ತಂತು: ಎಸ್.ಎಲ್.ಭೈರಪ್ಪನವರ ಕಾದಂಬರಿಯ ಬಗ್ಗೆ ಒಂದು ಅನಿಸಿಕೆ, ಟಿಪ್ಪಣಿ: ಸಂತೋಷ್ ಕುಮಾರ್ ಎಲ್.ಎಂ.
ಬಸವನಪುರ ಎಂಬ ಊರಿನ ಪುರಾತನ ಚನ್ನಕೇಶವ ದೇವಾಲಯದಲ್ಲಿದ್ದ ದೊಡ್ಡ ಸರಸ್ವತಿಯ ವಿಗ್ರಹ ಕಳುವಾಗಿರುತ್ತದೆ. ಗ್ರಾಮದವರು ಇದರ ಬಗ್ಗೆ ಗಮನ ಹರಿಸುವುದಿಲ್ಲ. ಇದೇ ಊರಿನಲ್ಲಿ ಹುಟ್ಟಿ ತನ್ನ ಸ್ವಂತ ಪರಿಶ್ರಮದಿಂದ ದೊಡ್ಡ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ಸಂಪಾದಕನಾಗಿರುವ ರವೀಂದ್ರನಿಗೆ ಈ ಸುದ್ದಿ ತಲುಪುತ್ತದೆ. ತನ್ನ ಹುಟ್ಟೂರು ಎಂಬ ಕರುಳಬಳ್ಳಿಯ ಮಮತೆಯಿಂದ ಬೇರಾರನ್ನು ಕಳುಹಿಸಲು ಮನಸ್ಸಾಗದೇ ತಾನೇ ಹುಟ್ಟೂರಿಗೆ ಬರುತ್ತಾನೆ. ಈ ವಿಷಯದ ಮೂಲ ಹುಡುಕುತ್ತಿರುವಾಗಲೇ ತನ್ನ ತಾತ ವೆಂಕಟಸುಬ್ಬಯ್ಯನವರು ಊರಿಗೆ ದಾನವಾಗಿ ಕಟ್ಟಿಸಿಕೊಟ್ಟಿದ್ದ ಆಸ್ಪತ್ರೆಯ ಫಲಕವನ್ನು ಯಾರೋ ತೆಗೆದು … Read more