಪ್ರೀತಿ ತುಂಬಿ ಬೆರಳ ಹಾರ ಮಾಡಿದವರ ಕೊರಳಲ್ಲಿ ಶಾಂತಿ ಧ್ವನಿ ನುಡಿಸಿ ರೋಗಕ್ಕೆ ಹೆದರಿ, ಸಾವಿಗೆ ಬೆದರಿ ಮಧ್ಯರಾತ್ರಿ ದಿಗ್ಗನೆ ಎದ್ದು ನಡೆದುಬಿಡುವುದೆಂದರೆ ಉದ್ದುದ್ದ, ಮಾರುದ್ದದ ಬೋಧನೆ ನೀಡದೇ ಸದ್ದು ಮಾಡದೆ ಭೋಧಿಯಡಿಯಲ್ಲಿ ಸಿದ್ಧಿ ಪಡೆದು ಸಿದ್ದಾರ್ಥನ ನಿರ್ವಾಣ ಮಾಡಿ ಗೌತಮನ ನಿರ್ಮಾಣ ಹೊಂದುವುದೆಂದರೆ ಕಡು ಕಷ್ಟವೇ ಅದು!! ಬುದ್ಧನಾಗುವುದೆಂದರೆ ಬರೀ … Read more
ಹಸಿರು ಸೀರೆ ಉಟ್ಟು ನೆರಿಗೆ ಒದೆಯುತ್ತಾ ನಡೆದ ಹುಡುಗಿಯರು: ಅಮರದೀಪ್
ಇದು ಮಳೆಗಾಲವಾ? ಅನುಮಾನವಾಯಿತು. ಕಡು ಬೇಸಿಗೆಗಿಂತ ಧಗೆಯಾದ ವಾತಾವರಣ. ಮಳೆಗಾಲವೇ ಹೀಗೇ… ಇನ್ನು ಬೇಸಿಗೆ ಹೇಗೆ? ಎನ್ನುವ ಆತಂಕ ಬೇರೆ. ಆಗಾಗ ಆಯಾಸ, ಸುಸ್ತು, ಚೂರು ರೆಸ್ಟ್ ಬೇಕು ಎನ್ನುವ ವಯಸ್ಸು ನಾವು ಹರೆಯದಿಂದ ಇಪ್ಪತ್ತು ಇಪ್ಪತ್ತೈದು ವರ್ಷಗಳನ್ನು ದಾಟಿ ಮುಂದೆ ಬಂದಿದ್ದೇವೆನ್ನುವುದಕ್ಕೆ ಮತ್ತು ಗಂಭೀರತೆ, ತಿಳುವಳಿಕೆಯಿಂದ, ಘನತೆಯಿಂದ ಇರಲೇಬೇಕಾದ ಅನಿವಾರ್ಯತೆಗೆ ಕಾರಣವಾಗುತ್ತದೆ. ಯಾವಾಗ ಮಳೆ ಬರುತ್ತದೋ, ಮತ್ತೆ ಬಿಸಿಲು ಸುರಿಯುತ್ತದೋ ತಿಳಿಯುವುದಿಲ್ಲ. ಪ್ರತಿ ದಿನ ಆಫೀಸ್, ಮನೆ, ಮಾರ್ಕೆಟ್ಟು, ಕೊನೆಗೆ ತಲೆಕೆಟ್ಟು ಹೋದರೆ ಒಂದು ಸಿನಿಮಾ, … Read more
ವೆಂಕ್ಟಣ್ಣ ಟೈಯರ್ ಅಂಗಡಿ: ದಯಾನಂದ ರಂಗದಾಮಪ್ಪ
ಸತತವಾಗಿ ಹತ್ತು ವರ್ಷ ಯಾವುದೋ ಖಾಸಗಿ ವಿದೇಶಿ ಕಂಪನಿಗೆ ಜೀತದಾಳಾಗಿ ದುಡಿದ ಮೇಲೆ ಯಾಕೋ ಬೇಸರ, ಒಂಟಿತನ, ಜಿಗುಪ್ಸೆ ನಿತ್ಯ ನೋಡೋ ಮಾನಿಟರ್ ಗಿಂತ ಹತ್ತಿರವಾಗಿ ಕಾಣುತ್ತಿತ್ತು. ಟ್ರಾಫಿಕ್ ಜಾಮ್ ನಲ್ಲಿ ನಿಂತಾಗ ನಮ್ಮೂರು ಜಾತ್ರೇಲಿ ನಿಂತ ನೆನಪು, ಯಾರದೋ ಬೈಕ್ ಹಿಂದಿನಿಂದ ಹಾರ್ನ್ ಮಾಡಿದಾಗ ನಮ್ಮೂರ ಗಣೇಶ ಹಬ್ಬ ದಲ್ಲಿ ಹೊಡೆದ ತಮಟೆ ಸದ್ದಿನ ಹಾಗೆ ಭಾಸವಾಗುತ್ತಿತ್ತು. ಆರಂಭದ ದಿನಗಳಲ್ಲಿ ಇಷ್ಟವಾಗುತಿದ್ದ ಮಾಲ್ಗಳು ಹೀಗೇ ಮಾಮೂಲಿಯಾಗಿ ಕಾಣುತ್ತಿವೆ. ಬೆಂಗಳೂರಿನ ದೆವ್ವಗಳೆಲ್ಲ ಒಂದು ಕಡೆ ಸೇರಿ ಜೋರಾಗಿ … Read more
ಮುಂಬಯಿ ಮಾವ: ಶೀಲಾ ಭಂಡಾರ್ಕರ್, ಮೈಸೂರು
ಮೂಲ ಕೊಂಕಣಿ: ವಲ್ಲಿ ಕ್ವಾಡ್ರಸ್, ಅಜೆಕಾರು. ಕನ್ನಡಕ್ಕೆ ಅನುವಾದ: ಶೀಲಾ ಭಂಡಾರ್ಕರ್, ಮೈಸೂರು ‘ಮುಂಬೈ ಮಾವ ತೀರಿ ಹೋದನಂತೆ.’ ಬೆಳಿಗ್ಗೆ ಎದ್ದು ಅಡುಗೆಮನೆಯೊಳಗೆ ಚಹ ಮಾಡಲು ನೀರು ಕುದಿಯಲಿಡುವ ಸಮಯಕ್ಕೆ ಸರಿಯಾಗಿ ವಾಟ್ಸ್ ಆ್ಯಪ್ಗೆ ಬಂದ ಮೆಸೆಜ್ ಓದಿದ ರೀಟಾಳ ಮನಸ್ಸಿನಲ್ಲಿ ಯಾವುದೇ ಭಾವನೆಗಳು ಹುಟ್ಟಲಿಲ್ಲ. ಅವನಿಷ್ಟು ದಿನ ಎಲ್ಲಿದ್ದ? ಯಾರ ಜತೆಯಲ್ಲಿದ್ದ? ಏನಾಗಿದ್ದ? ಎನ್ನುವುದು ಯಾರಿಗೂ ಸರಿಯಾಗಿ ತಿಳಿದಿರಲಿಲ್ಲ. ಆದರೂ ಹೋದ ವಾರ, ಊರಿನ ಕಾಲೇಜಲ್ಲಿ ಓದುತ್ತಿರುವ ಸೋದರತ್ತೆಯ ಮಗನೊಬ್ಬ “ಫ್ಯಾಮಿಲಿ” ಎನ್ನುವ ಹೆಸರಿನ ವಾಟ್ಸ್ … Read more
‘ಅವ್ವ ಮತ್ತು ಅಬ್ಬಲಿಗೆ’ ಪುಸ್ತಕ ಪರಿಚಯ..: ಸಚಿನ್ ಅಂಕೋಲಾ
ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಶಿರಸಿಯ ಶೋಭಾ ಹಿರೇಕೈ ಅವರ ಚೊಚ್ಚಲ ಕವನ ಸಂಕಲನ ಈ ‘ಅವ್ವ ಮತ್ತು ಅಬ್ಬಲಿಗೆ’. ಸುಮಾರು ನಲವತ್ತು ಕವಿತೆಗಳನ್ನು ಒಳಗೊಂಡಿರುವ ಈ ಸಂಕಲನವನ್ನು ಹಿರಿಯ ಕವಿ ವಿಷ್ಣು ನಾಯ್ಕರು ತಮ್ಮ ಸುದೀರ್ಘ ಮುನ್ನುಡಿಯ ಆರಂಭದಲ್ಲಿಯೇ ‘ಇದೊಂದು ದೇಸಿ ಚಿಂತನೆಯ ನೆಲ ಮೂಲದ ಕವನ ಗುಚ್ಛ’ ಎಂದು ಉಲ್ಲೇಖಿಸಿದ್ದಾರೆ. ಈ ಕೃತಿಯ ಶೀರ್ಷಿಕೆಯೇ ಅವರ ಮಾತನ್ನು ಅನುಮೋದಿಸುವಂತಿದೆ. ಕನಕಾಂಬರ ಹೂವನ್ನು ನಮ್ಮ ಆಡುಭಾಷೆಯಲ್ಲಿ ಅಬ್ಬಲಿಗೆ ಅಥವಾ ಅಬ್ಬಲಿ ಹೂವು ಎಂದು ಕರೆಯುತ್ತೇವೆ.ಈ ಅಬ್ಬಲಿಗೆ ಹೂವು ಯಾವುದೇ … Read more
ಅಂತರಾಗ್ನಿ: ಕಿರಣ್. ವ್ಹಿ
ಧೋಧೋ ಎಂದು ಧಾರಾಕಾರವಾಗಿ ಸುರಿಯುತ್ತಿರುವ ಮಳೆ.ನೆಲವೆಲ್ಲ ತೋಯ್ದು ಘಮ್ ಎಂದು ಹೊರಸೂಸುವ ಮಣ್ಣಿನ ಸುವಾಸನೆಗೆ ಎಂತಹವರೆ ಆದರು ಮೈಮರೆಯುವರು. ಅಂತಹ ಸಮಯವದು. ಸಂಜೆಯಾಗಿದ್ದರಿಂದ, ಸೂರ್ಯ ತನ್ನ ಪ್ರತಾಪವನ್ನು ಇಳಿಮುಖಗೊಳಿಸಿ ಮರಳುತ್ತಿದ್ದ. ದೂರದ ಬಾನಂಚಿನಲ್ಲಿ ಮುಳುಗುತ್ತಿದ್ದ ನೇಸರನನ್ನೆ ದಿಟ್ಟಿಸಿ ನೋಡುತ್ತಿದ್ದ ಹರಿ. ಅವನ ಮನಸ್ಸು ಅಲ್ಲಿರಲಿಲ್ಲ. ಕೇವಲ ಶೂನ್ಯವೇ ಆವರಿಸಿತ್ತು ಅವನಲ್ಲಿ. ಇನ್ನೇನು ಜೀವನ ಮುಗಿದೇ ಹೋಯಿತು ಎನ್ನುವಂತೆ ನಿಂತಿದ್ದ. ರಪರಪನೆ ಹೊಡೆಯುವ ಹೊಡೆತವು ಅವನ ಅರಿವಿಗೆ ಬರಲಿಲ್ಲ. “ಥೋ ಇದೇನು ಮಳೆ. ಬೆಳಗ್ಗೆಯಲ್ಲ ನೆತ್ತಿ ಸುಡುವಂತೆ ಬಿಸಿಲಿರತ್ತೆ. … Read more
“ಮುದವಲ್ಲವೇ ಮೌನದಾಲಿಂಗನ”: ನಾಗರೇಖಾ ಗಾಂವಕರ, ದಾಂಡೇಲಿ
“ಸಾಯ್ಲೆನ್ಸ ಇಜ್ ದ್ ಬೆಷ್ಟ್ ಆನ್ಸರ್ ಫಾರ್ ಆಲ್ ಸ್ಟುಪಿಡ್ ಕ್ವೆಶ್ಚನ್ಸ್, ಸ್ಮಾಯ್ಲಿಂಗ ಇಜ್ ದ್ ಬೆಷ್ಟ್ ರಿಯಾಕ್ಷನ್ ಇನ್ ಅಲ್ ಕ್ರಿಟಿಕಲ್ ಸಿಚ್ಯುಯೇಶನ್”. ಎಷ್ಟು ಸುಂದರವಾಗಿ ಹೇಳಿದ್ದಾರೆ ಅಲ್ವೆ? ಮೌನ ಮತ್ತು ಮುಗುಳು ನಗೆಯ ಪರಿಪೂರ್ಣ ಮಹತ್ವವನ್ನು ಬಿಂಬಿಸುವ ಈ ವ್ಯಾಖ್ಯಾನ ಮಾರ್ಮಿಕವೆನಿಸುತ್ತದೆ ಮುಗುಳುನಗೆಯ ಮುಖಾರವಿಂದದಲಿ ಮೌನದ ರಿಂಗಣ ಮನಮೋಹಕ. ಬಹಳ ಸಂದರ್ಭಗಳಲ್ಲಿ ಕೆಲವು ಮೂರ್ಖ ಪ್ರಶ್ನೆಗಳಿಗೆ ಮೌನವೇ ಸರಿಯಾದ ಉತ್ತರ. ಹಾಗೆ ಮುಗುಳುನಗೆ ಒಂದು ಉದ್ದಿಪನ ಮಾತ್ರೆಯಂತೆ. ಅತಿ ಗಂಭೀರ ಹಾಗೂ ಕ್ಲಿಷ್ಟಕರ ಸನ್ನಿವೇಷಗಳಲ್ಲಿ … Read more