ಮಕ್ಕಳ ಕವನ: ವೆಂಕಟೇಶ್ ಚಾಗಿ, ದೀಪು

ನನ್ನ ತಂಗಿ ಪುಟ್ಟ ಪುಟ್ಟ ಹೆಜ್ಜೆ ಇಡುತಾ ನನ್ನ ತಂಗಿ ಬರುವಳು ಅಣ್ಣಾ ಎಂದು ತೊದಲುನುಡಿದು ನನ್ನ ಮನವ ಸೆಳೆವಳು || ತಿನ್ನಲು ಒಂದು ಹಣ್ಣು ಕೊಡಲು ನನ್ನ ಬಳಿಗೆ ಬರುವಳು ಅಲ್ಪಸ್ವಲ್ಪ ಹಣ್ಣು ತಿಂದು ಮನೆಯ ತುಂಬಾ ಎಸೆವಳು || ಕಣ್ಣೇ ಮುಚ್ಚೆ ಕಾಡೆಗೂಡೆ ಆಟ ಆಡು ಎನುವಳು ಅಮ್ಮನಿಂದ ಅಡಗಿ ಕುಳಿತು ನಕ್ಕು ನನ್ನ ಕರೆಯುವಳು || ನನ್ನ ಕಾರು ನನ್ನ ಗೊಂಬೆ ತನಗೂ ಬೇಕು ಎನುವಳು ಕೊಡುವ ತನಕ ಹಠವಮಾಡೇ ಅಪ್ಪ ಅಮ್ಮ … Read more

ಬಾಲ್ಯದಲ್ಲಿ ಪ್ರಭಾವಿತವಾದ ಯಕ್ಷಗಾನ ಕಲೆ-ಕರ್ನಾಟಕದ ಜಾನಪದ ಕಲೆ: ಚಂದ್ರಿಕಾ ಆರ್ ಬಾಯಿರಿ

ಕಂಬಳಿ ಹೊದ್ದು ತೆಂಗಿನ ಗರಿಯ ಚಾಪೆಯ ಮೇಲೆ ಕುಳಿತು ತೂಕಡಿಸುತ್ತ ಕಡಲೆಬೀಜ, ಚುರುಮುರಿ ತಿನ್ನುತ್ತ ಯಕ್ಷಗಾನ ನೋಡುವ ಪರಿ ಆಹಾ! ಎಷ್ಟು ಸುಂದರ. ರಾತ್ರಿ 7 ಗಂಟೆಗೆ ಊರಿನವರೆಲ್ಲಾ ಸೇರಿ ಕಿಲೋಮೀಟರ್ ಗಟ್ಟಲೆ ಟಾರ್ಚ್ ಹಿಡಿದು ನಡೆದೇ ಹೋಗುವುದು ನನಗಿನ್ನೂ ನೆನಪಿದೆ. ಹಾಗೆಯೇ ಅಪ್ಪನೊಂದಿಗೆ ಯಕ್ಷಗಾನ ತರಗತಿಗೆ ಹೋಗಿ ಅವರೊಂದಿಗೆ ಒಂದೆರಡು ಹೆಜ್ಜೆ ಹಾಕಿದ ಆ ರಸಮಯ ಕ್ಷಣಗಳು ನಿಜಕ್ಕೂ ಅವಿಸ್ಮರಣೀಯ. ಇಂತಹ ಬಾಲ್ಯ ಖಂಡಿತ ಇನ್ನೊಮ್ಮೆ ಸಿಗದು. ಆ ಕಾಲಘಟ್ಟದಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು. ಕಂಬಳ, … Read more

ಏಳನೇ ಬಾರಿಗೆ ಕಸ ರವಾನೆ: ಸಂತೋಷ್‌ ಗುಡ್ಡಿಯಂಗಡಿ

ಇತ್ತೀಚಿಗಷ್ಟೆ ಹೆಗ್ಗಡಹಳ್ಳಿಯ ಮಕ್ಕಳ “ನಿಮ್ಮ ಕಸ ನಿಮಗೆ” ಅಭಿಯಾನಕ್ಕೆ ಪ್ರತಿಕ್ರಿಯೆ ನೀಡಿ ಇದೊಂದು ಶ್ಲಾಘನೀಯ ಕೆಲಸ, ನಿಮ್ಮ ಪರಿಸರ ಕಾಳಜಿಯನ್ನು ನಾವು ಮೆಚ್ಚಿಕೊಂಡಿದ್ದೇವೆ, ನಾವೂ ಕೂಡ ಈ ಪರಿಸರವನ್ನು ಉಳಿಸಲು ಮತ್ತು ನಮ್ಮ ಕಂಪೆನಿಯಿಂದ ಈ ಪರಿಸರಕ್ಕೆ ಆಗುವ ಹಾನಿಯನ್ನು ತಪ್ಪಿಸಲು ಬದ್ಧರಾಗಿದ್ದೇವೆ ಎಂದು ಹೇಳಿದ ಬೆನ್ನಲ್ಲೆ ಮಕ್ಕಳು ಮತ್ತೆ ಹನ್ನೊಂದು ಕಂಪೆನಿಗಳಿಗೆ ಇಂದು ಕಸ ರವಾನೆ ಮಾಡಿದ್ದಾರೆ. ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲಾ ಮಕ್ಕಳು 2019ರ ಏಪ್ರಿಲೆ ತಿಂಗಳಿಂದ ನಿಮ್ಮ ಕಸ ನಿಮಗೆ ಎಂಬ ದೇಶದಲ್ಲೇ … Read more

ಮಂಗಳತ್ತೆಯ ಮಿ ಟೂ ಅಭಿಯಾನ!: ಹುಳಗೋಳ ನಾಗಪತಿ ಹೆಗಡೆ

ಇತ್ತೀಚೆಗೆ ಟಿ.ವಿ. ಚಾನೆಲ್‍ಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಸಾರವಾಗುತ್ತಿರುವ ‘ಮಿ ಟೂ’ ಅಭಿಯಾನ ದೇಶದೆಲ್ಲೆಡೆ ಭಾರೀ ಸಂಚಲನವನ್ನೇ ಸೃಷ್ಟಿಸಿತು. ಕೆಲವರು ರಾಜಕೀಯ ಮುಖಂಡರ ಕೈಗೆ ಕರವಸ್ತ್ರ ಕೊಡಿಸಿದರು; ಮಂತ್ರಿಗಳು ಮನೆಯ ಹಾದಿ ಹಿಡಿಯುವಂತಹ ಕಳವಳಕಾರೀ ಸನ್ನಿವೇಶÀವನ್ನೇ ಸೃಷ್ಟಿಸಿಬಿಟ್ಟರು. ಇನ್ನೂ ಕೆಲವು ಚಲನಚಿತ್ರ ರಂಗದ ಮಹಿಳೆಯರು ಹೆಸರು ಮಾಡಿದ ನಿರ್ದೇಶಕರು, ಸುಪ್ರಸಿದ್ಧ ನಾಯಕ ನಟರನ್ನು ಪಿಶಾಚಿಯಂತೆ ಬೆನ್ನತ್ತಿ ಕಾಡಿದರು. ಅವರು ಇವರ ಮೇಲೆ ಗೂಬೆ ಕೂಡ್ರಿಸಿದರು; ಇವರು ಅವರ ಮುಖಕ್ಕೆ ಮಸಿ ಬಳಿದರು. ಚಾನೆಲ್‍ಗಳಿಗಂತೂ ರೊಟ್ಟಿಯಲ್ಲ, ಹೋಳಿಗೆಯೇ ತುಪ್ಪದಲ್ಲಿ ಜಾರಿಬಿದ್ದಂತಾಗಿತ್ತು. … Read more

ಬೇಂದ್ರೆಯವರ ಸಿರಿವಂತಳೆನಿಸುವ ‘ ನಾನು ಬಡವಿ ‘ !: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಯುಗದ ಕವಿ ಜಗದ ಕವಿ ಶಬ್ದ ಗಾರುಡಿಗ ನಾದಬ್ರಹ್ಮ ನಾಕು ತಂತಿಯಿಂದ ಜ್ಞಾನಪೀಠಕ್ಕೇರಿದವರೂ ಆದ ಡಾ. ದ ರಾ ಬೇಂದ್ರೆಯವರ ‘ ನಾನು ಬಡವಿ ‘ ಎಂಬ ಪ್ರೀತಿಯ ಮಹತ್ವ ಸಾರುವ ಒಲವಿನ ಗೀತೆ ನನ್ನ ಮಿತಿಯೊಳಗೆ ನಾನು ಕಂಡಂತೆ! ಈ ಗೀತೆಯನ್ನು ಕವಿ ಬಡವಿಯ ಮೂಲಕ ತನ್ನ ಒಲವಿನ ದಾಂಪತ್ಯದ ವರ್ಣನೆ ಮಾಡುತ್ತಿರುವಂತೆ ರಚಿಸಿದ್ದಾರೆ. ಬಡವಿಯ ಸ್ವಗತದಂತಿದೆ. ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು. ಹತ್ತಿರಿರಲಿ … Read more

ಪಂಜು ಕಾವ್ಯಧಾರೆ

ಅಪ್ಪ ಅಂದರೆ…… ಏನೇ ಕೇಳಿದರೂ ಏನೇ ಹೇಳಿದರೂ ಕೋರ್ಟ್ ಲ್ಲಿ ದಾವೆ ಹೂಡಿದಂತೆ ಚೌಕಾಸಿ ಮೇಲೆ ಚೌಕಾಸಿ ಪರ ವಿರೋಧದ ತೀರ್ಪಿನ ಮೇಲೆ ನೂರಾರು ಕರಾರಿನ ಅಪ್ಪನ ಮೊಹರು….. ಹೆಜ್ಜೆ ಹೊಸ್ತಿಲ ಹೊರಗಿಟ್ಟರೂ ಒಳಗಿಟ್ಟರೂ ತೀವ್ರ ಹದ್ದಿನ ಕಣ್ಣು ಇಟ್ಟಂತೆ ಶೋಧ ಪ್ರತಿಶೋಧಗಳ ಕಾರ್ಯಾಚರಣೆ ತಪ್ಪೊಪ್ಪುಗಳ ಸರ್ಪಗಾವಲಿನಲ್ಲಿ ಖುಲಾಸೆಯೇ ಸಿಗದ ಅಪ್ಪನ ಕಾಯ್ದೆ …… ಎಲ್ಲೇ ಇದ್ದರೂ ಹೇಗೆ ಇದ್ದರೂ ಕುದುರೆಗೆ ಲಗಾಮು ಹಾಕಿಟ್ಟಂತೆ ಸಾಗುವ ಪಥದಿ ತಿರುವು ಏನೇ ಬಂದರು ಸ್ಥಿರ ಸಿದ್ದಾಂತಗಳ ಗಡಿ ಮೀರಲು … Read more

ಕುಯಿರನ ಕನಸು ಮತ್ತು ಮಗಳು: ಜಗದೀಶ ಗೊರೋಬಾಳ

ಅಂದು ಸಾವಂತಿಗೆ ಅದೇಕೋ ತಲೆನೋವು ವಿಪರೀತವಾಗಿತ್ತು. ಮನೆಯಂದಾಚೆ ಹೋಗಲಾರದಷ್ಟು ಅಸ್ವಸ್ಥಳಾಗಿದ್ದಳು. ರಾತ್ರಿಯಿಡಿ ಅವಳ ತಲೆಯಲ್ಲಿ ಅನಿರೀಕ್ಷಿತ ಯೋಚನೆಗಳು ಲಗ್ಗೆ ಇಟ್ಟಿದ್ದೇ ಇದಕ್ಕೆ ಕಾರಣವಿರಬಹುದು. “ ನನಗೂ ಅವರಂತಾದರೇ ನನ್ನ ಗುಲಾಬಿಯ ಗತಿಯೇನು? ಗುಲಾಬಿಗೆ ಊಟ ಯಾರು ಕೊಡ್ತಾರೆ? ಗುಲಾಬಿಯನ್ನು ಶಾಲೇಗ್ ಕಳಿಸೋರ್ಯಾರು? ಗುಲಾಬಿಗೆ ರಾತ್ರಿ ಕತೆ ಹೇಳಿ ಮಲಗಿಸೋರ್ಯಾರು” ಎಂಬ ಆಲೋಚನೆಗಳಿಂದ ಸಾವಂತಿಯ ತಲೆ ಚಿತ್ರವಿಚಿತ್ರವಾಗಿತ್ತು. ಈ ರೀತಿ ಯೋಚನೆಗಳಿಂದ ಸಾವಂತಿ ಬೆಚ್ಚಿಬೀಳಲು ಕಾರಣವಿತ್ತು. ಸಾವಂತಿಯದು ಚಿಕ್ಕ ಬಡ ಕುಟುಂಬ. ಗಂಡ ಕುಯಿರ ಮತ್ತು ಎಂಟು ವರ್ಷದ … Read more

ದಾಳ..: ಸತೀಶ್ ಶೆಟ್ಟಿ ವಕ್ವಾಡಿ..

ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬೇಸಿಗೆಯ ಬಿಸಿಲಿನ ಭರಕ್ಕೆ ಬಳಲಿದ ಧರೆ ತಂಪಾಗಿತ್ತು. ಮಧ್ಯಾಹ್ನವಾದರೂ , ಆಗಸದಲ್ಲಿ ಕಪ್ಪುಗಟ್ಟಿದ ಮೋಡಗಳ ದಾಳಿಗೆ ಬೆದರಿ ಸೂರ್ಯ ಕಣ್ಣು ತೆರೆದಿರಲಿಲ್ಲ. ಇಂದು ಸಹ ಭುವಿಯ ಮೇಲೆ ಮತ್ತೆ ದಾಳಿ ಮಾಡಲು ಮೋಡಗಳ ದಂಡು ಸಜ್ಜಾಗುತ್ತಿತ್ತು, ಪಡುವಣದ ಕಡಲ ಕಡೆಯಿಂದ ಬೀಸುತ್ತಿರುವ ಗಾಳಿ ಸಂಜೆಯ ಮೇಘರಾಜನ ಅಬ್ಬರಕ್ಕೆ ಪಕ್ಕವಾದ್ಯವೆಂಬಂತೆ ಜೋರಾಗಿ ಬೀಸುತ್ತಿತ್ತು. ಇಂತಹ ತಣ್ಣಗಿನ ವಾತಾವರಣದಲ್ಲೂ ಅಲ್ಲಿ ನೆರೆದವರೆಲ್ಲ ಬೆವತ್ತಿದ್ದರು. ನರಹರಿ ಒಳಬೈಲು ಅವರ ಮನೆಯ ಫ್ಯಾನುಗಳು ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದರೂ … Read more

ಕನ್ನಡಿಗಂಟದ ಬಿಂದಿ: ಡಾ.ಅಜಿತ್ ಹರೀಶಿ

ಜೇಡ ತನ್ನೊಳಗಿನಿಂದ ತಾನು ಅಂಟನ್ನು ಸ್ರವಿಸುತ್ತಾ ಬಲೆ ನೇಯುತ್ತಲೇ ಇತ್ತು. ಸೂರ್ಯನ ಕಿರಣಗಳು ಬಲೆಯ ಮೇಲೆ ಬಿದ್ದಾಗ ಕಣ್ಣಿಗೆ ಬಣ್ಣದೋಕುಳಿಯಾಗುತ್ತಿತ್ತು. ದಿನವೂ ಅದೊಂದು ಚಿತ್ತಾಪಹಾರಿಯಾದ ದೃಶ್ಯವಾಗಿತ್ತು. ಆದರೆ ಇಂದೇಕೋ ಕಿರಿಕಿರಿ ಉಂಟುಮಾಡುತ್ತಿದೆ ಎಂದು ಅನ್ನಿಸಿತು. ಕೆಲಸದ ರಾಜಮ್ಮ ಅದಾಗಲೇ ನನ್ನ ರೂಮಿಗೆ ಬಂದು ನೆಲ ಗುಡಿಸುತ್ತಿದ್ದಳು. ರಾಜಮ್ಮ, ಮೇಲೆಲ್ಲಾ ನೋಡು, ಕಸ ಹೊಡೆಯೋದೇ ಇಲ್ಲ. ಹೇಳದೇ ಯಾವ ಕೆಲಸವನ್ನೂ ಇತ್ತೀಚೆಗೆ ನೀನು ಮಾಡಲ್ಲ’ ತುಸು ಗಡಸು ಧ್ವನಿಯಲ್ಲಿ ಜೇಡರ ಬಲೆ ತೋರಿಸುತ್ತಾ ಹೇಳಿದೆ. ಅಯ್ಯೋ, ಇದೊಳ್ಳೆ ಆಯ್ತಲ್ಲಾ … Read more

ಅಗ್ನಿ ಸ್ಪರ್ಶ: ಭಾರ್ಗವಿ ಜೋಶಿ

ಅಲ್ಲಿ ಜನಸಾಗರ ನೆರೆದಿತ್ತು, ಜಾತಿ ಮತದ ಬೇಧವಿಲ್ಲದೆ ನೆರೆದಿದ್ದ ಜನ.. ಎಲ್ಲರಲ್ಲೂ ಮನೆ ಮಾಡಿದ ಮೌನ, ತುಂಬಿದ ಕಣ್ಣೀರು. ಕಳೆದುಕೊಂಡ ಮಾಣಿಕ್ಯ ಬದುಕಿದ ರೀತಿಯೇ ಹಾಗಿತ್ತು. ಶ್ರೀನಿವಾಸ ರಾಯರು ತಮ್ಮ 60ವರ್ಷ ಸಾರ್ಥಕ ಬದುಕಿನ ಪಯಣ ಮುಗಿಸಿ ಪರಲೋಕ ಸೇರಿದ್ದರು. ಬದುಕಿರುವಷ್ಟು ದಿನ ಆದರ್ಶ ಜೀವನ ನಡೆಸಿದ್ದರು, ಜಾತಿ ಭೇಧವಿಲ್ಲದೆ, ಮೇಲು ಕೀಳು, ಬಡವ ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲರನ್ನು ಪ್ರೀತಿಸುತ್ತಿದ್ದರು. ಪರೋಪಕಾರಕ್ಕೆ ಹೆಸರಾಗಿದ್ದರು. ಅನಾರೋಗ್ಯ, ಮಕ್ಕಳ ವಿದ್ಯಾಭ್ಯಾಸ ಹೀಗೆ ಹಲವಾರು ಇವರಿಂದ ಸಹಾಯ ಪಡೆದಿದ್ದರು. ಇವರ … Read more

ಉದಯನ್ಮುಖ ಬರಹಗಾರ್ತಿ ವೀಣಾ ನಾಗರಾಜ್: ವೈ. ಬಿ. ಕಡಕೋಳ

ಶ್ರೀಮತಿ ವೀಣಾ ನಾಗರಾಜು ಉತ್ತಮ ಶಿಕ್ಷಕಿ, ಪ್ರತಿಭಾವಂತೆ, ಸಮಾಜಶಾಸ್ತ್ರ ವಿಷಯದಲ್ಲಿ ಎಂ. ಎ. ಪದವೀಧರೆ. ಇವರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಳಜ್ಜಿ ಹಟ್ಟಿಯಲ್ಲಿ ಕಳೆದ 12 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ. ಚನ್ನಬಸವಯ್ಯ ಸಾವಿತ್ರಮ್ಮ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಹಿರಿಯ ಸುಪುತ್ರಿ. ಇವರ ಪತಿ ನಾಗರಾಜು ಕೂಡ ಪ್ರೌಢಶಾಲಾ ಶಿಕ್ಷಕ. ಎಂ. ಎ(ಸಮಾಜಶಾಸ್ತ್ರ) ಓದಿರುವ ಶಿಕ್ಷಕಿ ವೀಣಾ ನಾಗರಾಜು ವೃತ್ತಿಯೊಡನೆ ಬರವಣಿಗೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡು 15 ಕ್ಕೂ ಹೆಚ್ಚು ಕತೆಗಳನ್ನು … Read more

ಸಂಗಾತಿ ಬ್ಲಾಗ್‌ ನ ಸಂಪಾದಕರಾದ ಕು.ಸ.ಮಧುಸೂದನರವರ ಒಂದೆರಡು ನುಡಿ

‘ಸಂಗಾತಿ’ ಸಾಹಿತ್ಯದ ಬ್ಲಾಗ್ ಶುರುವಾಗಿ ಕೇವಲ ಎರಡು ತಿಂಗಳು ಮಾತ್ರ ಆಗಿರುವುದರಿಂದ ಈ ಕ್ಷೇತ್ರದಲ್ಲಿ ಹೆಚ್ಚು ಬರೆಯಲು ನಾನು ಅರ್ಹನೆಂದು ಭಾವಿಸಿಲ್ಲ.ಪತ್ರಿಕೋಧ್ಯಮ ನನ್ನ ಕಾಲೇಜು ದಿನಗಳ ಕನಸಾಗಿತ್ತು.ಆದರೆ ನನ್ನ ವೈಯುಕ್ತಿಕ ಬದುಕಿನ ಸಮಸ್ಯೆಗಳಿಂದ ಅನಿವಾರ್ಯವಾಗಿ ಸರಕಾರಿ ನೌಕರಿಗೆ ಸೇರಬೇಕಾಯಿತು. ಆಗೀಗ ಕತೆ ಕವಿತೆಗಳನ್ನು ಬರೆದು ಪತ್ರಿಕೆಗಳಿಗೆ ಕಳಿಸಿ ಕಾಯುವಷ್ಟಕ್ಕೆ ನನ್ನ ಸಾಹಿತ್ಯದ ಆಸಕ್ತಿ ಸೀಮಿತವಾಯಿತು. ನಾಲ್ಕು ವರ್ಷಗಳ ಹಿಂದೆ ಸ್ವಯಂನಿವೃತ್ತಿ ಪಡೆದ ನಂತರ ಪೂರ್ಣಪ್ರಮಾಣದಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡು ಒಂದು ಕವನಸಂಕಲನ ಒಂದು ಕಥಾ ಸಂಕಲನ ಎರಡು ರಾಜಕೀಯ … Read more

ನನ್ನವಳ ನೆನಪು: ಶ್ರೀರಂಗ. ಕೆ. ಆರ್

ಅದೇನೋ ಅಂದು ಮನಸ್ಸು ತಳಮಳಗೊಂಡಿತ್ತು. ಮಲಗಿ ಮೂರು ಸುತ್ತು ಹೊರಳಾಡಿದರೂ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಆಗ ನಿನ್ನಪ್ಪನಿಂದ ಕರೆಬಂದದ್ದು. ನಿನಗೆ ಹೆರಿಗೆ ನೋವು, ಆಸ್ಪತ್ರೆಯಲ್ಲಿದ್ದೇವೆ ಎಂದು. ಆಗಲೇ ಓಡಿ ಬರಬೇಕೆಂದುಕೊಂಡೆ. ಪರವಾಗಿಲ್ಲ ನಾವೆಲ್ಲರೂ ಇದ್ದೇವೆ ತೊಂದರೆಯಿಲ್ಲ, ಬೆಳಗ್ಗೆ ಬಂದರಾಯಿತು ಎಂದರು ಮಾವ. ಆದರೂ ನನಗೆ ಸಮಾಧಾನವಿರಲಿಲ್ಲ. ನಿನ್ನ ಕನಸುಗಳಿಲ್ಲದೆ ಮಲಗಿದವನೇ ಅಲ್ಲ ನಾನು, ಅಂದೇಕೋ ಕಣ್ಣುಗಳು ಮುಚ್ಚಲೇ ಇಲ್ಲ. ಮಲಗಿದ್ದ ಕೋಣೆಯ ಮೇಲ್ಛಾವಣಿಯ ಪರದೆಯ ಮೇಲೆ ನಿನ್ನ ಜೊತೆ ಕಳೆದ ಕ್ಷಣಗಳ ನೆನಪುಗಳು ಮೂಡಿಬರುತ್ತಿದ್ದವು. ಅವನ್ನೇ ನೋಡುತ್ತ … Read more

ಪ್ರೇಮ ಪ್ರವಾದಿಯ ಪರಿಸರ ಪ್ರೇಮ: ಅಶ್ಫಾಕ್ ಪೀರಜಾದೆ

ತನ್ನ ಪ್ರಥಮ ಕೃತಿ ” ಮಮದಾಪೂರ ಚುಟುಕುಗಳು ” ಮೂಲಕ ಪ್ರೇಮ ಪ್ರವಾದಿ ಎಂದು ನಾಡಿನಾದ್ಯಂತ ಪ್ರಸಿದ್ದಿ ಪಡೆದಿರುವ ಈಶ್ವರ ಮಮದಾಪುರ ಅವರು ಇತ್ತೀಚೆಗೆ ಇನ್ನೊಂದು ಕೃತಿ “ಮಮದಾಪೂರ ಹನಿಗವಿತೆಗಳು” ಓದುಗರ ಕೈಗಿಟ್ಟಿದ್ದಾರೆ. ಚುಟುಕು, ಹನಿಗವಿತೆ, ಹಾಯ್ಕು, ಕಿರುಪದ್ಯ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಈ ಸಾಹಿತ್ಯ ಪ್ರಕಾರ ಕವಿಯ ಮನದ ಪರದೆಯ ಮೇಲೆ ಆ ಕ್ಷಣಕ್ಕೆ ಮಿಂಚಿ ಮಾಯವಾಗುವ ಭಾವ ಸ್ಪಂದನ.. ಅದೇ ಬರಹದ ರೂಪ ಪಡೆದುಕೊಂಡು ಓದುಗರ ಹೃದಯ ತಾಕುವ ತಂತುವಾಗಿ ಮಾರ್ಪಡುತ್ತದೆ. ಈಶ್ವರ ಮಮದಾಪುರ … Read more

ಹುಟ್ಟು ಹಬ್ಬದ ಶುಭಾಶಯಗಳು ಪಂಜು: ವರದೇಂದ್ರ ಕೆ.

ಪಂಜು ಸಾಹಿತ್ಯದ ಚಿಲುಮೆ, ಅಂತರ್ಜಾಲದಲ್ಲಿ ಹೆಸರು ಮಾಡಿದಕ್ಕಿಂತಲೂ ಅಂತರಂಗದಲ್ಲಿ ಸದ್ದಿಲ್ಲದೆ ಸೇರಿಕೊಂಡ ಸಿಹಿ ಪನ್ನೀರು. ಸಾಹಿತ್ಯ ರಚಿಸಿ ಮಸ್ತಕದಿಂದ ಪುಸ್ತಕಕ್ಕೆ ಇಳಿಸಿ ಕೂತವರಿಗೆ; ಪುಸ್ತಕದಿಂದ ಓದುಗರ ಮನೆಗೆ ಮನಸಿಗೆ ತಲುಪಿಸುವಂತಹ ಪರಿಪೂರ್ಣ ಕೆಲಸ ಪಂಜುವಿನಿಂದಾಗಿದೆ. ಪಂಜು ಎಂದರೆ ಬೆಳಕು, ಕತ್ತಲಲ್ಲಿದ್ದವರಿಗೆ ಪಂಜುಹಿಡಿದು ಸಾಹಿತ್ಯ ಬೆಳೆಸುವ ದಾರಿತೋರಿಸಿದೆ ನಾಡಿಗೆ ಪರಿಚಯಿಸಿ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಳ್ಳಲು ಸಹಾಯವಾಗಿ ನಿಂತಿದೆ. ಯುವ, ಎಲೆ ಮರೆ ಕಾಯಿಯಂತಹ ಸಾಹಿತಿಗಳಿಗೆ ಉತ್ತಮ ವೇದಿಕೆಯಾಗಿ ನಿಂತು ೭ ವಸಂತಗಳನ್ನು ಪೂರೈಸಿದೆ. ಈ ಸಪ್ತ ವರ್ಷದಲ್ಲಿ ಸಾಕಷ್ಟು … Read more

ಒಂಟಿತನ – ಪರಿಣಾಮ – ಮುಕ್ತಿ: ಗೀತಾ ಜಿ.ಹೆಗಡೆ, ಕಲ್ಮನೆ.

ಬದುಕನ್ನು ಒಂಟಿಯಾಗಿ ಎದುರಿಸುತ್ತಿದ್ದೇವಾ? ನಿಜಕ್ಕೂ ನಮಗೆ ಏನು ಬೇಕು ಜೀವಿಸಲು? ಯಾರ ಅಗತ್ಯ ನಮಗೆ ಹೆಚ್ಚು? ಒಂಟಿತನ ಕಾಡುವುದು ಯಾವಾಗ? ಅಥವಾ ಒಂಟಿತನ ಕಾಡಿದಾಗಲೆಲ್ಲ ನಮ್ಮ ಜೊತೆಗಿರುವವರು ಯಾರು ಗಂಡನಾ, ಮಕ್ಕಳಾ, ಸ್ನೇಹಿತರಾ ಬಂಧುಗಳಾ ಅಥವಾ ನೆರೆಹೊರೆಯವರಾ? ಇದರಿಂದ ಹೇಗೆ ಮುಕ್ತಿ ಹೊಂದಬೇಕು? ಇವೆಲ್ಲ ಆಗಾಗ ಕಾಡುವ ಪ್ರಶ್ನೆ. ಇವೆಲ್ಲವೂ ಸತ್ಯವಾಗಿ ಅರಿವಾಗಬೇಕು ಅಂದರೆ ಕೆಲವು ಸಂದರ್ಭದಲ್ಲಿ ಮಾತ್ರ ಸಾಧ್ಯ. ಅದು ಕಷ್ಟ ಕಾಲದಲ್ಲೂ ಅಲ್ಲ ಅಥವಾ ಕಾಯಿಲೆ ಬಿದ್ದು ನರಳುವಾಗಲೂ ಅಲ್ಲ. ಹಾಗಾದರೆ ಇನ್ಯಾವಾಗ? ; … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ ೪): ಎಂ. ಜವರಾಜ್

೪- ನನ್ನ ಮೆಟ್ಟಿ ಗಿರಿಕ್ಕು ಗಿರಿಕ್ಕನೆ ಆ ಸಂತ ಸಾಮ್ರಾಜ್ಯವ ಬುಟ್ಟು ಅಯ್ನೋರ್ ಪಾದ ಹೋಗ್ತಾ ಹೋಗ್ತಾ ಕತ್ತಲು ಆವರಿಸಿಕೊಳ್ತ ರಸ್ತೆ ಮಾರ್ಗ ಬುಟ್ಟು ಕಿರು ದಾರಿ ಕಾಣ್ತಲ್ಲೊ… ಆ ಕಿರು ದಾರೀಲಿ ಅಯ್ನೋರ್ ಮನೇನಾ? ಅಂತಂದರೆ ಅದು ಸುಳ್ಳಾಗಿ ಹೋಯ್ತಲ್ಲೋ.. ಆ ಕತ್ತಲ ಸಾಮ್ರಾಜ್ಯದಲಿ ಅಯ್ನೋರ್ ಉಟ್ಟ ಪಂಚೆ ಅಂಚು ನನ್ನ ಸುತ್ತ ಸುತ್ಕಂಡು ನಾಜೂಕಲ್ಲಿ ನಗ್ತಾ ನಗ್ತಾ ‘ನನ್ ಒಡಿಯನ ವೈಭೋಗ ನಿಂಗೊತ್ತಾ ಮೆಟ್ಟೇ..? ನಿಂಗೇನ್ ಗೊತ್ತು.. ನೀ ಹೊಸಿಲಾಚೆ ಬುಟ್ಟು ಒಂದಿಂಚು ಬರಗಿದ್ದುದಾ..? … Read more

“ಅಪ್ಪನಿಲ್ಲದ ಈ ಮೂರು ವರ್ಷದ ನಂತರ….. . . . . .”: ಧನರಾಜ್ ಪಾತ್ರೆ

ನಾನು ನೋಡಿದ ಮೊದಲ ವೀರ. ಬಾಳು ಕಲಿಸಿದ ಸಲಹೆಗಾರ ಬೆರಗು ಮೂಡಿಸುವ ಜಾದೂಗಾರ ಅಪ್ಪ, ಹಾಡು ಕೇಳಿದಾಗೆಲ್ಲಾ.. ಅಪ್ಪ ಕಣ್ಣೆದುರು ನಿಲ್ಲುತ್ತಾರೆ. ಸಾಲುಗಳು ಮಾತ್ರ ಒಂದು ಕುಟುಂಬದಲ್ಲಿ ತಂದೆಯ ಪಾತ್ರ ಪ್ರತಿಬಿಂಬಿಸುತ್ತದೆ. ನನ್ನ ತಂದೆಗೆ “ಬಾಬಾ” ಎಂತಲೇ ಕರೀತಿದ್ದೆ ನನ್ನ ಇಬ್ಬರು ಅಣ್ಣಂದಿರು (ಜಗನ್ನಾಥ, ದಶರಥ) “ದಾದಾ” ಅಂತ ಕರೀತಿದ್ದರು. ನನ್ನ ತಂದೆ ತಾಯಿ ಹೊಟ್ಟೆ ಪಾಡಿಗಾಗಿ ಕೂಲಿ ಹುಡುಕಿಕೊಂಡು ಸತಾರಕ್ಕೆ (ಮಹಾರಷ್ಟ್ರ) ಹೋದಾಗ ಅಲ್ಲಿ ನನ್ನ ಇಬ್ಬರು ಅಣ್ಣಂದಿರು ಹುಟ್ಟಿದ್ದು ಮಾಹಾರಾಷ್ಟ್ರದಲ್ಲಿ ತಂದೆಗೆ ದಾದಾ ಅಂತಾ … Read more

ಪಂಜುಗೆ ಶುಭಹಾರೈಕೆಗಳು: ಗಿರಿಜಾ ಜ್ಞಾನಸುಂದರ್

ಅದೊಂದು ದಿನ ಒಂದು ಕಾರ್ಯಕ್ರಮದಲ್ಲಿ ಬಹಳಷ್ಟು ಗಣ್ಯರನ್ನು ಭೇಟಿಮಾಡುವ ಸದವಕಾಶ ಸಿಕ್ಕಿತ್ತು ನನಗೆ. ತಮ್ಮ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆಮಾಡಿದ್ದವರು. ಅವರ ಒಡನಾಟವೇ ಒಂದು ಆನಂದ. ನನ್ನ ಗುರುಗಳಾದ ಉದಯ ಶಂಕರ್ ಪುರಾಣಿಕ್ ರವರು, ಅವರ ಸಹೃದಯೀ ಸ್ನೇಹಿತರು, ಪಂಜು ಪತ್ರಿಕೆಯ ಸಂಪಾದಕರಾದ ನಟರಾಜ್ ಸೀಗೇಕೋಟೆಯವರು ಎಲ್ಲರನ್ನು ಭೇಟಿಯಾದ ಸಮಯ. ನಟರಾಜುರವರು ಮಾತನಾಡುತ್ತ “ನೀವೇಕೆ ಬರೆಯಬಾರದು?” ಎಂದರು. ಅಲ್ಲಿಯವರೆಗೂ ಅದರ ಬಗ್ಗೆ ಯೋಚನೆಯನ್ನು ಮಾಡದ ನನಗೆ ಅದು ಒಂದು ತಮಾಷೆ ಎನ್ನಿಸಿತು. ಕೇವಲ ಸಾಹಿತ್ಯವನ್ನು ಓದಲು ತಿಳಿದಿದ್ದ ನನಗೆ … Read more

ಆದರ್ಶ ಶಿಕ್ಷಕ, ವಿರಳ ಯುವ ಬರಹಗಾರ ವೈ. ಬಿ. ಕಡಕೋಳ: ಡಾ. ವ್ಹಿ. ಬಿ. ಸಣ್ಣಸಕ್ಕರಗೌಡರ

ಇದೇ ಜನೇವರಿ 21 ರಂದು ಹಾರೂಗೇರಿಯ ಅಜೂರ ಪ್ರತಿಷ್ಠಾನದವರು ಕೊಡಮಾಡುವ ಜಿಲ್ಲಾ ಮಟ್ಟದ ಸಾಹಿತ್ಯ ಕೃತಿಗೆ ವೈ. ಬಿ. ಕಡಕೋಳರ ಪಯಣಿಗ ಕೃತಿ ಆಯ್ಕೆಯಾಗಿದೆ. ಅಷ್ಟೇ ಅಲ್ಲ ಸೇಡಂ ತಾಲೂಕಿನ ಮೇದಕ ಗ್ರಾಮದ ಚನ್ನಕೇಶ್ವರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ(ರಿ) ವತಿಯಿಂದ ಶ್ರೀ ಚನ್ನಕೇಶ್ವರ ಉತ್ಸವದ ಅಂಗವಾಗಿ ಪೆಬ್ರುವರಿ 1 ರಂದು ಜರಗುವ ಮಾತೋಶ್ರೀ ನಾಗಮ್ಮ ಆಶಪ್ಪ ಬೊಪ್ಪಾಲ್ ಸ್ಮರಣಾರ್ಥ ಕೊಡಮಾಡುವ ರಾಜ್ಯಮಟ್ಟದ 15ನೇ ವರ್ಷದ ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿಗೆ ವೈ. ಬಿ. ಕಡಕೋಳರ … Read more

ನಮ್ಮ ಪುಟ್ಟಿ: ವೆಂಕಟೇಶ ಚಾಗಿ

ನಮ್ಮ ಪುಟ್ಟಿ (ಮಕ್ಕಳ ಕವನ) ನಮ್ಮ ಪುಟ್ಟಿಯ ಚಂದದ ಆಟ ನೋಡಲು ಎಷ್ಟು ಸುಂದರ ಪುಟ್ಟಿ ಜೊತೆಗೆ ಆಟವನಾಡಲು ಬರುವನು ಬಾನಿಗೆ ಚಂದಿರ..!! ಪುಟ್ಟಿಯ ಕೈಯಲಿ ಗೊಂಬೆ ಇದ್ದರೆ ಆಡಿಸಿ ನಗುತ ನಲಿಯುವಳು ಗೊಂಬೆಗೆ ಬಣ್ಣದ ಅಂಗಿಯ ಹಾಕಿ ಲಾಲಿಸಿ ಅಳುವ ಮರೆಯುವಳು !! ಪುಟ್ಟ ಪುಟ್ಟ ಹೆಜ್ಜೆಗಳಿಡುತ ಓಟದ ಆಟವ ಆಡುವಳು ಓಡುವ ಅವಳ ಹಿಡಿದು ಬಿಟ್ಟರೆ ಖುಷಿಯಲಿ ಕೇಕೆ ಹಾಕುವಳು || ಪಾಠ ಓದಲು ಕುಳಿತರೆ ನಾನು ತನಗೂ ಪುಸ್ತಕ ಕೇಳುವಳು ಚಿತ್ರವ ನೋಡಿ … Read more

ಪಂಜು ಕಾವ್ಯಧಾರೆ

ಬದುಕ ನೇಯ್ದ ಅವ್ವ…!! ಕಾವ್ಯ ಪುರಾಣ ವೇದ ಉಪನಿಷತ್ತು ಕಟ್ಟಿ ತಿಳಿಸಿ ಓದಿದವಳಲ್ಲ ಹೊಲ ಗದ್ದೆ ಪೈರು ಮನೆಯನ್ನ ಜೇಡರ ಬಲೆಯಂತೆ ನೇಯ್ದು ಬಂಡೆಯಲ್ಲಿ ಮೊಳಕೆಯೊಡೆದು ಸೂರಿಗೆ ಚಂದ್ರನಾಗಿ ತಂಪ ನೀಡಿದವಳು ಕೋಳಿ ಕೂಗೋ ಮುಂಚೆ ಎದ್ದು ದನ ಕರು ಕಟ್ಟಿ, ಕಸ ಸುರಿದು ಬಂದು ಮಬ್ಬ ನೆಲದಾಗಸವ ಶುಚಿಗೊಳಿಸಿ ನೀರ-ನಿಡಿ ಹಿಡಿದು ಕಾಯಿಸಿ ಹಜಾರದಲ್ಲಿ ಮಕ್ಕಳಿಗೆ ಮಜ್ಜನ ಮಾಡಿಸಿ ಕೊಳಕಿಲ್ಲದ ಶ್ವೇತವಸ್ತ್ರ ತೊಡಿಸಿ ಲೋಕದ ಮಾನ ಮುಚ್ಚಿ ಬಾಚಣಿಗೆಯಲ್ಲೆ ವಿಶ್ವಪರ್ಯಟಿಸಿ ಚಿಂದಿ ಮನಗೂಡಿಸಿ ಸಮತೆ ಸಾರಿ … Read more

ಮೈತ್ರಿ ಪ್ರಕಾಶನ ಕಥಾ ಸ್ಫರ್ಧೆ

ಹೊಸ ವರ್ಷದ ಹೊಸಿಲಲ್ಲಿ ಮೈತ್ರಿ ಪ್ರಕಾಶನ ಹೊಸ ಯೋಜನೆಯೊಂದಿಗೆ ನಿಮ್ಮ ಮುಂದೆ ಬಂದಿದೆ…. ಒಂದು ಕಥಾ ಸ್ಫರ್ಧೆಯನ್ನು ಆಯೋಜಿಸಲಾಗುತ್ತಿದೆ. ಮೈತ್ರಿ ಪುಸ್ತಕ ಪ್ರಶಸ್ತಿ ಆರಂಭಿಸುತ್ತಿದ್ದೇವೆ..! ಆಸಕ್ತ ಲೇಖಕರು ೮-೧೦ ಕತೆಗಳ ಡಿಟಿಪಿ ಮಾಡಿಸಿ ಕತೆಗಳನ್ನು ಕಳಿಸಬಹುದು…. ಈ ಕೆಳಗಿನ ನಿಯಮಾವಳಿಗಳನ್ನು ಗಮನಿಸಿ… ೧) ಕತೆಗಳು ಸ್ವಂತದ್ದಾಗಿರಬೇಕು. ಅನುವಾದ, ಆಧಾರ ಸ್ಫೂರ್ತಿ ಪಡೆದ ಕತೆಗಳಿಗೆ ಅವಕಾಶವಿಲ್ಲ. ೨) ಇದುವರೆಗೂ ಒಂದೂ ಕಥಾಸಂಕಲನ ತರದ ಹೊಸಬರಿಗೆ ಮಾತ್ರ ಈ ಸ್ಫರ್ಧೆಯಲ್ಲಿ ಅವಕಾಶವಿದೆ. ೩) ಸುಮಾರು ೮-೧೦ ಕತೆಗಳನ್ನು ಡಿಟಿಪಿ ಮಾಡಿಸಿ … Read more

ಹೊಸ ಬೆಳಕು: ವೈ. ಬಿ. ಕಡಕೋಳ

ವಂದನಾಳ ಬಾಳಿನಲ್ಲಿ ಏನೋ ದುಗುಡ. ಮುಖ ಸಪ್ಪೆಯಿಂದ ಮನೆಗೆಲಸದಲ್ಲಿ ಆಸಕ್ತಿ ಇಲ್ಲದಂತೆ ಮೋಬೈಲ್‍ದಲ್ಲಿ ಏನನ್ನೋ ಟೈಪಿಸುತ್ತ ಕುಳಿತಿದ್ದಳು. ಅದೇ ಸಂದರ್ಭ ಆ ಕಡೆಯಿಂದ ಅವಳ ಗೆಳತಿಯ ಕರೆ ಬಂತು ”ಹಲೋ ವಂದನಾ ಏನು ಮಾಡುತ್ತಿರುವೆ. ”? ಪ್ರಶ್ನೆ ಬರುವುದಷ್ಟೇ ತಡ ದುಃಖ ಉಮ್ಮಳಿಸಿ ಬಂದು ಅಳತೊಡಗಿದಳು. ಆ ಕಡೆಯಿಂದ ಮಾತೇ ಬರದಾದಾಗ ಇವಳ ಅಳುವ ಧ್ವನಿಯನ್ನು ಕೇಳಿ ಸುಮ ”ಯಾಕೆ ಏನಾಯಿತೇ ನಿನಗೆ, ಯಾಕೆ ಈ ಅಳು. ”? ಎಂದೆಲ್ಲ ಪ್ರಶ್ನೆಗಳ ಸುರಿಮಳೆಯೇ ಸುಮಳಿಂದ ಬಂದಾಗ ವಂದನಾ … Read more

ಬದಲಾಗುತ್ತಿದೆ ಅಡುಗೆ ಕಾನ್ಸೆಪ್ಟ್: ವೇದಾವತಿ ಹೆಚ್.ಎಸ್.

ಸ್ನೇಹಿತೆಯೊಬ್ಬಳು ನನ್ನಲ್ಲಿ “ನೀನೇಕೆ ಕ್ಯಾರಿಯರ‍್ ಮೀಲ್ಸ್ ಕಾನ್ಸೆಪ್ಟ್ ಅನ್ನು ಪ್ರಾರಂಭ ಮಾಡಬಾರದು?ಹೇಗಿದ್ದರೂ ರುಚಿ ರುಚಿಯಾಗಿ ಅಡುಗೆ ಮಾಡುತ್ತಿಯಾ.”ಎಂದಾಗ ಅದುವರೆಗೂ ನನ್ನ ತಲೆಯಲ್ಲಿ ಯೋಚಿಸದ ವಿಷಯವೊಂದು ತಲೆಯಲ್ಲಿ ಹೊಕ್ಕಿತು.ಅದನ್ನೇ ಯೋಚಿಸುತ್ತಾ ಅಡುಗೆ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದೆ.ನನ್ನ ಗೆಳತಿಯಂತೆ ನಮ್ಮ ಮನೆಯ ನೆರೆಮನೆಯಾಕೆಯೂ ಒಮ್ಮೆ ನನ್ನಲ್ಲಿ “ನೀವೇನಾದರೂ ಮನೆಯಲ್ಲೇ ಅಡುಗೆ ಮಾಡಿ ಕ್ಯಾರಿಯರ್ ಮೀಲ್ಸ್ ತಯಾರಿಸಿ ಕೊಡುವುದಾದರೆ ನಾನು ಮೊದಲು ನಿಮ್ಮ ಗಿರಾಕಿಯಾಗುತ್ತೇನೆ”ಎಂದಿದ್ದರು.ಅವರ ಮಾತಿಗೂ ನಾನೇನು ಹೇಳಿರಲಿಲ್ಲ.ಪುನಃ ಇನ್ನೊಬ್ಬ ಗೆಳತಿ ನನ್ನಲ್ಲಿ “ಈಗ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳಲ್ಲಿ … Read more

ಸೃಷ್ಟಿಯೆಂದರೆ ಸ್ತ್ರೀ ತಾನೆ….: ಸಿಂಧು ಭಾರ್ಗವ್. ಬೆಂಗಳೂರು

ಹೆಣ್ಣಿನ ವಿವಿಧ ರೂಪಗಳನ್ನು ನಾವು ಕಾಣಬಹುದು. ಅದರಲ್ಲಿ ತಾಯಿಗೆ ಮೊದಲ ಸ್ಥಾನ . ಕಾರಣ ಅವಳೇ ಜನನಿ. ಹಡೆದವ್ವ. ಅವಳು ಒಂದು ಮಗುವನ್ನು ಹೆತ್ತು ಈ ಜಗತ್ತಿಗೆ ಪರಿಚಯಿಸಿದರೆ ಮಾತ್ರವೇ ನಾವು ಲೋಕ ನೋಡಬಹುದು. ನಂತರ ಅಕ್ಕ, ತಂಗಿ, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ, ಮಡದಿ, ಮಗಳು, ಗೆಳತಿ. ಆದರೆ ಹೆಣ್ಣನ್ನು ಪ್ರತಿಯೊಬ್ಬರೂ ತಾಯಿಯಾಗಿ ನೋಡುತ್ತಾರೆಯೇ? ತಮ್ಮ ಮನೆಯ ಅಕ್ಕನೋ ಇಲ್ಲವೇ ತಂಗಿಯಂತೆ ಸ್ವೀಕರಿಸುತ್ತಾರೆಯೇ? ಅವಳಿಗೆ ಗೌರವದ ಸ್ಥಾನ ನೀಡಲಾಗುತ್ತಿದೆಯೇ? ಮೋಹ, ಮೋಸ, ಕಾಮ, ಕಾಸಿನ ವ್ಯಾಮೋಹ, … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ ೩): ಎಂ. ಜವರಾಜ್

ಇಲ್ಲಿಯವರೆಗೆ -೩- “ಏಯ್, ನಾನ್ ಹೇಳ ಕತ ಕೇಳ್ತ ಇದ್ದಯ ಕೇಳ್ತ ಇಲ್ವ.. ನಿದ್ಗಿದ್ದ ಮಾಡ್ತ ಕಾಟಾಚಾರ್ಕ ಕುಂತ್ಕಂಡು ಆಟ ಆಡ್ತ ಇದ್ದಯ ಬಂಚೊತ್” ಏರಿಸಿದ ದನಿಯಲ್ಲಿ ಮೆಟ್ಟು ಬೆದರಿಸಿತಲ್ಲಾ.. ನಾನು ಬೆಚ್ಚಿ ಬೆರಗಾಗಿ ದಡಕ್ಕನೆ ಮೇಲೆದ್ನಲ್ಲಾ.. “ಹೇಳ್ತ ಹೇಳ್ತ ನಿಂಗ್ಯಾಕ್ ಅನುಮಾನ ಬಂತೋ.. ನಾ ಕೇಳ್ತ ಕೇಳ್ತ ವಸಿ ತೂಕುಡ್ಕ ಬಂತಲ್ಲಾ.. ನೀ ಹೇಳ ಕತಾ ಇಂಟ್ರೆಸ್ಟಾಗಿದೆಯಲ್ಲಾ.. ನನ್ ವಂಶದ ಕರಾಮತ್ತು ಅಂದೆಲ್ಲಾ.. ಅದಕ್ಕಾದ್ರು ನೀ ಹೇಳ ಕತಾ ನಾ ಕೇಳ್ಬೇಕಲ್ಲಾ…” “ಏಯ್ ತಿರಿಕ ಮಾತಾಡ್ಬೇಡ..” … Read more

ಮುಗಿಯಿತೇ ಜವಾಬ್ದಾರಿ??: ಸಹನಾ ಪ್ರಸಾದ್

ಅಯ್ಯೋ, ನಿಮಗೇನ್ರೀ, ಮಗಳ ಮದುವೆ ಆಯ್ತು, ಮಗ ಕೈಗೆ ಬಂದ. ಇನ್ನು ನಿಮ್ಗೆ ಯೋಚನೆ ಇಲ್ಲ. ಆರಾಮವಾಗಿ ಓಡಾಡಿಕೊಂಡಿರಬಹುದು. ಅಸೂಯೆ, ಮೆಚ್ಚುಗೆ ತುಂಬಿದ ಈ ತರಹದ ಮಾತುಗಳು ನನಗೆ, ಮಗಳ ಮದುವೆ ಮಾಡಿ ನಾ ಅತ್ತೆಯಾದ ಮೇಲೆ ಮಾಮೂಲಾಗಿಬಿಟ್ಟಿದೆ. ಹೌದಲ್ವಾ, ಜನ ಸಾಮಾನ್ಯರ ಕನಸಿನ ಪ್ರಕಾರ ಬದುಕು ಸಾಗಿದಾಗ ಜನ ಯೋಚಿಸೋದು ಸರೀನೆ. ಆದರೆ ಇಷ್ಟಕ್ಕೆ ಹೆಣ್ಣುಮಕ್ಕಳ ಜವಾಬ್ದಾರಿ ಮುಗಿಯುತ್ತವೆಯೇ? ಹೆಣ್ಣು ಮಕ್ಕಳಿರಲಿ, ಗಂಡು ಮಕ್ಕಳಿಗೂ ಜವಾಬ್ದಾರಿ ಅನ್ನುವುದು ಮುಗೀತು, ಇನ್ನು ಮುಂದೆ ನಿರಾಳ ಅನ್ನುವುದು ಬಹಳ … Read more